ಶ್ರೀಗುರು ಸ್ತುತಿ
************
-೧-
ಶ್ರೀ ಗುರು ಸ್ತೋತ್ರಮ್ [ವಿಶ್ವಸಾರ ತಂತ್ರ]
*******************************
ಗುರುಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರ:|
ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: || ೧ ||
ಭಾವಾನುವಾದ :-
ಗುರುಗಳೇ ಬ್ರಹ್ಮ ಸ್ವರೂಪ ; ಗುರುಗಳೇ ವಿಷ್ಣು ಸ್ವರೂಪ;ಗುರುಗಳೇ ಸರ್ವೇಶ್ವರ ಆದ ಮಹೇಶ್ವರ;ಗುರುಗಳೇ ಸಾಕ್ಷಾತ್ ಪರಬ್ರಹ್ಮ ಸ್ವರೂಪ; ಅಂತಹಾ ಆ ಮಹಾ ಗುರುಗಳಿಗೆ ನನ್ನ ನಮಸ್ಕಾರಂಗಳು ||೧ ||
ಅಖಂಡಮಂಡಲಾಕಾರಂ ವ್ಯಾಪ್ತಂಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮ: || ೨ ||
ಭಾವಾನುವಾದ :-
ಅಖಂಡ ಮಂಡಲಾಕಾರನಾಗಿರುವಂತಹಾ ಈ ಚರಾಚರ ಜಗತ್ತಿನನ್ನು ವ್ಯಾಪಿಸಿರುವಂತಾ ತತ್ವಂಗಳನ್ನು ಯಾರು ತೋರಿಸಿಕೊಟ್ಟಿರುವರೋ ಅಂತಹಾ ಶ್ರೀಮಹಾಗುರುಗಳಿಗೆ ನನ್ನ ನಮಸ್ಕಾರಂಗಳು || ೨ ||
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ: || ೩ ||
ಭಾವಾನುವಾದ :-
ಅಜ್ಞಾನ ಅನ್ನುವ ಕತ್ತಲಿನಿಂದ ಕುರುಡನಾಗಿದ್ದವನ ಕಣ್ಣುಗಳನ್ನು ಜ್ಞಾನ ಅನ್ನುವ ಬರ್ಚಿಯಿಂದ ಬಿಡಿಸಿದ ಆ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು || ೩ ||
ಸ್ಥಾವರಂ ಜಂಗಮಂ ವ್ಯಾಪ್ತಂ ಯೇನಕೃತ್ಸ್ನಂ ಚರಾಚರಮ್ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||೪ ||
ಭಾವಾನುವಾದ :-
ಸ್ಥಾವರಜಂಗಮರೂಪದ ಚರಾಚರಾತ್ಮಕವಾಗಿರುವಂತಹಾ ಈ ಜಗತ್ತಿನಲ್ಲಿ ತುಂಬಿಕೊಂಡು ಇರುವ ತತ್ವಂಗಳನ್ನು ಯಾರು ಬೆಳಕಿಗೆ ತಂದು ತೋರಿಸಿ ಕೊಟ್ಟಿವರೋ ಆ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು. || ೪ ||
ಚಿದ್ರೂಪೇಣ ಪರಿವ್ಯಾಪ್ತಂ ತ್ರೈಲೋಕ್ಯಂ ಚರಾಚರಮ್ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||೫||
ಭಾವಾನುವಾದ :-
ಚರಾಚರಾತ್ಮಕವಾಗಿರುವಂತಹಾ ಮೂರು ಲೋಕಂಗಳನ್ನು ಜ್ಞಾನರೂಪದಲ್ಲಿ ತುಂಬಿಕೊಂಡು ಇರುವಂತಹಾ ತತ್ವಂಗಳನ್ನು ಲೋಕಕ್ಕೆ ಯಾರು ತೋರಿಸಿಕೊಟ್ಟಿವರೋ ಅಂತಹಾ ಆ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು ||೫||
ಸರ್ವಶೃತಿಶಿರೋರತ್ನ ಸಮುದ್ಭಾಸಿತ ಮೂರ್ತಯೇ |
ವೇದಾಂತಾಂಬುಜ ಸೂರ್ಯಾಯ ತಸ್ಮೈ ಶ್ರೀಗುರವೇ ನಮ: || ೬ ||
ಭಾವಾನುವಾದ :-
ಸಮಸ್ತ ವೇದಂಗಳಿಗೆ ಶಿರಸ್ಸು [ತಲೆ] ಅನ್ನಿಸಿಕೊಂಡಂತಹಾ ಉಪನಿಷತ್ ಎನ್ನುವ ರತ್ನದಿಂದ ಹೊಳೆಯುವಂತಹಾ ಮೂರ್ತಿ ಸ್ವರೂಪನೂ, ವೇದಾಂತಾ ಅನ್ನುವ ಕಮಲವನ್ನು ಅರಳಿಸುವಂತಹಾ ಸೂರ್ಯ ಸ್ವರೂಪನೂ ಆಗಿರುವಂತಹಾ ಆ ಮಹಾ ಗುರುಗಳಿಗೆ ನನ್ನ ನಮಸ್ಕಾರಂಗಳು. ||೬||
ಚೈತನ್ಯ: ಶಾಶ್ವತ: ಶಾಂತೋ ವ್ಯೋಮಾತೀತೋ ನಿರಂಜನ: |
ಬಿಂದುನಾದಕಲಾತೀತಸ್ತಸ್ಮೈ ಶ್ರೀ ಗುರವೇ ನಮ: || ೭ ||
ಭಾವಾನುವಾದ :-
ಚೈತನ್ಯ ಶಕ್ತಿಯೂ, ಶಾಶ್ವತನೂ, ಶಾಂತಸ್ವರೂಪನೂ, ಆಕಾಶಕ್ಕೆ ನಿಲುಕದವನೂ, ನಿರಂಜನರೂಪನೂ, ಬಿಂದು,ನಾದ,ಕಲೆಗಳಿಗೆ ಹೊರತಾದ ಶ್ರೇಷ್ಟನೂ ಆಗಿರುವಂತಹಾ ಆ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು ||೭ ||
ಜ್ಞಾನಶಕ್ತಿ ಸಮಾರೂಢಸ್ತತ್ವಮಾಲಾ ವಿಭೂಷಿತ: |
ಭುಕ್ತಿ ಮುಕ್ತಿ ಪ್ರದಾತಾ ಚ ತಸ್ಮೈ ಶ್ರೀ ಗುರವೇ ನಮ: ||೮||
ಭಾವಾನುವಾದ :-
ತತ್ವಮಾಲೆಗಳಿಂದ ಅಲಂಕೃತನಾಗಿ ಜ್ಞಾನಶಕ್ತಿಯ ಮಹಾಪೀಠದ ಮೇಲೆ ಆರೂಢನಾಗಿ ಇಹಸುಖವನ್ನೂ,ಮುಕ್ತಿಯೋಗವನ್ನೂ ದಯಪಾಲಿಸುವಂತಹಾ ಆ ಶ್ರೀ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು.|| ೮||
ಅನೇಕಜನ್ಮ ಸಂಪ್ರಾಪ್ತಕರ್ಮೇಂಧನವಿದಾಹಿನೇ |
ಆತ್ಮಜ್ಞಾನಾಗ್ನಿದಾನೇನ ತಸ್ಮೈ ಶ್ರೀ ಗುರವೇ ನಮ: || ೯ ||
ಭಾವಾನುವಾದ :-
ಜನ್ಮಜನ್ಮಾಂತರಗಳಿಂದ ಬಂದಂತಹಾ ಕರ್ಮಾ ಅನ್ನುವ ಕಾಷ್ಠವನ್ನು ಆತ್ಮಾ ಅನ್ನುವ ಅಗ್ನಿಯಿಂದ ಸುಟ್ಟು ಭಸ್ಮ ಮಾಡಲು ಶಕ್ತನಾಗಿರುವ ಆ ಶ್ರೀ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು || ೯ ||
ಶೋಷಣಂ ಭವ ಸಿಂಧೋಶ್ಚ ಪ್ರಾಪಣಂ ಸಾರಸಂಪದ: |
ಯಸ್ಯ ಪಾದೋದಕಂ ಸಮ್ಯಕ್ ತಸ್ಮೈ ಶ್ರೀ ಗುರವೇ ನಮ: || ೧೦ ||
ಭಾವಾನುವಾದ :-
ಯಾರ ಪಾದತೀರ್ಥವು ಇಹಸಂಸಾರದ ಕಷ್ಟಂಗಳ ನಾಶಕ್ಕೂ,ಸಾರವತ್ತಾದ ಸಂಪತ್ತಿನ ಪ್ರಾಪ್ತಿಗೂ ಸಾಧನವಾಗಿರುವುದೋ ಅಂತಹಾ ಆ ಶ್ರೀ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು || ೧೦ ||
ನ ಗುರೋರಧಿಕಂ ತತ್ವಂ ನ ಗುರೋರಧಿಕಂ ತಪ: |
ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮ: || ೧೧ ||
ಭಾವಾನುವಾದ :-
ಗುರುಗಳಿಂದಲೂ ಅಧಿಕವಾಗಿರುವಂತಹಾ ತತ್ವಂಗಳು ಇಲ್ಲ; ಗುರುಗಳಿಂದ ಅಧಿಕವಾಗಿರುವಂತಹಾ ತಪಸ್ಸಿಲ್ಲ; ತತ್ವ ಜ್ಞಾನದಿಂದಲೂ ಶ್ರೇಷ್ಠವಾಗಿರುವುದು ಯಾವುದೂ ಇಲ್ಲ. ಆದ ಕಾರಣ ಅಂತಹಾ ತತ್ವ ಜ್ಞಾನವನ್ನು ಕರುಣಿಸುವ ಆ ಶ್ರೀ ಮಹಾಗುರುಗಳಿಗೆ ನನ್ನ ನಮಸ್ಕಾರಂಗಳು || ೧೧ ||
ಮನ್ನಾಥ: ಶ್ರೀ ಜಗನ್ನಾಥೋ ಮದ್ಗುರು ಶ್ರೀಜಗದ್ಗುರು: |
ಮದಾತ್ಮಾ ಸರ್ವ ಭೂತಾತ್ಮಾ ತಸ್ಮೈ ಶ್ರೀ ಗುರವೇ ನಮ: || ೧೨ ||
ಭಾವಾನುವಾದ :-
ಶ್ರೀ ಜಗನ್ನಾಥನೇ ನನ್ನ ಸ್ವಾಮಿ; ಶ್ರೀ ಜಗದ್ಗುರುವೇ ನನ್ನ ಗುರುಗೊ. ಸರ್ವ ಭೂತಗಳ ಆತ್ಮವೇ ನನ್ನಾತ್ಮ. ಅಂತಹಾ ಆ ಮಹಾ ಸದ್ಗುರುಗಳಿಗೆ ನನ್ನ ನಮಸ್ಕಾರಂಗಳು || ೧೨ ||
ಗುರುನಾದಿರನಾದಿಶ್ಚ ಗುರು: ಪರಮ ದೈವತಮ್ |
ಗುರೋ: ಪರತರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮ: || ೧೩ ||
ಭಾವಾನುವಾದ :-
ಗುರುವೇ ಜಗತ್ತಿನ ಆದಿ; ಆ ಗುರುವು ಆದಿ ಅಂತ್ಯಗಳಿಲ್ಲದಿರುವ ಅನಾದಿ ಶಕ್ತಿ. ಗುರುಗಳೇ ಪರಮ ದೇವತೆ. ಗುರುಗಳಿಂದ ಶ್ರೇಷ್ಠ ಆಗಿರುವುದು ಯಾವುದೂ ಇಲ್ಲ. ಅಂತಹಾ ಆ ಮಹಾ ಜಗದ್ಗುರುಗಳಿಗೆ ನನ್ನ ನಮಸ್ಕಾರಂಗಳು ||೧೩||
ಬ್ರಹ್ಮಾಂನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ || ೧೪ ||
ಭಾವಾನುವಾದ :-ಬ್ರಹ್ಮಾನಂದಸ್ವರೂಪನೂ ,ಪರಮಸುಖಪ್ರದಾಯಕನೂ,ಸಮಗ್ರನೂ,ಜ್ಞಾನಸಂಪನ್ನನೂ, ದ್ವಂದ್ವಗಳಿಗೆ ಸಿಲುಕದನೂ ,ಆಕಾಶಕ್ಕೆ ಸಮಾನವಾದವನೂ, ತತ್ವಮಸಿ ಎಂಬಿತ್ಯಾದಿ ವಾಕ್ಯಗಳಿಗೆ ಗಮನನೂ, ಅದ್ವೀತೀಯನೂ, ನಿತ್ಯನೂ, ವಿಮಲಸ್ವರೂಪಿಯೂ, ಅಚಲನೂ, ಬುದ್ಧಿಯಸಮಸ್ತ ಕಾರ್ಯಗಳಿಗೆ ಸಾಕ್ಷಿಯಾಗಿರುವವನೂ, ಭಾವನೆಗಳಿಗೆ ಹೊರತಾದವನೂ, ತ್ರಿಗುಣರಹಿತನೂ ಆದ ಸದ್ಗುರುವಿಗೆ ಪ್ರಣಾಮಗಳು
*********************************************************************************
|| ಇತಿ ವಿಶ್ವಸಾರ ತಂತ್ರೇ ಶ್ರೀ ಗುರುಸ್ತೋತ್ರಮ್ ||
|| ಈ ರೀತಿ ವಿಶ್ವಸಾರತಂತ್ರದಲ್ಲಿರುವ ಶ್ರೀಗುರು ಸ್ತೋತ್ರದ ಭಾವಾರ್ಥವಾಗಿದೆ. ||
*********************************************************************************
-೨-
ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶಂಕರ ಭಗವದ್ಪೂಜ್ಯಪಾದ ವಿರಚಿತ
|| ಶ್ರೀ ಗುರ್ವಷ್ಟಕಮ್ ||
****************
ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರು ತುಲ್ಯಮ್ |
ಮನಶ್ಚೇನ್ನ ಲಗ್ನಮ್ ಗುರೋರಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೧||
ಭಾವಾರ್ಥ:- ಸುಂದರವಾದ ದೇಹ, ಸುರೂಪಿಯಾದ ಸತಿ, ವಿಧವಿಧವಾದ ಸ್ತುತಿಗಳು, ಕುಬೇರನಿಗೆ ಸಮಾನವಾದ ಸಂಪತ್ತು, ಇವೆಲ್ಲ ಇದ್ದರೂ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು? ಫಲವೇನು?
ಕಲತ್ರಂ ಧನಂ ಪುತ್ರ ಪೌತ್ರಾದಿ ಸರ್ವಂ
ಗೃಹಂ ಬಾಂಧವಾ: ಸರ್ವಮೇತದ್ಧಿ ಜಾತಮ್ |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೨||
ಭಾವಾರ್ಥ:-ಮಾನವವಾದ ನನಗೆ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಮನೆ, ನೆಂಟರು ಎಲ್ಲವೂ ಇದೆ. ಆದರೆ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು? ಫಲವೇನು?
ಷಡಂಗಾದಿ ವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೩||
ಭಾವಾರ್ಥ:-ಷಡಂಗಯುಕ್ತವಾಗಿರುವ ವೇದಗಳನ್ನೂ, ಮೀಮಾಂಸಾದಿ ಎಲ್ಲಾ ಶಾಸ್ತ್ರಗಳನ್ನೂ ಅಧಯನ ಮಾಡಿದ್ದಿರಬಹುದು. ಗದ್ಯ ಪದ್ಯಾದಿಕಾವ್ಯಗಳನ್ನು ರಚಿಸುವ ಸಾಮರ್ಥ್ಯವೂ ನನಗಿರಬಹುದು. ಆದರೆ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ವಿದೇಶೇಶು ಮಾನ್ಯ: ಸ್ವದೇಶೇಶು ಧನ್ಯ:
ಸದಾಚಾರವೃತ್ತೇಷು ಮತ್ತೋ ನ ಜಾನ್ಯ
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೪||
ಭಾವಾರ್ಥ:-ಅನ್ಯದೇಶಗಳಲ್ಲಿ ಗೌರವಪಡೆದು, ಜನ್ಮಭೂಮಿಯಲ್ಲಿ ಕೀರ್ತಿ ಸಂಪಾದಿಸಿದ್ದರೂ,ಸತ್ಕರ್ಮಾಚರಣೆಯಲ್ಲಿ ತನಗಿಂತ ಶ್ರೇಷ್ಠರಿಲ್ಲದಿದ್ದರೂ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು? ಫಲವೇನು?
ಕ್ಷಮಾಮಂಡಲೇ ಭೂಪಭೂಪಾಲವೃಂದೈ:
ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೫||
ಭಾವಾರ್ಥ:-ಭುವಿಯಲ್ಲಿ ಚಕ್ರವರ್ತಿಗಳೂ, ರಾಜಾದಿರಾಜರುಗಳು ತನ್ನ ಸೇವೆಯನ್ನು ಮಾಡುತ್ತಿರಬಹುದಾದರೂ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ಯಶೋ ಮೇ ಗತಂ ದಿಕ್ಷು ದಾನ ಪ್ರತಾಪಾ-
ಜ್ಜಗದ್ವಸ್ತು ಸರ್ವಂ ಕರೇ ಮತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೬||
ಭಾವಾರ್ಥ:-ದಾನದ ಪ್ರಭಾವದಿಂದ ನನ್ನ ಕೀರ್ತಿಯು ಚತುರ್ದಿಸೆಗಳಲ್ಲಿಯೂ ಹರಡಿದೆ. ನನ್ನ ಪ್ರಭಾವದಿಂದ ಜಗತ್ತಿನಲ್ಲಿ ಯಾವ ವಸ್ತುವೇ ಆದರೂ ನನ್ನ ವಶವಾಗುವುದು. ಆದರೇನು? ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾಂತಾಸುಖೇ ನೈವ ವಿತ್ತೇಷು ಚಿತ್ತಮ್ |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೭||
ಭಾವಾರ್ಥ:-ಭೋಗ ಯೋಗಗಳಲ್ಲಾಗಲೀ, ಅಶ್ವ ಸವಾರಿಯಲ್ಲಾಗಲೀ,ಜೂಜು ಸ್ತ್ರೀ ಸಂಸರ್ಗದಲ್ಲಾಗಲೀ, ಐಶ್ವರ್ಯಾದಿ ಸುಖಾನುಭವದಲ್ಲಾಗಲೀ ನನ್ನ ಮನಸ್ಸು ಆಸಕ್ತಿಹೊಂದಿರುವುದಿಲ್ಲ. ಆ ಬಗ್ಗೆ ನಿರಾಸಕ್ತಿ ಹೊಂದಿದೆ. ಹೀಗಿದ್ದರೂ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ಭಾವಾರ್ಥ:- ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನದೇಹೇ ಮನೋವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೮||
ಭಾವಾರ್ಥ:-ಅರಣ್ಯವಾಸಿಯಾಗಿ ಹೋಗಿ ಬಿಡಲು ಮನಸ್ಸು ಬರುವುದಿಲ್ಲ. ಮನೆಯಲ್ಲಿಯೇ ಇರಬೇಕೆಂದು ಎನಿಸುತ್ತಲೂ ಇಲ್ಲ. ಯಾವುದೇ ಕಾರ್ಯ ಮಾಡಲು ಮನಸ್ಸು ಅನಾಸಕ್ತವಾಗಿದೆ. ದೇಹ ರಕ್ಷಣೆಯಲ್ಲಿಯೂ ಮನಸ್ಸು ನಿರಾಸಕ್ತವಾಗಿ ವೈರಾಗ್ಯದಿಂದಿದೆ. ಆದರೂ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ಅನರ್ಘ್ಯಾಣಿ ರತ್ನಾನಿ ಭುಕ್ತಾನಿ ಸಮ್ಯಕ್
ಸಮಾಲಿಂಗಿತಾ ಕಾಮಿನೀ ಯಾಮಿನೀಷು |
ಮನಶ್ಚೇನ್ನ ಲಗ್ನಂ ಗುರೋಂಘ್ರಿ ಪದ್ಮೇ
ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್ ||೯||
ಭಾವಾರ್ಥ:-ಬೆಲೆಬಾಳುವ ರತ್ನಹಾರಗಳನ್ನು ಧರಿಸಿದ್ದಾಗಿದೆ. ರಾತ್ರಿಯ ವೇಳೆ ಸ್ತ್ರೀಸುಖಾಲಿಂಗನ ಸಂತಸ ಅನುಭವಿಸಿದ್ದಾಯಿತು. ಆದರೇನು? ಆ ಸದ್ಗುರುವಿನ ಚರಣಾರವಿಂದಗಳಲ್ಲಿ ಮನಸ್ಸು ನಿಲ್ಲದೆ ಹೋದರೆ ಫಲವೇನು? ಫಲವೇನು?ಫಲವೇನು?
ಗುರೋರಷ್ಟಕಂ ಯ: ಪಠೇತ್ಪುಣ್ಯ ದೇಹೀ
ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ |
ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞಂ
ಗುರೋರುಕ್ತ ವಾಕ್ಯೇ ಮನೋ ಯಸ್ಯ ಲಗ್ನಮ್ ||೧೦||
ಭಾವಾರ್ಥ:-ಅರಸನಾಗಲೀ, ವಿರಕ್ತನಾಗಲೀ, ಬ್ರಹ್ಮಚಾರಿಯಾಗಲೀ, ಗೃಹಸ್ಥನಾಗಲೀ ಯಾರೇ ಆದರೂ ಆ ಮಹಾ ಸದ್ಗುರುವಿನ ಅನುಗ್ರಹಾಕಾಂಕ್ಷಿಗಳು ಈ ಸದ್ಗುರು ಅಷ್ಟಕವನ್ನು ಶ್ರದ್ಧೆಯಿಂದ ಉಚ್ಛರಿಸುವಂತಹಾ ಪುಣ್ಯ ಪುರುಷರು ಆ ಗುರುವರ್ಯರು ಭೋಧಿಸುವ "ತತ್ವಮಸಿ" "ಅಹಂ ಬ್ರಹ್ಮಾಸ್ಮಿ" ಎಂಬಿತ್ಯಾದಿ ಮಹಾ ವಾಕ್ಯಗಳ ಸಾರ ಸರ್ವಸ್ವವನ್ನು ಅರಿತುಕೊಳ್ಳಲು ಮನಸ್ಸು ತೊಡಗಿಸಿದರೆ ಆತನಿಗೆ ಶ್ರೇಷ್ಠವಾದ ಬ್ರಹ್ಮಾನಂದ ಸ್ವರೂಪದ ಆನಂದಾನುಭವವಾಗುವುದು.
*********************************************************************************
|| ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶಂಕರಭಗವದ್ಪೂಜ್ಯ ಪಾದ ವಿರಚಿತ ಶ್ರೀ ಗುರ್ವಷ್ಟಕಮ್ ||
|| ಈ ರೀತಿಯಾಗಿದೆ ಶ್ರೀಮದಾಚಾರ್ಯ ಶಂಕರರು ವಿರಚಿಸಿದ ಶ್ರೀ ಗುರು ಅಷ್ಟಕದ ಭಾವಾರ್ಥವು.||
*********************************************************************************
-೩-
||ಶ್ರೀ ಶಂಕರಾಚಾರ್ಯ ಮಂಗಲಮ್ ||
**************************
ಮಂಗಲಂ ಬ್ರಹ್ಮರೂಪಾಯ ಮಂಗಲಂ ಗುರು ರೂಪಿಣೇ |
ಮಂಗಲಂ ತತ್ವಭೋಧಾಯ ಶಂಕರಾರ್ಯಾಯ ಮಂಗಲಮ್ ||೧||
ಭಾವಾರ್ಥ :- ಬ್ರಹ್ಮ ಸ್ವರೂಪರೂ ಗುರುರೂಪರೂ ತತ್ವಭೋಧನಾಕಾರರೂ ಆಗಿರುವ ಶಂಕರಾಚಾರ್ಯ ಗುರುಗಳಿಗೆ ಮಂಗಲವಾಗಲಿ.
ಮಂಗಲಂ ಶಿವರೂಪಾಯ ಮಂಗಲಮ್ ಶಂಕರಾಯ ಚ |
ಶಿವಾರ್ಯಾಂಬಾ ತನೂಜಾಯ ಶಂಕರಾರ್ಯಾಯ ಮಂಗಲಮ್ ||೨||
ಭಾವಾರ್ಥ :-ಸಾಕ್ಷಾತ್ ಶಿವ ಸ್ವರೂಪರೂ ಸುಖಪ್ರದಾತರೂ ಶಿವಾರ್ಯಾಂಬಾ ದಂಪತಿಗಳಸತ್ಪುತ್ರರೂ ಆಗಿರುವ ಶಂಕರಾಚಾರ್ಯ ಗುರುಗಳಿಗೆ ಮಂಗಲವಾಗಲಿ.
ಮಂಗಲಂ ಸತ್ಯಭೋಧಾಯ ಮಂಗಲಂ ಸತ್ಯರೂಪಿಣೇ |
ಅದ್ವೈತಾಚಾರ್ಯವರ್ಯಾಯ ಶಂಕರಾರ್ಯಾಯ ಮಂಗಲಮ್ ||೩||
ಭಾವಾರ್ಥ :-ಸತ್ಯವನ್ನು ಭೋಧಿಸಿದವರೂ ಸತ್ಯರೂಪರೂ ಅದ್ವೈತಮತ ಸಂಸ್ಥಾಪನಾಚಾರ್ಯ ಶ್ರೇಷ್ಠರೂ ಆಗಿರುವ ಶಂಕರಾಚಾರ್ಯ ಗುರುಗಳಿಗೆ ಮಂಗಲವಾಗಲಿ.
ಮಂಗಲಂ ವೇದವೇದ್ಯಾಯ ವೇದಜ್ಞಾಯ ಚ ಮಂಗಲಮ್ |
ಮಂಗಲಂ ವೇದರೂಪಾಯ ಶಂಕರಾರ್ಯಾಯ ಮಂಗಲಮ್ ||೪||
ಭಾವಾರ್ಥ :-ವೇದಗಳಿಂದ ತಿಳಿಯಲ್ಪಟ್ಟವರೂ ವೇದ ಪರಿಣಿತರೂ ವೇದಸ್ವರೂಪರೂ ಆಗಿರುವ ಶಂಕರಾಚಾರ್ಯ ಗುರುಗಳಿಗೆ ಮಂಗಲವಾಗಲಿ.
ಮಂಗಲಮ್ ನಿಷ್ಪ್ರಪಂಚಾಯ ಮಂಗಲಮ್ ಮೋಕ್ಷರೂಪಿಣೇ |
ಭಾಷ್ಯತ್ರಯಕೃತೇ ನಿತ್ಯಂಶಂಕರಾರ್ಯಾಯ ಮಂಗಲಮ್ ||೫||
ಭಾವಾರ್ಥ :-ನಿಷ್ಪ್ರಪಂಚರೂ ಮೋಕ್ಷಪ್ರಧಾತರೂ ಭಾಷ್ಯತ್ರಯಗಳ ಕರ್ತೃವೂ ಆಗಿರುವ ಶಂಕರಾಚಾರ್ಯ ಗುರುಗಳಿಗೆ ನಿತ್ಯವೂ ಮಂಗಲವಾಗಲಿ.
ಮಂಗಲಂ ಮಠನಿರ್ಮಾತ್ರೇ ಮಂಗಲಂ ಶಿಷ್ಯಭೋಧಿನೇ |
ವಿಶ್ವೋದ್ಧಾರಾವತಾರಾಯ ಶಂಕರಾರ್ಯಾಯ ಮಂಗಲಮ್ ||೬||
ಭಾವಾರ್ಥ :-ಚತುರಾಮ್ನಾಯ ಮಠ ಸಂಸ್ಥಾಪಕರೂ ಶಿಷ್ಯರಿಗೆ ಧರ್ಮ ಸೂಕ್ಷ್ಮಗಳ ಭೋಧಕರೂ ಆಗಿದ್ದ ವಿಶ್ವೋದ್ಧಾರಕ ಪರಮಗುರು ಶಂಕರಾಚಾರ್ಯರಿಗೆ ಮಂಗಲವಾಗಲಿ.
ಸರ್ವಲೋಕ ಶರಣ್ಯಾಯ ಮಂಗಲಮ್ ಪರಮಾತ್ಮನೇ |
ಮಂಗಲಂ ಗುರುವರೇಭ್ಯ: ಸರ್ವ ಲೋಕಾಯ ಮಂಗಲಮ್ ||೭||
ಭಾವಾರ್ಥ :- ಸಮಸ್ತ ಲೋಕವೂ ಶರಣು ಬರುವಂತಹಾ ಪರಮಾತ್ಮ ಸ್ವರೂಪೀ ಗುರುವರ್ಯರೇ , ನಿಮಗೆ ಮಂಗಲವಾಗಲಿ. ಆ ಮೂಲಕ ಸರ್ವ ಲೋಕಕ್ಕೆ ಮಂಗಲವಾಗಲಿ.
*********************************************************************************
-೪-
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಮಚಂದ್ರಾಪುರ
" ಶ್ರೀ ಗುರ್ವಷ್ಟಕಂ"
********************************************************
[ವಸಂತತಿಲಕಾವೃತ್ತಂ]
ಶ್ರೀ ಕಾರಕ ಪ್ರಣವ ಚೈತ್ರಪಿಕಂ ಮಹಾಂತಂ|
ಭೂತಾದಿನಾತ್ಥ ದಯಿತಾಸು ಹಿತಾರ್ಥವಂತಂ||
ಶ್ರೀರಾಮಚಂದ್ರಪುರಭದ್ರ ಮಠಾಧಿವಾಸಂ|
ಶ್ರೀರಾಘವೇಶ್ವರ ಗುರುಂ ಸತತಂ ಭಜಾಮಿ ||೧||
ಶ್ರೀರಾಮಚಂದ್ರ ಮಹದರ್ಚನ ಚಿತ್ತಚಂದ್ರಂ|
ಶ್ರೀರಾಮಚಂದ್ರ ಕರುಣಾರ್ಣವ ಯೋಗಚಂದ್ರಂ||
ಶ್ರೀರಾಮಚಂದ್ರ ಪುರಭದ್ರ ಮಠಾಭ್ರಚಂದ್ರಂ|
ಶ್ರೀರಾಮಚಂದ್ರ ಗುರುಪುಂಗವಮಾಶ್ರಯಾಮಿ ||೨||
ಸ್ವಾತ್ಮ ಪ್ರಮಾಣ ಪರಯೋಗ ಕಲಾಸಮುದ್ರಂ|
ಸ್ವಾತ್ಮಕ್ಷಮಾಭ್ಯುದಯ ಕಾಂತಿ ವಿಶೇಷಭದ್ರಂ||
ಶ್ರೀರಾಮಚಂದ್ರ ಪುರಭದ್ರ ಮಠಾಧಿವಾಸಂ|
ಶ್ರೀರಾಘವೇಂದ್ರ ಗುರುಪುಂಗವಮಾಶ್ರಯಾಮಿ ||೩||
ಗೋಕರ್ಣಮಂಡಲ ಮಹಾಜನ ಪೂಜ್ಯಮೇಕಂ|
ಶ್ರೀ ಶಂಕರಾರ್ಯ ಭಗವತ್ಪದಸಕ್ತಚಿತ್ತಂ||
ಶ್ರೀರಾಮಚಂದ್ರ ಪುರಭದ್ರ ಮಠಾಧಿವಾಸಂ |
ಶ್ರೀರಾಘವೇಶ್ವರ ಗುರುಂ ಸತತಂ ಭಜಾಮಿ ||೪||
ವರ್ಣಾಶ್ರಮೋಚಿತ ಮಹಾಕರ ಪಾತ್ರದಂಡಂ |
ವರ್ಣ ಪ್ರಮಾವಿಹಿತ ಮಂತ್ರ ಪರಾರ್ಥ ದಂಡಂ ||
ಶ್ರೀರಾಮಚಂದ್ರ ಪುರಭದ್ರ ಮಠಾಧಿವಾಸಂ |
ಶ್ರೀರಾಮಚಂದ್ರ ಗುರುಪುಂಗವಮಾಶ್ರಯಾಮಿ ||೫||
ನಾರಾಯಣ ಸ್ಮರಣಪೂರ್ವಕ ವಾಕ್ಪ್ರಸಾದಂ |
ಪಾರಾಯಣ ಪ್ರಣತಲೋಕ ಜನಾರ್ಥವಾದಂ ||
ಶ್ರೀರಾಮಚಂದ್ರ ಪುರಭದ್ರ ಮಠಾಧಿವಾಸಂ |
ಶ್ರೀರಾಘವೇಶ್ವರ ಗುರುಪುಂಗವಮಾಶ್ರಯಾಮಿ ||೬||
ಶ್ರೀರ್ಮಧಕರ್ಮ ಮಹದಾಸನ ದೇಶಿಕೇಂದ್ರಂ |
ಶ್ರೀಧರ್ಮರೂಪಮನುಯೋಗಿ ಜನೋತ್ತರೇಂದ್ರಂ ||
ಶ್ರೀರಾಮಚಂದ್ರ ಪುರಭದ್ರ ಮಠಾಧಿವಾಸಂ |
ಶ್ರೀಸದ್ಗುರುಂ ಜಗದನಂತ ಹಿತೇಂದ್ರಮೀಡೆ || ೭||
ಶ್ರೀರಾಮಚಂದ್ರ ಪರಿಸಕ್ತ ಹೃದಂಮಹಾಂತಂ |
ಸ್ವಧ್ಯಾನನಿಷ್ಟ ಮನವದ್ಯಗುಣಾಭಿರಾಮಂ ||
ಶ್ರೀರಾಮಚಂದ್ರ ಪುರಭದ್ರ ಮಠಾಧಿವಾಸಂ |
ಶ್ರೀಸದ್ಗುರುಂ ಜಗದನಂತ ಹಿತೇಂದ್ರಮೀಡೆ ||೮||
ಇದಂ ಗುರ್ವಷ್ಟಕಂಪುಣ್ಯಂ ದುಸ್ಸಹಾರ್ತಿವಿನಾಶಕಂ |
ಯ:ಪಠೇತ್ ಶೃಣುಯಾತ್ ಭಕ್ತ್ಯಾ ಸಲಭೇತ್ ಸರ್ವಸಂಪದ: ||
ಭಾವಾರ್ಥ:-ವಸಂತಕಾಲದ ಕೋಗಿಲೆಯ ಮಧುರ ದ್ವನಿಯಂತೆ ಇಂಪಾದ ಸ್ವರದಲ್ಲಿ ಶುಭದಾಯಕ "ಓಂ"ಕಾರ ಮಂತ್ರವನ್ನು ಉಚ್ಛರಿಸುತ್ತಿರುವ ಮಹನೀಯರಾಗಿರುವ; ಜೇಏವಿಗಳ ಬಗೆಗೆ ಕರುಣೆಯನ್ನು ಹೊಂದಿರುವವರಾಗಿ ಅವರ ಹಿತವನ್ನು ಬಯಸುವ ಶ್ರೀರಾಮಚಂದ್ರಾಪುರ ಮಠದಲ್ಲಿ ನೆಲೆಯಾಗಿರುವ ಶ್ರೀ ರಾಘವೇಶ್ವರ ಗುರುಗಳನ್ನು ನಾನು ಎಡೆಬಿಡದೆ ಭಜಿಸುವೆ. ಶ್ರೀ ರಾಮಚಂದ್ರನ ಆರಾಧನೆಯಲ್ಲಿ ಮಘ್ನರಾಗಿ ಶ್ರೀರಾಮಚಂದ್ರನ ಕರುಣೆಗೆ ಪಾತ್ರವಾಗಿರುವ ಯೋಗ ಸಿಂಹಾಸೀನಾಧೀಶ ಶ್ರೀರಾಮಚಂದ್ರಾಪುರ ಮಠದಲ್ಲಿ ಚಂದ್ರನೋಪಾದಿಯಲ್ಲಿ ಶೋಭಿಸುತ್ತಿರುವ ಶ್ರೀರಾಮಚಂದ್ರ ಗುರುವರೇಣ್ಯರನ್ನು ನಾನು ಆಶ್ರಯಿಸುವೆ. ಆತ್ಮ ಜ್ಞಾನ, ಶಾಸ್ತ್ರ, ಯೋಗಗಳಿಗೆ ನಿದರ್ಶನರೂಪದ ವಿದ್ಯಾಸಗರ, ಆತ್ಮಜ್ಞಾನ, ಕ್ಷಮೆ, ಅಭ್ಯುದಯಗಳ ಮೇಲ್ಮೆಯ ನೆಲೆಯಾಗಿ ಶೋಭಿಸುತ್ತಾ ಶ್ರೀರಾಮಚಂದ್ರಾಪುರ ಮಠದಲ್ಲಿ ನೆಲೆಯಾಗಿರುವ ಶ್ರೀ ರಾಘವೇಶ್ವರ ಗುರುವರೇಣ್ಯರನ್ನು ನಾನು ಆಶ್ರಯಿಸುವೆ. ಗೋಕರ್ಣ ಮಹಾ ಮಂಡಲದ ಮಹಾಜನರ ಪೂಜನೀಯರಾಗಿ ಶ್ರೀ ಶಂಕರಾಚಾರ್ಯ ಭಗವತ್ಪಾದರ ಹಾದಿಯಲ್ಲಿ ಮಗ್ನರಾಗಿರುವ ಶ್ರೀರಾಮಚಂದ್ರಾಪುರ ಮಠವೇ ವಾಸಸ್ಥಳವಾಗಿರುವ ಶ್ರೀರಾಘವೇಶ್ವರ ಗುರುಗಳನ್ನು ನಾನು ನಿರಂತರ ಭಜಿಸುವೆ. ವರ್ಣಾಶ್ರಮಗಳಿಗೆ ತಕ್ಕುದಾದ ಶೇಷ್ಟವಾದ ಖನಿಯಾಗಿ ಧರ್ಮ ರಕ್ಷಾದಂಡವನ್ನು ಹೊಂದಿರುವ ವರ್ಣಾಶ್ರಮಗಳಿಗೆ ತಕ್ಕುದಾದ ಅಲೌಕಿಕ ಗುರಿಯ ಮಂತ್ರಗಳ ಅನುಷ್ಠಾನಿಸುತ್ತಿರುವ ಶ್ರೀರಾಮಚಂದ್ರ ಗುರುವರೇಣ್ಯರನ್ನು ನಾನು ಆಶ್ರಯಿಸುವೆ.ಶ್ರೀಮನ್ನಾರಾಯಣನ ಸ್ಮರಣ ಪೂರ್ವಕವಾಗಿ ಭಕ್ತಾದಿಗಳಿಗೆ ವಾಕ್ಪೂರ್ವಕ ಪ್ರಸಾದವನ್ನು ಅನುಗ್ರಹಿಸುತ್ತಾ ಲೋಕದ ಶಿಷ್ಯಜನ ಹಿತಕ್ಕಾಗಿ ವಿನೀತರಾಗಿ ಪಾರಾಯಣವನ್ನು ಮಾಡುತ್ತಾ ಶ್ರೀರಾಮಚಂದ್ರಾಪುರ ಮಠದಲ್ಲಿ ನೆಲೆಯಾಗಿರುವ ಶ್ರೀ ರಾಘವೇಶ್ವರ ಗುರುವರೇಣ್ಯರನ್ನು ನಾನು ಆಶ್ರಯಿಸುವೆ. ಆಚಾರ ವಿಚಾರಗಳ ಮಹಾಧರ್ಮಸಿಂಹಾಸನಾಧೀಶ್ವರರಾಗಿ ಉಪದೇಶಿಕರಾಗಿ ಶ್ರೀ ಧರ್ಮದ ರೂಪವೇ ತಾನಾಗಿ ಯೋಗಿವರೇಣ್ಯರಲಿ ಶ್ರೇಷ್ಠರಾಗಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ನೆಲೆಯಾಗಿರುವ ಶ್ರೀ ಸದ್ಗುರುಗಳನ್ನು ನಾನು ಜಗದ ಹಿತಕ್ಕಾಗಿ ಸ್ಮರಿಸುವೆ. ಶ್ರೀರಾಮಚಂದ್ರನ ಆರಾಧನೆಯಲ್ಲಿ ಅಧಿಕ ಅಂತ:ಕರಣಪೂರ್ವಕವಾಗಿ ತೊಡಗಿ ತಾನು ಧ್ಯಾನದಲ್ಲಿ ಮಘ್ನನಾಗಿರುವ ಮನೋಹರ ತೇಜೋವಂತನಾಗಿ ಶ್ರೀರಾಮಚಂದ್ರಾಪುರ ಮಠದಲ್ಲಿ ನೆಲೆಯಾಗಿರುವ ಶ್ರೀಸದ್ಗುರುಗಳನ್ನು ಜಗದ ಹಿತಕ್ಕಾಗಿ ನಾನು ಸ್ಮರಿಸುವೆ.
ಈ ಗುರು ಅಷ್ಟಕಗಳು ಪುಣ್ಯಮಯವಾಗಿದ್ದು ಜಗತ್ತಿನ ದು:ಖ ವಿನಾಶಕವಾಗಿದ್ದು ಯಾವಾತನು ಇವುಗಳನ್ನು ಭಕ್ತಿಯಿಂದ ಕೇಳುವನೋ, ಓದುವನೋ ಅಂತಹವನಿಗೆ ಸರ್ವ ಸಂಪದಗಳೂ ಲಭಿಸುತ್ತವೆ.
*********************************************************************************
|| ಇತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಮಚಂದ್ರಾಪುರ " ಶ್ರೀ ಗುರ್ವಷ್ಟಕಂ" ||
|| ಈ ರೀತಿಯಾಗಿ ಶ್ರೀಮಜ್ಜಗದ್ಗುರು ಶ್ರೀಮದ್ರಾಮಚಂದ್ರಾಪುರ ಮಠದ ಶ್ರೀ ಗುರು ಅಷ್ಟಕಗಳ ಭಾವಾರ್ಥವು || "
========================================================================
-೫-
|| ಸಪ್ತ ಶ್ಲೋಕೀ ಆಚಾರ್ಯ ಸ್ತುತಿ ||
*******************
ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಮ್ |
ಸೂತ್ರಭಾಷ್ಯಕೃತೌ ವಂದೇ ಭಗವಂತೌ ಪುನ: ಪುನ: ||೧||
ಭಾವಾರ್ಥ:-ಸಾಕ್ಷಾತ್ ಭಗವಾನ್ ಶಂಕರನೇ ಆಗಿರುವ ಶ್ರೀ ಆದಿ ಶಂಕರ ಭಗವತ್ಪಾದರನ್ನೂ,ಸಾಕ್ಷಾತ್ ಕೇಶವನೇ ಆಗಿರುವ ಬಾದರಾಯಣ ವ್ಯಾಸಮಹರ್ಷಿಗಳವರನ್ನೂ ಸ್ಮರಿಸುತ್ತಾ,ಬ್ರಹ್ಮಸೂತ್ರವನ್ನು ರಚಿಸಿ ಅದಕ್ಕೆ ಭಾಷ್ಯವನ್ನು ಬರೆದಂತಹಾ ಈ ಈರ್ವರು ಭಗವಾನ್ ಸ್ವರೂಪಿಗಳಿಗೆ ಶಿರಸಾ ನಮಸ್ಕರಿಸುವೆ.
ಶೃತಿಸ್ಮೃತಿ ಪುರಾಣಾಂ ಆಲಯಂ ಕರುಣಾಲಯಂ |
ನಮಾಮಿ ಭಗವದ್ಪಾದಂ ಶಂಕರಂ ಲೋಕಶಂಕರಂ ||೨||
ಭಾವಾರ್ಥ:-ವೇದ,ಸ್ಮೃತಿ,ಪುರಾಣಗಳಿಗೆ ಆಶ್ರಯತಾಣವಾಗಿರುವ,ಕರುಣೆಯ ನೆಲೆಯಾಗಿರುವ,ವಿಶ್ವಕ್ಕೆಲ್ಲಾ ಸುಖವನ್ನು ಉಂಟು ಮಾಡುವ ಸಾಕ್ಷಾತ್ ಶಂಕರ ಸ್ವರೂಪೀ ಶ್ರೀ ಶಂಕರ ಭಗವದ್ಪಾದಾಚಾರ್ಯರಿಗೆ ನಮಸ್ಕರಿಸುವೆ.
ಸೂತ್ರಭಾಷ್ಯ ಪ್ರಣೇತಾರೌ ವೇದಾಂತಾಬ್ಜ ಪ್ರಭಾಕರೌ |
ವಂದೇ ಪರಸ್ಪರಾತ್ಮಾನೌ ಬಾದರಾಯಣ ಶಂಕರೌ ||೩||
ಭಾವಾರ್ಥ:-ಶಾರೀರಿಕಸೂತ್ರಗಳನ್ನು ವಿರಚಿಸಿ, ಅವುಗಳಿಗೆ ಭಾಷ್ಯವನ್ನು ಬರೆದು, ವೇದಾಂತವೆಂಬ ಕಮಲಕ್ಕೆ ಸೂರ್ಯನೋಪಾದಿಯವರೂ ಆಗಿರುವ ಪರಸ್ಪರ ಆತ್ಮ ಸ್ವರೂಪರೂ ಆಗಿರುವ,ಭಗವಾನ್ ಶ್ರೀ ಬಾದರಾಯಣ ಹಾಗೂ ಶ್ರೀಶಂಕರ ಭಗವತ್ಪಾದಾಚಾರ್ಯರೀರ್ವರಿಗೂ ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆ.
ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ||೪||
ಭಾವಾರ್ಥ:_ಭಗವಂತನಾದ ಶಂಕರನಿಂದ ಆರಂಭಗೊಂಡು ಆದಿ ಜಗದ್ಗುರು ಶ್ರೀಶಂಕರಾಚಾರ್ಯರನ್ನು ಮಧ್ಯದಲ್ಲಿ ಇರಿಸಿಕೊಂಡು ನಮ್ಮ ಈಗಿನ ಶ್ರೀ ಶ್ರೀ ಗುರುವರ್ಯರ ತನಕ ಅವಿಚ್ಛಿನ್ನವಾಗಿ ಸಾಗಿ ಬಂದಿರುವ ಸಮಸ್ತ ಗುರು ಪರಂಪರೆಯನ್ನು ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆ.
ವಂದೇಸ್ಹಂ ಭಗವತ್ಪಾದಂ ಗುರುಂ ಶಂಕರಮವ್ಯಯಮ್ |
ಯಮಾಶ್ರಿತ್ಯ ಜಗತ್ಸರ್ವಂ ಲಭತೇ ಶಾಂತಿಮುತ್ತಮಾಮ್ ||೫||
ಭಾವಾರ್ಥ:-ಯಾರನ್ನು ಆಶ್ರಯಿಸಿ ಪೂರ್ಣ ಪ್ರಪಂಚವು ಉತ್ಕೃಷ್ಠವಾದ ಶಾಂತಿಯನ್ನು ಪಡೆಯುವುದೋ,ಅಂಥಾ ಕಾಲಾತೀತರಾದ ಶ್ರೀಶಂಕರ ಭಗವತ್ಪಾದ ಗುರು ಪರಂಪರೆಯನ್ನು ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆ.
ಶಾಸ್ತ್ರಂ ಶಾರೀರಮೀಮಾಂಸಾ ದೇವಸ್ತು ಪರಮೇಶ್ವರ: |
ಆಚಾರ್ಯಾ: ಶಂಕರಾಚಾರ್ಯಾ: ಸಂತು ಮೇ ಜನ್ಮ ಜನ್ಮನಿ ||೬||
ಭಾವಾರ್ಥ:-ನನಗೆ ಶಾಸ್ತ್ರವೆಂದರೆ ಶಾರೀರಮೀಮಾಂಸೆಯಾಗಿದೆ.ದೇವರೆಂದರೆ ಸಾಕ್ಷಾತ್ ಪರಮೇಶ್ವರನೇ ಆಗಿರುವನು. ಆಚಾರ್ಯರೆಂದರೆ ಸಾಕ್ಷಾತ್ ಶ್ರೀ ಶಂಕರಾಚಾರ್ಯರೇ ಆಗಿರುವರು. ನನ್ನ ಜನ್ಮ ಜನ್ಮಗಳಲ್ಲಿಯೂ ಶ್ರೀಶಂಕರಾಚಾರ್ಯಾದಿ ಅವಿಚ್ಛಿನ್ನ ಗುರುಪರಂಪರೆಯೇ ನನಗೆ ಗುರುಗಳಾಗಿ ದೊರಕಲಿ.
ಶಂಖಾರೂಪೇಣ ಮಚ್ಚಿತ್ತಂ ಪಂಕೀಕೃತಮಭೂದ್ಯಯಾ |
ಕಿಂಕರೀ ಯಸ್ಯ ಸಾ ಮಾಯಾ ಶಂಕರಾಚಾರ್ಯಮಾಶ್ರಯೇ ||೭||
ಭಾವಾರ್ಥ:-ಸಂಶಯಸ್ವರೂಪಿಣಿಯಾಗಿರುವ ಮಾಯೆಯ ಕಾರಣದಿಂದ ನನ್ನ ಚಿತ್ತವು ಮಲಿನಗೊಂಡಿತ್ತು.ಅಂತಹಾ ಆ ಮಾಯೆಯು ಯಾರಿಗೆ ದಾಸಿಯೋ ಅಂತಹಾ ಶ್ರೀಶಂಕರ ಭಗವತ್ಪಾದ ಪರಂಪರೆಯನ್ನು ನಾನು ಆಶ್ರಯಿಸುತ್ತೇನೆ.
++++++++++++++++++++++++++++++++++++++++++++++++++++++++++++++++++++++++
|| ಇತಿ ಸಪ್ತ ಶ್ಲೋಕೀ ಆಚಾರ್ಯ ಸ್ತುತಿ || || ಈ ತೆರನಾಗಿ ಸಪ್ತ ಶ್ಲೋಕೀ ಆಚಾರ್ಯ ಸ್ತುತಿಗಳ ಭಾವಾರ್ಥವು ||
*********************************************************************************
-೬-
|| ಶ್ರೀ ದತ್ತಾತ್ರೇಯ ಸ್ತುತಿ: ಸ್ತೋತ್ರಮ್ ||
*******************************
ದತ್ತಾತ್ರೇಯಂ ಮಹಾತ್ಮಾನಂ ನೈಷ್ಠಿಕಂ ಬ್ರಹ್ಮಚಾರಿಣಮ್ |
ಬ್ರಹ್ಮನಿಷ್ಠಂ ನಿರಾಕಾರಂ ಪ್ರಣಮಾಮಿ ಸದಾಶಿವಮ್ ||೧||
ಭಾವಾರ್ಥ:-ಸ್ಥಿರವಾಗಿಯೂ ಅಚಂಚಲವಾಗಿಯೂ ಇರುವ
ಬ್ರಹ್ಮಚಾರಿಯೂ,ವೇದ ನಿಷ್ಠನೂ,ನಿರಾಕಾರಿಯೂ,ಸದಾಕಾಲವೂ
ಮಂಗಲದಾಯಕನೂ ಆಗಿರುವ,ಹಾಗೆಯೇ ಮಹಾತ್ಮನೂ ಆಗಿರುವ
ದತ್ತಾತ್ರೇಯ ಸ್ವಾಮಿಗೆ ನಮಿಸುತ್ತೇನೆ.
ಶ್ರೀದತ್ತಂ ಶ್ರೀಕರಂ ಶಾಂತಂ ಸತ್ಯದರ್ಮ ಪರಾಯಣಮ್ |
ಗುರುಣಾಂ ಪರಮಂ ದಿವ್ಯಂ ವಂದೇsಹಂ ಅತ್ರಿ ನಂದನಮ್ ||೨||
ಭಾವಾರ್ಥ:-ಸಂಪತ್ಪ್ರದಾಯಕನೂ,ತೃಪ್ತನೂ,ಸತ್ಯ ಹಾಗೂ ಧರ್ಮಗಳ
ಬಗ್ಗೆ ಅತ್ಯಂತ ಆಸಕ್ತನೂ ಗುರುಗಳಲ್ಲಿ
ಅಗ್ರಗಣ್ಯನೂ,ಶ್ರೇಷ್ಠನೂ,ಅತ್ರಿ ಮಹರ್ಷಿಯ ತನಯನೂ ಅಗಿರುವ
ಶ್ರೀ ದತ್ತ ಗುರುಗಳಿಗೆ ನಾನು ನಮಿಸುತ್ತೇನೆ.
ಅಸೂಯಾರಹಿತಂ ದೇವಂ ಜ್ಞಾನವಿಜ್ಞಾನ ರೂಪಿಣಮ್ |
ನಮಾಮಿ ಶಿರಸಾ ಭಕ್ತ್ಯಾ ಶ್ರೀದತ್ತಂ ಗುಣ ವರ್ಜಿತಮ್ ||೩||
ಭಾವಾರ್ಥ:-ಪತಿವ್ರತಾಪರಾಯಣೆಯಾದ ಅನಸೂಯಾ ದೇವಿಯ
ತನಯನಾಗಿ,ಅಸೂಯಾ ರಹಿತನಾಗಿ,ವಿದ್ವಾಂಸನೂ,ವಿಶಿಷ್ಠವಾದ ಜ್ಞಾನ
ಸ್ವರೂಪನೂಸತ್ವ,ರಜ,ತಮಗಳೆಂಬ ತ್ರಿಗುಣ ವರ್ಜಿತನೂ ಆದ
ಶ್ರೀದತ್ತ ಗುರುವಿಗೆ ನಾನು ನಮಿಸುತ್ತೇನೆ.
ಶ್ರೀದತ್ತಂ ಜ್ಞಾನದಾತಾರಂ ಸರ್ವಸಂಗ ವಿವರ್ಜಿತಮ್ |
ಅವಧೂತ ವರಿಷ್ಠಂ ಶ್ರೀ ಶಂಕರಂ ಪ್ರಣಮಾಮ್ಯಹಮ್ ||೪||
ಭಾವಾರ್ಥ:-ತಿಳುವಳಿಕೆಯನ್ನು ನೀಡುವವನಾದ,ಸಮಸ್ತ ಸಂಗಗಳನ್ನು
ಪರಿತ್ಯಜಿಸಿದವನಾದ, ವಿರಕ್ತ ಯೋಗಿಗಳಲ್ಲಿ ಅಗ್ರಗಣ್ಯನೂ
ಮಂಗಲದಾಯಕನೂ ಆಗಿರುವ ಶ್ರೀದತ್ತ ಗುರುಗಳಿಗೆ ನಾನು
ನಮಸ್ಕರಿಸುತ್ತೇನೆ.
ಮಂಗಳಂ ಯತಿರಾಜಾಯ ಗುರುರಾಜಾಯ ಮಂಗಳಮ್ |
ಮಂಗಳಂ ಬ್ರಹ್ಮನಿಷ್ಠಾಯ ದತ್ತಾತ್ರೇಯಾಯ ಮಂಗಳಮ್ ||೫||
ಭಾವಾರ್ಥ:-ಶರಣರಿಗೆ ಒಡೆಯನಾದ,ಗುರುಗಳಲ್ಲಿ
ಅಗ್ರಗಣ್ಯರಾಗಿರುವ,ದೇವಾದಿದೇವರಲ್ಲಿ ಏಕಚಿತ್ತನಾಗಿರುವ
ದತ್ತಾತ್ರೇಯ ಗುರುವಿಗೆ ಮಂಗಲವಾಗಲಿ.
*********************************************************************
|| ಇತಿ ಶ್ರೀ ದತಾತ್ರೇಯ ಸ್ತುತಿ: ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀ ದತ್ತಾತ್ರೇಯ ಸ್ತುತಿ: ಸ್ತೋತ್ರಗಳ ಭಾವಾರ್ಥವು ||
*********************************************************************
-೭-
|| ಯತಿ ಪಂಚಕ ||
***************
ವೇದಾಂತವಾಕ್ಯೇಷು ಸದಾ ರಮಂತ: |
ಭಿಕ್ಷಾನ್ನಮಾತ್ರೇಣ ಚ ತುಷ್ಟಿಮಂತ: ||
ಅಶೋಕವಂತ:ಕರುಣೈಕವಂತ: |
ಕೌಪೀನವಂತ: ಖಲು ಭಾಗ್ಯವಂತ: ||೧||
ಭಾವಾರ್ಥ:-ವೇದಾಂತಗಳೆಂದು ಪ್ರಸಿದ್ಧಿಪಡೆದಿರುವ ಉಪನಿಷತ್ತುಗಳ ವಾಕ್ಯಗಳ ತಾತ್ಪರ್ಯವನ್ನೂ ಶಕ್ಯಾರ್ಥವನ್ನೂ ಸದಾಚಿಂತಿಸುತ್ತಾ ಅದರಿಂದಲೇ ಮುದಗೊಳ್ಳುತ್ತಾ ಕೇವಲ ಭಿಕ್ಷಾನ್ನದಿಂದಲೇ ತೃಪ್ತಿಪಟ್ಟುಗೊಂಡು ದು:ಖರಹಿತರಾಗಿಯೂ ದಯಾಮಯಿಗಳೂ ಆಗಿರುವಂತಹಾ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ಮೂಲಂತರೋ: ಕೇವಲಮಾಶ್ರಯಂತ: |
ಪಾಣಿದ್ವಯೇ ಭೋಕ್ತುಮಮತ್ರಯಂತ: ||
ಕಂಥಾಮಪಿ ಸ್ತ್ರೀಮಿವ ಕುತ್ಸಯಂತ: |
ಕೌಪೀನವಂತ: ಖಲು ಭಾಗ್ಯವಂತ: ||೨||
ಭಾವಾರ್ಥ:-ಮರಗಿಡಗಳ ಅಡಿಯಲ್ಲಿ ವಾಸಿಸುತ್ತಾ ತಮ್ಮ ಎರಡೂ ಹಸ್ತಗಳನ್ನೇ ಊಟದಪಾತ್ರೆಯನ್ನಾಗಿ ಉಪಯೋಗಿಸುತ್ತಾ ದೊರಕಿದ ಸ್ತ್ರೀಸುಖವನ್ನು ತೊರೆಯುವುದರೊಂದಿಗೆ ಹಾಸುಗೆಯನ್ನು ಅನಾದರಿಸುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ದೇಹಾಭಿಮಾನಂ ಸುಪರಿತ್ಯಜಂತ: |
ಆತ್ಮಾನಮಾತ್ಮನ್ಯವಲೋಕಯಂತ: ||
ಅಹರ್ನಿಶಂ ಬ್ರಹ್ಮಣಿ ಯೇ ರಮಂತ: |
ಕೌಪೀನವಂತ: ಖಲು ಭಾಗ್ಯವಂತ: ||೩||
ಭಾವಾರ್ಥ:-ಶಾರೀರಿಕ ಮೋಹವನ್ನು ದೂರೀಕರಿಸುತ್ತಾ ತಮ್ಮಲ್ಲಿಯೇ ತಮ್ಮಾತ್ಮ ಸ್ವರೂಪವನ್ನು ಕಾಣುತ್ತಾ ಅಹರ್ನಿಶಿ ಪರಬ್ರಹ್ಮಚಿಂತನೆಯಲ್ಲಿಯೇ ಸಂತಸಪಡುತ್ತಾ ಇರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ಸ್ವಾನಂದಭಾವೇ ಪರಿತುಷ್ಟಿಮಂತ: |
ಸುಶಾಂತಸರ್ವೇಂದ್ರಿಯವೃತ್ತಿಮಂತ: ||
ನಾಂತಂ ನ ಮಧ್ಯಂ ನ ಬಹಿ: ಸ್ಮರಂತ: |
ಕೌಪೀನವಂತ: ಖಲು ಭಾಗ್ಯವಂತ: ||೪||
ಭಾವಾರ್ಥ:-ಆತ್ಮಾನಂದ ಭಾವದಲ್ಲಿಯೇ ಮುದಗೊಳ್ಳುತ್ತಾ,ಸಮಸ್ತ ಇಂದ್ರಿಯಗಳ ಕಾರ್ಯಗಳನ್ನು ತಮ್ಮಲ್ಲಿಯೇ ತೃಪ್ತಿಗೊಳಿಸುತ್ತಾ ಒಳಗೂ,ಹೊರಗೂ,ನಡುವೆಯೂ,ಎಲ್ಲೆಡೆಗಳಲ್ಲಿಯೂ ಅನ್ಯ ಯಾವುದರನ್ನೂ ಸ್ಮರಣೆಮಾಡದೆ ಇರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ಪಂಚಾಕ್ಷರಂ ಪಾವನಮುಚ್ಚರಂತ: |
ಪತಿಂ ಪಶೂನಂ ಹೃದಿ ಭಾವಯಂತ: ||
ಭಿಕ್ಷಾಶನಾ ದಿಕ್ಷು ಪರಿಭ್ರಮಂತ: |
ಕೌಪೀನವಂತ: ಖಲು ಭಾಗ್ಯವಂತ: ||೫||
ಭಾವಾರ್ಥ:-ಪರಮಪಾವನವಾಗಿರುವ ನಮ:ಶಿವಾಯ ಎನ್ನುವ ಶಿವಪಂಚಾಕ್ಷರೀ ಮಂತ್ರವನ್ನು ಅನವರತವೂ ಜಪಿಸುತ್ತಾ ಮನಸ್ಸಿನಲ್ಲಿಯೇ ನಿರಂತರ ಆ ಪಶುಪತಿಯನ್ನೇ ಧ್ಯಾನಿಸುತ್ತಾ ಕೇವಲ ಭಿಕ್ಷಾನ್ನದಿಂದಲೇ ಜೀವಧಾರಣೆಮಾಡುತ್ತಾ ಧರ್ಮಪ್ರಸಾರ ಹಾಗೂ ಧರ್ಮರಕ್ಷಣೆಮಾಡುತ್ತಾ ದೇಶ ಸಂಚಾರಮಾಡುತ್ತಿರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.ಅವರೇ ಭಾಗ್ಯಶಾಲಿಗಳು.ಅವರೇ ಪುಣ್ಯವಂತರು.
*********************************************************************
|| ಇತಿ ಯತಿ ಪಂಚಕಮ್ || || ಈ ರೀತಿಯಾಗಿ ಯತಿ ಪಂಚಕಗಳ ಭಾವಾರ್ಥವಾಗಿದೆ. ||
*********************************************************************
-೮-
-೬-
|| ಶ್ರೀ ದತ್ತಾತ್ರೇಯ ಸ್ತುತಿ: ಸ್ತೋತ್ರಮ್ ||
*******************************
ದತ್ತಾತ್ರೇಯಂ ಮಹಾತ್ಮಾನಂ ನೈಷ್ಠಿಕಂ ಬ್ರಹ್ಮಚಾರಿಣಮ್ |
ಬ್ರಹ್ಮನಿಷ್ಠಂ ನಿರಾಕಾರಂ ಪ್ರಣಮಾಮಿ ಸದಾಶಿವಮ್ ||೧||
ಭಾವಾರ್ಥ:-ಸ್ಥಿರವಾಗಿಯೂ ಅಚಂಚಲವಾಗಿಯೂ ಇರುವ
ಬ್ರಹ್ಮಚಾರಿಯೂ,ವೇದ ನಿಷ್ಠನೂ,ನಿರಾಕಾರಿಯೂ,ಸದಾಕಾಲವೂ
ಮಂಗಲದಾಯಕನೂ ಆಗಿರುವ,ಹಾಗೆಯೇ ಮಹಾತ್ಮನೂ ಆಗಿರುವ
ದತ್ತಾತ್ರೇಯ ಸ್ವಾಮಿಗೆ ನಮಿಸುತ್ತೇನೆ.
ಶ್ರೀದತ್ತಂ ಶ್ರೀಕರಂ ಶಾಂತಂ ಸತ್ಯದರ್ಮ ಪರಾಯಣಮ್ |
ಗುರುಣಾಂ ಪರಮಂ ದಿವ್ಯಂ ವಂದೇsಹಂ ಅತ್ರಿ ನಂದನಮ್ ||೨||
ಭಾವಾರ್ಥ:-ಸಂಪತ್ಪ್ರದಾಯಕನೂ,ತೃಪ್ತನೂ,ಸತ್ಯ ಹಾಗೂ ಧರ್ಮಗಳ
ಬಗ್ಗೆ ಅತ್ಯಂತ ಆಸಕ್ತನೂ ಗುರುಗಳಲ್ಲಿ
ಅಗ್ರಗಣ್ಯನೂ,ಶ್ರೇಷ್ಠನೂ,ಅತ್ರಿ ಮಹರ್ಷಿಯ ತನಯನೂ ಅಗಿರುವ
ಶ್ರೀ ದತ್ತ ಗುರುಗಳಿಗೆ ನಾನು ನಮಿಸುತ್ತೇನೆ.
ಅಸೂಯಾರಹಿತಂ ದೇವಂ ಜ್ಞಾನವಿಜ್ಞಾನ ರೂಪಿಣಮ್ |
ನಮಾಮಿ ಶಿರಸಾ ಭಕ್ತ್ಯಾ ಶ್ರೀದತ್ತಂ ಗುಣ ವರ್ಜಿತಮ್ ||೩||
ಭಾವಾರ್ಥ:-ಪತಿವ್ರತಾಪರಾಯಣೆಯಾದ ಅನಸೂಯಾ ದೇವಿಯ
ತನಯನಾಗಿ,ಅಸೂಯಾ ರಹಿತನಾಗಿ,ವಿದ್ವಾಂಸನೂ,ವಿಶಿಷ್ಠವಾದ ಜ್ಞಾನ
ಸ್ವರೂಪನೂಸತ್ವ,ರಜ,ತಮಗಳೆಂಬ ತ್ರಿಗುಣ ವರ್ಜಿತನೂ ಆದ
ಶ್ರೀದತ್ತ ಗುರುವಿಗೆ ನಾನು ನಮಿಸುತ್ತೇನೆ.
ಶ್ರೀದತ್ತಂ ಜ್ಞಾನದಾತಾರಂ ಸರ್ವಸಂಗ ವಿವರ್ಜಿತಮ್ |
ಅವಧೂತ ವರಿಷ್ಠಂ ಶ್ರೀ ಶಂಕರಂ ಪ್ರಣಮಾಮ್ಯಹಮ್ ||೪||
ಭಾವಾರ್ಥ:-ತಿಳುವಳಿಕೆಯನ್ನು ನೀಡುವವನಾದ,ಸಮಸ್ತ ಸಂಗಗಳನ್ನು
ಪರಿತ್ಯಜಿಸಿದವನಾದ, ವಿರಕ್ತ ಯೋಗಿಗಳಲ್ಲಿ ಅಗ್ರಗಣ್ಯನೂ
ಮಂಗಲದಾಯಕನೂ ಆಗಿರುವ ಶ್ರೀದತ್ತ ಗುರುಗಳಿಗೆ ನಾನು
ನಮಸ್ಕರಿಸುತ್ತೇನೆ.
ಮಂಗಳಂ ಯತಿರಾಜಾಯ ಗುರುರಾಜಾಯ ಮಂಗಳಮ್ |
ಮಂಗಳಂ ಬ್ರಹ್ಮನಿಷ್ಠಾಯ ದತ್ತಾತ್ರೇಯಾಯ ಮಂಗಳಮ್ ||೫||
ಭಾವಾರ್ಥ:-ಶರಣರಿಗೆ ಒಡೆಯನಾದ,ಗುರುಗಳಲ್ಲಿ
ಅಗ್ರಗಣ್ಯರಾಗಿರುವ,ದೇವಾದಿದೇವರಲ್ಲಿ ಏಕಚಿತ್ತನಾಗಿರುವ
ದತ್ತಾತ್ರೇಯ ಗುರುವಿಗೆ ಮಂಗಲವಾಗಲಿ.
*********************************************************************
|| ಇತಿ ಶ್ರೀ ದತಾತ್ರೇಯ ಸ್ತುತಿ: ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀ ದತ್ತಾತ್ರೇಯ ಸ್ತುತಿ: ಸ್ತೋತ್ರಗಳ ಭಾವಾರ್ಥವು ||
*********************************************************************
-೭-
|| ಯತಿ ಪಂಚಕ ||
***************
ವೇದಾಂತವಾಕ್ಯೇಷು ಸದಾ ರಮಂತ: |
ಭಿಕ್ಷಾನ್ನಮಾತ್ರೇಣ ಚ ತುಷ್ಟಿಮಂತ: ||
ಅಶೋಕವಂತ:ಕರುಣೈಕವಂತ: |
ಕೌಪೀನವಂತ: ಖಲು ಭಾಗ್ಯವಂತ: ||೧||
ಭಾವಾರ್ಥ:-ವೇದಾಂತಗಳೆಂದು ಪ್ರಸಿದ್ಧಿಪಡೆದಿರುವ ಉಪನಿಷತ್ತುಗಳ ವಾಕ್ಯಗಳ ತಾತ್ಪರ್ಯವನ್ನೂ ಶಕ್ಯಾರ್ಥವನ್ನೂ ಸದಾಚಿಂತಿಸುತ್ತಾ ಅದರಿಂದಲೇ ಮುದಗೊಳ್ಳುತ್ತಾ ಕೇವಲ ಭಿಕ್ಷಾನ್ನದಿಂದಲೇ ತೃಪ್ತಿಪಟ್ಟುಗೊಂಡು ದು:ಖರಹಿತರಾಗಿಯೂ ದಯಾಮಯಿಗಳೂ ಆಗಿರುವಂತಹಾ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ಮೂಲಂತರೋ: ಕೇವಲಮಾಶ್ರಯಂತ: |
ಪಾಣಿದ್ವಯೇ ಭೋಕ್ತುಮಮತ್ರಯಂತ: ||
ಕಂಥಾಮಪಿ ಸ್ತ್ರೀಮಿವ ಕುತ್ಸಯಂತ: |
ಕೌಪೀನವಂತ: ಖಲು ಭಾಗ್ಯವಂತ: ||೨||
ಭಾವಾರ್ಥ:-ಮರಗಿಡಗಳ ಅಡಿಯಲ್ಲಿ ವಾಸಿಸುತ್ತಾ ತಮ್ಮ ಎರಡೂ ಹಸ್ತಗಳನ್ನೇ ಊಟದಪಾತ್ರೆಯನ್ನಾಗಿ ಉಪಯೋಗಿಸುತ್ತಾ ದೊರಕಿದ ಸ್ತ್ರೀಸುಖವನ್ನು ತೊರೆಯುವುದರೊಂದಿಗೆ ಹಾಸುಗೆಯನ್ನು ಅನಾದರಿಸುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ದೇಹಾಭಿಮಾನಂ ಸುಪರಿತ್ಯಜಂತ: |
ಆತ್ಮಾನಮಾತ್ಮನ್ಯವಲೋಕಯಂತ: ||
ಅಹರ್ನಿಶಂ ಬ್ರಹ್ಮಣಿ ಯೇ ರಮಂತ: |
ಕೌಪೀನವಂತ: ಖಲು ಭಾಗ್ಯವಂತ: ||೩||
ಭಾವಾರ್ಥ:-ಶಾರೀರಿಕ ಮೋಹವನ್ನು ದೂರೀಕರಿಸುತ್ತಾ ತಮ್ಮಲ್ಲಿಯೇ ತಮ್ಮಾತ್ಮ ಸ್ವರೂಪವನ್ನು ಕಾಣುತ್ತಾ ಅಹರ್ನಿಶಿ ಪರಬ್ರಹ್ಮಚಿಂತನೆಯಲ್ಲಿಯೇ ಸಂತಸಪಡುತ್ತಾ ಇರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ಸ್ವಾನಂದಭಾವೇ ಪರಿತುಷ್ಟಿಮಂತ: |
ಸುಶಾಂತಸರ್ವೇಂದ್ರಿಯವೃತ್ತಿಮಂತ: ||
ನಾಂತಂ ನ ಮಧ್ಯಂ ನ ಬಹಿ: ಸ್ಮರಂತ: |
ಕೌಪೀನವಂತ: ಖಲು ಭಾಗ್ಯವಂತ: ||೪||
ಭಾವಾರ್ಥ:-ಆತ್ಮಾನಂದ ಭಾವದಲ್ಲಿಯೇ ಮುದಗೊಳ್ಳುತ್ತಾ,ಸಮಸ್ತ ಇಂದ್ರಿಯಗಳ ಕಾರ್ಯಗಳನ್ನು ತಮ್ಮಲ್ಲಿಯೇ ತೃಪ್ತಿಗೊಳಿಸುತ್ತಾ ಒಳಗೂ,ಹೊರಗೂ,ನಡುವೆಯೂ,ಎಲ್ಲೆಡೆಗಳಲ್ಲಿಯೂ ಅನ್ಯ ಯಾವುದರನ್ನೂ ಸ್ಮರಣೆಮಾಡದೆ ಇರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.
ಪಂಚಾಕ್ಷರಂ ಪಾವನಮುಚ್ಚರಂತ: |
ಪತಿಂ ಪಶೂನಂ ಹೃದಿ ಭಾವಯಂತ: ||
ಭಿಕ್ಷಾಶನಾ ದಿಕ್ಷು ಪರಿಭ್ರಮಂತ: |
ಕೌಪೀನವಂತ: ಖಲು ಭಾಗ್ಯವಂತ: ||೫||
ಭಾವಾರ್ಥ:-ಪರಮಪಾವನವಾಗಿರುವ ನಮ:ಶಿವಾಯ ಎನ್ನುವ ಶಿವಪಂಚಾಕ್ಷರೀ ಮಂತ್ರವನ್ನು ಅನವರತವೂ ಜಪಿಸುತ್ತಾ ಮನಸ್ಸಿನಲ್ಲಿಯೇ ನಿರಂತರ ಆ ಪಶುಪತಿಯನ್ನೇ ಧ್ಯಾನಿಸುತ್ತಾ ಕೇವಲ ಭಿಕ್ಷಾನ್ನದಿಂದಲೇ ಜೀವಧಾರಣೆಮಾಡುತ್ತಾ ಧರ್ಮಪ್ರಸಾರ ಹಾಗೂ ಧರ್ಮರಕ್ಷಣೆಮಾಡುತ್ತಾ ದೇಶ ಸಂಚಾರಮಾಡುತ್ತಿರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು.ಅವರೇ ಭಾಗ್ಯಶಾಲಿಗಳು.ಅವರೇ ಪುಣ್ಯವಂತರು.
*********************************************************************
|| ಇತಿ ಯತಿ ಪಂಚಕಮ್ || || ಈ ರೀತಿಯಾಗಿ ಯತಿ ಪಂಚಕಗಳ ಭಾವಾರ್ಥವಾಗಿದೆ. ||
*********************************************************************
-೮-
|| ತೋಟಕಾಷ್ಟಕಮ್ ||
*******************
ವಿದಿತಾಖಿಲಶಾಸ್ತ್ರಸುಧಾಜಲಧೇ |
ಮಹಿತೋಪನಿಷತ್ಕಥಿತಾರ್ಥನಿಧೇ ||
ಹೃದಯೇ ಕಲಯೇ ವಿಮಲಂ ಚರಣಂ |
ಭವ ಶಂಕರ ದೇಶಿಕ ಮೇ ಶರಣಮ್ ||೧||
ಭಾವಾರ್ಥ:-ಸಮಸ್ತ ವೇದಶಾಸ್ತ್ರಗಳಿಗೆ ಅಮೃತಮಯಿ ಸಾಗರದಂತಿರುವ ಸದ್ಗುರುವೇ! ತಾವು ವಿಖ್ಯಾತಿ ಹೊಂದಿರುವ ವೇದೋಪನಿಷತ್ತುಗಳ ಅರ್ಥವನ್ನು ಎಲ್ಲರಿಗೂ ತಿಳಿಸಿ ಕೊಟ್ಟವರು.ತಮ್ಮ ಪವಿತ್ರ ಪಾದಗಳನ್ನು ನನ್ನ ಹೃತ್ಕಮಲದಲ್ಲಿ ಧರಿಸುವೆನು.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಕರುಣಾವರುಣಾಲಯ ಪಾಲಯ ಮಾಂ |
ಭವಸಾಗರದು:ಖವಿದೂನಹೃದಮ್ ||
ರಚಯಾಖಿಲದರ್ಶನ ತತ್ವಮಿದಂ |
ಭವಶಂಕರದೇಶಿಕ ಮೇ ಶರಣಮ್ ||೨||
ಭಾವಾರ್ಥ:-ದಯಾಸಾಗರರಾಗಿರುವ ಸದ್ಗುರುವೇ! ನಾನು ಸಂಸಾರಸಾಗರದ ಕೊರಗಿನಿಂದ ತಬ್ಬಿಬ್ಬಾಗಿರುವ ಹೃದಯವುಳ್ಳವಾನಾಗಿರುವೆನು.ನೀವಾದರೋ ಸಕಲ ತತ್ವಗಳನ್ನೂ ಅರಿತವರು.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಭವತಾ ಜನತಾ ಸುಖಿತಾ ಭವಿತಾ |
ನಿಜಭೋಧ ವಿಚಾರಣ ಚಾರುಮತೇ ||
ಕಲಯೇಶ್ವರ ಜೀವವಿವೇಕಮಿದಂ |
ಭವಶಂಕರದೇಶಿಕ ಮೇ ಶರಣಮ್ ||೩||
ಭಾವಾರ್ಥ:-ಅಜ್ಞಾನವನ್ನು ನಿವಾರಿಸಿ ಶುಭವನ್ನು ನೀಡುವ ಗುಣವುಳ್ಳ ಸದ್ಗುರುವೇ! ತಮ್ಮ ನೈಜವಾದ ಜ್ಞಾನದ ಭೋಧನೆಯನ್ನು ಕೇಳಿ ಮನನ ಮಾಡಿಕೊಳ್ಳುವುದರಿಂದ ಜನರು ಸುಖಿಗಳಾಗುವರು.ಈಶ-ಜೀವರ ಏಕತ್ವವನ್ನು ನನಗೆ ತಿಳಿಸಿಕೊಡುವವರಾಗಿ ಗುರುವೇ. ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಭವ ಏವ ಭವಾನಿತಿ ಮೇ ನಿತರಾಂ |
ಸಮಜಾಯತ ಚೇತಸಿ ಕೌತುಕಿತಾ ||
ಮಮ ವಾರಯ ಮೋಹ ಮಹಾಜಲಧಿಂ|
ಭವಶಂಕರದೇಶಿಕ ಮೇ ಶರಣಮ್ ||೪||
ಭಾವಾರ್ಥ:-ತಾವು ಶಿವನೇ ಎಂಬುದು ಖಚಿತವಾಗಿ ನನಗೆ ಅರಿವಾಗಿ ಅತ್ಯಂತ ಮುದಗೊಂಡಿರುವೆನು.ನನ್ನಲ್ಲಿನ ಭ್ರಾಂತಿಯನ್ನು ಹೋಗಲಾಡಿಸಿ ಗುರುವೇ. ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಸುಕೃತೇಧಿಕೃತೇ ಬಹುಧಾ ಭವತೋ |
ಭವಿತಾ ಪದದರ್ಶನಲಾಲಸತಾ ||
ಅತಿದೀನಮಿಮಂ ಪರಿಪಾಲಯ ಮಾಂ |
ಭವಶಂಕರದೇಶಿಕ ಮೇ ಶರಣಮ್ ||೫||
ಭಾವಾರ್ಥ:-ಶ್ರೇಷ್ಠವಾಗಿರುವ ಉತ್ತಮ ಪುಣ್ಯಕಾರ್ಯಗಳನ್ನು ಮಾಡಿದುದರ ಸಲುವಾಗಿ ನನಗೆ ತಮ್ಮ ಪಾದ ದರ್ಶನ ಮಾಡಬೇಕೆಂಬ ಸದ್ಬುದ್ಧಿಯುಂಟಾಗಿದೆ. ಅತಿ ದು:ಖಿತನಾಗಿರುವ ನನ್ನನ್ನು ಪರಿಪಾಲಿಸಿ ಸದ್ಗುರುವೇ! ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಜಗತೀಮವತುಂ ಕಲಿತಾಕೃತಯೋ |
ವಿಚರಂತಿ ಮಹಾಮಹಸಚ್ಛಲತ: ||
ಅಹಿಮಾಂಶುರಿವಾತ್ರ ವಿಭಾಸಿ ಪುರೋ |
ಭವಶಂಕರದೇಶಿಕ ಮೇ ಶರಣಮ್ ||೬||
ಭಾವಾರ್ಥ:-ಜಗತ್ತನ್ನು ಸಂರಕ್ಷಿಸಲು ಶ್ರೇಷ್ಠಪುರುಷರು ಮಾನವ ಜನ್ಮವೆತ್ತಿ ಈ ಭುವಿಯಲ್ಲಿ ಸಂಚರಿಸುತ್ತಿರುವರು.ಅಂಥಹವರಲ್ಲಿ ಸೂರ್ಯನಂತೆ ನನ್ನೆದುರಿಗೆ ತಾವಿರುವಿರಿ.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಗುರುಪುಂಗವ ಪುಂಗವಕೇತನ ತೇ |
ಸಮತಾಮಯತಾಂ ನ ಹಿ ಕೋಪಿ ಸುಧೀ: ||
ಶರಣಾಗತವತ್ಸಲ ತತ್ವನಿಧೇ |
ಭವಶಂಕರದೇಶಿಕ ಮೇ ಶರಣಮ್ ||೭||
ಭಾವಾರ್ಥ:-ಹೇ ಗುರುಶ್ರೇಷ್ಠರೇ!ಪರಮಪೂಜ್ಯರೇ!ಶ್ರೇಷ್ಠವಾಗಿರುವ ತೇಜಸ್ಸುಳ್ಳ ಶಿವನೇ ತಾವಾಗಿರುವಿರಿ.ಉತ್ತಮವಾಗಿರುವ ತಿಳುವಳಿಕೆಯುಳ್ಳ ಗುರುವರ್ಯಾ; ತಮ್ಮ ಸಮಾನರು ಅನ್ಯರಾರೂ ಇಲ್ಲ. ತಾವು ಶರಣು ಹೊಗುವವರಿಗೆ ಆಶ್ರಯವನ್ನು ನೀಡುವವರು.ತತ್ವಸಂಪದವುಳ್ಳವರು.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ವಿದಿತಾ ನ ಮಯಾ ವಿಶದೈಕಕಲಾ |
ನ ಚ ಕಿಂಚನ ಕಾಂಚನ ಮಸ್ತಿಗುರೋ ||
ದ್ರುತಮೇವ ವಿಧೇಹಿ ಕೃಪಾಂ ಸಹಜಾಂ |
ಭವಶಂಕರದೇಶಿಕ ಮೇ ಶರಣಮ್ ||೮||
ಭಾವಾರ್ಥ:-ಸದ್ಗುರುವೇ!ನನಗೆ ಯಾವ ವಿದ್ಯೆಗಳೂ ತಿಳಿದಿರುವುದಿಲ್ಲ.ನನ್ನಲ್ಲಿ ಯಾವ ಸಂಪದವೂ ಇಲ್ಲ. ಅತಿಶೀಘ್ರವಾಗಿ ನನ್ನ ಮೇಲೆ ಸಹೃದಯ ಸಾಧುಸ್ವಭಾವದ ಕೃಪೆಯನ್ನು ಕರುಣಿಸಿರಿ.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
*********************************************************************
|| ಇತಿ ತೋಟಕಾಷ್ಟಕಮ್ ||
|| ಈ ರೀತಿಯಾಗಿ ತೋಟಕಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೯-
|| ಶ್ರೀವೇದವ್ಯಾಸಾಷ್ಟಕಮ್ ||
************************
ಕಲಿಮಲಾಸ್ತ ವಿವೇಕ ದಿವಾಕರಂ |
ಸಮವಲೋಕ್ಯ ತಮೋವಲಿತಂ ಜನಂ ||
ಕರುಣಯಾ ಭುವಿದರ್ಶಿತ ವಿಗ್ರಹಂ |
ಮುನಿವರಂ ತಮಹಂ ಸತತಂ ಭಜೇ ||೧||
ಭಾವಾರ್ಥ:-ಯುಗಗಳ ಪೈಕಿ ನಾಲ್ಕನೆಯದಾದ ಕಲಿಯುಗದಲ್ಲಿ ಪಾಪಕೂಪದಲ್ಲಿ ಮುಳುಗಿರುವ ಪ್ರಜಾಜನರನ್ನು ವಿವೇಕವೆಂಬ ಬೆಳಕಿನ ಕಿರಣಗಳನ್ನು ಹೊಂದಿದ ವೇದವ್ಯಾಸ ಮುನಿಶ್ರೇಷ್ಠರು ಗಮನಿಸಿ ದಯಾಭರಿತರಾಗಿ ಭುವಿಯಲ್ಲಿ ಅವತರಿಸಿದರು. ಅಂತಹಾ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಭರತವಂಶ ಸಮುದ್ಧರಣೇಚ್ಛಯಾ |
ಸ್ವಜನನೀವಚಸಾ ಪರಿನೋದಿತ: ||
ಅಜನಯತ್ತನಯ ತ್ರಿತಯಂ ಪ್ರಭುರ್- |
ಮುನಿವರಂ ತಮಹಂ ಸತತಂ ಭಜೇ ||೨||
ಭಾವಾರ್ಥ:-ತನ್ನ ಮಾತೆಯ ಇಚ್ಚೆಯನ್ನು ಗೌರವಿಸಿ ಅದರಿಂದ ಪ್ರಭಾವಿತನಾಗಿ ಭರತ ವಂಶವನ್ನು ಉದ್ಧರಿಸುವ ಬಯಕೆಯನ್ನು ಹೊಂದಿ ಮೂರು ಮಂದಿ ಮಕ್ಕಳ ಜನನಕ್ಕೆ ಕಾರಣರಾದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಮತಿಅಬಲಾದಿ ನಿರೀಕ್ಷ್ಯಕಲೌ ನೃಣಾಂ |
ಲಘುತರಂ ಕೃಪಯಾ ನಿಗಮಾಂಬುಧೇ: ||
ಸಮಕರೋದಿಹ ಭಾಗಮನೇಕಥಾ |
ಮುನಿವರಂ ತಮಹಂ ಸತತಂ ಭಜೇ ||೩||
ಭಾವಾರ್ಥ:-ಕಲಿಯುಗದಲ್ಲಿನ ಮನುಜರ ಕ್ಷೀಣವಾಗಿರುವ ಬುದ್ಧಿ, ಶಕ್ತಿ ಇತ್ಯಾದಿಗಳನ್ನು ಕಂಡು ದಯಾಪೂರಿತನಾಗಿ ವೇದವೆಂಬ ಮಹಾಸಾಗರದಲ್ಲಿ ಉತ್ತಮವಾಗಿ ಹಲವು ವಿಭಾಗಗಳನ್ನು ಅವರು ಮಾಡಿದರು. ಅಂತಹಾ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಸಕಲಧರ್ಮನಿರೂಪಣಸಾಗರಮ್ |
ವಿವಿಧ ಚಿತ್ರಕಥಾ ಸಮಲಂಕೃತಂ ||
ವ್ಯರಚಮಚ್ಚ ಪುರಾಣ ಕದಂಬಕಂ |
ಮುನಿವರಂ ತಮಹಂ ಸತತಂ ಭಜೇ ||೪||
ಭಾವಾರ್ಥ:-ಸಮಸ್ತ ಧರ್ಮಗಳ ದೃಷ್ಟಾಂತಸಾಗರವೋ ಎನ್ನುವಂತೆ ನಾನಾವಿಧದ ಕಥೆಗಳಿಂದ ಅಲಂಕೃತವಾದ ಪುರಾಣ ಗುಚ್ಛವನ್ನು ಅವರು ವಿಶೇಷವಗಿ ವಿರಚಿಸಿದರು.ಅಂತಹಾ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಶೃತಿವಿರೋಧ ಸಮನ್ವಯ ದರ್ಪಣಂ |
ನಿಖಿಲವಾದಿಮತಾಂಧ ವಿದಾರಣಂ ||
ಗ್ರಥಿತವಾನಪಿ ಸೂತ್ರಸಮೂಹಕಂ |
ಮುನಿವರಂ ತಮಹಂ ಸತತಂ ಭಜೇ ||೫||
ಭಾವಾರ್ಥ:-ವೇದಗಳಲ್ಲಿರುವ ವಿರೋದಾಭಾಸಗಳನ್ನು ಸಮನ್ವಯಗೊಳಿಸುವ ಕನ್ನಡಿಯಂತಿರುವ ನಿರಂತರವೂ ಮತಾಂಧರ ಮತಾಂಧತೆಯನ್ನು ಅಳಿಸಿ ಹಾಕುವ ಬ್ರಹ್ಮಸೂತ್ರ ಸಮೂಹವನ್ನು ರಚಿಸಿದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಯದನುಭಾವವಶೇನ ದಿವಂ ಗತ: |
ಸಮಧಿಗಮ್ಯ ಮಹಾಸ್ತ್ರ ಸಮುಚ್ಚಯಂ ||
ಕುರುಚಮೂಮಜಯದ್ವಿಜಯೊದ್ರುತಂ |
ಮುನಿವರಂ ತಮಹಂ ಸತತಂ ಭಜೇ ||೬||
ಭಾವಾರ್ಥ:-ಯಾವುದು ಆತ್ಮಾನುಭವ ವಶವರ್ತಿಯಾಗಿ ಸ್ವರ್ಗವನ್ನು ತಲಪಿತೋ ಅಂತಹಾ ಮಹಾಸ್ತ್ರಸಮೂಹವನ್ನು ಉತ್ತಮವಾಗಿ ಅಭ್ಯಸಿಸಿ ಬೇಗನೆ ಗೆದ್ದು ವಿಜಯಶಾಲಿಯಾದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಸಮರವೃತ್ತವಿಬೋಧಸಮೀಹಯಾ |
ಕುರುವರೇಣ ಮುದಾಕೃತಯಾಚನ: ||
ಸಪದಿಸೂತಮದಾದಮಲೇಕ್ಷಣಂ |
ಮುನಿವರಂ ತಮಹಂ ಸತತಂ ಭಜೇ ||೭||
ಭಾವಾರ್ಥ:-ಕುರುಕ್ಷೇತ್ರದ ಸಮರ ವೃತ್ತಾಂತವನ್ನು ಅರಿತುಕೊಳ್ಳುವ ಇಚ್ಚೆಯಿಂದ ಕುರುಕುಲಶ್ರೇಷ್ಠ ಧೃತರಾಷ್ಟ್ರನಿಂದ ವಾತ್ಸಲ್ಯಪೂರ್ವಕವಾಗಿ ಕೇಳಿ ವ್ಯವಸ್ಥೆಯನ್ನು ಕಲ್ಪಿಸಿಕೊಂಡವರೂ,ಸೂತನಿಗೆ ಕುಳಿತಲ್ಲಿಂದಲೇ ಕಾಳಗದ ದೃಶ್ಯ ಕಾಣುವ ದಿವ್ಯ ದೃಷ್ಟಿಯನ್ನು ಕರುಣಿಸಿದವರೂ ಆಗಿರುವ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ವನನಿವಾಸಪರೌ ಕುರುದಂಪತಿ |
ಸುತಶುಚಾ ತಪಸಾ ಚ ವಿಕರ್ಷಿತೌ ||
ಮೃತತನೂಜಗಣಂ ಸಮದರ್ಶಯನ್- |
ಮುನಿವರಂ ತಮಹಂ ಸತತಂ ಭಜೇ ||೮||
ಭಾವಾರ್ಥ:-ಮಕ್ಕಳ ವಿಯೋಗದಿಂದ ದು:ಖಭರಿತರಾಗಿ ಕಾನನದಲ್ಲಿ ವಾಸ ಮಾಡುವ ಇಚ್ಚೆಯುಳ್ಳವರಾಗಿ ತಪವನ್ನು ಮಾಡಲು ಸೆಳೆತವುಳ್ಳವರೂ ಆದ ಕುರುದಂಪತಿಗಳಿಗೆ ಅವರ ಮೃತಮಕ್ಕಳ ಗುಂಪನ್ನು ತೋರಿಸಿದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ವ್ಯಾಸಾಷ್ಟಕಮಿದಂ ಪುಣ್ಯಂ |
ಬ್ರಹ್ಮಾನಂದೇನ ಕೀರ್ತಿತಮ್ ||
ಯ: ಪಠೇನ್ಮನುಜೋನ್ನಿತ್ಯಂ |
ಸ ಭವೇಚ್ಚಾಸ್ತ್ರ ಪಾರಗ: ||೯||
ಭಾವಾರ್ಥ:-ಬ್ರಹ್ಮಾನಂದರಿಂದ ಹಾಡಲ್ಪಟ್ಟಿರುವ ಈ ವ್ಯಾಸಾಷ್ಟಕವನ್ನು ಯಾವ ಮಾನವರು ಪ್ರತಿದಿನವೂ ಪಠಿಸುವರೋ ಅವರು ಸರ್ವ ಶಾಸ್ತ್ರಪಾರಂಗತರಾಗುವರು.
*********************************************************************
|| ಇತಿ ಶ್ರೀ ವೇದ ವ್ಯಾಸಾಷ್ಟಕಮ್ ||
|| ಈ ರೀತಿಯಾಗಿ ಶ್ರೀ ವೇದವ್ಯಾಸಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೦-
*******************
ವಿದಿತಾಖಿಲಶಾಸ್ತ್ರಸುಧಾಜಲಧೇ |
ಮಹಿತೋಪನಿಷತ್ಕಥಿತಾರ್ಥನಿಧೇ ||
ಹೃದಯೇ ಕಲಯೇ ವಿಮಲಂ ಚರಣಂ |
ಭವ ಶಂಕರ ದೇಶಿಕ ಮೇ ಶರಣಮ್ ||೧||
ಭಾವಾರ್ಥ:-ಸಮಸ್ತ ವೇದಶಾಸ್ತ್ರಗಳಿಗೆ ಅಮೃತಮಯಿ ಸಾಗರದಂತಿರುವ ಸದ್ಗುರುವೇ! ತಾವು ವಿಖ್ಯಾತಿ ಹೊಂದಿರುವ ವೇದೋಪನಿಷತ್ತುಗಳ ಅರ್ಥವನ್ನು ಎಲ್ಲರಿಗೂ ತಿಳಿಸಿ ಕೊಟ್ಟವರು.ತಮ್ಮ ಪವಿತ್ರ ಪಾದಗಳನ್ನು ನನ್ನ ಹೃತ್ಕಮಲದಲ್ಲಿ ಧರಿಸುವೆನು.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಕರುಣಾವರುಣಾಲಯ ಪಾಲಯ ಮಾಂ |
ಭವಸಾಗರದು:ಖವಿದೂನಹೃದಮ್ ||
ರಚಯಾಖಿಲದರ್ಶನ ತತ್ವಮಿದಂ |
ಭವಶಂಕರದೇಶಿಕ ಮೇ ಶರಣಮ್ ||೨||
ಭಾವಾರ್ಥ:-ದಯಾಸಾಗರರಾಗಿರುವ ಸದ್ಗುರುವೇ! ನಾನು ಸಂಸಾರಸಾಗರದ ಕೊರಗಿನಿಂದ ತಬ್ಬಿಬ್ಬಾಗಿರುವ ಹೃದಯವುಳ್ಳವಾನಾಗಿರುವೆನು.ನೀವಾದರೋ ಸಕಲ ತತ್ವಗಳನ್ನೂ ಅರಿತವರು.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಭವತಾ ಜನತಾ ಸುಖಿತಾ ಭವಿತಾ |
ನಿಜಭೋಧ ವಿಚಾರಣ ಚಾರುಮತೇ ||
ಕಲಯೇಶ್ವರ ಜೀವವಿವೇಕಮಿದಂ |
ಭವಶಂಕರದೇಶಿಕ ಮೇ ಶರಣಮ್ ||೩||
ಭಾವಾರ್ಥ:-ಅಜ್ಞಾನವನ್ನು ನಿವಾರಿಸಿ ಶುಭವನ್ನು ನೀಡುವ ಗುಣವುಳ್ಳ ಸದ್ಗುರುವೇ! ತಮ್ಮ ನೈಜವಾದ ಜ್ಞಾನದ ಭೋಧನೆಯನ್ನು ಕೇಳಿ ಮನನ ಮಾಡಿಕೊಳ್ಳುವುದರಿಂದ ಜನರು ಸುಖಿಗಳಾಗುವರು.ಈಶ-ಜೀವರ ಏಕತ್ವವನ್ನು ನನಗೆ ತಿಳಿಸಿಕೊಡುವವರಾಗಿ ಗುರುವೇ. ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಭವ ಏವ ಭವಾನಿತಿ ಮೇ ನಿತರಾಂ |
ಸಮಜಾಯತ ಚೇತಸಿ ಕೌತುಕಿತಾ ||
ಮಮ ವಾರಯ ಮೋಹ ಮಹಾಜಲಧಿಂ|
ಭವಶಂಕರದೇಶಿಕ ಮೇ ಶರಣಮ್ ||೪||
ಭಾವಾರ್ಥ:-ತಾವು ಶಿವನೇ ಎಂಬುದು ಖಚಿತವಾಗಿ ನನಗೆ ಅರಿವಾಗಿ ಅತ್ಯಂತ ಮುದಗೊಂಡಿರುವೆನು.ನನ್ನಲ್ಲಿನ ಭ್ರಾಂತಿಯನ್ನು ಹೋಗಲಾಡಿಸಿ ಗುರುವೇ. ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಸುಕೃತೇಧಿಕೃತೇ ಬಹುಧಾ ಭವತೋ |
ಭವಿತಾ ಪದದರ್ಶನಲಾಲಸತಾ ||
ಅತಿದೀನಮಿಮಂ ಪರಿಪಾಲಯ ಮಾಂ |
ಭವಶಂಕರದೇಶಿಕ ಮೇ ಶರಣಮ್ ||೫||
ಭಾವಾರ್ಥ:-ಶ್ರೇಷ್ಠವಾಗಿರುವ ಉತ್ತಮ ಪುಣ್ಯಕಾರ್ಯಗಳನ್ನು ಮಾಡಿದುದರ ಸಲುವಾಗಿ ನನಗೆ ತಮ್ಮ ಪಾದ ದರ್ಶನ ಮಾಡಬೇಕೆಂಬ ಸದ್ಬುದ್ಧಿಯುಂಟಾಗಿದೆ. ಅತಿ ದು:ಖಿತನಾಗಿರುವ ನನ್ನನ್ನು ಪರಿಪಾಲಿಸಿ ಸದ್ಗುರುವೇ! ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಜಗತೀಮವತುಂ ಕಲಿತಾಕೃತಯೋ |
ವಿಚರಂತಿ ಮಹಾಮಹಸಚ್ಛಲತ: ||
ಅಹಿಮಾಂಶುರಿವಾತ್ರ ವಿಭಾಸಿ ಪುರೋ |
ಭವಶಂಕರದೇಶಿಕ ಮೇ ಶರಣಮ್ ||೬||
ಭಾವಾರ್ಥ:-ಜಗತ್ತನ್ನು ಸಂರಕ್ಷಿಸಲು ಶ್ರೇಷ್ಠಪುರುಷರು ಮಾನವ ಜನ್ಮವೆತ್ತಿ ಈ ಭುವಿಯಲ್ಲಿ ಸಂಚರಿಸುತ್ತಿರುವರು.ಅಂಥಹವರಲ್ಲಿ ಸೂರ್ಯನಂತೆ ನನ್ನೆದುರಿಗೆ ತಾವಿರುವಿರಿ.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ಗುರುಪುಂಗವ ಪುಂಗವಕೇತನ ತೇ |
ಸಮತಾಮಯತಾಂ ನ ಹಿ ಕೋಪಿ ಸುಧೀ: ||
ಶರಣಾಗತವತ್ಸಲ ತತ್ವನಿಧೇ |
ಭವಶಂಕರದೇಶಿಕ ಮೇ ಶರಣಮ್ ||೭||
ಭಾವಾರ್ಥ:-ಹೇ ಗುರುಶ್ರೇಷ್ಠರೇ!ಪರಮಪೂಜ್ಯರೇ!ಶ್ರೇಷ್ಠವಾಗಿರುವ ತೇಜಸ್ಸುಳ್ಳ ಶಿವನೇ ತಾವಾಗಿರುವಿರಿ.ಉತ್ತಮವಾಗಿರುವ ತಿಳುವಳಿಕೆಯುಳ್ಳ ಗುರುವರ್ಯಾ; ತಮ್ಮ ಸಮಾನರು ಅನ್ಯರಾರೂ ಇಲ್ಲ. ತಾವು ಶರಣು ಹೊಗುವವರಿಗೆ ಆಶ್ರಯವನ್ನು ನೀಡುವವರು.ತತ್ವಸಂಪದವುಳ್ಳವರು.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
ವಿದಿತಾ ನ ಮಯಾ ವಿಶದೈಕಕಲಾ |
ನ ಚ ಕಿಂಚನ ಕಾಂಚನ ಮಸ್ತಿಗುರೋ ||
ದ್ರುತಮೇವ ವಿಧೇಹಿ ಕೃಪಾಂ ಸಹಜಾಂ |
ಭವಶಂಕರದೇಶಿಕ ಮೇ ಶರಣಮ್ ||೮||
ಭಾವಾರ್ಥ:-ಸದ್ಗುರುವೇ!ನನಗೆ ಯಾವ ವಿದ್ಯೆಗಳೂ ತಿಳಿದಿರುವುದಿಲ್ಲ.ನನ್ನಲ್ಲಿ ಯಾವ ಸಂಪದವೂ ಇಲ್ಲ. ಅತಿಶೀಘ್ರವಾಗಿ ನನ್ನ ಮೇಲೆ ಸಹೃದಯ ಸಾಧುಸ್ವಭಾವದ ಕೃಪೆಯನ್ನು ಕರುಣಿಸಿರಿ.ನನ್ನ ಮೇಲೆ ಕೃಪೆಯಿರಿಸಿ ತಮ್ಮ ಚರಣಾರವಿಂದಗಳಲ್ಲಿ ಆಶ್ರಯವನ್ನು ದಯಪಾಲಿಸುವವರಾಗಿರಿ.
*********************************************************************
|| ಇತಿ ತೋಟಕಾಷ್ಟಕಮ್ ||
|| ಈ ರೀತಿಯಾಗಿ ತೋಟಕಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೯-
|| ಶ್ರೀವೇದವ್ಯಾಸಾಷ್ಟಕಮ್ ||
************************
ಕಲಿಮಲಾಸ್ತ ವಿವೇಕ ದಿವಾಕರಂ |
ಸಮವಲೋಕ್ಯ ತಮೋವಲಿತಂ ಜನಂ ||
ಕರುಣಯಾ ಭುವಿದರ್ಶಿತ ವಿಗ್ರಹಂ |
ಮುನಿವರಂ ತಮಹಂ ಸತತಂ ಭಜೇ ||೧||
ಭಾವಾರ್ಥ:-ಯುಗಗಳ ಪೈಕಿ ನಾಲ್ಕನೆಯದಾದ ಕಲಿಯುಗದಲ್ಲಿ ಪಾಪಕೂಪದಲ್ಲಿ ಮುಳುಗಿರುವ ಪ್ರಜಾಜನರನ್ನು ವಿವೇಕವೆಂಬ ಬೆಳಕಿನ ಕಿರಣಗಳನ್ನು ಹೊಂದಿದ ವೇದವ್ಯಾಸ ಮುನಿಶ್ರೇಷ್ಠರು ಗಮನಿಸಿ ದಯಾಭರಿತರಾಗಿ ಭುವಿಯಲ್ಲಿ ಅವತರಿಸಿದರು. ಅಂತಹಾ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಭರತವಂಶ ಸಮುದ್ಧರಣೇಚ್ಛಯಾ |
ಸ್ವಜನನೀವಚಸಾ ಪರಿನೋದಿತ: ||
ಅಜನಯತ್ತನಯ ತ್ರಿತಯಂ ಪ್ರಭುರ್- |
ಮುನಿವರಂ ತಮಹಂ ಸತತಂ ಭಜೇ ||೨||
ಭಾವಾರ್ಥ:-ತನ್ನ ಮಾತೆಯ ಇಚ್ಚೆಯನ್ನು ಗೌರವಿಸಿ ಅದರಿಂದ ಪ್ರಭಾವಿತನಾಗಿ ಭರತ ವಂಶವನ್ನು ಉದ್ಧರಿಸುವ ಬಯಕೆಯನ್ನು ಹೊಂದಿ ಮೂರು ಮಂದಿ ಮಕ್ಕಳ ಜನನಕ್ಕೆ ಕಾರಣರಾದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಮತಿಅಬಲಾದಿ ನಿರೀಕ್ಷ್ಯಕಲೌ ನೃಣಾಂ |
ಲಘುತರಂ ಕೃಪಯಾ ನಿಗಮಾಂಬುಧೇ: ||
ಸಮಕರೋದಿಹ ಭಾಗಮನೇಕಥಾ |
ಮುನಿವರಂ ತಮಹಂ ಸತತಂ ಭಜೇ ||೩||
ಭಾವಾರ್ಥ:-ಕಲಿಯುಗದಲ್ಲಿನ ಮನುಜರ ಕ್ಷೀಣವಾಗಿರುವ ಬುದ್ಧಿ, ಶಕ್ತಿ ಇತ್ಯಾದಿಗಳನ್ನು ಕಂಡು ದಯಾಪೂರಿತನಾಗಿ ವೇದವೆಂಬ ಮಹಾಸಾಗರದಲ್ಲಿ ಉತ್ತಮವಾಗಿ ಹಲವು ವಿಭಾಗಗಳನ್ನು ಅವರು ಮಾಡಿದರು. ಅಂತಹಾ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಸಕಲಧರ್ಮನಿರೂಪಣಸಾಗರಮ್ |
ವಿವಿಧ ಚಿತ್ರಕಥಾ ಸಮಲಂಕೃತಂ ||
ವ್ಯರಚಮಚ್ಚ ಪುರಾಣ ಕದಂಬಕಂ |
ಮುನಿವರಂ ತಮಹಂ ಸತತಂ ಭಜೇ ||೪||
ಭಾವಾರ್ಥ:-ಸಮಸ್ತ ಧರ್ಮಗಳ ದೃಷ್ಟಾಂತಸಾಗರವೋ ಎನ್ನುವಂತೆ ನಾನಾವಿಧದ ಕಥೆಗಳಿಂದ ಅಲಂಕೃತವಾದ ಪುರಾಣ ಗುಚ್ಛವನ್ನು ಅವರು ವಿಶೇಷವಗಿ ವಿರಚಿಸಿದರು.ಅಂತಹಾ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಶೃತಿವಿರೋಧ ಸಮನ್ವಯ ದರ್ಪಣಂ |
ನಿಖಿಲವಾದಿಮತಾಂಧ ವಿದಾರಣಂ ||
ಗ್ರಥಿತವಾನಪಿ ಸೂತ್ರಸಮೂಹಕಂ |
ಮುನಿವರಂ ತಮಹಂ ಸತತಂ ಭಜೇ ||೫||
ಭಾವಾರ್ಥ:-ವೇದಗಳಲ್ಲಿರುವ ವಿರೋದಾಭಾಸಗಳನ್ನು ಸಮನ್ವಯಗೊಳಿಸುವ ಕನ್ನಡಿಯಂತಿರುವ ನಿರಂತರವೂ ಮತಾಂಧರ ಮತಾಂಧತೆಯನ್ನು ಅಳಿಸಿ ಹಾಕುವ ಬ್ರಹ್ಮಸೂತ್ರ ಸಮೂಹವನ್ನು ರಚಿಸಿದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಯದನುಭಾವವಶೇನ ದಿವಂ ಗತ: |
ಸಮಧಿಗಮ್ಯ ಮಹಾಸ್ತ್ರ ಸಮುಚ್ಚಯಂ ||
ಕುರುಚಮೂಮಜಯದ್ವಿಜಯೊದ್ರುತಂ |
ಮುನಿವರಂ ತಮಹಂ ಸತತಂ ಭಜೇ ||೬||
ಭಾವಾರ್ಥ:-ಯಾವುದು ಆತ್ಮಾನುಭವ ವಶವರ್ತಿಯಾಗಿ ಸ್ವರ್ಗವನ್ನು ತಲಪಿತೋ ಅಂತಹಾ ಮಹಾಸ್ತ್ರಸಮೂಹವನ್ನು ಉತ್ತಮವಾಗಿ ಅಭ್ಯಸಿಸಿ ಬೇಗನೆ ಗೆದ್ದು ವಿಜಯಶಾಲಿಯಾದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ಸಮರವೃತ್ತವಿಬೋಧಸಮೀಹಯಾ |
ಕುರುವರೇಣ ಮುದಾಕೃತಯಾಚನ: ||
ಸಪದಿಸೂತಮದಾದಮಲೇಕ್ಷಣಂ |
ಮುನಿವರಂ ತಮಹಂ ಸತತಂ ಭಜೇ ||೭||
ಭಾವಾರ್ಥ:-ಕುರುಕ್ಷೇತ್ರದ ಸಮರ ವೃತ್ತಾಂತವನ್ನು ಅರಿತುಕೊಳ್ಳುವ ಇಚ್ಚೆಯಿಂದ ಕುರುಕುಲಶ್ರೇಷ್ಠ ಧೃತರಾಷ್ಟ್ರನಿಂದ ವಾತ್ಸಲ್ಯಪೂರ್ವಕವಾಗಿ ಕೇಳಿ ವ್ಯವಸ್ಥೆಯನ್ನು ಕಲ್ಪಿಸಿಕೊಂಡವರೂ,ಸೂತನಿಗೆ ಕುಳಿತಲ್ಲಿಂದಲೇ ಕಾಳಗದ ದೃಶ್ಯ ಕಾಣುವ ದಿವ್ಯ ದೃಷ್ಟಿಯನ್ನು ಕರುಣಿಸಿದವರೂ ಆಗಿರುವ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ವನನಿವಾಸಪರೌ ಕುರುದಂಪತಿ |
ಸುತಶುಚಾ ತಪಸಾ ಚ ವಿಕರ್ಷಿತೌ ||
ಮೃತತನೂಜಗಣಂ ಸಮದರ್ಶಯನ್- |
ಮುನಿವರಂ ತಮಹಂ ಸತತಂ ಭಜೇ ||೮||
ಭಾವಾರ್ಥ:-ಮಕ್ಕಳ ವಿಯೋಗದಿಂದ ದು:ಖಭರಿತರಾಗಿ ಕಾನನದಲ್ಲಿ ವಾಸ ಮಾಡುವ ಇಚ್ಚೆಯುಳ್ಳವರಾಗಿ ತಪವನ್ನು ಮಾಡಲು ಸೆಳೆತವುಳ್ಳವರೂ ಆದ ಕುರುದಂಪತಿಗಳಿಗೆ ಅವರ ಮೃತಮಕ್ಕಳ ಗುಂಪನ್ನು ತೋರಿಸಿದ ಮಹಾಗುರು ಶ್ರೇಷ್ಠರನ್ನು ನಾನು ಸದಾ ಸ್ತುತಿಸುವೆನು.
ವ್ಯಾಸಾಷ್ಟಕಮಿದಂ ಪುಣ್ಯಂ |
ಬ್ರಹ್ಮಾನಂದೇನ ಕೀರ್ತಿತಮ್ ||
ಯ: ಪಠೇನ್ಮನುಜೋನ್ನಿತ್ಯಂ |
ಸ ಭವೇಚ್ಚಾಸ್ತ್ರ ಪಾರಗ: ||೯||
ಭಾವಾರ್ಥ:-ಬ್ರಹ್ಮಾನಂದರಿಂದ ಹಾಡಲ್ಪಟ್ಟಿರುವ ಈ ವ್ಯಾಸಾಷ್ಟಕವನ್ನು ಯಾವ ಮಾನವರು ಪ್ರತಿದಿನವೂ ಪಠಿಸುವರೋ ಅವರು ಸರ್ವ ಶಾಸ್ತ್ರಪಾರಂಗತರಾಗುವರು.
*********************************************************************
|| ಇತಿ ಶ್ರೀ ವೇದ ವ್ಯಾಸಾಷ್ಟಕಮ್ ||
|| ಈ ರೀತಿಯಾಗಿ ಶ್ರೀ ವೇದವ್ಯಾಸಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೦-
No comments:
Post a Comment