Thursday, 30 January 2014

ಸ್ತೋತ್ರ ಮಂದಾರ

         ಶ್ರೀಗಣೇಶ ಸ್ತೊತ್ರಗಳು
        ***************
                  -೧-
ಶ್ರೀ ಗಣೇಶ ಮಂಗಲಾಷ್ಟಕ
**************************
ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ|
ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ ||

ನಾಗ ಯಜ್ಞೋಪವೀತಾಯ ನತ ವಿಘ್ನ ವಿನಾಶಿನೇ |
ನಂದ್ಯಾದಿ ಗಣನಾಥಾಯ ನಾಯಕಾಯಾಸ್ತು ಮಂಗಳಂ ||

ಇಭ ವಕ್ತ್ರಾಯ ಚ ಇಂದ್ರಾದಿ ವಂದಿತಾಯ ಚಿದಾತ್ಮನೇ |
ಈಶಾನ ಪ್ರೇಮ ಪಾತ್ರಾಯ ಚೇಷ್ಟದಾಯಾಸ್ತು ಮಂಗಳಂ ||

ಸುಮುಖಾಯ ಸುಶುಂಡಾಗ್ರೋ ಕ್ಷಿಪ್ತಾಮೃತ ಘಟಾಯಚ |
ಸುರ ಬೃಂದಕ ಸೇವ್ಯಾಯ ಸುಖದಾಯಾಸ್ತು ಮಂಗಳಂ ||

ಚತುರ್ಭುಜಾಯ ಚಂದ್ರಾರ್ಧ ವಿಲಸ್ಮನ್ತಕಾಯಚ |
ಚರಣಾನನ ತಾನಂತ ತಾರಣಾಯಾಸ್ತು ಮಂಗಳಂ ||

ವಕ್ರತುಂಡಾಯ ವಟವೇ ವಂದ್ಯಾಯ ವರದಾಯಚ |
ವಿರೂಪಾಕ್ಷ ಸುತಾಯಾಸ್ತು ವಿಘ್ನನಾಶಾಯ ಮಂಗಳಂ ||

ಪ್ರಮೋದಾ ಮೋದರೂಪಾಯ ಸಿಧ್ಧಿ ವಿಜ್ಞಾನ ರೂಪಿನೇ |
ಪ್ರಕೃಷ್ಟ ಪಾಪ ನಾಶಾಯ ಫಲದಾಯಾಸ್ತು ಮಂಗಳಂ ||

ಮಂಗಳಂ ಗಣನಾಥಾಯಾ ಮಂಗಳಂ ಹರ ಸೂನವೇ |
ಮಂಗಳಂ ವಿಘ್ನರಾಜಾಯ ವಿಘ್ನ ಹರೇಸ್ತು ಮಂಗಳಂ ||

ಶ್ಲೋಕಾಷ್ಟಕಮಿದಂ ಪುಣ್ಯಂ ಮಂಗಳ ಪ್ರದಮಾಚರೇತ್ |
ಪಠಿತವ್ಯಂ ಪ್ರಯತ್ನೇನ ಸರ್ವ ವಿಘ್ನ ನಿವೃತ್ತಯೇ ||

ಭಾವಾರ್ಥ:-ಗಜಾನನನೂ,ಬಂಗಾರದ ವರ್ಣದವನೂ,ಸಹಜಸ್ವರೂಪುನೂ,ಸದಾತ್ಮಸ್ವರೂಪಿಯೂ,ಗೌರೀದೇವಿಯ ಪ್ರೀತಿಯ ಮಗನೂ ಆಗಿರುವ ಗಣೇಶನಿಗೆ ಮಂಗಲವಾಗಲಿ.ಸರ್ಪವನ್ನು ಯಜ್ಞೋಪವೀತವನ್ನಾಗಿ ಧರಿಸಿದವನೇ ಸಮಸ್ತ ವಿಘ್ನಗಳ ನಾಶಕನೇ ನಂದಿಯೇ ಆದಿಯಾದ ಗಣಗಳನಾಯಕನಾಗಿರುವವನಿಗೆ ಮಂಗಲವಾಗಲಿ.ಗಜಮುಖನೂ,ಇಂದ್ರಾದಿಗಳಿಂದ ವಂದಿಸಲ್ಪಡುವವನೂ, ಚಿದಾತ್ಮಸ್ವರೂಪನೂ,ಈಶ್ವರನ ಪ್ರೇಮ ಪಾತ್ರನೂ,ಹಾವಭಾವಗಳನ್ನು ಕರುಣಿಸುವವನೂ ಆಗಿರುವವಗೆ ಮಂಗಲವಾಗಲಿ.ಸುಂದರವಾದ ಮೊಗದವನೂ ಮುಖ್ಯವಾಗಿ ಆನೆಯಸೊಂಡಿಲನನ್ನು ಹೊಂದಿರುವವನೂ, ಅಮೃತಪಾತ್ರೆಯಿಂದ ಅಮೃತವನ್ನು ಚೆಲ್ಲುವವನೂ,ಸುರ ಸಮೂಹದಿಂದ ಸೇವೆಯನ್ನು ಸ್ವೀಕರಿಸುವವನೂ, ಸುಖವನು ಕರುಣಿಸುವವನೂ ಆಗಿರುವವಗೆ ಮಂಗಲವಾಗಲಿ.ಓರೆಯಾದ ಸೊಂಡಿಲಿನಿಂದ ಕೂಡಿರುವವನೂ,ಬ್ರಹ್ಮಚಾರಿಯೂ,ಸಕಲರ ವಂದನೆಗೆ ಪಾತ್ರನಾಗುವವನೂ ವಿರೂಪಾಕ್ಷನ ತನಯನೂ ಆಗಿರುವ ವಿಘ್ನ ವಿನಾಶಕನಿಗೆ ಮಂಗಲವಾಗಲಿ. ಸಂತಸಪ್ರದಾಯಕನೂ ಸಂತಸರೂಪನೂ ಸಿದ್ಧಿ ವಿದ್ಯಾ ಜ್ಞಾನ ಸ್ವರೂಪನೂ,ಪ್ರಧಾನವಾಗಿ ಸರ್ವ ಪಾಪ ವಿನಾಶಕನೂ ಆಗಿ ಉತ್ತಮ ಫಲಗಳನ್ನು ಕರುಣಿಸುವವಗೆ ಮಂಗಲವಾಗಲಿ.ಗಣಗಳ ಒಡೆಯನೇ ಮಂಗಲವು.ಹರನ ಪುತ್ರನೇ ಮಂಗಲವು. ವಿಘ್ನಗಳ ಅರಸನೇ ಮಂಗಲವು.ವಿಘ್ನಗಳ ಪರಿಸುವವನೇ ಮಂಗಲವು. ಈ ಅಷ್ಟಕ ಶ್ಲೋಕಗಳು ಪುಣ್ಯದಾಯಕವೂ.ಮಂಗಲಪ್ರದವಾಗಿಯೂ ಇದ್ದು ಇವುಗಳನ್ನು ಪ್ರಯತ್ನ ಪೂರ್ವಕ ಪಠಿಸುವವರು ಸಮಸ್ತ ವಿಘ್ನಗಳಿಂದ ನಿವೃತ್ತಿ ಹೊಂದುವರು.
                          || ಭದ್ರಮ್ ಶುಭಮ್ ಮಂಗಲಮ್ ||
++++++++++++++++++++++++++++++++++++++++++++++++++++++++++++++++++++++++                                     || ಇತಿ ಶ್ರೀ ಗಣೇಶ ಮಂಗಲಾಷ್ಟಕಮ್  ||     
                  ||   ಈ ರೀತಿಯಾಗಿ ಶ್ರೀ ಗಣೇಶ ಮಂಗಲಾಷ್ಟಕಂಗಳ ಭಾವಾರ್ಥವು ||
*********************************************************************************           -೨-
ಸಂತಾನ ಗಣಪತಿ ಸ್ತುತಿ
===============

ನಮೋಸ್ತು ಗಣನಾಥಾಯ ಸಿಧ್ಧಿ ಬುಧ್ಧಿಯುತಾಯ ಚ
ಸರ್ವ ಪ್ರದಾಯ ದೇವಾಯ ಪುತ್ರ ವೃಧ್ಧಿ ಪ್ರದಾಯಕ ||

ಗುರೂದರಾಯ ಗುರುವೇ ಗೋಪ್ತ್ರೇ ಗುಹ್ಯ ಸಿತಾತ ತೇ
ಗೋಪ್ತಾಯ ಗೋಪ್ತಶೇಷ ಭುವನಾಯ ಸಿದಾತ್ಮನೇ ||

ವಿಶ್ವಮೂಲಾಯ ಭವ್ಯಾಯ ವಿಶ್ವಸೃಷ್ಠಿ ಕರಾಯತೇ
ನಮೋ ನಮಸ್ತೇ ಸತ್ಯಾಯ ಸತ್ಯ ಪೂರ್ಣಾಯ ಶುಂಡಿನೇ ||

ಏಕದಂತಾಯ ಶುಧ್ಧಾಯ ಸುಮುಖಾಯ ನಮೋನಮ:
ಪ್ರಸನ್ನ ಜನಪಾಲಾಯ ಪ್ರಣತಾರ್ಥಿ ವಿನಾಶಿನೇ ||

ಶರಣಂ ಭವ ದೇವೇಶ ಸಂತತಿಂ ಸುಧೃಡಾಂ ಕುರು
ಭವಿಷ್ಯಂತಿ ಚ ಯೇ ಪುತ್ರಾ: ಮತ್ಕುಲೇ ಗಣ ನಾಯಕ: ||

ತೇ ಸರ್ವೇ ತವ ಪೂಜಾರ್ಥಂ ನಿರತಾ: ಸ್ಯು: ವರೋಮತ:
ಪುತ್ರ ಪ್ರದಮಿದಂ ಸ್ತೋತ್ರಂ ಸರ್ವ ಸಿಧ್ಧಿಪ್ರದಾಯಕಂ || 

ಭಾವಾರ್ಥ:-ಸಿದ್ಧಿ ಬುದ್ಧಿಯುಕ್ತನಾಗಿರುವ ಸಮಸ್ತವನ್ನೂ ದಯಪಾಲಿಸುವವನೂ,ದೇವನೂ, ಪುತ್ರ ಸಂತಾನ ವೃದ್ಧಿಯನ್ನು ಕರುಣಿಸುವವನೂ ಲಂಬೋಧರನೂ ಆಗಿರುವ ದೇವನೇ ನಿನಗೆ ನಮನಗಳು.ನಾನು ನಿನಗೆ ಶರಣಾಗಿದ್ದೇನೆ. ನನಗೆ ಧೃಢವಾದ ಸಂತತಿಯನ್ನು ಕರುಣಿಸು. ನನ್ನ ವಂಶದಲ್ಲಿ ಜನಿಸುವ ಪುತ್ರ ಸಂತತಿ ನಿನ್ನ ಆರಾಧನೆಯಲ್ಲಿ ಸದಾ ನಿರತರಾಗಿರುವಂತೆ ಕರುಣಿಸುವಂತವನಾಗು.
                                          | | ಶುಭಮ್ ಭೂಯಾತ್ ||
********************************************************************************* || ಇತಿ ಸಂತಾನ ಗಣಪತಿ ಸ್ತುತಿ ||   ||   ಈ ರೀತಿಯಾಗಿ ಸಂತಾನ ಗಣಪತಿ ಸ್ತುತಿಗಳ ಭಾವಾರ್ಥವು ||
*********************************************************************************                 -೩-
ಉತ್ಸಾಹ ವೃಧ್ಧಿ ಗಣಪತಿ ಸ್ತೋತ್ರ
===================
ಪ್ರಾತ: ಸ್ಮರಾಮಿ ಗಣನಾಥ ಮನಾಥ ಬಂಧುಂ
ಸಿಂಧೂರ ಪೂರ ಪರಿಶೋಭಿತ ಗಂಡಯುಗ್ಮಂ ||
ಉಧ್ಧಂಡ ವಿಘ್ನ ಪರಿಖಂಡನ ಚಂಡ ದಂಡಂ 
ಅಖಂಡಲಾದಿ ಸುರನಾಯಕ ಬೃಂದ ವಂದ್ಯಂ   ||೧||,

ಪ್ರಾತರ್ನಮಾಮಿ ಚತುರಾನನ ವಂದ್ಯಮಾನಂ
ಇಚ್ಚಾನುಕೂಲ ಮಖಿಲಂ ಚ ವರಂ ದದಾನಂ ||
ತಂ ತು ದಿಲಂ ದ್ವಿರಸನಾಧಿಪ ಯಜ್ಞ ಸೂತ್ರಂ
ಪುತ್ರಂ ವಿಲಾಸಚತುರಂ ಶಿವಯೋ: ಶಿವಾಯ   ||೨||

ಪ್ರಾತರ್ಭಜಾಮ್ಯಭಯದಂ ಖಲು ಭಕ್ತ ಶೋಕ
ದಾವಾನಲಂ ಗುಣವಿಭುಂ ವರಕುಂಜ ರಾಸ್ಯಂ ||
ಅಜ್ಞಾನಕಾನನ ವಿನಾಶನ ಹವ್ಯವಾಹಂ
ಉತ್ಸಾಹ ವರ್ಧನಮಹಂ ಸುತಂ ಈಶ್ವರಸ್ಯ ||

ಶ್ಲೋಕ ತ್ರಯಮಿದಂ ಪುಣ್ಯ ಸದಾ ಸಾಮ್ರಾಜ್ಯ ದಾಯಕಂ
ಪ್ರಾತರುತ್ಥಾಯ ಸತತಂ ಯ: ಪಠೇತ್ಪ್ರಯತ: ಪುಮಾನ್ ||

ಭಾವಾರ್ಥ:-ದೇವಗಣಗಳ ಒಡೆಯನೂ, ಅನಾಥ ಬಂಧುವೂ, ಅಧಿಕವಾದ ಸಿಂಧೂರದಿಂದ  ಯಾವತ್ತೂ ಆವರಿಸಿರುವ ಎರಡೂ ಕೆನ್ನೆಗಳಿಂದ ಅಲಂಕೃತನಾಗಿರುವವನೂ, ವಿಘ್ನವಿನಾಶಕನೂ, ಇಂದ್ರಾದಿ ದೇವತೆಗಳಿಂದ ವಂದಿಸಲ್ಪಡುವವನೂ, ಬ್ರಹ್ಮನಿಂದ ವಂದನೆಗಳನ್ನು ಸ್ವೀಕರಿಸುತ್ತಿರುವವನೂ. ಇಷ್ಟಾರ್ಥದಾಯಕನೂ, ವರವನ್ನು ಕರುಣಿಸುವವನೂ, ವಿಲಾಸ ಚತುರನಾಗಿರುವ ಶಿವನ ಪುತ್ರನೂ, ಅಭಯ ಪ್ರದಾಯಕನೂ, ನಿಶ್ಚಯವಾಗಿಯೂ ಭಕ್ತರ ಶೋಕವೆಂಬ ದಾವಾಗ್ನಿಯನ್ನು ಪರಿಹರಿಸುವ ಶ್ರೇಷ್ಟವಾದ ವರದಾಯಕನೂ ತಾನಾಗಿ ಅಜ್ಞಾನವೆಂಬ ಕಾಡನ್ನು ವಿನಾಶಗೊಳಿಸುವ ಅಗ್ನಿ ಸ್ವರೂಪನೂ ಉತ್ಸಾಹವನ್ನು ವರ್ಧಿಸುವವನೂ ಈಶ್ವರನ ಸುತನೂ ಆಗಿರುವ ಮಹಾಗಣಪತಿಯನ್ನು ಉದಯ ಕಾಲದಲ್ಲಿ ಭಜಿಸುತ್ತೇನೆ.ಪುಣ್ಯ ಪ್ರದವಾಗಿರುವಂತಹಾ ಈ ಮೂರು ಶ್ಲೋಕಗಳನ್ನು  ಸದಾ ಉದಯಕಾಲದಲ್ಲಿ ಯಾರು ಪ್ರಯತ್ನ ಪೂರ್ವಕವಾಗಿ ಪಠಿಸುತ್ತಾರೋ ಅವರು ಸತತವಾಗಿ ಸಕಲ ಸಾಮ್ರಾಜ್ಯವನ್ನು ಪಡೆಯುವರು.

*********************************************************************************           ||  ಇತಿ ಶ್ರೀ ಉತ್ಸಾಹ ವೃಧ್ಧಿ ಗಣಪತಿ ಸ್ತೋತ್ರಮ್ ||    
         || ಈ ರೀತಿಯಾಗಿ ಶ್ರೀ ಉತ್ಸಾಹ ವೃಧ್ಧಿ ಗಣಪತಿ ಸ್ತೋತ್ರಗಳ ಭಾವಾರ್ಥವು  ||
*********************************************************************************
                           -೪-
|| ಶ್ರೀಮಹಾಗಣೇಶ ಪಂಚರತ್ನ ಸ್ತೋತ್ರಮ್  ||
**************************************
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಕಂ ವಿಲಾಸಿ ಲೋಕ ರಕ್ಷಕಂ |
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ 
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್  ||೧||

ಭಾವಾರ್ಥ:-ಮಂದಹಾಸದಿಂದ ಕೂಡಿದವನಾಗಿ ಮೋದಕವನ್ನು ಕೈಯಲ್ಲಿ  ಧರಿಸಿರುವ,ಸದಾ ಮೋಕ್ಕ್ಷವನ್ನು ಕರುಣಿಸುವುದರಲ್ಲಿ  ನಿರತನಾಗಿರುವ,ಶಿರದಲ್ಲಿ ಚಂದ್ರನನ್ನು ಆಭರಣೋಪಾದಿಯಲ್ಲಿ  ಧರಿಸಿರುವ,ಭಕ್ತಿ ವಿಲಾಸದಲ್ಲಿ ತತ್ಪರರಾದವರನ್ನು ತನ್ನ  ಲೀಲಾಮಾತ್ರದಿಂದಲೇ ಪೊರೆಯುವ,ಅನಾಥರ ಏಕಮಾತ್ರ  ದಿಕ್ಕಾದ,ಲೋಕ ಕಂಠಕನಾದ ಇಭಾಸುರ ಸಂಹಾರಿಯಾದ,ಶರಣು ಹೊಕ್ಕವರ  ಅಶುಭಗಳನ್ನು ತ್ವರಿತವಾಗಿ ನಾಶಗೊಳಿಸುವ ಆ ಸಿದ್ಧಿವಿನಾಯಕನಿಗೆ  ನಾನು ನಮಸ್ಕರಿಸುತ್ತೇನೆ.

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮಸ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ 
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್  ||೨||

ಭಾವಾರ್ಥ:-ದುರಹಂಕಾರಿಗಳಿಗೆ ಅತಿಭೀಕರನೂ,ಆಗತಾನೇ  ಉದಯಿಸುತ್ತಿರುವ ಉದಯಸೂರ್ಯನ ಕಾಂತಿಯನ್ನು  ಹೊಂದಿರುವ,ಶರಣಾಗತರಾದ ದೇವದಾನವರ  ಘೋರಸಂಕಟಗಳವಿನಾಶಕನಾಗಿರುವ,ಸುರೇಶ್ವರನೂ,ನಿಧೀಶ್ವರನೂ,ಗಜೇ ಶ್ವರನೂ,ಗಣೇಶ್ವರನೂ,ಮಹೇಶ್ವರನೂ,ಪವಿತ್ರತಮನೂ ಆಗಿರುವ ಆ  ಸಿದ್ಧಿದಾಯಕ ವಿನಾಯಕನನ್ನು ನಾನು ಸದಾ ಆಶ್ರಯಿಸುತ್ತೇನೆ.

ಸಮಸ್ತಲೋಕ ಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ    ||೩||

ಭಾವಾರ್ಥ:-ಸಮಸ್ತ ಲೋಕಗಳಿಗೂ ಒಳಿತನ್ನು  ಕರುಣಿಸುವವನೂ,ಗಜಾಸುರನನ್ನು ಸಂಹರಿಸಿದವನೂ,ವಿಸ್ತಾರವಾದ  ಉದರವನ್ನು ಹೊಂದಿದವನೂ,ಸರ್ವೋನ್ನತವಾಗಿರುವ  ಆನೆಯಮೊಗದವನೂ,ನಾಶರಹಿತನೂ,ಕ್ಷಮಾದಾಯಕನೂ,ಆನಂದದಾಯಕನ ೂ,ಯಶಸ್ಸನ್ನು ಕರುಣಿಸುವವನೂ,ಶರಣಾರ್ತಿಗಳಿಗೆ ಪರಿಶುದ್ಧ  ಮನಸ್ಸನ್ನು ದಯಪಾಲಿಸುವವನೂ,ತೇಜೋವಂತನೂ ಆಗಿರುವ  ಶ್ರೀಮಹಾಗಣಪತಿಗೆ ನಾನು ನಮಸ್ಕರಿಸುವೆ.

ಅಂಕಿಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣನ್ |
ಪ್ರಪಂಚನಾಶಭೀಷಣಂ ಧನಂಜಯಾದಿ ಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್  ||೪||

ಭಾವಾರ್ಥ:-ಗತಿಹೀನರಾದ ಭಕ್ತರ ದು:ಖಗಳನ್ನು  ಪರಿಹರಿಸುವ,ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟ ತ್ರಿಪುರಾಸುರಾದಿ  ರಕ್ಕಸರ ಗರ್ವವನ್ನು ಸಂಹರಿಸಿದ,ಶಂಕರನ ಪುತ್ರನಾದ,ಬ್ರಹ್ಮಾಂಡದ  ಲಯಕಾರ್ಯದಲ್ಲಿ ಭಯಂಕರನಾದ,ಪ್ರಾಪಂಚಿಕ ದು:ಖಗಳ  ಪರಿಹಾರಕನಾದ,ಅಗ್ನಿಯೇ ಮೊದಲಾದ ದೇವತಾ ಸಮೂಹಕ್ಕೆ  ಭೂಷಣಪ್ರಾಯನಾದ,ಗಂಡಸ್ಥಳದಿಂದ ಗಲ್ಲದ ತನಕ ಸ್ರವಿಸುತ್ತಿರುವ  ಬೆವರನ್ನು ಒರೆಸಿಕೊಳ್ಳುತ್ತಲಿರುವ ಆದಿಪುರುಷನಾದ ಶ್ರೀ  ಮಹಾಗಣಪತಿಗೆ ನಾನು ನಮಸ್ಕರಿಸುವೆನು.

ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮಂತಮೇಕಮೇವ ತಂ ವಿಚಿಂತಯಾಮಿ ಸಂತತಮ್  ||೫||

ಭಾವಾರ್ಥ:-ವಿಶೇಷವಾಗಿಯೂ ಮನೋಹರವಾಗಿಯೂ  ಹೊಳೆಯುತ್ತಲಿರುವ ದಂತಗಳನ್ನುಹೊಂದಿರುವವನಾದ ಯಮನಿಗೆ  ಯಮನಾಗಿರುವ, ಶಿವತನಯನಾದ,ಚಿಂತನೆಗಳಿಗೆನಿಲುಕದ  ಅಚಿಂತ್ಯರೂಪನಾದ,ವಿನಾಶವಿಲ್ಲದವನಾದ ವಿಘ್ನಗಳ  ಧ್ವಂಸಕನಾಗಿರುವ,ಯೋಗಿಗಳ ಹೃದಯಸಿಂಹಾಸನದಲ್ಲಿ ನಿರಂತರ  ನೆಲೆಯಾಗಿರುವ ಏಕದಂತನಾದ ಶ್ರೀ ಮಹಾಗಣಪತಿಗೆ ನಾನು  ನಮಸ್ಕರಿಸುವೆ.

ಮಹಾಗಣೇಷ ಪಂಚರತ್ನಮಾದರೇಣ ಯೋಸ್ನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ |
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಸ್ಚಿರಾತ್  ||೬||

ಭಾವಾರ್ಥ:-ಅನುದಿನವೂ ಪ್ರಾತ:ಕಾಲದಲ್ಲಿ ಮಹಾಗಣಪತಿಯನ್ನು  ತನ್ನ ಹೃತ್ಕಮಲದಲ್ಲಿರಿಸಿ ಸ್ಮರಣೆಮಾಡಿ ಈ ಮಹಾಗಣೇಶ  ಪಂಚರತ್ನ ಸ್ತೋತ್ರಗಳನ್ನು ಪಠನ ಮಾಡುವ ಮನುಜರಿಗೆ  ನಿರೋಗತ್ವ,ನಿರ್ದೋಷತ್ವಗಳು ದೊರಕಿ,ಅವರಿಗೆ ಸನ್ಮಿತ್ರರ  ಸಂಘದೊರಕಿ,ಸತ್ಪುತ್ರ,ಪೂರ್ಣಾಯುಷ್ಯಾದಿ  ಸಕಲೈಶ್ವರ್ಯಸೌಭಾಗ್ಯಗಳನ್ನು ಶೀಘ್ರವಾಗಿ ಹೊಂದುತ್ತಾರೆ.
********************************************************************* 
||ಇತಿ ಶ್ರೀ ಮದಾಚಾರ್ಯ ಆದಿಶಂಕರಭಗವದ್ಪಾದ ವಿರಚಿತ ಶ್ರೀ  ಮಹಾಗಣೇಶ ಪಂಚರತ್ನ ಸ್ತೋತ್ರಮ್||

|| ಈ ರೀತಿಯಾಗಿ ಶ್ರೀ ಆದಿಶಂಕರಭಗವದ್ಪಾದರು ರಚಿಸಿದ  ಶ್ರೀಮಹಾಗಣೇಷ ಪಂಚರತ್ನ ಸ್ತೋತ್ರಗಳ ಭಾವಾರ್ಥವು ||
********************************************************************* 
                   - ೫ -
  || ಶ್ರೀಗಣೇಶ ಕವಚ ಸ್ತೋತ್ರಮ್ ||
 ****************************

      || ಶ್ರೀಗಣೇಶಾಯ ನಮ: ||

 || ಗೌರ್ಯುವಾಚ ||

ಏಷೋsತಿ ಚಪಲೋದೈತ್ಯಾನ್ ಬಾಲ್ಯೇsಪಿ ನಾಶಯತ್ಯಹೊ |
ಅಗ್ರೇ ಕಿಂ ಕರ್ಮ ಕರ್ತೇತೀ ಜಾನೇ ಮುನಿಸತ್ತಮ ||೧ ||

ಭಾವಾರ್ಥ:-ಗೌರೀ ದೇವಿಯು ಕೇಳುವಳು:- ಚಿಕ್ಕಂದಿನಲ್ಲಿಯೇ ಅತಿ ಚಪಲಿಗರಾಗಿರುವ ಈ ಅಸುರರನ್ನು ನಾಶಗೊಳಿಸಲು ಯಾವ ಕಾರ್ಯವನ್ನು ಮಾಡಬೇಕು ಮುನಿಪುಂಗವಾ?

ದೈತ್ಯಾ ನಾನಾವಿಧಾ ದುಷ್ಟಾ: ಸಾಧುದೇವ ದ್ರುಹ: ಖಲಾ: |
ಅತೋsಸ್ಯ ಕಂಠೆ ಕಿಂಚಿತ್ವಂ ರಕ್ಷಾರ್ಥಂ ಬದ್ಧುಮಹರ್ಸಿ  ||೨||

ಭಾವಾರ್ಥ:-ನಾನಾ ರೀತಿಯಲ್ಲಿ ದೈತ್ಯರು ಹಾಗೂ ದುಷ್ಟರು ಸಾಧುಗಳು ಮತ್ತು ದೇವತೆಗಳಿಗೆ ತಮ್ಮ ನೀಚಕಾರ್ಯಗಳಿಂದ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರನ್ನು ರಕ್ಷಿಸಲು ನೀನು ತಕ್ಕವನಿರುವಿ. ಆದುದರಿಂದ ಸ್ವಲ್ಪ ಮಾರ್ಗದರ್ಶನವನ್ನು ಒದಗಿಸು ಮುನಿಪುಂಗವನೇ.

||ಮುನಿರುವಾಚ||

ಧಾಯೇತ್ಸಿಂಹಗತಂ ವಿನಾಯಕಮಮುಂ ದಿಗ್ಬಾಹುಮಾಧ್ಯೆ ಯುಗೆ |
ತ್ರೇತಾಯಂ ತು ಮಯೂರವಾಹನಮಮುಂ ಷಡ್ಬಾಹುಕಂ ಸಿದ್ಧಿದಮ್ ||
ದ್ವಾಪರೇ ತು ಗಜಾನನಂ ಯುಗಭುಜಂ ರಕ್ತಾಂಗರಾಗಂ ವಿಭುಂ |
ತುರ್ಯೆ ತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ ||೩||

ಮುನಿಯು ಹೇಳಿದನು:- ಆದಿಯುಗದಲ್ಲಿ ಎಂದರೆ ಕೃತಯುಗದಲ್ಲಿ ಸಿಂಹವಾಹನನಾಗಿ,ದಿಕ್ಕುಗಳನ್ನು ಭುಜಗಳನ್ನಾಗಿಸಿಕೊಂಡವನಾದ ವಿನಾಯಕನು ತ್ರೇತಾಯುಗದಲ್ಲಿ ಮಯೂರವಾಹನಾಗಿ ಆರು ಭುಜಗಳನ್ನು ಹೊಂದಿ ಸಿದ್ಧಿ ಪ್ರದಾಯಕನೆನಿಸಿ,ದ್ವಾಪರಾಯುಗದಲ್ಲಿ ನಾಲ್ಕು ಭುಜಗಳನ್ನು ಹೊಂದಿ ಕೆಂಬಣ್ಣದವನಾಗಿ ಜಗದೊಡೆಯ ಗಜಾನನ ಎನಿಸಿ ಈ ಕಲಿ ಯುಗದಲ್ಲಿ ಎರಡು ಭುಜಗಳಿಂದ ಕೂಡಿದವನಾಗಿ ಬಿಳಿ ವರ್ಣದವನಾಗಿ ಸುಂದರ ರೂಪವುಳ್ಳವನಾದ ಸದಾ ಸಮಸ್ತ ಅರ್ಥಗಳನ್ನು ಕರುಣಿಸುವಂತಹಾ ಸರ್ವಾರ್ಥದನೆನಿಸಿರುವವನನ್ನು ಧ್ಯಾನಿಸಬೇಕು.

ವಿನಾಯಕ: ಶಿಖಾಂ ಪಾತು ಪರಮಾತ್ಮಾ ಪರಾತ್ಪರ: |
ಅತಿ ಸುಂದರ ಕಾಯಸ್ತು ಮಸ್ತಕಂ ಸುಮಹೋತ್ಕಟ: ||೪||

ಭಾವಾರ್ಥ:-ಪರಮಾತ್ಮನೂ ಪವಿತ್ರತಮನೂ ಆಗಿರುವ ವಿನಾಯಕನು ಚಂಡಿಕೆಯನ್ನೂ, ಅತಿ ಸುಂದರ ದೇಹದವನಾದ ಸುಮಹೋತ್ಕಟನು ಶಿರಸ್ಸನ್ನೂ ರಕ್ಷಿಸಲಿ.

ಲಲಾಟಂ ಕಶ್ಯಪ: ಪಾತು,ಭ್ರೂಯುಗಂ ತು ಮಹೋದರ: |
ನಯನೇ ಫಾಲಚಂದ್ರಸ್ತು ಗಜಾಸ್ಯಸ್ತ್ವೋಷ್ಠಪಲ್ಲವೌ ||೫||

ಭಾವಾರ್ಥ:-ಲಲಾಟವನ್ನು ಕಶ್ಯಪನೂ,ಮಹೋದರನು ಎರಡೂ ಹುಬ್ಬುಗಳನ್ನೂ,ಕಣ್ಣುಗಳನ್ನು ಫಾಲಚಂದ್ರನೂ,ಚಿಗುರನ್ನು ಹೋಲುವ ತುಟಿಯನ್ನು ಗಜಾಸ್ಯನೂ ರಕ್ಷಿಸಲಿ.

ಜಿವ್ಹಾಂ ಪಾತು ಗಣಕ್ರೀಡಶ್ಚಿಬುಕಂ ಗಿರಿಜಾಸುತ: |
ವಾಚಂ ವಿನಾಯಕ: ಪಾತು ದಂತಾನ್ ರಕ್ಷತ್ ವಿಘ್ನಹಾ ||೬||

ಭಾವಾರ್ಥ:-ಗಣಕ್ರೀಡನು ನಾಲಿಗೆಯನ್ನೂ,ಗಿರಿಜಾತನಯನು ಗಡ್ಡವನ್ನೂ,ವಿನಾಯಕನು ವಾಣಿಯನ್ನೂ,ಹಲ್ಲುಗಳನ್ನು ವಿಘ್ನಹಂತಾರನೂ ರಕ್ಷಿಸಲಿ.

ಶ್ರವಣೌ ಪಾಶಪಾಣಿಸ್ತು ನಾಸಿಕಾಂ ಚಿಂತಿತಾರ್ಥದ: |
ಗಣೇಶಸ್ತು ಮುಖಂ ಕಂಠಂ ಪಾತು ದೇವೋ ಗಣಂಜಯ: ||೭||

ಭಾವಾರ್ಥ:-ಪಾಶವನ್ನು ಕೈಯಲ್ಲಿ ಹಿಡಿದವನು ಕಿವಿಗಳನ್ನೂ,ಇಷ್ಟಾರ್ಥಗಳನ್ನು ಪೂರೈಸುವ ಚಿಂತಿತಾರ್ಥದನು ಮೂಗನ್ನೂ,ಗಣಗಳನ್ನು ಗೆದ್ದವನಾದ ದೇವನು ಕಂಠವನ್ನೂ[ಕೊರಳನ್ನೂ] ರಕ್ಷಿಸಲಿ.

ಸ್ಕಂಧೌ ಪಾತು ಗಜಸ್ಕಂಧ: ಸ್ತನೌ ವಿಘ್ನ ವಿನಾಶನ: |
ಹೃದಯಂ ಗಣನಾಥಸ್ತು ಹೇರಂಭೋ ಜಠರಂ ಮಹಾನ್  ||೮||

ಭಾವಾರ್ಥ:-ಗಜಸ್ಕಂಧನು ಹೆಗಲುಗಳನ್ನೂ ಸ್ತನಗಳನ್ನು ವಿಘ್ನ ವಿನಾಶಕನೂ, ಹೃದಯವನ್ನು ಗಣನಾಥನೂ,ಹೊಟ್ಟೆಯನ್ನು ಶ್ರೇಷ್ಠನಾದ ಹೇರಂಬನೂ ರಕ್ಷಿಸಲಿ.

ಧರಾಧರ: ಪಾತು ಪಾರ್ಶ್ವೌ ಪೃಷ್ಠಂ ವಿಘ್ನಹರ: ಶುಭ: | 
ಲಿಂಗಂಗುಹ್ಯಂ ಸದಾಪಾತು ವಕ್ರತುಂಡೊ ಮಹಾಬಲ: ||೯|| 

ಭಾವಾರ್ಥ:-ಎರಡೂ ಮಗ್ಗುಲುಗಳನ್ನು ಭೂಮಿಯನ್ನು ಧರಿಸಿದವನೂ ಹಿಂಬದಿಯನ್ನು ವಿಘ್ನವಿನಾಶಕನೂ ಶುಭನು ಲಿಂಗವನ್ನೂ ಹಾಗೂ ಗುಪ್ತಾಂಗವನ್ನು ವಕ್ರತುಂಡನೂ ಸದಾಕಾಲ ರಕ್ಷಿಸಲಿ.

ಗಣಕ್ರೀಡೊ ಜಾನುಜಂಘೆ ಊರೂಮಂಗಲಮೂರ್ತಿಮಾನ್ |
ಏಕದಂತೋ ಮಹಾಬುದ್ಧಿ: ಪಾದೌ ಗುಲ್ಪೌ ಸದಾsವತು ||೧೦||

ಭಾವಾರ್ಥ:-ಮೊಣಕಾಲುಗಳನ್ನು ಮತ್ತು ಗಂಟುಗಳನ್ನು ಗಣಕ್ರೀಡನೂ ತೊಡೆಗಳನ್ನು ಮಂಗಲಮೂರ್ತಿಯೂ,ಪಾದ ಹಾಗೂ ಪಾದಗಳ ಮಣಿಗಂಟುಗಳನ್ನು ಮಹಾಬುದ್ಧಿಶಾಲಿಯಾದ ಏಕದಂತನೂ ಸದಾಕಾಲ ರಕ್ಷಿಸಲಿ.

ಕ್ಷಿಪ್ರಪ್ರಸಾದನೋ ಬಾಹೂ ಪಾಣೀ ಆಶಾಪ್ರಪೂರಕ: |
ಅಂಗಲೀಶ್ಚ ನಖಾನ್ಪಾತು ಪದ್ಮ ಹಸ್ತೋsರಿನಾಶನ: ||೧೧||

ಭಾವಾರ್ಥ:-ಭುಜಗಳನ್ನು ಕೂಡಲೇ ಪ್ರಸಾದವನ್ನು ಕೊಡುವವನೂ, ಕೈಗಳನ್ನು ಇಚ್ಚೆಗಳನ್ನು ಈಡೇರಿಸುವವನೂ,ಪದ್ಮಹಸ್ತವುಳ್ಳವನಾದ ವೈರಿನಾಶಕನು ಉಗುರು ಬೆರಳುಗಳನ್ನೂ ಸದಾ ಕಾಲ ರಕ್ಷಿಸಲಿ

ಸರ್ವಾಂಗಾನಿ ಮಯೂರೇಶೋ ವಿಶ್ವವ್ಯಾಪಿ ಸದಾsವತು |
ಅನುಕ್ತಮಪಿ ಯತ್ ಸ್ಥಾನಂ ಧೂಮ್ರಕೇತು: ಸದಾsವತು ||೧೨||

ಭಾವಾರ್ಥ:-ವಿಶ್ವವ್ಯಾಪಿಯಾಗಿರುವ ಮಯೂರೇಶನು ಎಲ್ಲಾ ಅಂಗಗಳನ್ನೂ ಹಾಗೂ ಉಲ್ಲೇಕಿಸದಿರುವ ಸ್ಥಾನಗಳನ್ನು ಧೂಮ್ರಕೇತುವೂ ರಕ್ಷಿಸಲಿ.

ಆಮೋದಸ್ತ್ವ ಗ್ರತ: ಪಾತು ಪ್ರಮೋದ: ಪೃಷ್ಟತೊsವತು |
ಪ್ರಾಚ್ಯಾಂ ರಕ್ಷತು ಬುದ್ಧೀಶ: ಆಗ್ನೇಯ್ಯಾಂ ಸಿದ್ಧಿದಾಯಕ: ||೧೩||

ಭಾವಾರ್ಥ:-ಸುಖದಾಯಕನು ಮುಂಭಾಗವನ್ನೂ, ಆನಂದದಾಯಕನು ಹಿಂಭಾಗವನ್ನೂ ಪೂರ್ವದಿಗ್ಭಾಗದಲ್ಲಿ ಬುದ್ಧಿಪ್ರದಾಯಕನೂ,ಆಗ್ನೇಯದಲ್ಲಿ ಸಿದ್ಧಿಪ್ರದಾಯಕನೂ,......> 

ದಕ್ಷಿಣಸ್ಯಾಮುಮಾಪುತ್ರೋ ನೈಋತ್ಯಾಂ ತು ಗಣೇಶ್ವರ: |
ಪ್ರತೀಚ್ಯಾಂ ವಿಘ್ನಹರ್ತಾsವ್ಯಾದ್ವಾಯವ್ಯಾಂ ಗಜಕರ್ಣಕ: ||೧೪||

ಭಾವಾರ್ಥ:- ....ದಕ್ಷಿಣದಲ್ಲಿ ಉಮಾತನಯನೂ,ನೈಋತ್ಯದಲ್ಲಿ ಗಣೇಶ್ವರನೂ,ಪಶ್ಚಿಮದಲ್ಲಿ ವಿಘ್ನವಿನಾಶಕನೂ ವಾಯವ್ಯದಲ್ಲಿ ಗಜಕರ್ಣಕನೂ ರಕ್ಷಿಸಲಿ.

ಕೌಬೇರ್ಯಾಂ ನಿಧಿಪ: ಪಾಯಾದೀಶಾನ್ಯಾ ಮೀಶನಂದನ: |
ದಿವಾsವ್ಯಾ ದೇಕದಂತಸ್ತು ರಾತ್ರೌಸಂಧ್ಯಾಸು ವಿಘ್ನ ಹೃತ್ ||೧೫||

ಭಾವಾರ್ಥ:-ನಿಧಿಪನು ಕುಬೇರ[ಉತ್ತರ]ದಿಕ್ಕಿನಲ್ಲಿಯೂ,ಈಶಾನ್ಯದಲ್ಲಿ ಈಶತನಯನೂ,ಹಗಲು ಏಕದಂತನೂ,ಸಂಧ್ಯಾ-ರಾತ್ರೆಗಳಲ್ಲಿ ವಿಘ್ನಹರ್ತನೂ ಕಾಪಾಡಲಿ.

ರಾಕ್ಷಸಾಸುರ ವೇತಾಲ ಗ್ರಹ ಭೂತ ಪಿಶಾಚತ: |
ಪಾಶಾಂಕುಶಧರ: ಪಾತು ರಜ: ಸತ್ವತಮ: ಸ್ಮೃತಿ:  ||೧೬||

ಭಾವಾರ್ಥ:-ರಾಕ್ಷಸರು,ದೈತ್ಯರು,ಬೇತಾಳ,ದುಷ್ಟಗ್ರಹರು,ಭೂತ ಪಿಶಾಚಾದಿಗಳೆಲ್ಲವುಗಳಿಂದ ಸತ್ವ-ರಜ-ತಮ-ಸ್ಮೃತಿಗಳೊಡನೆ  ಪಾಶಾಂಕುಶಧಾರಿಯು ಕಾಯಲಿ.

ಜ್ಞಾನಂ ಧರ್ಮಂ ಚ ಲಕ್ಷ್ಮೀಂ ಚ ಲಜ್ಜಾಂ ಕೀರ್ತಿಂ ತಥಾ ಕುಲಮ್ |
ವಪುರ್ಧನಂ ಚ ಧಾನ್ಯಂ ಚ ಗೃಹದಾರಾನ್ಸುತಾನ್ ||೧೭||

ಭಾವಾರ್ಥ:ಜ್ಞಾನ,ಧರ್ಮ,ಸಂಪತ್ತು,ಲಜ್ಜೆ,ಕೀರ್ತಿ,ಕುಲ,ದೇಹ,ವಿತ್ತ,ಧಾನ್ಯ,ಮನೆ,ಸತಿ,ಮಕ್ಕಳು, ಸಭ್ಯರೇ ಆದಿಯಾಗಿ ಎಲ್ಲರನ್ನೂ ಸರ್ವಾಯುಧವನ್ನು ಧರಿಸಿದವನು ರಕ್ಷಿಸಲಿ.

ಸರ್ವಾಯುಧಧರ: ಪೌತ್ರಾನ್ ಮಯೂರೇಶೋsವತಾತ್ಸದಾ |
ಕಪಿಲೋsಜಾವಿಕಂ ಪಾತು ಗಜಾಶ್ವಾನ್ವಿಕಟೋsವತು ||೧೮||

ಭಾವಾರ್ಥ:-ಮೊಮ್ಮಕ್ಕಳನ್ನು ಮಯೂರೇಶನು ಸದಾ ರಕ್ಷಿಸಲಿ. ಆಜೀವನ ಪರ್ಯಂತ ಕಪಿಲನು ಕಾಪಾಡಲಿ. ವಿಕಟನು ಆನೆ-ಕುದುರೆ ಗಳನ್ನು ರಕ್ಷಿಸಲಿ.

ಭೂರ್ಜಪತ್ರೇ ಲಿಖಿತ್ವೇದಂ ಯ: ಕಂಠೇ ಧಾರಯೇತ್ಸುಧೀ: |
ನ ಭಯಂ ಜಾಯತೆ ತಸ್ಯ ಯಕ್ಷರಕ್ಷ: ಪಿಶಾಶಚ: ||೧೯||

ಭಾವಾರ್ಥ:-ಯಾವನು ಇದನ್ನು ಭೂರ್ಜಪತ್ರದಲ್ಲಿ ಬರೆದು ಕೊರಳಲ್ಲಿ ಧಾರಣೆ ಮಾಡುವನೋ ಅವನು ಯಕ್ಷ,ರಾಕ್ಷಸ,ಪಿಶಾಚಾದಿಗಳ ಭಯವಿಲ್ಲದೆ ನಿರ್ಭಯನಾಗುವನು.

ತ್ರಿಸಂಧ್ಯಂ ಜಪತೆ ಯಸ್ತು ವಜ್ರಸಾರತನುರ್ಭವೇತ್ |
ಯಾತ್ರಾಕಾಲೇ ಪಠೇದ್ಯಸ್ತು ನಿರ್ವಿಘ್ನೇನ ಫಲಂ ಲಭೇತ್  ||೨೦||

ಭಾವಾರ್ಥ:-ಮೂರು ಸಂಧ್ಯಾಕಾಲಗಳಲ್ಲಿ ಇದನ್ನು ಜಪಿಸುವವನು ವಜ್ರದೇಹಿಯಾಗುವನು.ಪ್ರಯಾಣಕಾಲದಲ್ಲಿ ಪಠಿಸುವವನು ಅಡೆತಡೆಗಳಿಲ್ಲದ ಫಲವನ್ನು ಹೊಂದುವವನಾಗುವನು.

ಯುದ್ಧಕಾಲೇ ಪಠೇದ್ಯಸ್ತು ವಿಜಯಂ ಚಾಪ್ನುಯಾತ್ ಧ್ರುವಮ್ |
ಮಾರಣೋಚ್ಚಾಟನಾಕರ್ಷ ಸ್ತಂಭಮೋಹನ ಕರ್ಮಣಿ ||೨೧||

ಭಾವಾರ್ಥ:-ಯುದ್ಧದ ಸಮಯದಲ್ಲಿ ಇದನ್ನು ಪಠಿಸುವವರು ವಿಜಯಶಾಲಿಗಳಾಗುವುದರಲ್ಲಿ ಸಂಶಯವಿಲ್ಲ.ಮಾರಣ,ಉಚ್ಚಾಟನ,ಆಕರ್ಷಣ,ಸ್ತಂಬನ,ಮೋಹನ ಇತ್ಯಾದಿ ಮಾಂತ್ರಿಕ ಕರ್ಮಗಳಿಗೆ.....>

ಸಪ್ತವಾರಂ ಜಪೇತದ್ದಿನಾನಾಮೇಕ ವಿಂಶತಿಮ್ |
ತತ್ತತ್ಫಲಮವಾಪ್ನೋತಿ ಸಾಧಕೋನಾತ್ರ ಸಂಶಯ:  ||೨೨||

ಭಾವಾರ್ಥ:-....ಪ್ರತಿದಿನವೂ ಏಳು ಸಲದಂತೆ ಇಪ್ಪತ್ತೊಂದು ದಿನ ಜಪಿಸುವ ಸಾಧಕನು ಸಂಶಯಾತೀತವಾಗಿ ಆಯಾಯ ಫಲಗಳನ್ನು ಪಡೆಯುವನು.

ಏಕವಿಂಶತಿವಾರಂ ಚ ಪಠೇತ್ತಾವದ್ದಿನಾನಿ ಯ: |
ಕಾರಾಗೃಹಗತಂ ಸದ್ಯೋ ರಾಜ್ಞಾ ವಧ್ಯಂ ಚ ಮೋಚಯೇತ್ ||೨೩||

ಭಾವಾರ್ಥ:-ಸೆರೆಮನೆಯಲ್ಲಿರುವ ವಧಾರ್ಹನು ಇಪ್ಪತ್ತೊಂದು ಸಲ ಇದನ್ನು ಪಠಿಸಿದಲ್ಲಿ ತತ್ಕ್ಷಣವೇ ಶಿಕ್ಷೆಯಿಂದ ಮುಕ್ತನಾಗುವನು.

ರಾಜದರ್ಶನವೇಲಾಯಾಂ ಪಠೇದೇತತ್ರಿವಾರತ: |
ಸ ರಾಜಾನಾಂ ವಶಂ ನೀತ್ವಾ ಪ್ರಕೃತೀಶ್ಚ ಸಭಾಂ ಜಯೇತ್  ||೨೪||

ಭಾವಾರ್ಥ:- ರಾಜದರ್ಶನಕ್ಕೆ ತೆರಳುವಾಗ ಇದನ್ನು ಮೂರು ಬಾರಿ ಪಠಿಸಿದ್ದೇ ಆದಲ್ಲಿ ರಾಜನನ್ನು ವಶಪಡಿಸಿಕೊಳ್ಳಬಹುದು.ಇದರ ಪಠನ ಮಾತ್ರದಿಂದ ಪ್ರಕೃತಿಯನ್ನೂ ಸಭೆಯನ್ನೂ ಗೆಲ್ಲಬಹುದು.

ಇದಂ ಗಣೇಶ ಕವಚಂ ಕಶ್ಯಪೇನ ಸಮೀರಿತಮ್ |
ಮುದ್ಗಲಾಯ ಚ ತೇ ನಾಥ ಮಾಂಡವ್ಯಾಯ ಮಹರ್ಷಯೇ ||೨೫||

ಭಾವಾರ್ಥ:-ಈ ಗಣೇಶ ಕವಚವನ್ನು ಕಶ್ಯಪ ಮಹರ್ಷಿಯು ಮುದ್ಗಲನಿಗೂ ಆತನು ಮಾಂಡವ್ಯ ಮುನಿಗೂ ಹೇಳಿದ್ದಾಗಿದೆ.

ಮಹ್ಯಂ ಸಪ್ರಾಹ ಕೃಪಯಾ ಕವಚಂ ಸರ್ವಸಿದ್ಧಿದಮ್ |
ನದೇಯಂ ಭಕ್ತಿಹೀನಾಯ ದೇಯಂ ಶ್ರದ್ಧಾವತೇ ಶುಭಮ್  ||೨೬||

ಭಾವಾರ್ಥ:-ಸರ್ವಸಿದ್ಧಿಪ್ರದವೂ ಶುಭಪ್ರದವೂ ಆಗಿರುವ ಈ ಕವಚವನ್ನು ಭಕ್ತಿಹೀನನಿಗೆ ನೀಡಲಾಗದು. ಶ್ರದ್ಧಾವಂತನಿಗೆ ನೀಡಬೇಕು.

ಅನೇನಾಸ್ಯ ಕೃತಾ ರಕ್ಷಾ ನ ಬಾಧಾsಸ್ಯ ಭವೇತ್ ಕ್ವಚಿತ್ |
ರಾಕ್ಷಸಾಸುರ ವೇತಾಲ ದೈತ್ಯದಾನವ ಸಂಭವಾ ||೨೭||

ಭಾವಾರ್ಥ:-ಈ ಕವಚವನ್ನು ರಕ್ಷೆಯಾಗಿಸಿಕೊಂಡವರಿಗೆ ಅಸುರ,ರಾಕ್ಷಸ,ದೈತ್ಯ ದಾನವ,ಬೇತಾಳಾದಿ ದುಷ್ಟ ಶಕ್ತಿಗಳಿಂದ ಉಂಟಾಗುವ ಬಾಧೆಗಳಿಂದ ರಕ್ಷಣೆ ದೊರಕುವುದು.
*********************************************************************************
                     || ಇತಿ ಶ್ರೀ ಗಣೇಶ ಕವಚ ಸ್ತೋತ್ರಮ್ || 
            || ಈ ರೀತಿಯಾಗಿ ಶ್ರೀ ಗಣೇಶ ಕವಚ ಸ್ತೋತ್ರಗಳ ಭಾವಾರ್ಥವು||

*********************************************************************************
                       -೬-

  || ಶ್ರೀ ಗಣೇಶ ಭುಜಂಗ ಪ್ರಯಾತಾಷ್ಟಕ ಸ್ತೋತ್ರಮ್ ||
  *****************************************
ರಣತ್ ಕ್ಷುದ್ರ ಘಂಟಾನಿನಾದಾಭಿರಾಮಂ |
ಚಲತ್ತಾಂಡವೋದ್ದಂಡವತ್ ಪದ್ಮತಾಲಮ್ ||
ಲಸತ್ತುಂದಿಲಾಂಗೋಪರಿ ವ್ಯಾಲಹಾರಂ |
ಗಣಾಧೀಶಮೀಶಾನ ಸೂನುಂ ತಮೀಡೇ ||೧||

ಭಾವಾರ್ಥ:-ಚಿಕ್ಕ ಘಂಟೆಯ ಮಂಜುಲ ಸದ್ದಿನಿಂದ ಶೋಭಿಸುತ್ತಿರುವವನೂ,ಪದ್ಮ ತಾಳದೊಂದಿಗೆ ತಾಂಡವ ನೃತ್ಯವನ್ನು ಮಾಡುತ್ತಾ ಚಲಿಸುತ್ತಿರುವವನೂ,ದೊಡ್ಡ ಉದರದ ಮೇಲೆ ಮಾಲೆಯಂತೆ ನಾಗನನ್ನು ಧರಿಸಿಕೊಂಡಿರುವವನೂ ಗಣಗಳ ಅಧಿಪತಿಯೂ ಈಶ್ವರನ ಪುತ್ರನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ಧ್ವನಿಧ್ವಂಸ ವೀಣಾಲಯೋಲ್ಲಾಸಿ ವಕ್ತ್ರಮ್ |
ಸ್ಫುರಚ್ಛುಂಡ ದಂಡೋಲ್ಲ ಸದ್ಬೀಜ ಪೂರಮ್ ||
ಗಲದ್ದರ್ಪ ಸೌಗಂಧ್ಯಲೋಲಾಲಿ ಮಾಲಂ |
ಗಣಾಧೀಶಮೀಶಾನ ಸೂನುಂ ತಮೀಡೇ ||೨||

ಭಾವಾರ್ಥ:-ವೀಣೆಯಿಂದ ಹೊಡುವ ಇಂಪಾದ ನಾದಲಯಗಳಿಗೆ ಅನುಗುಣವಾಗಿ ಪ್ರಕಾಶಿಸುವ ಉಲ್ಲಾಸಿತ ಮುಖದವನೂ,ಸೊಂಡಿಲಿನ ಅಗ್ರ ಭಾಗದಲ್ಲಿ ಸತ್ಫಲವನ್ನು ಹಿಡಿದುಕೊಂಡಿರುವವನೂ ಕೆನ್ನೆಯಪ್ರದೇಶದಿಂದ ಸುರಿಯುತ್ತಲಿರುವ ಮದೋದಕದ ಪರಿಮಳಕ್ಕೆ ಸುತ್ತುತ್ತಲಿರುವ ದುಂಬಿಗಳ ಗುಂಪಿನಿಂದ ಕೂಡಿರುವವನೂ ಆದ  ಗಣಗಳ ಅಧಿಪತಿಯೂ ಈಶ್ವರನ ಪುತ್ರನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ಪ್ರಕಾಶಜ್ಜಪಾರಕ್ತ ರತ್ನ ಪ್ರಸೂನ |
ಪ್ರವಾಲ ಪ್ರಭಾತಾರುಣ ಜ್ಯೋತಿರೇಕಮ್ ||
ಪ್ರಲಂಬೋದರಂ ವಕ್ತ್ರತುಂಡೈಕದಂತಮ್ |
ಗಣಾಧೀಶಮೀಶಾನ ಸೂನುಂ ತಮೀಡೇ ||೩||

ಭಾವಾರ್ಥ:-ತೇಜೋಮಯವೂ ಶೋಭಾಯಮಾನವೂ ಆಗಿರುವ ಕೆಂಪು ವರ್ಣದ ದಾಸವಾಳದ ಪುಷ್ಪದಂತೆಯೂ,ಮಾಣಿಕ್ಯ,ಹವಳ ಹಾಗೂ ಉಷ:ಕಾಲದ ಸೂರ್ಯನಂತೆಯೂ,ಲಂಬೋದರನೂ,ಡೊಂಕು ಮೋರೆಯವನೂ,ಏಕದಂತನೂ ಗಣಗಳ ಅಧಿಪತಿಯೂ ಈಶ್ವರನ ಪುತ್ರನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ವಿಚಿತ್ರಸ್ಫುರದ್ರತ್ನ ಮಾಲಾಕಿರೀಟಂ |
ಕಿರೀಟೋಲ್ಲಸಚ್ಚಂದ್ರ ರೇಖಾ ವಿಭೂಷಮ್ ||
ವಿಭೂಷೈಕಭೂಷಂ ಬವದ್ವಂಸ ಹೇತುಂ |
ಗಣಾಧೀಶಮೀಶಾನ ಸೂನುಂ ತಮೀಡೇ ||೪||

ಭಾವಾರ್ಥ:-ಕಂಠದಲ್ಲಿ ವಿಚಿತ್ರವಾಗಿ ಹೊಳೆಯುತ್ತಲಿರುವರತ್ನದ ಹಾರವುಳ್ಳವನೂ,ಶಿರದಲ್ಲಿ ರತ್ನಖಚಿತ ಕಿರೀಟವನ್ನು ಧರಿಸಿರುವವನೂ,ಕೀರೀಟದಲ್ಲಿ ಚಂದ್ರಕಲಾ ಶೋಭೆಯುಳ್ಳವನೂ,ಕೇವಲ ಭೂಷಣಕ್ಕಾಗಿ ಅಲಂಕರಿಸಿಕೊಂಡವನೂ,ಭಕ್ತರ ಸಾಂಸಾರಿಕ ದು:ಖಗಳನ್ನು ಪರಿಹರಿಸುವವನೂ, ಗಣಗಳ ಅಧಿಪತಿಯೂ ಈಶ್ವರನ ಪುತ್ರನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ಉದಂಚದ್ ಭುಜಾವಲ್ಲರೀ ದೃಶ್ಯಮೂಲೋ- |
ಚಲದ್ ಭ್ರೂಲತಾ ವಿಭ್ರಮ ಭ್ರಾಜದಕ್ಷಮ್ ||
ಮರುತ್ ಸುಂದರೀ ಚಾಮರೈ: ಸೇವ್ಯಮಾನಂ |
ಗಣಾಧೀಶಮೀಶಾನ ಸೂನುಂ ತಮೀಡೇ ||೫||

ಭಾವಾರ್ಥ:-ಮೇಲೇಳುತ್ತಲಿರುವ ತೋಳ್ ಲತೆಯ ಬುಡದಲ್ಲಿ ಚಲಿಸುತ್ತಲಿರುವ ಹಗ್ಗದ ಆಕಾರದ ಹುಬ್ಬುಗಳಿಂದ ಪ್ರಕಾಶಿಸುತ್ತಿರುವ ಕಣ್ಣುಗಳುಳ್ಳವನೂಸುರಲೋಕದ ಅಪ್ಸರೆಯರ ಚಾಮರಗಳಿಂದ ಸೇವೆಯನ್ನು ಸ್ವೀಕರಿಸುತ್ತಲಿರುವವನೂ ಗಣಗಳ ಅಧಿಪತಿಯೂ ಈಶ್ವರನ ಪುತ್ರನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ಸ್ಫುರನ್ನಿಷ್ಠುರಾಲೋಲ ಪಿಂಗಾಕ್ಷಿತಾರಂ |
ಕೃಪಾ ಕೋಮಲೋದಾರ ಲೀಲಾವತಾರಮ್ ||
ಕಲಾಬಿಂದುಗಂ ಗೀಯತೇ ಯೋಗಿವರ್ಯೈ |
ರ್ಗಣಾಧೀಶಮೀಶಾನ ಸೂನುಂ ತಮೀಡೇ ||೬||

ಭಾವಾರ್ಥ:-ಹೊಳೆಯುತ್ತಲಿರುವ ಹಾಗೂ ಪೂರ್ಣತೆಯಿಂದ ಕೂಡಿ ಚಲಿಸುವ ಕಂದುಗೆಂಪಿನ ಕಣ್ಣಾಲಿಕೆಗಳುಳ್ಳವನೂ,ಕೃಪಾಮಯಿಯೂ,ತೇಜೋಮಯನೂ,ಚಂಚಲ ಹಾಗೂ ನಿಷ್ಠುರ ದೃಷಿಯುಳ್ಳವನೂ,ಉದಾರ ಹಾಗೂ ಕೋಮಲವಾಗಿ ಲೀಲಾವತಾರವನ್ನು ತೋರಿದವನೂ ಕಲಾಬಿಂದುಗಳ ಅಂತ್ಯತಾಣವಾಗಿರುವವನೂ ಯೋಗಿ ಶ್ರ‍ೇಷ್ಠರುಗಳಿಂದ ಹೊಗಳಿಸಿಕೊಂಬವನೂ ಗಣಗಳ ಅಧಿಪತಿಯೂ ಈಶ್ವರನ ಪುತ್ರನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ |
ಗುಣಾತೀತಮಾನಂದಮಾಕಾರ ಶೂನ್ಯಮ್ ||
ಪರಂ ಪಾರಮೋಂಕಾರಮಾಮ್ನಾಯ ಗರ್ಭಂ |
ವದಂತಿ ಪ್ರಗಲ್ಪಂ ಪುರಾಣಂ ತಮೀಡೇ  ||೭||

ಭಾವಾರ್ಥ:-ಬ್ರಹ್ಮವನ್ನು ಪ್ರತಿನಿಧಿಸುವ ಒಂದೇ ಅಕ್ಷರದವನೂ, ವೇದವನ್ನು ತನ್ನ ಶರೀರದಲ್ಲಿರಿಸಿಕೊಂಡಿರುವವನೂ ಓಂಕಾರವಾಚ್ಯನೂ,ಉಪಾಧಿ ರಹಿತನೂ,ಕಲ್ಪರಹಿತನೂ,ಕೊಳೆಯಿಲ್ಲದವನೂ,ಸಂಶಯಾತೀತನೂ,ಗುಣಾಗುಣಗಳಿಗೆ ನಿಲುಕದವನೂ,ಆಕಾರರಹಿತನೂ,ಆನಂದಸ್ವರೂಪನೂ,ಸರ್ವ ಶ್ರೇಷ್ಠನೂ,ವಾಗ್ಮಿಯಾಗಿರುವ ಪುರಾಣ ಪುರುಷನೂ ಗಣಗಳ ಅಧೀಶನೂ ಈಶಪುತ್ರನೂ ಆಗಿರುವ ಗಣೇಶನನ್ನು ನಾನು ಸ್ತುತಿಸುವೆ.

ಚಿದಾನಂದ ಸಾಂದ್ರಾಯ ಶಾಂತಾಯತುಭ್ಯಂ |
ನಮೋ ವಿಶ್ವಕರ್ತ್ರೇ ಚ ಹರ್ತ್ರೇ ಚ ತುಭ್ಯಮ್ ||
ನಮೋsನಂತ ಲೀಲಾಯ ಕೈವಲ್ಯ ಭಾಸೇ |
ನಮೋ ವಿಶ್ವಬೀಜಾಯ ಪ್ರಸೀದೇಶಸೂನೋ  ||೮||

ಭಾವಾರ್ಥ:-ಚಿದಾನಂದಮಯಿಯೂ,ಶಾಂತ ಸ್ವರೂಪಿಯೂ,ಬ್ರಹ್ಮಾಂಡದ ಉತ್ಪತ್ತಿಕಾರನೂ, ಲಯಕಾರಿಯೂ, ಅದ್ವಿತೀಯನೂ, ಅನಂತಲೀಲಾಮಯಿಯೂ, ತೇಜೋಮಯಿಯೂ,ಪ್ರಪಂಚದ ಬೀಜ ಸ್ವರೂಪನೂ ಆಗಿರುವ ಈಶ್ವರತನಯನೇ ಪ್ರಸನ್ನನಾಗು.

ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ |
ಪಠೇದ್ಯಸ್ತು ಮರ್ತ್ಯೋಲಭೇತ್ಸರ್ವಕಾಮಾನ್ ||
ಗಣೇಶ ಪ್ರಸಾದೇನ ಸಿಧ್ಯಂತಿ ವಾಚೋ |
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ ||೯||

ಭಾವಾರ್ಥ:-ಉತ್ತಮವಾಗಿರುವ ಈ ಸ್ತೋತ್ರವನ್ನು ಪ್ರತಿದಿನ ಉಷಕಾಲದಲ್ಲಿ ಎದ್ದು ಭಕ್ತಿಯಿಂದ ಪಠಿಸುವವನು ಸರ್ವ ಇಷ್ಟಾರ್ಥಗಳನ್ನೂ ಪಡೆಯುವನು.ಅಲ್ಲದೆ ಗಣೇಶನ ಪ್ರಸಾದದಿಂದ ಆತನಿಗೆ ವಾಕ್ಸಿದ್ಧಿಯಾಗುವುದು.ಸರ್ವ ವ್ಯಾಪಿಯಾಗಿರುವ ಶ್ರೀಗಣೇಶನು ಒಲಿದರೆ ದುರ್ಲಭವೆನಿಸುವುದು ಯಾವುದೂ ಇಲ್ಲ.ಸಮಸ್ತವೂ ಲಭಿಸುವುದು.
*********************************************************************************
 ||ಇತಿ ಶ್ರೀ ಶಂಕರ ಭಗವದ್ಪಾದ ವಿರಚಿತ ಶ್ರೀ ಗಣೇಶ ಭುಜಂಗ ಪ್ರಯಾತಾಷ್ಟಕಸ್ತೋತ್ರಮ್ ||

|| ಈ ರೀತಿಯಾಗಿ ಶ್ರೀಶಂಕರ ಭಗಾದ್ಪಾದರಿಂದ ವಿರಚಿತವಾದ ಶ್ರೀ ಗಣೇಶ ಭುಜಂಗ ಪ್ರಯಾತಾಷ್ಟಕಸ್ತೋತ್ರಗಳ ಭಾವಾರ್ಥವು ||

*********************************************************************************
                             -೭-
   || ಶ್ರೀಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ ||
  *********************************
ಪ್ರಾತ:ಸ್ಮರಾಮಿ ಗಣನಾಥಮನಾಥಬಂಧುಂ |
ಸಿಂದೂರಪೂರ ಪರಿಶೋಭಿತ ಗಂಡಯುಗ್ಮಮ್ ||
ಉದ್ದಂಡ ವಿಘ್ನ ಪರಿಖಂಡನ ಚಂಡದಂಡಮ್ |
ಆಖಂಡಲಾದಿ ಸುರನಾಯಕವೃಂದ ವಂದ್ಯಮ್ ||೧||

ಭಾವಾರ್ಥ:-ಸಿಂಧೂರ ಲೇಪನದಿಂದ ಹೊಳೆಯುತ್ತಲಿರುವ ಎರಡು 

ಕೆನ್ನೆಗಳುಳ್ಳವನಾದ,ಗುಂಪು ಅಡಚಣೆಗಳನ್ನು ನಿವಾರಿಸುವ ಭೀಕರ 

ದಂಡವನ್ನು ಹೊಂದಿರುವವನಾದ,ಇಂದ್ರಾದಿ ದೇವತೆಗಳ ನಾಯಕರ 

ಸಮೂಹದಿಂದ ನಮಸ್ಕರಿಸಲ್ಪಡುತ್ತಲಿರುವ ಅನಾಥರ ಬಂಧುವಾದ,ಗಣಗಳ 

ಅಧಿನಾಯಕನಾದ ಗಣಪತಿಯನ್ನು ನಾನು ಉಷ:ಕಾಲದಲ್ಲಿ ಸ್ಮರಿಸುವೆ.

ಪ್ರಾತರ್ನಮಾಮಿ ಚತುರಾನನ ವಂದ್ಯಮಾನಂ |
ಇಚ್ಛಾನುಕೂಲಮಖಿಲಂ ಚ ವರಂ ದದಾನಮ್ ||
ತಂ ತುಂದಿಲಂ ದ್ವಿರಸನಾಧಿಪ ಯಜ್ಞಸೂತ್ರಂ |
ಪುತ್ರಂ ವಿಲಾಸ ಚತುರಂ ಶಿವಯೋ: ಶಿವಾಯ  ||೨||

ಭಾವಾರ್ಥ:-ಚತುರ್ಮುಖಬ್ರಹ್ಮನಿಂದ 

ನಮಸ್ಕರಿಸಲ್ಪಡುತ್ತಿರುವವನಾದ,ಇಚ್ಛಾನುಕೂಲಿಯಾದ, 

ಎಲ್ಲವನ್ನೂ ಕರುಣಿಸುವ,ಲಂಬೋದರನಾದ,ಎರಡು ನಾಲಿಗೆಯ ಹಾವನ್ನು 

ಉಪವೀತವನ್ನಾಗಿ ಧರಿಸಿದವನಾದ ಶಿವಪಾರ್ವತೀ ತನಯನಾದ 

ಲೀಲಾಜಾಣನಾದ ಶ್ರೀಮಹಾಗಣಪತಿಗೆ ಮಂಗಲದಾಯಕ ಶುಭಫಲಕ್ಕಾಗಿ 

ಪ್ರಾತ:ಕಾಲದಲ್ಲಿ ನಾನು ನಮಿಸುವೆ.

ಪ್ರಾತರ್ಭಜಾಮ್ಯಭಯದಂ ಖಲು ಭಕ್ತ ಶೋಕ- |
ದಾವಾನಲಂ ಗಣವಿಭುಂ ವರಕುಂಜರಾಸ್ಯಮ್ ||
ಅಜ್ಞಾನಕಾನನವಿನಾಶನ ಹವ್ಯವಾಹಂ |
ಉತ್ಸಾಹವರ್ಧನಮಹಂ ಸುತಮೀಶ್ವರಸ್ಯ ||೩||

ಭಾವಾರ್ಥ:-ಅಭಯಪ್ರದಾಯಕನಾದ,ಭಕ್ತರ ದುರಿತಗಳೆಂಬ ಕಾಡಿಗೆ 

ಬೆಂಕಿಯಂತಿರುವ,ಗಣಗಳ ಅಧಿಪತಿಯಾದ,ಶ್ರೇಷ್ಠವಾದ ಆನೆಯ 

ಮೊಗವುಳ್ಳ,ಅಜ್ಞಾನವೆನ್ನುವ ಅಡವಿಯನ್ನು ನಾಶಮಾಡುವ 

ಜ್ಞಾನಾಗ್ನಿಯಾಗಿರುವ,ಉತ್ಸಾಹವನ್ನು ವರ್ಧಿಸುವ 

ಈಶ್ವರತನಯನಾದ ಶ್ರೀಮನ್ಮಹಾಗಣಪತಿಯನ್ನು ನಾನು 

ಉಷ:ಕಾಲದಲ್ಲಿ ಭಜಿಸುತ್ತೇನೆ.

ಶ್ಲೋಕತ್ರಯಮಿದಂ ಪುಣ್ಯಂ ಸದಾ ಸಾಮ್ರಾಜ್ಯದಾಯಕಮ್ |
ಪ್ರಾತರುತ್ಥಾಯ ಸತತಂ ಯ: ಪಠೇತ್ ಪ್ರಯತ: ಪುಮಾನ್ ||೪||

ಭಾವಾರ್ಥ:-ಪುಣ್ಯದಾಯಕವಾಗಿರುವ ಈ ಮೂರು ಶ್ಲೋಕಗಳನ್ನು 

ಬೆಳಗ್ಗೆ ಉಷ:ಕಾಲದಲ್ಲೆದ್ದು ಇಂದ್ರಿಯಗಳನ್ನು ನಿಗ್ರಹಿಸಿ 

ಯಾವಾತನು ಪಠಿಸುವನೋ ಅವನು ನೆಮ್ಮದಿಯ ಸಾಮ್ರಾಜ್ಯವನ್ನು 

ಪಡೆಯುವನು.
*********************************************************************
                || ಇತಿ ಶ್ರೀ ಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ ||
   ||  ಈ  ರೀತಿಯಾಗಿ ಶ್ರೀ ಗಣೇಶ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||

*********************************************************************
         -೮- 

   || ಶ್ರೀ ಗಣೇಶ ಸ್ತೋತ್ರಮಾಲಾ ||
 **************************
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ |
ನಿರಾನಂದಮಾನಂದ ಮದ್ವೈತ ಪೂರ್ಣ ಂ ||
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ |
ಪರಬ್ರಹ್ಮರೂಪಂ ಗಣೇಶಂ ಭಜೇಮ ||೧||

ಭಾವಾರ್ಥ:-ಅನಾದಿಯೂ,ಸಮಾಧಿಸ್ಥನೂ,ಆಕಾರರಹಿತನೂ,ಅದ್ವಿತೀಯನೂ,ಆನಂದರಹಿತನೂ,ಆನಂದಸ್ವರೂಪನೂ,ಸರಿಸಾಟಿಯಿಲ್ಲದವನೂ,ಪರಿಪೂರ್ಣನೂ,ಗುಣರಹಿತನೂ,ಅಂತರ ರಹಿತನೂ,ಇಚ್ಛಾರಹಿತನೂ,ಪರಬ್ರಹ್ಮ ಸ್ವರೂಪನೂ ಆಗಿರುವ ಗಣೇಶನನ್ನು ಭಜಿಸೋಣಾ.

ಗುಣಾತೀತಮಾದ್ಯಂ ಚಿದಾನಂದರೂಪಂ |
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ ||
ಮುನಿಧ್ಯೇಯ ಮಾಕಾಶ ರೂಪಂ ಪರೇಶಮ್ |
ಪರಬ್ರಹ್ಮರೂಪಂ ಗಣೇಶಂ ಭಜೇಮ ||೨||

ಭಾವಾರ್ಥ:-ಗುಣಗಳನ್ನು ಮೀರಿದವನೂ,ಚಿದಾನಂದ ಸ್ವರೂಪನೂ,ಆತ್ಮಸ್ವರೂಪನೂ,ಸಮಸ್ತರಿಗೂ ಜ್ಞಾನ ಪ್ರದಾಯಕನೂ,ಸರ್ವ ವ್ಯಾಪಿಯೂ,ಮುನಿಗಳ ಧ್ಯಾನದ ಗುರಿಯಾಗಿರುವವನೂ,ಗಗನ ಸ್ವರೂಪನೂ,ಪರಮೇಶನೂ,ಪರಬ್ರಹ್ಮ ರೂಪನೂ ಆಗಿರುವ ಗಣೇಶನನ್ನು ಭಜಿಸೋಣಾ.

ಜಗತ್ಕಾರಣಂ ಕಾರಣಜ್ಞಾನರೂಪಂ |
ಸುರಾದಿಂಸುಖಾದಿಂ ಯುಗಾದಿಂ ಗಣೇಶಂ ||
ಜಗದ್ವ್ಯಾಪಿನಂ ವಿಶ್ವ ವಂದ್ಯಂ ಸುರೇಶಂ |
ಪರಬ್ರಹ್ಮರೂಪಂ ಗಣೇಶಂ ಭಜೇಮ ||೩||

ಭಾವಾರ್ಥ:-ಜಗತ್ತಿನ ನಿಮಿತ್ತ ಸ್ವರೂಪನೂ,ಜ್ಞಾನ ರೂಪನೂ,ದೇವತೆಗಳಲ್ಲಿ ಮೊದಲಿಗನೂ,ಸುಖ ಮತ್ತು ಯುಗಗಳ ಆದಿ ರೂಪವೂ,ಬ್ರಹ್ಮಾಂಡವನ್ನು ವ್ಯಾಪಿಸಿ ವಂದಿಸಲ್ಪಡುವವನೂ,ಪ್ರಪಂಚದ ಅಸ್ಥಿತ್ವಕ್ಕೆ ಕಾರಣನಾದವನೂ,ದೇವತೆಗಳ ಒಡೆಯನೂ.ಪರಬ್ರಹ್ಮ ಸ್ವರೂಪನೂ ಆಗಿರುವ ಗಣೇಶನನ್ನು ಭಜಿಸೋಣಾ.

ರಜೋಯೋಗತೋ ಬ್ರಹ್ಮರೂಪಂ ಶ್ರುತಿಜ್ಞಂ |
ಸದಾ ಕಾರ್ಯಸಕ್ತಂ ಹೃದಾ ಚಿಂತ್ಯರೂಪಂ ||
ಜಗತ್ಕಾರಣಂ ಸರ್ವವಿದ್ಯಾ ನಿಧಾನಂ |
ಪರಬ್ರಹ್ಮರೂಪಂ ಗಣೇಶಂ ನತಾಸ್ಮ: ||೪||

ಭಾವಾರ್ಥ:-ರಜೋಗುಣ ನೈಪುಣ್ಯನೂ,ಪರಬ್ರಹ್ಬ ರೂಪನೂ,ವೇದಪರಾಯಣನೂ,ನಿರಂತರ ಕಾರ್ಯ ನಿರತನೂ,ಹೃದಯಲ್ಲಿ ಚಿಂತಿಸಲ್ಪಡುವ ಸ್ವರೂಪದವನೂ,ಜಗತ್ತಿನ ನಿಮಿತ್ತ ಸ್ವರೂಪನೂ,ಸಮಸ್ತ ವಿದ್ಯಾ ಪ್ರದಾಯಕನೂ ಪರಬ್ರಹ್ಮ ಸ್ವರೂಪನೂ ಆಗಿರುವ ಗಣೇಶನನ್ನು ಸ್ತುತಿಸುತ್ತೇನೆ.

ಸದಾಸತ್ವ ಯೋಗಂ ಮುದ್ರಾಕ್ರೀಡಮಾನಂ |
ಸುರಾರೀನ್ ಹರಂ ತ್ವಂ ಜಗತ್ಪಾಲಯಂತಂ ||
ಅನೇಕಾವತಾರಂ ನಿಜ ಅಜ್ಞಾನಹಾರಂ |
ಸದಾ ವಿಷ್ಣುರೂಪಂ ಗಣೇಶಂ ನಮಾಮ: ||೫||

ಭಾವಾರ್ಥ:-ಯಾವಾಗಲೂ ಸಾತ್ವಿಕ ಯೋಗ ಕ್ರಿಯೆಗಳಲ್ಲಿ ನಿರತನಾಗಿ ವಿನೋದಿಸುವವನೂ,ದೇವತೆಗಳ ವೈರಿಗಳನ್ನು ವಧಿಸುವವನೂ,ಜಗತ್ತಿನ ಪಾಲಕನೂ,ಅನೇಕ  ರೂಪಗಳನ್ನು ತಾಳಿದವನೂ,ಅಜ್ಞಾನವನ್ನು ಪರಿಹರಿಸಿ ಜ್ಞಾನದಾಯಕನಾಗಿ ಉದ್ಧರಿಸುವವನೂ,ಮಹಾವಿಷ್ಣು ಶಕ್ತಿ ಸ್ವರೂಪನೂ ಆಗಿರುವ ಗಣೇಶನಿಗೆ ನಾನು ನಮಿಸುವೆನು.

ತಮೋ ಯೋಗಿನಂ ರುದ್ರರೂಪಂ ತ್ರಿನೇತ್ರಮ್ |
ಜಗತ್ಕಾರಕಂ ತಾರಕಂ ಜ್ಞಾನ ಹೇತುಂ ||
ಅನೇಕಾಗಮೈ: ಸ್ವಜನಂ ಬೋಧಯಂತಂ |
ಸದಾ ಶರ್ವರೂಪಂ ಗಣೇಶಂ ನಮಾಮ: ||೬||

ಭಾವಾರ್ಥ:-ಅಂಧಕಾರವನ್ನು ಜಯಿಸಿದ ಯೋಗಿಸ್ವರೂಪನೂ,ರುದ್ರ ಸ್ವರೂಪಿಯೂ,ತ್ರಿನಯನನೂ,ಜಗತ್ತಿನ ಒಡೆಯನೂ,ಜಗದ ಉದ್ಧಾರಕನೂ,ಜಗತ್ತಿನ ಜ್ಞಾನಕ್ಕೆ ಕಾರಣೀಭೂತನಾದವನೂ,ತನ್ನ ನೈಜ ಭಕ್ತರಿಗೆ ಅನೇಕ ಆಗಮಗಳನ್ನು ಭೋಧಿಸುವವನೂ,ಯಾವಾಗಲೂ ಪರಮೇಶ್ವರ ಸ್ವರೂಪನೂ ಆಗಿರುವ ಗಣೇಶನಿಗೆ ನಾನು ನಮಸ್ಕರಿಸುವೆನು.

ತಮಸ್ತೋಮ ಹಾರಂ ಜನಜ್ಞಾನ ಹಾರಂ |
ತ್ರಯೀ ವೇದಸಾರಂ ಪರಬ್ರಹ್ಮ ಪಾರಂ ||
ಮುನಿಜ್ಞಾನಕಾರಂ ವಿದೂರೇ ವಿಕಾರಂ |
ಸದಾ ಬ್ರಹ್ಮರೂಪಂ ಗಣೇಶಂ ನಮಾಮ: ||೭||

ಭಾವಾರ್ಥ:-ಜಗತ್ತಿನ ಅಂಧಕಾರವನ್ನು ನಿವಾರಿಸುವವನೂ,ಜನರ ಅಜ್ಞಾನಗಳನ್ನು ಹೋಗಲಾಡಿಸುವವನೂ,ವೇದಗಳ ಸಾರ ಸರ್ವಸ್ವವೂ,ಪರಬ್ರಹ್ಮದ ಎಲ್ಲೆಯೂ,ಮುನಿಗಳಿಗೆ ಜ್ಞಾನವನ್ನು ಕರುಣಿಸುವವನೂ,ಇಂದ್ರಿಯ ಚಾಪಲ್ಯಗಳಿಗೆ ಬಹಳ ದೂರದಲ್ಲಿರುವವನೂ,ಯಾವಾಗಲೂ ಬ್ರಹ್ಮ ಸ್ವರೂಪನೂ ಆಗಿರುವ ಆಗಿರುವ ಗಣೇಶನಿಗೆ ನಾನು ನಮಸ್ಕರಿಸುವೆನು.

ನಿಜೈರೋಷಧೀಸ್ತರ್ಪಯಂತಂ ಕಶಾಪ್ಯೆ: |
ಸುರೋಘಾನ್ ಕಲಾಭೀ: ಸುಧಾಸ್ರಾವಿಣಿಭೀ: ||
ದಿನೇಶಾಂಶು ಸಂತಾಪಹಾರಂ ದ್ವಿಜೇಶಂ |
ಶಶಾಂಕ ಸ್ವರೂಪಂ ಗಣೇಶಂ ನಮಾಮ: ||೮||

ಭಾವಾರ್ಥ:-ಅರಿಷಡ್ವರ್ಗಗಳ ಸಂಹಾರಕನೂ,ದೇವತೆಗಳಲ್ಲಿರುವ ರಸವಿದ್ಯೆಗಳಿಗ ಅಮೃತಪ್ರಾಯನೂ,ಸೂರ್ಯನ ತಾಪವನ್ನು ಪರಿಹರಿಸುವವನೂ,ವಿಪ್ರರಿಗೆ ಒಡೆಯನೂ,ಚಂದ್ರನಂತೆ ಮನೋಹರ ರೂಪವುಳ್ಳವನೂ ಆಗಿರುವ ಗಣೇಶನಿಗೆ ನಾನು ನಮಸ್ಕರಿಸುವೆನು.

ಪ್ರಕಾಶ ಸ್ವರೂಪಂ ನಭೋ ವಾಯುರೂಪಂ |
ವಿಕಾರಾದಿ ಹೇತುಂ ಕಲಾಕಾಲ ಭೂತಂ ||
ಅನೇಕಾಕ್ರಿಯಾsನೇಕ ಶಕ್ತಿ ಸ್ವರೂಪಂ |
ಸದಾ ಶಕ್ತಿ ರೂಪಂ ಗಣೇಶಂ ನಮಾಮ: ||೯||

ಭಾವಾರ್ಥ:-ಸ್ವಯಂಪ್ರಕಾಶನೂ,ವಾಯ್ವಾಕಾಶ ರೂಪವುಳ್ಳವನೂ,ತಳಮಳಗಳಿಗೆ ನಿಮಿತ್ತನೂ,ಕಲಂಕಗಳಿಗೆ ಯಮ ಸ್ವರೂಪನೂ,ವಿಭಿನ್ನ ಚಟುವಟಿಕೆಗಳನ್ನು ಹೊಂದಿದವನೂ,ಸಮಸ್ತ ಶಕ್ತಿ ಸ್ವರೂಪನೂ,ಆಗಿರುವ ಮಹಾಗಣೇಶನಿಗೆ ನಾನು ನಮಸ್ಕರಿಸುವೆನು.

ಪ್ರದಾನಂ ಸ್ವರೂಪಂ ಮಹತ್ತತ್ವರೂಪಂ |
ಧರಾವಾರಿ ರೂಪಂ ದಿಗೀಶಾದಿ ರೂಪಂ ||
ಅಸತ್ಸತ್ವರೂಪಂ ಜಗದ್ದೇತು ಭೂತಂ |
ಸದಾ ವಿಶ್ವರೂಪಂ ಗಣೇಶಂ ನತಾಸ್ಮ: ||೧೦||

ಭಾವಾರ್ಥ:-ಸಮಸ್ತರೂ ಮೆಚ್ಚುವಂತಹಾ ಸ್ವರೂಪವುಳ್ಳವನೂ,ಮಹಾ ತತ್ವ ಸ್ವರೂಪನೂ,ಭೂ-ಜಲಗಳ ಸ್ವರೂಪನೂ,ದಿಕ್ಕುಗಳಿಗೆ ಅಧಿಪತಿಯೂ,ಇಂದ್ರನ ಪ್ರಾಣ ಸ್ವರೂಪನೂ,ಜಗತ್ತಿನ ಆಗುಹೋಗುಗಳಿಗೆ ಕಾರಣನಾದವನೂ,ಸರ್ವಕಾಲಿಕಪ್ರಪಂಚ ಸ್ವರೂಪನೂ ಆಗಿರುವ ಮಹಾಗಣೇಶನಿಗೆ ನಾನು ನಮಸ್ಕರಿಸುವೆನು.

ತ್ವದೀಯೇ ಮನ: ಸ್ಥಾಪಯೇದಂಘ್ರಿಯುಗ್ಮೇ |
ಜನೋ ವಿಘ್ನಸಂಘಾನ್ ನ ಪೀಡಾಂ ಲಭೇತ್ ||
ಲಸತ್ಸೂರ್ಯ ಬಿಂಬೇ ವಿಶಾಲೇ ಸ್ಥಿತೇsಯಂ |
ಜನೋಧ್ವಾಂತ ಬಾಧಾಂ ಕಥಂ ವಾ ಲಭೇತ್ ||೧೧||

ಭಾವಾರ್ಥ:-ಉಲ್ಲಸಿತನಾಗಿ ವಿಶಾಲವಾಗಿರುವ ಸೂರ್ಯಬಿಂಬದಲ್ಲಿ ನೆಲೆಯಾಗಿರುವ ಮಹಾಗಣೇಶನೇ,ನಿನ್ನ ಪಾವನವಾದ ಚರಣಾರವಿಂದಗಳನ್ನು ಮನಸ್ಸಿನಲ್ಲಿ ಸ್ಥಾಪಿಸಿ ಜನರು ವಿಘ್ನಗಳ ಸಮೂಹಗಳಿಂದುಂಟಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.ಇಂತಿರುವಾಗ ಭಕ್ತಾದಿಗಳಿಗೆ ಇನ್ನೆಲ್ಲಿಯ ಭಾದೆ ಪೀಡಿಸಲು ಸಾಧ್ಯ?

ವಯಂ ಭ್ರಾಮಿತಾಂ ಸರ್ವಥಾsಜ್ಞಾನ ಯೋಗಾತ್ |
ಅಲಬ್ಧಾಸ್ತ ವಾಂಘ್ರಿಂ ಬಹೂನ್ವರ್ಷ ಪೂಗಾನ್ ||
ಇದಾನೀ ಮವಾಪ್ತಾಸ್ತವೈವ ಪ್ರಸಾದಾತ್ |
ಪ್ರಸನ್ನಾನ್ಸದಾ ಪಾಹಿ ವಿಶ್ವಂಭರಾದ್ಯ ||೧೨||

ಭಾವಾರ್ಥ:-ನಿಶ್ಚಯವಾಗಿಯೂ ಅಜ್ಞಾನದ ಮಂಕು ಕವಿದಿರುವ ನನಗೆ ಅನೇಕ ವರ್ಷಗಳಿಂದ ನಿನ್ನ ಪಾದಾರವಿಂದಗಳು ಲಭ್ಯವಾಗಲಿಲ್ಲ.ಈಗಲಾದರೂ ಈ ಸ್ತೋತ್ರಗಳನ್ನು ಪಠಿಸುತ್ತಿರುವುದರಿಂದ ವಿಶ್ವವನ್ನು ಸಂರಕ್ಷಿಸುವವನಾದ ನೀನು ಪ್ರಸನ್ನನಾಗಿ ನಮ್ಮೆಲ್ಲರನ್ನು ಕಾಪಾಡು ಮಹಾಗಣೇಶನೇ.
*********************************************************************
 || ಇತಿ ಶ್ರೀಶಂಕರಾಚಾರ್ಯ ವಿರಚಿತ ಗಣೇಶ ಸ್ತೋತ್ರ ಮಾಲಾ ||
 || ಈ ರೀತಿಯಾಗಿ ಶ್ರೀ ಶಂಕರಾಚಾರ್ಯರಿಂದ ವಿರಚಿಸಲ್ಪಟ್ಟ ಶ್ರೀ ಗಣೇಶ ಸ್ತೋತ್ರ ಮಾಲಾ  ಭಾವಾರ್ಥವಾಗಿದೆ. ||
*********************************************************************                                 

No comments:

Post a Comment