Thursday, 30 January 2014

ಸ್ತೋತ್ರ ಮಂದಾರ

ಆಂಜನೇಯಸ್ತೋತ್ರಗಳು
*****************
             -೧-
ಶ್ರೀಮದ್ಜಗದ್ಗುರು ಶಂಕರಾಚಾರ್ಯ ವಿರಚಿತ

|| ಶ್ರೀ ಹನುಮತ್ಪಂಚರತ್ನಮ್ ||   [ಕನ್ನಡಭಾಷಾ ಭಾವಾರ್ಥ ಸಹಿತ ]
*****************************

ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |
ಸೀತಾಪತಿದೂತಾದ್ಯಂ ವಾತಾತ್ಮಜ ಮದ್ಯ ಭಾವನೆಯೇ ಹೃದ್ಯಮ್ || ೧ ||

ಭಾವಾನುವಾದ :-ವಿಷಯ ಸುಖಗಳ ಆಶೆಗಳೆಲ್ಲವನ್ನೂ ಬಿಟ್ಟು;ಸಂತೋಷದ ಕಣ್ಣೀರಿನಿಂದ ಪುಳಕಿತನಾದಂತಹಾ; ಅತ್ಯಂತ ಪರಿಶುಧ್ಧನಾಗಿರುವ; ಜಾನಕೀರಮಣನ ಆದಿ ಸೇವಕನಾದ; ಸುಂದರ ರೂಪಿನ ಆ ವಾಯುಪುತ್ರ ಆಂಜನೇಯನನ್ನು ನಾನಿಂದು ಹೃದಯಾಂತರಾಳದಿಂದ ಸ್ಮರಿಸುವೆನು. || ೧ ||

ತರುಣಾರುಣಮುಖಕಮಲಂ ಕರುಣಾರಸಪೂರಿತಾಪಾಂಗಂ |
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಂ || ೨ ||

ಭಾವಾನುವಾದ :-

ಉದಯಸೂರ್ಯನ ಹಾಗೆ ಕಾಂತಿಯುಕ್ತವಾದ ಮುಖವನ್ನು ಹೊಂದಿದವನಾದ;ದಯಾರಸದ ಹರಿವು ತುಂಬಿದ ಕಡೆಗಣ್ಣುಗಳಿರುವ ;ಜೀವದಾನ ಮಾಡುವ ಮನೋಜ್ಞ ಮನಸ್ಸಿನ; ;ಅಂಜನಾದೇವಿಯ ಪಾಲಿಗೆ ಭಾಗ್ಯಕಾರಕನಾದ ಆ ಹನುಮಂತನನ್ನು ನಾನು ಸ್ತುತಿಸುತ್ತ್ತೇನೆ. || ೨ ||

ಶಂಬರವೈರಿಶರಾತಿಗಮಂಬುಜದಲ ವಿಪುಲಲೋಚನಾದಾರಂ |
ಕಂಬುಗಲಮನಿಲದಿಶಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ ||

ಭಾವಾನುವಾದ :-

ಮನ್ಮಥನ ಬಾಣವನ್ನು ದೂರೀಕರಿಸಿದವನಾಗಿರುವ;ತಾವರೆಯ ದಳಗಳನ್ನು ಹೋಲುವ ವಿಶಾಲವಾದ ಕಣ್ಣುಗಳಿಂದ ಕೂಡಿ ಉದಾರ ಚರಿತನಾಗಿರುವ ; ಶಂಖಾಕಾರದ ಕೊರಳನ್ನು ಹೊಂದಿರುವ;ಆ ವಾಯು ದೇವನಿಗೆ ಭಾಗ್ಯವನ್ನು ತಂದುಕೊಟ್ಟ; ತೊಂಡೆಯ ಹಣ್ಣಿನ ತೆರದ ಕಾಂತಿಯುಕ್ತ ತುಟಿಯನ್ನು ಹೊಂದಿದ ಆ ಅಂಜನೇಯನನ್ನು ಮಾತ್ರಾ ನಾನು ಆಶ್ರಯಿಸುವೆನು. || ೩ ||

ದೂರೀಕೃತಸೀತಾರ್ತಿ:ಪ್ರಕಟೀಕೃತರಾಮ ವೈಭವಸ್ಪೂರ್ತಿ: |
ದಾರಿತ ದಶಮುಖಕೀರ್ತಿ:ಪುರತೋ ಮಮ ಭಾತು ಹನುಮತೋ ಮೂರ್ತಿ: || ೪ ||

ಭಾವಾನುವಾದ :-

ಜಾನಕೀದೇವಿಯ ವ್ಯಥೆಯನ್ನು ದೂರಮಾಡಿದ; ಶ್ರೀ ರಾಮಚಂದ್ರನ ವೈಭವದ ಸ್ಪೂರ್ತಿಯನ್ನು ಲೋಕಕ್ಕೆ ಪ್ರಕಟಗೊಳಿಸಿದ; ದಶಮುಖ ರಾವಣನ ಕೀರ್ತಿಯನ್ನು ಹರಣ ಮಾಡಿದ ಆ ಹನುಮಂತನ ಮೂರ್ತಿಯು ಯಾವಾಗಲೂ ನನ್ನೆದುರಿನಲ್ಲಿ ಶೋಭಿಸಲಿ || ೪ ||

ವಾನರನಿಕರಾಧ್ಯಕ್ಷಂ ದಾನವಕುಲಕುಮುದರವಿಕರಸದೃಶಂ |
ದೀನಜನಾವನದೀಕ್ಷಂ ಪವನತಪ:ಪಾಕಪುಂಜಮದ್ರಾಕ್ಷಂ || ೫ ||

ಭಾವಾನುವಾದ :-
ವಾನರ ಸೈನ್ಯಕ್ಕೆ ಅಧಿನಾಯಕನಾಗಿ; ದೈತ್ಯಕುಲವೆಂದು ಹೇಳುವ ನೈದಿಲೆಗಳಿಗೆ ಸೂರ್ಯನ ಕಿರಣವಾಗಿ ನಾಶ ಮಾಡಿದ; ದೀನ ಜನರನ್ನು ರಕ್ಷಿಸುವುದರಲ್ಲಿ ದೀಕ್ಷಾಬಧ್ಧನ ತೆರದಿ ಆಸಕ್ತಿ ಹೊಂದಿದ್ದ; ಆ ವಾಯುದೇವರ ತಪ್ಪಸ್ಸಿನ ಸಿಧ್ಧಿಗಳ ಸಮೂಹ ರೂಪವೇ ಆಗಿರುವ ಆ ಆಂಜನೇಯ ಸ್ವಾಮಿಯನ್ನು ನಾನು ದರ್ಶನ ಮಾಡಿದೆನು. || ೫ ||

ಏತತ್ಪವನಸುತಸ್ಯ ಸ್ತೋತ್ರಂ ಯ: ಪಠತಿ ಪಂಚರತ್ನಾಖ್ಯಂ ||
ಚಿರಮಿಹ ನಿಖಿಲಾನ್ಭೋಗಾನುಂಕ್ತ್ವಾ ಶ್ರೀರಾಮ ಭಕ್ತಿ ಭಾಗ್ಭವತಿ || ೬ ||

ಭಾವಾನುವಾದ :-
ಈ ಪಂಚರತ್ನ ಸ್ತೋತ್ರಂಗಳನ್ನು ಯಾರು ಪಠಣ ಮಾಡುವರೋ ಅವರು ಬಹುಕಾಲ ಈ ಲೋಕದ ಭೋಗಭಾಗ್ಯಂಗಳನ್ನು ಅನುಭವಿಸಿ ಭಗವಾನ್ ಶ್ರೀ ರಾಮಚಂದ್ರನ ಭಕ್ತಿಗೆ ಭಾಜನರಾವರು. || ೬ ||
*********************************************************************************
||ಇತಿ ಶ್ರೀಮದ್ ಶಂಕರಾಚಾರ್ಯ ವಿರಚಿತ ಶ್ರೀ ಹನುಮತ್ಪಂಚರತ್ನಮ್||
         ||ಈ ರೀತಿ  ಶ್ರೀಮದ್ ಶಂಕರಾಚಾರ್ಯರು ವಿರಚಿಸಿದ ಶ್ರೀ ಹನುಮತ್ಪಂಚರತ್ನದ ಭಾವಾರ್ಥವಾಗಿರುತ್ತದೆ||
*********************************************************************************         - ೨ -    
  ||ಆಂಜನೇಯ ಶ್ಲೋಕ||
*******************************
ಮಂಗಳಂ ಜ್ಞಾನರೂಪಾಯ ಮಹಾವಿಶ್ವ ಸ್ವರೂಪಿಣೇ|
ಪ್ರಣವಾರ್ಥ ಸ್ವರೂಪಾಯ ಪ್ರಾಣ ರೂಪಾಯ ಮಂಗಳಮ್ |
ಶ್ರಿಯ:ಪತಿಂ ಸದಾಚಾರ್ಯಂ ನತ್ವಾ ಸರ್ವಾರ್ಥಕಾಮದಂ |
ಕಪೀಶಾರಾಧನಂ ವಕ್ಷ್ಯೇ ರಾಜ್ಯ ರಾಷ್ಟ್ರಾಭಿ ವೃಧ್ಧಿದಮ್||
 ಭಾವಾರ್ಥ:- ಜ್ಞಾನ ಸ್ವರೂಪನೂ ಮಹಾ ವಿಶ್ವ ಸ್ವರೂಪನೂ ಓಂ ಕಾರ ರೂಪನೂ ಪ್ರಾಣ ರೂಪನೂ ಆದ ಆಂಜನೇಯ ಸ್ವಾಮಿಯೆ ನಿನಗೆ ಮಂಗಳವಾಗಲಿ.
ನಿನ್ನನ್ನು ಆರಾಧಿಸುವುದರಿಂದ  ಶ್ರೇಯಸ್ಸು ; ಸದಾಚಾರಂಗಳೊಡನೆ  ಸರ್ವ ರೀತಿಯ ಅರ್ಥ ;ಕಾಮಗಳೂ ಈಡೇರಿ ರಾಜ್ಯ ರಾಷ್ಟ್ರಂಗಳು ಅಭಿವೃದ್ಧಿ ಆಗುವವು.
 *********************************************************************************                        - ೩-
          || ಹನುಮಾನ್ ಪ್ರಾರ್ಥನಾ||
*************************************
ಓಂ ನಮೋ ಹನುಮತೇ ಪೂರ್ವಸಂಧ್ಯಾರ್ಚಿತಂ ಮಯಾ|
ನಮಸ್ತೇಸ್ತು ಮಹಾತೇಜಾ: ತ್ರಾಹಿ ಮಾಂ ಭವಸಾಗರಾತ್ ||
ಭಾವಾರ್ಥ:- ಹೇ! ಹನುಮಾನ್ಸ್ವಾಮೀಯೇ! ಉಷ:ಕಾಲದಲ್ಲಿ ನಿನ್ನ ಅರ್ಚಿಸುವುದರ ಮೂಲಕವಾಗಿ ನಿನಗೆ ನಮಸ್ಕರಿಸುತ್ತೇನೆ,.ಮಹಾತೇಜೋಮಯನೇ ನಿನಗೆ ನನ್ನ ಪ್ರಣಾಮಂಗಳು. ನಿನ್ನಲ್ಲಿ ಶರಣು ಹೊಂದಿರುವ ನನ್ನನ್ನು ಈ ಸಂಸಾರ ಸಾಗರದಿಂದ ಪಾರು ಮಾಡು.

 *********************************************************************************              - ೪ -
        ||ಆಂಜನೇಯ ಪ್ರಾರ್ಥನಾ||
****************************
ಮರ್ಕಟೇಶ ಮಹೋತ್ಸಾಹ ಸರ್ವ ಶತ್ರುವಿನಾಶನ |
ಶತ್ರೂಸಂಹರ ಮಾಂ ರಕ್ಷ ಶ್ರಿಯಂ ದಾಪಯ ದೇಹಿ ಮೇ ||
ಆಂಜನಾಗರ್ಭಸಂಭೂತಂ ಮಹಾವೀರ್ಯಂ ಮಹೋಜ್ವಲಂ |
ಮಹಾಪಾತಕ ಜಾಲಘ್ನಂ ಮಾರುತಿಂ ಪ್ರಣಮಾಮ್ಯಹಮ್ ||
ಭಾವಾರ್ಥ:-ಕಪಿ ಸಮೂಹಕ್ಕೆ ಅಧಿಪತಿಯೂಗಿ ;ಮಹಾ ಉತ್ಸಾಹ ಶಾಲಿಯೂಗಿ : ಕಾರ್ಯಚತುರನೂ ಆಗಿ ; ;ಸರ್ವಶತ್ರುಗಳನಾಶಮಾಡುವವನೂ ಆದಂತಹಾ ಹೇ ಮಾರುತಿಯೇ ನನಗೆ ಶುಭವ ಕರುಣಿಸಿ ಆಪತ್ತಿಂದ ಕಾಪಾಡು..
ಅಂಜನಾದೇವಿಯ ಗರ್ಭದಲ್ಲಿ ಹುಟ್ಟಿದ ಮಹಾ ಶಕ್ತಿಶಾಲಿಯೂ ಮಹಾ ಪ್ರಕಾಶವಂತನೂ ಮಹಾಪಾತಕಂಗಳನ್ನು ಜಾಲಾಡುವವನೂ ಆದ ಮಾರುತಿಯೇ ನಾನು ನಮಸ್ಕರಿಸುತ್ತೇನೆ
.
*********************************************************************************                                                -೫-
|| ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||
+++++++++++++++++++++++++++++++

ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: |
ಗಾಯತ್ರೀ ಛಂದ: |
ಶ್ರೀ ಹನುಮಾನ್ ದೇವತಾ | ರಾಂ ಬೀಜಂ | ಮಂ ಶಕ್ತಿ: |ಚಂದ್ರ ಇತಿ ಕೀಲಕಂ |
ಓಂ ರೌಂ ಕವಚಾಯ ಹುಂ |ಹ್ರೌಂ ಅಸ್ತ್ರಾಯ ಫಟ್ ||

ಭಾವಾರ್ಥ:- ಪಂಚಮುಖಿ ಹನುಮಾನ್ ಕವಚ ಸ್ತೋತ್ರ ಮಹಾ ಮಂತ್ರದ ಋಷಿ  ಬ್ರಹ್ಮ . ಇದು ಗಾಯತ್ರೀ ಛಂದಸ್ಸಿನಲ್ಲಿ ಇದ್ದು  ಹನುಮಂತನು ಇದರ ಉಪಾಸ್ಯ ದೇವತೆ.  "ರಾಂ" ಇದರ ಬೀಜಾಕ್ಷರ.  "ಮಂ"  ಇದರ ಶಕ್ತಿ;  "ಚಂದ್ರ" ಎಂಬುದು ಇದರ ಕೀಲಕ. "ರೌಂ" ಇದರ ಕವಚ.  "ಹ್ರೌಂ" ಈ ಸ್ತೋತ್ರಕ್ಕೆ ಬಾಣದ ಹಾಗೆ ಬಲ ಕೊಡುತ್ತದೆ.  " ಫಟ್ "
ಇದಕ್ಕೆ ರಕ್ಷಾತ್ಮಕವಾಗಿದೆ.

ಈಶ್ವರ ಉವಾಚ
ಭಾವಾರ್ಥ :- ಈಶ್ವರನು ಪಾರ್ವತೀ ದೇವಿಗೆ ಹೇಳುವನು

ಅಥ ಧ್ಯಾನಂ ಪ್ರವಕ್ಷ್ಯಾಮಿ ಶೃಣು ಸರ್ವಾಂಗ ಸುಂದರಂ |
ಯತ್ಕೃತ್ವಾ ದೇವ ದೇವೇಶಿ ಧ್ಯಾನ: ಹನುಮತ: ಪ್ರಿಯಂ ||೧||

ಪಂಚವಕ್ತ್ರಂ ಮಹಾಬೀಮಂ ಕಪಿಯೂಥ ಸಮನ್ವಿತಂ |
ಬಾಹುಬಿರ್ದಶಭಿರ್ಯುಕ್ತಂ ಸರ್ವ ಕಾಮಾರ್ಥ ಸಿದ್ಧಿದಂ ||೨||

ಪೂರ್ವಂತು ವಾನರಂ ವಕ್ತ್ರಂ ಕೋಟಿಸೂರ್ಯ ಸಮಪ್ರಭಂ |
ದಂಷ್ಠ್ರಾಕರಾಲವದನಂ ಭ್ರುಕುಟೀ ಕುಟಿಲೇಕ್ಷಣಂ ||೩||

ಅಸ್ಯೈವ ದಕ್ಷಿಣಂ ವಕ್ತ್ರಂ ನಾರಸಿಂಹ ಮಹಾದ್ಭುತಂ |
ಅತ್ಯುಗ್ರ ತೇಜೋವಪುಷಂ ಭೀಷಣಂ ಭಯನಾಶನಂ ||೪||

ಪಶ್ಚಿಮೇ ಗಾರುಡಂ ವಕ್ತ್ರಂ ವಕ್ರತುಂಡಂ ಮಹಾಬಲಂ |
ಸರ್ವನಾಶಪ್ರಶಮನಂ ಸರ್ವಭೂತಾದಿ ಕೃಂತನಂ ||೫||

ಉತ್ತರೇ ಸೌಕರಂ ವಕ್ತ್ರಂ ಕೃಷ್ಣ ದೀಪನಭೋಮಯಂ |
ಪಾತಾಲೇ ಸಿದ್ದಿವೇತಾಲಂ ಜ್ವರರೋಗಾದಿ ಕೃಂತನಂ ||೬||

ಊರ್ಧ್ವಂ ಹಯಾನನಂ ಘೋರಂ ದಾನವಾಂತ ಕರಂ ಪರಂ |
ಏನ ವಕ್ತ್ರೇಣ ವಿಪ್ರೇಂದ್ರ ತಾಟಕಾಯ ಮಹಾಹವೇ ||೭||

ದುರ್ಗತೇಶ್ಶರಣಂ ತಸ್ಯ ಸರ್ವಶತ್ರುಹರಂ ಪರಂ |
ಧ್ಯಾತ್ವಾ ಪಂಚಮುಖಂ ರುದ್ರಂ ಹನುಮಂತಂ ದಯಾನಿಧಿಂ ||೮||

ಖಡ್ಗಂ ತ್ರಿಶೂಲಂ ಖಟ್ವಾಂಗಂ ಪಾಶಮಂಕುಶಪರ್ವತಂ |
ಮುಷ್ಟೌಚ ಮೋದಕೌ ವೃಕ್ಷಂ ಧಾರಯಂತಂ ಕಮಂಡಲುಂ ||೯||

ಭಿಂದಿ ಪಾಲಂ ಜ್ಞಾನಮುದ್ರಾಂ ದಶಮಂ ಪುನಿಪುಂಗವ |
ಏತಾನ್ಯಾಯುಧ ಜಾಲಾನಿ ಧಾರಯಂ ತಂ ಭಯಾವಹಂ ||೧೦||

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ |
ಸರ್ವೈಶ್ವರ್ಯಮಯಂ ದೇವಂ ಹನುಮದ್ವಿಶ್ವತೋ ಮುಖಂ ||೧೧||

ಪಂಚಾಸ್ಯಮಚ್ಯುತಮನೇತ ವಿಚಿತ್ರವರ್ಣಂ |
ವಕ್ತ್ರಂ ಸಶಂಖ ವಿಭೃತಂ ಕವಿರಾಜ ವೀರ್ಯಂ ||
ಪೀತಾಂಬರಾದಿ ಮುಕುಟೈರಪಿ ಶೋಭಿತಾಂಗಂ |
ಪಿಂಗಾಕ್ಷಮಂಜನಾಸುತಂ ಹ್ಯನಿಶಂ ಸ್ಮರಾಮಿ ||೧೨||

ಮರ್ಕಟಸ್ಯ ಮಹೋತ್ಸಾಹಂ ಸರ್ವ ಶೋಕವಿನಾಶನಂ |
ಶತೃ ಸಂಹಾರಕಂ ಚೈತಕ್ ಕವಚಂ ಹ್ಯಾಪದಂ ಚರೇತ್ ||೧೩||

||ಓಂ ಹರಿ ಮರ್ಕಟ ಮರ್ಕಟಾಯ ಫಟ್ ಸ್ವಾಹಾ||

ಓಂ ನಮೋ ಭಗವತೇ ಪಂಚವದನಾಯ
ಪೂರ್ವ ಕಪಿಮುಖಾಯ ಸಕಲ ಶತೃ ಸಂಹರಣಾಯ ಫಟ್ ಸ್ವಾಹಾ ||೧೪||

ಓಂ ನಮೋ ಭಗವತೇ ಪಂಚವದನಾಯ
ಉತ್ತರ ಮುಖಾಯ ಆದಿವರಾಹಾಯ
ಸಕಲ ಸಂಪತ್ಕರಾಯ ಫಟ್ ಸ್ವಾಹಾ ||೧೫||


ಓಂ ನಮೋ ಭಗವತೇ ಪಂಚವದನಾಯ
ಊರ್ಧ್ವಮುಖಾಯ ಹಯಗ್ರೀವಾಯ ಕಲಿಜನ ವಶ್ಯಕರಾಯ ಫಟ್ ಸ್ವಾಹಾ ||೧೬||
********************************************************************

|| ಇತಿ ಶ್ರೀ ಸುದರ್ಶನ ಸಂಹಿತಾಯಾಂ ಚಿಂತಾಮಣಿ ರಾಮಭದ್ರ  ಅಧ್ಯಾಯೇ  ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||
*********************************************************************************

ಶ್ಲೋಕಗಳ ಭಾವಾರ್ಥ:- ಪಂಚಮುಖಿ ಹನುಮಂತಂಗೆ ೫ ಮುಖಗಳು  ೧೦ ತೋಳುಗಳೂ ಇದ್ದು ಭಕ್ತಾದಿಗಳಿಗೆ ಅನುಗ್ರಹ ನೀಡುವ ರೂಪದಲ್ಲಿ ಇದ್ದು. ಪೂರ್ವ ದಿಕ್ಕಿನಲ್ಲಿ ಮಂಗನ ಮುಖವೂ ; ದಕ್ಷಿಣ ದಿಕ್ಕಿನಲ್ಲಿ ನರಸಿಂಹ ದೇವರ ಮುಖವೂ ;  ತೇಜೋಮಯವಾಗಿ ಇದ್ದು. ಪಶ್ಚಿಮ ದಿಕ್ಕಿನಲ್ಲಿ ಗರುಡನ ಮುಖವೂ ; ಉತ್ತರ ದಿಕ್ಕಿನಲ್ಲಿ ಹಂದಿಯ ಮುಖವೂ ಇದ್ದು ನಾಗ ಭೇತಾಳಾದಿ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತಿದೆ. ಊರ್ಧ್ವ ಮುಖವು [ಮೇಲ್ಮೊಗ] ಕುದುರೆಯ ಮುಖವನ್ನು ಹೋಲುತ್ತಿದ್ದು ದೈತ್ಯ ಶಕ್ತಿಯನ್ನು ನಾಶ ಮಾಡುವ ಶಕ್ತಿ ಹೊಂದಿರುತ್ತದೆ.  ಈ ರೀತಿಯಾಗಿರುವಂತಹಾ ದಯಾನಿಧಿಯೂ  ದು:ಖ ನಿವಾರಕನೂ ಆಗಿರುವ ಪಂಚ ಮುಖಿ ಹನುಮನನ್ನು ಸ್ಮರಣೆ ಮಾಡಬೇಕು
   ಹನುಮಂತನ ಕೈಗಳಲ್ಲಿ  ಕತ್ತಿ , ತ್ರಿಶೂಲ , ಪಾಶ , ಮಂಚದ ಕಾಲುಗಳನ್ನು ಹೋಲುವ ಆಯುಧ ,ಅಂಕುಶ , ಬಂಡೆ, ಮೋದಕಂಗಳು ,ಮರ ,ಕಮಂಡಲು ,ಭಿಂದಿ ,ಹಾಗೂ ಜ್ಞಾನಮುದ್ರೆಯೂ ಇದ್ದು. ಈರೀತಿಯಾಗಿರುವ ಹನುಮಂತ  ದಿವ್ಯ ಮಂದಾರ ಹೂವಿನ ಮಾಲೆಯನ್ನು ಧರಿಸಿ ಸರ್ವ ಐಶ್ವರ್ಯವನ್ನು ದಯಪಾಲಿಸುವವನಾಗಿರುವನು. ಅಂತಹಾ ಪಂಚವದನ ;ಪಂಚ ವರ್ಣ, ಪೀತಾಂಬರ, ಕಿರೀಟಾದಿಗಳಿಂದ ಶೃಂಗಾರವಾಗಿರುವ ಆಂಜನೇಯ ಸ್ವಾಮಿಯನ್ನು ನಾನು ಧ್ಯಾನಿಸುತ್ತೇನೆ.  ಕಪಿ ಸೈನ್ಯಕ್ಕೆ ಉತ್ಸಾಹವದಾಯಕನೂ ; ಎಲ್ಲಾ ಸಂಕಷ್ಟಗಳ ವಿನಾಶಕನೂ , ಶತೃ ಸಂಹಾರಕಾರಕನೂ ಆಗಿರುವ ಹನಮಂತನ ಕವಚ ಆಪತ್ ನಾಶಕವಾಗಿ ಚೈತನ್ಯವನ್ನು ಕೊಡುತ್ತದೆ.  ಕಪಿರೂಪದ ಹನುಮಂತನ ನಾಮಸ್ಮರಣೆಯು ಜಪಯಜ್ಞದ ಸ್ವಾಹಾಕಾರವಾಗಿದ್ದು  ಐದು ಮುಖಗಳನ್ನು ಹೊಂದಿ ಪೂರ್ವ ದಿಕ್ಕಿನ ಕಪಿ ಮೊಗವು ಶತೃ ಸಂಹಾರಕವಾಗಿದ್ದು.   ಉತ್ತರದಿಕ್ಕಿನ ಹಂದಿಯ ಮೊಗದ ಹನುಮಂತನ ನಾಮ ಸ್ಮರಣೆ ಸರ್ವ ಸಂಪತ್ಪ್ರದಾಯಕವಾಗಿದ್ದು. ಐದು ಮೊಗಗಳನ್ನು ಹೊಂದಿ ಮೇಲ್ಮೊಗನಾಗಿರುವ ಸಕಲ ಜನ ವಶೀಕರಣ ಶಕ್ತಿಯ ಅನುಗ್ರಹಿಸುವ ಹನುಮಂತನಿಗೆ ಸ್ವಾಹಾಕಾರ ಸಹಿತವಾಗಿ ನಮಸ್ಕಾರಗಳು.

****************************************************************************

||ಇತಿ ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||    || ಈ ರೀತಿಯಾಗಿ ಶ್ರೀ ಪಂಚಮುಖಿ ಹನುಮಾನ್ ಕವಚದ ಭಾವಾರ್ಥವಾಗಿದೆ ||
*********************************************************************************                 - ೬-
|| ಶ್ರೀ ಹನುಮತ್ ಸ್ತೋತ್ರಮ್ ||
************************

ಅಕ್ಷಾದಿ ರಾಕ್ಷಸಹರಂ ದಶಕಂಠದರ್ಪನಿರ್ಮೂಲನಂ
ರಘುವರಾಂಘ್ರಿಸರೋಜಭಕ್ತಂ|
ಸೀತಾವಿಷಹ್ಯ ಘನದು:ಖ ನಿವಾರಕಂ ತಂ
ವಾಯೋ: ಸುತಂ ಗಿಲಿತ ಭಾನುಮಹಂ ನಮಾಮಿ ||೧||

ಮಾಂ ಪಶ್ಯ ಪಶ್ಯ ದಯಯಾ ನಿಜದೃಷ್ಟಿಪಾತೈ:
ಮಾ ರಕ್ಷ ರಕ್ಷ ಪರಿತೋ ರಿಪುದು:ಖಪುಂಜಾತ್|
ವಶ್ಯಂ ಕುರು ತ್ರಿಜಗತಾಂ ವಸುಧಾಧಿಪಾನಾಂ
ಮೇ ದೇಹಿ ದೇಹಿಮೇ ವಸುಧಾಶ್ರಯಂಚ ||೨||

ಆಪದ್ಯೋ ರಕ್ಷ ಸರ್ವತ್ರ ಆಂಜನೇಯ ನಮೋಸ್ತುತೇ|
ಬಂಧನಂ ಛೇದಯಾಭುಕ್ತ ಕಪಿವರ್ಯ ನಮೊಸ್ತುತೇ ||೩||

ಮೇ ದೇಹಿಮೇ ಸಂಪದೋ ನಿತ್ಯಂ ತ್ರಿಲೋಚನ ನಮೋಸ್ತುತೇ|
ದುಷ್ಟರೋಗಾನ್ ಹನ ಹನ ರಾಮದೂತ ನಮೋಸ್ತುತೇ ||೪||

ಉಚ್ಚಾಟಯ ರಿಪೂನ್ಸರ್ವಾನ್ ಮೋಹನಂ ಕುರು ಭೂಭುಜಾಂ|
ವಿದ್ವೇಷಿನೋ ಮಾರಯ ತ್ವಂ ತ್ರಿಮೂರ್ತ್ಯಾತ್ಮಕ ಸರ್ವದಾ ||೫||

ಸಂಜೀವ ಪರ್ವತೋದ್ದಾರ ಮಮ ದು:ಖಾನ್ನಿವಾರಯ|
ಘೋರಾನುಪದ್ರವಾನ್ಸರ್ವಾನ್ ನಾಶಯಾಕ್ಷಾಸುರಾಂತಕ ||೬||

ಏವಂ ಸ್ತುತ್ವಾ ಹನೂಮಂತಂ ನರ: ಶ್ರದ್ದಾ ಸಮನ್ವಿತ:|
ಪುತ್ರಪೌತ್ರಾದಿ ಸಹಿತ: ಸರ್ವಾನ್ ಕಾಮಾನವಾಪ್ನುಯಾತ್ ||೭||

ಮರ್ಕಟೆಶ ಮಹೋತ್ಸಾಹ ಸರ್ವ ಶೋಕ ವಿನಾಶಕ|
ಶತ್ರೂನ್ ಸಂಹರ ಮಾಂ ರಕ್ಷ ಶ್ರಿಯಂ ದತ್ವಾಚ ಮಾಂ ಭರ ||೮||
***************************************************************

          ||ಇತಿ ಶ್ರೀ ಹನುಮತ್ ಸ್ತೋತ್ರಂ||
*********************************************************************
ಸ್ತೋತ್ರಗಳ ಭಾವಾರ್ಥ:- ರಾವಣನ ಮಗನಾದ ಅಕ್ಷಯ ಕುಮಾರಾದಿ ರಾಕ್ಷಸರ ಸಮೂಹವನ್ನು ನಿರ್ಮೂಲನೆ ಮಾಡಿ ರಾವಣನ ದರ್ಪವನ್ನು ಮುರಿದಂತಹಾ ಶ್ರೀರಾಮನ ಚರಣದಾಸನೂ ಸೀತಾದೇವಿಯ ದು:ಖವನ್ನು ನಿವಾರಿಸಿದವನೂ ; ಆಗಿರುವ ವಾಯುಕುಮಾರ ಹನುಮಂತನೇ ನಿನಗಿದೋ ನನ್ನ ನಮಸ್ಕಾರ
 ಹೇ! ಹನುಮಾ ;ನನ್ನತ್ತ ದಯಾದೃಷ್ಟಿಯಿಂದ ನೋಡಿ ಶತೃಗಳಿಂದ ರಕ್ಷಿಸು;ರಾಜನನ್ನು ವಷೀಕರಿಸುವ ಶಕ್ತಿ ಹಾಂಗೂ ಸರ್ವ ಜನರನ್ನು ವಶೀಕರಣಗೊಳಿಸಿಕೊಳ್ಳುವ ಶಕ್ತಿಯನ್ನು ಕರುಣಿಸಿ ಐಶ್ವರ್ಯವನ್ನು ದಯಪಾಲಿಸು.
ಆಪತ್ತುಗಳಿಂದ ನನ್ನನ್ನು ರಕ್ಷಿಸುವುದರೊಂದಿಗೆ  ಬಂಧನದಿಂದ ಬಿಡುಗಡೆ ಮಾಡುವ ಯುಕ್ತಿಶಾಲೀ ಹೇ! ವಾನರ ನಾಯಕ ಆಂಜನೇಯ ಸ್ವಾಮಿಯೇ ನಿನಗೆ ನನ್ನ ನಮಸ್ಕಾರಂಗಳು
ನನಗೆ ಸದಾ ಸಂಪತ್ತನ್ನೇ ಕರುಣಿಸುವ ತ್ರಿಲೋಚನಾ ನನ್ನನ್ನಾಕ್ರಮಿಸುವ ಸಕಲ ರೋಗಂಗಳನ್ನೂ ಪರಿಹರಿಸು ಅಂತ ನಾನು ಬೇಡಿಕೊಳ್ಳುವೆನು..

ಸ್ವಾಮೀ; ಆಂಜನೇಯಾ ; ನನ್ನ ಶತೃಗಳನ್ನು ದೂರವಿಡು. ರಾಜರೂ ಅಧಿಕಾರಿಗಳೂ ನನಗೆ ಅನುಕೂಲರಾಗಿರುವ ಹಾಗೆ ಅವರನ್ನು ನಿನ್ನ ಮೋಹಾಪಾಶಕ್ಕೆ ಸಿಲುಕಿಸು. ನನ್ನನ್ನು ದ್ವೇಷಿಸುವವರನ್ನು ಶಿಕ್ಷೆಗೆ  ಗುರಿ ಮಾಡು. ಹೇ! ತ್ರಿಮೂರ್ತಿ ಸ್ವರೂಪಾ ನಿನಗೆ ನನ್ನ ನಮಸ್ಕಾರಗಳು.
ಸಂಜೀವಿನಿ ಪರ್ವತವನ್ನು ಹೊತ್ತ ಧೀರ ಮಾರುತಿಯೇ ; ನನ್ನ ಶೋಕಂಗಳನ್ನು ಎಲ್ಲಾ ಪರಿಹರಿಸಿ ಘೋರವಾದಂತಹಾ ಉಪದ್ರವಗಳಿಂದ [ ಶತ್ರು ಭಯವೇ ಆದಿಯಾಗಿ ಋಣ ಭಾರಂಗಳಿಂದ] ನನ್ನನ್ನು ಸದಾ ರಕ್ಷಿಸು ಸ್ವಾಮೀ.

ಈರೀತಿಯಾಗಿ ಯಾರು ಶ್ರದ್ಧಾಭಕ್ತಿಯಿಂದ ಆಂಜನೇಯನನ್ನು ಸ್ತುತಿಸುತ್ತಾರೋ ಅವರು ಮಕ್ಕಳು ಮೊಮ್ಮಕ್ಕಳ ಸಹಿತವಾಗಿ ಸಕಲ ಸೌಭಾಗ್ಯವನ್ನು ಅನುಭವಿಸುತ್ತಾರೆ..

ಕಪಿ ಸಮೂಹಕ್ಕೆ ಅಧಿಪತಿಯೂ ;ಮಹಾ ಉತ್ಸಾಹ ಶಾಲಿಯೂ : ಕಾರ್ಯಚತುರನೂ ; ;ಸರ್ವಶತ್ರುಗಳನ್ನು ನಾಶಮಾಡುವವನೂ ಆದಂತಹಾ ಹೇ ಮಾರುತಿಯೇ ನನಗೆ ಶುಭವನ್ನು ಕರುಣಿಸಿ ಆಪತ್ತಿನಿಂದ ಕಾಪಾಡು..

*********************************************************************************                 - ೭ -
|| ಹನುಮದ್ರಕ್ಷಾ ಸ್ತೋತ್ರಮ್ ||
+++++++++++++++++++++++
ವಾಮೇಕರೇ ವೈರಿಭಿದಂ ವಹಂತಂ ಶೈಲಂ ಪರೆ ಶೃಂಖಲಹಾರಿಟಂಕಂ |
ದಧಾನಮಚ್ಚಂತು ಸುವರ್ಣ ವರ್ಣಂ ಭಜೇ ಜ್ವಲತ್ಕುಂಡಲಮಾಂಜನೇಯಮ್ ||೧||

ಪದ್ಮರಾಗ ಮಣಿಕುಂಡಲತ್ವಿಷಾ ಪಾಟಲೀ ಕೃತ ಕಪೋಲಮಸ್ತಕಂ|
ದಿವ್ಯ ಹೇಮಕದಲೀವನಾಂತರೇ ಭಾವಯಾಮಿ ಪವಮಾನನಂದನಮ್ ||೨||

ಉದ್ಯದಾದಿತ್ಯ ಸಂಕಾಶಮುದಾರ ಭುಜವಿಕ್ರಮಂ|
ಕಂದರ್ಪಕೋಟಿಲಾವಣ್ಯಂ ಸರ್ವ ವಿದ್ಯಾವಿಶಾರದಂ ||೩||

ಶ್ರೀ ರಾಮ ಹೃದಯಾನಂದಂ ಭಕ್ತ ಕಲ್ಪಮಹೀರುಹಂ|
ಅಭಯಂ ವರದಂ ದೋರ್ಭ್ಯಾಂ ಕಲಯೇ ಮಾರುತಾತ್ಮಜಂ ||೪||

ವಾಮಹಸ್ತ ಮಹಾಕೃಚ್ಛ್ರ ದಶಾಸ್ಯಕರ ಮರ್ದನಂ|
ಉದ್ಯದ್ವೀಕ್ಷಣ ಕೋದಂಡಂ ಹನೂಮಂತಂ ವಿಚಿಂತಯೇತ್ ||೫||

ಹನೂಮಾನಂಜನೀ ಸೂನು: ವಾಯು ಪುತ್ರೋ ಮಹಾಬಲ:|
ರಾಮೇಷ್ಟ: ಫಲ್ಗುಣ ಸಖ: ಪಿಂಗಾಕ್ಷೋಸ್ ಮಿತವಿಕ್ರಮ: ||೬||

ಉದಧಿಕ್ರಮಣಶ್ಚೈವ ಸೀತಾಶೋಕವಿನಾಶನ:|
ಲಕ್ಷ್ಮಣ ಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ||೭||

ಏವಂ ದ್ವಾದಶನಾಮಾನಿ ಕಪೀಂದ್ರಸ್ಯ ಮಹಾತ್ಮನ:|
ಸ್ವಾಪಕಾಲೇ ಪ್ರಬೋಧೇಚ ಯಾತ್ರಾಕಾಲೇ ಚ ಯ: ಪಠೇತ್|
ತಸ್ಯ ಸರ್ವಭಯಂ ನಾಸ್ತಿ ರಣೇ ಚ ವಿಜಯೋ ಭವೇತ್ ||೮||

ಉಲ್ಲಂಘ್ಯ ಸಿಂಧೋಸ್ಸಲಿಲಂ ಸಲೀಲಂ
ಯ: ಶೋಕವಹ್ನಿ: ಜನಕಾತ್ಮಜಾಯಾ:|
ಆದಾಯ ತೇನೈವ ದದಾಹ ಲಂಕಾಂ
ನಮಾಮಿ ತಂಪ್ರಾಂಜಲಿರಾಂಜನೇಯಮ್ ||೯||

ಸ್ಪಟಿಕಾಭಂ ಸ್ವರ್ಣಕಾಂತಿಂ ದ್ವಿಭುಜಂ ಕೃತಾಂಜಲಿಂ|
ಕುಂಡಲದ್ವಯ ಸಂಶೋಭಿ ಮುಖಾಂಭೋಜಂ ಹರಿಂ ಭಜೇ ||೧೦||

ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|
ವಾತಾತ್ಮಜಂ ವಾನರ ಯೂಥಮುಖ್ಯಂ
ಶ್ರೀ ರಾಮ ದೂತಂ ಶಿರಸಾ ನಮಾಮಿ ||೧೧||
*******************************************

||ಇತಿ ಶ್ರೀ ಸುದರ್ಶನ ಸಂಹಿತಾಯಾಂ ಹನುಮದ್ರಕ್ಷಾ ಸ್ತೋತ್ರಂ||
************************************************************
ಭಾವಾರ್ಥ:- ಈ ಸ್ತೋತ್ರಂಗೊ ಸುದರ್ಶನ ಸಂಹಿತೆ ಇಪ್ಪದು.
ಎಡ ಗೈಯಲ್ಲಿ ವಜ್ರಾಯುಧವನ್ನೂ,ಬಲಗೈಯಲ್ಲಿ ಪರ್ವತ ಹಾಗೂ ಕಲ್ಲುಳಿ [ಟಂಕ]ವನ್ನೂ ಹಿಶಿದುಕೊಂಡು ಶುದ್ಧ ಬಂಗಾರದ ಕಾಂತಿಯ ಶರೀರವನ್ನು ಹೊಂದಿ ,ಹೊಳೆವ ಕರ್ಣಕುಂಡಲಧಾರಿಯಾಗಿರುವ ಹನುಮನನ್ನು ನಾನು ಭಜಿಸುತ್ತೇನೆ.
ಪದ್ಮರಾಗದ ಹಾಗೆ ನಸುಕೆಂಪು ಬಣ್ಣದಿಂದ ಹೊಳೆವ ಕೆನ್ನೆ, ಹಾಗೂ ಮುಂದಲೆಗಳಿಂದ ಶೋಭಿತನಾಗಿ ಕದಳೀ ವನದಲ್ಲಿ ನೆಲೆಸಿಕೊಂಡು ಇರುವ ವಾಯು ಕುಮಾರನನ್ನು ನಾನು ಸದಾ ಪ್ರಾರ್ಥಿಸುತ್ತೇನೆ.
ಉದಯಸೂರ್ಯನ ಹಾಗೆ ಪ್ರಕಾಶಮಾನವಾಗಿರುವ , ವಿಶಾಲವಾಗಿರುವ ಭುಜಗಳನ್ನು ಹೊಂದಿರುವ ಕೋಟಿ ಮನ್ಮಥರನ್ನು ಮೀರಿಸುವಷ್ಟು ಸೌಂದರ್ಯವಿರುವ ,                                  ಸಕಲ ವಿದ್ಯಾ ಪಾರಂಗತನಾಗಿ
ಶ್ರೀರಾಮನಿಗೆ ಸಂತೋಷ ಆಗುವ ಹಾಗೆ ವರ್ತಿಸುವ ,ಭಕ್ತಾದಿಗಳಿಗೆ ಕಲ್ಪವೃಕ್ಷದ ಹಾಗಿದ್ದು ಅಭಯ ವರದ ಹಸ್ತನಾಗಿರುವ ವಾಯು ಪುತ್ರನನ್ನು ನಾನು ಪ್ರಾರ್ಥಿಸುತ್ತೇನೆ.
     ಎಡ ಕೈಯಿಂದಲೇ ರಾವಣನ ಕೈಗಳಿಗೆ ಹಾನಿ ಮಾಡಿ ತೀಕ್ಷ್ಣವಾದ ದೃಷ್ಟಿಯನ್ನೇ ಬಿಲ್ಲಾಗಿ ಉಪಯೋಗಿಸುತ್ತಾ ಇರುವ ಹನುಮನನ್ನು ನಾನು ಪ್ರಾರ್ಥಿಸುತ್ತೇನೆ.
  ಹನುಮಾನ್, ಅಂಜನಾಪುತ್ರ, ವಾಯು ಪುತ್ರ , ಮಹಾಬಲ ,ರಾಮಪ್ರಿಯ ,ಫಲ್ಗುಣ ಸಖ, ಪಿಂಗಾಕ್ಷ ,ಅಮಿತವಿಕ್ರಮ
ಉದಧಿವಿಕ್ರಮ , ಸೀತಾಶೋಕವಿನಾಶಕ , ಲಕ್ಷ್ಮಣ ಪ್ರಾಣದಾತಾ , ದಶಗ್ರೀವ ದರ್ಪಘ್ನ
ಈ ರೀತಿಯಲ್ಲಿರುವ ಹನುಮಂತನ ಹನ್ನೆರಡು ಪುಣ್ಯಕರವಾಗಿಪ್ಪ ಹೆಸರುಗಳನ್ನು  ಯಾರು ಉಷ ಕಾಲದಲ್ಲಿ ನಿದ್ರೆಯಿಂದ ಏಳುವಾಗ ,ರಾತ್ರೆ ಮಲಗುವಾಗ , ಪ್ರಯಾಣ ಮಾಡುವ ಮೊದಲು ಸ್ಮರಿಸುತ್ತಾರೋ ಅವರಿಗೆ ಸರ್ವ ಭಯವೂ ನಾಶ ಆಗಿ ವಾದ ವಿವಾದಗಳಲ್ಲಿ , ಯುದ್ಧಗಳಲ್ಲಿ,ಖಂಡಿತವಾಗಿಯೂ ಜಯ ದೊರಕುವುದು.
ಮಹಾಸಾಗರವನ್ನು ಲೀಲಜಾಲವಾಗಿ ದಾಟಿ, ಸೀತೆಯ ದು:ಖಾಗ್ನಿಯಿಂದಲೇ ಲಂಕೆಯನ್ನು ಸುಟ್ಟ ,ಶ್ರೀರಾಮನ ಮುಂದೆ ಸದಾ ಅಂಜಲೀಬದ್ಧನಾಗಿ ನಮಸ್ಕಾರ ಮಾಡುವ ಆಂಜನೇಯನಿಗೆ ನಮಸ್ಕಾರಗಳು,
.ಸ್ಫಟಿಕದ ಹಾಗೆ  ಅಪ್ಪಟ ಬಂಗಾರದಾಗೆ ಪ್ರಕಾಷಮಾನವಾಗಿರುವ , ಸದಾ ಕೈ ಮುಗಿದು ಕೊಂಡಿರುವ ಕುಂಡಲಧಾರಿ ಆದ ವಾನರವೀರನಿಗೆ ನನ್ನ ನಮಸ್ಕಾರಗಳು.
ಮನೋವೇಗದಲ್ಲಿ ಸಂಚಾರ ಮಾಡುವವನೂ , ಇಂದ್ರಿಯಂಗಳನ್ನು ಜೈಸಿದವನೂ ,ಮಹಾಬುದ್ಧಿವಂತನೂ , ಆಗಿ ಕಪಿಸೇನಾನಿಯೂ ಆಗಿರುವ ಆಪತ್ಪರಿಹಾರಕ ಶ್ರೀರಾಮ ದೂತನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ.
                                        || ಈ ರೀತಿಯಾಗಿ ಶ್ರೀ ಸುದರ್ಶನ ಸಂಹಿತೆಯಲ್ಲಿರುವ ಹನುಮದ್ ರಕ್ಷಾ ಸ್ತೋತ್ರದ ಭಾವಾರ್ಥವಾಗಿದೆ.||

*********************************************************************************                    - ೮ -
 || ಆಪದುದ್ಧರಣ ಸ್ತೋತ್ರಮ್ ||
 ***********************
 || ಶ್ರೀ ಗುರುಭ್ಯೋ ನಮ: ||
 || ಶ್ರೀ ರಾಮಾಯ ನಮ: ||
      || ಹರಿ: ಓಂ ||
ಅಸ್ಯ ಶ್ರೀ ಆಪದುದ್ಧರಣ ಹನುಮತ್ ಸ್ತೋತ್ರ ಮಂತ್ರಸ್ಯ ವಿಭೀಷಣ ಋಷಿ: |
ಆಪದುದ್ಧರಣೋ ಹನುಮಾನ್ ದೇವತಾ |
ಆಪದುದ್ಧರಣ ಹನುಮತ್ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗ: ||

ಭಾವಾರ್ಥ :-ಈ ಆಪದುದ್ಧರಣ ಸ್ತೋತ್ರ ಮಂತ್ರಕ್ಕೆ ವಿಭೀಷಣನು ಋಷಿ. ಹನುಮಾನ್ ದೇವತೆ. ಹನುಮನ ಪ್ರಸಾದ ಸಿದ್ಧಿಗಾಗಿ ನಾನು ಜಪಾನುಷ್ಠಾನ ಮಾಡುತ್ತಿದ್ದೇನೆ.

           || ಧ್ಯಾನಮ್ ||
ವಾಮೇ ಕರೇ ವೈರಿಭಿದಂ ವಹಂತಂ
ಶೈಲಂ ಪರೇ ಶೃಂಖಲಹಾರಿ ಟಂಕಂ |
ಪಿಧಾನಮಚ್ಛಚ್ಛವಿ ಯಜ್ಞಸೂತ್ರಂ
ಭಜೇ ಜ್ವಲತ್ಕುಂಡಲಮಾಂಜನೇಯಂ ||೧||

ಭಾವಾರ್ಥ:-  ಹನುಮಂತ ಎಡ ಕೈಯಲ್ಲಿ ವಜ್ರಾಯುಧ ;ಬಲ ಕೈಯಲ್ಲಿ ಸಂಜೀವನ ಪರ್ವತದ ಒಟ್ಟಿಗೆ ಕಲ್ಲುಳಿ[ಟಂಕ]ಗಳನ್ನು ಹಿಡಿದುಕೊಂಡು ಇರುವವನು..ಅವನು ಯಜ್ಞೋಪವೀತವನ್ನು  ಧರಿಸಿಕೊಂಡು ಪ್ರಕಾಶಮಾನವಾಗಿ ಇದ್ದಾನೆ..ಅವನನ್ನು ಸ್ಮರಣೆ ಮಾಡಬೇಕು.

ಸಪೀತ ಕೌಪೀನಮುದಂಚಿತಾಂಜಲಿಂ
ಸಮುಜ್ವಲನ್ ಮೌಂಜ್ಯಜಿನೋಪವೀತಿನಂ
ಸಕುಂಡಲಂ ಲಂಬಶಿಖಾ ಸಮಾವೃತಂ
ತಮಾಂಜನೇಯ ಶರಣಂ ಪ್ರಪದ್ಯೇ || ೨||

ಭಾವಾರ್ಥ :- ಹನುಮಂತನು ಪೀತಾಂಬರದ ಕೌಪೀನವನ್ನೂ , ಬಿಡಿಸಿಕೊಂಡ ಬೆರಳುಗಳಿಂದಲೂ , ಸೊಂಟಕ್ಕೆ ಉಡಿದಾರವನ್ನೂ , ಉದ್ಧವಾದ ಜುಟ್ಟನ್ನೂ ಹೊಂದಿ ಶೋಭಾಯಮಾನ ರೂಪದಲ್ಲಿ  ಆಂಜನಾ ಪುತ್ರನಾಗಿರುವ  ಆ ಮಾರುತಿಯನ್ನು ಶರಣು ಹೋಗಬೇಕು.

ಆಪನ್ನಾಖಿಲ ಲೋಕಾರ್ತಿಹಾರಿಣೇ ಶ್ರೀ ಹನೂಮತೇ |
ಅಕಸ್ಮಾದಾಗತೋತ್ಪಾತ ನಾಶನಾಯ ನಮೋಸ್ಸ್ತು ತೇ ||೩||

ಭಾವಾರ್ಥ :-ಸಕಲ ಜಗತ್ತಿಗೆ ಬಂದೊದಗುವ ದು:ಖವಿಪತ್ತುಗಳನ್ನು ಪರಿಹರಿಸಿ, ಮಹಾ ಉತ್ಪಾತ ಎನಿಸಿಕೊಳ್ಳುವ ಪ್ರವಾಹ, ಭೂಕಂಪಂಗಳಿಂದ ಕಾಪಾಡಿ ರಕ್ಷಿಸುವ ಹನುಮಂತನೇ ನಿನಗೆ ನನ್ನ ನಮಸ್ಕಾರಗಳು.

ಸೀತಾವಿಯುಕ್ತ ಶ್ರೀರಾಮಶೋಕದು:ಖಭಯಾಪಹ |
ತಾಪತ್ರಿತಯ ಸಂಹಾರಿನ್ ಆಂಜನೇಯ ನಮೋಽಸ್ತು ತೇ || ೪ ||

ಭಾವಾರ್ಥ :- ಸೀತಾವಿಯೋಗದಿಂದ ದು:ಖಪೀಡಿತನಾಗಿದ್ದ ಶ್ರೀರಾಮನ ಶೋಕವನ್ನು ಪರಿಹರಿಸಿದವನೇ;  ಅಧಿ ಭೌತಿಕ , ಅದಿದೈವಿಕ , ಆಧ್ಯಾತ್ಮಿಕಗಳೆನ್ನುವ ತಾಪತ್ರಯಂಗಳನ್ನು  ದೂರ ಮಾಡುವ ಆಂಜನೇಯನೇ ನಿನಗೆ ನನ್ನ ನಮಸ್ಕಾರಗಳು.

ಆದಿವ್ಯಾದಿ ಮಹಾಮಾರಿ ಗ್ರಹಪೀಡಾಪಹಾರಿಣೇ |
ಪ್ರಾಣಾಪಹರ್ತೇ ದೈತ್ಯಾನಾಂ ಯಮಪ್ರಾಣಾತ್ಮನೇ ನಮ: ||೫||

ಭಾವಾರ್ಥ :-ರೋಗರುಜಿನಾದಿಗಳು ; ತುಂಬಾ ವರ್ಷಗಳಿಂದ ಕಾಡುವ ಮನೋ ವ್ಯಥೆಗಳು; ಮಹಾ ಮಾರೀ ಪೀಡೆಗಳು ಇವೆಲ್ಲವುಗಳನ್ನೂ ಪರಿಹರಿಸಿ; ದೈತ್ಯರುಗಳ ಸಮೂಹವನ್ನೇ ಸಂಹಾರಮಾಡಿ ; ಅವರಿಗೆ ಯಮಸ್ವರೂಪಿಯೇ ಆಗಿದ್ದ ಹೇ ! ದೇವಾ !! ಹನುಮಾ ; ನಿನಗೆ ಇದೋ ನನ್ನ ನಮಸ್ಕಾರಗಳು.

ಸಂಸಾರ ಸಾಗರಾವರ್ತ ಕರ್ತವ್ಯ ಭ್ರಾಂತಚೇತಸಾಮ್ |
ಶರಣಾಗತ ಮರ್ತ್ಯಾನಾಂ ಶರಣ್ಯಾಯ ನಮೊಸ್ತುತೇ ||೬||

ಭಾವಾರ್ಥ :- ಸಂಸಾರವೆನ್ನುವ ಸಾಗರಗಳ ಅಲೆಗಳ ಸುಳಿಯಲ್ಲಿ ಸಿಲುಕಿ ದಿಕ್ಕುದೆಸೆ ಕಾಣದೆ ಮಾನಸಿಕ ನೆಮ್ಮದಿಯನ್ನು ಕಳೆದು ಕೊಂಡ ಜನರು ನಿನಗೆ ಶರಣು ಹೊಕ್ಕಾಗ ಅವರನ್ನು ಕಾಪಾಡುವ ಏ ದೇವಾ ! ಹನುಮಾ !! ನಿನಗೆ ಇದೋ ನನ್ನ ನಮಸ್ಕಾರಗಳು.

ರಾಜದ್ವಾರೇ ಬಿಲದ್ವಾರೇ ಪ್ರವೇಶೇ ಭೂತಸಂಕುಲೇ |
ಗಜ ಸಿಂಹ ಮಹಾವ್ಯಾಘ್ರ ಚೋರ ಭೀಷಣ ಕಾನನೇ ||೭||

ಭಾವಾರ್ಥ :-ರಾಜಗೃಹ , ದುರ್ಗಮವಾಗಿರುವ ಜಾಗಗಳನ್ನು ಒಳಹೊಗುವ ದಾರಿಗಳಲ್ಲಿ , ಭೂತಪ್ರೇತಾದಿಗಳ ನಡುವೆ ,ಅಪಾಯಕಾರೀ ಪ್ರಾಣಿಗಳ ನಡುವೆ ,ಆನೆ ,ಸಿಂಹ ,ಕಳ್ಳರು ಇರುವ ದಟ್ಟ ಕಾಡಿನ ನಡುವೆ ಆಂಜನೇಯನ ಧ್ಯಾನ ಮಾಡಿದರೆ ಹೆದರಿಕೆ ನಾಶ ಆಗುವುದು.

ಶರಣಾಯ ಶರಣ್ಯಾಯ ವಾತಾತ್ಮಜ ನಮೋಸ್ತುತೇ |
ನಮ: ಪ್ಲವಗ ಸೈನ್ಯಾನಾಂ ಪ್ರಾಣಭೂತಾತ್ಮನೇ ನಮ: || ೮||

ವಾನರ ಸೈನ್ಯಕ್ಕೆ ಜೀವದಾತನಾಗಿರುವ ಹೇ ಧೀರ ವಾಯುಪುತ್ರ ಹನುಮಂತನೇ ನಿನಗೆ ಇದೋ ನನ್ನ ನಮಸ್ಕಾರಗಳು.

ರಾಮೇಷ್ಟಂ ಕರುಣಾ ಪೂರ್ಣಂ ಹನೂಮಂತಂ ಭಯಾಪಹಂ |
ಶತೃನಾಶಕರಂ ಭೀಮಂ ಸರ್ವಾಭೀಷ್ಟ ಫಲಪ್ರದಂ ||೯||

ಭಾವಾರ್ಥ :- ಶ್ರೀರಾಮನಿಗೆ ಪ್ರಾಣ ಪ್ರಿಯ ಸಖನೂ , ಕರುಣಾಸಾಗರನೂ , ಜ್ಞಾನಿಯೂ , ಭಯನಾಶಕನೂ  ,ಶತ್ರುಗಳನ್ನು ನಾಶ ಮಾಡುವವನೂ , ಭೀಮಕಾಯನೂ , ಆಗಿರುವ ಸರ್ವಾರ್ಥದಾಯಕ ಆದ ಆಂಜನೇಯ ಸ್ವಾಮಿಯ ನಾನು ಸ್ಮರಿಸುತ್ತೇನೆ.

ಪ್ರದೋಷೇ ವಾ ಪ್ರಭಾತೇ ವಾ ಯೇ ಸ್ಮರಂತ್ಸಂಜನಾಸುತಂ |
ಅರ್ಥಸಿದ್ಧಿ ಯಶ:ಕೀರ್ತಿಂ ಪ್ರಾಪ್ನುವಂತಿ ನ ಸಂಶಯ: ||೧೦||

ಭಾವಾರ್ಥ :- ಸಂಧ್ಯಾಕಾಲದ ಪ್ರದೋಷ ಸಮಯದಲ್ಲಿ ,ನಸುಕಿನ ಪ್ರಭಾತ ಸಮಯದಲ್ಲಿ ಯಾರು ಹನೂಮಾನ್ ಸ್ವಾಮಿಯನ್ನು ಸ್ಮರಣೆಮಾಡುವರೋ ಅವರು ಜೀವನದಲ್ಲಿ ಯಶಸ್ಸು,ಕೀರ್ತಿಗಳನ್ನು ಹೊಂದಿ ಸಂಪತ್ಸೌಭಾಗ್ಯವನ್ನು ಪಡುವುದರಲ್ಲಿ ಯಾವ ಸಂಶಯ ಇಲ್ಲ.
.
ಕಾರಾಗೃಹೇ ಪ್ರಯಾಣೇ ಚ ಸಂಗ್ರಾಮೇ ದೇಶವಿಪ್ಲವೇ |
ಯೇ ಸ್ಮರಂತಿ ಹನೂಮಂತಂ ತೇಷಾಂ ನಾಸ್ತಿ ವಿಪತ್ತದಾ ||೧೧||

ಭಾವಾರ್ಥ:- ಸೆರೆಮನೆ ವಾಸದ ಸಮಯದಲ್ಲಿ ,ಪ್ರಯಾಣ ಕಾಲದಲ್ಲಿ , ಯುದ್ಧ , ಬರಗಾಲದಂತಹಾ , ಅತಿವೃಷ್ಟಿಗಳಂತಹಾ ವಿಪ್ಲವ ಸಮಯದಲ್ಲಿ ಯಾರು ಆಂಜನೇಯನನ್ನು ಸ್ಮರಿಸುವರೋ ಅವರಿಗೆ ಎಂದೂ ವಿಪತ್ತು ಬರಲಾರದು.

ವಜ್ರದೇಹಾಯ ಕಾಲಾಗ್ನಿ ರುದ್ರಾಯಾಸ್ಮಿತ ತೇಜಸೇ |
ಬ್ರಹ್ಮಾಸ್ತ್ರ ಸ್ತಂಭನಾಯಾಸ್ಮೈ ನಮ: ಶ್ರೀ ರುದ್ರಮೂರ್ತಯೇ ||೧೨||

ಭಾವಾರ್ಥ :-ವಜ್ರ ಶರೀರನೂ ಪ್ರಳಯ ರುದ್ರನ ಹಾಗೆ ಅತಿ ಭೀಕರನೂ ಬ್ರಹ್ಮಾಸ್ತ್ರವನ್ನೆ ತಡೆದು ನಿಲ್ಲಿಸಿದವನೂ ಆದಂತಹಾ ರುದ್ರ ಸ್ವರೂಪೀ ಹನೂಮಂತನಿಗೆ ನಾನು ಶರಣಾಗುವೆ.

ಜಪ್ತ್ವಾ ಸ್ತೋತ್ರಮಿದಂ ಮಂತ್ರಂ ಪ್ರತಿವಾರಂ ಪಠೇನ್ನರ: |
ರಾಜಸ್ಥಾನೇ ಸಭಾಸ್ಥಾನೇ ಪ್ರಾಪ್ತವಾದೇ ಜಪೇತ್ ಧೃವಮ್ ||೧೩||

ಭಾವಾರ್ಥ :- ಈ ಸ್ತೋತ್ರಂಗಳನ್ನು ಪ್ರತಿದಿನ ಯಾರು ಶುದ್ಧವಾದ ಮನಸ್ಸಿನಿಂದ ಪಾರಾಯಣ ಮಾಡುವರೋ ಅವರು ರಾಜನ ಸಮ್ಮುಖದಲ್ಲಿ [ಅಧಿಕಾರಿಗಳ ಎದುರು], ಸಭೆಗಳಲ್ಲಿ , ಒದಗಿ ಬರುವಂತಹಾ ಸಕಲ ತೊಂದರೆಗಳಿಂದ ಬಿಡುಗಡೆ ಹೊಂದುತ್ತಾರೆ..

ವಿಭೀಷಣಕೃತಂ ಸ್ತೋತ್ರಂ ಯ: ಪಠೇತ್ ಪ್ರಯತೋ ನರ: |
ಸರ್ವಾಪದ್ಬ್ಯೋವಿಮುಚ್ಯೇತ ನಾತ್ರ ಕಾರ್ಯಾ ವಿಚಾರಣಾ ||೧೪||

ಭಾವಾರ್ಥ :-ಲಂಕಾದಹನದ ಸಮಯಲ್ಲಿ ವಿಭೀಷಣನು ಈ ಸ್ತೋತ್ರಂಗಳಿಂದ ಹನೂಮಂತನನ್ನು ಪ್ರಾರ್ಥಿಸಿದ್ದನು ಅಂತ ಆಧ್ಯಾತ್ಮ ರಾಮಾಯಣದಲ್ಲಿ ಹೇಳಿದ್ದು. ವಿಭೀಷಣನಿಂದ ರಚಿತವಾದ ಈ ಸ್ತೋತ್ರಂಗಳನ್ನು ಯಾರು ಭಕ್ತಿ ಶ್ರದ್ಧೆಯಿಂದ ಪಾರಾಯಣ ಮಾಡುವರೋ ಅವರು ಸರ್ವ ವಿಪತ್ತುಗಳಿಂದಲೂ ಬಿಡುಗಡೆ ಹೊಂದುತ್ತಾರೆ.
********************************************************************************* ||ಇತಿ ಶ್ರೀ ಆಧ್ಯಾತ್ಮ ರಾಮಾಯಣಾಂತರ್ಗತ ವಿಭೀಷಣ ಕೃತಂ ಆಪದುದ್ಧರಣ ಹನುಮತ್ ಸ್ತೋತ್ರಮ್ ||
  || ಈ ರೀತಿಯಾಗಿ  ಶ್ರೀ ಆಧ್ಯಾತ್ಮ ರಾಮಾಯಣದೊಳಗಿರುವ; ವಿಭೀಷಣನಿಂದ ರಚಿಸಲ್ಪಟ್ಟ ಆಪದುದ್ಧರಣ ಹನುಮತ್ ಸ್ತೋತ್ರದ ಭಾವಾರ್ಥ.||
*********************************************************************************
                       - ೯ -
      ||ಶ್ರೀ ಹನುಮಾನ್ ಧ್ಯಾನ ಶ್ಲೋಕಾ||
***********************************
ವಂದೇ ವಾನರ ನಾರಸಿಂಹ ಖನರಾಟ್ ಕೋಢಾಶ್ವ ವಕ್ತ್ರಾನ್ವಿತಂ |
ದಿವ್ಯಾಲಂಕರಣಂ ತ್ರಿಪಂಚನಯನಂ ದೇದೀಪ್ಯಮಾನಂರುಚಾ ||
ಹಸ್ತಾಭ್ಯಾಮಸಿಖೇಟ ಪುಸ್ತಕ ಸುಧಾ ಕುಂಭಾಂಕುಶಾದಿಂಹಲಂ|
ಖಟ್ವಾಂಗಂ ಫಣಿಭೂರುಹಂ ದಶಬುಜಂ ಸರ್ವಾರಿ ದರ್ಪಾಪಹಂ ||

||ಇತಿ ಹನುಮಾನ್ ಧ್ಯಾನ ಶ್ಲೋಕಾ:||
ಭಾವಾರ್ಥ:- ವಾನರ;ನಾರಸಿಂಹ;ಗರುಢ;ವರಾಹ;ಕುದುರೆ ಈ ರೀತಿಯಲ್ಲಿ ಐದು ಮೊಗದವನಾಗಿ ಹತ್ತು ಭುಜಂಗಳ ಸ್ವಾಮಿಯಾಗಿ ಕೈಗಳಲ್ಲಿ ಖಡ್ಗ, ಗುರಾಣಿ , ಪುಸ್ತಕ ,ಅಮೃತ ಕಲಶ ,ಅಂಕುಶ ,ನೇಗಿಲು, ಮಂಚದಕಾಲಿನರೂಪದ ಗದೆ ,ಸರ್ಪ ,ಬಂಡೆ ,ಮರಗಳೇ ಮೊದಲಾದ ವಸ್ತುಗಳಿಂದ ಅಲಂಕೃತನಾಗಿ ಮಹಾತೇಜೋ ಸ್ವರೂಪದಿಂದ ಬೆಳಗುತ್ತಾ ಸರ್ವ ಶತ್ರುಗಳ ದರ್ಪವನ್ನು ನಾಶ ಮಾಡುವ ಸ್ವಾಮಿಯೇ ನಿಮಗೆ ನಾನು ನಮಸ್ಕರಿಸುತ್ತೇನೆ.

                                  || ಈ ರೀತಿಯಾಗಿ ಹನುಮಾನ್ ಧ್ಯಾನ ಶ್ಲೋಕದ ಭಾವಾರ್ಥವಾಗಿದೆ.||

*********************************************************************************
                                       - ೧೦ -
                     ||ಶ್ರೀ ಹನೂಮತ್ಕವಚಮ್ ||
         ================

ಓಂ ಅಸ್ಯಶ್ರೀ ಹನುಮತ್ಕವಚಸ್ಯ ರಾಮಚಂದ್ರ ಋಷಿ: |
ವೀರಹನುಮಾನ್ ದೇವತಾ |ಅನುಷ್ಠುಪ್ ಛಂದ: |
ಮಾರುತಾತ್ಮಜ ಇತಿ ಬೀಜಂ|ಅಂಜನಾಸೂನುರಿತಿ ಶಕ್ತಿ: |
ಶ್ರೀರಾಮಕಿಂಕರ ಇತಿ ಕೀಲಕಂ |
ಮಮ ಸರ್ವ ರಕ್ಷಾರ್ಥಂ ಶ್ರೀಹನುಮತ್ಕವಚ ಸ್ತೋತ್ರ ಜಪೇ ವಿನಿಯೋಗ:||

       ||ಸ್ತೋತ್ರಮ್||

ಧ್ಯಾಯೇದ್ಬಾಲ ದಿವಾಕರ ದ್ಯುತಿನಿಭಂ ದೇವಾರಿದರ್ಪಾಪಹಂ |
ದೇವೇಂದ್ರ ಪ್ರಮುಖ ಪ್ರಶಸ್ತಯಶಸಂ ದೇದೀಪ್ಯಮಾನಂ ರುಚಾ ||೧||

ಸುಗ್ರೀವಾದಿ ಸಮಸ್ತವಾನರಯುತಂ ಸುವ್ಯಕ್ತ ತತ್ವ ಪ್ರಿಯಂ |
ಸಂರಕ್ತಾರುಣಲೋಚನಂ ಪವನಜಂ ಪೀತಾಂಬರಾಲಂಕೃತಮ್ ||೨||

ಹನೂಮಾನ್ ಪೂರ್ವತ: ಪಾತು ದಕ್ಷಿಣೇ ಪವನಾತ್ಮಜ: |
ಪಾತು ಪ್ರಚೀಚ್ಯಾಮಕ್ಷಘ್ನ: ಪಾತು ಸಾಗರ ಪಾರಗ: ||೩||

ಉದೀಚ್ಯಾಂ ಊರ್ಧ್ವಗ: ಪಾತು ಕೇಸರೀ ಪ್ರಿಯನಂದನ: |
ಅಧಸಾದ್ವಿಷ್ಣುಭಕ್ತಸ್ತು ಪಾತು ಮಧ್ಯೇತು ಪಾವನಿ: ||೪||

ಲಂಕಾವಿದಾಹಕ: ಪಾತು ಸರ್ವಾಪದ್ಯೋ ನಿರಂಜನ: |
ಸುಗ್ರೀವ ಸಚಿವ: ಪಾತು ಮಸ್ತಕೇ ವಾಯುನಂದನ: ||೫||

ಭಾಲಂ ಪಾತು ಮಹಾವೀರೋ ಭೃವೋರ್ಮಧ್ಯೇ ನಿರಂಜನ: |
ನೇತ್ರೇ ಛಾಯಾಪಹಾರೀ ಚ ಪಾತು ನ: ಪ್ಲವಗೇಶ್ವರ: ||೬||

ಕಪೋಲೌ ಕರ್ಣಮೂಲೇ ತು ಪಾತು ಶ್ರೀ ರಾಮಕಿಂಕರ: |
ನಾಸಾಗ್ರಮಂಜನಾಸೂನು: ಪಾತು ವಕ್ತ್ರಂ ಹರೀಶ್ವರ: ||೭||

ಪಾತು ಕಂಠಂತು ದೈತ್ಯಾರಿ: ಸ್ಕಂಧೌ ಪಾತು ಸುರಾರ್ಚಿತ: |
ಭುಜೌ ಪಾತು ಮಹಾತೇಜಾ: ಕರೌತು ಚರಣಾಯುಧ: ||೮||

ಲಂಕಾವಿದಾಹಕ: ಪಾತು ಪೃಷ್ಠದೇಶೇ ನಿರಂತರಂ |
ನಾಭಿಂಚ ರಾಮದೂತಸ್ತು ಕಟಿಂ ಪಾತ್ವನಿಲಾತ್ಮಜ: ||೯||

ಗುಹ್ಯಂ ಪಾತು ಮಹಾಪ್ರಾಜ್ಞ: ಸಕ್ಥಿನೀ ಚ ಶಿವಪ್ರಿಯ: |
ಊರೂ ಚ ಜಾನುನೀ ಪಾತು ಲಂಕಾಪ್ರಾಸಾದ ಭಂಜನ: ||೧೦||

ಜಂಘೇ ಪಾತು ಕಪಿಶ್ರೇಷ್ಠೋ ಗುಲ್ಫೌ ಪಾತು ಮಹಾಬಲ: |
ಅಚಲೋದ್ಢಾರಕ: ಪಾತು ಪಾದೌ ಭಾಸ್ಕರ: ಸನ್ನಿಭ: ||೧೧||

ಅಂಗಾನ್ಯಮಿತ ಸತ್ವಾಢ್ಯ: ಪಾತು ಪಾದಾಂಗುಲಿ: ಸದಾ |
ಸರ್ವಾಂಗಾನಿ ಮಹಾಶೂರ: ಪಾತು ರೋಮಾಣಿಚಾತ್ಮವಾನ್ ||೧೨||

             || ಫಲಶೃತಿ: ||

ಹನೂಮತ್ಕವಚಂ ಯಸ್ತು ಪಠೇದ್ವಿದ್ವಾನ್ ವಿಚಕ್ಷಣ: |
ಸ ಏವ ಪುರುಷ ಶ್ರೇಷ್ಠೋ ಭುಕ್ತಿಂ ಮುಕ್ತಿಂ ಚ ವಿಂದತಿ ||೧೩||

ತ್ರಿಕಾಲಮೇಕಕಾಲಂ ವಾ ಜಪೇನ್ಮಾಸತ್ರಯಂ ಪುನ: |
ಸರ್ವಾನ್ಕಾಮಾನವಾಪ್ನೋತಿ ಐಶ್ವರ್ಯಂ ಜಯಮಾಪ್ನುಯಾತ್ ||೧೪||

ನಾಭಿಮಾತ್ರಜಲೇ ಸ್ಥಿತ್ವಾ ಸಪ್ತವಾರಂ ಪಠೇದ್ಯದಿ |
ಕ್ಷಯಾಪಸ್ಮಾರ ಕುಷ್ಠಾದಿ ತಾಪಜ್ವರ ನಿವಾರಣಂ ||೧೫||

ದೇವಾಲಯೇಸ್ಶ್ವತ್ಥಮೂಲೇ ಸ್ಥಿತ್ವಾ ಪಠತಿ ಯ: ಪುಮಾನ್ |
ಸ ಪುಮಾನ್ ಜಯಮಾಪ್ನೋತಿ ಸಂಗ್ರಾಮೇಚ ಸ್ಥಳಾಂತರೇ ||೧೬||

ಯ: ಕರೇ ಧಾರಯೇನ್ನಿತ್ಯಂ ಸರ್ವಾನ್ ಕಾಮಾನವಾಪ್ನುಯಾತ್ |
ಲಿಖಿತ್ವಾ ಪೂಜಯೇದ್ಯಸ್ತು ಸ ಪುಮಾನ್ ಜಯಮಾಪ್ನುಯಾತ್ ||೧೭||

ಶೃಂಖಲಾಬಂಧನೇ ಯಸ್ತು ಇಮಂ ಜಪತಿ ಮಾನವ:|
ತತ್ಕ್ಷಣನ್ಮುಕ್ತಿಮಾಪ್ನೋತಿ ಕಾರಾಗೇಹೇ ತಥೈವಚ ||೧೮||

ಭೂರ್ಜಪತ್ರೇ ಲಿಖಿತ್ವಾತು ಬುಧ್ನೀಯಾತ್ಕಂಠದೇಶತ: |
ಸರ್ವಕಾಲ ಫಲಂ ತೇಷಾಂ ಸರ್ವತ್ರ ವಿಜಯೋಭವೇತ್ ||೧೯||
***********************************************
||ಇತಿ ಶ್ರೀ ಸುದರ್ಶನ ಸಂಹಿತಾಯಾಂ ಹನೂಮತ್ಕವಚಮ್||
*********************************************************************************
ಭಾವಾರ್ಥ:- ಈ ಕವಚ ಸ್ತೋತ್ರಕ್ಕೆ ರಾಮಚಂದ್ರ ಋಷಿ. ವೀರ ಹನುಮಾನ್ ದೇವತೆ. ಇದು ಅನುಷ್ತುಪ್ ಛಂದಸ್ಸಿನಲ್ಲಿ ಇದೆ. ಮಾರುತಾತ್ಮಜ ಇದರ ಬೀಜ ಮಂತ್ರ. ಅಂಜನಾಸೂನು ಇದರ ಶಕ್ತಿ. ಶ್ರೀ ರಾಮ ಕಿಂಕರ ಇದರ ಕೀಲಕ. ನನ್ನ ಸರ್ವ ರಕ್ಷೆಗಾಗಿ ಶ್ರೀ ಹನುಮತ್ಕವಚವನ್ನು ನಾನು ಜಪ ಮಾಡುವೆನು.
ಉಷಕಾಲದ ಸೂರ್ಯನ ಹಾಗೆ ಹೊಳೆಯುವ ,ರಾಕ್ಷಸ ಕುಲದ ಗರ್ವವನ್ನು ನಾಶ ಮಾಡಿದ ,ದೇವೇಂದ್ರನೇ ಆದಿಯಾದಿ ಪ್ರಮುಖರಿಗೆ ಯೋಗ್ಯವಾದ ಯಶಸ್ಸನ್ನು ಕರುಣಿಸಿದ ದೇವ ವಂದಿತ ಹನುಮನನ್ನು; . ಸುಗ್ರೀವಾದಿ ವಾನರರ ಜೊತೆಯಲ್ಲಿರುವ ಜ್ಞಾನಿಯಾದ.ತತ್ವ ಪ್ರಿಯನಾಗಿರುವ ,ಪೀತಾಂಬರಧಾರಿಯಾಗಿದ್ದು  ಸೂರ್ಯ ಕಿರಣದ ಹಾಗೆ ಹೊಂಬಣದಿಂದ ಹೊಳೆವ ಕಣ್ಣುಗಳಿಂದ ಕೂಡಿದ ವಾಯು ಪುತ್ರ ಹನುಮನನ್ನು ಧ್ಯಾನಿಸಬೇಕು.ಪೂರ್ವದಿಕ್ಕಿನಲ್ಲಿ ಹನುಮಂತನು ರಕ್ಷಿಸಲಿ,ದಕ್ಷಿಣದಿಸೆಯಲ್ಲಿ ಪವನಕುಮಾರ ರಕ್ಶಿಸಲಿ ಪಶ್ಚಿಮದಿಸೆಯಲ್ಲಿ ರಾಕ್ಷಸ ಸಂಹಾರಿಯೂ ಆದ ಸಾಗರವನ್ನು ದಾಟಿದವನು ರಕ್ಷಿಸಲಿ.ಉತ್ತರದಿಸೆಯಲ್ಲಿ ಊರ್ದ್ವಗಮನ ಕೇಸರೀ ಪುತ್ರ ರಕ್ಷಿಸಲಿ. ಅಧೋ ದಿಕ್ಕುಗಳಲ್ಲಿ ಪವನಸುತ ರಕ್ಷಿಸಲಿ .
ಆಪತ್ತ್ಕಾಲಂಗಳಲ್ಲಿ ಲಂಕಾ ನಾಶಕ ರಕ್ಷಿಸಲಿ ,ತಲೆಯನ್ನು ಸುಗ್ರೀವ ಸಚಿವ ನಿರಂಜನ ರೂಪೀ ವಾಯು ನಂದನ ರಕ್ಷಿಸಲಿ. ಹಣೆಯನ್ನು ಮಹಾವೀರ ರಕ್ಷಿಸಲಿ . ಹುಬ್ಬುಗಳ ನಡುವಿನ ಪ್ರದೇಶವನ್ನು ನಿರಂಜನ ರೂಪಿ ರಕ್ಷಿಸಲಿ , ಕಣ್ಣುಗಳನ್ನು ಹೆಣ್ಣು ಸಿಂಹದ ನೆರಳನ್ನು ಹಿಡಿದುಕೊಂಡಿರುವ ವಾನರೇಶ್ವರ ರಕ್ಷಿಸಲಿ. ಕೆನ್ನೆಯನ್ನು  ಮತ್ತು ಕಿವಿಗಳನ್ನು ಶ್ರೀರಾಮದಾಸ ರಕ್ಷಿಸಲಿ . ಮೂಗನ್ನು ಅಂಜನಾಪುತ್ರ ರಕ್ಷಿಸಲಿ . ಮುಖವನ್ನ  ವಾನರಾಧಿಪ ರಕ್ಷಿಸಲಿ.ಕೊರಳನ್ನು ದೈತ್ಯಕುಲವಿನಾಶಕ ರಕ್ಷಿಸಲಿ . ಹೆಗಲನ್ನು  ದೇವತೆಗಳಿಂದ ಪೂಜಿಸಿಗೊಳ್ಳುವವನು ರಕ್ಷಿಸಲಿ .ಭುಜಗಳನ್ನ ಮಹಾ ಜೇಜೋವಂತ ರಕ್ಷಿಸಲಿ . ಕೈಗಳನ್ನು  ಪಾದಂಗಳನ್ನೇ ಅಯುಧವಾಗಿ ಮಾಡಿಕೊಂಡಿಪ್ಪವನು ರಕ್ಷಿಸಲಿ. ಸೊಂಟವನ್ನು ವಾಯು ಪುತ್ರ ರಕ್ಷಿಸಲಿ .ಹೊಕ್ಕುಳನ್ನು ಶ್ರೀರಾಮದೂತ ರಕ್ಷಿಸಲಿ. ಬೆನ್ನನ್ನು ಲಂಕೆಯ ನಾಶ ಮಾಡಿದವನು ನಿರಂತರ ರಕ್ಷಿಸಲಿ. ಜನನೇಂದ್ರಿಯವನ್ನು ಮಾಹಾಜ್ಞಾನಿಯಾಗಿರುವ ಶಿವನಿಗೆ ಪ್ರೀತಿ ಪಾತ್ರನಾದವ ರಕ್ಷಿಸಲಿ .ತೊಡೆಗಳನ್ನು ವಾಯುಕುಮಾರ ಹನುಮ ರಕ್ಷಿಸಲಿ .ಮೊಳ ಕಾಲ ಮಂಡಿಗಳನ್ನು ಲಂಕೆಯ ಅರಮನೆಯನ್ನು ನಾಶಮಾಡಿದವ ರಕ್ಷಿಸಲಿ.
ಕಿರು ತೊಡೆಗಳನ್ನು ಕಪಿ ಶ್ರೇಷ್ಠನು ರಕ್ಷಿಸಲಿ. ಅಡಿಪಾದಂಗಳನ್ನು  ಅತಿ ಮಹಾಬಲಶಾಲಿ ಹನುಮ ರಕ್ಷಿಸಲಿ. ಪಾದಂಗಳನ್ನು ಸೂರ್ಯ ಸಮಾನವಾಗಿರುವ ಆಂಜನೇಯ ರಕ್ಷಿಸಲಿ.
ಕಾಲ್ಬೆರಗಳನ್ನೂ ;ಸರ್ವಾಂಗಂಗಳನ್ನೂ ಮಹಾ ಶೂರ ಹನುಮಂತ ರಕ್ಷಿಸಲಿ.

                                                                     || ಫಲ ಶೃತಿ ||

ಈ ಹನುಮತ್ ಕವಚವನ್ನು ಯಾರು ಶ್ರದ್ಧಾಭಕ್ತಿಯಿಂದ  ಓದುವರೋ ಅವರು ಮನುಷ್ಯರಲ್ಲಿ ಶ್ರೇಷ್ಟರಾಗಿ ಪ್ರಪಂಚದಲ್ಲಿ ಬಾಳಿ ಭುಕ್ತಿ-ಮುಕ್ತಿಯ ಹೊಂದುವರು..
ಯಾರು ದಿನದಲ್ಲಿ ಒಂದು ಸಲ ಅಥವಾ ಮೂರು ಸಲವಾಗಲೀ ಮೂರು ತಿಂಗಳು ಜಪಿಸುತ್ತಾರೋ ಅಂತಹವರಿಗೆ ಸಕಲೈಶ್ವರ್ಯ ಒದಗಿ ಬರುತ್ತದೆ.
ಈ ಸ್ತೋತ್ರವನ್ನು ಯಾರು ಹರಿವ ನೀರಿನಲ್ಲಿ ಹೊಕ್ಕುಳ ಮುಳುಗುವಷ್ಟು ಮುಳುಗಿ ನಿತ್ತು ದಿನಂಪ್ರತಿ ಏಳು ಸಲ ಜಪ ಮಾಡಿದರೆ ಎಂತಹಾ ಕುಷ್ಟ ,ಕ್ಷಯಾಪಸ್ಮಾರ ;ಜ್ವರಾದಿ ಭಯಂಕರ ರೋಗಗಳೂ ನಾಶ ಆಗುವವು.ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ, ಅಶ್ವತ್ಥ ಮರದ ಮೂಲದಲ್ಲಿ ;ಯಾವ ವ್ಯಕ್ತಿ ಜಪಿಸುವನೋ ಅವನಿಗೆ ಯುದ್ಧದಲ್ಲಿ [ವಾದ-ವಿವಾದಗಳಲ್ಲಿ];ಪ್ರಯಾಣ ಕಾಲದಲ್ಲಿ ಯಶಸ್ಸು ದೊರಕುವುದು.ಯಾರು ಈ ಸ್ತೋತ್ರಂಗಳನು ಬರೆದ ತಾಯಿತವನ್ನು ತೋಳಿನಲ್ಲಿ ಧರಿಸಿಕೊಳ್ಳುವರೋ  ಅವರಿಗೆ ಸರ್ವ ಸಿದ್ಧಿ ಲಹಿಸುವುದು..ಯಾರು ಇದನ್ನು ಯಂತ್ರದಲ್ಲಿ ಬರೆದು ಪೂಜಿಸುವರೋ ಅವರಿಗೆ  ಸರ್ವ ಕಾರ್ಯಂಗಳಲ್ಲೂ ಜಯ ಲಭಿಸುವುದು.ಸೆರೆಮನೆ ವಾಸದ ಕಾಲದಲ್ಲಿ ಈ ಸ್ತೋತ್ರಂಗಳನ್ನು ಯಾವ ವ್ಯಕ್ತಿ ಜಪಿಸುವನೋ ಅವನಿಗೆ ತತ್ಕ್ಷಣ ಸೆರೆಮನೆಂದ ಮುಕ್ತಿ ದೊರಕುವುದು ಭೂರ್ಜ ಪತ್ರದಲ್ಲಿ  ಬರೆದು ಕೊರಳಿಗೆ ಯಾರು ಕಟ್ಟಿಗೊಳ್ಳುವರೋ ಅವರಿಗೆ ಸಮಸ್ತ ಕಾರ್ಯ ಸಿದ್ಧಿಯಾಗಿ ಅವರು ವಿಜಯಶಾಲಿಗಳಾಗುವರು ಎನ್ನುವುದರಲ್ಲಿ ಯಾವ ಸಂಶಯವೂ  ಇಲ್ಲ..

                            || ಈ ರೀತಿಯಾಗಿ ಸುದರ್ಶನ ಸಂಹಿತೆಯೊಳಗಿರುವ  ಶ್ರೀ ಹನುಮತ್ಕವಚದ ಭಾವಾರ್ಥವಾಗಿದೆ. ||
*********************************************************************************
            -೧೧-
|| ಶ್ರೀ ಆಂಜನೇಯ ಚತುರ್ವಿಂಶತಿ ನಾಮಾವಲಿ:||
॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑

ಓಂ ಆಂಜನೇಯಾಯ ನಮ: ಓಂ ಜಿತಕ್ರೋಧಾಯ ನಮ:|
ಓಂ ಹನುಮತೇ ನಮ: ಓಂ ಪ್ರಾಣ ರೂಪಾಯ ನಮ:|
ಓಂ ಹರಯೇ ನಮ: ಓಂ ಮರುತ್ಸುತಾಯ ನಮ:|
ಓಂ ಪ್ಲವಗಾಧಿಪಾಯ ನಮ: ಓಂ ರಾಮನಾಮ ತಾರಕಾಯ ನಮ:|
ಓಂ ಅಕ್ಷಯ ಪ್ರಾಣಾಪಹಾರಿಣೇ ನಮ: ಓಂ ಸೃಷ್ಟಿಕರ್ತ್ರೇ ನಮ:|
ಓಂ ಜಿತೇಂದ್ರಿಯಾಯ ನಮ: ಓಂ ಭಕ್ತಾರಿ ಭಂಜನಾಯ ನಮ:|
ಓಮ್ ಅಮಿತ ವಿಕ್ರಮಾಯ ನಮ: ಓಂ ಅನನ್ತಾಯ ನಮ:|
ಓಂ ಪಂಚವಕ್ತ್ರಾಯ ನಮ: ಓಂ ಪುಣ್ಯ ರೂಪಾಯ ನಮ:|
ಓಂ ನಾದ ರೂಪಾಯ ನಮ: ಓಂ ಪರಮಾತ್ಮನೇ ನಮ:|
ಓಂ ಪರಾಯ ನಮ: ಓಂ ವಿರಾಡ್ರೂಪಾಯ ನಮ:|
ಓಂ ಪುರಾಣ ಪುರುಷಾಯ ನಮ: ಓಂ ವಿಶ್ವತೋ ಮುಖಾಯ ನಮ:|
ಓಂ ಪುರಂದರಾರ್ಚಿತಾಯ ನಮ: ಓಂ ಪ್ರಣವ ರೂಪಾಯ ನಮ:|

||ಇತಿ ಶ್ರೀ ಆಂಜನೇಯ ಚತುರ್ವಿಂಶತಿ ನಾಮಾವಲಿ:||

*********************************************************************************
                  -೧೨-
||ಶೀಮದಾಂಜನೇಯ ವಿಶೇಷ ನಾಮಾವಲಿ:||
॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑

ಓಂ ಆಂಜನೇಯಾಯ ವಾಯುಪುತ್ರಾಯ ನಮ:|
ಓಂ ಹನುಮತೇ ರಾಮದೂತಾಯ ಲೋಕಪಾಲಾಯ ನಮ:|
ಓಂ ಪ್ರಣವರೂಪಾಯ ಪಾಪಾರಣ್ಯದವಾನಲಾಯ ಓಂ ಹನುಮತೇ ನಮ:|
ಓಂ ರಾಮಮಂತ್ರ ಜಪಲೋಲುಪಾಯ ರಾಗಾದಿ ದೋಷ ರಹಿತಾಯ ನಮ:|
ಓಂ ವಹ್ನಿರೂಪಿಣೇ ವಂದಿತಾಮರರೂಪಾಯ ನಮ:|
ಓಂ ಶ್ರೀಮದಾಖಿಲ ಮಂತ್ರ ರೂಪಿಣೇ ಮಹಾಮಾಯಾತೀತಾಯ ಮಹಾ ವಿಷ್ಣವೇ ನಮ:|
ಓಂ ಶಾಂತರೂಪಾಯ ವ್ಯೂಹಚತುಷ್ಟಯಾಂತಸ್ಸಂಚಾರಾಯ ವ್ಯೋಮರೂಪಾಯ ನಮ:|
ಓಂ ಜಾನಕೀಶೋಕನಾಶನಾಯ ಕಪಿಕುಂಜರಾಯ ವಿಶ್ವಾತ್ಮನೇ ನಮ:|
ಓಂ ನಾರಾಯಣ ಧ್ಯಾನರತಾಯ ನಾದನಾದಾಂತಾತ್ಮನೇ ನಮ:|
ಓಂ ನಮೋ ಭಗವತೇ ಆಂಜನೇಯಾಯ ಓಂ ಪರಮಾತ್ಮನೇ ಪರಮಪುರುಷಾಯ ಹರಯೇ ನಮ:|
ಓಂ ಬ್ರಹ್ಮರೂಪಾಯ ಸೃಷ್ಟಿಕರ್ತ್ರೇ ಸೂತ್ರಾಧಿಪಾಯ ಶ್ರೀಂ ಸೂಕ್ಷ್ಮಾತಿಸೂಕ್ಷ್ಮರೂಪಿಣೇ ನಮ:|
ಓಂ ಪ್ಲವಗಾದಿಪಾಯ ತೇಜೋ ರೂಪಿಣೇ ಓಂ ಅಮೃತ ಸ್ವರೂಪಾಯ ನಮ:|
ಓಂ ಆನಂದ ರೂಪಾಯ ಹಿರಣ್ಯ ವರ್ಣಾಯ ಹಿರಣ್ಯರೂಪಾಯ ಹನುಮತೇ ನಮ:|
ಓಂ ಗಂಧರೂಪಾಯ ಗಾನಲೋಲುಪಾಯ ಕುಮುದದಿ ಭಕ್ತಾಗ್ರೇಸರಾಯ ಭಕ್ತಲೋಕಭುಕ್ತಿಮುಕ್ತಿಪ್ರದಾಯ ನಮ:|
ಓಂ ಕೇಸರೀಪುತ್ರಾಯ ಓಂ ಪುರಾಣ ಪುರುಷಾಯ ದುಷ್ಟದನುಜಸೂದನಾಯ ನಮ:|
ಓಂ ಪ್ಲವಗಾದಿ ಪ್ರಾಣ ರೂಪಿಣೇ ವಾಯುಸೂನವೇ ನಮ:|
ಓಂ ತೇಜೋರೂಪಾಯ ಮಹಾಬಲಾಯ ನಮ:|
ಓಂ ನಮೋ ಹನುಮತೇ ಅರ್ಣರೂಪಿಣೇ ಅಮೋಘವಿಕ್ರಮಾಯ ಆದ್ಯಂತ ರಹಿತಾಯ ಆಗಮಾರ್ಥ ಸ್ವರೂಪಾಯ ನಮ:|

*********************************************************************************

                             - ೧೩-
|| ಶ್ರೀ ಆಂಜನೇಯಾಷ್ಟೋತ್ತರ ಶತನಾಮ ಸ್ತೋತ್ರಮ್ ||

****************************************

ಆಂಜನೇಯೋ ಮಹಾವೀರೋ ಹನೂಮಾನ್ಮಾರುತಾತ್ಮಜ: |
ತತ್ವಜ್ಞಾನಪ್ರದಸ್ಸೀತಾದೇವೀ ಮುದ್ರಾ ಪ್ರದಾಯಕ: ||೧||

ಅಶೋಕಾವನಿಕಾಚ್ಛೇತ್ತಾ ಸರ್ವಮಾಯಾ ವಿಭಂಜನ: |
ಸರ್ವಬಂಧವಿಮೋಕ್ತಾ ಚ ರಕ್ಷೋ ವಿದ್ವಂಸಕಾರಕ: ||೨||

ಪರವಿದ್ಯಾಪರೀಹಾರ: ಪರಶೌರ್ಯ ವಿನಾಶನ: |
ಪರಮಂತ್ರ ನಿರಾಕರ್ತಾ ಪರಯಂತ್ರ ಪ್ರಭೇದಕ: ||೩||

ಸರ್ವಗ್ರಹಾವಿನಾಶೀ ಚ ಭೀಮಸೇನ ಸಹಾಯಕೃತ್ |
ಸರ್ವ ದು:ಖಹರಸ್ಸರ್ವಲೋಕಚಾರೀ ಮನೋಜವ: ||೪||

ಪಾರಿಜಾತದ್ರುಮಮೂಲಸ್ಥ: ಸರ್ವಮಂತ್ರ ಸ್ವರೂಪವಾನ್ |
ಸರ್ವ ತಂತ್ರ ಸ್ವರೂಪೀ ಚ ಸರ್ವ ಯಂತ್ರಾತ್ಮಕಸ್ತಥಾ ||೫||

ಕಪೀಶ್ವರೋ ಮಹಾಕಾಯಸ್ಸರ್ವರೋಗಹರ: ಪ್ರಭು: |
ಬಲಸಿದ್ಢಿ ಕರಸ್ಸರ್ವ ವಿದ್ಯಾಸಂಪತ್ಪ್ರದಾಯಕ: ||೬||

ಕಪಿಸೇನಾ ನಾಯಕಶ್ಚ ಭವಿಷ್ಯಚ್ಚತುರಾನನ: |
ಕುಮಾರಬ್ರಹ್ಮಚಾರೀ ಚ ರತ್ನಕುಂಡಲ ದೀಪ್ತಿಮಾನ್ ||೭||

ಸಂಚಲದ್ವಾಲಸನ್ನದ್ಧ ಲಂಬಮಾನ ಶಿಖೋಜ್ವಲ: |
ಗಂಧರ್ವವಿದ್ಯಾತತ್ವಜ್ಞೋ ಮಹಾಬಲ ಪರಾಕ್ರಮ: ||೮||

ಕಾರಾಗ್ರಹವಿಮೋಕ್ತಾ ಚ ಶೃಂಖಲಾಬಂಧಮೋಚಕ: |
ಸಾಗರೋತ್ತಾರಕ: ಪ್ರಾಜ್ಞೋ ರಾಮದೂತ: ಪ್ರತಾಪವಾನ್ ||೯||

ವಾನರ: ಕೇಸರೀ ಸುತ: ಸೀತಾಶೋಕ ನಿವಾರಣ: |
ಅಂಜನಾಗರ್ಭ ಸಂಭೂತೋ ಬಾಲಾರ್ಕಸದೃಶಾನನ: ||೧೦||

ವಿಭೀಷಣ ಪ್ರಿಯಕರೋ ದಶಗ್ರೀವಕುಲಾಂತಕ: |
ಲಕ್ಷ್ಮಣಪ್ರಾಣದಾತಾ ಚ ವಜ್ರಕಾಯೋ ಮಹಾದ್ಯುತ: ||೧೧||

ಚಿರಂಜೀವೀ ರಾಮಭಕ್ತೋ ದೈತ್ಯಕಾರ್ಯವಿಘಾತಕ: |
ಅಕ್ಷಹಂತಾ ಕಾಂಚನಾಭ: ಪಂಚವಕ್ತ್ರೋ ಮಹಾತಪ: ||೧೨||

ಲಂಕಿಣೀಭಂಜನ: ಶ್ರೀಮಾನ್ ಸಿಂಹಿಕಾ ಪ್ರಾಣ ಭಂಜನ: |
ಗಂದಮಾದನಶೈಲಸ್ಥೋ ಲಕಾಪುರವಿದಾಹಕ: ||೧೩||

ಸುಗ್ರೀವಸಚೀವೋ ಧೀರ: ಶೂರೋ ದೈತ್ಯಕುಲಾಂತಕ: |
ಸುರಾರ್ಚಿತೋ ಮಹಾತೇಜಾ: ರಾಮಚೂಡಾಮಣಿಪ್ರದ: ||೧೪||

ಕಾಮರೂಪೀ ಪಿಂಗಳಾಕ್ಷೋ ವಾರ್ಧಿಮೈನಾಕಪೂಜಿತ: |
ಕಬಳೀಕೃತಮಾರ್ತಾಂಡಮಂಡಲೋ ವಿಜಿತೇಂದ್ರಯ: ||೧೫||

ರಾಮಸುಗ್ರೀವ ಸಂಧಾತಾ ಮಹಾರಾವಣಮರ್ದನ: |
ಸ್ಪಟಿಕಾಭೋವಾಗಧೀಶೋ ನವವ್ಯಾಕೃತಿಪಂಡಿತ: ||೧೬||

ಚತುರ್ಬಾಹು: ದೀನಬಂದುರ್ಮಹಾತ್ಮಾಭಕ್ತವತ್ಸಲ: |
ಸಂಜೀವನ ಗಾಹರ್ತಾ ಶುಚಿರ್ವಾಗ್ಮೀ ದೃಢವ್ರತ: ||೧೭||

ಕಾಲನೇಮಿ ಪ್ರಮಥನೋ ಹರಿಮರ್ಕಟ ಮರ್ಕಟ: |
ದಾಂತ: ಶಾಂತ: ಪ್ರಸನ್ನಾತ್ಮಾ ಶತಕಂಠಮದಾಪಹೃತ್ ||೧೮||

ಯೋಗೀ ರಾಮಕಥಾಲೋಲ: ಸೀತಾನ್ವೇಷಣಪಂಡಿತ: |
ವಜ್ರದಂಷ್ಟ್ರೋ ವಜ್ರನಖೋ ರುದ್ರವೀರ್ಯಸಮುದ್ಬವ: ||೧೯||

ಇಂದ್ರಜಿತ್ಪ್ರಹಿತಾಽಮೋಘ ಬ್ರಹ್ಮಾಸ್ತ್ರವಿನಿವಾರಕ: |
ಪಾರ್ಥಧ್ವಜಾಗ್ರಸಂವಾಸೀ ಶರಪಂಜರ‍ಭೇದಕ: ||೨೦||

ದಶಬಾಹುರ್ಲೋಕಪೂಜ್ಯೋ ಜಾಂಬವತ್ಪ್ರೀತಿವರ್ಧನ: |
ಸೀತಾಸಮೇತ ಶ್ರೀರಾಮಪಾದ ಸೇವಾಧುರಂಧರ: ||೨೧||

ಇತ್ಯೇವಂ ಶ್ರೀ ಹನುಮತೋ ನಾಮ್ನಾಮಷ್ಟೋತ್ತರಂ ಶತಂ |
ಯ: ಪಠೇಶ್ರುಣುಯಾನ್ನಿತ್ಯಂ ಸರ್ವ ಕಾಮಾನವಾಪ್ನುಯಾತ್ ||೨೨||
===============================================
|| ಇತಿ ಶ್ರೀಕಾಳಿಕಾರಹಸ್ಯೇ ಆಂಜನೇಯಾಷ್ಟ್ಟೋತ್ತರಶತನಾಮ ಸ್ತೋತ್ರಮ್ ||
*****************************************************************************                    -  ೧೪-
   || ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಲಿ ||
  ***************************************
ಓಂ ಆಂಜನೇಯಾಯ ನಮ:
ಓಂ ಮಹಾವೀರಾಯ ನಮ:
ಓಂ ಹನುಮತೇ ನಮ:
ಓಂ ಮಾರುತಾತ್ಮಜಾಯ ನಮ:
ಓಂ ತತ್ವಜ್ಞಾನಪ್ರದಾಯ ನಮ:
ಓಂ ಸೀತಾದೇವೀಮುದ್ರಾಪ್ರದಾಯಕಾಯ ನಮ:
ಓಂ ಅಶೋಕವನಿಕಾಚ್ಛೇತ್ತ್ರೇ ನಮ:
ಓಂ ಸರ್ವಮಾಯಾವಿಭಂಜನಾಯ ನಮ:
ಓಂ ಸರ್ವಬಂಧವಿಮೋಕ್ತ್ರೇ ನಮ:
ಓಂ ರಾಕ್ಷಸವಿಧ್ವಂಸಕಾರಕಾಯ ನಮ:
                                      ೧೦
ಓಂ ಪರವಿದ್ಯಾಪರಿಹಾರಾಯ ನಮ:
ಓಂ ಪರಶೌರ್ಯವಿನಾಶನಾಯ ನಮ:
ಓಂ ಪರಮಂತ್ರನಿರಾಕರ್ತ್ರೇ ನಮ:
ಓಂ ಪರ ಯಂತ್ರ ಪ್ರಭೇಧಕಾಯ ನಮ:
ಓಂ ಸರ್ವಗ್ರಹ ವಿನಾಶಿನೇ ನಮ:
ಓಂ ಭೀಮಸೇನ ಸಹಾಯಕೃತೇ ನಮ:
ಓಂ ಸರ್ವದು:ಖ ಹರಾಯ ನಮ:
ಓಂ ಸರ್ವಲೋಕಚಾರಿಣೇ ನಮ:
ಓಂ ಮನೋಜವಾಯ ನಮ:
ಓಂ ಪಾರಿಜಾತದ್ರುಮಮೂಲಸ್ಥಾಯ ನಮ:
                                  ೨೦
ಓಂ ಸರ್ವಮಂತ್ರ ಸ್ವರೂಪವತೇ ನಮ:
ಓಂ ಸರ್ವತಂತ್ರಸ್ವರೂಪಿಣೇ ನಮ:
ಓಂ ಸರ್ವ ಯಂತ್ರಾತ್ಮಕಾಯ ನಮ:
ಓಂ ಕಪೀಶ್ವರಾಯ ನಮ:
ಓಂ ಮಹಾ ಕಾಯಾಯ ನಮ:
ಓಂ ಸರ್ವರೋಗ ಹರಾಯ ನಮ:
ಓಂ ಪ್ರಭವೇ ನಮ:
ಓಂ ಬಲ ಸಿದ್ಧಿಕರಾಯ ನಮ:
ಓಂ ಸರ್ವವಿದ್ಯಾಸಂಪತ್ಪ್ರದಾಯಕಾಯ ನಮ:
ಓಂ ಕಪಿಸೇನಾ ನಾಯಕಾಯ ನಮ:
                              ೩೦
ಓಂ ಭವಿಷ್ಯಚ್ಛತುರಾನನಾಯ ನಮ:
ಓಂ ಕುಮಾರಬ್ರಹ್ಮಚಾರಿಣೇ ನಮ:
ಓಂ ರತ್ನಕುಂಡಲದೀಪ್ತಿಮತೇ ನಮ:
ಓಂ ಚಂಚಲದ್ವಾಲಸನ್ನದ್ಧಲಂಬಮಾನಶಿಖೋಜ್ಜ್ವಲಾಯ ನಮ:
ಓಂ ಗಂಧರ್ವವಿದ್ಯಾತತ್ವಜ್ಞಾಯ ನಮ:
ಓಂ ಮಹಾಬಲಪರಾಕ್ರಮಾಯ ನಮ:
ಓಂ ಕಾರಗೃಹವಿಮೋಕ್ತ್ರೇ ನಮ:
ಓಂ ಶೃಂಖಲಾಬಂಧಮೋಚಕಾಯ ನಮ:
ಓಂ ಸಾಗರೋತ್ತಾರಕಾಯ ನಮ:
ಓಂ ಪ್ರಾಜ್ಞಾಯ ನಮ:
                               ೪೦
ಓಂ ರಾಮದೂತಾಯ ನಮ:
ಓಂ ಪ್ರತಾಪವತೇ ನಮ:
ಓಂ ವಾನರಾಯ ನಮ:
ಓಂ ಕೇಸರೀ ಪುತ್ರಾಯ ನಮ:
ಓಂ ಸೀತಾ ಶೋಕನಿವಾರಣಾಯ ನಮ:
ಓಂ ಅಂಜನಾಗರ್ಭ ಸಂಭೂತಾಯ ನಮ:
ಓಂ ಬಾಲಾರ್ಕಸದೃಶಾನನಾಯ ನಮ:
ಓಂ ವಿಭೀಷಣ ಪ್ರಿಯಕರಾಯ ನಮ:
ಓಂ ದಶಗ್ರೀವಕುಲಾಂತಕಾಯ ನಮ:
ಓಂ ಲಕ್ಷ್ಮಣಪ್ರಾಣದಾತ್ತ್ರೇ ನಮ:
                                  ೫೦
ಓಂ ವಜ್ರಕಾಯಾಯ ನಮ:
ಓಂ ಮಹಾದ್ಭುತೇ ನಮ:
ಓಂ ಚಿರಂಜೀವಿನೇ ನಮ:
ಓಂ ರಾಮಭಕ್ತಾಯ ನಮ:
ಓಂ ದೈತ್ಯಕಾರ್ಯವಿಘಾತಕಾಯ ನಮ:
ಓಂ ಅಕ್ಷಹಂತ್ರೇ ನಮ:
ಓಂ ಕಾಂಚನಾಭಾಯ ನಮ:
ಓಂ ಪಂಚವಕ್ತ್ರಾಯ ನಮ:
ಓಂ ಮಾಹಾತಪಸೇ ನಮ:
ಓಂ ಲಂಕಿನೀಭಂಜನಾಯ ನಮ:
                                  ೬೦
ಓಂ ಶ್ರೀಮತೇ ನಮ:
ಓಂ ಸಿಂಹಿಕಾ ಪ್ರಾಣಭಂಜಕಾಯ ನಮ:
ಓಂ ಗಂಧಮಾದನ ಶೈಲಸ್ಥಾಯ ನಮ:
ಓಂ ಲಂಕಾಪುರವಿದಾಹಕಾಯ ನಮ:
ಓಂ ಸುಗ್ರೀವ ಸಚಿವಾಯ ನಮ:
ಓಂ ಧೀರಾಯ ನಮ:
ಓಂ ಶೂರಾಯ ನಮ:
ಓಂ ದೈತ್ಯಕುಲಾಂತಕಾಯ ನಮ:
ಓಂ ಸುರಾರ್ಚಿತಾಯ ನಮ:
ಓಂ ಮಹಾತೇಜಸೇ ನಮ:
                                      ೭೦
ಓಂ ರಾಮ ಚೂಡಾಮಣಿಪ್ರದಾಯ ನಮ:
ಓಂ ಕಾಮರೂಪಿಣೇ ನಮ:
ಓಂ ಪಿಂಗಲಾಕ್ಷಾಯ ನಮ:
ಓಂ ವಾರ್ಧಿ ಮೈನಾಕ ಪೂಜಿತಾಯ ನಮ:
ಓಂ ಕಬಲೀಕೃತಮಾರ್ತಾಂಡ ಮಂಡಲಾಯ ನಮ:
ಓಂ ವಿಜಿತೇಂದ್ರಿಯಾಯ ನಮ:
ಓಂ ರಾಮ ಸುಗ್ರೀವ ಸಂಧಾತ್ರೇ ನಮ:
ಓಂ ಮಹಿರಾವಣ ಮರ್ದನಾಯ ನಮ:
ಓಂ ಸ್ಪಟಿಕಾಭಾಯ ನಮ:
ಓಂ ವಾಗಧೀಶಾಯ ನಮ:
                                             ೮೦
ಓಂ ನವವ್ಯಾಕೃತಿಪಂಡಿತಾಯ ನಮ;
ಓಂ ಚತುರ್ಬಾಹವೇ ನಮ:
ಓಂ ದೀನಬಂಧವೇ ನಮ:
ಓಂ ಮಹಾತ್ಮನೇ ನಮ:
ಓಂ ಭಕ್ತವತ್ಸಲಾಯ ನಮ:
ಓಂ ಸಂಜೀವನಗಾಹತ್ತ್ರೇ ನಮ:
ಓಂ ಶುಚಯೇ ನಮ:
ಓಂ ವಾಗ್ಮಿನೇ ನಮ:
ಓಂ ದೃಢವ್ರತಾಯ ನಮ:
ಓಂ ಕಾಲನೇಮಿಪ್ರಮಥನಾಯ ನಮ:
                                    ೯೦
ಓಂ ಹರಿಮರ್ಕಟ ಮರ್ಕಟಾಯ ನಮ:
ಓಂ ದಾಂತಾಯ ನಮ:
ಓಂ ಶಾಂತಾಯ ನಮ:
ಓಂ ಪ್ರಸನ್ನಾತ್ಮನೇ ನಮ:
ಓಂ ಶತಕಂಠಮುದಾಪಹೃತೇ ನಮ:
ಓಂ ಯೋಗಿನೇ ನಮ:
ಓಂ ರಾಮಕಥಾಲೋಲಾಯ ನಮ;
ಓಂ ಸೀತಾನ್ವೇಷಣ ಪಂಡಿತಾಯ ನಾ:
ಓಂ ವಜ್ರ ದಂಷ್ಟ್ರಾಯ ನಮ:
ಓಂ ವಜ್ರ ನಖಾಯ ನಮ:
                                     ೧೦೦
ಓಂ ರುದ್ರವೀರ್ಯ ಸಮುದ್ಭವಾಯ ನಮ:
ಓಂ ಇಂದ್ರಜಿತ್ಪ್ರಹಿತಾಮೋಘ ಬ್ರಹ್ಮಾಸ್ತ್ರವಿನಿವಾರಕಾಯ ನಮ:
ಓಂ ಪಾರ್ಥದ್ವಜಾಗ್ರ ಸಂವಾಸಿನೇ ನಮ:
ಓಂ ಶರಪಂಜರಭೇದಕಾಯ ನಮ:
ಓಂ ದಶಬಾಹವೇ ನಮ:
ಓಂ ಲೋಕಪೂಜಿತಾಯ ನಮ:
ಓಂ ಜಾಂಬವತ್ಪ್ರೀತಿ ವರ್ಧನಾಯ ನಮ:
ಓಂ ಸೀತಾಸಮೇತ ಶ್ರೀರಾಮಪಾದಸೇವಾಧುರಂಧರಾಯ ನಮ:
**********************************************************
      ||ಶ್ರೀಮತೇ ಪ್ರಸನ್ನಾಂಜನೇಯಾಯ ನಮ:||
 || ಇತಿ ಶ್ರೀ ಕಾಳಿಕಾ ರಹಸ್ಯೇ ಆಂಜನೇಯಾಷ್ಟೋತ್ತರ ಶತನಾಮಾವಲಿ:||
*********************************************************************************

      -೧೫-
  ||ಹನುಮಾನ್ ಗಾಯತ್ರಿ||
**********************

ಓಂ ಶಬ್ದರಾಜಾಯವಿದ್ಮಹೇ ವಾಯುಪುತ್ರಾಯ ಧೀಮಹಿ |
ತನ್ನೋ ಹನುಮಾನ್ ಪ್ರಚೋದಯಾತ್ ||

ಭಾವಾರ್ಥ:-ಆಕಾಶತತ್ವಕ್ಕೆ ಒಡೆಯನಾಗಿರುವವನನ್ನು ಅರಿತುಕೊಳ್ಳ ಬಯಸುವೆವು.  ವಾಯುಪುತ್ರನಾಗಿರುವ ಆತನನ್ನು ಅನುಗ್ರಹಿಸಲೋಸುಗ ಪ್ರಾರ್ಥಿಸುವೆವು. ಮಹಿಮಾನ್ವಿತನಾಗಿರುವ ಆ ಹನುಮಂತನು ಸದಾ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣಾ ಶಕ್ತಿ ಕರುಣಿಸಲಿ.

************************************************************
                             -೧೬-
ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹೀ |
ತನ್ನೋ ಹನುಮಾನ್ ಪ್ರಚೋದಯಾತ್ ||

ಆಂಜನೇಯನನ್ನು ನಾವು ಅರಿತುಕೊಳ್ಳಬಯಸುವೆವು. ವಾಯುಪುತ್ರನಾಗಿರುವ ಆತನನ್ನು ಅನುಗ್ರಹಿಸಲೋಸುಗ ಪ್ರಾರ್ಥಿಸುವೆವು.
ಮಹಿಮಾನ್ವಿತನಾಗಿರುವ ಆ ಹನುಮಂತನು ಸದಾ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣಾ ಶಕ್ತಿ ಕರುಣಿಸಲಿ
************************************************
                   -೧೭-
                  ||ಆಂಜನೇಯ ಸ್ತುತಿ||
              ++++++++++++++++
ಶೋಣಾನನಂ ವಿಶಾಲಾಕ್ಷಂ ದೀರ್ಘಬಾಹುದ್ವಯಾನ್ವಿತಂ |
ಉತ್ತುಂಗ ಶಿರಸಾಯುಕ್ತಂ ವಾಮಪಾದಂ ತು ಕುಂಚಿತಂ ||
ಸುಸ್ಮಿತಂ ದಕ್ಷಿಣಂ ಪಾದಂ ಕಟಕಾದ್ಯೈರ್ವಿಭೂಷಿತಂ |
ರಸಾಲಕೋರಕಾಯುಕ್ತ ಕರಂ ವಾಮಕಟಿಸ್ಥಿತಂ ||
ಊರ್ಧ್ವಪ್ರಸಾರಿತಂಚಾನ್ಯಕರಂ ವೈ ಮಾರುತಾತ್ಮಜಂ |
ದೀರ್ಘವಾಲಸಮಾಯುಕ್ತಂ ನಾನಾಲಂಕಾರಸಂಯುತಂ ||
ಇನ್ದ್ರಾದಿಭಿಶ್ಚ ಸಂಸೇವ್ಯಂ ಸಿದ್ಧಚಾರಣ ಸೇವಿತಂ |
ನಮಸ್ಯಾಮಿ ಮಹಾತೇಜಂ ಕಪೀಶಂ ಕಾಮಿತಾರ್ಥದಮ್ ||
||ಓಮ್ ಆಂಜನೇಯಾಯ ವಾಯುಪುತ್ರಾಯ ನಮ:||

ಭಾವಾರ್ಥ:-ಕೆಂಪಾದ ಮೊಗದವನೂ,ವಿಸ್ತಾರವಾಗಿರುವ ನೇತ್ರವುಳ್ಳವನೂ, ಧೀಘವಾದ ತೋಳುಗಳನ್ನು ಹೊಂದಿರುವವನೂ ಉನ್ನತವಾಗಿರುವ  ಶಿರವನ್ನು ಹೊಂದಿರುವವನೂ, ಕುಬ್ಜವಾಗಿರುವ ಪಾದಗಳಿಂದ ಕುಗ್ಗಿ ಹೋದವನೂ, ಮಂದಹಾಸನೂ,ವಿನಯಶೀಲನೂ, ಕಡಗಗಳಿಂದ ವಿಭೂಷಿತವಾಗಿರುವ ಪಾದಗಳನ್ನು ಹೊಂದಿರುವವನೂ, ಕೈಯಲ್ಲಿ ಸಿಹಿ ಮಾವಿನ ಮೊಗ್ಗುಗಳನ್ನು ಹಿಡಿದಿರುವವನೂ, ಎಡ ಟೊಂಕದವನೂ, ಎತ್ತರಕ್ಕೆ ವಿಸ್ತರಿಸಿದವನೂ ,ಮಾರುತನ ಪುತ್ರನೂ,ಉದ್ದವಾಗಿರುವ ಬಾಲವನ್ನು ಹೊಂದಿರುವವನೂ ,ನಾನಾ ಅಲಂಕಾರಗಳಿಂದ ಕೂಡಿರುವವನೂ ,ಇಂದ್ರಾದಿ ದೇವತೆಗಳಿಂದ ಸೇವಿಸಲ್ಪಡುವವನೂ ,ಸಿದ್ಧ ಸಾಧ್ಯರಿಂದ ಸೇವೆಗೊಂಬವನೂ, ಮಹಾತೇಜೋವಂತನೂ ,ಕಪಿ ಸಮೂಹದ ಒಡೆಯನೂ ಆಗಿ ಇಷ್ಟಾರ್ಥಗಳನ್ನೀವ ಹನೂಮಂತನಿಗೆ ನಾನು ನಮಸ್ಕರಿಸುತ್ತಿರುವೆ.
*********************************************************************************
| |ಇತಿ ಆಂಜನೇಯಸ್ತುತಿ ||     | |  ಈ ರೀತಿಯಾಗಿ ಆಂಜನೇಯ ಸ್ತುತಿಗಳ ಭಾವಾರ್ಥವು | |
*********************************************************************************                      -೧೮-
|| ಹನುಮಾನ್ ಮಂಗಳ ಶ್ಲೋಕಾ: ||
******************************************************
ಅಂಜನಾತನಯಾನಂದ ರೂಪಿಣೇ ವಿಶ್ವ ತೇಜಸೇ |
ಜಾನಕೀಶೋಕ ಸಂಹರ್ತ್ರೇ ವಾಯುಪುತ್ರಾಯ ಮಂಗಳಮ್||
ಮಂಗಳಂ ಜ್ಞಾನರೂಪಾಯ ಮಹಾವಿಶ್ವಸ್ವರೂಪಿಣೇ |
ಪ್ರಣವಾರ್ಥಸ್ವರೂಪಾಯ ಪ್ರಾಣ ರೂಪಾಯ ಮಂಗಳಮ್ ||
ದೈತ್ಯದಾನವಸಂಹರ್ತ್ರೇ ಜಗದಾನಂದಹೇತವೇ |
ಪುಣ್ಯಶ್ಲೋಕಾಯ ಪೂತಾಯ ರಾಮದೂತಾಯ ಮಂಗಳಮ್ ||
ಮಂಗಳಂ ವಜ್ರ ದೇಹಾಯ ಸತ್ಯವಾಹಾಯ ಶೌರಿಯೇ |
ಮಂಗಳಂ ಶ್ರೀಶ ಕಾರ್ಯಾಯ ಬ್ರಹ್ಮಚರ್ಯಾಯ ಮಂಗಳಮ್ ||
ಮಂಗಳಂ ಕಾಮರೂಪಾಯ ಪಾರ್ಥದ್ವಜನಿವಾಸಿನೇ |
ದಿವ್ಯಗೀತಾಮೃತರಸಾಸ್ವಾದಿತಾಯಾಸ್ತು ಮಂಗಳಮ್ ||
ಮಂಗಳಮ್ ವಾಯು ಪುತ್ರಾಯ ಭೂತ ಪ್ರೇತ ವಿನಾಶಿನೇ |
ಸಮಸ್ತ ಶತ್ರುನಾಶಾಯ ಆಂಜನೇಯಾಯ ಮಂಗಳಮ್ ||
ಶ್ರಿಯ:ಪತಿಂ ಸದಾಚಾರ್ಯಂ ನತ್ವಾ ಸರ್ವಾರ್ಥಕಾಮದಂ |
ಕಪೀಶಾರಾಧನಂ ವಕ್ಷ್ಯೇ ರಾಜ್ಯ ರಾಷ್ಟ್ರಾಭಿ ವೃಧ್ಧಿದಮ್ ||

ಭಾವಾರ್ಹ:-ಅಂಜನಾದೇವಿಯಪುತ್ರನೂ ಆನಂದ ರೂಪನೂ ಭುವಿಯ ತೇಜೋರೂಪನೂ ಸೀತಾದೇವಿಯ ಶೋಕವನ್ನು ಪರಿಹರಿಸಿದವನೂ ಆಗಿರುವ ವಾಯು ಪುತ್ರನಿಗೆ ಮಂಗಲವಾಗಲಿ.
ಜ್ಞಾನರೂಪನೂ ಮಹಾಪ್ರಪಂಚದ ಸ್ವರೂಪದವನೂ  ಓಂಕಾರಾರ್ಥ ಸ್ವರೂಪನೂ, ಪ್ರಾಣರೂಪನೂ ಆಗಿರುವವಗೆ ಮಂಗಲವಾಗಲಿ.
ದೈತ್ಯರಾದ ದಾನವರನ್ನು ಸಂಹರಿಸಿದವನೂ ಜಗತ್ತಿನ ಆನಂದಕ್ಕೆ ಕಾರಣನಾದವನೂ, ಪುಣ್ಯ ಕೀರ್ತಿಯೂ, ಪವಿತ್ರನೂ ಆಗಿರುವ ರಾಮದೂತನಿಗೆ ಮಂಗಲವಾಗಲಿ.
ವಜ್ರಕಾಯನೂ ಸತ್ಯದ ಸಾರಥಿಯೂ ಶೂರನೂ, ಶ್ರೀಹರಿಯ ಕಾರ್ಯವನ್ನು ನಿರ್ವಹಿಸುವವನೂ ಬ್ರಹ್ಮಚಾರಿಯೂ ಆಗಿರುವವಗೆ ಮಂಗಲವಾಗಲಿ.
ಇಷ್ಟಾರ್ಥದಾಯಕನೂ, ಅರ್ಜುನನ ದ್ವಜದಲ್ಲಿ ವಾಸಿಸುವನೂ,ಅಮೃತಮಯವಾಗಿರುವ ಶ್ರೇಷ್ಠವಾದ ಗೀತೆಯ ರಸಾಸ್ವಾದನೆಯನ್ನು ಮಾಡಿದವನೂ ಆಗಿರುವವಗೆ ಮಂಗಲವಾಗಲಿ.
ವಾಯು ಪುತ್ರನಿಗೆ ಮಂಗಲವಾಗಲಿ.ಭೂತ ಪ್ರೇತಗಳನ್ನು ವಿನಾಶಗೈದವನೂ,ಸಮಸ್ತ ಶತ್ರುಗಳ ವಿನಾಶಕನೂ ಆಗಿರುವ ಆಂಜನೇಯನಿಗೆ ಮಂಗಲವಾಗಲಿ.ಶ್ರೀಹರಿಗೆ ಪ್ರಿಯನಾಗಿ,ಸದಾಚಾರಗಳನ್ನು ಪಾಲಿಸುವವನೂ, ಸರ್ವಾರ್ಥಗಳನ್ನು ಕರುಣಿಸುವವನೂ ಆಗಿರುವ ಕಪಿಕುಲದೊಡೆಯನನ್ನು ಹೃದಯದಲ್ಲಿರಿಸಿ ರಾಜ್ಯ,ರಾಷ್ಠಗಳ ಅಭಿವೃದ್ಧಿಗಾಗಿ ಆರಾಧಿಸುವೆನು..
*********************************************************************************            || ಇತಿ ಹನುಮಾನ್ ಮಂಗಲ ಶ್ಲೋಕಾ: ||   || ಈ ರೀತಿಯಾಗಿ ಹನುಮಾನ್ ಮಂಗಲ ಶ್ಲೋಕಗಳ ಭಾವಾರ್ಥವು ||
++++++++++++++++++++++++++++++++++++++++++++++++++++++++++++++++++++++++            -೧೯-

|| ಶ್ರೀ ಹನುಮ ಸ್ತೋತ್ರ ||
॒॒॒॒॒॒॒॒॒॒॒॒॒

ವಿಪ್ರಾದಯೋ ಜನಗಣಾ: ಸ್ತವನಂ ಪ್ರಚಕ್ಷುರ್ಬ್ರಹ್ಮ ಸ್ವರೂಪ ಜಗತಾಂ ಪರಿಪಾಲಕಸ್ಯ |
ರಾಮಪ್ರಭಾವಬಲಪೂರಿತ ರುದ್ರಮೂರ್ತೇ: ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧||

ಶ್ರೀರಾಮದೂತ ಶರಣಾಗತ ದೀನಬಂಧೋ ವಜ್ರಾಂಗದೇಹ ಕರುಣಾಕರ ರುದ್ರಮೂರ್ತೇ:|
ಶ್ರೀರಾಮರಾಮ ಇತಿ ಜಪಕೃತಾತ್ಮ ಶಕ್ತೇ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೨||

ಸಿಂಧೂರ ತೈಲರಚಿತಾತಿ ವಿಭೂಷಣಾತ್ಮಲ್ಲಾಂಗೂಲತಾಡನ ಕೃತಾಸುರಸಂಘ ನಾಶ |
ಕ್ರೋಧಾದ್ದಶಾನನಪುರೀದಹನ ಪ್ರಕಾರಿನ್ ಶ್ರೀರಾಮದೂತಂ ಸತತಂ ಹನುಮನ್ನಮಸ್ತೇ ||೩||

ರಾಮಾರಿಣಾಕೃತಹೃತೌ ಜನಕಾತ್ಮಜಾಯಾ ಲಂಕಾಸ್ಥಿತಾ ಜನಕಜೇತಿ ಸುಶೋಧಕಾರಿನ್ |
ಸೀತಾತಿಶೋಕಹರಣ ಪ್ರಬಲಾರಿಹಂತ: ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೪||

ಸಂಮೂರ್ಛಿತಾಂಗ ವಿಭು ಲಕ್ಷಣಸೌಖ್ಯಕಾರಿನ್ ರೌದ್ರಾಂಗದೀರ್ಘ ಹನುಮನ್ನಗಹಸ್ತಧಾರಿನ್ |
ದುಷ್ಟಾಸುರಾಹಿಮಹಿರಾವಣ ನಾಶಕಾರಿನ್ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೫||

ಶೈಲಿ-ಗದಾದರ ಸಮರ್ಜಿತ ವಜ್ರಕಚ್ಛಿನ್ವಾಮಾಂಘ್ರಿಪೀಡಿತ ಮನೋಜ ಸುಲಬ್ದಕೀರ್ತೇ |
ಹೇ ಮಾರುತೇ ಭವಸಮಸ್ತ ಭಯಾರ್ತಿಹಾರಿನ್ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೬||

ವಿಪ್ರಾದಿಜಾತಿಕ ನಿಕೇತನ್ಮಾರೀಚಾನಾಗ್ರಾಮಾಧಿವಾಸ ಕೃತಧಾಮ ವಿಶಾಲಕೀರ್ತೇ |
ಶ್ರೀರಾಮದಾಸದೃಢ- ಬುದ್ಢಿಮತಾಂ ವರಿಷ್ಟಂ ಶ್ರೀರಾಮದೂತ ಹನುಮನ್ನಮಸ್ತೇ ||೭||

ಪಳ್ಗೂನದೀತಟಸಮುದ್ಭವ ಚಾಲಿವಕ್ಷೇಪ್ರಾಸಾದ ಮಂಡಿತ ಮನೋಹರ ವಾಸಧಾಮ್ನಿ |
ರೂಪಂ ವಿಭಾತಿ ಕಪಿರಾಜ ಮನೋಹರಂ ತೇ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೮||

ಶುಕ್ಲಾಶು ಭಾದ್ರಪದಮಾಸಭವಾ ದ್ವಿತೀಯಾ ಭಾತಿ ತ್ವದೀಯ ಹವನೋತ್ಸವಜಾತ ಹರ್ಷಾ |
ಯಾತ್ರಾಲುಸಂಘರಚಿತಾ ಜನವೀಥಿಕಾತ್ರ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೯||

ಜನ್ಮಾದಿಹೀನ ಪವನಾಂಜನಿಕಾತ್ತದೇಹ ಶ್ರೀಜಾನಕೀಪತಿ ಮನೋಜವ ದೀಪ್ತಕಾಂತೇ |
ನಾನಾ ಕಪೀಂದ್ರಂಚ ನಾಯಕ ಬ್ರಹ್ಮಚಾರಿನ್ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೦||

ಲಾಂಗೂಲಧಾರಕ ಜಿತೇಂದ್ರಿಯ ವಾಯುಪುತ್ರ ಷಟ್ಪಂಚಹಸ್ತ ರಚಿತ ದ್ವಜ ದೀರ್ಘಮಾನ |
ಶ್ರೀರಾಮಸೇವನಪರೇಣ ಸದೋರ್ದ್ವಕಾಯ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೧||

ಹೇ ಪಾವನೇಯ ಜನರಕ್ಷಕ ರಾಮಭಕ್ತ ರಾಜೀವಲೋಚನ ವಿಶಾಲ ಸುಭಾಧಾರಿನ್ |
ದೀರ್ಘಾರ್ಕಸ್ರಗ್ದರ ಜಟಾಮುಕುಟಾದಿ ಧಾರಿನ್ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೨||

ಆವಾಹನಾದಿ ಶುಭಷೋಡಶಕೋಪಚಾರಾಸ್ತುಭ್ಯಂ ನಿವೇದನ ಕೃತಾ ಹನುಮನ್ಮಯಾ ಯೇ |
ಅಂಗೀಕುರುಷ್ಟ ಭಗವನ್ ಹನುಮನ್ಮಹೇಶ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೩||

ರೋಗಾನ್ವಿನಾಶಯ ರಿಪೂನಥವಿಘ್ನಜಾಲಂ ತಾಪತ್ರಯಂ ಯಮಭಯಂ ಭವಪಾಪ ಸಂಘಮ್ |
ದು:ಖಾನಿ ನಾಶಯ ವಿನಾಶಯರಿಷ್ಟಕಷ್ಟಂ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೪||

ಹೇ ಭಕ್ತವತ್ಸಲ ವಿಭೋ ಭಗವನ್ ದಯಾಲೋ ಪುತ್ರಾನ್ಯಶಾಂಸಿ ಖಲು ದೇಹಿ ಧನಾನಿ ದೇಹಿ |
ಜಾಯಾ ಸುಭಾಗ್ಯಕ ಗವಾತಿರಿಕ್ತ ಭವದೋಷ ಚಯಂ ಕ್ಷಮಸ್ತ ಪೂಜಾಂಗೃಹಾಣ ಸಕಲಾಂ ಸ್ತುತಿಪಾಠಯುಕ್ತಾಮ್|
ದೇವಪ್ರಸೀದ ಭಗವನ್ ಹನುಮಾನ್ ಕೃಪಾಲೋ ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೫||

ವಾಕ್ಪೂಜನಂ ತ್ವಯಿ ಸಮರ್ಪಿತಮೇವ ಭಕ್ತ್ಯಾ ದೋಷಾನ್ವಿಹಾಯ ಸಕಲಾನ್ ಖಲುತತ್ರ ಸಂಸ್ಥಾನ್ |
ಸಮ್ಯಗ್ಗೃಹಾಣ ಸುಗುಣಾನಿವ ರಾಜಹಂಸ: ಶ್ರೀರಾಮದೂತ ಸತತಂ ಹರ ಸಂಕಟಂ ಮೇ ||೧೬||

ಭಾವಾರ್ಥ:-ವಿಪ್ರಾದಿ ಜನಸಮೂಹಕ್ಕೆ ಬ್ರಹ್ಮ ಸ್ವರೂಪನಾಗಿ ಜಗತ್ತನ್ನು ಪರಿಪಾಲಿಸುವ ಶ್ರೀರಾಮನ ಪ್ರಭಾವ ಬಲದಿಂದ ರುದ್ರಮೂರ್ತಿಯೆನಿಸಿಕೊಂಡ ಶ್ರೀರಾಮದೂತ  ಹನುಮಂತನಿಗೆ ನಮನಗಳು. ಶ್ರೀರಾಮದೂತನಾಗಿ ಶರಣು ಹೊಕ್ಕವರ ಪಾಲಿಗೆ   ದೀನ ರಕ್ಷಕನಾಗಿ ವಜ್ರದೇಹಿಯೂ ಕರುಣಾಕರನೂ ರುದ್ರಸ್ವರೂಪಿಯೂ ತಾನಾಗಿ ಶ್ರೀರಾಮ ರಾಮ ಎಂಬುದಾಗಿ ರಾಮನಾಮ ಸಂಸ್ಮರಣೆಯನ್ನು ಮಾಡುತ್ತಾ ಆತ್ಮಶಕ್ತಿಯಾಗಿರುವ ಶ್ರೀರಾಮದೂತ ಹನುಮಂತನಿಗೆ ನಮನಗಳು. ಚಂದನದ ತೈಲದಿಂದ ಭೂಷಿತನಾಗಿ ತನ್ನ ಬಾಲದ ಹೊಡೆತದಿಂದ ಅಸುರ ಸಮೂಹವನ್ನು ನಾಶಗೊಳಿಸಿದ, ಅತಿ ಕ್ರೋಧಾವೇಷಭರಿತನಾಗಿ ಲಂಕಾಪುರವನ್ನು ದಹನ ಮಾಡಿದ ಅಸಮಾನ ಶೂರಿಯಾಗಿರುವ ಶ್ರೀ ರಾಮದೂತ ಹನುಮಂತನಿಗೆ ನಮನಗಳು. ಶ್ರೀರಾಮನ ಶತ್ರುವಿನಿಂದ ಅಪಹರಿಸಲ್ಪಟ್ಟು ಲಂಕೆಯಲ್ಲಿರಿಸಿದ ಜನಕಸುತೆ ಸೀತೆಯ ಸಂಶೋಧಕನಾಗಿ ಸೀತೆಯ ಶೋಕವನ್ನು ನಾಶಗೊಳಿಸಿದ ಶಕ್ತಿಯುತನಾದ ಶ್ರೀರಾಮದೂತ ಹನುಮಂತನಿಗೆ ನಮನಗಳು. ಯುದ್ಧರಂಗದಲ್ಲಿ ಪ್ರಜ್ಞಾಶೂನ್ಯನಾದ ಲಕ್ಷ್ಮಣನಿಗೆ ಸುಖವನ್ನು ಒದಗಿಸಿದ ರುದ್ರ ಸ್ವರೂಪಿಯಾಗಿ ಬೆಟ್ಟವನ್ನು ಕೈಯಲ್ಲಿ ಧರಿಸಿ ಭೂಮ್ಯಾಕಾಶಕ್ಕೆ ವಿಸ್ತರಿಸಿ ರಾವಣಾದಿಗಳ ನಾಶಕ್ಕೆ ಕಾರಣನಾದ ಶ್ರೀರಾಮದೂತ ಹನುಮನಿಗೆ ನಮನಗಳು. ಧೃಢವಾದ ಬುದ್ಧಿವಂತನೂ, ಪಲ್ಗುಣಿ ನದೀ ತೀರದಲ್ಲಿ ಉದ್ಭವಿಸಿದವನೂ,ಮನೋಹರನೂಬ್ರಹ್ಮಚಾರಿಯೂ,ಕಪಿಸಮೂಹದ ನಾಯಕನೂ, ಜಿತೇಂದ್ರಿಯನೂ ರಾಜೀವಲೋಚನನೂ, ಸರ್ವಶಕ್ತಿ ಸಮನ್ವಿತನಾಗಿರುವ ಶ್ರೀರಾಮದೂತ ಹನುಮನೇ!,ನಾನು ಸಮರ್ಪಿಸುತ್ತಿರುವ ಷೋಡಶೋಪಚಾರಗಳನ್ನು ಸ್ವೀಕರಿಸಿ ಸಮಸ್ತ ದು:ಖ ರೋಗರುಜಿನಾದಿಗಳನ್ನೂ ದೂರೀಕರಿಸಿ ನ್ಯೂನಾರಿಕ್ತಗಳನ್ನು ಮನ್ನಿಸಿ ಸುಪ್ರಸನ್ನನಾಗು. ಸದಾಕಾಲವೂ ನನ್ನ ಎಲ್ಲಾ ಸಂಕಟಗಳನ್ನೂ ಪರಿಹರಿಸಿ ಕಾಪಾಡು ಸ್ವಾಮೀ. ಹನುಮನೇ ನಿನಗೆ ನಮನಗಳು.
********************************************************************************* || ಇತಿ ಶ್ರೀ ಹನುಮ ಸ್ತೋತ್ರ ||      || ಈ ರೀತಿಯಾಗಿ ಶ್ರೀಹನುಮಸ್ತೋತ್ರದ ಭಾವಾರ್ಥವು. ||
*********************************************************************************                              -೨೦-
|| ಶ್ರೀ ಆಂಜನೇಯ ಧ್ಯಾನಮ್||
****************************

ನಮೋಸ್ಸ್ತು ರಾಮಾಯ ಸ ಲಕ್ಷ್ಮಣಾಯ |
ದೇವ್ಯೈ ಚ ತಸ್ಯೈ ಜನಕಾತ್ಮಜಾಯೈ ||
ನಮೋಸ್ಸ್ತು ರುದ್ರೇಂದ್ರ ಯಮಾನಿಲೇಭ್ಯೋ |
ನಮೋಸ್ಸ್ತು ಚಂದ್ರಾರ್ಕ ಮರುದ್ಗಣೇಭ್ಯ: ||೧||

ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ|
ಪೌರುಷೇಚಾ ಪ್ರತಿದ್ವಂದ್ವ: ಶರೈನಂ ಜಹಿ ರಾವಣಿಮ್ ||
ಗೋಷ್ಪದೀಕೃತವಾರಾಶಿಂ ಮಶಕೀಕೃತ ರಾಕ್ಷಸಮ್ |
ರಾಮಾಯಣ ಮಹಾಮಾಲಾರತ್ನಂ ವಂದೇನಿಲಾಸ್ತ್ಮಜಂ ||೨||

ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಮ್ |
ಕಪೀಶಮಕ್ಷ ಹಂತಾರಂ ವಂದೇ ಲಂಕಾಭಯಂಕರಮ್ ||೩||

ಆಂಜನೇಯ ಮತಿಪಾಟಲಾನನಂ|
ಕಾಂಚನಾದ್ರಿ ಕಮನೀಯವಿಗ್ರಹಂ ||
ಪಾರಿಜಾತ ತರುಮೂಲವಾಸಿನಂ |
ಭಾವಯಾಮಿ ಪವಮಾನನಂದನಮ್||೪||

ಯತ್ರ ಯತ್ರ ರಘುನಾಥ ಕೀರ್ತನಂ |
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪವಾರಿ ಪರಿಪೂರ್ಣಲೋಚನಂ |
ಮಾರುತಿಂ ನಮತ ರಾಕ್ಷಸಾಂತಕಮ್ ||೫||

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋಗತಾ |
ಅಜಾಢ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್ಭವೇತ್ ||೬||

ಸರ್ವಾರಿಷ್ಟನಿವಾರಕಂ ಶುಭಕರಂ ಪಿಂಗಾಕ್ಷಮಕ್ಷಾಪಹಮ್ |
ಸೀತಾನ್ವೇಷಣ ತತ್ಪರಂ ಕಪಿವರಂ ಕೋಟೀಂದು ಸೂರ್ಯ ಪ್ರಭಮ್ ||
ಲಂಕಾದ್ವೀಪ ಭಯಂಕರಂ ಸಕಲದಂ ಸುಗ್ರೀವ ಸಮ್ಮಾನಿತಂ |
ದೇವೇಂದ್ರಾದಿ ಸಮಸ್ತ ದೇವವಿನುತಂ ಕಾಕುತ್ಸ್ಥ ದೂತಂ ಭಜೇ ||೭

ಭಾವಾರ್ಥ:-ಸೀತಾಲಕ್ಷ್ಮಣರೊಡಗೂಡಿರುವ ಶ್ರೀರಾಮನಿಗೂ ಇಂದ್ರಾದಿ ದೇವರ್ಕಳಿಗೂ ನಮಸ್ಕಾರಗಳು. ಅಪರಿಮಿತವಾದ ಸಾಗರವನ್ನು ಕಿಂಚಿತ್ಪ್ರಮಾಣವೆಂಬುದಾಗಿ ಭಾವಿಸಿ ಲಂಘಿಸಿ ರಾಕ್ಷಸಾದಿಗಳನ್ನು ಕ್ಷುದ್ರ ಜಂತುಗಳೆಂದು ಭಂಗಿಸಿದ ವಾಯು ಪುತ್ರನಿಗೆ ನಾನು ನಮಸ್ಕರಿಸುವೆ.ಎಲ್ಲೆಲ್ಲಿ ಶ್ರೀರಾಮನ ಕೀರ್ತನೆಗಳು ಕೇಳಿ ಬರುತ್ತದೆಯೋ ಅಲ್ಲೆಲ್ಲಾ ತನ್ನ ಶಿರದ ಮೇಲೆ ಅಂಜಲೀ ಬದ್ಧನಾಗಿ ಆನಂದ ಭಾಷ್ಪವನ್ನು ಸುರಿಸುತ್ತಾ ಪರಮಾನಂದ ಭರಿತನಾಗುವ ರಾಕ್ಷಸಕುಲ ನಾಶಕನಾಗಿರುವ ಮಾರುತಿಯನ್ನು ಸ್ಮರಿಸೋಣ. ಹನುಮಂತನ ಸ್ಮರಣೆ ಮಾತ್ರದಿಂದ ಬುದ್ಧಿ, ಶಕ್ತಿ, ಯಶಸ್ಸು, ಧೈರ್ಯ ಮುಂತಾದ ಸಕಲವೂ ಲಭಿಸುತ್ತವೆ. ಇಂತಹಾ ಸರ್ವಾರಿಷ್ಟ ನಿವಾರಕನಾಗಿರುವ,ಸಮಸ್ತ ಶುಭಂಕರನಾದ,ಕೋಟಿ ಸೂರ್ಯಪ್ರಭಾ ತೇಜದಿಂದ ಶೋಭಿಸುತ್ತಿರುವ  ದೇವೇಂದ್ರಾದಿ ಸಮಸ್ತ ದೇವ ದೇವತೆಯರಿಂದ ಸ್ಮರಿಸಲ್ಪಡುತ್ತಿರುವ ಶ್ರೀರಾಮದೂತ ಹನುಮಂತನನ್ನು ಸ್ಮರಿಸೋಣಾ.
*********************************************************************************         || ಇತಿ ಶ್ರೀ ಆಂಜನೇಯ ಧ್ಯಾನಮ್ ||                              
      || ಈ ರೀತಿಯಾಗಿ ಶ್ರೀ ಆಂಜನೇಯ ಧ್ಯಾನ ಶ್ಲೋಕಗಳ ಭಾವಾರ್ಥವು ||
*********************************************************************************                               -೨೧-
|ಶ್ರೀಮದಾಂಜನೇಯ ಪ್ರಾರ್ಥನಾ ಶ್ಲೋಕಾ:||

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||೧||

ಆಂಜನೇಯಂ ವಾಯುಸೂನುಂ ರಾಮಕಾರ್ಯ ಧುರಂಧರಮ್ |
ಲಂಘಿತಾಬ್ಧಿಂ ರಾಕ್ಷಸಾಂತಂ ಧಾಮಾಮ್ಯತ್ರ ಸಾದರಮ್ ||೨||

ಆಂಜನಾ ಗರ್ಭ ಸಂಭೂತೋ ವಾಯು ಪುತ್ರೋ ಮಹಾಬಲ:|
ಕುಮಾರೋ ಬ್ರಹ್ಮಚಾರೀ ತಸ್ಮೈ ಶ್ರೀ ಹನುಮತೇ ನಮ: ||೩||

ಪಂಚವಕ್ತ್ರಂ ಮಹಾಭೀಮಂ ತ್ರಿಪಂಚ ನಯನೈರ್ಯುತಮ್ |
ದಶಭೀರ್ಬಾಹುಭಿರ್ಯುಕ್ತಂ ಸರ್ವ ಕಾಮಾರ್ಥಸಿದ್ಧಿದಮ್ ||೪||

ಭಾವಾರ್ಥ:-ಮನೋವೇಗವನ್ನು ಹೊಂದಿರುವವನೂ ಜಿತೇಂದ್ರಿಯನೂ,ಬುದ್ಧಿಮತ್ತೆಯಲ್ಲಿ ಶ್ರೇಷ್ಠನೂ ವಾಯುಪುತ್ರನೂ, ಕಪಿಗಳ ಸಮೂಹದಲ್ಲಿ ಮುಖ್ಯನೂ,ಶ್ರೀರಾಮದೂತನೂ ಆಗಿರುವ ಹನುಮಂತನಿಗೆ ನಾನು ಶರಣಾಗುವೆನು.ಆಂಜನೇಯನೂ,ವಾಯು ಪುತ್ರನೂ,ಶ್ರೀರಾಮನ ಸೇವಾಕಾರ್ಯಗಳ ಪ್ರಮುಖನೂ ಸಾಗರವನ್ನು ಉಲ್ಲಂಘಿಸಿದವನೂ, ರಾಕ್ಷಸಾಂತಕನೂ,ತನ್ನ ಪ್ರಕಾಶವನ್ನು ಸಾದರಪಡಿಸಿದವನೂ ಅಂಜನಾದೇವೀಗರ್ಭದಲ್ಲಿ ಜನಿಸಿದವನೂ ಮಹಾಬಲಶಾಲಿಯೂ,ವಾಯುಪುತ್ರನೂ ಯುವಕನೂ,ಬ್ರಹ್ಮಚಾರಿಯೂ ಆಗಿರುವ ಶ್ರೀಹನುಮಂತನಿಗೆ ನಾನು ನಮಸ್ಕರಿಸುವೆ. ಐದು ಮೊಗಗಳನ್ನು ಹೊಂದಿರುವವನಾಗಿರುವ, ಮಹಾಭಯಂಕರನೂ, ಮೂರುಲೋಕಗಳನ್ನು ಕಣ್ಣಾಗಿಸಿಕೊಂಡು ಹತ್ತು ತೋಳುಗಳನ್ನು ಹೊಂದಿ ಸಮಸ್ತ ಇಷ್ಟಾರ್ಥಗಳ ಸಿದ್ಧಿದಾಯಕನೂ ಆಗಿರುವ ಹನುಮಂತನಿಗೆ ನಾನು ಶರಣಾಗುವೆ.,
++++++++++++++++++++++++++++++++++++++++++++++++++++++++++++++++++++++++
                                ||  ಇತಿ ಶ್ರೀಮದಾಂಜನೇಯ ಪ್ರಾರ್ಥನಾ ಶ್ಲೋಕಾ: ||  
           ||  ಈ ರೀತಿಯಾಗಿ ಶ್ರೀಮದಾಂಜನೇಯ ಪ್ರಾರ್ಥನಾ ಶ್ಲೋಕಗಳ ಭಾವಾರ್ಥವು ||
*********************************************************************************                         -೨೨-
|| ಶ್ರೀ ಪಂಚಮುಖಿ ಹನುಮಾನ್ ಧ್ಯಾನ ಮಂತ್ರಮ್ ||
*************************************

ಉದ್ಯನ್ಮಾರ್ತಾಂಡ ಕೋಟೀರುಚಿರ್ಮಯಯುತಂ ಚಾರು ವೀರಾಸನಸ್ಥಂ|
ಮೌಂಜೀ ಯಜ್ಞೋಪವೀತಾಭರಣ ಮುರುಜಟಾ ಶೋಭಿತಂ ಕುಂಡಲಾಭ್ಯಾಮ್|
ಭಕ್ತಾನಾಮಿಷ್ಟದಂ ತಂ ಪ್ರಣಯಮನುದಿತಂ ವೇದನಾದ ಪ್ರಣಾದಂ|
ಧ್ಯಾಯೇದ್ದೇವಂ ವಿಧೇಯಂ ಪ್ಲವಗ ಕುಲಪತಿಂ ಗೋಷ್ಪದೀ ಭೂತವಾರ್ಧಿಮ್||

ಶ್ರೀರಾಮಚಂದ್ರದೂತಾಯ ಅಂಜನಾ ವಾಯು ಪುತ್ರಾಯ ಮಹಾಬಲಾಯ
ಸೀತಾದು:ಖ ನಿವಾರಣಾಯ ಲಂಕಾದಹನಕಾರಣಾಯ ಮಹಾಭಯಪ್ರಚಂಡಾಯ
ಪಲ್ಗುನಸಖಾಯ ಕೋಲಾಹಲ ಸಕಲ ಬ್ರಹ್ಮಾಂಡ ವಿಶ್ವರೂಪಾಯ
ಸಪ್ತ ಸಮುದ್ರ ನಿರಾಲಂಬಿತಾಯ ಪಿಂಗಲನಯನಾಮಿತ ವಿಕ್ರಮಾಯ
ಸೂರ್ಯಬಿಂಬ ಫಲಸೇವಿತಾಯ ದುಷ್ಟ ನಿರಾಲಂಕೃತಾಯ ಅಂಗದ ಲಕ್ಷ್ಮಣ
ಕಪಿಸೈನ್ಯಪ್ರಾಣನಿರ್ವಾಹಕಾಯ ದಶಕಂಠವಿದ್ವಂಸನಾಯರಾಮೇಷ್ಟಾಯ ಫಲ್ಗುನಸಖಾಯ
ಸೀತಾಸಮೇತ ಶ್ರೀರಾಮಚಂದ್ರಪ್ರಸಾದಕಾಯ ಪ್ರಸೀದ ಪ್ರಸೀದಾಂ ದೇಹಿ||

ಭಾವಾರ್ಥ:-ಉದಯಿಸುವ ಕೋಟಿಸೂರ್ಯರ ಪ್ರಕಾಶಮಯನಾಗಿ ಸುಂದರವಾಗಿರುವ ಶಕ್ತಿಯುತ ಆಸನದಲ್ಲಿ ಕುಳಿತಿರುವ ಮುಂಜೀ,ಯಜ್ಞೋಪವೀತ, ಆಭರಣ,ವಿಸ್ತಾರವಾಗಿರುವ ಜಟೆಯಿಂದ ಶೋಭಿತನಾದವನೂ,ಭಕ್ತರಿಗೆ ಇಷ್ಟಾರ್ಥದಾಯಕನೂ, ವೇದಗಳ ದೊಡ್ಡ ಸ್ವರದಿಂದ ಸಂತಸಗೊಳ್ಳುವವನೂವಿಧೇಯನೂ,ಕಪಿಕುಲಾಧಿಪತಿಯೂ ಆಗಿರುವ ದೇವನನ್ನು ಧ್ಯಾನಿಸುವೆ. ಶ್ರೀರಾಮಚಂದ್ರನ ದೂತನೂ ಅಂಜನಾದೇವಿ ಮತ್ತು ವಾಯುವಿನ ಪುತ್ರನೂ, ಮಹಾಶಕ್ತಿಶಾಲಿಯೂ,ಸೀತಾದು:ಖವನ್ನು ನಿವಾರಿಸಿದವನೂ,ಲಂಕಾದಹನಕ್ಕೆ ಕಾರಣೀಭೂತನೂ,ಮಹಾಭಯಂಕರನೂ,ಪಲ್ಗುಣಿನದಿ ಪ್ರಿಯನೂ, ಕೋಲಾಹಲಕಾರಕನೂ, ಸಮಸ್ತ ಬ್ರಹ್ಮಾಂಡಸ್ವರೂಪನೂ,ಏಳು ಸಮುದ್ರಗಳನ್ನು ಅವಲಂಬಿಸದಿರುವವನೂ, ಸಿಂಧೂರ ವರ್ಣದ ಕಣ್ಣುಗಳನ್ನು ಹೊಂದಿರುವವನೂ, ಮಹಾ ವಿಕ್ರಮಶಾಲಿಯೂ, ಸೂರ್ಯಬಿಂಬವನ್ನು ಹಣ್ಣೆಂದು ಸೇವಿಸ ಹೊರಟವನೂ, ಅಲಂಕಾರ ರಹಿತನೂ, ಅಂಗದ, ಲಕ್ಷ್ಮಣ,ಹಾಗೂ ಕಪಿ ಸೈನ್ಯದ ಪ್ರಾಣವ ರಕ್ಷಿಸಿದವನೂ, ದಶಕಂಠನನ್ನು ಧ್ವಂಸ ಮಾಡಿದವನೂ ,ಶ್ರೀರಾಮನಿಗೆ ಇಷ್ಟನಾಗಿರುವ ಅರ್ಜುನನ ಸಖನಾದ ಸೀತಾಸಮೇತ ಶ್ರೀರಾಮಚಂದ್ರ ಪ್ರಸಾದಕ್ಕೆ ಪಾತ್ರನಾದವನೂ ಆಗಿರುವ ಶ್ರೀ ಆಂಜನೇಯ ಸ್ವಾಮಿಯೇ ಪ್ರಸನ್ನನಾಗು. ಪ್ರಸನ್ನನಾಗು.
*********************************************************************************|| |ಇತಿ ಶ್ರೀ ಪಂಚಮುಖಿ ಹನುಮಾನ್ ಧ್ಯಾನ ಮಂತ್ರಮ್ ||   || ಇತಿ ಶ್ರೀ ಪಂಚಮುಖಿ ಧ್ಯಾನ ಮಂತ್ರಗಳ ಭಾವಾರ್ಥವು ||
*********************************************************************************                             -೨೩-

|| ಪ್ರಸನ್ನಾಂಜನೇಯ ಸ್ತೋತ್ರಾಣಿ ||
॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓
ಆಪನ್ನಾಖಿಲ ಲೋಕಾರ್ತಿಹಾರಿಣೇ ಶ್ರೀ ಹನೂಮತೇ |
ಅಕಸ್ಮಾದಾಗತೋತ್ಪಾತ ನಾಶನಾಯ ನಮೋಸ್ತು ತೇ ||೧||

ಅಂಜನಾ ನಂದನಂ ವೀರಂ ಜಾನಕೀ ಶೋಕ ನಾಶನಂ |
ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ ||೨||

ನಮಸ್ತೇ ನಮಸ್ತೇ ಮಹಾವಾಯುಸೂನೋ ನಮಸ್ತೇ ನಮಸ್ತೇ ಭವಿಷ್ಯದ್ವಿಧಾತ: |
ನಮಸ್ತೇ ನಮಸ್ತೇ ಮಹಾಭೀಷ್ಟದಾತ: ನಮಸ್ತೇ ನಮಸ್ತೇಸ್ನಿಶಂ ರಾಮ ಭಕ್ತ: ||೩||

ನಮಸ್ತೇ ವಾಯು ಪುತ್ರಾಯ ದ್ವಂಸಿತಾಮರ ವೈರಿಣೇ |
ಸುಜನಾಂಬುಧಿ ಚಂದ್ರಾಯ ಭವಿಷ್ಯ ಬ್ರಹ್ಮಣೇ ನಮ: ||೪||

ಗೋಷ್ಟದೀಕೃತವಾರಾಶಿಂ ಮಶಕೀ ಕೃತರಾಕ್ಷಸಂ
ರಾಮಾಯಣ ಮಹಾಮಾಲಾ ರತ್ನಂ ವಂದೇಸ್ನಿಲಾತ್ಮಜಂ ||೫||

ಆಂಜನೇಯಮತಿಪಾಟಲಾನನಂ ಕಾಂಚನಾದ್ರಿ ಕಮನೀಯ ವಿಗ್ರಹಂ |
ಪಾರಿಜಾತ ತರು ಮೂಲವಾಸಿನಂ ಭಾವಯಾಮಿ ಪವಮಾನ ನಂದನಂ ||೬||

ಸದಾ ರಾಮ ರಾಮೇತಿ ರಾಮಾಮೃತಂತೇ |
ಸದಾರಾಮ ಮಾನಂದ ನಿಷ್ಕಂದ ಕಂದಮ್|
ಪಿಬಂತಂ ನಮಂತಂ ಸುದಂತಂ ಹಸಂತಂ |
ಹನೂಮಂತ ಮಂತರ್ಭಜೇ ತಂ ನಿತಾಂತಮ್ ||೭||

ಲಂಕಾದ್ವೀಪ ಭಯಂಕರಂ ಸಕಲದಂ ಸುಗ್ರೀವ ಸಮ್ಮಾನಿತಂ |
ದೇವೇಂದ್ರಾದಿಸಮಸ್ತದೂತ ವಿನುತಂ ಕಾಕುತ್ಸ್ಥದೂತಂ ಭಜೇ ||೮||

ಹೃದಯಾಬ್ಜೇ ಸ್ಥಿರಭಾವಂ ಮಂಜುಲರೂಪಂ ಮಹೋಜ್ವಲಂ ಧಾಮ: |
ಹಸ್ತಾಬ್ಜೇ ಪಶ್ಯಂತಂ ಧನ್ಯಂ ಕಲಯೋಞ್ಜನಾತನಯಂ ||೯||

ಸರ್ವಾನಿಷ್ಟನಿವಾರಕಂ ಶುಭಕರಂ ಪಿಂಗಾಕ್ಷಮಕ್ಷಾಪಹಂ |
ಸೀತಾನ್ವೇಷಣಂ ಕಪಿವರಂ ಕೋಟೀಂದು ಸೂರ್ಯ ಪ್ರಭಂ ||೧೦||

ಭಾವಾರ್ಥ:-ಆಪತ್ತಿಗೆ ಸಿಲುಕಿದ ಸಕಲ ಲೋಕಗಳ ದು:ಖಗಳನ್ನು ಪರಿಹರಿಸುವ ಹನುಮಂತನೇ;ಆಕಸ್ಮಿಕವಾಗಿ ಒದಗುವ ಅವಲಕ್ಷಣಗಳನ್ನು ನಾಶಗೊಳಿಸುವ ಹನುಮಂತನೇ ನಿನಗಿದೋ ನಮನಗಳು.ಪುನರಪಿ ನಮನಗಳು.ಅಂಜನಾದೇವಿಯ ಮಗನೂ, ವೀರನೂ, ಜಾನಕಿಯ ಶೋಕ ನಾಶಕನೂ, ಕಪಿಗಳ ಗುಂಪಿನ ನಾಯಕನೂ, ರಾವಣನ ಸುತ ಅಕ್ಷನನ್ನು ಸಂಹರಿಸಿದವನೂ, ಲಂಕಾಪುರಿಯ ಪಾಲಿಗೆ ಭಯಂಕರನೂ ಆದವನೇ ನಮನಗಳು.ಮಹಾವಾಯುಸುತನೇ ನಿನಗಿದೋ ನಮನಗಳು.ಪುನರಪಿ ನಮನಗಳು. ಅದೃಷ್ಟದಾತನೇ ನಮನಗಳು. ಶ್ರೇಷ್ಠವಾಗಿರುವ ಬಯಕೆಗಳನ್ನು ಪೂರೈಸುವವನೇ ನಿನಗಿದೋ ನಮನಗಳು;ಪುನರಪಿ ನಮನಗಳು.ವಾಯುವಿನ ಸುಪುತ್ರನೇ ನಿನಗಿದೋ ನಮನಗಳು. ದೇವತೆಗಳ ಶತ್ರು ಸಂಹರನೇ,ಸಜ್ಜನರೆಂಬ ಸಾಗರಕ್ಕೆ ಚಂದ್ರನಂತಿರುವವನೇ ,ಅದೃಷ್ಟಗಳನ್ನು ಕರುಣಿಸುವಾತನೇ ನಿನಗಿದೋ ನಮನಗಳು.ಸಾಗರವನ್ನು ಗೋಪಾದದ ವಿಸ್ತಾರವನ್ನಾಗಿಸಿಕೊಂಡು ಲಂಘಿಸಿ ನೊಣವಾಗಿಕಾಡಿದ ರಾಕ್ಷಸನನ್ನು ನಿಗ್ರಹಿಸಿ ಶ್ರೇಷ್ಠವಾಗಿರುವ ರಾಮಾಯಣದ ಮಾಣಿಕ್ಯನಾಗಿರುವ ವಾಯುವಿನ ಆತ್ಮ ಸಂಭೂತನೇ ನಿನಗಿದೋ ನಮನಗಳು.ಆಂಜನೇಯನು ಸೀಳು ಮೊಗವನ್ನು ಹೊಂದಿದವನು.ಕಾಂಚನಾದ್ರಿಯನ್ನು ಚೆಲುವಾದ ವಿಗ್ರಹವನ್ನಾಗಿಸಿದವನು. ಪಾರಿಜಾತ ಗಿಡದ ಬುಡದಲ್ಲಿ ವಾಸಿಸುವವನು. ಅಂತಹಾ ವಾಯು ಪುತ್ರನನ್ನು ಸದಾ ನೆಪಿಸಿಕೊಳ್ಳುವೆ. ಸದಾ ರಾಮ ರಾಮಾ ಎಂಬುದಾಗಿ ರಾಮ ನಾಮಾಮೃತದಲ್ಲಿ , ಸದಾ ರಾಮನಾಮದ ಆನಂದ ಲೀನನಾಗಿ, ರಾಮ ನಾಮಾಮೃತವನ್ನು ಕುಡಿಯುತ್ತಾ ನಮಿಸುತ್ತಾ.ಸಂತಸಪಡುತ್ತಾ.  ಅಂತರ್ಯದಲ್ಲಿ ಬಹಳವಾಗಿ ಭಜಿಸುತ್ತಾ ಇರುವ ಹನುಮನೇ ನಿನಗಿದೋ ನಮನಗಳು.
ಲಂಕಾದ್ವೀಪಕ್ಕೆ ಭಯವನ್ನು ಹುಟ್ಟಿಸಿದವನೂ,ಸುಗ್ರೀವನಿಗೆ ಸರ್ವಸ್ವವಾಗಿ ಗೌರವಿಸಲ್ಪಟ್ಟವನೂ, ದೇವೇಂದ್ರಾದಿ ಸಮಸ್ತರೂ ಸ್ತುತಿಸುವ ರಾಮದಾಸನೂ, ಅಯೋಧ್ಯೆಯ  ಅಪ್ರತಿಮ ಸೇವಕನೂ ಆಗಿರುವ ಹನುಮಂತನನ್ನು ಭಜಿಸುತ್ತೇನೆ.ಹೃದಯಕಮಲದಲ್ಲಿ ರಾಮನನ್ನು ಸ್ಥಿರಭಾವದಲ್ಲಿ ಇರಿಸಿ ಆತನ ಸುಂದರವಾಗಿರುವ ದೇಹದವನ್ನು ಕಾಣುತ್ತಾ, ಶ್ರೀರಾಮನಮಹಾ ಕಾಂತಿಯುತ ಶರೀರವನ್ನು ಸ್ಮರಿಸುತ್ತಾ, ಕರಕಮಲದಲ್ಲಿ ರಾಮನನ್ನೇ ಕಾಣುತ್ತಾ ಮಧುರದ್ವನಿಯನ್ನು ಮಾಡುತ್ತಲಿರುವ ಅಂಜನಾ ತನಯನನ್ನು ನಾನು ಭಜಿಸುತ್ತೇನೆ. ಸರ್ವಾನಿಷ್ಟ ನಿವಾರಕನಾಗಿರುವವನೂ, ಶುಭವನ್ನು ಮಾಡುತ್ತಿರುವವನೂ, ರುದ್ರ ಭಯಂಕರನಾಗಿ ರಾವಣನ ಮಗ ಅಕ್ಷನನ್ನು ನಿಗ್ರಹಿಸಿ ಸೀತಾನ್ವೇಷಣೆ ಗೈದ ಕೋಟಿ ಚಂದ್ರ ಸೂರ್ಯರ ಕಾಂತಿಯನ್ನು ಹೊಂದಿರುವ ಕಪಿಶ್ರೇಷ್ಠನಾಗಿರುವ ಆಂಜನೇಯ ಸ್ವಾಮಿಗೆ ನನ್ನ ನಮನಗಳು.

********************************************************************************* || ಇತಿ ಪ್ರಸನ್ನಾಂಜನೇಯ ಸ್ತೋತ್ರಾಣಿ ||                                                        
         || ಈ ರೀತಿಯಾಗಿ ಪ್ರಸನ್ನಾಂಜನೇಯ ಸ್ತೋತ್ರಗಳ ಭಾವಾರ್ಥವು ||
*********************************************************************************                    -೨೪-
|| ಶ್ರೀಮದಾಂಜನೇಯ ಸ್ತೋತ್ರಮ್ ||
**************************
ಅಸ್ಯ ಶ್ರೀಮದ್ದಾಂಜನೇಯ ಸ್ತೋತ್ರ ಮಹಾಮಂತ್ರಸ್ಯ|
ಶ್ರೀ ರಾಮಚಂದ್ರ ಋಷಿ:| ವೀರಹನುಮಾನ್ ದೇವತಾ |
ಅನುಷ್ಟಪ್ ಛಂದ: |ಶ್ರೀರಾಮದೂತ ಪ್ರೀತ್ಯರ್ಥೇ ಜಪೇ ವಿನಿಯೋಗ:: ||

ಭಾವಾರ್ಥ:-ಶ್ರೀಮತ್ ಆಂಜನೇಯ ಸ್ತೋತ್ರಗಳಿಗೆ ಶ್ರೀ ರಾಮಚಂದ್ರನು ಋಷಿ; ವೀರ ಹನುಮನು ದೇವತೆ; ಇದು ಅನುಷ್ಟುಪ್ ಛಂದಸ್ಸಿನಲ್ಲಿದೆ. ಇದನ್ನು ಶ್ರೀರಾಮಚಂದ್ರನ ಪ್ರೀತಿಯ ನ್ನು ಪಡೆಯುವ ಸಲುವಾಗಿ ಉಪಯೋಗಿಸುವುದಾಗಿದೆ.

ಹನುಮಾನಂಜನಾಸೂನು: ವಾಯುಪುತ್ರೋ ಮಹಾಬಲ:|
ರಾಮೇಷ್ಟ: ಫಲ್ಗುಣಸಖ: ಪಿಂಗಾಕ್ಷೋಸ್ಮಿತವಿಕ್ರಮ: ||೧||

ಭಾವಾರ್ಥ:- ಹನುಮ. ಅಂಜನಾಸೂನು, ವಾಯುಪುತ್ರ, ಮಹಾಬಲ, ರಾಮೇಷ್ಟ,[ರಾಮನಿಗೆ ಇಷ್ಟನಾದವನು],ಪಲ್ಗುಣಸಖ[ ಅರ್ಜುನನಮಿತ್ರ], ಪಿಂಗಾಕ್ಷ[ರುದ್ರ], ಅಮಿತವಿಕ್ರಮ[ಮಹಾಶೂರ]------

ಉದದಿಕ್ರಮಣಶ್ಚೈವ ಸೀತಾಶೋಕವಿನಾಶನ: |
ಲಕ್ಷ್ಮಣ ಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ||೨||

ಭಾವಾರ್ಥ:-ಉದದಿಕ್ರಮಣ[ಸಾಗರವನ್ನು ದಾಟಿದವ],ಸೀತಾಶೋಕ ವಿನಾಶನ, ಲಕ್ಷ್ಮಣಪ್ರಾಣದಾತ, ದಶಗ್ರೀವದರ್ಪಹರ[ದಶಕಂಠನ ದರ್ಪವನ್ನು ನಾಶಗೊಳಿಸಿದವ]---------

ಏವಂ ದಶನಾಮಾನಿ ಕಪೀಂದ್ರಸ್ಯ ಮಹಾತ್ಮನ: |
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಕಾಲೇ ವಿಶೇಷತ: ||೩||
ತಸ್ಯ ಮೃತ್ಯು ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ |

ಭಾವಾರ್ಥ:-ಈ ರೀತಿಯಾಗಿ ಹತ್ತು ಹೆಸರುಗಳು ಮಹಾತ್ಮನಾಗಿರುವ ಕಪೀಶ್ವರನಿಗೆ ಇವೆ.ಇವುಗಳನ್ನು ಯಾವಾತನು ಪ್ರತಿದಿವಸ ನಿದ್ರಿಸುವ ಸಮಯದಲ್ಲಿ ;ವಿಶೇಷವಾಗಿ ಪ್ರವಾಸ ಕಾಲದಲ್ಲಿ ಪಠಿಸುವನೋ ಆತನಿಗೆ ಮೃತ್ಯುವಿನ ಭಯವಿರುವುದಿಲ್ಲ ಮಾತ್ರವಲ್ಲದೆ ಆತನಿಗೆ ಎಲ್ಲೆಡೆಯೂ ವಿಜಯ ಲಭಿಸುತ್ತದೆ.

ಸ್ಪಾಟಿಕಾಭಂ ಸ್ವರ್ಣಕಾಂತಿಂ ದ್ವಿಭುಜಂ ಚ ಕೃತಾಂಜಲಿ |
ಕುಂದಲದ್ವಯ ಸಂಶೋಭಿಮುಖಾಂಭೋಜಂ ಹರಿಂ ಭಜೇತ್ ||೪||

ಭಾವಾರ್ಥ:-ಕರ್ಪೂರದ ಕಾಂತಿ ಹಾಗೂ ಬಂಗಾರದ ಹೊಳಪಿನಿಂದ ಕೂಡಿ ಭಕ್ತಿ ವಿನಯಗಳಿಂದ  ನಮಸ್ಕರಿಸುತ್ತಿರುವ; ಎರಡು ತಾವರೆ ಪುಷ್ಪಗಳನ್ನು ಕೈಯಲ್ಲಿ ಹಿಡಿದವನಾಗಿ ಶೋಭಾಯಮಾನನಾಗಿದ್ದು ಶ್ರೀ ಹರಿಯನ್ನು ಆಂಜನೇಯನು ಪೂಜಿಸುತ್ತಿರುವನು.

ಆಂಜನೇಯಮತಿಪಾಟಲಾನನಂ ಕಾಂಚನಾದ್ರಿ ಕಮನೀಯ ವಿಗ್ರಹಂ |
ಪಾರಿಜಾತ ತರುಮೂಲವಾಸಿನಂ ಭಾವಯಾಮಿ ಪವಮಾನ ನಂದನಂ ||೫||

ಭಾವಾರ್ಥ:-ಆಂಜನೇಯ ನಸುಗೆಂಪು ಮೊಗದವನೂ; ಸುಮೇರು ಪರ್ವತದ ರಮಣೀಯವಾದ ವಿಗ್ರಹ ರೂಪನೂ; ಪಾರಿಜಾತ ಗಿಡದ ಬುಡದಲ್ಲಿ ವಾಸಿಸುವವನೂ;ಆಗಿದ್ದು ಅಂತಹಾ ವಾಯುಪುತ್ರನನ್ನು ಸ್ಮರಿಸುವೆನು.

ಯತ್ರ ಯತ್ರ ರಘುನಾಥಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ |
ಬಾಷ್ಪವಾರಿಪರಿ ಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ ||೬||

ಭಾವಾರ್ಥ:- ಎಲ್ಲೆಲ್ಲಿ ಶ್ರೀರಾಮನ ಸಂಕೀರ್ತನೆ ಕೇಳಿಸಲ್ಪಡುತ್ತಿದೆಯೋ ಅಲ್ಲಲ್ಲಿ ಶಿರವಾಗಿ ಕೈಮುಗಿದುಕೋಂಡು ಕಣ್ತುಂಬಾ ಆನಂದ ಭಾಷ್ಪವನ್ನು ಸುರಿಸುತ್ತಾ ರಾಕ್ಷಸಾಂತಕನಾದ ಹನುಮನು ನಮಿಸುತ್ತಾ ಇರುವನು.

ವಿಜಯಂ ಲಭತೇ ಸತ್ಯಂ ಪರಂಸೌಖ್ಯಮಾಪ್ನುಯಾತ್ |
ಭೂತಪ್ರೇತ ಪಿಶಾಚಾಶ್ಚ ಬ್ರಹ್ಮರಾಕ್ಷಸದರ್ಶನೇ ||೭||

ಭಾವಾರ್ಥ:-ಈ ಸ್ತೋತ್ರಗಳನ್ನು ಪಠಿಸುವುದರಿಂದ ಸತ್ಯವಾಗಿಯೂ ವಿಜಯ ಲಭಿಸುತ್ತದೆ.ಮತ್ತು ಪರಲೋಕದಲ್ಲಿ ಸುಖವು ಲಭಿಸುತ್ತದೆ.ಭೂತ ಪ್ರೇತ ಪಿಶಾಚಾದಿಗಳಿಂದಲೂ ಬ್ರಹ್ಮ ರಾಕ್ಷಸ ದರ್ಶನ ಕಾಲದಲ್ಲಿ;--------

ಸಿಂಹವ್ಯಾಘ್ರ ಭಯಪ್ರಾಪ್ತೇ ಶತ್ರು ಶಸ್ತ್ರಾಸ್ತ್ರಪಂಜರೇ |
ದು:ಖೇ ಮಹಾರಣೇ ಚೈವ ಪಿಶಾಚಗ್ರಹ ಪಾತಕೇ ||೮||

ಭಾವಾರ್ಥ:-ಸಿಂಹ,ವ್ಯಾಘ್ರಾದಿ ಕ್ರೂರ ಮೃಗಗಳಿಂದ, ಶತ್ರುಗಳಿಂದ, ಶಸ್ತ್ರಾಸ್ತ್ರಗಳಿಂದ ಅಪಾಯದ ಸಂಭವವಿರುವ ಕಾಲದಲ್ಲಿ, ಸೆರೆಮನೆ ವಾಸದ ಭೀತಿಗೊಳಗಾಗಿರುವಾಗ,ದು:ಖದ ಸಮಯದಲ್ಲಿ; ಯುದ್ಧಭೂಮಿಯಲ್ಲಿ, ಗ್ರಹದೋಷಗಳಲ್ಲಿ,--------

ಶತವಾರಂ ಪಠೇನ್ನಿತ್ಯಂ ಮಂಡಲಂ ಭಕ್ತಿತತ್ಪರ:
ಸರ್ವ ಸೌಖ್ಯಮವಾಪ್ನೋತಿ ತ್ರಿಸಂಧ್ಯಂ ರಾಮಪೋಷಿತ: ||೯||

ಭಾವಾರ್ಥ:-ಶ್ರದ್ಧಾ ಭಕ್ತಿ ಪುರಸ್ಸರನಾಗಿ ನೂರು ಬಾರಿ ಪ್ರತಿನಿತ್ಯವೂ ಮೂರು ಹೊತ್ತೂ ಒಂದು ಮಂಡಲ ಕಾಲ[ನಲುವತ್ತೆಂಟು ದಿವಸಗಳ ಕಾಲ] ಪಠಿಸಿದಲ್ಲಿ ಸಮಸ್ತ ಸುಖಗಳೂ  ಲಭಿಸಿ ಶ್ರೀರಾಮನಿಂದ ರಕ್ಷಿಸಲ್ಪಡುತ್ತಾನೆ.

ಅಪರಾಜಿತ ಪಿಂಗಾಕ್ಷ ನಮಸ್ತೇ ರಾಮಪೂಜಿತ |
ಪ್ರಸ್ಥಾನಂ ಚ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||೧೦||

ಭಾವಾರ್ಥ:-.ಸೋಲಿಸಲಸಾಧ್ಯವಾಗಿರುವವನೂ; ಹಳದಿ ಕಣ್ಣುಗಳನ್ನು ಹೊಂದಿರುವವನೂ;ನಮಸ್ಕರಿಸುತ್ತಾ;.ರಾಮನನ್ನು ಪೂಜಿಸುತ್ತಾ, ಸದಾ ಸಂಚರಿಸುತ್ತಾ, ಶುಭ ಫಲವನ್ನು ಕರುಣಿಸುತ್ತಿರುವವನು

ಆಯು:ಪ್ರಜ್ಞಾ ಯಶೋಲಕ್ಷ್ಮೀ ಶ್ರದ್ಧಾಪುತ್ರಾ: ಸುಶೀಲತಾ |
ಆರೋಗ್ಯಂ ದೇಹಸೌಖ್ಯಂ ಚ ಕಪಿನಾಥ ನಮೋಸ್ತು ತೇ ||೧೧||

ಭಾವಾರ್ಥ:-.ಆಯುಷ್ಯವನ್ನೂ, ಪ್ರಜ್ಞೆಯನ್ನೂ, ಯಶಸ್ಸನ್ನೂ,ಸಂಪದವನ್ನೂ, ಆರೋಗ್ಯವನ್ನೂ, ಶರೀರ ಸೌಖ್ಯವನ್ನೂ, ಕರುಣಿಸುತ್ತಿರುವ ಕಪಿಕುಲದೊಡೆಯನಿಗೆ ನಮಸ್ಕರಿಸುವೆ

ದೀನೇಮಯಿ ದಯಾಂ ಕೃತ್ವಾ ಮಮ ದು:ಖಂ ವಿನಾಶಯ |
ಐಶ್ವರ್ಯಂ ಪುತ್ರಲಾಭಂ ಚ ಲಕ್ಷ್ಮೀಂ ದೇಹಿ ಸದಾಪ್ರಭೋ ||೧೨||

ಭಾವಾರ್ಥ:-.ಸಂಕಷ್ಟದಲ್ಲಿರುವ ನನಗೆ ದಯೇತೋರಿ ನನ್ನ ದು:ಖಗಳನ್ನು ನಾಶಗೊಳಿಸಿ ನನಗೆ ಸಂಪದೈಶ್ವರ್ಯ, ಪುತ್ರಸಂತಾನವನ್ನು ಕರುಣಿಸು ಸ್ವಾಮಿಯೇ.

ತ್ವತ್ಪಾದಪಂಕಜದ್ವಂದ್ವಂ ವಿನಾ ನಾನ್ಯಂ ಭಜಾಮ್ಯಹಂ |
ನ್ಯೂನಾರಿಕ್ತಂ ಯತ್ಕಿಂಚಿತ್ತ್ಸರ್ವಂ ಕ್ಷಂತು ಮಹರ್ಸಿ ||೧೩||

ಭಾವಾರ್ಥ:-.ನಿನ್ನ ಚರಣಾರವಿಂದದ್ವಯಗಳ ಹೊರತಾಗಿ ಅನ್ಯ ನಾನು ಭಜಿಸುವುದಿಲ್ಲ. ನನ್ನ ಈ ಕಾರ್ಯದಲ್ಲಿ ಏನಾದರೂ ನ್ಯೂನತೆಗಳು,ಅತಿಶಯಗಳು,ಇತ್ಯಾದಿ ಹೆಚ್ಚು ಕಡಿಮೆಯಾಗಿದ್ದಲ್ಲಿ ಅವೆಲ್ಲವನ್ನೂ ಸದಾ ಮನ್ನಿಸು ಪ್ರಭುವೇ

ಮಾತಾ ತ್ವಂ ಚ ಪಿತಾ ತ್ವಂಚ ಭ್ರಾತಾ ತ್ವಂ ಚ ಪ್ರಭುರ್ಮಮ |
ತ್ವಮೇವ ಶರಣಂ ಪ್ರಾಪ್ತಂ ರಕ್ಷ ಮಾಂ ಕರುಣಾನಿದೇ ||೧೪||

ಭಾವಾರ್ಥ:- ನೀನೇ ನನ್ನ ತಾಯಿ;ತಂದೆ, ಸಹೋದರ,ನನ್ನ ಒಡೆಯ. ನಿನ್ನಲ್ಲಿ ನಾನು ಶರಣಾಗುವೆ. ನನ್ನನ್ನು ರಕ್ಷಿಸು ಕರುಣಾನಿಧಿಯೇ

ನಾನಾ ವಿಘ್ನಾಂಶ್ಚ ರೋಗಾಂಶ್ಚ ನಾಶಯ ತ್ವಂ ಸದಾ ಮಮ |
ತ್ರಿ ಲಕ್ಷಂ ಹನುಮನ್ನಾಮಯೋ ಜಪೇದ್ಭಕ್ತಿ ತತ್ಪರ: ||೧೫||

ಭಾವಾರ್ಥ:- ನನ್ನ ನಾನಾ ವಿಧದ ಅಡ್ಡಿ‌ಆತಂಕಗಳನ್ನು; ರೋಗ ಭಾಧೆಗಳನ್ನು,ಸದಾ ನಾಶಗೊಳಿಸು ಸ್ವಾಮಿಯೇ. ಯಾವಾತನು ಮೂರು ಲಕ್ಷಸಂಖ್ಯೆ ಹನುಮ ನಾಮಗಳನ್ನು ಭಕ್ತಿಯುತನಾಗಿ ಜಪಿಸುವನೋ ಅವನಿಗೆ------

ರಾಜದ್ವಾರೇ ಮಹಾಘೋರೇ ಭಯಂ ನೈವಾರಿಸಂಕಟೇ |
ಬ್ರಹ್ಮರಾಕ್ಷಸಂ ಭೂತಾನಾಂ ಭಯಲೇಶೋ ನ ವಿದ್ಯತೇ |೧೬||

ಭಾವಾರ್ಥ:-ಅರಮನೆಯ ಮೂಲಕವಾಗಿ ಬರಬಹುದಾದ, ಮಹಾಘೋರ ಭೀತಿಯನ್ನು, ಶತ್ರುಗಳ ಕಾಟಗಳನ್ನು, ಬ್ರಹ್ಮರಾಕ್ಷಸ, ಭೂತಾದಿಗಳ ಭೀತಿಯನ್ನು  ಕಿಂಚಿತ್ತೂ ಇಲ್ಲದಂತೆ ಕಾಪಾಡುತ್ತಿರು ಸ್ವಾಮಿಯೇ.
*********************************************************************************
|| ಇತಿ ಶ್ರೀಮದಾಂಜನೇಯ ಸ್ತೋತ್ರಮ್ ||   || ಈ ರೀತಿಯಾಗಿ ಶ್ರೀಮದಾಂಜನೇಯ ಸ್ತೋತ್ರಗಳ ಭಾವಾರ್ಥವು ||
*********************************************************************************                     -೨೫-
|| ಶ್ರೀ ಆಂಜನೇಯ ಕವಚಂ ||
*********************

ಹರಿ: ಓಂ |
ಏಕದಾ ಸುಖಮಾಸೀನಂ ಶಂಕರಂ ಲೋಕ ಶಂಕರಂ |
ಪಪ್ರಚ್ಛ ಪಾರ್ವತೀ ಭಕ್ತ್ಯಾ ಕರ್ಪೂರಧವಳಂ ಶುಭಂ ||

ಶ್ರೀ ಪಾರ್ವತ್ಯುವಾಚ -

ಭಗವನ್ ದೇವದೇವೇಶ ಶಂಭೋ ಶಂಕರ ಶಾಶ್ವತ |
ಮಹಾದೇವ ಜಗನ್ನಾಥ ಶಿವ ವಿಶ್ವಾರ್ತಿಹಾರಕ ||೧||

ಸಂಗ್ರಾಮೇ ಸಂಕಟೇ ಘೋರೇ ಭೂತಪ್ರೇತಾದಿಕೇ ಭಯೇ |
ದು:ಖದಾವಾಗ್ನಿ ಸಂತಪ್ತೇ ಬಂಧನೇ ವ್ಯಾಧಿ ಸಂಕುಲೇ ||೨||

ದಾರಿದ್ರ್ಯೇಮಹತಿ ಪ್ರಾಪ್ತೇ ಕುಷ್ಠರೋಗೇ ಜ್ವರೇ ಭ್ರಮೇ |
ಚಾತುರ್ಥೀಕೇ ಸನ್ನಿಪಾತೇ ವಾತೇ ಪಿತ್ಥೇ ಕಫೇ ತಥಾ ||೩||

ಶೋಕಾಕುಲೇಷು ಮರ್ತ್ಯೇಷು ಕೇನ ರಕ್ಷಾ ಭವೇದ್ಧ್ರುವಂ |

ಶ್ರೀ ರುದ್ರ ಉವಾಚ -

ಶೃಣು ದೇವಿ ಪ್ರವಕ್ಷ್ಯಾಮಿ ಲೋಕಾನಾಂ ಹಿತ ಕಾಮ್ಯಯಾ |
ವಿಭೀಷಣಾಯ ರಾಮೇಣ ಪ್ರೇಮ್ಣಾದತ್ತಂಚ ಯತ್ಪುರಾ ||೪||

ಕವಚಂ ಕಪಿನಾಥಸ್ಯ ವಾಯು ಪುತ್ರಸ್ಯ ಧೀಮತ: |
ತದ್ಗುಹ್ಯಂ ಸಂಪ್ರವಕ್ಷ್ಯಾಮಿ ವಿಶೇಷಾಚ್ರುಣು ಸುಂದರಿ ||೫||

ಉದ್ಯದಾದಿತ್ಯಸಂಕಾಶ ಉದಾರ ಭುಜವಿಕ್ರಮಂ |
ಕಂದರ್ಪ ಕೋಟಿಲಾವಣ್ಯಂ ಸರ್ವ ವಿದ್ಯಾ ವಿಶಾರದಂ ||೬||

ಶ್ರೀರಾಮ ಹೃದಯಾನಂದಂ ಭಕ್ತ ಕಲ್ಪಮಹೀರುಹಂ |
ಅಭಯಂ ವರದಂ ದೋರ್ಭ್ಯಾಂ ಕಲಯೇ ಮಾರುತಾತ್ಮಜಂ ||೭||

ಶ್ರೀ ರಾಮ ರಾಮ ರಾಮೇತಿ ರಮೇರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ||೮||

ಉಲ್ಲಂಘ್ಯ ಸಿಂಧೋ ಸಲೀಲಂ ಸ್ಸಲಿಲಂ ಯಶ್ಶೋಕವಹ್ನಿಂ ಜನಕಾತ್ಮಜಾಯಾ: |
ಆದಾಯತೇ ನೈವದದಾಹ ಲಂಕಾಂ ನಮಾಮಿ ತಂ ಪ್ರಾಂಜಲೀರಾಂಜನೇಯಂ ||೯||

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಂ |
ವಾತಾತ್ಮತಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾನಮಮಿ ||೧೦||

ಭಾವಾರ್ಥ:-ಒಂದು ದಿನ ಲೋಕಕ್ಕೆ ಒಳಿತನ್ನು ಕರುಣಿಸುವವನಾಗಿ ಸುಖಾಸೀನನಾಗಿ ಸ್ವಚ್ಛ ಕರ್ಪೂರದ ಕಾಂತಿಯಿಂದ ಪ್ರಕಾಶಿಸುತ್ತಿರುವ ಶಂಕರನನ್ನು ಭಕ್ತಿಯಿಂದ ಪಾರ್ವತೀ ದೇವಿಯು ವಿನಂತಿಸುವಳು.
     ಶ್ರೀಪಾರ್ವತೀ ದೇವಿಯು ಹೇಳುವಳು:-"ಮಹಾದೇವನೇ; ದೇವರದೇವನೇ;ಶಂಭ್ವೇ;ಜಗನ್ನಾಥನೇ;ಶಂಕರನೇ;ಸಾಶ್ವತನೇ; ಶಿವನೇ; ಭೂಮಂಡಲದ ಆಪತ್ತು-ವಿಪತ್ತುಗಳ ಪರಿಹರಿಸುವ ಕರ್ತೃವೇ; ಯುದ್ಧದ ಸಮಯ, ಬಲವತ್ತರವಾದ ಸಂಕಟಗಳ ಕಾಲ, ಭೂತ ಪ್ರೇತಾದಿಗಳ ಭೀತಿ, ದು:ಖಕಾಳ್ಗಿಚ್ಚಿನ ಬೇಗೆ, ಬಂಧನದ ಸಂತಾಪ, ವ್ಯಾಧಿಗಳ ಸಮೂಹ,ಮಹತ್ತರವಾದ ದಾರಿದ್ರ್ಯ, ಕುಷ್ಠರೋಗ,ಜ್ವರ, ಮಾನಸಿಕ ಕಾಯಿಲೆ, ಚಾತುರ್ಥಿಕ ಜ್ವರ, ಸನ್ನಿಪಾತ ಜ್ವರ,ವಾತ ಪಿತ್ಥ ಕಪಾದಿ ತ್ರಿದೋಷಗಳೇ ಇತ್ಯಾದಿಗಳು ಬಂದೊದಗಿದಾಗ, ಅದೇ ರೀತಿ ಭೂಮಂಡಲದ ಜೀವಿಗಳು ಶೋಕಾಕ್ರಾಂತರಾದಾಗ ಸುರಕ್ಷಿತರಾಗುವ ಬಗೆ ಹೇಗೆ ಎಂಬುದನ್ನು ತಿಳಿಸುವಂತಹವರಾಗಬೇಕು." ಉತ್ತರರೂಪದಲ್ಲಿ ಶಿವನು ಅನ್ನುತ್ತಾನೆ:-" ದೇವಿಯೇ, ಗಮನವಿಟ್ಟು ಕೇಳುವಂತಹವಳಾಗು; ಲೋಕದ ಹಿತಾಭಿಲಾಷೆಯಿಂದ ಅಂದು ಶ್ರೀರಾಮನು ಪ್ರೀತಿಯಿಂದ ವಿಭೀಷಣನಿಗೆ ಇದನ್ನು ಹೇಳಿರುವುದಾಗಿದೆ.ಕಪಿಕುಲದೋಡೆಯ ವಿವೇಕಿಯಾಗಿರುವ ವಾಯುಪುತ್ರನ ಕವಚ ಸ್ತೋತ್ರ ಇದಾಗಿದ್ದು ಇದು ಗೋಪ್ಯವೂ ಆಗಿದು ವಿಶೇಷವಾಗಿದೆ. ಉದಯಿಸುವ ಕೋಟಿಸೂರ್ಯರನ್ನು ಹೋಲುವ ಗಂಭೀರನೂ,ಬಲಶಾಲಿಯಾದ ತೋಳುಗಳನ್ನು ಹೊಂದಿರುವವನೂ,ಕೋಟಿ ಮನ್ಮಥರರ ಲಾವಣ್ಯದಿಂದ ಶೊಭಿಸುತ್ತಿರುವವನೂ,ಸರ್ವ ವಿದ್ಯಾವಿಶಾರದನೂ,ಶ್ರೀರಾಮನ ಹೃದಯಕ್ಕೆ ಆನಂದದಾಯಕನೂ,ಪೂರ್ವ ನಿರ್ಧರಿತವಾಗಿ ಭೂಮಂದಲದಲ್ಲಿ ಜನಿಸಿದವನೂ,ಅಭಯದಾಯಕನೂ,ವರದಾಯಕನೂ,ಮಧುರ ದ್ವನಿಯನ್ನು ಹೊಂದಿರುವವನೂ,ಮಾರುತಿಯ ಪುತ್ರನೂ,ಆಗಿದ್ದು ಸುಂದರವೂ,ಮನೋಹರವೂ, ಸಹಸ್ರನಾಮಗಳಿಗೆ ಸರಿಸಮಾನ ಫಲದಾಯಕವೂ  ಅಭೀಷ್ಠ ಪ್ರದಾಯಕವೂ  ಆಗಿರುವ ಶ್ರೀರಾಮನ ನಾಮವನ್ನು ಶ್ರೀರಾಮ ರಾಮ ರಾಮಾ ಎಂಬುದಾಗಿ ಜಪಿಸುತ್ತಾ ಅತ್ಯಂತ ಸುಲಭವಾಗಿ ಸಮುದ್ರವನ್ನು ಉಲ್ಲಂಘಿಸಿ ಜನಕರಾಜನ ಪುತ್ರಿ ಜಾನಕಿಯ ಶೋಕಾಗ್ನಿಯನ್ನು ಕಿತ್ತು ತೆಗೆದು ಅದೇ ಅಗ್ನಿಯಿಂದ ಲಂಕೆಯನ್ನು ದಹಿಸಿದ ಶ್ರೀ ಆಂಜನೇಯನಿಗೆ ನಾನು ಶುದ್ಧಾಂತ:ಕರಣದಿಂದ ನಮಿಸುವೆ. ಮನೋವೇಗವನ್ನು ಹೊಂದಿರುವವನೂ ಜಿತೇಂದ್ರಿಯನೂ,ಬುದ್ಧಿಮತ್ತೆಯಲ್ಲಿ ಶ್ರೇಷ್ಠನೂ ವಾಯುಪುತ್ರನೂ, ಕಪಿಗಳ ಸಮೂಹದಲ್ಲಿ ಮುಖ್ಯನೂ,ಶ್ರೀರಾಮದೂತನೂ ಆಗಿರುವ ಹನುಮಂತನಿಗೆ ನಾನು ಶರಣಾಗುವೆನು.

*********************************************************************************
|| ಇತಿ ಶ್ರೀ ಶಿವಪ್ರೋಕ್ತ ಆಂಜನೇಯ ಕವಚಂ ||  || ಈ ರೀತಿಯಾಗಿ ಶ್ರೀ ಶಿವ ಪ್ರೋಕ್ತ ಆಂಜನೇಯ ಸ್ತೋತ್ರಗಳ ಭಾವಾರ್ಥವು ||
*********************************************************************************                  
 -೨೬-
|| ಯಂತ್ರೋದ್ಧಾರಕ ಶ್ರೀ ಮಾರುತಿ ಸ್ತೋತ್ರಂ ||
++++++++++++++++++++++++++++++++++++++++

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಂ|
ಶ್ರೀ ಮಾರುತಾತ್ಮ ಸಂಭೂತಂ ವಿದ್ಯುತ್ಕಾಂಚನ ಸನ್ನಿಭಮ್ ||೧||

ಭಾವಾರ್ಥ:-ಶ್ರೀರಾಮನಿಗೆ ದೇವತರು ಪಾರಿಜಾತ ಪುಷ್ಪದ ಕಂಪಿನ ಸುಖನ್ನುಂಟುಮಾಡುವವನೂ,ವಾಯುವಿನ  ಸುಪುತ್ರನೂ,ಬಂಗಾರದ ವರ್ಣದ ಬೆಳಕನ್ನು ಪ್ರವಹಿಸುವ ಶಕ್ತಿಯುಳ್ಳವನೂ ಆಗಿರುವ ಶ್ರೀರಾಮದೂತನಿಗೆ ನಮಿಸುವೆನು.

ಪೀನವೃತ್ತಂ ಮಹಾಬಾಹುಂ ಸರ್ವ ಶತ್ರು ನಿವಾರಣಂ |
ರಾಮಪ್ರಿಯತಮಂ ದೇವಂ ಭಕ್ತಸರ್ವೇಷ್ಟಪ್ರದಾಯಕಮ್  ||೨||

ಭಾವಾರ್ಥ:-ಪರಿಪುಷ್ಟನಾಗಿ ಮತ್ತು ದುಂಡಾಗಿರುವವನಾಗಿ ಶ್ರೇಷ್ಠವಾದ ತೊಡೆಗಳನ್ನು ಹೊಂದಿರುವ ಭಕ್ತಾದಿಗಳಿಗೆ ಸಮಸ್ತ  ಅಭೀಷ್ಟಿತಾರ್ಥಗಳನ್ನು ಕರುಣಿಸುವ ಸರ್ವ ಶತ್ರು ವಿನಾಶಕನಾಗಿರುವ ರಾಮಪ್ರಿಯನಿಗೆ ನಮನಗಳು.

ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್ |
ದ್ವಾತ್ರಿಂಶಲ್ಲಕ್ಷಣೋಪೇತಂ ಸ್ವರ್ಣ ಪೀಠ ವಿರಾಜಿತಮ್ ||೩||

ಭಾವಾರ್ಥ:-ವಿವಿಧ ರತ್ನಾಭರಣಗಳಿಂದ ಕೂಡಿ ಕುಂಡಲಾದಿಗಳಿಂದ ಅಲಂಕೃತನಾಗಿ ಬೆಳಗುತ್ತಾ ಮೂವತ್ತೆರಡು ಶುಭಲಕ್ಷಣಗಳಿಂದ  ಸಿಂಗರಿಸಲ್ಪಟ್ಟು, ಸುವರ್ಣ ಪೀಠದಲ್ಲಿ ಆಸೀನನಾಗಿರುವ ವಾಯು ಪುತ್ರನಿಗೆ ನಮಿಸುವೆ.

ಚತುರ್ಭುಜಂ ಮಹಾಕಾಯಂ ಸರ್ವ ವೈಷ್ಣವ ಶೇಖರಮ್ |
ಗದಾ ಭಯಕರೊ ಹಸ್ತೌ ಹೃದಿಸ್ತೋ ಸುಕೃತಾಂಜಲಿಮ್ ||೪||

ಭಾವಾರ್ಥ:-ನಾಲ್ಕು ಭುಜಗಳಿಂದ ಕೂಡಿದವನೂ, ಧೀರ್ಘವಾಗಿರುವ ಶರೀರವನ್ನೂ ಹೊಂದಿರುವವನೂ ಶ್ರೀಹರಿಯಭಕ್ತರಲ್ಲಿ  ಅಗ್ರೇಸರನೂ,ಭಯಕಾರಕವಾದಗದೆಯನ್ನು ಧರಿಸಿದವನೂ, ಹೃದಯದಲ್ಲಿ ಸತ್ಕಾರ್ಯಗಳಬೊಗಸೆಯನ್ನು ಹೊಂದಿರುವವನೂ‌ಅ  ಅದ ಹನುಮನಿಗೆ ನಮಿಸುವೆ.

ತ್ರಿಂಶತ್ಕೋಟಿ ಬೀಜ ಯುಕ್ತಂ ದ್ವಾದಶಾವರ್ತಿ ಸ್ಥಾಪಿತಮ್ |
ಪದ್ಮಾಸನ ಸ್ಥಿತಂ ದೇವಂ ಶಾಪಾನುಗ್ರಹ ಶಕ್ತಿದಮ್ ||೫||

ಭಾವಾರ್ಥ:-ಮೂವತ್ತಮೂರು ಕೋಟಿ ಮೂಲಕಾರಣಗಳನ್ನು ಹೊಂದಿರುವವನೂ ಹನ್ನೆರಡು ಬಾರಿ ಪ್ರತಿಷ್ಠೆಗೊಂಡವನೂ  ಪದ್ಮಾಸನದಲ್ಲಿ ಆರೂಢನಾಗಿರುವವನೂ ಶಾಪಾದಿಗಳನ್ನು ನೀಡಬಲ್ಲ ನಿಗ್ರಹಾನುಗ್ರಹ ಶಕ್ತಿಯುಳ್ಳವನೂ, ಆಗಿರುವ  ಮಾರುತಿಗೆ ನಮಿಸುವೆ.

ಹಂಸಮಂತ್ರ ಪ್ರವಕ್ತಾರಂ ಸರ್ವಜೀವ ನಿಯಾಮಕಮ್ |
ಪ್ರಭಂಜನ ಪ್ರವಾಚ್ಯೇಣ ಸರ್ವ ದುರ್ಮತ ಭಂಜಕಮ್  ||೬||

ಭಾವಾರ್ಥ:-ಹಂಸ ಮಂತ್ರೋಚ್ಛಾರಣೆ ಮಾಡುವವನೂ,ಸಮಸ್ತ ಜೀವಿಗಳ ನಿಯಾಮಕನೂ,ಬಿರುಗಾಳಿಯ ಶಬ್ದ ಮಾತ್ರದಿಂದಲೇ  ಸಮಸ್ತ ದುರ್ಬುದ್ಧಿಗಳನ್ನೂ ನಾಶಪಡಿಸುವವನೂ ಆಗಿರುವ ಹನುಮಂತನಿಗೆ ನಮಿಸುವೆ.

ಸರ್ವದಾಭೀಷ್ಟ ದಾತಾರಂ ಸತಾಂ ವೈ ದೃಢ ಮಾಹವೇ |
ಅಂಜನಾಗರ್ಭ ಸಂಭೂತಂ ಸರ್ವ ಶಾಸ್ತ್ರ ವಿಶಾರದಮ್ ||೭||

ಭಾವಾರ್ಥ:-ಸಮಸ್ತ ವಾಂಛಿತಾರ್ಥಗಳನ್ನು ದಯಪಾಲಿಸುವವನೂ,ಸದ್ಗುಣ ಸಂಪನ್ನನೂ ಸರ್ವ ಶಾಸ್ತ್ರಗಳಲ್ಲಿ ಪರಿಣತನೂ ಆಗಿರುವ  ಶ್ರೀರಾಮಪ್ರಿಯ ಹನುಮನಿಗೆ ನಮಿಸುವೆ.

ಕಪೀನಾಂ ಪ್ರಾಣದಾತಾರಂ ಸೀತಾನ್ವೇಷಣ ತತ್ಪರಮ್ |
ಅಕ್ಷಾದಿ ಪ್ರಾಣ ಹಂತಾರಂ ಲಂಕಾದಹನ ತತ್ಪರಮ್  ||೮||

ಭಾವಾರ್ಥ:-ಕಪಿಸಮೂಹಕ್ಕೆ ಪ್ರಾಣದಾತಾರನೂ ಸೀತಾನ್ವೇಷಣೆಗಾಗಿ ನಿರತನಾದವನೂ ಅಕ್ಷನೇ ಮೊದಲಾದವರ ಜೀವಹರಣ  ಗೈದವನೂ ಲಂಕೆಯ ದಹನದಲ್ಲಿ ನಿರತನಾದವನೂ ಆಗಿರುವ ಹನುಮನಿಗೆ ನಮಿಸುವೆ.

ಲಕ್ಷ್ಮಣಪ್ರಾಣದಾತಾರಂ ಸರ್ವ ವಾನರ ಯೂಥಪಮ್ |
ಕಿಂಕರ: ಸರ್ವ ದೇವಾನಾಮ್ ಜಾನಕೀನಾಥ ಕಿಂಕರಮ್  ||೯||

ಭಾವಾರ್ಥ:-ಸಂಜೀವಿನಿಯನ್ನೊದಗಿಸಿ ಲಕ್ಷ್ಮಣನ ಪ್ರಾಣವನ್ನು ರಕ್ಷಿಸಿದವನೂ ಸಮಸ್ತ ಕಪಿಕುಲಕ್ಕೆ  ಮುಖ್ಯನೂ,ಸಮಸ್ತ ದೇವಾನುದೇವತೆಗಳ ಪ್ರೀತಿಪಾತ್ರನೂ, ಶ್ರೀರಾಮನ ಪ್ರಿಯ ಸೇವಕನೂ ಆಗಿರುವ ವೀರ ಹನುಮಗೆ  ನಮಿಸುವೆನು.

ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥ ಗಿರೌ ಸದಾ |
ತುಂಗಾಂಭೋಧಿತರಂಗಸ್ಯ ವಾತೇನ ಪರಿಶೋಭಿತೇ ||೧೦||

ಭಾವಾರ್ಥ:-ಚಕ್ರತೀರ್ಥದ ದಕ್ಷಿಣ ದಿಗ್ಭಾಗದ ಪರ್ವತಪ್ರದೇಶದಲ್ಲಿ ಸರ್ವಕಾಲವೂ ವಾಸಿಸುತ್ತಾ ತುಂಗಾನದಿಯ ಮೇಲಿಂದ  ಹಾಯುವ ನಿರ್ಮಲ ನೀರಿನ ಸಂಪರ್ಕದ ತಂಗಾಳಿಯ ಸ್ಪರ್ಷದಿಂದ  ಆನಂದಭರಿತನಾಗಿರುವ ಆಂಜನೇಯನಿಗೆ ನಮಿಸುವೆ.

ನಾನಾದೇಶಗತೈ: ಸದ್ಬಿ: ಸೇವ್ಯಮಾನಂ ನೃಪೋತ್ತಮೈ: |
ದೂಪದೀಪಾದಿ ನೈವೇದ್ಯೈ: ಪಂಚಖಾದ್ಯೈಶ್ಚ ಶಕ್ತಿತ: ||೧೧||

ಭಾವಾರ್ಥ:-ರಾಜಾದಿರಾಜರಿಂದ ಹಾಗೂ ಸಜ್ಜನರಿಂದ ಯಥಾಸಾಧ್ಯ ಆರಾಧನೆಯನ್ನು ಸ್ವೀಕರಿಸುತ್ತಾ  ಪಂಚಭಕ್ಷ್ಯಾದಿಗಳನ್ನೂ,ಧೂಪದೀಪ ನೈವೇದ್ಯಾದಿಗಳನ್ನು ಅಂಗೀಕರಿಸಿ ಬಲಶಾಲಿಯಾಗಿರುವ ಅಂಜನಾತನಯನಿಗೆ ನಮಿಸುವೆ.

ಭಜಾಮಿ ಶ್ರೀ ಹನೂಮಂತಂ ಹೇಮಕಾಂತಿ ಸಮಪ್ರಭಂ |
ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಚ ವಿಧಾನತ: ||೧೨||

ಭಾವಾರ್ಥ:-ಸ್ವರ್ಣಪ್ರಭಾ ಕಾಂತಿಯಿಂದ ಬೆಳಗುತ್ತಾ ಪರಿಶುದ್ಧನಾಗಿರುವ ಶ್ರೀ ವ್ಯಾಸತೀರ್ಥ ಯತಿಗಳಿಂದ ಅತ್ಯಂತ  ಭಕ್ತಿ ಪುರಸ್ಸರವಾಗಿ ಪೂಜಿತನಾಗುವ ಮಾರುತಿಗೆ ನಮಿಸುವೆ.

ತ್ರಿವಾರಂ ಯ: ಪಠೇನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮ: |
ವಾಂಛಿತಂ ಲಭತೇಸ್ಭೀಷ್ಟಂ ಷಣ್ಮಾಸಾಭ್ಯಂತರೇ ಖಲು ||೧೩||

ಭಾವಾರ್ಥ:-ದಿನದ ಮೂರು ಸಂಧ್ಯಾಕಾಲಗಳಲ್ಲಿ ಭಕ್ತಿ ಶ್ರದ್ಧಾಪುರಸ್ಸರವಾಗಿ ಜ್ಞಾನಿಗಳೂ ವಿಪ್ರೋತ್ತಮರೂ ನಿರಂತರ  ಈ ಸ್ತೋತ್ರಗಳನ್ನು ಆರು ಮಾಸಗಳ ಕಾಲ ಪಾರಾಯಣ ಮಾಡಿದರೆ ಮನೋಭೀಷ್ಟ ಕಾಮನೆಗಳು ಸಿದ್ಧಿಯಾಗುವವು.

ಪುತ್ರಾರ್ಥೀ ಲಭತೇ ಪುತ್ರಂ ಯಶೋರ‍್ಥೀ ಲಭತೇ ಯಶ: |
ವಿದ್ಯಾರ‍್ಥೀ ಲಭತೇ ವಿದ್ಯಾಂ ಧನಾರ‍್ಥೀ ಲಭತೇ ಧನಮ್ ||೧೪||

ಭಾವಾರ್ಥ:-ಪುತ್ರಸಂತಾನಾಪೇಕ್ಷಿಗೆ ಪುತ್ರಸಂತಾನವೂ, ವಿಜಯಾಪೇಕ್ಷಿಗೆ ವಿಜಯವೂ,ವಿದ್ಯಾಭಿಲಾಷಿಗೆ  ವಿದ್ಯೆಯೂ,ಸಂಪದವನ್ನು ಅಪೇಕ್ಷಿಸುವವಗೆ ಸಂಪತ್ತೂ ದೊರಕುವುದು.

ಸರ್ವದಾ ಮಾಸ್ಸ್ತು ಸಂದೇಹೋ ಹರಿ: ಸಾಕ್ಷೀ ಜಗತ್ಪತಿ: |
ಯ: ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧೃವಮ್ ||೧೫||

ಭಾವಾರ್ಥ:-ಜಗನ್ನಿಯಾಮಕನಾಗಿರುವ ಶ್ರೀಹರಿಯ ಪ್ರತ್ಯಕ್ಷರೂಪವಾಗಿರುವ ಈ ಸ್ತೋತ್ರಗಳ ಫಲ ಪ್ರಾಪ್ತಿಯ  ವಿಚಾರವಾಗಿ ಸಂಶಯಪಟ್ಟರೆ ನರಕಭಾಜನರಾಗುವರು.

ಶ್ರೀಯಂತ್ರೋದ್ಧಾರಕಸ್ತೋತ್ರಂ ಷೋಡಶ ಶ್ಲೋಕ ಸಂಯುತಮ್ |
ಶ್ರವಣಂ ಕೀರ್ತನಂ ವಾ ಹಿ ಸರ್ವ ಪಾಪ ಪ್ರಮುಚ್ಯತೇ  ||೧೬||

ಭಾವಾರ್ಥ:-ಈ ರೀತಿಯಾಗಿ ಹದಿನಾರು ಸ್ತೋತ್ರಗಳಿಂದ ಕೂಡಿರುವ ಯಂತ್ರೋದ್ಧಾರಕ ಸ್ತೋತ್ರಗಳನ್ನು ಕೇಳಿದರೆ ಹಾಗೂ  ಹೇಳಿದರೆ ಅಂತಹವರ ಸಮಸ್ತ ಪಾಪಗಳೂ ನಿವಾರಣೆಯಾಗುವವು.
********************************************************
||ಇತಿ ಶ್ರೀವ್ಯಾಸರಾಜ ವಿರಚಿತ ಶ್ರೀಮಾರುತಿ ಯಂತ್ರೋದ್ಧಾರಕ ಸ್ತೋತ್ರಮ್ ||
*********************************************************

                 -೨೭-
ಕಾರ್ಯ ಸಿದ್ಧಿ ಆ೦ಜನೇಯ ಶ್ಲೋಕ:
======================

"ತ್ವಮಸ್ಮಿನ್ ಕಾರ್ಯ ನಿರ್ಯೋಗೇ ಪ್ರಮಾಣ೦ ಹರಿಸತ್ತಮ
ಹನೂಮಾನ್ ಯತ್ನಮಾಸ್ತಾಯ ದು:ಖ ಕ್ಷಯ ಕರೋಭವ."

ಭಾವಾರ್ಥ:-ಹೇ! ಆಂಜನೇಯ ಸ್ವಾಮಿಯೇ; ನೀನೇ ನಮ್ಮ ಎಲ್ಲಾ ಕಾರ್ಯಗಳಿಗೂ ಸಾಕ್ಷೀ ಭೂತನಾಗಿ ಸರ್ವ ಪ್ರಯತ್ನಗಳ ಮೂಲಕ ಸಕಲ ದು:ಖಗಳನ್ನೂ ನಿವಾರಿಸು.
**************************************************


              -೨೮-
ಆಂಜನೇಯ ಸ್ತುತಿ
**************
ಅಸಾಧ್ಯಂ ಸಾಧಕೋ ದೇವ
ಅಸಾಧ್ಯಂ ತಂ ಕಿಂ ವದಾ
ರಾಮದೂತ ಕೃಪಾಸಿಂಧು
ಮಮ ಕಾರ್ಯಂ ಸಾಧಯೇತ್ ಪ್ರಭು||೧||

ತುಲಿತಬಲಧಾಮಂ ಹೇಮಶೈಲಾಭ ದೇಹಂ
ದನುಜವನಕೃಶಾಂತಂ ಜ್ಞಾನಿನಾಮಾಗ್ರಗಣ್ಯಂ |
ಸಕಲಗುಣ ನಿಧಾನಂ ವಾನರ ಗಣಮೀಶಂ
ರಘುಪತಿ ಪ್ರಿಯಭಕ್ತಂ ವಾತಜಾತಂ ನಮಾಮಿ ||೨||

ವಾಯುಪುತ್ರ ಮಹಾವೀರಂ ತುಲಸೀವಾನರಂ ಅಂಜನಾನಂದ ವರ್ಧನಂ
ಸೀತಾರಾಮಪ್ರಿಯಂಭಕ್ತಂ ದೂತಂ ಹನುಮತೇ ನಮ:||
ಸುಗ್ರೀವ ಸಚೀವಾಯ ಕಪಿಶ್ರೇಷ್ಠಾಯ ಮಂತ್ರಿಣೇ |
ಸ್ವಾಮಿಭಕ್ತಾಯ ಶಾಂತಾಯ ಹನುಮಂತಾಯ ನಮೋ ನಮ: ||೩||

ಅಂಜನಾಗರ್ಭ ಸಂಭೂತೋ ವಾಯುಪುತ್ರೋ ಮಹಾಬಲ|
ಕುಮಾರೋ ಬ್ರಹ್ಮಚಾರೀಚ ಹನುಮಂತಾಯ ನಮೋ ನಮ: ||೪||

ಭಾವಾರ್ಥ:-ಅಸಾಧ್ಯವಾದುದನ್ನು ಸಾಧಿಸಲು ಶಕ್ತನಾಗಿರುವ ದೇವನೇ ನಿನಗೆ ಅಸಾಧ್ಯವೆನಿಸುವುದು ಯಾವುದಿದೆ? ಹೇ! ರಾಮದೂತನೇ! ಕೃಪಾಸಿಂಧುವೇ; ನನ್ನ ಕಾರ್ಯಗಳು ಸಿದ್ಧಿಯಾಗುವಂತೆ ಕರುಣಿಸು.ಮೇರು ಪರ್ವತಕ್ಕೆ ಸಾಟಿಯಾದ ಶಕ್ತಿ, ಕಾಂತಿಯ ಶರೀರವನ್ನು ಹೊಂದಿರುವವನೇ,ರಕ್ಕಸರ ತಾಣಕ್ಕೆ ಅಗ್ನಿಸ್ವರೂಪನಾದವನೇ,ಸಮಸ್ತ ಗುಣಗಳಿಗೆ ಕಾರಣಿಭೂತನಾಗಿರುವ ವಾನರ ಸಮೂಹಾಧೀಶನೇ, ರಘುಪತಿಗೆ ಪ್ರಿಯನಾದವನೇ ವಾಯುಪುತ್ರನೇ ನಮಿಸುವೆನು. ವಾಯು ಪುತ್ರನೂ,ಮಹಾವೀರನೂ,ಅಂಜನಾದೇವಿಯ ಆನಂದವನ್ನು ಹೆಚ್ಚಿಸುವಾತನೂ,ಸೀತಾರಾಮರಿಗೆ ಪ್ರೀತಿಯ ಭಕ್ತನೂ,ದೂತನೂ ಆಗಿರುವ ಹನುಮಂತನೇ ನಿನಗೆ ನಮನಗಳು.ಸುಗ್ರೀವನ ಮಂತ್ರಿಯೂ, ಕಪಿಸಮೂಹದಲ್ಲಿ ಶ್ರೇಷ್ಠ ಸಚೀವನೂ, ಸ್ವಾಮಿ ಭಕ್ತನೂ ಶಾಂತನೂ ಆಗಿರುವ ಹನುಮಂತನೇ ನಮೋ ನಮ:. ಅಂಜನಾದೇವಿ ಗರ್ಹದಲಿ ಜನಿಸಿದವನೂ, ವಾಯು ಪುತ್ರನೂ, ಮಹಾಬಲಶಾಲಿಯೂ,ಕುಮಾರನೂ ,ಬ್ರಹ್ಮಚಾರಿಯೂ, ಆಗಿರುವ ಹನುಮಂತನೇ ನಿನಗಿದೋ ನನ್ನ ನಮನಗಳು.ಪುನರಪಿ ನಮನಗಳು.

*********************************************************************************                            || ಇತಿ ಆಂಜನೇಯ ಸ್ತುತಿ ||   || ಈ ರೀತಿಯಾಗಿ ಆಂಜನೇಯ ಸ್ತುತಿಗಳ ಭಾವಾರ್ಥವು ||
*********************************************************************************              -೨೯-

ಓಂ ನಮೋ ಭಗವತೇ ಶ್ರೀ ವೀರಹನುಮತೇ
ಪ್ರಬಲ ಪರಾಕ್ರಮಾಯ ಅಕ್ರಾಂತ ದಿಗ್ಮಂಡಲಾಯ
ಶೋಭಿತಾನನಾಯ ಧವಲೀಕೃತವಜ್ರ ದೇಹಾಯ
ಜಗಚ್ಚಿಂತಿತಾಯ ರುದ್ರಾವತಾರಾಯ ಲಂಕಾಪುರೀ ದಾಹನಾಯ
ಉದಧಿ ಲಂಘನಾಯ ಸೇತು ಬಂಧನಾಯ ದಶಕಂಠಶಿರಾಕ್ರಾಂತಾಯ
ಸೀತಾಶ್ವಾಸನಾಯ ಅನಂತಕೋಟಿ ಬ್ರಹ್ಮಾಂಡನಾಯಕಾಯ
ಮಹಾಬಲಾಯ ವಾಯುಪುತ್ರಾಯ ಅಂಜನಾದೇವಿ ಗರ್ಭಸಂಭೂತಾಯ
ಶ್ರೀ ಸೀತಾರಾಮ ಲಕ್ಷ್ಮಣಾನಂದಕರಾಯ ಕಪಿಸೈನ್ಯ ಪ್ರಿಯಕರಾಯ ಸುಗ್ರೀವಸಹಾಯ ಕಾರ್ಯಕಾರಣ ಸಾಧಕಾಯ ಪರ್ವತೋತ್ಪಾಟನಾಯ ಕುಮಾರ ಬ್ರಹ್ಮಚಾರಿಣೇ ಗಂಭೀರ ಶಬ್ದೋದಯಾಯ ||

||ಶ್ರೀಮತೇ ಪ್ರಸನ್ನಾಂಜನೇಯಾಯ ನಮ:||

ಭಾವಾರ್ಥ:-ಶ್ರೀವೀರ ಹನುಮನೂ,ಬಲಿಷ್ಟನೂ,ಪರಾಕ್ರಮಶಾಲಿಯೂ,ಯಾವುದೇ ದಿಕ್ಕುಗಳ ವಲಯದಿಂದ ಆಕ್ರಮಿಸಲಾಸಾಧ್ಯನೂ,ಶೋಭಿಸಲ್ಪಡುವ ಮೊಗದವನೂ,ಶುಭ್ರವಾಗಿರುವ ವಜ್ರಕಾಯನೂ,ಜಗತ್ತಿನ ಕುರಿತಾಗಿ ಚಿಂತಿಸುವವನೂ, ರುದ್ರಾವತಾರಿಯೂ,ಲಂಕಾಪಟ್ಟಣವನ್ನು ದಹಿಸಿದವನೂ, ನೀರಿನಸಮೂಹವನ್ನು ಲಂಘಿಸಿದವನೂ,ಸೇತುವನ್ನು ಬಂಧಿಸಿದವನೂ,ದಶಕಂಠನ ಶಿರವನ್ನು ಕತ್ತರಿಸಿದವನೂ,ಸೀತಾಮಾತೆಗೆ ಭರವಸೆಯನ್ನು ನೀಡಿದವನೇ, ಅನಂತಕೋಟಿ ಬ್ರಹ್ಮಾಂಡನಾಯಕನೂ,ಮಹಾಬಲಶಾಲಿಯೂ,ವಾಯು ಪುತ್ರನೂ, ಅಂಜನಾದೇವಿಯ ಗರ್ಭದಲ್ಲಿ ಜನಿಸಿದವನೂ,ಶ್ರೀಸೀತಾರಾಮಲಕ್ಷ್ಮಣರಿಗೆ ಆನಂದವನ್ನುಂಟುಮಾಡುವವನೂ,ಕಪಿಸೈನ್ಯಕ್ಕೆ ಒಳಿತನ್ನು ಮಾಡುವವನೂ,ಸುಗ್ರೀವನ ಸಹಾಯಕನೂ,ಉದ್ಯೋಗಗಳಿಗೆ ಪ್ರೇರಣೆ ನೀಡುವವನೂ, ಸಾಧಕನೂ,ಪರ್ವತವನ್ನು ಕಿತ್ತವನೂ, ಕುಮಾರನೂ, ಬ್ರಹ್ಮಚಾರಿಯೂ,ಗಂಭೀರವಾಗಿರುವ ಶಬ್ದವನ್ನು ಮೂಡಿಸುವವನೂ ಆಗಿರುವ ಶ್ರೀ ಭಗವದ್ ಸ್ವರೂಪೀ ಆಂಜನೇಯನಿಗೆ ನಮನಗಳು.
*********************************************************************************             -೩೦-
|| ಓಮ್ ಹರಿಮರ್ಕಟಮರ್ಕಟಾಯ ನಮ: ||

ಮರ್ಕಟೇಶ ಮಹೋತ್ಸಾಹ ಸೀತಾ ಶೋಕ ವಿನಾಶಕ |
ಶತ್ರೂನ್ ಸಂಹರ ಮಾಂ ರಕ್ಷಶ್ರಿಯಂ ದಾಪಯ ದೇಹಿಮೇ||

ಆಪನ್ನಾಖಿಲ ಲೋಕಾರ್ತಿಹಾರಿಣೇ ಶ್ರೀ ಹನುಮತೇ |
ಅಕಸ್ಮಾದಾಗತೋತೋತ್ಪಾತ ನಾಶನಾಯ ನಮೋಸ್ತು ತೇ ||

ಅಂಜನಾನಂದನಂ ವೀರಂ ಜಾನಕೀ ಶೋಕನಾಶನಂ |
ಕಪೀಶಮಕ್ಷಹಂತಾರಂ ವಂದೇ ಲಂಕಾಭಯಂಕರಂ ||

|| ಶ್ರೀಮತೇ ಆಂಜನೇಯಾಯ ನಮ:||

ಭಾವಾರ್ಥ:-ವಾನರಾಧೀಶನೂ, ಮಹಾ‌ಉತ್ಸಾಹಶಾಲಿಯೂ ಸೀತಾಶೋಕವನ್ನು ಪರಿಹರಿಸಿದವನೂ,ಆಗಿರುವವನೇ ಶತ್ರುಗಳನ್ನು ನಾಶಮಾಡಿ  ಆಪತ್ತಿನಿಂದ ನನಗೆ ರಕ್ಷಣೆಯನ್ನು ಕರುಣಿಸು. ಸಂಕಟಕ್ಕೊಳಗಾದ ಸಕಲ ಲೋಕದ ದು:ಖವನ್ನು ಪರಿಹರಿಸುವ ಆಂಜನೇಯ ಸ್ವಾಮಿಯೇ, ಆಕಸ್ಮಿಕವಾಗಿ ಆಗಮಿಸುವ ಮಹಾ ಗಂಡಾಂತರಗಳನ್ನು ನಾಶಗೊಳಿಸುವನೇ ನಿನಗಿದೋ ನನ್ನ ನಮನಗಳು. ಅಂಜನಾದೇವಿಯ ಪುತ್ರನೂ ವೀರನೂ ಜಾನಕೀ ಶೋಕನಾಶಕನೂ ಕಪಿಸಮೂಹಮುಖ್ಯನೂ, ರಾವಣನ ಸುತ ಅಕ್ಷಕುಮಾರನ ಸಂಹಾರಕನೂ, ಲಂಕಾರಾಷ್ಟ್ರಕ್ಕೆ ಭಯಂಕರನೂ ಆಗಿರುವ ಹನುಮನಿಗಿದೋ ನನ್ನ ನಮನಗಳು.
*********************************************************************************            - ೩೧-
|| ಹನುಮಾನ್ ಸ್ಪುಟ ಸ್ತೋತ್ರ ಶ್ಲೋಕಾ: ||
***************************

ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ || ೧ ||

ಯತ್ರ ಯತ್ರ ರಘುನಾಥ ಕೀರ್ತನಮ್ |
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಖಾಷ್ಠವಾರಿ ಪರಿಪೂರ್ಣ ಲೋಚನಮ್ |
ಮಾರುತಿಂ ನಮತ ರಾಕ್ಷಸಾಂತಕಮ್ || ೨ ||

ಬುಧ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋವತ್ |
ಸುದಾರ್ಢ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್ || ೩ ||

ಉದ್ಯನ್ ಮಾರ್ತಾಂಡಕೋಟಿ ಪ್ರಕಟ ರುಚಿಯುತಂ ಚಾರು ವೀರಾಸನಸ್ಥಂ |
ಮೌಂಜೀಯಜ್ಞೋಪವೀತಾಭರಣ ರುಚಿ ಶಿಖಂ ಶೋಭಿತಂ ಕುಂಡಲಾಂಕಮ್ |
ಭಕ್ತಾನಾಮಿಷ್ಠದಂ ತಂ ಪ್ರಣತ ಮುನಿಜನಂ ವೇದನಾದ ಪ್ರಮೋದಂ |
ದ್ಯಾಯೇದ್ದೇವಂ ಪ್ಲವಗಕುಲಪತಿಂ ಗೋಷ್ಪರೀ ಭೂತವಾರ್ಧಿಮ್ || ೪ ||

ಭಾವಾರ್ಥ:-ಮನೋವೇಗವುಳ್ಳವನೂ, ವಾಯುವೇಗದವನೂ, ಇಂದ್ರಿಯಗಳನ್ನು ಜಯಿಸಿದವನೂ , ಬುದ್ಧಿವಂತರಲ್ಲಿ ಶ್ರೇಷ್ಠನೂ, ವಾಯುವಿನ ಆತ್ಮಜನೂ, ಕಪಿ ಸಮೂಹದನಾಯಕನೂ, ಶ್ರೀರಾಮನ ಸೇವಕನೂ ಆಗಿರುವ ಹನುಮಂತನಿಗೆ ನಮಿಸುವೆ. ಎಲ್ಲೆಲ್ಲ ಶ್ರೀರಾಮನ ಸಂಕೀರ್ತನೆ ನಡೆಯುವುದೋ ಅಲ್ಲೆಲ್ಲಾ ಶಿರಸ್ಸಿನ ಮೇಲೆ ಅಂಜಲೀ ಬದ್ಧನಾಗಿರುವ, ೧೮ ನಿಮೆಷ [ಕ್ಷಣ]ಗಳಲ್ಲಿ ಸಾಗರವನ್ನು ದಾಟಿ ತುಂಬಿರುವ ನೋಟವನ್ನು ಹೊಂದಿರುವವನಾದ ರಾಕ್ಷಸ ಕುಲನಾಶಕನಿಗೆ ನಮಿಸುವೆ. ಬುದ್ಧಿ,ಬಲ,ಯಶಸ್ಸು, ಧೈರ್ಯ, ನಿರ್ಭಯ, ದೇಹ ಧಾರ್ಢ್ಯ, ವಾಕ್ಸಿದ್ಧಿಗಳು ಹನುಮ ಸ್ಮರಣೆಯಿಂದ ಲಭ್ಯವಾಗುವವು.ಉದಯಿಸುವ ಕೋಟಿ ಸೂರ್ಯ ತೇಜಸ್ಸಿನಿಂದ ಕೂಡಿ ಮನೋಹರವಾಗಿ ವೀರಾಸನ ಸ್ಥಿತನಾಗಿ, ಮುಂಜಿ, ಯಜ್ಞೋಪವೀತಾದಿ ಆಭರಣಗಳಿಂದ ಕಾಂತಿಯುಕ್ತನಾಗಿ, ಜಟೆಯಿಂದ ಶೋಭಿಸಲ್ಪಡುತ್ತಿರುವವನಾಗಿ, ಕಡಗದ ಗುರುತಿನಿಂದ ಕೂಡಿ ಭಕ್ತರಿಗೆ ಇಷ್ಟಾರ್ಥದಾಯಕನಾಗಿ ಮುನಿಜನರಿಂದ ವಂದಿಸಲ್ಪಡುವವನಾಗಿ, ವೇದಗಳ ಸ್ವರಗಳಿಂದ ಮುದಗೊಳ್ಳುವವನಾಗಿರುವ ಕಪಿಕುಲವರೇಣ್ಯ ಸೂರ್ಯನಂತೆ ಎಲ್ಲೆಡೆ ಸಂಚರಿಸುವವನೂ ಸಾಗರದಂತೆ ವಿಶಾಲನೂ ಆಗಿರುವ ಆ ದೇವನನ್ನು ಸದಾ ಧ್ಯಾನಿಸಬೇಕು.

*********************************************************************************                   || ಇತಿ ಶ್ರೀ ಹನುಮಾನ್ ಸ್ಪುಟ ಶ್ಲೋಕಾ:  ||
  || ಈ ರೀತಿಯಾಗಿ ಶ್ರೀ ಹನುಮಾನ್ ಸ್ಪುಟ ಶ್ಲೋಕಂಗಳ ಭಾವಾರ್ಥವು  ||
*********************************************************************************                                                                  -೩೨-
ಪಂಚವದನಾಯವಿದ್ಮಹೇ ಮಹಾಬಲಾಯ ಧೀ ಮಹಿ|
ತನ್ನೋ ಹನುಮಾನ್ ಪ್ರಚೋದಯಾತ್||

ಭಾವಾರ್ಥ:-ಪಂಚಮುಖಿಯನ್ನು ಅರಿತುಕೊಳ್ಳಬಯಸುವೆವು.ಆತನನ್ನು ಅನುಗ್ರಹ್ಸಲೋಸುಗ ಬೇಡಿಕೊಳ್ಳುತ್ತಿರುವೆವು. ಅಂತಹಾ ಮಹಿಮಾನ್ವಿತನಾಗಿರುವ ಹನುಮನು ನಮಗೆ ಸದಾ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿರಲಿ.

*********************************************************************************


                           
           

No comments:

Post a Comment