Thursday, 30 January 2014

ಸ್ತೋತ್ರ ಮಂದಾರ

           ಶ್ರೀ ಮಹಾವಿಷ್ಣು ಸ್ತೋತ್ರಗಳು
           **********************        
                     -೧-
 || ಶ್ರೀ ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್ ||
 *********************************
 ಅರ್ಜುನ ಉವಾಚ:-

ಕಿಂ ನು ನಾಮ ಸಹಸ್ರಾಣಿ ಜಪಂತೆ ಚ ಪುನ: ಪುನ: |
ಯಾನಿ ನಾಮಾನಿ ದಿವ್ಯಾನಿ ತಾನಿ ಚಾಸ್ಸ್ಚಕ್ಷ್ವ ಕೇಶವ ||೧||

ಭಾವಾರ್ಥ:-ಅರ್ಜುನನು ಕೇಳುವನು: ಕೇಶವಾ! ಮನುಜರು ಒಂದೇ ತೆರನಾಗಿ ನಿನ್ನ ಒಂದು ಸಾವಿರ ನಾಮಗಳನ್ನು ಯಾಕಾಗಿ ಪುನ: ಪುನ: ಜಪಿಸುತ್ತಾರೆ? ನಿನ್ನ ಆ ದಿವ್ಯ ನಾಮಗಳ ಬಗ್ಗೆ ವಿವರಿಸಿ ಹೇಳುವಂತವನಾಗು.

ಭಗವಾನುವಾಚ:-

ಮತ್ಸ್ಯಂ ಕೂರ್ಮಂ ವರಾಹಂ ಚ ವಾಮನಂ ಚ ಜನಾರ್ದನಮ್ |
ಗೋವಿಂದಂ ಪುಂಡರೀಕಾಕ್ಷಂ ಮಾಧವಂ ಮಧುಸೂದನಮ್ ||೨||

ಭಾವಾರ್ಥ:-ಭಗವಂತನು ಹೇಳುತ್ತಾನೆ: ಅರ್ಜುನಾ; ಮತ್ಸ್ಯ,ಕೂರ್ಮ; ವರಾಹ,ವಾಮನ, ಜನಾರ್ದನ,ಗೋವಿಂದ,ಪುಂಡರೀಕಾಕ್ಷ,ಮಾಧವ,ಮಧುಸೂದನ-----

ಪದ್ಮನಾಭಂ ಸಹಸ್ರಾಕ್ಷಂ ವನಮಾಲಿಂ ಹಲಾಯುಧಮ್ |
ಗೋವರ್ಧನಂ ಹೃಷೀಕೇಶಂ ವೈಕುಂಠಂ ಪುರುಷೋತ್ತಮ್ ||೩||

ಭಾವಾರ್ಥ:-ಪದ್ಮನಾಭ, ಸಹಸ್ರಾಕ್ಷ, ವನಮಾಲಿ, ಹಲಾಯುಧ, ಗೋವರ್ಧನ, ಹೃಷೀಕೇಶ, ವೈಕುಂಠ, ಪುರುಷೋತ್ತಮ-----------

ವಿಶ್ವರೂಪಂ ವಾಸುದೇವಂ ರಾಮಂ ನಾರಾಯಣಂ ಹರಿಮ್ |
ದಾಮೋದರಂ ಶ್ರೀಧರಂ ಚ ವೇದಾಂಗಂ ಗರುಢಧ್ವಜಮ್ ||೪||

ಭಾವಾರ್ಥ:-ವಿಶ್ವರೂಪ, ವಾಸುದೇವ, ರಾಮ, ನಾರಾಯಣ, ಹರಿ, ದಾಮೋದರ, ಶ್ರೀಧರ, ವೇದಾಂಗ, ಗರುಢಧ್ವಜ---------- 

ಅನಂತಂ ಕೃಷ್ಣಗೋಪಾಲಂ ಜಪತೋ ನಾಸ್ತಿ ಪಾತಕಮ್ |
ಗವಾಂ ಕೋಟಿಪ್ರದಾನಸ್ಯ ಅಶ್ವಮೇಧಶತಸ್ಯ ಚ ||೫||

ಭಾವಾರ್ಥ:-ಅನಂತ, ಕೃಷ್ಣಗೋಪಾಲ ಎಂಬೀ ಇಪ್ಪತ್ತೆಂಟು ನಾಮಗಳನ್ನು ಜಪಿಸುವಂತಹವನ ಪಾಪಗಳೆಲ್ಲಾ ನಶಿಸಿ ಹೋಗುತ್ತವೆ. ಆತನಿಗೆ ಒಂದು ಕೋಟಿ ಗೋದಾನ, ಒಂದು ನೂರು ಅಶ್ವಮೇಧ ಯಾಗ ಮಾಡಿದರೆ ದೊರಕುವ ಫಲವು ಲಭಿಸುತ್ತದೆ. 

ಕನ್ಯಾದಾನ ಸಹಸ್ರಾಣಾಂ ಫಲ ಪ್ರಾಪ್ನೋತಿ ಮಾನವಾ: |
ಅಮಾಯಾಂ ವಾ ಪೌರ್ಣಿಮಾಸ್ಯಾಮೇಕಾದಶ್ಯಾಂ ತಥೈವ ಚ ||೬||

ಭಾವಾರ್ಥ:-ಮತ್ತು ಒಂದು ಸಾವಿರ ಕನ್ಯಾದಾನ ಮಾಡಿದ ಫಲವು ಮಾನುಜರಿಗೆ ದೊರಕುವುದು.ಅಮವಾಸ್ಯೆ,ಹುಣ್ಣಿಮೆ,ಮತ್ತು ಏಕಾದಶಿಗಳಂದು ಮತ್ತು ಅದೇರೀತಿ---------

ಸಂಧ್ಯಾಕಾಲೇ ಸ್ಮರೇನ್ನಿತ್ಯಂ ಪ್ರಾತ:ಕಾಲೇ ತಥೈವ ಚ |
ಮಧ್ಯಾಹ್ನೇ ಚ ಜಪೇನ್ನಿತ್ಯಂ ಸರ್ಪಪಾಪೈ: ಪ್ರಮುಚ್ಯತೇ ||೭||

ಭಾವಾರ್ಥ:-ಪ್ರತಿದಿನ ಸಾಯಂಕಾಲ,ಮುಂಜಾನೆ,ಮತ್ತು ಮದ್ಯಾಹ್ನದ ಸಮಯಗಳಲ್ಲಿ ಈ ನಾಮಗಳನ್ನು ಜಪಿಸುವ ಮಾನವರು ಸಮಸ್ತ ಪಾಪಗಳಿಂದ ವಿಮುಕ್ತರಾಗುತ್ತಾರೆ.
*********************************************************************************
             ||ಇತಿ ಶ್ರೀ ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್ || 
          ||ಈ ರೀತಿಯಾಗಿ ಶ್ರೀ ವಿಷ್ಣುವಿನ ಇಪ್ಪತ್ತೆಂಟು ನಾಮಗಳು ||
+++++++++++++++++++++++++++++++++++++++++++++++++++++++++++++++++++++++++++                     -೨-

  || ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್ ||
  ***********************************
ಔಷಧೇ ಚಿಂತಯೇದ್ವಿಷ್ಣುಂ ಭೋಜನೇಚ ಜನಾರ್ಧನಮ್ |
ಶಯನೇ ಪದ್ಮನಾಭಂಚ ವಿವಾಹೇ ಚ ಪ್ರಜಾಪತಿಮ್  ||೧||

ಭಾವಾರ್ಥ:- ಔಷಧಿಯನ್ನು ಸ್ವೀಕರಿಸುವ ಕಾಲದಲ್ಲಿ ವಿಷ್ಣುವನ್ನು, ಆಹಾರವನ್ನು ಸ್ವೀಕರಿಸುವಾಗ ಜನಾರ್ಧನನನ್ನು,ಮಲಗುವ ಸಮಯದಲ್ಲಿ ಪದ್ಮನಾಭನನ್ನು, ವಿವಾಹದ ಸಮಯದಲ್ಲಿ ಪ್ರಜಾಪತಿಯನ್ನು ಸ್ಮರಿಸಬೇಕು.

ಯುದ್ಧೇ ಚಕ್ರಧರಂದೇವಂ ಪ್ರವಾಸೇ ಚ ತ್ರಿವಿಕ್ರಮಮ್ |
ನಾರಾಯಣಂ ತನು ತ್ಯಾಗೇ ಶ್ರೀಧರಂ ಪ್ರಿಯಸಂಗಮೇ  ||೨||

ಭಾವಾರ್ಥ:-ಯುದ್ಧ ಕಾಲದಲ್ಲಿ ಚಕ್ರಧರ ದೇವನನ್ನು,ಪ್ರವಾಸ ಸಮಯದಲ್ಲಿ ತ್ರಿವಿಕ್ರಮನನ್ನು, ಶರೀರ ತ್ಯಾಗ ಮಾಡುವಾಗ ನಾರಾಯಣನನ್ನು, ಪ್ರೀತಿಯ ವ್ಯಕ್ತಿಗಳು ಸೇರುವಾಗ ಶ್ರೀಧರನನ್ನು ಸ್ಮರಿಸಬೇಕು.

ದು:ಸ್ವಪ್ನೇ ಸ್ಮರ ಗೋವಿಂದಂ ಸಂಕಟೇ ಮಧುಸೂಧನಮ್ |
ಕಾನನೇ ನಾರಸಿಂಹಂ ಚ ಪಾವಕೇ ಜಲಶಾಯಿನಮ್  ||೩||

ಭಾವಾರ್ಥ:-ಘೋರ ಕನಸ್ಸುಗಳನ್ನು ಕಂಡಾಗ ಗೋವಿಂದನನ್ನು,ಸಂಕಷ್ಟದ ಸಮಯದಲ್ಲಿ ಮಧುಸೂಧನನನ್ನು,ಘೋರಾರಣ್ಯದಲ್ಲಿ ನಾರಸಿಂಹನನ್ನು, ಅಗ್ನಿ ದುರಿತದಲ್ಲಿ ಜಲಶಾಯಿಯನ್ನು ಸ್ಮರಿಸಬೇಕು.

ಜಲಮಧ್ಯೇ ವರಾಹಂ ಚ ಪರ್ವತೇ ರಘುನಂದನಮ್ |
ಗಮನೇ ವಾಮನಂ ಚೈವ ಸರ್ವ ಕಾರ್ಯೇಷು ಮಾಧವಮ್  ||೪||

ಭಾವಾರ್ಥ:-ನೀರಿನ ನಡುವೆ ಸಿಲುಕಿದಾಗ ವರಾಹರೂಪಿಯನ್ನು, ಪರ್ವತ ಪ್ರದೇಶದಲ್ಲಿ ರಘುನಂದನನನ್ನು, ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ವಾಮನನನ್ನು, ಮತ್ತು ಸಮಸ್ತ ಕಾರ್ಯಗಳಲ್ಲಿ ಮಾಧವನನ್ನು ಸ್ಮರಿಸಬೇಕು.

ಷೋಡಶೈತಾನಿ ನಾಮಾನಿ ಪ್ರಾತರುತ್ತಾಯ ಯ: ಪಠೇತ್ |
ಸರ್ವ ಪಾಪವಿನಿರ್ಮುಕ್ತೋ ವಿಷ್ಣು ಲೋಕೇ ಮಹೀಯತೇ  ||೫||

ಭಾವಾರ್ಥ:-ಉಷ: ಕಾಲದೊಳೆದ್ದು ಈ ಹದಿನಾರು ನಾಮಗಳನ್ನು ಯಾರು ಪಠಿಸುವರೋ ಅವರು ತಮ್ಮ ಎಲ್ಲ ಪಾಪಗಳಿಂದ ವಿಮುಕ್ತಿ ಹೊಂದಿ ವಿಷ್ಣು ಲೋಕದಲ್ಲಿ ಉನ್ನತ ಪದವಿಯನ್ನು ಹೊಂದುವರು.ಈ ಭುವಿಯಲಿ ಇರುವಷ್ಟು ಸಮಯ ಸುಖ-ಶಾಂತಿಯನ್ನು ಅನುಭವಿಸುವರು.
*********************************************************************************                                         
          ||ಇತಿ ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್||
        ||ಈ ರೀತಿಯಾಗಿ ಶ್ರೀ ವಿಷ್ಣುವಿನ ಹದಿನಾರು ನಾಮಗಳು ||
*********************************************************************************
                                       -೩-

   || ಸಂಕಷ್ಟನಾಶನ ವಿಷ್ಣು ಸ್ತೋತ್ರಮ್  ||
**********************************
ಶ್ರೀ ಗಣೇಶಾಯ ನಮ:| 
ನಾರದ ಉವಾಚ:-

ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: |
ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು:  ||೧||

ಭಾವಾರ್ಥ:-ನಾರದರು ಹೇಳಿದರು:-
ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ  ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು  ಪ್ರಾರಂಬಿಸಿದರು.

ದೇವಾ ಊಚು:-
ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ  ಕಾರ್ಯೋದ್ಯತಾಯಾರ್ತಿಹಂತ್ರೇ |
ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ  ತೇಸ್ತು ||೨||

ಭಾವಾರ್ಥ:-ದೇವತೆಗಳು ಹೇಳುವರು:-
ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ  ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ  ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ  ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ  ನಿನಗೆ ಪ್ರಣಾಮಗಳು.

ರಮಾವಲ್ಲಭಾಯಾಸ್ಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ  ಪೀತಾಂಬರಾಯ |
ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ:  ಸ್ಮೋ ನತಾ ಸ್ಮ: ||೩||

ಭಾವಾರ್ಥ:-ರಮಾವಲ್ಲಭನಿಗೆ,ಅಸುರ  ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ  ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು  ನಮಸ್ಕರಿಸುವೆವು.

ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ  ವಿಷ್ಣವೇ ತೇ |
ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ:  ಸ್ಮೋ ನತಾ ಸ್ಮ: ||೪||

ಭಾವಾರ್ಥ:-ದೈತ್ಯರ ಉಪಟಳದಿಂದ ಕ್ಷೋಭೆಗೊಳಗಾದ,ಮರ್ತ್ಯರ  ದು:ಖವೆಂಬ ಅತ್ಯುನ್ನತಪ್ರದೇಶವನ್ನು ನಾಶಗೊಳಿಸುವ,ಗರ್ವಗಳಿಗೆ  ಲಯಕಾರಿಯಾಗಿರುವ  ವಿಷ್ಣುವೇ;ಶೇಷಶಾಯಿಯೇ;ಸೂರ್ಯ-ಚಂದ್ರರನ್ನು ಕಣ್ಣುಗಳನ್ನಾಗಿ  ಮಾಡಿಕೊಂಡಿರುವವನೇ ನಿನಗೆ ನಮಸ್ಕರಿಸುವೆವು.
*********************************************************************************                    || ಇತಿ ಸಂಕಷ್ಟನಾಶನ ವಿಷ್ಣುಸ್ತೋತ್ರಮ್ ||  
              || ಈ ರೀತಿಯಾಗಿ ಸಂಕಷ್ಟ ನಾಶನ ವಿಷ್ಣುಸ್ತೋತ್ರಗಳ  ಭಾವಾರ್ಥವು ||
*********************************************************************************
                                          -೪-
            || ಶ್ರೀ ವಿಷ್ಣು ಶತನಾಮಸ್ತೋತ್ರಮ್ ||
          *******************************
ನಾರದ ಉವಾಚ:-
ಓಂ ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ |
ಜನಾರ್ಧನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಢ ಧ್ವಜಮ್  ||೧||

ಭಾವಾರ್ಥ:- ನಾರದರು ಹೇಳಿದ್ದು:-
ವಾಸುದೇವ,ಹೃಷೀಕೇಶ,ವಾಮನ,ಜಲಧಿಶಯನ,ಜನಾರ್ಧನ,ಹರಿ,ಕೃಷ್ಣ,ಶ್ರೀವಕ್ಷ,ಗರುಢಧ್ವಜ......

ವಾರಾಹಂ ಪುಂಡರೀಕಾಕ್ಷಂ ನೃಸಿಂಹಂ ನರಕಾಂತಕಮ್ |
ಅವ್ಯಕ್ತಂ ಶಾಶ್ವತಂ ವಿಷ್ಣುಮನಂತಮಜಮವ್ಯಯಮ್  ||೨||

ಭಾವಾರ್ಥ:-ವಾರಾಹ,ಪುಂಡರೀಕಾಕ್ಷ,ನೃಸಿಂಹ,ನರಕಾಂತಕ,ಅವ್ಯಕ್ತ,ಶಾಶ್ವತ,ವಿಷ್ಣು,ಅನಂತ, ಅಜ,ಅವ್ಯಯ..............

ನಾರಾಯಣಂ ಗದಾಧ್ಯಕ್ಷಂ ಗೋವಿಂದಂ,ಕೀರ್ತಿಭಾಜನಮ್ |
ಗೋವರ್ಧನೋದ್ಧರಂ ದೇವಂ ಭೂಧರಂ ಭುವನೇಶ್ವರಮ್  ||೩||

ಭಾವಾರ್ಥ:-ನಾರಾಯಣ,ಗದಾಧ್ಯಕ್ಷ,ಗೋವಿಂದ,ಕೀರ್ತಿಭಾಜನ,ಗೋವರ್ಧನೋದ್ಧಾರಕ ದೇವ,ಭೂಧರ,ಭುವನೇಶ್ವರ.........

ವೇತ್ತಾರಂ,ಯಜ್ಞಪುರುಷಂ ಯಜ್ಞೇಶಂ ಯಜ್ಞವಾಹಕಮ್ |
ಚಕ್ರಪಾಣಿಂ ಗದಾಪಾಣಿಂ ಶಂಖಪಾಣಿಂ ನರೋತ್ತಮಮ್  ||೪||

ಭಾವಾರ್ಥ:-ವೇತ್ತಾರ,ಯಜ್ಞಪುರುಷ,ಯಜ್ಞೇಶ,ಯಜ್ಞವಾಹಕ,ಚಕ್ರಪಾಣಿ,ಗದಾಪಾಣಿ,ಶಂಖಪಾಣಿ,ನರೋತ್ತಮ...........

ವೈಕುಂಠಂ ದುಷ್ಟದಮನಂ ಭೂಗರ್ಭಂ ಪೀತವಾಸಮ್ |
ತ್ರಿವಿಕ್ರಮಂ ತ್ರಿಕಾಲಜ್ಞಂ ತ್ರಿಮೂರ್ತಿಂ ನಂದಿಕೇಶ್ವರಮ್  ||೫||

ಭಾವಾರ್ಥ:-ವೈಕುಂಠ,ದುಷ್ಟದಮನ,ಭೂಗರ್ಭ,ಪೀತಾಂಬರಧಾರಿ,ತ್ರಿವಿಕ್ರಮ,ತ್ರಿಕಾಲಜ್ಞ,ತ್ರಿಮೂರ್ತಿ,ನಂದಿಕೇಶ್ವರ........

ರಾಮಂ ರಾಮಂ ಹಯಗ್ರೀವಂ ಭೀಮಂ ರೌದ್ರಂ ಭವೋದ್ಭವಮ್ |
ಶ್ರೀಪತಿಂ ಶ್ರೀಧರಂ ಶ್ರೀಶಂ ಮಂಗಲಂ ಮಂಗಲಾಯುಧಮ್  ||೬||

ಭಾವಾರ್ಥ:-ರಾಮ,ಪರಶುರಾಮ,ಹಯಗ್ರೀವ,ಭೀಮ,ರೌದ್ರ,ಭವೋಧ್ಭವ,ಶ್ರೀಪತಿ,ಶ್ರೀಧರ,ಶ್ರೀಶ,ಮಂಗಲ,ಮಂಗಲಾಯುಧ......

ದಾಮೋದರಂ ದಮೋಪೇತಂ ಕೇಶವಂ ಕೇಶಿಸೂದನಮ್ |
ವರೇಣ್ಯಂ ವರದಂ ವಿಷ್ಣುಮಾನಂದಂ ವಸುದೇವಜಮ್  ||೭||

ಭಾವಾರ್ಥ:-ದಾಮೋದರ,ದಮೋಪೇತ,ಕೇಶವ,ಕೇಶಿಸೂದನ,[ಕೇಶಿ  ರಕ್ಕಸನ  ಹರಣಗೈದವ],ವರೇಣ್ಯ,ವರದ,ವಿಷ್ಣು,ಆನಂದ,ವಸುದೇವಜ[ವಸುದೇವ  ತನಯ]...........

ಹಿರಣ್ಯರೇತಸಂ ದೀಪ್ತಂ ಪುರಾಣಂ ಪುರುಷೋತ್ತಮಮ್ |
ಸಕಲಂ ನಿಷ್ಕಲಂ ಶುದ್ಧಂ ನಿರ್ಗುಣಂ ಗುಣಶಾಶ್ವತಮ್  ||೮||

ಭಾವಾರ್ಥ:-ಹಿರಣ್ಯರೇತ,ದೀಪ್ತ,ಪುರಾಣ,ಪುರುಷೋತ್ತಮ,ಸಕಲಕಲಾ ನಿಧಿ, ನಿಷ್ಕಲ,ಶುದ್ಧ,ನಿರ್ಗುಣ,ಶಾಶ್ವತ.........

ಹಿರಣ್ಯತನುಸಂಕಾಶಂ ಸೂರ್ಯಾಯುತಸಮಪ್ರಭಮ್ |
ಮೇಘಶ್ಯಾಮಂ ಚತುರ್ಬಾಹುಂ ಕುಷಲಂ ಕಮಲೇಕ್ಷಣಮ್  ||೯||

ಭಾವಾರ್ಥ:ಹಿರಣ್ಮಯಿ,ಸೂರ್ಯಾಯುತಸಮಪ್ರಭ,ಮೇಘಶ್ಯಾಮ,ಚತುರ್ಬಾಹು,ಕುಶಲ, ಕಮಲನಯನ........

ಜ್ಯೋತಿರೂಪಮರೂಪಂ ಚ ಸ್ವರೂಪಂ ರೂಪಸಂಸ್ಥಿತಮ್ |
ಸರ್ವಜ್ಞಂ ಸರ್ವರೂಪಸ್ಥಂ ಸರ್ವೇಶಂ ಸರ್ವತೋ ಮುಖಮ್  ||೧೦||

ಭಾವಾರ್ಥ:-ಜ್ಯೋತಿರೂಪ,ಅರೂಪ,ಸ್ವರೂಪ,ರೂಪಸಂಸ್ಥಿತ,ಸರ್ವಜ್ಞ,ಸರ್ವರೂಪಸ್ಥ, ಸರ್ವೇಶ,ಸರ್ವತೋಮುಖ ............

ಜ್ಞಾನಂ ಕೂಟಸ್ಥಮಚಲಂ ಜ್ಞಾನದಂ ಪರಮಂ ಪ್ರಭುಮ್ |
ಯೋಗೀಶಂ ಯೋಗನಿಷ್ಣಾತಂ ಯೋಗಿನಂ ಯೋಗರೂಪಿಣಮ್  ||೧೧||

ಭಾವಾರ್ಥ:-ಜ್ಞಾನ,ಕೂಟಸ್ಥ,ಅಚಲ,ಜ್ಞಾನದ,ಪರಮಪ್ರಭು,ಯೋಗೀಶ,ಯೋಗನಿಷ್ಣಾತ, ಯೋಗಿ,ಯೋಗರೂಪಿ ....................

ಈಶ್ವರಂ ಸರ್ವಭೂತಾನಂ ವಂದೇ ಭೂತಮಯಂ ಪ್ರಭುಮ್ |
ಇತಿ ನಾಮಶತಂ ದಿವ್ಯಂ ವೈಷ್ಣವಂ ಖಲು ಪಾಪಹಮ್  ||೧೨||

ಭಾವಾರ್ಥ:-ಈಶ್ವರ,ಸರ್ವಭೂತ,ಭೂತಮಯ,ಪ್ರಭು ಎನ್ನುವ ಈ  ನಾಮಶತವು ಶತನಾಮಗಳ ಸ್ತೋತ್ರವಾಗಿ ದಿವ್ಯವಾಗಿದ್ದು,ವಿಷ್ಣು  ಸಂಬಂಧ ಹೊಂದಿದ್ದು ಖಚಿತವಾಗಿ ಸರ್ವಪಾಪ ಪರಿಹಾರಕವಾಗಿದೆ.

ವ್ಯಾಸೇನ ಕಥಿತಂ ಪೂರ್ವಂ ಸರ್ವಪಾಪಪ್ರಣಾಶನಮ್ |
ಯ: ಪಠೇತ್ಪ್ರಾತರುತ್ಥಾಯ ಸ ಭವೇದ್ವೈಷ್ಣವೋ ನರ:  ||೧೩||

ಭಾವಾರ್ಥ:-ಈ ಹಿಂದೆ ವ್ಯಾಸರಿಂದ ಹೇಳಲಾಗಿರುವ ಸಮಸ್ತ ಬಗೆಯ  ಪಾಪಗಳನ್ನು ನಾಶಗೊಳಿಸುವ ಈ ಸ್ತೋತ್ರವನ್ನು ಮುಂಜಾನೆ ಎದ್ದು  ಯಾವ ಮನುಜರು ಪಠಿಸುತ್ತಾರೋ ಅವರು ವಿಷ್ಣುವಿನ  ನಿಜಭಕ್ತರೆನಿಸುವರು.

ಸರ್ವಪಾಪ ವಿಶುದ್ಧಾತ್ಮಾ ವಿಷ್ಣುಸಾಯುಜ್ಯಮಾಪ್ನುಯಾತ್ |
ಚಾಂದ್ರಾಯಣ ಸಹಸ್ರಾಣಿ ಕನ್ಯಾದಾನಶತಾನಿ ಚ  ||೧೪||

ಭಾವಾರ್ಥ:-ಯಾವಾತನು ಈ ಸ್ತೋತ್ರವನ್ನು ಶ್ರದ್ಧೆಯಿಂದ,  ಭಕ್ತಿಯಿಂದ,ಅನುದಿನವೂ ಪಾರಾಯಣ ಮಾಡುವನೋ,ಆ ಮನುಷ್ಯನು  ಸಮಸ್ತಪಾಪಗಳಿಂದ ವಿಮುಕ್ತನಾಗಿ ವಿಷ್ಣು ಸಾಯುಜ್ಯವನ್ನು  ಪಡೆಯುವನು.ಅಲ್ಲದೆ  ಆತನು ಒಂದು ನೂರು ಕನ್ಯಾದಾನ,ಒಂದು ಸಾವಿರ  ಚಾಂದ್ರಾಯಣ ವ್ರತಗಳನ್ನು .....

ಗವಾಂ ಲಕ್ಷಸಹಸ್ರಾಣಿ ಮುಕ್ತಿಭಾಗೀ ಭವೇನ್ನರ: |
ಅಶ್ವಮೇಧಾಯುತಂ ಪುಣ್ಯಂ ಫಲಂ ಪ್ರಾಪ್ನೋತಿ ಮಾನವ:  ||೧೫||

ಭಾವಾರ್ಥ:-...ಹಾಗೆಯೇ ಸಹಸ್ರಲಕ್ಷ ಗೋದಾನಗಳ,ಮತ್ತು ಸಹಸ್ರ  ಅಶ್ವಮೇಧ ಯಜ್ಞಗಳನ್ನು ಮಾಡಿದ ಪುಣ್ಯಫಲವನ್ನು  ಹೊಂದುವುದರ ಮೂಲಕ ಮೋಕ್ಷವನ್ನು ಪಡೆಯುವನು.
********************************************************************* 
                       || ಇತಿ ಶ್ರೀವಿಷ್ಣು ಶತನಾಮ ಸ್ತೋತ್ರಮ್ ||
           || ಈ ರೀತಿಯಾಗಿ ಶ್ರೀವಿಷ್ಣು ಶತನಾಮ ಸ್ತೋತ್ರಗಳ  ಭಾವಾರ್ಥವು ||
********************************************************************* 
                            -೫-
  || ಶ್ರೀ ಅಚ್ಯುತಾಷ್ಟಕಮ್ ||
 *********************
 || ಶ್ರೀಗಣೇಶಾಯ ನಮ: ||

ಅಚ್ಯುತಂ ಕೇಶವಂ ವಿಷ್ಣುಂ ಹರಿಂ ಸತ್ಯಂ ಜನಾರ್ದನಮ್ |

ಹಂಸಂ ನಾರಾಯಣಂ ಚೈವಮೇತನ್ನಾಮಾಷ್ಟಕಂ ಪಠೇತ್ ||೧||

ಭಾವಾರ್ಥ: ಅಚ್ಯುತ,ಕೇಶವ,ವಿಷ್ಣು,ಹರಿ,ಸತ್ಯ,ಜನಾರ್ದನ,ಹಂಸ,ಹಾಗೂ ನಾರಾಯಣ ಎಂಬ ಎಂಟು ನಾಮಗಳನ್ನು ಪಠಣ ಮಾಡಬೇಕು.


ತ್ರಿಸಂಧ್ಯಂ ಯ: ಪಠೇನ್ನಿತ್ಯಂ ದಾರಿದ್ರ್ಯಂ ತಸ್ಯ ನಶ್ಯತಿ |

ಶತ್ರು ಸೈನ್ಯಂ ಕ್ಷಯಂ ಯಾತಿ ದು:ಸ್ವಪ್ನ: ಸುಸ್ವಪ್ನೋ ಭವೇತ್  ||೨|| 

ಭಾವಾರ್ಥ:-ಈ ಅಷ್ಟಕವನ್ನು ಮೂರು ಸಂಧ್ಯಾಕಾಲಗಳಲ್ಲಿ ಪಠಣ ಮಾಡುವವನ ಬಡತನ ನಾಶವಾಗುವುದು.ಶತ್ರು ಸೈನ್ಯವು ಅಳಿದು ಹೋಗುವುದು. ಕೆಟ್ಟ ಕನಸು ಉತ್ತಮ ಫಲವನ್ನು ಕೊಡುವುದು.


ಗಂಗಾಯಾಂ ಮರಣಂ ಚೈವ ದೃಢಾ ಭಕ್ತಿಸ್ತು ಕೇಶವೆ |

ಬ್ರಹ್ಮ ವಿದ್ಯಾ ಪ್ರಭೋಧಶ್ಚ ತಸ್ಮಾನ್ನಿತ್ಯಂ ಪಠೇನ್ನರ: ||೩||

ಭಾವಾರ್ಥ:-ಗಂಗಾನದೀ ತೀರದಲ್ಲಿ ಮರಣ ಹೊಂದಿದ ಫಲ ಲಭಿಸುವುದು. ಕೇಶವನಲ್ಲಿ ಅಚಲವಾದ ಭಕ್ತಿಯುಂಟಾಗುವುದು. ಬ್ರಹ್ಮ ವಿದ್ಯೆಯ ಜ್ಞಾನವುಂಟಾಗುವುದು. ಆದ್ದರಿಂದ ಇದನ್ನು ಅನುದಿನವೂ ಪಠಿಸಬೇಕು.

*********************************************************************************
  ||ಇತಿ ಶ್ರೀ ಅಚ್ಯುತಾಷ್ಟಕಮ್|| ||ಈ ರೀತಿಯಾಗಿ ಶ್ರೀ ಅಚ್ಯುತಾಷ್ಟಕಗಳ ಭಾವಾರ್ಥವು ||

*********************************************************************************
                                      -೬-
  || ಶ್ರೀ ಹರಿನಾಮಾಷ್ಟಕಮ್  ||
  **********************
   ||ಶ್ರೀಗಣೇಶಾಯ ನಮ:||

ಶ್ರೀ ಕೇಶವಾಚ್ಯುತ ಮುಕುಂದ ರಥಾಂಗಪಾಣೇ |

ಗೋವಿಂದ ಮಾಧವ ಜನಾರ್ದನ ದಾನವಾರೇ ||
ನಾರಾಯಣಾಮರಪತೇ ತ್ರಿಜಗನ್ನಿವಾಸೇ |
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೧||

ಭಾವಾರ್ಥ:-ಶ್ರೀಕೇಶವ,ಅಚ್ಯುತ,ಮುಕುಂದ,ಚಕ್ರಪಾಣಿ,ಗೋವಿಂದ,ಮಾಧವ,ಜನಾರ್ದನ, ದಾನವಾರಿ,ನಾರಾಯಣ,ಅಮರಪತಿ,ತ್ರಿಲೋಕವಾಸಿ,ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು.


ಶ್ರೀದೇವದೇವ ಮಧುಸೂದನ ಶಾರ್ಙಪಾಣೇ |

ದಾಮೋದರಾರ್ಣವನಿಕೇತನ ಕೈಟಭಾರೇ ||
ವಿಶ್ವಂಬರಾಭರಣ ಭೂಷಿತ ಭೂಮಿ ಪಾಲ|
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೨||

ಭಾವಾರ್ಥ:-ಶ್ರೀ ದೇವರದೇವ,ಮಧುವೆಂಬ ದಾನವಾಂತಕ, ಧನುರ್ಧಾರಿ, ದಾಮೋದರ, ಸಾಗರಸಂಬಂಧಿ, ಅನಿಕೇತನ,ಕೈಟಭಾರಿ,ಬ್ರಹ್ಮಾಂಡವನ್ನು ಆವರಿಸಿದವ, ಸರ್ವಾಭರಣ ಭೂಷಿತ, ಭೂಮಿಪಾಲಕ ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು.


ಶ್ರೀಪದ್ಮಲೋಚನ ಗದಾಧರ ಪದ್ಮನಾಭ |

ಪದ್ಮೇಶ,ಪದ್ಮಪಾವನ,ಪದ್ಮಪಾಣೇ ||
ಪೀತಾಂಬರಾಂಬರಾಂಬರರುಚೇ ರುಚಿರಾವತಾರ |
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೩||

ಭಾವಾರ್ಥ:-ಶ್ರೀಪದ್ಮನನಯನ,ಗದಾಧಾರಿ,ಕಮಲನಾಭ,ಕಮಲೇಶ,ಕಮಲಚರಣ,ಪವಿತ್ರ,ಕಮಲಹಸ್ತ, ಪೀತಾಂಬರಧಾರಿ, ಸುಂದರಾವತಾರಿ ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು. .


ಶ್ರೀಕಾಂತ,ಕೌಸ್ತುಭಧರಾರ್ತಿಹರಾಬ್ಜಪಾಣೇ,

ವಿಷ್ಣೋ ತ್ರಿವಿಕ್ರಮ ಮಹೀಧರ ಧರ್ಮಸೇತೋ ||
ವೈಕುಂಠವಾಸ ವಸುಧಾಧಿಪ ವಾಸುದೇವ |
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೪||

ಭಾವಾರ್ಥ:-ಲಕ್ಷ್ಮೀಕಾಂತ,ಕೌಸ್ತುಭಮಾಲಾಧಾರಿ,ಸಂಕಷ್ಟನಾಶನ,ಕಮಲಹಸ್ತ, ವಿಷ್ಣು,ತ್ರಿಲೋಕದೊಡೆಯ,ಬುವಿಯನ್ನು ಧರಿಸಿದವ,ಧರ್ಮಸೇತು,ವೈಕುಂಠವಾಸಿ,ಭೂಪತಿ ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು.


ಶ್ರೀನಾರಸಿಂಹ ನರಕಾಂತಕ ಕಾಂತಮೂರ್ತೇ |

ಲಕ್ಶ್ಮೀಪತೇ ಗರುಡವಾಹನ ಶೇಷಶಾಯಿನ್ ||
ಕೇಶಿಪ್ರಣಾಶನ ಸುಕೇಶ ಕಿರೀಟ ಮೌಲೇ |
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೫||

ಭಾವಾರ್ಥ:-ನರಸಿಂಹ,ನರಕದೊಡೆಯ,ಶ್ರೇಷ್ಠಮೂರ್ತಿ,ಲಕ್ಷ್ಮೀಶ,ಗರುಡವಾಹನ,ಶೇಷಶಾಯಿ,ಕೇಶಿದೈತ್ಯಾರಿ,ಸುಂದರವಾದ ಕೂದಲುಗಳೇ ಕಿರೀಟವಾಗಿರುವವ, ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು.


ಶ್ರೀವತ್ಸಲಾಂಛನ ಸುರರ್ಷಭ ಶಂಖಪಾಣೇ |

ಕಲ್ಪಾಂತವಾರಿಧಿ ವಿಹಾರೇ ಹರೇ ಮುರಾರೇ ||
ಯಜ್ಞೇಶ ಯಜ್ಞಮಯ ಯಜ್ಞಭುಗಾದಿ ದೇವ|
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೬||

ಭಾವಾರ್ಥ:-ಶ್ರೀವತ್ಸವನ್ನು ಲಾಂಛನವಾಗಿಸಿಕೊಂಡವ,ದೇವಶ್ರೇಷ್ಠ,ಶಂಖಪಾಣಿ,ಕಲ್ಪದ ಅಂತ್ಯವೆಂಬ ಸಾಗರದಲ್ಲಿ ವಿಹರಿಸುವವ,ಹರಿ,ಮುರಾರಿ,ಯಜ್ಞೇಶ,ಯಜ್ಞಮಯ,ಯಜ್ಞ ದ್ರವ್ಯಗಳನ್ನು ಸ್ವೀಕರಿಸುವವ,ಆದಿದೇವ ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು. 


ಶ್ರೀರಾಮ ರಾವಣರಿಪೋ ರಘುವಂಶಕೇತೋ |

ಸೀತಾಪತೇ ದಶರಥಾತ್ಮಜ ರಾಜಸಿಂಹ ||
ಸುಗ್ರೀವಮಿತ್ರ ಮೃಗವೇಧನ ಚಾಪಪಾಣೇ |
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೭||

ಭಾವಾರ್ಥ:-ಶ್ರೀರಾಮ,ರಾವಣಾರಿ,ರಘುವಂಶಕಿರಣ,ಸೀತಾಪತಿ,ದಶರಥತನಯ,ರಾಜರುಗಳಲ್ಲಿ ಸಿಂಹಸದೃಶ,ಸುಗ್ರೀವ ಸಖ,ಕಾಂಚನ ಮೃಗವನ್ನು ಕೊಂದವ,ಧನುರ್ಧಾರಿ ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು.


ಶ್ರೀಕೃಷ್ಣ ವೃಷ್ಣಿವರ ಯಾದವ ರಾಧಿಕೇಶ |

ಗೋವರ್ಧನೋದ್ಧರಣ ಕಂಸ ವಿನಾಶ ಶೌರೇ ||
ಗೋಪಾಲ ವೇಣುಧರ,ಪಾಂಡುಸುತೈಕ ಬಂಧೋ |
ಜಿಹ್ವೇ ಜಪೇತಿ ಸತತಂ ಮಧುರಾಕ್ಷರಾಣಿ ||೮|| 

ಭಾವಾರ್ಥ:-ಶ್ರೀಕೃಷ್ಣ,ವೃಷ್ಣಿವಂಶಶ್ರೇಷ್ಠ,ಯಾದವ,ರಾಧಿಕಾಪತಿ,ಗೋವರ್ಧನೋದ್ಧಾರಿ, ಕಂಸಾರಿ,ಶೌರಿ,ಗೋಪಾಲ,ವೇಣುವನ್ನು ಧರಿಸಿದವ,ಪಾಂಡುತನಯರ ಏಕೈಕ ಬಂಧು ಎಂಬೀ ಮಧುರಾಕ್ಷರಗಳನ್ನು ನಾಲಿಗೆಯೇ ಯಾವಾಗಲೂ ಜಪಿಸು.


ಇತ್ಯಷ್ಟಕಂ ಭಗವತ: ಸತತಂ ನರೋ ಯೋ |

ನಾಮಾಂಕಿತಂ ಪಠತಿ ನಿತ್ಯಮನನ್ಯಚೇತಾ: ||
ವಿಷ್ಣೊ: ಪರಂ ಪದಮುಪೈತಿ ಪನರ್ನಜಾತು |
ಮಾತು: ಪಯೋಧರರಸಂ ಪಿಬತೀಹ ಸತ್ಯಮ್  ||೯||

ಭಾವಾರ್ಥ:-ಭಗವಂತನ ನಾಮಗಳಿಂದ ಕೂಡಿದ ಈ ಅಷ್ಟಕಗಳನ್ನು ಯಾವಾತನು ಅನುದಿನವೂ ಅನನ್ಯ ಮನಸ್ಸಿನಿಂದ ಪಠಿಸುವನೋ ಅವನು ಶ್ರೇಷ್ಠಪದವಿಯಾದ ವಿಷ್ಣುಸಾಯುಜ್ಯವನ್ನು ಹೊಂದುವನು ಮತ್ತು ಮರಳಿ ಜನ್ಮವ ತಾಳಿ ತಾಯಿಯ ಮೊಲೆಹಾಲು ಸೇವಿಸಲಾರನೆಂಬುದು ಪರಮ ಸತ್ಯವು.

*********************************************************************************      ||ಇತಿ ಶ್ರೀ ಹರಿನಾಮಾಷ್ಟಕಮ್ || || ಈ ರೀತಿಯಾಗಿ ಶ್ರೀ ಹರಿನಾಮಾಷ್ಟಕಗಳ ಭಾವಾರ್ಥವು||

*********************************************************************************
                                              -೭-
  || ಆಚಾರ್ಯ ಕೃತ ವಿಷ್ಣು ಷಟ್ಪದಿ ||
  **************************
  ||ಶ್ರೀಗಣೇಶಾಯ ನಮ:||

ಅವಿನಯಮಪನಯ ವಿಷ್ಣೋದಮಯ ಮನ: ಶಮಯ ವಿಷಯಮೃಗತೃಷ್ಣಾಂ |

ಭೂತದಯಾಂ ವಿಸ್ತಾರಯ ತಾರಯ ಸಂಸಾರ ಸಾಗರತ: ||೧||

ಭಾವಾರ್ಥ:-ಹೇ ವಿಷ್ಣು!ನನ್ನ ಅವಿಧೇಯತೆಯನ್ನು ನೀಗಿಸು.ನನ್ನ ಮನವನ್ನು ಪಳಗಿಸು.ನನ್ನಲ್ಲಿರುವ ವಿಷಯಸುಖಗಳೆಂಬ ಬಿಸಿಲ್ಗುದುರೆಯನ್ನು ಶಾಂತಗೊಳಿಸು.ನನ್ನಲ್ಲಿ ಅಡಕವಾಗಿರುವ ಭೂತದಯೆಯನ್ನು ಬೆಳೆಸು.ಹಾಗೆಯೇ ಈ ಸಂಸಾರಸಾಗರದಿಂದ ನನ್ನನ್ನು ಪಾರುಮಾಡು.


ದಿವ್ಯಧುನೀ ಮಕರಂದೇ ಪರಿಮಲ ಪರಿಭೋಗ ಸಚ್ಚಿದಾನಂದೇ |

ಶ್ರೀಪತಿಪದಾರವಿಂದೇ ಭವಭಯಖೇದಚ್ಛಿದೇ ವಂದೇ  ||೨||

ಭಾವಾರ್ಥ:-ದೇವನದಿಯೂ ದಿವ್ಯನದಿಯೂ ಆಗಿರುವ ಗಂಗೆಯು ಯಾರ ಪಾದಕಮಲಗಳಲ್ಲಿ ಮಕರಂದದಂತಿರುವಳೋ,ಸಚ್ಛಿದಾನಂದವು ಪರಿಮಳ ಸ್ವರೂಪವಾಗಿ ಯಾವುದರಲ್ಲಿದೆಯೋ,ಸಾಂಸಾರಿಕ ಭಯ ದು:ಖಗಳನ್ನು ನಾಶಗೊಳಿಸುವ ಶಕ್ತಿ ಯಾವುದರಲ್ಲಿದೆಯೋ,ಅಂತಹಾ ಲಕ್ಷ್ಮೀಕಾಂತನ ಚರಣಕಮಲಗಳಿಗಾನು ವಂದಿಸುವೆ.


ಸತ್ಯಪಿ ಭೇದಾಪಗಮೇ ನಾಥ ತವಾಹಂ ನ ಮಾಮಕೀನಸ್ತ್ವಮ್ |

ಸಾಮುದ್ರೋ ಹಿ ತರಂಗ: ಕ್ವಚನ ಕಿಂ ಸಮುದ್ರೋ ನ ತಾರಗ: ||೩||

ಭಾವಾರ್ಥ:-ಹೇ ದೊರೆಯೇ!ನನ್ನ ನಿನ್ನದೆಂಬ ದ್ವೈತತ್ವ ಭಾವನೆಗಳೆಲ್ಲ ನೀಗಿದ ಮೇಲೆ ನಾನು ನಿನ್ನವನಾದರೂ ನೀನು ನನ್ನವನಾಗಲಿಲ್ಲ.ಯಾಕೆಂದರೆ ತರಂಗವು[ಅಲೆಗಳು] ಸಮುದ್ರದ್ದಾಗಿದೆಯೇ ಹೊರತು  ತರಂಗದಿಂದ ಸಾಗರವು ಉಂಟಾಗಲಾರದು.


ಉದ್ಧೃತನಗ ನಗಭಿದನುಜ ದನುಜಕುಲಾಮಿತ್ರ ಮಿತ್ರಶಶಿದೃಷ್ಟೇ |

ದೃಶ್ಟೇ ಭವತಿ ಪ್ರಭವತಿ ಕಿಂ ಭವತಿರಸ್ಕಾರ:  ||೪||

ಭಾವಾರ್ಥ:-ಹೇ!ಗೋವರ್ಧನೋದ್ಧಾರಿಯೇ,ಉಪೇಂದ್ರನೇ,ದೈತ್ಯಕುಲಾರಿಯೇ, ಸೂರ್ಯಚಂದ್ರರನ್ನು ಕಣ್ಣುಗಳನ್ನಾಗಿ ಹೊಂದಿರುವವನೇ,ಸಮಸ್ತಲೋಕದೊಡೆಯಾ, ನಿನ್ನಂತಹಾ ದೊರೆಯ ದರ್ಶನವಾದ ಮೇಲೆ ಸಾಂಸಾರಿಕ ತಿರಸ್ಕಾರ ಉಂಟಾಗಲಾರದೇ ಸ್ವಾಮೀ?


ಮತ್ಸ್ಯಾದಿಭಿರವತಾರೈರವತಾsವತಾ ಸದಾ ವಸುಧಾಮ್ |

ಪರಮೇಶ್ವರ ಪರಿಪಾಲ್ಯೋ ಭವತಾ ಭವತಾಪಭೀತೋsಹಮ್ ||೫||

ಭಾವಾರ್ಥ:-ಸ್ವಾಮಿ ಪರಮೇಶ್ವರನೇ,ಮತ್ಸ್ಯಾದಿ ನಾನಾವತಾರರೂಪಗಳಿಂದ ಅವತಾರವೆತ್ತಿದ ನೀನು ನಿರಂತರ ಬ್ರಹ್ಮಾಂಡದ ರಕ್ಷಕನಾಗಿರುವೆ. ಸಂಸಾರದಲ್ಲಿನ ಭವತಾಪಗಳಿಗೆ ಸಿಲುಕಿ ಭೀತನಾಗಿರುವ ನನ್ನನ್ನು ಕಾಪಾಡಲು ನೀನು ಶಕ್ತನಿರುವೆ.


ದಾಮೋದರ ಗುಣಮಂದಿರ ಸುಂದರವದನಾರವಿಂದ ಗೋವಿಂದ |

ಭವಜಲಧಿಮಥನಮಂದರ ಪರಮಂ ದರಮಪನಯ ತ್ವಂ ಮೇ ||೬||

ಭಾವಾರ್ಥ:-ಎಲೈ,ದಾಮೋದರನೇ,ಗುಣಮಂದಿರನೇ,ಸುಂದರವದನಾರವಿಂದನೇ,ಗೋವಿಂದನೇ,ಸಂಸಾರ ಸಾಗರವನ್ನು ಮಥಿಸುವ ಮಂದರಾಚಲಸ್ವರೂಪನೇ,ನನ್ನ ಮಹಾಭೀತಿಯನ್ನು ನೀನು ದೂರೀಕರಿಸು.


ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಕೌ ಚರಣೌ |

ಇತಿ ಷಟ್ಪದೀ ಮದೀಯೇ ವದನಸರೋಜೇ ಸದಾವಸತು  ||೭||

ಭಾವಾರ್ಥ:-ಹೇ ನಾರಾಯಣಾ,ಕರುಣಾಮಯಿಯೇ,ನಾನು ಎಲ್ಲಾ ರೀತಿಯಲ್ಲೂ ನಿನ್ನ ಪದಾರವಿಂದಗಳಲ್ಲಿ ಶರಣಾಗಿರುವೆ.ಷಟ್ಪದಿಯಲ್ಲಿರುವ ಈ ಸ್ತೋತ್ರಗಳು ದುಂಬಿಯಂತೆ ಸದಾ ನನ್ನ ಮುಖಕಮಲದಲ್ಲಿ ನೆಲೆಯಾಗಿರಲಿ.

*********************************************************************************
      || ಇತಿ ಶ್ರೀ ಆಚಾರ್ಯ ಶಂಕರಭಗವದ್ಪಾದ ಕೃತ ವಿಷ್ಣು ಷಟ್ಪದಿ ಸ್ತೋತ್ರಮ್ ||

||ಈ ರೀತಿಯಾಗಿ ಶ್ರೀ ಶಂಕರಭಗವದ್ಪಾದ ವಿರಚಿತ ವಿಷ್ಣು ಷಟ್ಪದಿ ಸ್ತೋತ್ರಗಳ ಭಾವಾರ್ಥವು||


*********************************************************************************
                                                -೮-
  || ಶ್ರೀ ದೀನಬಂಧ್ವಷ್ಟಕಮ್  ||
 ************************
ಯಸ್ಯಾದಿದಂ ಜಗದುದೇತಿ ಚತುರ್ಮುಖಾದ್ಯಂ |
ಯಸ್ಮಿನ್ನವಸ್ಥಿತಮಶೇಷಮಶೇಷ ಮೂಲೇ ||
ತತ್ರೋಪಯಾತಿ ವಿಲಯಂ ಚ ಸಮಸ್ತ ಮಂತೇ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೧||

ಭಾವಾರ್ಥ:-ಯಾವ ಪರಮಾತ್ಮನಿಂದ ಬ್ರಹ್ಮನೇ ಆದಿಯಾಗಿ ಬ್ರಹ್ಮಾಂಡಲ್ಲಿ ಜೀವಜಗತ್ತು ಉತ್ಪತ್ತಿಯಾಗಿದೆಯೋ,ಯಾವ ಪರಮೇಶ್ವರನಲ್ಲಿ ಸಮಸ್ತ ವಿಶ್ವವು ಒಳಗೊಂಡಿದೆಯೋ,ಯಾರಲ್ಲಿ ಜಗತ್ತಿನ ಸರ್ವ ಸಂಸಾರದ ಅಸ್ತಿತ್ವವಿದೆಯೋ,ಅಂತ್ಯದಲ್ಲಿ ಜಗತ್ತು ಯಾರಲ್ಲಿ ಲೀನವಾಗುವುದೋ ಅಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಚಕ್ರಂ ಸಹಸ್ರಕರಚಾರು ಕರಾರವಿಂದೇ|

ಗುರ್ವೀ ಗದಾದರವರಶ್ಚ ವಿಭಾತಿ ಯಸ್ಯ ||
ಪಕ್ಷೀಂದ್ರ ಪೃಷ್ಟಪರಿರೋಪಿತಪಾದ ಪದ್ಮೋ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೨||

ಭಾವಾರ್ಥ:-ಯಾರ ಕರಕಮಲಗಳಲ್ಲಿ ಸೂರ್ಯಕಿರಣಸದೃಶ ಚಕ್ರವೂ ಭಾರವಾಗಿರುವಂತಹಾ ಗದೆಯೂ,ಹಾಗೂ ಶ್ರೇಷ್ಠವಾದ ಶಂಖವು ಬೆಳಗುತ್ತಲಿದೆಯೋ,ಯಾವಾತನು ಪಕ್ಷಿರಾಜ ಗರುಡನ ಬೆನ್ನ ಮೇಲೆ ತನ್ನ ಚರಣಕಮಲದ್ವಯಗಳನ್ನು ಇರಿಸಿರುವನೋ ಅಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಯೇನೋದ್ಧೃತಾ ವಸುಮತೀ ಸಲಿಲೇ ನಿಮಗ್ನಾ |

ನಗ್ನಾ ಚ ಪಾಂಡವವಧೂ: ಸ್ಥಗಿತಾ ದುಕೂಲೈ: ||
ಸಮ್ಮೋಚಿತೋ ಜಲಚರಸ್ಯ ಮುಖಾದ್ಗಜೇಂದ್ರೋ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೩||

ಭಾವಾರ್ಥ:-ಜಲಾಂತರ್ಗತವಾಗಿದ್ದ ಭೂಮಿಯನ್ನು ಉದ್ಧರಿಸಿದವನೂ,ಪಾಂಡವ ವಧು ದ್ರೌಪದಿಯನ್ನು ಬತ್ತಲುಗೊಳಿಸುವ ಯತ್ನವನ್ನು ಸ್ಥಗಿತಗೊಳಿಸಿ ಹಲವಾರು ವಸನಗಳಿಂದ ರಕ್ಷಿಸಿದವನೂ ಮೊಸಳೆಯ ಬಾಯಿಯಲ್ಲಿ ಸಿಲುಕಿದ ಗಜರಾಜನಿಗೆ ಜೀವದಾನವಿತ್ತವನೂ ಆಗಿರುವ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಯಸ್ಯಾರ್ದ್ರದೃಷ್ಟಿವಶತಸ್ತು ಸುರಾ: ಸಮೃದ್ಧಿಂ |

ಕೋಪೇಕ್ಷಣೇನ ದನುಜಾ ವಿಲಯಂ ವ್ರಜಂತಿ ||
ಭೀತಾಶ್ಚರಂತಿ ಚ ಯತೋsರ್ಕಯಮಾನಿಲಾದ್ಯಾ: |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೪||

ಭಾವಾರ್ಥ:-ಯಾವಾತನ ಸ್ನೇಹಪೂರಿತ ದೃಷ್ಟಿಯಿಂದ ದೇವತೆಗಳು ಸಕಲೈಶ್ವರ್ಯ ಹೊಂದುವರೋ,ಯಾರ ಕೋಪ ಪೂರಿತ ದೃಷ್ಟಿಯಿಂದ ದಾನವರು ನಾಶ ಹೊಂದುವರೋ,ಸೂರ್ಯ ಚಂದ್ರ ಯಮ,ವಾಯುವೇ ಮೊದಲಾದವರು ಯಾರ ಭಯಕ್ಕೊಳಗಾಗಿ ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿರುವರೋ ಅಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಗಾಯಂತಿ ಸಾಮ ಕುಶಲಾ ಯಮಜಂ ಮಖೇಷು |

ಧ್ಯಾಂತಿ ಧೀರಮತಯೋ ಯತಯೋ ವಿವಿಕ್ತೇ ||
ಪಶ್ಯಂತಿ ಯೋಗಿಪುರುಷಾ: ಪುರುಷಂ ಶರೀರೇ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೫||

ಭಾವಾರ್ಥ:-ಸಾಮವೇದ ಗಾಯನ ಕುಶಲಿಗರು ಯಜ್ಞಗಳಲ್ಲಿ ಜನ್ಮರಹಿತನಾಗಿರುವ ಭಗವಂತನ ಗುಣವನ್ನು ಹಾಡುವರು.ಧೀರ ಬುದ್ಧಿಯ ಸಂನ್ಯಾಸಿಗಳು ಏಕಾಂತದಲ್ಲಿ ಭಗವಂತನ ಧ್ಯಾನ ಮಾಡುವರು.ಯೋಗಿ ಪುರುಷರಾದರೋ ತಮ್ಮ ದೇಹದ ಆತ್ಮದಲ್ಲಿ ಆತನ ಸಾಕ್ಷಾತ್ಕಾರ ಹೊಂದುವರು.  ಅಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಆಕಾರರೂಪ ಗುಣಯೋಗವಿವರ್ಜಿತೋsಪಿ |

ಭಕ್ತಾನುಕಂಪನ ನಿಮಿತ್ತ ಗೃಹೀತಮೂರ್ತಿ: ||
ಯ: ಸರ್ವಗೋsಪಿ ಕೃತ್ಯಶೇಶಶರೀರಶಯ್ಯೋ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೬||

ಭಾವಾರ್ಥ:-ಆಕಾರ,ರೂಪ.ಗುಣಾದಿ ರಹಿತನಾಗಿರುವಾಗ್ಯೂ,ಭಕ್ತರ ಬಗ್ಗೆ ಅನುಕಂಪಿತನಾಗಿ ಅವರಿಗೆ ಕರುಣಿಸುವ ಸಲುವಾಗಿ ನಾನಾವತಾರಗಳನ್ನು ಧರಿಸಿದವನೂ,ಹಾಗೂ ಸರ್ವ ವ್ಯಾಪಿಯಾಗಿದ್ದಾಗ್ಯೂ ಶೇಶಶಾಯಿಯಾದವನೂ,ಆಗಿರುವಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಯಸ್ಯಾಂಘ್ರಿಪಂಕಜಮನಿದ್ರಮುನೀಂದ್ರವೃಂದೈರ್- |

ಆರಾಧ್ಯತೇ ಭವದಾವಾನಲ ದಾಹಶಾಂತೈ ||
ಸರ್ವಾಪರಾಧಮ ವಿಚಿಂತ್ಯ ಮಮಾಖಿಲಾತ್ಮಾ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೭||

ಭಾವಾರ್ಥ:-ಉತ್ಸಾಹಭರಿತರಾದ ಮುನಿಸಮೂಹವು ದು:ಖರೂಪದ ಸಂಸಾರಿಕ ದಾವಾಗ್ನಿಯನ್ನು ಶಾಂತಗೊಳಿಸಲು ಯಾವಾತನ ಚರಣಾರವಿಂದಗಳನ್ನು ಆರಾಧಿಸುವರೋ,ಸರ್ವಾಪರಾಧಗಳನ್ನು ಕ್ಷಮಿಸಿ ಯಾರು ಸಮಸ್ತ ವಿಶ್ವಕ್ಕೆ ಆತ್ಮ ಸ್ವರೂಪನಾಗಿ ದೀನಬಂಧುವಾಗಿರುವನೋ  ಅಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ. 


ಯನ್ನಾಮಕೀರ್ತನಪರ: ಶ್ವಪಚೋಪಿ ನೂನಂ|

ಹಿತ್ವಾsಖಿಲಂ ಕಲಿಮಲಂ ಭುವನಂ ಪುನಾತಿ  ||
ದಗ್ಧ್ವಾಮಮಾಘಮಖಿಲಂ ಕರುಣೇಕ್ಷಣೇನ |
ದೃಗ್ಗೋಚರೋ ಭವತು ಮೇsದ್ಯ ಸ ದೀನಬಂಧು :  ||೮||

ಭಾವಾರ್ಥ:-ಯಾರ ನಾಮ ಸಂಕೀರ್ತನೆಯಲ್ಲಿ ತೊಡಗಿ ಚಾಂಡಾಲನು ಕೂಡಾ ಖಚಿತವಾಗಿಯೂ ತನ್ನ ಸಂಪೂರ್ಣ ಪಾಪಗಳನ್ನು ಕಳೆದು ಜಗತ್ತನ್ನು ಪಾವನಗೊಳಿಸುವನೋ,ಯಾವ ದೀನಬಂಧು ಭಗವಂತನು ತನ್ನ ಕರುಣಾಪೂರಿತ ದೃಷ್ಟಿಯಿಂದ ನನ್ನ ಸಮಸ್ತ ಪಾಪಗಳನ್ನು ಭಸ್ಮೀಕರಿಸಬಲ್ಲನೋ ಅಂತಹಾ ದು:ಖಿತರ ಪರಮಾಪ್ತನಾದ ಭಗವಂತನು ಈದಿನ ನನ್ನ ದೃಷ್ಟಿಗೆ ಪ್ರತ್ಯಕ್ಷದರ್ಶನವೀಯಲಿ.

*********************************************************************************
                    || ಇತಿ ಶ್ರೀ ದೀನಬಂಧ್ವಷ್ಟಕಮ್ || 
          || ಈ ತೆರನಾಗಿ ಶ್ರೀ ದೀನಬಂಧ್ವಷ್ಟಕಗಳ ಭಾವಾರ್ಥವು  ||

*********************************************************************************
                             -೯-
    || ಶ್ರೀಮದಚ್ಯುತಾಷ್ಟಕ ಸ್ತೋತ್ರಮ್ ||
  ******************************
ಅಚ್ಯುತಾಚ್ಯುತ ಹರೇ ಪರಮಾತ್ಮನ್ |
ರಾಮಕೃಷ್ಣ ಪುರುಷೋತ್ತಮ ವಿಷ್ಣೋ ||
ವಾಸುದೇವ ಭಗವನ್ನನಿರುದ್ಧ |
ಶ್ರೀಪತೇ ಶಮಯ ದು:ಖಮಶೇಶಮ್ ||೧||

ಭಾವಾರ್ಥ:-ಹೇ! ಅಚ್ಯುತಾ;ಚ್ಯುತಿಯಿಲ್ಲದವನೇ,ಹರಿಯೇ, ಪರಮಾತ್ಮಾ,ರಾಮಾ,ಕೃಷ್ಣಾ, ಪುರುಷೋತ್ತಮಾ,ವಿಷ್ಣುವೇ, ವಾಸುದೇವನೇ,ಭಗವಂತನೇ,ಅನಿರುದ್ಧನೇ,ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ವಿಶ್ವಮಂಗಲ ವಿಭೋ ಜಗದೀಶ |

ನಂದನಂದನನೃಸಿಂಹ ನರೇಂದ್ರ ||
ಮುಕ್ತಿದಾಯಕ ಮುಕುಂದ ಮುರಾರೇ |
ಶ್ರೀಪತೇ ಶಮಯ ದು:ಖಮಶೇಶಮ್ ||೨||

ಭಾವಾರ್ಥ:-ಪ್ರಪಂಚಕ್ಕೆ ಮಂಗಲದಾಯಕನಾಗಿರುವ ಪ್ರಭುವೇ, ಜಗದೊಡೆಯನೇ, ನಂದಗೋಪನ ಸುತನೇ, ನಾರಸಿಂಹನೇ,ನರೇಂದ್ರನೇ,ಮುಕ್ತಿದಾಯಕನೇ,ಮುಕುಂದನೇ,ಮುರಾರಿಯೇ, ಶ್ರೀಪತಿಯೇ ನನ್ನ ದು:ಖಗಳನ್ನು  ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ರಾಮಚಂದ್ರ ರಘುನಾಯಕ ದೇವ |

ದೀನನಾಥ ದುರಿತಕ್ಷಯಕಾರಿನ್ ||
ಯಾದವೇಂದ್ರ ಯದುಭೂಷಣ ಯಜ್ಞ |
ಶ್ರೀಪತೇ ಶಮಯ ದು:ಖಮಶೇಶಮ್ ||೩||

ಭಾವಾರ್ಥ:-ರಾಮಚಂದ್ರನೇ,ರಘುನಾಯಕನೇ,ದೇವಾ,ದೀನರಕ್ಷಕನೇ,ಪಾಪನಾಶಕನೇ, ಯಾದವವರೇಣ್ಯನೇ, ಯದುಕುಲಭೂಷಣನೇ,ಯಜ್ಞ ಸ್ವರೂಪನೇ ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ದೇವಕೀತನಯ ದು:ಖದಾವಾಗ್ನೇ |

ರಾಧಿಕಾರಮಣ ರಮ್ಯ ಸುಮುಹೂರ್ತೇ ||
ದು:ಖಮೋಚನ ದಯಾರ್ಣವನಾಥ |
ಶ್ರೀಪತೇ ಶಮಯ ದು:ಖಮಶೇಶಮ್ ||೪||

ಭಾವಾರ್ಥ:-ದೇವಕೀಸುತನೇ,ದು:ಖಗಳಿಗೆ ಕಾಡ್ಗಿಚ್ಚಿನಂತಿರುವವನೇ, ರಾಧಾರಮಣನೇ,ರಮ್ಯನೇ, ಸುಂದರ ಮೂರ್ತಿಯೇ ದು:ಖವನ್ನು ದೂರೀಕರಿಸುವವನೇ,ದಯಾಸಾಗರನೇ,ದೊರೆಯೇ ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ಗೋಪಿಕಾವದನಚಂದ್ರ ಚಕೋರ |

ನಿತ್ಯ ನಿರ್ಗುಣನಿರಂಜನ ಜಿಷ್ಣೋ ||
ಪೂರ್ಣರೂಪ ಜಯಶಂಕರ ಶರ್ವ
ಶ್ರೀಪತೇ ಶಮಯ ದು:ಖಮಶೇಶಮ್ ||೫||

ಭಾವಾರ್ಥ:-ಗೋಪಿಕಾಸ್ತೀಯರ ಮುಖಚಂದ್ರಕ್ಕೆ ಚಕೋರದಂತೆ ಶೋಭಿಸುವವನೇ, ನಿತ್ಯನೇ, ಗುಣಾತೀತನೇ, ವಿಷ್ಣುವೇ,ಪರಿಪೂರ್ಣನೇ,ಜಯಶಂಕರನೇ,ಶರ್ವನೇ,ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ಗೋಕುಲೇಶ ಗಿರಿಧಾರಣಧೀರ |

ಯಾಮುನಾಚ್ಛತಟಖೇಲನ ವೀರ ||
ನಾರದಾದಿ ಮುನಿವಂದಿತ ಪಾದ |
ಶ್ರೀಪತೇ ಶಮಯ ದು:ಖಮಶೇಶಮ್ ||೬||

ಭಾವಾರ್ಥ:-ಗೋಕುಲಾಧೀಶನೇ,ಗೋವರ್ಧನಗಿರಿಧಾರಿಯೇ,ಧೀರನೇ,ಯಮುನಾ ನದಿ ದಂಡೆಯ ಮೇಲಾಡುವ ವೀರನೇ,ನಾರದಾದಿ ಮುನಿ ವೃಂದದವರಿಂದ ಪೂಜಿಸಲ್ಪಡುವ ಪಾದಗಳನ್ನು ಹೊಂದಿರುವವನೇ ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ದ್ವಾರಕಾಧಿಪ ದುರಂತ ಗುಣಾಬ್ದೇ |

ಪ್ರಾಣನಾಥ ಪರಿಪೂರ್ಣ ಭವಾರೇ ||
ಜ್ಞಾನಗಮ್ಯ ಗುಣಸಾಗರ ಬ್ರಹ್ಮನ್ |
ಶ್ರೀಪತೇ ಶಮಯ ದು:ಖಮಶೇಶಮ್ ||೭||

ಭಾವಾರ್ಥ:-ದ್ವಾರಕಾಧೀಶನೇ,ದುರ್ಗುಣಗಳನ್ನು ನಾಶಗೊಳಿಸುವ ಗುಣಸಾಗರನೇ ಪ್ರಾಣನಾಥನೇ,ಪೂರ್ಣ ಸ್ವರೂಪನೇ, ಸಂಸಾರ ಸಾಗರದಿಂದ ಮೇಲೆತ್ತುವವನೇ, ಜ್ಞಾನಕ್ಕೆ ತಲಪಲು ಸಾಧ್ಯವಾಗಿರುವವನೇ, ಗುಣನಿಧಿಯೇ,ಬ್ರಹ್ಮನೇ, ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ದುಷ್ಟ ನಿರ್ದಲನ ದೇವ ದಯಾಲೋ|

ಪದ್ಮನಾಭ ಧರಣೀಧರ ಧರ್ಮಿನ್ ||
ರಾವಣಾಂತಕ ರಮೇಶ ಮುರಾರೇ |
ಶ್ರೀಪತೇ ಶಮಯ ದು:ಖಮಶೇಶಮ್ ||೮||

ಭಾವಾರ್ಥ:-ದುಷ್ಟ ಸಂಹಾರಕನೇ,ದೇವನೇ,ದಯಾಳುವೇ,ನಾಭಿಯಲ್ಲಿ ತಾವರೆಯನ್ನು ಧರಿಸಿಕೊಂಡಿರುವವನೇ, ಭೂಮಿಯನ್ನು ಧರಿಸಿಕೊಂಡಿರುವವನೇ,ಧರ್ಮಾತ್ಮನೇ,ರಾವಣ ವೈರಿಯೇ,ಲಕ್ಷ್ಮೀಪತಿಯೇ,ಮುರನ ಶತ್ರುವೇ, ಶ್ರೀಪತಿಯೇ ನನ್ನ ದು:ಖಗಳನ್ನು ಶೇಷರಹಿತವನ್ನಾಗಿಸಿ ಶಾಂತಿಯನ್ನು ಕರುಣಿಸು ಸ್ವಾಮಿಯೇ.


ಅಚ್ಯುತಾಷ್ಟಕಮಿದಂ ರಮಣೀಯಂ |

ನಿರ್ಮಿತಂ ಭವಭಯಂ ವಿಹಂತಮ್ ||
ಯ: ಪಠೇದ್ವಿಷಯವೃತ್ತಿ ನಿವೃತ್ತಿರ್ |
ಜನ್ಮ ದು:ಖಮಖಿಲಂ ಸ ಜಹಾತಿ  ||೯||

ಭಾವಾರ್ಥ:-ಮನೋಹರವಾಗಿ ರಚಿಸಲ್ಪಟ್ಟ ಈ ಅಚ್ಯುತಾಷ್ಟಕವು ಸಾಂಸಾರಿಕ ಹಾಗೂ ಪ್ರಾಪಂಚಿಕ ಭಯವನ್ನು ನಾಶಗೊಳಿಸುವಂತಹದ್ದಾಗಿದೆ. ಇದನ್ನು ಯಾವಾತನು ಪಠಿಸುತ್ತಾನೋ ಆತನ ಸಮಸ್ತ ವಸ್ತು ಸ್ಥಿತಿ ದೋಷಗಳೂ ನಿವೃತ್ತಿಯಾಗುವವು.ಜನ್ಮಾದಿ ದು:ಖಗಳು ನಾಶವಾಗುವವು.

*********************************************************************************           || ಇತಿ ಶ್ರೀ ಶಂಕರಾಚಾರ್ಯ ವಿರಚಿತಮಚ್ಯುತಾಷ್ಟಕ ಸ್ತೋತ್ರಮ್ ||
||ಈ ರೀತಿಯಾಗಿ ಶ್ರೀಶಂಕರಾಚಾಯರಿಂದ ರಚಿಸಲ್ಪಟ್ಟ ಅಚ್ಯುತಾಷ್ಟಕ ಸ್ತೋತ್ರಗಳಭಾವಾರ್ಥವು||

*********************************************************************************
                      -೧೦-
  || ಶ್ರೀ ವಿಷ್ಣು ಪ್ರಾತ:ಸ್ಮರಣ ಸ್ತೋತ್ರಮ್ ||
 ********************************
ಪ್ರಾತ: ಸ್ಮರಾಮಿ ಭವಭೀತಿ ಮಹಾರ್ತಿ ಶಾಂತೈ |
ನಾರಾಯಣಂ ಗರುಡವಾಹನಮಬ್ಜನಾಭಮ್ ||
ಗ್ರಾಹಾಭಿಭೂತ ವರವಾರಣ ಮುಕ್ತಿಹೇತುಂ |
ಚಕ್ರಾಯುಧಂ ತರುಣ ವಾರಿಜಪತ್ರನೇತ್ರಮ್  ||೧||

ಭಾವಾರ್ಥ:-ಜಲವನ್ನು ಆಶ್ರಯತಾಣವನ್ನಾಗಿಸಿ 


ಕೊಂಡಿರುವವನೂ,ಗರುಡನನ್ನು 


ವಾಹನವನ್ನಾಗಿಸಿಕೊಂಡವನೂ,ತಾವರೆಯನ್ನು ಹೊಕ್ಕುಳಿನಲ್ಲಿ 


ಹೊಂದಿರುವವನೂ,ಮೊಸಳೆಯ ಹಿಡಿತಕ್ಕೆ ಸಿಲುಕಿದ ಗಜೇಂದ್ರನನ್ನು 


ಪಾರು ಮಾಡಿದವನೂ,ಚಕ್ರವನ್ನು ಆಯುಧವನ್ನಾಗಿ 


ಹೊಂದಿರುವವನೂ,ಎಳೆಯ ಕಮಲದ ಎಸಳನ್ನು ಹೋಲುವ 


ಕಣ್ಣುಗಳುಳ್ಳವನೂ,ಆಗಿರುವ ಶ್ರೀ ಮಹಾವಿಷ್ಣುವನ್ನು ಸಂಸಾರ 


ಭೀತಿಯೆಂಬ ಮಹಾ ಸಂಕಷ್ಟ ನಿವಾರಣೆಗಾಗಿ ಉಷ:ಕಾಲದಲ್ಲಿ ನಾನು 


ಸ್ಮರಿಸುವೆನು.


ಪ್ರಾತರ್ನಮಾಮಿ ಮನಸಾ ವಚಸಾ ಮೂರ್ಧ್ನಾ |

ಪಾದಾರವಿಂದ ಯುಗಲಂ ಪರಮಸ್ಯ ಪುಂಸ: ||
ನಾರಾಯಣಸ್ಯ ನರಕಾರ್ಣವ ತಾರಣಸ್ಯ |
ಪಾರಾಯಣ-ಪ್ರವಣ ವಿಪ್ರ ಪರಾಯಣಸ್ಯ  ||೨||

ಭಾವಾರ್ಥ:-ವೇದಾದಿ ಸದ್ಗ್ರಂಥ ಪಠಣಗಳಲ್ಲಿ ನಿರತರಾಗಿರುವ 


ಶ್ರೇಷ್ಠ ಬ್ರಾಹ್ಮಣರ ಉತ್ಕೃಷ್ಠವೆನಿಸಿದ ಅವಸ್ಥೆಯಾಗಿರುವ 


ಮೋಕ್ಷ ತಾಣಕ್ಕೆ ತಲಪಿಸಲು ನರಕದ ಕಡಲನ್ನು ದಾಟಿಸುವ 


ಪರಮಪುರುಷನೆನಿಸಿದ ಆ ಶ್ರೀಮನ್ನಾರಾಯಣನ ಅಡಿದಾವರೆಗಳನ್ನು 


ಮಾತು,ಮನಸ್ಸುಗಳಿಂದ ಕೂಡಿ ಶಿರವಾಗಿ ನಾನು ವಂದಿಸುವೆನು.


ಪ್ರಾತರ್ಭಜಾಮಿ ಭಜತಾಮ ಭಯಂಕರಂ ತಂ |

ಪ್ರಾಕ್ ಸರ್ವಜನ್ಮಕೃತ ಪಾಪ ಭಯಾಪಹೃತ್ಯೈ ||
ಯೋ ಗ್ರಾಹ ವಕ್ತ್ರ ಪತಿತಾಂಘ್ರಿ ಗಜೇಂದ್ರ ಘೋರ- |
ಶೋಕ ಪ್ರಣಾಶನಕರೋ ಧೃತ ಶಂಖ ಚಕ್ರ:  ||೩||

ಭಾವಾರ್ಥ:-ಮೊಸಳೆಯ ಬಾಯಿಗೆ ಕಾಲುಗಳು ಸಿಲುಕಿ ಅತಿಯಾದ 


ದು:ಖಕ್ಕೆ ಈಡಾಗಿ ಕಾಪಾಡಲು ಮೊರೆಯಿಟ್ಟ ಗಜೇಂದ್ರನ ದು:ಖವನ್ನು 


ನಿವಾರಿಸಿದ,ಹಸ್ತಗಳಲ್ಲಿ ಶಂಖ,ಚಕ್ರಗಳನ್ನು ಹಿಡಿದು ಎಲ್ಲರಿಗೆ 


ಅಭಯ ಪ್ರಧಾನ ಮಾಡುವ ಆ ಮಹಾ ವಿಷ್ಣುವನ್ನು ನನ್ನ ಹಿಂದಿನ 


ಎಲ್ಲಾ ಜನ್ಮಗಳಲ್ಲಿ ನಾನು ಮಾಡಿರಬಹುದಾದ ಪಾಪಗಳ ದೋಷವನ್ನು 


ನಿವಾರಿಸಲು  ಉಷ:ಕಾಲದಲ್ಲಿ ಭಜಿಸುತ್ತೇನೆ.


ಶ್ಲೋಕತ್ರಯಮಿದಂ ಪುಣ್ಯಂ ಪ್ರಾತ:ಕಾಲೇ ಪಠೇನ್ನರ: |

ಲೋಕತ್ರಯಗುರುಸ್ತಸ್ಮೈ ದದ್ಯಾದಾತ್ಮಪದಂ ಹರಿ:  ||೪||

ಭಾವಾರ್ಥ:-ಯಾವಾತನು ಪ್ರಾತ:ಕಾಲದಲ್ಲಿ ಪುಣ್ಯದಾಯಕವಾಗಿರುವ 


ಈ ಮೂರು ಶ್ಲೋಕಗಳನ್ನು ಓದುವನೋ ಅಂತಹಾ ಮನುಜನಿಗೆ 


ತ್ರಿಲೋಕಾಧಿಪತಿಯಾಗಿರುವ ಜಗದಾದಿ ಗುರುವಾಗಿರುವ ಹರಿಯ 


ಆತ್ಮದಲ್ಲಿ ಸ್ಥಾನವು ದೊರಕುತ್ತದೆ.

*********************************************************************
                || ಇತಿ ಶ್ರೀ ವಿಷ್ಣು ಪ್ರಾತ:ಸ್ಮರಣ ಸ್ತೋತ್ರಮ್ ||
  || ಈ ರೀತಿಯಾಗಿ ಶ್ರೀ ವಿಷ್ಣು ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||

*********************************************************************
                                -೧೧-
  || ಶ್ರೀ ರಮೇಶ ಪ್ರಾತ:ಸ್ಮರಣ ಸ್ತೋತ್ರಮ್ ||
 **********************************
ಪ್ರಾತ:ಸ್ಮರಾಮಿ ವರಕುಂಡಲ ಶೋಭಿಗಂಡಂ |
ಶೀತಾಂಶು ಮಂಡಲ ಮುಖಂ ಸಿತ ವಾರಿಜಾಕ್ಷಮ್ ||
ಆತಾಮ್ರ ಕಮ್ರ ಮುದಿತಾಧರ ಬಿಂಬ ಜೃಂಭಂ |
ಧ್ಯಾತೃ ಪ್ರಹರ್ಷಕರ ಹಾಸ ರಸಂ ರಮೇಶಮ್  ||೧||

ಭಾವಾರ್ಥ:-ಕುಂಡಲಗಳ ಅಲಂಕಾರದಿಂದ ಶೋಭಿಸುತ್ತಿರುವ ಕೆನ್ನೆಗಳನ್ನು ಹೊಂದಿರುವವನೂ, ಚಂದ್ರಮಂಡಲವನ್ನು ಹೋಲುವ ಮೊಗವುಳ್ಳವನೂ,ಬಿಳಿಯ ಕಮಲಗಳನ್ನು ಹೋಲುವ ಕಣ್ಣುಗಳುಳ್ಳವನೂ, ತೊಂಡೆಯ ಹಣ್ಣಿನಂತೆ ಕೆಂಪಾದ ತುಟಿಯುಳ್ಳವನೂ, ತನ್ನನ್ನು ಧ್ಯಾನಿಸುವರಿಗೆ ಸಂತೋಷವನ್ನು ಕರುಣಿಸುವನೂ, ನಗುಮೊಗದವನೂ ಆಗಿರುವ ಆ ರಮೇಶನನ್ನು ನಾನು ಉಷ:ಕಾಲದಲ್ಲಿ ಸ್ಮರಿಸುತ್ತೇನೆ.


ಪ್ರಾತರ್ಭಜಾಮಿ ಧೃತಕೌಸ್ತುಭ ಕಂಬುಕಂಠಂ |

ಸ್ಫೀತಾತ್ಮವಕ್ಷಸಿ ವಿರಾಜಿತ ಭೂರಿಹಾರಮ್ ||
ಭೀತ ಸ್ವಭಕ್ತ ಭಯಭಂಜನ ಪಾಣಿ ಪದ್ಮಂ |
ಶಾತೋದರಾರ್ಪಿತ ಜಗದ್ಭರಮಬ್ಜನಾಭಮ್ ||೨||

ಭಾವಾರ್ಥ:-ಶಂಖವನ್ನು ಹೋಲುವ ಕೊರಳಲ್ಲಿ ಕೌಸ್ತುಭಮಣಿಯನ್ನು ಧರಿಸಿದವನೂ,ಶೋಭಿಸುತ್ತಿರುವ ಬಹುಹಾರಗಳನ್ನು ತನ್ನ ಉಬ್ಬಿದ ಎದೆಯಲ್ಲಿ ಧರಿಸಿರುವವನೂ,ಭೀತಿಗೊಳಗಾದ ತನ್ನ ಭಕ್ತರ ಅಂಜಿಕೆಗಳನ್ನು ಪರಿಹರಿಸಲೋಸುಗ ಹಸ್ತದಲ್ಲಿ ಕಮಲವನ್ನು ಹಿಡಿದವನೂ,ಆದಿ ಶೇಷನಿಗೆ ಬ್ರಹ್ಮಾಂಡದ ಹೊರೆಯನ್ನು ನೀಡಿದವನೂ,ಕಮಲನಾಭನೂ ಆಗಿರುವ ರಮಾಪತಿಯನ್ನು ನಾನು ಉಷ:ಕಾಲದಲ್ಲಿ ಭಜಿಸುತ್ತೇನೆ.


ಪ್ರಾತರ್ನಮಾಮಿ ಶುಭಕಿಂಕಿಣಿ ಮೇಖಲಾಂಗಂ |

ಪೀತಾಂಬರಂ ಕರಿಕರೋರುಮುದಾರ ಜಾನುಮ್ ||
ಧ್ಯಾತಾಂಘ್ರಿ ಯುಗ್ಮರುಚಿರಂ ಜಿತಕಂಜಜಾತ- |
ವಾತಾದಿ ದೇವ ವರ ಮೌಲಿಮಣಿಂ ಮುಕುಂದಮ್ ||೩||

ಭಾವಾರ್ಥ:-ಶ್ರೇಷ್ಠವಾದ ಕಿರುಗೆಜ್ಜೆಗಳಿಂದ ಕೂಡಿರುವ ಸೊಂಟದ ಪಟ್ಟಿಯನ್ನು ಹೊಂದಿದ,ಹಳದಿ ವಸನಧಾರಿಯಾದ,ಆನೆಯ ಸೊಂಡಿಲನ್ನು ಹೋಲುವ ತೊಡೆಯನ್ನು ಹೊಂದಿರುವ,ಮನೋಹರವಾದ ಮೊಣಕಾಲುಗಳುಳ್ಳ,ಧ್ಯಾನಿಸಲ್ಪಡುವ ಸುಂದರ ಅಡಿದಾವರೆಯುಳ್ಳ,ಬ್ರಹ್ಮ,ವಾಯುವೇ ಆದಿಯಾದ ದೇವದೇವತೆಯರಿಂದ ಶ್ರೇಷ್ಠನಾಗಿರುವ ಮುಕುಂದನನ್ನು ನಾನು ಉಷ:ಕಾಲದಲ್ಲಿ ನಮಸ್ಕರಿಸುವೆ.


ವಾದಿರಾಜ ಯತಿ ಪ್ರೋಕ್ತಂ ಶ್ಲೋಕತ್ರಯಮಿದಂ ಸದಾ |

ಪ್ರಾತ:ಕಾಲೇ ಪಠೇನ್ಮರ್ತ್ಯ: ಸರ್ವಪಾಪೈ: ಪ್ರಮುಚ್ಯತೇ ||೪||

ಭಾವಾರ್ಥ:-ವಾದಿರಾಜಯತಿವರ್ಯರಿಂದ ತಿಳಿಸಲ್ಪಟ್ಟಿರುವ ಈ ಮೂರು ಶ್ಲೋಕಗಳನ್ನು ಉಷ;ಕಾಲದಲ್ಲಿ ಪಠಣ ಮಾಡುವ ಮನುಜನು ಸಮಸ್ತ ಕೆಡುಕುಗಳಿದ ವಿಮುಕ್ತನಾಗುವನು.

*********************************************************************
                    || ಇತಿ ಶ್ರೀ ರಮೇಶ ಪ್ರಾತ:ಸ್ಮರಣ ಸ್ತೋತ್ರಮ್  ||
      || ಈ ರೀತಿಯಾಗಿ ಶ್ರೀ ರಮೇಶ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು  ||

*********************************************************************
                        -೧೨-
  || ಶ್ರೀ ಹರಿ ಪ್ರಾರ್ಥನಾ ಶ್ಲೋಕಮ್ ||
  **************************
ನಿತ್ಯೋತ್ಸವೋ ನಿತ್ಯದಾನಂ ನಿತ್ಯ ಶ್ರೀರ್ನಿತ್ಯತೋ ಜಯ: |
ಯೇಷಾಂ ಹೃದಿಸ್ತೋ ಭಗವಾನ್ ಮಂಗಲಾಯತನೋ ಹರಿ: ||೧||

ಭಾವಾರ್ಥ:-ಸಮಸ್ತ ಸುಲಕ್ಷಣಗಳಿಗೆ ಆಶ್ರಯದಾತನಾದ ಭಗವಾನ್ ಶ್ರೀಹರಿಯನ್ನು ಅನುದಿನವೂ ಹೃದಯದಲ್ಲಿ ಧಾರಣೆ ಮಾಡಿಕೊಂಡವರಿಗೆ ಪ್ರತಿ ದಿವಸವೂ ಉತ್ಸವವು,ಪ್ರತಿದಿವಸವೂ ದಾನವು,ಶಾಶ್ವತವಾದ ಸಂಪದವು,ಪ್ರತಿ ದಿವಸವೂ ಗೆಲುವಿನ ಅನುಭವವಾಗುವವು.


ಆಸೀನಸ್ಯ ಶಯಾನಸ್ಯ ತಿಷ್ಠತೋ ವ್ರಜತೋsಪಿ ವಾ |

ರಮಸ್ವ ಪುಂಡರೀಕಾಕ್ಷ ಹೃದಯೇ ಮಮ ಸರ್ವದಾ ||೨||

ಭಾವಾರ್ಥ:-ಹೇ!ಪುಂಡರೀಕಾಕ್ಷನೇ, ಮಲಗಿರುವ,ಎದ್ದಿರುವ, ಕುಳಿತಿರುವ, ನಿಂತಿರುವ,ನಡೆಯುತ್ತಲಿರುವ, ನನ್ನ ಹೃತ್ಕಮಲದಲ್ಲಿ ಸದಾಕಾಲವೂ ನೀನು ವಿಹರಿಸುತ್ತಿರು.


ಸರ್ವತಶ್ಚೈವ ಸರ್ವಾತ್ಮನ್ ಸರ್ವಾವಸ್ಥಾಸು ಚಾಚ್ಯುತ |

ರಮಸ್ವ ಪುಂಡರೀಕಾಕ್ಷ ನೃಸಿಂಹ ಹೃದಯೇ ಮಮ ||೩||

ಭಾವಾರ್ಥ:-ಕಮಲನಯನನಾಗಿರುವ ನರಹರಿಯೇ,ಸಮ್ಸತರೊಳಗಿರುವ ಅವಿನಾಶಿಯೇ,ನನ್ನ ಎಲ್ಲಾ ತೊಂದರೆಗಳಲ್ಲಿ ಕೂಡಾ ನೀನು ಎಲ್ಲಾ ರೀತಿಯಿಂದ ನನ್ನ ಎದೆಯೊಳಗೆ ವಿಹರಿಸುತ್ತಿರು.


ಕರಾವಲಂಬನಂ ದೇಹಿ ನೃಸಿಂಹ ಕಮಲೇಕ್ಷಣ |

ಭವ ಪಂಕಾರ್ಣವೇ ಘೋರೇ ಮಜ್ಜತೋ ಮಮ ಶಾಶ್ವತ ||೪||

ಭಾವಾರ್ಥ:-ಕಮಲವನ್ನು ಹೋಲುವ ನಯನಗಳನ್ನು ಹೊಂದಿರುವ ನರಹರಿಯೇ;ನಾಶರಹಿತನೇ,ಸಂಸಾರವೆಂಬ ಘೋರ ರಾಡಿಯ ಕೂಪದಲ್ಲಿ ಮುಳುಗುತ್ತಿರುವ ನನಗೆ ನಿನ್ನ ಹಸ್ತದಾಸರೆಯನ್ನು ಕೊಟ್ಟು ಉದ್ದರಿಸು ಸ್ವಾಮೀ.


ತ್ರಾಹಿ ತ್ರಾಹಿ ಜಗನ್ನಾಥ ನರಸಿಂಹಾಚ್ಯುತಾವ್ಯಯ |

ಉದ್ಧರಾಸ್ಮಾನ್ ಮುರಾರೇ ತ್ವಂ ದು:ಖ ಸಂಸಾರಸಾಗರಾತ್ ||೫||

ಭಾವಾರ್ಥ:-ಜಗದೊಡೆಯನೇ,ನರಹರಿಯೇ,ನಾಶವಿಲ್ಲದವನೇ,ಪತನವಿಲ್ಲದಾತನೇ,

ಮುರಾಂತಕನೇ, ದು:ಖಮಯವಾದ ಈ ಸಂಸಾರ ಎನ್ನುವ ಸಾಗರದಿಂದ ನಮ್ಮನ್ನು ಹಿಡಿದೆತ್ತಿ ಉದ್ಧರಿಸು ಸ್ವಾಮೀ.

ಯ: ಸರ್ವ ಗುಣ ಸಂಪೂರ್ಣ: ಸರ್ವದೋಷ ವಿವರ್ಜಿತ: |

ಪ್ರೀಯತಾಂ ಗುರುದೇವೋಯಂ ನೃಸಿಂಹ: ಪರಮ: ಸುಹೃತ್ ||೬||

ಭಾವಾರ್ಥ:-ಸಮಸ್ತ ಗುಣಗಳಿಂದ ತುಂಬಿದವನಾದ,ಯಾವುದೊಂದೂ ದೊಷಗಳಿಲ್ಲದಿರುವ,ಚಿರಕಾಲೀನ ಆಪ್ತಗೆಳೆಯನೂ ಆಗಿರುವ ಗುರುದೇವನಾಗಿರುವ ನರಹರಿಯು ಸದಾಪರಮ ಸಂತುಷ್ಟನಾಗಿರಲಿ.


ಮಂಗಲಮ್ ಭಗವಾನ್ ವಿಷ್ಣು: ಮಂಗಲಂ ಮಧುಸೂದನ: |

ಮಂಗಲಮ್ ದೇವಕೀ ಪುತ್ರೋ ಮಂಗಲಮ್ ಗರುಡ ಧ್ವಜ: ||೭||

ಭಾವಾರ್ಥ:-ಭಗವಾನ್ ವಿಷ್ಣುವು ಮಂಗಲವನ್ನು ಕರುಣಿಸಲಿ. ಮಧುವೆಂಬ ಅಸುರನನ್ನು ಹತ್ಯೆ ಗೈದವನು ಶುಭವನ್ನು ನೀಡಲಿ.ದೇವಕೀತನಯನು ಆನಂದವನ್ನು ದಯಪಾಲಿಸಲಿ.ಗರುಡ ಧ್ವಜನಾದ ಶ್ರೀ ಹರಿಯು ಅದೃಷ್ಟವನ್ನು ತರಲಿ.

*********************************************************************
                 || ಇತಿ ಶ್ರೀ ಹರಿ ಪ್ರಾರ್ಥನಾ ಶ್ಲೋಕಮ್ ||  
      || ಈ ರೀತಿಯಾಗಿ ಶ್ರೀ ಹರಿ ಪ್ರಾರ್ಥನಾ ಶ್ಲೋಕಗಳ ಭಾವಾರ್ಥವು ||
*********************************************************************
                        -೧೩-
            || ವಿಷ್ಣು ಪಂಜರ ಸ್ತೋತ್ರಮ್ ||
          **************************
           * ಶ್ರೀ ಗಣೇಶಾಯ ನಮ: *
           ----------------
ಓಂ ಅಸ್ಯ ಶ್ರೀ ವಿಷ್ಣು ಪಂಜರ ಸ್ತೋತ್ರ ಮಹಾ ಮಂತ್ರಸ್ಯ| 
ನಾರದ ಋಷಿ:| ಅನುಷ್ಟಪ್ ಛಂದ:|ಶ್ರ‍ೀ ವಿಷ್ಣು: ಪರಮಾತ್ಮಾ ದೇವತಾ|
ಅಹಂಬೀಜಮ್|ಸೋsಹಮ್ ಶಕ್ತಿ:|ಓಂ ಹ್ರೀಂ ಕೀಲಕಮ್| 
ಮಮ ಸರ್ವದೇಹ ರಕ್ಷಣಾರ್ಥಂ ಜಪೇ ವಿನಿಯೋಗ: ||

ಭಾವಾರ್ಥ:-ಈ ವಿಷ್ಣು ಪಂಜರ ಸ್ತೋತ್ರಕ್ಕೆ ನಾರದರು ಋಷಿಯಾಗಿದ್ದಾರೆ.ಇದು ಅನುಷ್ಟಪ್ ಛಂದಸ್ಸಿನಲ್ಲಿದೆ.ಶ್ರೀ ಮಹಾವಿಷ್ಣು ಪರಮಾತ್ಮನು ಇದರ ದೇವತೆ.ನಾನು[ನಾರದರು]ಬೀಜ.ಅವನೇ[ಪರಮಾತ್ಮ]ನಾನೆಂಬುದು ಇದರ ಶಕ್ತಿರೂಪ.ಓಂ ಹ್ರೀಂ ಎಂಬುದು ಕೀಲಕವು[ಚಿಲಕ].ನನ್ನ ಶರೀರದ ಸಮಸ್ತ ಅಂಗಗಳ ರಕ್ಷಣಾರ್ಥ ಇದನ್ನು ಜಪದಲ್ಲಿ ಉಪಯೋಗಿಸುವೆನು.


       ||ಅಥ ಧ್ಯಾನಮ್||


ಪರಂ ಪರಸ್ಮಾತ್ಪ್ರಕೃತೆರನಾದಿಮೇಕಂ|

ನಿವಿಷ್ಟಂ ಬಹುಧಾ ಗುಹಾಯಾಮ್ ||
ಸರ್ವಾಲಯಂ ಸರ್ವ ಚರಾಚರಸ್ಥಂ |
ನಮಾಮಿ ವಿಷ್ಣುಂ ಜಗದೇಕನಾಥಮ್ ||೧||

ಭಾವಾರ್ಥ:-ಅಗ್ರಗಣ್ಯರಲ್ಲಿ ಅಗ್ರಗಣ್ಯನೂ,ಪ್ರಕೃತಿಯಿಂದಲೂ ಅನಾದಿಯಾದವನೂ,ಹೆಚ್ಚಾಗಿ ರಹಸ್ಯನಾಗಿರುವನೂ,ಸಮಸ್ತವನ್ನೂ ಒಳಗೊಂಡಿರುವಂತಹವನೂ,ಸಕಲ ಚರಾಚರ ಸ್ಥಾವರ ಜಂಗಮಗಳಲ್ಲಿ ಇರುವಂತಹವನೂ,ಜಗತ್ತಿನ ಏಕ ಮಾತ್ರಾ ಒಡೆಯನೂ ಆಗಿರುವಂತಹಾ ಮಹಾಶಕ್ತಿ ಸ್ವರೂಪನಾಗಿರುವ ವಿಷ್ಣುವಿಗೆ ನಾನು ನಮಸ್ಕರಿಸುವೆನು.


ಓಂ ವಿಷ್ಣುಪಂಜರಕಂ ದಿವ್ಯಂ ಸರ್ವದುಷ್ಟ ನಿವಾರಣಮ್ |

ಉಗ್ರತೇಜೋ ಮಹಾವೀರ್ಯಂ ಸರ್ವಶತ್ರು ನಿಕೃಂತನಮ್ ||೨||

ಭಾವಾರ್ಥ:-ವಿಷ್ಣು ಪಂಜರವೆಂಬ ಈ ಮಹಾಸ್ತೋತ್ರವು ಸಕಲ ದುರಿತಗಳನ್ನು ನಿವಾರಿಸುವಂತಹದೂ ತೀವ್ರವಾಗಿರುವ ಪ್ರಭಾವವಿರುವಂತಹದೂ ಮಹಾಶಕ್ತಿಯುಳ್ಳದ್ದೂ ಸಕಲ ಶತ್ರುಗಳನ್ನು ವಿನಾಶಗೊಳಿಸುವಂತಹದೂ ಆಗಿದೆ.


ತ್ರಿಪುರಂ ದಹ್ಯಮಾನಸ್ಯ ಹರಸ್ಯ ಬ್ರಹ್ಮಣೋದಿತಮ್ |

ತದಹಂ ಸಂಪ್ರವಕ್ಷ್ಯಾಮಿ ಆತ್ಮರಕ್ಷಾಕರಂ ನೃಣಾಮ್ ||೩||

ಭಾವಾರ್ಥ:-ತ್ರಿಪುರಗಳನ್ನು ದಹಿಸಿದ ಹರನಿಗೆ ಬ್ರಹ್ಮನು ಹೇಳ್ದ ಮಾನವರ ಆತ್ಮರಕ್ಷಣೆ ಮಾಡುವಂತಹದಗಿರುವ ಇದನ್ನು ನಾನು ನಿನಗೆ ಹೇಳುತ್ತಿರುವೆನು.


ಪಾದೌರಕ್ಷತು ಗೋವಿಂದೋ ಜಂಘೇಚೈವ ತ್ರಿವಿಕ್ರಮ: |

ಊರೂ ಮೇ ಕೇಶವ: ಪಾತು, ಕಟಿಂ ಚೈವ ಜನಾರ್ದನ: ||೪||

ಭಾವಾರ್ಥ:-ಗೋವಿಂದನು ಪಾದಗಳನ್ನು ರಕ್ಷಿಸಲಿ.ತ್ರಿವಿಕ್ರಮನು ಮೀನ ಖಂಡಗಳನ್ನು ಕಾಪಾಡಲಿ.ಕೇಶವನು ತೊಡೆಗಳನ್ನು ರಕ್ಷಿಸಲಿ.ಕಟಿಭಾಗವನ್ನು ಜನಾರ್ದನನು ರಕ್ಷಿಸಲಿ.


ನಾಭಿಂ ಚೈವಾಚ್ಯುತ: ಪಾತು ಗುಹ್ಯಂ ಚೈವ ತು ವಾಮನ: |

ಉದರಂ ಪದ್ಮನಾಭಶ್ಚ ಪೃಷ್ಠಂ ಚೈವ ತು ಮಾಧವ: ||೫||

ಭಾವಾರ್ಥ:-ಹೊಕ್ಕುಳವನ್ನು ಅಚ್ಯುತನು ರಕ್ಷಿಸಲಿ.ಗುಪ್ತಾಂಗಗಳನ್ನು ವಾಮನನು ಕಾಪಾಡಲಿ.ಹೊಟ್ಟೆಯನ್ನು ಪದ್ಮನಾಭನು ರಕ್ಷಿಸಲಿ.ಮಾಧವನು ಬೆನ್ನನ್ನು ಕಾಪಾಡಲಿ.


ವಾಮಪಾರ್ಶ್ವಂ ತಥಾ ವಿಷ್ಣುರ್ದಕ್ಷಿಣಂ ಮಧುಸೂದನ: |

ಬಾಹ್ಯೇ ವಾಸುದೇವಶ್ಚ ಹೃದಿ ದಾಮೋದರಸ್ತಥಾ ||೬||

ಭಾವಾರ್ಥ:-ವಿಷ್ಣುವು ಎಡಪಾಶ್ವವನ್ನೂ,ಮಧುಸೂದನನು ಬಲ ಪಾರ್ಶ್ವವನ್ನೂ ರಕ್ಷಿಸಲಿ.ಭುಜಗಳನ್ನು ವಾಸುದೇವನು ಕಾಪಾಡಲಿ.ದಾಮೋದರನು ಹೃದಯವನ್ನು ಕಾಪಾಡಲಿ.


ಕಂಠಂ ರಕ್ಷತು ವಾರಾಹ: ಕೃಷ್ಣಶ್ಚ ಮುಖಮಂಡಲಮ್ |

ಮಾಧವ: ಕರ್ಣಮೂಲೇ ತು ಹೃಷಿಕೇಶಶ್ಚ ನಾಸಿಕೆ ||೭||

ಭಾವಾರ್ಥ:-ಕೊರಳನ್ನು ವರಾಹನು ಕಾಪಾಡಲಿ.ಕೃಷ್ಣನು ಮುಖವರ್ತುಲವನ್ನು ರಕ್ಷಿಸಲಿ.ಕಿವಿಗಳನ್ನು ಮಾಧವನ್ನು ರಕ್ಷಿಸಲಿ.ಹೃಷಿಕೇಶನು ಮೂಗನ್ನು ರಕ್ಷಿಸಲಿ.


ನೇತ್ರೇ ನಾರಾಯಣೋ ರಕ್ಷೇಲ್ಲಲಾಟಂ ಗರುಡಧ್ವಜ: |

ಕಪೋಲೌ ಕೇಶವೋ ರಕ್ಷೇದ್ವೈಕುಂಠ: ಸರ್ವತೋ ದಿಶಮ್ ||೮||

ಭಾವಾರ್ಥ:-ಕಣ್ಣುಗಳನ್ನು ನಾರಾಯಣನೂ,ಹಣೆಯನ್ನು ಗರುಡಧ್ವಜನೂ ರಕ್ಷಿಸಲಿ.ಗಲ್ಲವನ್ನು ಕೇಶವನು ಕಾಪಾಡಲಿ.ಸಮಸ್ತ ದಿಕ್ಕುಗಳಲ್ಲಿಯೂ ವೈಕುಂಠನು ರಕ್ಷಿಸಲಿ.


ಶ್ರೀವತ್ಸಾಂಕಶ್ಚ ಸರ್ವೇಶಾಮಂಗಾನಾಂ ರಕ್ಷಕೋ ಭವೇತ್ |

ಪೂರ್ವಸ್ಯಾಂ ಪುಂಡರೀಕಾಕ್ಷ ಆಗ್ನೇಯ್ಯಾಂ ಶ್ರೀಧರಸ್ತಥಾ ||೯||

ಭಾವಾರ್ಥ:-ಶ್ರೀವತ್ಸದ ಚಿನ್ಹೆಯುಳ್ಳವನು ಸರ್ವ ಅಂಗಗಳ ರಕ್ಷಕನಾಗಿರಲಿ. ಹಾಗೆಯೇ ಪೂರ್ವದಲ್ಲಿ ಪುಂಡರೀಕನೂ,ಆಗ್ನೇಯದಲ್ಲಿ ಶ್ರೀಧರನೂ ರಕ್ಷಿಸಲಿ.


ದಕ್ಷಿಣೇ ನಾರಸಿಂಹಶ್ಚ ನೈಋತ್ಯಾಂ ಮಾಧವೋsವತು |

ಪುರುಷೋತ್ತಮೊ ಮೇ ವಾರುಣ್ಯಾಂ ವಾಯವ್ಯಾಂಚ ಜನಾರ್ದನ: ||೧೦||

ಭಾವಾರ್ಥ:-ದಕ್ಷಿಣದಲ್ಲಿ ನಾರಸಿಂಹನೂ,ನೈಋತ್ಯದಲ್ಲಿ ಮಾಧವನೂ, ಪಶ್ಚಿಮದಲ್ಲಿ ಪುರುಷೋತ್ತಮನೂ, ವಾಯವ್ಯದಲ್ಲಿ ಜನಾರ್ದನನೂ ರಕ್ಷಿಸಲಿ. 


ಗದಾದರಸ್ತು ಕೌಬೇರ್ಯಾಮೀಶಾನ್ಯಾಂ ಪಾತು ಕೇಶವ: |

ಆಕಾಶೇಚ ಗದಾ ಪಾತು ಪಾತಾಲೇ ಚ ಸುದರ್ಶನ: ||೧೧||

ಭಾವಾರ್ಥ:-ಉತ್ತರದಲ್ಲಿ ಗದಾದರನೂ,ಈಶಾನ್ಯದಲ್ಲಿ ಕೇಶವನೂ,ಆಕಾಶದಲ್ಲಿ ಗದೆಯೂ,ಪಾತಾಳದಲ್ಲಿ ಸುದರ್ಶನವೂ ಕಾಪಾಡಲಿ.


ಸನ್ನದ್ಧ: ಸರ್ವಗಾತ್ರೇಷು ಪ್ರವಿಷ್ಟೋ ವಿಷ್ಣುಪಂಜರ: |

ವಿಷ್ಣು ಪಂಜರ ವಿಷ್ಣೋsಹಂ ವಿಚರಾಮಿ ಮಹೀತಲೇ ||೧೨||

ಭಾವಾರ್ಥ:-ಸರ್ವಾಂಗಗಳಲ್ಲೂ ವಿಷ್ಣು ಪಂಜರವು ತಯಾರಾಗಿ ಕುಳಿತಿರಲಿ. ವಿಷ್ಣುವು ಪಂಜರದೊಳಗಿದ್ದುಕೊಂಡು ನಾನು ಭುವಿಯಲ್ಲಿ ಸಂಚರಿಸುತ್ತಿರುವೆನು.


ರಾಜದ್ವಾರೇಪಠೇ ಘೋರೇ ಸಂಗ್ರಾಮೆ ಶತ್ರು ಸಂಕಟೆ |

ನದೀಷು ಚರಣೇಚೈವ ಚೋರವ್ಯಾಘ್ರ ಭಯೇಷು ಚ ||೧೩||

ಬಾವಾರ್ಥ:-ಅರಮನೆಯ ದ್ವಾರದಲ್ಲಿ,ಘೋರಕಾನನದಲ್ಲಿ,ಭೀಕರ ಕಾಳಗದಲ್ಲಿ,ಶತ್ರುಗಳ ಉಪಟಳದ ಸಂಕಷ್ಟಕಾಲದಲ್ಲಿ,ನದಿಗಳಲ್ಲಿ,ಯುದ್ಧಗಳಲ್ಲಿ,ಕಳ್ಳರ ಮತ್ತು ಹುಲಿಯ ಬಗೆಗಿನ ಅಂಜಿಕೆಯಲ್ಲಿ....


ಡಾಕಿನಿ ಪ್ರೇತಭೂತೇಷು ಭಯಂ ತಸ್ಯ ನ ಜಾಯತೇ |

ರಕ್ಷ ರಕ್ಷ ಮಹಾದೇವ ರಕ್ಷ ರಕ್ಷ ಜನೇಶ್ವರ ||೧೪||

ಭಾವಾರ್ಥ:-ಭೂತ ಪ್ರೇತ ಡಾಕಿನೀಗಳ ಭೀತಿಯಿರದಂತೆ ಹೇ! ಪರಮಾತ್ಮನೇ,ಜನೇಶ್ವರನೇ ರಕ್ಷಿಸು,ರಕ್ಷಿಸು.


ಜಲೇ ರಕ್ಷತು ವಾರಾಹ: ಸ್ಥಲೇ ರಕ್ಷತು ವಾಮನ: | 

ರಕ್ಷಂತು ದೇವತಾ: ಸರ್ವಾ ಬ್ರಹ್ಮ ವಿಷ್ಣು ಮಹೇಶ್ವರಾ:||೧೫||

ಭಾವಾರ್ಥ:-ನೀರಿನಲ್ಲಿ ವರಾಹರೂಪನೂ,ನೆಲೆಯಲ್ಲಿ ವಾಮನನೂ ಕಾಪಾಡಲಿ.ಬ್ರಹ್ಮ ವಿಷ್ಣು ಮಹೇಶ್ವರಾದಿ ಸರ್ವ ದೇವತೆಗಳೂ ರಕ್ಷಿಸಲಿ.


ಅಟವ್ಯಾಂ ನಾರಸಿಂಹಶ್ಚ ಸರ್ವತ: ಪಾತು ಕೇಶವ: |

ದಿವಾ ರಕ್ಷತು ಮಾಂ ಸೂರ್ಯೋ ರಾತ್ರೌ ರಕ್ಷತು ಚಂದ್ರಮಾ: ||೧೬||

ಭಾವಾರ್ಥ:-ಅಡವಿಯಲ್ಲಿ ನಾರಸಿಂಹನೂ,ಎಲ್ಲೆಡೆಗಳಲ್ಲಿಯೂ ಕೇಶವನೂ ಕಾಪಾಡಲಿ.ಹಗಲು ಸೂರ್ಯನೂ,ರಾತ್ರಿ ಕಾಲದಲ್ಲಿ ಚಂದ್ರನೂ ನನ್ನನ್ನು ರಕ್ಷಿಸಲಿ.


ರೋಗ ವಿಘ್ನಹತಶ್ಚೈವ ಬ್ರಹ್ಮಹಾ ಗುರುತಲ್ಪಗ: |

ಪಂಥಾನಂ ದುರ್ಗಮಂ ರಕ್ಷೆತ್ಸರ್ವಮೇವ ಜನಾರ್ದನ: ||೧೭||

ಭಾವಾರ್ಥ:-ರೋಗಾದಿ ಅಡೆ ತಡೆಗಳಲ್ಲಿ ಬ್ರಹ್ಮಹತ್ಯಾ ದೋಷದಲ್ಲಿ,ಗುರುಗಳ ಹಾಸಿಗೆಯನ್ನು ಬಳಸಿದ ದೋಷದಲ್ಲಿ ಹಾಗೂ ಕಷ್ಟಸಾಧ್ಯವಾಗಿರುವ ಹಾದಿಯಲ್ಲಿ ಎಲ್ಲಾ ರೀತಿಯಲ್ಲೂ ಜನಾರ್ದನನು ಕಾಪಾಡಲಿ.


ಸ್ತ್ರೀಹಂತಾ ಬಾಲಘಾತೀ ಚ ಸುರಾಪೋ ವೃಷಲೀಪತಿ: |

ಮುಚ್ಯತೇ ಸರ್ವ ಪಾಪೇಭ್ಯೋ ಯ: ಪಠೇನ್ನಾತ್ರ ಸಂಶಯ: ||೧೮||

ಭಾವಾರ್ಥ:-ಸ್ತ್ರೀಯರನ್ನು ಹಾಗೂ ಮಕ್ಕಳನ್ನು ಪೀಡಿಸಿದವನು ಸುರಾಪಾನಿಯು ಕುಲಘಾತಕನು ಇತ್ಯಾದಿ ಯಾರೇ ಆಗಿದ್ದರೂ ಈ ಸ್ತೋತ್ರವನ್ನು ಪಠಿಸುವುದರಿಂದ ಸರ್ವ ಪಾಪಗಳಿಂದಲೂ ವಿಮುಕ್ತಿಹೊಂದುವುದರಲ್ಲಿ ಸಂಶಯವಿಲ್ಲ.


ಅಪುತ್ರೋ ಲಭತೇ ಪುತ್ರಂ ಧನಾರ್ಥೀ ಲಭತೇ ಧನಮ್ |

ವಿದ್ಯಾರ್ಥೀ ಲಭತೇ ವಿದ್ಯಾಂ ಮೋಕ್ಷಾರ್ಥೀ ಲಭತೇ ಗತಿಮ್ ||೧೯||

ಭಾವರ್ಥ:-ಸಂತಾನ ವಿಹೀನರು ಸಂತಾನವನ್ನೂ,ಧನಾಪೇಕ್ಷಿಗಳು ಧನವನ್ನೂ,ವಿದ್ಯಾರ್ಥಿಯು ವಿದ್ಯೆಯನ್ನೂ,ಮೋಕ್ಷವನ್ನು ಅಪೇಕ್ಷಿಸುವವರು ಸದ್ಗತಿಯನ್ನೂ ಹೊಂದುವರು.


ಯಸ್ತ್ವಿದಂ ಪಠತೇ ಸ್ತೋತ್ರಂ ವಿಷ್ಣು ಪಂಜರ ಮುತ್ತಮಮ್ |

ಅಪದೋ ಹರತೇ ನಿತ್ಯಂ ವಿಷ್ಣು ಸ್ತೋತ್ರಾರ್ಥ ಸಂಪದಾ ||೨೦||

ಭಾವಾರ್ಥ:-ವಿಷ್ಣು ಪಂಜರ ಸ್ತೋತ್ರದ ಪಠನವು ಉತ್ತಮ ಫಲದಾಯಕವಾಗಿದ್ದು ಇದನ್ನು ಪಠಿಸುವುದರಿಂದ ವಿಷ್ಣುವೆಂಬ ಅರ್ಥ ಸಂಪದದಿಂದ ಅನುದಿನವೂ ಆಪತ್ತುಗಳು ನಾಶವಾಗುವವು.


ಗೋಸಹಸ್ರ ಫಲಂ ತಸ್ಯ ವಾಜಪೇಯ ಶತಸ್ಯ ಚ |

ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣು ಲೋಕಂ ಸ ಗಚ್ಚತಿ ||೨೧||

ಸಾವಿರ ಗೋದಾನ ಮಾಡಿದ ಫಲವೂ ವಾಜಪೇಯ ಯಾಗ ಮಾಡಿದ ಫಲವೂ ಲಭಿಸಿ ಆತನು ಸರ್ವ ಪಾಪಗಳಿಂದ ವಿಮುಕ್ತನಾಗಿ ವಿಷ್ಣು ಸಾಯುಜ್ಯವನ್ನು ಪಡೆಯುವನು.


ಅಶ್ವಮೇಧ ಸಹಸ್ರಸ್ಯ ಫಲಂಪ್ರಾಪ್ನೋತಿ ಮಾನವ: |

ಸರ್ವಕಾಮಂ ಲಭೇದಸ್ಯ ಪಠಣಾನ್ನಾತ್ರ ಸಂಶಯ: ||೨೨||

ಭಾವಾರ್ಥ:-ಇದನ್ನು ಪಠಿಸುವುದರಿಂದ ಸಾವಿರ ಅಶ್ವಮೇಧ ಯಾಗಗಳನ್ನು ಮಾಡಿದ ಫಲವು ದೊರಕುವುದರೊಡನೆ ಆತನ ಸಮಸ್ತ ಕಾಮನೆಗಳು ಈಡೇರುವವು.


ಜಲೇ ವಿಷ್ಣು: ಸ್ತಲೇ ವಿಷ್ಣುರ್ವಿಷ್ಣು:ಪರ್ವತಮಸ್ತಕೇ |

ಜ್ವಾಲಮಾಲಾಕುಲೇ ವಿಷ್ಣು: ಸರ್ವಂವಿಷ್ಣುಮಯಂಜಗತ್ ||೨೩||

ಭಾವಾರ್ಥ:-ನೀರಿನಲ್ಲಿಯೂ ನೆಲೆಯಲ್ಲಿಯೂ ಪರ್ವತಶಿಖರದಲ್ಲಿಯೂ ಜ್ವಾಲೆಯಲ್ಲಿಯೂ ವಿಷ್ಣುವು ಸ್ಥಿರವಾಗಿದ್ದು ಸಕಲ ಬ್ರಹ್ಮಾಂಡವೂ ವಿಷ್ಣುಮಯವಾಗಿದೆ.ಆ ಮಂಗಲಸ್ವರೂಪೀ ಮಹಾವಿಷ್ಣುವಿಗೆ ನಾನು ನಮಿಸುವೆ.

*********************************************************************
             ||ಇತಿ ವಿಷ್ಣು ಪಂಜರ ಸ್ತೋತ್ರಮ್ ||
||ಈ ತೆರನಾಗಿ ವಿಷ್ಣು ಪಂಜರ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
                              -೧೪-

   || ಶ್ರೀ ಅಚ್ಯುತ ನಾಮಾಷ್ಟಕಮ್ ||

  ***************************
ಅಚ್ಯುತಂ ಕೇಶವಂ ವಿಷ್ಣುಂ ಹರಿಂ ಸತ್ಯಂ ಜನಾರ್ದನಮ್ |
ಹಂಸಂ ನಾರಾಯಣಂ ಚೈವಮೇತಾನ್ನಾಮಾಷ್ಟಕಂ ಪಠೇತ್ ||೧||

ಭಾವಾರ್ಥ:-ಅಚ್ಯುತ,ಕೇಶವ,ವಿಷ್ಣು,ಹರಿ,ಸತ್ಯ,ಜನಾರ್ದನ,ಹಂಸ,ನಾರಾಯಣ ಎಂಬ ಈ ಎಂಟು ನಾಮಾವಳಿಗಳನ್ನು ಪಠಿಸಬೇಕು.


ತ್ರಿಸಂಧ್ಯಂ ಯ:ಪಠೇನ್ನಿತ್ಯಂ ದಾರಿದ್ರ್ಯಂ ತಸ್ಯ ನಶ್ಯತಿ | 

ಶತ್ರು ಸೈನ್ಯ ಕ್ಷಯಂ ಯಾತಿ ದು:ಸ್ವಪ್ನ: ಸುಸ್ವಪ್ನೋ ಭವೇತ್ ||೨||

ಭಾವಾರ್ಥ:-ಈ ನಾಮಾವಲಿಗಳನ್ನು ಮೂರು ಸಂಧ್ಯಾ ಕಾಲಗಳಲ್ಲಿ ಯಾರು ಪಠಿಸುವರೋ ಅಂತಹವರ ದಾರಿದ್ರ್ಯ,ವು ಅಳಿದು ಹೋಗುವುದು.ಮತ್ತು ಅವರ ವೈರಿ ಸೈನ್ಯವು ನಾಶವಾಗುವುದು.ಅವರ ಕೆಟ್ಟ ಸ್ವಪ್ನಗಳು ಉತ್ತಮ ಸ್ವಪ್ನಗಳಾಗಿ ಫಲ ದೊರಕುವುದು.


ಗಂಗಾಯಾಂ ಮರಣಂ ಚೈವ ದೃಡಾ ಭಕ್ತಿಸ್ತು ಕೇಶವೇ |

ಬ್ರಹ್ಮ ವಿದ್ಯಾ ಪ್ರಬೋಧಶ್ಚ ತಸ್ಮಾನಿತ್ಯಂ ಪಠೇನ್ನರ: ||೩||

ಭಾವಾರ್ಥ:-ಅಂತಹವರ ಮರಣವು ಗಂಗಾ ತಟಾಕದಲ್ಲಿ ಸಂಭವಿಸಿದ ಫಲ ದೊರಕುವುದು.ಹಾಗೆಯೇ ಕೇಶನಲ್ಲಿ ಅಚಲವಾದ ಭಕ್ತಿಯುಂಟಾಗುವುದು.ಅವರಿಗೆ ಬ್ರಹ್ಮ ವಿದ್ಯೆಯ ಜ್ಞಾನವುಂಟಾಗುವುದು.ಆದ ಕಾರಣ ಇದನ್ನು ಅನುದಿನವೂ ಪಠಿಸಬೇಕು.

*********************************************************************
|| ಇತಿ ಅಚ್ಯುತ ನಾಮಾಷ್ಟಕಮ್ || || ಈ ರೀತಿಯಾಗಿ ಅಚ್ಯುತ ನಾಮಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
                                         -೧೫-
   || ಶ್ರೀ ಹರಿ ಶರಣಾಷ್ಟಕಮ್ ||
  ***********************
ಧ್ಯೇಯಂ ವದಂತಿ ಶಿವಮೇವ ಹಿ ಕೇಚಿದನ್ಯೇ |
ಶಕ್ತಿಂ ಗಣೇಶಮಪರೇ ತು ದಿವಾಕರಂ ವೈ ||
ರೂಪೈಸ್ತು ತೈರಪಿ ವಿಭಾಸಿ ಯತಸ್ತ್ವಮೇವ |
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೧||

ಭಾವಾರ್ಥ:-ಕೆಲವರು ಧ್ಯಾನಿಸಲು ಯೋಗ್ಯನೂ ಗಮ್ಯನೆಂಬುದಾಗಿಯೂ ಶಿವನನ್ನೂ,ಕೆಲವರು ಶಕ್ತಿಯೆಂಬುದಾಗಿಯೂ,ಮತ್ತೆ ಕೆಲವರು ಗಣೇಶನೆಂಬುದಾಗಿಯೂ,ಕೆಲವರು ಸೂರ್ಯಭಗವಾನನೆಂದೂ ಹೇಳುವರು.ಆದರೆ ಇವೆಲ್ಲಾ ಸ್ವರೂಪಗಳಲ್ಲಿ ನೀನು ನೆಲೆಯಾಗಿರುವೆ.ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.


ನೊ ಸೋದರೊ ನ ಜನಕೊ ಜನನೀ ನ ಜಾಯಾ |

ನೈವಾತ್ಮಜೊ ನ ಚ ಕುಲಂ ವಿಫುಲಂ ಬಲಂ ವಾ ||
ಸಂದೃಶ್ಯತೆ ನ ಕಿಲ ಕೋsಪಿ ಸಹಾಯಕೊ ಮೇ |
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೨||

ಭಾವಾರ್ಥ:-ನನಗೆ ಸಹೋದರರು,ಅಪ್ಪ,ಅಮ್ಮ,ಪತ್ನಿ,ಮಕ್ಕಳು,ಬಂಧುಗಳು,ಕುಲ ಹಾಗೆಯೇ ಅಪಾರ ಬಲ ಇವಾವುದೂ ಸಹಕಾರಿಯೆಂದು ಅನಿಸುವುದಿಲ್ಲ.ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.


ನೋಪಾಸಿತಾ ಮದಪಾಸ್ಯ ಮಯಾ ಮಹಾಂತ-|

ಸ್ತೀರ್ಥಾನಿ ಚಾಸ್ತಿಕಧಿಯಾ ನ ಹಿ ಸೇವಿತಾನಿ ||
ದೇವಾರ್ಚನಂ ಚ ವಿಧಿವನ್ನ ಕೃತಂ ಕದಾಪಿ |
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೩||

ಭಾವಾರ್ಥ:-ನಾನಾದರೋ ನನ್ನ ದುರಭಿಮಾನದಿಂದ ಮಹಾತ್ಮರನ್ನು ಎಂದೂ ಆರಾಧಿಸಿಲ್ಲ.ದೇವರು ಧರ್ಮಗಳಲ್ಲಿ ನಂಬುಗೆಯುಳ್ಳವನಾಗಿ ನಾನೆಂದೂ ತೀರ್ಥಗಳನ್ನು ಸೇವಿಸಿದವನಲ್ಲ.ಮತ್ತು ಸಂಪ್ರದಾಯ ಪೂರ್ವಕವಾಗಿ ದೇವತಾರ್ಚನೆಯನ್ನಂತೂ ಮಾಡಿದವನೇ ಅಲ್ಲ.ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.


ದುರ್ವಾಸನಾ ಮಮ ಸದಾ ಪರಿಕರ್ಷಯಂತಿ |

ಚಿತ್ತಂ ಶರೀರಮಪಿ ರೋಗಗಣಾ ದಹಂತಿ ||
ಸಂಜೀವನಂ ಚ ಪರಹಸ್ತಗತಂ ಸದೈವ | 
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೪||

ಭಾವಾರ್ಥ:-ದುಷ್ಟ ಮನೋಕಾಮನೆಗಳು ನನ್ನ ಮನವನ್ನು ಯಾವಾಗಲೂ ಸೆಳೆಯುತ್ತಲಿವೆ.ರೋಗಗಳ ರಾಶಿಯೇ ನನ್ನ ದೇಹವನ್ನು ನಿರಂತರ ದಹಿಸುತ್ತಲಿವೆ.ಜೀವನವಂತೂ ಸದಾಕಾಲ ಪರರ ವಶದಲ್ಲಿರುತ್ತಿದೆ.  ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.


ಪೂರ್ವಂ ಕೃತಾನಿ ದುರಿತಾನಿ ಮಯಾತುಯಾನಿ |

ಸ್ಮೃತ್ವಾಖಿಲಾನಿ ಹೃದಯಂ ಪರಿಕಂಪತೆ ಮೇ ||
ಖ್ಯಾತಾ ಚ ತೇ ಪತಿತ ಪಾವನತಾ ತು ಯಸ್ಮಾತ್ |
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೫||

ಭಾವಾರ್ಥ:-ಈ ಹಿಂದೆ ನಾನು ಮಾಡಿದ ಹಾಗೂ ನನ್ನಿಂದಾಗಿರ ಬಹುದಾದ ಪಾಪಗಳನ್ನೆಲ್ಲಾ ನೆನೆನೆನೆದುಕೊಳ್ಳುತ್ತಾ ನನ್ನೀ ಹೃದಯವು ಭೀತಿಯಿಂದ ನಡುಗುತ್ತಿದೆ.ಆದರೆ ನೀನಾದರೋ ಪತಿತೋದ್ಧಾರಕನೆಂಬ ಪ್ರಖ್ಯಾತಿಯಿದೆ.ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.


ದು:ಖಂ ಜರಾಜನನಜಂ ವಿವಿಧಾಶ್ಚ ರೋಗಾ: |

ಕಾಕಶ್ಚ ಸೂಕರಜನಿರ್ನಿರಯೇ ಚ ಪಾತ: ||
ತೇ ವಿಸ್ಮೃತೇ: ಫಲಮಿದಂ ವಿತತಂ ಹಿ ಲೋಕೆ | 
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೬||

ಭಾವಾರ್ಥ:-ಹೇ! ದೊರೆಯೇ;ನಿನ್ನ ನೆನಪಿಲ್ಲದಿರುವಿಕೆಯಿಂದ ಹುಟ್ಟು-ಮುಪುಗಳ ದ್ವಾರಾ ಉಂಟಾಗುವ ದು:ಖಗಳನ್ನು,ಹಾಗೆಯೇ ನಾನಾ ತರದ ವ್ಯಾಧಿಗಳ ಭವಣೆ,ಕಾಗೆ,ನಾಯಿ,ಹಂದಿಯೇ ಆದಿಯಾದ ನಾನಾ ಪ್ರಾಣಿಗಳ ಯೋನಿಯಲ್ಲಿ ಜನನ,ಅದರಂತೆ ನರಕಾದಿ ವಾಸಾನುಭವ ಇವೆಲ್ಲವುಗಳನ್ನು ಸಂಸಾರಾನುಭವದ ವಿಸ್ತರಿತ ಫಲವಾಗಿ ಅನುಭವಿಸಬೇಕಾಗಿದೆ.ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು. 


ನೀಚೋsಪಿ ಪಾಪವಲಿತೋsಪಿ ವಿನಿಂದಿತೋsಪಿ |

ಬ್ರೂಯಾತ್ತವಾಹಮಿತಿಯಸ್ತು ಕಿಲೈಕವಾರಮ್ ||
ತಂ ಯಚ್ಛಸೀಶ ನಿಜಲೋಕಮಿತಿವ್ರತಂ ತೇ |
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೭||

ಭಾವಾರ್ಥ:-ನೀಚನು,ನಿಂದಿತನು,ಮಹಾಪಾಪಿಷ್ಟನು ಅವನು ಯಾವನೇ ಆಗಿರಲಿ ಅಂತಹವನು ನಿನ್ನನ್ನಲ್ಲಿ "ನಾನು ನಿನ್ನವನು" ಎಂದೊಂದು ಬಾರಿ ಅಂದರೂ ಸಾಕು ಅವನಿಗೆ ನಿನ್ನ ಶರೀರದಲ್ಲಿ ನೆಲೆಗೊಡುವೆ.ಹೇ! ಒಡೆಯನೇ;ಅದು ನಿನ್ನ ನಿಯಮವೂ ಆಗಿದೆ. ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.


ವೇದೇಷು ಧರ್ಮವಚನೇಷು ತಥಾಗಮೇಷು |

ರಾಮಾಯಣೇsಪಿ ಚ ಪುರಾಣದಂಬಕೆ ವಾ ||
ಸರ್ವತ ಸರ್ವ ವಿಧಿನಾ ಗದಿತಸ್ತ್ತ್ವಮೇವ |
ತಸ್ಮಾತ್ತ್ವಮೇವ ಶರಣಂ ಮಮ ದೀನಬಂಧೋ ||೮||

ಭಾವಾರ್ಥ:-ವೇದಗಳು ಧರ್ಮ ಶಾಸ್ತ್ರಗಳು,ಆಗಮ ಶಾಸ್ತ್ರಗಳು,ರಾಮಾಯಣಾದಿ ಪುರಾಣ ಸಮೂಹಗಳೆಲ್ಲವುಗಳೆಲ್ಲವುಗಳಲ್ಲಿ ನಿನ್ನ ಸ್ತುತಿಗಳೇ ಇವೆ.ಆದ್ದರಿಂದ ಎಲೈ ಬಡವರ ಆಪ್ತನೇ!ನೀನು ನನಗೆ ಏಕಮಾತ್ರಾ ಶರಣು ಹೊಗಲು ಯೋಗ್ಯನಾದವನು.

*********************************************************************
                    || ಇತಿ ಶ್ರೀ ಹರಿ ಶರಣಾಷ್ಟಕಮ್ ||  
        || ಈ ತೆರನಾಗಿ ಶ್ರೀ ಹರಿ ಶರಣಾಷ್ಟಕಗಳ ಭಾವಾರ್ಥವಾಗಿದೆ ||

*********************************************************************
                                 -೧೬-
  || ಶ್ರೀ ಕಮಲಾಪತ್ಯಷ್ಟಕಮ್ ||
 ****************************
ಭುಜಗತಲ್ಪಗತಂ ಘನ ಸುಂದರಂ |
ಗರುಡವಾಹನಮಂಬುಜಲೋಚನಮ್ ||
ನಲಿನ ಚಕ್ರಗದಾಧರಮವ್ಯಯಂ |
ಭಜತರೇ ಮನುಜಾ: ಕಮಲಾಪತಿಮ್  ||೧||

ಭಾವಾರ್ಥ:-ಹೇ! ಮನುಜರೇ;ಆದಿಶೇಷನನ್ನು 


ಹಾಸಿಗೆಯನ್ನಾಗಿಸಿಕೊಂಡು ಮಲಗಿದವನೂ,ನೀಲವರ್ಣವನ್ನು 


ಹೊಂದಿರುವ ಸುಂದರ ಸ್ವರೂಪನೂ,ಗರುಡನನ್ನು ವಾಹನವನ್ನಾಗಿ 


ಮಾಡಿಕೊಂಡವನೂ,ತಾವರೆಯನ್ನು ಹೋಲುವ ಕಣ್ಣುಗಳನ್ನು 


ಹೊಂದಿರುವವನೂ,ಶಂಖ,ಚಕ್ರ,ಗದೆಗಳೊಂದಿಗೆ ಕಮಲವನ್ನು 


ಧರಿಸಿರುವವನೂ,ಅವಿನಾಶಿಯೂ ಆಗಿರುವ ಶ್ರೀ ಕಮಲಾಪತಿಯನ್ನು 


ಭಜಿಸುವವರಾಗಿ.


ಅಲಿಕುಲಾಸಿತ ಕೋಮಲ ಕುಂತಲಂ |

ವಿಮಲಪೀತದುಕೂಲ ಮನೋಹರಮ್ ||
ಜಲಧಿಜಾಂಕಿತ ವಾಮಕಲೇವರಂ |
ಭಜತರೇ ಮನುಜಾ: ಕಮಲಾಪತಿಮ್  ||೨||

ಭಾವಾರ್ಥ:-ಹೇ!ಮನುಜರೇ;ಕಳಿಂಗ ಪಕ್ಷಿಗಳಂತೆ ಕಪ್ಪು ಬಣ್ಣದ 


ಕೋಮಲ ಕೂದಲುಗಳನ್ನು ಹೊಂದಿದವನೂ,ಉತ್ತಮವಾಗಿರುವ ನಿರ್ಮಲ 


ಮನೋಹರ ಪೀತಾಂಬರವನ್ನು ಧರಿಸಿಕೊಂಡವನೂ,ಎಡಭಾಗದ ತೊಡೆಯ 


ಮೇಲೆ ಲಕ್ಷ್ಮಿಯನ್ನು ನೆಲೆಯಾಗಿಸಿಕೊಂಡಿರುವ ಶ್ರೀ 


ಕಮಲಾಪತಿಯನ್ನು ಭಜಿಸುವವರಾಗಿ.


ಕಿಮು ಜಪೈಶ್ಚ ತಪೋಭಿರುತಾಧ್ವರೈರಪಿ |

ಕಿಮುತ್ತಮ ತೀರ್ಥನಿಷೇವಣೈ: ||
ಕಿಮುತ ಶಾಸ್ತ್ರಕದಂಬವಿಲೋಕನೈರ್-|
ಭಜತರೇ ಮನುಜಾ: ಕಮಲಾಪತಿಮ್  ||೩||

ಭಾವಾರ್ಥ:-ಎಲೈ! ಮನುಜರೇ;ತಪಜಪ,ಯಜ್ಞ,ಹಾಗೂ ಪವಿತ್ರ 


ತೀರ್ಥಗಳ ಸೇವನೆಯಿಂದೇನು ಪ್ರಯೋಜನ?ಅಥವಾ ಬಹಳವಾಗಿರುವ 


ಶಾಸ್ತ್ರಗಳ ಪರಿಶೀಲನೆಯ ಗಲಿಬಿಲಿಯಲ್ಲಿ ಮುಳುಗುವುದರಿಂದೇನು 


ಪ್ರಯೋಜನ?ಬದಲಾಗಿ ಶ್ರೀ ಕಮಲಾಪತಿಯನ್ನು ಭಜಿಸುವವರಾಗಿ.


ಮನುಜದೇಹಮಿದಂ ಭುವಿ ದುರ್ಲಭಮ್ |

ಸಮಧಿಗಮ್ಯಸುರೈರಪಿ ವಾಂಛಿತಮ್ ||
ವಿಷಯಲಂಪಟತಾಮಪಹಾಯ ವೈ |
ಭಜತರೇ ಮನುಜಾ: ಕಮಲಾಪತಿಮ್  ||೪||

ಭಾವಾರ್ಥ:-ಭುವಿಯಲ್ಲಿ ಮನುಜರ ಶರೀರವವು ದುರ್ಲಭವಾಗಿದೆ.ಅದು 


ದೇವತಾಗಣಶಕ್ತಿಗಳಿಂದ ಜಯಿಸಲ್ಪಡುವಂತಹದ್ದಾಗಿದೆ.ಇದನ್ನು 


ಅರ್ಥವಿಸಿಕೊಂಡು ಎಲೈ ಮನುಜರೇ!ವಿಷಯಾಸಕ್ತಿಯನ್ನು ತ್ಯಜಿಸಿ 


ಶ್ರೀ ಕಮಲಾಪತಿಯನ್ನು ಭಜಿಸುವವರಾಗಿ.


ನ ವನಿತಾ ನ ಸುತೋ ನ ಸಹೋದರೋ |

ನಹಿ-ಪಿತಾ ಜನನೀ ನ ಚ ಬಾಂಧವ: ||
ವ್ರಜತಿ ಸಾಕಮನೇನ ಜನೇನ ವೈ |
ಭಜತರೇ ಮನುಜಾ: ಕಮಲಾಪತಿಮ್  ||೫||

ಭಾವಾರ್ಥ:-ಈ ಶರೀರದಿಂದ ಜೀವವು ತೆರಳುವಾಗ 


ಸ್ತ್ರೀ,ಪುತ್ರ,ಬಂಧು,ತಂದೆ,ತಾಯಿ,ಹಾಗೆಯೇ ಬಂಧುಬಳಗ ಇವರಾರೂ 


ಜೊತೆಯಲ್ಲಿ ಹೋಗುವುದಿಲ್ಲ. ಆದುದರಿಂದ ಹೇ!ಮಾನವರೇ;ಶ್ರೀ 


ಕಮಲಾಪತಿಯನ್ನು ಭಜಿಸುವವರಾಗಿ.


ಸಕಲಮೇವ ಚಲಂ ಸಚರಾಚರಂ |

ಜಗದಿದಂ ಸುತರಾಂ ಧನ ಯೌವ್ವನಮ್ ||
ಸಮವಲೋಕ್ಯ ವಿವೇಕದೃಶಾ ದ್ರುತಂ |
ಭಜತರೇ ಮನುಜಾ: ಕಮಲಾಪತಿಮ್  ||೬||

ಭಾವಾರ್ಥ:-ಚರಾಚರದಿಂದ ಕೂಡಿರುವ ಈ ಜಗತ್ತೆಲ್ಲವೂ;ಮತ್ತು 


ಅದರಂತೆಯೇ ಯೌವನ,ಸಂಪದವೆಲ್ಲವೂ ತೀರಾ 


ಕ್ಷಣಿಕವಾಗಿರುವುದು.ಇದನ್ನು ವಿವೇಕಯುತ ದೃಷ್ಟಿಯಿಂದ 


ವಿವೇಚಿಸಿ ನೋಡಿ.ಅದ್ದರಿಂದ.ಹೇ!ಮಾನವರೇ;ಶ್ರೀ 


ಕಮಲಾಪತಿಯನ್ನು ಭಜಿಸುವವರಾಗಿ.


ವಿವಿಧರೋಗಯುತಂ ಕ್ಷಣಭಂಗುರಂ |

ಪರವಶಂ ನವಮಾರ್ಗಮಲಾಕುಲಮ್ ||
ಪರಿನಿರೀಕ್ಷ್ಯ ಶರೀರಮಿದಂ ಸ್ವಕಂ |
ಭಜತರೇ ಮನುಜಾ: ಕಮಲಾಪತಿಮ್  ||೭||

ಭಾವಾರ್ಥ:-ಈ ದೇಹವು ನಾನಾವಿಧದ ರೋಗಗಳಿಗೆ 


ಆಶ್ರಯತಾಣವಾಗಿದೆ.ಹಾಗೆಯೇ ಕ್ಷಣಿಕವಾದುದು.ಮಾತ್ರವಲ್ಲದೆ 


ಪರವಶವರ್ತಿಯಾಗಿರುವುದಾಗಿದೆ.ಅದೂ ಅಲ್ಲದೆ ಮಲಾದಿ 


ಕಲ್ಮಷಗಳಿಂದ ತುಂಬಿ ಒಂಭತ್ತು ರಂಧ್ರಗಳಿಂದ 


ಕೂಡಿರುವಂತಹದೆಂಬುದನ್ನು ಅರಿತು ಎಲೈ ಮನುಜರೇ;ಶ್ರೀ 


ಕಮಲಾಪತಿಯನ್ನು ಭಜಿಸುವವರಾಗಿ.


ಮುನಿವರೈರನಿಶಂ ಹೃದಿಭಾವಿತಂ |

ಶಿವವಿರಿಂಚಿ ಮಹೇಂದ್ರನುತಂ ಸದಾ ||
ಮರಣಜನ್ಮ ಜರಾಭಯ ಮೋಚನಂ |
ಭಜತರೇ ಮನುಜಾ: ಕಮಲಾಪತಿಮ್  ||೮||

ಭಾವಾರ್ಥ:-ಶ್ರೇಷ್ಟಮುನಿಜನರು ನಿರಂತರ ತಮ್ಮ 


ಮನೋಮಂದಿರದಲ್ಲಿ ಯಾರನ್ನು ಧ್ಯಾನಿಸುವರೋ ಶಿವ ಬ್ರಹ್ಮ 


ಇಂದ್ರಾದಿ ದೇವಗಣ ಸಮೂಹವೆಲ್ಲವೂ ಅನುದಿನವೂ ಯಾರಿಗೆ 


ನಮಿಸುವರೋ ಮತ್ತು ಜನನ ಮರಣ ರೋಗ ಮುಪ್ಪುಗಳ ಭೀತಿಯನ್ನು 


ಯಾವಾತನು ದೂರೀಕರಿಸುವನೋ,ಎಲೈ ಮನುಜರೇ;ಅಂತಹಾ ಶ್ರೀ 


ಕಮಲಾಪತಿಯನ್ನು ಭಜಿಸುವವರಾಗಿ.


ಹರಿಪದಾಷ್ಟಕ ಮೇತದನುತ್ತಮಂ |

ಪರಮಹಂಸಜನೇನ ಸಮೀರಿತಮ್ ||
ಪಠತಿಯಸ್ತು ಸಮಾಹಿತಚೇತಸಾ |
ವ್ರಜತಿ ವಿಷ್ಣುಪದಂ ಸ ನರೋ ಧ್ರುವಮ್  ||೯||

ಭಾವಾರ್ಥ:-ಶ್ರೇಷ್ಠ ಮಹರ್ಷಿಗಳಿಂದ ಸ್ತುತಿಸಲ್ಪಟ್ಟ 


ಅಧಿಕತಮವಾಗಿರುವ ಭಗವಾನ್ ಶ್ರೀಹರಿಯ  ಈ ಅಷ್ಟಕಗಳನ್ನು 


ಸಮಾಧಾನ ಚಿತ್ತನಾಗಿ ಪಠಿಸುವಾತನು ಭಗವಾನ್ ಶ್ರೀ ಮಹಾವಿಷ್ಣುವಿನ 


ಶ್ರೇಷ್ಟಲೋಕವನ್ನು ಖಚಿತವಾಗಿ ಪಡೆಯುವನು.

*********************************************************************
  || ಇತಿ ಶ್ರೀ ಕಮಲಾಪತ್ಯಷ್ಟಕಮ್ ||  || ಈ ರೀತಿಯಾಗಿ ಕಮಲಾಪತ್ಯಷ್ಟಕಗಳ ಭಾವಾರ್ಥವಾಗಿದೆ ||

*********************************************************************
                                                -೧೭-
  || ಶ್ರೀ ಹರಿನಾಮ ಮಾಲಾಸ್ತೋತ್ರಮ್ ||
 ********************************
ಗೋವಿಂದಂ ಗೋಕುಲಾನಂದಂ |
ಗೋಪಾಲಂ ಗೋಪೀವಲ್ಲಭಂ ||
ಗೋವರ್ಧನೋದ್ಧರಂ ಧೀರಂ |
ತಂ ವಂದೇ ಗೋಮತಿ ಪ್ರಿಯಂ ||೧||

ಭಾವಾರ್ಥ:-ಗೋವಿಂದನೂ,ಗೋಕುಲಕ್ಕೆ ಆನಂದದಾಯಕನೂ,ಗೋಪಾಲನೂ,ಗೋಪಿಕಾ ಸ್ತ್ರೀಯರ ಒಡೆಯನಾದವನೂ, ಗೋವರ್ಧನ ಗಿರಿಯನ್ನು ಉದ್ಧರಿಸಿದವನೂ,ಬಲಶಾಲಿಯೂ,ಜ್ಞಾನಿಯೂ ಆಗಿದ್ದು ಗೋಮತೀ ನದಿಯ ತೀರವನ್ನು ಮೆಚ್ಚಿದವನೂ ಆಗಿರುವ ಶ್ರೀ ಹರಿಗೆ ನಾನು ನಮಿಸುವೆನು.


ನಾರಾಯಣಂ ನಿರಾಕಾರಂ |

ನರವೀರಂ ನರೋತ್ತಮಮ್ ||
ನೃಸಿಂಹಂ ನಾಗನಾಥಂ ಚ |
ತಂ ವಂದೇ ನರಕಾಂತಕಮ್ ||೨||

ಭಾವಾರ್ಥ:-ಆಕಾರ ರಹಿತನೂ,ನಾರಾಯಣನೂ,ನರರಲ್ಲಿ ಶೂರನೂ,ನರರಲ್ಲಿ ಅಗ್ರಗಣ್ಯನೂ,ನೃಸಿಂಹ ರೂಪನೂ,ನಾಗಗಳಿಗೊಡೆಯನೂ ನರಕಕ್ಕೆ ಯಮಸ್ವರೂಪನೂ ಆಗಿರುವ ಶ್ರೀಹರಿಯನ್ನು ನಾನು ಭಜಿಸುವೆ.


ಪೀತಾಂಬರಂ ಪದ್ಮನಾಭಂ |

ಪದ್ಮಾಕ್ಷಂ ಪುರುಷೋತ್ತಮಮ್ ||
ಪವಿತ್ರಮ್ ಪರಮಾನಂದಂ  |
ತಂ ವಂದೇ ಪರಮೇಶ್ವರಮ್ ||೩||

ಭಾವಾರ್ಥ:-ಪೀತಾಂಬರಧಾರಿಯೂ,ಪದ್ಮನಾಭನೂ,ಕಮಲನಯನನೂ,ಪುರುಷೋತ್ತಮನೂ, ಪಾವನಮೂರ್ತಿಯೂ,  ಪರಮಾನಂದದಾಯಕನೂ,ಆಗಿರುವಂತಹಾ ಪರಮೇಶ್ವರನನ್ನು ಸ್ತುತಿಸುವೆ.


ರಾಘವಂ ರಾಮಚಂದ್ರಂ ಚ |

ರಾವಣಾರಿಂ ರಮಾಪತಿಮ್ ||
ರಾಜೀವಲೋಚನಂ ರಾಮಂ |
ತಂ ವಂದೇ ರಘುನಂದನಮ್ ||೪||

ಭಾವಾರ್ಥ:-ರಾಘವನೂ,ರಾಮಚಂದ್ರನೂ,ರಾವಣನ ವೈರಿಯೂ,ಲಕ್ಷ್ಮೀಪತಿಯೂ,ಕಮಲನೇತ್ರನೂ,ರಾಮನೂ ಆಗಿರುವ ರಘುಕುಲನಂದನನನ್ನು ನಾನು ಸ್ತುತಿಸುವೆನು.


ವಾಮನಂ ವಿಶ್ವರೂಪಂ ಚ |

ವಾಸುದೇವಂ ಚ ವಿಠ್ಠಲಮ್ ||
ವಿಶ್ವೇಶ್ವರಂ ವಿಭುಂ ವ್ಯಾಸಂ |
ತಂ ವಂದೇ ವೇದವಲ್ಲಭಮ್ ||೫||

ಭಾವಾರ್ಥ:-ವಾಮನನೂ,ವಿಶ್ವ ಸ್ವರೂಪನೂ,ವಾಸುದೇವನೂ,ವಿಠ್ಠಲನೂ,ವಿಶ್ವೇಶ್ವರನೂ,ದೊರೆಯೂ,ವ್ಯಾಸನೂ ಆಗಿರುವ ವೇದಗಳ ಒಡೆಯನಿಗೆ ನಾನು ವಂದಿಸುವೆ.


ದಾಮೋದರಂ ದಿವ್ಯಸಿಂಹಂ |

ದಯಾಲುಂ ದೀನನಾಯಕಮ್ ||
ದೈತ್ಯಾರಿಂ ದೇವದೇವೇಶಂ |
ತಂ ವಂದೇ ದೇವಕೀಸುತಮ್ ||೬||

ದಾಮೋದರನೂ,ದಿವ್ಯಸಿಂಹನೂ,ದಯಾವಂತನೂ,ದೀನರ ರಕ್ಷಕನೂ,ದೈತ್ಯರ ಶತ್ರುವೂ,ದೇವರದೇವನೂ ಆಗಿರುವ ದೇವಕೀತನಯನಿಗೆ ನಾನು ನಮಿಸುವೆನು.


ಮುರಾರಿಂ ಮಾಧವಂ ಮತ್ಸ್ಯಂ |

ಮುಕುಂದಂ ಮುಷ್ಟಿಮರ್ದನಮ್ ||
ಮಂಜಕೇಶಂ ಮಹಾಬಾಹುಂ |
ತಂ ವಂದೇ ಮಧುಸೂದನಮ್ ||೭||

ಭಾವಾರ್ಥ:-ಮುರನಶತ್ರುವೂ,ಲಕ್ಷ್ಮೀಕಾಂತನೂ,ಮತ್ಸ್ಯಾವತಾರಿಯೂ,ಮುಕುಂದನೂ, ಮುಷ್ಟಿಕಾಸುರನನ್ನುಮರ್ದಿಸಿದವನೂ,ಚೆಲುವಾದತಲೆಗೂದಲುಗಳುಳ್ಳವನೂ,ವೀರನೂ,ಆಗಿರುವ ಮಧುವೆಂಬ ದೈತ್ಯಸಂಹಾರಿಗೆ ನಾನು ನಮಿಸುವೆನು.


ಕೇಶವಂ ಕಮಲಾಕಾಂತಂ |

ಕಾಮೇಶಂ ಕೌಸ್ತುಭಪ್ರಿಯಮ್ ||
ಕೌಮೋದಿದಕೀಧರಂ ಕೃಷ್ಣಂ |
ತಂ ವಂದೇ ಮಧುಸೂದನಮ್ ||೮|

ಭಾವಾರ್ಥ:-ಕೇಶವನೂ,ಕಮಲಾಪತಿಯೂ,ಮನ್ಮಥಪಿತನೂ,ಕೌಸ್ತುಭಹಾರವನ್ನು ಧರಿಸಿದವನೂ,ಗಧೆಯನ್ನು ಧರಿಸಿರುವವನೂ,ಕೃಷ್ಣನಾಗಿ ಕೌರವರಿಗೆ ಯಮ ಸ್ವರೂಪನು ಆದ ಆ ಶ್ರೀಹರಿಗೆ ನಾನು ನಮಿಸುವೆನು.


ಭೂಧರಂ ಭುವನಾನಂದಂ |

ಭೂತೇಶಂ ಭೂತನಾಯಕಮ್ ||
ಭುವನೈಕಂ ಭುಜಂಗೇಶಂ |
ತಂ ವಂದೇ ಭವನಾಶನಮ್ |೯||

ಭಾವಾರ್ಥ:-ಭುವಿಯನ್ನುಧರಿಸಿದವನೂ,ವಿಶ್ವಾನಂದದಾಯಕನೂ,ಭೂತಗಣಾಧಿಪತಿಯೂ, ಭೂತಾದಿಗಣಗಳ ನಾಯಕನೂ,ಭುವನಕ್ಕೆ ಏಕಮಾತ್ರನೂ,ಸರ್ಪಕುಲಾಧಿಪನೂ ಆಗಿರುವ ಸಾಂಸಾರಿಕ ತಾಪತ್ರಯ ನಿವಾರಕನಿಗೆ ನಾನು ವಂದಿಸುವೆ.


ಜನಾರ್ದನಂ ಜಗನ್ನಾಥಂ |

ಜಗಜ್ಜಾಡ್ಯ ವಿನಾಶಕಮ್ ||
ಜಾಮದಗ್ನ್ಯಂ ಪರಂಜ್ಯೋತಿ: |
ತಂ ವಂದೇ ಜಲಶಾಯಿನಮ್ ||೧೦||

ಭಾವಾರ್ಥ:-ಜನಾರ್ದನನೂ,ಜಗತ್ತಿನಒಡೆಯನೂ,ಜಗದ ಅಜ್ಞಾನನಾಶಕನೂ, ಜಮದಗ್ನಿಯ ತನಯನೂ,ಮಹತ್ತಾದಜ್ಯೋತಿಸ್ವರೂಪನೂ,ಜಲಧಿಶಯನನೂ ಆಗಿರುವ ಶ್ರೀಹರಿಗೆ ನಾನು ವಂದಿಸುವೆನು.


ಚತುರ್ಭುಜಂ ಚಿದಾನಂದಂ |

ಚಾಣೂರಮಲ್ಲ ಮರ್ದನಮ್ ||
ಚರಾಚರಂ ಗತಂ ದೇವಂ |
ತಂ ವಂದೇ ಚಕ್ರಪಾಣಿನಮ್  ||೧೧||

ಭಾವಾರ್ಥ:-ಚತುರ್ಭುಜನೂ,ಪರಮಾನಂದನೂ,ಮಲ್ಲ ಚಾಣೂರರನ್ನು ಸಂಹರಿಸಿದವನೂ,ಚರಾಚರ ಜಗತ್ಸ್ವರೂಪನೂ,ಕೈಯಲ್ಲಿ ಚಕ್ರವನ್ನು ಹಿಡಿದಿರುವವನೂ ಆಗಿರುವ ಶ್ರೀಹರಿಗೆ ನಾನು ನಮಸ್ಕರಿಸುವೆನು.


ಶ್ರೀಯ:ಕರಂ ಶ್ರೀಯೋನಾಥಂ |

ಶ್ರೀಧರಂ ಶ್ರೀವರಪ್ರದಮ್ ||
ಶ್ರೀವತ್ಸಲಧರಂ ಸೌಮ್ಯಂ |
ತಂ ವಂದೇ ಶ್ರೀಸುರೇಶ್ವರಮ್ ||೧೨||

ಭಾವಾರ್ಥ:-ಸಂಪತ್ಪ್ರದಾಯಕನೂ,ಲಕ್ಷ್ಮೀಶನೂ,ಲಕ್ಷ್ಮಿಯನ್ನು ಧರಿಸಿಕೊಂಡಿರುವವನೂ,ಸಂಪದದ ವರವನ್ನು ಕರುಣಿಸುವವನೂ,ಶ್ರೀವತ್ಸವೆಂಬ ಲಾಂಛನವನ್ನು ಹೊಂದಿರುವವನೂ,ಸೌಮ್ಯ ಸ್ವರೂಪನೂ ಆಗಿರುವ ಸುರಾಧಿಪತಿಗೆ ನಾನು ನಮಸ್ಕರಿಸುವೆನು.


ಯೋಗೀಶ್ವರಂ ಯಜ್ಞಪತಿಂ |

ಯಶೋದಾನಂದದಾಯಕಮ್ ||
ಯಮುನಾಜಲ ಕಲ್ಲೋಲಂ |
ತಂ ವಂದೇ ಯದುನಾಯಕಮ್  ||೧೩||

ಭಾವಾರ್ಥ:-ಯೋಗೀಶ್ವರನೂ,ಯಜ್ಞಾಧಿಪತಿಯೂ,ತಾಯಿಯಶೋದೆಗೆ ಮುದವನ್ನು ಕೊಡುವಾತನೂ,ಯಮುನಾನದೀ ನಿರಿನಲ್ಲಿ ನೀರಾಟವಾಡುವವನೂ,ಯದುಕುಲಶ್ರೇಷ್ಠನೂ ಆಗಿರುವಾತನಿಗೆ ನಾನು ವಂದಿಸುವೆ.


ಶಾಲಗ್ರಾಮ ಶಿಲಾಶುದ್ಧಂ |

ಶಂಖ ಚಕ್ರೋಪಶೋಭಿತಮ್ ||
ಸುರಾಸುರ ಸದಾ ಸೇವ್ಯಂ |
ತಂ ವಂದೇ ಸಾಧುವಲ್ಲಭಮ್ ||೧೪||

ಭಾವಾರ್ಥ:-ಶಾಲಿಗ್ರಾಮಶಿಲೆಯನ್ನು ಪಾವನಗೊಳಿಸಿದವನೂ,ಶಂಖ ಚಕ್ರಗಳಿಂದ ಪ್ರಕಾಶಿಸುವವನೂ,ದೇವದಾನವಾದಿಗಳಿಂದ ನಿರಂತರ ಸೇವೆಯನ್ನು ಸ್ವೀಕರಿಸುತ್ತಿರುವಾತನೂ,ಸಂತಮಹಾಂತರ ಪಾಲಕನೂ ಆಗಿರುವ ಶ್ರೀಹರಿಗೆ ನಾನು ವಂದಿಸುವೆನು.


ತ್ರಿವಿಕ್ರಮಂ ತಪೋಮೂರ್ತಿಂ |

ತ್ರಿವಿಧಾಘೌಘ ನಾಶನಮ್ ||
ತ್ರಿಸ್ಥಲಂ ತೀರ್ಥರಾಜೇಂದ್ರಂ |
ತಂ ವಂದೇ ತುಲಸಿಪ್ರಿಯಮ್  ||೧೫||

ಭಾವಾರ್ಥ:-ಮೂರು ಲೋಕಗಳನ್ನು ಜಯಿಸಿದಾತನೂ,ಯೋಗನಿರತನೂ,ಮೂರುಬಗೆಯ ಪಾಪಗಳ ನಾಶಕನೂ,ಮೂರು ಸ್ಥಾನಗಳಸ್ವರೂಪನೂ,ತೀರ್ಥರಾಜೇಂದ್ರನೂ ಆಗಿರುವ ತುಲಸೀಪ್ರಿಯನಿಗೆ ನಾನು ನಮಿಸುವೆನು.


ಅನಂತಮಾದಿ ಪುರುಷಮ್ |

ಅಚ್ಯುತಂ ಚ ವರ ಪ್ರದಮ್ ||
ಆನಂದಂಚ ಸದಾನಂದಂ |
ತಂ ವಂದೇ ಚಾಘನಾಶನಮ್ ||೧೬||

ಭಾವಾರ್ಥ:-ಅನಂತನೂ,ಅನಾದಿ ಪುರುಷನೂಅಚ್ಯುತನೂ,ವರದಾಯಕನೂ,ಆನಂದ ಸ್ವರೂಪನೂ,ನಿರಂತರ ಆನಂದ ಪ್ರದಾಯಕನೂ ಅಗಿರುವ ಆ ಪಾಪ ನಿವಾರಕ ಶ್ರೀಹರಿಗೆ ನಾನು ವಂದಿಸುವೆನು.


ಲೀಲಯಾಧೃತಭೂಭಾರಂ |

ಲೋಕಸತ್ತ್ವೇಕ ವಂದಿತಮ್ ||
ಲೋಕೇಶ್ವರಂ ಚ ಶ್ರೀಕಾಂತಂ |
ತಂ ವಂದೇ ಲಕ್ಷ್ಮಣಪ್ರಿಯಮ್ ||೧೭||

ಭಾವಾರ್ಥ:-ತನ್ನಚೇಷ್ಟೆಯಿಂದ ಭುವಿಯನ್ನು ಹೊತ್ತವನೂ,ಮೂರ್ಲೋಕಗಳ ಇರುವಿಕೆಯಲ್ಲಿನ ಏಕೈಕ ವಂದಿತಾರ್ಹನೂ, ಲೋಕಾಧಿಪತಿಯೂ, ಲಕ್ಷ್ಮೀಶನೂ,ಲಕ್ಷ್ಮಣನಿಗೆ ಪ್ರಿಯನಾದವನೂ ಆಗಿರುವ ಶ್ರೀಹರಿಗೆ ನಾನು ನಮಿಸುವೆ.


ಹರಿಂಚ ಹರಿಣಾಕ್ಷಂ ಚ |

ಹರಿನಾಥಂ ಹರಿ ಪ್ರಿಯಮ್ ||
ಹಲಾಯುಧ ಸಹಾಯಂ ಚ |
ತಂ ವಂದೇ ಹನುಮತ್ಪತಿಮ್ ||೧೮||

ಭಾವಾರ್ಥ:-ಹರಿಯೂ,ಚಿಗರೆಗಣ್ಣಿನವನೂ,ಹರಿನಾಥನೂ,ಹರಿ ಪ್ರಿಯನೂ,ಬಲರಾಮನ ಸಹವರ್ತಿಯೂ,ಹನುಮನ ದೊರೆಯೂ ಆಗಿರುವ ಶ್ರೀಹರಿಗೆ ನಾನು ವಂದಿಸುವೆನು.


ಹರಿನಾಮ ಕೃತಾಮಾಲಾ |

ಪವಿತ್ರಾ ಪಾಪನಾಶಿನಿ ||
ಬಲಿರಾಜೇಂದ್ರೇಣ ಚೋಕ್ತಾ |
ಕಂಠೇ ಧಾರ್ಯಾಪ್ರಯತ್ನತ: ||೧೯||

ಭಾವಾರ್ಥ:-ಬಲಿರಾಜೇಂದ್ರನಿಂದ ಸ್ತುತಿಸಲ್ಪಟ್ಟ ಈ ಹರಿನಾಮಗಳಿಂದ ಕೂಡಿದ ಮಾಲೆಯು ಪವಿತ್ರವೂ,ಪಾವನವೂ,ಪಾಪನಾಶಕವೂ ಆಗಿದ್ದು ಇದನ್ನು ಪ್ರಯತ್ನ ಪೂರ್ವಕವಾಗಿ ಕಂಠದಲ್ಲಿ ಧರಿಸಲು ಯೋಗ್ಯವಾದುದಾಗಿದೆ.

*********************************************************************
           || ಇತಿ ಶ್ರೀ ಬಲಿರಾಜೇಂದ್ರೇಣೋಕ್ತಂ ಶ್ರೀಹರಿಮಾಲಾ ಸ್ತೋತ್ರಮ್ ||
|| ಈ ತೆರನಾಗಿ ಬಲಿರಾಜನಿಂದ ಹೇಳಲಾಗಿರುವ ಶ್ರೀ ಹರಿಮಾಲಾಸ್ತೋತ್ರಗಳ ಭಾವಾರ್ಥವಾಗಿದೆ. ||

*********************************************************************
                                -೧೮-
   ||ಶರಣಾಗತಿ ಗದ್ಯಮ್ ||
 *********************
ಪಿತರಂ ಮಾತರಂ ದಾರಾನ್ ಪುತ್ರಾನ್ ಬಂಧೂನ್ ಸಖೀನ್ ಗುರೂನ್ |
ರತ್ನಾನಿ ಧನಧಾನ್ಯಾನಿ ಕ್ಷೇತ್ರಾಣಿ ಚ ಗೃಹಾಣಿ ಚ ||
ಸರ್ವಧರ್ಮಾಂಶ್ಚ ಸಂತ್ಯಜ್ಯ ಸರ್ವಕಾಮಾಂಶ್ಚ ಸಾಕ್ಷರಾನ್ |
ಲೋಕವಿಕ್ರಾಂತಚರಣೌ ಶರಣಂ ತೇsವಜಂ ವಿಭೋ  ||೧||

ಭಾವಾರ್ಥ:-ಹೇ!ದೊರೆಯೇ;ಅಮ್ಮ,ಅಪ್ಪ,ಹೆಂಡತಿ,ಮಕ್ಕಳು,ಇಷ್ಟರು,


ಮಿತ್ರರು,ಗುರುಗಳು, ರತ್ನಾದಿಗಳು,ಧನಧಾನ್ಯಾದಿಗಳು,ಸಮಸ್ತ 


ಧರ್ಮಗಳು,ಮೋಕ್ಷವನ್ನೊಳಗೊಂಡ ಸಮಸ್ತ 


ಬಯಕೆಗಳು,ಇವೆಲ್ಲವುಗಳೆಲ್ಲವನ್ನೂ ಬಿಟ್ಟು ಮೂರುಲೋಕಗಳನ್ನು 


ಆವರಿಸಿದ ನಿನ್ನ ಚರಣಗಳಿಗೆ ನಾನು ಶರಣಾಗುವೆನು. 


ತ್ವಮೇವ ಮಾತಾ ಚ ಪಿತಾ ತ್ವಮೇವ |

ತ್ವಮೇವ ಬಂಧುಶ್ಚ ಗುರುಸ್ತ್ವಮೇವ ||
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ |
ತ್ವಮೇವ ಸರ್ವಂ ಮಮ ದೇವದೇವ  ||೨||

ಭಾವಾರ್ಥ:-ನೀನೇ ತಾಯಿ;ತಂದೆಯೂ ನೀನೇ; ನೀನೆ ಬಂಧುವು ;ಗುರುವೂ 


ನೀನೆ;ನೀನೆ ವಿದ್ಯೆಯು,ಧನವೂ ನೀನೆ,ಎಲೈ ದೇದೇವನೇ,ನನಗೆ ನೀನೆ 


ಸರ್ವಸ್ವವೂ ಆಗಿರುವೆ.


ಅಪಾರಕರುಣಾಂಬುಧೇ,ಅನಾಲೋಚಿತ-ವಿಶೇಷಾಶೇಷ-

ಲೋಕಶರಣ್ಯ-ಪ್ರಣತಾರ್ತಿಹರ,ಆಶ್ರಿತವಾತ್ಸಲ್ಯೈಕ-
ಮಹೋದಧೇ,ಅನವರತ-ವಿದಿತ-ನಿಖಿಲ-ಭೂತಜಾತ-
ಯಾಥಾತ್ಮ್ಯ,ಸತ್ಯಕಾಮ,ಸತ್ಯಸಂಕಲ್ಪ,ಆಪತ್ಸಖ,
ಕಾಕುತ್ಸ್ಥ,ಶ್ರೀಮನ್ನಾರಾಯಣ,ಪುರುಷೋತ್ತಮ,
ಶ್ರೀರಂಗನಾಥ,ಮಮನಾಥ,ನಮೋsಸ್ತುತೇ ||೩||

ಭಾವಾರ್ಥ:-ಅಪಾರವಾಗಿರುವ ಕರುಣಾಸಾಗರನೇ,ಶರಣು ಹೊಗಲು 


ಇಚ್ಚಿಸುವವರಲ್ಲಿ ಜಾತಿ,ಗುಣ,ವೃತ್ತಿ,ಇತ್ಯಾದಿಯಾಗಿ ಯಾವುದೇ 


ಹೆಚ್ಚಳಗಳ ಬಗ್ಗೆ ಯೋಚಿಸದೆಯೇ ವಿಶ್ವಕ್ಕೆಲ್ಲಾ ಶರಣು ಹೊಗಲು 


ಯೋಗ್ಯನಾಗಿರುವವನೇ,ನಮಿಸುವವರ ಸಂಕಷ್ಟಗಳನ್ನು 


ಪರಿಹರಿಸುವವನೇ,ಅವಲಂಬಿಸಿದವರಿಗೆ ಸಾಟಿಯಿಲ್ಲದ 


ವಾತ್ಸಲ್ಯಗುಣದ ಲಕ್ಷ್ಮಿಯ ಹಾಗಿರುವವನೂ,ಸಮಸ್ತ ಪ್ರಾಣಿ 


ಸಮೂಹದ ನೈಜ ಗುಣವನ್ನು ಸದಾ 


ಅರಿತಿರುವವನೂ,ಸತ್ಯಕಾಮನೂ,ಸತ್ಯಸಂಕಲ್ಪನೂ,ಆಪತ್ತಿಗೊಳಗಾದ


ವರಿಗೆಆಪ್ತನೂ,ಕಾಕುತ್ಸ್ಥ 


ವಂಶದಶ್ರೀರಘುರಾಮನೂ,ಶ್ರೀಮನ್ನಾರಾಯಣನೂ,ಪುರುಷೋತ್ತಮನೂ


,ಶ್ರೀರಂಗನಾಥನೂ, ನನ್ನೊಡೆಯನೂ  ಆಗಿರುವ ನಿನಗೆ ಇದೋ ನಾನು 


ನಮಿಸುವೆನು.


ಕದಾsಹಂ ಭಗವಂತಂ,ನಾರಾಯಣಂ,ಮಮಕುಲ-

ನಾಥಂ,ಮಮಕುಲದೈವತಂ,ಮಮಕುಲಧನಂ,ಮಮ
ಭೋಗ್ಯಂ,ಮಮ ಮಾತರಂ,ಮಮ ಪಿತರಂ,ಮಮ
ಸರ್ವಂ,ಸಾಕ್ಷಾತ್ಕರವಾಣಿ ಚಕ್ಷುಷಾ?

ಕದಾsಹಂ ಭಗವತ್-ಪಾದಾಂಬುಜ-ದ್ವಯಂ ಸಂಗ್ರಹಿ-

ಷ್ಯಾಮಿ?ಕದಾsಹಂ ಭಗವತ್-ಪದಾಂಬುಜ-ದ್ವಯ-
ಪರಿಚರ್ಯಾಶಯಾ ನಿರಸ್ತ-ಸಮಸ್ತೇತರ-ಭೋಗಾಶ:,
ಅಪಗತ-ಸಮಸ್ತ-ಸಾಂಸರಿಕ-ಸ್ವಭಾವ: ತತ್ಪದಾಂಬುಜ-
ದ್ವಯಂ ಪ್ರವೇಕ್ಷ್ಯಾಮಿ?

ಕದಾsಹಂ ಭಗವತ್ಪಾದಾಂಬುಜ-ದ್ವಯ-ಪರಿಚರ್ಯಾ-

ಕರಣಯೋಗ್ಯ:,ತದೇಕಭೋಗ:,ತತ್ಪಾದೌ ಪರಿಚರಿಷ್ಯಾಮಿ?
ಕದಾ ಮಾಂ ಭಗವಾನ್ ಸ್ವಕೀಯಯಾ ಅತಿಶೀತಲಯಾ
ದೃಷಾ ಅವಲೋಕ್ಯ,ಸಿಗ್ಧ-ಗಂಭೀರ-ಮಧುರಯಾ ಗಿರಾ
ಪರಿಚರ್ಯಾಯಾಮ್ ಆಜ್ಞಾಪಯಿಷ್ಯತಿ? ||೪||

ಭಾವಾರ್ಥ:-ಭಗವದ್ಸ್ವರೂಪವನ್ನು,ನಾರಾಯಣನನ್ನು,ನನ್ನ ಕುಲದ 


ಒಡೆಯನನ್ನು, ನನ್ನ ಕುಲದೇವರನ್ನು,ನನ್ನ ಕುಲದ 


ಸಂಪದವನ್ನು,ಅನುಭವಿಸಲು ಯೋಗ್ಯವಾದ ನನ್ನ ವಸ್ತುವನ್ನು,ನನ್ನ 


ಮಾತೆಯನ್ನು,ನನ್ನ ಅಪ್ಪನನ್ನು,ನನ್ನ ಸರ್ವಸ್ವವನ್ನು ನನ್ನೀ 


ನಯನಗಳಿಂದ ನಾನೆಂದು ತಾನೇ ಸ್ಪಷ್ಠವಾಗಿ ಕಾಣಬಲ್ಲೆನು?


ನಾನು ಆ ಭಗವಂತನ ಪಾದಾರವಿಂದಗಳನ್ನೆಂದು ತಾನೇ ಶಿರಸಾ ಧರಿಸಲು 


ಸಾಧ್ಯ?ಭಗವಂತನ ಚರಣಾರವಿಂದಗಳ ಆರಾಧನೆ ಮಾಡಬೇಕೆಂಬ 


ಅಭಿಲಾಶೆಯಿಂದ ಇತರ ಅನುಭವ ಯೋಗ್ಯ ವಸ್ತುಗಳ ಬಗೆಗಿನ 


ಅಭಿಲಾಶೆಗಳೆನ್ನೆಲ್ಲಾ ತ್ಯಜಿಸಿ,ಕಳೆದು ಹೋಗಿರುವ ಸಮಸ್ತ 


ಸಾಂಸಾರಿಕ ಗುಣಗಳನ್ನು ತ್ಯಜಿಸಿ ಆ ಭಗವಂತನ ಪಾದಾರವಿಂದ ದ್ವಯಗಳ 


ಒಳಗೆ ನಾನು ಎಂದು ತಾನೇ ಸೇರಲು ಸಾಧ್ಯವಿದೆ?


ಆ ಭಗವಂತನ ಪಾದಾರವಿಂದಗಳ ಆರಾಧನೆ ಮಾಡಲು 


ಯೋಗ್ಯನಾಗುವುದರೊಂದಿಗೆ ಆ ಪೂಜಾ ಕಾರ್ಯ ಮಾತ್ರಾ ನಾನು 


ಅನುಭವಿಸಲು ಯೋಗ್ಯವಾದವುಗಳಾಗಿ ನಾನೆಂದು ತಾನೆ 


ಆರಾಧಿಸಬಲ್ಲೆನು?


ಯಾವತ್ತು ಆ ಭಗವಂತನು ತನ್ನ ಮಂಜುಲವಾದ ದೃಷ್ಟಿಯಿಂದ ನನ್ನತ್ತ 


ನೋಡಿ ಸೌಮ್ಯವೂ,ಸ್ವಾರಸ್ಯವೂ,ಗಂಭೀರವೂ ಆಗಿರುವ 


ನುಡಿಗಳಿಂದತನ್ನ ಆರಾಧಿಸಲು ನನಗೆ ಆಜ್ಞಾಪಿಸಬಹುದು?

*********************************************************************
  || ಇತಿ ಶರಣಾಗತಿ ಗದ್ಯಮ್ ||  || ಈ ರೀತಿಯಾಗಿ ಶರಣಾಗತಿ ಗದ್ಯಗಳ ಭಾವಾರ್ಥವಾಗಿದೆ ||

*********************************************************************
                                                       -೧೯-
  || ದೇವಕೃತ ಗರ್ಭಸ್ತುತಿ: ||
 **********************
ದೇವಾ ಊಚು:|

ಜಗದ್ಯೋ ನಿರಯೋನಿಸ್ತ್ವಮನಂತೋsವ್ಯಯ ಏವ ಚ |

ಜ್ಯೋತಿ: ಸ್ವರೂಪೋಹ್ಯನಿಶ:ಸಗುಣೋನಿರ್ಗುಣೋ ಮಹಾನ್ ||೧||

ಭಾವಾರ್ಥ:-


ದೇವತೆಯರು ಹೇಳಿದರು:-ಎಲೈ ಭಗವಂತನೇ!ನೀನು ಸಮಸ್ತ ವಿಶ್ವದ ಹುಟ್ಟಿಗೆ ಕಾರಣೀಭೂತನಿರುವೆ.ಆದರೆ ನಿನ್ನದಾದ ಯಾವುದೇ ಹುಟ್ಟುವಿಕೆಯ ಜಾಗವಿಲ್ಲ.ನೀನು ಅಂತ್ಯವಿಲ್ಲದವನು.ವಿನಾಶರಹಿತನು.ಪಾಪರಹಿತನು. ಸಗುಣನೂ ಹೌದು. ನಿರ್ಗುಣನೂ ಹೌದು. ಅಂತೆಯೇ ಮಹಾಪರಂಜ್ಯೋತಿ ಸ್ವರೂಪನೂ ಆಗಿರುವೆ.


ಭಕ್ತಾನುರೋಧಾತ್ ಸಾಕಾರೋ ನಿರಾಕಾರೋ ನಿರಂಕುಶ: |

ಸ್ವೇಚ್ಛಾಮಯಶ್ಚ ಸರ್ವೇಶ: ಸರ್ವ: ಸರ್ವಗುಣಾಶ್ರಯ: ||೨||

ಭಾವಾರ್ಥ:-ನೀನು ಆಕಾರರಹಿತನು. ಅದರೂ ಭಕ್ತರ ಆಗ್ರಹದಕ್ಕೊಳಗಾಗಿ ಸಾಕಾರನಾಗಿರುವೆ. ನಿನಗೆ ಯಾರ ನಿಯಂತ್ರಣವೂ ಫಲಿಸುವುದಿಲ್ಲ. ನೀನು ಎಂದೆಂದಿಗೂ ನಿನ್ನಿಚ್ಛೆಯಂತೆಯೇ ಇರುವವನೂ, ಸಮಸ್ತಕ್ಕೂ ಅಧಿಪತಿಯೂ,ಎಲ್ಲಾ ರೂಪಗಳನ್ನು ಹೊಂದಿರುವವನೂ,ಸರ್ವ ಗುಣಗಳಿಗಾಶ್ರಯದಾತನೂ ಆಗಿರುವೆ.


ಸುಖದೋದು:ಖದೋ ದುರ್ಗೋ ದುರ್ಜನಾಂತಕ ಏವ ಚ |

ಸುಭಗೋದುರ್ಭಗೊವಾಗ್ಮಿ ನಿರ್ವ್ಯೂಹೋನಿಖಿಲಾಧಾರೋನಿ:ಶಂಕೋನಿರುಪದ್ರವ: ||೩||

ಭಾವಾರ್ಥ:-ಸಜ್ಜನರಿಗೆ ನೀನು ಹರ್ಷವನ್ನು ನೀಡುವಾತನೂ ದುರ್ಜನರಿಗೆ ನೀನು ಅಹಿತದಾಯಕನೂ,ಘನತೆಯುಳ್ಳವನಾಗಿ ದಾರಿದ್ರ್ಯ ಹಾಗೂ ದುರ್ಜನ ವಿನಾಶಕನೂ ಆಗಿರುವಿ. ವಾಗ್ಮಿಯಾಗಿದ್ದು ತರ್ಕಕ್ಕೆ ನಿಲುಕದವನೂ ಸರ್ವಾಧಾರನೂ ನೀನಾಗಿರುವೆ.ಭೀತಿ ಮತ್ತು ವಿಪತ್ತುಗಳಿಲ್ಲದವನು. 


ನಿರುಪಾದಿಶ್ಚ ನಿರ್ಲಿಪ್ತೋ ನಿರೀಹೋ ನಿಧನಾಂತಕ: |

ಆತ್ಮಾರಾಮ: ಪೂರ್ಣಕಾಮೋ ನಿರ್ದೋಷೋ ನಿತ್ಯ ಏವ ಚ ||೪||

ಭಾವಾರ್ಥ:-ನೀನು ಬಿರುದುಗಳಿಲ್ಲದವನು. ಯಾವುದೇ ಲೇಪ ರಹಿತನು. ಆಶಾ ವಿರಹಿತನು.ಕಾಲನಿಗೆ ಮಹಾಕಾಲನಾಗಿರುವವನು. ಆತ್ಮನಲ್ಲಿ  ವಿಹರಿಸುವವನು.ಆಶೆಗಳನ್ನು ಈಡೇರಿಸಿಕೊಂಡವನು.ದೋಷವಿಲ್ಲದವನಾಗಿ ಶಾಶ್ವತಸ್ವರೂಪನಿರುವೆ.


ಸುಭಗೋದುರ್ಭಗೋವಾಗ್ಮೀ ದುರಾರಾಧ್ಯೋ ದುರತ್ಯಯ : |

ವೇದಹೇತುಶ್ಚ ವೇದಾಂಗೋ ವೇದವಿದ್ ವಿಭು: ||೫||

ಭಾವಾರ್ಥ:-ನೀನು ಸೌಭಾಗ್ಯಶಾಲಿಯಾಗಿರುವೆ. ದೌರ್ಭಾಗ್ಯ ರಹಿತನೂ ಕುಶಲವಾಗ್ಮಿಯೂ ಅಗಿರುವೆ.ನಿನ್ನ ಆರಾಧನೆ ಅಥವಾ ನಿನ್ನನ್ನು ಅತಿಕ್ರಮಿಸುವುದು ಕಠಿಣವಾಗಿದೆ.ಅಸಾಧ್ಯವೂ ಆಗಿದೆ. ನಿನ್ನ ಉಸಿರಿನಿಂದ ವೇದಗಳು ಉತ್ಪನ್ನವಾದವು. ಆದುದರಿಂದ ಅವುಗಳ ಪ್ರಕಾಶಿಸುವಿಕೆಗೆ ನೀನು ಕಾರಣನಿರುವೆ. ಸಮಗ್ರ ವೇದಗಳು ನಿನ್ನ ಸ್ವರೂಪವೇ ಆಗಿವೆ. ಛಂದಸ್ಸು ಮತ್ತು ವೇದಗಳು ನಿನ್ನಿಂದ ಹೊರತಾಗಿಲ್ಲ. ನೀನು ವೇದಜ್ಞಾನಿಯಾಗಿ ಸರ್ವ ವ್ಯಾಪಿಯಾಗಿರುವೆ.


ಇತ್ಯೇಮುಕ್ತಾ ವತೇವಾಶ್ಚ ಪ್ರಣೇಮುಶ್ಚ ಮುಹುರ್ಮುಹು |

ಹರ್ಷಾಶ್ರುಲೋಚನಾ: ಸರ್ವೇ ವವೃಷು: ಕುಸುಮಾನಿ ಚ ||೬||

ಭಾವಾರ್ಥ:-ಈ ರೀತಿಯಾಗಿ ಹೇಳಿದ ದೇವತೆಗಳು ಪುನ:ಪುನ: ಆ ಕೃಷ್ಣ ಸ್ವರೂಪಿಗೆ ನಮಸ್ಕರಿಸಿದರು. ಅವರೆಲ್ಲರ ನಯನಗಳಲ್ಲಿ ಹರ್ಷದಿಂದ ನೀರು ತುಂಬಿಕೊಂಡವು. ಅವರೆಲ್ಲರೂ ಪುಷ್ಪ ವೃಷ್ಟಿಗೈದರು.


ದ್ವಿ ಚತ್ವಾರಿಂಶನ್ನಾಮಾನಿ ಪ್ರಾತರುತ್ಥಾಯ ಯ: ಪಠೇತ್ |

ದೃಢಾಂ ಭಕ್ತಿಂ ಹರೇರ್ದಾಸ್ಯಂ ಲಭತೇ ವಾಂಛಿತಂ ಚ ಯತ್ ||೭||

ಭಾವಾರ್ಥ:-ಯಾವಾತನು ಉಷ:ಕಾಲದಲೆದ್ದು ಈ ಶ್ಲೋಕಗಳಲ್ಲಿ ಹೇಳಿದ ಇಪ್ಪತ್ತನಾಲ್ಕು ನಾಮಗಳನ್ನು ಪಠಿಸುತ್ತಾನೋ ಅವನು ಶ್ರೀಹರಿಯಲ್ಲಿ ಧೃಢವಾದ ಭಕ್ತಿಯುಳ್ಳವನಾಗಿ ದಾಸನ ಭಾವವನ್ನು ಹೊಂದಿ ಸಮಸ್ತ ಮನೋಕಾಮನೆಗಳ ಫಲವನ್ನು ಅನುಭವಿಸುವನು.


ಇತ್ಯೇವಂ ಸ್ತವನಂ ಕೃತ್ವಾ ದೇವಾಸ್ತೇಶ್ವಾಲಯಂ ಯಯು: |

ಬಭೂವ ಜಲವೃಷ್ಟಿಶ್ಚ ನಿಶ್ಚೇಷ್ಟಾ ಮಧುರಾಪುರೀ ||೮||

ಭಾವಾರ್ಥ:-ಈ ರೀತಿಯಾಗಿ ಸ್ತುತಿಸಿ ದೇವತೆಗಳು ತಮ್ಮ ತಮ್ಮ ನೆಲೆಗಳಿಗೆ ತೆರಳಲಾಗಿ ಉತ್ತಮ ಮಳೆ ಸುರಿದು ಆ ಮಧುರಾಪಟ್ಟಣವು ಪ್ರಶಾಂತವಾಯಿತು.

*********************************************************************
||ಇತಿ ದೇವಕೃತ ಗರ್ಭಸ್ತುತಿ:||  ||ಈ ರೀತಿಯಾಗಿ ದೇವ ಕೃತ ಗರ್ಭಸ್ತುತಿಗಳ ಭಾವಾರ್ಥವಾಗಿದೆ||

*********************************************************************
                                                      -೨೦-

   || ಶ್ರೀ ಗೋವಿಂದಾಷ್ಟಕಮ್ ||
  ************************
ಸತ್ಯಂ ಜ್ಞಾನಮನಂತಂ ನಿತ್ಯಮನಾಕಾಶಂ ಪರಮಾಕಾಶಂ |
ಗೋಷ್ಟ ಪ್ರಾಂಗಣರಿಂಗಣಲೋಲಮನಾಯಾಸಂ ಪರಮಾಯಾಸಮ್ ||
ಮಾಯಾಕಲ್ಪಿತನಾನಾಕಾರಮನಾಕಾರಂ ಭುವನಾಕಾರಂ |
ಕ್ಷ್ಮಾಯಾನಾಥಮನಾಥಂ ಪ್ರಣಮತ ಗೋವಿಂದಂ ಪರಮಾನಂದಮ್ ||೧||

ಭಾವಾರ್ಥ:-ಸತ್ಯರೂಪನೂ,ಜ್ಞಾನಸ್ವರೂಪಿಯೂ,ಅನಂತರೂಪಿಯೂ,ಶಾಶ್ವತನೂ,ಆಕಾಶದಿಂದ ಬೇರೆಯವನಾದಾಗ್ಯೂ ಪರಮಾಕಾಶ ಸ್ವರೂಪಿಯೂ,ಗೋಶಾಲಾ ಅಂಕನದಲ್ಲಿ ದಣಿವಿರದೆ ಅಂಬೆಗಾಲಿಕ್ಕಿ ಪರಿಶ್ರಮ ಹೊಂದಿರದಿದ್ದರೂ ಬಹಳ ದಣಿವಾದಂತಿರುವವನೂ, ಆಕಾರರಹಿತನಾದಾಗ್ಯೂ ಭ್ರಾಂತಿಯಿಂದ ಕಲ್ಪಿಸಲ್ಪಟ್ಟ ನಾನಾ ರೂಪಗಳನ್ನು ಧರಿಸಿದ ಭಗವದ್ರೂಪನೂ,ವಿಶ್ವರೂಪದಿಂದ ವ್ಯಕ್ತನಾದವನೂ ಹಾಗೂ ಪೃಥ್ವಿಗೊಡೆಯನಾದಾಗ್ಯೂ ತನಗೆ ಮತ್ತೊಬ್ಬ ಪ್ರಭುವಿಲ್ಲದೆ ಅನಾಥನೆನಿಸಿದವನೂ ಆಗಿರುವ ಪರಮಾನಂದ ಸ್ವರೂಪೀ ಗೋವಿಂದನಿಗೆ ನಮಸ್ಕರಿಸಿರಿ.

ಮೃತ್ಸ್ನಾಮತ್ಸೀಹೇತಿ ಯಷೋದಾತಾಡನಶೈಶವ ಸಂತ್ರಾಸಂ |
ವ್ಯಾಧಿತವಕ್ತ್ರಾssಲೋಕಿತಲೋಕಾಲೋಕಚತುರ್ದಶ ಲೋಕಾಲಿಮ್ ||
ಲೋಕೇತ್ರಯಪುರಮೂಲಸ್ತಂಭಂ ಲೋಕಾಲೋಕಮನಾಲೋಕಂ |
ಲೋಕೇಶಂ ಪರಮೇಶಂ ಪ್ರಣಮತ ಗೋವಿಂದಂ ಪರಮಾನಂದಮ್ ||೨||

ಭಾವಾರ್ಥ:-ಮಕ್ಕಳಾಟಿಕೆಯ ದಿನಗಳಲ್ಲಿ ಮಣ್ಣು ತಿನ್ನುವೆಯೆಂಬ ಕಾರಣಕ್ಕಾಗಿ ತಾಯಿ ಯಶೋದೆಯು ಬಡಿವಳೆಂದು ಹೆದರಿಕೆಗೊಳಗಾದವನೂ ಮತ್ತು ತಾನು ಮಣ್ಣು ತಿಂದಿಲ್ಲವೆಂಬುದನ್ನು ಪ್ರಮಾಣೀಕರಿಸಲು ಬಾಯ್ದೆರೆದು ಹದಿನಾಲ್ಕು ಲೋಕಂಗಳನ್ನು ತೋರಿದವನೂ, ತ್ರಿಲೋಕಗಳಿಗೆ ಮೂಲಾಧಾರನಾದವನೂ, ಲೋಕಾಲೋಕಗಳಿಗೆ ದರ್ಶನಾತೀತನಾದಾಗ್ಯೂ ಲೋಕೇಶನಾದವನೂ, ಪರಮಾನಂದ ರೂಪೀ ಪರಮೇಶ್ವರನಾಗಿರುವ  ಗೋವಿಂದನಿಗೆ ನಮಸ್ಕರಿಸಿರಿ.

ತ್ರೈವಿಷ್ಟಪ ರಿಪುವೀರಘ್ನಂ ಕ್ಷಿತಿಭಾರಘ್ನಂ ಭವರೋಗಘ್ನಂ |
ಕೈವಲ್ಯಂ ನವನೀತಾ ಹಾರಮನಾಹಾರಂ ಭುವನಾಹಾರಮ್ ||
ವೈಮಲ್ಯ ಸ್ಫುಟ ಚೇತೋವೃತ್ತಿ ವಿಶೇಷಾಭಾಸಮನಾಭಾಸಂ |
ಶೈವಂ ಕೇವಲಶಾಂತಂ ಪ್ರಣಮತ ಗೋವಿಂದಂ ಪರಮಾನಂದಮ್ ||೩||

ಭಾವಾರ್ಥ:-ಅಸುರವೀರರನ್ನು ಸಂಹರಿಸಿದಾತನೂ, ಭೂಭಾರವನ್ನು ಹರಣಗೈದವನೂ, ಭವರೋಗ ನಾಶಕನೂ, ಮೋಕ್ಷಪ್ರದಾಯಕನೂ, ವಿಶ್ವವೇ  ಆಹಾರವಾಗಿರುವವನೂ, ಆಹಾರರಹಿತನಾದಾಗ್ಯೂ ಬೆಣ್ಣೆಯನ್ನು ಮೆದ್ದವನೂ, ಆಭಾಸ ವಿರಹಿತನಾದರೂ ಶುದ್ಧಮನದಿಂದ ವಿಶೇಷಾಭಾಸದಿಂದ ದೃಷ್ಟಿಗೆ ಗೋಚರಿಸುವವನೂ, ಸರಿಸಾಟಿಯಿಲ್ಲದವನೂ ಆಗಿರುವ ಪರಮಾನಂದ ರೂಪೀ ಪರಮೇಶ್ವರನಾಗಿರುವ  ಗೋವಿಂದನಿಗೆ ನಮಸ್ಕರಿಸಿರಿ.

ಗೋಪಾಲಂ ಭೂಲೀಲಾ ವಿಗ್ರಹ ಗೋಪಾಲಂ ಕುಲಗೋಪಾಲಂ |
ಗೋಪೀಖೇಲನಗೋವರ್ಧನ ಧೃತಿಲೀಲಾಲಾಲಿತ ಗೋಪಾಲಂ ||
ಗೋಭಿನಿರ್ಗದಿತಗೋವಿಂದ ಸ್ಫುಟನಾಮಾನಂ ಬಹುನಾಮಾನಂ |
ಗೋಪೀಗೋಚರದೂರಂ ಪ್ರಣಮತ ಗೋವಿಂದಂ ಪರಮಾನಂದಮ್ ||೪||

ಭಾವಾರ್ಥ:-ಗೋವುಗಳನ್ನು ಪರಿಪಾಲಿಸುವಾತನೂ, ಭುವಿಯಲ್ಲಿ ಲೀಲೆಗಳನ್ನು ಪ್ರಕಟಿಸಲೋಸುಗ ಗೋಪಾಲಕನಾಗಿ ಪ್ರಕಟವಾದವನೂ, ಗೋಪಿಯರೊಡನೆ ಆಟವಾಡುತ್ತಾ ತನ್ನ ಲೀಲಾ ವಿಶೇಷದಿಂದ ಗೋವರ್ಧನಗಿರಿಯನ್ನೆತ್ತಿ ಗೋಪಾಲಕರನ್ನು ಸಂರಕ್ಷಿಸಿದವನೂ,ಗೋವುಗಳ ಸಂರಕ್ಷಕನಾಗಿ ಗೋವಿಂದನೆಂದು ಪ್ರಸಿದ್ಧಿ ಹೊಂದಿದವನೂ, ಅನೇಕ ಅಂಕಿತ ನಾಮಗಳುಳ್ಳವನೂ,ಗೋಪನೂ,ಗೋಚರವಾಗುವ  ಇಂದ್ರಿಯಸುಖಗಳ ವಿಚಾರದಲ್ಲಿ ಬಾಲಕನೂ,ಆಗಿರುವ ಪರಮಾನಂದ ರೂಪೀ ಪರಮೇಶ್ವರನಾಗಿರುವ  ಗೋವಿಂದನಿಗೆ ನಮಸ್ಕರಿಸಿರಿ.

ಗೋಪೀಮಂಡಲಗೋಷ್ಟೀಭೇದಂ ಭೇಧಾವಸ್ಥಮಭೇದಾಭಂ |
ಶಶ್ವದ್ಗೋಖುರನಿರ್ಧೂತೋತ್ಕೃತಧೂಲೀಧೂಸರ ಸೌಭಾಗ್ಯಮ್ ||
ಶೃದ್ಧಾಭಕ್ತಿಗೃಹೀತಾನಂದ ಮಚಿಂತ್ಯಂ ಚಿಂತಿತ ಸದ್ಭಾವಂ |
ಚಿಂತಾಮಣಿಮಹಿಮಾನಂ ಪ್ರಣಮತ ಗೋವಿಂದಂ ಪರಮಾನಂದಮ್ ||೫||

ಭಾವಾರ್ಥ:-ಗೋಪಿಯರ ಗುಂಪಿನಲ್ಲಿ ಅನೇಕ ವಿಷಯಗಳ ಬಗ್ಗೆ ಮಾತನಾಡುವಾತನೂ, ಭಿನ್ನಾವಸ್ತೆಯಲ್ಲಿರುವವನಾಗಿದ್ದರೂ ಅಭಿನ್ನನಾಗಿ ವ್ಯಕ್ತವಾಗುವವನೂ,ಆಕಳುಗಳ ಗೊರಸಿನಿಂದೆದ್ದ ಧೂಳಿನಿಂದ ಅವುಗಳ ವರ್ಣವನ್ನೇ ಶಾಶ್ವತವಾಗಿ ಪಡೆಯುವ ಸೌಭಾಗ್ಯವಂತನೂ,ನಿಶ್ಚಿಂತನೂ,ಭಕ್ತರ ಶ್ರದ್ಧಾ ಭಕ್ತಿಗಳನ್ನು ಸ್ವೀಕರಿಸುವ ಆನಂದ ರೂಪನೂ,ಸದ್ಭಾವನೆಗಳಿಂದ ಚಿಂತಿತನಾಗಿ ಚಿಂತಾಮಣಿಯೆನಿಸಿರುವ ಪರಮಾನಂದ ರೂಪೀ ಪರಮೇಶ್ವರನಾಗಿರುವ  ಗೋವಿಂದನಿಗೆ ನಮಸ್ಕರಿಸಿರಿ.

ಸ್ನಾನವ್ಯಾಕುಲಯೋಷೀದ್ವಸ್ತ್ರಮುಪಾದಾ ಯಾಗಮುಪಾರೂಢಂ |
ವ್ಯಾದಿತ್ಸಂತೀರಥ ದ್ವಿಗ್ವಸ್ತ್ರಾ ಆದಾತು ಮುಪಾಕರ್ಷಂತಮ್ ||
ನಿರ್ಧೂತದ್ವಯ ಶೋಕವಿಮೋಹಂ ಬುದ್ಧಂ ಬದ್ಧೇರಂತಸ್ಥಂ |
ಸತ್ತಾಮಾತ್ರ ಶರೀರಂ ಪ್ರಣಮತ ಗೋವಿಂದಂ ಪರಮಾನಂದಮ್ ||೬||

ಭಾವಾರ್ಥ:-ಜಳಕವಾಡುತ್ತಲಿರುವ ಗೋಪಿಕಾಂಗನೆಯರ ವಸನಗಳನ್ನಪಹರಿಸಿ ಗೋಳಾಟವಾಡಿಸಿದವನೂ, ಬೆತ್ತಲೆಯಾಗಿರುವ ಅವರು ಬಟ್ಟೆಗಳನ್ನು ಬೇಡಲು ಅವುಗಳನ್ನು ಕೊಡಲೋಸುಗ ತನ್ನೆಡೆಗೆ ಕರೆದು ಅವರು ಆಕರ್ಷಿಸುವಂತೆ ಮಾಡಿದರೂ ತಾನು ಶೋಕ ಮೋಹಗಳನ್ನು ತ್ಯಜಿಸಿದ ಜ್ಞಾನನಿಧಿಯಾಗಿರುವವನೂ,ಮನಸ್ಸು ಮತ್ತು ಬುದ್ಧಿಗಳಿಗೆ ಹೊರಗಿರುವಾತನೂ, ತೋರುವಿಕೆಗೆ ಶರೀರಮಾತ್ರನೂ ಆಗಿರುವ ಪರಮಾನಂದ ರೂಪೀ ಪರಮೇಶ್ವರನಾಗಿರುವ  ಗೋವಿಂದನಿಗೆ ನಮಸ್ಕರಿಸಿರಿ.

ಕಾಂತಂ ಕಾರಣಕಾರಣಮಾದಿಮನಾದಿಂ ಕಾಲ ಘನಾಭಾಸಂ |
ಕಾಲಿಂದೀಗತಕಾಲಿಯಶಿರಸಿ ನೃತ್ಯಂತಂ ಸುವಿನೃತ್ಯಂತಮ್ ||
ಕಾಲಂಕಾಲ ಕಾಲಾತೀತಂ ಕಲಿತಾಶೇಷಂ ಕಲಿದೋಷಘ್ನಂ |
ಕಾಲತ್ರಯಗತಿ ಹೇತುಂ ಪ್ರಣಮತ ಗೋವಿಂದಂ ಪರಮಾನಂದಮ್ ||೭||

ಭಾವಾರ್ಥ:-ಸುಂದರಾಂಗನೂ,ಉದ್ದೇಶಗಳಿಗೆ ಆದಿಮೂಲನಾದವನೂ, ಅನಾದಿ ಪುರುಷನೂ, ಛಾಯಾಸ್ವರೂಪಿಯಾದ ಕಾಲರೂಪನೂ,ಯಮುನಾನದಿಯ ನೀರಿನೊಳಗಿದ್ದ ಕಾಲಿಯನೆಂಬ ನಾಗನ ಹೆಡೆಗಳ ಮೇಲೆ ಮನಮೋಹಕ ನೃತ್ಯವನ್ನು ಗೈದವನೂ, ಕಾಲರೂಪನಾದಾಗ್ಯೂ ಕಾಲನ ಅಂಶಗಳಿಗೆ ಹೊರತಾದವನೂ,  ಎಲ್ಲವನ್ನು ಬಲ್ಲವನೂ,  ಕಲಿದೋಷಹರನೂ,ಭೂತಕಾಲ,ವರ್ತಮಾನಕಾಲ,ಭವಿಷ್ಯತ್ಕಾಲಗಳೆಂಬ ತ್ರಿಕಾಲಗಳ ಆಗುಹೋಗುಗಳಿಗೆ ನಿಮಿತ್ತನೂ ಆಗಿರುವ ಪರಮಾನಂದ ರೂಪೀ ಪರಮೇಶ್ವರನಾಗಿರುವ  ಗೋವಿಂದನಿಗೆ ನಮಸ್ಕರಿಸಿರಿ.

ವೃಂದಾವನ ಭುವಿ ವೃಂದಾರಕಗಣ ವೃಂದಾರಾಧಿತ ವಂದೇsಹಂ |
ಕುಂದಾಭಾಮಲಮಂದಸ್ಮೇರಸುದಾನಂದಂ ಸುಹೃದಾನಂದಮ್ ||
ವಂದಾಶೇಷ ಮಹಾಮುನಿಮಾನಸವಂದ್ಯಾನಂದ ಪದದ್ವಂದ್ವಂ |
ವಂದ್ಯಾಶೇಷಗುಣಾಬ್ಧಿಂ ಪ್ರಣಮತ ಗೋವಿಂದಂ ಪರಮಾನಂದಮ್ ||೮||

ಭಾವಾರ್ಥ:-ವೃಂದಾವನದ ನೆಲದ ಮೇಲೆ ದೇವತಾ ಸಮೂಹಗಳಿಂದಲೂ ವೃಂದಾ ನಾಮಾಂಕಿತೆ ತುಳಸಿಯಿಂದ ಆರಾಧಿಸಲ್ಪಡುವಾತನೂ, ಆಗಿರುವ ಗೋವಿಂದನನ್ನು ಚಿಂತಿಸಿರಿ.ಮೊಲ್ಲೆಮಲ್ಲಿಗೆಯಂತೆ ನಿರ್ಮಲವಾದ ಮುಗುಳ್ನಗೆಯ ಮೂಲಕ ಅಮೃತಾನಂದವನ್ನುಅನುಭವಿಸುತ್ತಿರುವಾತನೂ,ಒಡನಾಡಿಗಳಿಗಾನಂದವನ್ನೀಯುವಾತನೂ,ಮಹಾಯೋಗಿವರ್ಯರಿಂದ ಹೃದಯಪೂರ್ವಕವಾಗಿ ವಂದಿಸಲ್ಪಡುವಾತನೂ, ನಮಸ್ಕರಿಸಲು ಯೋಗ್ಯವಾಗಿರುವ ಚರಣಕಮಲಗಳನ್ನು ಹೊಂದಿರುವಾತನೂ, ಸಮಸ್ತ ಶುಭಗುಣಸಾಗರನೂ ಆಗಿರುವ  ಪರಮಾನಂದ ರೂಪೀ ಪರಮೇಶ್ವರನಾಗಿರುವ ಗೋವಿಂದನಿಗೆ ನಮಸ್ಕರಿಸಿರಿ.

ಗೋವಿಂದಾಷ್ಟಕಮೇತದಧೀತೇ ಗೋವಿಂದಾರ್ಪಿತೇ ಚೇತಾಯೋ |
ಗೋವಿಂದಾಚ್ಯುತ ಮಾಧವ ವಿಷ್ಣೋ ಗೋಕುಲನಾಯಕ ಕೃಷ್ಣೇತಿ ||
ಗೋವಿಂದಾಂಘ್ರಿ ಸರೋಜಧ್ಯಾನಸುಧಾಜಲಧೌತ ಸಮಸ್ತಾ ಘೋ |
ಗೋವಿಂದಂ ಪರಮಾನಂದಾಮೃತ ಮಂತಸ್ಥಂಸ ಸಮಭ್ಯೇತಿ ||೯||

ಭಾವಾರ್ಥ:-ಯಾವಾತನು ಭಗವಂತನಾದ ಗೋವಿಂದನಲ್ಲಿ ಮನವನ್ನಿರಿಸಿ ಗೋವಿಂದಾ, ಅಚ್ಯುತಾ,ಮಾಧವಾ,ವಿಷ್ಣುವೇ,ಗೋಕುಲನಾಯಕಾ,ಶ್ರೀಕೃಷ್ಣಾ ಎನ್ನುತ್ತಾ ಆತನ ಚರಣಾರವಿಂದಗಳ ಧ್ಯಾನ ರೂಪಿಯಾಗಿರುವ ಅಮೃತಜಲದಿಂದ ತನ್ನ ಪಾಪಕೂಪಗಳನ್ನೆಲ್ಲಾ ತೊಳೆದುಕೊಂಡು ಈ ಗೋವಿಂದಾಷ್ಟಕಗಳನ್ನು ಅಧ್ಯಯನ ಮಾಡುವನೋ ಅವನು ತನ್ನ ಅಂತ:ಕರಣದಲ್ಲಿ ನೆಲೆಯಾಗಿರುವ ಪರಮಾನಂದಾಮೃತ ಸ್ವರೂಪೀ ಗೋವಿಂದನ್ನು ಪಡೆಯುತ್ತಾನೆ.
*********************************************************************
|| ಇತಿ ಶ್ರೀ ಗೋವಿಂದಾಷ್ಟಕಮ್ ||  || ಈ ರೀತಿಯಾಗಿ ಶ್ರೀ ಗೋವಿಂದಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
                                                      -೨೧-
  || ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನ ಸ್ತೋತ್ರಮ್  ||
 **************************************
ತ್ವತ್ಪ್ರಜೀವ-ಪ್ರಿಯಮಿಚ್ಛಸಿಚೇನ್ನರಹರಿ-ಪೂಜಾಂಕುರು ಸತತಂ |
ಪ್ರತಿಬಿಂಬಾಲಂಕೃತಿ-ಧೃತಿ-ಕುಶಲೋ ಬಿಂಬಾಲಂಕೃತಿ ಮಾತನುತೇ ||
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |
ಭಜಭಜ ಲಕ್ಷ್ಮೀನರಸಿಂಹಾನಘ-ಪದ-ಸರಸಿಜ ಮಕರಂದಮ್ ||೧||

ಭಾವಾರ್ಥ:-ಮನಸ್ಸಿನ ಭಾವನೆಯಂತಿರುವ ದುಂಬಿಯೇ, ಪ್ರತಿಬಿಂಬವು ಅಲಂಕರಿಸಿರುವಂತೆ ಕಾಣಬೇಕಾದರೆ ಮೂಲಬಿಂಬವು ಅಲಂಕೃತವಾಗಿರಬೇಕಾಗುತ್ತದೆ. ನೀನು ಈ ಸಂಸಾರವೆಂಬ ನೀರಸ ಮರುಭೂಮಿಯಲ್ಲಿ ನಿಷ್ಫಲವಾಗಿ ಸುತ್ತಾಡುತ್ತಿರುವೆ. ಓ;ಜೀವವೇ;ನಿನ್ನ ಒಳಿತನ್ನು ಬಯಸುವಿಯಾದರೆ ನೀನು ನಿರಂತರ ಒಡೆಯ ನರಹರಿಯನ್ನು ಆರಾಧಿಸು. ಆ ಲಕ್ಷ್ಮೀನೃಸಿಂಹನ ಚರಣಾರವಿಂದಗಳನ್ನು ಸ್ತುತಿಸು.ತನ್ಮೂಲಕ ಅವುಗಳಲ್ಲಿನ ಕೇಸರವನ್ನು ಭೋಗಿಸು.

ಶುಕ್ತೌ ರಜತ-ಪ್ರತಿಭಾ ಜಾತಾ ಕಟಕಾಧ್ಯರ್ಥ ಸಮರ್ಥಾ ಚೇದ್ |
ದು:ಖಮಯೀ ತೇ ಸಂಸೃತಿರೇಷಾ ನಿರ್ವೃತಿದಾನೇ ನಿಪುಣಾಸ್ಯಾತ್ ||
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |
ಭಜಭಜ ಲಕ್ಷ್ಮೀನರಸಿಂಹಾನಘ-ಪದ-ಸರಸಿಜ ಮಕರಂದಮ್ ||೨||

ಭಾವಾರ್ಥ:-ಮನಸ್ಸಿನ ಭಾವನೆಯಂತಿರುವ ದುಂಬಿಯೇ,ಸಂಪದವು ಚಿಪ್ಪಿನಲ್ಲಿ ಬಿದ್ದಿರುವ ಬೆಳ್ಳಿಯ ಮೆರುಗಿನಂತಿದೆ.ನೀನಾದರೂ ದು:ಖ ಭರಿತ ಮರುಭೂಮಿಯ ಸಂಸಾರದಲ್ಲಿ ಸುತ್ತಾಡುತ್ತಿರುವೆ.ಯೋಗ್ಯವಾದ ಗುರಿಯನ್ನು ಹೊಂದಲು ನೀನು ಬಯಸುವಿಯಾದರೆ ಶಾಂತಿಯನ್ನು ದಯಪಾಲಿಸುವ  ನಿರಂತರ ಒಡೆಯ ನರಹರಿಯನ್ನು ಆರಾಧಿಸು. ಆ ಲಕ್ಷ್ಮೀನೃಸಿಂಹನ ಚರಣಾರವಿಂದಗಳನ್ನು ಸ್ತುತಿಸು.ತನ್ಮೂಲಕ ಅವುಗಳಲ್ಲಿನ ಕೇಸರವನ್ನು ಭೋಗಿಸು.

ಆಕೃತಿ-ಸಾಮ್ಯಾಚ್ಛಾಲ್ಮಲಿ-ಕುಸುಮೇ ಸ್ಥಲ-ನಲಿತತ್ವ-ಭ್ರಮ್ಸ್ ಮಕರೋ: |
ಗಂಧಸಾವಿಹ ಕಿಮುವಿದ್ಯೇತೇ ವಿಫಲಂಭ್ರಾಮಸಿ ಭೃತವಿರಸೇಸ್ಮಿನ್ ||
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |
ಭಜಭಜ ಲಕ್ಷ್ಮೀನರಸಿಂಹಾನಘ-ಪದ-ಸರಸಿಜ ಮಕರಂದಮ್  ||೩||

ಭಾವಾರ್ಥ:-ಮನೋರೂಪೀ ದುಂಬಿಯೇ;ಆಕೃತಿಯಲ್ಲಿನ ಹೋಲಿಕೆಯ ಕಾರಣದಿಂದ ಬೂರುಗದ ಪುಷ್ಫವು ತಾವರೆ ಪುಷ್ಪವೋ ಎಂಬ ಭ್ರಾಂತಿಯನ್ನು ಹುಟ್ಟಿಸಿ ಯೋಚಿಸುವಂತೆ ಮಾಡುತ್ತದೆ.ಆದರೆ ಅದರಲ್ಲಿ ಗಂಧಪರಿಮಳಗಳಿರುವುದಿಲ್ಲ.ಅಂತೆಯೇ ನೀನು ಈ ಸಂಸಾರವೆಂಬ ನೀರಸ ಮರುಭೂಮಿಯಲ್ಲಿ ನಿಷ್ಫಲವಾಗಿ ಸುತ್ತಾಡುತ್ತಿರುವೆ. ಓ;ಜೀವವೇ;ನಿನ್ನ ಒಳಿತನ್ನು ಬಯಸುವಿಯಾದರೆ ನೀನು ನಿರಂತರ ಒಡೆಯ ನರಹರಿಯನ್ನು ಆರಾಧಿಸು. ಆ ಲಕ್ಷ್ಮೀನೃಸಿಂಹನ ಚರಣಾರವಿಂದಗಳನ್ನು ಸ್ತುತಿಸು.
ತನ್ಮೂಲಕ ಅವುಗಳಲ್ಲಿನ ಕೇಸರವನ್ನು ಭೋಗಿಸು.

ಸಕ್ರಂದನ ವನಿತಾದೀನ್ವಿಷಯಾನ್ಯುಖದಾನ್ಮತ್ವಾ ತತ್ರ ವಿಹರಸೇ |
ಗಂಧಫಲೀ-ಸದೃಶಾನನುತೇsಮೀ ಭೋಗಾನಂತರ ದು:ಖ ಕೃತ: ಸ್ಯು: ||
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |
ಭಜಭಜ ಲಕ್ಷ್ಮೀನರಸಿಂಹಾನಘ-ಪದ-ಸರಸಿಜ ಮಕರಂದಮ್  ||೪||

ಭಾವಾರ್ಥ:-ಭ್ರಮರ ರೂಪೀ ಮನವೇ! ಪುಷ್ಫ,ಪರಿಮಳ,ಸ್ತ್ರೀ ಇತ್ಯಾದಿ ವಿಷಯ ವಸ್ತುಗಳನ್ನು ಸುಖದಾಯಕವೆಂದು ತಿಳಿದು ಅವುಗಳಲ್ಲಿ ವಿಹರಿಸುತ್ತಿರುವೆ. ಪ್ರಿಯಂಗು ವೃಕ್ಷದಂತೆ ಅವು ಅಪಾಯಕಾರಿಯಾದವುಗಳಾಗಿವೆ. ಭೋಗಾನುಭವಾನಂತರ ವ್ಯಥೆಯುತ್ಪನ್ನವಾಗುವುದು. ನೀನು ಈ ಸಂಸಾರವೆಂಬ ನೀರಸ ಮರುಭೂಮಿಯಲ್ಲಿ ನಿಷ್ಫಲವಾಗಿ ಸುತ್ತಾಡುತ್ತಿರುವೆ. ಓ;ಜೀವವೇ;ನಿನ್ನ ಒಳಿತನ್ನು ಬಯಸುವಿಯಾದರೆ ನೀನು ನಿರಂತರ ಒಡೆಯ ನರಹರಿಯನ್ನು ಆರಾಧಿಸು. ಆ ಲಕ್ಷ್ಮೀನೃಸಿಂಹನ ಚರಣಾರವಿಂದಗಳನ್ನು ಸ್ತುತಿಸು.ತನ್ಮೂಲಕ ಅವುಗಳಲ್ಲಿನ ಕೇಸರವನ್ನು ಭೋಗಿಸು.

ತವ ಹಿತಮೇಕಂ ವಚನಂ ವಕ್ಷ್ಯೇ ಶೃಣು ಸುಖಕಾಮೋತದಿ ಸತತಂ |
ಸ್ವಪ್ನೇ ದೃಷ್ಟಂ ಸಕಲಂ ಹಿ ಮೃಷಾ ಜಾಗ್ರತಿ ಚ ಸ್ಮರ ತದ್ವದತಿ ||
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |
ಭಜಭಜ ಲಕ್ಷ್ಮೀನರಸಿಂಹಾನಘ-ಪದ-ಸರಸಿಜ ಮಕರಂದಮ್   ||೫||

ಭಾವಾರ್ಥ:-ದುಂಬಿಯಂತೆ ಚಲಿಸುತ್ತಲಿರುವ ಮನಸ್ಸೇ!ನಿನಗೆ ಮಂಗಲದಾಯಕವಾಗಿರುವ ಮಾತೊಂದನ್ನು ಅರುಹುವೆ.ಕೇಳು.ಕನಸ್ಸಿನಲ್ಲಿ ವ್ಯಕ್ತವಾಗುವುದೆಲ್ಲವೂ ಎಚ್ಚರಸ್ಥಿತಿಯಲ್ಲಿ ಸಟೆಯಾಗಿರುವಂತೆ ಜಾಗ್ರತ ಕಾಲದ ಸುಖವೂ ಸಟೆಯಾಗುವುದು. ನೀನು ಈ ಸಂಸಾರವೆಂಬ ನೀರಸ ಮರುಭೂಮಿಯಲ್ಲಿ ನಿಷ್ಫಲವಾಗಿ ಸುತ್ತಾಡುತ್ತಿರುವೆ. ಓ;ಜೀವವೇ;ನಿನ್ನ ಒಳಿತನ್ನು ಬಯಸುವಿಯಾದರೆ ನೀನು ನಿರಂತರ ಒಡೆಯ ನರಹರಿಯನ್ನು ಆರಾಧಿಸು. ಆ ಲಕ್ಷ್ಮೀನೃಸಿಂಹನ ಚರಣಾರವಿಂದಗಳನ್ನು ಸ್ತುತಿಸು.ತನ್ಮೂಲಕ ಅವುಗಳಲ್ಲಿನ ಕೇಸರವನ್ನು ಭೋಗಿಸು.
*********************************************************************
             ||  ಇತಿ ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನ ಸ್ತೋತ್ರಮ್ ||
     || ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನ ಸ್ತೋತ್ರಗಳ ಭಾವಾರ್ಥವಾಗಿದೆ ||

*********************************************************************
                                             -೨೨-
                                
                                            







                                   

No comments:

Post a Comment