ವಿಭಿನ್ನ ಸ್ತೋತ್ರಗಳು
**************
-೧-
|| ಪ್ರಾರ್ಥನಾ ||
+++++++++++++++++++++++++++++++
ಸಾಧುವಾಸಾಧು ವಾ ಕರ್ಮಂ ಯದ್ಯದಾಚರಿತಂ ಮಯಾ
ತತ್ ಸರ್ವಂ ದೇವದೇಶ ಗ್ರಹಾಣಾರಾಧನಮ್ ಪರಂ |
ಸರ್ವ ಲೋಕ ಶರಣ್ಯಾಯ ಮಂಗಲಂ ಪರಮಾತ್ಮನೇ
ಮಂಗಲಂ ಗುರುವರೇಭ್ಯ: ಸರ್ವ ಲೋಕಾಯ ಮಂಗಲಮ್ ||
ಭಾವಾರ್ಥ:- ನಾನು ಆಚರಿಸಿದಂದಂತಹಾ ಕ್ರಿಯೆ ಅದು ಸರಿಯೇ ಆಗಿರಲಿ ತಪ್ಪೇ ಆಗಿರಲಿ ಅದೆಲ್ಲವೂ ದೇದೇವನಾಗಿರುವ ನಿನ್ನ ಆರಾಧನೆಗಾಗಿ;. ಸಮಸ್ತ ಲೋಕವೂ ಶರಣು ಬರುವಂತಹಾ ಪರಮಾತ್ಮನೇ, ನಿನಗೆ ಮಂಗಳವಾಗಲಿ. ಗುರುವರೇಣ್ಯರೇ! ಮಂಗಲವಾಗಲಿ. ಸಮಸ್ತ ಲೋಕಕ್ಕೂ ಮಂಗಲವಾಗಲಿ.
++++++++++++++++++++++++++++++++++++++++++++++++++++++++++++++++++++++++ - ೨ -
ನತ್ವಹಮ್ ಕಾಮಯೇ ರಾಜ್ಯಮ್
ನ ಸ್ವರ್ಗಮ್ ನ ಪುನರ್ಭವಮ್
ಆರ್ತಯೇ ದು:ಖ ತಪ್ತಾನಾಮ್
ಪ್ರಾಣಿನಾಮಾರ್ತಿ ನಾಶನಮ್
ಭಾವಾರ್ಥ:- ನನಗೆ ರಾಜ್ಯ ಸುಖವಾಗಲೀ ಸ್ವರ್ಗದ ಭೋಗಸುಖವಾಗಲೀ ಬೇಡ. ನನಗೆ ಪುನರ್ಜ್ಞನ್ಮವೂ ಬೇಡ. ಆದರೆ ಪರಮಾತ್ಮಾ ;ನಿನ್ನಲ್ಲಿ ನಾನು ಕೇಳಿಕೊಳ್ಳುವುದು ಇಷ್ಟೇ! ಜೀವರಾಶಿಗಳ ದು:ಖವನ್ನು ನಿವಾರಿಸುವ ಶಕ್ತಿ ನನಗೆ ಕೊಡು.
*********************************************************************************
-೩-
ಬೆನಕ ಬೆನಕ ಏಕ ದಂತ ಪಚ್ಚೆಕಲ್ಲು
ಪಾಣಿ ಪೀಠ ಮುತ್ತಿನುಂಡೆ ಹೊನ್ನ ಗಂಟೆ
ಇಂತೊಪ್ಪುವ ಶ್ರೀ ಮಹಾಗಣಪತಿ ದೇವರ ಪಾದಕ್ಕೆ
ಇಪ್ಪತ್ತೊಂದು ನಮಸ್ಕಾರಗಳು.
ಒಪ್ಪ ಬುದ್ಧಿ ಕೊಡು ವಿದ್ಯೆ ಕೊಡು ಆರೋಗ್ಯ ಕೊಡು
ಸಂಪತ್ತು ಕೊಡು ಸಕಲ ಸೌಭಾಗ್ಯವ ಕೊಟ್ಟು
ಕಾಪಾಡು ಸ್ವಾಮೀ.
*********************************************************************************
-೪-
ನಮ್ಮ ಪ್ರಾರ್ಥನೆ
*************
ಸಂಗಚ್ಛದ್ವಂ ಸಂವದಧ್ವ೦ ಸಂವೋ ಮನಾಂಸಿ ಜಾನತಾಂ|
ಸಮಾನೋಮಂತ್ರಃ ಸಮಿತಃ ಸಮಾನೀ ಸಮಾನಂ ಸಹ ಚಿತ್ತಂ ಏಷಾಂ|
ಸಮಾನೀ ವ ಆಕತಿಹ್ ಸಮಾನಾ ಹೃದಯಾನಿವಃ|
ಸಮಾನಂ ಅಸ್ತು ವೋ ಮನಃ ಯಥಾ ವಃ ಸುಸಹಾಸತಿ||
(ಋಗ್ವೇದ)
ನೀವು ಕೂಡಿ ನಡೆಯಿರಿ. ಕೂಡಿ ಬಾಳಿರಿ. ಮಾತಿನಲ್ಲಿ ಏಕತೆಯಿರಲಿ. ಒಬ್ಬರನ್ನೊಬ್ಬರ ಮನಸ್ಸನ್ನು ಅರಿತುಕೊಳ್ಳಿರಿ.
ಪ್ರಾರ್ಥನಾ ಮಂತ್ರವು ಸಮಾನವಿರಲಿ. ಕಾರ್ಯ ನಿರ್ವಹಣದ ಸಮಿತಿ ನಿರ್ಣಯ ಸಮಾನವಿರಲಿ. ಮನಸ್ಸು ಹಾಗೂ ಸಂಕಲ್ಪ ಶಕ್ತಿಯ ಚಿತ್ತವು ಸಮಾನವಿರಲಿ.
ನಿಮ್ಮ ಉದ್ದೇಶ ಸಮಾನವಿರಲಿ. ಹೃದಯ ಭಾವನೆ ಸಮಾನವಿರಲಿ. ಯಾವ ಬಗೆಯಿಂದ ನಿಮ್ಮಲ್ಲಿ ಕೂಡಿ ಇರುವ ಭಾವವು ಬೆಳೆಯುವುದೋ ಆ ಬಗೆಯಲ್ಲಿ ನಿಮ್ಮ ನಡೆ-ನುಡಿ ಇರಲಿ.
*********************************************************************************
-೫-
||ಲಘು ವಾಯು ಸ್ತುತಿ ||
*******************
ವಾಸುದೇವಂ ಸದಾನಂದತೀರ್ಥಾನಂದ ಸಂದೋಹ ಸಂದಾನಾಶೀಲಮ್ |
ಸ್ವಾಮಿನಂ ಸಚ್ಚಿದಾನಂದಮೂರ್ತಿ ನಂದಯಾಮೋ ವಯಂ ನಂದಸೂನುಮ್ ||೧ ||
ಭಾವಾರ್ಥ:-ವಸುದೇವನ ಮಗನೂ, ಯಾವಾಗಲೂ ಸಂತೋಷ ಸಾಗರದಲ್ಲಿಯೇ ಮುಳುಗಿರುವವನೂ,ಅತ್ಯಧಿಕ ಸಂತೋಷವನ್ನು ದಯಪಾಲಿಸುವ ಗುಣ ಇರುವವನೂ, ಎಲ್ಲರ ಸ್ವಾಮಿಯೂ, ಹಾಗೆಯೇ ಸಚ್ಚಿದಾನಂದ ಸ್ವರೂಪನೂ, ಆಗಿರುವ ಆನಂದ ತೀರ್ಥರನ್ನು ಪ್ರಸನ್ನಗೊಳಿಸುವಾ.
ಶ್ರೀ ಹನೂಮಂತಮೇಕಾಂತಭಾಜಂ ರಾಘವಶ್ರೀ ಪದಾಂಭೋಜ ಭೃಂಗಮ್|
ಮಾರುತಿಂ ಪ್ರಾಣಿನಾಂ ಪ್ರಾಣ ಭೂತಂ ನಂದಯಾಮೋ ವಯಂ ನಂದಿತೀರ್ಥಮ್ ||೨||
ಭಾವಾರ್ಥ:-ಶ್ರೀರಾಮಚಂದ್ರನ ಮಂಗಲಮಯ ಪಾದಾರವಿಂದಗಳಲ್ಲಿ ವಿಹರಿಸುವ ದುಂಬಿಯ ಹಾಗಿರುವ, ಎಲ್ಲ ಜೀವಿಗಳ ಜೀವದಾತಾರನೂ, ವಾಯುವಿನ ಸುಪುತ್ರನೂ, ಶ್ರೀಮುಖ್ಯಪ್ರಾಣನ ಅಂತರಂಗ ಭಕ್ತನೂ ಆಗಿರುವ ಆನಂದ ತೀರ್ಥರನ್ನು ಸಂತೋಷಗೊಳಿಸುವಾ,
.
ಭೀಮರೂಪಂ ಪರಂಪ್ರಿಯವಾಸಂ ಭಾರತಂ ಭಾರತ ಶ್ರೀಲಲಾಮಮ್|
ಭೂಮಿ ಭೂಭಾರಧ್ವಂಸಿನಂ ಭಾರತೀಶಂ ನಂದಯಾಮೋ ವಯಂ ನಂದಿತೀರ್ಥಮ್ ||೩||
ಭಾವಾರ್ಥ:-ಪೀತಾಂಬರವನ್ನು ಧರಿಸಿದವನೂ, ಮಹಾಭಾರತಕ್ಕೆ ತಿಲಕಪ್ರಾಯನೂ, ಅಲ್ಲದೆ ಭರತ ವಂಶದಲ್ಲಿ ಹುಟ್ಟಿರುವ ಭೀಮಸೇನನ ಸ್ವರೂಪವನ್ನು ಹೊಂದಿದವನೂ, ಭೂಮಿಯ ಭಾರವ ಹರಣ ಮಾಡಿದವನೂ,ಮಾತಿನ ಮಲ್ಲನೂ, ಅತ್ಯಂತ ಶ್ರೇಷ್ಠನೂ, ಆಗಿರುವ ಆನಂದ ತೀರ್ಥರನ್ನು ಸಂತೋಷಗೊಳಿಸೋಣಾ.
ದೇವ ಚೂಡಾಮಣಿಂ ಪೂರ್ಣ ಭೋಧಂ ಕೃಷ್ಣಪಾದಾರವಿಂದೈಕದಾಸಮ್ |
ಚಿತ್ತಚಿಂತಾಮಣಿಂ ಪುಣ್ಯರೂಪಾಂ ನಂದಯಾಮೋ ವಯಂ ನಂದಿ ತೀರ್ಥಮ್ ||೪||
ಭಾವಾರ್ಥ:-ದೇವತಾ ಸಮೂಹಕ್ಕೆ ಕಿರೀಟಪ್ರಾಯದವನೂ, ಸಜ್ಜನಮೂರ್ತಿಯೂ,ಶ್ರೀಕೃಷ್ಣನ ಚರಣ ದಾಸನೂ, ಅಲೌಕಿಕವಾದಂತಾ ಪರಿಪೂರ್ಣತೆಯನ್ನು ಹೊಂದಿದವರಿಗೆ ಚಿಂತಾಮಣಿ ಸ್ವರೂಪನೂ, ಆಗಿರುವ ಆನಂದ ತೀರ್ಥರನ್ನು ಸಂತೋಷಪಡಿಸೋಣಾ.
ಮಾಯಿಗೋಮಾಯುಮಾಯಾಂಧಕಾರದ್ವಂಸಮಾರ್ತಾಂಡ ಮೂರ್ತೀಯಮಾನಂ |
ಸಜ್ಜನಾಂದಸಂದೋಹಸಿಂಹಂ ನಂದಯಾಮೋ ವಯಂ ನಂದಿತೀರ್ಥಮ್ ||೫||
ಭಾವಾರ್ಥ:-ಜಗತ್ತು ಅನ್ನುವುದು ಮಿಥ್ಯೆ ಅನ್ನುವ ಮಾಯಾವಾದವನ್ನು ಪ್ರತಿಪಾದಿಸುವ ಕುತರ್ಕಿಗಳ ಮಾಯಾಂಧಕಾರವನ್ನು ನಾಶಮಾಡುವುದರಲ್ಲಿ ಸೂರ್ಯ ಸಮಾನನೂ ಮತ್ತು ಸಜ್ಜನರುಗಳಿಗೆ ಸಂತೋಷವನ್ನು ದಯಪಾಲಿಸುವವ ಕಾಮಧೇನುವೂ ಆಗಿರುವ ಆನಂದ ತೀರ್ಥರನ್ನು ಸಂತೋಷಪಡಿಸೋಣಾ.
ಇಂದಿರಾಕಾಂತಮಾನಂದಮೂರ್ತಿಂ ಸುಂದರೀಮಿಂದಿರಾನಂದ ರೂಪಮ್ |
ನಂದಿ ತೀರ್ಥಂ ತಥಾ ತತ್ವರೂಪಂ ನಂದಯಾಮೋ ವಯಂ ನಂದಿತೀರ್ಥಮ್ ||೬||
ಭಾವಾರ್ಥ:-ಲಕ್ಷ್ಮೀಕಾಂತನೂ,ಆನಂದ ಸ್ವರೂಪಿಯೂ;ಸುಂದರಿಯೂ ಆಗಿ ಚಂದ್ರನ ಹಾಗೆ ಕಾಂತಿಯುತಳೂ ಆಗಿರುವ ಲಕ್ಷ್ಮೀದೇವಿಯ ದಾಸನೂ ಅದರಂತೆಯೇ ಯಥಾರ್ಥವಾದ ಭಗವದ್ಜ್ಞಾನವನ್ನು ಭೋಧಿಸುವ ಆನಂದ ತೀರ್ಥರನ್ನು ಸಂತೋಷಪಡಿಸೋಣಾ.
************************************************************************
||ಇತಿ ಶ್ರೀ ಕಲ್ಯಾಣೀದೇವಿ ವಿರಚಿತ ಲಘುವಾಯು ಸ್ತುತಿ:|| || ಲಘುವಾಯು ಸ್ತುತಿಯ ಭಾವಾರ್ಥ ಈ ರೀತಿಯಾಗಿದೆ. ||
*********************************************************************************
-೬-
|| ಶ್ರೀ ಶಂಕರನಾರಾಯಣ ಸ್ತುತಿ ಸ್ತೋತ್ರಮ್ ||
*******************************
ಧ್ಯಾಯೇನ್ಮಾಣಿಕ್ಯ ಪೀಠೇ ಸಕಲ ಸುರಗಣೈ:ಸೇವ್ಯಮಾನಂ ಸಮಂತಾತ್
ಬಿಭ್ರಾಣಂ ಪಾಣಿಪದ್ಮೈ: ಪರಶುದರವರಂ ಮಧ್ಯರಾಜತ್ ಕರಾಬ್ಜಂ |
ವ್ಯಾಘ್ರ ಶ್ರೀ ಕೃತ್ತಿ ಪೀತಾಂಬರಧರ ಮಹಿರಾಟ್ ಕೌಸ್ತುಭಾ ಕಲ್ಪಮೀಶಂ
ಗೌರೀ ಲಕ್ಷ್ಮೀ ಸಮೇತಂ ಸ್ಫಟಿಕ ಮರಕತೋದ್ಭಾಸಿತಾಂಗಂ ಶುಭಾಂಗಂ ||೧||
ಭಾವಾರ್ಥ:-ಸುತ್ತಲೂ ನೆರೆದಿರುವ ಸಮಸ್ತ ದೇವತಾ ಸಮೂಹದಿಂದ ಮಾಣಿಕ್ಯಪೀಠಾರೂಢಳಾಗಿ ಸೇವೆಯನ್ನು ಸ್ವೀಕರಿಸುತ್ತಾ,ಕೈಗಳಲ್ಲಿ ಪರಶುವನ್ನು ಮತ್ತು ಶಂಖವನ್ನು ಹಿಡಿದುಕೊಂಡು,ವ್ಯಾಘ್ರಚರ್ಮ ಹಾಗೂ ಹಳದಿ ವಸನಧಾರಿಯಾಗಿ,ನಾಗರಾಜನೊಡನೆ ಕೌಸ್ತುಭಮಣಿಯನ್ನು ಧರಿಸಿಕೊಂಡು ಒಂದೆಡೆ ಗೌರಿಯನ್ನೂ ಮಗದೊಂದೆಡೆ ಲಕ್ಷ್ಮಿಯನ್ನೂ ಒಡಗೂಡಿ ಸ್ಪಟಿಕದಂತೆ ಸ್ವಚ್ಛವಾಗಿಯೂ,ಪಚ್ಚೆಮಣಿಯ ತೆರದಲ್ಲಿಯೂ ಬೆಳಗುವ ಶರೀರವನ್ನು ಹೊಂದಿರುವ ಶಂಕರನಾರಾಯಣ ಸ್ವಾಮಿಯನ್ನು ಧ್ಯಾನಿಸುತ್ತೇನೆ.
ಶೀರ್ಷಸ್ಯಾರ್ಧ ಜಟಂ ತದರ್ದ ಕಬರಿ ಶ್ರೀಮತ್ಕಿರೀಟಾನ್ವಿತಂ
ರಾಕಾ ಬಿಂಬಯುತಂ ಕುಠಾರಮಮಲಂ ಶಂಖಂ ದಧಾನಂ ಕರೇ |
ಬಾಹ್ವೋರ್ದಕ್ಷಿಣ ವಾಮಯೋರಧರಯೋರಿಷ್ಟ ಪ್ರದಾನಂಕಟಿ
ನ್ಯಸ್ತಾಭೀಂ ಗಜಚರ್ಮ ಹೇಮವಸನಂ ಶಂಭ್ವಚ್ಯುತಾಂಗಂ ಭಜೇ ||೨||
ಭಾವಾರ್ಥ:-ತಲೆಯ ಅರ್ಧಭಾಗದಲ್ಲಿ ಜಟೆ,ಉಳಿದರ್ಧ ಭಾಗದಲ್ಲಿ ತುರುಬುನಿಂದ ಕೂಡಿದವನಾಗಿ,ಚಂದ್ರನ ಕಲೆಯಿಂದ ಹೊಳೆವ ಕಿರೀಟವನ್ನು ಧರಿಸಿ,ಹಸ್ತಗಳಲ್ಲಿ ಕೊಡಲಿ ಹಾಗೂ ನಿರ್ಮಲವಾಗಿರುವ ಶಂಖವನ್ನು ಹಿಡಿದುಕೊಂಡು,ಕೆಳಬದಿಯ ಬಲಗೈಯಲ್ಲಿ ವರದ ಮುದ್ರೆಯನ್ನೂ,ಸೊಂಟದ ಮೇಲಿರಿಸಿರುವ ಕೈಯಲ್ಲಿ ಅಭಯಮುದ್ರೆಯನ್ನೂ ಧರಿಸಿದವನಾಗಿ ಗಜಚರ್ಮಧಾರಿಯಾಗಿ ಪೀತಾಂಬರಾಲಂಕೃತನಾಗಿರುವ ಶಂಕರನಾರಾಯಣ ಸ್ವಾಮಿಯನ್ನು ನಾನು ಭಜಿಸುತ್ತೇನೆ.
ಯೌ ತೌ ಶಂಖ ಕಪಾಲ ಭೂಷಣಧರೌ ಹಾರಾಸ್ಥಿ ಮಾಲಾಧರೌ
ದೇವೌ ದ್ವಾರವತೀ ಸ್ಮಶಾನ ನಿಲಯೌ ನಾಗಾರಿ ಗೋವಾಹನೌ |
ದ್ವಿತ್ರ್ಯಕ್ಷೌ ಬಲಿ ದಕ್ಷಯಜ್ಞಮಥನೌ ಶ್ರೀಪಾರ್ವತೀ ವಲ್ಲಭೌ
ಪಾಪಂ ಮೇ ಹರತಾಂ ಜನಾರ್ಧನ ಹರೌ ಶ್ರೀವತ್ಸ ಗಂಗಾಧರೌ ||೩||
ಭಾವಾರ್ಥ:-ಶಂಖ ಹಾಗೂ ಕಪಾಲವನ್ನು ಅಲಂಕಾರವಾಗಿ ಧರಿಸಿಕೊಂಡು,ಪುಷ್ಪ ಮಾಲೆ ಮತ್ತು ಎಲುಬಿನ ಮಾಲೆಗಳನ್ನು ಧರಿಸಿಕೊಂಡು,ದ್ವಾರಕೆ ಮತ್ತು ಸ್ಮಶಾನದಲ್ಲಿ ನೆಲೆಯಾಗಿರುವ,ದ್ವಿನೇತ್ರನೂ ತ್ರಿನೇತ್ರನೂ ಆಗಿ,ಗರುಢ ಮತ್ತು ನಂದಿಯನ್ನು ವಾಹನವನ್ನಾಗಿಸಿ,ಬಲಿಯ ಯಜ್ಞ ಅಂತೆಯೇ ದಕ್ಷನ ಯಜ್ಞವನ್ನೂ ಭಂಗಗೊಳಿಸಿದ ,ಶ್ರೀವತ್ಸ ಲಾಂಛನನೂ ಮತ್ತು ಭಾಗೀರಥಿಯನ್ನು ಧರಿಸಿದವರಾಗಿ ಲಕ್ಷ್ಮೀ ಪತಿಯೂ ಪಾರ್ವತೀಪತಿಯೂ ಆಗಿರುವ ದೇವರುಗಳಾದ ಶಂಕರ-ನಾರಾಯಣರು ನನ್ನ ಪಾಪಗಳನ್ನೆಲ್ಲಾ ಪರಿಹರಿಸಲಿ.
*********************************************************************************
-೭-
|| ಶ್ರೀ ಧನ್ವಂತರಿ ಸ್ತೋತ್ರಮ್ ||
************************
ನಮಾಮಿ ಧನ್ವಂತರಿಮಾದಿದೇವಂ
ಸುರಾಸುರೈರ್ವಂದಿತ ಪಾದಪದ್ಮಮ್ |
ಲೋಕೇ ಜರಾರುಗ್ಭಯಮೃತ್ಯು ನಾಶಂ
ದಾತಾರಮೀಶಂ ವಿವಿಧೌಷಧೀನಾಂ ||೧||
ಭಾವಾರ್ಥ:-ಯಾವಾತನ ಪಾದಾರವಿಂದಗಳಿಗೆ ದೇವಾದಿದೇವತೆಗಳೂ,ಅಸುರರೂ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ ಹಾಗೂ ಜಗತ್ತಿನಲ್ಲಿ ರೋಗ,ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರೀಕರಿಸುವ ಅಂತೆಯೇ ವಿವಿಧ ತೆರನಾದ ಔಷಧಿಗಳನ್ನು ಕರುಣಿಸುವ ಸ್ವಾಮಿಯಾಗಿರುವ ಧನ್ವಂತರಿಗೆ ನನ್ನ ಪ್ರಣಾಮಗಳು.
ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ-
ಪ್ರಕಟಿತ ಕರಕಾಂತ: ಕಾಂತ ಪೀತಾಂಬರಾಢ್ಯ: |
ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ
ಶತಮುಖ ಮಣಿವರ್ಣ: ಪಾತು ಧನ್ವಂತರಿರ್ನ: ||೨||
ಭಾವಾರ್ಥ:-ಹಸ್ತಗಳಲ್ಲಿ ಅಮೃತಕಲಶದೊಡನೆ ಜಿಗಣೆ,ಚಕ್ರ,ಶಂಖಗಳನ್ನು ಧರಿಸಿ ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವಸನದ ರುಮಾಲಿನಿಂದ ಶೋಭಿಸುವ ಶಿರಸ್ಸು ಉಳ್ಳವನಾದ ಶರೀರವು ಇಂದ್ರನೀಲಮಣಿಯ ಬಣ್ಣ ಹೊಂದಿರುವ ಆರೋಗ್ಯದಾಯಿಯಾಗಿರುವ ಧನ್ವಂತರಿ ಸ್ವಾಮಿಯು ನಮ್ಮನ್ನು ರಕ್ಷಿಸಲಿ.
ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ
ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ
ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||೩||
ಭಾವಾರ್ಥ:-ಬಹು ಚಂದ್ರರ ಸೌಂದರ್ಯವುಳ್ಳ,ತನ್ನ ಮೋಕ್ಷದಾಯಕವಾಗಿರುವ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ,ವಿಶಾಲವಾದ ಆತ್ಮಾನುಭೂತಿಯುಳ್ಳ,ಉನ್ನತ ಸ್ವಾಮಿಯಾಗಿರುವ,ಜ್ಞಾನಮುದ್ರೆಯನ್ನು ಮತ್ತು ಮೋಕ್ಷಕುಂಭವನ್ನು ಧರಿಸಿ,ಚಂದ್ರಮಂಡಲದೊಳಗಿರುವ ದೇವನಾದ ಧನ್ವಂತರಿಯು ನಮ್ಮ ಶರೀರದಲ್ಲಿ ನೆಲೆಯಾಗಿರುವನೆಂದು ಸ್ಮರಿಸೋಣ.
ಶಂಖಂ ಚಕ್ರಂ ಜಲೂಕಾಂ ದಧದಮೃತಘಟಂ ಚಾಪಿ ದೋರ್ಭಿಶ್ಚತುರ್ಭಿ:
ಸೂಕ್ಷ್ಮಸ್ವಚ್ಛಂ ಚ ಹೃದ್ಯಾಂಶುಕಪರಿವಿಲಸನ್ಮೌಲಿಂ ಅಂಭೋಜ ನೇತ್ರಮ್ |
ಕಾಲಾಂಭೋದೋಜ್ವಲಾಂಗಂ ಕಟಿತಟಿ ವಿಲಸಚ್ಚಾರು ಪೀತಾಂಬರಾಢ್ಯಂ
ವಂದೇ ಧನ್ವಂತರೀಂ ತಂ ನಿಖಿಲ ಗದವನ ಪ್ರೌಢದಾವಾಗ್ನಿ ಲೀಲಮ್ ||೪||
ಭಾವಾರ್ಥ:-ಅಮೃತಕಲಶದೊಡನೆ ಶಂಕ,ಚಕ್ರ,ಜಿಗಣೆಗಳನ್ನು ತನ್ನ ನಾಲ್ಕುಕೈಗಳಲ್ಲಿ ಹಿಡಿದು ಸಾಮಾನ್ಯರಿಗೆ ಅಗೋಚರನಾಗಿ,ತಾನು ಇಚ್ಛಿಸಿದ ಭಕ್ತರಿಗೆ ಪ್ರತ್ಯಕ್ಷನಾಗುವ ಮನಮೋಹಕವಾಗಿರುವ ಬಟ್ಟೆಯ ರುಮಾಲನ್ನು ಶಿರದಲ್ಲಿ ಧರಿಸಿ,ವಿಸ್ತಾರವಾದ ನೇತ್ರಗಳನ್ನು ಹೊಂದಿದ ಮಳೆಗಾಲದ ಕಾರ್ಮುಗಿಲ ಬಣ್ಣದ ದೇಹವುಳ್ಳವನಾದ ಮೋಹಕವಾದ ಪೀತಾಂಬರವನ್ನು ಸೊಂಟಕ್ಕೆ ಸುತ್ತಿಕೊಂಡು,ಸಮಸ್ತ ರೋಗಗಳೆಂಬ ಕಾಡ್ಗಿಚ್ಚನ್ನು ಅಳಿಸಿಹಾಕುವ ದೇವನಾದ ಧನ್ವಂತರಿಗೆ ನನ್ನ ಪ್ರಣಾಮಗಳು.
ಶಂಖಂ ಚಕ್ರಮುಪರ್ಯಧಶ್ಚಕರಯೋರ್ದಿವ್ಯೌಷಧಂ ದಕ್ಷಿಣೇ
ವಾಮೇನಾನ್ಯ ಕರೇಣ ನಿರ್ಮಲ ಸುಧಾಕುಂಭಂ ಜಲೂಕಾವಲಿಮ್ |
ಬಿಭ್ರಾಣ: ಕರುಣಾಕರ: ಶುಭಕರ: ಸರ್ವಾಮಯ ಧ್ವಂಸಕ:
ಸರ್ವಂ ಮೇ ದುರಿತಂ ಛಿನತ್ತು ಭಗವಾನ್ ಧನ್ವಂತರಿ: ಸಂತತಮ್ ||೫||
ಭಾವಾರ್ಥ:-ತನ್ನ ದೇಹದ ಮೇಲ್ಭಾಗದ ಎರಡು ಹಸ್ತಗಳಲ್ಲಿ ಶಂಖ ಚಕ್ರಗಳನ್ನು ಧರಿಸಿ,ಕೆಳಬದಿಯ ಬಲಗೈಯಲ್ಲಿ ದಿವ್ಯೌಷಧವಾಗಿರುವ ಅಮೃತಕುಂಭವನ್ನು ಧರಿಸಿ,ಎಡಗೈಯಲ್ಲಿ ಜಿಗಣೆಗಳ ಗುಂಪನ್ನು ಹಿಡಿದಿರುವ,ಕರುಣಾಸಾಗರನಾಗಿರುವ,ಸರ್ವ ರೋಗ ನಿವಾರಕನಾಗಿರುವ,ಪ್ರಪಂಚಕ್ಕೆ ಒಳಿತನ್ನು ದಯಪಾಲಿಸುವ ಸಾಕ್ಷಾತ್ ಭಗವದ್ಸ್ವರೂಪಿ ಧನ್ವಂತರಿ ಸ್ವಾಮಿಯು ಸಮಸ್ತಕ್ಕೆ ರೋಗಗಳಿಗೆ ಮೂಲವಾಗಿರುವ ನನ್ನ ಸರ್ವ ಪಾಪಗಳನ್ನು ಅನುದಿನವೂ ನಿವಾರಿಸಲಿ.ಆತನಿಗೆ ಪ್ರಣಾಮಗಳು.
*********************************************************************************
|| ಇತಿ ಶ್ರೀ ಧನ್ವಂತರಿ ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀ ಧನ್ವಂತರಿ ಸ್ತೋತ್ರಗಳ ಭಾವಾರ್ಥವು ||
*********************************************************************************
-೮-
|| ಶ್ರೀದತ್ತಾತ್ರೇಯ ಧ್ಯಾನಸ್ತೋತ್ರಮ್ ||
*******************************
ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತ: |
ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಮ್ ||೧||
ಭಾವಾರ್ಥ:-ಯಾರ ಸ್ಮರಣೆ ಮಾತ್ರದಿಂದಲೇ ಭೂತ ಪ್ರೇತ ಪಿಶಾಚಾದಿಗಳು ದೂರವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಯನ್ನಾಮಸ್ಮರಣಾದ್ದೈನ್ಯಂ ಪಾಪಂ ತಾಪಶ್ಚ ನಶ್ಯತಿ |
ಭೀತಿಗ್ರಹಾರ್ತಿದು:ಸ್ವಪ್ನಂ ದತ್ತಾತ್ರೇಯಂ ನಮಾಮಿ ತಮ್ ||೨||
ಭಾವಾರ್ಥ:-ಯಾವಾತನ ಸ್ಮರಣೆ ಮಾತ್ರದಿಂದಲೇ ಪಾಪ,ದೈನ್ಯ,ತಾಪತ್ರಯ,ದು:ಸ್ವಪ್ನಾದಿಗಳು ಪರಿಹಾರಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ದದ್ರು-ಸ್ಪೋಟಕ ಕುಷ್ಠಾದಿ- ಮಹಾಮಾರೀ ವಿಷೂಚಿಕಾ |
ನಶ್ಯಂತ್ಯನ್ಯೇಪಿ ರೋಗಾಶ್ಚ ದತ್ತಾತ್ರೇಯಂ ನಮಾಮಿ ತಮ್ ||೩||
ಭಾವಾರ್ಥ:-ಚರ್ಮರೋಗ-ಗೌಪ್ಯವಾಗಿರುವ ಕುಷ್ಠರೋಗ-ಸಾಂಸರ್ಗಿಕ ರೋಗವಾಗಿರುವ ಬಲಿಷ್ಟವಾದ ಮಾರಿಕಾಬೇನೆ[ಕಾಲೆರಾ]ಗಳನ್ನು ನಾಶಮಾಡುವುದರೊಂದಿಗೆ ಇತರ ರೋಗಗಳನ್ನೂ ನಾಶಮಾಡುವ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಸಂಗಜಾ ದೇಶಕಾಲೋತ್ಥಾ ಅಪಿ ಸಾಂಕ್ರಾಮಿಕಾ ಗದಾ: |
ಶಾಮ್ಯಂತಿ ಯತ್ ಸ್ಮರಣತೋ ದತ್ತಾತ್ರೇಯಂ ನಮಾಮಿ ತಮ್ ||೪||
ಭಾವಾರ್ಥ:-ಸಂಸರ್ಗದಿಂದ ಉಂಟಾಗುವ ಹಾಗೂ ದೇಶಕಾಲ-ನಿಸರ್ಗ ದೋಷಗಳಿಂದುಂಟಾಗುವ ರೋಗಾದಿಗಳು;ವಿಪತ್ತುಗಳಿಗೆ ಸಿಲುಕುವುದರಿಂಟಾಗಬಹುದಾದ ಹಾನಿಗಳು;ಸಾಂಕ್ರಾಮಿಕರೋಗಗಳು,ಆಯುಧಗಳಿಂದುಂಟಾಗಬಹುದಾದ ಬಲಿಷ್ಠವಾದ ಹಾನಿಗಳೆಲ್ಲವೂ ಯಾರ ಸ್ಮರಣೆ ಮಾತ್ರದಿಂದಲೇ ನಾಶವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಸರ್ಪ ವೃಶ್ಚಿಕದಂಷ್ಟ್ರಾನಾಂ ವಿಷಾರ್ತಾನಾಂ ಶರೀರಿಣಾಮ್ |
ಯನ್ನಾಮ ಶಾಂತಿದಂ ಶೀಘ್ರಂ ದತ್ತಾತ್ರೇಯಂ ನಮಾಮಿ ತಮ್ ||೫||
ಭಾವಾರ್ಥ:-ಸರ್ಪ,ಚೇಳು ಮೊದಲಾದ ವಿಷ ಜಂತುಗಳ ವಿಷದ ಸಂಕಟಕ್ಕೆ ಸಿಲುಕಿ ತೊಂದರೆಗೊಳಗಾದ ದೇಹದವನ ದು:ಖವು ಯಾವಾತನ ನಾಮಸ್ಮರಣೆಯಿಂದ ಶೀಘ್ರವಾಗಿ ಶಾಂತಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ತ್ರಿವಿಧೋತ್ಪಾತಶಮನಂ ವಿವಿಧಾರಿಷ್ಠನಾಶನಮ್ |
ಯನ್ನಾಮ ಕ್ರೂರಭೀತಿಘ್ನಂ ದತ್ತಾತ್ರೇಯಂ ನಮಾಮಿ ತಮ್ ||೬||
ಭಾವಾರ್ಥ:-ವಾತ-ಪಿತ್ಥ-ಕಫಗಳು,ಹಾಗೂ ಭೀಕರವಾಗಿರುವ ಭೀತಿಗಳು ಶಮನಗೊಳ್ಳುವುದರೊಂದಿಗೆ ವಿವಿಧ ಶಾಪ ದೋಷಗಳು ಯಾವಾತನ ನಾಮಸ್ಮರಣೆಯಿಂದ ಶೀಘ್ರವಾಗಿ ಶಾಂತಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ವೈರ್ಯಾದಿಕೃತಮಂತ್ರಾದಿಪ್ರಯೋಗಾ ಯಸ್ಯ ಕೀರ್ತನಾತ್ |
ನಶ್ಯಂತಿ ದೇವಭಾಧಾಶ್ಚ ದತ್ತಾತ್ರೇಯಂ ನಮಾಮಿ ತಮ್ ||೭||
ಭಾವಾರ್ಥ:-ಶತ್ರುಗಳು ಮಾಡಿರುವ ಮಾಟ ಮಂತ್ರಾದಿ ದುಷ್ಟ ಪ್ರಯೋಗಗಳು,ದೇವತೆಗಳ ಬಾಧಾದೋಷಗಳು ಯಾರ ಕೀರ್ತನೆಯಿಂದ ಇಲ್ಲವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಯಚ್ಛಿಷ್ಯಸ್ಮರಣಾತ್ ಸದ್ಯೋ ಗತಂನಷ್ಟಾದಿ ಲಭ್ಯತೇ |
ಯ ಈಶ: ಸರತಸ್ತ್ರಾತಾ ದತ್ತಾತ್ರೇಯಂ ನಮಾಮಿ ತಮ್ ||೮||
ಭಾವಾರ್ಥ:-ಯಾವಾತನ ಮನ:ಪೂರ್ವಕ ಸ್ಮರಣೆ ಮಾಡುವುದರಿಂದ ಕಳೆದು ಹೋದಹಾಗೂ ನಷ್ಟವಾದ ವಸ್ತುಗಳು ದೊರಕುವವೋ ,ಯಾರು ಒಡೆಯನೋ,ಸರ್ವತ್ರನಾಗಿರುವನೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಜಯಲಾಭಯಶ:ಕಾಮದಾತುರ್ದತ್ತಸ್ಯ ಯ: ಸ್ತವಮ್ |
ಭೋಗಮೋಕ್ಷಪ್ರದಸ್ಯೇಮಂ ಪಠೇದ್ದತ್ತಪ್ರಿಯೋ ಭವೇತ್ ||೯||
ಭಾವಾರ್ಥ:-ಈ ಸ್ತೋತ್ರವನ್ನು ಪಠಿಸುವುದರಿಂದ ಜಯ,ಲಾಭ,ಯಶಸ್ಸು,ಇಷ್ಟಾರ್ಥಗಳು ಪೂರ್ಣವಾಗಿ ಒದಗಿಬರುವುದರೊಂದಿಗೆ ಅವರಿಗೆ ಸುಖಾದಿ ಭೋಗಗಳು ದೊರಕುವುದರೊಡನೆ,ಮೋಕ್ಷ ಪ್ರಾಪ್ತಿಯಾಗುವುದು.ಇವುಗಳ ಜೊತೆಯಲ್ಲಿ ದತ್ತಾತ್ರೇಯ ಸ್ವಾಮಿಯ ಪ್ರೀತಿಗೆ ಪಾತ್ರರಾಗುವರು.
*********************************************************************************
|| ಇತಿ ಶ್ರೀ ದತ್ತಾತ್ರೇಯ ಧ್ಯಾನಸ್ತೋತ್ರಮ್ ||
|| ಈ ತೆರನಾಗಿ ಶ್ರೀ ದತ್ತಾತ್ರೇಯ ಧ್ಯಾನಸ್ತೋತ್ರಗಳ ಭಾವಾರ್ಥವು ||
*********************************************************************************
-೯-
|| ಶ್ರೀ ದತ್ತಾತ್ರೇಯ ಸ್ತೋತ್ರಮ್ ||
***************************
|| ಶ್ರೀ ಗಣೇಶಾಯ ನಮ: ||
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||೧||
ಭಾವಾರ್ಥ:- ಜಟಾಧಾರಿಯೂ ಪಾಂಡುರಂಗನೂ ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡಿರುವವನೂ ಕೃಪಾಸಾಗರನೂ ಸಮಸ್ತ ರೋಗ ನಿವಾರಕನೂ ಆಗಿರುವ ದತ್ತಾತ್ರೇಯನನ್ನು ನಾನು ಭಜಿಸುವೆ.
ಅಸ್ಯ ಶ್ರೀ ದತ್ತಾತ್ರೇಯ ಸ್ತೋತ್ರ ಮಂತ್ರಸ್ಯ ಭಗವಾನ್ನಾರದ ಋಷಿ: |
ಅನುಷ್ಟುಪ್ ಛಂದ: |ಶ್ರೀ ದತ್ತ: ಪರಮಾತ್ಮಾ ದೇವತಾ |
ಶ್ರೀ ದತ್ತ ಪ್ರೀತ್ಯರ್ಥಂ ಜಪೇ ವಿನಿಯೋಗ: ||
ಭಾವಾರ್ಥ:- ಈ ದತ್ತಾತ್ರೇಯ ಸ್ತೋತ್ರವೆಂಬ ಮಹಾಮಂತ್ರಕ್ಕೆ ಭಗವಾನ್ ನಾರದರು ಮಹರ್ಷಿಗಳು.ಇದು ಅನುಷ್ಟುಪ್ ಛಂದಸ್ಸಿನಲ್ಲಿದೆ.ಶ್ರೀ ದತ್ತದೇವರು ಇದರ ದೇವತೆಯಾಗಿರುವರು. ಶ್ರೀ ದತ್ತ ದೇವರ ಕರುಣೆಗಾಗಿ ಜಪಿಸಲು ಇದನ್ನು ವಿನಿಯೋಗಿಸುವುದಾಗಿದೆ.
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |
ಭವ ಪಾಶ ವಿಮುಕ್ತಾಯ ದತ್ತಾತ್ರೇಯಂ ನಮೋಸ್ಸ್ತುತೇ ||೧||
ಭಾವಾರ್ಥ:-ಬ್ರಹ್ಮಾಂಡದ ಉತ್ಪತ್ತಿ,ಪಾಲನೆ,ನಾಶಗಳಿಗೆ ಯಜಮಾನನಾಗಿರುವನೂ ಸಂಸಾರವೆಂಬ ಬಂಧನದಿಂದ ಮುಕ್ತಿಗೊಳಿಸುವವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರ ದಯಾಮೂರ್ತೇ ದತ್ತಾತ್ರೇಯಂ ನಮೋಸ್ಸ್ತುತೇ ||೨||
ಭಾವಾರ್ಥ:-ಹುಟ್ಟು ವಾರ್ಧಕ್ಯಗಳಿಲ್ಲದ,ಶರೀರವನ್ನು ಶುದ್ಧಗೊಳಿಸುವ ದಿಗಂಬರನಾದ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯಂ ನಮೋಸ್ಸ್ತುತೇ ||೩||
ಭಾವಾರ್ಥ:-ಕರ್ಪೂರದ ಹೊಳಪಿನ ಶರೀರವುಳ್ಳವನೂ ಬ್ರಹ್ಮಮೂರ್ತಿಯನ್ನು ಧರಿಸಿರುವವನೂ ವೇದಶಾಸ್ತ್ರಗಳನ್ನು ಚೆನ್ನಾಗಿ ತಿಳಿದವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಹ್ರಸ್ವದೀರ್ಘಕೃಶಸ್ಥೂಲ ನಾಮಗೋತ್ರ ವಿವರ್ಜಿತ |
ಪಂಚಭೂತೈಕ ದೀಪ್ತಾಯ ದತ್ತಾತ್ರೇಯಂ ನಮೋಸ್ಸ್ತುತೇ ||೪||
ಭಾವಾರ್ಥ:-ಸಣ್ಣ-ದೊಡ್ಡ;ಕೃಶ-ಸ್ಥೂಲ;ಹೆಸರು-ಗೋತ್ರಗಳಿಗೆ ಹೊರತಾದವನೂ ಪಂಚಭೂತಾತ್ಮಗಳನ್ನು ಬೆಳಗಿಸುವವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಯಜ್ಞಭೋಕ್ತ್ರೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯಂ ನಮೋಸ್ಸ್ತುತೇ ||೫||
ಭಾವಾರ್ಥ:-ಯಾಗಗಳಲ್ಲಿನ ಆಹುತಿಯನ್ನು ಸ್ವೀಕರಿಸುವವನೂ,ಯಜ್ಞಸ್ವರೂಪಿಯೂ,ಯಜ್ಞ್ನೇಶ್ವರನೂ,ಯಜ ್ಞ ಪ್ರಿಯನೂ ಸಿಡ್ಧನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಆದೌ ಬ್ರಹ್ಮಾ ಮಧ್ಯೇ ವಿಷ್ಣುರಂತ್ಯೇ ದೇವ: ಸದಾಶಿವ: |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯಂ ನಮೋಸ್ಸ್ತುತೇ ||೬||
ಭಾವಾರ್ಥ:-ಆದಿಯಲ್ಲಿ ಬ್ರಹ್ಮ,ಮಧ್ಯದಲ್ಲಿ ವಿಷ್ಣು,ಅಂತ್ಯದಲ್ಲಿ ಸದಾಶಿವ ಸ್ವರೂಪಿಯಾಗಿರುವವನೂ, ದೇವನೂ, ಮೂರುಮೂರ್ತಿಗಳ ಸ್ವರೂಪಹೊಂದಿರುವವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |
ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯಂ ನಮೋಸ್ಸ್ತುತೇ ||೭||
ಭಾವಾರ್ಥ:-ಸಂಪತ್ತನ್ನು ಆವಾಸ ಸ್ಥಾನವನ್ನಾಗಿರಿಸಿಕೊಂಡವನೂ ಸುಖಾನುಭವಿಯೂ ಹಿತವಾದವನೂ ಹಿತವಾದವುಗಳನ್ನು ಧರಿಸಿರುವವನೂ ಇಂದ್ರಿಯಗಳನ್ನು ಗೆದ್ದವನೂ ಹಾಗೆಯೇ ಜೀವಾತ್ಮವನ್ನು ಗೆದ್ದವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |
ಸದೋದಿತ ಪರಬ್ರಹ್ಮ ದತ್ತಾತ್ರೇಯಂ ನಮೋಸ್ಸ್ತುತೇ ||೮||
ಭಾವಾರ್ಥ:-ದಿಗಂಬರನೂ ದಿವ್ಯವಾದವನೂ ದಿವ್ಯ ಸ್ವರೂಪಿಯೂ,ಸದಾಕಾಲವೂ ಪರಬ್ರಹ್ಮನಾಗಿರುವವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಜಂಬುದ್ವೀಪೇ ಮಹಾಕ್ಷೇತ್ರೇ ಮಾತಾಪುರವಾಸಿನೇ |
ಜಯಮಾನಸತಾಂ ದೇವ ದತ್ತಾತ್ರೇಯಂ ನಮೋಸ್ಸ್ತುತೇ ||೯||
ಭಾವಾರ್ಥ:-ಜಂಬುದ್ವೀಪದಲ್ಲಿನ ಮಾತಾಪುರವೆಂಬ ಮಹಾಕ್ಷೇತ್ರದಲ್ಲಿ ವಾಸಿಸುವವನೂ ಮಾನವತ್ವವನ್ನು ಗೆದ್ದವನೂ ದೇವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯಂ ನಮೋಸ್ಸ್ತುತೇ ||೧೦||
ಭಾವಾರ್ಥ:-ಹೊಂಬಣ್ಣದ ಪಾತ್ರವನ್ನು ಹಸ್ತದಲ್ಲಿ ಹಿಡಿದು ರುಚಿಕರವಾಗಿರುವ ನಾನಾ ವಿಧದ ಭಿಕ್ಷವನ್ನೆತ್ತಲು ಮನೆ-ಮನೆ; ಗ್ರಾಮ-ಗ್ರಾಮಗಳಲ್ಲಿ ಭಿಕ್ಷಾಟನೆಗೈಯುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶ ಭೂತಲೇ |
ಪ್ರಜ್ಞಾನಘನಭೋಧಾಯ ದತ್ತಾತ್ರೇಯಂ ನಮೋಸ್ಸ್ತುತೇ ||೧೧||
ಭಾವಾರ್ಥ:-ಬ್ರಹ್ಮಜ್ಞಾನಮಯವಾಗಿರುವ ಮುಖಮುದ್ರೆಯನ್ನು ಹೊಂದಿ ಆಕಾಶ ಭೂಮಿಗಳನ್ನು ವಸ್ತುಗಳಾಗಿರಿಸಿಕೊಂಡು ಶ್ರೇಷ್ಠವಾದ ಬ್ರಹ್ಮಜ್ಞಾನದ ಪ್ರಜ್ಞೆಯುಳ್ಳವನಾಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಅವಧೂತ ಸದಾನಂದ ಪರಬ್ರಹ್ಮ ಸ್ವರೂಪಿಣೇ |
ವಿದೇಹ ದೇಹರೂಪಾಯ ದತ್ತಾತ್ರೇಯಂ ನಮೋಸ್ಸ್ತುತೇ ||೧೨||
ಭಾವಾರ್ಥ:-ವಿರಕ್ತನೂ,ಸದಾನಂದನೂ,ಪರಬ್ರಹ್ಮಸ್ವರೂಪಿಯೂ ಶರೀರವನ್ನು ಹೊಂದಿದ್ದರೂ ಅಶರೀರಿಯೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಸತ್ಯರೂಪ ಸದಾಚಾರ ಸತ್ಯಧರ್ಮ ಪರಾಯಣ |
ಸತ್ಯಾಶ್ರಯ ಪರೋಕ್ಷಾಯ ದತ್ತಾತ್ರೇಯಂ ನಮೋಸ್ಸ್ತುತೇ ||೧೩||
ಭಾವಾರ್ಥ:-ಸತ್ಯ ಸ್ವರೂಪಿಯೂ ಸತ್ಯ ಧರ್ಮಗಳ ಆರಾಧಕನೂ,ಸತ್ಯಕ್ಕೆ ಆಶ್ರಯದಾತನೂ ಅಪ್ರತ್ಯಕ್ಷನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಶೂಲಹಸ್ತ ಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯಂ ನಮೋಸ್ಸ್ತುತೇ ||೧೪||
ಭಾವಾರ್ಥ:-ತ್ರಿಶೂಲ ಹಾಗೂ ಗದೆಯನ್ನು ಕೈಯಲ್ಲಿ ಧರಿಸಿದವನೂ ವನಮಾಲೆಯಿಂದ ಶೋಭಿಸುತ್ತಿರುವ ಕೊರಳುಳ್ಳವನೂ ಯಾಗಗಳ ನಿಯಮವನ್ನು ಧರಿಸಿದವನೂ ಸಾಕ್ಷಾತ್ ಬ್ರಹ್ಮನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಕ್ಷರಾಕ್ಷರ ಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿ ಪರಸ್ತೋತ್ರ ದತ್ತಾತ್ರೇಯಂ ನಮೋಸ್ಸ್ತುತೇ ||೧೫||
ಭಾವಾರ್ಥ:-ನಾಶವಾಗುವ ಹಾಗೂ ನಾಶವಾಗದ ರೂಪವುಳ್ಳವನೂ,ಅಪರಿಚಿತರಲ್ಲಿ ಅತ್ಯಂತ ಅಪರಿಚಿತನಾದವನೂ ಮುಕ್ತಿಯನ್ನು ಕರುಣಿಸುವ ಕೀರ್ತಿವಂತನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ದತ್ತವಿದ್ಯಾಢ್ಯ ಲಕ್ಷ್ಮೀಶ ದತ್ತಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣ ರೂಪಾಯ ದತ್ತಾತ್ರೇಯಂ ನಮೋಸ್ಸ್ತುತೇ ||೧೬||
ಭಾವಾರ್ಥ:-ತಕ್ಕುದಾದ ಸತ್ಯಜ್ಞಾನದ ಶ್ರೀಮಂತನೂ ವರದಾಯಕನ ಆತ್ಮ ಸ್ವರೂಪನೂ ಸಂಪತ್ತಿನ ಅಧೀಶನೂ ಯೋಗ್ಯತೆ ಹಾಗೂ ಅಯೋಗ್ಯತೆಗಳ ಆಕಾರವುಳ್ಳವನೂ ಆಗಿರುವ ದತ್ತಾತ್ರೇಯ ಸ್ವಾಮಿಯೇ ನಿನಗೆ ನಾನು ನಮಿಸುವೆ.
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪ ಶಮಂ ಯಾತಿ ದತ್ತಾತ್ರೇಯಂ ನಮೋಸ್ಸ್ತುತೇ ||೧೭||
ಭಾವಾರ್ಥ:-ಈ ಪ್ರಾರ್ಥನೆಯು ವೈರಿಗಳನ್ನು ನಾಶಗೊಳಿಸುತ್ತದೆ.ಹಾಗೂ ಬ್ರಹ್ಮಜ್ಞಾನವನ್ನು ಮತ್ತು ಅದಕ್ಕಿಂತಲೂ ಶ್ರೇಷ್ಠವಾದ ಅರಿವಿನ ಶಕ್ತಿಯನ್ನು ಕರುಣಿಸುವ ಶಕ್ತಿಯುಳ್ಳದ್ದಾಗಿದೆ.ಸಮಸ್ತ ಪಾಪಗಳನ್ನು ಶಮನಗೊಳಿಸುವಂತಹದ್ದಾಗಿದೆ.ಇಂತಹಾ ಪ್ರಶಂಸೆಗೆ ಪಾತ್ರನಾಗಿರುವ ದತ್ತಾತ್ರೇಯ
ಸ್ವಾಮಿಯೇ ನಿನಗೆ ನಾನು ನಮಿಸುವೆ.
ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತ ಪ್ರತ್ಯಕ್ಷಕಾರಕಮ್ |
ದತ್ತಾತ್ರೇಯ ಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ ||೧೮||
ಭಾವಾರ್ಥ:-ಈ ಸ್ತುತಿಯು ಶ್ರೇಷ್ಠವಾದ ಶಕ್ತಿಯನ್ನು ಹೊಂದಿದ್ದು ದತ್ತಾತ್ರೇಯಸ್ವಾಮಿಯ ಅನುಗ್ರಹದಿಂದ ನಾರದರಿಂದ ಪ್ರಾರ್ಥಿಸಲ್ಪಟ್ಟಿರುವುದಾಗಿದೆ.
*********************************************************************
|| ಶ್ರೀ ದತ್ತಾತ್ರೇಯ ಸ್ತೋತ್ರಮ್ || || ಈ ರೀತಿಯಾಗಿ ಶ್ರೀ ದತ್ತಾತ್ರೇಯ ಸ್ತೋತ್ರಗಳ ಭಾವಾರ್ಥವು||
*********************************************************************************
-೧೧-
|| ಸಪ್ತ ಶ್ಲೋಕೀ ಗೀತಾ ||
**********************
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ |
ಯ: ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||೧||
ಭಾವಾರ್ಥ:-ಓಂ ಎಂಬ ಏಕಾಕ್ಷರ ರೂಪದ ಬ್ರಹ್ಮನ ಹೆಸರನ್ನು ಉಚ್ಚರಿಸುತ್ತಾ ಹಾಗೂ ಓಂಕಾರಕ್ಕೆ ಅರ್ಥ ಸ್ವರೂಪನೂ ಆಗಿರುವ ನನ್ನನ್ನು ಸ್ಮರಿಸುತ್ತಾ ಯಾವಾತನು ದೇಹವನ್ನು ತ್ಯಜಿಸುವನೋ ಅವನು ಅತ್ಯುನ್ನತ ಶ್ರೇಷ್ಠ ಪದವಿಯೆನಿಸಿದ ಮೋಕ್ಷವನ್ನು ಪಡೆಯುವನು.
ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಾಜತೇ ಚ |
ರಕ್ಷಾಂಸಿ ಭೀತಾನಿ ದಿಶೋ ಧವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾ: ||೨||
ಭಾವಾರ್ಥ:-ಎಲೈ ಹೃಷಿಕೇಶ! ನಿನ್ನ ಗುಣಗಳ ಸಂಕೀರ್ತನೆಯಿಂದ ಬ್ರಹ್ಮಾಂಡವು ಸ್ವಚ್ಚವಾಗಿದೆ ಮತ್ತು ಸ್ನೇಹಪೂರಿತವಾಗಿದೆ.ಹಾಗೂ ಅದು ಸರಿಯಾದುದೂ ಆಗಿದೆ. ಈ ರಕ್ಕಸರು ಭಯಭೀತರಾಗಿ ಸಮಸ್ತ ದಿಸೆಗಳತ್ತ ಓಡುತ್ತಲಿರುವರು. ಹೀಗಿರುತ್ತಾ ಸಮಸ್ತ ಸಿದ್ಧಗಣ ಸೇನೆಯು ನಿನಗೆ ನಮಸ್ಕರಿಸುತ್ತಲಿವೆ.
ಸರ್ವತ: ಪಾಣಿಪಾದಂ ತತ್ಸರ್ವತೋಕ್ಷಿ ಶಿರೋಮುಖಮ್ |
ಸರ್ವತ: ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||೩||
ಭಾವಾರ್ಥ:- ಅವನು ಸಮಸ್ತ ಕಡೆಗೂ ಹಸ್ತ ಪಾದಗಳುಳ್ಳವನು;ಹಾಗೆಯೇ ಎಲ್ಲ ಕಡೆಗೂ ಕಣ್ಣು.ತಲೆ,ಮುಖಗಳುಳ್ಳವನು.ಅವನು ಸರ್ವತ್ರ ವ್ಯಾಪಕಸ್ವರೂಪನಾಗಿ ಶ್ರವಣೇಂದ್ರಿಯಗಳುಳ್ಳವನೂ ಆಗಿರುವನು. ಅವನು ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡವನು.
ಕವಿಂ ಪುರಾಣಮನುಶಾಸಿತಾರಮಣೋರಣೀಯಾಂ ಸಮನುಸ್ಮರೇದ್ಯ: |
ಸರ್ವಸ್ಯ ದಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸ: ಪರಸ್ತಾತ್ ||೪||
ಭಾವಾರ್ಥ:-ಅವನು ಎಲ್ಲವನ್ನು ಬಲ್ಲವನು.ಎಲ್ಲದಕ್ಕೂ ಆದಿಯಾದವನು.ಪ್ರಪಂಚದ ನಿಯಾಮಕನು.ಸೂಕ್ಷ್ಮಾತಿಸೂಕ್ಷ್ಮನಾಗಿರುವವನು.ಎಲ್ಲರಿಗೂ ಅವರವರ ಕರ್ಮಗಳಿಗನುಸಾರವಾಗಿ ಉಚಿತವಾದ [ತಕ್ಕುದಾದ] ಫಲವನ್ನು ನೀಡುವವನು.ಅವನ ಸ್ವರೂಪವನ್ನು ಚಿಂತಿಸಲು ಅಶಕ್ಯ. ಅವನು ಸೂರ್ಯ ಸಮಾನ ತೇಜೋಮಯಿ.ಆತನು ಅಜ್ಞಾನಗಳಿಗೆ ಹೊರತಾದವನು.ಸ್ಮರಣೀಯನು.
ಊರ್ಧ್ವಮೂಲಮಧ: ಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||೫||
ಭಾವಾರ್ಥ:-ಮೇಲ್ಬದಿಯಲ್ಲಿ ಬೇರುಳ್ಳವನು ಬ್ರಹ್ಮನು. ಕವಲುಗಳು ಕೆಳಬದಿಯಲ್ಲಿ ಹರಡಿವೆ.ಈ ರೀತಿಯಾದ ಸಂಸಾರ ಸ್ವರೂಪೀ ಅಶ್ವತ್ಥ ವೃಕ್ಷವನ್ನು ಅವಿನಾಶಿ ಎಂಬರು. ಋಗ್,ಯಜ್,ಸಾಮಾದಿ ವೇದಗಳು ಆ ವೃಕ್ಷದ ಎಲೆಗಳು. ಈ ತೆರನಾದ ಸಂಸಾರರೂಪೀ ವೃಕ್ಷವನ್ನು ಈ ಅರ್ಥದಲ್ಲಿ ಅರಿತುಕೊಳ್ಳಲು ಶಕ್ಯನಾದವನು ವೇದಗಳ ಯಥಾರ್ಥವನ್ನು ಅರಿಯಬಲ್ಲನು.
ಸರ್ವಸ್ಯ ಚಾಹಂ ಹೃದಿ ಸನ್ನಿವಿಷೋ ಮತ್ತ: ಸ್ಮೃತಿರ್ಜ್ಞಾನಮಪೋಹನಂ ಚ |
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಮ್ ||೬||
ಭಾವಾರ್ಥ:-ನಾನು ಸಮಸ್ತ ಜೀವಿಗಳ ಆತ್ಮನಾಗಿದ್ದು ಅವರ ಹೃದಯದಲ್ಲಿ ನೆಲೆಸಿರುವೆ. ಅವರ ಪ್ರಜ್ಞೆ,ಮತ್ತು ಜ್ಞಾನಗಳು ನಾನು.ಅವುಗಳ ಲೋಪಕ್ಕೂ ನಾನೇ ಕಾರಣನು.ಸಮಸ್ತ ವೇದಗಳ ಮೂಲಕ ತಿಳಿದುಕೊಳ್ಳಲು ತಕ್ಕವನು ನಾನು. ವೇದಾಂತದ ಸೃಷ್ಟಿಕರ್ತನೂ ವೇದಗಳ ಅರ್ಥವನ್ನು ಬಲ್ಲವನೂ ನಾನೇ ಆಗಿರುವೆ.
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಯುಕ್ತೈವಮಾತ್ಮಾನಂ ಮತ್ಪರಾಯಣ: ||೭||
ಭಾವಾರ್ಥ:- ನೀನು ನನ್ನಲ್ಲಿ ಮನವನ್ನು ನೆಲೆಗೊಳಿಸು. ನನ್ನ ಭಕ್ತ ನೀನಾಗು. ನನಗೆ ನಮಸ್ಕರಿಸುತ್ತಾ ನಿನ್ನ ಚಿತ್ತವನ್ನು ನನ್ನಲ್ಲಿ ಲೀನಗೊಳಿಸು.ನನ್ನಲ್ಲಿ ಅತ್ಯಂತ ಆಸಕ್ತನಾಗು. ಹೀಗೆ ಮಾಡಿದರೆ ನೀನು ನನ್ನನ್ನು ಹೊಂದಲು ಶಕ್ತನಾಗುವೆ.
********************************************************************************* || ಇತಿ ಸಪ್ತಶ್ಲೋಕೀ ಗೀತಾ || || ಈ ರೀತಿಯಾಗಿ ಸಪ್ತಶ್ಲೋಕೀ ಗೀತಾ ಭಾವಾರ್ಥವು ||
******************************************************************** -೧೨-
|| ಪ್ರಾರ್ಥನಾ ಶ್ಲೋಕಮ್ ||
|| ಪ್ರಾರ್ಥನಾ ಶ್ಲೋಕಮ್ ||
********************
ಯಂ ಶೈವಾ: ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನ:
ಬೌದ್ಧಾ ಬುದ್ಧ ಇತಿ ಪ್ರಮಾಣಪಟವ: ಕರ್ತೇತಿ ನೈಯಾಯಿಕಾ: |
ಅರ್ಹನ್ನಿತ್ಯಥ ಜೈನಶಾಸನರತಾ: ಕರ್ಮೇತಿ ಮೀಮಾಂಸಕಾ:
ಸೋsಯಂ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ಹರಿ: ||
ಭಾವಾರ್ಥ:-ಶೈವರು ಶಿವನೆಂದು ಯಾರನ್ನು ಉಪಾಸಿಸುತ್ತಾರೋ,ವೇದಾಂತಿಗಳು ಬ್ರಹ್ಮವೆಂದು ಯಾರನ್ನು ನಂಬುವರೋ,ವೈಚಾರಿಕ ಶ್ರೇಷ್ಠರಾದ ನೈಯಾಯಿಕರು ಯಾರನ್ನು ಕರ್ತೃವೆನ್ನುವರೋ,ಬೌದ್ಧರು ಯಾರನ್ನು ಬುದ್ಧನೆಂದು ಆರಾಧಿಸುವರೋ,ಜೈನಶಾಸನದ ಅನುಯಾಯಿಗಳು ಅರ್ಹತ್ ಎಂದು ನಿತ್ಯವೂ ಯಾರನ್ನು ನಂಬುವರೋ,ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸನೆಗೈಯುವರೋ ಅಂತಹಾ ಮೂರುಲೋಕದ ಒಡೆಯನಾಗಿರುವ ಶ್ರೀಹರಿಯು ನಿಮ್ಮ ಇಷ್ಟಫಲಗಳನ್ನು ಕರುಣಿಸಲಿ.
*********************************************************************************
-೧೩-
|| ಶ್ರೀ ನಾಗದೇವತಾ ಸ್ತುತಿ ಸ್ತೋತ್ರಮ್ ||
*******************************
ವಂದೇ ಸರ್ಪ ಕುಲಾಧಿಪಂ ತ್ರಿನಯನಂ ಪೀತಾಂಬರಾಲಂಕೃತಮ್ |
ಹೇಮಾಂಗಂ ಯುಗಲಾಛನಂ ಸುಫಲಕಂ ಖಡ್ಗಂ ದಧಾನಂ ವಿಭುಮ್ ||
ನಾನಾರತ್ನ ಸಮನ್ವಿತಂ ಭಯಹರಂ ಶ್ವೇತಾಬ್ಜ ಮಧ್ಯಸ್ಥಿತಮ್ |
ಶ್ರೀಗಂಧಾದಿ ಸುಪುಷ್ಪಧಾರಿಣಮಥ ಕ್ಷೀರಾಜ್ಯ ಹವ್ಯ ಪ್ರಿಯಮ್ ||೧||
ಭಾವಾರ್ಥ:-ಮೂರು ಕಣ್ಣುಗಳನ್ನು ಹೊಂದಿದ,ಹಳದಿಯ ವಸ್ತ್ರಗಳಿಂದ ಅಲಂಕರಿಸಲ್ಪಟ್ಟ,ಹೊಂಬಣ್ಣದ ದೇಹವನ್ನು ಹೊಂದಿರುವ,ನೊಗವನ್ನು ತನ್ನ ಗುರುತನ್ನಾಗಿ ಹೊಂದಿದ,ಖಡ್ಗ ಗುರಾಣಿಗಳನ್ನು ಹಿಡಿದಿರುವ,ಸರ್ವ ವ್ಯಾಪಕನಾದ,ವಿಧ ವಿಧವಾದ ರತ್ನಮಣಿಗಳನ್ನು ಧರಿಸಿರುವ,ಭಯನಾಶಕನಾದ,ಬಿಳಿಯಕಮಲಗಳ ನಡುವೆ ನಿಂತಿರುವ,ಶ್ರೀಗಂಧಹಾಗೂ ನಾನಾ ವಿಧದ ಪರಿಮಳ ಪುಷ್ಪಗಳನ್ನು ಧರಿಸಿರುವ ಹಾಲು ಮತ್ತು ತುಪ್ಪಗಳನ್ನು ಮೆಚ್ಚಿಕೊಳ್ಳುವ ಸರ್ಪಕುಲಾಧಿಪತಿಗೆ ನನ್ನ ಪ್ರಣಾಮಗಳು.
ನಾಗೇಂದ್ರಂ ಶಂಖಪಾಲಂ ಕಪಿಲಮಜಗರಂ ವಾಸುಕಿಂ ಪದ್ಮನಾಗಮ್ |
ಕಾಳಿಂಗಂ ಕದ್ರುಪುತ್ರಂ ಸುವಿಷಧರಂ ಮಹಾಕಾಲೀಯಂ ಧಾರ್ತರಾಷ್ಟ್ರಮ್ ||
ಸೌರಾಷ್ಟ್ರಂ ಬ್ರಹ್ಮಪುತ್ರಂ ಸುತಲಗತಮಧ:ಸ್ವರ್ಗಗಂ ವ್ಯೋಮಸಂಸ್ಥಮ್ |
ಭೂಮಿಸ್ಥಂ ತಕ್ಷಕಾಖ್ಯಂ ಹರಿವರಶಯನಂ ಶೇಷರಾಜಂ ನಮಾಮಿ ||೨||
ಭಾವಾರ್ಥ:-ನಾಗಗಳ ಒಡೆಯನಿಗೂ,ಶಂಖಪಾಲನಿಗೂ,ಕಪಿಲನಿಗೂ,ಅಜಗರನಿಗೂ,ವಾಸುಕಿಗೂ,ಪದ್ಮವೆಂಬ ಹೆಸರಿನ ನಾಗನಿಗೂ,ಕದ್ರುತನಯನಾದ ಕಾಳಿಂಗನಿಗೂ,ವಿಷವನ್ನು ಧರಿಸಿರುವ ಕಾಲಿಯನಿಗೂ,ಧಾರ್ತರಾಷ್ಟ್ರನಿಗೂ,ಬ್ರಹ್ಮಪುತ್ರನಾದ ಸೌರಾಷ್ಟ್ರನಿಗೂ, ಪಾತಾಳ,ಸ್ವರ್ಗ,ಅಂತರಿಕ್ಷ ಮತ್ತು ಭೂಮಿಯಲ್ಲಿರುವ ನಾಗಾದಿಗಳಿಗೂ,ತಕ್ಷಕನಿಗೂ,ಹಾಗೆಯೇ ಹರಿಯ ಹಾಸಿಗೆಯಾಗಿರುವ ಶೇಷನನಿಗೂ ನನ್ನ ಪ್ರಣಾಮಗಳು.
ಧ್ಯಾಯೇಛ್ರೀ ನಾಗರಾಜಂ ನತದುರಿತ ಹರಂ ಮೃತ್ಯುದಾರಿದ್ರ್ಯನಾಶಮ್ |
ಸಂಪೂರ್ಣಾನಂದರೂಪಂ ಸುಮಧುರ ವಚನಂ ಸರ್ವ ಸೌಭಾಗ್ಯದಂ ತಮ್ ||
ಭಕ್ತೈ: ಸಂಸೇವ್ಯಮಾನಂ ಸಕಲ ಸುಖಕರಂ ಆಯುರಾರೋಗ್ಯಭಾಗ್ಯಮ್ |
ದತ್ವಾ ಸಂಪತ್ಸಮೃದ್ಧಿಮಮಿತ ಫಲಮಿಹಾನಂತ ರೂಪಂ ನಮಾಮಿ ||೩||
ಭಾವಾರ್ಥ:-ಧ್ಯಾನಿಸಿದವರ ದುರಿತಗಳನ್ನು ಪರಿಹರಿಸುವ,ದಾರಿದ್ರ್ಯ ಹಾಗೂ ಮೃತ್ಯುವನ್ನು ನಿವಾರಿಸುವ,ಪರಿಪೂರ್ಣಾನಂದದಾಯಕನಾಗಿರುವ,ಮಧುರ ಮಾತುಗಳುಳ್ಳ, ಸರ್ವಸೌಭಾಗ್ಯದಾಯಕನಾಗಿರುವ,ಭಕ್ತರ ಸೇವೆಯನ್ನು ಸ್ವೀಕರಿಸುವ,ಸಮಸ್ತ ಸುಖದಾಯಕನಾದ,ಆಯುರಾರೋಗ್ಯಾದಿಭಾಗ್ಯದಾಯಕನಾಗಿ ಸಂಪತ್ಸಮೃದ್ಧಿಯನ್ನು ಕರುಣಿಸುವ,ಅಪರಿಮಿತ ಫಲದಾಯಕನಾದ ಅನಂತ ಸ್ವರೂಪನಾದ ಶ್ರೀನಾಗರಾಜನಿಗೆ ನನ್ನ ಪ್ರಣಾಮಗಳು.
ಫಣಾಷ್ಟಶತ ಶೇಖರಂ ಧೃತಸುವರ್ಣ ಪುಂಜಪ್ರಭಮ್ |
ಸವಜ್ರ ವರಭೂಷಣಂ ನವಸರೋಜ ರಕ್ತೇಕ್ಷಣಮ್ ||
ಸುವರ್ಣ ಮುಕುಟೋಜ್ವಲಂ ವಾಂಛಿತಾರ್ಥಪ್ರದಮ್ |
ನಮಾಮಿ ಶಿರಸಾ ಸುರಾಸುರ ನಮಸ್ಕೃತಂ ವಾಸುಕಿಮ್ ||೪||
ಭಾವಾರ್ಥ:-ಎಂಟುನೂರು ಹೆಡೆಗಳನ್ನು ಹೊಂದಿರುವ,ಬಂಗಾರದ ತುಂಡಿನಂತೆ ಶೋಭಿಸುತ್ತಿರುವ,ವಜ್ರಾಭರಣಗಳಿಂದ ಭೂಷಿತನಾಗಿರುವ,ಅರಳಿದ ತಾವರೆಯಂತೆ ವಿಶಾಲವಾದ ಕೆಂಗಣ್ಣುಗಳನ್ನು ಹೊಂದಿರುವ,ಹೊನ್ನಿನ ಕಿರೀಟದಿಂದ ಬೆಳಗುತ್ತಿರುವ,ಸಮಸ್ತ ವಾಂಛಿತಾರ್ಥಗಳನ್ನು ಕರುಣಿಸುವ,ದೇವತೆಗಳಿಂದಲೂ ದಾನವರಿಂದಲೂ ವಂದಿಸಲ್ಪಡುವ ವಾಸುಕಿಗೆ ನನ್ನ ಪ್ರಣಾಮಗಳು.ಅನಂತ ಶೀರ್ಷಂ ಜಗದೇಕ ಕುಂಡಲಮ್ |
ಪೀತಾಂಬರಂ ಧೂಮ್ರ ಸಹಸ್ರ ಲೋಚನಮ್ ||
ಉದಾರವೀರ್ಯಂ ವಿಷದಂಷ್ಟ್ರ ಕಾನನಮ್ |
ನಮಾಮ್ಯನಂತಂ ಭುವನೈಕ ನಾಥಮ್ ||೫||
ಭಾವಾರ್ಥ:-ನಾಶವಿಲ್ಲಂತಹಾ ಶಿರಸ್ಸುಗಳನ್ನು ಹೊಂದಿರುವ,ಬ್ರಹ್ಮಾಂದವನ್ನು ಕುಂಡಲವನ್ನಾಗಿ ಧರಿಸಿರುವ,ಹಳದಿ ವಸನವನ್ನು ಧರಿಸಿದ,ಕಂದುಬಣ್ಣದ ಸಾವಿರಾರು ಕಣ್ಣುಗಳನ್ನು ಹೊಂದಿದ,ಬಹು ಶಕ್ತಿಯುತನಾಗಿರುವ,ಲೋಕದೊಡೆಯನಾದ ಅನಂತನಿಗೆ ನನ್ನ ಪ್ರಣಾಮಗಳು.
ಸಹಸ್ರ ವಕ್ತ್ರಂ ದ್ವಿ ಸಹಸ್ರ ಜಿಹ್ವಮ್ |
ಪಿಶಂಗನೇತ್ರಂ ಕಪಿಲಾಂಶುಕಾಢ್ಯಮ್ ||
ವಿಷಾಯುಧಂ ಪ್ರೋಜ್ವಲ ದಂಷ್ಟ್ರಬಾಹುಮ್ |
ತಂ ನಾಗರಾಜಂ ಪ್ರಣತೋsಸ್ಮಿ ನಿತ್ಯಮ್ ||೬||
ಭಾವಾರ್ಥ:-ಸಾವಿರ ಮೊಗಗಳಿಂದ ಕೂಡಿ,ಎರಡು ಸಾವಿರ ನಾಲಿಗೆಗಳನ್ನು ಹೊಂದಿ,ಕಂದುಗೆಂಪು ವರ್ಣದ ಕಣ್ಣುಗಳುಳ್ಳವನಾದ,ಕೆಂಪು ಹಾಗೂ ಹೊಂಬಣ್ಣ ವಸನವಧಾರಿಯಾದ,ಹೊಳೆಯುವ ದಂತಗಳನ್ನೇ ತನ್ನ ಬಾಹುಗಳನ್ನಾಗಿಸಿಕೊಂಡ ಆ ನಾಗರಾಜನಿಗೆ ನನ್ನ ಪ್ರಣಾಮಗಳು.
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ |
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ ||
ಏತಾನಿ ನವ ನಾಗಾನಿ ನಾಗಾನಾಂ ಚ ಮಹಾತ್ಮನಾಮ್ |
ಸಾಯಂಕಾಲೇ ಪಠೇನ್ನಿತ್ಯಂ ಪ್ರಾತ:ಕಾಲೇ ವಿಶೇಷತ:|
ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ||೭||
ಭಾವಾರ್ಥ:-ಅನಂತ,ವಾಸುಕಿ,ಶೇಷ,ಪದ್ಮ,ಕಂಬಲ,ಶಂಖಪಾಲ,ದೃತರಾಷ್ಟ್ರ,ತಕ್ಷಕ,ಹಾಗೂ ಕಾಲಿಯ ಎಂಬೀ ಒಂಭತ್ತು ಹೆಸರುಗಳು ಮಹಾತ್ಮೆಯುಳ್ಳವುಗಳಾಗಿದ್ದು ಇವುಗಳನ್ನು ಸಂಜೆ ಮತ್ತು ಬೆಳಿಗ್ಗೆ ಅನುದಿನವೂ ವಿಶೇಷವಾಗಿ ಪಠನೆ ಮಾಡುವವರಿಗೆ ಯಾವುದೇ ವಿಷಭಯವಿರುವುದಿಲ್ಲ.ಅಲ್ಲದೆ ಅಂತಹವರು ಎಲ್ಲೆಡೆಗಳಲ್ಲೂ ಜಯಶಾಲಿಗಳಾಗುವರು.
ಶೇಷೋ ನಿ:ಶೇಷಕರ್ತಾ ಸ್ಯಾಜ್ಜಾಡ್ಯ ದಾರಿದ್ರ್ಯ ಹೃದ್ರುಜಾಮ್ |
ತಕ್ಷಕೋ ವಿಘ್ನಹರ್ತಾಸ್ಯಾದನಂತೋsಭೀಷ್ಟದಾಯಕ: ||
ವಾಸುಕಿರ್ವಸುದಾಯೀ ಸ್ಯಾಚ್ಛಂಖಪಾಲ: ಸುಕೀರ್ತಿದ: |
ಮಹಾಪದ್ಮ: ಶಾಂತಿ ಕಾಂತಿ ತುಷ್ಟಿ ಪುಷ್ಟಿ ದೃತಿಪ್ರದ: ||೮||
ಭಾವಾರ್ಥ:-ಮಹಾಶೇಷನು ಜಡತ್ವವನ್ನೂ,ಬಡತನವನ್ನೂ,ಹೃದ್ರೋಗವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.ತಕ್ಷಕನು ಅಡ್ಡಿ ಆತಂಕಗಳನ್ನು ದೂರೀಕರಿಸುವನು.ಅನಂತನು ಅಭೀಷ್ಟಗಳನ್ನು ನೆರವೇರಿಸುವನು.ವಾಸುಕಿಯು ಸಂಪತ್ತನ್ನು ಕರುಣಿಸುವನು.ಶಂಖಪಾಲನು ಸತ್ಕೀರ್ತಿಯನ್ನು ಒದಗಿಸುವನು.ಮಹಾಪದ್ಮನೆಂಬ ನಾಗನು ಮನಸ್ಸಿಗೆ ಶಾಂತಿಯನ್ನೂ ಸಂತೋಷವನ್ನೂ ದೈರ್ಯವನ್ನೂ ಕರುಣಿಸುವನು.
ಕಂಬಲಂ ಕಷ್ಟಹಾರೀಸ್ಯಾತ್ ಕರ್ಕೋಟಂ ಕ್ಷುದ್ರರೋಗ ಹೃತ್ |
ಆರೋಗ್ಯಂ ಚ ಚಿರಾಯುಶ್ಚ ಚಿತ್ತ ಶುದ್ಧಿಂ ಗುರುಷ್ವಪಿ ||
ದೈವೇ ಧರ್ಮೇ ಸದಾಚಾರೇ ಸತ್ಯೇ ವೈ ಪುಣ್ಯಕರ್ಮಣಿ |
ಪ್ರಯಚ್ಛ ನಿರ್ಮಲಾಂ ಶ್ರದ್ಧಾಂ ದಯಯಾ ಪನ್ನಗಾಧಿಪ ||೯||
ಭಾವಾರ್ಥ:-ಕಂಬಲನೆಂಬ ಸರ್ಪನು ಕಷ್ಟವನ್ನು ಪಹರಿಸುವನು.ಕರ್ಕೋಟಕನು ಕೆಟ್ಟ ಕಾಯಿಲೆಗಳನ್ನು ಗುಣಪಡಿಸಿ ಆರೋಗ್ಯವನ್ನು ಕರುಣಿಸುವನು. ಹೇ ನಾಗರಾಜನೇ;ನನ್ನಲ್ಲಿ ಕರುಣೆಯುಳ್ಳವನಾಗಿ ಆರೋಗ್ಯವನ್ನೂ,ಅಧಿಕ ಆಯುಸ್ಸನ್ನೂ,ಪರಿಶುದ್ಧವಾದ ಮನವನ್ನೂ ದೇವರಲ್ಲಿ ಧರ್ಮದಲ್ಲಿ ಸದಾಚಾರದಲ್ಲಿ ಗುರುಹಿರಿಯರಲ್ಲಿ,ಸತ್ಯದಲ್ಲಿ ಮತ್ತು ಪುಣ್ಯಕರವೆನಿಸುವ ಸತ್ಕರ್ಮಗಳ ಆಚರಣೆಯಲ್ಲಿ ಸ್ವಚ್ಚವಾಗಿರುವಂತಹಾ ಶ್ರದ್ಧೆಯನ್ನು ನನಗೆ ದಯಪಾಲಿಸು ಸ್ವಾಮಿಯೇ.
******************************************************************************** || ಇತಿ ಶ್ರೀ ನಾಗದೇವತಾ ಸ್ತುತಿ ಸ್ತೋತ್ರಮ್ ||
|| ಇತಿ ಶ್ರೀ ನಾಗದೇವತಾ ಸ್ತುತಿ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************************
-೧೪-
|| ಶ್ರೀಮತ್ಸ್ಯಾವತಾರ ಸ್ತುತಿ ಸ್ತೋತ್ರಮ್ ||
*********************************
ನೂನಂ ತ್ವಂ ಭಗವಾನ್ಸಾಕ್ಷಾದ್ದರಿರ್ನಾರಾಯಣೋsವ್ಯಯ: |
ಅನುಗ್ರಹಾಯ ಭೂತಾನಾಂ ಧತ್ಸೇ ರೂಪಂ ಜಲೌಕಸಾಮ್ ||೧||
ಭಾವಾರ್ಥ:-ಸ್ವಾಮಿಯೇ ನೀನು ಖಚಿತವಾಗಿಯೂ ಸಾಕ್ಷಾತ್ ಭಗವಂತನಾಗಿರುವ ಹರಿಯೇ ಆಗಿರುವೆ. ಜೀವಜಗತ್ತನ್ನು ಉದ್ದರಿಸುವ ನಿಮಿತ್ತವಾಗಿ ನೀನು ಜಲಚರ ರೂಪವನ್ನು ಧರಿಸಿದವನಿರುವೆ.
ನಮಸ್ತೇ ಪುರುಷ ಶ್ರೇಷ್ಠ ಸ್ಥಿತ್ಯುತ್ಪತ್ಯಪ್ಯಯೇಶ್ವರ |
ಭಕ್ತಾನಾಂ ನ: ಪ್ರಪನ್ನಾನಾಂ ಮುಖ್ಯೋಹ್ಯಾತ್ಮ ಗತಿರ್ವಿಭೋ ||೨||
ಭಾವಾರ್ಥ:-ಹೇ ಪುರುಷೋತ್ತಮನೇ,ನಿನಗಿದೋ ನನ್ನ ಪ್ರಣಾಮಗಳು.ಎಲೈ ದೊರೆಯೇ;ನೀನು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಕರ್ತನಾಗಿರುವೆ.ಹಾಗೂ ನಮ್ಮಂತೆ ಆಪತ್ತಿನಲ್ಲಿ ಸಿಲುಕಿದ ಭಕ್ತರಿಗೆ ಮುಖ್ಯ ಜೀವಾಶ್ರಯವಾಗಿರುವೆ.
ಸರ್ವೇಲೀಲಾವತಾರಾಂಸ್ತೇ ಭೂತಾನಾಂ ಭೂತಿಹೇತವ: |
ಜ್ಞಾತುಮಿಚ್ಛಾಮ್ಯದೋ ರೂಪಂ ಯದರ್ಥಂ ಭವತಾ ಧೃತಮ್ ||೩||
ಭಾವಾರ್ಥ:-ಸ್ವಾಮಿಯೇ;ನೀನು ಯಾವ ಯಾವ ಲೀಲಾವತಾರಗಳನ್ನು ತಾಳಿರುವಿಯೋ ಅವೆಲ್ಲವೂ ಜೀವಜಗತ್ತಿಗೆ ಶುಭವನ್ನುಂಟುಮಾಡಿವೆ.ಅದೇ ರೀತಿಯಾಗಿ ನೀನು ಯಾವ ನಿಮಿತ್ತವಾಗಿ ಈ ಮತ್ಸ್ಯಾವತಾರದಿಂದ ಅವತರಿಸಿರುವಿಯೋ ಅದರ ಬಗ್ಗೆ ಅರಿತುಕೊಳ್ಳಲು ನನಗೆ ಕುತೂಹಲವಿದೆ.
ನ ತೇsರವಿಂದಾಕ್ಷ ಪದೋಪಸರ್ಪಣಂ ಮೃಷಾ ಭವೇತ್ಸರ್ವಸುಹೃತ್ಪ್ರಿಯಾತ್ಮನ: |
ಯಥೇತರೇಷಾಂ ಪೃಥಗಾತ್ಮನಾಂ ಸತಾಮದೀದೃಶೋಯದ್ವ ಪುರುದ್ಭುತಂ ಹಿ ನ: |೪||
ಭಾವಾರ್ಥ:-ಎಲೈ ಕಮಲನಯನನೇ;ನೀನು ಎಲ್ಲರ ಬಂಧುವಾಗಿರುವೆ.ಅಂತೆಯೇ ಪ್ರಿಯತಮನೂ ಆಗಿರುವೆ.ಅಹಂಕಾರಭರಿತರಾಗಿರುವವರ ಚರಣಸೇವೆಯು ಅಪ್ರಯೋಜಕನಿಸುವುದಾದರೂ ಅತ್ಯಂತ ಪ್ರೀತಿಪಾತ್ರನಾದ ನಿನ್ನ ಚರಣ ಸೇವೆಯು ಎಂದೂ ನಿಷ್ಫಲವಾಗಲಾರದು.ನಿನ್ನ ಈ ಅದ್ಭುತ ಶರೀರವನ್ನು ನೋಡಿ ನಾನು ವಿಸ್ಮಯನಾಗಿರುವೆ.
*********************************************************************************
||ಇತಿ ಶ್ರೀಮದ್ಭಾಗವತಾಂತರ್ಗತ ಮತ್ಸ್ಯಾವತಾರ ಸ್ತುತಿ ಸ್ತೋತ್ರಮ್ ||
||ಈ ರೀತಿಯಾಗಿ ಶ್ರೀಮದ್ಭಾಗವತದೊಳಗಿರುವ ಶ್ರೀಮತ್ಸ್ಯಾವತಾರ ಸ್ತುತಿಸ್ತೋತ್ರಗಳ ಭಾವಾರ್ಥವು||
*********************************************************************************
-೧೫-
|| ಶ್ರೀ ವಾಮನಾವತಾರ ಸ್ತುತಿ ಸ್ತೋತ್ರಮ್ ||
***********************************
ಅದಿತಿರುವಾಚ:-
ಯಜ್ಞೇಶ ಯಜ್ಞಪುರುಷಾಚ್ಯುತ ತೀರ್ಥಪಾದ |
ತೀರ್ಥಶ್ರವ: ಶ್ರವಣ ಮಂಗಲ ನಾಮಧೇಯ ||
ಆಪನ್ನಲೋಕ ವೃಜಿನೋಪಶಮೋದಯಾssದ್ಯ |
ಶಂ ನ: ಕೃಧೀಶ ಭಗವನ್ನಸಿ ದೀನನಾಥ ||೧||
ಭಾವಾರ್ಥ:-
ಅದಿತಿಯು ಹೇಳುವಳು:-
ಹೇ;ಯಜ್ಞಾಧಿಪತಿಯೇ,ಯಜ್ಞಪುರುಷನೇ,ಅಚ್ಯುತನೇ,ಸದ್ವಂಶ ಸಂಭೂತ ಮೂಲನೇ, ಪವಿತ್ರಶಾಸ್ತ್ರಗಳನ್ನು ಆಲಿಸುವಾತನೇ, ಮಂಗಲಕರವಾಗಿರುವ ನಿನ್ನ ನಾಮಗಳನ್ನು ಕೇಳುವುದರಿಂದ ಶುಭವಾಗುವುದು.ಎಲೈ ಭಗವಂತನೇ;ನೀನು ದು:ಖಿತರ ಆಪ್ತನು.ಹಾಗೂ ಶರಣುಹೊಕ್ಕವರ ಅನೀತಿಗಳನ್ನು ನಾಶಗೊಳಿಸುವಾತನು.
ವಿಶ್ವಾಯ ವಿಶ್ವಭವನಸ್ಥಿತಿ ಸಂಯಮಾಯ
ಸ್ವೈರಂ ಗೃಹೀತಪುರುಷಶಕ್ತಿ ಗುಣಾಯ ಭೂಮ್ನೇ ||
ಸ್ವಸ್ಥಾಯ ಶಶ್ವದುಪಬೃಂಹಿತಪೂರ್ಣಬೋಧ |
ವ್ಯಾಪಾದಿತಾತ್ಮ ತಮಸೇ ಹರಮೇ ನಮಸ್ತೇ ||೨||
ಭಾವಾರ್ಥ:-ಹೇ!ಸ್ವಾಮಿಯೇ; ನೀನು ಶ್ರೇಷ್ಠಪುರುಷನು.ಈ ಬ್ರಹ್ಮಾಂಡವು ನಿನ್ನದೇ ರೂಪವು.ಬ್ರಹ್ಮಾಂಡದ ಉತ್ಪತ್ತಿ-ಸ್ಥಿತಿ-ಸಂಹಾರ ಕಾರ್ಯಗಳು ನಿನ್ನವೇ ಆಗಿವೆ.ನಿನ್ನ ಅಭೀಷ್ಟದಂತೆ ತನ್ನಿಚ್ಚೆಗನುಗುಣವಾಗಿ ಆತ್ಮಶಕ್ತಿ ಗುಣಗಳನ್ನು ಗ್ರಹಣ ಮಾಡುವನು ನೀನು.ಆದರೂ ನೀನು ನಿನ್ನ ಸ್ವರೂಪವನ್ನು ತ್ಯಜಿಸುವುದಿಲ್ಲ.ಪೂರ್ಣ ಜ್ಞಾನವು ಅನುದಿನವೂ ಬೆಳೆಯಲು ನೀನು ಕಾರಣನಾಗಿರುವೆ.ತನ್ಮೂಲಕ ಮಾಯಾರೂಪದ ಅಂಧಕಾರವನ್ನು ದೂರೀಕರಿಸುವಿ. ನಿನಗಿದೋ ಪ್ರಣಾಮಗಳು.
ಆಯು: ಪರಂ ವಪುರಭೀಷ್ಟಮತುಲ್ಯ ಲಕ್ಷ್ಮೀ- |
ರ್ದ್ಯೌರ್ಭೂ: ರಸಾ: ಸಕಲಯೋಗಗುಣಾಸ್ತ್ರಿವರ್ಗ: ||
ಜ್ಞಾನಂ ಚ ಕೇವಲಮನಂತ ಭವಂತಿ ತುಷ್ಟಾತ್ |
ತ್ವತ್ತೋ ನೃಣಾಂ ಕಿಮು ಸಪತ್ನ ಜಯಾದಿ ರಾಶೀ: ||೩||
ಭಾವಾರ್ಥ:-ಹೇ ಅನಂತನೇ. ನೀನು ಸಂತುಷ್ಟನಾದರೆ ಬ್ರಹ್ಮನಿಗೆ ಸರಿಸಾಟಿಯಾದ ಧೀರ್ಘಾಯುಷ್ಯ,ಸುಂದರ ಶರೀರ,ಸಾಟಿಯಿಲ್ಲದ ಸಂಪತ್ತು,ಸ್ವರ್ಗ ಮರ್ತ್ಯ,ಪಾತಾಳ ಹಾಗೂ ಅಣಿಮಾದಿ ಸಮಸ್ತ ಯೋಗ ಸಿದ್ಧಿಗಳು ಲಭಿಸಬಲ್ಲವು.ಹೀಗಿರುವಾಗ ವೈರಿಗಳನ್ನು ಗೆಲ್ಲುವುದು ಕಠಿಣವೇನಲ್ಲ.ಆ ಕಾರ್ಯವು ಸಿದ್ಧಿಸಲಸಾಧ್ಯವೇ ಸ್ವಾಮೀ?
*********************************************************************************
|| ಇತಿ ಶ್ರೀಮದ್ಭಾಗವತಾಂತರ್ಗತ ಶ್ರೀವಾಮನಾವತಾರ ಸ್ತುತಿ ಸ್ತೋತ್ರಮ್ ||
||ಈ ತೆರನಾಗಿ ಶ್ರೀಮದ್ಭಾಗವತದೊಳಗೆ ಹೇಳಿದ ಶ್ರೀವಾಮನಾವತಾರ ಸ್ತುತಿಸ್ತೋತ್ರಗಳ ಭಾವಾರ್ಥವು||
*********************************************************************************
-೧೬-
|| ಪರಬ್ರಹ್ಮ ಪ್ರಾತ:ಸ್ಮರಣಮ್ ||
*************************
ಪ್ರಾತ: ಸ್ಮರಾಮಿ ಹೃದಿ ಸಂಸ್ಫುರದಾತ್ಮ ತತ್ವಂ |
ಸಚ್ಚಿತ್ಸುಖಂ ಪರಮ ಹಂಸಗತಿಂ ತುರೀಯಂ ||
ಯತ್ ಸ್ವಪ್ನ ಜಾಗ್ರತ್ಸುಷುಪ್ತಿ ಮವೈತಿ ನಿತ್ಯಮ್ |
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತ ಸಂಘ: ||೧||
ಭಾವಾರ್ಥ:- ಸದ್ರೂಪವೂ,ಚಿದ್ರೂಪವೂ,ಸುಖಮಯವೂ ತುಂಬಿರುವಂತಹಾ ನನ್ನೀ ಹೃದಯದೊಳಗೆ ಮಿಡಿಯುತ್ತಲಿರುವ ಆತ್ಮ ತತ್ವವನ್ನು ನಾನು ಉಷ:ಕಾಲದಲ್ಲಿ ಸ್ಮರಿಸುವೆನು.ಶ್ರೇಷ್ಠ ಸಂನ್ಯಾಸತ್ವ ಸ್ಥಿತಿಗೆ ನನ್ನನ್ನು ಕರೆದೊಯ್ದು ತಲಪಿಸುವಂತಹಾ ತಿಳುವಳಿಕಾ ಶಕ್ತಿಯಿಂದ ಯಾವ ಜಾಗ್ರತ್ ಸ್ವಪ್ನ ನಿದ್ರಾ ಸ್ಥಿತಿಗಳನ್ನು ಅರಿತು ಸದಾ ಪಂಚ ಮಹಾ ಭೂತಗಳ ಸೇರುವಿಕೆಯಾಗಿರುವ ಶರೀರವು ನಾನಾಗಿರದೆ ಅತ್ಯಂತ ಪರಿಶುದ್ಧವಾಗಿರುವ ಪರಬ್ರಹ್ಮನೇ ರೂಪನಾಗಿರುವೆ.
ಪ್ರಾತರ್ಭಜಾಮಿ ಮನಸೋ ವಚಸಾವಗಮ್ಯಂ |
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ ||
ಯನ್ನೇತಿ ನೇತಿ ವಚನೈರ್ನಿಗಮಾ ಅವೋಚು: |
ತಂ ದೇವ ದೇವ ಜಮುಚ್ಯುತ ಮಾಹುರಗ್ರ್ಯಂ ||೨||
ಭಾವಾರ್ಥ:-ಮನೋವಾಕ್ಕುಗಳಿಗೆ ಅಗೋಚರವಾಗಿ ಯಾವುದಿದೆಯೋ,ಯಾವುದರ ಕೃಪೆಯಿಂದ ಮಾತುಗಳು ಪ್ರವೃತ್ತಿಸಲ್ಪಡುವುದೋ,ಯಾವುದನ್ನು ವೇದಗಳು ಅದಲ್ಲ,ಅದಲ್ಲ ಎಂದು ತಿಳಿಸಿ ಮೌನ ತಾಳಿದವೋ,ಯಾವುದಕ್ಕೆ ಜನ್ಮವಾಗಲೀ ನಾಶವಾಗಲೀ ಇರದೆ ದೇವರದೇವನೆಂದು ಹೇಳಲ್ಪಟ್ಟಿದೆಯೋ ಅಂತೆಯೇ ಅನಾದಿಕಾಲದಿಂದಲೂ ಇರುವ ಆ ಪರಬ್ರಹ್ಮವನ್ನು ಉಷ:ಕಾಲದಲ್ಲಿ ನಾನು ಭಜಿಸುವೆನು.
ಪ್ರಾತರ್ನಮಾಮಿ ತಮಸ: ಪರಮಾರ್ಕವರ್ಣಂ |
ಪೂರ್ಣಂ ಸನಾತನ ಪದಂ ಪುರುಷೋತ್ತಮಾಖ್ಯಂ ||
ಯಸ್ಮಿನ್ನಿದಂ ಜಗದೇಷಮಶೇಷಮೂರ್ತೌ |
ರಜ್ಜ್ವಾಂಭುಜಂಗಮಂ ಇವ ಪ್ರತಿಭಾಸಿತಂ ವೈ ||
ಭಾವಾರ್ಥ:-ಯಾವುದು ಕತ್ತಲನ್ನು ಹೋಗಲಾಡಿಸುವ ಸೂರ್ಯನಂತಿದೆಯೋ,ಅಜ್ಞಾನವನ್ನು ಹೊಡೆದೋಡಿಸುವ ಜ್ಞಾನ ಸ್ವರೂಪವಾಗಿದೆಯೋ,ಯಾವುದು ಪರಿಪೂರ್ಣವೂ ಸನಾತನ ಶಬ್ದವೂ ಆಗಿರುವುದನ್ನು ಪುರುಷೋತ್ತಮನೆಂದು ಸಂಭೋಧಿಸುತ್ತದೆಯೋ,ಯಾವುದು ಬ್ರಹ್ಮಾಂಡವನ್ನು ಹಾವು ಹಗ್ಗದ ರೂಪದಲ್ಲಿ ಭಾಸವಾಗುವಂತೆ ಮಾಡುತ್ತದೆಯೋ ಅಂತಹಾ ಶೇಷವೂ ಅಶೇಷವೂ ಆಗಿರುವ ಅನಂತ ಸ್ವರೂಪದಲ್ಲಿರುವ ಆ ಪರಮಾತ್ಮ ತತ್ವವನ್ನು ಉಷ:ಕಾಲದಲ್ಲಿ ನಾನು ನಮಿಸುವೆನು.
*********************************************************************************
|| ಇತಿ ಶ್ರೀಶಂಕರ ಭಗವದ್ಪಾದ ವಿರಚಿತ ಪರಬ್ರಹ್ಮ ಪ್ರಾತ:ಸ್ಮರಣಮ್ ||
|| ಈ ತೆರನಾಗಿ ಶ್ರೀ ಶಂಕರ ಭಗವದ್ಪಾದರಿಂದ ರಚಿಸಲ್ಪಟ್ಟ ಪರಬ್ರಹ್ಮ ಪ್ರಾತ:ಸ್ಮರಣ ಶ್ಲೋಕಗಳ ಭಾವಾರ್ಥವು ||
*********************************************************************************
-೧೭-
|| ಪ್ರಾತರ್ಪ್ರತಿಜ್ಞಾ ||
*****************
ಸುಷುಪ್ತಿ ಮಾತಾ ಸುಷುವೇ ಶಿಶು ಮಾಂ |
ಸಂಕಲ್ಪಮೇವಂ ಮನಸಾ ಕರೋಮಿ ||
ಯದೃತ್ ಕೃತಂ ಭವತು ತ್ವದರ್ಥಂ |
ಹೃದಿ ಸ್ಥಿತೇ ರಾಜ್ಙಿ ಚರಾ ಚರಾಣಾಮ್ ||೧||
ಭಾವಾರ್ಥ:-ಮೈ ಮರೆವ ಗಾಢ ನಿದ್ರೆ ಎಂಬ ತಾಯಿಯು ನನ್ನನ್ನು ಶಿಶುವಾಗಿ ಹಡೆದಳು.ನಾನೀಗ ಮನದಲ್ಲಿ ಹೀಗೆಂದು ಪ್ರತಿಜ್ಞೆ ಮಾಡುತ್ತಿದ್ದೇನೆ. "ಹೇ!ಚರಾಚರ ವಸ್ತುಗಳ ದೊರೆಯಾದ ಭಗವಂತನೇ,ನನ್ನ ಹೃದಯಲ್ಲಿ ನೀನು ನೆಲೆಸಿರುವಾಗ ನಾನು ಏನೆಲ್ಲಾ ಮಾಡುವೆನೋ ಅವೆಲ್ಲವೂ ನಿನಗರ್ಪಿತವಾಗಲಿ.
ಉಕ್ತಂ ಮತಂ ದೇವ ತಥಾ ಕೃತಂ ಚ |
ಹವ್ಯಂ ತತ: ಪಾವನ ಪೂತಮಸ್ತು ||
ಕುರ್ಯಾಂ ನ ಕಿಂಚಿತ್ ಪರಪೀಡನಾಯ |
ಪರೋsಪಿಮಹ್ಯಂ ನ ತಥಾ ಮನೋತು ||೨||
ಎಲೈ ಸ್ವಾಮಿಯೇ! ನನ್ನ ಅನಿಸಿಕೆ,ನುಡಿ,ಮತ್ತು ಕಾರ್ಯಗಳೆಲ್ಲವೂ ದೋಷರಹಿತವಾಗಿರಲಿ.ಅವೆಲ್ಲವೂ ಸ್ವಾಮಿಕಾರ್ಯ ಎಂಬ ಯಜ್ಞಕ್ಕೆ ಅರ್ಪಿಸುವ ಹವಿಸ್ಸಾಗಲಿ.ಅನ್ಯರಿಗೆ ನೋವುಂಟು ಮಾಡುವ ದ್ರೋಹ ನನ್ನಿಂದ ಸಂಭವಿಸದಿರಲಿ.ಅಂತೆಯೇ ಇತರರಿಂದಲೂ ನನಗೆ ನೋವು ಘಟಿಸದಿರಲಿ.
*********************************************************************************
|| ಇತಿ ಪ್ರಾತರ್ಪ್ರತಿಜ್ಞಾ || || ಈ ರೀತಿಯಾಗಿ ಪ್ರಾತ: ಸಂಕಲ್ಪದ ಭಾವಾರ್ಥವು ||
*********************************************************************************
-೧೮-
|| ವಂದೇ ಭೂಮಾತರಮ್ ಸ್ತುತಿ ||
****************************
ಸಮುದ್ರವಸನೇ ದೇವಿ ಪರ್ವತ ಸ್ತನ ಮಂಡಲೇ |
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||೧||
ಭಾವಾರ್ಥ:-ಹೇ! ಭೂಮಿ ತಾಯಿಯೇ;ಸಾಗರವನ್ನು ವಸನವನ್ನಾಗಿ ಧರಿಸಿದವಳೇ,ಗಿರಿಗಳೆಂಬ ಸ್ತನಮಂಡಲವನ್ನು ಹೊತ್ತಿರುವವಳೇ,ಶ್ರೀಹರಿಯ ಸತಿಯೇ,ನಿನಗೆ ನನ್ನ ಪ್ರಣಾಮಗಳು. ನಿನ್ನ ಮೇಲೆ ನನ್ನ ಪಾದಗಳ ಸೋಂಕುವಿಕೆಯನ್ನು ಮನ್ನಿಸು ತಾಯೀ.
ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಾಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ತತ್ರ ಸಂತತಿ: ||೨||
ಭಾವಾರ್ಥ:-ಹಿಂದೂ ಮಾಹಾಸಾಗರದ ಉತ್ತರದಲ್ಲಿ,ಹಿಮಾಲಯದ ದಕ್ಷಿಣದಲ್ಲಿ ಇರುವ ನಾಡು ಭಾರತ. ಅಲ್ಲಿ ಜನಿದವರೆಲ್ಲರೂ ಭಾರತೀಯರು.
ಭೂಮಾತಾ ಗೋಮಾತಾ ಚ ದೇಶಮಾತಾ ತಥೈವ ಚ |
ವೇದ ಮಾತಾ ದೇಹಮಾತೇತಿ ಪಂಚೈತಾ ಮಾತರೋ ಮಮ ||೩ ||
ಭಾವಾರ್ಥ:-ಭೂಮಾತೆ,ಗೋ ಮಾತೆ,ದೇಶಮಾತೆ,ವೇದಮಾತೆ,ದೇಹಮಾತೆ ಎಂಬುದಾಗಿ ಈ ಐವರು ನನಗೆ ಮಾತೆಯರು.
ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರ ಜನ್ಮನ: |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪ್ರಥಿವ್ಯಾಂ ಸರ್ವ ಮಾನವಾ: ||೪||
ಭಾವಾರ್ಥ:-ಈ ಭರತ ಭೂಮಿಯಲ್ಲಿ ಜನಿಸಿದ ಜ್ಞಾನಿಗಳಿಂದ ಜಗತ್ತಿನ ಎಲ್ಲ ಮಾನವರೂ ತಮ್ಮ ತಮ್ಮ ಸಂಸ್ಕಾರಗಳನ್ನು ಕಲಿತುಕೊಳ್ಳಬೇಕು.
ರತ್ನಾಕರಾಂ ಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಮ್ ||೫||
ಭಾವಾರ್ಥ:-ಹಿಂದೂ ಮಹಾ ಸಾಗರದಲ್ಲಿ ಕಾಲುಗಳನ್ನು ತೊಳೆಯುತ್ತಾ,ಹಿಮವತ್ಪರ್ವತಗಳನ್ನು ಕಿರೀಟದಂತೆ ಧರಿಸುತ್ತಾ,ರತ್ನ ಸದೃಶರಾದ ಬ್ರಹ್ಮರ್ಷಿ,ರಾಜರ್ಷಿಗಳಿಗೆ ನೆಲೆಯಾಗಿ ಶೋಭಿಸುತ್ತಲಿರುವ ತಾಯಿ ಭಾರತ ಮಾತೆಗೆ ಪ್ರಣಾಮಗಳು.
*********************************************************************************
|| ಇತಿ ವಂದೇ ಭೂಮಾತರಮ್ ಸ್ತುತಿ || || ಈ ತೆರನಾಗಿ ವಂದೇ ಭೂ ಮಾತರಮ್ ಸ್ತುತಿಯ ಭಾವಾರ್ಥವು ||
*********************************************************************************
-೧೯-
|| ಶ್ರೀ ಭಗವತ್ಪ್ರಾತ: ಸ್ಮರಣ ಸ್ತೋತ್ರಮ್ ||
*********************************
ಪ್ರಾತರ್ನಮಾಮಿ ಫಣಿರಾಜ ತನೌ ಶಯಾನಂ |
ನಾಗಾಮರಾಸುರ ನರಾದಿ ಜಗನ್ನಿದಾನಮ್ ||
ಸಂದೃಪ್ತದಾನವ ಕದಂಬ ಮದಾಪಹಾರಂ |
ಸೌಂದರ್ಯರಾಶಿ ಜಲರಾಶಿಸುತಾ ವಿಹಾರಮ್ ||೧||
ಭಾವಾರ್ಥ:-ಆದಿಶೇಷನ ಮೇಲೆ ಮಲಗಿರುವವನೂ ದೇವ ದಾನವ ನಾಗ ಮನುಜರಾದಿಯಾಗಿ ವಿವಿಧ ಜೀವರಾಶಿಯನ್ನೊಳಗೊಂಡ ಲೋಕಕ್ಕೆ ಕಾರಣನಾದವನೂ ವೇದಗಳಿಂದಲೂ,ದೇವತಾ ಸಮೂಹದಿಂದಲೂ ಹೊಗಳಿಸಿಕೊಂಬವನೂ,ಕಾನನಗಳೊಳಗೆ ಆಶ್ರಮವನ್ನು ಮಾಡಿಕೊಂಡಿರುವ ಋಷಿ ಮುನಿಗಳ ಶ್ರೇಷ್ಠವಾದ ನಿಧಿಯಂತಿರುವವನೂಸಾಂಸಾರಿಕ ಸಾಗರವನ್ನು ದಾಟಿಸುವವನೂ,ದೇವತೆಗಳು,ಸಿದ್ಧರು,ಋಷಿಗಳ ಗುಂಪಿನಿಂದ ಪೂಜಿಸಲ್ಪಡುವಾತನೂ,ಕೊಬ್ಬಿದ ದಾನವರ ಸಮೂಹದ ದರ್ಪವನ್ನು ಇಳಿಸುವಾತನೂ,ಸೌಂದರ್ಯದ ಖಣಿಯಾಗಿರುವ ಸಮುದ್ರರಾಜನ ತನಯೆ ಲಕ್ಷ್ಮೀ ದೇವಿಯೊಂದಿಗೆ ವಿಹರಿಸುತ್ತಿರುವವನೂ ಆಗಿರುವ ಭಗವಂತನನ್ನು ನಾನು ಉಷ:ಕಾಲದಲ್ಲಿ ಸ್ಮರಿಸುತ್ತೇನೆ.
ಪ್ರಾತರ್ನಮಾಮಿ ಶರದಂಬರ ಕಾಂತಿಕಾಂತಂ |
ಪಾದಾರವಿಂದ ಮಕರಂದಜುಷಾಂ ಭವಾಂತಮ್ ||
ನಾನಾವತಾರ ಹೃತಭೂಮಿ ಭರಂ ಕೃತಾಂತಂ |
ಪಾಥೋಜ-ಕಂಬು-ರಥಪಾದಕರಂ ಪ್ರಶಾಂತಮ್ ||೨||
ಭಾವಾರ್ಥ:-ಶರತ್ ಕಾಲದ ಆಗಸದ ನೀಲ ಪ್ರಕಾಶದಿಂದ ಆಕರ್ಷಿತನಾಗುವವನೂ,ತನ್ನಡಿದಾವರೆಯ ಮಕರಂದವನ್ನು ಸವಿಯುವವರ ಸಾಂಸಾರಿಕ ದುರಿತಗಳನ್ನು ಕೊನೆಗೊಳಿಸುವವನೂ,ನಾನಾವತಾರಗಳನ್ನು ತಾಳಿ ಭೂಮಿ ಭಾರವನ್ನು ಹಗುರಾಗಿಸಿದವನೂ,ಶಂಖ,ಪದ್ಮ,ಚಕ್ರಗಳನ್ನು ಹಸ್ತದಲ್ಲಿ ಹಿಡಿದವನೂ ಪ್ರಶಾಂತ ಸ್ವರೂಪನೂ ಆಗಿರುವ ಭಗವಂತನನ್ನು ನಾನು ಉಷ:ಕಾಲದಲ್ಲಿ ಸ್ಮರಿಸುತ್ತೇನೆ.
*********************************************************************************
|| ಇತಿ ಶ್ರೀ ಭಗವತ್ಪ್ರಾತ: ಸ್ಮರಣ ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀಭಗವತ್ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||
*********************************************************************************
-೨೦-
|| ಶ್ರೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್ ||
***********************************
ಪ್ರಾತ:ಸ್ಮರಾಮಿ ಖಲು ತತ್ ಸವಿತುರ್ವರೇಣ್ಯಂ |
ರೂಪಂ ಹಿ ಮಂಡಲಮೃಚೋsಥ ತನುರ್ಯಜೂಂಷಿ ||
ಸಾಮಾನಿ ಯಸ್ಯ ಕಿರಣಾ: ಪ್ರಭವಾದಿ ಹೇತುಂ |
ಬ್ರಹ್ಮಾಹರಾತ್ಮಕಮಲಕ್ಷ್ಯಮಚಿಂತ್ಯಹೇತುಂ ||೧||
ಭಾವಾರ್ಥ:-ಋಗ್ವೇದದ ಮಂಡಲದೊಳಗೆ ಯಜುರ್ವೇದದ ದೇಹ ಧರಿಸಿ ಸಾಮವೇದದ ಶಲಾಕೆಗಳನ್ನು ಹೊಂದಿರುವ,ಸೃಷ್ಟಿಯೇ ಆದಿಯಾದ ಕಾರ್ಯಗಳಿಗೆ ಕಾರಣವಾಗಿರುವ,ಬ್ರಹ್ಮ ಹಾಗೂ ಈಶ್ವರನ ಸ್ವರೂಪವುಳ್ಳ,ಬರಿಕಣ್ಣಿಂದ ಕಾಣಲು ಅಸಾಧ್ಯವಾಗಿರುವ,ಲೆಕ್ಕಿಸಲು ಅಸದಳವಾಗಿರುವ ಸವಿತೃ ದೇವನ ಸ್ವರೂಪವನ್ನು ನಾನು ಉಷ: ಕಾಲದಲ್ಲಿ ಸ್ಮರಿಸುವೆ.
ಪ್ರಾತರ್ನಮಾಮಿ ತರಣಿಂ ತನುವಾಙ್ಮನೋಭಿ: |
ಬ್ರಹ್ಮೇಂದ್ರಪೂರ್ವಕ ಸುರೈರ್ನುತಮರ್ಚಿತಂ ಚ ||
ವೃಷ್ಟಿ ಪ್ರಮೋಚನ ವಿನಿಗ್ರಹ ಹೇತುಭೂತಂ |
ತ್ರೈಲೋಕ್ಯ ಪಾಲನಪರಂ ತ್ರಿಗುಣಾತ್ಮಕಂ ಚ ||೨||
ಭಾವಾರ್ಥ:-ಇಂದ್ರ ಬ್ರಹ್ಮರೇ ಆದಿಯಾದ ದೇವದೇವತೆಯರಿಂದ ಸ್ತುತಿಸಲ್ಪಡುವ ಹಾಗೂ ಪೂಜಿಸಲ್ಪಡುವ ಅಲ್ಲದೆ ಮಳೆ ಸುರಿಯಲೂ ಸುರಿಯದಿರಲೂ ಕಾರಣೀ ಭೂತನಾದ, ಸ್ವರ್ಗ,ಮರ್ತ್ಯ,ಪಾತಾಳಾದಿ ಮೂರ್ಲೋಕಗಳನ್ನು ರಕ್ಷಿಸುವ ಮತ್ತು ಸತ್ವ,ರಜ,ತಮೋ ಗುಣಗಳೆಂಬ ತ್ರಿಗುಣಗಳನ್ನು ಒಳಗೊಂಡಿರುವ ಸೂರ್ಯದೇವನನ್ನು ಮನೋವಾಕ್ಕಾಯಗಳಿಂದ ನಾನು ಉಷ: ಕಾಲದಲ್ಲಿ ಸ್ಮರಿಸುವೆ.
ಪ್ರಾತರ್ಭಜಾಮಿ ಸವಿತಾರಮನಂತ ಶಕ್ತಿಂ |
ಪಾಪೌಘ ಶತ್ರು ಭಯರೋಗ ಹರಂ ಪರಂ ಚ ||
ತಂ ಸರ್ವಲೋಕ ಕಲನಾತ್ಮಕ ಕಾಲಮೂರ್ತಿಂ |
ಗೋಕಂಠ ಬಂಧನ ವಿಮೋಚನಮಾದಿದೇವಮ್ ||೩||
ಭಾವಾರ್ಥ:-ದುರಿತಗಳ ಸಮೂಹವನ್ನು ಮತ್ತು ವೈರಿಗಳ ಬಗೆಗಿನ ಭೀತಿಯನ್ನು ಹೋಗಲಾಡಿಸುವ,ಸರ್ವ ರೋಗಗಳನ್ನು ನಿವಾರಿಸುವ,ಸಮಸ್ತ ಲೋಕವು ಗುರುತಿಸಿದ ಕಾಲಸ್ವರೂಪನಾಗಿರುವ,ಗೋವುಗಳನ್ನ್ನು ಬಂಧಿಸುವ ಅಥವಾ ಬಂಧ ವಿಮುಕ್ತಿಗೊಳಿಸುವ ಆದಿದೇವನಾದ ಅಂತ್ಯವಿರದ ಶಕ್ತಿಯ ಮೂಲನಾದ ಹಾಗೆಯೇ ಶ್ರೇಷ್ಠನಾದ ಸೂರ್ಯದೇವನನ್ನು ಮನೋವಾಕ್ಕಾಯಗಳಿಂದ ನಾನು ಉಷ: ಕಾಲದಲ್ಲಿ ಸ್ಮರಿಸುವೆ.
ಶ್ಲೋಕತ್ರಯಮಿದಂ ಭಾನೋ: ಪ್ರಾತ:ಕಾಲೇ ಪಠೇತ್ತುಯ: |
ಸರವ್ಯಾಧಿವಿನಿರ್ಮುಕ್ತ: ಪರಂ ಸುಖಮಾಪುಯಾತ್ ||೪||
ಭಾವಾರ್ಥ:-ಸೂರ್ಯನ ಕುರಿತಾಗಿರುವ ಈ ಮೂರು ಶ್ಲೋಕಗಳನ್ನು ಯಾವಾತನು ಉಷ:ಕಾಲದಲ್ಲಿ ಪಠಿಸುವನೋ ಅವನು ಸಮಸ್ತ ರೋಗಗಳಿಂದ ವಿಮುಕ್ತನಾಗಿ ಶ್ರೇಷ್ಠವಾಅ ಸುಖವನ್ನು ಹೊಂದುವನು.
*********************************************************************************
||ಇತಿ ಶೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್||
||ಈ ತೆರನಾಗಿ ಶ್ರೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾತ್ಯ್ಹವು||
*********************************************************************************
-೨೧-
|| ಶ್ರೀ ಆಂಜನೇಯ ಪ್ರಾತ:ಸ್ಮರಣ ಸ್ತೋತ್ರಮ್ ||
************************************
ಪ್ರಾತ:ಸ್ಮರಾಮಿ ಹನುಮಂತಮನಂತ ವೀರ್ಯಂ |
ಶ್ರೀ ರಾಮಚಂದ್ರ ಚರಣಾಂಬುಜ ಚಂಚರೀಕಮ್ ||
ಲಂಕಾಪುರೀ ದಹನ ನಂದಿತ ದೇವ ವೃಂದಮ್ |
ಸರ್ವಾರ್ಥ ಸಿದ್ಧಿ ಸದನಂ ಪ್ರಥಿತ ಪ್ರಭಾವಮ್ ||೧||
ಭಾವಾರ್ಥ:-ಉಷ:ಕಾಲದಲ್ಲಿ ನಾನು ಹನುಮಂತನನ್ನು ನೆನೆಯುತ್ತಿರುವೆ.
ಅವನಾದರೋ ಮಹಾಬಲಶಾಲಿಯಾಗಿದ್ದು ಶ್ರೀರಾಮಚಂದ್ರನ
ಅಡಿದಾವರೆಯಲ್ಲಿ ಭ್ರಮರದಂತಿರುವನು.ಆತನಿಂದ ಲಂಕಾಪಟ್ಟಣವು
ದಹಿಸಲ್ಪಟ್ಟಾಗ ದೇವತಾಸಮೂಹವೆಲ್ಲಾ ಸಂತಸಪಟ್ಟಿತ್ತು.ಸಮಸ್ತ
ಸಿದ್ಧಿಗಳ ಕೇಂದ್ರಬಿಂದುವಿನಂತಿರುವ ಆತನು ವಿಶಾಲವಾದ
ಪ್ರಭಾಶಕ್ತಿಯನ್ನು ಹೊಂದಿರುವನು.
ಪ್ರಾರ್ನಮಾಮಿ ವೃಜಿನಾರ್ಣವ ತಾರಣೈಕಾ- |
ಧಾರಂ ಶರಣ್ಯ ಮುದಿತಾನುಪಮ ಪ್ರಭಾವಮ್ ||
ಸೀತಾsಧಿಸಿಂಧು ಪರಿಶೋಷಣ ಕರ್ಮದಕ್ಷಂ |
ವಂದಾರು ಕಲ್ಪತರುಮವ್ಯಯಮಾಂಜನೇಯೇಯಮ್ ||೨||
ಭಾವಾರ್ಥ:-ಸಂಕಷ್ಟಗಳ ಸಾಗರವನ್ನು ದಾಟಲು ಇರುವ ಪ್ರಮುಖ
ಆಧಾರದಂತಿರುವ, ಆಶ್ರಿತರನ್ನು ಪೊರೆಯುವ ಆದ್ವಿತೀಯವಾದ
ಘನತೆಯುಳ್ಳ,ಸೀತಾದೇವಿಯ ಮನೋವ್ಯಥೆ ಎನ್ನುವ ಸಾಗರವನ್ನು
ಇಂಗಿಸುವ ಮಹತ್ಕಾರ್ಯದಲ್ಲಿ ಸಮರ್ಥನೆನಿಸಿದ, ವಂದಿಸುವವರಿಗೆ
ಕೊನೆಯಿಲ್ಲದ ಕಲ್ಪವೃಕ್ಷದಂತಿರುವ ಅಂಜನಾದೇವೀ ಸುಪುತ್ರನಾದ
ಆಂಜನೇಯನನ್ನು ನಾನು ಉಷ:ಕಾಲದಲ್ಲಿ ವಂದಿಸುತ್ತಲಿರುವೆ.
ಪ್ರಾತರ್ಭಜಾಮಿ ಶರಣೋಪಸೃತಾಖಿಲಾರ್ತಿ- |
ಪುಂಜ ಪ್ರಣಾಶನ ವಿಧೌ ಪ್ರಥಿತ ಪ್ರತಾಪಮ್ ||
ಅಕ್ಷಾಂತಕಂ ಸಕಲ ರಾಕ್ಷಸ ವಂಶ ಧೂಮ- |
ಕೇತುಂ ಪ್ರಮೋದಿತ ವಿದೇಹಸುತಂ ದಯಾಲುಮ್ ||೩||
ಭಾವಾರ್ಥ:-ಶರಣುಹೊಕ್ಕವರ ಸಮಸ್ತ ದುರಿತಗಳ ಸಮೂಹವನ್ನೇ
ನಾಶಮಾಡುವ ಕೀರ್ತಿಶಾಲಿ ಅಪ್ರತಿಮಶೌರಿಯೂ,ರಾವಣನ ಸುತನಾದ
ಅಕ್ಷ ಕುಮಾರನ ಪ್ರಾಣಹರಣ ಗೈದ,ಸಮಸ್ತ ದಾನವಕುಲದ ನಾಶದ
ಕುರುಹಾದ,ಜನಕರಾಜನ ತನಯೆ ಸೀತಾದೇವಿಯನ್ನು ಸಂತೋಷಗೊಳಿಸಿದ
ಆ ದಯಾಮೂರುತಿ ಆಂಜನೇಯ ಸ್ವಾಮಿಯನ್ನು ನಾನು ಉಷ:ಕಾಲದಲ್ಲಿ
ಭಜಿಸುತ್ತೇನೆ.
*********************************************************************
|| ಇತಿ ಶ್ರೀ ಅಂಜನೇಯ ಪ್ರಾತ:ಸ್ಮರಣ ಸ್ತೋತ್ರಮ್ ||
*********************************************************************
-೨೨-
-೧೬-
|| ಪರಬ್ರಹ್ಮ ಪ್ರಾತ:ಸ್ಮರಣಮ್ ||
*************************
ಪ್ರಾತ: ಸ್ಮರಾಮಿ ಹೃದಿ ಸಂಸ್ಫುರದಾತ್ಮ ತತ್ವಂ |
ಸಚ್ಚಿತ್ಸುಖಂ ಪರಮ ಹಂಸಗತಿಂ ತುರೀಯಂ ||
ಯತ್ ಸ್ವಪ್ನ ಜಾಗ್ರತ್ಸುಷುಪ್ತಿ ಮವೈತಿ ನಿತ್ಯಮ್ |
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತ ಸಂಘ: ||೧||
ಭಾವಾರ್ಥ:- ಸದ್ರೂಪವೂ,ಚಿದ್ರೂಪವೂ,ಸುಖಮಯವೂ ತುಂಬಿರುವಂತಹಾ ನನ್ನೀ ಹೃದಯದೊಳಗೆ ಮಿಡಿಯುತ್ತಲಿರುವ ಆತ್ಮ ತತ್ವವನ್ನು ನಾನು ಉಷ:ಕಾಲದಲ್ಲಿ ಸ್ಮರಿಸುವೆನು.ಶ್ರೇಷ್ಠ ಸಂನ್ಯಾಸತ್ವ ಸ್ಥಿತಿಗೆ ನನ್ನನ್ನು ಕರೆದೊಯ್ದು ತಲಪಿಸುವಂತಹಾ ತಿಳುವಳಿಕಾ ಶಕ್ತಿಯಿಂದ ಯಾವ ಜಾಗ್ರತ್ ಸ್ವಪ್ನ ನಿದ್ರಾ ಸ್ಥಿತಿಗಳನ್ನು ಅರಿತು ಸದಾ ಪಂಚ ಮಹಾ ಭೂತಗಳ ಸೇರುವಿಕೆಯಾಗಿರುವ ಶರೀರವು ನಾನಾಗಿರದೆ ಅತ್ಯಂತ ಪರಿಶುದ್ಧವಾಗಿರುವ ಪರಬ್ರಹ್ಮನೇ ರೂಪನಾಗಿರುವೆ.
ಪ್ರಾತರ್ಭಜಾಮಿ ಮನಸೋ ವಚಸಾವಗಮ್ಯಂ |
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ ||
ಯನ್ನೇತಿ ನೇತಿ ವಚನೈರ್ನಿಗಮಾ ಅವೋಚು: |
ತಂ ದೇವ ದೇವ ಜಮುಚ್ಯುತ ಮಾಹುರಗ್ರ್ಯಂ ||೨||
ಭಾವಾರ್ಥ:-ಮನೋವಾಕ್ಕುಗಳಿಗೆ ಅಗೋಚರವಾಗಿ ಯಾವುದಿದೆಯೋ,ಯಾವುದರ ಕೃಪೆಯಿಂದ ಮಾತುಗಳು ಪ್ರವೃತ್ತಿಸಲ್ಪಡುವುದೋ,ಯಾವುದನ್ನು ವೇದಗಳು ಅದಲ್ಲ,ಅದಲ್ಲ ಎಂದು ತಿಳಿಸಿ ಮೌನ ತಾಳಿದವೋ,ಯಾವುದಕ್ಕೆ ಜನ್ಮವಾಗಲೀ ನಾಶವಾಗಲೀ ಇರದೆ ದೇವರದೇವನೆಂದು ಹೇಳಲ್ಪಟ್ಟಿದೆಯೋ ಅಂತೆಯೇ ಅನಾದಿಕಾಲದಿಂದಲೂ ಇರುವ ಆ ಪರಬ್ರಹ್ಮವನ್ನು ಉಷ:ಕಾಲದಲ್ಲಿ ನಾನು ಭಜಿಸುವೆನು.
ಪ್ರಾತರ್ನಮಾಮಿ ತಮಸ: ಪರಮಾರ್ಕವರ್ಣಂ |
ಪೂರ್ಣಂ ಸನಾತನ ಪದಂ ಪುರುಷೋತ್ತಮಾಖ್ಯಂ ||
ಯಸ್ಮಿನ್ನಿದಂ ಜಗದೇಷಮಶೇಷಮೂರ್ತೌ |
ರಜ್ಜ್ವಾಂಭುಜಂಗಮಂ ಇವ ಪ್ರತಿಭಾಸಿತಂ ವೈ ||
ಭಾವಾರ್ಥ:-ಯಾವುದು ಕತ್ತಲನ್ನು ಹೋಗಲಾಡಿಸುವ ಸೂರ್ಯನಂತಿದೆಯೋ,ಅಜ್ಞಾನವನ್ನು ಹೊಡೆದೋಡಿಸುವ ಜ್ಞಾನ ಸ್ವರೂಪವಾಗಿದೆಯೋ,ಯಾವುದು ಪರಿಪೂರ್ಣವೂ ಸನಾತನ ಶಬ್ದವೂ ಆಗಿರುವುದನ್ನು ಪುರುಷೋತ್ತಮನೆಂದು ಸಂಭೋಧಿಸುತ್ತದೆಯೋ,ಯಾವುದು ಬ್ರಹ್ಮಾಂಡವನ್ನು ಹಾವು ಹಗ್ಗದ ರೂಪದಲ್ಲಿ ಭಾಸವಾಗುವಂತೆ ಮಾಡುತ್ತದೆಯೋ ಅಂತಹಾ ಶೇಷವೂ ಅಶೇಷವೂ ಆಗಿರುವ ಅನಂತ ಸ್ವರೂಪದಲ್ಲಿರುವ ಆ ಪರಮಾತ್ಮ ತತ್ವವನ್ನು ಉಷ:ಕಾಲದಲ್ಲಿ ನಾನು ನಮಿಸುವೆನು.
*********************************************************************************
|| ಇತಿ ಶ್ರೀಶಂಕರ ಭಗವದ್ಪಾದ ವಿರಚಿತ ಪರಬ್ರಹ್ಮ ಪ್ರಾತ:ಸ್ಮರಣಮ್ ||
|| ಈ ತೆರನಾಗಿ ಶ್ರೀ ಶಂಕರ ಭಗವದ್ಪಾದರಿಂದ ರಚಿಸಲ್ಪಟ್ಟ ಪರಬ್ರಹ್ಮ ಪ್ರಾತ:ಸ್ಮರಣ ಶ್ಲೋಕಗಳ ಭಾವಾರ್ಥವು ||
*********************************************************************************
-೧೭-
|| ಪ್ರಾತರ್ಪ್ರತಿಜ್ಞಾ ||
*****************
ಸುಷುಪ್ತಿ ಮಾತಾ ಸುಷುವೇ ಶಿಶು ಮಾಂ |
ಸಂಕಲ್ಪಮೇವಂ ಮನಸಾ ಕರೋಮಿ ||
ಯದೃತ್ ಕೃತಂ ಭವತು ತ್ವದರ್ಥಂ |
ಹೃದಿ ಸ್ಥಿತೇ ರಾಜ್ಙಿ ಚರಾ ಚರಾಣಾಮ್ ||೧||
ಭಾವಾರ್ಥ:-ಮೈ ಮರೆವ ಗಾಢ ನಿದ್ರೆ ಎಂಬ ತಾಯಿಯು ನನ್ನನ್ನು ಶಿಶುವಾಗಿ ಹಡೆದಳು.ನಾನೀಗ ಮನದಲ್ಲಿ ಹೀಗೆಂದು ಪ್ರತಿಜ್ಞೆ ಮಾಡುತ್ತಿದ್ದೇನೆ. "ಹೇ!ಚರಾಚರ ವಸ್ತುಗಳ ದೊರೆಯಾದ ಭಗವಂತನೇ,ನನ್ನ ಹೃದಯಲ್ಲಿ ನೀನು ನೆಲೆಸಿರುವಾಗ ನಾನು ಏನೆಲ್ಲಾ ಮಾಡುವೆನೋ ಅವೆಲ್ಲವೂ ನಿನಗರ್ಪಿತವಾಗಲಿ.
ಉಕ್ತಂ ಮತಂ ದೇವ ತಥಾ ಕೃತಂ ಚ |
ಹವ್ಯಂ ತತ: ಪಾವನ ಪೂತಮಸ್ತು ||
ಕುರ್ಯಾಂ ನ ಕಿಂಚಿತ್ ಪರಪೀಡನಾಯ |
ಪರೋsಪಿಮಹ್ಯಂ ನ ತಥಾ ಮನೋತು ||೨||
ಎಲೈ ಸ್ವಾಮಿಯೇ! ನನ್ನ ಅನಿಸಿಕೆ,ನುಡಿ,ಮತ್ತು ಕಾರ್ಯಗಳೆಲ್ಲವೂ ದೋಷರಹಿತವಾಗಿರಲಿ.ಅವೆಲ್ಲವೂ ಸ್ವಾಮಿಕಾರ್ಯ ಎಂಬ ಯಜ್ಞಕ್ಕೆ ಅರ್ಪಿಸುವ ಹವಿಸ್ಸಾಗಲಿ.ಅನ್ಯರಿಗೆ ನೋವುಂಟು ಮಾಡುವ ದ್ರೋಹ ನನ್ನಿಂದ ಸಂಭವಿಸದಿರಲಿ.ಅಂತೆಯೇ ಇತರರಿಂದಲೂ ನನಗೆ ನೋವು ಘಟಿಸದಿರಲಿ.
*********************************************************************************
|| ಇತಿ ಪ್ರಾತರ್ಪ್ರತಿಜ್ಞಾ || || ಈ ರೀತಿಯಾಗಿ ಪ್ರಾತ: ಸಂಕಲ್ಪದ ಭಾವಾರ್ಥವು ||
*********************************************************************************
-೧೮-
|| ವಂದೇ ಭೂಮಾತರಮ್ ಸ್ತುತಿ ||
****************************
ಸಮುದ್ರವಸನೇ ದೇವಿ ಪರ್ವತ ಸ್ತನ ಮಂಡಲೇ |
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||೧||
ಭಾವಾರ್ಥ:-ಹೇ! ಭೂಮಿ ತಾಯಿಯೇ;ಸಾಗರವನ್ನು ವಸನವನ್ನಾಗಿ ಧರಿಸಿದವಳೇ,ಗಿರಿಗಳೆಂಬ ಸ್ತನಮಂಡಲವನ್ನು ಹೊತ್ತಿರುವವಳೇ,ಶ್ರೀಹರಿಯ ಸತಿಯೇ,ನಿನಗೆ ನನ್ನ ಪ್ರಣಾಮಗಳು. ನಿನ್ನ ಮೇಲೆ ನನ್ನ ಪಾದಗಳ ಸೋಂಕುವಿಕೆಯನ್ನು ಮನ್ನಿಸು ತಾಯೀ.
ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಾಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ತತ್ರ ಸಂತತಿ: ||೨||
ಭಾವಾರ್ಥ:-ಹಿಂದೂ ಮಾಹಾಸಾಗರದ ಉತ್ತರದಲ್ಲಿ,ಹಿಮಾಲಯದ ದಕ್ಷಿಣದಲ್ಲಿ ಇರುವ ನಾಡು ಭಾರತ. ಅಲ್ಲಿ ಜನಿದವರೆಲ್ಲರೂ ಭಾರತೀಯರು.
ಭೂಮಾತಾ ಗೋಮಾತಾ ಚ ದೇಶಮಾತಾ ತಥೈವ ಚ |
ವೇದ ಮಾತಾ ದೇಹಮಾತೇತಿ ಪಂಚೈತಾ ಮಾತರೋ ಮಮ ||೩ ||
ಭಾವಾರ್ಥ:-ಭೂಮಾತೆ,ಗೋ ಮಾತೆ,ದೇಶಮಾತೆ,ವೇದಮಾತೆ,ದೇಹಮಾತೆ ಎಂಬುದಾಗಿ ಈ ಐವರು ನನಗೆ ಮಾತೆಯರು.
ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರ ಜನ್ಮನ: |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪ್ರಥಿವ್ಯಾಂ ಸರ್ವ ಮಾನವಾ: ||೪||
ಭಾವಾರ್ಥ:-ಈ ಭರತ ಭೂಮಿಯಲ್ಲಿ ಜನಿಸಿದ ಜ್ಞಾನಿಗಳಿಂದ ಜಗತ್ತಿನ ಎಲ್ಲ ಮಾನವರೂ ತಮ್ಮ ತಮ್ಮ ಸಂಸ್ಕಾರಗಳನ್ನು ಕಲಿತುಕೊಳ್ಳಬೇಕು.
ರತ್ನಾಕರಾಂ ಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಮ್ ||೫||
ಭಾವಾರ್ಥ:-ಹಿಂದೂ ಮಹಾ ಸಾಗರದಲ್ಲಿ ಕಾಲುಗಳನ್ನು ತೊಳೆಯುತ್ತಾ,ಹಿಮವತ್ಪರ್ವತಗಳನ್ನು ಕಿರೀಟದಂತೆ ಧರಿಸುತ್ತಾ,ರತ್ನ ಸದೃಶರಾದ ಬ್ರಹ್ಮರ್ಷಿ,ರಾಜರ್ಷಿಗಳಿಗೆ ನೆಲೆಯಾಗಿ ಶೋಭಿಸುತ್ತಲಿರುವ ತಾಯಿ ಭಾರತ ಮಾತೆಗೆ ಪ್ರಣಾಮಗಳು.
*********************************************************************************
|| ಇತಿ ವಂದೇ ಭೂಮಾತರಮ್ ಸ್ತುತಿ || || ಈ ತೆರನಾಗಿ ವಂದೇ ಭೂ ಮಾತರಮ್ ಸ್ತುತಿಯ ಭಾವಾರ್ಥವು ||
*********************************************************************************
-೧೯-
|| ಶ್ರೀ ಭಗವತ್ಪ್ರಾತ: ಸ್ಮರಣ ಸ್ತೋತ್ರಮ್ ||
*********************************
ಪ್ರಾತರ್ನಮಾಮಿ ಫಣಿರಾಜ ತನೌ ಶಯಾನಂ |
ನಾಗಾಮರಾಸುರ ನರಾದಿ ಜಗನ್ನಿದಾನಮ್ ||
ಸಂದೃಪ್ತದಾನವ ಕದಂಬ ಮದಾಪಹಾರಂ |
ಸೌಂದರ್ಯರಾಶಿ ಜಲರಾಶಿಸುತಾ ವಿಹಾರಮ್ ||೧||
ಭಾವಾರ್ಥ:-ಆದಿಶೇಷನ ಮೇಲೆ ಮಲಗಿರುವವನೂ ದೇವ ದಾನವ ನಾಗ ಮನುಜರಾದಿಯಾಗಿ ವಿವಿಧ ಜೀವರಾಶಿಯನ್ನೊಳಗೊಂಡ ಲೋಕಕ್ಕೆ ಕಾರಣನಾದವನೂ ವೇದಗಳಿಂದಲೂ,ದೇವತಾ ಸಮೂಹದಿಂದಲೂ ಹೊಗಳಿಸಿಕೊಂಬವನೂ,ಕಾನನಗಳೊಳಗೆ ಆಶ್ರಮವನ್ನು ಮಾಡಿಕೊಂಡಿರುವ ಋಷಿ ಮುನಿಗಳ ಶ್ರೇಷ್ಠವಾದ ನಿಧಿಯಂತಿರುವವನೂಸಾಂಸಾರಿಕ ಸಾಗರವನ್ನು ದಾಟಿಸುವವನೂ,ದೇವತೆಗಳು,ಸಿದ್ಧರು,ಋಷಿಗಳ ಗುಂಪಿನಿಂದ ಪೂಜಿಸಲ್ಪಡುವಾತನೂ,ಕೊಬ್ಬಿದ ದಾನವರ ಸಮೂಹದ ದರ್ಪವನ್ನು ಇಳಿಸುವಾತನೂ,ಸೌಂದರ್ಯದ ಖಣಿಯಾಗಿರುವ ಸಮುದ್ರರಾಜನ ತನಯೆ ಲಕ್ಷ್ಮೀ ದೇವಿಯೊಂದಿಗೆ ವಿಹರಿಸುತ್ತಿರುವವನೂ ಆಗಿರುವ ಭಗವಂತನನ್ನು ನಾನು ಉಷ:ಕಾಲದಲ್ಲಿ ಸ್ಮರಿಸುತ್ತೇನೆ.
ಪ್ರಾತರ್ನಮಾಮಿ ಶರದಂಬರ ಕಾಂತಿಕಾಂತಂ |
ಪಾದಾರವಿಂದ ಮಕರಂದಜುಷಾಂ ಭವಾಂತಮ್ ||
ನಾನಾವತಾರ ಹೃತಭೂಮಿ ಭರಂ ಕೃತಾಂತಂ |
ಪಾಥೋಜ-ಕಂಬು-ರಥಪಾದಕರಂ ಪ್ರಶಾಂತಮ್ ||೨||
ಭಾವಾರ್ಥ:-ಶರತ್ ಕಾಲದ ಆಗಸದ ನೀಲ ಪ್ರಕಾಶದಿಂದ ಆಕರ್ಷಿತನಾಗುವವನೂ,ತನ್ನಡಿದಾವರೆಯ ಮಕರಂದವನ್ನು ಸವಿಯುವವರ ಸಾಂಸಾರಿಕ ದುರಿತಗಳನ್ನು ಕೊನೆಗೊಳಿಸುವವನೂ,ನಾನಾವತಾರಗಳನ್ನು ತಾಳಿ ಭೂಮಿ ಭಾರವನ್ನು ಹಗುರಾಗಿಸಿದವನೂ,ಶಂಖ,ಪದ್ಮ,ಚಕ್ರಗಳನ್ನು ಹಸ್ತದಲ್ಲಿ ಹಿಡಿದವನೂ ಪ್ರಶಾಂತ ಸ್ವರೂಪನೂ ಆಗಿರುವ ಭಗವಂತನನ್ನು ನಾನು ಉಷ:ಕಾಲದಲ್ಲಿ ಸ್ಮರಿಸುತ್ತೇನೆ.
*********************************************************************************
|| ಇತಿ ಶ್ರೀ ಭಗವತ್ಪ್ರಾತ: ಸ್ಮರಣ ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀಭಗವತ್ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||
*********************************************************************************
-೨೦-
|| ಶ್ರೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್ ||
***********************************
ಪ್ರಾತ:ಸ್ಮರಾಮಿ ಖಲು ತತ್ ಸವಿತುರ್ವರೇಣ್ಯಂ |
ರೂಪಂ ಹಿ ಮಂಡಲಮೃಚೋsಥ ತನುರ್ಯಜೂಂಷಿ ||
ಸಾಮಾನಿ ಯಸ್ಯ ಕಿರಣಾ: ಪ್ರಭವಾದಿ ಹೇತುಂ |
ಬ್ರಹ್ಮಾಹರಾತ್ಮಕಮಲಕ್ಷ್ಯಮಚಿಂತ್ಯಹೇತುಂ ||೧||
ಭಾವಾರ್ಥ:-ಋಗ್ವೇದದ ಮಂಡಲದೊಳಗೆ ಯಜುರ್ವೇದದ ದೇಹ ಧರಿಸಿ ಸಾಮವೇದದ ಶಲಾಕೆಗಳನ್ನು ಹೊಂದಿರುವ,ಸೃಷ್ಟಿಯೇ ಆದಿಯಾದ ಕಾರ್ಯಗಳಿಗೆ ಕಾರಣವಾಗಿರುವ,ಬ್ರಹ್ಮ ಹಾಗೂ ಈಶ್ವರನ ಸ್ವರೂಪವುಳ್ಳ,ಬರಿಕಣ್ಣಿಂದ ಕಾಣಲು ಅಸಾಧ್ಯವಾಗಿರುವ,ಲೆಕ್ಕಿಸಲು ಅಸದಳವಾಗಿರುವ ಸವಿತೃ ದೇವನ ಸ್ವರೂಪವನ್ನು ನಾನು ಉಷ: ಕಾಲದಲ್ಲಿ ಸ್ಮರಿಸುವೆ.
ಪ್ರಾತರ್ನಮಾಮಿ ತರಣಿಂ ತನುವಾಙ್ಮನೋಭಿ: |
ಬ್ರಹ್ಮೇಂದ್ರಪೂರ್ವಕ ಸುರೈರ್ನುತಮರ್ಚಿತಂ ಚ ||
ವೃಷ್ಟಿ ಪ್ರಮೋಚನ ವಿನಿಗ್ರಹ ಹೇತುಭೂತಂ |
ತ್ರೈಲೋಕ್ಯ ಪಾಲನಪರಂ ತ್ರಿಗುಣಾತ್ಮಕಂ ಚ ||೨||
ಭಾವಾರ್ಥ:-ಇಂದ್ರ ಬ್ರಹ್ಮರೇ ಆದಿಯಾದ ದೇವದೇವತೆಯರಿಂದ ಸ್ತುತಿಸಲ್ಪಡುವ ಹಾಗೂ ಪೂಜಿಸಲ್ಪಡುವ ಅಲ್ಲದೆ ಮಳೆ ಸುರಿಯಲೂ ಸುರಿಯದಿರಲೂ ಕಾರಣೀ ಭೂತನಾದ, ಸ್ವರ್ಗ,ಮರ್ತ್ಯ,ಪಾತಾಳಾದಿ ಮೂರ್ಲೋಕಗಳನ್ನು ರಕ್ಷಿಸುವ ಮತ್ತು ಸತ್ವ,ರಜ,ತಮೋ ಗುಣಗಳೆಂಬ ತ್ರಿಗುಣಗಳನ್ನು ಒಳಗೊಂಡಿರುವ ಸೂರ್ಯದೇವನನ್ನು ಮನೋವಾಕ್ಕಾಯಗಳಿಂದ ನಾನು ಉಷ: ಕಾಲದಲ್ಲಿ ಸ್ಮರಿಸುವೆ.
ಪ್ರಾತರ್ಭಜಾಮಿ ಸವಿತಾರಮನಂತ ಶಕ್ತಿಂ |
ಪಾಪೌಘ ಶತ್ರು ಭಯರೋಗ ಹರಂ ಪರಂ ಚ ||
ತಂ ಸರ್ವಲೋಕ ಕಲನಾತ್ಮಕ ಕಾಲಮೂರ್ತಿಂ |
ಗೋಕಂಠ ಬಂಧನ ವಿಮೋಚನಮಾದಿದೇವಮ್ ||೩||
ಭಾವಾರ್ಥ:-ದುರಿತಗಳ ಸಮೂಹವನ್ನು ಮತ್ತು ವೈರಿಗಳ ಬಗೆಗಿನ ಭೀತಿಯನ್ನು ಹೋಗಲಾಡಿಸುವ,ಸರ್ವ ರೋಗಗಳನ್ನು ನಿವಾರಿಸುವ,ಸಮಸ್ತ ಲೋಕವು ಗುರುತಿಸಿದ ಕಾಲಸ್ವರೂಪನಾಗಿರುವ,ಗೋವುಗಳನ್ನ್ನು ಬಂಧಿಸುವ ಅಥವಾ ಬಂಧ ವಿಮುಕ್ತಿಗೊಳಿಸುವ ಆದಿದೇವನಾದ ಅಂತ್ಯವಿರದ ಶಕ್ತಿಯ ಮೂಲನಾದ ಹಾಗೆಯೇ ಶ್ರೇಷ್ಠನಾದ ಸೂರ್ಯದೇವನನ್ನು ಮನೋವಾಕ್ಕಾಯಗಳಿಂದ ನಾನು ಉಷ: ಕಾಲದಲ್ಲಿ ಸ್ಮರಿಸುವೆ.
ಶ್ಲೋಕತ್ರಯಮಿದಂ ಭಾನೋ: ಪ್ರಾತ:ಕಾಲೇ ಪಠೇತ್ತುಯ: |
ಸರವ್ಯಾಧಿವಿನಿರ್ಮುಕ್ತ: ಪರಂ ಸುಖಮಾಪುಯಾತ್ ||೪||
ಭಾವಾರ್ಥ:-ಸೂರ್ಯನ ಕುರಿತಾಗಿರುವ ಈ ಮೂರು ಶ್ಲೋಕಗಳನ್ನು ಯಾವಾತನು ಉಷ:ಕಾಲದಲ್ಲಿ ಪಠಿಸುವನೋ ಅವನು ಸಮಸ್ತ ರೋಗಗಳಿಂದ ವಿಮುಕ್ತನಾಗಿ ಶ್ರೇಷ್ಠವಾಅ ಸುಖವನ್ನು ಹೊಂದುವನು.
*********************************************************************************
||ಇತಿ ಶೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್||
||ಈ ತೆರನಾಗಿ ಶ್ರೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾತ್ಯ್ಹವು||
*********************************************************************************
-೨೧-
|| ಶ್ರೀ ಆಂಜನೇಯ ಪ್ರಾತ:ಸ್ಮರಣ ಸ್ತೋತ್ರಮ್ ||
************************************
ಪ್ರಾತ:ಸ್ಮರಾಮಿ ಹನುಮಂತಮನಂತ ವೀರ್ಯಂ |
ಶ್ರೀ ರಾಮಚಂದ್ರ ಚರಣಾಂಬುಜ ಚಂಚರೀಕಮ್ ||
ಲಂಕಾಪುರೀ ದಹನ ನಂದಿತ ದೇವ ವೃಂದಮ್ |
ಸರ್ವಾರ್ಥ ಸಿದ್ಧಿ ಸದನಂ ಪ್ರಥಿತ ಪ್ರಭಾವಮ್ ||೧||
ಭಾವಾರ್ಥ:-ಉಷ:ಕಾಲದಲ್ಲಿ ನಾನು ಹನುಮಂತನನ್ನು ನೆನೆಯುತ್ತಿರುವೆ.
ಅವನಾದರೋ ಮಹಾಬಲಶಾಲಿಯಾಗಿದ್ದು ಶ್ರೀರಾಮಚಂದ್ರನ
ಅಡಿದಾವರೆಯಲ್ಲಿ ಭ್ರಮರದಂತಿರುವನು.ಆತನಿಂದ ಲಂಕಾಪಟ್ಟಣವು
ದಹಿಸಲ್ಪಟ್ಟಾಗ ದೇವತಾಸಮೂಹವೆಲ್ಲಾ ಸಂತಸಪಟ್ಟಿತ್ತು.ಸಮಸ್ತ
ಸಿದ್ಧಿಗಳ ಕೇಂದ್ರಬಿಂದುವಿನಂತಿರುವ ಆತನು ವಿಶಾಲವಾದ
ಪ್ರಭಾಶಕ್ತಿಯನ್ನು ಹೊಂದಿರುವನು.
ಪ್ರಾರ್ನಮಾಮಿ ವೃಜಿನಾರ್ಣವ ತಾರಣೈಕಾ- |
ಧಾರಂ ಶರಣ್ಯ ಮುದಿತಾನುಪಮ ಪ್ರಭಾವಮ್ ||
ಸೀತಾsಧಿಸಿಂಧು ಪರಿಶೋಷಣ ಕರ್ಮದಕ್ಷಂ |
ವಂದಾರು ಕಲ್ಪತರುಮವ್ಯಯಮಾಂಜನೇಯೇಯಮ್ ||೨||
ಭಾವಾರ್ಥ:-ಸಂಕಷ್ಟಗಳ ಸಾಗರವನ್ನು ದಾಟಲು ಇರುವ ಪ್ರಮುಖ
ಆಧಾರದಂತಿರುವ, ಆಶ್ರಿತರನ್ನು ಪೊರೆಯುವ ಆದ್ವಿತೀಯವಾದ
ಘನತೆಯುಳ್ಳ,ಸೀತಾದೇವಿಯ ಮನೋವ್ಯಥೆ ಎನ್ನುವ ಸಾಗರವನ್ನು
ಇಂಗಿಸುವ ಮಹತ್ಕಾರ್ಯದಲ್ಲಿ ಸಮರ್ಥನೆನಿಸಿದ, ವಂದಿಸುವವರಿಗೆ
ಕೊನೆಯಿಲ್ಲದ ಕಲ್ಪವೃಕ್ಷದಂತಿರುವ ಅಂಜನಾದೇವೀ ಸುಪುತ್ರನಾದ
ಆಂಜನೇಯನನ್ನು ನಾನು ಉಷ:ಕಾಲದಲ್ಲಿ ವಂದಿಸುತ್ತಲಿರುವೆ.
ಪ್ರಾತರ್ಭಜಾಮಿ ಶರಣೋಪಸೃತಾಖಿಲಾರ್ತಿ- |
ಪುಂಜ ಪ್ರಣಾಶನ ವಿಧೌ ಪ್ರಥಿತ ಪ್ರತಾಪಮ್ ||
ಅಕ್ಷಾಂತಕಂ ಸಕಲ ರಾಕ್ಷಸ ವಂಶ ಧೂಮ- |
ಕೇತುಂ ಪ್ರಮೋದಿತ ವಿದೇಹಸುತಂ ದಯಾಲುಮ್ ||೩||
ಭಾವಾರ್ಥ:-ಶರಣುಹೊಕ್ಕವರ ಸಮಸ್ತ ದುರಿತಗಳ ಸಮೂಹವನ್ನೇ
ನಾಶಮಾಡುವ ಕೀರ್ತಿಶಾಲಿ ಅಪ್ರತಿಮಶೌರಿಯೂ,ರಾವಣನ ಸುತನಾದ
ಅಕ್ಷ ಕುಮಾರನ ಪ್ರಾಣಹರಣ ಗೈದ,ಸಮಸ್ತ ದಾನವಕುಲದ ನಾಶದ
ಕುರುಹಾದ,ಜನಕರಾಜನ ತನಯೆ ಸೀತಾದೇವಿಯನ್ನು ಸಂತೋಷಗೊಳಿಸಿದ
ಆ ದಯಾಮೂರುತಿ ಆಂಜನೇಯ ಸ್ವಾಮಿಯನ್ನು ನಾನು ಉಷ:ಕಾಲದಲ್ಲಿ
ಭಜಿಸುತ್ತೇನೆ.
*********************************************************************
|| ಇತಿ ಶ್ರೀ ಅಂಜನೇಯ ಪ್ರಾತ:ಸ್ಮರಣ ಸ್ತೋತ್ರಮ್ ||
|| ಈ ತೆರನಾಗಿ ಶ್ರೀ ಆಂಜನೇಯ ಪ್ರಾತ:ಸ್ಮರಣ ಸ್ತೋತ್ರಗಳ
ಭಾವಾರ್ಥವು ||
-೨೨-
|| ಸತ್ಕಾರ್ಯ ಪ್ರತಿಜ್ಞಾ ||
********************
ಸರ್ವೇಂದ್ರಿಯಾಭಿಮಾನಿ ಶ್ರೀ: ಪ್ರಾಣಸಂಸ್ಥೇನ ವಿಷ್ಣುನಾ |
ಪ್ರೇರಿತ: ಶ್ರೀಶ ತುಷ್ಟ್ಯರ್ಥಂ ಕರಿಷ್ಯೇ ಕರ್ಮಚಾಖಿಲಮ್ ||೧||
ಭಾವಾರ್ಥ:-ಸಮಸ್ತ ಇಂದ್ರಿಯಗಳ ಅಭಿಮಾನಿ ದೇವತೆಯಾದ ಲಕ್ಷ್ಮಿ ಮತ್ತು ಪ್ರಾಣಶಕ್ತಿಯಾಗಿರುವ ವಿಷ್ಣುವಿನ ಪ್ರೇರಣೆಗೆ ಒಳಗಾಗಿ ನನ್ನೆಲ್ಲಾ ಕಾರ್ಯಗಳನ್ನು ಆ ಭಗವಂತನ ಪ್ರೀತಿಗೋಸ್ಕರವಾಗಿ ಮಾಡುವೆ.
ನಮೋವಸಾತ್ವಿಕಾ ದೇವಾ ವಿಷ್ಣು ಭಕ್ತಿಪರಾಯಣಾ: |
ಧರ್ಮಮಾರ್ಗೇ ಪ್ರೇರಯಂತು ಭವಂತ: ಸರ್ವ ಏವ ಹಿ ||೨||
ಭಾವಾರ್ಥ:-ಶ್ರೀಹರಿಯ ಭಕ್ತಿಯಲ್ಲಿ ತಲ್ಲೀನರಾಗಿರುವ ತತ್ವಾಭಿಮಾನಿ ದೇವಾನುದೇವತೆಗಳೇ ನಿಮಗಿದೋ ನನ್ನ ನಮಸ್ಕಾರಗಳು.ನೀವೆಲ್ಲರೂ ನಾನು ಧರ್ಮಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿರಿ.
ಉತ್ಪತ್ತಿಸ್ಥಿತಿ ಸಂಹಾರ ನಿಯತಿರ್ಜ್ಞಾನಮಾವೃತಿ: |
ಬಂಧಮೋಕ್ಷೌಚ ಪುರುಷಾದ್ ಯಸ್ಮಾತ್ ಸ ಹರಿರೇಕರಾಟ್ ||೩||
ಭಾವಾರ್ಥ:-ಸೃಷ್ಟಿ,ಸ್ಥಿತಿ,ಲಯಾದಿ ಲೋಕ ನಿಯಮಗಳಿಗೆ,ಜ್ಞಾನಾಜ್ಞಾನ, ಬಂಧನ ಹಾಗೂ ಮುಕ್ತಿಗಳಿಗೆ ಯಾರು ಕಾರಣರಾಗುವರೋ ಅಂತಹಾ ಶ್ರೀಹರಿಯು ಚಕ್ರವರ್ತಿಯಂತಿರುವನು.
ತತ್ರ ತತ್ರ ಸ್ಥಿತ: ಸ್ವಾಮೀ ತತ್ತಚ್ಛಕ್ತೀ:ಪ್ರಬೋಧಯನ್ |
ಏಕ ಏವ ಮಹಾಶಕ್ತಿ: ಕುರುತೇ ಸರ್ವಮಂಗಲಾಮ್ ||೪||
ಭಾವಾರ್ಥ:-ಎಲ್ಲೆಂದರಲ್ಲಿ ವ್ಯಾಪಿಸಿರುವ ಆ ದೊರೆಯು ಆಯಾಯ ಶಕ್ತಿಗಳನ್ನು ಉದ್ದೀಪನಗೊಳಿಸುತ್ತಾ ತಾನು ಏಕಮೇವ ಮಹಾಶಕ್ತಿಯಾಗಿ ಸಮಸ್ತ ಶುಭವನ್ನು ಮಾಡುವನು.
ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ |
ಯದನುಗ್ರಹಿತ: ಸಂತಿ ನ ಸಂತಿ ಯದುಪೇಕ್ಷಯಾ ||೫||
ಭಾವಾರ್ಥ:-ವಸ್ತು,ಕ್ರಿಯೆ,ಕಾಲ,ಸ್ವಭಾವ ಹಾಗೂ ಜೀವ ಇವೆಲ್ಲವೂ ದೈವಾನುಗ್ರಹವಿದ್ದರೆ ಮಾತ್ರಾ ಅಸ್ಥಿತ್ವದಲ್ಲಿರುತ್ತವೆ.ದೈವಾನುಗ್ರಹವಿಲ್ಲದಿದ್ದರೆ ಯಾವುದೂ ಇರುವುದಿಲ್ಲ.
ಸ್ವಾಮಿನ್ ಭಕ್ತೋsಸ್ಮಿ ತೇ ನಿತ್ಯಂ ಪ್ರಿಯಂತೇ ಕರವಾಣ್ಯಹಮ್ |
ಅಪ್ರಿಯೇ ಭವತೋ ನಾಥ ಮಾಯಾನ್ಮೇ ಮನ ಆದಿಕಮ್ ||೬||
ಭಾವಾರ್ಥ:-ಸ್ವಾಮಿ ಪರಮಾತ್ಮನೇ;ನಾನು ನಿನ್ನ ಭಕ್ತನಿರುವೆ.ಅನುದಿನವೂ ನಿನಗೆ ಪ್ರಿಯವಾದ ಕಾರ್ಯಗಳನ್ನು ಮಾಡಬೇಕಾಗಿದೆ.ದೊರೆಯೇ, ಆದಕಾರಣ ನನ್ನ ಮನಸ್ಸು ಹಾಗೂ ಇಂದ್ರಿಯಾದಿಗಳು ಯಾವತ್ತೂ ನಿನಗೆ ಅಪ್ರಿಯವೆನಿಸುವಂತಹಾ ಕಾರ್ಯಗಳಲ್ಲಿ ತೊಡಗದಿರಲಿ.
ಪ್ರಾತ:ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂತತ: |
ಯತ್ ಕರೋಮಿ ಜಗನ್ನಾಥ ತದಸ್ತು ತವ ಪೂಜನಮ್ ||೭||
ಭಾವಾರ್ಥ:-ಜಗದೊಡೆಯನೇ!ಮುಂಜಾನೆಯಿಂದ ಸಂಜೆಯವರೆಗಿನ ಹಗಲು ಹೊತ್ತಿನಲ್ಲಿ ಹಾಗೂ ಸಂಜೆಯಿಂದ ಮುಂಜಾನೆ ತನಕದ ರಾತ್ರಿ ಕಾಲದಲ್ಲಿ ನನ್ನಿಂದ ಏನೇನು ಕಾರ್ಯಗಳು ಮಾಡಲ್ಪಡುತ್ತವೆಯೋ ಅವೆಲ್ಲವೂ ನಿನ್ನ ಆರಾಧನೆಯಾಗಿರಲಿ.
ಶರೀರ ಚೇಷ್ಟಾಪಿ ಮಮ ಪ್ರಣಾಮ: |
ಸ್ತುತಿಸ್ತುವಾಗಿಂದ್ರಿಯ ವೃತ್ತಿರಸ್ತು ||
ಸರ್ವಾತ್ಮನೋ ವೃತ್ತಿರನುಸ್ಮೃತಿಸ್ತೇ |
ಸರ್ವಂ ತ್ವದಾರಾಧನಮೇವ ಭೂಯಾತ್ ||೮||
ಭಾವರ್ಥ:-ಈ ನನ್ನ ದೇಹದ ಅಂಗಚಲನೆಗಳೆಲ್ಲವೂ ನಾನು ಮಾಡುವ ನಿನ್ನ ಸ್ತುತಿಗಳಾಗಲಿ.ನನ್ನೀ ನಾಲಿಗೆಯಿಂದಾಡುವ ನುಡಿಗಳೆಲ್ಲವೂ ನಿನ್ನ ಪ್ರಶಂಸೆಗಳಾಗಲಿ.ನನ್ನ ಸರ್ವಾವಯವಗಳ ಕಾರ್ಯಗಳೆಲ್ಲವೂ ನಿನ್ನ ಸ್ಮರಣೆಗಳಾಗಲಿ.ಈ ರೀತಿಯಾಗಿ ನಾನು ದಿನ ಪೂರ್ತಿ ಮಾಡುವ ಸಮಸ್ತ ಕರ್ಮಗಳು ನಿನ್ನಾರಾಧನೆಯಾಗಿರಲಿ.
*********************************************************************
|| ಇತಿ ಸತ್ಕಾರ್ಯ ಪ್ರತಿಜ್ಞಾ || || ಈ ತೆರನಾಗಿ ಸತ್ಕಾರ್ಯ ಪ್ರತಿಜ್ಞಾ ಸ್ತೋತ್ರಗಳ ಭಾವಾರ್ಥವು ||
*********************************************************************
-೨೩-
********************
ಸರ್ವೇಂದ್ರಿಯಾಭಿಮಾನಿ ಶ್ರೀ: ಪ್ರಾಣಸಂಸ್ಥೇನ ವಿಷ್ಣುನಾ |
ಪ್ರೇರಿತ: ಶ್ರೀಶ ತುಷ್ಟ್ಯರ್ಥಂ ಕರಿಷ್ಯೇ ಕರ್ಮಚಾಖಿಲಮ್ ||೧||
ಭಾವಾರ್ಥ:-ಸಮಸ್ತ ಇಂದ್ರಿಯಗಳ ಅಭಿಮಾನಿ ದೇವತೆಯಾದ ಲಕ್ಷ್ಮಿ ಮತ್ತು ಪ್ರಾಣಶಕ್ತಿಯಾಗಿರುವ ವಿಷ್ಣುವಿನ ಪ್ರೇರಣೆಗೆ ಒಳಗಾಗಿ ನನ್ನೆಲ್ಲಾ ಕಾರ್ಯಗಳನ್ನು ಆ ಭಗವಂತನ ಪ್ರೀತಿಗೋಸ್ಕರವಾಗಿ ಮಾಡುವೆ.
ನಮೋವಸಾತ್ವಿಕಾ ದೇವಾ ವಿಷ್ಣು ಭಕ್ತಿಪರಾಯಣಾ: |
ಧರ್ಮಮಾರ್ಗೇ ಪ್ರೇರಯಂತು ಭವಂತ: ಸರ್ವ ಏವ ಹಿ ||೨||
ಭಾವಾರ್ಥ:-ಶ್ರೀಹರಿಯ ಭಕ್ತಿಯಲ್ಲಿ ತಲ್ಲೀನರಾಗಿರುವ ತತ್ವಾಭಿಮಾನಿ ದೇವಾನುದೇವತೆಗಳೇ ನಿಮಗಿದೋ ನನ್ನ ನಮಸ್ಕಾರಗಳು.ನೀವೆಲ್ಲರೂ ನಾನು ಧರ್ಮಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿರಿ.
ಉತ್ಪತ್ತಿಸ್ಥಿತಿ ಸಂಹಾರ ನಿಯತಿರ್ಜ್ಞಾನಮಾವೃತಿ: |
ಬಂಧಮೋಕ್ಷೌಚ ಪುರುಷಾದ್ ಯಸ್ಮಾತ್ ಸ ಹರಿರೇಕರಾಟ್ ||೩||
ಭಾವಾರ್ಥ:-ಸೃಷ್ಟಿ,ಸ್ಥಿತಿ,ಲಯಾದಿ ಲೋಕ ನಿಯಮಗಳಿಗೆ,ಜ್ಞಾನಾಜ್ಞಾನ, ಬಂಧನ ಹಾಗೂ ಮುಕ್ತಿಗಳಿಗೆ ಯಾರು ಕಾರಣರಾಗುವರೋ ಅಂತಹಾ ಶ್ರೀಹರಿಯು ಚಕ್ರವರ್ತಿಯಂತಿರುವನು.
ತತ್ರ ತತ್ರ ಸ್ಥಿತ: ಸ್ವಾಮೀ ತತ್ತಚ್ಛಕ್ತೀ:ಪ್ರಬೋಧಯನ್ |
ಏಕ ಏವ ಮಹಾಶಕ್ತಿ: ಕುರುತೇ ಸರ್ವಮಂಗಲಾಮ್ ||೪||
ಭಾವಾರ್ಥ:-ಎಲ್ಲೆಂದರಲ್ಲಿ ವ್ಯಾಪಿಸಿರುವ ಆ ದೊರೆಯು ಆಯಾಯ ಶಕ್ತಿಗಳನ್ನು ಉದ್ದೀಪನಗೊಳಿಸುತ್ತಾ ತಾನು ಏಕಮೇವ ಮಹಾಶಕ್ತಿಯಾಗಿ ಸಮಸ್ತ ಶುಭವನ್ನು ಮಾಡುವನು.
ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ |
ಯದನುಗ್ರಹಿತ: ಸಂತಿ ನ ಸಂತಿ ಯದುಪೇಕ್ಷಯಾ ||೫||
ಭಾವಾರ್ಥ:-ವಸ್ತು,ಕ್ರಿಯೆ,ಕಾಲ,ಸ್ವಭಾವ ಹಾಗೂ ಜೀವ ಇವೆಲ್ಲವೂ ದೈವಾನುಗ್ರಹವಿದ್ದರೆ ಮಾತ್ರಾ ಅಸ್ಥಿತ್ವದಲ್ಲಿರುತ್ತವೆ.ದೈವಾನುಗ್ರಹವಿಲ್ಲದಿದ್ದರೆ ಯಾವುದೂ ಇರುವುದಿಲ್ಲ.
ಸ್ವಾಮಿನ್ ಭಕ್ತೋsಸ್ಮಿ ತೇ ನಿತ್ಯಂ ಪ್ರಿಯಂತೇ ಕರವಾಣ್ಯಹಮ್ |
ಅಪ್ರಿಯೇ ಭವತೋ ನಾಥ ಮಾಯಾನ್ಮೇ ಮನ ಆದಿಕಮ್ ||೬||
ಭಾವಾರ್ಥ:-ಸ್ವಾಮಿ ಪರಮಾತ್ಮನೇ;ನಾನು ನಿನ್ನ ಭಕ್ತನಿರುವೆ.ಅನುದಿನವೂ ನಿನಗೆ ಪ್ರಿಯವಾದ ಕಾರ್ಯಗಳನ್ನು ಮಾಡಬೇಕಾಗಿದೆ.ದೊರೆಯೇ, ಆದಕಾರಣ ನನ್ನ ಮನಸ್ಸು ಹಾಗೂ ಇಂದ್ರಿಯಾದಿಗಳು ಯಾವತ್ತೂ ನಿನಗೆ ಅಪ್ರಿಯವೆನಿಸುವಂತಹಾ ಕಾರ್ಯಗಳಲ್ಲಿ ತೊಡಗದಿರಲಿ.
ಪ್ರಾತ:ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂತತ: |
ಯತ್ ಕರೋಮಿ ಜಗನ್ನಾಥ ತದಸ್ತು ತವ ಪೂಜನಮ್ ||೭||
ಭಾವಾರ್ಥ:-ಜಗದೊಡೆಯನೇ!ಮುಂಜಾನೆಯಿಂದ ಸಂಜೆಯವರೆಗಿನ ಹಗಲು ಹೊತ್ತಿನಲ್ಲಿ ಹಾಗೂ ಸಂಜೆಯಿಂದ ಮುಂಜಾನೆ ತನಕದ ರಾತ್ರಿ ಕಾಲದಲ್ಲಿ ನನ್ನಿಂದ ಏನೇನು ಕಾರ್ಯಗಳು ಮಾಡಲ್ಪಡುತ್ತವೆಯೋ ಅವೆಲ್ಲವೂ ನಿನ್ನ ಆರಾಧನೆಯಾಗಿರಲಿ.
ಶರೀರ ಚೇಷ್ಟಾಪಿ ಮಮ ಪ್ರಣಾಮ: |
ಸ್ತುತಿಸ್ತುವಾಗಿಂದ್ರಿಯ ವೃತ್ತಿರಸ್ತು ||
ಸರ್ವಾತ್ಮನೋ ವೃತ್ತಿರನುಸ್ಮೃತಿಸ್ತೇ |
ಸರ್ವಂ ತ್ವದಾರಾಧನಮೇವ ಭೂಯಾತ್ ||೮||
ಭಾವರ್ಥ:-ಈ ನನ್ನ ದೇಹದ ಅಂಗಚಲನೆಗಳೆಲ್ಲವೂ ನಾನು ಮಾಡುವ ನಿನ್ನ ಸ್ತುತಿಗಳಾಗಲಿ.ನನ್ನೀ ನಾಲಿಗೆಯಿಂದಾಡುವ ನುಡಿಗಳೆಲ್ಲವೂ ನಿನ್ನ ಪ್ರಶಂಸೆಗಳಾಗಲಿ.ನನ್ನ ಸರ್ವಾವಯವಗಳ ಕಾರ್ಯಗಳೆಲ್ಲವೂ ನಿನ್ನ ಸ್ಮರಣೆಗಳಾಗಲಿ.ಈ ರೀತಿಯಾಗಿ ನಾನು ದಿನ ಪೂರ್ತಿ ಮಾಡುವ ಸಮಸ್ತ ಕರ್ಮಗಳು ನಿನ್ನಾರಾಧನೆಯಾಗಿರಲಿ.
*********************************************************************
|| ಇತಿ ಸತ್ಕಾರ್ಯ ಪ್ರತಿಜ್ಞಾ || || ಈ ತೆರನಾಗಿ ಸತ್ಕಾರ್ಯ ಪ್ರತಿಜ್ಞಾ ಸ್ತೋತ್ರಗಳ ಭಾವಾರ್ಥವು ||
*********************************************************************
-೨೩-
||ಮಹಾಭಾರತ ಸಾರ ಸರ್ವಸ್ವ ||
**************************
ಮಹರ್ಷಿರ್ಭಗವಾನ್ ವ್ಯಾಸ: ಕೃತ್ವೇಮಾಂ ಸಂಹಿತಾಂ ಪುರಾ |
ಶ್ಲೋಕೈರ್ಚತುರ್ಭಿರ್ಧರ್ಮಾತ್ಮಾಪುತ್ರಮಧ್ಯಾಪಯಚ್ಛುಕಮ್ ||೧||
ಭಾವಾರ್ಥ:-ಮಹರ್ಷಿಗಳೂ ಧರ್ಮಾತ್ಮರೂ ಆದ ಪೂಜ್ಯ ಬಾದರಾಯಣರು[=ವೇದವ್ಯಾಸರು]ಒಂದು ಲಕ್ಷಶ್ಲೋಕಗಳುಳ್ಳ ಮಹಾಭಾರತವನ್ನು ರಚಿಸಿ ಅದರ ಸಾರ ಸರ್ವಸ್ವವನ್ನು ತನ್ನ ಪುತ್ರನಾದ ಶುಕ ಮುನಿಗೆ ಕೇವಲ ನಾಲ್ಕು ಶ್ಲೋಕಗಳ ಮುಖೇನ ಉಪದೇಶಿಸಿದರು.
ಮಾತಾಪಿತೃ ಸಹಸ್ರಾಣಿ ಪುತ್ರದಾರ ಶತಾನಿ ಚ |
ಸಂಸಾರೇಷ್ವನುಭೂತಾನಿ ಯಾಂತಿ ಯಾಸ್ಯಂತಿ ಚಾಪರೇ ||೨||
ಭಾವಾರ್ಥ:-ಹುಟ್ಟುಸಾವುಗಳುಳ್ಳ ಈ ಸಂಸಾರ ಚಕ್ರದಲ್ಲಿ ಒಬ್ಬ ಜೀವಿಗೆ ಸಹಸ್ರಾರು ತಂದೆ ತಾಯಂದಿರು,ನೂರಾರು ಪತ್ನಿಯರು,ಮಕ್ಕಳು,ಈಗಾಗಲೇ ಆಗಿ ಹೋಗಿದ್ದಾರೆ.ಈಗಲೂ ಇದ್ದಾರೆ.ಮುಂದೆಯೂ ಆಗಲಿದ್ದಾರೆ.
ಹರ್ಷಸ್ಥಾನ ಸಹಸ್ರಾಣಿ ಭಯಸ್ಥಾನ ಶತಾನಿ ಚ |
ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್ ||೩||
ಭಾವಾರ್ಥ:-ಸಂತಸಕ್ಕೆ ಕಾರಣೀಭೂತವಾಗುವ ಸಾವಿರಾರು ಕ್ಷಣಗಳೂ ಭೀತಿಗೆ ಒಳಗಾಗಬೇಕಾದ ನೂರಾರು ಸಂದರ್ಭಗಳೂ ಅನುದಿನವೂ ಮೂಢನಿಗೆ ಎದುರಾಗುವವು.ಆದರೆ ಜ್ಞಾನಿಗಳು ಸುಖಕ್ಕೆ ಹಿಗ್ಗುವುದಿಲ್ಲ;ದು:ಖಕ್ಕೆ ಕುಗ್ಗುವುದೂ ಇಲ್ಲ.
ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೇ |
ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ ||೪||
ಭಾವಾರ್ಥ:-[ಬಾದರಾಯಣರು ಶುಕ ಮುನಿಗೆ ಹೇಳುತ್ತಿದ್ದಾರೆ]ನನ್ನೆರಡೂ ಹಸ್ತಗಳನ್ನು ಮೇಲಕ್ಕೆತ್ತಿ ಆರ್ಭಟಿಸಿ ಹೇಳುತ್ತಿರುವೆನಾದರೂ ಯಾವಾತನೂ ನನ್ನ ಮಾತನ್ನು ಕೇಳುತ್ತಿಲ್ಲವಲ್ಲಾ!ಧರ್ಮ ಅಂದರೆ ಸದಾಚಾರದಿಂದಲೇ ಅರ್ಥ ಅಂದರೆ ವಸ್ತುಗಳು,ಸಂಪತ್ತು ಇತ್ಯಾದಿಗಳೂ ಕಾಮ ಅಂದರೆ ಬಯಕೆಗಳೂ ಫಲಿಸುತ್ತವೆ. ಹೀಗಿರುವಾಗ ಅಂತಹಾ ಒಳ್ಳೆಯ ಸದಾಚಾರ[ಧರ್ಮ]ವನ್ನು ಯಾಕೆ ಯಾರೂ ಅನುಸರಿಸುತ್ತಿಲ್ಲ?
ನ ಜಾತು ಕಾಮಾನ್ನಭಯಾನ್ನ ಲೋಭಾದ್ |
ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋ: ||
ಧರ್ಮೋ ನಿತ್ಯ: ಸುಖದು:ಖೇತ್ವ ನಿತ್ಯೇ |
ಜೀವೋ ನಿತ್ಯೋ ಹೇತುರಸ್ಯತ್ವ ನಿತ್ಯ: ||೫||
ಭಾವಾರ್ಥ:-ಯಾವತ್ತೂ ನಮ್ಮ ಆಕಾಂಕ್ಷೆಗಳ ಕಾರಣದಿಂದಾಗಿ ಸಂಕಷ್ಟಗಳು ಎದುರಾಗಬಹುದೆಂಬ ಭೀತಿಯಿಂದ,ದುಡಿಯದೆ ಲಾಭ ಪಡೆಯಬೇಕೆಂಬ ಹುಚ್ಚು ಹಂಬಲದ ಕಾರಣದಿಂದ ಅಥವಾ ಜೀವವನ್ನು ತ್ಯಾಗ ಮಾಡಬೇಕಾದ ಕ್ಷಣಗಳು ಬಂದೊದಗಿದರೂ ಧರ್ಮವನ್ನೆಂದೂ ಬಿಡಲೇ ಬಾರದು.ಧರ್ಮವು ಅವಿನಾಶಿ.ಸುಖ-ದು:ಖಗಳು ತಾತ್ಕಾಲಿಕವಾದುದು.ಆತ್ಮವು ಶಾಶ್ವತವಾದುದು.ಹುಟ್ಟು ಸಾವುಗಳು ಅಶಾಶ್ವತವಾದವು.
ಇಮಾಂ ಭಾರತ ಸಾವಿತ್ರೀಂ ಪ್ರತ:ರುತ್ಥಾಯ ಯ: ಪಠೇತ್ |
ಸ ಭಾರತ ಫಲಂ ಪ್ರಾಪ್ಯ ಪರಂ ಬ್ರಹ್ಮಾಭಿ ಗಚ್ಛತಿ ||೬||
ಭಾವಾರ್ಥ:-ಗಾಯತ್ರೀ ಮಂತ್ರ ಸಮಾನವಾದ ಈ ಭಾರತ ಸಾರ ಸರ್ವಸ್ವವನ್ನು ಅರ್ಥವನ್ನು ಅರಿತುಕೊಂಡು ಅನುದಿನವೂ ಪ್ರಾತ:ಕಾಲದಲ್ಲಿ ಎದ್ದು ಅಂತರ್ಬಹಿರ್ಶುದ್ಧನಾಗಿಪಠಿಸುವವನು ಸಮಗ್ರ ಭಾರತವನ್ನು ಪಾರಾಯಣ ಮಾಡಿದ ಫಲವನ್ನು ಪಡೆದು ಬ್ರಹ್ಮಲೋಕವನ್ನು ಸೇರಿಕೊಳ್ಳುವನು.
ಯೋ ಗೋ ಶತಂ ಕನಕ ಶೃಂಗಮಯಂ ದದಾತಿ |
ವಿಪ್ರಾಯ ವೇದ ವಿದುಷೇ ಚ ಬಹು ಶ್ರುತಾಯ ||
ಪುಣ್ಯಾಂ ಚ ಭಾರತ ಕಥಾಂ ಶೃಣುಯಚ್ಚ ನಿತ್ಯಂ |
ತುಲ್ಯಂ ಫಲಂ ಭವತಿ ತಸ್ಯ ಚ ತಸ್ಯಚೈವ ||೭||
ಭಾವಾರ್ಥ:-ಬಂಗಾರದ ಕವಚಗಳಿಂದ ಕೋಡುಗಳನ್ನು ಅಲಂಕರಿಸಿದ ನೂರು ಗೋವುಗಳನ್ನು ವೇದಾಧ್ಯಯನ ಸಂಪನ್ನರಾದ ವಿಪ್ರೋತ್ತಮರಿಗೆ ದಾನ ಮಾಡುವವ ಹಾಗೂ ಅನುದಿನವೂ ಪುಣ್ಯದಾಯಕವಾದ ಮಹಾಭಾರತದ ಕಥೆಯನ್ನು ಕೇಳುವವ ಸಮಾನವಾದ ಫಲವನ್ನು ಪಡೆಯುವರು.
*********************************************************************
|| ಇತಿ ಮಹಾಭಾರತ ಸಾರ ಸರ್ವಸ್ವಮ್ ||
|| ಈ ರೀತಿಯಾಗಿ ಮಹಾಭಾರತ ಸಾರ ಸರ್ವಸ್ವದ ಭಾವಾರ್ಥವಾಗಿದೆ. ||
*********************************************************************
-೨೪-
||ಪ್ರಾರ್ಥನಾ ಶ್ಲೋಕಮ್ ||
***********************
ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ |
ಸ್ತುತ್ಯಾ ನಿರ್ವಚನೀಯತಾಖಿಲಗುರೋ ದೂರೀಕೃತಾ ಯನ್ಮಯಾ ||
ವ್ಯಾಪಿತ್ವಂ ಚ ನಿರಾಕೃತಂ ಭಗವತೋ ಯತ್ತೀರ್ಥಯಾತ್ರಾದಿನಾ |
ಕ್ಷಂತವ್ಯಂ ಜಗದೀಶ ತದ್ವಿಕಲತಾ ದೋಷತ್ರಯಂ ಮತ್ಕೃತಮ್ ||
ಭಾವಾರ್ಥ:-ಎಲೈ ಭಗವಂತನೇ!ನಿರಾಕಾರನಾಗಿರುವ ನೀನು ಚಿಂತನೆಯ ಮೂಲಕ ನಿನಗೆ ಒಂದು ಆಕಾರವನ್ನು ಕಲ್ಪಿಸಿಕೊಂಡಿರುವೆ.ಸ್ತುತಿಗಳ ಮೂಲಕವಾಗಿ ನೀನು ಇದಮಿತ್ಥಂ ಎಂದು ನಿರ್ಣೈಸಿ ಹೇಳಲಶಕ್ಯವಾಗಿರುವವಸ್ತುಗಳ ತೋರಿಕೆಯ ಭಾವವನ್ನು ದೂರೀಕರಿಸಿದೆ.ತೀರ್ಥಯಾತ್ರೆಗಳ ಮೂಲಕವಾಗಿ ನಿನ್ನ ಸಮಗ್ರ ವ್ಯಾಪಕತ್ವವನ್ನು ನಿರಾಕರಿಸಿರುವೆ.ಹೇ!ಜಗದ್ಗುರುವೇ;ನನ್ನಿಂದಾಗಿರುವ ಈ ಮೂರು ಅವಗುಣಗಳನ್ನು ಮನ್ನಿಸುವಂತಹವನಾಗು.
*********************************************************************
|| ಇತಿ ಪ್ರಾರ್ಥನಾ ಶ್ಲೋಕಮ್ || || ಈ ರೀತಿಯಾಗಿ ಪ್ರಾರ್ಥನಾ ಶ್ಲೋಕಗಳ ಭಾವಾರ್ಥವಾಗಿದೆ.||
*********************************************************************
-೨೫-
**************************
ಮಹರ್ಷಿರ್ಭಗವಾನ್ ವ್ಯಾಸ: ಕೃತ್ವೇಮಾಂ ಸಂಹಿತಾಂ ಪುರಾ |
ಶ್ಲೋಕೈರ್ಚತುರ್ಭಿರ್ಧರ್ಮಾತ್ಮಾಪುತ್ರಮಧ್ಯಾಪಯಚ್ಛುಕಮ್ ||೧||
ಭಾವಾರ್ಥ:-ಮಹರ್ಷಿಗಳೂ ಧರ್ಮಾತ್ಮರೂ ಆದ ಪೂಜ್ಯ ಬಾದರಾಯಣರು[=ವೇದವ್ಯಾಸರು]ಒಂದು ಲಕ್ಷಶ್ಲೋಕಗಳುಳ್ಳ ಮಹಾಭಾರತವನ್ನು ರಚಿಸಿ ಅದರ ಸಾರ ಸರ್ವಸ್ವವನ್ನು ತನ್ನ ಪುತ್ರನಾದ ಶುಕ ಮುನಿಗೆ ಕೇವಲ ನಾಲ್ಕು ಶ್ಲೋಕಗಳ ಮುಖೇನ ಉಪದೇಶಿಸಿದರು.
ಮಾತಾಪಿತೃ ಸಹಸ್ರಾಣಿ ಪುತ್ರದಾರ ಶತಾನಿ ಚ |
ಸಂಸಾರೇಷ್ವನುಭೂತಾನಿ ಯಾಂತಿ ಯಾಸ್ಯಂತಿ ಚಾಪರೇ ||೨||
ಭಾವಾರ್ಥ:-ಹುಟ್ಟುಸಾವುಗಳುಳ್ಳ ಈ ಸಂಸಾರ ಚಕ್ರದಲ್ಲಿ ಒಬ್ಬ ಜೀವಿಗೆ ಸಹಸ್ರಾರು ತಂದೆ ತಾಯಂದಿರು,ನೂರಾರು ಪತ್ನಿಯರು,ಮಕ್ಕಳು,ಈಗಾಗಲೇ ಆಗಿ ಹೋಗಿದ್ದಾರೆ.ಈಗಲೂ ಇದ್ದಾರೆ.ಮುಂದೆಯೂ ಆಗಲಿದ್ದಾರೆ.
ಹರ್ಷಸ್ಥಾನ ಸಹಸ್ರಾಣಿ ಭಯಸ್ಥಾನ ಶತಾನಿ ಚ |
ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್ ||೩||
ಭಾವಾರ್ಥ:-ಸಂತಸಕ್ಕೆ ಕಾರಣೀಭೂತವಾಗುವ ಸಾವಿರಾರು ಕ್ಷಣಗಳೂ ಭೀತಿಗೆ ಒಳಗಾಗಬೇಕಾದ ನೂರಾರು ಸಂದರ್ಭಗಳೂ ಅನುದಿನವೂ ಮೂಢನಿಗೆ ಎದುರಾಗುವವು.ಆದರೆ ಜ್ಞಾನಿಗಳು ಸುಖಕ್ಕೆ ಹಿಗ್ಗುವುದಿಲ್ಲ;ದು:ಖಕ್ಕೆ ಕುಗ್ಗುವುದೂ ಇಲ್ಲ.
ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೇ |
ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ ||೪||
ಭಾವಾರ್ಥ:-[ಬಾದರಾಯಣರು ಶುಕ ಮುನಿಗೆ ಹೇಳುತ್ತಿದ್ದಾರೆ]ನನ್ನೆರಡೂ ಹಸ್ತಗಳನ್ನು ಮೇಲಕ್ಕೆತ್ತಿ ಆರ್ಭಟಿಸಿ ಹೇಳುತ್ತಿರುವೆನಾದರೂ ಯಾವಾತನೂ ನನ್ನ ಮಾತನ್ನು ಕೇಳುತ್ತಿಲ್ಲವಲ್ಲಾ!ಧರ್ಮ ಅಂದರೆ ಸದಾಚಾರದಿಂದಲೇ ಅರ್ಥ ಅಂದರೆ ವಸ್ತುಗಳು,ಸಂಪತ್ತು ಇತ್ಯಾದಿಗಳೂ ಕಾಮ ಅಂದರೆ ಬಯಕೆಗಳೂ ಫಲಿಸುತ್ತವೆ. ಹೀಗಿರುವಾಗ ಅಂತಹಾ ಒಳ್ಳೆಯ ಸದಾಚಾರ[ಧರ್ಮ]ವನ್ನು ಯಾಕೆ ಯಾರೂ ಅನುಸರಿಸುತ್ತಿಲ್ಲ?
ನ ಜಾತು ಕಾಮಾನ್ನಭಯಾನ್ನ ಲೋಭಾದ್ |
ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋ: ||
ಧರ್ಮೋ ನಿತ್ಯ: ಸುಖದು:ಖೇತ್ವ ನಿತ್ಯೇ |
ಜೀವೋ ನಿತ್ಯೋ ಹೇತುರಸ್ಯತ್ವ ನಿತ್ಯ: ||೫||
ಭಾವಾರ್ಥ:-ಯಾವತ್ತೂ ನಮ್ಮ ಆಕಾಂಕ್ಷೆಗಳ ಕಾರಣದಿಂದಾಗಿ ಸಂಕಷ್ಟಗಳು ಎದುರಾಗಬಹುದೆಂಬ ಭೀತಿಯಿಂದ,ದುಡಿಯದೆ ಲಾಭ ಪಡೆಯಬೇಕೆಂಬ ಹುಚ್ಚು ಹಂಬಲದ ಕಾರಣದಿಂದ ಅಥವಾ ಜೀವವನ್ನು ತ್ಯಾಗ ಮಾಡಬೇಕಾದ ಕ್ಷಣಗಳು ಬಂದೊದಗಿದರೂ ಧರ್ಮವನ್ನೆಂದೂ ಬಿಡಲೇ ಬಾರದು.ಧರ್ಮವು ಅವಿನಾಶಿ.ಸುಖ-ದು:ಖಗಳು ತಾತ್ಕಾಲಿಕವಾದುದು.ಆತ್ಮವು ಶಾಶ್ವತವಾದುದು.ಹುಟ್ಟು ಸಾವುಗಳು ಅಶಾಶ್ವತವಾದವು.
ಇಮಾಂ ಭಾರತ ಸಾವಿತ್ರೀಂ ಪ್ರತ:ರುತ್ಥಾಯ ಯ: ಪಠೇತ್ |
ಸ ಭಾರತ ಫಲಂ ಪ್ರಾಪ್ಯ ಪರಂ ಬ್ರಹ್ಮಾಭಿ ಗಚ್ಛತಿ ||೬||
ಭಾವಾರ್ಥ:-ಗಾಯತ್ರೀ ಮಂತ್ರ ಸಮಾನವಾದ ಈ ಭಾರತ ಸಾರ ಸರ್ವಸ್ವವನ್ನು ಅರ್ಥವನ್ನು ಅರಿತುಕೊಂಡು ಅನುದಿನವೂ ಪ್ರಾತ:ಕಾಲದಲ್ಲಿ ಎದ್ದು ಅಂತರ್ಬಹಿರ್ಶುದ್ಧನಾಗಿಪಠಿಸುವವನು ಸಮಗ್ರ ಭಾರತವನ್ನು ಪಾರಾಯಣ ಮಾಡಿದ ಫಲವನ್ನು ಪಡೆದು ಬ್ರಹ್ಮಲೋಕವನ್ನು ಸೇರಿಕೊಳ್ಳುವನು.
ಯೋ ಗೋ ಶತಂ ಕನಕ ಶೃಂಗಮಯಂ ದದಾತಿ |
ವಿಪ್ರಾಯ ವೇದ ವಿದುಷೇ ಚ ಬಹು ಶ್ರುತಾಯ ||
ಪುಣ್ಯಾಂ ಚ ಭಾರತ ಕಥಾಂ ಶೃಣುಯಚ್ಚ ನಿತ್ಯಂ |
ತುಲ್ಯಂ ಫಲಂ ಭವತಿ ತಸ್ಯ ಚ ತಸ್ಯಚೈವ ||೭||
ಭಾವಾರ್ಥ:-ಬಂಗಾರದ ಕವಚಗಳಿಂದ ಕೋಡುಗಳನ್ನು ಅಲಂಕರಿಸಿದ ನೂರು ಗೋವುಗಳನ್ನು ವೇದಾಧ್ಯಯನ ಸಂಪನ್ನರಾದ ವಿಪ್ರೋತ್ತಮರಿಗೆ ದಾನ ಮಾಡುವವ ಹಾಗೂ ಅನುದಿನವೂ ಪುಣ್ಯದಾಯಕವಾದ ಮಹಾಭಾರತದ ಕಥೆಯನ್ನು ಕೇಳುವವ ಸಮಾನವಾದ ಫಲವನ್ನು ಪಡೆಯುವರು.
*********************************************************************
|| ಇತಿ ಮಹಾಭಾರತ ಸಾರ ಸರ್ವಸ್ವಮ್ ||
|| ಈ ರೀತಿಯಾಗಿ ಮಹಾಭಾರತ ಸಾರ ಸರ್ವಸ್ವದ ಭಾವಾರ್ಥವಾಗಿದೆ. ||
*********************************************************************
-೨೪-
||ಪ್ರಾರ್ಥನಾ ಶ್ಲೋಕಮ್ ||
***********************
ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ |
ಸ್ತುತ್ಯಾ ನಿರ್ವಚನೀಯತಾಖಿಲಗುರೋ ದೂರೀಕೃತಾ ಯನ್ಮಯಾ ||
ವ್ಯಾಪಿತ್ವಂ ಚ ನಿರಾಕೃತಂ ಭಗವತೋ ಯತ್ತೀರ್ಥಯಾತ್ರಾದಿನಾ |
ಕ್ಷಂತವ್ಯಂ ಜಗದೀಶ ತದ್ವಿಕಲತಾ ದೋಷತ್ರಯಂ ಮತ್ಕೃತಮ್ ||
ಭಾವಾರ್ಥ:-ಎಲೈ ಭಗವಂತನೇ!ನಿರಾಕಾರನಾಗಿರುವ ನೀನು ಚಿಂತನೆಯ ಮೂಲಕ ನಿನಗೆ ಒಂದು ಆಕಾರವನ್ನು ಕಲ್ಪಿಸಿಕೊಂಡಿರುವೆ.ಸ್ತುತಿಗಳ ಮೂಲಕವಾಗಿ ನೀನು ಇದಮಿತ್ಥಂ ಎಂದು ನಿರ್ಣೈಸಿ ಹೇಳಲಶಕ್ಯವಾಗಿರುವವಸ್ತುಗಳ ತೋರಿಕೆಯ ಭಾವವನ್ನು ದೂರೀಕರಿಸಿದೆ.ತೀರ್ಥಯಾತ್ರೆಗಳ ಮೂಲಕವಾಗಿ ನಿನ್ನ ಸಮಗ್ರ ವ್ಯಾಪಕತ್ವವನ್ನು ನಿರಾಕರಿಸಿರುವೆ.ಹೇ!ಜಗದ್ಗುರುವೇ;ನನ್ನಿಂದಾಗಿರುವ ಈ ಮೂರು ಅವಗುಣಗಳನ್ನು ಮನ್ನಿಸುವಂತಹವನಾಗು.
*********************************************************************
|| ಇತಿ ಪ್ರಾರ್ಥನಾ ಶ್ಲೋಕಮ್ || || ಈ ರೀತಿಯಾಗಿ ಪ್ರಾರ್ಥನಾ ಶ್ಲೋಕಗಳ ಭಾವಾರ್ಥವಾಗಿದೆ.||
*********************************************************************
-೨೫-
|| ಶ್ರೀ ಪರಾಪೂಜಾ ಸ್ತೋತ್ರಮ್ ||
**************************
ಪೂರ್ಣಸ್ಯಾವಾಹನಂ ಕುತ್ರ ಸರ್ವಾಧಾರಸ್ಯ ಚಾಸನಮ್ |
ಸ್ವಚ್ಛಸ್ಯ ಪಾದ್ಯಮರ್ಘ್ಯಂ ಚ ಶುದ್ಧಸ್ಯಾಚಮನಂ ಕುತ: ||೧||
ಭಾವಾರ್ಥ:-ಸಮಗ್ರವೂ ಆಗಿರುವಾತಂಗೆ ಆವಾಹನೆ ಮಾಡಲು ಎಲ್ಲಿದೆ ನೆಲೆ? ಸಮಸ್ತಾಧಾರನಾಗಿರುವಾತಂಗೆ ಆಸನವನ್ನೆಲ್ಲಿ ಕಲ್ಪಿಸಲಿ?ನಿರ್ಮಲನಾಗಿರುವಾತಂಗೆ ಪಾದ್ಯ ಹಾಗೂ ಅರ್ಘ್ಯವನ್ನೆಂತು ಕೊಡಲಿ?ಪರಿಶುದ್ಧನಾಗಿರುವಾತಂಗೆ ಆಚಮನವನ್ನೆಂತು ನೀಡಲಿ?
ನಿರ್ಮಲಸ್ಯ ಕುತ: ಸ್ನಾನಂ ವಸ್ತ್ರಂ ವಿಶ್ವೋದರಸ್ಯ ಚ |
ನಿರಾಲಂಬಸ್ಯೋಪವೀತಂ ಪುಷ್ಪಂ ನಿರ್ವಾಸನಸ್ಯ ಚ ||೨||
ಭಾವಾರ್ಥ:-ಹೊಲಸಿಲ್ಲದೆ ಸ್ವಚ್ಛವಾಗಿರುವಾತಂಗೆ ಸ್ನಾನದ ಅಗತ್ಯವಾದರೂ ಏನಿದೆ?ಬ್ರಹ್ಮಾಂಡವನ್ನೇ ಧರಿಸಿರುವಾತಂಗೆ ವಸನದ ಅವಶ್ಯಕತೆಯಾದರೂ ಏನಿದೆ?ಆಧಾರವೇ ಇಲ್ಲದವನಿಗೆ ಜನಿವಾರದಿಂದೇನು ಪ್ರಯೋಜನ?ವಾಸನಾರಹಿತನಿಗೆ ಪುಷ್ಪಗಳಿಂದೇನು ಪ್ರಯೋಜನ?
ನಿರ್ಲೇಪಸ್ಯ ಕುತೋ ಗಂಧೋ ರಮ್ಯಸ್ಯಾಭರಣಂ ಕುತ: |
ನಿತ್ಯ ತೃಪ್ತಸ್ಯ ನೈವೇದ್ಯಸ್ತಾಂಬೂಲಂ ಚ ಕುತೋ ವಿಭೋ: ||೩||
ಭಾವಾರ್ಥ:-ಲೇಪರಹಿತನಾಗಿರುವಾತಂಗೆ ಗಂಧವನ್ನು ಲೇಪಿಸುವುದೆಂತು?ಯಾವಾತನು ಮನೋಹರನಾಗಿರುವನೋ ಅವನಿಗೆ ಆಭರಣಗಳಿಂದೇನು ಲಾಭ?ಅನುದಿನವೂ ತೃಪ್ತನಾಗಿರುವ ಪರಮಾತ್ಮಂಗೆ ನೈವೇದ್ಯ-ತಾಂಬೂಲಾದಿಗಳನ್ನು ಕೊಡುವುದಾದರೂ ಹೇಗೆ?
ಪ್ರದಕ್ಷಿಣಾಹ್ಯನಂತಸ್ಯ ಹ್ಯದ್ವಯಸ್ಯ ಕುತೋ ನತಿ: |
ವೇದವಾಕ್ಯೈರವೇದ್ಯಸ್ಯ ಕುತ: ಸ್ತೋತ್ರಂ ವಿಧೀಯತೇ ||೪||
ಭಾವಾರ್ಥ:-ಅಂತ್ಯವೇ ಇಲ್ಲದಾಗಿರುವಾತಂಗೆ ಪ್ರದಕ್ಷಿಣೆಯನ್ನು ಮಾಡುವುದಾರೂ ಎಂತು?ಎರಡಿಲ್ಲದ ಅಭೇಧನಿಗೆ ವಂದಿಸುವುದಾದರೂ ಹೇಗೆ?ವೇದ ಶಾಸ್ತ್ರಗಳಿಂದ ಹೊಂದಲಸಾಧ್ಯನಾಗಿರುವಾತನನ್ನು ಸ್ತುತಿಸುವುದಾದರೂ ಎಂತು?
ಸ್ವಯಂಪ್ರಕಾಶಮಾನಸ್ಯ ಕುತೋ ನಿರಾಜನಂ ವಿಭೋ: |
ಅಂತರ್ಬಹಿಶ್ಚ ಪೂರ್ಣಸ್ಯ ಕಥಮ್ ಉದ್ವಾಸನಂ ಭವೇತ್ ||೫||
ಭಾವಾರ್ಥ:-ಸ್ವಯಂಪ್ರಭೆಯುಳ್ಳಾತಂಗೆ ಮಂಗಳಾರತಿ ಎತ್ತುವುದಾದರೂ ಹೇಗೆ?ಒಳಗೂ ಹೊರಗೂ ಸಮಗ್ರವೇ ಆಗಿರುವಾತನನ್ನು ಬೀಳ್ಕೊಡುವುದಾರೂ ಎಂತು?
ಏವಮೇವ ಪರಾಪೂಜಾ ಸರ್ವಾವಸ್ತ್ಥಾಸು ಸರ್ವದಾ |
ಏಕಬುದ್ಧ್ಯಾತು ದೇವೇಶೇ ವಿಧೇಯಾ ಬ್ರಹ್ಮವಿತ್ತಮೈ: ||೬||
ಭಾವಾರ್ಥ:-ಈ ಪ್ರಕಾರವಾಗಿ ಅನುದಿನವೂ ಸಮಸ್ತ ಅವಸ್ಥೆಗಳಲ್ಲೂ ಉತ್ಕೃಷ್ಟರಾಗಿರುವ ಬ್ರಹ್ಮಜ್ಞಾನಿಗಳು ಒಂದೇ ಮನಸ್ಸಿನಿಂದ ದೇವಾಧಿದೇವನ ಪರಾಪೂಜೆಯನ್ನು ಮಾಡಬೇಕು.
*********************************************************************
|| ಇತಿ ಶ್ರೀ ಪರಾಪೂಜಾ ಸ್ತೋತ್ರಮ್ || || ಈ ತೆರನಾಗಿ ಶ್ರೀ ಪರಾಪೂಜಾ ಸ್ತೋತ್ರಗಳ ಭಾವಾರ್ಥವಾಗಿದೆ. ||
*********************************************************************
-೨೬-
|| ಬ್ರಹ್ಮ ಸ್ತೋತ್ರಮ್ ||
********************
ಓಮ್ ನಮಸ್ತೇ ಸತೇ ಸರ್ವಲೋಕಾಶ್ರಯಾಯ
ನಮಸ್ತೇ ಚಿತೇ ವಿಶ್ವರೂಪಾತ್ಮಕಾಯ |
ನಮೋsದ್ವೈತತತ್ವಾಯ ಮುಕ್ತಿಪ್ರದಾಯ
ನಮೋ ಬ್ರಹ್ಮಣೇ ವ್ಯಾಪಿನೇ ನಿರ್ಗುಣಾಯ ||೧||
ಭವಾರ್ಥ:-ಓಂ!ಸಮಸ್ತ ಲೋಕಗಳಿಗೂ ಆಶ್ರಯವಾಗಿರುವ ನೈಜ ಜ್ಞಾನಕ್ಕೆ ಪ್ರಣಾಮಗಳು. ಬ್ರಹ್ಮಾಂಡಸ್ವರೂಪವಾಗಿರುವ ಚೇತನಾರೂಪಕ್ಕೆ ಪ್ರಣಾಮಗಳು. ಮುಕ್ತಿದಾಯಕವಾಗಿರುವ ಅದ್ವೈತ ತತ್ವಕ್ಕಿದೋ ಪ್ರಣಾಮಗಳು. ಸರ್ವತ್ರ ವ್ಯಾಪಿಯಾಗಿರುವ ನಿರಾಕಾರ ಬ್ರಹ್ಮನಿಗೆ ಪ್ರಣಾಮಗಳು.
ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ
ತ್ವಮೇಕಂ ಜಗತ್ಕಾರಣಂ ವಿಶ್ವರೂಪಂ |
ತ್ವಮೇಕಂ ಜಗತ್ಕರ್ತೃಪಾತೃಪ್ರಹರ್ತೃ
ತ್ವಮೇಕಂ ಪರಂ ನಿಷ್ಕಲಂ ನಿರ್ವಿಕಲ್ಪಮ್ ||೨||
ಭಾವಾರ್ಥ:-ನೀನೋರ್ವನೇ ಭಕ್ತರಿಗೆ ಏಕಮಾತ್ರ ಆಶ್ರಯ ತಾಣವಾಗಿರುವವನು. ನೀನೋರ್ವನೇ ಅವರು ಬಯಸುವಂತಹಾ ಒಡವೆ. ನೀನೋರ್ವನೇ ಪ್ರಪಂಚಕ್ಕೆ ಏಕಮಾತ್ರ ನಿಮಿತ್ತನು ಮತ್ತು ಬ್ರಹ್ಮಾಂಡಸ್ವರೂಪವು. .
ಭಯಾನಾಂ ಭಯಂ ಭೀಷಣಂ ಭೀಷಣಾನಾಂ
ಗತಿ: ಪ್ರಾಣಿನಾಂ ಪಾವನಂ ಪಾವನಾನಾಮ್ |
ಮಹೋಚ್ಚೈ: ಪದಾನಾಂ ನಿಯಂತೃ ತ್ವಮೇಕಂ
ಪರೇಷಾಂ ಪರಂ ರಕ್ಷಕಂ ರಕ್ಷಕಾಣಾಮ್ ||೩||
ಭಾವಾರ್ಥ:-ಜೀವಿಗಳಿಗೆ ನೀನೇ ದಿಕ್ಕು.ಶುದ್ಧೀಕರಿಸುವ ಪದಾರ್ಥಗಳನ್ನು ದೋಷ ರಹಿತಗೊಳಿಸುವಾತನೂ ನೀನೇ. ಅಗ್ರಗಣ್ಯರನ್ನು ವಶದಲ್ಲಿರಿಸಿಕೊಳ್ಳುವವನೂ ನೀನೇ.ಅಗ್ರಗಣ್ಯರಲ್ಲಿ ಅಗ್ರಗಣ್ಯನು ನೀನು. ಪಾಲಕರನ್ನು ಪಾಲಿಸುವಾತನೂ ನೀನೇ.
ಪರೇಶ ಪ್ರಭೋ ಸರ್ವರೂಪಾವಿನಾಶಿನ್
ಅನಿರ್ದೇಶ್ಯ ಸರ್ವೇಂದ್ರಿಯಾಗಮ್ಯ ಸತ್ಯ |
ಅಚಿಂತ್ಯಾಕ್ಷರ ವ್ಯಾಪಕವ್ಯಕ್ತ ತತ್ವ
ಜಗದ್ವಾಸಕಾಧೀಶ ಪಾಯಾದಪಾಯಾತ್ ||೪||
ಭಾವಾರ್ಥ:-ಹೇ!ಪರಮಾಧೀಶನೇ,ಒಡೆಯನೇ,ಬ್ರಹ್ಮಾಂಡಸ್ವರೂಪನೇ,ನಾಶರಹಿತನೇ ಅಸ್ಪಷ್ಟನೇ, ಇಂದ್ರಿಯಗಳ ಮೂಲಕ ತಲಪಲು ಅಸಾಧ್ಯವಾದವನೇ, ಸತ್ಯರೂಪಿಯೇ, ಮನಸ್ಸಿಗೆ ನಿಲುಕದವನೇ, ನಾಶವಿಲ್ಲದವನೇ, ವಿಶಾಲವಾಗಿರುವವನೇ, ಅನುಭವ ವೇದ್ಯನೇ, ತತ್ವರೂಪಿಯೇ, ಜಗತ್ತಿಗೆ ಪ್ರಕಟವಾಗುವನೇ, ದೊರೆಯೂ ಆಗಿರುವ ಸ್ವಾಮಿಯೇ; ನಮ್ಮನ್ನು ಅಪಾಯಗಳಿಂದ ರಕ್ಷಿಸುವವನಾಗು.
ತದೇಕಂ ಸ್ಮರಾಮಸ್ತದೇಕಂ ಭಜಾಮ-
ಸ್ತದೇಕಂ ಜಗತ್ಸಾಕ್ಷಿರೂಪಂ ನಮಾಮ |
ಸದೇಕಂ ನಿಧಾನಂ ನಿರಾಲಂಬಮೀಶಂ
ಭವಾಂಭೋಧಿಪೋತಂ ಶರಣ್ಯಂ ವ್ರಜಾಮ: ||೫||
ಭಾವಾರ್ಥ:-ಆ ಏಕಾಕಿಯನ್ನು ಸ್ಮರಿಸುವೆ.ಅದನ್ನು ಸ್ತುತಿಸುವೆ.ಆ ಏಕಾಕಿಯಾಗಿರುವ ಜಗತ್ತಿನ ಸಾಕ್ಷಿರೂಪಕ್ಕೆ ನಮಿಸುತ್ತೇನೆ. ಸತ್ಯ ಸ್ವರೂಪಿಯೂ,ಏಕಾಕಿಯೂ,ಆಶ್ರಯನೂ,ಆಧಾರರಹಿತನೂ,ಸಾಂಸಾರಿಕ ಸಾಗರವನ್ನು ದಾಟಲು ಹರಿಗೋಲಿನಂತಿರುವಾತನೂ,ಸಂರಕ್ಷಿಸಲು ತಕ್ಕವನೂ ಆಗಿರುವ ಆ ಪರಬ್ರಹ್ಮನಲ್ಲಿ ನಾನು ಶರಣಾಗುವೆನು.
*********************************************************************
|| ಇತಿ ಬ್ರಹ್ಮ ಸ್ತೋತ್ರಮ್ || || ಈ ರೀತಿಯಾಗಿ ಬ್ರಹ್ಮ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೨೭-
**************************
ಪೂರ್ಣಸ್ಯಾವಾಹನಂ ಕುತ್ರ ಸರ್ವಾಧಾರಸ್ಯ ಚಾಸನಮ್ |
ಸ್ವಚ್ಛಸ್ಯ ಪಾದ್ಯಮರ್ಘ್ಯಂ ಚ ಶುದ್ಧಸ್ಯಾಚಮನಂ ಕುತ: ||೧||
ಭಾವಾರ್ಥ:-ಸಮಗ್ರವೂ ಆಗಿರುವಾತಂಗೆ ಆವಾಹನೆ ಮಾಡಲು ಎಲ್ಲಿದೆ ನೆಲೆ? ಸಮಸ್ತಾಧಾರನಾಗಿರುವಾತಂಗೆ ಆಸನವನ್ನೆಲ್ಲಿ ಕಲ್ಪಿಸಲಿ?ನಿರ್ಮಲನಾಗಿರುವಾತಂಗೆ ಪಾದ್ಯ ಹಾಗೂ ಅರ್ಘ್ಯವನ್ನೆಂತು ಕೊಡಲಿ?ಪರಿಶುದ್ಧನಾಗಿರುವಾತಂಗೆ ಆಚಮನವನ್ನೆಂತು ನೀಡಲಿ?
ನಿರ್ಮಲಸ್ಯ ಕುತ: ಸ್ನಾನಂ ವಸ್ತ್ರಂ ವಿಶ್ವೋದರಸ್ಯ ಚ |
ನಿರಾಲಂಬಸ್ಯೋಪವೀತಂ ಪುಷ್ಪಂ ನಿರ್ವಾಸನಸ್ಯ ಚ ||೨||
ಭಾವಾರ್ಥ:-ಹೊಲಸಿಲ್ಲದೆ ಸ್ವಚ್ಛವಾಗಿರುವಾತಂಗೆ ಸ್ನಾನದ ಅಗತ್ಯವಾದರೂ ಏನಿದೆ?ಬ್ರಹ್ಮಾಂಡವನ್ನೇ ಧರಿಸಿರುವಾತಂಗೆ ವಸನದ ಅವಶ್ಯಕತೆಯಾದರೂ ಏನಿದೆ?ಆಧಾರವೇ ಇಲ್ಲದವನಿಗೆ ಜನಿವಾರದಿಂದೇನು ಪ್ರಯೋಜನ?ವಾಸನಾರಹಿತನಿಗೆ ಪುಷ್ಪಗಳಿಂದೇನು ಪ್ರಯೋಜನ?
ನಿರ್ಲೇಪಸ್ಯ ಕುತೋ ಗಂಧೋ ರಮ್ಯಸ್ಯಾಭರಣಂ ಕುತ: |
ನಿತ್ಯ ತೃಪ್ತಸ್ಯ ನೈವೇದ್ಯಸ್ತಾಂಬೂಲಂ ಚ ಕುತೋ ವಿಭೋ: ||೩||
ಭಾವಾರ್ಥ:-ಲೇಪರಹಿತನಾಗಿರುವಾತಂಗೆ ಗಂಧವನ್ನು ಲೇಪಿಸುವುದೆಂತು?ಯಾವಾತನು ಮನೋಹರನಾಗಿರುವನೋ ಅವನಿಗೆ ಆಭರಣಗಳಿಂದೇನು ಲಾಭ?ಅನುದಿನವೂ ತೃಪ್ತನಾಗಿರುವ ಪರಮಾತ್ಮಂಗೆ ನೈವೇದ್ಯ-ತಾಂಬೂಲಾದಿಗಳನ್ನು ಕೊಡುವುದಾದರೂ ಹೇಗೆ?
ಪ್ರದಕ್ಷಿಣಾಹ್ಯನಂತಸ್ಯ ಹ್ಯದ್ವಯಸ್ಯ ಕುತೋ ನತಿ: |
ವೇದವಾಕ್ಯೈರವೇದ್ಯಸ್ಯ ಕುತ: ಸ್ತೋತ್ರಂ ವಿಧೀಯತೇ ||೪||
ಭಾವಾರ್ಥ:-ಅಂತ್ಯವೇ ಇಲ್ಲದಾಗಿರುವಾತಂಗೆ ಪ್ರದಕ್ಷಿಣೆಯನ್ನು ಮಾಡುವುದಾರೂ ಎಂತು?ಎರಡಿಲ್ಲದ ಅಭೇಧನಿಗೆ ವಂದಿಸುವುದಾದರೂ ಹೇಗೆ?ವೇದ ಶಾಸ್ತ್ರಗಳಿಂದ ಹೊಂದಲಸಾಧ್ಯನಾಗಿರುವಾತನನ್ನು ಸ್ತುತಿಸುವುದಾದರೂ ಎಂತು?
ಸ್ವಯಂಪ್ರಕಾಶಮಾನಸ್ಯ ಕುತೋ ನಿರಾಜನಂ ವಿಭೋ: |
ಅಂತರ್ಬಹಿಶ್ಚ ಪೂರ್ಣಸ್ಯ ಕಥಮ್ ಉದ್ವಾಸನಂ ಭವೇತ್ ||೫||
ಭಾವಾರ್ಥ:-ಸ್ವಯಂಪ್ರಭೆಯುಳ್ಳಾತಂಗೆ ಮಂಗಳಾರತಿ ಎತ್ತುವುದಾದರೂ ಹೇಗೆ?ಒಳಗೂ ಹೊರಗೂ ಸಮಗ್ರವೇ ಆಗಿರುವಾತನನ್ನು ಬೀಳ್ಕೊಡುವುದಾರೂ ಎಂತು?
ಏವಮೇವ ಪರಾಪೂಜಾ ಸರ್ವಾವಸ್ತ್ಥಾಸು ಸರ್ವದಾ |
ಏಕಬುದ್ಧ್ಯಾತು ದೇವೇಶೇ ವಿಧೇಯಾ ಬ್ರಹ್ಮವಿತ್ತಮೈ: ||೬||
ಭಾವಾರ್ಥ:-ಈ ಪ್ರಕಾರವಾಗಿ ಅನುದಿನವೂ ಸಮಸ್ತ ಅವಸ್ಥೆಗಳಲ್ಲೂ ಉತ್ಕೃಷ್ಟರಾಗಿರುವ ಬ್ರಹ್ಮಜ್ಞಾನಿಗಳು ಒಂದೇ ಮನಸ್ಸಿನಿಂದ ದೇವಾಧಿದೇವನ ಪರಾಪೂಜೆಯನ್ನು ಮಾಡಬೇಕು.
*********************************************************************
|| ಇತಿ ಶ್ರೀ ಪರಾಪೂಜಾ ಸ್ತೋತ್ರಮ್ || || ಈ ತೆರನಾಗಿ ಶ್ರೀ ಪರಾಪೂಜಾ ಸ್ತೋತ್ರಗಳ ಭಾವಾರ್ಥವಾಗಿದೆ. ||
*********************************************************************
-೨೬-
|| ಬ್ರಹ್ಮ ಸ್ತೋತ್ರಮ್ ||
********************
ಓಮ್ ನಮಸ್ತೇ ಸತೇ ಸರ್ವಲೋಕಾಶ್ರಯಾಯ
ನಮಸ್ತೇ ಚಿತೇ ವಿಶ್ವರೂಪಾತ್ಮಕಾಯ |
ನಮೋsದ್ವೈತತತ್ವಾಯ ಮುಕ್ತಿಪ್ರದಾಯ
ನಮೋ ಬ್ರಹ್ಮಣೇ ವ್ಯಾಪಿನೇ ನಿರ್ಗುಣಾಯ ||೧||
ಭವಾರ್ಥ:-ಓಂ!ಸಮಸ್ತ ಲೋಕಗಳಿಗೂ ಆಶ್ರಯವಾಗಿರುವ ನೈಜ ಜ್ಞಾನಕ್ಕೆ ಪ್ರಣಾಮಗಳು. ಬ್ರಹ್ಮಾಂಡಸ್ವರೂಪವಾಗಿರುವ ಚೇತನಾರೂಪಕ್ಕೆ ಪ್ರಣಾಮಗಳು. ಮುಕ್ತಿದಾಯಕವಾಗಿರುವ ಅದ್ವೈತ ತತ್ವಕ್ಕಿದೋ ಪ್ರಣಾಮಗಳು. ಸರ್ವತ್ರ ವ್ಯಾಪಿಯಾಗಿರುವ ನಿರಾಕಾರ ಬ್ರಹ್ಮನಿಗೆ ಪ್ರಣಾಮಗಳು.
ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ
ತ್ವಮೇಕಂ ಜಗತ್ಕಾರಣಂ ವಿಶ್ವರೂಪಂ |
ತ್ವಮೇಕಂ ಜಗತ್ಕರ್ತೃಪಾತೃಪ್ರಹರ್ತೃ
ತ್ವಮೇಕಂ ಪರಂ ನಿಷ್ಕಲಂ ನಿರ್ವಿಕಲ್ಪಮ್ ||೨||
ಭಾವಾರ್ಥ:-ನೀನೋರ್ವನೇ ಭಕ್ತರಿಗೆ ಏಕಮಾತ್ರ ಆಶ್ರಯ ತಾಣವಾಗಿರುವವನು. ನೀನೋರ್ವನೇ ಅವರು ಬಯಸುವಂತಹಾ ಒಡವೆ. ನೀನೋರ್ವನೇ ಪ್ರಪಂಚಕ್ಕೆ ಏಕಮಾತ್ರ ನಿಮಿತ್ತನು ಮತ್ತು ಬ್ರಹ್ಮಾಂಡಸ್ವರೂಪವು. .
ಭಯಾನಾಂ ಭಯಂ ಭೀಷಣಂ ಭೀಷಣಾನಾಂ
ಗತಿ: ಪ್ರಾಣಿನಾಂ ಪಾವನಂ ಪಾವನಾನಾಮ್ |
ಮಹೋಚ್ಚೈ: ಪದಾನಾಂ ನಿಯಂತೃ ತ್ವಮೇಕಂ
ಪರೇಷಾಂ ಪರಂ ರಕ್ಷಕಂ ರಕ್ಷಕಾಣಾಮ್ ||೩||
ಭಾವಾರ್ಥ:-ಜೀವಿಗಳಿಗೆ ನೀನೇ ದಿಕ್ಕು.ಶುದ್ಧೀಕರಿಸುವ ಪದಾರ್ಥಗಳನ್ನು ದೋಷ ರಹಿತಗೊಳಿಸುವಾತನೂ ನೀನೇ. ಅಗ್ರಗಣ್ಯರನ್ನು ವಶದಲ್ಲಿರಿಸಿಕೊಳ್ಳುವವನೂ ನೀನೇ.ಅಗ್ರಗಣ್ಯರಲ್ಲಿ ಅಗ್ರಗಣ್ಯನು ನೀನು. ಪಾಲಕರನ್ನು ಪಾಲಿಸುವಾತನೂ ನೀನೇ.
ಪರೇಶ ಪ್ರಭೋ ಸರ್ವರೂಪಾವಿನಾಶಿನ್
ಅನಿರ್ದೇಶ್ಯ ಸರ್ವೇಂದ್ರಿಯಾಗಮ್ಯ ಸತ್ಯ |
ಅಚಿಂತ್ಯಾಕ್ಷರ ವ್ಯಾಪಕವ್ಯಕ್ತ ತತ್ವ
ಜಗದ್ವಾಸಕಾಧೀಶ ಪಾಯಾದಪಾಯಾತ್ ||೪||
ಭಾವಾರ್ಥ:-ಹೇ!ಪರಮಾಧೀಶನೇ,ಒಡೆಯನೇ,ಬ್ರಹ್ಮಾಂಡಸ್ವರೂಪನೇ,ನಾಶರಹಿತನೇ ಅಸ್ಪಷ್ಟನೇ, ಇಂದ್ರಿಯಗಳ ಮೂಲಕ ತಲಪಲು ಅಸಾಧ್ಯವಾದವನೇ, ಸತ್ಯರೂಪಿಯೇ, ಮನಸ್ಸಿಗೆ ನಿಲುಕದವನೇ, ನಾಶವಿಲ್ಲದವನೇ, ವಿಶಾಲವಾಗಿರುವವನೇ, ಅನುಭವ ವೇದ್ಯನೇ, ತತ್ವರೂಪಿಯೇ, ಜಗತ್ತಿಗೆ ಪ್ರಕಟವಾಗುವನೇ, ದೊರೆಯೂ ಆಗಿರುವ ಸ್ವಾಮಿಯೇ; ನಮ್ಮನ್ನು ಅಪಾಯಗಳಿಂದ ರಕ್ಷಿಸುವವನಾಗು.
ತದೇಕಂ ಸ್ಮರಾಮಸ್ತದೇಕಂ ಭಜಾಮ-
ಸ್ತದೇಕಂ ಜಗತ್ಸಾಕ್ಷಿರೂಪಂ ನಮಾಮ |
ಸದೇಕಂ ನಿಧಾನಂ ನಿರಾಲಂಬಮೀಶಂ
ಭವಾಂಭೋಧಿಪೋತಂ ಶರಣ್ಯಂ ವ್ರಜಾಮ: ||೫||
ಭಾವಾರ್ಥ:-ಆ ಏಕಾಕಿಯನ್ನು ಸ್ಮರಿಸುವೆ.ಅದನ್ನು ಸ್ತುತಿಸುವೆ.ಆ ಏಕಾಕಿಯಾಗಿರುವ ಜಗತ್ತಿನ ಸಾಕ್ಷಿರೂಪಕ್ಕೆ ನಮಿಸುತ್ತೇನೆ. ಸತ್ಯ ಸ್ವರೂಪಿಯೂ,ಏಕಾಕಿಯೂ,ಆಶ್ರಯನೂ,ಆಧಾರರಹಿತನೂ,ಸಾಂಸಾರಿಕ ಸಾಗರವನ್ನು ದಾಟಲು ಹರಿಗೋಲಿನಂತಿರುವಾತನೂ,ಸಂರಕ್ಷಿಸಲು ತಕ್ಕವನೂ ಆಗಿರುವ ಆ ಪರಬ್ರಹ್ಮನಲ್ಲಿ ನಾನು ಶರಣಾಗುವೆನು.
*********************************************************************
|| ಇತಿ ಬ್ರಹ್ಮ ಸ್ತೋತ್ರಮ್ || || ಈ ರೀತಿಯಾಗಿ ಬ್ರಹ್ಮ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೨೭-
No comments:
Post a Comment