Thursday, 30 January 2014

ಸ್ತೋತ್ರ ಮಂದಾರ

ಮಂತ್ರ / ಸೂಕ್ತಗಳು
 *****************
           -೧-
 ||ಶ್ರೀಗಣೇಶಾಥರ್ವಶೀರ್ಷಂ||
 ++++++++++++++++
ಓಂ ಭದ್ರಂ ಕರ್ಣೇಭಿ: ಶೃಣುಯಾಮ ದೇವಾ: |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ: |
ಸ್ಥಿರೈರಂಗೈಸ್ತುಷ್ಟುವಾಗಂ ಸಸ್ತನೂಭಿ: |
ವ್ಯಶೇಮ ದೇವ ಹಿತಂ ಯದಾಯು: |
ಸ್ವಸ್ತ್ತಿನ ಇಂದ್ರೋ ವೃದ್ಧಶ್ರವಾ: |
ಸ್ವಸ್ತಿನ: ಪೂಷಾ ವಿಶ್ವ ವೇದಾ: |
ಸ್ವಸ್ತಿನಸ್ತಾರ್ಕೋ ಅರಿಷ್ಠನೇಮಿ: |
ಸ್ವಸ್ತಿನೋ ಬೃಹಸ್ಪತಿರ್ದದಾತು ||

||ಓಂ ಶಾಂತಿ ಶಾಂತಿ ಶಾಂತಿ: || ||೧||

ಭಾವಾರ್ಥ :- ಹೇ! ದೇವಾನುದೇವತೆಗಳೇ; ನಾವೆಲ್ಲರೂ ಯಾವಾಗಲೂ ಉತ್ತಮವಾದ ವಿಚಾರಗಳನ್ನು ಕೇಳುವಂತಾಗಲಿ.ಪವಿತ್ರವಾದವುಗಳನ್ನು ಕಾಣುವಂತಾಗಲಿ. ನಮ್ಮ ಆರೋಗ್ಯಭರಿತ ಶರೀರದಿಂದ ನಿಮ್ಮನ್ನು ಆರಾಧಿಸುತ್ತಾ ಪೂರ್ಣಾಯುಷ್ಯವುಳ್ಳವರಾಗಿ ಜೀವಿಸುವಂತಾಗಲಿ. ದೇವತೆಗಳ ದೊರೆಯಾಗಿರುವ ಇಂದ್ರ. ಸಕಲಾರಿಷ್ಟ ನಾಶಕರಾಗಿರುವ ರವಿ,ಗರುಡದೇವ, ಶಿವ, ಹಾಗೂ ಸಕಲವಿದ್ಯಾ ಸಂಪನ್ನನಾಗಿರುವ ಗುರು ಬೃಹಸ್ಪತಿ ಮೊದಲಾದ ದೇವಾನುದೇವತೆಗಳು ನಮಗೆ ಅನುಗ್ರಹಿಸಿ ಶುಭವನ್ನು ಕರುಣಿಸಲಿ.

ಓಂ ನಮಸ್ತೇ ಗಣಪತಯೇ |
ತ್ವಮೇವ ಪ್ರತ್ಯಕ್ಷಂ ತತ್ವಮಸಿ |
ತ್ವಮೇವ ಕೇವಲಂ ಕರ್ತಾಸಿ |
ತ್ವಮೇವ ಕೇವಲಂ ಧರ್ತಾಸಿ |
ತ್ವಮೇವ ಕೇವಲಂ  ಹರ್ತಾಸಿ |
ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ |
ತ್ವಂ ಸಾಕ್ಷಾದಾತ್ಮಾಸಿ ನಿತ್ಯಂ ||೨||

ಭಾವಾರ್ಥ :- ಹೇ! ಗಣಪತಿಯೇ; ನಿನಗೆ ನಮ್ಮ ಭಕ್ತಿ ಪೂರ್ವಕ ಪ್ರಣಾಮಗಳು.ಸ್ವಾಮಿಯೇ ಪ್ರತೇಕವಾಗಿ ನಮಗೆ ತೋರುವ ತತ್ವವು ನೀನೇ ಆಗಿರುತ್ತಿ.ನೀನು ಸೃಷ್ಟಿಕರ್ತನೂ ಲಯಕರ್ತನೂ ಆಗಿರುವೆ. ಸಮಸ್ತ ಬ್ರಹ್ಮಾಂಡವನ್ನು ನೀನು ಪರಿಪಾಲಿಸುತ್ತಿರುವೆ. ಸರ್ವ ವ್ಯಾಪಕನಾಗಿ ಪರಬ್ರಹ್ಮ ಸ್ವರೂಪಿಯಾಗಿ ನೀನೇ ಸಾಕ್ಷಾತ್ ಪರಮಾತ್ಮನಾಗಿರುವೆ.

ಋತಂ ವಚ್ಮಿ |ಸತ್ಯಮ್ ವಚ್ಮಿ || ||೩||

ಭಾವಾರ್ಥ :- ಹೇ! ಸ್ವಾಮಿಯೇ; ಕಾಲ, ದೇಶ, ವರ್ತಮಾನ, ಪ್ರಕೃತಿ, ನಿಯಮಗಳಿಗನುಸಾರವಾಗಿ ನಾವು ಪ್ರಿಯವಾದ ಮಾತುಗಳನ್ನೂ ಸತ್ಯವನ್ನೂ ಹೇಳುತ್ತಿದ್ದೇವೆ.

ಅವ ತ್ವಂ ಮಾಮ್ |
ಅವ ವಕ್ತಾರಮ್ | 
ಅವ ಶ್ರೋತಾರಮ್ |
ಅವ ದಾತಾರಮ್ |
ಅವಾನೂಚಾನಮವ ಶಿಷ್ಯಮ್ |
ಅವ ಪಶ್ಚಾತ್ತಾತ್ |
ಅವ ಪುರಸ್ತಾತ್ |
ಅವೋತ್ತರಾತ್ತಾತ್ |
ಅವ ದಕ್ಷಿಣಾತ್ತಾತ್ |
ಅವ ಚೋರ್ಧ್ವಾತ್ತಾತ್ |
ಅವ ಧರಾತ್ತಾತ್ |
ಸರ್ವತೋ ಮಾಂ ಪಾಹಿ ಪಾಹಿ ಸಮಂತಾತ್ ||  ||೪||

ಭಾವಾರ್ಥ :- ಓ! ಸ್ವಾಮಿಯೇ; ನಮ್ಮನು ರಕ್ಷಿಸು. ನಿನ್ನನ್ನು ಸ್ತುತಿಸುವವರನ್ನು ರಕ್ಷಿಸು; ಶ್ರದ್ಧಾ ಭಕ್ತಿಯಿಂದ ನಿನ್ನ ನಾಮಾವಳಿಗಳನ್ನು ಕೇಳುವವರನ್ನು ಪಾಲಿಸು; ನಿನ್ನ ಹೆಸರಲ್ಲಿ ದಾನಾದಿಗಳನ್ನು ನೀಡುವವರನ್ನು ಕಾಪಾಡು; ನಿನ್ನ ಮಂತ್ರೋಚ್ಛಾರಣೆ ಮಾಡುವವರನ್ನು ಪೊರೆ; ಪೂರ್ವ ,ಪಶ್ಚಿಮ,ಉತ್ತರ,ದಕ್ಷಿಣ,ಹಿಂದೆ,ಮುಂದೆ,ಮೇಲೆ,ಕೆಳಗೆ, ಈ ತೆರನಾಗಿ ದಶ ದಿಕ್ಕುಗಳಿಂದಲೂ ಬರುವ ಎಲ್ಲಾ ಬಗೆಯ ಆಪತ್ತು ವಿಪತ್ತುಗಳಿಂದ ನಮ್ಮನ್ನು ಕಾಪಾಡು.

ತ್ವಂ ವಾಙ್ಞಯಸ್ತ್ವಂ ಚಿನ್ಮಯ: |
ತ್ವಮಾನಂದ ಮಯಸ್ತ್ವಂ ಬ್ರಹ್ಮಮಯ: |
ತ್ವಂ ಪ್ರತ್ಯಕ್ಷಂ ಬ್ರಹ್ಮಾಸಿ |
ತ್ವಂ ಜ್ಞಾನಮಯೋ ವಿಜ್ಞಾನಮಯೋಸಿ ||  ||೫||

ಭಾವಾರ್ಥ :- ವೇದೋಪನಿಷತ್ತುಗಳೇ ಆದಿಯಾಗಿ ಸಮಸ್ತ ಗ್ರಂಥಗಳಿಂದ ಸ್ತುತಿಸಲ್ಪಡುವಂತಹ ನೀನು ಚಿನ್ಮಯ ರೂಪನೇ ಆಗಿರುವೆ. ನೀನು ಆನಂದ ಪೂರ್ಣನಾಗಿ, ಬ್ರಹ್ಮ ಸ್ವರೂಪಿಯಾಗಿ, ಸಚ್ಚಿದಾಂದ ಸ್ವರೂಪನೇ ಆಗಿರುವೆ. ನೀನು ಸಾಕ್ಷಾತ್ ಬ್ರಹ್ಮ ಸ್ವರೂಪಿ; ನೀನು ಸಮಸ್ತವನ್ನೂ ಬಲ್ಲಂತಹಾ ಪರಮ ಜ್ಞಾನಿಯೇ ಆಗಿ ವಿಜ್ಞಾನಿಯೂ ಆಗಿರುವೆ.

ಸರ್ವಂ ಜಗದಿದಂ ತ್ವತ್ತೋಜಾಯತೇ |
ಸರ್ವಂ ಜಗದಿದಂ ತ್ವತ್ತಸ್ತಿಷ್ಠತಿ |
ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ |
ಸರ್ವಂ ಜಗದಿದಂ ತ್ವಯಿ ಪ್ರತ್ಯೇತಿ |
ತ್ವಂ ಭೂಮಿರಾಪೋ ನಲೋನಿಲೋ ನಭ: |
ತ್ವಂ ಚತ್ವಾರಿ ವಾಕ್ಪದಾನಿ ||  ||೬||

ಭಾವಾರ್ಥ:- ಸಮಸ್ತ ಜಗತ್ತೆಲ್ಲವೂ ನಿನ್ನಿಂದಲೇ ಸೃಷ್ಠಿಸಲ್ಪಟ್ಟು ನಿನ್ನಿಂದಲೇ ನಡೆಸಲ್ಪಡುತ್ತದೆ. ಕೊನೆಗೆ ನಿನ್ನಲ್ಲೇ ಲಯವಾಗುತ್ತದೆ. ಪುನರಪಿ ನಿನ್ನ ಮೂಲಕವೇ ಹೊರಬರುತ್ತದೆ.  ಬೆಂಕಿ; ನೀರು ;ಆಕಾಶ; ಭೂಮಿ ಎಲ್ಲವೂ ನೀನೇ ಆಗಿರುವೆ. ಪರಾ; ಪಶ್ಯಂತಿ; ಮಧ್ಯಮಾ ;ವೈಖರಿ ಗಳೆಂಬ ನಾಲ್ಕು ಅವಸ್ಥೆಗಳ ನುಡಿಗಳು ಕೂಡಾ ನೀನೇ ಆಗಿರುವೆ.

ತ್ವಂ ಗುಣತ್ರಯಾತೀತ: |
ತ್ವಂ ಅವಸ್ಥಾತ್ರಯಾತೀತ: |
ತ್ವಂ ದೇಹತ್ರಯಾತೀತ: |
ತ್ವಂ  ಕಾಲತ್ರಯಾತೀತ: |
ತ್ವಂ ಮೂಲಾಧಾರೇಸ್ಥಿತೋಸಿ ನಿತ್ಯಂ |
ತ್ವಂ ಶಕ್ತಿತ್ರಯಾತ್ಮಕ: |
ತ್ವಾಂ ಯೋಗಿನೋ ಧಾಯಂತಿ ನಿತ್ಯಮ್ |
ತ್ವಂ ಬ್ರಹ್ಮಾ; ತ್ವಂ ವಿಷ್ಣು: | 
ತ್ವಂ ರುದ್ರ ತ್ವಂ ಇಂದ್ರ ತ್ವಂ ಅಗ್ನಿ | 
ತ್ವಂ ವಾಯು: ತ್ವಂ ಸೂರ್ಯ |
ತ್ವಂ ಚಂದ್ರಮಾ ತ್ವಂ ಬ್ರಹ್ಮ ಭೂರ್ಭುವ:ಸ್ವರೋಮ್ ||  ||೭||

ಭಾವಾರ್ಥ :- ಸತ್ವ;ರಜ; ತಮಗಳೆನ್ನುವ ಮೂರು ಪ್ರಕೃತಿ ಗುಣಗಳ ಮೂಲ ಸ್ವರೂಪನು ನೀನೇ ಆಗಿರುವೆ.ಜಾಗ್ರತ್,ಸ್ವಪ್ನ,ಸುಷುಪ್ತಿಗಳೆಂಬ ಅವಸ್ಥಾತ್ರಯಗಳಿಗೆ ನೀನೇ ಕಾರಣನಿರುವೆ. ಸ್ಥೂಲ ಸೂಕ್ಷ್ಮಾದಿ ಶರೀರಾವಸ್ಥೆಗಳೂ ನೀನೇ ಆಗಿರುವೆ. ಪ್ರಾತ:ಕಾಲ; ಮಧ್ಯಾಹ್ನ;ಸಾಯಂ ಸಂಧ್ಯೆಗಳೂ; ಭೂತ,ವರ್ತಮಾನ,ಭವಿಷ್ಯತ್ ಕಾಲಗಳೂ ನೀನೇ ಆಗಿರುವೆ. ದೇಹದಲ್ಲಿನ ಮೂಲಾಧಾರ ಶಕ್ತಿಯೇ ನೀನು.
ಇಚ್ಛಾ; ಜ್ಞಾನ; ಕ್ರಿಯೆಗಳೆಂಬ ಮೂರು ಶಕ್ತಿಗಳೂ ನೀನೇ.ಪ್ರತಿದಿನವೂ ಯೋಗಿಗಳು.ಮುನಿಗಳು,ಜ್ಞಾನಿಗಳು ನಿನ್ನನ್ನೇ ಧ್ಯಾನಿಸುತ್ತಿದ್ದಾರೆ. ಬ್ರಹ್ಮ,ವಿಷ್ಣು,ರುದ್ರ,ಇಂದ್ರ,ಅಗ್ನಿ,ವಾಯು,ಸೂರ್ಯ-ಚಂದ್ರರ ಸ್ವರೂಪನೇ ನೀನಾಗಿದ್ದಿ. ಓಂ ಭೂರ್ಭುವ: ಸ್ವ: ಎಂಬ ಮಂತ್ರ ಶಕ್ತಿಯ ಸಾರ ರೂಪನೂ ,ಅಕಾರ,ಮಕಾರ,ಉಕಾರಗಳು ಸೇರಿರುವ  ಪ್ರಣವ ನಾದವೂ ನೀನೇ ಆಗಿರುವೆ. 

ಗಣಾದಿಂ ಪೂರ್ವಮುಚ್ಚಾರ್ಯ ವರ್ಣಾದಿಸ್ತದನಂತರಂ |
ಅನುಸ್ವಾರ: ಪರತರ: |ಅರ್ಧೇಂದು ಲಸಿತಂ |
ತಾರೇಣ ರುದ್ಧಮ್ |ಏತತ್ತವ ಮನುಸ್ವರೂಪಮ್ |
ಗಕಾರ: ಪೂರ್ವ ರೂಪಂ |ಅಕಾರ: ಮಧ್ಯಮ ರೂಪಮ್ |
ಅನುಸ್ವಾರಶ್ಚಾಂತ್ಯ ರೂಪಮ್ |ಬಿಂದುರುತ್ತರ ರೂಪಮ್ |
ನಾದ: ಸಂಧಾನಮ್ | ಸಗಂಹಿತಾ ಸಂಧಿ: |
ಸೈಷಾ ಗಣೇಶ ವಿದ್ಯಾ |
ಗಣಕ ಋಷಿ: |ನಿಚೃದ್ಗಾಯತ್ರೀ ಛಂಧ: |
ಶ್ರೀ ಮಹಾ ಗಣಾಪತಿರ್ದೇವತಾ |
ಓಂ ಗಂ ಗಣಪತಯೇ ನಮ: ||  ||೮||

ಭಾವಾರ್ಥ :-ಪ್ರಥಮದಲ್ಲಿ "ಗ" ಕಾರವೂ, ನಂತರ "ಅ"ಕಾರವೂ, ಕೊನೆಗೆ ಅನುಸ್ವಾರ ತದನಂತರ ಬಿಂದು =[ಗ್+ಅ+ಮ್ ] ಇವೆಲ್ಲವೂ ಸೇರಿದ ನಾದ ಸಂಧಾನ ಸಂಹಿತೆಯೇ ಸಂಧಿಯಾಗಿ "ಗಂ" ಎಂದೆನಿಸಿದೆ.ಇದುವೇ ಗಣಪತಿಯ ಏಕಾಕ್ಷರ ಮಂತ್ರ. ಇದರ ಋಷಿಗಳ ಹೆಸರು ಗಣಕ; ನಿಚೃದ್ಗಾಯತ್ರಿಯು ಇದರ ಛಂದಸ್ಸು, ಗಣಪತಿಯೇ ಮಂತ್ರ ದೇವತೆ; ಓಂಕಾರನಾದಗಳು ಸೇರಿ ಗಣಪತಿಯ ಮೂಲ ಮಂತ್ರವಾಗಿ "ಓಂ ಗಂ ಗಣಪತಯೇ ನಮ: ಎಂದು ಆಗಿರುತ್ತದೆ.

ಏಕದಂತಾಯ ವಿದ್ಮಹೇ | ವಕ್ರತುಂಡಾಯ ಧೀಮಹಿ |
ತನ್ನೋ ದಂತಿ: ಪ್ರಚೋದಯಾತ್ ||  ||೯||

ಭಾವಾರ್ಥ :- ಇದು ಗಣಪತಿಯ ಮೂಲಮಂತ್ರ ವಾಗಿರುತ್ತದೆ.
ಏಕದಂತನಾಗಿ ಸುತ್ತುವರಿದ ಸೊಂಡಿಲಿನಿಂದ ಕೂಡಿದವನಾಗಿ ಆನೆಯ ಮುಖದವನಾಗಿರುವ ಗಣಪತಿಯು ನಮ್ಮ ಬುದ್ಧಿ ಜ್ಞಾನಗಳನ್ನು ಪ್ರಚೋದಿಸಲಿ. 

ಏಕದಂತಂ ಚತುರ್ಹಸ್ತಂ ಪಾಶಮಂಕುಶಧಾರಿಣಮ್ |
ರದಂ ಚ ವರದಂ ಹಸ್ತೈರ್ಭಿಭ್ರಾಣಂ ಮೂಷಕ ಧ್ವಜಮ್ |
ರಕ್ತಂ ಲಂಬೋದರಂ ಶೂರ್ಪಕರ್ಣಕಂ ರಕ್ತವಾಸಸಮ್ |
ರಕ್ತಗಂಧಾನುಲಿಪ್ತಾಂಗಂ ರಕ್ತ ಪುಷ್ಪೈ: ಸುಪೂಜಿತಮ್ |
ಭಕ್ತಾನುಕಂಪಿತಂ ದೇವಂ ಜಗತ್ಕಾರಣಮಚ್ಯುತಮ್ |
ಆವಿರ್ಭೂತಂ ಚ ಸೃಷ್ಟ್ಯಾದೌ ಪ್ರಕೃತೇ: ಪುರುಷಾತ್ಪರಮ್ |
ಏವಂ ಧ್ಯಾಯತಿ ಯೋ ನಿತ್ಯಂ ಸ ಯೋಗಿ ಯೋಗಿನಾಂ ವರ: ||  ||೧೦||

ಭಾವಾರ್ಥ :-ಹೇ! ಸ್ವಾಮಿಯೇ; ನೀನು ಏಕದಂತನಾಗಿ ನಾಲ್ಕು ಕೈಗಳಲ್ಲಿ ಪಾಶ, ಅಂಕುಶಗಳನ್ನು ಹಿಡಿದಿರುವೆಯಲ್ಲದೆ ಅಭಯ ಹಾಗೂ ವರದ ಮುದ್ರೆಯವನಾಗಿ ಕಾಣಿಸಿಗೊಂಡಿರುವೆ.ಮೂಷಕ ಧ್ವಜನಾಗಿ ಕಡುಗೆಂಪುವರ್ಣವನಾಂತು ;ಆಕರ್ಷಕವಾಗಿ ಹೊಳೆಯುವ ಶರೀರವನ್ನು ಹೊಂದಿ; ದೊಡ್ಡ ಉದರ;ಮೊರದಗಲದ ಕಿವಿಗಳು; ಕೆಂಪು ಗಂಧವನ್ನು ಶರೀರಕ್ಕೆ ಲೇಪಿಸಿಕೊಂಡು ಕೆಂಪು ಪುಷ್ಪಗಳಿಂದ ಪೂಜಿಸಲ್ಪಡುವವನಾಗಿರುವೆ. ನಿನ್ನನ್ನು ಅನವರತ ಭಜಿಸುವ ಭಕ್ತರ ಬಗ್ಗೆ ಅಪಾರವಾದ ಕರುಣೆಯನ್ನು ಹರಿಸುತ್ತಾ ಚ್ಯುತಿರಹಿತನಾಗಿರುವ ದೇವಾದಿದೇವ ನೀನಾಗಿರುವೆ. ಪ್ರಕೃತಿ ಮತ್ತು ಪುರುಷರಿಂತಲೂ ಮೊದಲು ಪ್ರಕಟಗೊಂಡವನು ನೀನಾಗಿರುವೆ. ನಿನ್ನನ್ನು ಧ್ಯಾನಿಸುವವನು ಯೋಗಿಯಾಗಿದ್ದು ಇತರ ಯೋಗಿಗಳಿಗಿಂತ ಶ್ರೇಷ್ಟನಾಗಿರುತ್ತಾನೆ.

ನಮೋ ವ್ರಾತಪತಯೇ ನಮೋ ಗಣಪತಯೇ ನಮ: ಪ್ರಮಥಪತಯೇ 
ನಮಸ್ತೇಸ್ತು ಲಂಬೋದರಾಯ ಏಕದಂತಾಯ ವಿಘ್ನನಾಶಿನೇ 
ಶಿವಸುತಾಯ ಶ್ರೀವರದ ಮೂರ‍್ತಯೇ ನಮ: ||  ||೧೧||

ಭಾವಾರ್ಥ :- ಶಿವಗಣಗಳಿಗೆ ಅಧಿಪತಿಯೂ, ಏಕದಂತವುಳ್ಳವನೂ, ದೊಡ್ಡ ಹೊಟ್ಟೆಯವನೂ,ಸಕಲ ವಿಘ್ನ ನಿವಾರಕನೂ, ಶಿವಸುತನೂ ,ಬೇಡಿದ ವರಗಳನ್ನು ಕರುಣಿಸುವವನೂ ಆಗಿರುವ ಸದಾ ವರದ ಮೂರ್ತಿಯಾಗಿರುವ ಮಹಾಗಣಪತಿಗೆ ಅನಂತಾನಂತ ನಮಸ್ಕಾರಗಳು.

ಏತದಥರ್ವಶೀರ್ಷಂ ಯೋಧೀತೇ ಸ ಬ್ರಹ್ಮ ಭೂಯಾಯ ಕಲ್ಪತೇ |
ಸ ಸರ್ವ ವಿಘ್ನೈರ್ನ ಬಾಧ್ಯತೇ | ಸ ಸರ್ವತ್ರ ಸುಖ ಮೇಧತೇ |
ಸ ಪಂಚ ಮಹಾ ಪಾಪಾತ್ ಪ್ರಮುಚ್ಯತೇ |ಸಾಯ ಮಧೀಯಾನೋ ರಾತ್ರಿಕೃತಂ ಪಾಪಂ ನಾಶಯತಿ |
ಪ್ರಾತರಧೀಯಾನೋ  ರಾತ್ರಿ ಕೃತಂ ಪಾಪಂ ನಾಶಯತಿ |
ಸಾಯಂ ಪ್ರಾತ: ಪ್ರಯುಂಜಾನೋ ಪಾಪೋ ಪಾಪೋ ಭವತಿ |
ಸರ್ವತ್ರಾಧೀಯಾನೋಪ ವಿಘ್ನೋ ಭವತಿ |
ಧರ್ಮಾರ್ಥಕಾಮಮೋಕ್ಷಂ ಚ ವಿಂದತಿ |
ಇದಮಥರ್ವಶೀರ್ಷಮಷ್ಯಾಯ ನ ಧೇಯಂ |
ಯೋ ಯದಿ ಮೋಹಾದ್ದಾಸ್ಯತಿ ಸ ಪಾಪೀಯಾನ್ ಭವತಿ |
ಸಹಸ್ರ ವರ್ತನಾದ್ಯಂ ಯಂ ಕಾಮ ಮಧೀತೇ ತಂ ತಮನೇನ ಸಾಧಯೇತ್ ||  ||೧೨||

ಭಾವಾರ್ಥ :- ಈ ಗಣೇಶಾರ್ಥರ್ವಶೀರ್ಷ ಮಂತ್ರವನ್ನು ಯಾರು ಅನವರತ ಪಠಿಸುತ್ತಾರೋ ಅವರಿಗೆ ಬ್ರಹ್ಮಲೋಕ ಪ್ರಾಪ್ತಿಯಾಗುವುದು. ಅವರನ್ನು ವಿಘ್ನಗಳು ಎಂದಿಗೂ ಭಾಧಿಸುವುದಿಲ್ಲ.ಅವರು ಸದಾಕಾಲ ಸುಖದಿಂದ ಇರುತ್ತಾರೆ. ಅಂತಹವರು ತಾವು ಮಾಡಿರಬಹುದಾದ ಪಂಚ ಮಹಾಪಾತಕಗಳಿಂದ ಮುಕ್ತರಾಗುತ್ತಾರೆ.ಸಾಯಂಕಾಲದ ಸಮಯದಲ್ಲಿ ಮಾಡುವ ಜಪದಿಂದ ಹಗಲು ಮಾಡಿದ ಪಾಪಕರ್ಮಗಳು ಮತ್ತು ಉಷ:ಕಾಲದಲ್ಲಿ ಮಾಡಿದ ಜಪದಿಂದ ಗತರಾತ್ರಿ ಮಾಡಿದ ಪಾಪಗಳೆಲ್ಲವೂ ನಾಶವಾಗುತ್ತವೆ. ಬೆಳಿಗ್ಗೆ ಮತು ಸಾಯಂಕಾಲಗಳ ಸಮಯದಲ್ಲಿ ಈ ಮಂತ್ರವನ್ನು ಜಪಿಸುತ್ತಿದ್ದರೆ ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳು ಸಿದ್ಧಿಯಾಗಿ ಮಹಾಪುಣ್ಯವು ಲಭಿಸುತ್ತದೆ. ಈ ಮಂತ್ರವನ್ನು ಯೋಗ್ಯನಾಗಿರುವ ಶಿಷ್ಯನಿಗೆ ಮಾತ್ರಾ ಉಪದೇಶ ಮಾಡಬೇಕು. ಅಯೋಗ್ಯರಿಗೆ ಉಪದೇಶ ಮಾಡಿದರೆ ಅಂಥಹವರು ಪಾಪಿಷ್ಠರಾಗುವರು. ಗಣೇಶಾಥರ್ವಶೀರ್ಷ ಮಂತ್ರವನ್ನು ಸಹಸ್ರ ಬಾರಿ ಜಪಿಸಿದಲ್ಲಿ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಅನೇನ ಗಣಪತಿ ಮಭಿಷಿಂಚತಿ ಸವಾಗ್ಮೀ ಭವತಿ |
ಚತುರ್ಥ್ಯಾ ಮನಶ್ನನ್ ಜಪತಿ ಸ ವಿದ್ಯಾವಾನ್ ಭವತಿ |
ಇತ್ಯದಥರ್ವಣ ವಾಕ್ಯಮ್ |
ಬ್ರಹ್ಮಾದ್ಯಾವರಣಂ ವಿದ್ಯಾತ್ ನ ಬಿಭೇತಿ ಕದಾಚನೇತಿ || ||೧೩||

ಭಾವಾರ್ಥ :- ಈ ಗಣೇಶಾಥರ್ವಶೀರ್ಷ ಮಂತ್ರವನ್ನು ಹೇಳಿಕೊಂಡು ಅಭಿಷೇಕಗಳನ್ನು ಮಾಡಿದವರು ವಾಗ್ಮಿಗಳಾಗುವರು. ಮತ್ತು ಜ್ಞಾನಿಗಳಾಗುವರು. ಚೌತಿಯ ದಿನದಂದು ಈ ಮಂತ್ರವನ್ನು ನಿರಂತರವಾಗಿ ಜಪಿಸಿದಲ್ಲಿ ವಿದ್ಯಾವಂತರಾಗುವರು. ಈ ಮಂತ್ರವನ್ನು ಜಪಿಸುತ್ತಿರುವವರಿಗೆ ಯಾವುದೇ ಭಯವು ಕಾಡುವುದಿಲ್ಲ. ಇದು ಅಥರ್ವಣ ವಾಕ್ಯ.

ಯೋ ದೂರ್ವಾಂಕುರೈಯಜತಿ ಸ ವೈಶ್ರವಣೋಪಮೋ ಭವತಿ |
ಯೋ ಲಾಜೈರ್ಯಜತಿ ಸ ಯಶೋವಾನ್ ಭವತಿ |
ಸ ಮೇಧಾವಾನ್ ಭವತಿ |
ಯೋ ಮೋದಕ ಸಹಸ್ರೇಣ ಯಜತಿ ಸ ವಾಂಛಿತ ಫಲಮವಾಪ್ನೋತಿ |
ಯ: ಸಾಜ್ಯ ಸಮಿದ್ಭಿರ್ಯಜತಿ ಸ ಸರ್ವಂ ಲಭತೇ ಸ ಸರ್ವಂ ಲಭತೇ ||  ||೧೪||

ಭಾವಾರ್ಥ :- ಈ ಮಂತ್ರಗಳನ್ನು ಹೇಳುತ್ತಾ ಗರಿಕೆಯ ತುದಿಗಳಿಂದ ಯಾರು ಹೋಮ ಮಾಡುವರೋ ಅವರು ಕುಬೇರ ಸಮಾನರಾದ ಧನಿಕರಾಗುವರು.ಯಾರು ಸಹಸ್ರ ಮೋದಕಗಳನ್ನು ಆಹುತಿಯಾಗಿ ಸಮರ್ಪಿಸುವರೋ ಅವರು ಇಚ್ಚಿಸಿದ ಕಾರ್ಯಗಳು ಸುಗಮವಾಗಿ ನೆರವೇರುತ್ತದೆ. ಭತ್ತದ ಅರಳಿನಿಂದ ಹೋಮ ಮಾಡುವವರು ಬುದ್ಧಿವಂತರಾಗುವರು. ತುಪ್ಪ ಮತ್ತು ಸಮಿತ್ತುಗಳಿಂದ ಹೋಮಿಸುವವರು ಸಕಲ ಸೌಭಾಗ್ಯಗಳನ್ನೂ ಹೊಂದುವರು.

ಅಷ್ಟೌ ಬ್ರಾಹ್ಮಣಾನ್ ಸಮ್ಯಗ್ರಾಹಯಿತ್ವಾ ಸೂರ್ಯ ವರ್ಚಸ್ವೀ ಭವತಿ |
ಸೂರ್ಯ ಗ್ರಹೇ ಮಹಾ ನದ್ಯಾಂ ಪ್ರತಿಮಾ ಸನ್ನಿದ್ಧೌ ವಾ ಜಪ್ತ್ವಾ ಸಿದ್ಧ ಮಂತ್ರೋ ಭವತಿ |
ಮಹಾವಿಘ್ನಾತ್ ಪ್ರಮುಚ್ಯತೇ | ಮಹಾದೋಷಾತ್ ಪ್ರಮುಚ್ಯತೇ |
ಮಹಾ ಪಾಪಾತ್ ಪ್ರಮುಚ್ಯತೇ | ಮಹಾ ಪ್ರತ್ಯವಾಯಾತ್ ಪ್ರಮುಚ್ಯತೇ |
ಸ ಸರ್ವವಿದ್ಭವತಿ ಸ ಸರ್ವವಿದ್ಭವತಿ ಯ ಏವಂ ವೇದ || ಇತ್ಯುಪನಿಷತ್||   ||೧೫||

ಭಾವಾರ್ಥ :- ಎಂಟು ಮಂದಿ ಬ್ರಾಹ್ಮಣ ಸಮೂಹದ ಮೂಲಕ ಈ ಮಂತ್ರಗಳನ್ನು ಹೇಳಿಸುತ್ತಾ ಯಾವಾತನು ಹೋಮವನ್ನು ಮಾಡಿಸುವನೋ ಅವನು ಸೂರ್ಯನಂತೆ ತೇಜಸ್ವೀಯಾಗಿ ಪ್ರಕಾಶಿಸುತ್ತಾನೆ. ಸೂರ್ಯ ಗ್ರಹಣದಂದು ನದಿಯ ನೀರಿನಲ್ಲಿ ನಿಂತು ಅಥವಾ ಗಣಪತಿಯ ಪ್ರತಿಮೆಯ ಸನ್ನಿಧಿಯಲ್ಲಿ ಯಾರು ಈ ಮಂತ್ರವನ್ನು ಜಪಿಸುತ್ತಾರೋ ಅವರಿಗೆ ಮಂತ್ರ ಸಿದ್ಧಿಯಾಗುವುದು. ಈ ಮಂತ್ರದಿಂದ ಮಹಾ ವಿಘ್ನಗಳು; ಮಹಾ ದೋಷಗಳು; ಮಹಾ ಸಂಕಟಗಳು; ಮಹಾ ಪಾಪಗಳೆಲ್ಲವೂ ನಾಶಗೊಂಡು ಸಕಲ ಕಾಮಿತಾರ್ಥಗಳೂ ಸಿದ್ಧಿಯಾಗುವವು. ಇದನ್ನು ನಿರಂತರವಾಗಿ ಯಾರು ಜಪಿಸುತ್ತಾರೋ ಅವರಿಗೆ ಜನ್ಮಾಂತರಗಳಿಂದ ಕಾಡುತ್ತಿರುವ ಪಾಪಶೇಷಗಳೆಲ್ಲವೂ ಪರಿಹಾರವಾಗಿ ಪ್ರಾರಬ್ದ ಕರ್ಮ ಬಂಧನಗಳಿಂದ ಮುಕ್ತಿ ಹೊಂದಿ ಪರಮಾತ್ಮನಲ್ಲಿ ಐಕ್ಯವಾಗುತ್ತಾರೆಂದು ವೇದೋಪನಿಷತ್ತುಗಳು ತಿಳಿಸುತ್ತಿವೆ.
*********************************************************************************
                                              ||   ಇತಿ ಶ್ರೀ ಗಣೇಷಾಥರ್ವಶಿರ್ಷಂ ||         
                || ಈ ರೀತಿಯಾಗಿದೆ ಶ್ರೀಗಣೇಷಾಥರ್ವಶೀರ್ಷ ಮಂತ್ರದ ಭಾವಾರ್ಥವಾಗಿದೆ ||
 +++++++++++++++++++++++++++++++++++++++++++++++++++++++++++++++++++
              - ೨-
     || ಶ್ರೀಸೂಕ್ತಮ್ ||
     +++++++++++
||ಓಂ||
ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್|
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||೧||

ಭಾವಾರ್ಥ:-ಬಂಗಾರದ ಬಣ್ಣವನ್ನು ಹೊಂದಿರುವ ಅಗ್ನಿಯೇ! ಹರಿಣದಂತೆ  ಚುರುಕಾಗಿರುವ; ಹೊನ್ನು ಹಾಗೂ ಬೆಳ್ಳಿಯ ಪುಷ್ಪ ಮಾಲಿಕೆಯನ್ನು ಧರಿಸಿರುವ .ಚಂದಿರನೋಪಾದಿಯಲ್ಲಿ ಮನಸ್ಸಿಗೆ ಮುದ ನೀಡುವ ಚಿನ್ನದ ಒಡತಿ ಲಕ್ಷ್ಮಿಯನ್ನು ನನ್ನತ್ತ ಕರೆದು ತಾ.

ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ವಿನ್ದೇಯಂ ಗಾಮಶ್ವಂ ಪುರುಷಾನಹಮ್ || ೨||

ಭಾವಾರ್ಥ:-ಅಗ್ನಿಯೇ;ಶಾಶ್ವತವಾಗಿರುವ ಲಕ್ಷ್ಮಿಯನ್ನು ನನಗಾಗಿ ಕರೆದುಕೊಂಡು ಬಾ. ಆಕೆ ಪ್ರಸನ್ನಳಾದಲ್ಲಿ ಬಂಗಾರ, ಗೋಸಂಪತ್ತು, ಕುದುರೆ, ಆಳುಗಳನ್ನು ನಾನು ಹೊಂದಬಹುದು.

ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಭೋಧಿನೀಮ್ |
ಶ್ರಿಯಂ ದೇವೀಮುಪಹ್ವಯೇ ಶ್ರೀರ‍್ಮಾ ದೇವೀಜುಷತಾಮ್ ||೩||

ಭಾವಾರ್ಥ:-ಎದುರಲ್ಲಿ ಕುದುರೆ, ನಡುವಿನಲ್ಲಿ ರಥ, ಆನೆಯ ಶಬ್ದದಿಂದ ಸಂತಸಗೊಳ್ಳುವ ಆ ಶ್ರೀದೇವಿಯನ್ನು ನಾನು ಆಹ್ವಾನಿಸುತ್ತೇನೆ. ಶ್ರೀದೇವಿಯು ನನ್ನತ್ತ ಬಂದು ಅನುಗ್ರಹಿಸಲಿ.

ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲನ್ತೀಂ ತೃಪ್ತಾಂ ತರ್ಪಯನ್ತೀಮ್ |
ಪದ್ಮೇಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಮ್ ||೪||

ಭಾವಾರ್ಥ:-ವರ್ಣಿಸಲಸದಳವಾಗಿರುವ, ಮಂದಹಾಸದಿಂದ ಕೂಡಿದ, ಬಂಗಾರದ ಆವರಣದೊಳಗಿರುವ, ಕರುಣಾಮಯಿಯಾಗಿರುವ, ಪ್ರಕಾಶಭರಿತಳಾಗಿರುವ, ತೃಪ್ತಳಾಗಿರುವ, ಭಕ್ತರನ್ನು ಮುದಗೊಳಿಸುತ್ತಲಿರುವ, ಕಮಲದ ಮೇಲೆ ಆಸೀನಳಾಗಿರುವ, ತಾವರೆಯ ವರ್ಣವನ್ನು ಹೊಂದಿರುವ ಶ್ರೀದೇವಿಯನ್ನು ನನ್ನತ್ತ ಕರೆಯುತ್ತಿರುವೆ.

ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲನ್ತೀಂ ಶ್ರಿಯಂ ಲೋಕೇ ದೇವ ಜುಷ್ಟಾಮುದಾರಾಮ್ |
ತಾಂ ಪದ್ಮಿನೀಂ ಶರಣಮಹಂ ಪ್ರಪದ್ಯೇಸ್ಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ ||೫||

ಭಾವಾರ್ಥ:-ಚಂದ್ರನಂತೆ ಬೆಳಗುತ್ತಲಿರುವ, ಕೀರ್ತಿಯಿಂದ ಪ್ರಕಾಶಿಸುವ, ದೇವತೆಗಳ ಸೇವೆಯನ್ನು ಸ್ವೀಕರಿಸುತ್ತಲಿರುವ, ಭಕ್ತರಿಗೆ ವರದಾಯಕಳಾಗಿ, ಕಮಲದಂತೆ ಕೋಮಲ ಶರೀರೆಯಾಗಿರುವ, ಆ ಶ್ರೀದೇವಿಯನ್ನು ನಾನು ಆಶ್ರಯಿಸುತ್ತಿದ್ದೇನೆ. ನನ್ನಲ್ಲಿರುವ ಅಜ್ಞಾನ, ದು:ಖ, ದಾರಿದ್ರ್ಯ, ಮರೆವು, ಆಲಸ್ಯ, ಜಿಹ್ವಾಚಾಪಲ್ಯಾದಿ ದುರಾಚಾರಗಳು  ನೀಗಲಿ. ನನಗೆ ಸದಾಚಾರಾದಿ ಶುಭಲಕ್ಷಣಗಳನ್ನು ದಯಪಾಲಿಸಿ ರಕ್ಷಿಸಲು ಆಕೆಯನ್ನು ಪ್ರಾರ್ಥಿಸುತ್ತಿದ್ದೇನೆ.

ಆದಿತ್ಯವರ್ಣೇ ತಪಸೋಸ್ಧಿಜಾತೋ ವನಸ್ಪತಿಸ್ತವ ವೃಕ್ಷೋಸ್ಥ ಬಿಲ್ವ: |
ತಸ್ಯ ಫಲಾನಿ ತಪಸಾ ನುದನ್ತು ಮಾಯನ್ತರಾಯಾಶ್ಚ ಬಾಹ್ಯಾ ಅಲಕ್ಷ್ಮೀ: ||೬||

ಭಾವಾರ್ಥ:- ಸೂರ್ಯನಂತೆ ಪ್ರಕಾಶಿಸಿಸುತ್ತಿರುವ ಶ್ರೀದೇವಿಯೇ! ನಿನ್ನ ತಪಸ್ಸಿನ  ಪರಿಣಾಮವಾಗಿ  ವನಸ್ಪತಿಗಳೂ, ಬಿಲ್ವ ವೃಕ್ಷದಂತಹಾ ಮರಗಳೂ ಉತ್ಪನ್ನವಾದವು. ಅದರೊಳಗೆ ಅಡಗಿರುವ ಶಕ್ತಿಗಳು ನನ್ನಲ್ಲಿ ಒಳ ಹೊರಗೆ ಹುದುಗಿಕೊಂಡಿರುವ ಆಂತರಿಕ ದೋಷಗಳಾದ ಅಜ್ಞಾನ, ಕಾಮ, ಕೋಪ, ದ್ವೇಷ, ಮತ್ಸರಾದಿ ಅಲಕ್ಷ್ಮಿಗಳೆಲ್ಲವನ್ನು ನಿವಾರಿಸಲಿ.

ಉಪೈತು ಮಾಂ ದೇವಸಖ: ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋಸ್ಸ್ಮಿ ರಾಷ್ಟ್ರೇಸ್ಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||೭||

ಭಾವಾರ್ಥ:-ಪರಮೇಶ್ವರನ ಸಖನಾದ ಕುಭೇರನು ಮತ್ತು ಖ್ಯಾತಿಯು ನನ್ನ ಸಮೀಪಕ್ಕೆ ಬರಲಿ. ನಾನು ಈ ರಾಷ್ಟ್ರದಲ್ಲಿ ಜನ್ಮವೆತ್ತಿರುವೆ. ನನಗೆ ಯಶಸ್ಸು ಮತ್ತು ಸಮೃದ್ಧಿಯನ್ನು ಶ್ರೀದೇವಿಯು ದಯಪಾಲಿಸಲಿ.

ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಮ್ |
ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್  ||೮||

ಭಾವಾರ್ಥ:-ಹಸಿವು,ಬಾಯಾರಿಕೆಗಳಿಂದ ದೋಷಪೂರಿತವಾದ, ಹಾಗೆಯೇ ಅದಕ್ಕಿಂತಲೂ ಮೊದಲು ಹುಟ್ಟಿಕೊಂಡಿರುವ ದೂಷಿತಗುಣಗಳನ್ನು  ನಾನು ನಾಶಗೊಳಿಸಲಿಚ್ಚಿಸುವೆ. ಆ ಕಾರಣಕ್ಕಾಗಿ ಶ್ರೀದೇವಿಯೇ; ದರಿದ್ರತೆಗೆ ಕಾರಣವಾಗಿರುವ ಹಸಿವು,ಬಾಯಾರಿಕೆ,ಧನದಾಹ, ಅತಿಮೋಹ, ದುರಾಸೆ ಇತ್ಯಾದಿ ಕೆಟ್ಟ ಶಕ್ತಿಗಳನ್ನು ನನ್ನ ಮನೆಯಿಂದ ಹೊರಗೆ ಕಳುಹಿಸುವಂತವಳಾಗು.

ಗನ್ಧ ದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಮ್ |
ಈಶ್ವರೀಂ ಸರ್ವಭೂತಾನಾಂ ತಾಮಿ ಹೋಪಹ್ವಯೇ ಶ್ರಿಯಮ್ ||೯||

ಭಾವಾರ್ಥ:-ಸುವಾಸನೆಯ ಮೂಲಕ ಗುರುತಿಸಬಹುದಾದ, ಆರಿಂದಲೂ ಅಲ್ಲಾಡಿಸಲು ಅಸದಳವಾಗಿರುವ, ನಿತ್ಯವೂ ಸಸ್ಯಾದಿಗಳಿಗೆ ಪೋಷಕ ಸತ್ವವನ್ನು ಒದಗಿಸುವ ಎಲ್ಲಾ ಜೀವಿಗಳ ಜೀವಾಧಾರವಾಗಿರುವ ಪೃಥ್ವೀ ರೂಪಿಣಿಯಾಗಿರುವ ಶ್ರೀದೇವಿಯನ್ನು ನಾನು ಇಲ್ಲಿಗೆ ಆಹ್ವಾನಿಸುತ್ತಿರುವೆ.

ಮನಸ: ಕಾಮಮಾಕೂತಿಂ ವಾಚ: ಸತ್ಯಮಶೀಮಹಿ |
ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಶ್ಶ್ರಯತಾಂಯಶ: ||೧೦||

ಭಾವಾರ್ಥ:-ಮನಸ್ಸಿನ ಎಲ್ಲಾ ಬಯಕೆಗಳನ್ನೂ, ಮಾತುಗಳಲ್ಲಿನ ಸತ್ಯಾಸತ್ಯತೆಯನ್ನೂ ಅರಿತುಕೊಳ್ಳೋಣ. ಅನ್ನ ರೂಪಿಣಿ, ಪಶು ರೂಪಿಣಿ, ಯಶೋ ರೂಪಿಣಿ, ಖ್ಯಾತಿ ಸಂಪನ್ನೆಯಾಗಿರುವ ಶ್ರೀದೇವಿಯು ನನ್ನಲ್ಲಿ ನೆಲೆಯಾಗಲಿ.

ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ |
ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಮ್ ||೧೧||

ಭಾವಾರ್ಥ:-ಶ್ರೀದೇವಿಯು ಕರ್ದಮನೆಂಬ ಮಹರ್ಷಿಯಿಂದ ಪ್ರಜೆಗಳನ್ನು ಪಡೆದವಳು. ಕರ್ದಮ ಮಹರ್ಷಿಯು ನನ್ನ ಸಮೀಪವರ್ತಿಯಾಗಲಿ. ಅದರಿಂದ ಸಂತೃಪ್ತಳಾದ ತಾಯಿ ಶ್ರೀದೇವಿಯು ಪದ್ಮಮಾಲಾ ಭೂಷಿತಳಾಗಿ ನನ್ನ ಕುಲದಲ್ಲಿ ಸದಾ ನೆಲೆಗೊಳ್ಳುವಂತಾಗಲಿ.

ಆಪ: ಸೃಜನ್ತು ಸ್ನಿಗ್ದಾನಿ ಚಿಕ್ಲೀತ ವಸ ಮೇ ಗೃಹೇ |
ನಿ ಚ ದೇವೀಮ್ ಮಾತರಂ ಶ್ರಿಯಂ ವಾಸಯ ಮೇ ಕುಲೇ ||೧೨||

ಭಾವಾರ್ಥ:-ಜಲ ರೂಪಿಣಿಯಾಗಿರುವ ಲಕ್ಷ್ಮಿಯು ಅನುಕೂಲವಾದ ಕಾರ್ಯಗಳನ್ನು ಮಾಡಲಿ. ಲಕ್ಷ್ಮೀ ಪುತ್ರನಾಗಿರುವ ಕಾಮದೇವನೇ [ಕಾಮ= ಕಾಮಿತಾರ್ಥ]ನನ್ನ ಮನೆಯಲ್ಲಿ ನೆಲೆಯಾಗು. ಮತ್ತು ತಾಯಿಯಾಗಿರುವ ಶ್ರೀದೇವಿಯು ನನ್ನಲ್ಲಿ ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡು.

ಆದ್ರಾಂ ಪುಷ್ಕರಿಣೀಂ ಪುಷ್ಟಿಂ ಪಿಙ್ಗಲಾಂ ಪದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||೧೩||

ಭಾವಾರ್ಥ:-ಕರುಣಾಳುವಾದ ಅಗ್ನಿದೇವನೇ! ಆನೆಯ ಸೊಂಡಿಲಿನಿಂದ ಅಭಿಷೇಕ ಮಾಡಿಸಿಕೊಳ್ಳುತ್ತಿರುವ; ಸಮೃದ್ಧಿ ಭರಿತಳಾದ, ನಸುಗೆಂಪು ವರ್ಣದ ಕಮಲದ ಹಾರವನ್ನು ಧರಿಸಿರುವ; ಚಂದ್ರನಂತೆ ಪ್ರಕಾಶಿಸುತ್ತಿರುವ ಸ್ವರ್ಣಾಭರಣ ಭೂಷಿತೆಯಾಗಿರುವ ತಾಯಿ ಲಕ್ಷ್ಮಿದೇವಿಯನ್ನು ನನಗಾಗಿ ಆಹ್ವಾನಿಸು.

ಆರ್ದ್ರಾಂ ಯ: ಕರಿಣೀಂ ಯಷ್ಟಿಂ ಸುವರ್ಣಾಂ ಹೇಮ ಮಾಲಿನೀಮ್ |
ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||೧೪||

ಭಾವಾರ್ಥ:-ಹೇ!ಅಗ್ನಿದೇವನೇ,ದಯಾಪೂರ್ಣೆಯಾಗಿರುವ,ಹಸ್ತದಲ್ಲಿ ಧರ್ಮದಂಡವನ್ನು ಹಿಡಿದುಕೊಂಡಿರುವಂತಹಾ,ಶುಭವರ್ಣವನ್ನು ಹೊಂದಿದವಳಾಗಿರುವವಳಾದ, ಬಂಗಾರದ ಹಾರಗಳಿಂದ ಅಲಂಕೃತಳಾಗಿರುವ, ಸೂರ್ಯ ಪ್ರಕಾಶದಿಂದ ಬೆಳಗುತ್ತಲಿರುವ, ಸ್ವರ್ಣ ವಿಭೂಷಿತೆಯಾಗಿರುವ ತಾಯಿ ಲಕ್ಷ್ಮೀದೇವಿಯನ್ನು ನನ್ನಲ್ಲಿಗೆ ಕರೆದುಕೊಂಡು ಬಾ.

ತಾಂ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋಸ್ಶ್ವಾನ್ ವಿನ್ದೇಯಂ ಪುರುಷಾನಹಮ್ ||೧೫||

ಭಾವಾರ್ಥ:-ಅಗ್ನಿದೇವನೇ! ಯಾವಾಕೆ ಪ್ರಸನ್ನಳಾದಾಗ ಅಪರಿಮಿತ ಬಂಗಾರವನ್ನೂ, ಗೋವುಗಳನ್ನೂ, ದಾಸಿಯರನ್ನೂ, ಕುದುರೆಗಳನ್ನೂ, ಮತ್ತು ಆಳುಗಳನ್ನೂ ನಾನು ಪಡೆಯಬಹುದಾಗಿದೆಯೋ, ಅಂತಹಾ ಚಿರಸ್ಥಾಯಿಯಾಗಿರುವ ಮಾತೆ ಲಕ್ಷ್ಮೀದೇವಿಯನ್ನು ನನ್ನಲ್ಲಿಗೆ ಕರೆದುಕೊಂಡು ಬಾ.

||ಓಂ||ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ|
ತನ್ನೋ ಲಕ್ಷ್ಮೀ: ಪ್ರಚೋದಯಾತ್||

ಭಾವಾರ್ಥ:- ಮಹಾಲಕ್ಷ್ಮಿಯನ್ನು ಅರಿತುಕೊಳ್ಳಲು ಯತ್ನಿಸುವೆವು. ವಿಷ್ಣು ಪತ್ನಿಯಾಗಿರುವ ಆಕೆಯಲ್ಲಿ ಅನುಗ್ರಹಿಸಲೋಸುಗವಾಗಿ ಪ್ರಾರ್ಥಿಸುವೆವು. ಅಂತಹ ಮಹಿಮಾನ್ವಿತಳಾಗಿರುವ ಲಕ್ಷ್ಮಿಯು ನಮ್ಮನ್ನು ಸದಾ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣಾಶಕ್ತಿ ನೀಡಲಿ. 

                      ಫಲಸ್ತುತಿ

ಯ: ಶುಚಿ: ಪ್ರಯತೋ ಭೂತ್ವಾ ಜುಹುಯಾದಾಜ್ಯಮನ್ವಹಮ್ |
ಶ್ರಿಯ: ಪಂಚದಶರ್ಚಂ ಚ ಶ್ರೀಕಾಮ: ಸತತಂ ಜಪೇತ್ ||೧||

ಭಾವಾರ್ಥ:-ಯಾವಾತನು ಸುಖ-ಸಮೃದ್ಧಿಯನ್ನು ಬಯಸುತ್ತಾನೋ ಅಂತಹವನು ಅಂತರ್ಬಹಿರ್ಶುದ್ಧಿಯುಳ್ಳವನಾಗಿದ್ದು ಶ್ರದ್ಧಾಯುಕ್ತನಾಗಿ ಪ್ರತಿದಿವಸ ತುಪ್ಪದಿಂದ ಹೋಮವನ್ನು ಮಾಡಬೇಕು. ಮತ್ತು ಶ್ರೀದೇವಿಯ ಕುರಿತಾಗಿ ಋಗ್ವೇದದಲ್ಲಿ ಹೇಳಲಾಗಿರುವ ಈ ಹದಿನೈದು ಮಂತ್ರಗಳನ್ನು  ಯಾವತ್ತೂ ಜಪಿಸುತ್ತಿರಬೇಕು.

                       ಪರಿಶಿಷ್ಟ

ಪದ್ಮಾಸನೇ ಪದ್ಮ ಊರೂ ಪದ್ಮಾಕ್ಷೀ ಪದ್ಮಸಂಭವೇ |
ತ್ವಂ ಮಾಂ ಭಜಸ್ವ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಮ್ ||೨||

ಭಾವಾರ್ಥ:-ಪದ್ಮಾಸನದಲ್ಲಿ ಕುಳಿತವಳಾದ, ತಾವರೆಯನ್ನು ಹೋಲುವ ತೊಡೆಯನ್ನು ಹೊಂದಿರುವವಳಾದ, ಕಮಲದಂತೆ ಚೆಲುವಾಗಿರುವ ಕಣ್ಣುಗಳುಳ್ಳವಳಾದ, ತಾವರೆಯಲ್ಲಿ ಹುಟ್ಟಿರುವ ನೀನು ನನ್ನಲ್ಲಿಗೆ ಬಂದು ಅನುಗ್ರಹಿಸುವವಳಾಗು. ಆ ಮೂಲಕ ನಾನು ಸೌಖ್ಯವನ್ನು ಹೊಂದುತ್ತೇನೆ.

ಅಶ್ವದಾಯೀ  ಗೋದಾಯೀ ಧನದಾಯೀ ಮಹಾಧನೇ 
ಧನಂ ಮೇ ಲಭತಾಂ ದೇವಿ ಸರ್ವಕಾಮಾರ್ಥಸಿದ್ಧಯೇ ||೩||

ಭಾವಾರ್ಥ:-ಭಕ್ತಾದಿಗಳಿಗೆ ಕುದುರೆ, ಗೋವು, ಸಂಪದಗಳನ್ನೀವ ಸಂಪದ್ಭರಿತೆ ದೇವಿಯೇ ನನ್ನೆಲ್ಲಾ ಇಷ್ಟಾರ್ಥ ಸಿದ್ಧಿಗಾಗಿ ನನಗೆ ಸಂಪತ್ತನ್ನು ಕರುಣಿಸು.

ಪುತ್ರ ಪೌತ್ರ ಧನಂ ಧಾನ್ಯಂ ಹಸ್ತ್ಯಶ್ವಾದಿ ಗವೇ ರಥಮ್ |
ಪ್ರಜಾನಾ ಭವಸಿ ಮಾತಾ ಆಯುಷ್ಮಂತಂ ಕರೋತು ಮಾಮ್ ||೪||

ಭಾವಾರ್ಥ:-ಲಕ್ಷ್ಮಿದೇವಿಯೇ; ನೀನು ಸಮಸ್ತ ಪ್ರಜಾವರ್ಗದ ತಾಯಿ. ಮಕ್ಕಳು,ಮೊಮ್ಮಕ್ಕಳು,ಧಾನ್ಯ, ಸಂಪತ್ತು,ಆನೆ,ಕುದುರೆ,ಗೋವು, ರಥ ಇವೆಲ್ಲವನ್ನೂ ನನಗೆ ಕರುಣಿಸಿ ದೀರ್ಘಾಯುಷ್ಯವಂತನನ್ನಾಗಿ ಮಾಡು

ಚಂದ್ರಾಭಾಂ ಲಕ್ಷ್ಮೀಮೀಶಾನಾಂ ಸೂರ್ಯಾಭಾಂ ಶ್ರಿಯಮೀಶ್ವರೀಮ್ |
ಚಂದ್ರ ಸೂರ್ಯಾಗ್ನಿ ಸರ್ವಾಭಾಂ ಮಹಾಲಕ್ಷ್ಮೀಮುಪಾಸ್ಮಹೇ ||೫||

ಭಾವಾರ್ಥ:-ಚಂದ್ರನೋಪಾದಿಯ ಕಾಂತಿಯನ್ನು ಹೊಂದಿರುವ, ಶುಭಲಕ್ಷಣಯುಕ್ತಳಾದ, ಲೋಕಾಧೀಶೆಯಾಗಿರುವ,ಸೂರ್ಯನಂತೆ ಶೋಭಾಯಮಾನವಾಗಿ ಬೆಳಗುವ, ಚೆಲುವೆಯಾದ, ಸಂಪತ್ತಿಗೆ ಒಡತಿಯಾದ, ಸೂರ್ಯಾಚಂದ್ರಾಗ್ನಿಗಳಿಂದ ಮಿಗಿಲಾದ ಕಾಂತಿಯುಳ್ಳವಳಾದ ಮಹಾಲಕ್ಷ್ಮಿಯನ್ನು ನಾನು ಉಪಾಸಿಸುತ್ತೇನೆ.

ಧನಮಗ್ನಿರ್ಧನಂ ವಾಯುರ್ಧನಮ್ ಸೂರ್ಯೋ ಧನಂ ವಸು: |
ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನುತೇ ||೬||

ಭಾವಾರ್ಥ:-ಅಗ್ನಿ,ವಾಯು,ಸೂರ್ಯ,ವಸುದೇವತೆಯರು,ಇಂದ್ರ,ಬೃಹಸ್ಪತಿ,ವರುಣನೇ ಆದಿಯಾಗಿರುವ ಸಮಸ್ತ ದೇವತೆಯರು ನನಗೆ ಸಂಪತ್ತನ್ನು ಕರುಣಿಸಲಿ.

ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ |
ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತು ಸೋಮಿನ: ||೭||

ಭಾವಾರ್ಥ:-ವಿನತಾದೇವಿಯ ಮಗನಾಗಿರುವ ಗರುಡನೇ,ನೀನು ಸೋಮರಸವನ್ನು ಸೇವಿಸುವವನಾಗು. ವೃತ್ತಾಸುರಸಂಹಾರಿಯಾದ ಇಂದ್ರನೂ ಸೋಮರಸಪಾನ ಮಾಡಲಿ.ಸೋಮಪಾನಕ್ಕೆ ಯೋಗ್ಯಾರಾದ ದೇವತೆಗಳೇ,ನೀವೂ ಸೋಮಪಾನ ಮಾಡುವವರಾಗಿ. ಸೋಮಪಾನ ಮಾಡುವವರಾಗಿರುವ ನೀವುಗಳು ನನಗೂ ಧನಸೋಮಾದಿಗಳನ್ನು ದಯಪಾಲಿಸಿರಿ.

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿ: |
ಭವಂತಿ ಕೃತಪುಣ್ಯಾನಾಂ ಭಕ್ತನಾಂ ಶ್ರೀಸೂಕ್ತಂ ಜಪೇತ್ಸದಾ ||೮|| 

ಭಾವಾರ್ಥ:-ಶ್ರದ್ಧಾಪುರಸ್ಸರವಾಗಿ ಶ್ರೀಸೂಕ್ತವನ್ನು ಜಪಿಸುವ ಸಜ್ಜನರಿಗೆ ಎಂದೂ ಸಿಟ್ಟು, ಮತ್ಸರ, ದುರಾಸೆ, ಅತ್ಯಾಸೆ, ದುರ್ಬುದ್ಧಿಗಳು ಎಂದೂ ಉಂಟಾಗುವುದಿಲ್ಲ.

ವರ್ಷಂತು ತೇ ವಿಭಾವರಿ ದಿವೋ ಅಭ್ರಸ್ಯ ವಿದ್ಯುತ: |
ರೋಹಂತು ಸರ್ವ ಬೀಜಾನ್ಯವ ಬ್ರಹ್ಮದ್ವಿಷೋ ಜಹಿ ||೯||

ಭಾವಾರ್ಥ:-ರಾತ್ರೆಯರೂಪಿನವಳಾದ ಲಕ್ಷ್ಮಿಯೇ! ನಿನ್ನ ದಯೆಯಿಂದ ಅಂತರಿಕ್ಷದಲ್ಲಿನ ಮೋಡಗಳು ಸಿಡಿಲು,ಮಿಂಚುಸಹಿತವಾದ ಮಳೆಗರೆಯಲಿ. ಅದರಿಂದ ಭುವಿಯಲ್ಲಿನ ಬೀಜಗಳು ಮೊಳಕೆಯೊಡೆದು ಗಿಡವಾಗಿ ಬೆಳೆಯಲಿ. ಬ್ರಹ್ಮದ್ವೇಷಿಗಳನ್ನು ನಾಶಮಾಡುವುದರ ಮೂಲಕ ನಮ್ಮನ್ನು ಕಾಪಾಡು.

ಸರಸಿಜನಿಲಯೇ ಸರೋಜಹಸ್ತೇ ಧವಲತರಾಂ ಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಮ್ ||೧೦||

ಭಾವಾರ್ಥ:-ಸರೋವರದಲ್ಲಿ ನೆಲೆಯಾಗಿರುವವಳೇ,ತಾವರೆಪುಷ್ಪವನ್ನು ಹಸ್ತದಲ್ಲಿ ಹಿಡಿದಿರುವಾಕೆಯೇ, ಪರಿಶುಭ್ರವಾಗಿರುವ ಶ್ವೇತವಸನಧಾರಿಣಿಯೇ,     ಸುವಾಸನಾಭರಿತಳಾಗಿ ಮಾಲೆಯನ್ನು             ಧರಿಸಿ ಶೋಭಿಸುತ್ತಿರುವವಳೇ, ಪೂಜ್ಯಳೇ, ಶ್ರೀಹರಿಪ್ರಿಯಳಾದವಳೇ, ಚೆಲುವೆಯೇ,  ಮೂರು ಲೋಕಗಳಿಗೂ ಐಶ್ವರ್ಯದಾತಳೇ, ನನಗೆ ಪ್ರಸನ್ನಳಾಗು.

ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ
ಪದ್ಮಾಲಯೇ ಪದ್ಮದಲಾಯಾತಾಕ್ಷಿ |
ವಿಶ್ವಪ್ರಿಯೇ ವಿಷ್ಣುಮನೋಸ್ನುಕೂಲೇ
ತ್ವತ್ಪಾದಪದ್ಮಂ ಮಯಿ ಸನ್ನಿಧಸ್ತ್ವ  ||೧೧||

ಭಾವಾರ್ಥ:-ಕಮಲಪುಷ್ಪವನ್ನು ಇಷ್ಟಪಡುವ, ಪದ್ಮಿನೀ ಸ್ತ್ರೀಯಾಗಿರುವ [ಪದ್ಮಿನೀ=ಸ್ತ್ರೀಯರನ್ನು ವರ್ಣಿಸುವ ರೂಪಗಳಲ್ಲಿ ಒಂದು ವರ್ಗ] ತಾವರೆಯನ್ನು ಕೈಯಲ್ಲಿ ಹಿಡಿದಿರುವ, ಕಮಲಾಸನೆಯಾಗಿರುವ,
ಕಮಲದ ದಳಗಳಂತೆ ವಿಶಾಲವಾದ ಕಣ್ಣುಗಳನ್ನು ಹೊಂದಿರುವ,ಜಗತ್ತಿನ ಜನರಿಗೆ ಅಚ್ಚು ಮೆಚ್ಚಿನವಳಾದ ಮಹಾವಿಷ್ಣುವಿಗೆ ಅನುಕೂಲತೆಯ ಸತಿಯಾದ ಮಹಾಲಕ್ಷ್ಮಿಯೇ ನಿನ್ನ ಅಡಿದಾವರೆಯನ್ನು ನನ್ನಲ್ಲಿರಿಸು ತಾಯೀ.

ವಿಷ್ಣುಪತ್ನೀಂ ಕ್ಷಮಾಂ ದೇವೀಂ ಮಾಧವೀಂ ಮಾಧವಪ್ರಿಯಾಂ |
ವಿಷ್ಣೋ: ಪ್ರಿಯಸಖೀಂ ನಮಾಮ್ಯಚ್ಯುತವಲ್ಲಭಾಮ್ ||೧೨||

ಭಾವಾರ್ಥ:-ವಿಷ್ಣುವಿನ ಪತ್ನಿಯಾಗಿರುವ,ಕ್ಷಮಾಗುಣ ಪರಿಪೂರ್ಣೆಯಾಗಿರುವ, ವಸಂತ‌ಋತುವಿನಂತಿರುವ, ವಿಷ್ಣುವಿನಪ್ರೀತಿಪಾತ್ರಳಾದ, ವಿಷ್ಣುವಿಗೆ ಅತ್ಯಂತ ಪ್ರೀತಿಯ ಸ್ನೇಹಿತೆಯಾಗಿರುವ, ಯಾವುದಕ್ಕೂ ಚ್ಯುತಿಯಿಲ್ಲದವನನ್ನು ಇಷ್ಟಪಡುವ ಭುವಿ ರೂಪಿಣಿಯಾಗಿರುವ ಲಕ್ಷ್ಮಿದೇವಿಗೆ ನಾನು ಶಿರಬಾಗುವೆ.

ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀ ಮಹಿ |
ತನ್ನೋ ಲಕ್ಷ್ಮೀ: ಪ್ರಚೋದಯಾತ್ ||೧೩||

ಭಾವಾರ್ಥ:-ಮಹಾದೇವಿಯನ್ನು ಅರಿತುಕೊಳ್ಳಲು ಪ್ರಯತ್ನಿಸುವೆವು. ವಿಷ್ಣು ಪತ್ನಿಯಾಗಿರುವ ಆಕೆಯ ಅನುಗ್ರಕ್ಕೋಸ್ಕರವಾಗಿ ಧ್ಯಾನಿಸುತ್ತಿದ್ದೇವೆ. ಆ ಮಹಾಲಕ್ಷ್ಮಿಯು ನಮ್ಮನ್ನು ಸನ್ಮಾಗದಲ್ಲಿ ಸಾಗುವಂತೆ ಪ್ರೇರೇಪಿಸಲಿ.

ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾಚ್ಛೋಭಮಾನಂ ಮಹೀಯತೇ |
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತ ಸಂವತ್ಸರಂ ಧೀರ್ಘಮಾಯು:  ||೧೪|| 

ಭಾವಾರ್ಥ:- ಆ ಮಾತೆ ಶ್ರೀದೇವಿಯು ನಮ್ಮ ಮುಖ ಕಾಂತಿ, ಆರೋಗ್ಯ, ನಮಗೆ ಧೀರ್ಘಾಯುಷ್ಯವನ್ನು ಕರುಣಿಸಿ, ಕಾಂತಿಯುಕ್ತವಾದ ಶ್ರೇಷ್ಠತ್ವವನ್ನು ದಯಪಾಲಿಸುವುದರೊಂದಿಗೆ ಸಂಪತ್ತು, ಧಾನ್ಯ, ಗೋಸಂಪದ, ಪುತ್ರಸಂಪತ್ತು ಹಾಗೂ ನೂರು ವರ್ಷಗಳ ಪೂರ್ಣಾಯುಷ್ಯವನ್ನು ಅನುಗ್ರಹಿಸುವಳು.

ಆನಂದ: ಕರ್ದಮ: ಶ್ರೀದಶ್ಚಿಕ್ಲೀತ ಇತಿ ವಿಶ್ರುತಾ: |
ಋಷಯ: ಶ್ರಿಯ: ಪುತ್ರಾಶ್ಚ ಶ್ರೀರ್ದೇವೀ ದೇವತಾ ಮತಾ  ||೧೫||

ಭಾವಾರ್ಥ:-ಈ ಶ್ರೀ ಸೂಕ್ತಕ್ಕೆ ಆನಂದ, ಕರ್ದಮ, ಶ್ರೀದ, ಚಿಕ್ಲೀತ ಎಂಬುದಾಗಿ ನಾಲ್ವರು ಶ್ರೀದೇವೀ ತನಯರೇ ಋಷಿಗಳೆಂದು ಪ್ರಸಿದ್ಧಿ ಪಡೆದಿರುತ್ತಾರೆ. ಶ್ರೀದೇವಿಯು ದೇವತೆಯಾಗಿದ್ದಾಳೆ.

ಋಣ ರೋಗಾರಿ ದಾರಿದ್ರ್ಯ ಪಾಪಕ್ಷುದಪಮೃತ್ಯವ: |
ಭಯಶೋಕ ಮನಸ್ತಾಪಾ ನಶ್ಯಂತು ಮಮ ಸರ್ವದಾ  ||೧೬||

ಭಾವಾರ್ಥ:-ಶ್ರೀದೇವಿಯು ನನ್ನನ್ನು ಹಂಗಿನಿಂದ ಮುಕ್ತಗೊಳಿಸುವುದರೊಂದಿಗೆ, ನನ್ನಲ್ಲಿಯ ಅನಾರೋಗ್ಯ, ಶತ್ರು ಪೀಡೆ, ಬಡತನ, ಹಸಿವು, ಕೆಡುಕು, ಅಪಮೃತ್ಯುಗಳನ್ನೂ, ಭೀತಿ, ದು:ಖ, ಮನಸ್ತಾಪಗಳನ್ನೂ ಸದಾ ನಾಶಗೊಳಿಸಲಿ.

ಯಾಸಾಪದ್ಮಾಸನಸ್ಥಾ ವಿಪುಲಕಟಿತಟೀ ಪದ್ಮ ಪತ್ರಾಯತಾಕ್ಷೀ
ಗಂಭೀರಾವರ್ತನಾಭಿ: ಸ್ತನಭರನಮಿತಾ ಶುಭ್ರವಸ್ತ್ರೋತ್ತರೀಯಾ |
ಲಕ್ಷ್ಮೀರ್ದಿವ್ಯೈರ್ಗಜೇಂದ್ರೈರ್ಮಣಿಗಣಖಚಿತೈ: ಸ್ನಾಪಿತಾ ಹೇಮಕುಂಭೈ: 
ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವ ಮಾಂಗಲ್ಯಯುಕ್ತಾ ||೧೭||

ಭಾವಾರ್ಥ:-ಯಾವಾಕೆಯು ಪದ್ಮಾಸನದಲ್ಲಿ ಕುಳಿತಿರುವಳೋ,ಯಾವಾಕೆಗೆ ವಿಸ್ತಾರವಾಗಿರುವ ನಡುವಿರುವುದೋ, ಯಾವಾಕೆಯು ಕಮಲದಳವನ್ನು ಹೋಲುವ ಕಣ್ಣುಗಳನ್ನು ಹೊಂದಿರುವಳೋ,ಆಳವಾಗಿರುವ ಸುಳಿಯಂತಹಾ ನಾಭಿಯನ್ನು ಹೊಂದಿರುವಳೋ,ಭಾರವಾಗಿರುವ ಸ್ತನಗಳಿಂದ ಕೂಡಿದವಳಾಗಿರುವಳೋ,ಶ್ವೇತವಸನಧಾರಿಣಿಯೋ,ರತ್ನಖಚಿತವಾದ ಬಂಗಾರದ ಕೊಡಗಳ ನೀರಿನಿಂದ ಆನೆಗಳ ಮೂಲಕ ಅಭಿಷೇಕವನ್ನು ಮಾಡಿಸಿಕೊಳ್ಳುತ್ತಿರುವಳೋ,ಹಸ್ತಗಳಲ್ಲಿ ತಾವರೆಪುಷ್ಪಗಳನ್ನು ಹಿಡಿದಿರುವಳೋ, ಆಂತಹಾ ಮಹಾಲಕ್ಷ್ಮಿಯು ಸರ್ವಸೌಭಾಗ್ಯವತಿಯಾಗಿ ಸದಾ ನನ್ನ ಮನೆಯಲ್ಲಿ ನೆಲೆ ಮಾಡಲಿ.

ಲಕ್ಷೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ
ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಂ |
ಶ್ರೀಮನ್ಮಂದಕಟಾಕ್ಷಲಭ್ದವಿಭವಬ್ರಹ್ಮೇಂದ್ರಗಂಗಾಧರಾಂ
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ ||೧೮||

ಭಾವಾರ್ಥ:-ಹಾಲುಗಡಲಿನ ಒಡೆಯನ ಮಗಳಾದ, ಶ್ರೀರಂಗಧಾಮದ ಅಧೀಶೆಯಾದ, ಸರ್ವ ದೇವತಾ ಸ್ತ್ರೀಯಯರು ಸೇವಕಿಯರಾಗಿ ಯಾರ ಸೇವೆ ಗೈಯುವರೋ,ಹಾಗೆಯೇ ಬ್ರಹ್ಮಾಂಡಕ್ಕೆ ಏಕಮಾತ್ರಾ ದೀಪದ ಕುಡಿಯಂತಿರುವ,ಯಾರ ಕಡೆಗಣ್ಣೋಟದಿಂದ ಬ್ರಹ್ಮ,ವಿಷ್ಣು,ಮಹೇಶ್ವರರಿಗೆ ವೈಭವ ದೊರಕಿದೆಯೋ ಅಂತಹಾ, ಮೂರು ಲೋಕಗಳನ್ನೂ ತನ್ನ ಕುಟುಂಬವನ್ನಾಗಿ ಹೊಂದಿರುವ, ಮುಕುಂದನ ಪ್ರಿಯೆಯಾಗಿರುವ ಲಕ್ಷ್ಮಿಗೆ ನಾನು ಶಿರಸಾ ವಂದಿಸುವೆ.

ಸಿದ್ಧಲಕ್ಷ್ಮೀರ್ಮೋಕ್ಷಲಕ್ಷ್ಮೀರ್ಜಯಲಕ್ಷ್ಮೀ: ಸರಸ್ವತೀ |
ಶ್ರೀಲಕ್ಷ್ಮೀರ್ವರಲಕ್ಷ್ಮೀಶ್ಚ ಪ್ರಸೀದ ಮಮ ಸರ್ವದಾ ||೧೯||

ಭಾವಾರ್ಥ:-ಸಿದ್ಧಿದಾಯಕಿಯಾದ ಲಕ್ಷ್ಮಿ, ಮೋಕ್ಷ ಪ್ರದಾಯಿನಿಯಾದ ಲಕ್ಷ್ಮಿ,ಜಯವನ್ನು ಕರುಣಿಸುವ ಲಕ್ಷ್ಮಿ,ಮದುರವಚನವನ್ನಾಡುವ ಲಕ್ಷ್ಮಿ,ಕಾಂತಿದಾಯಕಿಯಾಗಿರುವ ಲಕ್ಷ್ಮಿ, ಹಾಗೂ ವರದಾಯಿನಿಯಾಗಿರುವ ಲಕ್ಷ್ಮಿಯೂ ಆಗಿರುವ ಮಹಾಲಕ್ಷ್ಮಿಯೇ ನೀನು ಸದಾ ನನಗೆ ಪ್ರಸನ್ನಳಾಗು.

ವರಾಂಕುಶೌ ಪಾಶಮಭೀತಿಮುದ್ರಾಂ
ಕರೈರ್ವಹಂತೀಂ ಕಮಲಾಸನಸ್ಥಾಮ್ |
ಬಾಲಾರ್ಕಕೋಟಿಪ್ರತಿಭಾಂ ತ್ರಿಣೇತ್ರಾಂ 
ಭಜೇಶಮಂಬಾಂ ಜಗದೀಶ್ವರೀಂ ತಾಮ್ ||೨೦||

ಭಾವಾರ್ಥ:-ಹಸ್ತಗಳಲ್ಲಿ ಅಂಕುಶ,ಪಾಶಗಳನ್ನು ಹಾಗೂ ವರ,ಅಭಯ ಮುದ್ರೆಗಳನ್ನು ಧರಿಸಿ,ಪದ್ಮಾಸನದಲ್ಲಿ ವಿರಾಜಮಾನಳಾಗಿರುವ, ಉದಯಿಸುವ ಕೋಟಿ ಸೂರ್ಯರ ಪ್ರಕಾಶವನ್ನು ಹೊಂದಿರುವ, ಮುಕ್ಕಣ್ಣಳಾಗಿರುವ ಆ ಜಗದೊಡತಿಯನ್ನು ನಾನು ಭಜಿಸುತ್ತಿದ್ದೇನೆ.

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ಸ್ತುತೇ ||೨೧||


ಭಾವಾರ್ಹ:-ಹೇ!ನಾರಾಯಣೀ;ಸರ್ವಮಂಗಲ ಮಾಂಗಲ್ಯದಾಯಕಿಯೂ, ಶಿವಸ್ವರೂಪಿಣಿಯೂ, ಸರ್ವಾರ್ಥಗಳನ್ನು ಸಾಧಿಸುವವಳೂ, ಶರಣ್ಯಳೂ, ಮೂರುಲೋಕಗಳ ಜನನಿಯೂ ಗೌರಿಯೂ ಆಗಿರುವ ನಿನಗೆ ನನ್ನ ಪ್ರಣಾಮಗಳು.
*********************************************************************************
        || ಇತಿ ಶ್ರೀಸೂಕ್ತಮ್ ||  || ಶ್ರೀಸೂಕ್ತದ ಭಾವಾರ್ಥ ಈ ರೀತಿಯಾಗಿದೆ ||
*********************************************************************************
                                      -೩-
                   || ವಿವಾಹ ಮಂಗಲಾಷ್ಟಕಮ್ ||
                  *************************
ವಿಘ್ನೇಶ್ವರೋ ವಿಘ್ನವಿಧೂರಕಾರೀ ನಿರ್ವಿಘ್ನಕಾರ್ಯಾರ್ಥಮಸೌ ಪ್ರಸಿದ್ಧ: |
ವಿಘ್ನೇಶ್ವರೋ ನಾಮ ಸುರೇಷು ಪೂಜ್ಯೋ ವಧೂವರಾಭ್ಯಾಮ್ ಶುಭತಾ ಕರೋತು ||೧||

ಭಾವಾರ್ಥ:-ಅಡೆತಡೆಗಳನ್ನು ದೂರೀಕರಿಸುವವನಾಗಿರುವ,ಕಾರ್ಯಗಳಲ್ಲಿ ನಿರ್ವಿಘ್ನದಾಯಕನೆಂದು ಪ್ರಸಿದ್ಧನಾಗಿರುವ,ದೇವತೆಗಳಲ್ಲಿ ಪರಮಪೂಜ್ಯನಾಗಿರುವ ವಿಘ್ನೇಶ್ವರನು ವಧೂವರರಿಗೆ ಶುಭವನ್ನು ದಯಪಾಲಿಸಲಿ.


ಸರ್ವೇಷು ಕಾರ್ಯೇಷ್ಟಖಿಲಾರ್ಥಸಿದ್ಧಿರ್ವಾಗೀಶ್ವರೀ ಸತ್ಯವತೀ ಚ ದುರ್ಗಾ |

ಸರಸ್ವತೀ ನಾಮ ವಿಧಾತೃಪತ್ನೀ ವಧೂವರಾಭ್ಯಾಂ ಶುಭತಾಂ ಕರೋತು  ||೨||

ಭಾವಾರ್ಥ:-ಸಮಸ್ತ ಕಾರ್ಯಗಳಲ್ಲಿಯೂ ಸಕಲೇಷ್ಟಾರ್ಥಗಳನ್ನು ದಯಪಾಲಿಸುವ ಸತ್ಯವತಿಯೂ,ವಾಕ್ಕಿಗೆ ಅಧೀಶ್ವರಿಯೂ,ದುರಿತ ನಿವಾರಕಳೂ,ಬ್ರಹ್ಮನ ಸತಿಯೂ ಆಗಿರುವ ಸರಸ್ವತಿಯು ವಧೂವರರಿಗೆ ಶುಭವನ್ನು ಕರುಣಿಸಲಿ.


ವಸಂತಲಕ್ಷ್ಮೀರ್ವನರಾಜಲಕ್ಷ್ಮೀ: ಕ್ಷೀರಾಬ್ಧಿ ಪುತ್ರೀ ಕಮಲಾಯತಾಕ್ಷೀ |

ಶ್ರೀ ವಿಷ್ಣು ಪತ್ನೀ ಭುವನೈಕಮಾತಾ ವಧೂವರಾಭ್ಯಾಂ ಶುಭತಾ ಕರೋತು ||೩||

ಭಾವಾರ್ಥ:-ವಸಂತಲಕ್ಷ್ಮಿಯೂ,ವನರಾಜಲಕ್ಷ್ಮಿಯೂ,ಕ್ಷೀರಸಾಗರ ತನಯೆಯೂ,ತಾವರೆಯ ಎಲೆಯಂತೆ ವಿಸ್ತಾರವಾಗಿರುವ ಕಣ್ಣುಗಳನ್ನು ಹೊಂದಿರುವವಳೂ,ಬ್ರಹ್ಮಾಂಡದ ಏಕಮಾತ್ರ ತಾಯಿಯೂ ಶ್ರೀ ಮಹಾವಿಷ್ಣುವಿನ ಸತಿಯೂ ಆಗಿರುವ ಲಕ್ಷ್ಮಿಯು ವಧೂವರರಿಗೆ ಶುಭವನ್ನು ದಯಪಾಲಿಸಲಿ.


ಶಿವಸ್ಯಪತ್ನೀ ಗಿರಿರಾಜಪುತ್ರೀ ಸುವರ್ಣದಿವ್ಯಾಂಬರರತ್ನಭೂಷಾ |

ಕಲ್ಯಾಣ ಗೌರೀ ಶುಭ ಮಂಗಲಾರ್ಥೀ ವಧೂವರಾಭ್ಯಾಂ ಶುಭತಾಂ ಕರೋತು ||೪||

ಭಾವಾರ್ಥ:-ಮನಮೋಹಕವಾಗಿರುವ ಬಂಗಾರವರ್ಣದ ವಸನದಿಂದ ಅಲಂಕೃತಳಾಗಿರುವ,ರತ್ನಾಭರಣ ಭೂಷಿಣಿಯಾಗಿರುವ,ಕಲ್ಯಾಣದಾಯಿನಿಯಾಗಿರುವ,ಕ್ಷೇಮವನ್ನೂ,ಮಂಗಳವನ್ನೂ ಕರುಣಿಸುವ ಪಾರ್ವತೀ ದೇವಿಯು ವಧೂವರರಿಗೆ ಶುಭವನ್ನು ದಯಪಾಲಿಸಲಿ.


ಚಕೋರನೇತ್ರೀ ಚಪಲಾಯತಾಕ್ಷೀ ಸೌಂದರ್ಯರೂಪಾ ನವಚಂದ್ರರೇಖಾ |

ನಲಸ್ಯ ಪತ್ನೀ ದಮಯಂತಿ ನಾಮ್ನೀ ವಧೂವರಾಭ್ಯಾಂ ಶುಭತಾಂ ಕರೋತು ||೫||

ಭಾವಾರ್ಥ:-ಬೆಳದಿಂಗಳಪಕ್ಷಿಯ ಕಣ್ಣುಗಳನ್ನು ಹೊಂದಿರುವವಳೂ,ಚಂಚಲನಯನಳೂ,ಸೌಂದರ್ಯದ ಪ್ರತಿಬಿಂಬದಂತಿರುವವಳೂ,ಚಂದ್ರನ ಹೊಸಕಳೆಯಂತಿರುವವಳೂ,ದಮಯಂತಿ ಎಂಬ ಹೆಸರಿನಿಂದ ಪ್ರಸಿದ್ಧಳಾಗಿರುವ ನಳ ಮಹಾರಾಜನ ಸತಿಯು ವಧೂವರರಿಗೆ ಶುಭವನ್ನು ದಯಪಾಲಿಸಲಿ.


ಶ್ರೀಶೈಲೇಂದ್ರಸುವೇಲವಿಂಧ್ಯಮಲಯಾ: ಶ್ರೀಶೈಲಜಾತಾ ದ್ರುಮಾ: |

ಹೇಮಾದ್ರಿಶ್ಚ ಮಹೇಂದ್ರಸುಂದರಗಿರಿ: ಶ್ರೀಕಂಠವಾಸಾದಯ: ||
ಪ್ರಾಕ್ಸಂಸ್ಥಾಶ್ಚ ರವೇಸ್ತುರಂಗಮಖುರಪ್ರಕ್ಷುಣ್ಣಶೃಂಗಾನ್ವಿತಾ: |
ಸರ್ವೇ ತೇ ಗಿರಿಚಾರಿಲೇಖಸಹಿತಾ: ಕುರ್ಯು: ಸದಾ ಮಂಗಲಮ್ ||೬||

ಭಾವಾರ್ಥ:-ಶ್ರೀಶೈಲಪರ್ವತ,ಸುವೇಲ ಬೆಟ್ಟ,ವಿಂಧ್ಯಪರ್ವತ,ಮಲಯಾಚಲ ಮೊದಲಾದ ಪಾವನ ಪರ್ವತಗಳು,ಶ್ರೀಶೈಲಪರ್ವತಪ್ರದೇಶದ ಗಿಡಮರಗಳು,ಹೇಮಾದ್ರಿ ಶಿಖರ,ಮಹೇಂದ್ರ ಪರ್ವತ,ಕೈಲಾಸಾದಿಗಿರಿಗಳು,ಅನುದಿನವೂ ಸಂಚರಿಸುವ ಸೂರ್ಯನ ರಥದ ಕುದುರೆಗಳ ಮೊಗದರ್ಶನದಿಂದ ಗಾಯಗೊಂಡಿರುವ ಗಿರಿಶಿಖರಗಳು ಸಂಚರಿಸುತ್ತಿರುವ ಪವಿತ್ರಾತ್ಮ ಸ್ವರೂಪದ ಸಮಸ್ತದೇವತಾಶಕ್ತಿಗಳಿಂದ ಕೂಡಿದ ಈ ಸಕಲ ಗಿರಿ ಶಿಖರ ಪರ್ವತಗಳು ವಧೂವರರಿಗೆ ಸದಾ ಶುಭವನ್ನು ದಯಪಾಲಿಸಲಿ.


ಗಂಗಾತುಂಗಕಣಾ: ಕಲೀಂದುತನಯಾ ಗೋದಾವರೀ ನರ್ಮದಾ |

ಕಾವೇರಿ ಚ ಸರಸ್ವತೀ ಚ ಸರಯೂ: ಸಿಂಧುಸ್ತಥಾ ದೇವಿಕಾ ||
ಇತ್ಯೇತಾ: ಸರಿತ: ಸಮುದ್ರ ಸಹಿತಾ: ಕ್ಷೇತ್ರಾಣಿ ಪುಣ್ಯಾನ್ಯಥಾ |
ದ್ವೀಪಾ: ಸಪ್ತ ಸ ಪರ್ವತಾ:ಪ್ರತಿದಿನಂ ಕುರ್ವಂತು ತೇ ಮಂಗಲಮ್ ||೭||

ಭಾವಾರ್ಥ:-ಗಂಗೆ,ತುಂಗೆ,ಯಮುನೆ,ಗೋದಾವರಿ,ನರ್ಮದೆ,ಕಾವೇರಿ,ಸರಸ್ವತಿ,ಸರಯೂ, ಸಿಂಧು,ರೇಣುಕೆ, ಇತ್ಯಾದಿಯಾದ ಪರಮಪಾವನವಾಗಿರುವ ಸಕಲ ಪುಣ್ಯ ನದಿಗಳು,ಸಮಸ್ತ ಸಮುದ್ರಗಳು,ಮಲಯಾಚಲಾದಿ ಸಪ್ತ ಪರ್ವತಗಳು,ಸಪ್ತ ದ್ವೀಪಗಳು, ವಧೂ ವರರಾದ ನಿಮಗೆ ಪ್ರತಿದಿನವೂ ಶುಭವನ್ನು ದಯಪಾಲಿಸಲಿ. 


ಗಾಯತ್ರೀ ಗಿರಿನಂದನಾ ಗಣಪತಿರ್ಗಂಗಾಧರೋ ಗೌತಮೋ |

ಗಾಂಗೇಯೋ ಗಣನಾಯಕೋ ಗಣಸುಧಾಗಾರಸ್ತಥಾ ಗೋಕುಲಮ್ ||
ಗಂಧರ್ವಾ ಗಗನಂ ಗ್ರಹಾ ರವಿಮುಖ ಗೋಪಾಲಕೃಷ್ಣೋದ್ಭವೋ |
ದಂಪತ್ಯೋಶ್ಚಿರಕಾಲಭೋಗಮತುಲಂ ದದ್ಯು: ಸದಾ ಮಂಗಲಮ್ ||೮||

ಭಾವಾರ್ಥ:-ಗಾಯತ್ರಿ,ಪಾರ್ವತಿ,ಗಣಪತಿ,ಶಿವ,ಗೌತಮ, ಭೀಷ್ಮ,ಗಂಧರ್ವಸಮೂಹ, ಆಕಾಶ, ಸೂರ್ಯಾದಿ ನವಗ್ರಹಗಳ ರಾಶಿ,ಮೊದಲಾದ ಗೋಪಾಲಕೃಷ್ಣನಿಂದ ಉತ್ಪತ್ತಿಯಾಗಿರುವ ಇವರೆಲ್ಲರೂ ದಂಪತಿಗಳಾದ ಈ ವಧೂ ವರರಿಗೆ ಚಿರಕಾಲ ಸಕಲ ಭೋಗ ಭಾಗ್ಯಾದಿ ಐಶ್ವರ್ಯಗಳನ್ನಿತ್ತು ಶುಭವನ್ನು ದಯಪಾಲಿಸಲಿ.

*********************************************************************
                   || ಇತಿ ವಿವಾಹ ಮಂಗಲಾಷ್ಟಕಮ್ ||  
       || ಈ ರೀತಿಯಾಗಿ ವಿವಾಹ ಮಂಗಲಾಷ್ಟಕಗಳ ಭಾವಾರ್ಥವಾಗಿದೆ. ||

*******************************************************************
                                -೪-
            || ಉಪನಯನ ಮಂಗಲಾಷ್ಟಕಮ್ ||
           ****************************
ಬ್ರಹ್ಮಾದ್ಯಾ: ಸನಕಾದಯ: ಸುರಗಣಾ: ಸಂತ: ಸಭಾ-ವಜ್ರಿಣೌ |
ಭಾರದ್ವಾಜ-ಪರಾಶರಾದಿ-ಮುನಯ: ಸಂಸ್ತೂಯಮಾನಾ: ಸದಾ ||
ವಿಶ್ವಾಮಿತ್ರ-ಪುರೋಗಮಾ ಮುನಿಗಣಾ: ಪೌರಾಣಿಕಾ ಯಾಜ್ಞಿಕಾ: |
ಯೇ ಚಾನ್ಯೇ ವಟವೇ ಸ್ವಕರ್ಮಪಟವೇ ಕುರ್ಯು: ಸದಾ ಮಂಗಲಮ್ ||೧||

ಭಾವಾರ್ಥ:-ಬ್ರಹ್ಮ-ವಿಷ್ಣು-ಮಹೇಶ್ವರ-ಸನಕಾದಿ ಮಹರ್ಷಿಗಳು; ದೇವತೆಗಳು, ಸಂತರಸಮೂಹ, ದೇವೇಂದ್ರ,ಭಾರದ್ವಾಜ,ಪರಶರಾದಿ ಮುನಿಗಳು,ವಿಶ್ವಾಮಿತ್ರನೇ ಮೊದಲಾದ ಋಷಿಗಳು,ಯಾಗಮಾಡುವವರು-ಇವರೆಲ್ಲರೂ ಸ್ವಕರ್ಮಾನುಷ್ಠಾನ ನಿರತನಾಗುವ ವಟುವಿಗೆ ಸದಾ ಮಂಗಲವನ್ನು ದಯಪಾಲಿಸಲಿ.


ಶ್ರೀಶಂಭು: ಕುಶಲಂ ಕರೋತು ಭವತಾಂ, ಧಾತಾ ಪ್ರಜಾನಾಂ ಸುಖಮ್ |

ನಿರ್ವಿಘ್ನಂ ಗಣನಾಯಕ:,ಪ್ರತಿದಿನಂ ಸೂರ್ಯ: ಪ್ರತಾಪೋದಯಮ್ ||
ಕೀರ್ತಿಸ್ತೇ ಧನ ಧಾನ್ಯದಾಂತಿಮತುಲಾಂ,ದುರ್ಗಾರಿನಾಶಂ ಮುದಾ |
ಗಂಗಾ ತೇ ಖಲು ಪಾಪಹಾ ನಿಶಿದಿನಂ ಕುರ್ಯಾತ್ ಸದಾ ಮಂಗಲಮ್  ||೨||

ಭಾವಾರ್ಥ:-ಶಿವನು ನಿಮಗೆ ಕ್ಷೇಮವನ್ನುಂಟುಮಾಡಲಿ.ಬ್ರಹ್ಮನು ಪ್ರಜೆಗಳಿಗೆ ಸುಖವನ್ನು ಕರುಣಿಸಲಿ.ಗಣಪತಿಯು ನಿರ್ವಿಘ್ನತ್ವವನ್ನು ದಯಪಾಲಿಸಲಿ.ರವಿಯು ಅನುದಿನವೂ ಪ್ರಕಾಶವನ್ನು ಒದಗಿಸಲಿ.ಕೀರ್ತಿಯು ವಟುವಾದ ನಿನಗೆ ಧನ ಧಾನ್ಯಾದಿ ಸಂಪದಗಳ ಸಹಿತ ಅಪರಿಮಿತವಾದ ಜ್ಞಾನವನ್ನು ನೀಡಲಿ.ದುರ್ಗೆಯು ವೈರಿಗಳನ್ನು ಸಂಹರಿಸಲಿ.ಗಂಗೆಯು ಸದಾ ಪಾಪಗಳನ್ನು ಕಳೆಯುತ್ತಾ ಸಂಕಷ್ಟಗಳನ್ನುನಿವಾರಿಸಿ ನಿರಂತರ ವಟುವಿಗೆ ಶುಭವನ್ನು ಕರುಣಿಸಲಿ.


ಬ್ರಹ್ಮಾ ವೇದಪತಿ:, ಶಿವ: ಪಶುಪತಿ:, ಸೂರ್ಯೋ ಗ್ರಹಾಣಾಂ ಪತಿ: |

ಸಕ್ರೋ ದೇವಪತಿರ್ನಲೋ ನರಪತಿ:,ಸ್ಕಂದಶ್ಚ ಸೇನಾಪತಿ: ||
ವಿಷ್ಣುರ್ಯಜ್ಞಪತಿರ್ಯಮ: ಪಿತೃಪತಿಸ್ತಾರಪತಿಶ್ಚಂದ್ರಮಾ: |
ಇತ್ಯೇತೇ ಪತಯ: ಸುವರ್ಣಸಹಿತಾ: ಕುರ್ಯುರ್ವಟೋರ್ಮಂಗಲಮ್  ||೩||

ಭಾವಾರ್ಥ:-ವೇದಪತಿಯಾಗಿರುವಂತಹಾ ಬ್ರಹ್ಮ,ಗ್ರಹಗಳ ಅಧಿಪತಿಯಾಗಿರುವಂತಹಾ ಸೂರ್ಯ,ದೇವತೆಗಳ ಅಧಿಪತಿಯಾಗಿರುವ ಇಂದ್ರ,ಅರಸುಗಳೊಡೆಯನಾದ ನಳ,ದೇವ ಸೇನಾಧಿಪತಿಯಾಗಿರುವ ಷಣ್ಮುಖ,ಯಜ್ಞಾಧೀಶನಾಗಿರುವ ಶ್ರೀಹರಿ,ಪಿತೃಗಳ ಒಡೆಯನಾದ ಯಮ,ನಕ್ಷತ್ರಗಳ ದೊರೆಯಾಗಿರುವ ಚಂದ್ರ-ಇವರೆಲ್ಲರೂ ಅನವರತವೂ ಸೌಂದರ್ಯ ಸಹಿತರಾಗಿ ವಟುವಿಗೆ ಶುಭವನ್ನು ದಯಪಾಲಿಸಲಿ.


ಗೌರೀನಂದನ-ಗೌರವರ್ಣವದನ: ಶೃಂಗಾರಲಂಬೋದರ: |

ಸಿಂಧೂರಾಶ್ರಿತದಿಗ್ಗಜೇಂದ್ರವದನಶ್ಚಾಂಘ್ರೌರಣನ್ನೂಪುರ: ||
ಕರ್ಣೋಲ್ಲಾಸಿತಕುಂಡಲಪ್ರವಿಲಸನ್ ಕಂಠಸ್ಥಮುಕ್ತಾವಲೀ |
ಶುಂಡಾದಂಡವಿಭೂಷಿತೋ ಗಣಪತಿರ್ದದ್ದ್ಯಾದ್ವಟೋರ್ಮಂಗಲಮ್  ||೪||

ಭಾವಾರ್ಥ:-ಗೌರೀತನಯನೂ,ಗೌರ ವರ್ಣಮೊಗದನೂ,ಲಂಬೋದರನೂ,ಸಿಂಧೂರವನ್ನು ಲೇಪಿಸಿಕೊಂಡ ಗಜೇಂದ್ರ ವದನನೂ,ಪಾದಗಳಲ್ಲಿ ಸುಮಧುರ ನಾದವನ್ನುಂಟುಮಾಡುವ ಗೆಜ್ಜೆಗಳನ್ನು ಧರಿಸಿ, ಕಿವಿಗಳಲ್ಲಿ ಕುಂಡಲಗಳನ್ನು ಧರಿಸಿ, ಕೊರಳಲ್ಲಿ ಮುತ್ತಿನಹಾರದಿಂದ ಶೋಭಿಸುತ್ತಿರುವ ಆನೆಯ ಸೊಂಡಿಲಿನಿಂದ ಶೋಭಿಸುತ್ತಿರುವವನೂ ಆದ ಮಹಾಗಣಪತಿಯು ವಟುವಿಗೆ ಶುಭವನ್ನುಂಟುಮಾಡಲಿ.


ಲಕ್ಷ್ಮೀ:-ಕೌಸ್ತುಭ-ಪಾರಿಜಾತಕ-ಸುರಾ ಧನ್ವಂತರೀಶ್ಚಂದ್ರಮಾ: |

ಗಾವ: ಕಾಮದುಹ: ಸುರೇಶ್ವರಗಜೋ ರಂಭಾದಿ-ದೇವಾಂಗನಾ: ||
ಅಶ್ವ: ಸಪ್ತಮುಖೋ ವಿಷಂ ಹರಧನು: ಶಂಖೋಮೃತಂ ಚಾಂಬುಧೇ: |
ರತ್ನಾನೀಹ ಚತುರ್ದಶ ಪ್ರತಿದಿನಂ ಕುರ್ಯುರ್ವಟೋರ್ಮಂಗಲಮ್  ||೫||

ಭಾವಾರ್ಥ:-ಸಾಗರಮಥನದಿಂದ ಉದ್ಭವಿಸಿದ ಲಕ್ಷ್ಮೀ, ಕೌಸ್ತುಭ,ಪಾರಿಜಾತ, ದೇವತೆಗಳು, ಚಂದ್ರ,

ಧನ್ವಂತರಿ,ಕಾಮಧೇನು,ಐರಾವತ,ರಂಭೆ ಊರ್ವಶಿಯರೇ ಆದಿಯಾದ ಸುರಾಂಗನೆಯರು,ಏಳುಮುಖಗಳನ್ನು ಹೊಂದಿದ ಕುದುರೆ,ವಿಷವನ್ನು ನಾಶಪಡಿಸುವ ಧನುಸ್ಸು,ಶಂಖ,ಅಮೃತ-ಚತುರ್ದಶ ರತ್ನವೇ ಆದಿಯಾಗಿ ಸಕಲವೂ ಪ್ರತಿದಿನವೂ ವಟುವಿಗೆ ಶುಭವನ್ನುಂಟುಮಾಡಲಿ.

ನಂದಾ ನಾರದ-ನರ್ಮದಾ-ನಗಸುತಾ ನಂದಾದಿ-ಮಂದಾತ್ಮಜಾ: |

ನಂದೀನಾಯಕ-ನಿಮ್ನಗಾಧಿಪ ನರಾ ನಾರಾಯಣೋ ನರ್ಮವಾಕ್ ||
ನಕ್ಷತ್ರಂ ನವಖಂಡಕಾ ನವನಿಧಿರ್ನಾರೀ ನಗೋ ದಾನಪಾ: |
ನಂದಾಂಬಾ ನವರಾತ್ರಯೋ ನವಖಗಾ ದದ್ಯುರ್ವಟೋರ್ಮಂಗಲಮ್  ||೬||

ಭಾವಾರ್ಥ:-ನಂದಾ[ದುರ್ಗಾದೇವಿ],ನಾರದ,ನರ್ಮದ,ನಗಸುತ ಇತ್ಯಾದಿಯಾಗಿ "ನ"ಕಾರದಿಂದ ಆರಂಭಗೊಳ್ಳುವ ಪೂಜ್ಯರೂ, ದೇವತಾಸ್ವರೂಪಗಳೂ, ವಟುವಿಗೆ ಶುಭವನ್ನುಂಟು ಮಾಡಲಿ.ಪಾರ್ವತೀ,ಗಣಪತಿ,ಧರ್ಮರಾಜ,ಶಿವ,ಸಾಗರ,ಮನುಷ್ಯರು,ಸಂತಸದ ನುಡಿಗಳು,ಶ್ರೀಹರಿ,ನಕ್ಷತ್ರಗಳು,ನವ ನಿಧಿಗಳು,ನವ ಖಂಡಗಳು,ಸುವಾಸಿನಿಯರು,ಬೇವು,ಬೆಟ್ಟ,ಪರ್ವತಗಳು,ನವರಾತ್ರಿಗಳು,ನವಪಕ್ಷಿಗಳಾದಿಯಾಗಿ ಸಮಸ್ತರೂ ವಟುವಿಗೆ ಶುಭವನ್ನು ದಯಪಾಲಿಸಲಿ.


ಯಾ ದೇವೀ ತ್ವರಿತಾ ವಿಶಾಲನಯನಾ ಯಾ ರೇಣುಕಾ ಹಿಂಗುಲಾ |

ಯಾ ದುರ್ಗಾ ಭುವನೇಶ್ವರೀ ಕಮಲಜಾ ಶ್ರೀಶಾರದಾ ಚಂಡಿಕಾ ||
ಯಾ ವೈ ಕುಕ್ಕುಟವಾಹಿನೀ ಚ ತುಲಜಾ ಕಾಲಿಂಗಿನೀ ಜ್ವಾಲಿನೀ |
ಕಾಮಾಕ್ಷೀ ಗಿರಿಜಾ ಶಿವಾ ಭಗವತೀ ಕುರ್ಯಾತ್ ವಟೋರ್ಮಂಗಲಮ್  ||೭||

ಭಾವಾರ್ಥ:-ತ್ವರಿತಳೂ ವಿಶಾಲನಯನಳೂ ಆಗಿರುವ ರೇಣುಕೆ,ಸಿಂಧೂರೆ,ಭುವನಾಧೀಶ್ವರಿ ದುರ್ಗೆ,ಕಮಲಜೆಯಾಗಿರುವ ಶಾರದೆ, ಕುಕ್ಕುಟವಾಹಿನೀ,ಕಲಿಂಗಿಣೀ,ಕಾಮಾಕ್ಷೀ, ಭಗವತಿಯಾಗಿರುವ ಪಾರ್ವತಿ-ಇವರೆಲ್ಲರೂ ನಿರಂತರ ವಟುವಿಗೆ ಶುಭವನ್ನು ಕರುಣಿಸಲಿ.


ಆದಿತ್ಯಾದಿ ನವಗ್ರಹಾಶ್ಚ ಋಷಯೋ ಮೇಷಾದಿರಾಶ್ಯಾದಿಕಮ್ |

ಆಚಾರ್ಯಾ ವಟವಶ್ಚ ತೇ ಸುಬಲವಾನ್ ಚಂದ್ರಗ್ರಹಸ್ತೇ ಶುಭಾ: ||
ಮಾಸ: ಪಕ್ಷ ಸುತಿಥ್ಯ-ವಾರ-ಕರಣಂ-ಋಕ್ಷಾದಿಯೋಗಾ: ಶುಭಾ: |
ತೇ ಸರ್ವೇಪಿ ವಟೋಶ್ಚಿರಾಯುಷಮಥೋ ಕುರ್ವಂತು ವಿದ್ಯಾಬಲಮ್ ||೮||

ಭಾವಾರ್ಥ:-ಆದಿತ್ಯಾದಿ ನವ ಗ್ರಹಗಳು,ಋಷಿಗಳು,ಮೇಷಾದಿ ದ್ವಾದಶ ರಾಶಿಗಳು,ಆಚಾರ್ಯರುಗಳು,ಮಾಸ,ಪಕ್ಷ,ತಿಥಿ,ವಾರ,ಯೋಗ,ಕರಣ,ಇವೆಲ್ಲವುಗಳು ವಟುವಿಗೆ ಚಿರಾಯುಷ್ಯದೊಡನೆ ವಿದ್ಯಾ ಬಲವನ್ನು ಕರುಣಿಸಲಿ.


ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ |

ಕಾವೇರೀ ಸರಯೂ ಮಹೇಂದ್ರ ತನಯಾ ಚರ್ಮಣ್ವತೀ ವೇದಿಕಾ ||
ಕ್ಷಿಪ್ರಾ ವೇತ್ರವತೀ ಮಹಾಸುರನದೀ ಖ್ಯಾತಾ ಚ ಯಾ ಗಂಡಕೀ |
ಪೂರ್ಣಾ: ಪುಣ್ಯಜಲೈ:ಸಮುದ್ರ ಸಹಿತಾ ಕುರ್ಯು: ಸದಾ ಮಂಗಲಮ್ ||೯||

ಭಾವಾರ್ಥ:-ಗಂಗಾ,ಸಿಂಧು,ಸರಸ್ವತೀ,ಯಮುನಾ,ಗೋದಾವರೀ,ನರ್ಮದಾ,ಕಾವೇರೀ, ಸರಯೂ,ಚರ್ಮಣ್ವತೀ,ಕ್ಷಿಪ್ರಾ,ವೇತ್ರವತೀ,ದೇವತೆಗಳ ಶ್ರೇಷ್ಠ ನದಿಯೆಂದು ವಿಖ್ಯಾತವಾಗಿರುವ ಗಂಡಕೀಯೇ ಮೊದಲಾದ ಜಲಭರಿತವಾಗಿ ಸಾಗಿ ಸಾಗರದಲ್ಲಿ ಲೀನವಾಗುವ ಸಕಲ ನದಿಗಳೂ,ಯಾಗ ಭೂಮಿಯೂ ವಟುವಿಗೆ ನಿರಂತರ ಶುಭವನ್ನು ಕರುಣಿಸಲಿ.

*********************************************************************************
                   || ಇತಿ ಉಪನಯನ ಮಂಗಲಾಷ್ಟಕಮ್ ||  
        || ಈ ರೀತಿಯಾಗಿ ಉಪನಯನ ಮಂಗಲಾಷ್ಠಕಗಳ ಭಾವಾರ್ಥವಾಗಿದೆ. ||

*********************************************************************************
                                                             -೫-
|| ಸ್ವಸ್ತಿಮಂತ್ರಮ್ ||
******************
ಓಂ ಸ್ವಸ್ತಿ ನೋ ಮಿಮೀತಾಶ್ವಿನಾ ಭಗ: ಸ್ವಸ್ತಿ ದೇವ್ಯದಿತಿರ್ವಣ: |
ಸ್ವಸ್ತಿ ಪೂಷಾ ಅಸುರೋ ದಧಾತು ನ: ಸ್ವಸ್ತಿ ದ್ಯಾವಾ ಪೃಥುವೀ ಸುಚೇತುನಾ ||೧||


ಭಾವಾರ್ಥ:-ಅಶ್ವಿನಿದೇವತೆಗಳು,ಸೂರ್ಯ,ಚಂದ್ರ,ನಕ್ಷತ್ರಾದಿಗಳು,ಐಶ್ವರ್ಯದೇವತೆ,ಭೂದೇವಿ, ಗೋಮಾತೆ,ನಮಗೆ ಶುಭವನ್ನುಂಟುಮಾಡಲಿ.ಅನ್ಯರಿಂದ ಎದುರಿಸಲಸಾಧ್ಯವಿರುವ ಮತ್ತು ವೈರಿಗಳನ್ನು ಸಂಹರಿಸುವ ಸೂರ್ಯ, ಹಾಗೂ ಶ್ರೇಷ್ಠ ಜ್ಞಾನದಿಂದ ಕೂಡಿದ ದ್ಯಾವಾಪೃಥುವಿಗಳು ನಮಗೆ ಮಂಗಲಕಾರಕರಾಗಿರಲಿ.

ಸ್ವಸ್ತಯೇ ವಾಯುಮುಪ ಬ್ರವಾಮಹೈ ಸೋಮಗ್ಗ್ ಸ್ವಸ್ತಿ ಭುವನಸ್ಯ ಯಸ್ಪತಿ: |
ಬೃಹಸ್ಪತಿಂ ಸರ್ವಗಣಗ್ಗ್ ಸ್ವಸ್ತಯೇ ಸ್ವಸ್ತಯ ಆದಿತ್ಯಾಸೋ ಭವಂತು ನ: ||೨||

ಭಾವಾರ್ಥ:-ನಮ್ಮ ಒಳಿತಿಗಾಗಿ ವಾಯುವನ್ನು ಸ್ತುತಿಸುವೆವು. ಜಗತ್ಪಾಲಕನಾದ ಶಿವನನ್ನು, ಮತ್ತು ಸಮಸ್ತ ದೇವತಾಸಮೂಹದೊಂದಿಗೆ ಗುರುವನ್ನು ನೆಮ್ಮದಿಗಾಗಿ ಸ್ತುತಿಸುವೆವು. ಅದಿತಿಯ ಮಕ್ಕಳಾದ ದ್ವಾದಶಾದಿತ್ಯರು ಮತ್ತು ಸಮಸ್ತ ದೇವರ್ಕಳು ನಮಗೆ ಸುಖಾರೋಗ್ಯ ಕರುಣಿಸುವವರಾಗಲಿ.

ವಿಶ್ವೇದೇವಾ ನೋ ಅದ್ಯಾ ಸ್ವಸ್ತಯೇ ವೈಶ್ವಾನರೋ ವಸುರಗ್ನಿ: ಸ್ವಸ್ತಯೇ |
ದೇವಾ ಅವಂತ್ವ್ರಭವ: ಸ್ವಸ್ತಯೇ ಸ್ವಸ್ತಿ ನೋ ರುದ್ರ: ಪಾತ್ವಂ ಹಸ: ||೩||

ಭಾವಾರ್ಥ:-ಸಮಸ್ತ ದೇವರ್ಕಳು ನಮಗೆ ಈ ದಿನ ಮಂಗಲದಾಯಕರಾಗಿರಲಿ. ಸರ್ವರಿಗೂ ಹಾದಿಯನ್ನು ತೋರುವವನಾದ ಮತ್ತು ನಿವಾಸವನ್ನು ಅನುಗ್ರಹಿಸುವ ಅಗ್ನಿಯು ಶುಭಕಾರಕನಾಗಲಿ. ದೇವತೆಯರಾದ ಬ್ರಹ್ಮನ ಮಾನಸಪುತ್ರರು ಕ್ಷೇಮವನ್ನು ದಯಪಲಿಸುವುದರೊಡನೆ ನಮ್ಮನ್ನು ಕಾಪಾಡಲಿ. ದೇವನಾದ ರುದ್ರನು ಶುಭವನ್ನು ಕರುಣಿಸಿ ನಮ್ಮನ್ನು ಕಾಪಾಡಲಿ.

ಸ್ವಸ್ತಿ ವಿತ್ರಾವರುಣಾ ಸ್ವಸ್ತಿ ಪಥ್ಯೇ ರೇವತಿ |
ಸ್ವಸ್ತಿ ನ ಇಂದ್ರಾಶ್ಚಾಗ್ನಿಶ್ಚ ಸ್ವಸ್ತಿ ನೋ ಅದಿತೇ ಕೃಧಿ ||೪||

ಭಾವಾರ್ಥ:-ಸೂರ್ಯವರುಣರುಗಳೇ;ನಮಗೆ ಶುಭವನ್ನು ಉಂಟುಮಾಡಿರಿ. ಅಂತರಿಕ್ಷಹಾದಿಯ ಅಭಿಮಾನಿದೇವತೆಯಾದ ರೇವತಿ ದೇವಿಯೇ; ನಮಗೆ ಸೌಖ್ಯವನ್ನುಂಟುಮಾಡು. ಇಂದ್ರಾಗ್ನಿ ದೇವರ್ಕಳು ನಮಗೆ ಪಾಲಕರಾಗಲಿ. ಭೂದೇವಿಯೇ ನಮಗೆ ಮಂಗಳವನ್ನುಂಟುಮಾಡು.

ಸ್ವಸ್ತಿ ಪಂಥಾಮನುಚರೇಮ ಸೂರ್ಯಾಚಂದ್ರಮಸಾವಿವ |
ಪುನರ್ದದತಾಘ್ನತಾ ಜಾನತಾ ಸಂ ಗಮೇ ಮಹಿ ||೫||

ಭಾವಾರ್ಥ:-ರವಿಚಂದ್ರರು ತಮ್ಮಹಾದಿಯಲ್ಲಿ ಎಡವದೆ ಶಾಶ್ವತವಾಗಿ ಸಂಚರಿಸುವಂತೆ ನಾವುಗಳು ಕೂಡಾ ನಮ್ಮ ಜೀವನದ ಹಾದಿಯಲ್ಲಿ ಯಜ್ಞಾದಿಗಳ ನಿರ್ವಹಣೆಯಲ್ಲಿ ಚ್ಯುತಿ-ವಿಘ್ನಗಳಿಲ್ಲದೆ ನೆಮ್ಮದಿಯಿಂದ ಸಾಗುವಂತಾಗಲಿ.ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವ,ಕಾಲಮೀರಿದ ಕಾರಣಕ್ಕಾಗಿ ರೋಷಕ್ಕೊಳಗಾಗಿ ಹಿಂಸೆಗಿಳಿಯದಿರುವ,ಅಲ್ಲದೆ ನಮ್ಮ ಬಂಧುತ್ವನ್ನು ಉತ್ತಮ ರೀತಿಯಲ್ಲಿ ಅರಿತುಕೊಳ್ಳುವ ಬಂಧುಗಳೊಡನೆ ನಾವುಗಳು ಬೆರೆಯುವಂತಾಗಲಿ.

ಸ್ವಸ್ತ್ಯಯನಂ ತಾರ್ಕ್ಷ್ಯಮರಿಷ್ಟನೇಮಿಂ ಮಹದ್ಭೂತಂ ವಾಯಸಂ ದೇವತಾನಾಮ್ |
ಅಸುರಘ್ನಮಿಂದ್ರಸಖಂ ಸಮತ್ಸು ಬೃಹದ್ಯಶೋ ನಾವಮಿವ ರುಹೇಮ ||೬||

ಭಾವಾರ್ಥ:-ಸುಲಕ್ಷಣಗಳಿಗೆ ನೆಲೆಯಾಗಿರುವ, ಸೌಭಾಗ್ಯವೇ ಸುತ್ತಲೂ ಆವರಿಸಿಕೊಂಡಿರುವ, ಬೃಹದ್ಗಾತ್ರದ ಹಾಗೂ ದೇವತೆಗಳ ಪಕ್ಷಿಯಾಗಿರುವ, ಅಸುರಸಂಹಾರಿಯಾಗಿರುವ ದೇವೇಂದ್ರನ ಸ್ನೇಹಿತನಾಗಿರುವ ಗರುಡನನ್ನು ಮಹಾನ್ ಕೀರ್ತಿಶಾಲಿಯಾದ ಭಗವಂತನು ನಾವೆಯನ್ನು ಏರುವ ರೀತಿಯಲ್ಲಿ ನಾವು ಸವಾರಿ ಮಾಡೋಣ.

ಅಂ ಹೋಮುಚ ಮಾಂಗಿರಸಂ ಗಯಂ ಚ ಸ್ವಸ್ತ್ಯಾತ್ರೇಯಂ ಮನಸಾ ಚ ತಾರ್ಕ್ಷ್ಯಮ್ |
ಪ್ರಯತ ಪಾಣಿ: ಶರಣಂ ಪ್ರ ಪದ್ಯೇ ಸ್ವಸ್ತಿ ಸಂ ಬಾಧೇಷ್ವಭಯಂ ನೋ ಅಸ್ತು ||೭||

ಭಾವಾರ್ಥ:-ಕ್ರೂರತನಗಳಿಂದ ನಮ್ಮನ್ನು ಪಾರು ಮಾಡುವ ಅಂಗೀರಸನಿಗೆ, ಗಾಯತ್ರೀಮಾತೆಗೆ, ಶುಭಕರನಾದ ಆತ್ರೇಯ ಮಹರ್ಷಿಗೆ ಅಂತೆಯೇ ಗರುಡನಿಗೆ ನಾನು ಹೃತ್ಪೂರ್ವಕವಾಗಿ ಕೈಜೋಡಿಸುತ್ತಾ ಶರಣು ಹೊಗುವೆನು. ಅಭಿವೃದ್ಧಿಕಾರಕಗಳಿಗೆ ಅಡ್ಡಿಯನ್ನುಂಟುಮಾಡುವ ಸಮಸ್ತ ಸನ್ನಿವೇಶಗಳಲ್ಲಿ ಸದಾ ನಮ್ಮನ್ನು ಕಾಯುವವರಾಗಲಿ.
***********************************************************
|| ಇತಿ ಸ್ವಸ್ತಿಮಂತ್ರಂ || || ಈ ರೀತಿಯಾಗಿ ಸ್ವಸ್ತಿಮಂತ್ರಗಳ ಭಾವಾರ್ಥವಾಗಿದೆ ||
***********************************************************


No comments:

Post a Comment