Saturday, 19 April 2014

ಸ್ತೋತ್ರ ಮಂದಾರ

               ಶ್ರೀ ಕೃಷ್ಣಸ್ತೋತ್ರಗಳು
                ***************
                        -೧-

 || ವಸುದೇವಕೃತ ಶ್ರೀಕೃಷ್ಣಸ್ತೋತ್ರಮ್ ||
 ********************************
ವಸುದೇವ ಉವಾಚ:- 

ವಸುದೇವ ಹೇಳುವನು:-

ತ್ವಾಮತೀಂದ್ರಿಯ ಮವ್ಯಕ್ತಮಕ್ಷರಂ ನಿರ್ಗುಣಂ ವಿಭು: |
ಧ್ಯಾನಾಸಾಧ್ಯಂಚ ಸರ್ವೇಷಾಂ ಪರಮಾತ್ಮಾ ನಮೀಶ್ವರಮ್  ||೧||

ಭಾವಾರ್ಥ:-ನೀನು ಇಂದ್ರಿಯಗಳಿಗೆ ತಿಳಿಯಲು ಅಸಾಧ್ಯನಾಗಿರುವವನು. ಅವ್ಯಕ್ತರೂಪನು. ಅವಿನಾಶಿಯು.ತ್ರಿಗುಣರಹಿತನು.ಸರ್ವತ್ರ ವ್ಯಾಪಿಸಿಕೊಂಡಿರುವವನು.ಧ್ಯಾನದಿಂದ ಆರಿಗೂ ವಶವಾಗದವನು.ಎಲ್ಲರಿಗೂ ಒಡೆಯನಾಗಿರುವ ಪರಮಾತ್ಮನೇ ನೀನಾಗಿರುವೆ.

ಸ್ವೇಚ್ಛಾಮಯಂ ಸರ್ವರೂಪಂ ಸ್ವೇಚ್ಛಾರೂಪಧರಂ  ಪರಮ್ |
ನಿರ್ಲಿಪ್ತಂ ಪರಮಮ್ ಬ್ರಹ್ಮ ಬೀಜರೂಪಂ ಸನಾತನಮ್ ||೨||

ಭಾವಾರ್ಥ:-ನೀನು ತನ್ನಿಚ್ಛೆಯುಳ್ಳವನು.ಸಮಸ್ತಸ್ವರೂಪಿಯು.ನಿನ್ನ ಸ್ವಂತ ಬಯಕೆಯಂತೆ ರೂಪನ್ನು ಧರಿಸುವವನು. ಮಹಾತ್ಮನು.ಅತೀಹೆಚಾಗಿ ಯಾವುದನ್ನೂ ಅಂಟಿಸಿಕೊಳ್ಳದವನು. ಸನಾತನ ಬೀಜ ಸ್ವರೂಪನಾಗಿ ಪರಬ್ರಹ್ಮನೇ ನೀನಾಗಿರುವೆ.

ಸ್ಥೂಲಾತ್ ಸ್ಥೂಲತರಂ ಪ್ರಾಪ್ತಮತಿ ಸೂಕ್ಷ್ಮಮದರ್ಶನಮ್ |
ಸ್ಥಿತಂ ಸರ್ವ ಶರೀರೇಷು ಸಾಕ್ಷಿರೂಪಮದೃಶ್ಯಕಮ್ ||೩||

ಭಾವಾರ್ಥ:-ನೀನು ಸ್ಥೂಲಕ್ಕಿಂತಲೂ ಅತಿ ಸ್ಥೂಲನು.ಸರ್ವ ವ್ಯಾಪಿಯಾದರೂ ಅತಿ ಸೂಕ್ಷ್ಮನು. ದೃಷ್ಟಿಗೆ ಗೋಚರವಾಗದವನು.ಸಮಸ್ತ ದೇಹಗಳಲ್ಲಿಯೂ ಸಾಕ್ಷಿರೂಪವಾಗಿ ನೆಲೆಯಾಗಿರುವವನು. ಅಂತೆಯೇ  ಅದೃಶ್ಯನು.

ಶರೀರವಂತಂ ಸಗುಣಮಶರೀರಂ ಗುಣೋತ್ಕರಮ್ |
ಪ್ರಕೃತಿಂ ಪ್ರಕೃತೀಶಂ ಚ ಪ್ರಾಕೃತಂ ಪ್ರಕೃತೇ ಪರಮ್ ||೪||

ಭಾವಾರ್ಥ:-ಸಾಕಾರ,ನಿರಾಕಾರ,ಸಗುಣ,ನಿರ್ಗುಣಗಳ ಸಮೂಹವೇ ನೀನಾಗಿರುವೆ. ಪ್ರಕೃತಿಯೇ ನೀನಾಗಿ ಪ್ರಕೃತಿಯ ನಿಯಮಗಳನ್ನು ರೂಪಿಸುವವನಾಗಿರುವೆ. ಪ್ರಕೃತಿಯಲ್ಲಿನ ಸಮಸ್ತ ವಸ್ತುಗಳಲ್ಲಿ ವ್ಯಾಪಿಸಿರುವೆ.ಆದರೂ ನೀನು ಪ್ರಕೃತಿಯಿಂದ ಹೊರಗಿನ ಸ್ಥಿತಿಗತಿಗಳಿಗೆ ಕಾರಣೀಭೂತನಾಗಿರುವೆ.

ಸರ್ವೇಶಂ ಸರ್ವರೂಪಂ ಚ ಸರ್ವಾಂತರಮವ್ಯಯಮ್ |
ಸರ್ವಾಧಾರಂ ನಿರಾಧಾರಂ ನಿರ್ವ್ಯೂಹಂ ಸ್ತೌಮಿ ಕಿಂ ವಿಭುಮ್  ||೫||

ಭಾವಾರ್ಥ:-ಒಡೆಯನೇ!ನೀನು ಸಮಸ್ತಕ್ಕೂ ಅಧೀಶನಾಗಿರುವೆ.ಸಮಸ್ತರೂಪನೂ ನೀನಾಗಿರುವೆ.ನೀನುಎಲ್ಲೆಡೆಯಲ್ಲಿಯೂ ವ್ಯಾಪಿಸಿಕೊಂಡಿರುವವನು. ನೀನು ನಾಶರಹಿತನು. ಸಮಸ್ತ ಸೃಷ್ಟಿಗೂ ಆಧಾರನು. ಅಂತೆಯೇ ಆಧಾರ ವಿರಹಿತನು. ನೀನು ತರ್ಕಗಳಿಗೆ ಆತೀತನಾದವನು. ಹೀಗಿರುವ ನಿನ್ನನ್ನು ನಾನದೆಂತು ಸ್ತುತಿಸಲಿ?

ಅನಂತ: ಸ್ತವನೇsಶಕ್ತೋsಶಕ್ತಾ ದೇವೀ ಸರಸ್ವತಿ |
ಯಂ ಸ್ತೋತುಮಸಮರ್ಥಶ್ಚ ಪಂಚವಕ್ತೃ: ಷಡಾನನ:  ||೬||

ಭಾವಾರ್ಥ:-ಸಹಸ್ರ ನಾಲಿಗೆಯುಳ್ಳ ಭಗವಾನ್ ಅನಂತನೆಂಬ ಮಹಾಶೇಷನು ಕೂಡಾ ನಿನ್ನನ್ನು ಸ್ತುತಿಸಲು ಸಾಮರ್ಥ್ಯವಿಲ್ಲದವನಾಗಿರುವನು.ವಾಗ್ದೇವಿ ಶಾರದೆಗೂ ನಿನ್ನನ್ನು ಸ್ತುತಿಸಲು ಸಾಮರ್ಥ್ಯವಿಲ್ಲ. ಪಂಚವದನ ಮಹಾದೇವನೂ, ಆರುಮೊಗಗಳುಳ್ಳ ಕಾರ್ತಿಕೇಯನೂ ನಿನ್ನನ್ನು ಸ್ತುತಿಸಲು ಅಸಮರ್ಥರಾದವರೇ ಆದವರು.

ಚತುರ್ಮುಖೋ ವೇದಕರ್ತಾ ಯಂ ಸ್ತೋತುಮಕ್ಷಮ: ಸದಾ |
ಗಣೇಶೋ ನ ಸಮರ್ಥಶ್ಚ ಯೋಗೀಂದ್ರಾಣಾಂ ಗುರೋರ್ಗುರು: ||೭||

ಭಾವಾರ್ಥ:-ವೇದಗಳನ್ನು ವ್ಯಕ್ತಪಡಿಸುವ ಬ್ರಹ್ಮನು ಕೂಡಾ ನಿನ್ನ ಸ್ತುತಿಸುವಿಕೆಯಲ್ಲಿ ಅಯೋಗ್ಯನೆನಿಸಿರುವವನು. ಹಾಗೆಯೇ ಮುನಿಶ್ರೇಷ್ಠರ ಗುರುಗಳಿಗೆ ಗುರುವಾದ ಶ್ರೀಗಣೇಶನು ಕೂಡಾ ನಿನ್ನನ್ನು ಸ್ತುತಿಸಲು ಅಸಮರ್ಥನಾಗಿರುವನು.

ಋಷಯೋ ದೇವತಾಶ್ಚೈವ ಮುನೀಂದ್ರ ಮನುಮಾನವಾ: |
ಸ್ವಪ್ನೇ ತೇಷಾಮದೃಶ್ಯಂ ಚ ತ್ವಾಮೇವಂ ಕೀ ಸ್ತುವಂತಿ ತೇ ||೮||

ಭಾವಾರ್ಥ:-ಹೀಗಿರುವಾಗ ಋಷಿಮುನಿಗಳು, ದೇವತೆಗಳು, ಶ್ರೇಷ್ಟ ಯೋಗಿಗಳು, ಶಾಸ್ತ್ರಕಾರರು, ಮಾನವರು ಅದೆಂತು ಸ್ತುತಿಸಬಲ್ಲರು? ನಿನ್ನನ್ನು ಅವರು ಎಂದೂ ಕಂಡಿರಲಾರರು.

ಶ್ರುತಯ: ಸ್ತವನೇsಶಕ್ತಾ: ಕಿಂ ಸ್ತುವಂತಿ ವಿಪಶ್ಚಿತ: |
ವಿಹಾಯೈವಂ ಶರೀರಂ ಚ ಬಾಲೋ ಭವಿತು ಮಹರ್ಸಿ ||೯||

ಭಾವಾರ್ಥ:-ವೇದಗಳೇ ನಿನ್ನನ್ನು ಸ್ತುತಿಸಲು ಶಕ್ತವಾಗದಿರುವಾಗ ವಿದ್ವಜ್ಜನರಾದರೂ ಅದೆಂತು ಸ್ತುತಿಸಲು ಸಾಧ್ಯ? ನೀನು ನಿನ್ನ ಈ ಶ್ರೇಷ್ಠಶರೀರವನ್ನು ತ್ಯಜಿಸಿ ಮಗುವಿನ ಸ್ವರೂಪವನ್ನು ಧರಿಸಬೇಕು ಎಂಬುದು ಮಾತ್ರಾ ನನ್ನ ಅರಿಕೆ.

ವಸುದೇವಕೃತಂ ಸ್ತೋತ್ರಂ ತ್ರಿಸಂಧ್ಯಂ ಯ: ಪಠೇನ್ನರ: |
ಭಕ್ತಿದಾಸ್ಯಮವಾಪ್ನೋತಿ ಶ್ರೀಕೃಷ್ಣ ಚರಣಾಂಬುಜೇ ||೧೦||

ಭಾವಾರ್ಥ:-ವಸುದೇವನಿಂದ ರಚಿತವಾದ ಈ ಸ್ತೋತ್ರವನ್ನು ಮೂರು ಸಂಧ್ಯಾಕಾಲಗಳಲ್ಲಿ ಪಠಿಸುವವರು ಶ್ರೀಕೃಷ್ಣನ ಚರಣಾರವಿಂದಗಳ ಊಳಿಗತ್ವದ ಮಹಾಭಾಗ್ಯವನ್ನು ಪಡೆಯುವರು.

ವಿಶಿಷ್ಟಪುತ್ರಂ ಲಭತೇ ಹರಿದಾಸಂ ಗುಣಾನ್ವಿತಂ |
ಸಂಕಟಂ ನಿಸ್ತರೇತ್ ತೂರ್ಣಂ ಶತ್ರುಭೀತ್ಯಾ ಪ್ರಮುಚ್ಯತೇ ||೧೧||

ಭಾವಾರ್ಥ:-ಆ ತೆರನಾಗಿ ದಾಸ್ಯತ್ವವನ್ನು ಪಡೆವಾತನಿಗೆ ಶ್ರೇಷ್ಠಗುಣದ ಹರಿಭಕ್ತನಾಗಿರುವ ಸುಪುತ್ರ ಭಾಗ್ಯವು ದೊರಕುವುದು. ಆತನು ಸಮಸ್ತ ಸಂಕಷ್ಟಗಳಿಂದ ಪಾರಾಗುವನು. ಆತನನ್ನು ಶತ್ರುಗಳ ಭೀತಿಯು ಕಾಡಲಾರದು.
*********************************************************************
               || ಇತಿ ವಸುದೇವಕೃತ ಶ್ರೀಕೃಷ್ಣಸ್ತೋತ್ರಮ್ ||
 || ಈ ರೀತಿಯಾಗಿ ವಸುದೇವನಿಂದ ರಚಿಸಲ್ಪಟ್ಟ ಶ್ರೀಕೃಷ್ಣಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
                                  -೨-
  || ಬಾಲಕೃತಂ ಕೃಷ್ಣಸ್ತೋತ್ರಮ್ ||
 **************************
ಬಾಲಾ ಊಚು: |

ಬಾಲಕನು ಹೇಳುವನು:-

ಯಥಾ ಸಂರಕ್ಷಿತಂ ಬ್ರಹ್ಮನ್ ಸರ್ವಾಪತ್ ಸ್ವೇವ ನ: ಕುಲಮ್ |
ತಥಾ ರಕ್ಷಾಂ ಕುರು ಪುನರ್ದಾ ವಾಗ್ನೇಮರ್ಧುಸೂದನ ||೧||

ಭಾವಾರ್ಥ:-ಎಲೈ ಹಿರಣ್ಯಗರ್ಭನೇ!ಸಮಸ್ತ ಆಪತ್ತುಗಳಿಂದ ನಮ್ಮ ವಂಶವನ್ನು ಯಾವ ರೀತಿಯಲ್ಲಿ ಸಂರಕ್ಷಿಸಿರುವಿಯೋ ಅದೇ ರೀತಿಯಾಗಿ ಈವಾಗ ಪುನ; ನಮ್ಮನ್ನು ಕಾಡ್ಗಿಚ್ಚಿನಿಂದ ಕಾಪಾಡು ಮಧುಸೂದನನೇ.

ತ್ವಮಿಷ್ಟದೇವತಾಸ್ಮಾಕಂ ತ್ವಮೇವ ಕುಲದೇವತಾ |
ಸೃಷ್ಟಾಪಾತಾ ಚ ಸಂಹರ್ತಾ ಜಗತಾ ಚ ಜಗತ್ಪತೇ ||೨||

ಭಾವಾರ್ಥ:-ವಿಶ್ವದ ಸೃಷ್ಟಿ-ಸ್ಥಿತಿ-ಸಂಹಾರಕನಾಗಿರುವ ಜಗದೊಡೆಯನೇ,ನೀನೇ ನಮ್ಮ ಇಷ್ಟದೇವತೆಯೂ ಕುಲದೇವತೆಯೂ ಆಗಿರುವೆ.

ವಹ್ನಿರ್ವಾ ವರುಣೋ ವಾಪಿ ಚಂದ್ರೋ ವಾ ಸೂರ್ಯ ಏವ ಚ |
ಯಮ: ಕುಬೇರ: ಪವನ ಈಶಾನಾದ್ಯಾಶ್ಚ ದೇವತಾ: ||೩||

ಭಾವಾರ್ಥ:-ಅಗ್ನಿ,ವರುಣ,ಚಂದ್ರ,ಸೂರ್ಯ,ವಾಯು,ಯಮ,ಕುಬೇರ,ಈಶಾನಾದಿ ದೇವತೆಯರು......

ಬ್ರಹ್ಮೇಶ ಶೇಷ ಧರ್ಮೇಂದ್ರಾ ಮುನೀಂದ್ರಾ ಮನವ: ಸ್ಮೃತಾ: |
ಮಾನವಾಶ್ಚ ತಥಾ ದೈತ್ಯಾ ಯಕ್ಷ ರಾಕ್ಷಸ ಕಿನ್ನರಾ: ||೪||

ಭಾವಾರ್ಥ:ಬ್ರಹ್ಮ,ಈಶ,ಬಲರಾಮ,ಧರ್ಮರಾಜ,ಇಂದ್ರರು,ಮುನೀಂದ್ರರು,ಪ್ರಜಾಪತಿಗಳು, ಮನುಜರು, ಹಾಗೆಯೇ ಯಕ್ಷ,ರಾಕ್ಷಸ,ದೈತ್ಯ,ಕಿನ್ನರರು...............

ಯೇ ಯೇ ಚರಾಚರಾಶ್ಚೈವ ಸರ್ವೇತವ ವಿಭೂತಯ: |
ಆವಿರ್ಭಾವಸ್ತಿರೋಭಾವ: ಸರ್ವೇಷಾಂ ಚ ತವೇಚ್ಛಯಾ ||೫||

ಭಾವಾರ್ಥ:-ಸೃಷ್ಟಿಯಲ್ಲಿ ಸ್ಥಿರ ಹಾಗೂ ಅಸ್ಥಿರವಾದುದು ಯಾವುವೆಲ್ಲಾ ಇವೆಯೋ ಅವೆಲ್ಲವೂ ನಿನ್ನ ಅತಿಮಾನುಷ ಶಕ್ತಿ ವಿಷೇಷಗಳಾಗಿವೆ.ಅವೆಲ್ಲವುಗಳ ಪ್ರತ್ಯಕ್ಷತೆ,ಹಾಗೂ ಅಪ್ರತ್ಯಕ್ಷತೆಗಳಿಗೆ ನಿನ್ನ ಬಯಕೆಯೇ ಕಾರಣವಾಗಿದೆ.

ಅಭಯಂ ದೇಹಿ ಗೋವಿಂದ ವಹ್ನಿ ಸಂಹರಣಂ ಕುರು |
ವಯಂ ತ್ವಾಂ ಶರಣಂ ಯಾಮೋರಕ್ಷ ನ: ಶರಣಾಗತಮ್ ||೬||

ಭಾವಾರ್ಥ:-ಹೇ!ಗೋವಿಂದನೇ;ನಮಗೆ ಅಭಯವನ್ನು ಕೊಡುವವನಾಗು.ಈ ಬೆಂಕಿಯನ್ನು ಆರಿಸು. ನಾವು ನಿನ್ನ ಆಶ್ರಯಕ್ಕಾಗಿ ಬಂದಿರುವೆವು. ಶರಣಾರ್ತಿಗಳಾದ ನಮ್ಮನ್ನು ಪರಿಪಾಲಿಸು.

ಇತ್ಯೇವ ಮುಕ್ತ್ವಾ ತೇ ಸರ್ವೇತಸ್ಥುರ್ಧ್ಯಾತ್ವಾ ಪದಾಂಬುಜಮ್ |
ದೂರ‍ೀಭೂತಸ್ತು ದಾವಾಗ್ನಿ: ಶ್ರೀಕೃಷ್ಣಾಮೃತ ದೃಷ್ಟಿತ: ||೭||

ಭಾವಾರ್ಥ:-ಬಾಲಕರೆಲ್ಲರೂ ಇಂತೆಂದು ಮೊರೆಯಿಟ್ಟು ಆತನ ಚರಣಕಮಲಗಳನ್ನು ಧ್ಯಾನಿಸಿದರು.ಆಗ ಶ್ರೀಕೃಷ್ಣನ ಅಮೃತಮಯ ಕರುಣಾ ದೃಷ್ಟಿಯಿಂದ ದಾವಾಗ್ನಿಯ ಬೇಗೆಯು ದೂರವಾಯಿತು.

ದೂರೀಭೂತೇ ಚ ದಾವಾಗ್ನೌ ನನೃತುಸ್ತೇಮುದಾನ್ವಿತಾ: |
ಸರ್ವಾಪದ: ಪ್ರಣಶ್ಯಂತಿ ಹರಿಸ್ಮರಣ ಮಾತ್ರತ:  ||೮||

ಭಾವಾರ್ಥ:-ದಾವಾಗ್ನಿಯು ದೂರವಾಗಲು ಆ ಬಾಲಕರು ಸಂತಸಭರಿತರಾದರು. ಶ್ರೀಹರಿಯ ಸ್ಮರಣಮಾತ್ರದಿಂದ ಸಮಸ್ತ ವಿಪತ್ತುಗಳು ನಾಶವಾಗುವವು.

ಇದಂ ಸ್ತೋತ್ರಂ ಮಹಾಪುಣ್ಯಂ ಪ್ರಾತರುತ್ಥಾಯ ಯ: ಪಠೇತ್ |
ವಹ್ನಿತೋನ ಭವೇತ್ತಸ್ಯ ಭಯಂ ಜನ್ಮನಿ ಜನ್ಮನಿ ||೯||

ಭಾವಾರ್ಥ:-ಮಹಾಪುಣ್ಯದಾಯಕವಾಗಿರುವ ಈ ಸ್ತುತಿಯನ್ನು ಉಷ:ಕಾಲದಲ್ಲಿ ಎದ್ದು ಯಾವಾತನು ಪಠಿಸುವನೋ ಅಂತಹವನಿಗೆ ಜನ್ಮಜನ್ಮಾಂತರಗಳಲ್ಲಿಯೂ ಬೆಂಕಿಯಿಂದ ಯಾವುದೇ ವಿಪತ್ತು ಉಂಟಾಗಲಾರದು.

ಶತ್ರುಗ್ರಸ್ತೇ ಚ ದಾವಾಗ್ನೌ ವಿಪತ್ತೌ ಪ್ರಾಣ ಸಂಕಟೇ |
ಸ್ತೋತ್ರಮೇತತ್ಪಠಿತ್ಪಾತು ಮುಚ್ಯತೇನಾತ್ರ ಸಂಶಯ: ||೧೦||

ಭಾವಾರ್ಥ:-ವೈರಿಗಳಿಂದ ಆಕ್ರಮಣಕ್ಕೊಳಗಾದಾಗ,ಕಾಡ್ಗಿಚ್ಚಿನಲ್ಲಿ ಸಿಲುಕಿಕೊಂಡಾಗ ವಿಪತ್ತುಗಳುಸಂಭವಿಸಿದಾಗ,ಪ್ರಾಣಸಂಕಟಕ್ಕೊಳಗಾದಾಗ ಈ ಸ್ತೋತ್ರವನ್ನು ಪಠಿಸಿದಲ್ಲಿ ಇವೆಲ್ಲವುಗಳಿಂದ ಪಾರಾಗುವುದರಲ್ಲಿ ಸಂದೇಹವಿಲ್ಲ.

ಶತ್ರು ಸೈನ್ಯಂ ಕ್ಷಯಂ ಯಾತಿ ಸರ್ವತ್ರ ವಿಜಯೀ ಭವೇತ್ |
ಇಹಲೋಕೇ ಹರೇಭಕ್ತಿ ಮಂತೇದಾಸ್ಯಂ ಲಭೇತ್ ಧ್ರುವಮ್ ||೧೧||

ಭಾವಾರ್ಥ:-ವೈರಿಗಳ ಸೇನೆಯು ನಿರ್ನಾಮವಾಗುವುದು. ಸರ್ವತ್ರ ಗೆಲುವು ದೊರಕುವುದು. ಈ ಲೋಕದಲ್ಲಿ ಶ್ರೀಹರಿಯಲ್ಲಿ ಭಕ್ತಿಯೂ,ದೇಹಾಂತ್ಯದ ನಂತರ ಶ್ರೀಹರಿಯಲ್ಲಿ ಊಳಿಗತ್ವವೂ ಖಚಿತವಾಗಿ ದೊರಕುವುದು.
*********************************************************************
 || ಇತಿ ಬಾಲಕೃತಂ ಶ್ರೀಕೃಷ್ಣಸ್ತೋತ್ರಮ್ || || ಈ ತೆರನಾಗಿ ಬಾಲಕೃತ ಶ್ರೀಕೃಷ್ಣ ಸ್ತೋತ್ರಗಳ ಭಾವಾರ್ಥವಾಗಿದೆ ||

*********************************************************************
                    -೩-
  || ಶ್ರೀಕೃಷ್ಣ ಸ್ತೋತ್ರಮ್ ||
**********************
ವಂದೇ ಘನನವಶ್ಯಾಮಂ ಪೀತಕೌಶೇಯವಾಸಸಂ |
ಸಾನಂದಂ ಸುಂದರಂ ಶುದ್ಧಂ ಶ್ರೀಕೃಷ್ಣಂ ಪ್ರಕೃತೇ:ಪರಮ್ ||೧|| 

ಭಾವಾರ್ಥ:-ಹೊಸ ಮೇಘದ ವರ್ಣವುಳ್ಳವನೂ, ಅರಸಿನ ಬಣ್ಣದ ರೇಶ್ಮೆ ಬಟ್ಟೆಯನ್ನು ಧರಿಸಿದವನೂ,ಅನಂದಭರಿತನೂ,ಸುಂದರನೂ,ನಿರ್ಮಲನೂ,ಪ್ರಕೃತಿಯಿಂದ ಹೊರಗಿರುವವನೂ ಆಗಿರುವ ಶ್ರೀಕೃಷ್ಣನಿಗೆ ನಾನು ನಮಿಸುವೆ.

ರಾಧೇಯಂ ರಾಧಿಕಾ ಪ್ರಾಣವಲ್ಲಭಂ ಬಲ್ಲವೀ ಸುತಮ್ |
ರಾಧಾಸೇವಿತ ಪಾದಾಬ್ಜಂ ರಾಧಾವಕ್ಷ ಸ್ಥಲ ಸ್ಥಿತಮ್ ||೨||

ಭಾವಾರ್ಥ:-ರಾಧೆಯ ದೊರೆಯೂ, ರಾಧೆಯ ಪ್ರಾಣಪ್ರಿಯನೂ, ಬಲ್ಲವಿಯ ಮಗನೂ, ರಾಧೆಯಿಂದ ಸೇವಿಸಿಕೊಂಬ ಪಾದಗಳುಳ್ಳವನೂ, ರಾಧೆಯ ಹೃದಯದಲ್ಲಿ ನೆಲೆಸಿರುವವನೂ....

ರಾಧಾನುಗಂ ರಾಧಿಕೇಷ್ಟಂ ರಾಧಾಪಹೃತ ಮಾನಸಮ್ |
ರಾಧಾಧಾರಂ ಸರ್ವಾಧಾರಂ ನಮಾಮಿ ತಮ್ ||೨||

ಭಾವಾರ್ಥ:-ರಾಧೆಯನ್ನು ಹಿಂಬಾಲಿಸಿಕೊಂಡು ಹೋಗುವವನೂ, ರಾಧೆಯ ಪ್ರೀತಿಗೊಳಗಾದವನೂ, ರಾಧೆಯ ಚಿತ್ತಾಪಹಾರಕನೂ, ರಾಧೆಗೆ ಆಧಾರವಾದವನೂ, ಸಮಸ್ತಕ್ಕೂ ಆಧಾರನೂ,ಆಗಿರುವ ಶ್ರೀಕೃಷ್ಣನಿಗೆ ನಾನು ನಮಿಸಿಸುವೆನು.

ರಾಧಾ ಹೃದ್ಪದ್ಮ ಮಧ್ಯೇ ಚ ವಸಂತಂ ಸತತಂ ಶುಭಂ |
ರಾಧಾ ಸಹಚರಂ ಶಶ್ವದ್ರಾಜ್ಞಾ ಪರಿಪಾಲಕಮ್ ||೪||

ಭಾವಾರ್ಥ:-ರಾಧೆಯ ಹೃದಯ ಕಮಲದಲ್ಲಿ ನಿತ್ಯವೂ ನೆಲೆಯಾಗಿರುವವನೂ, ಶುಭವನ್ನುಂಟುಮಾಡುವವನೂ, ರಾಧೆಯ ಒಡನಾಡಿಯೂ, ರಾಧೆಯ ಅಪ್ಪಣೆಯನ್ನು ಖಚಿತವಾಗಿ ಪರಿಪಾಲಿಸುವವನೂ.....

ಧ್ಯಾಯಂತೇ ಯೋಗಿನೋ ಯೋಗಾನ್ ಸಿದ್ಧಾ: ಸಿದ್ಧೇಶ್ವರಾಶ್ಚಯಮ್ |
ತಂ ಧ್ಯಾಯೇತ್ಸತತಂ ಶುದ್ಧಂ ಭಗವಂತಂ ಸನಾತನಮ್ ||೫||

ಭಾವಾರ್ಥ:-ಸಿದ್ಧರು,ಸಾಧ್ಯರು,ಯೋಗಿಗಳು,ಸಿದ್ಧೇಶ್ವರರು ಯೋಗ ಮುಖೇನ ಯಾರನ್ನು ಧ್ಯಾನಿಸುತ್ತಾರೋ ಅಂತಹಾ ನಿರ್ಮಲನೂ, ಪುರಾತನನೂ ಭಗವಂತನೂ ಆಗಿರುವ ಅವನನ್ನು ಯಾವಾಗಲೂ ಧ್ಯಾನಿಸುವೆನು.

ಸೇವಂತೇ ಸತತಂ ಸಂತೋ ಬ್ರಹ್ಮೇಶಶೇಷ ಸಂಜ್ಞಕಾ: |
ಸೇವಂತೇ ನಿರ್ಗುಣಂ ಬ್ರಹ್ಮ ಭಗವಂತಂ ಸನಾತನಂ ||೬||

ಭಾವರ್ಥ:-ನಿರ್ಗುಣನೂ,ಪ್ರಾಚೀನನೂ,ಭಗವಂತನೂ, ಆದ ಪರಬ್ರಹ್ಮವನ್ನು ಬ್ರಹ್ಮ, ಈಶ, ಆದಿಶೇಷರು ಸೇವಿಸುವರು.

ನಿರ್ಲಿಪ್ತಂ ಚ ನಿರೀಹಂ ಚ ಪರಮಾತ್ಮಾ ನ ಮೀಶ್ವರಮ್ |
ನಿತ್ಯಂ ಸತ್ಯಂ ಚ ಭಗವಂತಂ ಸನಾತನಮ್ ||೭||

ಭಾವಾರ್ಥ:-ಅಲಿಪ್ತನೂ,ಪುರಾತನನೂ,ಯಾವುದೇ ಅಪೇಕ್ಷೆಯೂ ಇಲ್ಲದವನೂ ಪರಮಾತ್ಮನು. ಆತನು ಈಶ್ವರನು. ನಿತ್ಯನು.ಸತ್ಯನು.ಮಹಾತ್ಮನು. ಆತನು ಅನಾದಿ ಪುರುಷ ಭಗವಂತನು.

ಯಂ ಸೃಷ್ಟೇರಾದಿ ಭೂತಂ ಚ ಸರ್ವಬೀಜಂ ಪರಾತ್ಪರಮ್ |
ಯೋಗಿನಸ್ತಂ ಪ್ರಪದ್ಯಂತೇ ಭಗವಂತಂ ಸನಾತನಮ್  ||೮||

ಭಾವಾರ್ಥ:-ಯಾವಾತನು ಉತ್ಪತ್ತಿಯ ಮೂಲಪುರುಷನೋ,ಅವನು ಸಮಸ್ತಕ್ಕೂ ಬೀಜರೂಪನು.ಮಹಾತ್ಮರಲ್ಲಿ ಮಹಾತ್ಮನಾದ ಆ ಅನಾದಿ ಪುರುಷನಾಗಿರುವ ಭಗವಂತನನ್ನು ಯೋಗಿಗಳು ಭಜಿಸುವರು.

ಬೀಜಂ ನಾನಾವತಾರಾಣಾಂ ಸರ್ವಕಾರಣ ಕಾರಣಮ್ |
ವೇದಾವೇದ್ಯಂ ವೇದಬೀಜಂ ವೇದಕಾರಣ ಕಾರಣಮ್ ||೯||

ಭಾವಾರ್ಥ:-ವಿವಿಧಾವತಾರಗಳಿಗೆ ಮೂಲಕಾರಣನೂ, ಸಮಸ್ತಗಳಿಗೂ ನೆಪಮಾತ್ರನೂ, ವೇದಗಳಿಗೆ ಅರಿತುಕೊಳ್ಳಲು ಸಾಧ್ಯವಾಗದವನೂ, ವೇದಗಳ ಉತ್ಪತ್ತಿಗೆ ನಿಮಿತ್ತನೂ, ವೇದಗಳ ಉದ್ದೇಶಗಳಿಗೆ ಹೇತುವಾದವನೂ...........

ಯೋಗಿನಸ್ತಂ ಪ್ರಪದ್ಯಂತೇ ಭಗವಂತಂ ಸನಾತನಮ್ |
ಇತ್ಯೇವ ಮುಕ್ತ್ವಾ ಗಂಧರ್ವ: ಪ್ರಪಾತ ಧರಣೀತಲೇ ||೧೦||

ಭಾವಾರ್ಥ:-ಪುರಾತನನೂ, ಭಗವಂತನೂ ಆಗಿರುವ ಅವನನ್ನು ಯೋಗಿಗಳು ಸ್ತುತಿಸುವರು. ಇಂತೆಂದು ನುಡಿದು ಗಂಧರ್ವನು ಭೂಮಂಡಲದಲ್ಲಿ ಬಿದ್ದುಕೊಂಡನು.

ನ ನಾಮ ದಂಡವದ್ಭೂಮೌ ದೇವದೇವಂ ಪರಾತ್ಪರಮ್ |
ಇತಿ ತೇನ ಕೃತಂ ಸ್ತೋತ್ರಂ ಯ: ಪಠೇತ್ ಪ್ರಯತ: ಶುಚಿ: ||೧೧||

ಭಾವಾರ್ಥ:-ಭೂತಲದಲ್ಲಿ ಬಡಿಗೆಯಂತೆ ಬಿದ್ದುಕೊಂಡು ಪರಮಪರಾತ್ಪರನಾದ ದೇವರದೇವನನ್ನು ಸ್ತುತಿಸಿದನು. ಈ ರೀತಿಯಾಗಿ ಆತನಿಂದ ಮಾಡಲ್ಪಟ್ಟಂತಹಾ ಸ್ತುತಿಯನ್ನು ಪರಿಶುದ್ಧ ಮನಸ್ಸಿನಿಂದ ಯಾವಾತನು ಪಠಿಸುವನೋ ಆತನು...........

ಇಹೈವ ಜೀವನ್ಮುಕ್ತಶ್ಚ ಪರಂ ಯಾತಿ ಪರಾಂಗತಿಮ್ |
ಹರಿಭಕ್ತಿ ಹರೇರ್ದಾಸ್ಯಂ ಗೋಲೋಕೇ ಚ ನಿರಾಮಯ: |
ಪಾರ್ಷದ ಪ್ರವರತ್ವಂ ಚ ಲಭತೇ ನಾತ್ರ ಸಂಶಯ: ||೧೨||

ಭಾವಾರ್ಥ:-ಇಲ್ಲಿಯೇ ಜೀವನ್ಮುಕ್ತನಾಗುವನು. ಪರಲೋಕದಲ್ಲಿ ಉತ್ತಮವಾದ ಗತಿಯನ್ನು ಹೊಂದುವನು. ಶ್ರೀಹರಿಯಸೇವಾಭಾಗ್ಯ, ಗೋಲೋಕದಲ್ಲಿ ಆರೋಗ್ಯವಂತನಾಗಿ ಸಭ್ಯನಾಗಿ ಶ್ರೇಷ್ಠತ್ವವನ್ನು ಹೊಂದುವನು. ಇದರಲ್ಲಿ ಯಾವ ಸಂದೇಹವೂ ಇಲ್ಲ.
*********************************************************************
 || ಇತಿ ಶ್ರೀಕೃಷ್ಣ ಸ್ತೋತ್ರಮ್ ||  || ಈ ರೀತಿಯಾಗಿ ಶ್ರೀಕೃಷ್ಣಸ್ತೋತ್ರಗಳ ಭಾವಾರ್ಥವಾಗಿದೆ ||

********************************************************************* 
                                  -೪-
  || ವಿಪ್ರಪತ್ನೀಕೃತ ಶ್ರೀಕೃಷ್ಣ ಸ್ತೋತ್ರಮ್ ||
**********************************
ವಿಪ್ರಪತ್ನೀ ಊಚು:|

ಬ್ರಾಹ್ಮಣ ಸತಿಯರು ಹೇಳಿದರು:-

ತ್ವಂ ಬ್ರಹ್ಮ ಪರಮಂ ಧಾಮ ನಿರೀಹೋನಿರಹಂಕೃತಿ: |
ನಿರ್ಗುಣಾಶ್ಚ ನಿರಾಕಾರ: ಸಾಕಾರ: ಸಗುಣ: ಸ್ವಯಮ್ ||೧||

ಭಾವಾರ್ಥ:-ಹೇ ಭಗವಂತನೇ; ನೀನು ಸ್ವತ: ಪರಬ್ರಹ್ಮನು. ಉತ್ಕೃಷ್ಟ ಶರೀರವನ್ನು ಹೊಂದಿರುವಾತನು.ಬಯಕೆಗಳಿಲ್ಲದವನು.ಅಹಂಕಾರವಿರಹಿತನು.ಗುಣರಹಿತನು. ಆಕಾರವಿಲ್ಲದವನು.ಹಾಗೆಯೇ ಗುಣ ಸಹಿತನೂ,ಆಕಾರಸ್ವರೂಪನೂ ಆಗಿರುವೆ.

ಸಾಕ್ಷಿರೂಪಶ್ಚ ನಿರ್ಲಿಪ್ತ: ಪರಮಾತ್ಮಾ ನಿರಾಕೃತಿ: |
ಪ್ರಕೃತಿ:ಪುರುಷಸ್ತ್ವಂ ಚ ಕಾರಣಂ ಚ ತಯೋ: ಪರಮ್  ||೨||

ಭಾವಾರ್ಥ:-ನೀನು ಎಲ್ಲದಕ್ಕೂ ಪ್ರಾತ್ಯಕ್ಷನು.ನೀನು ಅಲಿಪ್ತನು. ಹಾಗೆಯೇ ಆಕಾರವಿಲ್ಲದ ಪರಮಾತ್ಮನಾಗಿರುವೆ.ನೀನು ಸ್ತ್ರೀ ಮತ್ತು ಪುರುಷ ರೂಪಿಯು.ಅಂತೆಯೇ ಅವೆರಡೂ ಲಿಂಗಗಳ ಉತ್ಪತ್ತಿಗೆ ಕಾರಣನೂ ಆಗಿರುವವನು.

ಸೃಷ್ಟಿ ಸ್ಥಿತ್ಯಂಚ ವಿಷಯೇ ಚ ದವಾಸ್ತ್ರ‍ಯ: ಸ್ಮೃತಾ: |
ತೇ ತ್ವದಂಸಾ: ಸರ್ವಬೀಜಾ ಬ್ರಹ್ಮ ವಿಷ್ಣು ಮಹೇಶ್ವರಾ: ||೩||

ಭಾವಾರ್ಥ:-ಉತ್ಪತ್ತಿ, ಪರಿಪಾಲನೆ ಮತ್ತು ನಾಶಗಳ ವಿಚಾರಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂರು ದೇವರ್ಕಳನ್ನು ನಿಯಮಿಸಲ್ಪಟ್ಟಿರುವದೆಂದು ತಿಳಿಯಲ್ಪಟ್ಟಿದೆ. ಅವರು ನಿನ್ನದೇ ಸಮಸ್ತ ಬೀಜಾಂಶರಾಗಿರುವರು.

ಯಸ್ಯ ರೋಮ್ನಾಂ ಚ ವಿವರೇ ಚಾಖಿಲಂ ವಿಶ್ವಮೀಶ್ವರ |
ಮಹಾವೀರಾಣ್ಮಹಾ ವಿಷ್ಣುಸ್ತ್ವಂ ತಸ್ಯ ಜನಕೋ ವಿಭೊ ||೪||

ಭಾವಾರ್ಥ:-ಹೇ!ಜಗದೀಶ್ವರನೇ; ಯಾರ ರೋಮರಂಧ್ರಗಳಲ್ಲಿ ಸಮಸ್ತ ಬ್ರಹ್ಮಾಂಡವೇ ನೆಲೆಯಾಗಿಹುದೋ ಅವನು ಅಸಾಧಾರಣನೂ ಶ್ರೇಷ್ಟನೂ ಆದ ಮಹಾವಿಷ್ಣುವೇ ಆಗಿರುವನು. ಒಡೆಯನೇ!ಆತನಿಗೆ ಜನಕನಿರುವೆ.

ತೇಜಸ್ತ್ವಂ ಚಾಪಿ ತೇಜಸ್ವೀ ಜ್ಞಾನಂ ಜ್ಞಾನೀ ಚ ತತ್ಪರ: |
ವೇದೇsನಿರ್ವಚನೀಯಸ್ತ್ವಂ ಕಸ್ತ್ವಾಂ ಸ್ತೋತುಮಹೇಶ್ವರ: ||೫||

ಭಾವಾರ್ಥ:-ನೀನು ಪೂಜ್ಯನು, ಶಕ್ತಿವಂತನು. ತಿಳುವಳಿಕೆಯೂ,ವಿದ್ವಾಂಸನೂ ನೀನೇ ಆಗಿರುವೆ. ಹಾಗೆಯೇ ಇವೆಲ್ಲವುಗಳ ಪರಿಧಿಯಿಂದ ಹೊರಗಿರುವೆ.ವೇದಗಳಲ್ಲಿ ನಿನ್ನನ್ನು ವರ್ಣನೆಗೆ ಅಸಾಧ್ಯನಾದವನು ಎಂದು ಹೇಳಲಾಗಿದೆ.ಹೀಗಿರುವಾಗ ನಿನ್ನನ್ನು ಸ್ತುತಿಸಲು ಅದಾರಿಂದ ಸಾಧ್ಯ? 

ಮಹದಾದಿ ಸೃಷ್ಟಿ ಸೂತ್ರಂ ಪಂಚತನ್ಮಾತ್ರಮೇವ ಚ |
ಬೀಜಂ ತ್ವಂ ಸರ್ವ ಶಕ್ತೀನಾಂ ಸರ್ವಶಕ್ತಿ ಸ್ವರೂಪಕ: ||೬||

ಭಾವಾರ್ಥ:-ಪ್ರಪಂಚದ ಸೃಷ್ಟಿಗೆ ಕಾರಣೀಭೂತವಾಗಿರುವ ಮಹದಾದಿ ಮತ್ತು ಪಂಚ ತನ್ಮಾತ್ರಗಳು ಯಾವುವಿವೆಯೋ ಅವು ನಿನ್ನಿಂದ ಪ್ರತ್ಯೇಕವಾಗಿಲ್ಲ.ನೀನು ಸಮಸ್ತ ಶಕ್ತಿಗಳಿಗೆ ಬೀಜರೂಪಿಯೂ ಸರ್ವ ಶಕ್ತಿಗಳ ಸ್ವರೂಪನೂ ಆಗಿರುವೆ.

ಸರ್ವ ಶಕ್ತೀಶ್ವರ: ಸರ್ವ: ಸರ್ವಶಕ್ತ್ಯಾಶ್ರಯ: ಸದಾ |
ತ್ವಮನೀಹ: ಸ್ವಯಂ ಜ್ಯೋತಿ: ಸರ್ವಾನಂದ: ಸನಾತನ:  ||೭||

ಭಾವಾರ್ಥ:-ಸಮಸ್ತ ಶಕ್ತಿಗಳಿಗೆ ನೀನು ಒಡೆಯನು.ನೀನು ಸರ್ವಸ್ವರೂಪನು.ಅಂತೆಯೇ ಸಮಸ್ತ ಶಕ್ತಿಗಳಿಗೆ ಆಶ್ರಯದಾತನೂ ಆಗಿರುವೆ.ಹಾಗೆಯೇ ನೀನು ಸ್ವಯಂಪ್ರಕಾಶಿತನಾಗಿ ಸರ್ವಾನಂದದಾಯಕನಾಗಿಯೂ ಇರುವೆ.ಮತ್ತು ಆದಿ ಪುರುಷನೂ ನೀನಾಗಿರುವೆ.

ಅಹೋ ಆಕಾರ ಹೀನಸ್ತ್ವಂ ಸರ್ವ ವಿಗ್ರಹವಾನಪಿ |
ಸರ್ವೇಂದ್ರಿಯಾಣಾಂ ವಿಷಯಂ ಜಾನಾಸಿ ನೇಂದ್ರಿಯೀ ಭವಾನ್  ||೮||

ಭಾವಾರ್ಥ:-ಸ್ವಾಮಿಯೇ! ನೀನು ಆಕಾರರಹಿತನಾದರೂ ಸಮಸ್ತ ವಿಗ್ರಹಗಳ ಸ್ವರೂಪವಾಗಿರುವೆ.ಎಲ್ಲಾ ಆಕಾರಗಳೂ ನಿನ್ನವೇ ಆಗಿವೆ.ನೀನು ಸಮಸ್ತ ಇಂದ್ರಿಯಂಗಳ ವಿಚಾರವಾಗಿ ತಿಳಿದಿರುವವನು.ಆದಾಗ್ಯೂ ನೀನು ಇಂದ್ರಿಯಗಳಿಲ್ಲದವನಂತಿರುವೆ.

ಸರಸ್ವತೀಜಡೀಭೂತಾ ಯತ್ ಸ್ತೋತ್ರೇಯನ್ನಿರೂಪಣೆ |
ಜಡೀ ಭೂತೋ ಮಹೇಶಶ್ಚ ಶೇಷೋ ಧರ್ಮೋವಿಧಿ: ಸ್ವಯಮ್ ||೯||

ಭಾವಾರ್ಥ;_ನಿನ್ನನ್ನು ಸ್ತೋತ್ರಮಾಡುವುದರಲ್ಲಿ,ನಿನ್ನ ತತ್ವವನ್ನು ವಿವರಿಸಿ ಹೇಳುವುದರಲ್ಲಿ ಸರಸ್ವತಿಯು ಕೂಡಾ ಮೂಢಳಾಗಿಹಳು.ಮಹೇಶ್ವರ,ಆದಿಶೇಷ,ಯಮಧರ್ಮ ಹಾಗೂ ಬ್ರಹ್ಮನು ಕೂಡಾ ನಿರ್ಜೀವಸಮಾನರಾಗಿಹರು.

ಪಾರ್ವತೀಕಮಲಾರಾಧಾ ಸಾವಿತ್ರೀ ವೇದಸೂರಪಿ |
ವೇದಶ್ಚ ಜಡತಾಂ ಯಾತಿ ಕೇವಾ ಶಕ್ತಾ ವಿಪಶ್ಚಿತ: ||೧೦||

ಭಾವಾರ್ಥ:-ಪಾರ್ವತಿ,ಲಕ್ಷ್ಮಿ,ರಾಧಾ,ಮತ್ತು ವೇದಮಾತಾ ಸಾವಿತ್ರಿ- ಇವರೆಲ್ಲರೂ ಚೈತನ್ಯರಹಿತರಾಗುವರು.ಹೀಗಿರುವಾಗ ಮತ್ತಾವ ವಿದ್ವಾಂಸರು ನಿನ್ನನ್ನು ಸ್ತೋತ್ರಮಾಡಲು ಸಮರ್ಥರಾದಾರು?

ವಯಂ ಕಿಂ ಸ್ತವನಂ ಕುರ್ಮ: ಸ್ತ್ರೀಯ: ಪ್ರಾಣೇಶ್ವರೇಶ್ವರ |
ಪ್ರಸನ್ನೋಭವನೋದೇವ ದೀನ ಬಂಧೋಕೃಪಾಂ ಕುರು ||೧೧||

ಭಾವಾರ್ಥ:-ಹೇ; ಪ್ರಾಣೇಶ್ವರೇಶ್ವರನೇ! ಸ್ತ್ರೀಯರಾದ ನಾವುಗಳಾದರೂ ನಿನ್ನಸ್ತೋತ್ರವನ್ನೆದೆಂತು ಮಾಡಲು ಸಾಧ್ಯ? ಬಡವರ ಆಪ್ತನೇ; ನಮ್ಮ ಮೇಲೆ ಕರುಣೆದೋರು. ಪ್ರಸನ್ನನಾಗು.

ಇತಿ ಪೇತುಶ್ಚ ತಾ ವಿಪ್ರಪತ್ನ್ಯಸ್ತಚ್ಚರಣಾಂಬುಜೆ |
ಅಭಯಂ ಪ್ರದದೌ ತಾಭ್ಯ: ಪ್ರಸನ್ನವದನೇಕ್ಷಣ: ||೧೨||

ಭಾವಾರ್ಥ:-ಈ ರೀತಿಯಾಗಿ ಸ್ತೋತ್ರಮಾಡುತ್ತಾ ವಿಪ್ರಪತ್ನಿಯರೆಲ್ಲರೂ ಆತನ ಚರಣಾರವಿಂದಗಳಿಗೆರಗಿದರು. ಆಗ ಶ್ರೀಕೃಷ್ಣನು ಪ್ರಸನ್ನವದನನಾಗಿ ಕರುಣಾ ದೃಷ್ಟಿಯುಳ್ಳವನಾಗಿ ಅವರೆಲ್ಲರಿಗೂ ಅಭಯಪ್ರದಾನ ಮಾಡಿದನು.

ವಿಪ್ರಪತ್ನೀ ಕೃತಂ ಸ್ತೋತ್ರಂ ಪೂಜಾಕಾಲೇ ಚ ಯ: ಪಠೇತ್ |
ಸ ಗತಿಂ ವಿಪ್ರಪತ್ನೀನಾಂ ಲಭತೇನಾತ್ರ ಸಂಶಯ:  ||೧೩||

ಭಾವಾರ್ಥ:-ಬ್ರಾಹ್ಮಣಸತಿಯರಿಂದ ಮಾಡಲಾಗಿರುವ ಈಸ್ತೋತ್ರಗಳನ್ನು ಪೂಜಾಕಾಲದಲ್ಲಿ ಯಾವಾತನು ಪಠಿಸುವನೋ ಆತನು ಆ ವಿಪ್ರಪತ್ನಿಯರಿಗೆ ದೊರಕಿದ ಸ್ಥಿತಿಯೇ ದೊರಕುವುದು.ಇದರಲ್ಲಿ ಯಾವುದೇ ಸಂದೇಹವಿಲ್ಲ.
*********************************************************************
        || ಇತಿ ವಿಪ್ರಪತ್ನೀಕೃತ ಶ್ರೀಕೃಷ್ಣ ಸ್ತೋತ್ರಮ್ || 
      || ಈ ತೆರನಾಗಿ ವಿಪ್ರಪತ್ನೀಕೃತ ಶ್ರೀಕೃಷ್ಣ ಸ್ತೋತ್ರಗಳ ಭಾವಾರ್ಥವಾಗಿದೆ ||

*********************************************************************
                    -೫-
      ||ಶ್ರೀ ಕೃಷ್ಣಕರ್ಣಾಮೃತಮ್||
     ************************                                
ಹೇ ದೇವ ಹೇ ದಯಿತ ಹೇ ಜಗದೇಕ ಬಂಧೋ
ಹೇ ಕೃಷ್ಣ ಹೇ ಚಪಲ ಹೇ ಕರುಣೈಕ ಸಿಂಧೋ
ಹೇ ನಾಥ ಹೇ ರಮಣ ಹೇ ನಯನಾಭಿರಾಮ 
ಹಾ ಹಾ ಕದಾ ನು ಭವಿತಾಸಿ ಪದಂ ದೃಶೋರ್ಮೇ ||೧||

ಭಾವಾರ್ಥ:-ಹೇ!ಪರಮೇಶನೇ,ಹೇ!ಆತ್ಮೀಯನೇ,ಬ್ರಹ್ಮಾಂಡದ ಏಕಮಾತ್ರ ನೆಂಟನೇ,ಹೇ!ಕೃಷ್ಣಾ,ಹೇ!ಚಂಚಲನೇ,ಹೇ!ದಯಾವಾರಿಧಿಯೇ,ಹೇ!ದೊರೆಯೇ, ಹೇ!ಸ್ವಾಮಿಯೇ,ಹೇ!ನಯನಮನೋಹರನೇ,ಹಾ!ಹಾ!ನೀನೆಂದುನನ್ನ ಕಣ್ಣುಗಳಿಗೆ ಕಾಣಲು ಸಿಗುವೆ?

ತತ್ಕೈಶೋರಂ ತಚ್ಚ ವಕ್ತ್ರಾರವಿಂದಂ
ತತ್ಕಾರುಣ್ಯಂ ತೇ ಲೀಲಾಕಟಾಕ್ಷಾ: |
ತತ್ ಸೌಂದರ್ಯಂ ಸಾ ಚ ಮಂದಸ್ಮಿತಶ್ರೀ:
ಸತ್ಯಂ ಸತ್ಯಂ ದುರ್ಲಭಂ ದೈವತೇಷು ||೨||

ಭಾವಾರ್ಥ:-ನಿನ್ನ ಆ ಬಾಲ್ಯ,ಆ ನಿನ್ನ ಚರಣಾರವಿಂದಗಳು,ನಿನ್ನ ಆ ದಯೆ,ನಿನ್ನ ಚೇಷ್ಟಾಭರಿತ ನಯನಗಳು,ಅಪ್ರತಿಮವಾಗಿರುವ ನಿನ್ನ ಸೌಂದರ್ಯ,ನಿನ್ನ ಆ ಮುಗುಳ್ನಗೆಯ ಸಂಪತ್ತು ಇವುಗಳು ಬೇರಾವ ದೇವದೇವತೆಗಳಲ್ಲಿಯೂ ಕಾಣಲು ಅಸಾಧ್ಯ.ಇದು ಸತ್ಯ.

ಪೇಮದಂ ಚ ಮೇ ಕಾಮದಂ ಚ ಮೇ
ವೇದನಂ ಚ ಮೇ ವೈಭವಂ ಚ ಮೇ |
ಜೀವನಂ ಚ ಮೇ ಜೀವಿತಂ ಚ ಮೇ 
ದೈವತಂ ಚ ಮೇ ದೇವ ನಾಪರಂ ||೩||

ಭಾವಾರ್ಥ:-ಹೇ!ಭಗವಂತನೇ; ನೀನೇ ನನ್ನ ಭಕ್ತಿದಾತ ಮತ್ತು ಸಮಸ್ತ ಮನೋ ಕಾಮನೆಗಳನ್ನು ದಯಪಾಲಿಸುವಾತನು. ನೀನೇ ನನ್ನರಿವು ಮತ್ತು ಘನತೆ.ನೀನು ನನ್ನ ಬಾಳು,ಬದುಕು ಮತ್ತು ದೇವರು. ನನಗೆ ಅನ್ಯ ಯಾವುದೂ ಇಲ್ಲ.

ಕರಾರವಿಂದೇನ ಪದಾರವಿಂದಂ
ಮುಖಾರವಿಂದೇನ ವಿನಿವೇಷಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ 
ಬಾಲಂ ಮುಕುಂದಂ ಮನಸಾ ಸ್ಮರಾಮಿ ||೪||

ಭಾವಾರ್ಥ:-ತಾವರೆಯಂತಿರುವ ಕೈಗಳಿಂದ ತಾವರೆಯಂತಿರುವ ಪಾದಗಳನ್ನು ತಾವರೆಯಂತಿರುವ ಮೊಗದಲ್ಲಿರಿಸಿಕೊಂಡು ಆಲದ ಎಲೆಯ ಮೇಲೆ  ಪವಡಿಸಿರುವ ಬಾಲ ಮುಕುಂದನನ್ನು ಮನದಲ್ಲಿ ಸ್ಮರಿಸುತ್ತೇನೆ.

ತ್ವಯಿ ಪ್ರಸನ್ನೇ ಮಮ ಕಿಂ ಗುಣೇನ
ತ್ವಯ್ಯಪ್ರಸನ್ನೇ ಮಮ ಕಿಂ ಗುಣೇನ |
ರಕ್ತೇ ವಿರಕ್ತೇ ವರೇ ವಧೂನಾಂ 
ನಿರರ್ಥಕ: ಕುಂಕುಮ ಪತ್ರ ಭಂಗ: ||೫||

ಭಾವಾರ್ಥ:-ಹೇ!ಸ್ವಾಮಿಯೇ;ನೀನು ನನ್ನ ಮೇಲೆ ಹರ್ಷಿತನಾದರೆ ಅದರಿಂದ ನನಗೇನು ಲಾಭ?ನೀನು ನನ್ನ ಮೇಲೆ ಹರ್ಷಿತನಾಗದಿದ್ದರೆ ಅದರಿಂದ ನನಗೇನು ಲಾಭ?ವರನು ವಧುವಿನಲ್ಲಿ ಅನುರಾಗವುಳ್ಳವನಾದರೂ,ಅನುರಾಗರಹಿತನಾದರೂ ಓಲೆಯಾಕಾರದ ಕುಂಕುಮಾಲಂಕಾರವು ವ್ಯರ್ಥವಾಗುವುದು. 

ಸಂಧ್ಯಾವಂದನ ಭದ್ರಮಸ್ತು ಭವತೇ ಭೋ: ಸ್ನಾನ ತುಭ್ಯಂ ನಮ:
ಭೋ ದೇವಾ: ಪಿತರಶ್ಚ ತರ್ಪಣವಿಧೌ ನಾಹಂ ಕ್ಷಮ: ಕ್ಷಮ್ಯತಾಮ್ | 
ಯತ್ರ ಕ್ವಾಪಿ ನಿಷೀಧ್ಯ ಯಾದವಕುಲೋತ್ತಂಸಸ್ಯ ಕಂಸದ್ವಿಷ:
ಸ್ಮಾರಂ ಸ್ಮಾರಮಘಂ ಹರಾಮಿ ತದಲಂ ಮನ್ಯೇ ಕಿಮನ್ಯೇನ ಮೇ  ||೬||

ಭಾವಾರ್ಥ:-ಹೇ! ಸಂಧ್ಯಾಕಾಲಗಳಲ್ಲಿ ನಮಿಸಲ್ಪಡುವಾತನೇ ನಿನಗೆ ಒಳಿತಾಗಲಿ. ಹೇ! ಪವಿತ್ರನೇ ನಿನಗಿದೋ ನಮನಗಳು. ಎಲೈ; ದೇವರ್ಕಳುಗಳಿರಾ,ಪಾಲಕರುಗಳಿರಾ; ನಾನು ನಿಮ್ಮನ್ನು ತರ್ಪಣ  ಕೊಡುವುದರ ಮೂಲಕ ಸಮಾಧಾನಗೊಳಿಸಲಾರೆನು. ಎಲ್ಲೋ ಒಂದೆಡೆ ನಾನು ಕುಳಿತುಕೊಂಡು ಯಾದವವಂಶದ ಶ್ರೇಷ್ಟನಾದ ಹಾಗೆಯೇ ಕಂಸಾರಿಯೂ ಆಗಿರುವ ಶ್ರೀಕೃಷ್ಣನನ್ನು ಪುನ:ಪುನ: ಸ್ತುತಿಸುತ್ತಾ ನನ್ನ ಅನೀತಿಗಳನ್ನು ನಾಶಮಾಡಿಕೊಳ್ಳುತ್ತೇನೆ. ನನಗಿದುವೇ ಸಾಕು. ಅನ್ಯತ್ರ ಯಾವುದರಿಂದಲೂ ನನಗೆ ಲಾಭವಿಲ್ಲ.

ಕಸ್ತೂರೀತಿಲಕಂ ಲಲಾಟಫಲಕೇ ವಕ್ಷ:ಸ್ಥಲೇ ಕೌಸ್ತುಭಂ
ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಮ್ |
ಸರ್ವಾಂಗೇ ಹರಿಚಂದನಂ ಚ ಕಲಯನ್ ಕಂಠೇ ಚ ಮುಕ್ತಾವಲಿಂ
ಗೋಪಸ್ತ್ರೀಪರಿವೇಷ್ಟಿತೋ ವಿಜಯತೇ ಗೋಪಾಲ ಚೂಡಾಮಣಿ:  ||೭||

ಭಾವಾರ್ಥ:-ನೊಸಲಿನಲ್ಲಿ ಕಸ್ತೂರಿಯ ತಿಲಕದಿಂದ ಶೋಭಿಸುವಾತನೂ, ಎದೆಯಮೇಲೆ ಕೌಸ್ತುಭಮಣಿಗಳ ಹಾರವನ್ನು ಧರಿಸಿಕೊಂಡಾತನೂ, ಮೂಗಿನ ತುದಿಯಲ್ಲಿ ಮುತ್ತಿನ ದರ್ಪಣವನ್ನು ಧರಿಸಿರುವಾತನೂ, ಅಂಗೈಯಲ್ಲಿ ಕೊಳಲನ್ನೂ, ಹಸ್ತಗಳಲ್ಲಿ ಬಳೆಗಳನ್ನೂ ಧರಿಸಿಕೊಂಡು ಶರೀರದ ಅಂಗಾಂಗಗಳಿಗೆಲ್ಲಾ ಶ್ರೀಗಂಧವನ್ನು ಪೂಸಿಕೊಂಡು, ಕೊರಳಿನಲ್ಲಿ ಮುತ್ತಿನ ಹಾರಗಳನ್ನು ಧರಿಸಿ ಬೆಳಗುತ್ತಾ; ಗೋಪಿಕಾ ಕನ್ನಿಕೆಯರಿಂದ ಸುತ್ತುವರಿಯಲ್ಪಟ್ಟ ಗೋಪಾಲಕರಲ್ಲಿ ಶ್ರೇಷ್ಟನಾಗಿರುವ ಆ ಶ್ರೀಕೃಷ್ಣನು ಸರ್ವೋತ್ತಮನಾಗಿರುವನು.

ಲೋಕಾನುನ್ಮದಯನ್ ಶ್ರುತೀರ್ಮುಖರಯನ್ ಕ್ಷೋಣೀರುಹಾನ್ ಹರ್ಷಯನ್ 
ಶೈಲಾನ್ವಿದ್ರವಯನ್ ಮೃಗಾನ್ವಿವಶಯನ್ ಗೋಬೃಂದ ಮಾನಂದಯನ್ |
ಗೋಪಾನ್ಸಂಭ್ರಮಯನ್ ಮುನೀನ್ಮುಕುಲಯನ್ ಸಪ್ತಸ್ವರಾನ್ ಜೃಂಭಯನ್
ಓಂಕಾರಾರ್ಥಮುದೀರಯನ್ ವಿಜಯತೇ ವಂಶೀನಿನಾದಶ್ಶಿಶೋ:  ||೮||

ಭಾವಾರ್ಥ:-ಬ್ರಹ್ಮಾಂಡಕ್ಕೆಲ್ಲಾ ಮುದವನ್ನು ಕೊಡುವಾತ್ತಾ, ವೇದಗಳಿಗೆ ಪ್ರತಿಧ್ವನಿಯನ್ನುಮಾಡುತ್ತಾ, ಮರಗಿಡಗಳಿಗೆ ಆಹ್ಲಾದವನ್ನುಂಟುಮಾಡುತ್ತಾ, ಗಿರಿಕಂದರಗಳನ್ನು ಕರಗಿಸುತ್ತಾ, ಹುಲ್ಲೆಗಳಿಗೆ ತಮ್ಮ ದೇಹವನ್ನು ಮರೆಯುವಂತೆ ಮಾಡುತ್ತಾ, ಗೋಸಮೂಹಕ್ಕೆ ಸಂತಸವನ್ನುಂಟುಮಾಡುತ್ತಾ, ಪಶುಪಾಲಕರಿಗೆ ಭ್ರಾಂತಿಯನ್ನು ಹುಟ್ಟಿಸುತ್ತಾ, ಯೋಗಿಮುನಿವರ್ಯರು ಧ್ಯಾನನಿರತರಾಗಿ ತಮ್ಮ ನಯನಗಳನ್ನು ಮುಚ್ಚುವಂತೆ ಮಾಡುತ್ತಾ, ಸಪ್ತಸ್ವರಗಳನ್ನು ಆಲಾಪಿಸುತ್ತಾ, ಓಂಕಾರದ ಅರ್ಥದ ಅರಿವು ಮೂಡಿಸುತ್ತಾ ಇರುವ ಆ ಬಾಲ ಶ್ರೀಕೃಷ್ಣನ ಕೊಳಲಿನ ಸ್ವರವು ಸರ್ವೋತ್ಕೃಷ್ಟವಾಗಿದೆ.

ಪುಲ್ಲೇಂದೀವರಕಾಂತಿಮಿಂದುವದನಂ ಬರ್ಹಾವತಂಸಪ್ರಿಯಂ
ಶ್ರೀವತ್ಸಾಂಕಮುದಾರಕೌಸ್ತುಭಧರಂ ಪೀತಾಂಬರಂ ಸುಂದರಮ್ |
ಗೋಪೀನಾಂ ನಯನೋತ್ಪಲಾರ್ಚಿತತನುಂ ಗೋಗೋಪಸಂಘಾವೃತಂ
ಗೋವಿಂದಂ ಕಲವೇಣುವಾದನಿರತಂ ದಿವ್ಯಾಂಗಭೂಷಂ ಭಜೇ ||೯||

ಭಾವಾರ್ಥ:-ಬಿರಿದ ತಾವರೆಯಂತೆ ನೀಲಕಾಂತಿಯನ್ನು ಹೊಂದಿರುವಾತನೂ, ಶಶಿವದನನೂ, ತನಗತಿ ಪ್ರಿಯವೆನಿಸಿದ ನನಿಲುಗರಿಯನ್ನು ಧರಿಸಿಕೊಂಡವನೂ, ಶ್ರೀವತ್ಸ ಲಾಂಛನನೂ, ಕೌಸ್ತುಭಹಾರವನ್ನು ಧರಿಸಿರುವಾತನೂ, ಹಳದಿವರ್ಣದ ರೇಶ್ಮೆ ವಸ್ತ್ರವನ್ನು ಉಟ್ಟುಕೊಂಡು ಮನ ಮೋಹಕನಾಗಿ ಕಾಣಿಸುವಾತನೂ, ಗೋಪಿಕಾಸ್ತ್ರೀಯರುಗಳ ತಾವರೆಯನ್ನು ಹೋಲುವ ಕಣ್ಣುಗಳಿಂದ ಆರಾಧಿಸಲ್ಪಡುವ ಶರೀರವುಳ್ಳಾತನೂ, ಗೋಪಾಲಕರಿಂದ ಹಾಗೂ ಗೋವುಗಳಿಂದ ಸುತ್ತುವರಿಯಲ್ಪಟ್ಟವನೂ, ತನ್ನ ಕೋಳಲನ್ನು ನುಡಿಸುವದರಲ್ಲಿಯೇ ತಲ್ಲೀನನಾದವನೂ, ಶ್ರೇಷ್ಠವಾಗಿರುವ ರತ್ನಾಭರಣಗಳಿಂದ ಅಲಂಕೃತನಾದವನೂ ಆದ ಗೋವಿಂದನೆಂಬ ಹೆಸರಿನ ಶ್ರೀಕೃಷ್ಣನನ್ನು ನಾನು ಸ್ತುತಿಸುತ್ತಿರುವೆನು.

ಸಾಯಂಕಾಲೇ ವನಾಂತೇ ಕುಸುಮಿತಸಮಯೇ ಸೈಕತೇ ಚಂದ್ರಿಕಾಯಾಂ
ತ್ರೈಲೋಕ್ಯಾಕರ್ಷಣಾಂಗಂ ಸುರನರಗಣಿಕಾಮೋಹನಾಪಾಂಗಮೂರ್ತಿಮ್ |
ಸೇವ್ಯಂ ಶೃಂಗಾರಭಾವೈರ್ನವರಸಭರಿತೈರ್ಗೋಪಕನ್ಯಾ ಸಹಸ್ರೈ:
ವಂದೇsಹಂ ರಾಸಕೇಲೀರತಮತಿಸುಭಗಂ ವಶ್ಯಗೋಪಾಲಕೃಷ್ಣಮ್ ||೧೦||

ಭಾವಾರ್ಥ:-ಸಾಯಂಕಾಲದ ಸಮಯ.ಬನದ ಅಂತ್ಯ ಸ್ಥಳ.ಮನಮೋಹಕ ಸುವಾಸಿತ ಪುಷ್ಫಗಳು ಅರಳುವ ಹೊತ್ತು.ಯಮುನಾನದಿಯ ಮರಳಿನರಾಶಿಯ ಮೇಲೆ ಚಂದ್ರನ ಬೆಳಕು ತಾಗಿ ಬೆಳಗುತ್ತಲಿದೆ. ಇಂತಹಾ ಉಲ್ಲಾಸ ಭರಿತ ಹೊತ್ತಿನಲ್ಲಿ ಮೂರು ಲೋಕಂಗಳನ್ನೂ ಆಕರ್ಷಿಸುವ ದೇಹಕಾಂತಿಯುಳ್ಳ ಭೂಲೋಕ ಸುರಲೋಕಗಳ ದೇವದಾಸಿಯರನ್ನು ಪರವಶತೆಗೆ ಒಳಪಡಿಸುವಂತಹಾ ಆಕಾರವುಳ್ಳ, ಪ್ರೇಮಭರಿತ ಹಾವಭಾವಾದಿ ನವರಸಭಾವಗಳಿಂದ ಕೂಡಿ ಸಹಸ್ರ ಸಂಖ್ಯೆಯ ಗೋಪಿಕಾ ಕನ್ನಿಕೆಯರಿಂದ ಸೇವಿಸಲ್ಪಡುತ್ತಾ, ರಾಸಕ್ರೀಡೆಯಲ್ಲಿ ತೊಡಗಿರುವ, ಅತ್ಯಂತ ಮನೋಹರನಾಗಿ ಕಂಗೊಳಿಸುತ್ತಲಿರುವ ಗೋಪಾಲಕೃಷ್ಣನಿಗಾನು ವಂದಿಸುತ್ತಲಿರುವೆ.

ಯಾ ಪ್ರೀತಿರ್ವಿದುರಾರ್ಪಿತೇ ಮುರರಿಪೋ ಕುಂತ್ಯರ್ಪಿತೇ ಯಾದೃಶೀ
ಯಾ ಗೋವರ್ಧನಮೂರ್ಧ್ನಿ ಯಾ ಚ ಪೃಥುಕೇ ಸ್ತನ್ಯೇ ಯಶೋದಾರ್ಪಿತೇ |
ಭಾರದ್ವಾಜ ಸಮರ್ಪಿತೇ ಶಬರಿಕಾದತ್ತೇsಧರೇ ಯೋಷಿತಾಂ
ಯಾ ಪ್ರೀತಿರ್ಮುನಿಪತ್ನಿಭಕ್ತಿರಚಿತೇsಪ್ಯತ್ರಾಪಿತಾಂ ತಾಂ ಕುರು  ||೧೧||

ಭಾವಾರ್ಥ:-ಎಲೆ ಮುರಾರಿಯೇ!ಯಾವ ಪ್ರೀತಿಯನ್ನು ವಿದುರನಿಗೆ ಅರ್ಪಿಸಿದೆಯೋ, ಯಾವ ದಯಾಪೂರಿತ ನೋಟವು ಕುಂತಿಗರ್ಪಿತವಾಯಿತೋ, ಗೋವರ್ಧನ ಗಿರಿಯನ್ನು ಎತ್ತಿ ಹಿಡಿವಾಗ ನಿನ್ನಲ್ಲಿ ಯಾವ ಕರುಣಾದೃಷ್ಟಿಯಿತ್ತೋ, ಕುಚೇಲನು ನಿನಗರ್ಪಿಸಿದ ಅವಲಕ್ಕಿಯಲ್ಲಿ ಯಾವ ಸ್ನೇಹ ಭಾವವು ತುಂಬಿತ್ತೊ, ಯಶೋದೆಯು ನಿನಗರ್ಪಿಸಿದ ಸ್ತನ್ಯಪಾನದಲ್ಲಿ ಯಾವ ವಾತ್ಸಲ್ಯವು ತುಳುಕುತ್ತಿತ್ತೋ, ಭಾರದ್ವಾಜ ಮುನಿಯು ನಿನಗರ್ಪಿಸಿದುದರಲ್ಲಿ, ಶಬರಿಯು ನೀಡಿರುವುದರಲ್ಲಿ, ಗೋಕುಲದ ಸುಂದರಾಂಗಿಯರ ತುಟಿಗಳಲ್ಲಿ ಮುನಿಪತ್ನಿಯರು ನಿನಗರ್ಪಿಸಿದುದರಲ್ಲಿ,ಯಾವ ಅನುರಾಗವನ್ನು ತೋರಿಸಿರುವೆಯೋ ಅದೇ ಅನುರಾಗಪೂರ್ಣ ದಯೆಯನ್ನು ಇಲ್ಲಿ ಕೂಡಾ ತೋರಿಸು. 
*********************************************************************            
                     || ಇತಿ ಶ್ರೀಕೃಷ್ಣಕರ್ಣಾಮೃತಮ್ ||  
   || ಈ ರೀತಿಯಾಗಿ ಶ್ರೀಕೃಷ್ಣಕರ್ಣಾಮೃತ ಸ್ತೋತ್ರಗಳ ಭಾವಾರ್ಥವಾಗಿದೆ  ||

*********************************************************************


No comments:

Post a Comment