Thursday, 30 January 2014

ಸ್ತೋತ್ರ ಮಂದಾರ

           ಶ್ರೀ  ನವಗ್ರಹ ಸ್ತೋತ್ರಗಳು
         *******************                                    
               - ೧-
  || ನವಗ್ರಹ ಸ್ತೋತ್ರಮ್ ||
 ********************
ನಮ: ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ |
ಗುರುಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ:  ||

ಭಾವಾರ್ಥ :-ನವಗ್ರಹರಾದ ಸೂರ್ಯ,ಚಂದ್ರ, ಕುಜ,ಬುಧ,ಗುರು,ಶುಕ್ರ,ಶನಿ ರಾಹು ಮತ್ತು ಕೇತು ಗ್ರಹಗಳಿಗೆ ಪ್ರಣಾಮಗಳು.
           **************************

             || ಶ್ರೀ ಗಣೇಶಾಯ ನಮ: ||
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್  ||೧||

ಭಾವಾರ್ಥ:-ದಾಸವಾಳ ಪುಷ್ಪದ ಸಾದೃಶ್ಯವುಳ್ಳವನೂ, ಕಶ್ಯಪ ತನಯನೂ, ಮಹಾ ಕಾಂತಿಯಿಂದ ಕೂಡಿದವನೂ,ಕತ್ತಲಿನ ವೈರಿಯೂ, ಸರ್ವ ಪಾಪಗಳ ವಿನಾಶಕನೂ ಆಗಿರುವ ಸೂರ್ಯ ದೇವನಿಗೆ ನಮಸ್ಕರಿಸುವೆ.

ದಧಿ ಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಮ್  |
ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ    ||೨||

ಭಾವಾರ್ಥ:-ಮೊಸರು,ಶಂಖ,ಹಾಗೂ ಮಂಜಿನಹನಿಗಳವರ್ಣವುಳ್ಳವನೂ,ಕ್ಷೀರಸಾಗರದಿಂದ ಉದ್ಭವಿಸಿದವನೂ,ಪರಶಿವನ ಶಿರೋಭೂಷಣನೂ ಆಗಿರುವ ಸೌಮ್ಯಸ್ವರೂಪಿಯಾಗಿರುವ ಚಂದ್ರನಿಗೆ ನಾನು ನಮಸ್ಕರಿಸುವೆ.

ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿಹಸ್ತಂಚ ಮಂಗಲಂ ಪ್ರಣಮಾಮ್ಯಹಮ್  ||೩||

ಭಾವಾರ್ಥ:-ಪೃಥ್ವಿಯ ಗರ್ಭ ಸಂಜಾತನೂ,ವಿದ್ಯುತ್ತಿನ ಪ್ರಕಾಶ ಸದೃಶವಾದ ಬೆಳಕನ್ನು ಹೊಂದಿರುವವನೂ,ಕುಮಾರನೂ ಶಕ್ತಿಹಸ್ತನೂ ಆಗಿರುವ ಮಂಗಲದಾಯಕನಾದ ಕುಜನಿಗೆ ನಾನು ನಮಸ್ಕರಿಸುವೆ.

ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್  |
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್  ||೪||

ಭಾವಾರ್ಥ:-ಹಿಪ್ಪಲಿಯ ಮೊಗ್ಗಿನಂತೆ ನೀಲವರ್ಣನೂ,ಅಪ್ರತಿಮರೂಪವುಳ್ಳವನೂ,ಸೌಮ್ಯ ಸ್ವಭಾವದವನೂ,ಶಾಸ್ತ್ರಗಳ ಬಗ್ಗೆ ಅಪಾರವಾದ ಜ್ಞಾನಿಯೂ,ಸೌಮ್ಯಮೂರುತಿಯೂ ಆಗಿರುವ ಬುಧನಿಗೆ ನಾನು ನಮಸ್ಕರಿಸುವೆ.

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್  |
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್  ||೫||

ಭಾವಾರ್ಥ:-ದೇವರ್ಕಳಿಗೂ ಋಷಿಮುನಿಗಳಿಗೂ ಗುರುವೂ,ಹೊಂಬಣ್ಣದ ಶರೀರವುಳ್ಳವನೂ,ಬುದ್ಧಿಸ್ವರೂಪನೂ,ಮೂರು ಲೋಕಗಳಿಗೆ ಒಡೆಯನೂ ಆಗಿರುವ ಆ ಗುರುಮೂರ್ತಿಗೆ ನಾನು ನಮಸ್ಕರಿಸುವೆ.

ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್  |
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್  ||೬||

ಭಾವಾರ್ಥ:-ಮಂಜಿನಹನಿ ಬೀಳುವ ಕಾಲದ ಮಲ್ಲಿಗೆಯ ಮತ್ತು ಕಮಲ ನಾಳದ ವರ್ಣವನ್ನು ಹೊಂದಿರುವವನೂ,ಅಸುರರ ಗುರುವೂ, ಸಮಸ್ತ ಶಾಸ್ತ್ರಗಳ ಭೋಧಕನೂ ಆಗಿರುವ ಭಾರ್ಗವನೆಂಬ ನಾಮವುಳ್ಳ ಆ ಶುಕ್ರನಿಗೆ ನಾನು ನಮಸ್ಕರಿಸುವೆ.

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್  |
ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್  ||೭||

ಭಾವಾರ್ಥ:-ನೀಲ ಬಣ್ಣದ ಕಾಡಿಗೆಯ ಬಣ್ಣದವನೂ,ಸೂರ್ಯ ತನಯನೂ,ಯಮನ ಅಗ್ರಜನೂ,ಛಾಯೆಯಲ್ಲಿ ಸೂರ್ಯನಿಂದ ಪುತ್ರನಾಗಿ ಜನಿಸಿದವನೂ,ಆಗಿರುವ ಆ ಶನೈಶ್ಚರನಿಗೆ ನಾನು ನಮಸ್ಕರಿಸುವೆ.

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಮ್  |
ಸಿಂಹಿಕಾ ಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್   ||೮||

ಭಾವಾರ್ಥ:-ಅರ್ಧದೇಹವುಳ್ಳವನೂ,ಮಹಾ ಶಕ್ತಿಶಾಲಿಯೂ, ಚಂದ್ರ ಸೂರ್ಯರನ್ನು ಪೀಡಿಸುವವನೂ,ಸಿಂಹಿಕೆಯ ಗರ್ಭದಲ್ಲಿ ಜನಿಸಿದವನೂ ಆಗಿರುವ ರಾಹುವಿಗೆ ನಾನು ನಮಸ್ಕರಿಸುತ್ತೇನೆ.

ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಮ್  |
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್  ||೯||

ಭಾವಾರ್ಥ:-ಮುತ್ತುಗದ ಹೂವಿನ ವರ್ಣವುಳ್ಳವನೂ,ಗ್ರಹ ನಕ್ಷತ್ರಗಳ ಶಿರವಾಗಿರುವವನೂ,ರುದ್ರನೂ,ಕ್ರೋಧಾತ್ಮನೂ,ಘೋರನೂ ಆಗಿರುವ ಕೇತುವಿಗೆ ನಾನು ನಮಸ್ಕರಿಸುವೆ.

ಇತಿ ವ್ಯಾಸ ಮುಖೋದ್ಗೀತಂ ಯ: ಪಠೇತ್ಸುಸಮಾಹಿತ:  |
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ  ||೧೦||

ಭಾವಾರ್ಥ:-ವ್ಯಾಸ ಮಹರ್ಷಿಗಳು ಸ್ತೋತ್ರ ಮಾಡಿದ ಈ ಗೀತಗಳನ್ನು ಶಾಂತ ಮನೋಭಾವದಿಂದ ಹಗಲು ಅಥವಾ ರಾತ್ರೆ ಓದುವವನ ವಿಘ್ನಾದಿ ಸಂಕಷ್ಟಗಳು ದೂರವಾಗುವವು.

ನರ ನಾರೀ ನೃಪಾಣಾಂ ಚ ಭವೇದ್ದು:ಸ್ವಪ್ನನಾಶನಮ್  |
ಐಶ್ವರ್ಯಮತುಲಂ ತೇಷಾಂ ಆರೋಗ್ಯಂ ಪುಷ್ಟಿವರ್ಧನಮ್  ||೧೧||

ಭಾವಾರ್ಥ:-ಸ್ತ್ರೀಪುರುಷರಾದಿಯಾಗಿ ರಾಜರುಗಳೇ ಮೊದಲಾದ ಸಮಸ್ತರಿಗೂ ಉಂಟಾಗಿರುವ ಘೋರ ಸ್ವಪ್ನಗಳು ನಾಶವಾಗುವವು.ಅವರಿಗೆ ಹೋಲಿಕೆಗೆ ಅಸಾಧ್ಯವಾಗುವಂತಹಾ ಐಶ್ವರ್ಯ,ಆರೋಗ್ಯ, ದೇಹಪುಷ್ಟಿಯುಂಟಾಗಿ ಬೆಳೆಯುವರು.

ಗ್ರಹ ನಕ್ಷತ್ರಜಾ: ಪೀಡಾಸ್ತಸ್ಕರಾಗ್ನಿ ಸಮುದ್ಭವಾ:  |
ತಾ: ಸರ್ವಾ: ಪ್ರಶಮಮ್ ಯಾಂತಿ ವ್ಯಾಸೋ ಬ್ರೂತೇ ನ ಸಂಶಯ:  ||೧೨||

ಭಾವಾರ್ಥ:-ಗ್ರಹಗಳಿಂದ,ನಕ್ಷತ್ರಗಳಿಂದ,ಹಾಗೆಯೇ ಕಳ್ಳಕಾಕರಿಂದ,ಅಗ್ನಿ ಪೀಡಾದಿಗಳಿಂದ ಉಂಟಾಗುವ ಸಮಸ್ತ ಪೀಡೆಗಳು ಪರಿಹಾರವಾಗುವವು ಎಂಬ ವ್ಯಾಸಮಹರ್ಷಿಗಳ ಮಾತುಗಳಲ್ಲಿ ಯಾವ ಸಂದೇಹವಿಲ್ಲ.
*********************************************************************************
  || ಇತಿ ನವಗ್ರಹಸ್ತೋತ್ರಮ್ || ||ಈ ರೀತಿಯಾಗಿ ನವಗ್ರಹಸ್ತೋತ್ರಗಳ ಭಾವಾರ್ಥವು ||
*********************************************************************************
                 -೨-
  || ಸೂರ್ಯಕವಚ ಸ್ತೋತ್ರಮ್ ||
 **************************
 || ಶ್ರೀ ಗಣೇಶಾಯ ನಮ: ||

ಯಾಜ್ಞವಲ್ಕ್ಯ ಉವಾಚ:-
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |
ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||೧||

ಭಾವಾರ್ಥ:-
ಯಾಜ್ಞವಲ್ಕ್ಯರುಹೇಳಿದರು:-
ಎಲೈ ಮುನಿಪುಂಗವನೇ!ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯಕವಚವನ್ನು ನಿನಗೆ ಅರುಹುವವನಾಗಿದ್ದೇನೆ.ಕೇಳುವವನಾಗು.

ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ |
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||೨||

ಭಾವಾರ್ಥ:-ಅತ್ಯಂತ ಪ್ರಕಾಶಿಸುತ್ತಿರುವ ಕಿರೀಟವುಳ್ಳವನೂ, ರಂಜಿಸುತ್ತಿರುವ ಮೊಸಳೆಯಾಕಾರದ ಕಿವಿಯಾಭರಣಗಳನ್ನು ಧರಿಸಿದವನೂ, ಸಾವಿರಕಿರಣಗಳೂಳ್ಳವನೂ ಆಗಿರುವ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತುತಿಯನ್ನು ಪಠಿಸಬೇಕು.

ಶಿರೋಮೇ ಭಾಸ್ಕರ: ಪಾತು ಲಲಾಟಂ ಮೇsಮಿತದ್ಯುತಿ: |
ನೇತ್ರೇ ದಿನಮಣಿ:ಪಾತು ಶ್ರವಣೇವಾಸರೇಶ್ವರ: ||೩||

ಭಾವಾರ್ಥ:-ನನ್ನ ತಲೆಯನ್ನು ಭಾಸ್ಕರನೂ,ಹಣೆಯನ್ನು ಮಿತಿಯಿಲ್ಲದಪ್ರಕಾಶವುಳ್ಳವನೂ ಕಾಪಾಡಲಿ.ದಿನಮಣಿಯು ನಯನಗಳನ್ನೂ,ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.

ಘ್ರಾಣಂ ಫರ್ಮಘೃಣಿ:ಪಾತು ವದನಂ ವೇದವಾಹನ: |
ಜಿಹ್ವಾಂ ಮೇ ಮಾನವ:ಪಾತು ಕಂಠಂ ಮೇ ಸುರವಂದಿತ: ||೪||

ಭಾವಾರ್ಥ:-ನಾಸಿಕವನ್ನು ಉಷ್ಣ ಕಿರಣನೂ,ಮುಖವನ್ನು ವೇದವಾಹನನೂ ಕಾಪಾಡಲಿ.ಹಾಗೆಯೇ ನನ್ನ ನಾಲಿಗೆಯನ್ನು ಗೌರವವನ್ನೊದಗಿಸುವವನೂ,ಕುತ್ತಿಗೆಯನ್ನು ಸುರರಿಂದ ನಮಿಸಲ್ಪಡುವವನೂ ಕಾಪಾಡಲಿ.

ಸ್ಕಂಧೌ ಪ್ರಭಾಕರ: ಪಾತು ವಕ್ಷ: ಪಾತು ಜನಪ್ರಿಯ: |
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರ: ||೫||

ಭಾವಾರ್ಥ:-ಪ್ರಭಾಕರನು ಹಗಲಿನಲ್ಲಿಯೂ, ಜನಪ್ರಿಯನು ಎದೆಯನ್ನೂ ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ,ಸರ್ವಾಂಗಗಳನ್ನು ಸಕಲಾಧಿಪನೂ ಕಾಪಾಡಲಿ.

ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೆ |
ದಧಾತಿ ಯ:ಕರೇತಸ್ಯ ವಶಗಾ: ಸರ್ವಸಿದ್ಧಯ: ||೬||

ಭಾವಾರ್ಥ:-ಸೂರ್ಯನ ರಕ್ಷಣೆ ಪಡೆಯುವ ಈ ಸ್ತುತಿಯನ್ನು ಭುಜಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಧರಿಸುಕೊಳ್ಳುವಾತನಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋsಧೀತೇಸ್ವಸ್ಥಮಾನಸ: |
ಸ ರೋಗಮುಕ್ತೋ ಧೀರ್ಘಾಯು: ಸುಖಂ ಪುಷ್ಟಿಂ ಚ ವಿಂದತಿ ||೭||

ಭಾವಾರ್ಥ:-ಸ್ನಾನವನ್ನು ಮಾಡಿ ಶಾಂತ ಮನಸ್ಸಿನಿಂದ ಉತ್ತಮವಾಗಿ ಜಪಿಸುವಾತನು ರೋಗ ಮುಕ್ತನಾಗಿ ಆರೋಗ್ಯಶಾಲಿಯಾಗುವನು.ಧೀರ್ಘಾಯುಶಾಲಿಯಾಗುವನು. ಸೌಖ್ಯವನ್ನೂ ಶರೀರ ಸಾಮರ್ಥ್ಯವಂತನಾಗುವನು.
*********************************************************************
|| ಇತಿ ಸೂರ್ಯ ಕವಚ ಸ್ತೋತ್ರಮ್ ||  || ಈ ರೀತಿಯಾಗಿ ಸೂರ್ಯ ಕವಚ ಸ್ತೋತ್ರಗಳ ಭಾವಾರ್ಥವಾಗಿದೆ ||
********************************************************************
                                 -೩-
  || ಶ್ರೀ ಸೂರ್ಯಾಷ್ಟಕಮ್ ||
***********************
ಆದಿದೇವ ನಮಸ್ತುಭ್ಯಂ ಪ್ರಸೀದಮಮ ಭಾಸ್ಕರ |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋsಸ್ತು ತೇ ||೧||

ಭಾವಾರ್ಥ:-ಹೇ!ಆದಿದೇವನಾಗಿರುವ ಭಾಸ್ಕರನೇ;ನಿನಗಿದೋ ಪ್ರಣಾಮಗಳು.ನೀನು ನನ್ನ ಬಗ್ಗೆ ಪ್ರಸನ್ನನಾಗು. ಹೇ! ದಿವಾಕರನೇ;ನಿನಗೆ ನನ್ನ ನಮಸ್ಕಾರಗಳು. ಎಲೈ ಪ್ರಭಾಕರನೇ; ನಿನಗೆ ನನ್ನ ನಮನಗಳು.

ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ |
ಶ್ವೇತಂ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೨||

ಭಾವಾರ್ಥ:-ಏಳು ಕುದುರೆಗಳುಳ್ಳ ರಥವನ್ನೇರಿದವನೂ, ಅಪ್ರತಿಮ ತೇಜಸ್ವೀಯೂ, ಹಸ್ತದಲ್ಲಿ ಶ್ವೇತಕಮಲವನ್ನು ಧರಿಸಿರುವವನೂ,ಕಶ್ಯಪ ತನಯನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

ಲೋಹಿತಂ ರಥಮಾರೂಢಮ್ ಸರ್ವಲೋಕ ಪಿತಾಮಹಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೩||

ಭಾವಾರ್ಥ:-ಕೆಂಬಣ್ಣದ ರಥವನ್ನೇರಿದನೂ, ಸಮಸ್ತ ಲೋಕಗಳ ಪಿತಾಮಹನೂ, ಮಹಾಪರಾಧಗಳನ್ನು ಪರಿಹರಿಸುವಾತನೂ,ಭಗವಂತನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಂ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೪||

ಭಾವಾರ್ಥ:-ಸತ್ವ,ರಜ,ತಮೋಗುಣಗಳೆಂಬ ಮೂರು ಗುಣಗಳುಳ್ಳಾತನೂ,ಬ್ರಹ್ಮ,ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿ ರೂಪನೂ, ಮಹಾಪರಾಧಗಳ ಪರಿಹಾರಕನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

ಬೃಂಹಿಂತಂ ತೇಜ: ಪುಂಜಂ ಚ ವಾಯುಮಾಕಾಶಮೇವ ಚ |
ಪ್ರಭುಂ ಚ ಸರ್ವ ಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೫||

ಭಾವಾರ್ಥ:-ಬೃಹತ್ತಾಗಿರುವ ಕಾಂತಿಯ ಸಮೂಹವೇ ಆಗಿರುವವನೂ, ವಾಯ್ವಾಕಾಶರೂಪಿಯೂ, ಸಮಸ್ತ ಲೋಕಾಧಿಪತಿಯೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

ಬಂಧೂಕ ಪುಷ್ಪಸಂಕಾಶಂ ಹಾರಕುಂಡಲ ಭೂಷಿತಮ್ |
ಏಕ ಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೬||

ಭಾವಾರ್ಥ:-ಕೆಂಬಣ್ಣದ ದಾಸವಾಳ ಪುಷ್ಪದಂತೆ ಪ್ರಕಾಶ ಹೊಂದಿರುವಾತನೂ, ಕಂಠಾಭರಣ, ಕಿವಿಯಾಭರಣಗಳಿಂದ  ಅಲಂಕೃತಗೊಂಡವನೂ, ಏಕಚಕ್ರಧಾರಿಯೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

ತಂ ಸೂರ್ಯಂ ಜಗತ್ಕರ್ತಾರಂ ಮಹಾತೇಜ: ಪ್ರದೀಪನಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೭||

ಭಾವಾರ್ಥ:-ಜಗತ್ತಿನ ನಿರ್ಮಾಪಕನೂ ಬೃಹತ್ತಾಗಿರುವ ತೇಜೋ ರಾಶಿಯಿಂದ ಪ್ರಕಾಶಿಸುತ್ತಿರುವವನೂ, ಮಹಾಪರಾಧಗಳ ಪರಿಹಾರಕನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

ತಂ ಸೂರ್ಯ ಜಗತಾಂ ನಾಥಂ ಜ್ಞಾನವಿಜ್ಞಾನ ಮೋಕ್ಷದಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೮||

ಭಾವಾರ್ಥ:-ಆ ಸೂರ್ಯನು ವಿಶ್ವಕ್ಕೆ ಅಧಿಪತಿಯು.ಜ್ಞಾನ-ವಿಜ್ಞಾನ-ಮೋಕ್ಷಗಳನ್ನು ದಯಪಾಲಿಸುವವನೂ ಮಹಾಪರಾಧಗಳ ಪರಿಹಾರಕನೂ ಆಗಿರುವವನು. ಅಂತಹಾ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.
*********************************************************************
  || ಇತಿ ಶ್ರೀ ಸೂರ್ಯಾಷ್ಟಕಮ್ ||  || ಈ ರೀತಿಯಾಗಿ ಶ್ರೀ ಸೂರ್ಯಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
                                -೪-
  || ತ್ರೈಲೋಕ್ಯ ಮಂಗಲ ಸೂರ್ಯಕವಚಮ್ ||
*************************************
ಸಾಂಬ ಸಾಂಬ ಮಹಾಬಾಹೋ ಶೃಣು ಮೇ ಕವಚಂ ಶುಭಮ್ |
ತ್ರೈಲೋಕ್ಯಮಂಗಲಂ ನಾಮ ಕವಚಂ ಪರಮಾದ್ಭುತಮ್ ||೧||

ಭಾವಾರ್ಥ:-ಹೇ!ಮಹಾಬಾಹುವಾಗಿರುವ ಸಾಂಬನೇ; ಶಿವನೇ; ಮೂರು ಲೋಕಗಳಿಗೆ ಮಂಗಲದಾಯಕವಾಗಿರುವ ಅತ್ಯದ್ಭುತವಾದಂತಹಾ ಕ್ಷೇಮವನ್ನುಂಟುಮಾಡುವ ನನ್ನ ಈ ಕವಚವನ್ನು ಅರುಹುವೆನಾಗುವೆನು.ಕೇಳುವಂತವನಾಗು.

ಯದ್ ಜ್ಞಾತ್ವಾ ಮಂತ್ರವಿತ್ಸಮ್ಯಕ್ ಫಲಂ ಪ್ರಾಪ್ನೋತಿ ನಿಶ್ಚಿತಂ |
ಯದ್ ಧೃತ್ವಾ ಚ ಮಹಾದೇವೋ ಗಣಾನಾಮಧಿಪೋsಭವತ್ ||೨||

ಭಾವರ್ಥ:-ಮಂತ್ರಗಳನ್ನು ಅರಿತವರು ಇದನ್ನು ಸರಿಯಾಗಿ ತಿಳಿದು ಖಚಿತವಾದ ಫಲವನ್ನು ಪಡೆಯುವನು.ಹಾಗೂ ಇದನ್ನು ಧರಿಸಿದ ಕಾರಣದಿಂದ ಮಹಾದೇವನು ಗಣಗಳಿಗೆ ಅಧಿಪತಿಯೆನಿಸಿದನು.

ಪಠನಾದ್ಧಾರಣಾದ್ವಿಷ್ಣು: ಸರ್ವೇಷಾಂ ಪಾಲಕ: ಸದಾ |
ಏವಮಿಂದ್ರಾದಯ: ಸರ್ವೇವೈಶ್ವರ್ಯಮವಾಪ್ನುವನ್ ||೩||

ಭಾವಾರ್ಥ:-ಮಹಾವಿಷ್ಣುವು ತಾನು ಪಠಿಸಿದ ಮಾತ್ರದಿಂದ ಸಮಸ್ತ ಜಗತ್ಪಾಲಕನಾದನು. ಅಂತಯೇ ಮಾಡಿದ ಇಂದ್ರಾದಿದೇವತೆಯರು ಸಮಸ್ತ ಬಗೆಯ ಸಂಪದವನ್ನು ಪಡೆದರು.

ಕವಚಸ್ಯ ಋಷಿರ್ಬ್ರಹ್ಮಾ ಛಂಧೋನುಷ್ಟುಬುದಾಹೃತ: |
ಶ್ರೀ ಸೂರ್ಯೋ ದೇವತಾ ಚಾತ್ರ ಸರ್ವದೇವನಮಸ್ಕೃತ: ||೪||

ಭಾವಾರ್ಥ:-ಈ ಕವಚಕ್ಕೆ ಬ್ರಹ್ಮನು ಋಷಿ.ಇದು ಅನುಷ್ಟಪ್ ಛಂಧಸ್ಸಿನಲ್ಲಿದೆ.ಇದಕ್ಕೆ ಸಮಸ್ತ ದೇವರ್ಕಳಿಂದ ನಮಸ್ಕರಿಸಲ್ಪಡುವ ಶ್ರೀ ಸೂರ್ಯನು ದೇವತೆಯಾಗಿರುವನು.

ಯಶ ಆರೋಗ್ಯ ಮೋಕ್ಷೇಷು ವಿನಿಯೋಗ: ಪ್ರಕೀರ್ತಿತ: |
ಪ್ರಣವೋ ಮೇ ಶಿರ:ಪಾತು ಘೃಣಿರ್ಮೇ ಪಾತು ಭಾಲಕಮ್ ||೫||

ಭಾವಾರ್ಥ:-ಯಶಸ್ಸು,ಆರೋಗ್ಯ,ಮೋಕ್ಷಗಳಲ್ಲಿ ಈ ಕವಚದ ವಿನಿಯೋಗವು ಎಂದು ತಿಳಿಸಲ್ಪಟ್ಟಿದೆ. ಓಂ ಕಾರವು ನನ್ನ ತಲೆಯನ್ನೂ, ಕಿರಣವುಳ್ಳಾತನು ನನ್ನ ಹಣೆಯನ್ನೂ ಕಾಪಾಡಲಿ.

ಸೂರ್ಯೋsವ್ಯಾನ್ನಯನದ್ವಂದ್ವಮಾದಿತ್ಯ: ಕರ್ಣಯುಗ್ಮಕಂ |
ಅಷ್ಟಾಕ್ಷರೋ ಮಹಾಮಂತ್ರ: ಸರ್ವಾಭೀಷ್ಟ ಫಲಪ್ರದ: ||೬||

ಭಾವಾರ್ಥ:-ಸೂರ್ಯನು ನಯನಗಳನ್ನೂ,ಆದಿತ್ಯನು ಕಿವಿಗಳನ್ನೂ ರಕ್ಷಿಸಲಿ.ಅಷ್ಟಾಕ್ಷರ ಮಹಾಮಂತ್ರವು ಸಮಸ್ತಾಭೀಷ್ಟಗಳನ್ನೂ ಈಡೇರಿಸಲಿ.

ಹ್ರೀಂ ಬೀಜಂ ಮೇಮುಖಂ ಪಾತು ಹೃದಯಂ ಭುವನೇಶ್ವರಿ |
ಚಂದ್ರಬೀಜಂ ವಿಂಶದಾದ್ಯಂ ಪಾತು ಮೇ ಗುಹ್ಯದೇಶಿಕಂ ||೭||

ಭಾವಾರ್ಥ:-"ಹ್ರೀಂ"ಎನ್ನುವ ಬೀಜಾಕ್ಷರವು ಮುಖವನ್ನೂ, ಹೃದಯವನ್ನು ಭುವನೇಶ್ವರಿಯೂ ಕಾಪಾಡಲಿ. ಇಪ್ಪತ್ತರಲ್ಲಿ ಆದಿಯದಾದ ಚಂದ್ರಬಿಂಬವು ನನ್ನ ಗುಹ್ಯಪ್ರದೇಶವನ್ನೂ ಕಾಪಾಡಲಿ.

ಅಕ್ಷರೋsಸೌ ಮಹಾಮಂತ್ರ: ಸರ್ವ ತಂತ್ರೇಷು ಗೋಪಿತ: |
ಶಿವೋ ವಹ್ನಿಸಮಾಯುಕ್ತೋ ವಾಮಾಕ್ಷೀಬಿಂದು ಭೂಷಿತ: ||೮||

ಭಾವಾರ್ಥ:-ಈ ಅಕ್ಷರವು ಮಹಾಮಂತ್ರವಾಗಿದ್ದು ಸಮಸ್ತ ತಂತ್ರಗಳಲ್ಲಿ ಗುಪ್ತವಾದದ್ದಾಗಿದೆ.ಇದು ಮಂಗಲದಾಯಕವಾಗಿದ್ದು ಅಗ್ನಿಯಿಂದ ಕೂಡಿರುವುದಾಗಿದೆ. ಹಾಗೂ ಎಡಗಣ್ಣಿನ ಬಿಂದುವಿಗಿಂತ ಉತ್ತಮವಾಗಿದೆ.

ಏಕಾಕ್ಷರೋ ಮಹಾಮಂತ್ರ: ಶ್ರೀಸೂರ್ಯಸ್ಯ ಪ್ರಕೀರ್ತಿತ: |
ಗುಹ್ಯಾದ್ಗುಹ್ಯತರೋ ಮಂತ್ರೋ ವಾಂಛಾಚಿಂತಾಮಣಿಸ್ಮೃತ: ||೯||

ಭಾವಾರ್ಥ:-ಶ್ರೀ ಸೂರ್ಯನಿಂದ ಅರುಹಲ್ಪಟ್ಟಂತಹಾ ಈ ಏಕಾಕ್ಷರವು ಶ್ರೇಷ್ಟ ಮಂತ್ರವಾಗಿದ್ದು ಅತಿ ಗುಪ್ತವಾದುದಾಗಿದೆ. ಇದು ಕಾಮನೆಗಳನ್ನು ಪೂರೈಸುವ ಚಿಂತಾಮಣಿಯೆನಿಸಿದೆ.

ಶೀರ್ಷಾದಿ ಪಾದಪರ್ಯಂತಂ ಸದಾಪಾತು ಮನೂತ್ತಮ: |
ಇತಿ ತೇ ಕಥಿತಂ ದಿವ್ಯಂ ತ್ರಿಷುಲೋಕೇಷು ದುರ್ಲಭಮ್ ||೧೦||

ಭಾವಾರ್ಥ:-ಶಿರದಿಂದ ಪಾದದ ತನಕ ಸಮಸ್ತ ದೇಹವನ್ನು ಮನು ವಂಶದ ಶ್ರೇಷ್ಟನು ರಕ್ಷಿಸಲಿ.ಈ ತೆರನಾಗಿ ಮೂರು ಲೋಕಂಗಳಲ್ಲಿಯೂ ದೊರಕಿಸಲಸಾಧ್ಯವಾಗಿರುವಂತಹ ಮತ್ತು ಪಾವನವಾಗಿರುವುದನ್ನು ನಿನಗರುಹಿರುವೆನು.

ಶ್ರೀಪದಂ ಕಾಂತಿದಂ ನಿತ್ಯಂ ಧನಾರೋಗ್ಯವಿವರ್ಧನಮ್ |
ಕುಷ್ಟಾದಿ ರೋಗಶಮನಂ ಮಹಾವ್ಯಾಧಿವಿನಾಶನಮ್ ||೧೧||

ಭಾವಾರ್ಥ:-ಶ್ರೀಪದವು ಸೌಂದರ್ಯವನ್ನೂ,ಅನುದಿನವೂ ಆರೋಗ್ಯಾದಿಸಂಪದಗಳನ್ನೂ ಹೆಚ್ಚಿಸುವುದು.ಕುಷ್ಟಾದಿ ಮಹಾರೋಗಗಳನ್ನು ನಿವಾರಿಸುವುದರೊಡನೆ ಮಹಾವ್ಯಾಧಿಗಳನ್ನು ನಾಶಗೊಳಿಸುವಂತಹದಾಗಿದೆ.

ತ್ರಿಸಂಧ್ಯಂ ಯ: ಪಠೇನ್ನಿತ್ಯಮರೋಗೀ ಬಲವಾನ್ಭವೇತ್ |
ಬಹುನಾಕಿಮಿಹೋಕ್ತೇನ ಯದ್ಯನ್ಮಸಿವರ್ತತೇ |||೧೨||

ಭಾವಾರ್ಥ:-ಪ್ರತ್ತಿದಿನವೂ ದಿನದ ಮೂರು ಸಂಧ್ಯಾಕಾಲಗಳಲ್ಲಿ ಇಅದನ್ನು ಪಠಿಸುವವನು ರೋಗಮುಕ್ತನಾಗಿ ಸಾಮರ್ಥ್ಯವಂತನಾಗುವನು.

ತತ್ಸರ್ವಂ ಭವೇತ್ತಸ್ಯ ಕವಚಸ್ಯ ಚ ಧಾರಣಾತ್ |
ಭೂತ ಪ್ರೇತ ಪಿಶಾಚಾಶ್ಚ ಯಕ್ಷ ಗಂಧರ್ವರಾಕ್ಷಸಾ : ||೧೩||

ಭಾವಾರ್ಥ:-ಹೆಚ್ಚು ಮಾತೇಕೆ?ಈ ಕವಚವನ್ನು ಧರಿಸುವುದರಿಂದ ಮನದ ಸಮಸ್ತ ಇಷ್ಟಾರ್ಥಗಳೆಲ್ಲ ಈಡೇರುವವು.ಭೂತ,ಪ್ರೇತ,ಪಿಶಾಚಿಗಳು,ಯಕ್ಷರು,ಗಂಧರ್ವರು,ರಕ್ಕಸರು ಸಮೀಪಕ್ಕೂ ಬರಲಾರವು.

ಬ್ರಹ್ಮರಾಕ್ಷಸವೇತಾಲಾ ನ ದೃಷ್ಟುಮಪಿ ತಂ ಕ್ಷಮಾ: |
ದೂರಾದೇವ ಪಲಾಯಂತೇ ತಸ್ಯ ಸಂಕೀರ್ತನಾದಪಿ ||೧೪||

ಭಾವಾರ್ಥ:-ಬ್ರಹ್ಮರಾಕ್ಷಸರು,ಬೇತಾಳಗಳು ಅವನನ್ನು ನೋಡದೆ ಹೋಗುವವು. ಇದನ್ನು ಸ್ತುತಿಸುವುದರಿಂದ ದೂರದಿಂದಲೇ ಪಲಾಯನ ಗೈಯುವವು.

ಭೂರ್ಜಪತ್ರೇ ಸಮಾಲಿಖ್ಯ ರೋಚನಾಗರು ಕುಂಕುಮೈ: |
ರವಿವಾರೇ ಚ ಸಂಕ್ರಾಂತ್ಯಾಂ ಸಪ್ತಮ್ಯಾಂ ಚ ವಿಶೇಷತ: ||೧೫||

ಭಾವಾರ್ಥ:-ಗೋರೋಚನ,ಶ್ರೀಗಂಧ,ಕುಂಕುಮಗಳಿಂದ ಭುಜಪತ್ರಾವಳಿಯಲ್ಲಿ ಈ ಮಂತ್ರವನ್ನು ಬರೆದು ಭಾನುವಾರ ಸಂಕ್ರಮಣಕಾಲದಲ್ಲಿ ಸಪ್ತಮಿ ದಿವಸ ಧರಿಸುವುದು ವಿಶೇಷ ಫಲದಾಯಕವಾಗಿದೆ.

ಧಾರಯೇತ್ಸಾಧಕಶ್ರೇಷ್ಟ: ಶ್ರೀ ಸೂರ್ಯಸ್ಯ ಪ್ರಿಯೋ ಭವೇತ್ |
ತ್ರಿಲೋಹ ಮಧ್ಯಗಂ ಕೃತ್ವಾ ಧಾರದ್ದ್ಕ್ಷಿಣೇ ಕರೇ ||೧೬||

ಭಾವಾರ್ಥ:-ಈ ರೀತಿಯಾಗಿ ಅನುಷ್ಠಾನ ಕೈಗೊಳ್ಳುವ ಸಾಧಕ ಶ್ರೇಷ್ಟನು ಶ್ರೀ ಸೂರ್ಯನಿಗೆ ಪ್ರೀತಿಯವನಾಗುವನು.ಮೂರು ಲೋಹಗಳನ್ನೊಳಗೊಂಡ ತಾಯಿತದಲ್ಲಿ ಇದನ್ನು ಅಳವಡಿಸಿ ಬಲಹಸ್ತದಲ್ಲಿ ಧರಿಕೊಳ್ಳಬೇಕು.

ಶಿಖಾಯಾಮಥವಾ ಕಂಠೇ ಸೋsಪಿ ಸೂರ್ಯೇ ನ ಸಂಶಯ: |
ಇತಿ ತೇ ಕಥಿತಂ ಸಾಂಬ ತ್ರೈಲೊಖ್ಯಮಂಗಲಾಭಿದಮ್ ||೧೭||

ಭಾವಾರ್ಥ:-ಶಿಖೆ ಅಥವಾ ಕುತ್ತಿಗೆಯಲ್ಲಿ ಧರಿಸಿದಲ್ಲಿ ಆತನು ಸಂಶಯಾತೀತನಾನಿ ಸ್ರ್ಯನೇ ಆಗುವನು.ಈ ತ್ರೈಲೋಕ್ಯ ಮಂಗಲದಾಯಕವಾದ ಕವಚವು ಪ್ರಪಂಚದಲ್ಲಿ ದುರ್ಲಭವಾಗಿದೆ. 

ಕವಚಮ್ ದುರ್ಲಭಮ್ ಲೋಕೇ ತವ ಸ್ನೇಹಾತ್ಪ್ರಕಾಶಿತಮ್ |
ಅಜ್ಞಾತ್ವಾ ಕವಚಂ ದಿವ್ಯಂ ಯೋ ಜಪೇತ್ಸೂರ್ಯಮುತ್ತಮಮ್ ||೧೮||

ಭಾವಾರ್ಥ:-ಎಂಬುದಾಗಿ ಸಾಂಬ ಸದಾಶಿವನಿಗೆ ಅರುಹಿ ತನ್ನ ಸ್ನೇಹವನ್ನು ಪ್ರಕಟಗೊಳಿಸಿದನು. ಹುದುಗಿಕೊಂಡಿರುವಈ ಕವಚವು ಸೂರ್ಯನಿಗೆ ಶ್ರೇಷ್ಟವಾದುದಾಗಿದೆ.

ಸಿದ್ಧಿರ್ನ ಜಾಯತೇ ತಸ್ಯ ಕಲ್ಪಕೋಟಿ ಶತೈರಪಿ ||೧೯||

ಭಾವಾರ್ಥ:-ಇದನ್ನು ಕ್ರಮವರಿಯದೆ ಜಪಿಸುವಾತನಿಗೆ ಶತಕೋಟಿಕಲ್ಪಗಳಾದಾಗ್ಯೂ ಸಿದ್ಧಿಯುಂಟಾಗದು.
*********************************************************************
                  || ಇತಿ ಶ್ರೀ ತ್ರೈಲೋಕ್ಯ ಮಂಗಲ ಸೂರ್ಯಕವಚಮ್ ||
    || ಈ ರೀತಿಯಾಗಿ ತ್ರೈಲೋಕ್ಯ ಮಂಗಲ ಸೂರ್ಯಕವಚ ಮಂತ್ರಗಳ ಭಾವಾರ್ಥವಾಗಿದೆ. ||
*********************************************************************
                             -೫-
  || ಶ್ರೀ ಶನಿ ಸ್ತೋತ್ರಮ್ ||
 **********************
            || ಶ್ರೀ ಗಣೇಶಾಯ ನಮ: ||

ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿ: |
ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದ: |
ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗ: ||

ಭಾವಾರ್ಥ:-ಈ ಶನೈಶ್ಚರ ಸ್ತೋತ್ರಕ್ಕೆ ದಶರಥ ಋಷಿಯಾಗಿದ್ದು ಶನೈಶ್ಚರನು ದೇವತೆಯೂ ಆಗಿದ್ದು ಇದು ತ್ರಿಷ್ಟುಪ್ ಛಂದಸ್ಸಿನಲ್ಲಿದೆ. ಶನೈಶ್ಚರನ ಪ್ರೀತ್ಯರ್ಥಕ್ಕಾಗಿ ಜಪದಲ್ಲಿ ಇದನ್ನು ವಿನಿಯೋಗವಾಗಿದೆ.

ದಶರಥ ಉವಾಚ:-

ಕೋಣೋsಂತಕೋ ರೌದ್ರಯಮೋsಥ ಬಭ್ರು: |
ಕೃಷ್ಣ: ಶನಿ: ಪಿಂಗಲ ಮಂದ ಸೌರಿ ||
ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ |
ತಸ್ಮೈನಮ: ಶ್ರೀ ರವಿನಂದನಾಯ ||೧||

ಭಾವಾರ್ಥ:-ದಶರಥನು ಹೇಳಿದ್ದು, ಕೋಣ, ಅಂತಕ, ರೌದ್ರ, ಯಮ, ಬಭ್ರು, ಕೃಷ್ಣ, ಶನಿ, ಪಿಂಗಲ, ಮಂದ, ಸೌರಿ ಎಂಬುದಾಗಿ ಅನುದಿನವೂ  ಸ್ಮರಿಸಿದಾಗ ಯಾರು ಪೀಡೆಗಳನ್ನು ಪರಿಹರಿಸುವನೋ ಅಂತಹಾ ರವಿತನಯನಿಗೆ ನನ್ನ ನಮಸ್ಕಾರಗಳು.

ಸುರಾಸುರಾ: ಕಿಂ ಪುರುಷೋರಗೇಂದ್ರಾ|
ಗಂಧರ್ವ ವಿದ್ಯಾಧರ ಪನ್ನಗಾಶ್ಚ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮ: ಶ್ರೀರಘುವಿನಂದನಾಯ ||೨||

ಭಾವಾರ್ಥ:-ದೇವತೆಗಳು,ಅಸುರರು,ಕಿಂಪುರುಷರು,ನಾಗೇಂದ್ರರು,ಗಂಧರ್ವ ವಿದ್ಯಾಧರರು,ಪನ್ನಗರೇ ಆದಿಯಾಗಿ ಎಲ್ಲರೂ ವಿಷಮಸ್ಥಾನಸ್ಥಿತನಾಗಿರುವ ಇವನಿಂದ ಪೀಡಿಸಲ್ಪಡುವರು.ಅಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು.

ನರಾನರೇಂದ್ರಾ: ಪಶವೋಮೃಗೇಂದ್ರಾ |
ವನ್ಯಾಶ್ಚಯೇ ಕೀಟ ಪತಂಗ ಭೃಂಗಾ: ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮ: ಶ್ರೀರವಿನಂದನಾಯ ||೩||

ಭಾವಾರ್ಥ:-ಮನುಜರು,ರಾಜರುಗಳು,ಪಶುಗಳು,ಕಾನನದಲ್ಲಿರುವ ಮೃಗರಾಜನಾಗಿರುವ ಸಿಂಹ ಹಾಗೆಯೇ ಕೀಟಗಳು,ಪತಂಗಗಳು,ಭ್ರಮರಗಳು ಕೂಡಾ  ವಿಷಮಸ್ಥಾನಸ್ಥಿತನಾಗಿರುವ ಇವನಿಂದ ಪೀಡಿಸಲ್ಪಡುವರು.ಅಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ದೇಶಾಶ್ಚ ದುರ್ಗಾಣಿ ವನಾನಿಯತ್ರ |
ಸೇನಾನಿವೇಶಾ: ಪುರಪತ್ತನಾನಿ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮ: ಶ್ರೀರವಿನಂದನಾಯ ||೪||

ಭಾವಾರ್ಥ:-ದೇಶಗಳು,ಕೋಟೆಕೊತ್ತಳಗಳು,ವನಗಳು,ಸೈನಿಕರ ನೆಲೆಗಳು,ನಗರ ಪಟ್ಟಣಗಳು ಇವೆಲ್ಲವೂ ವಿಷಮಸ್ಥಾನಸ್ಥಿತನಾಗಿರುವ ಇವನಿಂದ ಪೀಡಿಸಲ್ಪಡುವರು.ಅಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು.

ತಿಲೈರ್ಯವೈರ್ಮಾಷ ಗುಡಾನ್ನ ದಾನೈ |
ರ್ಲೋಹೇನ ನೀಲಾಂಬರದಾನತೋ ವಾ ||
ಪ್ರೀಣಾತಿ ಮಂತ್ರೈರ್ನಿಜವಾಸರೇ ಚ |
ತಸ್ಮೈ ನಮ: ಶ್ರೀರವಿನಂದನಾಯ ||೫||

ಭಾವಾರ್ಥ:-ಶನೈಶ್ಚರನವಾರವಾಗಿರುವ ಶನಿವಾರದಂದು ಎಳ್ಳು, ಗೋದಿ, ಉದ್ದು, ಬೆಲ್ಲ, ಅನ್ನದಾನದಿಂದ ಹಾಗೂ ಕಬ್ಬಿಣ,ನೀಲವರ್ಣದ ವಸ್ತ್ರಗಳನ್ನು ದಾನ ಮಾಡುವುದರಿಂದ ಮತ್ತು ಶನೈಶ್ಚರನ ಮಂತ್ರಗಳಿಂದ ಆತನು ಸುಪ್ರೀತನಾಗುವನು. ಅಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ಪ್ರಯಾಗ ಕೂಲೇ ಯಮುನಾತಟೇ ಚ |
ಸರಸ್ವತಿ ಪುಣ್ಯ ಜಲೇ ಗುಹಾಯಾಮ್ ||
ಯೋ ಯೋಗೀನಾಂ ಧ್ಯಾನಗತೋsಪಿ ಸೂಕ್ಷ್ಮ |
ಸ್ತಸ್ಮೈ ನಮ: ಶ್ರೀರವಿನಂದನಾಯ ||೬||

ಭಾವಾರ್ಥ:-ಪ್ರಯಾಗದ ದಂಡೆಯಯಮೇಲೆ, ಯಮುನಾ ನದಿಯ ತಟಾಕಿನಲ್ಲಿ, ಸರಸ್ವತಿ ನದಿಯ ಪುಣ್ಯ ಜಲದಲ್ಲಿ ಮತ್ತು ಗುಹೆಗಳಲ್ಲಿ ಮಹಾಯೋಗಿಗಳ ಧ್ಯಾನದ ಸೂಕ್ಷ್ಮರೂಪಿಯಾಗಿ ಯಾರು ಅಂತರ್ಗತರಾಗುವನೋ ಅಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟ |
ಸ್ತದೀಯ ವಾರೇಸ ನರ: ಸುಖೀಸ್ಯಾತ್ ||
ಗ್ರಹಾದ್ಗತೋಯೋನ ಪುನ: ಪ್ರಯಾತಿ |
ತಸ್ಮೈ ನಮ: ಶ್ರೀರವಿನಂದನಾಯ ||೭||

ಭಾವಾರ್ಥ:-ಶನಿವರದಂದು ಬೇರೆ ಊರಿನಿಂದ ತನ್ನ ಸ್ವಗೃಹಕ್ಕೆ ಬರುವ ಮನುಜನು ಸುಖಿಯಾಗುವನು.ಆ ದಿನ ಮನೆಯಿಂದ ಹೊರಗೆ ಹೋದವನು ಮತ್ತೆ ಬರಲಾರನು. ಅಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು.

ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ |
ತ್ರಾತಾ ಹರೀಶೋ ಹರಿತೇ ಪಿನಾಕಿ ||
ಏಕಸ್ತ್ರಿಧಾ ಋಗ್ಯಜು: ಸಾಮಮೂರ್ತಿ |
ಸ್ತಸ್ಮೈ ನಮ: ಶ್ರೀರವಿನಂದನಾಯ ||೮||

ಭಾವಾರ್ಥ:-ಸ್ವರ್ಗ,ಮರ್ತ್ಯ,ಪಾತಾಳಗಳೆಂಬ ಮೂರ್ಲೋಕಗಳನ್ನು ಸೃಷ್ಟಿಸಿದ ಬ್ರಹ್ಮ,ಪಾಲಕನಾದ ಶ್ರೀಹರಿ,ಲಯಕಾರಕನಾಗಿರುವ ಹರ ಮತ್ತು ಋಗ್ ಯಜು ಸಾಮಗಳೆಂಬ ವೇದತ್ರಯಗಳ ಸ್ವರೂಪವಾಗಿರುವಂತಹಾ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ಶನ್ಯಷ್ಟಕಂ ಯ: ಪ್ರಯತ: ಪ್ರಭಾತೇ |
ನಿತ್ಯಂ ಸುಪುತ್ರೈ: ಪಶು ಬಾಂಧವೈಶ್ಚ ||
ಪಠೇತ್ತು ಸೌಖ್ಯಂ ಭುವಿಭೋಗಯುಕ್ತ: |                                     
 ಪ್ರಾಪ್ನೋತಿ ನಿರ್ವಾಣ ಪದಂ ತದಂತೇ ||೯||

ಭಾವಾರ್ಥ:-ಶನೈಷ್ಚರನ ಈ ಅಷ್ಟಕ ಸ್ತೋತ್ರಗಳನ್ನು ಯಾರು ಪ್ರತಿದಿನವೂ ಉಷ:ಕಾಲದಲ್ಲಿ ಪಠಿಸುವರೋ ಅವರು ಸದ್ಗುಣಯುತ ಪುತ್ರರು, ಪಶುಗಳು, ಬಾಂಧವರುಗಳಿಂದ ಕೂಡಿ ಭೂಮಿಯಲ್ಲಿರುವ ಸಮಸ್ತ ಭೋಗಗಳನ್ನೂ ಕೂಡಿ ಸುಖಸೌಖ್ಯಾದಿಗಳನ್ನೂ ಅನುಭವಿಸುವರು ಮಾತ್ರವಲ್ಲದೆ ಮರಣಾನಂತರ ಮೋಕ್ಷವನ್ನು ಹೊಂದುವರು.

ಕೋಣ್ಸ್ಥ:ಪಿಂಗಲೋ ಬಭ್ರು: |
ಕೃಷ್ಣೋರೌದ್ರೋsಂತಕೋ ಯಮ: ||
ಸೌರಿ: ಶನೈಶ್ಚರೋ ಮಂದ:|
ಪಿಪ್ಪಲಾದೇನ ಸಂಸ್ತುತ: ||೧೦||

ಭಾವಾರ್ಥ:-ಕೋಣಸ್ಥ,ಪಿಂಗಲ,ಬಭ್ರು,ಕೃಷ್ಣ,ರೌದ್ರ,ಅಂತಕ,ಯಮ,ಸೌರಿ,ಶನೈಶ್ಚರ,ಮಂದ ಎಂಬೀ ಹೆಸರುಗಳು ಪಿಪ್ಪಲಾದ ಮುನಿಯಿಂದ ಸ್ತುತಿಸಲ್ಪಟ್ಟಿರುವುದಾಗಿದೆ.

ಏತಾನಿ ದಶನಾಮಾನಿ |
ಪ್ರಾತರುತ್ಥಾಯ ಯ: ಪಠೇತ್ ||
ಶನೈಶ್ಚರ ಕೃತಾಪೀಡಾ |
ನ ಕದಾಚಿತ್ ಭವಿಷ್ಯತಿ ||೧೧||

ಭಾವಾರ್ಥ:-ಉಷ:ಕಾಲದಲ್ಲಿ ಎದ್ದು ಶನೈಶ್ಚರನ ಈ ಹತ್ತು ಹೆಸರುಗಳನ್ನು ಪಠಿಸುವಾತನಿಗೆ ಶನೈಶ್ಚರನಿಂದ ಉಂಟಾಗಬಹುದಾದ ಅನಿಷ್ಟಗಳು ಎಂದಿಗೂ ಉಂಟಾಗಲಾರವು.
*********************************************************************
 || ಶ್ರೀ ಶನಿ ಸ್ತೋತ್ರಮ್  ||  || ಈ ರೀತಿಯಾಗಿ ಶ್ರೀ ಶನಿ ಸ್ತೋತ್ರಗಳ ಭಾವಾರ್ಥವಾಗಿದೆ ||

*********************************************************************
                                      -೬-
    ||  ಋಣಮೋಚಕ ಮಂಗಲ ಸ್ತೋತ್ರಮ್  ||
  **************************************
ಮಂಗಲೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದ: | 
ಸ್ಥಿರಾಸನೋ ಮಹಾಕಾಯ: ಸರ್ವ ಕರ್ಮಾವರೋಧಕ: ||೧||

ಭಾವಾರ್ಥ:-ಮಂಗಳ,ಭೂಮಿಪುತ್ರ,ಋಣನಾಶಕ,ಧನದಾಯಿ,ಸ್ಥಿರಾಸನ, 

ಮಹಾಕಾಯ, ಸರ್ವಕರ್ಮಗಳಿಗೆ ತಡೆಯನ್ನುಂಟುಮಾಡುವವ,...

ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರ: |
ಧರಾತ್ಮಜ: ಕುಜೋ ಭೌಮೋ ಭೂತಿದೋ ಭೂಮಿ ನಂದನ: ||೨||

ಭಾವಾರ್ಥ:-ಲೋಹಿತ,ಲೋಹಿತಾಕ್ಷ,ಸಾಮವೇದ ಗಾಯಕರಿಗೆ 

ಕರುಣೆಯನ್ನು 

ತೋರುವವ,ಭೂಮಿತನಯ,ಕುಜ,ಭೌಮ,ಅಭ್ಯುದಯಕಾರಕ,ಭೂಮಿಗೆ 

ಸಂತಸವನ್ನು ದಯಪಾಲಿಸುವವ....

ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕ: |
ವೃಷ್ಟೇ ಕರ್ತಾsಪಹರ್ತಾಚ ಸರ್ವಕಾಮ ಫಲಪ್ರದ: ||೩||

ಅಂಗಾರಕ,ಯಮ,ಸರ್ವರೋಗವಿನಾಶಕ,ವೃಷ್ಟಿ[ಮಳೆ]ಕಾರಕ,ವೃಷ್ಟ್ಯಾಪ

ಹಾರಕ, ಸಮಸ್ತ ಕಾಮನೆಗಳ ಫಲದಾಯಕ...

ಏತಾನಿ ಕುಜನಾಮಾನಿ ನಿತ್ಯಮ್ ಯ: ಶ್ರದ್ಧಯಾ ಪಠೇತ್ |
ಋಣಂ ನ ಜಾಯತೇ ತಸ್ಯ ಧನಂ ಶೀಘ್ರ ಮವಾಪ್ನುಯಾತ್ ||೪||

ಭಾವಾರ್ಥ:-ಕುಜನ ಕುರಿತಾದ ಈ ಹೆಸರುಗಳನ್ನು ಅನುದಿನವೂ 

ಶ್ರದ್ಧಾಯುಕ್ತನಾಗಿ ಯಾವಾತನು ಪಠಿಸುವನೋ ಅವನಿಗೆ ಸಾಲಾದಿ 

ಋಣಗಳು ಬಾಧಿಸುವುದಿಲ್ಲ. ಅಂತಹವನು ಶೀಘ್ರವಾಗಿ 

ಧನವಂತನಾಗುವನು.

ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿ ಹಸ್ತಂಚ ಮಂಗಲಂ ಪ್ರಣಮಾಮ್ಯಹಂ ||೫||

ಭಾವಾರ್ಥ:-ಭೂದೇವಿಯ ಗರ್ಭದಿಂದುದಿಸಿದವನೂ,ವಿದ್ಯುತ್ತಿನ 

ಪ್ರಕಾಶದಂತೆ ಬೆಳಗುತ್ತಲಿರುವವನೂ,ಕುಮಾರನೂ,ಶಕ್ತಿಹಸ್ತನೂ 

ಆಗಿರುವ ಮಂಗಳನಿಗೆ ನಾನು ನಮಿಸುವೆನು. 

ಸ್ತೋತ್ರಮಂಗಾರಕಸ್ಯೈ ತತ್ಪಠನೀಯಂ ಸದಾನೃಭಿ: |
ನ ತೇಷಾಂ ಭೌಮಜಾ ಪೀಡಾ ಸ್ವಲ್ಪಾಪಿ ಭವತಿಕ್ವಚಿತ್ ||೬||

ಭಾವಾರ್ಥ:-ಅಂಗಾರಕನೆಂಬ ಹೆಸರಿನ ಈ ಕುಜ ಸ್ತೋತ್ರವು ಮನುಜರಿಂದ 

ಯಾವಾಗಲೂ ಪಠಣ ಮಾಡತಕ್ಕದ್ದಾಗಿದೆ.ಆದರಿಂದ ಕುಜನ ಅನಿಷ್ಟಗಳು 

ಅತ್ಯಂತ ವಿರಳವಾಗಿ ಕೂಡಾ ಕಿಂಚಿತ್ತೂ ಬಾಧಿಸದು.

ಅಂಗಾರಕ ಮಹಾಭಾಗ ಭಗವನ್ ಭಕ್ತವತ್ಸಲ |
ತ್ವಾಂ ನಮಾಮಿ ಮಮಾಶೇಷ ಮೃಣಮಾಶು ವಿನಾಶಯ ||೭||

ಭಾವಾರ್ಥ:-ಹೇ ಭಕ್ತವತ್ಸಲನೇ! ಸುಪ್ರಸಿದ್ಧನಾಗಿರುವ 

ಭಗವದ್ಸ್ವರೂಪೀ ಕುಜನೇ, ನಿನಗಾನು ನಮಿಸುವೆನು. ನನ್ನ ಸಮಸ್ತ 

ರಿಣದ ಹಂಗಿನಿಂದ ನಿ:ಶೇಷವಾಗಿ ಮುಕ್ತಗೊಳಿಸು.

ಋಣರೋಗಾದಿ ದಾರಿದ್ರ್ಯಂ ಯೇ ಚಾನ್ಯೇಹ್ಯಪಮೃತ್ಯವ: |
ಭಯಕ್ಲೇಷ ಮನಸ್ತಾಪಾನಶ್ಯಂತು ಮಮ ಸರ್ವದಾ ||೮||

ಭಾವಾರ್ಥ:-ಹಂಗು[ಸಾಲದಋಣ],ಅನಾರೋಗ್ಯಾದಿ ಅನಿಷ್ಟಗಳು, 

ದರಿದ್ರತೆ, ಹಾಗೆಯೇ ಅಪಮೃತ್ಯು, ಭೀತಿ,ದು:ಖ, ಮನೋವ್ಯಥೆ, 

ಸೇಡು ಇತ್ಯಾದಿ ಅನ್ಯ ಬಾಧೆಗಳು ಸದಾ ನಾಶವಾಗಲಿ.

ಅತಿವಕ್ರ ದುರಾರಾಧ್ಯ ಭೋಗಮುಕ್ತಾ ಜಿತಾತ್ಮನ: |
ತುಷ್ಟೋದದಾಸಿ ಸಾಮ್ರಾಜ್ಯಂ ರುಷ್ಟೋಹರಸಿ ತತ್ಕ್ಷಣಾತ್ ||೯||

ಭಾವಾರ್ಥ:-ಹೇ ಕುಜನೇ! ನೀನು ಶ್ರೇಷ್ಠನಾಗಿರುವ ಮಂಗಳ 

ಗ್ರಹವಾಗಿರುವೆ. ಆರಾಧನೆಗೆ ಎಟಕದವನು. ಸುಖಾನುಭವಗಳಿಂದ 

ವಿರಕ್ತನಾದವನು.ಆತ್ಮವನ್ನು ಜಯಿಸಿದಾತನು.ನೀನು 

ತೃಪ್ತಿಹೊಂದಿದವನಾದರೆ ಸಾಮ್ರಾಜ್ಯವನ್ನು ದಯಪಾಲಿಸುವೆ. 

ಅಸಂತುಷ್ಟನಾದರೆ ಆ ಕ್ಷಣವೇ ಅದನ್ನು ಅಪಹರಿಸುವೆ.

ವಿರಿಂಚಿಶಕ್ರವಿಷ್ಣೂನಾಂ ಮನುಷ್ಯಾಣಾಂತು ಕಾ ಕಥಾ |
ತೇನತ್ವಂಸರ್ವ ಸತ್ವೇನ ಗ್ರಹರಾಜೋ ಮಹಾಬಲ: ||೧೦||

ಭಾವಾರ್ಥ:-ಗ್ರಹಗಳ ಒಡೆಯನಾದ ನೀನು ಸಮಸ್ತ ಬಗೆಯ ಜೀವಿಗಳಲ್ಲಿ 

ಅತಿಬಲಿಷ್ಟನು. ನಿನ್ನೆದುರು ಬ್ರಹ್ಮ,ಇಂದ್ರ,ವಿಷ್ಣು, ಹಾಗೂ 

ಮನುಷ್ಯರ ಚರಿತ್ರೆ ಎಲ್ಲಿಹುದು?

ಪುತ್ರಾನ್ ದೇಹಿ ಧನಂದೇಹಿ ತ್ವಾಮಸ್ಮಿ ಶರಣಂಗತ: |
ಋಣ ದಾರಿದ್ರ್ಯ ದು:ಖೇನ ಶತ್ರೂಣಾಂ ಚ ಭಯಾತ್ತತ: ||೧೧||

ಭಾವಾರ್ಥ:-ಸ್ವಾಮಿಯೇ ನಿನಗನು ಶರಣಾಗಿರುವೆ. ನನಗೆ ಸಂತತಿಯನ್ನು 

ಅನುಗ್ರಹಿಸು. ಸಂಪತ್ತನ್ನು ದಯಪಾಲಿಸು. ಸಾಲ,ದರಿದ್ರತೆ,ಸಂತಾಪ, 

ಮತ್ತು ಶತ್ರುಗಳ ಭೀತಿಯಿಂದ ನನ್ನನ್ನು ರಕ್ಷಿಸುವವನಾಗು.

ಏಭಿರ್ದ್ವಾದಶಭಿ: ಶ್ಲೋಕೈರ್ಯ: ಸ್ತೌತಿ ಚ ಧರಾಸುತಂ |
ಮಹತೀಂ ಶ್ರಿಯಮಾಪ್ನೋತಿಹ್ಯಪರೋ ಧನದೋಯುವಾ ||೧೨||

ಭಾವಾರ್ಥ:-ಶ್ರೇಷ್ಠನೂ ಧನದಾಯಿಯೂ ತರುಣನೂ ಆಗಿರುವ 

ಮಂಗಳನನ್ನು ಈ ಹನ್ನೆರಡು ಶ್ಲೋಕಗಳಿಂದ ಸ್ತುತಿಸುವವನು ಮಹಾ 

ಸಂಪದಗಳನ್ನು ಹೊಂದುವನು.
*********************************************************************
          || ಇತಿ ಋಣ ಮೋಚಕ ಮಂಗಲ ಸ್ತೋತ್ರಮ್ ||
|| ಈ ರೀತಿಯಾಗಿ ಋಣಮೋಚಕ ಮಂಗಲ ಸ್ತೋತ್ರಗಳ ಭಾವಾರ್ಥವಾಗಿದೆ|| 

*********************************************************************
                         -೭-






   

No comments:

Post a Comment