ವೇದಾಂತ ಸ್ತೋತ್ರಗಳು
******************
---- ೧ ----
ಸಾಕ್ಷಾತ್ ಭಗವತ್ ಸ್ವರೂಪೀ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಜಗದ್ಗುರು ಶಂಕರಾಚಾರ್ಯ ವಿರಚಿತ ಚರ್ಪಟ ಪಂಜರಿಕಾ ಸ್ತೋತ್ರಮ್
++++++++++++++++++++++++++++++++++++++++++++++++++++++++++++++++++++++++
ಸ್ತೋತ್ರ -> ೧
ದಿನಮಪಿ ರಜನೀ ಸಾಯಂ ಪ್ರಾತ:
ಶಿಶಿರ ವಸಂತೌ ಪುನರಾಯಾತ: |
ಕಾಲ:ಕ್ರೀಡತಿಗಚ್ಚತ್ಯಾಯಸ್ತದಪಿನ ಮುಂಚತ್ಯಾಶಾವಾಯು: ||
ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ
ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಞ್ಕರಣೇ
[ಧ್ರುವಪದಮ್]
ಭಾವಾರ್ಥ -> ೧
"ಇರುಳು-ಹಗಲು,ಸೂರ್ಯೋದಯ,ಸೂರ್ಯಾಸ್ತಗಳು ಹಾಗೆಯೇ ಶಿಶಿರ-ವಸಂತ ಋತುಗಳು ಪುನ: ಪುನ: ಬಂದು ಹೋಗುತ್ತವೆ. ;ಕಾಲ ಅನ್ನೋದು ಆಟ ಆಡುತ್ತಾ ಇರುತ್ತದೆ ,ಆಯುಸ್ಸು ನಶಿಸಿ ಹೋಗುತ್ತಾ ಇದೆ. ಆದರೂ ವ್ಯರ್ಥವಾಗಿರುವಂತಹಾ ಆಶೆ ಹೇಳುವಂತಹದು ಬಿಟ್ಟು ಹೋಗುವುದಿಲ್ಲ, ಹೇ! ಮಂದಮತಿಯೇ! ಅಚ್ಯುತ ಸ್ವರೂಪೀ ಗೋವಿಂದನ ಭಜನೆ ಮಾಡು. ಅವಸಾನ ಕಾಲ ಬರುವಾಗ ನಿನ್ನ ವ್ಯಾಕರಣವನ್ನು ರಕ್ಷಣೆ ಮಾಡಲಾರ.ಖಂಡಿತವಾಗಿಯೂ ರಕ್ಷಣೆ ಮಾಡ.ಲಾರ"
ಸ್ತೋತ್ರ -> ೨
ಅಗ್ರೇ ವಹ್ನಿ ಪೃಷ್ಟೇ ಭಾನೂ ರಾತ್ರೌ ಚಿಬುಕಸಮರ್ಪಿತಜಾನು: |
ಕರತಲಭಿಕ್ಷಾ ತರುತಲವಾಸಸ್ತದಪಿ ನ ಮುಂಚತ್ಯಾಪಾಷ: ||
ಭಾವಾರ್ಥ -> ೨
"ಎದುರಿಗೆ ಬೆಂಕಿ,ಹಿಂಬದಿಗೆ ಸೂರ್ಯ,ರಾತ್ರೆ ಮೊಣಕಾಲುಗಳ ನಡುವೆ ಕೊರಳನ್ನು ಇಟ್ಟುಕೊಳ್ಳುವುದು,ಕೈಗಳಲ್ಲಿ ಭಿಕ್ಷೆ ಸ್ವೀಕರಿಸುವುದು,ಮರದ ಅಡಿಯಲ್ಲಿ ವಾಸ - ಹೀಗಿರುವ ಸ್ಥಿತಿಯಲ್ಲಿದ್ದರು ಕೂಡಾ ನಾಶಕ್ಕೆ ಕಾರಣವಾಗಿರುವಂತಹಾ ಆಶಾಪಾಶ [ಆಶೆ ಎನ್ನುವ ಹಗ್ಗ] ಯಾರನ್ನೂ ಬಿಡುವುದಿಲ್ಲ."
ಸ್ತೋತ್ರ - ೩
ಯಾವದ್ವಿತ್ತೋಪಾರ್ಜನಸಕ್ತಸ್ತಾವನ್ನಿಜಪರಿವಾರೋ ರಕ್ತ: |
ಪಶ್ಚಾದ್ಧಾವತಿ ಜರ್ಜರದೇಹೇ ವಾರ್ತಾಂ ಫೃಚ್ಛತಿ ಕೋಪಿ ನ ಗೇಹೇ ||
ಭಾವಾರ್ಥ - > ೩
"ಸಂಪತ್ತಿನ ಶೇಖರಣೆ ಆಗುತ್ತಾ ಇರುವಲ್ಲಿಯವರೆಗೆ ನೆಂಟರಿಷ್ಟರುಗಳು ಅವನ ಬಗ್ಗೆ ಆಸಕ್ತಿ ಹೊಂದಿರುತ್ತಾರೆ; ಆಮೇಲೆ ಅವನು ಮುದುಕ ಆದನಾದರೆ ಅವನ ಮನೆಯಲ್ಲಿಯೇ ಅವನನ್ನು ವಿಚಾರಿಸುವವರು ಯಾರೂ ಇರುವುದಿಲ್ಲ."
ಸ್ತೋತ್ರ ->೪
ಜಟಿಲೋ ಮುಂಡೀ ಲುಂಚಿತಕೇಶ: ಕಾಷಾಯಾಂಬರಬಹುಕೃತ ವೇಷ: |
ಪಶ್ಯನ್ನಪಿ ಚ ನ ಪಶ್ಯತಿ ಮೂಢೋ ಉದರನಿಮಿತ್ತಂ ಬಹುಕೃತ ವೇಷ: ||
ಭಾವಾರ್ಥ -> ೪
ಜಟೆಯನ್ನು ಧರಿಸುವುದು,ತಲೆ ಬೋಳಿಸುವುದು,ರೋಮಗಳನ್ನು ಕಿತ್ತು ತಗೆಯುವುದು,ಕಾವಿ ವಸ್ತ್ರಗಳನ್ನು ಉಪಯೋಗಿಸುವುದರ ಮೂಲಕ ನಾನಾರೀತಿಯ ವೇಷ ಧರಿಸುವುದು;ಹೀಗೆ ಹೊಟ್ಟೆತುಂಬಿಸಲು ಬೇಕಾಗಿ ಬೇರೆ ಬೇರೆ ವೇಷಂಗಳನ್ನು ಧರಿಸುವ ಅಥವಾ ಧರಿಸಿದ ಬುದ್ಧಿಹೀನ ಸತ್ಯವನ್ನು ಕಂಡರೂ ಕಾಣದ ಹಾಗೆ ಇರುತ್ತಾ.ನೆ"
ಸ್ತೋತ್ರ -> ೫
ಭಗವದ್ಗೀತಾ ಕಿಂಚಿದಧೀತಾ ಗಂಗಾಜಲಲವಕಣಿಕಾ ಪೀತಾ |
ಸಕೃದಪಿ ಯಸ್ಯ ಮುರಾರಿಸಮರ್ಚಾ ತಸ್ಯ ಯಮ: ಕಿಂ ಕುರುತೇ ಚರ್ಚಾಮ್ ||
ಭಾವಾರ್ಥ -> ೫
"ಯಾವ ಮನುಷ್ಯ ಭಗವದ್ಗೀತೆಯನ್ನು ಇನಿತಾದರೂ ಓದಿದ್ದಾನೋ; ಗಂಗಾಜಲದ ಒಂದು ಬಿಂದುವಿವನ್ನಾದರೂ ಸೇವನೆ ಮಾಡಿದ್ದಾನೋ; ಆ ಮುರಾರಿಯನ್ನು ಒಂದು ಸಾರಿಯಾದರೂ ಅರ್ಚನೆ ಮಾಡಿದ್ದಾನೋ,ಆಂತಹಾ ಮನುಷ್ಯನನು ಮೃತ್ಯುವಿಗೆ ಏನು ಮಾಡಲು ಸಾಧ್ಯ?"
ಸ್ತೋತ್ರ -> ೬
ಅಂಗಂ ಗಲಿತಂ ಪಲಿತಂ ಮುಂಡಂ ದಶನವಿಹೀನಂ ಜಾತಂ ತುಂಡಮ್ |
ವೃದ್ದೋಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾಪಿಂಡಮ್ ||
ಭಾವಾರ್ಥ -> ೬
"ಅಂಗಾಂಗಗಳು ಶಕ್ತಿ ಕಳೆದುಕೊಂಡಿದೆ;ತಲೆ ಹಣ್ಣಾಗಿದೆ; ಬಾಯಿಯಲ್ಲಿದ್ದ ಹಲ್ಲುಗಳು ಎಲ್ಲಾ ಉದುರಿಹೋಗಿದೆ; ಹೀಗಿರುವ ಮುದುಕ ತಾನು ಊರುಗೋಲು ಹಿಡಿದು ನಡುಗುತ್ತಾ ಇದ್ದಾನೆ; ಆದರೂ ಆಶೆ ಅವನ ಬಿಡಲೇ ಇಲ್ಲ."
ಸ್ತೋತ್ರ -> ೭
ಬಾಲಸ್ತಾವತ್ಕ್ರೀಡಾಸಕ್ತಸ್ತರುಣಸ್ತಾವತ್ ತರುಣೀ ರಕ್ತ: |
ವೃದ್ದಸ್ತಾವಚ್ಚಿಂತಾಮಗ್ನ:ಪರಮೇ ಬ್ರಹ್ಮಣೀ ಕೋಪಿ ನ ಲಗ್ನ:||
ಭಾವಾರ್ಥ -> ೭
"ಮಕ್ಕಳು ಯಾವಾಗಲೂ ಆಟೋಟಂಗಳಲ್ಲಿ ಆಸಕ್ತರಾಗಿರುತ್ತಾರೆ; ಯುವಕರು ಯಾವಾಗಲೂ ಯುವತಿಯರ ಬಗ್ಗೆ ಆಸಕ್ತಿ ಹೊಂದಿರುತ್ತಾರೆ; ಮುದುಕರು ಯಾವಾಗಲೂ ಚಿಂತಾಮಗ್ನರಾಗಿರುತ್ತಾರೆ; ಆದರೆ ಆ ಪರಬ್ರಹ್ಮನ ಬಗ್ಗೆ ಯಾರಿಗೂ ಆಸಕ್ತಿ ಇರುವುದಿಲ್ಲ."
ಸ್ತೋತ್ರ - ೮
ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಮ್ |
ಇಹ ಸಂಸಾರೇ ಖಲು ದುಸ್ತಾರೇ ಕೃಪಯಾಪಾರೇ ಪಾಹಿ ಮುರಾರೇ ||
ಭಾವಾರ್ಥ -> ೮
"ಹುಟ್ಟು-ಸಾವು, ತಾಯಿಯ ಗರ್ಭಲ್ಲಿ ವಾಸ - ಇವೆಲ್ಲವೂ ಪುನ:ಪುನ: ಬರುತ್ತಾ ಇದೆ. ಆದ ಕಾರಣ ಹೇ! ಮುರಾರಿ! ಕೃಪೆಮಾಡಿ ನನ್ನ ಈ ದುಸ್ತರ ಆಗಿರುವ ಮತ್ತು ಪಾರಾಗುವ ದಾರಿಯೇ ಕಾಣದ ಸಂಸಾರಸಾಗರದಿಂದ ರಕ್ಷಣೆ ಮಾಡಿ ಕಾಪಾಡು."
ಸ್ತೋತ್ರ -> ೯
ಪುನರಪಿ ರಜನೀ ಪುನರಪಿ ದಿವಸ: ಪುನರಪಿ ಪಕ್ಷ: ಪುನರಪಿ ಮಾಸ: |
ಪುನರಪ್ಯಯನಂ ಪುನರಪಿ ವರ್ಷಂ ತದಪಿ ನ ಮುಂಚತ್ಯಾಶಾಮರ್ಷಮ್ ||
ಭಾವಾರ್ಥ -> ೯
"ಹಗಲು-ರಾತ್ರೆ; ಪಕ್ಷ-ಮಾಸಗಳು; ಅಯನ-ವರ್ಷಗಳು ಪುನ:ಪುನ: ಬಂದು ಹೋಗುತ್ತಾ ಇರುತ್ತವೆ. ಆದರೂ ಆಶೆಯನ್ನು ಪೂರೈಸಿಗೊಳ್ಳಲು ಬೇಕಾದ ಪ್ರೋತ್ಸಾಹ ಮಾತ್ರಾ ಮನುಷ್ಯನನ್ನು ಬಿಟ್ಟು ಹೋಗುವುದಿಲ್ಲ."
ಸ್ತೋತ್ರ -> ೧೦
ವಯಸಿ ಗತೇ ಕ: ಕಾಮವಿಕಾರ: ಶುಷ್ಕೇ ನೀರೇ ಕ: ಕಾಸಾರ:|
ನಷ್ಟೇ ದ್ರವ್ಯೇ ಕ: ಪರಿವಾರೋ ಜ್ಞಾತೇ ತತ್ವೇಕ: ಸಂಸಾರ: ||
ಭಾವಾರ್ಥ -> ೧೦
"ಮುದುಕನಾದ ಮೇಲೆ ಕಾಮವಿಕಾರಗಳು ಎಲ್ಲಿರುತ್ತವೆ? ನೀರು ಬತ್ತಿ ಹೋದ ಮೇಲೆ ಸರೋವರ ಎಲ್ಲಿರುತ್ತದೆ?ಸಂಪತ್ತು ನಷ್ಟ ಆಗಿ ಹೋದಲ್ಲಿ ನೆಂಟರಿಷ್ಟರೆಲ್ಲಿರುತ್ತಾರೆ? ಈ ತತ್ವಂಗಳು ಮನುಷ್ಯನಿಗೆ ಅರ್ಥ ಆದರೆ ಮತ್ತೆ ಸಂಸಾರ ಎಲ್ಲಿರುತ್ತದೆ?"
ಸ್ತೋತ್ರ -> ೧೧
ನಾರೀಸ್ತನಭರಣಾಭಿನಿವೇಶಂ ಮಿಥ್ಯಾಮಾಯಾಮೋಹಾವೇಶಮ್ |
ಏತನ್ಮಾಂಸವಸಾದಿವಿಕಾರಂ ಮನಸಿ ವಿಚಾರಯ ವಾರಂವಾರಂ||
ಭಾವಾರ್ಥ -> ೧೧
"ಹೆಣ್ಣು ಮಕ್ಕಳ ಸ್ಥನಗಳ ಮೇಲಿರುವ ನಿನ್ನ ಕಾಮ ದೃಷ್ಟಿ ಮಿಥ್ಯಾಮೋಹದ ಆವೇಶದಿಂದ ಉತ್ಪತ್ತಿ ಆಗುತ್ತದೆ. ಆ ಸ್ಥನಗಳು ಮಾಂಸ ಮೇದಸ್ಸುಗಳ ಒಂದು ವಿಕಾರ ಸ್ವರೂಪವೇ ಆಗಿದ್ದು. ಹೇ! ಮೂಡನೇ! ಇದನ್ನು ಮನಸ್ಸಿನಲ್ಲಿ ಪುನ:ಪುನ: ವಿಮರ್ಷೆ ಮಾಡು."
ಸ್ತೋತ್ರ -> ೧೨
ಕಸ್ತ್ವಂಕೋಹಂ ಕುತ: ಆಯಾತ: ಕಾ ಮೇ ಜನನೀ ಕೋ ಮೇ ತಾತ: |
ಇಹ ಪರಿಭಾವಯ ಸರ್ವಮಸಾರಂ ವಿಶ್ವಂ ತ್ಯಕ್ತ್ವಾ ಸ್ವಪ್ನವಿಕಾರಮ್ ||
ಭಾವಾರ್ಥ > ೧೨
"ನೀನಾರು? ಅವನಾರು?ನಾನು ಎಲ್ಲಿಂದ ಬಂದೆ?ನನ್ನ ಅಪ್ಪ ಯಾರು?ನನ್ನ ಅಮ್ಮ ಯಾರು? ಈ ರೀತಿಯಲ್ಲಿ ವಿಮರ್ಷೆ ಮಾಡಿ ಕನಸ್ಸಿನ ಹಾಗಿರುವ, ವಿಕಾರ ಸ್ವರೂಪದಿಂದ ಕೂಡಿರುವ ಈ ಜಗತ್ತನ್ನು ದೂರಮಾಡಿ ಇವೆಲ್ಲವುಗಳೆಲ್ಲವೂ ಸಾರ ರಹಿತವಾಗಿದೆ ಎಂದು ಅರಿತುಕೋ."
ಸ್ತೋತ್ರ -> ೧೩
ಗೇಯಂ ಗೀತಾನಾಮಸಹಸ್ರಂ ಧ್ಯೇಯಂ ಶ್ರೀಪತಿರೂಪಮಜಸ್ರಮ್ |
ನೇಯಂ ಸಜ್ಜನಸಂಗೇ ಚಿತ್ತಂ ದೇಯಂ ದೀನಜನಾಯ ಚ ವಿತ್ತಮ್ ||
ಭಾವಾರ್ಥ -> ೧೩
"ಭಗವದ್ಗೀತೆ ಮತ್ತು ಸಹಸ್ರನಾಮಂಗಳನ್ನು ಅನುದಿನವೂ ಹಾಡಬೇಕು. ಅಚ್ಯುತ ಸ್ವರೂಪೀ ಶ್ರೀಪತಿಯ ರೂಪವನ್ನು ಎಡೆಬಿಡದೆ ಧ್ಯಾನ ಮಾಡಬೇಕು.ಸಜ್ಜನರ ಸಂಗದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಮತ್ತು ದೀನನಾದವನಿಗೆ ಸಂಪತ್ತಿನ ಸಹಕಾರ ಕೊಡಬೇಕು."
ಸ್ತೋತ್ರ -> ೧೪
ಯಾವಜ್ಜೀವೋ ನಿವಸತಿ ದೇಹೇ ಕುಶಲಂ ತಾವತ್ಪ್ರಚ್ಛತಿ ಗೇಹೇ |
ಗತವತಿ ವಾಯೌ ದೇಹಾಪಾಯೇ ಭಾರ್ಯಾ ಭಿಭ್ಯತಿ ತಸ್ಮಿನ್ಕಾಯೇ ||
ಭಾವಾರ್ಥ -> ೧೪
"ಎಲ್ಲಿಯವರೆಗೆ ಜೀವ ದೇಹದಲ್ಲಿ ವಾಸ ಮಾಡುತ್ತಾ ಇರುತ್ತೋ,ಅಲ್ಲಿಯವರೆಗೂ ಅವನ ಕುಶಲವನ್ನು ಮನೆಯವೆಲ್ಲರೂ ವಿಚಾರಿಸುತ್ತಾರೆ.ಆದರೆ ಯಾವಾಗ ಅವನ ಪ್ರಾಣವಾಯು ಹೊರಬಂದು ದೇಹವನು ತೊರೆದು ಹೋಯಿತೋ ಆಮೇಲೆ ಅವನ ಹೆಂಡತಿ ಕೂಡಾ ಆ ಶರೀರವನ್ನು ನೋಡಿ ಹೆದರಿಗೊಳ್ಳುತ್ತಾಳೆ.ಇದು ವಾಸ್ತವ,ತಿಳಿದುಕೊ."
ಸ್ತೋತ್ರ -> ೧೫
ಸುಖತ: ಕ್ರಿಯತೆ ರಾಮಾಭೋಗ: ಪಶ್ಚಾದ್ದಂತ ಶರೀರೇ ರೋಗ: |
ಯದ್ಯಪಿ ಲೋಕೇ ಮರಣಂ ಶರಣಂ ತದಪಿ ನ ಮುಂಚತಿ ಪಾಪಾಚರಣಮ್ ||
ಭಾವಾರ್ಥ -> ೧೫
"ಸುಖಪಡೆಯಲು ಬೇಕಾಗಿ ಪುರುಷ ಸ್ಟ್ರೀಯರೊಟ್ಟಿಗೆ ಭೋವವನ್ನು ಆಚರಿಸುತ್ತಾನೆ; ತದನಂತರ, ಅಯ್ಯೋ! ಆ ಶರೀರದಲ್ಲಿ ರೋಗಗಳ ಉತ್ಪತ್ತಿ ಆಗುತ್ತದೆ.ಈ ಜಗತ್ತಿನಲ್ಲಿ ಎಲ್ಲರಿಗೂ ಸಾವೇ ಅಂತಿಮ ಗತಿ ಆಗಿದ್ದರೂ ಪಾಪ ಕಾರ್ಯಗಳನ್ನು ಈ ಮನುಷ್ಯರು ಬಿಡುವುದೇ ಇಲ್ಲ..ಇದು ಸೂರ್ಯನ ಬೆಳಕಿನಷ್ಟೇ ವಾಸ್ತವ "
ಸ್ತೋತ್ರ -> ೧೬
ರಥ್ಯಾ ಚರ್ಪಟವಿರಚಿತಕಂಥ: ಪುಣ್ಯಾ ಪುಣ್ಯ ವಿವರ್ಜಿತಪಂಥ:|
ನಾಹಂ ನ ತ್ವಂ ನಾಯಂ ಲೋಕಸ್ತದಪಿ ಕಿಮರ್ಥಂ ಕ್ರಿಯತೇ ಶೋಕ: ||
ಭಾವಾರ್ಥ -> ೧೬
"ದಾರಿಯಲ್ಲಿ ಸಿಕ್ಕಿದ ಚೂರು ವಸ್ತ್ರವನ್ನೇ ನೀನು ಉಡುಪಾಗಿ ಮಾಡಿಗೊಂಡಿರುವೆ. ನೀನು ಪುಣ್ಯಾಪುಣ್ಯಗಳನ್ನು ದೂರಮಾಡಿರುವೆ. ನಾನಿಲ್ಲ; ನೀನಿಲ್ಲ; ಈ ಪ್ರಪಂಚವೂ ಇಲ್ಲ ಅಂತ ದು:ಖಿಸುತ್ತಾ ಇರುವೆ. ಹೀಗಿದ್ದರೂ ಯಾವುದಕ್ಕೆ ಬೇಕಾಗಿ ಶೋಕಪಡುವೆ? ಹೇಳು.
ಸ್ತೋತ್ರ -> ೧೭
ಕುರುತೇ ಗಂಗಾಸಾಗರಗಮನಂ ವ್ರತಪರಿಪಾಲನಮಥವಾ ದಾನಮ್ |
ಜ್ಞಾನವಿಹೀನ: ಸರ್ವಮತೇನ ಮುಕ್ತಿರ್ನ ಭವತಿ ಜನ್ಮ ಶತೇನ ||
||ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾರ್ಯವರ್ಯ,ಪದವಾಕ್ಯಪ್ರಮಾಣ ಪಾರಾವಾರಪಾರೀಣ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ ತಪಶ್ಚಕ್ರವರ್ತಿ ಜಗದ್ಗುರು ಶ್ರೀ ಶ್ರೀಶಂಕರಾಚಾರ್ಯ ವಿರಚಿತ ಚರ್ಪಟ ಪಂಜರಿಕಾ ಸ್ತೋತ್ರಮ್ ||
ಭಾವಾರ್ಥ -> ೧೭
"ಗಂಗಾ ಸಾಗರಕ್ಕೆ ಯಾತ್ರೆ ಮಾಡಲಿ, ಎಷ್ಟೇ ವ್ರತಂಗಳನ್ನು ಆಚರಣೆ ಮಾಡುತ್ತಿರಲಿ, ಬೇಕಾದಷ್ಟು ದಾನ ಧರ್ಮಂಗಳನ್ನು ಮಾಡಲಿ ಇವಾವುದರಿಂದಲೇ ಆಗಲಿ ಜ್ಞಾನ ಇಲ್ಲದ್ದವಗೆ ನೂರು ಜನ್ಮ ಕಳೆದರೂ ಮುಕ್ತಿ ಇಲ್ಲ ಅನ್ನೋದು ವಾಸ್ತವ.
||ಈ ರೀತಿಯಾಗಿ ಶ್ರೀಮತ್ಪರಮಹಂಸರೂ, ಪರಿವ್ರಾಜಕಾರ್ಯವರ್ಯರೂ,ಪದವಾಕ್ಯಪ್ರಮಾಣ ಪಾರಾವಾರಪಾರೀಣರೂ, ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠರೂ ತಪಶ್ಚಕ್ರವರ್ತಿಗಳೂ ಆದ ಜಗದ್ಗುರು ಶ್ರೀ ಶ್ರೀಶಂಕರಾಚಾರ್ಯರಿಂದ ವಿರಚಿತವಾದ ಚರ್ಪಟ ಪಂಜರಿಕಾ ಸ್ತೋತ್ರಗಳಿಗೆ ಯಥಾ ಜ್ಞಾನೇನ ಬರೆದ ಭಾವಾರ್ಥವಾಗಿದೆ ||
++++++++++++++++++++++++++++++++++++++++++++++++++++++++++++++++++++++++
-೨-
ಸಾಕ್ಷಾತ್ ಭಗವತ್ ಸ್ವರೂಪೀ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಜಗದ್ಗುರು ಶಂಕರಾಚಾರ್ಯ ವಿರಚಿತ ದ್ವಾದಶ ಪಂಜರಿಕಾ ಸ್ತೋತ್ರಮ್
*********************************************************************************
ಸ್ತೋತ್ರ - ೧
ಮೂಢ ಜಹೀಹಿ ಧನಾಗಮ ತೃಷ್ಣಾಂ
ಕುರು ಸದ್ಬುಧ್ಧಿಂ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂತೇನ ವಿನೋದಯ ಚಿತ್ತಮ್ ||
ಭಾವಾರ್ಥ -> ೧
ಭಗವದ್ಸ್ವರೂಪಿ ಶಂಕರಾಚಾರ್ಯರು ಹೇಳ್ತಾರೆ--.>
"ಹೇ! ಬುಧ್ಧಿಗೇಡಿಯೇ, ಸಂಪತ್ತಿನ ಶೇಖರಣೆಯ ಆಶೆಯನ್ನು ಬಿಡು; ಮನಸ್ಸಿನಲ್ಲಿ ಸದ್ಬುಧ್ಧಿಯನ್ನೂ, ವೈರಾಗ್ಯವನ್ನೂ ಬೆಳೆಸಿಕೊ;ನಿನ್ನ ಕರ್ಮದಿಂದ ಬರುವ ದ್ರವ್ಯದಿಂದ ಮನಸ್ಸಿಗೆ ತೃಪ್ತಿ ತಂದುಕೊ."
ಸ್ತೋತ್ರ-೨
ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತ:ಸುಖಲೇಶ: ಸತ್ಯಮ್ |
ಪುತ್ರಾದಪಿ ಧನಭಾಜಾಂ ಭೀತಿ:
ಸರ್ವತ್ರೈಷಾ ವಿಹಿತಾ ನೀತಿ: ||
ಭಾವಾರ್ಥ -> ೨
ಶಂಕರ ಭಗವದ್ಪಾದರು ಮುಂದುವರಿಸಿ ಹೇಳ್ತಾರೆ ->
"ಯಾವಾಗಲೂ ಸಂಪತ್ತಿನಿಂದ ಅನರ್ಥ/ಅಪಾಯ ತಪ್ಪಿದ್ದಲ್ಲ;ಸತ್ಯವಾಗಿಯೂ ಹೇಳುವೆನು ,ಅದರಲ್ಲಿ ಸಾಸಿವೆಯಷ್ಟೂ ಸುಖ ಅನ್ನೋದು ಇಲ್ಲ.;ಸಂಪತ್ತು ತುಂಬಿಕೊಂಡು ಇರುವಂತಹಾ ಶ್ರೀಮಂತರಿಗೆ ಅವರ ಮಕ್ಕಳಿಂದಲೇ ಅಪಾಯದ ಭೀತಿ ತಪ್ಪಿದ್ದಲ್ಲ; ಸರ್ವತ್ರ ನಾವು ಕಾಣಬಹುದಾದ ಸತ್ಯ ಸ್ಥಿತಿಯೇ ಇದಾಗಿದೆ".
ಸ್ತೋತ್ರ-೩
ಕಾ ತೇ ಕಾಂತಾ ಕಸ್ತೇ ಪುತ್ರ:
ಸಂಸಾರೋಯಮತೀವ ವಿಚಿತ್ರ: |
ಕಸ್ಯ ತ್ವಂ ಕ: ಕುತ ಆಯಾತ-
ಸ್ತತ್ತ್ವಂ ಚಿಂತಯ ಯದಿದಂ ಭ್ರಾತ:||
ಭಾವಾರ್ಥ-> ೩
ಮುಂದುವರಿಸಿ ಅವರು ಹೇಳ್ತಾರೆ ->
"ನಿನ್ನ ಹೆಂಡತಿ ಯಾರು?;ಮಗನಾರು?;ಈ ಸಂಸಾರ ಅನ್ನೋದು ಅತಿ ವಿಚಿತ್ರವಾಗಿದೆ ನೋಡು; ನೀನು ಸ್ವಲ್ಪ ಆಲೋಚನೆ ಮಾಡಿ ನೋಡು, ನೀನಾರು? ಅವ ಯಾರು? ಎಲ್ಲಿಂದ ಬಂದಿರುವಿ ? ಹೇ ಸಹೋದರನೇ ! ಇದರ ಬಗ್ಗೆ ಸರಿಯಾಗಿ, ಸಾವಧಾನವಾಗಿ ಆಲೋಚಿಸಿ ನೋಡು"
ಸ್ತೋತ್ರ-> ೪
ಮಾ ಕುರು ಧನಜನ ಯೌವನಗರ್ವಂ
ಹರತಿ ನಿಮೇಷಾತ್ ಕಾಲ: ಸರ್ವಮ್ |
ಮಾಯಾಮದಮಿದಮಖಿಲಂ ಹಿತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ ||
ಭಾವಾರ್ಥ -> ೪
ಭಗವದ್ಸ್ವರೂಪೀ ಶಂಕರಾಚಾರ್ಯರು ಮತ್ತೂ ಹೇಳ್ತಾರೆ ->
"ಸಂಪತ್ತು;ಯೌವನ;ಜನಬಲ ಇದೆ ಅಂತ ಗರ್ವ ಪಡಬೇಡಾ. ಕಾಲ ಅನ್ನೋದು ಅವೆಲ್ಲವನ್ನೂ ಕ್ಷಣ ಮಾತ್ರದಲ್ಲಿ ನಾಶ ಮಾಡುತ್ತದೆ.. ಆದ ಕಾರಣ ಮಾಯೆ ತುಂಬಿಕೊಂಡು ಇರುವ ಈ ಅಖಿಲ ಜಗತ್ತಿನ ಮೋಹವನ್ನು ಬಿಟ್ಟು ಪರಬ್ರಹ್ಮ ಸ್ವರೂಪವನ್ನು ತಿಳಿದುಕೊಂಡು ಅದರಲ್ಲಿ ನಿನ್ನನ್ನು ನೀನು ತಲ್ಲೀನಗೊಳಿಸಿಕೊ..
ಸ್ತೋತ್ರ - ೫
ಕಾಮಂ ಕ್ರೋಧಂ ಮೋಹಂ ಲೋಭಂ
ತ್ಯಕ್ತ್ವಾತ್ಮಾನಂ ಭಾವಯ ಕೋಹಂ |
ಆತ್ಮಜ್ಞಾನವಿಹೀನಾ ಮೂಢ-
ಸ್ತೇ ಪಚ್ಯಂತೇ ನರಕ ನಿಗೂಢಾ: ||
ಭಾವಾರ್ಥ - ೫
"ಕಾಮ[ಆಶೆ],ಕ್ರೋಧ;ಲೋಭ[ದುರಾಶೆ]; ಮೋಹ ಇವೆಲ್ಲವನ್ನೂ ತ್ಯಜಿಸಿ, "ನಾನಾರು" ಎಂದು ನಿನ್ನ ಆತ್ಮದ ಬಗ್ಗೆ ವಿಚಾರ ವಿಮರ್ಷೆ ಮಾಡು; ಆತ್ಮ ಜ್ಞಾನವೇ ಇಲ್ಲದಿರುವ ಬುಧ್ಧಿಗೇಡಿಗಳು ನರಕಯಾತನೆಯನ್ನು ಅನುಭವಿಸುತ್ತಾರೆ "
ಸ್ತೋತ್ರ - ೬
ಸುರಮಂದಿರಮೂಲನಿವಾಸ:
ಶಯ್ಯಾ ಭೂತಲಮಜಿನಂ ವಾಸ: |
ಸರ್ವಪರಿಗ್ರಹಭೋಗತ್ಯಾಗ:
ಕಸ್ಯ ಸುಖಂ ನ ಕರೋತಿ ವಿರಾಗ: ||
ಭಾವಾರ್ಥ - ೬
ಆ ಮಹಾ ಗುರುಗೊ ಉಪದೇಶರೂಪದಲ್ಲಿ ಮುಂದುವರಿಸಿ ಹೇಳ್ತಾರೆ ->
"ದೇವಸ್ಥಾನದಲ್ಲೋ, ಮರದ ಅಡಿಯಲ್ಲಿಯೋ ಉಳಿದಿಕೊಂಡು ಭೂಮಿಯ ಮೇಲೆ ಮಲಗುವುದು; ಕೃಷ್ಣಾಜಿನವನ್ನು ವಸ್ತ್ರದ ಬದಲಾಗಿ ಉಪಯೋಗಿಸಿಕೊಂಡು ಯಾವ ದಾನಗಳನ್ನೂ ಸ್ವೀಕರಿಸದೆ ಭೋಗವನ್ನು ತ್ಯಜಿಸುವಂತಹಾ ವೈರಾಗ್ಯವು ಯಾರಿಗೆ ಸುಖವನ್ನು ಕೊಡಲಾರದು? ಯೋಚನೆ ಮಾಡಿ."
ಸ್ತೋತ್ರ -> ೭
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹ ಸಂಧೌ |
ಭವ ಸಮಚಿತ್ತ: ಸರ್ವತ್ರ ತ್ವಂ
ವಂಛಸ್ಯಚಿರಾದ್ ಯದಿ ವಿಷ್ಣುತ್ವಮ್ ||
ಭಾವಾರ್ಥ -> ೭
ಪೂಜ್ಯ ಶಂಕರ ಭಗವದ್ಪಾದರು ಮತ್ತೂ ಉಪದೇಶ ಮಾಡ್ತಾ ಇದ್ದಾರೆ ->
ಶತ್ರು,ಮಿತ್ರ,ಮಗ, ಬಂಧುವರ್ಗ,ಯುದ್ಧ,ಸಂಧಿ ಇಂತಹ ಯಾವುದರಲ್ಲಿಯೂ ನೀನು ಆಸಕ್ತಿ ಹೊಂದಬೇಡಾ. ವಿಷ್ಣುತ್ವವನ್ನು ಅತಿ ಶೀಘ್ರವಾಗಿ ನೀನು ಹೊಂದಬೇಕಾದರೆ ನಿನ್ನಲ್ಲಿ ಸರ್ವತ್ರ ಸಮ ಚಿತ್ತವಿರಲಿ."
ಸ್ತೋತ್ರ - ೮
ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣು-
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣು: |
ಸರ್ವಸ್ಮಿನ್ನಪಿ ಪಶ್ಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇಧಜ್ಞಾನಮ್ ||
ಭಾವಾರ್ಥ -> ೮
ವ್ಯಾಖ್ಯಾನ ಸಿಂಹಾಸನಾಧೀಶ್ವರ ಪರಮ ಪೂಜನೀಯ ಜಗದಾದಿ ಜಗದ್ಗುರು ಶಂಕರಾಚಾರ್ಯರು ಮುಂದುವರಿಸಿ ಉಪದೇಶಿಸುತ್ತಾ ಇದ್ದಾರೆ ->
"ವಿಷ್ಣು ಒಬ್ಬನೇ; ಅವನು ನಿನ್ನಲ್ಲಿ, ನನ್ನಲ್ಲಿ ಹಾಗೇನೇ ಬೇರೆಯವರಲ್ಲಿಯೂ ಇರುವಂತಹವನೇ. ನನ್ನ ಬಗ್ಗೆ ನಿನಗೆ ಸಹನಾ ಶಕ್ತಿ ಇಲ್ಲದಿರುವ ಕಾರಣ ನೀನು ಕೋಪಗೊಳ್ಳುತ್ತಾ ಇರುವಿ. ಇನ್ನಾದರೂ ತಿಳಿದುಕೋ; ಎಲ್ಲರಲ್ಲಿಯೂ ಆತ್ಮಶಕ್ತಿಯನ್ನು ಕಾಣು;ನಾನು ಹೇಳ್ತಾ ಇದ್ದೇನೆ, ಭೇಧ ಬುದ್ಧಿಯನ್ನು ಬಿಟ್ಟು ಬಿಡು."
ಸ್ತೋತ್ರ - ೯
ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕ ವಿಚಾರಮ್ |
ಜಾಪ್ಯಸಮೇತಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||
ಭಾವಾರ್ಥ -> ೯
ಪರಮ ಪೂಜ್ಯ ಜಗದ್ವಂದ್ಯ ಆದಿ ಶಂಕರರು ಇನ್ನೂ ಮುಂದುವರಿಸಿ ಹೇಳ್ತಾ ಇದ್ದಾರೆ ->
"ಪ್ರಾಣಾಯಾಮ,ಪ್ರತ್ಯಾಹಾರ,ನಿತ್ಯಾನಿತ್ಯ ವಸ್ತು ವಿಷಯ ವಿಮರ್ಶೆ,ಮಂತ್ರ,ಜಪ,ಅದರ ಜೊತೆಗೆ ಸಮಾಧಿಯೋಗಗಳನ್ನು ನೀನು ಅಭ್ಯಾಸ ಮಾಡು;ಈ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದವನಾಗಿ ನೀನು ಗಮನ ಕೊಡಬೇಕು."
ಸ್ತೋತ್ರ -> ೧೦
ನಲಿನೀದಲಗತಸಲಿಲಂ ತರಲಂ
ತದ್ವಜ್ಜೀವಿತಮತಿಶಯಚಪಲಮ್ |
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||
ಭಾವಾರ್ಥ -> ೧೦
ಆ ಮಹಾ ಗುರುಗಳು ಮತ್ತೂ ಮುಂದುವರಿಸಿ ಹೇಳ್ತಾರೆ ->
"ಕಮಲದಎಲೆ ಮೇಲೆ ಇಪ್ಪಂತಹಾ ನೀರಿನಬಿಂದು ಹೇಂಗೆ ಚಂಚಲವಾಗಿದ್ದೋ ಹಾಂಗ್ಯೇ ಈ ಜೀವನವೂ ಅತ್ಯಂತ ಚಂಚಲವಾಗಿಪ್ಪದು. ರೋಗ ವ್ಯಾಧಿ-ಅಭಿಮಾನಗಳಂದ ಜನಂಗೊ ಎಲಾ ದು:ಖಂದ ಹತರಾಯಿದವು ಹೇಳೋದರ ಅರ್ಥ ಮಾಡಿಗೋ."
ಸ್ತೋತ್ರ -> ೧೧
ಕಾ ತೇಷ್ಟಾದಶ ದೇಶೇ ಚಿಂತಾ
ವಾತುಲ ತವ ಕಿಂ ನಾಸ್ತಿ ನಿಯಂತಾ |
ಯಸ್ತ್ವಾಂ ಹಸ್ತೇ ಸುದೃಢನಿಬದ್ಧಂ
ಭೋಧಯತಿ ಪ್ರಭವಾದಿವಿರುದ್ಧಮ್ ||
ಭಾವಾರ್ಥ -> ೧೧
ಆರಾಧ್ಯ ಅದಿಗುರು ಶಂಕರಾಚಾರ್ಯ ಮಹಾಸ್ವಾಮಿಗಳು ಮುಂದುವರಿಸುತ್ತಾ ಹೇಳ್ತಾರೆ ->
"ಹೇ! ಚಂಚಲ ಮನಸ್ಸಿನವನೇ!
ನಿನ್ನ ಮನಸ್ಸೇತಕ್ಕೆ ಹತ್ತು ಹದಿನೆಂಟು ದಿಕ್ಕಿಂಗೆ ಓಡ್ತಾ ಇದೆ? ನಿನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಉತ್ಪತ್ತಿ,ಸ್ಥಿತಿ,ಲಯಾದಿಗಳಲ್ಲಿ ಇರುವ ಪರಸ್ಪರ ವಿರೋಧಂಗಳನ್ನು ನಿನಗೆ ಅರ್ಥ ಆಗುವ ಹಾಗೆ ವಿವರಿಸುವಂತಹಾ ಜ್ಞಾನಿಗಳು ಯಾರೂ ಇಲ್ಲವೇ?"
ಸ್ತೋತ್ರ -> ೧೨
ಗುರುಚರಣಾಂಬುಜನಿರ್ಭರಭಕ್ತ:
ಸಂಸಾರಾದಚಿರಾದ್ಭವ ಮುಕ್ತ: |
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್ ||
ಭಾವಾರ್ಥ -> ೧೨
ಪರಮ ಪೂಜನೀಯ ಶಂಕರ ಭಗವದ್ಪೂಜ್ಯರು ಮತ್ತೂ ಮುಂದುವರಿಸುತ್ತಾ ಹೇಳ್ತಾ ಇದ್ದಾರೆ ->
"ನೀನು ಆ ಗುರುಚರಣಾಂಬುದಿಯಲ್ಲಿ ಪೂರ್ಣ ಭಕ್ತಿ ಹೊಂದಿದವನಾಗಿ ಸಂಸಾರ ಸಾಗರದಿಂದ ಬೇಗ ಮುಕ್ತನಾಗು.ಇಂದ್ರಿಯಗಳ ಜೊತೆಯಲ್ಲಿ ಮನಸ್ಸನ್ನೂ ನಿಗ್ರಹಿಸಲು ನಿನ್ನಿಂದ ಸಾಧ್ಯವಾದರೆ ನಿನ್ನ ಹೃದಯದಲ್ಲಿ ವಾಸವಾಗಿರುವಂತಹಾ ಆ ಈಶ್ವರನನ್ನು ನೀನು ಕಾಣಲು ಶಕ್ತನಾಗುವಿ. ಆ ಗುರಿ ನಿನ್ನದಾಗಿರಲಿ..";
*********************************************************************************
||ಇತಿ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮದ್ಶಂಕರಾಚಾರ್ಯ ವಿರಚಿತ ದ್ವಾದಶಪಂಜರಿಕಾ ಸೋತ್ರಮ್ ||
ಈ ರೀತಿಯಾಗಿ ಪರಮಹಂಸರೂ ಪರಿವ್ರಾಜಕಾಚಾರ್ಯವರ್ಯರೂ ಆದ ಜಗದ್ಗುರು ಶ್ರೀಮದ್ಶಂಕರಾಚಾರ್ಯ ಗುರುವರೇಣ್ಯರಿಂದ ವಿರಚಿತವಾದ ದ್ವಾದಶಪಂಜರಿಕಾ ಸ್ತೋತ್ರಂಗಳ ಭಾವಾರ್ಥವಾಗಿದೆ.
****************************************************************************
-೩-
|| ಪ್ರಶ್ನೋತ್ತರ ರೂಪೇ ಆತ್ಮ ಸ್ವರೂಪ ಕಥನ [ಏಕ ಶ್ಲೋಕೀ ಆತ್ಮ ಸ್ವರೂಪ] ||
**********************************************************
ಕಿಂ ಜ್ಯೋತಿಸ್ತವ ಭಾನುಮಾನಹನಿ ಮೇ ರಾತ್ರೌ ಪ್ರದೀಪಾಧಿಕಂ |
ಸ್ಯಾ ದೇವಂ ರವಿ ದೀಪ ದರ್ಶನ ವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ ||
ಚಕ್ಷುಸ್ತಸ್ಯ ನಿಮೀಲನಾದಿಸಮಯೇ ಕಿಂ ಧೀರ್ಧಿಯೋ ದರ್ಶನೇ |
ಕಿಂ ತತ್ರಾಹಮನೋ ಭವಾನ್ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ ||
ಸಂವಾದರೂಪದಲ್ಲಿ ಭಾವಾರ್ಥ:-ಗುರು-> ಜಗತ್ತಿನ ಸೃಷ್ಟಿಯಲ್ಲಿರುವ ವಸ್ತುಗಳನ್ನು ಯಾವ ಬೆಳಕಿನ ಮೂಲಕ ನೀನು ಅರಿತುಕೊಳ್ಳುವೆ?
ಶಿಷ್ಯ-> ಗುರುವರ್ಯಾ; ಹಗಲಿನ ಸಮಯ ಸೂರ್ಯನ ಬೆಳಕಿನ ಮೂಲಕವೂ,ರಾತ್ರಿಯ ಕಾಲದಲ್ಲಿ ದೀಪವೇ ಮೊದಲಾದ ಬೆಳಕಿನ ಮೂಲಗಳಿಂದಲೂ ಜಗತ್ತಿನ ಸೃಷ್ಟಿಯಲ್ಲಿರುವ ವಸ್ತುಗಳ ಬಗ್ಗೆ ಅರಿತುಕೊಳ್ಳುವೆ.
ಗುರು-> ಹಾಗಾದರೆ ಇವನು ರವಿ,ಇದು ದೀಪ, ಎಂಬುದಾಗಿ ಅರಿತುಕೊಳ್ಳಲು ಯಾವ ಪ್ರಕಾಶ ನಿನಗೆ ಸಾಧನವಾಯಿತು?
ಶಿಷ್ಯ-> ಗುರು ದೇವಾ; ಕಣ್ಣುಗಳ ದೃಷ್ಟಿಯ ಮೂಲಕ ಅವುಗಳ ವಿಚಾರವಾಗಿ ಅರಿತುಕೊಳ್ಳುವೆನು.
ಗುರು->ನೀನು ಕಣ್ಣುಗಳನ್ನು ಮುಚ್ಚಿಕೊಂಡಿರುವಾಗ ಅವುಗಳನ್ನು ಯಾವ ಜ್ಯೋತಿಯ ಮೂಲಕ ,ಹೇಗೆ ಅರಿತುಕೊಳ್ಳುವಿ?
ಶಿಷ್ಯ-> ವಿಮರ್ಶೆಯ ಮೂಲಕ ಅರಿತುಕೊಳ್ಳುವೆ ಗುರುವರ್ಯಾ.
ಗುರು-> ವಿಮರ್ಶೆ ಮಾಡಲು ಆ ದರ್ಶನ [ಜ್ಞಾನ] ನಿನಗೆ ಎಲ್ಲಿಂದ ದೊರಕಿತು?
ಶಿಷ್ಯ-> ನನ್ನ ತಿಳುವಳಿಕೆಯ ಮೂಲಕವಾಗಿ ಅವುಗಳ ಕುರಿತಾಗಿ ಅರಿತುಕೊಳ್ಳಲು ನಾನೇ ಕಾರಣೀಭೂತನಾಗಿರುವೆ ಗುರುದೇವಾ.
ಗುರು-> ಓ! ಹಾಗಾದರೆ ಸೂರ್ಯ,ದೀಪ,ಕಣ್ಣುಗಳು,ಬುದ್ಧಿ,ಇವೆಲ್ಲವುಗಳನ್ನು ಬೆಳಗಿಸುವ ಪರಂಜ್ಯೋತಿ ಪ್ರಕಾಶವೇ ನೀನಾಗಿರುವೆಯಲ್ಲವೇ?
ಶಿಷ್ಯ-> ಹೌದು ಗುರುದೇವಾ; ಆ ಪರಂಜ್ಯೋತಿಯಾಗಿರುವ ಆತ್ಮನೇ ನಾನಾಗಿರುವೆ.
*********************************************************************
|| ಇತಿ ಶ್ರೀ ಶಂಕರ ಭಗವದ್ಪಾದ ವಿರಚಿತ ಪ್ರಶ್ನೋತ್ತರ ರೂಪೇ ಆತ್ಮ ಸ್ವರೂಪ ಕಥನ: ||
||ಈ ತೆರನಾಗಿ ಶ್ರೀ ಶಂಕರ ಭಗವದ್ಪಾದರು ಪ್ರಶ್ನೋತ್ತರ ರೂಪದಲ್ಲಿ ರಚಿಸಿದ ಏಕ ಶ್ಲೋಕೀ ಆತ್ಮ ಸ್ವರೂಪ ಕಥನದ ಭಾವಾರ್ಥವಾಗಿದೆ. ||
*********************************************************************
-೪-
|| ಆತ್ಮ ಪಂಚಕಮ್ ||
******************
ನಾಹಂ ದೇಹಂ ನೇಂದ್ರಿಯಾಣ್ಯಂ ತರಂಗಂ |
ನಾಹಂಕಾರ: ಪ್ರಾಣವರ್ಗೋ ನ ಬುದ್ಧಿ: ||
ದಾರಾಪತ್ಯ ಕ್ಷೇತ್ರವಿತ್ತಾದಿ ದೂರ: |
ಸಾಕ್ಷೀ ನಿತ್ಯ: ಪ್ರತ್ಯಗಾತ್ಮಾ ಶಿವೋ??ಹಮ್ ||೧||
ಭಾವಾರ್ಥ:-ಈ ಶರೀರವು ನಾನಲ್ಲ.ಇಂದ್ರಿಯಗಳೂ ನಾನಲ್ಲ.ಮನಸ್ಸು,ಅಹಂಕಾರಹಾಗೂ ಪ್ರಾಣಾಪಾನಾದಿ ಪ್ರಾಣವರ್ಗಗಳೂ ನಾನಲ್ಲ.ಬುದ್ಧಿಯು ನಾನಲ್ಲ.ಪತ್ನಿ.ಭೂಮಿ,ಮಕ್ಕಳು,ಮನೆಮಾರು,ದ್ರವ್ಯಾದಿಗಳಿಂದಲೂ ನಾನು ದೂರವಾಗಿರುವವನು.ಆದರೂ ಅವೆಲ್ಲವುಗಳಿಗೆ ಸಾಕ್ಷೀ ರೂಪನಾಗಿ ಶಾಶ್ವತನೂ ಪರಮಾತ್ಮನೂ ಆದ ಶಿವನೇ ನಾನಾಗಿದ್ದೇನೆ.
ರಜ್ಜ್ವಜ್ಞಾನಾದ್ಭಾತಿ ರಜ್ಜುರ್ಯಥಾಹಿ: |
ಸ್ವಾತ್ಮಾಜ್ಞಾನಾದಾತ್ಮನೋ ಜೀವಭಾವ: ||
ಆಪ್ತೋಕ್ತ್ಯಾsಹಿ ಭ್ರಾಂತಿ ನಾಶೇ ಸರಜ್ಜು
ರ್ಜೀವೋ ನಾಹಂ ದೇಶಿಕೋಕ್ತ್ಯಾ ಶಿವೋ??ಹಮ್ ||೨||
ಭಾವಾರ್ಥ:-ಇದು ಹಗ್ಗ ಎಂಬ ತಿಳುವಳಿಕೆ ಇರದೆ ಇದ್ದುದರಿಂದ ಹಗ್ಗವು ಹಾವಿನಂತೆ ಭಾಸವಾಗುವಂತೆ,ತನ್ನ ರೂಪದ ಬಗ್ಗೆ ಆತ್ಮನಿಗೆ ಅರಿವಿಲ್ಲದುದರಿಂದ ಜೀವತ್ವದ ಭಾವವುಳ್ಳದ್ದಾಗಿದೆ.ಆಪ್ತರ ಹಿತನುಡಿಯಂತೆ ಭ್ರಾಂತಿಯು ನಾಶವಾಗಿ ಹಾವಿನ ಭಾವವು ಅಳಿದು ಹಗ್ಗವೇ ಆಗಿ ಕಾಣುವಂತೆ ಸದ್ಗುರುಗಳ ಉಪದೇಶದ ಪ್ರಭಾವದಿಂದಾಗಿ ಜೀವವು ನಾನಲ್ಲ.ಶಿವನೇ ನಾನಾಗಿದ್ದೇನೆ.
ಆಭಾತೀದಂ ವಿಶ್ವಮಾತ್ಮನ್ಯ ಸತ್ಯಂ |
ಸತ್ಯ ಜ್ಞಾನಾನಂದರೂಪೇ ವಿಮೋಹಾತ್ ||
ನಿದ್ರಾಮೋಹಾತ್ಸ್ವಪ್ನವತ್ತನ್ನ ಸತ್ಯಂ
ಶುದ್ಧ:ಪೂರ್ಣೋ ನಿತ್ಯಏಕ: ಶಿವೋsಹಮ್ ||೩||
ಭಾವಾರ್ಥ:-ನಿದ್ರಾವಸ್ಥೆಯ ಭ್ರಾಂತಿಯಲ್ಲಿ ಕಾಣುವ ಕನಸಿನಂತೆ ಸಚ್ಚಿದಾನಂದ ಸ್ವರೂಪಿಯಾಗಿರುವ ಆತ್ಮನಲ್ಲಿ ಭ್ರಮೆಗೊಳಗಾಗಿ ಈ ಪ್ರಪಂಚವು ಸುಳ್ಳಾಗಿ ಭಾಸವಾಗುವುದು.ಆ ತೆರನಾಗಿ ಕಾಣುವ ಜಗತ್ತು ಸತ್ಯವಲ್ಲ.ಇಂಥ ಪ್ರಪಂಚದಲ್ಲಿ ಪರಿಶುದ್ಧನೂ ಪರಿಪೂರ್ಣನೂ,ನಿತ್ಯನೂ,ಸರಿಸಾಟಿಯಿಲ್ಲದವನೂ ಆಗಿರುವ ಶಿವನೇ ನಾನಾಗಿರುವೆ.
ಮತ್ತೋ ನಾನ್ಯತ್ಕಿಂಚಿದತ್ರಾಸ್ತಿ ವಿಶ್ವಂ |
ಸತ್ಯಂ ಬಾಹ್ಯಂ ವಸ್ತು ಮಾಯೋಪಕ್ಲುಪ್ತಮ್ ||
ಆದರ್ಶಾಂತರ್ಭಾಸಮಾನಸ್ಯ ತುಲ್ಯಂ |
ಮಯ್ಯದ್ವೈತೇ ಭಾತಿ ತಸ್ಮಾಚ್ಛಿವೋsಹಮ್ ||೪||
ಭಾವಾರ್ಥ:-ಇಲ್ಲಿ ನನಗಿಂತ ಅನ್ಯ ಜಗತ್ತು ಕಿಂಚಿತ್ತಾದರೂ ಮಗದೊಂದಿಲ್ಲ.ಹೊರಗೆ ಕಾಣುವ ಈ ವಸ್ತುಗಳು ಮಾಯೆಯಿಂದ ವ್ಯವಸ್ಥೆಗೊಳಿಸಲ್ಪಟ್ಟಿದೆಯೆಂಬುದು ಖಚಿತ.ದರ್ಪಣದೊಳಗೆ ಕಂಡುಬರುವ ವಸ್ತುವಿನ ಪ್ರತಿಬಿಂಬದಂತೆ ಅವು ಅದ್ವೈತ ಸ್ವರೂಪಿಯಾಗಿರುವ ನನ್ನಲ್ಲಿ ಒಳಗೊಂಡಿರುತ್ತವೆ.ಹಾಗಿರುವುದರಿಂದ ನಾನು ಶಿವನೇ ಆಗಿದ್ದೇನೆ.
ನಾಹಂ ಜಾತೋ ನ ಪ್ರವೃದ್ದ್ಭೋನ ನಷ್ಟೋ |
ದೇಹಸ್ಯೋಕ್ತಾ: ಪ್ರಾಕೃತಾ: ಸರ್ವಧರ್ಮಾ: ||
ಕರ್ತೃತ್ವಾದಿಶ್ಚಿನ್ಮಯಸ್ಯಾಸ್ತಿ ನಾಹಂ- |
ಕಾರಸ್ಯೈವ ಹ್ಯಾತ್ಮನೋ ಮೇ ಶಿವೋsಹಮ್ ||೫||
ಭಾವಾರ್ಥ:-ನಾನು ಹುಟ್ಟಿಲ್ಲ.ಬೆಳೆಯುವುದಿಲ್ಲ.ಸಾವು ನನಗಿಲ್ಲ.ಇವೆಲ್ಲವೂ ದೇಹಕ್ಕೆ ಸಂಬಂಧಿಸಿದವುಗಳಾಗಿದ್ದು ಪ್ರಕೃತಿಕಾರ್ಯಗಳಾಗಿವೆ.ಅವು ನನಗೆ ಸಂಬಂಧಪಟ್ಟವುಗಳಾಗಿರುವುದಿಲ್ಲ.ಆ ಸೃಷ್ಟಿಸುವ-ಅನುಭವಿಸುವ ಕಾರ್ಯಗಳು ಕೂಡಾ "ನಾನು" ಎನ್ನುವ ಭಾವ ಸಿದ್ಧಾಂತಕ್ಕೆ ಹೊಂದಿರುವುದಾಗಿದೆ.ಅವುಗಳಿಗೆ ಹೊಂದಿಕೆಯಿಲ್ಲದ ಚಿದಾನಂದ ರೂಪನಾದ ಶಿವನೇ ನಾನಾಗಿರುವೆ.
ನಾಹಂ ಜಾತೋ ಜನ್ಮಮೃತ್ಯೂ ಕುತೋ ಮೇ |
ನಾಹಂ ಪ್ರಾಣ: ಕ್ಷುತ್ಪಿಪಾಸೇ ಕುತೋಮೇ ||
ನಾಹಂಚಿತ್ತಂ ಶೋಕಮೋಹೌ ಕುತೋ ಮೇ |
ನಾಹಂ ಕರ್ತಾ ಬಂಧಮೋಕ್ಷೌ ಕುತೋ ಮೇ ||೬||
ಭಾವಾರ್ಥ:-ಹುಟ್ಟು ಎಂಬುದೇ ಇಲ್ಲದ ನನಗೆ ಜನ್ಮ ಮೃತ್ಯುಗಳೆಂಬ ಗುಣ ಧರ್ಮಗಳು ಎಲ್ಲಿಂದ ಬರಬೇಕು?ಜೀವವೇ ಅಲ್ಲದಿರುವ ನನಗೆ ಹಸಿವು ನೀರಡಿಕೆಗಳಾದರೂ ಎಲ್ಲಿಯವು?ಮನಸ್ಸೇ ಅಲ್ಲದಿರುವ ನನಗೆ ಶೋಕ ಮೋಹಗಳಾದರೂ ಎಲ್ಲಿಯವು?ನಾನು ಮಾಡುವವನೇ ಅಲ್ಲದಿರುವಾಗ ನನಗೆ ಬಂಧಮೋಕ್ಷಗಳಾದರೂ ಎಲ್ಲಿಯವು?
*********************************************************************
|| ಇತಿ ಆತ್ಮಪಂಚಕಮ್ || || ಈ ರೀತಿಯಾಗಿ ಆತ್ಮಪಂಚಕಗಳ ಭಾವಾರ್ಥವಾಗಿದೆ ||
*********************************************************************
-೫-
|| ಮಾಯಾ ಪಂಚಕಮ್ ||
*******************
ನಿರುಪಮನಿತ್ಯನಿರಂಶಕೇsಪ್ಯಖಂಡೇ |
ಮಯಿಚಿತಿ ಸರ್ವ ವಿಕಲ್ಪನಾದಿಶೂನ್ಯೇ ||
ಘಟಯತಿ ಜಗದೀಶಜೀವಭೇದಂ |
ತ್ವಘಟಿತಘಟನಾಪಟೀಯಸೀ ಮಾಯಾ ||೧||
ಭಾವಾರ್ಥ:-ಸರಿಸಾಟಿಯಿಲ್ಲದ,ನಾಶರಹಿತವಾದ,ಅಗಾಂಗವಿರಹಿತವಾಗಿ,ಪೂರ್ಣವೂಮತ್ತು ಸಮಸ್ತವಿಕಲ್ಪಾದಿಗಳಿಂದ ಹೊರತಾಗಿರುವ ಪರಮಾತ್ಮನರೂಪವುಳ್ಳ ನನ್ನಲ್ಲಿ ಬ್ರಹ್ಮಾಂಡ-ಈಶ್ವರ-ಜೀವಗಳೆಂಬ ಭೇದಭಾವವನ್ನು ಕಲ್ಪಿಸುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ಶ್ರುತಿಶತನಿಗಮಾಂತ ಶೋಧಕಾನ- |
ಪ್ಯಹಹ ಧನಾದಿ ನಿದರ್ಶನೇನ ಸದ್ಯ: ||
ಕಲುಷಯತಿ ಚತುಷ್ಟದಾದ್ಯ ಭಿನ್ನಾ- |
ನಘಟಿತಘಟನಾಪಟೀಯಸೀ ಮಾಯಾ ||೨||
ಭಾವಾರ್ಥ:-ನೂರಾರು ವೇದೋಪನಿಷದ್ಗ್ರಂಥಗಳನ್ನು ವಿಮರ್ಶಿಸುವ ವಿದ್ವಜ್ಜನರಿಗೂ ಧನ ಸಂಪದಗಳಾದಿಯಲ್ಲಿ ಮೋಹ ಹುಟ್ಟಿಸುವ ಮೂಲಕವಾಗಿ ಚತುಷ್ಪಾದಾದಿಗಳಿಗೂ ವಿದ್ವಜ್ಜನರಿಗೂ ಭೇದವಿಲ್ಲದಂತೆ ಅವರುಗಳ ಬುದ್ಧಿಯನ್ನು ಹಾಳುಗೆಡಹುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ಸುಖಚಿದಖಂಡವಿಬೋಧಮದ್ವೀತೀಯಂ |
ವಿಯದನಲಾದಿ ವಿನಿರ್ಮಿತೇ ನಿಯೋಜ್ಯ ||
ಭ್ರಮಯತಿ ಭವಸಾಗರೇ ನಿತಾಂತಂ |
ತ್ವಘಟಿತಘಟನಾಪಟೀಯಸೀ ಮಾಯಾ ||೩||
ಭಾವಾರ್ಥ:-ಅದೃಷ್ಟವಂತನೂ,ಪೂರ್ಣನೂ,ಜ್ಞಾನವಂತನೂ,ಸರಿಸಾಟಿಯಿಲ್ಲದಾತನೂ, ಆಗಿರುವ ಆತ್ಮನಿಗೆ ಪೃಥ್ವೀ,ಅಪ್,ತೇಜೋವಾಯು,ಆಕಾಶಗಳೆಂಬ ಪಂಚ ಭೂತಗಳಿಂದ ರಚಿತವಾದ ಈ ಜಡಶರೀರದ ಸಂಬಂಧವನ್ನು ಕಲ್ಪಿಸಿ ಸಂಸಾರಸಾಗರದಲ್ಲಿ ನಿರಂತರ ಮೇಲ್ಮೆಯಿಂದ ಸುತ್ತಾಡಿಸುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ಅಪಗತಗುಣವರ್ಣಜಾತಿಭೇದೇ |
ಸುಖಚಿತಿ ವಿಪ್ರವಿಡಾದ್ಯಹಂಕೃತಿಂ ಚ ||
ಸ್ಫುಟಯತಿ ಸುತದಾರಗೇಹಮೋಹಂ |
ತ್ವಘಟಿತಘಟನಾಪಟೀಯಸೀ ಮಾಯಾ ||೪||
ಭಾವಾರ್ಥ:-ಸಗುಣ-ನಿರ್ಗುಣತ್ವವೂ,ಚತುರ್ವರ್ಣಗಳೂ,ದೇವ-ಮಾನುಷ-ಪ್ರಾಣಿಗಳಾದಿ ಗುಣ ವರ್ಣಜಾತಿಗಳ ಯಾವ ಭೇದಗಳೂ ಇಲ್ಲದ ಸಚ್ಚಿದಾನಂದ ಪರಬ್ರಹ್ಮನಲ್ಲಿ ಇವನು ಬ್ರಾಹ್ಮಣ,ಇವನು ಕ್ಷತ್ರಿಯ,ಇವನು ವೈಶ್ಯ,ಇವನು ಶೂದ್ರ ಎಂಬಿತ್ಯಾದಿ ಜಾತ್ಯಭಿಮಾನವನ್ನೂ, ಪತ್ನೀಮಕ್ಕಳು,ಮನೆ-ಮಾರುಗಳ ಮೋಹವನ್ನೂ ಉಂಟುಮಾಡುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ವಿಧಿಹರಿಹರಭೇಧಮಪ್ಯ ಖಂಡೇ |
ಬತ ವಿರಚಯ್ಯ ಬುಧಾನಪಿ ಪ್ರಕಾಮಂ |
ಭ್ರಮಯತಿ ಹರಿಹರವಿಭೇದಭಾವಾ-
ನಘಟಿತಘಟನಾಪಟೀಯಸೀ ಮಾಯಾ ||೫||
ಭಾವಾರ್ಥ:-ಪೂರ್ಣತ್ವನಾದ ಪರಬ್ರಹ್ಮನಲ್ಲಿ ಬ್ರಹ್ಮ-ವಿಷ್ಣು-ಶಿವರೆಂಬ ಮೂರು ದೇವತಾಶಕ್ತಿ ಭಾವವನ್ನು ಕಲ್ಪಿಸಿ,ವಿದ್ವಜ್ಜನರಲ್ಲಿಯೂ ಹರಿಯು ಶ್ರೇಷ್ಠ,ಹರನೇ ಶ್ರೇಷ್ಠ ಎಂಬ ಭೇದತ್ವದ ಭ್ರಾಂತಿಯನ್ನು ಉಂಟುಮಾಡುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
*********************************************************************
|| ಇತಿ ಮಾಯಾ ಪಂಚಕಮ್ || || ಈ ರೀತಿಯಾಗಿ ಮಾಯಾ ಪಂಚಕಗಳ ಭಾವಾರ್ಥವಾಗಿದೆ ||
*********************************************************************
-೬-
|| ನಿರ್ವಾಣಷಟ್ಕಮ್ ||
******************
ಮನೋಬುದ್ಯಹಂಕಾರಚಿತ್ತಾನಿ ನಾಹಂ |
ನ ಕರ್ಣಂ ನ ಜಿಹ್ವಾ ನ ಚ ಘ್ರಾಣನೇತ್ರೇ ||
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯು- |
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೧||
ಭಾವಾರ್ಥ:-ಮನಸ್ಸು ,ಬುದ್ಧಿ,ಚಿತ್ತ,ಅಹಂಕಾರಗಳೆನ್ನುವ ನಾಲ್ಕು ಬಿರುದುಗಳೂ,ಕಿವಿ,ನಾಲಿಗೆ, ಕಣ್ಣು,ಮೂಗು,ಚರ್ಮಗಳೆಂಬಪಂಚೇಂದ್ರಿಯಗಳೂ,ಭುವಿ,ಆಗಸ,ಜಲ,ವಾಯು,ತೇಜಸ್ಸುಗಳೆನ್ನುವ ಪಂಚಭೂತಗಳೂ ನಾನಲ್ಲ.ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯು- |
ರ್ನ ವಾ ಸಪ್ತಧಾತುರ್ನ ವಾ ಪಂಚಕೋಶ: ||
ನ ವಾಕ್ ಪಾಣಿಪಾದೌ ನ ಚೋಪಸ್ಥಪಾಯೂ |
ಚಿದಾನಂದರೂಪ: ಶಿವೋsಹಂ ಶಿವೋsಹಂ ||೨||
ಭಾವಾರ್ಥ:-ಪ್ರಾಣ ವಾಯುವು ನಾನಲ್ಲ.ಪ್ರಾಣಾಪಾನ ವ್ಯಾನೋದಾನ ಸಮಾನಗಳೆಂಬ ಪಂಚ ಪ್ರಾಣವಾಯುಗಳಲ್ಲಿಯಾವುದೂನಾನಲ್ಲ.ರಸ,ರಕ್ತ,ಮಾಂಸ,ಮೇದಸ್ಸು,ಮಜ್ಜ,ಅಸ್ಥಿ,ಶುಕ್ಲಗಳೆನ್ನುವ ಸಪ್ತ ಧಾತುಗಳೂ ನಾನಲ್ಲ.ಅನ್ನಮಯ,ಪ್ರಾಣಮಯ,ಮನೋಮಯ,ವಿಜ್ಞಾನಮಯ,ಆನಂದಮಯಗಳೆಂಬ ಪಂಚಕೋಶಗಳೂ ನಾನಲ್ಲ.ಹಸ್ತ,ಪಾದ,ನಾಲಿಗೆ,ಗುದದ್ವಾರ,ಗುಪ್ತಾಂಗಗಳೆಂಬ ಪಂಚಕರ್ಮೇಂದ್ರಿಯಂಗಳೂ ನಾನಲ್ಲ.ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ |
ಮದೋ ನೈವ ಮೇ ನೈವ ಮಾತ್ಸರ್ಯಭಾವ: ||
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷ- |
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೩||
ಭಾವಾರ್ಥ:-ಇಂದ್ರಿಯಸುಖಂಗಳಲ್ಲಿ ನನಗೆ ದ್ವೇಷವಾಗಲೀ ಆಸಕ್ತಿಯಾಗಲೀ ಇಲ್ಲ.ಜಿಪುಣತ್ವವಾಗಲೀ,ಪರವಶತೆಯಾಗಲೀ ಎನಗಿಲ್ಲ.ಧರ್ಮಾರ್ಥ ಕಾಮಮೋಕ್ಷಗಳೆನ್ನುವ ಚತುರ್ವಿಧ ಪುರುಷಾರ್ಥಗಳೂ ನಾನಲ್ಲ.ಇವು ಯಾವುದರ ಅಂಟುವಿಕೆಯೂ ನನಗಿಲ್ಲ.ಇವಾವುದಕ್ಕೂ ಸಿಲುಕದ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದು:ಖಂ |
ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಾ ||
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ |
ಚಿದಾನಂದರೂಪ: ಶಿವೋsಹಂ ಶಿವೋsಹಂ ||೪||
ಭಾವಾರ್ಥ:-ಪಾಪಪುಣ್ಯಗಳಾಗಲೀ,ಸುಖದು:ಖಗಳಾಗಲೀ ಎನಗಿಲ್ಲ.ವೇದ,ಯಜ್ಞ,ತೀರ್ಥ, ಮಂತ್ರಗಳಾವುದರ ಸಂಬಂಧವೂ ನನಗಿರುವುದಿಲ್ಲ.ಭೋಜ್ಯ,ಭೋಜನ,ಭೋಕ್ತಗಳೆಂಬುದರ ಪ್ರತ್ಯಕ್ಷ ಜ್ಞಾನವೂ ನನಗಿಲ್ಲ.ಇವಾವುದರ ಲೇಪವೂ ಇಲ್ಲದ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಮೃತ್ಯುರ್ನಶಂಕಾ ನ ಮೇ ಜಾತಿ ಭೇದ: |
ಪಿತಾ ನೈವ ಮೇ ನೈವ ಮಾತಾ ಚ ಜನ್ಮ ||
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯ-
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೫||
ಭಾವಾರ್ಥ:-ಜಾತಿಭೇಧಗಳೆನಗಿಲ್ಲ.ಮರಣ ಭೀತಿಯೂ ಇಲ್ಲ.ಇವುಗಳ ಬಗೆಗಿನ ಶಂಕೆಯೆನಗಿಲ್ಲ.ಹುಟ್ಟುಸಾವುಗಳಿಲ್ಲ.ಅಪ್ಪ ಅಮ್ಮ;ಬಂಧು ಬಳಗ;ಗುರು ಶಿಷ್ಯರೆಂಬವರಾರೂ ನನಗಿಲ್ಲ. ಇವೆಲ್ಲವನ್ನೂ ಮೀರೀದ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ಅಹಂ ನಿರ್ವಿಕಲ್ಪೋ ನಿರಾಕಾರರೂಪೋ |
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ ||
ನ ಚಾಸಂಗತಂ ನೈವ ಮುಕ್ತಿರ್ನ ಬಂಧ-
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೬||
ಭಾವಾರ್ಥ:-ನಾನು ಭ್ರಾಂತಿ ರಹಿತನೂ ಆಕಾರ ವಿರಹಿತನೂ ಆಗಿರುವವನು.ಸರ್ವ ಇಂದ್ರಿಯಂಗಳಿಗೆ ನಿಲುಕದೆ ಸರ್ವವ್ಯಾಪಿಯಾಗಿರುವವನು. ಮತ್ತು ನಾನು ಅವಿನಾಶಿಯಾಗಿರುವವನು.ಹಾಗೆಯೇ ಸೀಮಾರಹಿತನಾಗಿರುವವನು.ಯಾವುದೇ ಬಂಧ ಮೋಕ್ಷಗಳ ಲೇಪವಿರದ ಪರಮಾತ್ಮನು ನಾನು.ಕೇವಲ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
*********************************************************************
|| ಇತಿ ನಿರ್ವಾಣಷಟ್ಕಮ್ || || ಈ ರೀತಿಯಾಗಿ ನಿರ್ವಾಣಷಟ್ಕಗಳ ಭಾವಾರ್ಥವಾಗಿದೆ ||
*********************************************************************
-೭-
|| ಕಾಶೀಪಂಚಕಮ್ ||
*****************
ಮನೋನಿವೃತ್ತಿ: ಪರಮೋಪಶಾಂತಿ: |
ಸಾ ತೀರ್ಥವರ್ಯಾ ಮಣಿಕರ್ಣಿಕಾ ಚ ||
ಜ್ಞಾನಪ್ರವಾಹ ವಿಮಲಾದಿಗಂಗಾ |
ಸಾ ಕಾಶಿಕಾsಹಂ ನಿಜಭೋಧರೂಪಾ ||೧||
ಭಾವಾರ್ಥ:-ಚೇತಾನಾರೂಪದ ಸಾಮರ್ಥ್ಯದ ಬಿಡುಗಡೆಯೇ ಶ್ರೇಷ್ಠವಾಗಿರುವ ಸ್ವಸ್ಥತೆ.ಅದುವೇ ಮಣಿಕರ್ಣಿಕೆಯೆಂಬ ಅಗ್ರಗಣ್ಯ ತೀರ್ಥ.ನನ್ನಲ್ಲಿ ಅಡಕವಾಗಿರುವ ಸತ್ಯದ ಅರಿವಿನ ಹರಿಯುವಿಕೆಯೇ ದೋಷರಹಿತವಾಗಿರುವ ಗಂಗೆ.ಅಂತಹಾ ನೈಜ ಪ್ರಜ್ಞಾರೂಪಿಯಾಗಿರುವ ಕಾಶೀಕ್ಷೇತ್ರವೇ ನಾನಾಗಿರುವೆ.
ಯಸ್ಯಾಮಿದಂ ಕಲ್ಪಿತಮಿಂದ್ರಜಾಲಂ |
ಚರಾಚರಂ ಭಾತಿ ಮನೋವಿಲಾಸಮ್ ||
ಸಚ್ಚಿತ್ಸುಖೈಕಾ ಪರಮಾತ್ಮ ರೂಪಾ |
ಸಾ ಕಾಶಿಕಾsಹಂ ನಿಜಭೋಧರೂಪಾ ||೨||
ಭಾವಾರ್ಥ:-ಯಾವುದೊರಳಗೆ ಈ ಸೃಷ್ಟಿಯ ಜಾದೂಆಟವು ವ್ಯವಸ್ಥೆಗೊಳಿಸಲ್ಪಟ್ಟಿದೆಯೋ ಮತ್ತು ಎಲ್ಲಿ ಈ ಚರಾಚರ ವಿಶ್ವವು ಮನದ ಚೆಲ್ಲಾಟದಂತೆ ಭಾಸವಾಗುವುದೋ ಆ ಸಚ್ಚಿದಾನಂದವೂ ಪರಮಾತ್ಮ ಪ್ರತೀಕವಾಗಿರುವ ನೈಜ ಪ್ರಜ್ಞಾರೂಪಿಯಾಗಿರುವ ಕಾಶೀಕ್ಷೇತ್ರವೇ ನಾನಾಗಿರುವೆ.
ಕೋಶೇಷು ಪಂಚಸ್ವಧಿರಾಜಮಾನಾ |
ಬುದ್ಧಿರ್ಭವಾನೀ ಪ್ರತಿದೇಹಗೇಹಮ್ ||
ಸಾಕ್ಷೀ ಶಿವ: ಸರ್ವಗತೋ??ಂತರಾತ್ಮಾ |
ಸಾ ಕಾಶಿಕಾsಹಂ ನಿಜಭೋಧರೂಪಾ ||೩||
ಭಾವಾರ್ಥ:-ಯಾವುದರ ಒಡೆತನವು ಅನ್ನಮಯ,ಪ್ರಾಣಮಯ,ಮನೋಮಯ,ವಿಜ್ಞಾನಮಯ ಆನಂದಮಯಗಳೆಂಬ ಪಂಚಕೋಶಗಳಲ್ಲಿ ಜರಗುತ್ತಿದೆಯೋ,ಎಲ್ಲಿ ಜ್ಞಾನವೇ ಪ್ರತಿಯೊಂದೂ ಶರೀರದಲ್ಲಿರುವ ತಾಯಿ ಭವಾನಿಯೋ,ಎಲ್ಲಿ ಪ್ರತ್ಯಕ್ಷತೆಯೂ,ಸರ್ವವ್ಯಾಪಿಯಾಗಿರುವ ಪ್ರತ್ಯಗಾತ್ಮನು ಶಿವನಿರುವನೋ ಅಂತಹಾ ನೈಜ ಪ್ರಜ್ಞಾರೂಪಿಯಾಗಿರುವ ಕಾಶೀಕ್ಷೇತ್ರವೇ ನಾನಾಗಿರುವೆ.
ಕಾಶ್ಯಾಂ ಹಿ ಕಾಶ್ಯತೇ ಕಾಶೀ ಕಾಶೀ ಸರ್ವ ಪ್ರಕಾಶಿಕಾ |
ಸಾ ಕಾಶೀ ವಿದಿತಾ ಯೇನ ತೇನ ಪ್ರಾಪ್ತಾ ಹಿ ಕಾಶಿಕಾ ||೪||
ಭಾವಾರ್ಥ:-ಕಾಶಿಯಲ್ಲಿಯೇ ನೈಜವಾದ ದಿವ್ಯ ತೇಜಸ್ಸಿರುವುದಾಗಿದೆ.ಕಾಶಿಯೇ[=ಬೆಳಕು] ವಿಶ್ವದಲ್ಲಿ ಸಮಸ್ತವನ್ನೂ ಪ್ರಕಾಶಿಸುವಂತೆ ಮಾಡುವುದು.ಯಾರು ಬೆಳಕನ್ನು[ಕಾಶಿಯನ್ನು] ಅರಿಯಬಲ್ಲರೋ ಅವರು ಕಾಶಿಯನ್ನು[=ಮುಕ್ತಿಯನ್ನು]ನಿಜವಾಗಿಯೂ ಹೊಂದಬಲ್ಲರು.
ಕಾಶೀಕ್ಷೇತ್ರಂ ಶರೀರಂ ತ್ರಿಭುವನಜನನೀ ವ್ಯಾಪಿನೀ ಜ್ಞಾನಗಂಗಾ |
ಭಕ್ತಿ:ಶ್ರದ್ಧಾ ಗಯೇಯಂ ನಿಜಗುರುಚರಣಧ್ಯಾನಯೋಗ:ಪ್ರಯಾಗ: ||
ವಿಶ್ವೇಶೋsಯಂ ತುರೀಯಂ ಸಕಲಜನಮನಸ್ಸಾಕ್ಷಿಭೂತೋsಂತರಾತ್ಮಾ |
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಸ್ತೀರ್ಥಮನೃತ್ಕಿಮಸ್ತಿ ||೫||
ಭಾವಾರ್ಥ:-ಈ ದೇಹವೇ ಕಾಶೀ ಕ್ಷೇತ್ರವಾಗಿದೆ.ಇಲ್ಲಿ ತ್ರಿಲೋಕಮಾತೆಯಾಗಿರುವ ಜ್ಞಾನಗಂಗಾ ಪ್ರವಹಿಸುತ್ತಿರುವಳು.ಭಕ್ತಿಶ್ರದ್ಧೆಗಳೇ ಗಯಾ ಕ್ಷೇತ್ರ.ಸದ್ಗುರುವಿನ ಪಾದಾರವಿಂದಗಳ ಧ್ಯಾನವೇ ಪ್ರಯಾಗ.ಸಮಸ್ತ ಜನರ ಮನಸುಗಳಲ್ಲಿ ಪ್ರತ್ಯಕ್ಷನೂ ಜೇವಾತ್ಮನೂ ಆಗಿರುವ ವೇದನಾದಾತೀತನೇ ವಿಶ್ವೇಶ್ವರನು.ಈ ರೀತಿಯಾಗಿ ಸಮಸ್ತವೂ ನನ್ನ ದೇಹದಲ್ಲಿಯೇ ನೆಲೆಸಿರುವಾಗ ಯಾವುದಾದರೂ ಅನ್ಯ ತೀರ್ಥಗಳಿರುವುದುಂಟೇ?
*********************************************************************
|| ಇತಿ ಕಾಶೀಪಂಚಕಮ್ || || ಈ ರೀತಿಯಾಗಿ ಕಾಶೀಪಂಚಕಗಳ ಭಾವಾರ್ಥವಾಗಿದೆ. ||
*********************************************************************
-೮-
|| ಮನೀಷಾಪಂಚಕಮ್ ||
********************
ಜಾಗ್ರತ್ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಬತೇ |
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೇ ||
ಸೈವಾಹಂ ನ ಚ ದೃಶ್ಯವಸ್ತ್ವಿತಿ ಧೃಢಪ್ರಜ್ಞಾsಪಿಯಸ್ಯಾಸ್ತಿಚೇತ್ |
ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ ||೧||
ಭಾವರ್ಥ:-ಯಾವ ಶಕ್ತಿಯು ಎಚ್ಚರ,ಕನಸು,ಗಾಢನಿದ್ರೆಗಳೆನ್ನುವ ಮೂರು ಅವಸ್ಥೆಗಳಲ್ಲಿಯೂ ಬಹಳ ಎದ್ದು ಕಾಣುವುದೋ,ಯಾವುದು ಚತುರ್ಮುಖ ಬ್ರಹ್ಮನಾರಭ್ಯ ಇರುವೆಯ ವರೆಗಿರುವ ಸಮಸ್ತ ಶರೀರಗಳಲ್ಲಿಯೂ ವಿಶ್ವದಪ್ರಾತ್ಯಕ್ಷಿಕರೂಪದಲ್ಲಿ ವ್ಯಾಪಿಸಿಕೊಂಡಿದೆಯೋ ಅದುವೇ ಪರಬ್ರಹ್ಮಸ್ವರೂಪನಾದ ನಾನು.ಕಣ್ಣಿಗೆ ಹೊರಗೆ ಕಾಣುತ್ತಿರುವುದೆಲ್ಲವೂ ಈ ದೇಹವಲ್ಲವೆಂಬ ಖಚಿತ ತಿಳುವಳಿಕೆಯಿಂದ ಯಾರು ಕೂಡಿರುವರೋ ಅಂತಹವರು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ ಅವರೇ ಸದ್ಗುರುವು ಎಂಬುದು ನನ್ನ ಭಾವನೆಯು.
ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರ ವಿಸ್ತಾರಿತಂ |
ಸರ್ವಂ ಚೈತದವಿದ್ಯಯಾ ತ್ರಿಗುಣಯಾsಶೇಷಂ ಮಯಾ ಕಲ್ಪಿತಮ್ ||
ಇತ್ಥಂ ಯಸ್ಯ ದೃಢಾ ಮತಿ: ಸುಖತರೇ ನಿತ್ಯೇ ಪರೇ ನಿರ್ಮಲೇ |
ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ ||೨||
ಭಾವಾರ್ಥ:-ನಾನು ಬ್ರಹ್ಮನೇ ಆಗಿರುವೆ.ಈ ಸಮಸ್ತ ಬ್ರಹ್ಮಾಂಡವು ಬ್ರಹ್ಮವೇ ಅಗಿದೆ.ಮತ್ತು ಕೇವಲ ಚೈತನ್ಯದಿಂದ ವಿಸ್ತಾರವಾಗಿದೆ.ಸತ್ವ-ರಜ-ತಮೋ ಗುಣಾತ್ಮಕವಾಗಿರುವ ಭ್ರಾಂತಿಯಿಂದ ಇವೆಲ್ಲವುಗಳನ್ನು ನಾನೇ ಕಲ್ಪಿಸಿರುವುದಾಗಿದೆ ಎಂಬುದಾಗಿ ತಿಳುವಳಿಕೆ ಯಾರಿಗಿದೆಯೋ,ನಿತ್ಯವೂ,ಸತ್ಯವೂ ಸುಖದಾಯಕವೂ ಸ್ವಚ್ಚವೂ ಆಗಿರುವ ಪರಬ್ರಹ್ಮನಲ್ಲಿ ಧೃಢವಾಗಿರುವ ಪ್ರಜ್ಞೆಯು ಯಾರಿಗಿದೆಯೋ ಅಂತಹವರು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ ಅವರೇ ಸದ್ಗುರುವು ಎಂಬುದು ನನ್ನ ಭಾವನೆಯು.
ಶಶ್ವನ್ನಶ್ವರಮೇವ ವಿಶ್ವಮಖಿಲಂ ನಿಶ್ಚಿತ್ಯ ವಾಚಾ ಗುರೋ: |
ನಿತ್ಯಮ್ ಬ್ರಹ್ಮ ನಿರಂತರಂ ವಿಮೃಶತಾ ನಿರ್ವ್ಯಾಜಶಾಂತಾತ್ಮನಾ ||
ಭೂತಂ ಭಾವಿ ಚ ದುಷ್ಕೃತಂ ಪ್ರದಹತಾ ಸಂವಿನ್ಮಯೇ ಪಾವಕೇ |
ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ ||೩||
ಭಾವಾರ್ಥ:-ಈ ಜಗತ್ತೆಲ್ಲವೂ ಕ್ಷಣಿಕವೆನ್ನುವ ಗುರುವಾಕ್ಯವನ್ನು ಅರ್ಥವಿಸಿಕೊಂಡು,ಗುರೂಪದೇಶಾನುಸಾರ ಹಿನ್ನೆಲೆಯಿಲ್ಲದ ನಿರ್ವಿಕಾರವೂ,ಪ್ರಶಾಂತವೂ ಆಗಿರುವ ಶುದ್ಧಾಂತ:ಕರಣದಿಂದ ಆದಿ ಅಂತ್ಯ ವಿರಹಿತವಾಗಿರುವ ಪರಬ್ರಹ್ಮವಸ್ತುವಿನ ಬಗೆಗೆ ನಿರಂತರ ತರ್ಕಿಸುತ್ತಾ ಗತ ಹಾಗೂ ಭವಿಷ್ಯತ್ತಿನ ಪುಣ್ಯಪಾಪಗಳನ್ನು ತಿಳುವಳಿಕೆಯೆನ್ನುವ ಬೆಂಕಿಯಲ್ಲಿ ದಹಿಸಿ,ಪ್ರಾರಬ್ದಕರ್ಮಕ್ಕೆ ತನ್ನ ದೇಹವನ್ನು ಗುರಿಮಾಡಿರುವ ಅವನು ಯಾರೇ ಆಗಿರಲಿ ಅವನೇ ನನ್ನ ಸದ್ಗುರು ಎಂಬುದು ನನ್ನ ತತ್ವವಾಗಿದೆ.
ಯಾ ತಿರ್ಯಙ್ನರದೇವತಾಭಿರಹಮಿತ್ಯಂತ: ಸ್ಫುಟಾ ಗೃಹ್ಯತೇ |
ಯದ್ಭಾಸಾ ಹೃದಯಾಕ್ಷದೇಹವಿಷಯಾಭಾಂತಿ ಸ್ವತೋsಚೇತನಾ: ||
ತಾ ಭಾಸ್ಯೈ: ಪಿಹಿತಾರ್ಕಮಂಡಲನಿಭಾಂ ಸ್ಫೂರ್ತಿಂ ಸದಾಭಾವಯನ್ |
ಯೋಗೀ ನಿರ್ವೃತಮಾನಸೋ ಹಿ ಗುರುರಿತ್ಯೇಷಾ ಮನೀಷಾ ಮಮ ||೪||
ಭಾವಾರ್ಥ:-ಯಾವ ಚೇತನಾಶಕ್ತಿಯನ್ನು ಮನುಜರು,ದೇವತೆಗಳು,ಪಶುಪಕ್ಷಿಗಳೂ ದೇವರು ಎಂದು ಖಚಿತವಾಗಿ ಸ್ವೀಕರಿಸುತ್ತಾರೋ,ಯಾವುದರ ಬೆಳಕಿನಿಂದ ದೇಹ,ಮನಸ್ಸು,ಕಣ್ಣು, ಕಿವಿ, ಇಂದ್ರಿಯವಸ್ತುಗಳೆನ್ನುವ ನಿರ್ಜೀವ ವಸ್ತುಗಳು ತಾವು ಸ್ವತ: ಚೇತನಾರಹಿತವಾಗಿದ್ದೂ ಪ್ರಕಾಶಭರಿತವಾಗಿ ಬೆಳಗುವವೋ,ಮೇಘಾವೃತವಾಗಿರುವ ಸೂರ್ಯಮಂಡಲದ ಹಾಗೆ ಭ್ರಮಾವೃತವಾದ ಆ ಚೈತನ್ಯಪ್ರಕಾಶವನ್ನು ಪ್ರಶಾಂತ ಮನದಿಂದ ನಿರಂತರ ಯಾವ ಯೋಗಿಯು ಚಿಂತಿಸುತ್ತಿರುವನೋ ಅವನು ಯಾರೇ ಆಗಿರಲಿ ಅವನೇ ನನ್ನ ಸದ್ಗುರು ಎಂಬುದು ನನ್ನ ತತ್ವವಾಗಿದೆ.
ಯತ್ಸೌಖ್ಯಾಂಬುಧಿಲೇಶಲೇಶತ ಇಮೇ ಶಕ್ರಾದಯೋ ನಿರ್ವೃತಾ: |
ಯಚ್ಚಿತ್ತೇನಿತರಾಂ ಪ್ರಶಾಂತಕಲನೇ ಲಬ್ದ್ವಾಮುನಿರ್ನಿರ್ವೃತ: ||
ಯಸ್ಮಿನ್ನಿತ್ಯಸುಖಾಂಬುಧೌ ಗಲಿತಧೀರ್ಬ್ರಹ್ಮೈವ ನ ಬ್ರಹ್ಮವಿದ್ |
ಯ: ಕಶ್ಚಿತ್ಸ ಸುರೇಂದ್ರವಂದಿತಪದೋ ನೂನಂ ಮನೀಷಾ ಮಮ ||೫||
ಭಾವಾರ್ಥ:-ಯಾವ ಸುಖಾನುಭವದ ಸಂತಸದ ಅತ್ಯಲ್ಪಾಂಶದಿಂದ ಇಂದ್ರಾದಿ ದೇವತೆಗಳು ಆನಂದಭರಿತರಾಗಿರುವರೋ,ತಮ್ಮ ಮನದ ಸಮಸ್ತ ಬಾವನೆಗಳೆಲ್ಲವೂ ಅವಿತುಹೋಗಿ ಸ್ತಬ್ದವಾದ ಮನಸ್ಸಿನಲ್ಲಿ ಯೋಗಿಗಳು ಯಾವುದನ್ನು ಪಡೆದು ತೃಪ್ತನಾಗುವರೋ,ಶಾಶ್ವತವಾದ ಆನಂದಸಾಗರದಲ್ಲಿ ಮನಸ್ಸನ್ನು ಲೀನಗೊಳಿಸಿದ ಕಾರಣವಾಗಿ ಯಾವನು ಮಂದಮತಿಯಾದರೂ ಸ್ವಯಂ ಪರಬ್ರಹ್ಮ ಸ್ವರೂಪಿಯೇ ಆಗುವನೋ,ಸುರಾದಿ ದೇವತೆಗಳಿಂದ ವಂದಿಸಲ್ಪಡುವ ಪಾದಗಳ್ಳಾತನು ಯಾರೇ ಆಗಿರಲಿ ಅವನೇ ನನ್ನ ಸದ್ಗುರು ಎಂಬುದು ನನ್ನ ತತ್ವವಾಗಿದೆ.
*********************************************************************
|| ಇತಿ ಮನೀಷಾಪಂಚಕಮ್ || || ಈ ರೀತಿಯಾಗಿ ಮನೀಷಾಪಂಚಕಗಳ ಭಾವಾರ್ಥವಾಗಿದೆ ||
*********************************************************************
-೯-
|| ಉಪದೇಶಪಂಚಮ್ ||
*******************
ವೇದೋನಿತ್ಯಮದೀಯತಾಂ ತದುದಿತಂ ಕರ್ಮಸ್ವನುಷ್ಟೀಯತಾಂ |
ಧೀರೇಶಸ್ಯ ವಿಧೀಯತಾಮಪಚಿತಿ: ಕಾಮ್ಯೇಮತಿಸ್ತೃಜ್ಯತಾಂ ||
ಪಾಪೌಘ: ಪರಿಧೂಯತಾಂ ಭವಸುಖೇ ದೋಷೋsನುಸಂಧೀಯತಾಂ |
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ಪೂರ್ಣಂ ವಿದಿರ್ಗಮ್ಯತಾಮ್ ||೧||
ಭಾವಾರ್ಥ:-ತಮತಮಗೆ ಅನ್ವಯಿಸುವ ಸ್ವಶಾಖೆಯ ವೇದವನ್ನು ಸಂಪೂರ್ಣವಾಗಿ ಯಾವಾಗಲೂ ಅಧ್ಯಯನ ಮಾಡಿರಿ.ಅದರಲ್ಲಿ ಹೇಳಿರುವಂತಹಾ ನಿತ್ಯನೈಮಿತ್ತಿಕಾದಿ ಕರ್ಮಗಳನ್ನು ಒಳ್ಳೆಯ ರೀತಿಯಲ್ಲಿ ಆಚರಣೆ ಮಾಡಿರಿ.ಸಂಧ್ಯಾವಂದನಾದಿ ನಿತ್ಯನೈಮಿತ್ತಿಕ ಕರ್ಮಗಳ ಅನುಷ್ಠಾನದ ಮೂಲಕ ಭಗವಂತನಾದ ಪರಮೇಶ್ವರನನ್ನು ಆರಾಧಿಸಿರಿ.ಕಾಮ್ಯ ಕರ್ಮಗಳಲ್ಲಿ ಮನವನ್ನಿರಿಸದೆ ಅವುಗಳನ್ನು ತ್ಯಜಿಸಿ ಪಾಪಕರ್ಮಗಳ ದೋಷಗಳನ್ನು ಹೋಗಲಾಡಿಸಿಕೊಳ್ಳಿರಿ.ತನ್ಮೂಲಕ ಮನಶುದ್ಧರಾಗಿ ಸಾಂಸಾರಿಕ ದೋಷಗಳನ್ನು ಕಂಡುಕೊಳ್ಳಿರಿ. ಆತ್ಮಜ್ಞಾನವನ್ನು ಹೊಂದಲು ಇಚ್ಚಿಸಿರಿ.ಅದಕ್ಕಾಗಿ ಪ್ರಯತ್ನವನ್ನು ಮಾಡುವುದರಲ್ಲಿ ತಲ್ಲೀನತೆಯಿರಲಿ.ಮನೆಯೊಳಗೆ ಇದ್ದುಕೊಂಡು ಕರ್ಮಾದಿಗಳನ್ನು ಮಾಡುವುದು ಒಳಿತೆಂದು ತಿಳಿದು ಅದುವೇ ಆದ್ಯಕರ್ತವ್ಯವೆಂದು ಭಾವಿಸದೆ ಆತ್ಮೋದ್ಧಾರಕ್ಕಾಗಿ ತಮ್ಮ ನೆಲೆಯನ್ನು ತೊರೆದು ಹೊರಗೆ ಬನ್ನಿರಿ.
ಸಂಗ: ಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾಧೀಯತಾಂ |
ಶಾಂತ್ಯಾದಿ: ಪರಿಚೀಯತಾಂ ದೃಢತರಂ ಕರ್ಮಾಶು ಸಂತೃಜ್ಯತಾಮ್ ||
ಸದ್ವಿದ್ವಾನುಪಸರ್ಪ್ಯತಾಂ ಪ್ರತಿದಿನಂ ತತ್ಪಾದುಕೇ ಸೇವ್ಯತಾಂ |
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ ||೨||
ಭಾವಾರ್ಥ:-ಸಜ್ಜನರ ಸಹವಾಸವನ್ನು ಸದಾ ಮಾಡುತ್ತಾ ಇರುವವರಾಗಿ.ಭಗವಂತನ ಮೇಲೆ ಖಚಿತವಾದ ಭಕ್ತಿಯನ್ನು ಹೊಂದಿದವರಾಗಿರಿ. ಅಜ್ಞಾನ,ಮನೋನಿಗ್ರಹ,ಶಾಂತಿ-ವಿನಯಾದಿ ಸದ್ಗುಣಗಳನ್ನು ಚೆನ್ನಾಗಿ ರೂಢಿಸಿಕೊಳ್ಳಿರಿ.ಆದಷ್ಟು ಬೇಗನೆ ಪ್ರಾಪಂಚಿಕ ಕರ್ಮಗಳಿಂದ ದೂರವಿರಲು ಅಭ್ಯಾಸವನ್ನು ಮಾಡಿರಿ.ಶ್ರೇಷ್ಠ ಜ್ಞಾನಿಗಳ ಬಳಿಗೆ ತೆರಳಿ ಅವರುಗಳ ಪಾದಸೇವೆಯನ್ನು ಮಾಡಿ ಅವರಿಂದ ಜ್ಞಾನವನ್ನು ನಿತ್ಯವೂ ಪಡೆಯುವವರಾಗಿರಿ."ಓಂ"ಎನ್ನುವ ಪ್ರಣವಮಂತ್ರ ಸ್ವರೂಪೀ ಏಕಾಕ್ಷರ ಬ್ರಹ್ಮನ ಬಗ್ಗೆ ತಿಳಿಯಬೇಕೆಂಬ ಹಂಬಲವುಳ್ಳವರಾಗಿ ಆ ಮಾರ್ಗವನ್ನು ಅರುಹಲು ಬಿನ್ನವಿಸಿಕೊಳ್ಳುವವರಾಗಿ. ಆ ಜ್ಞಾನಿಗಳು ಭೋಧಿಸುವ ವೇದೋಪನಿಷತ್ತುಗಳ ಮಹಾ ವಾಕ್ಯಗಳ ಅರ್ಥವನ್ನು ಮನಗೊಟ್ಟು ಕೇಳಿ ಮನನ ಮಾಡಿಕೊಳ್ಳಿರಿ.
ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರ: ಪಕ್ಷ: ಸಮಾಶ್ರೀಯತಾಂ |
ದುಸ್ತರ್ಕಾತ್ಸುವಿರಮ್ಯತಾಂ ಶ್ರುತಿಮತಸ್ತರ್ಕೋsನು ಸಂಧೀಯತಾಂ ||
ಬ್ರಹ್ಮೈವಾಸ್ಮಿ ವಿಭಾವ್ಯತಾಮಹರರ್ಹರ್ಗರ್ವ: ಪರಿತ್ಯಜ್ಯತಾಂ |
ದೇಹೇsಹಂಮತಿರುಝ್ಜ್ಯತಾಂ ಬುಧಜನೈರ್ನಾದ: ಪರಿತ್ಯಜ್ಯತಾಮ್ ||೩||
ಭಾವಾರ್ಥ:-ಅದ್ವೈತ ವೇದಾಂತದ ಪಾರಮಾರ್ಥ ವಾಕ್ಯವಾಗಿರುವ "ನೀನು ಆ ಪರಮಾತ್ಮ ಸ್ವರೂಪನಿರುವೆ[ತತ್ ತ್ವಮ್ ಅಸಿ] ಮೊದಲಾದ ಮಹಾವಾಕ್ಯಗಳ ಅರ್ಥವನ್ನು ವಿಮರ್ಶಾಪೂರ್ವಕವಾಗಿ ಅರಿತುಕೊಳ್ಳುವವರಾಗಿ. ವೇದಾಂತದ ಸಾರಸರ್ವಸ್ವವಾಗಿರುವ ಅದ್ವೈತಸಿದ್ಧಾಂತವನ್ನು ಸದಾ ಆಶ್ರಯಿಸುವವರಾಗಿ.ಕುತರ್ಕಗಳಿಂದ ದೂರವಾಗಿ ವೇದಗಳು ಒಪ್ಪುವ ವಿಚಾರಗಳನ್ನೇ ಶೋಧಿಸುತ್ತಲಿರಿ."ಅಹಂ ಬ್ರಹ್ಮಾಸ್ಮಿ" "ನಾನು ಬ್ರಹ್ಮನೇ ಆಗಿರುವೆ" ಎಂಬುದಾಗಿ ಭಾವಿಸುತ್ತಾ ನಾನು-ನನ್ನದು ಎಂಬ ಮಮಕಾರವನ್ನು ದಿನದಿಂದ ದಿನಕ್ಕೆ ತೊರೆಯುವವರಾಗಿ.ದೇಹಾಭಿಮಾನವನ್ನು ಬಿಟ್ಟು ಬಿಡಿರಿ.ವಿದ್ವದ್ಜ್ಜನರೊಡನೆ ಅನಗತ್ಯ ವ್ಯರ್ಥವಾಗಿ ವಾದವಿವಾದಗಳನ್ನು ಮಾಡದಿರಿ.
ಕ್ಷುದ್ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಂಜ್ಯತಾಂ |
ಸ್ವಾದ್ವನ್ನಂ ನ ತು ಯಾಚ್ಯತಾಂ ವಿಧಿವಶಾತ್ಪ್ರಾಪ್ತೇನ ಸಂತುಷ್ಯತಾಂ ||
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾವಾಕ್ಯಂ ಸಮುಚ್ಛಾರ್ಯತಾಂ |
ಔದಾಸೀನ್ಯಮಭೀಪ್ಸ್ಯತಾಂ ಜನಕೃಪಾನೈಷ್ಠುರ್ಯಮುತ್ಸೃಜ್ಯತಾಮ್ ||೪||
ಭಾವಾರ್ಥ:-ಹಸಿವೆಂಬ ಮಹಾ ವ್ಯಾಧಿಗೆ ಭಿಕ್ಷಾನ್ನವೆಂಬ ಮಹಾ ಔಷಧಿಯಿಂದ ಚಿಕಿತ್ಸೆ ಮಾಡಿ ರೋಗೋಪಶಮನವನ್ನು ಮಾಡಿಕೊಳ್ಳಿರಿ.ರುಚಿಗಟ್ಟಾದ ಶಾಕಪಾಕಾದಿಗಳಿಗೆ ಹಾತೊರೆಯದೆ ಭಗವಂತ ಅನುಗ್ರಹಿಸಿದ ಅನ್ನದಿಂದಲೇ ತೃಪ್ತರಾಗಿರಿ.ಶೀತೋಷ್ಣ,ಸುಖದು:ಖ ಇತ್ಯಾದಿ ದ್ವಂದ್ವಗಳನ್ನು ಚೆನ್ನಾಗಿ ಸಹಿಸಿಕೊಳ್ಳುವವರಾಗಿ.ನಿರರ್ಥಕವಾದ ಸಂಭಾಷಣೆಯನ್ನು ಯಾರಲ್ಲೂ ಮಾಡದಿರಿ.ಜನರಲ್ಲಿ ಅತಿಯಾಗಿರುವ ನಯ-ನಿಷ್ಠುರತೆಗಳೆರಡರಿಂದಲೂ ದೂರವಿರುವವರಾಗಿ.
ಏಕಾಂತೇ ಸುಖಮಾಸ್ಯತಾಂ ಪರತರೇಚೇತ: ಸಮಾಧೀಯತಾಂ |
ಪೂರ್ಣಾತ್ಮಾ ಸುಸಮೀಕ್ಷ್ಯತಾಂ ಜಗದಿದಂ ತದ್ಬಾಧಿತಂ ದೃಷ್ಯತಾಮ್ ||
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈ: ಶ್ಲಿಷ್ಯತಾಂ |
ಪ್ರಾರಬ್ಧಂ ತ್ವಿಹ ಭುಜ್ಯತಾಮಥ ಪರಬ್ರಹ್ಮಾತ್ಮಾನಾ ಸ್ಥೀಯತಾನ್ ||೫||
ಭಾವಾರ್ಥ:-ಏಕಾಂತ ಜಾಗದಲ್ಲಿ ಸುಖಾಸೀನನಾಗಿ ಕುಳಿತು ಪರಮಾತ್ಮನಲ್ಲಿಯೇ ಮನಸ್ಸನ್ನು ಸ್ಥಿರವಾಗಿರಿಸಿರಿ.ಸರ್ವ ವ್ಯಾಪಿಯಾಗಿರುವ ಪರಿಪೂರ್ಣ ಪರಬ್ರಹ್ಮನನ್ನು ಅರಿತುಕೊಂಡು ಈ ಜಗತ್ತು ಆತನಿಂದ ನಿರೋಧಿಸಲ್ಪಡುತ್ತಿದೆಯೆಂಬುದನ್ನರಿತು ಇದು ಮಿಥ್ಯಾಪ್ರಪಂಪಂಚವಾಗಿದೆಯೆಂಬುದನ್ನುಮನಗಾಣುವವರಾಗಿರಿ.ಪೂರ್ವಾರ್ಜಿತವಾದಂತಹಾ ಸಂಚಿತ ಕರ್ಮಗಳಿಂದ ಮುಕ್ತರಾಗಿರಿ. ಭವಿಷ್ಯತ್ತಿನ ಕರ್ಮಗಳನ್ನು ಆಲಂಗಿಸಿಕೊಳ್ಳದಿರಿ.ಪ್ರಾರಬ್ದ ಕರ್ಮ ಫಲಗಳನ್ನು ಇಲ್ಲಿಯೇ ಅನುಭವಿಸಲು ಸಿದ್ಧರಿರಿ.ತದನಂತರ ಏಕೀಭಾವದಿಂದ ಕೂಡಿ ಪರಬ್ರಹ್ಮನ ಸಾಕ್ಷಾತ್ಕಾರದ ದಿವ್ಯಾನಂದವನ್ನು ಅನುಭವಿಸುವವರಾಗಿರಿ.
ಯ:ಶ್ಲೋಕಪಂಚಕಮಿದಂ ಪಠತೇ ಮನುಷ್ಯ: |
ಸಂಚಿಂತಯತ್ಯನುದಿನಂ ಸ್ಥಿರತಾಮುಪೇತ್ಯ ||
ತಸ್ಯಾಶು ಸಂಸೃತಿದವಾನಲತೀವ್ರಘೋರ: |
ತಾಪ: ಪ್ರಶಾಂತಿಮುಪಯಾತಿ ಚಿತಿ ಪ್ರಸಾದಾತ್ ||೬||
ಭಾವಾರ್ಥ:-ಈ ರೀತಿಯಾಗಿರುವ ಐದು ಸ್ತುತಿಗಳನ್ನು ಅನುದಿನವೂ ಪಾರಾಯಣ ಮಾಡುತ್ತಾ ಅವುಗಳ ನೈಜಾರ್ಥವನ್ನು ಕದಲದ ಮನಸ್ಸಿನಿಂದ ಚಿಂತನೆಯನ್ನು ಮಾಡುತ್ತಾ ಇರುವಾತಂಗೆ ಭೀಕರವೂ,ಹಿಂಸಾತ್ಮಕವೂ ಆಗಿರುವ ಸಾಂಸಾರಿಕ ಬೇಗೆಯು ಶಾಂತವಾಗಿ ಸುಖಾನಂದವು ಲಭಿಸುವುದು.
*********************************************************************
|| ಇತಿ ಉಪದೇಶಪಂಚಕಮ್ || || ಈ ತೆರನಾಗಿ ಉಪದೇಶಪಂಚಕಗಳ ಭಾವಾರ್ಥವಾಗಿದೆ.||
*********************************************************************
-೧೧-
||ಧನ್ಯಾಷ್ಟಕಮ್ ||
****************
ತದ್ ಜ್ಞಾನಂ ಪ್ರಶಮಕರಂ ಯದಿಂದ್ರಿಯಾಣಾಂ |
ತದ್ ಜ್ಞೇಯಂ ಯದುಪನಿಷತ್ಸು ನಿಶ್ಚಿತಾರ್ಥಂ ||
ತೇ ಧನ್ಯಾ ಭುವಿ ಪರಮಾರ್ಥನಿಶ್ಚಿತೇಹಾ: |
ಶೇಷಾಸ್ತು ಭ್ರಮನಿಲಯೇ ಪರಿಭ್ರಮಂತಿ ||೧||
ಭಾವಾರ್ಥ:-ಯಾವ ವಿಚಾರವನ್ನು ತಿಳಿದುಕೊಳ್ಳುವುದರಿಂದ ಇಂದ್ರಿಯಗಳೆಲ್ಲವೂ ಶಾಂತಗೊಳ್ಳುವವೋ ಅದುವೇ ನೈಜವಾದ ಜ್ಞಾನವಾಗಿದೆ.ಉಪನಿಷತ್ತುಗಳ ಮೂಲಕ ಯಾವುದರ ರೂಪವನ್ನು ಗೊತ್ತುಪಡಿಸಲಾಗಿದೆಯೋ ಅದುವೇ ಅರಿತುಕೊಳ್ಳತಕ್ಕಾದ್ದಾಗಿರುವುದು.ಯಾವಾತನ ಆಚರಣೆಗಳೆಲ್ಲವೂ ದೈವಿಕ ದೃಷ್ಟಿಯಿಂದ ಜರಗುವವೋ ಅಂತಹವನು ಈ ಜಗತ್ತಿನಲ್ಲಿ ಕೃತಾರ್ಥನು.ಉಳಿದವರೆಲ್ಲರೂ ಮಾಯಾಪ್ರಪಂಚದಲ್ಲಿ ಸುತ್ತಾಡುವವರೇ ಆಗಿರುವರು.
ಆದೌ ವಿಜಿತ್ಯ ವಿಷಯಾನ್ಮದಮೋಹರಾಗ- |
ದ್ವೇಷಾದಿಶತ್ರುಗಣಮಾಹೃತಯೋಗರಾಜ್ಯಾ: ||
ಜ್ಞಾತ್ವಾಮೃತಂ ಸಮನುಭೂತ ಪರಾತ್ಮ ವಿದ್ಯಾ- |
ಕಾಂತಾಸುಖಂ ವನಗೃಹೇ ವಿಚರಂತಿ ಧನ್ಯಾ: ||೨||
ಭಾವಾರ್ಥ:-ಪ್ರಥಮತ: ಶಬ್ದ ಸ್ಪರ್ಷ ರೂಪ ರಸ ಗಂಧಾದಿ ಇಂದ್ರಿಯಸುಖ ಸಮೂಹವನ್ನೂ,ಮದ,ಮೋಹ,ಮಾತ್ಸರ್ಯ,ರಾಗ,ದ್ವೇಷಾದಿ ಅರಿಷಡ್ವರ್ಗಗಳನ್ನೂ ಗೆದ್ದು ಯೋಗಸಾಮ್ರಾಜ್ಯವನ್ನು ಹೊಂದಿ ಅಮೃತಸಮಾನವಾದ ಜ್ಞಾನವನ್ನು ಗಳಿಸಿ ಮೋಕ್ಷದ ದಾರಿಯಲ್ಲಿ ಕ್ರಮಿಸಿ ಪಾರಮಾರ್ಥಿಕವಿದ್ಯೆಯೆನ್ನುವ ಪತ್ನಿಯೊಡನೆ ಸುಖವನ್ನು ಅನುಭವಿಸುತ್ತಾ ಮನುಷ್ಯರಹಿತವಾದ ಕಾನನದಲ್ಲಿ ವಿಹರಿಸುತ್ತಿರುವ ಯೋಗಿವರೇಣ್ಯರೇ ನಿಜವಾಗಿಯೂ ಭಾಗ್ಯಶಾಲಿಗಳು.
ತ್ಯಕ್ತ್ವಾ ಗೃಹೇ ರತಿಮಧೋಗತಿ ಹೇತುಭೂತಾ- |
ಮಾತ್ಮೇಚ್ಛಯೋಪನಿಷದರ್ಥರಸಂ ಪಿಬಂತ: ||
ವೀತಸ್ಪೃಹಾ ವಿಷಯಭೋಗಪದೇ ವಿರಕ್ತಾ |
ಧನ್ಯಾಶ್ಚರಂತಿ ವಿಜನೇಷು ವಿಮುಕ್ತಸಂಗಾ: ||೩||
ಭಾವಾರ್ಥ:-ನಮ್ಮನ್ನು ಅವನತಿಯತ್ತ ಕರೆದೊಯ್ಯಲು ಕಾರಣೀಭೂತವಾಗುವ ಮನೆ,ಮಠ,ಮಡದಿ, ಮಕ್ಕಳು,ಸಂಸಾರ ಇತ್ಯಾದಿಗಳ ಬಗೆಗಿನ ಭ್ರಾಂತಿಯನ್ನು ತೊರೆದು.ಆತ್ಮಾನಂದದ ಬಗೆಗಿನ ಇಚ್ಛೆಯುಳ್ಳವರಾಗಿ ಉಪನಿಷತ್ತುಗಳನ್ನು ತಿಳಿಯಬೇಕೆಂಬ ಹಂಬಲವುಳ್ಳವರಾಗಿ ಆ ಅಮೃತರಸಾಸ್ವಾದನೆ ಮಾಡುತ್ತಲಿರುವವರೂ,ಸಮಸ್ತ ವಿಷಯೋಪಭೋಗಾಸಕ್ತಿಗಳನ್ನು ತೊರೆದು,ವಿಷಯ ಸುಖಾದಿಗಳನ್ನು ಅನುಭವಿಸಲು ಯೋಗ್ಯವಾದ ರಾಜಭೋಗಾದಿಗಳಿಂದ ವಿರಕ್ತರಾಗಿ,ಸರ್ವಸಂಗಗಳನ್ನು ಪರಿತ್ಯಜಿಸಿ ನಿರ್ಜನವಾಗಿರುವ ವನಪ್ರದೇಶದಲ್ಲಿ ಸಂಚರಿಸುತ್ತಿರುವ ಜ್ಞಾನಿಗಳಾದ ಮಹಾಯೋಗಿವರೇಣ್ಯರೇ ಕೃತಕೃತ್ಯರು.
ತ್ಯಕ್ತ್ವಾ ಮಮಾಹಮಿತಿ ಬಂಧಕರೇ ಪದೇ ದ್ವೇ |
ಮಾನಾವಮಾನಸದೃಶಾ: ಸಮದರ್ಶಿಶ್ಚ ||
ಕರ್ತಾರಮನ್ಯಮವಗಮ್ಯ ತದರ್ಪಿತಾನಿ |
ಕುರ್ವಂತಿ ಕರ್ಮ ಪರಿಪಾಕಫಲಾನಿ ಧನ್ಯಾ: ||೪||
ಭಾವಾರ್ಥ:-"ನಾನು"ಹಾಗೂ"ನನ್ನದು"ಎನ್ನುವ ಭಾವನಾತ್ಮಕ ಸಂಬಂಧಗಳನ್ನು ತ್ಯಜಿಸಿ, ಮಾನಾಪಮಾನಗಳನ್ನು ಸರಿಸಮಾನವೆಂದು ಸಮದರ್ಶಿತ್ವದಿಂದ ಸ್ವೀಕರಿಸುತ್ತಾ ಹಾಗೆಯೇ ತನಗಿಂತ ಸಮರ್ಥನಾಗಿರುವ ಈಶ್ವರನು ಎಲ್ಲಾ ವಿಚಾರಗಳಿಗೂ ಯಜಮಾನನೆಂದು ತಿಳಿದು ತಮ್ಮ ಸಮಸ್ತ ಕರ್ಮಗಳ ಫಲವನ್ನು ಶಿವಾರ್ಪಣಾ ಭಾವದಿಂದ ಅರ್ಪಿಸಿ ಸತ್ಕರ್ಮಗಳನ್ನಾಚರಿಸುವ ಮಹಾತ್ಮರುಗಳಾದ ಯೋಗಿವರ್ಯರೇ ಭಾಗ್ಯಶಾಲಿಗಳು.
ತ್ಯಕ್ತ್ವೈಷಣಾತ್ರಯಮವೇಕ್ಷಿತಮೋಕ್ಷಮಾರ್ಗಾ: |
ಭೈಕ್ಷಾಮೃತೇನ ಪರಿಕಲ್ಪಿತದೇಹಯಾತ್ರಾ: ||
ಜ್ಯೋತಿ: ಪರಾತ್ಪರತರಂ ಪರಮಾತ್ಮಸಂಜ್ಞಂ |
ಧನ್ಯಾ ದ್ವಿಜಾ ರಹಸಿ ಹೃದ್ಯವಲೋಕಯಂತಿ ||೫||
ಭಾವಾರ್ಥ:-ಸತಿ,ಸುತ,ಸಂಪದಗಳ ಬಯಕೆಗಳಿಂದ ದೂರವಾಗಿ ಮುಕ್ತಿಯಹಾದಿಯನ್ನು ಚಿಂತಿಸುತ್ತಾ.ಭಿಕ್ಷಾನ್ನವೆನ್ನುವ ಅಮೃತವನ್ನು ಸ್ವೀಕರಿಸುವುದರ ಮೂಲಕ ದೇಹವನ್ನು ರಕ್ಷಿಸುತ್ತಾ ಪರಮಾತ್ಮನೆಂದು ಗುರುತಿಸಲ್ಪಡುವ ಸರ್ವಶ್ರೇಷ್ಠನಾಗಿರುವ ಪರಾತ್ಪರ ಪರಂಜ್ಯೋತಿಯನ್ನು ಏಕಾಂತ ಪ್ರದೇಶವಾಗಿರುವ ತಮ್ಮ ಹೃದಯದಲ್ಲಿ ಕಾಣುತ್ತಲಿರುವ ಮಹಾ ಜ್ಞಾನಿಗಳೇ ಅದೃಷ್ಟವಂತರು.
ನಾಸನ್ನ ಸನ್ನ ಸದಸನ್ನ ಮಹನ್ನ ಚಾಣು |
ನ ಸ್ತ್ರೀ ಪುಮಾನ್ನ ಚ ನಪುಂಸಕಮೇಕಬೀಜಂ ||
ಯೈರ್ಬ್ರಹ್ಮ ತತ್ಸಮಮುಪಾಸಿತಮೇಕಚಿತ್ತೈ- |
ಧನ್ಯಾ ವಿರೇಜುರಿತರೇ ಭವಪಾಶಬದ್ದಾ: ||೬||
ಭಾವಾರ್ಥ:-ಆ ಪರಮಾತ್ಮನು ವ್ಯಕ್ತನೂ ಅಲ್ಲ; ಅವ್ಯಕ್ತನೂ ಅಲ್ಲ.ಒಳ್ಳೆಯವ ಹಾಗೂ ಕೆಟ್ಟವ ಎರಡೂ ಅಲ್ಲ.ಸ್ಥೂಲನೂ ಅಲ್ಲ.ಸೂಕ್ಷ್ಮನೂ ಅಲ್ಲ.ಸ್ತ್ರೀಯಲ್ಲ,ಪುರುಷನಲ್ಲ, ನಪುಂಸಕನಲ್ಲ.ಆದಾಗ್ಯೂ ಇವೆಲ್ಲವುಗಳಿಗೆ ಮೂಲನಿಮಿತ್ತನು ಅವನೇ ಆಗಿರುವನು. ಇಂತಹಾ ಪರಬ್ರಹ್ಮನನ್ನು ಏಕೋಭಾವದಿಂದ ಉಪಾಸನೆಗೈಯುತ್ತಲಿರುವ ಪುರುಷರೇ ಧನ್ಯರು.ಅನ್ಯರೆಲ್ಲರೂ ಭವಪಾಶವೆಂಬ ಸಾಂಸಾರಿಕ ಬಂಧನದಲ್ಲಿ ಸಿಲುಕಿ ನರಕಯಾತನೆಯನ್ನು ಅನುಭವಿಸುವವರೇ ಆಗಿದ್ದಾರೆ.
ಆಜ್ಞಾನಪಂಕಪರಿಮಗ್ನಮಪೇತಸಾರಂ |
ದು:ಖಾಲಯಂ ಮರಣಜನ್ಮಜರಾವಸಕ್ತಂ ||
ಸಂಸಾರಬಂಧನಮನಿತ್ಯಮವೇಕ್ಷ್ಯ ಧನ್ಯಾ |
ಜ್ಞಾನಾಸಿನಾ ತದವಶೀರ್ಯ ವಿನಿಶ್ಚಯಂತ್ ||೭||
ಭಾವಾರ್ಥ:-ಅಜ್ಞಾನವೆನ್ನುವ ಕೆಸರನ್ನು ಹಚ್ಚಿಕೊಂಡು ಕೊಳಕಾಗಿರುವುದೂ, ಸಾರರಹಿತವೂ,ದು:ಖದ ಆವಾಸತಾಣವೂ,ಹುಟ್ಟು ಮುಪ್ಪು ಸಾವುಗಳಿಂದ ಕೂಡಿರುವ ನಶ್ವರವಾಗಿರುವಂತಹಾ ಸಂಸಾರದ ನಿಜರೂಪವನ್ನು ಚೆನ್ನಾಗಿ ಮನಗಂಡು ಸಾಂಸಾರಿಕ ಬಂಧವನ್ನು ಜ್ಞಾನಮಯ ಖಡ್ಗದಿಂದ ತುಂಡರಿಸಿ ಆತ್ಮನ ನೈಜ ಸ್ವರೂಪದ ತತ್ವದ ಖಚಿತ ಅರಿವನ್ನು ಪಡೆದಿರುವ ವಿದ್ವಜ್ಜನರೇ ಶ್ರೀಮಂತರು.
ಶಾಂತೈರನನ್ಯಮತಿಭಿರ್ಮಧುರಸ್ವಭಾವೈ- |
ರೇಕತ್ವನಿಶ್ಚಿತಮನೋಭಿರಪೇತಮೋಹೈ: ||
ಸಾಕಂ ವನೇಷುವಿಜಿತಾತ್ಮಪದ ಸ್ವರೂಪಂ |
ಶಾಸ್ತ್ರೇಷುಸಮ್ಯಗನಿಶಂ ವಿಮೃಶಂತಿ ಧನ್ಯಾ: ||೮||
ಭಾವಾರ್ಥ:-ಶಾಂತಾತ್ಮರೂಪರೂ,ಸ್ಥಿತಪ್ರಜ್ಞಾವಂತರೂ,ಸ್ವಾರಸ್ಯಭರಿತ ಸ್ವಭಾವದವರೂ, ಏಕಮೇವಾದ್ವಿತೀಯವಾದಂತಹಾ ಚೇತನಾಸ್ವರೂಪದ ಸಾಮರ್ಥ್ಯದಲ್ಲಿ ನೈಜಶ್ರದ್ಧೆಯುಳ್ಳವರೂ, ಮೋಹವಿರಹಿತರೂ, ಆತ್ಮತತ್ವದ ನೈಜಾರ್ಥವನ್ನು ಅರಿತವರೂ ಆಗಿರುವ ಮಹಾಯೋಗಿಗಳೊಡನೆ ಕಾನನದೊಳಗೆ ಸಂಚರಿಸುತ್ತಾ ಶಾಸ್ತ್ರಗಳನ್ನು ವಿಮರ್ಷಿಸುತ್ತಾ ಆತ್ಮತತ್ವವನ್ನು ಮನನ ಮಾಡುತ್ತಲಿರುವ ಮಹಾಪುರುಷರುಗಳೇ ಧನ್ಯರು.
ಅಹಿಮಿವ ಜನಯೋಗಂ ಸರ್ವದಾ ವರ್ಜಯೇದ್ಯ: |
ಕುಣಪ ಮಿವ ಸುನಾರೀಂ ತ್ಯಕ್ತ ಕಾಮೋವಿರಾಗೀ ||
ವಿಷಮಿವ ವಿಷಯಾನೊ ಮಾನ್ಯಮಾನೊ ದುರಂತಾನ್ |
ಜಯತಿ ಪರಮಹಂಸೋ ಮುಕ್ತಿಭಾವಂ ಸಮೇತಿ ||೯||
ಭಾವಾರ್ಥ:-ಯಾವಾತನು ಜನರ ಗುಂಪನ್ನು ಹಾವುಗಳ ಸಹವಾಸವಿದೆಂದು ತಿಳಿದು ತ್ಯಜಿಸಿ ದೂರವಿರುವಿರುವನೋ ಮನಮೋಹಕ ಸೌಂದರ್ಯವುಳ್ಳ ಸ್ತ್ರೀಯನ್ನು ಶವದಂತೆ ತಿಳಿದು ಉಪೇಕ್ಷೆ ಮಾಡುವನೋ,ದುರ್ವಿಷಯಗಳನ್ನು ವಿಷ ಸಮಾನವೆಂದು ಬಗೆದು ತ್ಯಜಿಸುವನೋ,ಅಂತಹಾ ಪರಮಹಂಸನಿಗೆ ಜಯವು ದೊರಕುವುದರೊಂದಿಗೆ ಆತನು ಮುಕ್ತಿಯನ್ನು ಹೊಂದುವನು.
ಸಂಪೂರ್ಣಂ ಜಗದೇವ ನಂದನವನಂ ಸರ್ವೇsಪಿ ಕಲ್ಪದ್ರುಮಾ |
ಗಾಂಗಂ ವಾರಿ ಸಮಸ್ತವಾರಿ ನಿವಹ: ಪುಣ್ಯಾ: ಸಮಾಪ್ತಾ: ಕ್ರಿಯಾ: ||
ವಾಚ: ಪ್ರಾಕೃತ ಸಂಸ್ಕೃತಾ: ಶ್ರುತಿ ಶಿರೋವಾರಣಾಸೀ ಮೇದಿನೀ |
ಸರ್ವಾವಸ್ಥಿತಿರಸ್ಯ ವಸ್ತು ವಿಷಯಾದೃಷ್ಟೇಪರಬ್ರಹ್ಮಣಿ ||೯||
ಭಾವಾರ್ಥ:-ಯಾವಾತನು ಪರಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವನೋ,ಅವನಿಗೆ ಸಂಸಾರವೆಲ್ಲವೂ ನಂದನವನದಂತೆ ಭಾಸವಾಗುವುದು.ಸಮಸ್ತಕಾರ್ಯಗಳೆಲ್ಲವೂ ಕಲ್ಪವೃಕ್ಷಗಳಂತೆ ಫಲವನ್ನು ಒದಗಿಸುವವು.ಜಲವೆಲ್ಲವೂ ಗಂಗಾಜಲದಂತೆ ಪಾವನಮಯವಾಗುವವು.ಅವನು ಮಾಡುವ ಸಮಸ್ತ ಕರ್ಮಗಳೂ ಪವಿತ್ರವಾಗುವವು.ಅವನ ಮಾತೆಲ್ಲವೂ ಅಸಂಸ್ಕೃತವಾಗಿರಲಿ ಅಥವಾ ಸಂಸ್ಕೃತವಾಗಿರಲಿ ಅವುಗಳು ವೇದ ಸಮಾನ ಸಾರವುಳ್ಳದ್ದಾಗುವುದು.ಆತನಿಗೆ ಸಮಸ್ತ ಭೂಮಂಡಲವು ಕಾಶೀ ಕ್ಷೇತ್ರಸಮಾನವಾದ ಮುಕ್ತಿಕ್ಷೇತ್ರವಾಗುವುದು.ಆತನ ಆಚರಣೆಗಳೇನಿವೆಯೋ ಅವೆಲ್ಲವೂ ಪಾರಮಾರ್ಥಿಕತೆಯುಳ್ಳದ್ದಾಗಿರುವುದು.
*********************************************************************
|| ಇತಿ ಧನ್ಯಾಷ್ಟಕಮ್ || || ಈ ರೀತಿಯಾಗಿ ಧನ್ಯಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೨-
|| ಪರಾಪೂಜಾ ||
**************
ಅಖಂಡೇ ಸಚ್ಚಿದಾನಂದೇ ನಿರ್ವಿಕಲ್ಪೈಕರೂಪಿಣಿ |
ಸ್ಥಿತೇsದ್ವಿತೀಯ ಭಾವೇಸ್ಮಿನ್ಕಥಂ ಪೂಜಾವಿಧೀಯತೆ ||೧||
ಭಾವಾರ್ಥ:-ಪೂರ್ಣನೂ,ಬ್ರಹ್ಮಾನಂದನೂ,ಮತ್ತು ಶೋಧನೆಗೆ ನಿಲುಕದ ರೂಪಿಯೂ, ಏಕೈಕ ಭಾವದಲ್ಲಿ ನೆಲೆಸಿರುವಾತನೂ ಆಗಿರುವವನನ್ನು ಅದೆಂತು ಆರಾಧಿಸುವುದು?
ಪೂರ್ಣಸ್ಯಾವಾಹನಂ ಕುತ್ರ ಸರ್ವಾಧಾರಸ್ಯ ಚಾಸನಮ್ |
ಸ್ವಚ್ಛಸ್ಯ ಪಾದ್ಯಮರ್ಘ್ಯಂಚ ಶುದ್ಧಸ್ಯಾಚಮನಂ ಕುತ: ||೨||
ಭಾವಾರ್ಥ:-ಅಖಂಡವಾಗಿರುವಾತನನ್ನು ಎಲ್ಲಿಗೆ ಆವಾಹನೆ ಮಾಡಲಿ?ಸಮಸ್ತಕ್ಕೂ ಆಧಾರನಾಗಿರುವಾತನಿಗೆ ಆಸನವನ್ನು ಎಂತು ಕೊಡಲಿ?ನಿರ್ಮಲವಾಗಿರುವಾತನಿಗೆ ಪಾದ್ಯ ಹಾಗೂ ಅರ್ಘ್ಯಗಳನ್ನೆಂತು ನೀಡಲಿ? ಶುದ್ಧನಾಗಿರುವಾತನಿಗೆ ಆಚಮನವಾದರೂ ಏಕೆ?
ನಿರ್ಮಲಸ್ಯ ಕುತ:ಸ್ನಾನಂ ವಿಶ್ವೋದರಸ್ಯ ಚ |
ಅಗೋತ್ರಸ್ಯ ವರ್ಣಸ್ಯ ಕುತಸ್ತಸ್ಯೋಪವೀತಕಮ್ ||೩||
ಭಾವಾರ್ಥ:-ಹೊಳೆಯುವ ಶರೀರಗೆ ಸ್ನಾನದ ಅಗತ್ಯವಾದರೂ ಏಕೆ?ಸಮಸ್ತ ವಿಶ್ವವನ್ನೇ ಉದರದೊಳಗಿರಿಸಿದಾತನಿಗೆ ವಸ್ತ್ರವನ್ನು ಉಡಿಸುವುದಾದರೂ ಎಂತು?ಜಾತಿ ಮತ್ತು ಗೋತ್ರ ವಿರಹಿತನಾಗಿರುವವಗೆ ಯಜ್ಞೋಪವೀತವಾದರೂ ಯಾತಕ್ಕೆ?
ನಿರ್ಲೇಪಸ್ಯ ಕುತೋಗಂಧ: ಪುಷ್ಪಂ ನಿರ್ವಾಸನಸ್ಯ ಚ |
ನಿರ್ವಿಶೇಷಸ್ಯ ಕಾ ಭೂಷಾ ಕೋsಲಂಕಾರೋ ನಿರಾಕೃತೆ: ||೪||
ಭಾವಾರ್ಥ:-ಯಾವುದೇ ಲೇಪವಿಲ್ಲವನಿಗೆ ಗಂಧವನ್ನು ಲೇಪಿಸುವುದಾದರೂ ಹೇಗೆ? ವಾಸನಾರಹಿತನಾದವನಿಗೆ ಪುಷ್ಪಗಳ ಅವಶ್ಯಕತೆಯಾದರೂ ಏನು? ಏಕಪ್ರಕಾರವಾಗಿರುವಾತಂಗೆ ಅಲಂಕಾರವಾದರೂ ಯಾವುದು? ಅಕಾರ ವಿರಹಿತಗೆ ಭೂಷಣವಾವುದು?
ನಿರಂಜನಸ್ಯ ಕಿಂ ಧೂಪೈರ್ದೀಪೈರ್ವಾ ಸರ್ವಸಾಕ್ಷಿಣ: |
ನಿಜಾನಂದೈಕ ತೃಪ್ತಸ್ಯ ನೈವೇದ್ಯಂ ಕಿಂ ಭವೇದಿಹ ||೫||
ಭಾವಾರ್ಥ:-ದೋಷವಿರಹಿತನಾಗಿರುವಾತಗೆ ಧೂಪವಾದರೂ ಏತಕ್ಕೆ?ಪ್ರತ್ಯಕ್ಷವಿರುವಾತಂಗೆ ದೀಪವಾದರೂ ಯಾತಕ್ಕೆ?ಸಹಜಾನಂದಸ್ವರೂಪನಾಗಿ ಅಮೃತಪಾನದಿಂದ ತೃಪ್ತಿ ಹೊಂದಿರುವವಗೆ ನೈವೇದ್ಯ ನೀಡಿದರೆ ಪ್ರಯೋಜನವೇನು?
ವಿಶ್ವಾನಂದಯಿತುಸ್ತಸ್ಯ ಕಿಂ ತಾಂಬೂಲಂ ಪ್ರಕಲ್ಪ್ಯತೆ |
ಸ್ವಯಂಪ್ರಕಾಶ ಚಿದ್ರೂಪೊ ಯೋsಸಾವರ್ಕಾದಿ ಭಾಸಕ: ||೬||
ಭಾವಾರ್ಥ:-ಸ್ವತ: ಪ್ರಕಾಶಮಯಿಯಾಗಿ ಚೇತನಾರೂಪನಾಗಿ ಸೂರ್ಯಚಂದ್ರಾದಿಗಳಿಗೂ ಬೆಳಕನ್ನು ನೀಡುವ ಮತ್ತು ಬ್ರಹ್ಮಾಂಡವನ್ನೇ ಆನಂದಗೊಳಿಸುವಾತನಿಗೆ ತಾಂಬೂಲವನ್ನು ರೂಪಿಸುವುದಾದರೂ ಎಂತು?
ಪ್ರದಕ್ಷಿಣಾಹ್ಯನಂತಸ್ಯ ಹ್ಯದ್ವಯಸ್ಯ ಕುತೋ ನತಿ: |
ವೇದವಾಕ್ಯೈರವೇದ್ಯಸ್ಯ ಕುತ: ಸ್ತೋತ್ರಂ ವಿಧೀಯತೇ ||೭||
ಭಾವಾರ್ಥ:-ಅಂತ್ಯವೇ ಇಲ್ಲದಿರುವಾತನಿಗೆ ಪ್ರದಕ್ಷಿಣೆ ಬರುವುದಾರೂ ಹೇಗೆ? ಸರಿಸಾಟಿಯಿಲ್ಲದಾತಂಗೆ ನಮಸ್ಕಾರವೇಕೆ? ವೇದವಾಕ್ಯಗಳ ಮೂಲಕವೂ ತಿಳಿಯಲಶಕ್ಯನಾದವನನ್ನು ಹೇಗೆ ಸ್ತುತಿಸಲಿ?
ಸ್ವಯಂಪ್ರಕಾಶಮಾನಸ್ಯ ಕುತೋ ನೀರಾಜನಂ ವಿಭೋ: |
ಅಂತರ್ಬಹಿಶ್ಚ ಪೂರ್ಣಸ್ಯ ಕಥಮುದ್ವಾಸಸನಂ ಭವೇತ್ ||೮||
ಭಾವಾರ್ಥ:-ಪರಮಾತ್ಮಸ್ವರೂಪನಾಗಿ ತಾನೇತಾನಾಗಿ ಪ್ರಕಾಶಮಯಿಯಾಗಿರುವವಗೆ ಆರತಿಯಾದರೂ ಯಾತಕ್ಕೆ? ಒಳಗೂ ಹೊರಗೂ ಎಲ್ಲೆಡೆಯೂ ಆವರಿಸಿ ಪರಿಪೂರ್ಣನಾದಾತಾನನ್ನು ಹೊರಗೆ ಹಾಕುವುದಾದರೂ ಎಲ್ಲಿಗೆ?
ಏವಮೇವ ಪರಾಪೂಜಾ ಸರ್ವಾವಸ್ಥಾಸು ಸರ್ವದಾ |
ಏಕಬುದ್ಧ್ಯಾತು ದೇವೇಶೇ ವಿಧೇಯೊ ಬ್ರಹ್ಮ ವಿತ್ತಮೈ: ||೯||
ಭಾವಾರ್ಥ:-ತತ್ವಜ್ಞಾನವನ್ನರಿತವರು ಸರ್ವಕಾಲಗಳಲ್ಲಿಯೂ ಎಲ್ಲಾ ಸ್ಥಿತಿಗಳಲ್ಲಿಯೂ,ಈ ರೀತಿಯಾಗಿ ಏಕಮನಸ್ಸಿನಿಂದ ಭಗವಂತನ ಅಲೌಕಿಕ ಆರಾಧನೆಯನ್ನು ಮಾಡಬೇಕು.
*********************************************************************
|| ಇತಿ ಪರಪೂಜಾ || || ಈ ರೀತಿಯಾಗಿ ಪರಾಪೂಜಾ ಶ್ಲೋಕಗಳ ಭಾವಾರ್ಥವಾಗಿದೆ ||
*********************************************************************
-೧೩-
|| ವಿಜ್ಞಾನ ನೌಕಾ ||
*****************
ತಪೋಯಜ್ಞದಾನಾದಿಭಿ: ಶುದ್ಧಬುದ್ಧಿ:-
ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ |
ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ವಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೧||
ಭಾವಾರ್ಥ:-ದಾನ;ಯಜ್ಞ;ತಪಸ್ಸು ಇತ್ಯಾದಿಗಳಿಂದ ಪರಿಶುದ್ಧಜ್ಞಾನವುಳ್ಳವರಾದ ವಿದ್ವಜ್ಜನರು ಅರಸೊತ್ತಿಗೆ, ರಾಜ್ಯ, ಸಂಪತ್ತು ಮೊದಲಾದವುಗಳನ್ನು ಕೀಳೆಂದು ಪರಿಗಣಿಸಿ, ಅನಾಸಕ್ತರಾಗಿ,ಸರ್ವಸ್ವವನ್ನೂ ತ್ಯಜಿಸಿ ಯಾವ ಸ್ವರೂಪವನ್ನು ಹೊಂದುವರೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ದಯಾಲುಂ ಗುರುಂ ಬ್ರಹ್ಮನಿಷ್ಟಂ ಪ್ರಶಾಂತಂ
ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ |
ಯದಾಪ್ನೋತಿ ತತ್ವಂ ನಿದಿಧ್ಯಾಸ್ಯ ವಿದ್ವಾನ್
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೨||
ಭಾವಾರ್ಥ:-ಬಲ್ಲಿದರು ದಯಾನಿಧಿಯಾದ ಜ್ಞಾನನಿಷ್ಟನಾಗಿರುವ ಪ್ರಶಾಂತನಾಗಿರುವ ಗುರುವಿನ ಚರಣಾರವಿಂದಗಳನ್ನು ಪೂಜಿಸಿ, ತಮ್ಮ ನೈಜ ರೂಪದ ವಿಚಾರ ಹಾಗೂ ಧ್ಯಾನಗಳಿಂದ ಯಾವ ಸ್ವರೂಪವನ್ನು ಹೊಂದುವರೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಾನಂದರೂಪಂ ಪ್ರಕಾಶರೂಪಂ
ನಿರಸ್ತ ಪ್ರಪಂಚಂ ಪರಿಚ್ಛೇದಶೂನ್ಯಮ್ |
ಅಹಂ ಬ್ರಹ್ಮ ವೃತ್ತ್ಯೈಕಗಮ್ಯಂ ತುರೀಯಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೩||
ಭಾವಾರ್ಥ:-ಯಾವುದು ಆನಂದರೂಪಿಯೋ,ಚೇತನಾಸ್ವರೂಪವೋ,ಪ್ರಪಂಚಕ್ಕೆ ನಿಲುಕದ ಎಲ್ಲಾ ಪ್ರಕರಣಗಳಿಂದ ಮುಕ್ತವಾಗಿ "ನಾನೇ ಬ್ರಹ್ಮ"ಎಂಬ ಒಂದೇ ಒಂದಾದ ಕರ್ಮದಿಂದ ಯಾವುದನ್ನು ಪಡೆಯಬಹುದೋ, ಯಾವುದು ಚತುರ್ಥಾವಸ್ಥೆಯೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಜ್ಞಾನತೋ ಭಾತಿ ವಿಶ್ವಂ ಸಮಸ್ತಂ
ವಿನಷ್ಟಂ ಚ ಸದ್ಯೋ ಯದಾತ್ಮ ಪ್ರಭೋಧೇ |
ಮನೋವಾಗತೀತಂ ವಿಶುದ್ಧಂ ವಿಮುಕ್ತಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೪||
ಭಾವಾರ್ಥ:-ಯಾವುದರ ಕುರಿತಾದ ಅರಿವಿನ ಕೊರತೆಯಿಂದ ಈ ವಿವಿಧತೆಗಳಿಂದ ಕೂಡಿದ ಬ್ರಹ್ಮಾಂಡವೆಲ್ಲವೂ ಕಾಣುವುದೋ, ಆದರೆ ಯಾವ ಆತ್ಮಜ್ಞಾನದ ಅನುಭವವಾದೊಡನೆ ಸಮಸ್ತವೂ ಮಾಯವಾಗುವುದೋ, ಯಾವುದು ಮಾತು ಮನಸ್ಸುಗಳಿಗೆ ನಿಲುಕದಿರುವುದೋ ಆ ಸ್ವಚ್ಛ ವಿರಕ್ತ ಸ್ವಭಾವದ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ನಿಷೇಧೇ ಕೃತೇ ನೇತಿ ನೇತೀತಿ ವಾಕ್ಯೈ:
ಸಮಾಧಿಸ್ಥಿತಾನಾಂ ಯದಾಭಾತಿಪೂರ್ನಾಮ್
ಅವಸ್ಥಾತ್ರಯಾತೀತಮೇಕಂ ತುರೀಯಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೫||
ಭಾವಾರ್ಥ:-"ಹೀಗಲ್ಲ-ಹೀಗಲ್ಲ"ಎನ್ನುವ ಉಪನಿಷದ್ವಾಕ್ಯಗಳಿಂದ ಸಮಸ್ತವನ್ನೂ ನಿರಾಕರಿಸಿ ಸಮಾಧಿಸ್ಥಿತಿಯಲ್ಲಿರುವವರಿಗೆ ಯಾವುದು ಪರಿಪೂರ್ಣವಾಗಿ ಪ್ರಕಾಶಿಸುವುದೋ, ಯಾವುದು ಏಕಮಾತ್ರವೋ, ಯಾವುದು ಮೋಕ್ಷಾವಸ್ಥೆಯೋ, ಹಾಗೆಯೇ ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಮೂರು ಸ್ಥಿತಿತ್ವಗಳಿಗೆ ನಿಲುಕದಿರುವುದೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಾನಂದಲೇಶೈ: ಸಮಾನಂದಿ ವಿಶ್ವಂ
ಯದಾಭಾತಿ ಸತ್ತ್ವೇ ತದಾಭಾತಿ ಸರ್ವಮ್ |
ಯದಾಲೋಚನೇ ರೂಪಮನ್ಯತ್ಸಮಸ್ತಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೬||
ಭಾವಾರ್ಥ:-ಯಾವ ಆನಂದದ ತುಣುಕಿನಿಂದ ಜಗತ್ತೆಲ್ಲವೂ ಸಂತಸಮಯವಾಗಿರುವುದೋ,ಯಾವ ತೇಜಸ್ಸಿನಿಂದ ಜಗತ್ತೆಲ್ಲವೂ ತೇಜೋಮಯವಾಗಿರುವುದೋ,ಯಾವ ನೋಟದಿಂದ ಮಿಕ್ಕಿರುವುದೆಲ್ಲವೂ ಅಮೃತರೂಪಿಯಾಗಿರುವುದೋ ಅಂತಹಾ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಅನಂತಂ ವಿಭುಂ ಸರ್ವಯೋನಿಂ ನಿರೀಹಂ
ಶಿವಂ ಸಂಗಹೀನಂ ಯದೋಂಕಾರಗಮ್ಯಮ್ |
ನಿರಾಕಾರಮತ್ಯುಜ್ಜ್ವಲಂ ಮೃತ್ಯುಹೀನಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೭||
ಭಾವಾರ್ಥ:-ಯಾವುದು ಅಂತ್ಯರಹಿತವಾಗಿದೆಯೋ, ದೊರೆಯಾಗಿರುವುದೋ, ಸಮಸ್ತಕ್ಕೂ ಆದಿಯಾಗಿರುವುದೋ, ಬಯಕೆಗಳರಹಿತವಾಗಿರುವುದೋ, ಶುಭದಾಯಕವಾಗಿರುವುದೋ, ಕೂಟವಿರಹಿತವಾಗಿರುವುದೋ, ಓಂಕಾರಕ್ಕೆ ಮನ್ನಣೆಯಾಗಿದೆಯಾಗಿದೆಯೋ, ಯಾವುದು ಆಕಾರ ರಹಿತವಾಗಿದೆಯೋ,ಕಾಂತಿಯುತವಾಗಿದೆಯೋ, ಅಮೃತಮಯವಾಗಿದೆಯೋ,ಅಂತಹ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಾನಂದಸಿಂಧೌ ನಿಮಗ್ನ: ಪುಮಾನ್ಸ್ಯಾ-
ದವಿದ್ಯಾವಿಲಾಸ: ಸಮಸ್ತ ಪ್ರಪಂಚ: |
ಯದಾ ನ ಸ್ಫುರತ್ಯದ್ಭುತಂ ಯನ್ನಿಮಿತ್ತಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೮||
ಭಾವಾರ್ಥ:-ಯಾವ ಸಂತಸಸಾಗರದಲ್ಲಿ ಒಂದು ಬಾರಿ ಮುಳುಗಿದರೆ ಈ ಮಾಯಾವಿಲಾಸವಾಗಿರುವ ಜಗತ್ತು ಪುನ: ಕಾಣಲಾರದೋ, ಹಾಗಾಗಿರುವುದರಿಂದ ಯಾವುದು ಅಚ್ಚರಿಯಾಗಿರುವುದೋ ಅಂತಹಾ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ವಿಜ್ಞಾನನಾವಂ ಪರಿಗೃಹ್ಯ ಕಶ್ಚಿತ್
ತರೇದ್ ಯದಜ್ಞಾನಮಯಂ ಭವಾಭ್ಧಿಮ್ |
ಜ್ಞಾನಾಸಿನಾ ಯೋ ಹಿ ವಿಚ್ಛಿದ್ಯ ತೃಷ್ಣಾಂ
ವಿಷ್ಣೋ: ಪದಂ ಯಾತಿ ಸ ಏವ ಧನ್ಯ: ||೯||
ಭಾವಾರ್ಥ:-ಯಾವಾತನು ತಿಳುವಳಿಕೆಯೆಂಬ ಕತ್ತಿಯಿಂದ ಆಶಾಪಾಶಗಳನ್ನು ತುಂಡರಿಸಿ ವಿಶಿಷ್ಟವಾದ ಅರಿವು ಎನ್ನುವ ಹರಿಗೋಲಿನ ಸಹಾಯದಿಂದ ಅಜ್ಞಾನವೆನ್ನುವ ಸಂಸಾರಸಾಗರವನ್ನು ದಾಟುವನೋ ಅವನು ಮಹಾವಿಷ್ಣುವಿನ ಸ್ಥಾನವನ್ನು ಸೇರುವನು.ಅವನೇ ಧನ್ಯನು.
*********************************************************************
|| ಇತಿ ವಿಜ್ಞಾನನೌಕಾ || || ಈ ರೀತಿಯಾಗಿ ವಿಜ್ಞಾನನೌಕಾ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೧೪-
|| ದಶ ಶ್ಲೋಕಿ ||
***************
ನ ಭೂಮಿರ್ನ ತೋಯಂ ನ ತೇಜೋ ನ ವಾಯು:
ನ ಖಂ ನೇಂದ್ರಿಯಂ ವಾ ನ ತೇಷಾಂ ಸಮೂಹ: |
ಅನೇಕಾಂತಿಕತ್ವಾತ್ ಸುಷುಪ್ತ್ಯೇಕಸಿದ್ಧ:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೧||
ಭಾವಾರ್ಥ:-ನಾನು ಭುವಿಯಲ್ಲ. ಜಲವಲ್ಲ. ಅಗ್ನಿ, ವಾಯು, ಆಕಾಶಗಳೂ ಅಲ್ಲ. ಅಥವಾ ಅವುಗಳ ಗುಂಪೂ ಅಲ್ಲ. ಯಾಕೆಂದರೆ ಇವೆಲ್ಲವೂ ಅಶಾಶ್ವತವಾದವುಗಳು. ಗಾಢವಾದ ನಿದ್ರಾ ಸಮಯದಲ್ಲಿ ಯೋಗಿಯೂ, ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ವರ್ಣಾ ನ ವರ್ಣಾಶ್ರಮಾಚಾರ ಧರ್ಮಾ:
ನ ಮೇ ಧಾರಣಾಧ್ಯಾನಯೋಗಾದಯೋ??ಪಿ |
ಅನಾತ್ಮಾಶ್ರಯಾಹಂ ಮಮಾಧ್ಯಾಸಹಾನಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೨||
ಭಾವಾರ್ಥ:-ನನಗೆ ಬ್ರಾಹ್ಮಣಾದಿ ಚತುರ್ವರ್ಣಗಳಿಲ್ಲ. ವರ್ಣಾಶ್ರಮಗಳಿಗೆ ವಿಧಿಸಲಾಗಿರುವ ಆಚಾರಗಳಾಗಲೀ ಧರ್ಮಗಳ ಕಟ್ಟುಪಾಡುಗಳಾಗಲೀ ಇಲ್ಲ.ಯೋಗಿವರ್ಯರಿಗೆ ತಕ್ಕುದಾದ ಧ್ಯಾನ ಧಾರಣಾದಿ ಅಷ್ಟಾಂಗ ಸಹಿತವಾದ ಯೋಗವೂ ಇಲ್ಲ. ಶರೀರದಲ್ಲಿ "ನಾನು" ಎನ್ನುವ ಸ್ಥಾನ, ಪ್ರಾಪಂಚಿಕ ಒಡವೆಗಳಲ್ಲಿ "ನನ್ನದು" ಎನ್ನುವ ಭಾವ ದೂರವಾಗಿರುವುದರಿಂದ ಆತ್ಮವಿಲ್ಲದವನೂ ಆಶ್ರಯರಹಿತನೂ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಮಾತಾ ನ ಪಿತಾ ನ ದೇವಾ ನ ಲೋಕಾ:
ನ ವೇದಾ ನ ಯಜ್ಞಾ ನ ತೀರ್ಥಂ ಬ್ರುವಂತಿ |
ಸುಷುಪ್ತೌ ನಿರಪಾಸ್ತತಿಶೂನ್ಯಾತ್ಮಕತ್ವಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೩||
ಭಾವಾರ್ಥ:-ಅಪ್ಪ,ಅಮ್ಮ,ದೇವತೆಯರು,ಲೋಕಂಗಳು,ವೇದಗಳು, ಯಜ್ಞಾದಿಗಳು, ತೀರ್ಥಾದಿಗಳಾವುದೂ ನನಗಿಲ್ಲವೆಂದು ವಿದ್ವಾಂಸರು ಹೇಳುತ್ತಾರೆ.ನಿದ್ರಾ ಸಮಯದಲ್ಲಿ ಅನ್ಯ ವಸ್ತುಗಳ ಅರಿವಿಲ್ಲದೆ ಅತ್ಯಂತ ಪೊಳ್ಳು ಸ್ವರೂಪದವನಾಗಿ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಸಾಂಖ್ಯಂ ನ ಶೈವಂ ನ ತತ್ಪಾಂಚರಾತ್ರಂ
ನ ಜೈನಂ ನ ಮೀಮಾಂಸಕಾದೇರ್ಮತಂ ವಾ |
ವಿಶಿಷ್ಟಾನುಭೂತ್ಯಾ ವಿಶಿದ್ಧಾತ್ಮಕತ್ವಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೪||
ಭಾವಾರ್ಥ:-ನನಗೆ ಕಪಿಲ ಮಹರ್ಷಿ ಬರೆದ ಸಾಂಖ್ಯ ಶಾಸ್ತ್ರವಾಗಲೀ, ಶೈವ ಪಂಥವಾಗಲೀ, ಪಾಂಚರಾತ್ರಾದಿ ಆಗಮಸಿದ್ಧಾಂತವಾಗಲೀ, ಜೈನ ಮತವಾಗಲೀ, ಷಡ್ದರ್ಶನ ಶಾಸ್ತ್ರಗಳಾಗಲೀ ಯಾವುವೂ ಇಲ್ಲ. ಮಹತ್ತರವಾದ ಅನುಭವದಿಂದ ಪವಿತ್ರಾತ್ಮ ಪುನೀತನಾಗಿರುವುದಲ್ಲದೆ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಚೋರ್ಧ್ವಂ ನ ಚಾಧೋ, ನ ಚಾಂತರ್ನ ಬಾಹ್ಯಂ
ನ ಮಧ್ಯಂ ನ ತಿರ್ಯಙ್ ನ ಪೂರ್ವಾ ಪರಾದಿಕ್ |
ವಿಯದ್ವಾಪಕತ್ವಾದಖಂಡೈಕ ರೂಪ:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೫||
ಭಾವಾರ್ಥ:-ಮೇಲೆ,ಕೆಳಗೆ,ಒಳಹೊರಗೆ,ಮಧ್ಯ,ಅಡ್ಡ,ಮುಂದೆ, ಹಿಂದೆ ಈ ವಿಧವಾದ ಅಷ್ಟ ದಿಸೆಗಳ ವಿಭಾಗ ನನಗಿಲ್ಲ.ನಾನು ಅಕಾಶದಂತೆ ವಿಶಾಲ ವ್ಯಾಪಕನೂ,ತುಂಡಾಗದ ಏಕೈಕರೂಪಿಯಾಗಿ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಶುಕ್ಲಂ ನ ಕೃಷ್ಣಂ ನ ರಕ್ತಂ ನ ಪೀತಮ್
ನ ಕುಬ್ಜಂ ನ ಪೀನಂ ನ ಹೃಸ್ವಂ ನ ಧೀರ್ಘಂ |
ಅರೂಪಂ ತಥಾ ಜ್ಯೋತಿರಾಕಾರಕತ್ವಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೬||
ಭಾವಾರ್ಥ:-ನಾನು ಶ್ವೇತ ವರ್ಣೀಯನಲ್ಲ.ಅಂತೆಯೇ ಕರಿ ವರ್ಣದವನೂ ಅಲ್ಲ.ರಕ್ತ ವರ್ಣನೂ ಅಲ್ಲ.ಅರಸಿನ ಬಣ್ಣವೂ ನನಗಿಲ್ಲ.ನಾನು ಕುಳ್ಳನೂ ಅಲ್ಲ.ಸ್ಥೂಲದೇಹನೂ ಅಲ್ಲ.ಗಿಡ್ಡಗಿರುವವನೂ ಅಲ್ಲ.ಎತ್ತರಕ್ಕೆ ಬೆಳೆದ ಶರೀರಿಯೂ ಅಲ್ಲ.ಪವಿತ್ರವಾಗಿರುವ ಶುದ್ಧಾತ್ಮವೇ ನನ್ನ ಗುರುತಾಗಿರುವುದರಿಂದ ನಾನು ಆಕಾರರಹಿತನಾಗಿದ್ದು ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಶಾಸ್ತಾ ನ ಶಾಸ್ತ್ರಂ ನ ಶಿಷ್ಯೋ ನ ಶಿಕ್ಷಾ
ನ ಚ ತ್ವಂ ನ ಚಾಹಂ ನ ಚಾಯಂ ಪ್ರಪಂಚ: |
ಸ್ವರೂಪವಾಭೋಧೋ ವಿಕಲ್ಪಾಸಹಿಷ್ಣು:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೭||
ಭಾವಾರ್ಥ:-ನನಗೆ ಕಲಿಸುವ ಗುರುವಿಲ್ಲ. ನಾನು ಶಾಸ್ತ್ರವಲ್ಲ. ನನಗೆ ಶಿಷ್ಯನೂ ಇಲ್ಲ. ನಾನು ಗುರುವೂ ಅಲ್ಲ.ನನಗೆ "ನೀನು-ನಾನು" ಎಂಬುದಿಲ್ಲ. ಮಾಯಾಮಯವಾಗಿರುವ ಈ ಬ್ರಹ್ಮಾಂಡವು ನನಗಿರುವುದಿಲ್ಲ. ಆಕಾರ, ತಿಳುವಳಿಕೆ, ಹೆಸರುಬಣ್ಣಾದಿ ವಿಕಲ್ಪಗಳನ್ನು ನಾನು ಅನುಭವಿಸುವವನಲ್ಲ.ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಜಾಗ್ರನ್ನ ಮೇ ಸ್ವಪ್ನಕೋ ವಾ ಸುಷುಪ್ತಿ:
ನ ವಿಶ್ವೋ ನ ವಾ ತೈಜಸ: ಪ್ರಾಜ್ಞಕೋ ವಾ |
ಅವಿದ್ಯಾತ್ಮಕತ್ವಾತ್ ತ್ರಯಾಣಾಮ್ ತುರೀಯ:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೮||
ಭಾವಾರ್ಥ:-ನನಗೆ ಜಾಗ್ರತ್,ಸ್ವಪ್ನ,ಸುಷುಪ್ತಿಗಳ ಲೇಪವಿಲ್ಲ. ಜೀವ, ಪರಾಕ್ರಮ, ಬುದ್ಧಿಗಳೆನ್ನುವ ನಾಮಗಳಿಂದ ಗುರುತಿಸಲ್ಪಡುವ ಮಾಯಾಮಯಾತ್ಮಕನಾದ ಆತ್ಮನೂ ನಾನಲ್ಲ. ನಾನು ಈ ಮೂರೂ ಅವಸ್ಥೆಗಳನ್ನು ಮೀರಿ ಇರುವ ಶಿವಜೀವೈಕ್ಯನು. ಆದುದರಿಂದ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ಅಪಿ ವ್ಯಾಪಕತ್ವಾದಿತತ್ವಾತ್ಪ್ರಯೋಗಾತ್
ಸ್ವತ: ಸಿದ್ಧಭಾವಾದನನ್ಯಾಶ್ರಯತ್ವಾತ್ |
ಜಗತ್ತುಚ್ಛಮೇತತ್ಸಮಸ್ತಂ ತದನ್ಯತ್
ತದೇಕೋ??ವಶಿಷ್ಟ: ಶಿವ: ಕೇವಲೋsಹಮ್ ||೯||
ಭಾವಾರ್ಥ:-ಬ್ರಹ್ಮಾಂಡದಲ್ಲಿ ಪರಮಾತ್ಮನಲ್ಲಿರುವ ವ್ಯಾಪಕತೆಯೇ ಆದಿಯಾದ ಧರ್ಮ ಸಂಬಂಧವು ಇರದಿರುವುದರಿಂದಲೂ ದೇವಾಧಿದೇವತ್ವವು ಸ್ವತ:ಸಿದ್ಧವಾಗಿರುವುದರಿಂದಲೂ,ಹಾಗೂ ಬೇರೆಯಲ್ಲದ ಶರಣಾಗತಿ ಸ್ಥಾನವಾದುದರಿಂದಲೂ ಈ ಪೂರ್ಣ ಬ್ರಹ್ಮಾಂಡವು ಹೀನವಾದುದಾಗಿದೆ. ಆದುದರಿಂದ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಚೈಕಂ ತದನ್ಯದ್ದ್ವಿತೀಯಂ ಕುತ: ಸ್ಯಾತ್
ನ ಕೇವಲತ್ವಂ ನ ಚಾ ಕೇವಲತ್ವಮ್ |
ನ ಶೂನ್ಯಂ ಚ ಶೂನ್ಯಮದ್ವೈಕತ್ವಾತ್
ಕಥ ಸರ್ವವೇದಾಂತಸಿದ್ಧಂ ಬ್ರವೀಮಿ ||೧೦||
ಭಾವಾರ್ಥ:-ಶ್ರೇಷ್ಠವಾಗಿರುವ ಬ್ರಹ್ಮಜ್ಞಾನವನ್ನು "ಏಕಮಾತ್ರಾ" ಎಂದು ಹೇಳಲಾಗದು. ಏಕೆಂದರೆ ಅದಲ್ಲದ ಮತ್ತೊಂದು ಎರಡನೆಯದಿಲ್ಲ.ಇದಕ್ಕೆ ಪವಿತ್ರತೆಯಾಗಲೀ ಅಪವಿತ್ರತೆಯಾಗಲೀ ಇಲ್ಲ. ಇದು ಜೊಳ್ಳೂ ಅಲ್ಲ. ಜೀವಾತ್ಮ-ಪರಮಾತ್ಮ ಬೇರೆ ಬೇರೆಯಲ್ಲ ಎಂಬ ಅದ್ವೈತವಾದುದಾಗಿದೆ. ಹೀಗಿರುವಾಗ ಸಮಸ್ತ ವೇದೋಪನಿಷತ್ತುಗಳಿಂದ ಪ್ರತಿಪಾದಿಸಲ್ಪಟ್ಟಿರುವ ಬ್ರಹ್ಮವನ್ನು ಯಾವ ರೀತಿಯಾಗಿ ವರ್ಣಿಸಲು ಸಾಧ್ಯ?
*********************************************************************
|| ಇತಿ ದಶಶ್ಲೋಕೀ || || ಈ ರೀತಿಯಾಗಿ ದಶಶ್ಲೋಕಿ ಸ್ತುತಿಗಳ ಭಾವಾರ್ಥವಾಗಿದೆ ||
*********************************************************************
-೧೫-
-೩-
|| ಪ್ರಶ್ನೋತ್ತರ ರೂಪೇ ಆತ್ಮ ಸ್ವರೂಪ ಕಥನ [ಏಕ ಶ್ಲೋಕೀ ಆತ್ಮ ಸ್ವರೂಪ] ||
**********************************************************
ಕಿಂ ಜ್ಯೋತಿಸ್ತವ ಭಾನುಮಾನಹನಿ ಮೇ ರಾತ್ರೌ ಪ್ರದೀಪಾಧಿಕಂ |
ಸ್ಯಾ ದೇವಂ ರವಿ ದೀಪ ದರ್ಶನ ವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ ||
ಚಕ್ಷುಸ್ತಸ್ಯ ನಿಮೀಲನಾದಿಸಮಯೇ ಕಿಂ ಧೀರ್ಧಿಯೋ ದರ್ಶನೇ |
ಕಿಂ ತತ್ರಾಹಮನೋ ಭವಾನ್ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ ||
ಸಂವಾದರೂಪದಲ್ಲಿ ಭಾವಾರ್ಥ:-ಗುರು-> ಜಗತ್ತಿನ ಸೃಷ್ಟಿಯಲ್ಲಿರುವ ವಸ್ತುಗಳನ್ನು ಯಾವ ಬೆಳಕಿನ ಮೂಲಕ ನೀನು ಅರಿತುಕೊಳ್ಳುವೆ?
ಶಿಷ್ಯ-> ಗುರುವರ್ಯಾ; ಹಗಲಿನ ಸಮಯ ಸೂರ್ಯನ ಬೆಳಕಿನ ಮೂಲಕವೂ,ರಾತ್ರಿಯ ಕಾಲದಲ್ಲಿ ದೀಪವೇ ಮೊದಲಾದ ಬೆಳಕಿನ ಮೂಲಗಳಿಂದಲೂ ಜಗತ್ತಿನ ಸೃಷ್ಟಿಯಲ್ಲಿರುವ ವಸ್ತುಗಳ ಬಗ್ಗೆ ಅರಿತುಕೊಳ್ಳುವೆ.
ಗುರು-> ಹಾಗಾದರೆ ಇವನು ರವಿ,ಇದು ದೀಪ, ಎಂಬುದಾಗಿ ಅರಿತುಕೊಳ್ಳಲು ಯಾವ ಪ್ರಕಾಶ ನಿನಗೆ ಸಾಧನವಾಯಿತು?
ಶಿಷ್ಯ-> ಗುರು ದೇವಾ; ಕಣ್ಣುಗಳ ದೃಷ್ಟಿಯ ಮೂಲಕ ಅವುಗಳ ವಿಚಾರವಾಗಿ ಅರಿತುಕೊಳ್ಳುವೆನು.
ಗುರು->ನೀನು ಕಣ್ಣುಗಳನ್ನು ಮುಚ್ಚಿಕೊಂಡಿರುವಾಗ ಅವುಗಳನ್ನು ಯಾವ ಜ್ಯೋತಿಯ ಮೂಲಕ ,ಹೇಗೆ ಅರಿತುಕೊಳ್ಳುವಿ?
ಶಿಷ್ಯ-> ವಿಮರ್ಶೆಯ ಮೂಲಕ ಅರಿತುಕೊಳ್ಳುವೆ ಗುರುವರ್ಯಾ.
ಗುರು-> ವಿಮರ್ಶೆ ಮಾಡಲು ಆ ದರ್ಶನ [ಜ್ಞಾನ] ನಿನಗೆ ಎಲ್ಲಿಂದ ದೊರಕಿತು?
ಶಿಷ್ಯ-> ನನ್ನ ತಿಳುವಳಿಕೆಯ ಮೂಲಕವಾಗಿ ಅವುಗಳ ಕುರಿತಾಗಿ ಅರಿತುಕೊಳ್ಳಲು ನಾನೇ ಕಾರಣೀಭೂತನಾಗಿರುವೆ ಗುರುದೇವಾ.
ಗುರು-> ಓ! ಹಾಗಾದರೆ ಸೂರ್ಯ,ದೀಪ,ಕಣ್ಣುಗಳು,ಬುದ್ಧಿ,ಇವೆಲ್ಲವುಗಳನ್ನು ಬೆಳಗಿಸುವ ಪರಂಜ್ಯೋತಿ ಪ್ರಕಾಶವೇ ನೀನಾಗಿರುವೆಯಲ್ಲವೇ?
ಶಿಷ್ಯ-> ಹೌದು ಗುರುದೇವಾ; ಆ ಪರಂಜ್ಯೋತಿಯಾಗಿರುವ ಆತ್ಮನೇ ನಾನಾಗಿರುವೆ.
*********************************************************************
|| ಇತಿ ಶ್ರೀ ಶಂಕರ ಭಗವದ್ಪಾದ ವಿರಚಿತ ಪ್ರಶ್ನೋತ್ತರ ರೂಪೇ ಆತ್ಮ ಸ್ವರೂಪ ಕಥನ: ||
||ಈ ತೆರನಾಗಿ ಶ್ರೀ ಶಂಕರ ಭಗವದ್ಪಾದರು ಪ್ರಶ್ನೋತ್ತರ ರೂಪದಲ್ಲಿ ರಚಿಸಿದ ಏಕ ಶ್ಲೋಕೀ ಆತ್ಮ ಸ್ವರೂಪ ಕಥನದ ಭಾವಾರ್ಥವಾಗಿದೆ. ||
*********************************************************************
-೪-
|| ಆತ್ಮ ಪಂಚಕಮ್ ||
******************
ನಾಹಂ ದೇಹಂ ನೇಂದ್ರಿಯಾಣ್ಯಂ ತರಂಗಂ |
ನಾಹಂಕಾರ: ಪ್ರಾಣವರ್ಗೋ ನ ಬುದ್ಧಿ: ||
ದಾರಾಪತ್ಯ ಕ್ಷೇತ್ರವಿತ್ತಾದಿ ದೂರ: |
ಸಾಕ್ಷೀ ನಿತ್ಯ: ಪ್ರತ್ಯಗಾತ್ಮಾ ಶಿವೋ??ಹಮ್ ||೧||
ಭಾವಾರ್ಥ:-ಈ ಶರೀರವು ನಾನಲ್ಲ.ಇಂದ್ರಿಯಗಳೂ ನಾನಲ್ಲ.ಮನಸ್ಸು,ಅಹಂಕಾರಹಾಗೂ ಪ್ರಾಣಾಪಾನಾದಿ ಪ್ರಾಣವರ್ಗಗಳೂ ನಾನಲ್ಲ.ಬುದ್ಧಿಯು ನಾನಲ್ಲ.ಪತ್ನಿ.ಭೂಮಿ,ಮಕ್ಕಳು,ಮನೆಮಾರು,ದ್ರವ್ಯಾದಿಗಳಿಂದಲೂ ನಾನು ದೂರವಾಗಿರುವವನು.ಆದರೂ ಅವೆಲ್ಲವುಗಳಿಗೆ ಸಾಕ್ಷೀ ರೂಪನಾಗಿ ಶಾಶ್ವತನೂ ಪರಮಾತ್ಮನೂ ಆದ ಶಿವನೇ ನಾನಾಗಿದ್ದೇನೆ.
ರಜ್ಜ್ವಜ್ಞಾನಾದ್ಭಾತಿ ರಜ್ಜುರ್ಯಥಾಹಿ: |
ಸ್ವಾತ್ಮಾಜ್ಞಾನಾದಾತ್ಮನೋ ಜೀವಭಾವ: ||
ಆಪ್ತೋಕ್ತ್ಯಾsಹಿ ಭ್ರಾಂತಿ ನಾಶೇ ಸರಜ್ಜು
ರ್ಜೀವೋ ನಾಹಂ ದೇಶಿಕೋಕ್ತ್ಯಾ ಶಿವೋ??ಹಮ್ ||೨||
ಭಾವಾರ್ಥ:-ಇದು ಹಗ್ಗ ಎಂಬ ತಿಳುವಳಿಕೆ ಇರದೆ ಇದ್ದುದರಿಂದ ಹಗ್ಗವು ಹಾವಿನಂತೆ ಭಾಸವಾಗುವಂತೆ,ತನ್ನ ರೂಪದ ಬಗ್ಗೆ ಆತ್ಮನಿಗೆ ಅರಿವಿಲ್ಲದುದರಿಂದ ಜೀವತ್ವದ ಭಾವವುಳ್ಳದ್ದಾಗಿದೆ.ಆಪ್ತರ ಹಿತನುಡಿಯಂತೆ ಭ್ರಾಂತಿಯು ನಾಶವಾಗಿ ಹಾವಿನ ಭಾವವು ಅಳಿದು ಹಗ್ಗವೇ ಆಗಿ ಕಾಣುವಂತೆ ಸದ್ಗುರುಗಳ ಉಪದೇಶದ ಪ್ರಭಾವದಿಂದಾಗಿ ಜೀವವು ನಾನಲ್ಲ.ಶಿವನೇ ನಾನಾಗಿದ್ದೇನೆ.
ಆಭಾತೀದಂ ವಿಶ್ವಮಾತ್ಮನ್ಯ ಸತ್ಯಂ |
ಸತ್ಯ ಜ್ಞಾನಾನಂದರೂಪೇ ವಿಮೋಹಾತ್ ||
ನಿದ್ರಾಮೋಹಾತ್ಸ್ವಪ್ನವತ್ತನ್ನ ಸತ್ಯಂ
ಶುದ್ಧ:ಪೂರ್ಣೋ ನಿತ್ಯಏಕ: ಶಿವೋsಹಮ್ ||೩||
ಭಾವಾರ್ಥ:-ನಿದ್ರಾವಸ್ಥೆಯ ಭ್ರಾಂತಿಯಲ್ಲಿ ಕಾಣುವ ಕನಸಿನಂತೆ ಸಚ್ಚಿದಾನಂದ ಸ್ವರೂಪಿಯಾಗಿರುವ ಆತ್ಮನಲ್ಲಿ ಭ್ರಮೆಗೊಳಗಾಗಿ ಈ ಪ್ರಪಂಚವು ಸುಳ್ಳಾಗಿ ಭಾಸವಾಗುವುದು.ಆ ತೆರನಾಗಿ ಕಾಣುವ ಜಗತ್ತು ಸತ್ಯವಲ್ಲ.ಇಂಥ ಪ್ರಪಂಚದಲ್ಲಿ ಪರಿಶುದ್ಧನೂ ಪರಿಪೂರ್ಣನೂ,ನಿತ್ಯನೂ,ಸರಿಸಾಟಿಯಿಲ್ಲದವನೂ ಆಗಿರುವ ಶಿವನೇ ನಾನಾಗಿರುವೆ.
ಮತ್ತೋ ನಾನ್ಯತ್ಕಿಂಚಿದತ್ರಾಸ್ತಿ ವಿಶ್ವಂ |
ಸತ್ಯಂ ಬಾಹ್ಯಂ ವಸ್ತು ಮಾಯೋಪಕ್ಲುಪ್ತಮ್ ||
ಆದರ್ಶಾಂತರ್ಭಾಸಮಾನಸ್ಯ ತುಲ್ಯಂ |
ಮಯ್ಯದ್ವೈತೇ ಭಾತಿ ತಸ್ಮಾಚ್ಛಿವೋsಹಮ್ ||೪||
ಭಾವಾರ್ಥ:-ಇಲ್ಲಿ ನನಗಿಂತ ಅನ್ಯ ಜಗತ್ತು ಕಿಂಚಿತ್ತಾದರೂ ಮಗದೊಂದಿಲ್ಲ.ಹೊರಗೆ ಕಾಣುವ ಈ ವಸ್ತುಗಳು ಮಾಯೆಯಿಂದ ವ್ಯವಸ್ಥೆಗೊಳಿಸಲ್ಪಟ್ಟಿದೆಯೆಂಬುದು ಖಚಿತ.ದರ್ಪಣದೊಳಗೆ ಕಂಡುಬರುವ ವಸ್ತುವಿನ ಪ್ರತಿಬಿಂಬದಂತೆ ಅವು ಅದ್ವೈತ ಸ್ವರೂಪಿಯಾಗಿರುವ ನನ್ನಲ್ಲಿ ಒಳಗೊಂಡಿರುತ್ತವೆ.ಹಾಗಿರುವುದರಿಂದ ನಾನು ಶಿವನೇ ಆಗಿದ್ದೇನೆ.
ನಾಹಂ ಜಾತೋ ನ ಪ್ರವೃದ್ದ್ಭೋನ ನಷ್ಟೋ |
ದೇಹಸ್ಯೋಕ್ತಾ: ಪ್ರಾಕೃತಾ: ಸರ್ವಧರ್ಮಾ: ||
ಕರ್ತೃತ್ವಾದಿಶ್ಚಿನ್ಮಯಸ್ಯಾಸ್ತಿ ನಾಹಂ- |
ಕಾರಸ್ಯೈವ ಹ್ಯಾತ್ಮನೋ ಮೇ ಶಿವೋsಹಮ್ ||೫||
ಭಾವಾರ್ಥ:-ನಾನು ಹುಟ್ಟಿಲ್ಲ.ಬೆಳೆಯುವುದಿಲ್ಲ.ಸಾವು ನನಗಿಲ್ಲ.ಇವೆಲ್ಲವೂ ದೇಹಕ್ಕೆ ಸಂಬಂಧಿಸಿದವುಗಳಾಗಿದ್ದು ಪ್ರಕೃತಿಕಾರ್ಯಗಳಾಗಿವೆ.ಅವು ನನಗೆ ಸಂಬಂಧಪಟ್ಟವುಗಳಾಗಿರುವುದಿಲ್ಲ.ಆ ಸೃಷ್ಟಿಸುವ-ಅನುಭವಿಸುವ ಕಾರ್ಯಗಳು ಕೂಡಾ "ನಾನು" ಎನ್ನುವ ಭಾವ ಸಿದ್ಧಾಂತಕ್ಕೆ ಹೊಂದಿರುವುದಾಗಿದೆ.ಅವುಗಳಿಗೆ ಹೊಂದಿಕೆಯಿಲ್ಲದ ಚಿದಾನಂದ ರೂಪನಾದ ಶಿವನೇ ನಾನಾಗಿರುವೆ.
ನಾಹಂ ಜಾತೋ ಜನ್ಮಮೃತ್ಯೂ ಕುತೋ ಮೇ |
ನಾಹಂ ಪ್ರಾಣ: ಕ್ಷುತ್ಪಿಪಾಸೇ ಕುತೋಮೇ ||
ನಾಹಂಚಿತ್ತಂ ಶೋಕಮೋಹೌ ಕುತೋ ಮೇ |
ನಾಹಂ ಕರ್ತಾ ಬಂಧಮೋಕ್ಷೌ ಕುತೋ ಮೇ ||೬||
ಭಾವಾರ್ಥ:-ಹುಟ್ಟು ಎಂಬುದೇ ಇಲ್ಲದ ನನಗೆ ಜನ್ಮ ಮೃತ್ಯುಗಳೆಂಬ ಗುಣ ಧರ್ಮಗಳು ಎಲ್ಲಿಂದ ಬರಬೇಕು?ಜೀವವೇ ಅಲ್ಲದಿರುವ ನನಗೆ ಹಸಿವು ನೀರಡಿಕೆಗಳಾದರೂ ಎಲ್ಲಿಯವು?ಮನಸ್ಸೇ ಅಲ್ಲದಿರುವ ನನಗೆ ಶೋಕ ಮೋಹಗಳಾದರೂ ಎಲ್ಲಿಯವು?ನಾನು ಮಾಡುವವನೇ ಅಲ್ಲದಿರುವಾಗ ನನಗೆ ಬಂಧಮೋಕ್ಷಗಳಾದರೂ ಎಲ್ಲಿಯವು?
*********************************************************************
|| ಇತಿ ಆತ್ಮಪಂಚಕಮ್ || || ಈ ರೀತಿಯಾಗಿ ಆತ್ಮಪಂಚಕಗಳ ಭಾವಾರ್ಥವಾಗಿದೆ ||
*********************************************************************
-೫-
|| ಮಾಯಾ ಪಂಚಕಮ್ ||
*******************
ನಿರುಪಮನಿತ್ಯನಿರಂಶಕೇsಪ್ಯಖಂಡೇ |
ಮಯಿಚಿತಿ ಸರ್ವ ವಿಕಲ್ಪನಾದಿಶೂನ್ಯೇ ||
ಘಟಯತಿ ಜಗದೀಶಜೀವಭೇದಂ |
ತ್ವಘಟಿತಘಟನಾಪಟೀಯಸೀ ಮಾಯಾ ||೧||
ಭಾವಾರ್ಥ:-ಸರಿಸಾಟಿಯಿಲ್ಲದ,ನಾಶರಹಿತವಾದ,ಅಗಾಂಗವಿರಹಿತವಾಗಿ,ಪೂರ್ಣವೂಮತ್ತು ಸಮಸ್ತವಿಕಲ್ಪಾದಿಗಳಿಂದ ಹೊರತಾಗಿರುವ ಪರಮಾತ್ಮನರೂಪವುಳ್ಳ ನನ್ನಲ್ಲಿ ಬ್ರಹ್ಮಾಂಡ-ಈಶ್ವರ-ಜೀವಗಳೆಂಬ ಭೇದಭಾವವನ್ನು ಕಲ್ಪಿಸುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ಶ್ರುತಿಶತನಿಗಮಾಂತ ಶೋಧಕಾನ- |
ಪ್ಯಹಹ ಧನಾದಿ ನಿದರ್ಶನೇನ ಸದ್ಯ: ||
ಕಲುಷಯತಿ ಚತುಷ್ಟದಾದ್ಯ ಭಿನ್ನಾ- |
ನಘಟಿತಘಟನಾಪಟೀಯಸೀ ಮಾಯಾ ||೨||
ಭಾವಾರ್ಥ:-ನೂರಾರು ವೇದೋಪನಿಷದ್ಗ್ರಂಥಗಳನ್ನು ವಿಮರ್ಶಿಸುವ ವಿದ್ವಜ್ಜನರಿಗೂ ಧನ ಸಂಪದಗಳಾದಿಯಲ್ಲಿ ಮೋಹ ಹುಟ್ಟಿಸುವ ಮೂಲಕವಾಗಿ ಚತುಷ್ಪಾದಾದಿಗಳಿಗೂ ವಿದ್ವಜ್ಜನರಿಗೂ ಭೇದವಿಲ್ಲದಂತೆ ಅವರುಗಳ ಬುದ್ಧಿಯನ್ನು ಹಾಳುಗೆಡಹುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ಸುಖಚಿದಖಂಡವಿಬೋಧಮದ್ವೀತೀಯಂ |
ವಿಯದನಲಾದಿ ವಿನಿರ್ಮಿತೇ ನಿಯೋಜ್ಯ ||
ಭ್ರಮಯತಿ ಭವಸಾಗರೇ ನಿತಾಂತಂ |
ತ್ವಘಟಿತಘಟನಾಪಟೀಯಸೀ ಮಾಯಾ ||೩||
ಭಾವಾರ್ಥ:-ಅದೃಷ್ಟವಂತನೂ,ಪೂರ್ಣನೂ,ಜ್ಞಾನವಂತನೂ,ಸರಿಸಾಟಿಯಿಲ್ಲದಾತನೂ, ಆಗಿರುವ ಆತ್ಮನಿಗೆ ಪೃಥ್ವೀ,ಅಪ್,ತೇಜೋವಾಯು,ಆಕಾಶಗಳೆಂಬ ಪಂಚ ಭೂತಗಳಿಂದ ರಚಿತವಾದ ಈ ಜಡಶರೀರದ ಸಂಬಂಧವನ್ನು ಕಲ್ಪಿಸಿ ಸಂಸಾರಸಾಗರದಲ್ಲಿ ನಿರಂತರ ಮೇಲ್ಮೆಯಿಂದ ಸುತ್ತಾಡಿಸುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ಅಪಗತಗುಣವರ್ಣಜಾತಿಭೇದೇ |
ಸುಖಚಿತಿ ವಿಪ್ರವಿಡಾದ್ಯಹಂಕೃತಿಂ ಚ ||
ಸ್ಫುಟಯತಿ ಸುತದಾರಗೇಹಮೋಹಂ |
ತ್ವಘಟಿತಘಟನಾಪಟೀಯಸೀ ಮಾಯಾ ||೪||
ಭಾವಾರ್ಥ:-ಸಗುಣ-ನಿರ್ಗುಣತ್ವವೂ,ಚತುರ್ವರ್ಣಗಳೂ,ದೇವ-ಮಾನುಷ-ಪ್ರಾಣಿಗಳಾದಿ ಗುಣ ವರ್ಣಜಾತಿಗಳ ಯಾವ ಭೇದಗಳೂ ಇಲ್ಲದ ಸಚ್ಚಿದಾನಂದ ಪರಬ್ರಹ್ಮನಲ್ಲಿ ಇವನು ಬ್ರಾಹ್ಮಣ,ಇವನು ಕ್ಷತ್ರಿಯ,ಇವನು ವೈಶ್ಯ,ಇವನು ಶೂದ್ರ ಎಂಬಿತ್ಯಾದಿ ಜಾತ್ಯಭಿಮಾನವನ್ನೂ, ಪತ್ನೀಮಕ್ಕಳು,ಮನೆ-ಮಾರುಗಳ ಮೋಹವನ್ನೂ ಉಂಟುಮಾಡುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
ವಿಧಿಹರಿಹರಭೇಧಮಪ್ಯ ಖಂಡೇ |
ಬತ ವಿರಚಯ್ಯ ಬುಧಾನಪಿ ಪ್ರಕಾಮಂ |
ಭ್ರಮಯತಿ ಹರಿಹರವಿಭೇದಭಾವಾ-
ನಘಟಿತಘಟನಾಪಟೀಯಸೀ ಮಾಯಾ ||೫||
ಭಾವಾರ್ಥ:-ಪೂರ್ಣತ್ವನಾದ ಪರಬ್ರಹ್ಮನಲ್ಲಿ ಬ್ರಹ್ಮ-ವಿಷ್ಣು-ಶಿವರೆಂಬ ಮೂರು ದೇವತಾಶಕ್ತಿ ಭಾವವನ್ನು ಕಲ್ಪಿಸಿ,ವಿದ್ವಜ್ಜನರಲ್ಲಿಯೂ ಹರಿಯು ಶ್ರೇಷ್ಠ,ಹರನೇ ಶ್ರೇಷ್ಠ ಎಂಬ ಭೇದತ್ವದ ಭ್ರಾಂತಿಯನ್ನು ಉಂಟುಮಾಡುವ ಮಾಯೆಯು ಸಾಧಿಸಲಶಕ್ಯವಾದುದನ್ನು ಸಾಧನೆ ಮಾಡಲು ನಾನು ಸಮರ್ಥಳಾಗಿರುವೆ.
*********************************************************************
|| ಇತಿ ಮಾಯಾ ಪಂಚಕಮ್ || || ಈ ರೀತಿಯಾಗಿ ಮಾಯಾ ಪಂಚಕಗಳ ಭಾವಾರ್ಥವಾಗಿದೆ ||
*********************************************************************
-೬-
|| ನಿರ್ವಾಣಷಟ್ಕಮ್ ||
******************
ಮನೋಬುದ್ಯಹಂಕಾರಚಿತ್ತಾನಿ ನಾಹಂ |
ನ ಕರ್ಣಂ ನ ಜಿಹ್ವಾ ನ ಚ ಘ್ರಾಣನೇತ್ರೇ ||
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯು- |
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೧||
ಭಾವಾರ್ಥ:-ಮನಸ್ಸು ,ಬುದ್ಧಿ,ಚಿತ್ತ,ಅಹಂಕಾರಗಳೆನ್ನುವ ನಾಲ್ಕು ಬಿರುದುಗಳೂ,ಕಿವಿ,ನಾಲಿಗೆ, ಕಣ್ಣು,ಮೂಗು,ಚರ್ಮಗಳೆಂಬಪಂಚೇಂದ್ರಿಯಗಳೂ,ಭುವಿ,ಆಗಸ,ಜಲ,ವಾಯು,ತೇಜಸ್ಸುಗಳೆನ್ನುವ ಪಂಚಭೂತಗಳೂ ನಾನಲ್ಲ.ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯು- |
ರ್ನ ವಾ ಸಪ್ತಧಾತುರ್ನ ವಾ ಪಂಚಕೋಶ: ||
ನ ವಾಕ್ ಪಾಣಿಪಾದೌ ನ ಚೋಪಸ್ಥಪಾಯೂ |
ಚಿದಾನಂದರೂಪ: ಶಿವೋsಹಂ ಶಿವೋsಹಂ ||೨||
ಭಾವಾರ್ಥ:-ಪ್ರಾಣ ವಾಯುವು ನಾನಲ್ಲ.ಪ್ರಾಣಾಪಾನ ವ್ಯಾನೋದಾನ ಸಮಾನಗಳೆಂಬ ಪಂಚ ಪ್ರಾಣವಾಯುಗಳಲ್ಲಿಯಾವುದೂನಾನಲ್ಲ.ರಸ,ರಕ್ತ,ಮಾಂಸ,ಮೇದಸ್ಸು,ಮಜ್ಜ,ಅಸ್ಥಿ,ಶುಕ್ಲಗಳೆನ್ನುವ ಸಪ್ತ ಧಾತುಗಳೂ ನಾನಲ್ಲ.ಅನ್ನಮಯ,ಪ್ರಾಣಮಯ,ಮನೋಮಯ,ವಿಜ್ಞಾನಮಯ,ಆನಂದಮಯಗಳೆಂಬ ಪಂಚಕೋಶಗಳೂ ನಾನಲ್ಲ.ಹಸ್ತ,ಪಾದ,ನಾಲಿಗೆ,ಗುದದ್ವಾರ,ಗುಪ್ತಾಂಗಗಳೆಂಬ ಪಂಚಕರ್ಮೇಂದ್ರಿಯಂಗಳೂ ನಾನಲ್ಲ.ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ |
ಮದೋ ನೈವ ಮೇ ನೈವ ಮಾತ್ಸರ್ಯಭಾವ: ||
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷ- |
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೩||
ಭಾವಾರ್ಥ:-ಇಂದ್ರಿಯಸುಖಂಗಳಲ್ಲಿ ನನಗೆ ದ್ವೇಷವಾಗಲೀ ಆಸಕ್ತಿಯಾಗಲೀ ಇಲ್ಲ.ಜಿಪುಣತ್ವವಾಗಲೀ,ಪರವಶತೆಯಾಗಲೀ ಎನಗಿಲ್ಲ.ಧರ್ಮಾರ್ಥ ಕಾಮಮೋಕ್ಷಗಳೆನ್ನುವ ಚತುರ್ವಿಧ ಪುರುಷಾರ್ಥಗಳೂ ನಾನಲ್ಲ.ಇವು ಯಾವುದರ ಅಂಟುವಿಕೆಯೂ ನನಗಿಲ್ಲ.ಇವಾವುದಕ್ಕೂ ಸಿಲುಕದ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದು:ಖಂ |
ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಾ ||
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ |
ಚಿದಾನಂದರೂಪ: ಶಿವೋsಹಂ ಶಿವೋsಹಂ ||೪||
ಭಾವಾರ್ಥ:-ಪಾಪಪುಣ್ಯಗಳಾಗಲೀ,ಸುಖದು:ಖಗಳಾಗಲೀ ಎನಗಿಲ್ಲ.ವೇದ,ಯಜ್ಞ,ತೀರ್ಥ, ಮಂತ್ರಗಳಾವುದರ ಸಂಬಂಧವೂ ನನಗಿರುವುದಿಲ್ಲ.ಭೋಜ್ಯ,ಭೋಜನ,ಭೋಕ್ತಗಳೆಂಬುದರ ಪ್ರತ್ಯಕ್ಷ ಜ್ಞಾನವೂ ನನಗಿಲ್ಲ.ಇವಾವುದರ ಲೇಪವೂ ಇಲ್ಲದ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ನ ಮೃತ್ಯುರ್ನಶಂಕಾ ನ ಮೇ ಜಾತಿ ಭೇದ: |
ಪಿತಾ ನೈವ ಮೇ ನೈವ ಮಾತಾ ಚ ಜನ್ಮ ||
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯ-
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೫||
ಭಾವಾರ್ಥ:-ಜಾತಿಭೇಧಗಳೆನಗಿಲ್ಲ.ಮರಣ ಭೀತಿಯೂ ಇಲ್ಲ.ಇವುಗಳ ಬಗೆಗಿನ ಶಂಕೆಯೆನಗಿಲ್ಲ.ಹುಟ್ಟುಸಾವುಗಳಿಲ್ಲ.ಅಪ್ಪ ಅಮ್ಮ;ಬಂಧು ಬಳಗ;ಗುರು ಶಿಷ್ಯರೆಂಬವರಾರೂ ನನಗಿಲ್ಲ. ಇವೆಲ್ಲವನ್ನೂ ಮೀರೀದ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
ಅಹಂ ನಿರ್ವಿಕಲ್ಪೋ ನಿರಾಕಾರರೂಪೋ |
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ ||
ನ ಚಾಸಂಗತಂ ನೈವ ಮುಕ್ತಿರ್ನ ಬಂಧ-
ಶ್ಚಿದಾನಂದರೂಪ: ಶಿವೋsಹಂ ಶಿವೋsಹಂ ||೬||
ಭಾವಾರ್ಥ:-ನಾನು ಭ್ರಾಂತಿ ರಹಿತನೂ ಆಕಾರ ವಿರಹಿತನೂ ಆಗಿರುವವನು.ಸರ್ವ ಇಂದ್ರಿಯಂಗಳಿಗೆ ನಿಲುಕದೆ ಸರ್ವವ್ಯಾಪಿಯಾಗಿರುವವನು. ಮತ್ತು ನಾನು ಅವಿನಾಶಿಯಾಗಿರುವವನು.ಹಾಗೆಯೇ ಸೀಮಾರಹಿತನಾಗಿರುವವನು.ಯಾವುದೇ ಬಂಧ ಮೋಕ್ಷಗಳ ಲೇಪವಿರದ ಪರಮಾತ್ಮನು ನಾನು.ಕೇವಲ ಸಚ್ಚಿದಾನಂದ ರೂಪೀ ಶಿವನೇ ನಾನು; ನಾನೇ ಶಿವನು.
*********************************************************************
|| ಇತಿ ನಿರ್ವಾಣಷಟ್ಕಮ್ || || ಈ ರೀತಿಯಾಗಿ ನಿರ್ವಾಣಷಟ್ಕಗಳ ಭಾವಾರ್ಥವಾಗಿದೆ ||
*********************************************************************
-೭-
|| ಕಾಶೀಪಂಚಕಮ್ ||
*****************
ಮನೋನಿವೃತ್ತಿ: ಪರಮೋಪಶಾಂತಿ: |
ಸಾ ತೀರ್ಥವರ್ಯಾ ಮಣಿಕರ್ಣಿಕಾ ಚ ||
ಜ್ಞಾನಪ್ರವಾಹ ವಿಮಲಾದಿಗಂಗಾ |
ಸಾ ಕಾಶಿಕಾsಹಂ ನಿಜಭೋಧರೂಪಾ ||೧||
ಭಾವಾರ್ಥ:-ಚೇತಾನಾರೂಪದ ಸಾಮರ್ಥ್ಯದ ಬಿಡುಗಡೆಯೇ ಶ್ರೇಷ್ಠವಾಗಿರುವ ಸ್ವಸ್ಥತೆ.ಅದುವೇ ಮಣಿಕರ್ಣಿಕೆಯೆಂಬ ಅಗ್ರಗಣ್ಯ ತೀರ್ಥ.ನನ್ನಲ್ಲಿ ಅಡಕವಾಗಿರುವ ಸತ್ಯದ ಅರಿವಿನ ಹರಿಯುವಿಕೆಯೇ ದೋಷರಹಿತವಾಗಿರುವ ಗಂಗೆ.ಅಂತಹಾ ನೈಜ ಪ್ರಜ್ಞಾರೂಪಿಯಾಗಿರುವ ಕಾಶೀಕ್ಷೇತ್ರವೇ ನಾನಾಗಿರುವೆ.
ಯಸ್ಯಾಮಿದಂ ಕಲ್ಪಿತಮಿಂದ್ರಜಾಲಂ |
ಚರಾಚರಂ ಭಾತಿ ಮನೋವಿಲಾಸಮ್ ||
ಸಚ್ಚಿತ್ಸುಖೈಕಾ ಪರಮಾತ್ಮ ರೂಪಾ |
ಸಾ ಕಾಶಿಕಾsಹಂ ನಿಜಭೋಧರೂಪಾ ||೨||
ಭಾವಾರ್ಥ:-ಯಾವುದೊರಳಗೆ ಈ ಸೃಷ್ಟಿಯ ಜಾದೂಆಟವು ವ್ಯವಸ್ಥೆಗೊಳಿಸಲ್ಪಟ್ಟಿದೆಯೋ ಮತ್ತು ಎಲ್ಲಿ ಈ ಚರಾಚರ ವಿಶ್ವವು ಮನದ ಚೆಲ್ಲಾಟದಂತೆ ಭಾಸವಾಗುವುದೋ ಆ ಸಚ್ಚಿದಾನಂದವೂ ಪರಮಾತ್ಮ ಪ್ರತೀಕವಾಗಿರುವ ನೈಜ ಪ್ರಜ್ಞಾರೂಪಿಯಾಗಿರುವ ಕಾಶೀಕ್ಷೇತ್ರವೇ ನಾನಾಗಿರುವೆ.
ಕೋಶೇಷು ಪಂಚಸ್ವಧಿರಾಜಮಾನಾ |
ಬುದ್ಧಿರ್ಭವಾನೀ ಪ್ರತಿದೇಹಗೇಹಮ್ ||
ಸಾಕ್ಷೀ ಶಿವ: ಸರ್ವಗತೋ??ಂತರಾತ್ಮಾ |
ಸಾ ಕಾಶಿಕಾsಹಂ ನಿಜಭೋಧರೂಪಾ ||೩||
ಭಾವಾರ್ಥ:-ಯಾವುದರ ಒಡೆತನವು ಅನ್ನಮಯ,ಪ್ರಾಣಮಯ,ಮನೋಮಯ,ವಿಜ್ಞಾನಮಯ ಆನಂದಮಯಗಳೆಂಬ ಪಂಚಕೋಶಗಳಲ್ಲಿ ಜರಗುತ್ತಿದೆಯೋ,ಎಲ್ಲಿ ಜ್ಞಾನವೇ ಪ್ರತಿಯೊಂದೂ ಶರೀರದಲ್ಲಿರುವ ತಾಯಿ ಭವಾನಿಯೋ,ಎಲ್ಲಿ ಪ್ರತ್ಯಕ್ಷತೆಯೂ,ಸರ್ವವ್ಯಾಪಿಯಾಗಿರುವ ಪ್ರತ್ಯಗಾತ್ಮನು ಶಿವನಿರುವನೋ ಅಂತಹಾ ನೈಜ ಪ್ರಜ್ಞಾರೂಪಿಯಾಗಿರುವ ಕಾಶೀಕ್ಷೇತ್ರವೇ ನಾನಾಗಿರುವೆ.
ಕಾಶ್ಯಾಂ ಹಿ ಕಾಶ್ಯತೇ ಕಾಶೀ ಕಾಶೀ ಸರ್ವ ಪ್ರಕಾಶಿಕಾ |
ಸಾ ಕಾಶೀ ವಿದಿತಾ ಯೇನ ತೇನ ಪ್ರಾಪ್ತಾ ಹಿ ಕಾಶಿಕಾ ||೪||
ಭಾವಾರ್ಥ:-ಕಾಶಿಯಲ್ಲಿಯೇ ನೈಜವಾದ ದಿವ್ಯ ತೇಜಸ್ಸಿರುವುದಾಗಿದೆ.ಕಾಶಿಯೇ[=ಬೆಳಕು] ವಿಶ್ವದಲ್ಲಿ ಸಮಸ್ತವನ್ನೂ ಪ್ರಕಾಶಿಸುವಂತೆ ಮಾಡುವುದು.ಯಾರು ಬೆಳಕನ್ನು[ಕಾಶಿಯನ್ನು] ಅರಿಯಬಲ್ಲರೋ ಅವರು ಕಾಶಿಯನ್ನು[=ಮುಕ್ತಿಯನ್ನು]ನಿಜವಾಗಿಯೂ ಹೊಂದಬಲ್ಲರು.
ಕಾಶೀಕ್ಷೇತ್ರಂ ಶರೀರಂ ತ್ರಿಭುವನಜನನೀ ವ್ಯಾಪಿನೀ ಜ್ಞಾನಗಂಗಾ |
ಭಕ್ತಿ:ಶ್ರದ್ಧಾ ಗಯೇಯಂ ನಿಜಗುರುಚರಣಧ್ಯಾನಯೋಗ:ಪ್ರಯಾಗ: ||
ವಿಶ್ವೇಶೋsಯಂ ತುರೀಯಂ ಸಕಲಜನಮನಸ್ಸಾಕ್ಷಿಭೂತೋsಂತರಾತ್ಮಾ |
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಸ್ತೀರ್ಥಮನೃತ್ಕಿಮಸ್ತಿ ||೫||
ಭಾವಾರ್ಥ:-ಈ ದೇಹವೇ ಕಾಶೀ ಕ್ಷೇತ್ರವಾಗಿದೆ.ಇಲ್ಲಿ ತ್ರಿಲೋಕಮಾತೆಯಾಗಿರುವ ಜ್ಞಾನಗಂಗಾ ಪ್ರವಹಿಸುತ್ತಿರುವಳು.ಭಕ್ತಿಶ್ರದ್ಧೆಗಳೇ ಗಯಾ ಕ್ಷೇತ್ರ.ಸದ್ಗುರುವಿನ ಪಾದಾರವಿಂದಗಳ ಧ್ಯಾನವೇ ಪ್ರಯಾಗ.ಸಮಸ್ತ ಜನರ ಮನಸುಗಳಲ್ಲಿ ಪ್ರತ್ಯಕ್ಷನೂ ಜೇವಾತ್ಮನೂ ಆಗಿರುವ ವೇದನಾದಾತೀತನೇ ವಿಶ್ವೇಶ್ವರನು.ಈ ರೀತಿಯಾಗಿ ಸಮಸ್ತವೂ ನನ್ನ ದೇಹದಲ್ಲಿಯೇ ನೆಲೆಸಿರುವಾಗ ಯಾವುದಾದರೂ ಅನ್ಯ ತೀರ್ಥಗಳಿರುವುದುಂಟೇ?
*********************************************************************
|| ಇತಿ ಕಾಶೀಪಂಚಕಮ್ || || ಈ ರೀತಿಯಾಗಿ ಕಾಶೀಪಂಚಕಗಳ ಭಾವಾರ್ಥವಾಗಿದೆ. ||
*********************************************************************
-೮-
|| ಮನೀಷಾಪಂಚಕಮ್ ||
********************
ಜಾಗ್ರತ್ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಬತೇ |
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೇ ||
ಸೈವಾಹಂ ನ ಚ ದೃಶ್ಯವಸ್ತ್ವಿತಿ ಧೃಢಪ್ರಜ್ಞಾsಪಿಯಸ್ಯಾಸ್ತಿಚೇತ್ |
ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ ||೧||
ಭಾವರ್ಥ:-ಯಾವ ಶಕ್ತಿಯು ಎಚ್ಚರ,ಕನಸು,ಗಾಢನಿದ್ರೆಗಳೆನ್ನುವ ಮೂರು ಅವಸ್ಥೆಗಳಲ್ಲಿಯೂ ಬಹಳ ಎದ್ದು ಕಾಣುವುದೋ,ಯಾವುದು ಚತುರ್ಮುಖ ಬ್ರಹ್ಮನಾರಭ್ಯ ಇರುವೆಯ ವರೆಗಿರುವ ಸಮಸ್ತ ಶರೀರಗಳಲ್ಲಿಯೂ ವಿಶ್ವದಪ್ರಾತ್ಯಕ್ಷಿಕರೂಪದಲ್ಲಿ ವ್ಯಾಪಿಸಿಕೊಂಡಿದೆಯೋ ಅದುವೇ ಪರಬ್ರಹ್ಮಸ್ವರೂಪನಾದ ನಾನು.ಕಣ್ಣಿಗೆ ಹೊರಗೆ ಕಾಣುತ್ತಿರುವುದೆಲ್ಲವೂ ಈ ದೇಹವಲ್ಲವೆಂಬ ಖಚಿತ ತಿಳುವಳಿಕೆಯಿಂದ ಯಾರು ಕೂಡಿರುವರೋ ಅಂತಹವರು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ ಅವರೇ ಸದ್ಗುರುವು ಎಂಬುದು ನನ್ನ ಭಾವನೆಯು.
ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರ ವಿಸ್ತಾರಿತಂ |
ಸರ್ವಂ ಚೈತದವಿದ್ಯಯಾ ತ್ರಿಗುಣಯಾsಶೇಷಂ ಮಯಾ ಕಲ್ಪಿತಮ್ ||
ಇತ್ಥಂ ಯಸ್ಯ ದೃಢಾ ಮತಿ: ಸುಖತರೇ ನಿತ್ಯೇ ಪರೇ ನಿರ್ಮಲೇ |
ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ ||೨||
ಭಾವಾರ್ಥ:-ನಾನು ಬ್ರಹ್ಮನೇ ಆಗಿರುವೆ.ಈ ಸಮಸ್ತ ಬ್ರಹ್ಮಾಂಡವು ಬ್ರಹ್ಮವೇ ಅಗಿದೆ.ಮತ್ತು ಕೇವಲ ಚೈತನ್ಯದಿಂದ ವಿಸ್ತಾರವಾಗಿದೆ.ಸತ್ವ-ರಜ-ತಮೋ ಗುಣಾತ್ಮಕವಾಗಿರುವ ಭ್ರಾಂತಿಯಿಂದ ಇವೆಲ್ಲವುಗಳನ್ನು ನಾನೇ ಕಲ್ಪಿಸಿರುವುದಾಗಿದೆ ಎಂಬುದಾಗಿ ತಿಳುವಳಿಕೆ ಯಾರಿಗಿದೆಯೋ,ನಿತ್ಯವೂ,ಸತ್ಯವೂ ಸುಖದಾಯಕವೂ ಸ್ವಚ್ಚವೂ ಆಗಿರುವ ಪರಬ್ರಹ್ಮನಲ್ಲಿ ಧೃಢವಾಗಿರುವ ಪ್ರಜ್ಞೆಯು ಯಾರಿಗಿದೆಯೋ ಅಂತಹವರು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ ಅವರೇ ಸದ್ಗುರುವು ಎಂಬುದು ನನ್ನ ಭಾವನೆಯು.
ಶಶ್ವನ್ನಶ್ವರಮೇವ ವಿಶ್ವಮಖಿಲಂ ನಿಶ್ಚಿತ್ಯ ವಾಚಾ ಗುರೋ: |
ನಿತ್ಯಮ್ ಬ್ರಹ್ಮ ನಿರಂತರಂ ವಿಮೃಶತಾ ನಿರ್ವ್ಯಾಜಶಾಂತಾತ್ಮನಾ ||
ಭೂತಂ ಭಾವಿ ಚ ದುಷ್ಕೃತಂ ಪ್ರದಹತಾ ಸಂವಿನ್ಮಯೇ ಪಾವಕೇ |
ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ ||೩||
ಭಾವಾರ್ಥ:-ಈ ಜಗತ್ತೆಲ್ಲವೂ ಕ್ಷಣಿಕವೆನ್ನುವ ಗುರುವಾಕ್ಯವನ್ನು ಅರ್ಥವಿಸಿಕೊಂಡು,ಗುರೂಪದೇಶಾನುಸಾರ ಹಿನ್ನೆಲೆಯಿಲ್ಲದ ನಿರ್ವಿಕಾರವೂ,ಪ್ರಶಾಂತವೂ ಆಗಿರುವ ಶುದ್ಧಾಂತ:ಕರಣದಿಂದ ಆದಿ ಅಂತ್ಯ ವಿರಹಿತವಾಗಿರುವ ಪರಬ್ರಹ್ಮವಸ್ತುವಿನ ಬಗೆಗೆ ನಿರಂತರ ತರ್ಕಿಸುತ್ತಾ ಗತ ಹಾಗೂ ಭವಿಷ್ಯತ್ತಿನ ಪುಣ್ಯಪಾಪಗಳನ್ನು ತಿಳುವಳಿಕೆಯೆನ್ನುವ ಬೆಂಕಿಯಲ್ಲಿ ದಹಿಸಿ,ಪ್ರಾರಬ್ದಕರ್ಮಕ್ಕೆ ತನ್ನ ದೇಹವನ್ನು ಗುರಿಮಾಡಿರುವ ಅವನು ಯಾರೇ ಆಗಿರಲಿ ಅವನೇ ನನ್ನ ಸದ್ಗುರು ಎಂಬುದು ನನ್ನ ತತ್ವವಾಗಿದೆ.
ಯಾ ತಿರ್ಯಙ್ನರದೇವತಾಭಿರಹಮಿತ್ಯಂತ: ಸ್ಫುಟಾ ಗೃಹ್ಯತೇ |
ಯದ್ಭಾಸಾ ಹೃದಯಾಕ್ಷದೇಹವಿಷಯಾಭಾಂತಿ ಸ್ವತೋsಚೇತನಾ: ||
ತಾ ಭಾಸ್ಯೈ: ಪಿಹಿತಾರ್ಕಮಂಡಲನಿಭಾಂ ಸ್ಫೂರ್ತಿಂ ಸದಾಭಾವಯನ್ |
ಯೋಗೀ ನಿರ್ವೃತಮಾನಸೋ ಹಿ ಗುರುರಿತ್ಯೇಷಾ ಮನೀಷಾ ಮಮ ||೪||
ಭಾವಾರ್ಥ:-ಯಾವ ಚೇತನಾಶಕ್ತಿಯನ್ನು ಮನುಜರು,ದೇವತೆಗಳು,ಪಶುಪಕ್ಷಿಗಳೂ ದೇವರು ಎಂದು ಖಚಿತವಾಗಿ ಸ್ವೀಕರಿಸುತ್ತಾರೋ,ಯಾವುದರ ಬೆಳಕಿನಿಂದ ದೇಹ,ಮನಸ್ಸು,ಕಣ್ಣು, ಕಿವಿ, ಇಂದ್ರಿಯವಸ್ತುಗಳೆನ್ನುವ ನಿರ್ಜೀವ ವಸ್ತುಗಳು ತಾವು ಸ್ವತ: ಚೇತನಾರಹಿತವಾಗಿದ್ದೂ ಪ್ರಕಾಶಭರಿತವಾಗಿ ಬೆಳಗುವವೋ,ಮೇಘಾವೃತವಾಗಿರುವ ಸೂರ್ಯಮಂಡಲದ ಹಾಗೆ ಭ್ರಮಾವೃತವಾದ ಆ ಚೈತನ್ಯಪ್ರಕಾಶವನ್ನು ಪ್ರಶಾಂತ ಮನದಿಂದ ನಿರಂತರ ಯಾವ ಯೋಗಿಯು ಚಿಂತಿಸುತ್ತಿರುವನೋ ಅವನು ಯಾರೇ ಆಗಿರಲಿ ಅವನೇ ನನ್ನ ಸದ್ಗುರು ಎಂಬುದು ನನ್ನ ತತ್ವವಾಗಿದೆ.
ಯತ್ಸೌಖ್ಯಾಂಬುಧಿಲೇಶಲೇಶತ ಇಮೇ ಶಕ್ರಾದಯೋ ನಿರ್ವೃತಾ: |
ಯಚ್ಚಿತ್ತೇನಿತರಾಂ ಪ್ರಶಾಂತಕಲನೇ ಲಬ್ದ್ವಾಮುನಿರ್ನಿರ್ವೃತ: ||
ಯಸ್ಮಿನ್ನಿತ್ಯಸುಖಾಂಬುಧೌ ಗಲಿತಧೀರ್ಬ್ರಹ್ಮೈವ ನ ಬ್ರಹ್ಮವಿದ್ |
ಯ: ಕಶ್ಚಿತ್ಸ ಸುರೇಂದ್ರವಂದಿತಪದೋ ನೂನಂ ಮನೀಷಾ ಮಮ ||೫||
ಭಾವಾರ್ಥ:-ಯಾವ ಸುಖಾನುಭವದ ಸಂತಸದ ಅತ್ಯಲ್ಪಾಂಶದಿಂದ ಇಂದ್ರಾದಿ ದೇವತೆಗಳು ಆನಂದಭರಿತರಾಗಿರುವರೋ,ತಮ್ಮ ಮನದ ಸಮಸ್ತ ಬಾವನೆಗಳೆಲ್ಲವೂ ಅವಿತುಹೋಗಿ ಸ್ತಬ್ದವಾದ ಮನಸ್ಸಿನಲ್ಲಿ ಯೋಗಿಗಳು ಯಾವುದನ್ನು ಪಡೆದು ತೃಪ್ತನಾಗುವರೋ,ಶಾಶ್ವತವಾದ ಆನಂದಸಾಗರದಲ್ಲಿ ಮನಸ್ಸನ್ನು ಲೀನಗೊಳಿಸಿದ ಕಾರಣವಾಗಿ ಯಾವನು ಮಂದಮತಿಯಾದರೂ ಸ್ವಯಂ ಪರಬ್ರಹ್ಮ ಸ್ವರೂಪಿಯೇ ಆಗುವನೋ,ಸುರಾದಿ ದೇವತೆಗಳಿಂದ ವಂದಿಸಲ್ಪಡುವ ಪಾದಗಳ್ಳಾತನು ಯಾರೇ ಆಗಿರಲಿ ಅವನೇ ನನ್ನ ಸದ್ಗುರು ಎಂಬುದು ನನ್ನ ತತ್ವವಾಗಿದೆ.
*********************************************************************
|| ಇತಿ ಮನೀಷಾಪಂಚಕಮ್ || || ಈ ರೀತಿಯಾಗಿ ಮನೀಷಾಪಂಚಕಗಳ ಭಾವಾರ್ಥವಾಗಿದೆ ||
*********************************************************************
-೯-
|| ಉಪದೇಶಪಂಚಮ್ ||
*******************
ವೇದೋನಿತ್ಯಮದೀಯತಾಂ ತದುದಿತಂ ಕರ್ಮಸ್ವನುಷ್ಟೀಯತಾಂ |
ಧೀರೇಶಸ್ಯ ವಿಧೀಯತಾಮಪಚಿತಿ: ಕಾಮ್ಯೇಮತಿಸ್ತೃಜ್ಯತಾಂ ||
ಪಾಪೌಘ: ಪರಿಧೂಯತಾಂ ಭವಸುಖೇ ದೋಷೋsನುಸಂಧೀಯತಾಂ |
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ಪೂರ್ಣಂ ವಿದಿರ್ಗಮ್ಯತಾಮ್ ||೧||
ಭಾವಾರ್ಥ:-ತಮತಮಗೆ ಅನ್ವಯಿಸುವ ಸ್ವಶಾಖೆಯ ವೇದವನ್ನು ಸಂಪೂರ್ಣವಾಗಿ ಯಾವಾಗಲೂ ಅಧ್ಯಯನ ಮಾಡಿರಿ.ಅದರಲ್ಲಿ ಹೇಳಿರುವಂತಹಾ ನಿತ್ಯನೈಮಿತ್ತಿಕಾದಿ ಕರ್ಮಗಳನ್ನು ಒಳ್ಳೆಯ ರೀತಿಯಲ್ಲಿ ಆಚರಣೆ ಮಾಡಿರಿ.ಸಂಧ್ಯಾವಂದನಾದಿ ನಿತ್ಯನೈಮಿತ್ತಿಕ ಕರ್ಮಗಳ ಅನುಷ್ಠಾನದ ಮೂಲಕ ಭಗವಂತನಾದ ಪರಮೇಶ್ವರನನ್ನು ಆರಾಧಿಸಿರಿ.ಕಾಮ್ಯ ಕರ್ಮಗಳಲ್ಲಿ ಮನವನ್ನಿರಿಸದೆ ಅವುಗಳನ್ನು ತ್ಯಜಿಸಿ ಪಾಪಕರ್ಮಗಳ ದೋಷಗಳನ್ನು ಹೋಗಲಾಡಿಸಿಕೊಳ್ಳಿರಿ.ತನ್ಮೂಲಕ ಮನಶುದ್ಧರಾಗಿ ಸಾಂಸಾರಿಕ ದೋಷಗಳನ್ನು ಕಂಡುಕೊಳ್ಳಿರಿ. ಆತ್ಮಜ್ಞಾನವನ್ನು ಹೊಂದಲು ಇಚ್ಚಿಸಿರಿ.ಅದಕ್ಕಾಗಿ ಪ್ರಯತ್ನವನ್ನು ಮಾಡುವುದರಲ್ಲಿ ತಲ್ಲೀನತೆಯಿರಲಿ.ಮನೆಯೊಳಗೆ ಇದ್ದುಕೊಂಡು ಕರ್ಮಾದಿಗಳನ್ನು ಮಾಡುವುದು ಒಳಿತೆಂದು ತಿಳಿದು ಅದುವೇ ಆದ್ಯಕರ್ತವ್ಯವೆಂದು ಭಾವಿಸದೆ ಆತ್ಮೋದ್ಧಾರಕ್ಕಾಗಿ ತಮ್ಮ ನೆಲೆಯನ್ನು ತೊರೆದು ಹೊರಗೆ ಬನ್ನಿರಿ.
ಸಂಗ: ಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾಧೀಯತಾಂ |
ಶಾಂತ್ಯಾದಿ: ಪರಿಚೀಯತಾಂ ದೃಢತರಂ ಕರ್ಮಾಶು ಸಂತೃಜ್ಯತಾಮ್ ||
ಸದ್ವಿದ್ವಾನುಪಸರ್ಪ್ಯತಾಂ ಪ್ರತಿದಿನಂ ತತ್ಪಾದುಕೇ ಸೇವ್ಯತಾಂ |
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ ||೨||
ಭಾವಾರ್ಥ:-ಸಜ್ಜನರ ಸಹವಾಸವನ್ನು ಸದಾ ಮಾಡುತ್ತಾ ಇರುವವರಾಗಿ.ಭಗವಂತನ ಮೇಲೆ ಖಚಿತವಾದ ಭಕ್ತಿಯನ್ನು ಹೊಂದಿದವರಾಗಿರಿ. ಅಜ್ಞಾನ,ಮನೋನಿಗ್ರಹ,ಶಾಂತಿ-ವಿನಯಾದಿ ಸದ್ಗುಣಗಳನ್ನು ಚೆನ್ನಾಗಿ ರೂಢಿಸಿಕೊಳ್ಳಿರಿ.ಆದಷ್ಟು ಬೇಗನೆ ಪ್ರಾಪಂಚಿಕ ಕರ್ಮಗಳಿಂದ ದೂರವಿರಲು ಅಭ್ಯಾಸವನ್ನು ಮಾಡಿರಿ.ಶ್ರೇಷ್ಠ ಜ್ಞಾನಿಗಳ ಬಳಿಗೆ ತೆರಳಿ ಅವರುಗಳ ಪಾದಸೇವೆಯನ್ನು ಮಾಡಿ ಅವರಿಂದ ಜ್ಞಾನವನ್ನು ನಿತ್ಯವೂ ಪಡೆಯುವವರಾಗಿರಿ."ಓಂ"ಎನ್ನುವ ಪ್ರಣವಮಂತ್ರ ಸ್ವರೂಪೀ ಏಕಾಕ್ಷರ ಬ್ರಹ್ಮನ ಬಗ್ಗೆ ತಿಳಿಯಬೇಕೆಂಬ ಹಂಬಲವುಳ್ಳವರಾಗಿ ಆ ಮಾರ್ಗವನ್ನು ಅರುಹಲು ಬಿನ್ನವಿಸಿಕೊಳ್ಳುವವರಾಗಿ. ಆ ಜ್ಞಾನಿಗಳು ಭೋಧಿಸುವ ವೇದೋಪನಿಷತ್ತುಗಳ ಮಹಾ ವಾಕ್ಯಗಳ ಅರ್ಥವನ್ನು ಮನಗೊಟ್ಟು ಕೇಳಿ ಮನನ ಮಾಡಿಕೊಳ್ಳಿರಿ.
ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರ: ಪಕ್ಷ: ಸಮಾಶ್ರೀಯತಾಂ |
ದುಸ್ತರ್ಕಾತ್ಸುವಿರಮ್ಯತಾಂ ಶ್ರುತಿಮತಸ್ತರ್ಕೋsನು ಸಂಧೀಯತಾಂ ||
ಬ್ರಹ್ಮೈವಾಸ್ಮಿ ವಿಭಾವ್ಯತಾಮಹರರ್ಹರ್ಗರ್ವ: ಪರಿತ್ಯಜ್ಯತಾಂ |
ದೇಹೇsಹಂಮತಿರುಝ್ಜ್ಯತಾಂ ಬುಧಜನೈರ್ನಾದ: ಪರಿತ್ಯಜ್ಯತಾಮ್ ||೩||
ಭಾವಾರ್ಥ:-ಅದ್ವೈತ ವೇದಾಂತದ ಪಾರಮಾರ್ಥ ವಾಕ್ಯವಾಗಿರುವ "ನೀನು ಆ ಪರಮಾತ್ಮ ಸ್ವರೂಪನಿರುವೆ[ತತ್ ತ್ವಮ್ ಅಸಿ] ಮೊದಲಾದ ಮಹಾವಾಕ್ಯಗಳ ಅರ್ಥವನ್ನು ವಿಮರ್ಶಾಪೂರ್ವಕವಾಗಿ ಅರಿತುಕೊಳ್ಳುವವರಾಗಿ. ವೇದಾಂತದ ಸಾರಸರ್ವಸ್ವವಾಗಿರುವ ಅದ್ವೈತಸಿದ್ಧಾಂತವನ್ನು ಸದಾ ಆಶ್ರಯಿಸುವವರಾಗಿ.ಕುತರ್ಕಗಳಿಂದ ದೂರವಾಗಿ ವೇದಗಳು ಒಪ್ಪುವ ವಿಚಾರಗಳನ್ನೇ ಶೋಧಿಸುತ್ತಲಿರಿ."ಅಹಂ ಬ್ರಹ್ಮಾಸ್ಮಿ" "ನಾನು ಬ್ರಹ್ಮನೇ ಆಗಿರುವೆ" ಎಂಬುದಾಗಿ ಭಾವಿಸುತ್ತಾ ನಾನು-ನನ್ನದು ಎಂಬ ಮಮಕಾರವನ್ನು ದಿನದಿಂದ ದಿನಕ್ಕೆ ತೊರೆಯುವವರಾಗಿ.ದೇಹಾಭಿಮಾನವನ್ನು ಬಿಟ್ಟು ಬಿಡಿರಿ.ವಿದ್ವದ್ಜ್ಜನರೊಡನೆ ಅನಗತ್ಯ ವ್ಯರ್ಥವಾಗಿ ವಾದವಿವಾದಗಳನ್ನು ಮಾಡದಿರಿ.
ಕ್ಷುದ್ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಂಜ್ಯತಾಂ |
ಸ್ವಾದ್ವನ್ನಂ ನ ತು ಯಾಚ್ಯತಾಂ ವಿಧಿವಶಾತ್ಪ್ರಾಪ್ತೇನ ಸಂತುಷ್ಯತಾಂ ||
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾವಾಕ್ಯಂ ಸಮುಚ್ಛಾರ್ಯತಾಂ |
ಔದಾಸೀನ್ಯಮಭೀಪ್ಸ್ಯತಾಂ ಜನಕೃಪಾನೈಷ್ಠುರ್ಯಮುತ್ಸೃಜ್ಯತಾಮ್ ||೪||
ಭಾವಾರ್ಥ:-ಹಸಿವೆಂಬ ಮಹಾ ವ್ಯಾಧಿಗೆ ಭಿಕ್ಷಾನ್ನವೆಂಬ ಮಹಾ ಔಷಧಿಯಿಂದ ಚಿಕಿತ್ಸೆ ಮಾಡಿ ರೋಗೋಪಶಮನವನ್ನು ಮಾಡಿಕೊಳ್ಳಿರಿ.ರುಚಿಗಟ್ಟಾದ ಶಾಕಪಾಕಾದಿಗಳಿಗೆ ಹಾತೊರೆಯದೆ ಭಗವಂತ ಅನುಗ್ರಹಿಸಿದ ಅನ್ನದಿಂದಲೇ ತೃಪ್ತರಾಗಿರಿ.ಶೀತೋಷ್ಣ,ಸುಖದು:ಖ ಇತ್ಯಾದಿ ದ್ವಂದ್ವಗಳನ್ನು ಚೆನ್ನಾಗಿ ಸಹಿಸಿಕೊಳ್ಳುವವರಾಗಿ.ನಿರರ್ಥಕವಾದ ಸಂಭಾಷಣೆಯನ್ನು ಯಾರಲ್ಲೂ ಮಾಡದಿರಿ.ಜನರಲ್ಲಿ ಅತಿಯಾಗಿರುವ ನಯ-ನಿಷ್ಠುರತೆಗಳೆರಡರಿಂದಲೂ ದೂರವಿರುವವರಾಗಿ.
ಏಕಾಂತೇ ಸುಖಮಾಸ್ಯತಾಂ ಪರತರೇಚೇತ: ಸಮಾಧೀಯತಾಂ |
ಪೂರ್ಣಾತ್ಮಾ ಸುಸಮೀಕ್ಷ್ಯತಾಂ ಜಗದಿದಂ ತದ್ಬಾಧಿತಂ ದೃಷ್ಯತಾಮ್ ||
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈ: ಶ್ಲಿಷ್ಯತಾಂ |
ಪ್ರಾರಬ್ಧಂ ತ್ವಿಹ ಭುಜ್ಯತಾಮಥ ಪರಬ್ರಹ್ಮಾತ್ಮಾನಾ ಸ್ಥೀಯತಾನ್ ||೫||
ಭಾವಾರ್ಥ:-ಏಕಾಂತ ಜಾಗದಲ್ಲಿ ಸುಖಾಸೀನನಾಗಿ ಕುಳಿತು ಪರಮಾತ್ಮನಲ್ಲಿಯೇ ಮನಸ್ಸನ್ನು ಸ್ಥಿರವಾಗಿರಿಸಿರಿ.ಸರ್ವ ವ್ಯಾಪಿಯಾಗಿರುವ ಪರಿಪೂರ್ಣ ಪರಬ್ರಹ್ಮನನ್ನು ಅರಿತುಕೊಂಡು ಈ ಜಗತ್ತು ಆತನಿಂದ ನಿರೋಧಿಸಲ್ಪಡುತ್ತಿದೆಯೆಂಬುದನ್ನರಿತು ಇದು ಮಿಥ್ಯಾಪ್ರಪಂಪಂಚವಾಗಿದೆಯೆಂಬುದನ್ನುಮನಗಾಣುವವರಾಗಿರಿ.ಪೂರ್ವಾರ್ಜಿತವಾದಂತಹಾ ಸಂಚಿತ ಕರ್ಮಗಳಿಂದ ಮುಕ್ತರಾಗಿರಿ. ಭವಿಷ್ಯತ್ತಿನ ಕರ್ಮಗಳನ್ನು ಆಲಂಗಿಸಿಕೊಳ್ಳದಿರಿ.ಪ್ರಾರಬ್ದ ಕರ್ಮ ಫಲಗಳನ್ನು ಇಲ್ಲಿಯೇ ಅನುಭವಿಸಲು ಸಿದ್ಧರಿರಿ.ತದನಂತರ ಏಕೀಭಾವದಿಂದ ಕೂಡಿ ಪರಬ್ರಹ್ಮನ ಸಾಕ್ಷಾತ್ಕಾರದ ದಿವ್ಯಾನಂದವನ್ನು ಅನುಭವಿಸುವವರಾಗಿರಿ.
ಯ:ಶ್ಲೋಕಪಂಚಕಮಿದಂ ಪಠತೇ ಮನುಷ್ಯ: |
ಸಂಚಿಂತಯತ್ಯನುದಿನಂ ಸ್ಥಿರತಾಮುಪೇತ್ಯ ||
ತಸ್ಯಾಶು ಸಂಸೃತಿದವಾನಲತೀವ್ರಘೋರ: |
ತಾಪ: ಪ್ರಶಾಂತಿಮುಪಯಾತಿ ಚಿತಿ ಪ್ರಸಾದಾತ್ ||೬||
ಭಾವಾರ್ಥ:-ಈ ರೀತಿಯಾಗಿರುವ ಐದು ಸ್ತುತಿಗಳನ್ನು ಅನುದಿನವೂ ಪಾರಾಯಣ ಮಾಡುತ್ತಾ ಅವುಗಳ ನೈಜಾರ್ಥವನ್ನು ಕದಲದ ಮನಸ್ಸಿನಿಂದ ಚಿಂತನೆಯನ್ನು ಮಾಡುತ್ತಾ ಇರುವಾತಂಗೆ ಭೀಕರವೂ,ಹಿಂಸಾತ್ಮಕವೂ ಆಗಿರುವ ಸಾಂಸಾರಿಕ ಬೇಗೆಯು ಶಾಂತವಾಗಿ ಸುಖಾನಂದವು ಲಭಿಸುವುದು.
*********************************************************************
|| ಇತಿ ಉಪದೇಶಪಂಚಕಮ್ || || ಈ ತೆರನಾಗಿ ಉಪದೇಶಪಂಚಕಗಳ ಭಾವಾರ್ಥವಾಗಿದೆ.||
*********************************************************************
-೧೧-
||ಧನ್ಯಾಷ್ಟಕಮ್ ||
****************
ತದ್ ಜ್ಞಾನಂ ಪ್ರಶಮಕರಂ ಯದಿಂದ್ರಿಯಾಣಾಂ |
ತದ್ ಜ್ಞೇಯಂ ಯದುಪನಿಷತ್ಸು ನಿಶ್ಚಿತಾರ್ಥಂ ||
ತೇ ಧನ್ಯಾ ಭುವಿ ಪರಮಾರ್ಥನಿಶ್ಚಿತೇಹಾ: |
ಶೇಷಾಸ್ತು ಭ್ರಮನಿಲಯೇ ಪರಿಭ್ರಮಂತಿ ||೧||
ಭಾವಾರ್ಥ:-ಯಾವ ವಿಚಾರವನ್ನು ತಿಳಿದುಕೊಳ್ಳುವುದರಿಂದ ಇಂದ್ರಿಯಗಳೆಲ್ಲವೂ ಶಾಂತಗೊಳ್ಳುವವೋ ಅದುವೇ ನೈಜವಾದ ಜ್ಞಾನವಾಗಿದೆ.ಉಪನಿಷತ್ತುಗಳ ಮೂಲಕ ಯಾವುದರ ರೂಪವನ್ನು ಗೊತ್ತುಪಡಿಸಲಾಗಿದೆಯೋ ಅದುವೇ ಅರಿತುಕೊಳ್ಳತಕ್ಕಾದ್ದಾಗಿರುವುದು.ಯಾವಾತನ ಆಚರಣೆಗಳೆಲ್ಲವೂ ದೈವಿಕ ದೃಷ್ಟಿಯಿಂದ ಜರಗುವವೋ ಅಂತಹವನು ಈ ಜಗತ್ತಿನಲ್ಲಿ ಕೃತಾರ್ಥನು.ಉಳಿದವರೆಲ್ಲರೂ ಮಾಯಾಪ್ರಪಂಚದಲ್ಲಿ ಸುತ್ತಾಡುವವರೇ ಆಗಿರುವರು.
ಆದೌ ವಿಜಿತ್ಯ ವಿಷಯಾನ್ಮದಮೋಹರಾಗ- |
ದ್ವೇಷಾದಿಶತ್ರುಗಣಮಾಹೃತಯೋಗರಾಜ್ಯಾ: ||
ಜ್ಞಾತ್ವಾಮೃತಂ ಸಮನುಭೂತ ಪರಾತ್ಮ ವಿದ್ಯಾ- |
ಕಾಂತಾಸುಖಂ ವನಗೃಹೇ ವಿಚರಂತಿ ಧನ್ಯಾ: ||೨||
ಭಾವಾರ್ಥ:-ಪ್ರಥಮತ: ಶಬ್ದ ಸ್ಪರ್ಷ ರೂಪ ರಸ ಗಂಧಾದಿ ಇಂದ್ರಿಯಸುಖ ಸಮೂಹವನ್ನೂ,ಮದ,ಮೋಹ,ಮಾತ್ಸರ್ಯ,ರಾಗ,ದ್ವೇಷಾದಿ ಅರಿಷಡ್ವರ್ಗಗಳನ್ನೂ ಗೆದ್ದು ಯೋಗಸಾಮ್ರಾಜ್ಯವನ್ನು ಹೊಂದಿ ಅಮೃತಸಮಾನವಾದ ಜ್ಞಾನವನ್ನು ಗಳಿಸಿ ಮೋಕ್ಷದ ದಾರಿಯಲ್ಲಿ ಕ್ರಮಿಸಿ ಪಾರಮಾರ್ಥಿಕವಿದ್ಯೆಯೆನ್ನುವ ಪತ್ನಿಯೊಡನೆ ಸುಖವನ್ನು ಅನುಭವಿಸುತ್ತಾ ಮನುಷ್ಯರಹಿತವಾದ ಕಾನನದಲ್ಲಿ ವಿಹರಿಸುತ್ತಿರುವ ಯೋಗಿವರೇಣ್ಯರೇ ನಿಜವಾಗಿಯೂ ಭಾಗ್ಯಶಾಲಿಗಳು.
ತ್ಯಕ್ತ್ವಾ ಗೃಹೇ ರತಿಮಧೋಗತಿ ಹೇತುಭೂತಾ- |
ಮಾತ್ಮೇಚ್ಛಯೋಪನಿಷದರ್ಥರಸಂ ಪಿಬಂತ: ||
ವೀತಸ್ಪೃಹಾ ವಿಷಯಭೋಗಪದೇ ವಿರಕ್ತಾ |
ಧನ್ಯಾಶ್ಚರಂತಿ ವಿಜನೇಷು ವಿಮುಕ್ತಸಂಗಾ: ||೩||
ಭಾವಾರ್ಥ:-ನಮ್ಮನ್ನು ಅವನತಿಯತ್ತ ಕರೆದೊಯ್ಯಲು ಕಾರಣೀಭೂತವಾಗುವ ಮನೆ,ಮಠ,ಮಡದಿ, ಮಕ್ಕಳು,ಸಂಸಾರ ಇತ್ಯಾದಿಗಳ ಬಗೆಗಿನ ಭ್ರಾಂತಿಯನ್ನು ತೊರೆದು.ಆತ್ಮಾನಂದದ ಬಗೆಗಿನ ಇಚ್ಛೆಯುಳ್ಳವರಾಗಿ ಉಪನಿಷತ್ತುಗಳನ್ನು ತಿಳಿಯಬೇಕೆಂಬ ಹಂಬಲವುಳ್ಳವರಾಗಿ ಆ ಅಮೃತರಸಾಸ್ವಾದನೆ ಮಾಡುತ್ತಲಿರುವವರೂ,ಸಮಸ್ತ ವಿಷಯೋಪಭೋಗಾಸಕ್ತಿಗಳನ್ನು ತೊರೆದು,ವಿಷಯ ಸುಖಾದಿಗಳನ್ನು ಅನುಭವಿಸಲು ಯೋಗ್ಯವಾದ ರಾಜಭೋಗಾದಿಗಳಿಂದ ವಿರಕ್ತರಾಗಿ,ಸರ್ವಸಂಗಗಳನ್ನು ಪರಿತ್ಯಜಿಸಿ ನಿರ್ಜನವಾಗಿರುವ ವನಪ್ರದೇಶದಲ್ಲಿ ಸಂಚರಿಸುತ್ತಿರುವ ಜ್ಞಾನಿಗಳಾದ ಮಹಾಯೋಗಿವರೇಣ್ಯರೇ ಕೃತಕೃತ್ಯರು.
ತ್ಯಕ್ತ್ವಾ ಮಮಾಹಮಿತಿ ಬಂಧಕರೇ ಪದೇ ದ್ವೇ |
ಮಾನಾವಮಾನಸದೃಶಾ: ಸಮದರ್ಶಿಶ್ಚ ||
ಕರ್ತಾರಮನ್ಯಮವಗಮ್ಯ ತದರ್ಪಿತಾನಿ |
ಕುರ್ವಂತಿ ಕರ್ಮ ಪರಿಪಾಕಫಲಾನಿ ಧನ್ಯಾ: ||೪||
ಭಾವಾರ್ಥ:-"ನಾನು"ಹಾಗೂ"ನನ್ನದು"ಎನ್ನುವ ಭಾವನಾತ್ಮಕ ಸಂಬಂಧಗಳನ್ನು ತ್ಯಜಿಸಿ, ಮಾನಾಪಮಾನಗಳನ್ನು ಸರಿಸಮಾನವೆಂದು ಸಮದರ್ಶಿತ್ವದಿಂದ ಸ್ವೀಕರಿಸುತ್ತಾ ಹಾಗೆಯೇ ತನಗಿಂತ ಸಮರ್ಥನಾಗಿರುವ ಈಶ್ವರನು ಎಲ್ಲಾ ವಿಚಾರಗಳಿಗೂ ಯಜಮಾನನೆಂದು ತಿಳಿದು ತಮ್ಮ ಸಮಸ್ತ ಕರ್ಮಗಳ ಫಲವನ್ನು ಶಿವಾರ್ಪಣಾ ಭಾವದಿಂದ ಅರ್ಪಿಸಿ ಸತ್ಕರ್ಮಗಳನ್ನಾಚರಿಸುವ ಮಹಾತ್ಮರುಗಳಾದ ಯೋಗಿವರ್ಯರೇ ಭಾಗ್ಯಶಾಲಿಗಳು.
ತ್ಯಕ್ತ್ವೈಷಣಾತ್ರಯಮವೇಕ್ಷಿತಮೋಕ್ಷಮಾರ್ಗಾ: |
ಭೈಕ್ಷಾಮೃತೇನ ಪರಿಕಲ್ಪಿತದೇಹಯಾತ್ರಾ: ||
ಜ್ಯೋತಿ: ಪರಾತ್ಪರತರಂ ಪರಮಾತ್ಮಸಂಜ್ಞಂ |
ಧನ್ಯಾ ದ್ವಿಜಾ ರಹಸಿ ಹೃದ್ಯವಲೋಕಯಂತಿ ||೫||
ಭಾವಾರ್ಥ:-ಸತಿ,ಸುತ,ಸಂಪದಗಳ ಬಯಕೆಗಳಿಂದ ದೂರವಾಗಿ ಮುಕ್ತಿಯಹಾದಿಯನ್ನು ಚಿಂತಿಸುತ್ತಾ.ಭಿಕ್ಷಾನ್ನವೆನ್ನುವ ಅಮೃತವನ್ನು ಸ್ವೀಕರಿಸುವುದರ ಮೂಲಕ ದೇಹವನ್ನು ರಕ್ಷಿಸುತ್ತಾ ಪರಮಾತ್ಮನೆಂದು ಗುರುತಿಸಲ್ಪಡುವ ಸರ್ವಶ್ರೇಷ್ಠನಾಗಿರುವ ಪರಾತ್ಪರ ಪರಂಜ್ಯೋತಿಯನ್ನು ಏಕಾಂತ ಪ್ರದೇಶವಾಗಿರುವ ತಮ್ಮ ಹೃದಯದಲ್ಲಿ ಕಾಣುತ್ತಲಿರುವ ಮಹಾ ಜ್ಞಾನಿಗಳೇ ಅದೃಷ್ಟವಂತರು.
ನಾಸನ್ನ ಸನ್ನ ಸದಸನ್ನ ಮಹನ್ನ ಚಾಣು |
ನ ಸ್ತ್ರೀ ಪುಮಾನ್ನ ಚ ನಪುಂಸಕಮೇಕಬೀಜಂ ||
ಯೈರ್ಬ್ರಹ್ಮ ತತ್ಸಮಮುಪಾಸಿತಮೇಕಚಿತ್ತೈ- |
ಧನ್ಯಾ ವಿರೇಜುರಿತರೇ ಭವಪಾಶಬದ್ದಾ: ||೬||
ಭಾವಾರ್ಥ:-ಆ ಪರಮಾತ್ಮನು ವ್ಯಕ್ತನೂ ಅಲ್ಲ; ಅವ್ಯಕ್ತನೂ ಅಲ್ಲ.ಒಳ್ಳೆಯವ ಹಾಗೂ ಕೆಟ್ಟವ ಎರಡೂ ಅಲ್ಲ.ಸ್ಥೂಲನೂ ಅಲ್ಲ.ಸೂಕ್ಷ್ಮನೂ ಅಲ್ಲ.ಸ್ತ್ರೀಯಲ್ಲ,ಪುರುಷನಲ್ಲ, ನಪುಂಸಕನಲ್ಲ.ಆದಾಗ್ಯೂ ಇವೆಲ್ಲವುಗಳಿಗೆ ಮೂಲನಿಮಿತ್ತನು ಅವನೇ ಆಗಿರುವನು. ಇಂತಹಾ ಪರಬ್ರಹ್ಮನನ್ನು ಏಕೋಭಾವದಿಂದ ಉಪಾಸನೆಗೈಯುತ್ತಲಿರುವ ಪುರುಷರೇ ಧನ್ಯರು.ಅನ್ಯರೆಲ್ಲರೂ ಭವಪಾಶವೆಂಬ ಸಾಂಸಾರಿಕ ಬಂಧನದಲ್ಲಿ ಸಿಲುಕಿ ನರಕಯಾತನೆಯನ್ನು ಅನುಭವಿಸುವವರೇ ಆಗಿದ್ದಾರೆ.
ಆಜ್ಞಾನಪಂಕಪರಿಮಗ್ನಮಪೇತಸಾರಂ |
ದು:ಖಾಲಯಂ ಮರಣಜನ್ಮಜರಾವಸಕ್ತಂ ||
ಸಂಸಾರಬಂಧನಮನಿತ್ಯಮವೇಕ್ಷ್ಯ ಧನ್ಯಾ |
ಜ್ಞಾನಾಸಿನಾ ತದವಶೀರ್ಯ ವಿನಿಶ್ಚಯಂತ್ ||೭||
ಭಾವಾರ್ಥ:-ಅಜ್ಞಾನವೆನ್ನುವ ಕೆಸರನ್ನು ಹಚ್ಚಿಕೊಂಡು ಕೊಳಕಾಗಿರುವುದೂ, ಸಾರರಹಿತವೂ,ದು:ಖದ ಆವಾಸತಾಣವೂ,ಹುಟ್ಟು ಮುಪ್ಪು ಸಾವುಗಳಿಂದ ಕೂಡಿರುವ ನಶ್ವರವಾಗಿರುವಂತಹಾ ಸಂಸಾರದ ನಿಜರೂಪವನ್ನು ಚೆನ್ನಾಗಿ ಮನಗಂಡು ಸಾಂಸಾರಿಕ ಬಂಧವನ್ನು ಜ್ಞಾನಮಯ ಖಡ್ಗದಿಂದ ತುಂಡರಿಸಿ ಆತ್ಮನ ನೈಜ ಸ್ವರೂಪದ ತತ್ವದ ಖಚಿತ ಅರಿವನ್ನು ಪಡೆದಿರುವ ವಿದ್ವಜ್ಜನರೇ ಶ್ರೀಮಂತರು.
ಶಾಂತೈರನನ್ಯಮತಿಭಿರ್ಮಧುರಸ್ವಭಾವೈ- |
ರೇಕತ್ವನಿಶ್ಚಿತಮನೋಭಿರಪೇತಮೋಹೈ: ||
ಸಾಕಂ ವನೇಷುವಿಜಿತಾತ್ಮಪದ ಸ್ವರೂಪಂ |
ಶಾಸ್ತ್ರೇಷುಸಮ್ಯಗನಿಶಂ ವಿಮೃಶಂತಿ ಧನ್ಯಾ: ||೮||
ಭಾವಾರ್ಥ:-ಶಾಂತಾತ್ಮರೂಪರೂ,ಸ್ಥಿತಪ್ರಜ್ಞಾವಂತರೂ,ಸ್ವಾರಸ್ಯಭರಿತ ಸ್ವಭಾವದವರೂ, ಏಕಮೇವಾದ್ವಿತೀಯವಾದಂತಹಾ ಚೇತನಾಸ್ವರೂಪದ ಸಾಮರ್ಥ್ಯದಲ್ಲಿ ನೈಜಶ್ರದ್ಧೆಯುಳ್ಳವರೂ, ಮೋಹವಿರಹಿತರೂ, ಆತ್ಮತತ್ವದ ನೈಜಾರ್ಥವನ್ನು ಅರಿತವರೂ ಆಗಿರುವ ಮಹಾಯೋಗಿಗಳೊಡನೆ ಕಾನನದೊಳಗೆ ಸಂಚರಿಸುತ್ತಾ ಶಾಸ್ತ್ರಗಳನ್ನು ವಿಮರ್ಷಿಸುತ್ತಾ ಆತ್ಮತತ್ವವನ್ನು ಮನನ ಮಾಡುತ್ತಲಿರುವ ಮಹಾಪುರುಷರುಗಳೇ ಧನ್ಯರು.
ಅಹಿಮಿವ ಜನಯೋಗಂ ಸರ್ವದಾ ವರ್ಜಯೇದ್ಯ: |
ಕುಣಪ ಮಿವ ಸುನಾರೀಂ ತ್ಯಕ್ತ ಕಾಮೋವಿರಾಗೀ ||
ವಿಷಮಿವ ವಿಷಯಾನೊ ಮಾನ್ಯಮಾನೊ ದುರಂತಾನ್ |
ಜಯತಿ ಪರಮಹಂಸೋ ಮುಕ್ತಿಭಾವಂ ಸಮೇತಿ ||೯||
ಭಾವಾರ್ಥ:-ಯಾವಾತನು ಜನರ ಗುಂಪನ್ನು ಹಾವುಗಳ ಸಹವಾಸವಿದೆಂದು ತಿಳಿದು ತ್ಯಜಿಸಿ ದೂರವಿರುವಿರುವನೋ ಮನಮೋಹಕ ಸೌಂದರ್ಯವುಳ್ಳ ಸ್ತ್ರೀಯನ್ನು ಶವದಂತೆ ತಿಳಿದು ಉಪೇಕ್ಷೆ ಮಾಡುವನೋ,ದುರ್ವಿಷಯಗಳನ್ನು ವಿಷ ಸಮಾನವೆಂದು ಬಗೆದು ತ್ಯಜಿಸುವನೋ,ಅಂತಹಾ ಪರಮಹಂಸನಿಗೆ ಜಯವು ದೊರಕುವುದರೊಂದಿಗೆ ಆತನು ಮುಕ್ತಿಯನ್ನು ಹೊಂದುವನು.
ಸಂಪೂರ್ಣಂ ಜಗದೇವ ನಂದನವನಂ ಸರ್ವೇsಪಿ ಕಲ್ಪದ್ರುಮಾ |
ಗಾಂಗಂ ವಾರಿ ಸಮಸ್ತವಾರಿ ನಿವಹ: ಪುಣ್ಯಾ: ಸಮಾಪ್ತಾ: ಕ್ರಿಯಾ: ||
ವಾಚ: ಪ್ರಾಕೃತ ಸಂಸ್ಕೃತಾ: ಶ್ರುತಿ ಶಿರೋವಾರಣಾಸೀ ಮೇದಿನೀ |
ಸರ್ವಾವಸ್ಥಿತಿರಸ್ಯ ವಸ್ತು ವಿಷಯಾದೃಷ್ಟೇಪರಬ್ರಹ್ಮಣಿ ||೯||
ಭಾವಾರ್ಥ:-ಯಾವಾತನು ಪರಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವನೋ,ಅವನಿಗೆ ಸಂಸಾರವೆಲ್ಲವೂ ನಂದನವನದಂತೆ ಭಾಸವಾಗುವುದು.ಸಮಸ್ತಕಾರ್ಯಗಳೆಲ್ಲವೂ ಕಲ್ಪವೃಕ್ಷಗಳಂತೆ ಫಲವನ್ನು ಒದಗಿಸುವವು.ಜಲವೆಲ್ಲವೂ ಗಂಗಾಜಲದಂತೆ ಪಾವನಮಯವಾಗುವವು.ಅವನು ಮಾಡುವ ಸಮಸ್ತ ಕರ್ಮಗಳೂ ಪವಿತ್ರವಾಗುವವು.ಅವನ ಮಾತೆಲ್ಲವೂ ಅಸಂಸ್ಕೃತವಾಗಿರಲಿ ಅಥವಾ ಸಂಸ್ಕೃತವಾಗಿರಲಿ ಅವುಗಳು ವೇದ ಸಮಾನ ಸಾರವುಳ್ಳದ್ದಾಗುವುದು.ಆತನಿಗೆ ಸಮಸ್ತ ಭೂಮಂಡಲವು ಕಾಶೀ ಕ್ಷೇತ್ರಸಮಾನವಾದ ಮುಕ್ತಿಕ್ಷೇತ್ರವಾಗುವುದು.ಆತನ ಆಚರಣೆಗಳೇನಿವೆಯೋ ಅವೆಲ್ಲವೂ ಪಾರಮಾರ್ಥಿಕತೆಯುಳ್ಳದ್ದಾಗಿರುವುದು.
*********************************************************************
|| ಇತಿ ಧನ್ಯಾಷ್ಟಕಮ್ || || ಈ ರೀತಿಯಾಗಿ ಧನ್ಯಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೨-
|| ಪರಾಪೂಜಾ ||
**************
ಅಖಂಡೇ ಸಚ್ಚಿದಾನಂದೇ ನಿರ್ವಿಕಲ್ಪೈಕರೂಪಿಣಿ |
ಸ್ಥಿತೇsದ್ವಿತೀಯ ಭಾವೇಸ್ಮಿನ್ಕಥಂ ಪೂಜಾವಿಧೀಯತೆ ||೧||
ಭಾವಾರ್ಥ:-ಪೂರ್ಣನೂ,ಬ್ರಹ್ಮಾನಂದನೂ,ಮತ್ತು ಶೋಧನೆಗೆ ನಿಲುಕದ ರೂಪಿಯೂ, ಏಕೈಕ ಭಾವದಲ್ಲಿ ನೆಲೆಸಿರುವಾತನೂ ಆಗಿರುವವನನ್ನು ಅದೆಂತು ಆರಾಧಿಸುವುದು?
ಪೂರ್ಣಸ್ಯಾವಾಹನಂ ಕುತ್ರ ಸರ್ವಾಧಾರಸ್ಯ ಚಾಸನಮ್ |
ಸ್ವಚ್ಛಸ್ಯ ಪಾದ್ಯಮರ್ಘ್ಯಂಚ ಶುದ್ಧಸ್ಯಾಚಮನಂ ಕುತ: ||೨||
ಭಾವಾರ್ಥ:-ಅಖಂಡವಾಗಿರುವಾತನನ್ನು ಎಲ್ಲಿಗೆ ಆವಾಹನೆ ಮಾಡಲಿ?ಸಮಸ್ತಕ್ಕೂ ಆಧಾರನಾಗಿರುವಾತನಿಗೆ ಆಸನವನ್ನು ಎಂತು ಕೊಡಲಿ?ನಿರ್ಮಲವಾಗಿರುವಾತನಿಗೆ ಪಾದ್ಯ ಹಾಗೂ ಅರ್ಘ್ಯಗಳನ್ನೆಂತು ನೀಡಲಿ? ಶುದ್ಧನಾಗಿರುವಾತನಿಗೆ ಆಚಮನವಾದರೂ ಏಕೆ?
ನಿರ್ಮಲಸ್ಯ ಕುತ:ಸ್ನಾನಂ ವಿಶ್ವೋದರಸ್ಯ ಚ |
ಅಗೋತ್ರಸ್ಯ ವರ್ಣಸ್ಯ ಕುತಸ್ತಸ್ಯೋಪವೀತಕಮ್ ||೩||
ಭಾವಾರ್ಥ:-ಹೊಳೆಯುವ ಶರೀರಗೆ ಸ್ನಾನದ ಅಗತ್ಯವಾದರೂ ಏಕೆ?ಸಮಸ್ತ ವಿಶ್ವವನ್ನೇ ಉದರದೊಳಗಿರಿಸಿದಾತನಿಗೆ ವಸ್ತ್ರವನ್ನು ಉಡಿಸುವುದಾದರೂ ಎಂತು?ಜಾತಿ ಮತ್ತು ಗೋತ್ರ ವಿರಹಿತನಾಗಿರುವವಗೆ ಯಜ್ಞೋಪವೀತವಾದರೂ ಯಾತಕ್ಕೆ?
ನಿರ್ಲೇಪಸ್ಯ ಕುತೋಗಂಧ: ಪುಷ್ಪಂ ನಿರ್ವಾಸನಸ್ಯ ಚ |
ನಿರ್ವಿಶೇಷಸ್ಯ ಕಾ ಭೂಷಾ ಕೋsಲಂಕಾರೋ ನಿರಾಕೃತೆ: ||೪||
ಭಾವಾರ್ಥ:-ಯಾವುದೇ ಲೇಪವಿಲ್ಲವನಿಗೆ ಗಂಧವನ್ನು ಲೇಪಿಸುವುದಾದರೂ ಹೇಗೆ? ವಾಸನಾರಹಿತನಾದವನಿಗೆ ಪುಷ್ಪಗಳ ಅವಶ್ಯಕತೆಯಾದರೂ ಏನು? ಏಕಪ್ರಕಾರವಾಗಿರುವಾತಂಗೆ ಅಲಂಕಾರವಾದರೂ ಯಾವುದು? ಅಕಾರ ವಿರಹಿತಗೆ ಭೂಷಣವಾವುದು?
ನಿರಂಜನಸ್ಯ ಕಿಂ ಧೂಪೈರ್ದೀಪೈರ್ವಾ ಸರ್ವಸಾಕ್ಷಿಣ: |
ನಿಜಾನಂದೈಕ ತೃಪ್ತಸ್ಯ ನೈವೇದ್ಯಂ ಕಿಂ ಭವೇದಿಹ ||೫||
ಭಾವಾರ್ಥ:-ದೋಷವಿರಹಿತನಾಗಿರುವಾತಗೆ ಧೂಪವಾದರೂ ಏತಕ್ಕೆ?ಪ್ರತ್ಯಕ್ಷವಿರುವಾತಂಗೆ ದೀಪವಾದರೂ ಯಾತಕ್ಕೆ?ಸಹಜಾನಂದಸ್ವರೂಪನಾಗಿ ಅಮೃತಪಾನದಿಂದ ತೃಪ್ತಿ ಹೊಂದಿರುವವಗೆ ನೈವೇದ್ಯ ನೀಡಿದರೆ ಪ್ರಯೋಜನವೇನು?
ವಿಶ್ವಾನಂದಯಿತುಸ್ತಸ್ಯ ಕಿಂ ತಾಂಬೂಲಂ ಪ್ರಕಲ್ಪ್ಯತೆ |
ಸ್ವಯಂಪ್ರಕಾಶ ಚಿದ್ರೂಪೊ ಯೋsಸಾವರ್ಕಾದಿ ಭಾಸಕ: ||೬||
ಭಾವಾರ್ಥ:-ಸ್ವತ: ಪ್ರಕಾಶಮಯಿಯಾಗಿ ಚೇತನಾರೂಪನಾಗಿ ಸೂರ್ಯಚಂದ್ರಾದಿಗಳಿಗೂ ಬೆಳಕನ್ನು ನೀಡುವ ಮತ್ತು ಬ್ರಹ್ಮಾಂಡವನ್ನೇ ಆನಂದಗೊಳಿಸುವಾತನಿಗೆ ತಾಂಬೂಲವನ್ನು ರೂಪಿಸುವುದಾದರೂ ಎಂತು?
ಪ್ರದಕ್ಷಿಣಾಹ್ಯನಂತಸ್ಯ ಹ್ಯದ್ವಯಸ್ಯ ಕುತೋ ನತಿ: |
ವೇದವಾಕ್ಯೈರವೇದ್ಯಸ್ಯ ಕುತ: ಸ್ತೋತ್ರಂ ವಿಧೀಯತೇ ||೭||
ಭಾವಾರ್ಥ:-ಅಂತ್ಯವೇ ಇಲ್ಲದಿರುವಾತನಿಗೆ ಪ್ರದಕ್ಷಿಣೆ ಬರುವುದಾರೂ ಹೇಗೆ? ಸರಿಸಾಟಿಯಿಲ್ಲದಾತಂಗೆ ನಮಸ್ಕಾರವೇಕೆ? ವೇದವಾಕ್ಯಗಳ ಮೂಲಕವೂ ತಿಳಿಯಲಶಕ್ಯನಾದವನನ್ನು ಹೇಗೆ ಸ್ತುತಿಸಲಿ?
ಸ್ವಯಂಪ್ರಕಾಶಮಾನಸ್ಯ ಕುತೋ ನೀರಾಜನಂ ವಿಭೋ: |
ಅಂತರ್ಬಹಿಶ್ಚ ಪೂರ್ಣಸ್ಯ ಕಥಮುದ್ವಾಸಸನಂ ಭವೇತ್ ||೮||
ಭಾವಾರ್ಥ:-ಪರಮಾತ್ಮಸ್ವರೂಪನಾಗಿ ತಾನೇತಾನಾಗಿ ಪ್ರಕಾಶಮಯಿಯಾಗಿರುವವಗೆ ಆರತಿಯಾದರೂ ಯಾತಕ್ಕೆ? ಒಳಗೂ ಹೊರಗೂ ಎಲ್ಲೆಡೆಯೂ ಆವರಿಸಿ ಪರಿಪೂರ್ಣನಾದಾತಾನನ್ನು ಹೊರಗೆ ಹಾಕುವುದಾದರೂ ಎಲ್ಲಿಗೆ?
ಏವಮೇವ ಪರಾಪೂಜಾ ಸರ್ವಾವಸ್ಥಾಸು ಸರ್ವದಾ |
ಏಕಬುದ್ಧ್ಯಾತು ದೇವೇಶೇ ವಿಧೇಯೊ ಬ್ರಹ್ಮ ವಿತ್ತಮೈ: ||೯||
ಭಾವಾರ್ಥ:-ತತ್ವಜ್ಞಾನವನ್ನರಿತವರು ಸರ್ವಕಾಲಗಳಲ್ಲಿಯೂ ಎಲ್ಲಾ ಸ್ಥಿತಿಗಳಲ್ಲಿಯೂ,ಈ ರೀತಿಯಾಗಿ ಏಕಮನಸ್ಸಿನಿಂದ ಭಗವಂತನ ಅಲೌಕಿಕ ಆರಾಧನೆಯನ್ನು ಮಾಡಬೇಕು.
*********************************************************************
|| ಇತಿ ಪರಪೂಜಾ || || ಈ ರೀತಿಯಾಗಿ ಪರಾಪೂಜಾ ಶ್ಲೋಕಗಳ ಭಾವಾರ್ಥವಾಗಿದೆ ||
*********************************************************************
-೧೩-
|| ವಿಜ್ಞಾನ ನೌಕಾ ||
*****************
ತಪೋಯಜ್ಞದಾನಾದಿಭಿ: ಶುದ್ಧಬುದ್ಧಿ:-
ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ |
ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ವಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೧||
ಭಾವಾರ್ಥ:-ದಾನ;ಯಜ್ಞ;ತಪಸ್ಸು ಇತ್ಯಾದಿಗಳಿಂದ ಪರಿಶುದ್ಧಜ್ಞಾನವುಳ್ಳವರಾದ ವಿದ್ವಜ್ಜನರು ಅರಸೊತ್ತಿಗೆ, ರಾಜ್ಯ, ಸಂಪತ್ತು ಮೊದಲಾದವುಗಳನ್ನು ಕೀಳೆಂದು ಪರಿಗಣಿಸಿ, ಅನಾಸಕ್ತರಾಗಿ,ಸರ್ವಸ್ವವನ್ನೂ ತ್ಯಜಿಸಿ ಯಾವ ಸ್ವರೂಪವನ್ನು ಹೊಂದುವರೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ದಯಾಲುಂ ಗುರುಂ ಬ್ರಹ್ಮನಿಷ್ಟಂ ಪ್ರಶಾಂತಂ
ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ |
ಯದಾಪ್ನೋತಿ ತತ್ವಂ ನಿದಿಧ್ಯಾಸ್ಯ ವಿದ್ವಾನ್
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೨||
ಭಾವಾರ್ಥ:-ಬಲ್ಲಿದರು ದಯಾನಿಧಿಯಾದ ಜ್ಞಾನನಿಷ್ಟನಾಗಿರುವ ಪ್ರಶಾಂತನಾಗಿರುವ ಗುರುವಿನ ಚರಣಾರವಿಂದಗಳನ್ನು ಪೂಜಿಸಿ, ತಮ್ಮ ನೈಜ ರೂಪದ ವಿಚಾರ ಹಾಗೂ ಧ್ಯಾನಗಳಿಂದ ಯಾವ ಸ್ವರೂಪವನ್ನು ಹೊಂದುವರೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಾನಂದರೂಪಂ ಪ್ರಕಾಶರೂಪಂ
ನಿರಸ್ತ ಪ್ರಪಂಚಂ ಪರಿಚ್ಛೇದಶೂನ್ಯಮ್ |
ಅಹಂ ಬ್ರಹ್ಮ ವೃತ್ತ್ಯೈಕಗಮ್ಯಂ ತುರೀಯಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೩||
ಭಾವಾರ್ಥ:-ಯಾವುದು ಆನಂದರೂಪಿಯೋ,ಚೇತನಾಸ್ವರೂಪವೋ,ಪ್ರಪಂಚಕ್ಕೆ ನಿಲುಕದ ಎಲ್ಲಾ ಪ್ರಕರಣಗಳಿಂದ ಮುಕ್ತವಾಗಿ "ನಾನೇ ಬ್ರಹ್ಮ"ಎಂಬ ಒಂದೇ ಒಂದಾದ ಕರ್ಮದಿಂದ ಯಾವುದನ್ನು ಪಡೆಯಬಹುದೋ, ಯಾವುದು ಚತುರ್ಥಾವಸ್ಥೆಯೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಜ್ಞಾನತೋ ಭಾತಿ ವಿಶ್ವಂ ಸಮಸ್ತಂ
ವಿನಷ್ಟಂ ಚ ಸದ್ಯೋ ಯದಾತ್ಮ ಪ್ರಭೋಧೇ |
ಮನೋವಾಗತೀತಂ ವಿಶುದ್ಧಂ ವಿಮುಕ್ತಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೪||
ಭಾವಾರ್ಥ:-ಯಾವುದರ ಕುರಿತಾದ ಅರಿವಿನ ಕೊರತೆಯಿಂದ ಈ ವಿವಿಧತೆಗಳಿಂದ ಕೂಡಿದ ಬ್ರಹ್ಮಾಂಡವೆಲ್ಲವೂ ಕಾಣುವುದೋ, ಆದರೆ ಯಾವ ಆತ್ಮಜ್ಞಾನದ ಅನುಭವವಾದೊಡನೆ ಸಮಸ್ತವೂ ಮಾಯವಾಗುವುದೋ, ಯಾವುದು ಮಾತು ಮನಸ್ಸುಗಳಿಗೆ ನಿಲುಕದಿರುವುದೋ ಆ ಸ್ವಚ್ಛ ವಿರಕ್ತ ಸ್ವಭಾವದ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ನಿಷೇಧೇ ಕೃತೇ ನೇತಿ ನೇತೀತಿ ವಾಕ್ಯೈ:
ಸಮಾಧಿಸ್ಥಿತಾನಾಂ ಯದಾಭಾತಿಪೂರ್ನಾಮ್
ಅವಸ್ಥಾತ್ರಯಾತೀತಮೇಕಂ ತುರೀಯಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೫||
ಭಾವಾರ್ಥ:-"ಹೀಗಲ್ಲ-ಹೀಗಲ್ಲ"ಎನ್ನುವ ಉಪನಿಷದ್ವಾಕ್ಯಗಳಿಂದ ಸಮಸ್ತವನ್ನೂ ನಿರಾಕರಿಸಿ ಸಮಾಧಿಸ್ಥಿತಿಯಲ್ಲಿರುವವರಿಗೆ ಯಾವುದು ಪರಿಪೂರ್ಣವಾಗಿ ಪ್ರಕಾಶಿಸುವುದೋ, ಯಾವುದು ಏಕಮಾತ್ರವೋ, ಯಾವುದು ಮೋಕ್ಷಾವಸ್ಥೆಯೋ, ಹಾಗೆಯೇ ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಮೂರು ಸ್ಥಿತಿತ್ವಗಳಿಗೆ ನಿಲುಕದಿರುವುದೋ ಆ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಾನಂದಲೇಶೈ: ಸಮಾನಂದಿ ವಿಶ್ವಂ
ಯದಾಭಾತಿ ಸತ್ತ್ವೇ ತದಾಭಾತಿ ಸರ್ವಮ್ |
ಯದಾಲೋಚನೇ ರೂಪಮನ್ಯತ್ಸಮಸ್ತಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೬||
ಭಾವಾರ್ಥ:-ಯಾವ ಆನಂದದ ತುಣುಕಿನಿಂದ ಜಗತ್ತೆಲ್ಲವೂ ಸಂತಸಮಯವಾಗಿರುವುದೋ,ಯಾವ ತೇಜಸ್ಸಿನಿಂದ ಜಗತ್ತೆಲ್ಲವೂ ತೇಜೋಮಯವಾಗಿರುವುದೋ,ಯಾವ ನೋಟದಿಂದ ಮಿಕ್ಕಿರುವುದೆಲ್ಲವೂ ಅಮೃತರೂಪಿಯಾಗಿರುವುದೋ ಅಂತಹಾ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಅನಂತಂ ವಿಭುಂ ಸರ್ವಯೋನಿಂ ನಿರೀಹಂ
ಶಿವಂ ಸಂಗಹೀನಂ ಯದೋಂಕಾರಗಮ್ಯಮ್ |
ನಿರಾಕಾರಮತ್ಯುಜ್ಜ್ವಲಂ ಮೃತ್ಯುಹೀನಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೭||
ಭಾವಾರ್ಥ:-ಯಾವುದು ಅಂತ್ಯರಹಿತವಾಗಿದೆಯೋ, ದೊರೆಯಾಗಿರುವುದೋ, ಸಮಸ್ತಕ್ಕೂ ಆದಿಯಾಗಿರುವುದೋ, ಬಯಕೆಗಳರಹಿತವಾಗಿರುವುದೋ, ಶುಭದಾಯಕವಾಗಿರುವುದೋ, ಕೂಟವಿರಹಿತವಾಗಿರುವುದೋ, ಓಂಕಾರಕ್ಕೆ ಮನ್ನಣೆಯಾಗಿದೆಯಾಗಿದೆಯೋ, ಯಾವುದು ಆಕಾರ ರಹಿತವಾಗಿದೆಯೋ,ಕಾಂತಿಯುತವಾಗಿದೆಯೋ, ಅಮೃತಮಯವಾಗಿದೆಯೋ,ಅಂತಹ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ಯದಾನಂದಸಿಂಧೌ ನಿಮಗ್ನ: ಪುಮಾನ್ಸ್ಯಾ-
ದವಿದ್ಯಾವಿಲಾಸ: ಸಮಸ್ತ ಪ್ರಪಂಚ: |
ಯದಾ ನ ಸ್ಫುರತ್ಯದ್ಭುತಂ ಯನ್ನಿಮಿತ್ತಂ
ಪರಂಬ್ರಹ್ಮ ನಿತ್ಯಂ ತದೇವಾಹಮಸ್ಮಿ ||೮||
ಭಾವಾರ್ಥ:-ಯಾವ ಸಂತಸಸಾಗರದಲ್ಲಿ ಒಂದು ಬಾರಿ ಮುಳುಗಿದರೆ ಈ ಮಾಯಾವಿಲಾಸವಾಗಿರುವ ಜಗತ್ತು ಪುನ: ಕಾಣಲಾರದೋ, ಹಾಗಾಗಿರುವುದರಿಂದ ಯಾವುದು ಅಚ್ಚರಿಯಾಗಿರುವುದೋ ಅಂತಹಾ ಶಾಶ್ವತನಾಗಿರುವ ದೇವಾಧಿದೇವನೇ ನಾನಾಗಿರುವೆ.
ವಿಜ್ಞಾನನಾವಂ ಪರಿಗೃಹ್ಯ ಕಶ್ಚಿತ್
ತರೇದ್ ಯದಜ್ಞಾನಮಯಂ ಭವಾಭ್ಧಿಮ್ |
ಜ್ಞಾನಾಸಿನಾ ಯೋ ಹಿ ವಿಚ್ಛಿದ್ಯ ತೃಷ್ಣಾಂ
ವಿಷ್ಣೋ: ಪದಂ ಯಾತಿ ಸ ಏವ ಧನ್ಯ: ||೯||
ಭಾವಾರ್ಥ:-ಯಾವಾತನು ತಿಳುವಳಿಕೆಯೆಂಬ ಕತ್ತಿಯಿಂದ ಆಶಾಪಾಶಗಳನ್ನು ತುಂಡರಿಸಿ ವಿಶಿಷ್ಟವಾದ ಅರಿವು ಎನ್ನುವ ಹರಿಗೋಲಿನ ಸಹಾಯದಿಂದ ಅಜ್ಞಾನವೆನ್ನುವ ಸಂಸಾರಸಾಗರವನ್ನು ದಾಟುವನೋ ಅವನು ಮಹಾವಿಷ್ಣುವಿನ ಸ್ಥಾನವನ್ನು ಸೇರುವನು.ಅವನೇ ಧನ್ಯನು.
*********************************************************************
|| ಇತಿ ವಿಜ್ಞಾನನೌಕಾ || || ಈ ರೀತಿಯಾಗಿ ವಿಜ್ಞಾನನೌಕಾ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೧೪-
|| ದಶ ಶ್ಲೋಕಿ ||
***************
ನ ಭೂಮಿರ್ನ ತೋಯಂ ನ ತೇಜೋ ನ ವಾಯು:
ನ ಖಂ ನೇಂದ್ರಿಯಂ ವಾ ನ ತೇಷಾಂ ಸಮೂಹ: |
ಅನೇಕಾಂತಿಕತ್ವಾತ್ ಸುಷುಪ್ತ್ಯೇಕಸಿದ್ಧ:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೧||
ಭಾವಾರ್ಥ:-ನಾನು ಭುವಿಯಲ್ಲ. ಜಲವಲ್ಲ. ಅಗ್ನಿ, ವಾಯು, ಆಕಾಶಗಳೂ ಅಲ್ಲ. ಅಥವಾ ಅವುಗಳ ಗುಂಪೂ ಅಲ್ಲ. ಯಾಕೆಂದರೆ ಇವೆಲ್ಲವೂ ಅಶಾಶ್ವತವಾದವುಗಳು. ಗಾಢವಾದ ನಿದ್ರಾ ಸಮಯದಲ್ಲಿ ಯೋಗಿಯೂ, ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ವರ್ಣಾ ನ ವರ್ಣಾಶ್ರಮಾಚಾರ ಧರ್ಮಾ:
ನ ಮೇ ಧಾರಣಾಧ್ಯಾನಯೋಗಾದಯೋ??ಪಿ |
ಅನಾತ್ಮಾಶ್ರಯಾಹಂ ಮಮಾಧ್ಯಾಸಹಾನಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೨||
ಭಾವಾರ್ಥ:-ನನಗೆ ಬ್ರಾಹ್ಮಣಾದಿ ಚತುರ್ವರ್ಣಗಳಿಲ್ಲ. ವರ್ಣಾಶ್ರಮಗಳಿಗೆ ವಿಧಿಸಲಾಗಿರುವ ಆಚಾರಗಳಾಗಲೀ ಧರ್ಮಗಳ ಕಟ್ಟುಪಾಡುಗಳಾಗಲೀ ಇಲ್ಲ.ಯೋಗಿವರ್ಯರಿಗೆ ತಕ್ಕುದಾದ ಧ್ಯಾನ ಧಾರಣಾದಿ ಅಷ್ಟಾಂಗ ಸಹಿತವಾದ ಯೋಗವೂ ಇಲ್ಲ. ಶರೀರದಲ್ಲಿ "ನಾನು" ಎನ್ನುವ ಸ್ಥಾನ, ಪ್ರಾಪಂಚಿಕ ಒಡವೆಗಳಲ್ಲಿ "ನನ್ನದು" ಎನ್ನುವ ಭಾವ ದೂರವಾಗಿರುವುದರಿಂದ ಆತ್ಮವಿಲ್ಲದವನೂ ಆಶ್ರಯರಹಿತನೂ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಮಾತಾ ನ ಪಿತಾ ನ ದೇವಾ ನ ಲೋಕಾ:
ನ ವೇದಾ ನ ಯಜ್ಞಾ ನ ತೀರ್ಥಂ ಬ್ರುವಂತಿ |
ಸುಷುಪ್ತೌ ನಿರಪಾಸ್ತತಿಶೂನ್ಯಾತ್ಮಕತ್ವಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೩||
ಭಾವಾರ್ಥ:-ಅಪ್ಪ,ಅಮ್ಮ,ದೇವತೆಯರು,ಲೋಕಂಗಳು,ವೇದಗಳು, ಯಜ್ಞಾದಿಗಳು, ತೀರ್ಥಾದಿಗಳಾವುದೂ ನನಗಿಲ್ಲವೆಂದು ವಿದ್ವಾಂಸರು ಹೇಳುತ್ತಾರೆ.ನಿದ್ರಾ ಸಮಯದಲ್ಲಿ ಅನ್ಯ ವಸ್ತುಗಳ ಅರಿವಿಲ್ಲದೆ ಅತ್ಯಂತ ಪೊಳ್ಳು ಸ್ವರೂಪದವನಾಗಿ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಸಾಂಖ್ಯಂ ನ ಶೈವಂ ನ ತತ್ಪಾಂಚರಾತ್ರಂ
ನ ಜೈನಂ ನ ಮೀಮಾಂಸಕಾದೇರ್ಮತಂ ವಾ |
ವಿಶಿಷ್ಟಾನುಭೂತ್ಯಾ ವಿಶಿದ್ಧಾತ್ಮಕತ್ವಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೪||
ಭಾವಾರ್ಥ:-ನನಗೆ ಕಪಿಲ ಮಹರ್ಷಿ ಬರೆದ ಸಾಂಖ್ಯ ಶಾಸ್ತ್ರವಾಗಲೀ, ಶೈವ ಪಂಥವಾಗಲೀ, ಪಾಂಚರಾತ್ರಾದಿ ಆಗಮಸಿದ್ಧಾಂತವಾಗಲೀ, ಜೈನ ಮತವಾಗಲೀ, ಷಡ್ದರ್ಶನ ಶಾಸ್ತ್ರಗಳಾಗಲೀ ಯಾವುವೂ ಇಲ್ಲ. ಮಹತ್ತರವಾದ ಅನುಭವದಿಂದ ಪವಿತ್ರಾತ್ಮ ಪುನೀತನಾಗಿರುವುದಲ್ಲದೆ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಚೋರ್ಧ್ವಂ ನ ಚಾಧೋ, ನ ಚಾಂತರ್ನ ಬಾಹ್ಯಂ
ನ ಮಧ್ಯಂ ನ ತಿರ್ಯಙ್ ನ ಪೂರ್ವಾ ಪರಾದಿಕ್ |
ವಿಯದ್ವಾಪಕತ್ವಾದಖಂಡೈಕ ರೂಪ:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೫||
ಭಾವಾರ್ಥ:-ಮೇಲೆ,ಕೆಳಗೆ,ಒಳಹೊರಗೆ,ಮಧ್ಯ,ಅಡ್ಡ,ಮುಂದೆ, ಹಿಂದೆ ಈ ವಿಧವಾದ ಅಷ್ಟ ದಿಸೆಗಳ ವಿಭಾಗ ನನಗಿಲ್ಲ.ನಾನು ಅಕಾಶದಂತೆ ವಿಶಾಲ ವ್ಯಾಪಕನೂ,ತುಂಡಾಗದ ಏಕೈಕರೂಪಿಯಾಗಿ ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಶುಕ್ಲಂ ನ ಕೃಷ್ಣಂ ನ ರಕ್ತಂ ನ ಪೀತಮ್
ನ ಕುಬ್ಜಂ ನ ಪೀನಂ ನ ಹೃಸ್ವಂ ನ ಧೀರ್ಘಂ |
ಅರೂಪಂ ತಥಾ ಜ್ಯೋತಿರಾಕಾರಕತ್ವಾತ್
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೬||
ಭಾವಾರ್ಥ:-ನಾನು ಶ್ವೇತ ವರ್ಣೀಯನಲ್ಲ.ಅಂತೆಯೇ ಕರಿ ವರ್ಣದವನೂ ಅಲ್ಲ.ರಕ್ತ ವರ್ಣನೂ ಅಲ್ಲ.ಅರಸಿನ ಬಣ್ಣವೂ ನನಗಿಲ್ಲ.ನಾನು ಕುಳ್ಳನೂ ಅಲ್ಲ.ಸ್ಥೂಲದೇಹನೂ ಅಲ್ಲ.ಗಿಡ್ಡಗಿರುವವನೂ ಅಲ್ಲ.ಎತ್ತರಕ್ಕೆ ಬೆಳೆದ ಶರೀರಿಯೂ ಅಲ್ಲ.ಪವಿತ್ರವಾಗಿರುವ ಶುದ್ಧಾತ್ಮವೇ ನನ್ನ ಗುರುತಾಗಿರುವುದರಿಂದ ನಾನು ಆಕಾರರಹಿತನಾಗಿದ್ದು ಉಳಿದ ಕುರುಹುಗಳೂ ಆಗಿರುವ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಶಾಸ್ತಾ ನ ಶಾಸ್ತ್ರಂ ನ ಶಿಷ್ಯೋ ನ ಶಿಕ್ಷಾ
ನ ಚ ತ್ವಂ ನ ಚಾಹಂ ನ ಚಾಯಂ ಪ್ರಪಂಚ: |
ಸ್ವರೂಪವಾಭೋಧೋ ವಿಕಲ್ಪಾಸಹಿಷ್ಣು:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೭||
ಭಾವಾರ್ಥ:-ನನಗೆ ಕಲಿಸುವ ಗುರುವಿಲ್ಲ. ನಾನು ಶಾಸ್ತ್ರವಲ್ಲ. ನನಗೆ ಶಿಷ್ಯನೂ ಇಲ್ಲ. ನಾನು ಗುರುವೂ ಅಲ್ಲ.ನನಗೆ "ನೀನು-ನಾನು" ಎಂಬುದಿಲ್ಲ. ಮಾಯಾಮಯವಾಗಿರುವ ಈ ಬ್ರಹ್ಮಾಂಡವು ನನಗಿರುವುದಿಲ್ಲ. ಆಕಾರ, ತಿಳುವಳಿಕೆ, ಹೆಸರುಬಣ್ಣಾದಿ ವಿಕಲ್ಪಗಳನ್ನು ನಾನು ಅನುಭವಿಸುವವನಲ್ಲ.ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಜಾಗ್ರನ್ನ ಮೇ ಸ್ವಪ್ನಕೋ ವಾ ಸುಷುಪ್ತಿ:
ನ ವಿಶ್ವೋ ನ ವಾ ತೈಜಸ: ಪ್ರಾಜ್ಞಕೋ ವಾ |
ಅವಿದ್ಯಾತ್ಮಕತ್ವಾತ್ ತ್ರಯಾಣಾಮ್ ತುರೀಯ:
ತದೇಕೋsವಶಿಷ್ಟ: ಶಿವ: ಕೇವಲೋsಹಮ್ ||೮||
ಭಾವಾರ್ಥ:-ನನಗೆ ಜಾಗ್ರತ್,ಸ್ವಪ್ನ,ಸುಷುಪ್ತಿಗಳ ಲೇಪವಿಲ್ಲ. ಜೀವ, ಪರಾಕ್ರಮ, ಬುದ್ಧಿಗಳೆನ್ನುವ ನಾಮಗಳಿಂದ ಗುರುತಿಸಲ್ಪಡುವ ಮಾಯಾಮಯಾತ್ಮಕನಾದ ಆತ್ಮನೂ ನಾನಲ್ಲ. ನಾನು ಈ ಮೂರೂ ಅವಸ್ಥೆಗಳನ್ನು ಮೀರಿ ಇರುವ ಶಿವಜೀವೈಕ್ಯನು. ಆದುದರಿಂದ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ಅಪಿ ವ್ಯಾಪಕತ್ವಾದಿತತ್ವಾತ್ಪ್ರಯೋಗಾತ್
ಸ್ವತ: ಸಿದ್ಧಭಾವಾದನನ್ಯಾಶ್ರಯತ್ವಾತ್ |
ಜಗತ್ತುಚ್ಛಮೇತತ್ಸಮಸ್ತಂ ತದನ್ಯತ್
ತದೇಕೋ??ವಶಿಷ್ಟ: ಶಿವ: ಕೇವಲೋsಹಮ್ ||೯||
ಭಾವಾರ್ಥ:-ಬ್ರಹ್ಮಾಂಡದಲ್ಲಿ ಪರಮಾತ್ಮನಲ್ಲಿರುವ ವ್ಯಾಪಕತೆಯೇ ಆದಿಯಾದ ಧರ್ಮ ಸಂಬಂಧವು ಇರದಿರುವುದರಿಂದಲೂ ದೇವಾಧಿದೇವತ್ವವು ಸ್ವತ:ಸಿದ್ಧವಾಗಿರುವುದರಿಂದಲೂ,ಹಾಗೂ ಬೇರೆಯಲ್ಲದ ಶರಣಾಗತಿ ಸ್ಥಾನವಾದುದರಿಂದಲೂ ಈ ಪೂರ್ಣ ಬ್ರಹ್ಮಾಂಡವು ಹೀನವಾದುದಾಗಿದೆ. ಆದುದರಿಂದ ಕೈವಲ್ಯದಾಯಕನಾಗಿರುವ ಶಿವನೇ ನಾನಾಗಿರುವೆ.
ನ ಚೈಕಂ ತದನ್ಯದ್ದ್ವಿತೀಯಂ ಕುತ: ಸ್ಯಾತ್
ನ ಕೇವಲತ್ವಂ ನ ಚಾ ಕೇವಲತ್ವಮ್ |
ನ ಶೂನ್ಯಂ ಚ ಶೂನ್ಯಮದ್ವೈಕತ್ವಾತ್
ಕಥ ಸರ್ವವೇದಾಂತಸಿದ್ಧಂ ಬ್ರವೀಮಿ ||೧೦||
ಭಾವಾರ್ಥ:-ಶ್ರೇಷ್ಠವಾಗಿರುವ ಬ್ರಹ್ಮಜ್ಞಾನವನ್ನು "ಏಕಮಾತ್ರಾ" ಎಂದು ಹೇಳಲಾಗದು. ಏಕೆಂದರೆ ಅದಲ್ಲದ ಮತ್ತೊಂದು ಎರಡನೆಯದಿಲ್ಲ.ಇದಕ್ಕೆ ಪವಿತ್ರತೆಯಾಗಲೀ ಅಪವಿತ್ರತೆಯಾಗಲೀ ಇಲ್ಲ. ಇದು ಜೊಳ್ಳೂ ಅಲ್ಲ. ಜೀವಾತ್ಮ-ಪರಮಾತ್ಮ ಬೇರೆ ಬೇರೆಯಲ್ಲ ಎಂಬ ಅದ್ವೈತವಾದುದಾಗಿದೆ. ಹೀಗಿರುವಾಗ ಸಮಸ್ತ ವೇದೋಪನಿಷತ್ತುಗಳಿಂದ ಪ್ರತಿಪಾದಿಸಲ್ಪಟ್ಟಿರುವ ಬ್ರಹ್ಮವನ್ನು ಯಾವ ರೀತಿಯಾಗಿ ವರ್ಣಿಸಲು ಸಾಧ್ಯ?
*********************************************************************
|| ಇತಿ ದಶಶ್ಲೋಕೀ || || ಈ ರೀತಿಯಾಗಿ ದಶಶ್ಲೋಕಿ ಸ್ತುತಿಗಳ ಭಾವಾರ್ಥವಾಗಿದೆ ||
*********************************************************************
-೧೫-
No comments:
Post a Comment