ಶ್ರೀ ರಾಮ ಸ್ತೋತ್ರಗಳು
*******************
-೧-
||ಏಕ ಶ್ಲೋಕೀ ರಾಮಾಯಣ ||
ಪೂರ್ವಂ ರಾಮ ತಪೋವನಾಭಿಗಮನಂ ಹತ್ವಾ ಮೃಗ ಕಾಂಚನಂ |
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ |
ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ ||
||ಇತಿ ಏಕ ಶ್ಲೋಕೀ ರಾಮಾಯಣ ||
ಭಾವಾರ್ಥ :- ಪೂರ್ವಕಾಲದಲ್ಲಿ ಅಂದರೆ ತ್ರೇತಾಯುಗದಲ್ಲಿ ರಾಮನು ತಪಸಿಗಾಗಿ ವನದಲ್ಲಿ ಸಂಚರಿಸಿದನು. ಆಗ ಪತ್ನಿ ಸೀತೆಯ ಹಂಬಲವನ್ನು ಈಡೇರಿಸಲು ಕಾಂಚನ ವರ್ಣದ ಮೃಗವನ್ನು ಹತ್ಯೆಗೈದನು. ಅದೇ ಸಮಯದಲ್ಲಿ ಜಾನಕಿಯ ಅಪಹರಣವಾಯಿತು.ಜಟಾಯುವಿನ ಮರಣವಾಯಿತು. ರಾಮ ಸುಗ್ರೀವರೊಳಗೆ ಸಂಭಾಷಣೆ ನಡೆಯಿತು. ನಂತರ ವಾಲಿಯನ್ನು ವಧಿಸಲಾಯಿತು. ಮುಂದೆ ಸಮುದ್ರೋಲ್ಲಂಘನವಾಯಿತು. ಲಂಕೆಯನ್ನು ಸುಡಲಾಯಿತು. ನಂತರ ರಾವಣ ಕುಂಭಕರ್ಣಾದಿಗಳನ್ನು ವಧಿಸಲಾಯಿತು. ಈ ರೀತಿಯಾಗಿ ಸಂಕ್ಷಿಪ್ತ ರಾಮಾಯಣದ ಭಾವಾರ್ಥವಾಗಿದೆ
*********************************************************************************
-೨-
|| ಶ್ರೀರಾಮ ಭುಜಂಗಪ್ರಯಾತ ಸ್ತೋತ್ರಮ್ ||
*******************************
ವಿಶುದ್ಧಂ ಪರಂ ಸಚ್ಚಿದಾನಂದರೂಪಂ
ಗುಣಾಧಾರಮಾಧಾರಹೀನಂ ವರೇಣ್ಯಮ್ |
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ
ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ ||೧||
ಭಾವಾರ್ಥ:-ಪರಿಶುದ್ಧನೂ ಉತ್ತಮನೂ ಸಚ್ಚಿದಾನಂದ ಸ್ವರೂಪನೂ ಸೃಷ್ಟಿ ಸ್ಥಿತಿ ಲಯಾದಿ ಮೂರು ಗುಣಗಳಿಗೆ ಆಧಾರನೂ ; ಸ್ವಂತ ಆಧಾರ ಇಲ್ಲದವನೂ, ಶ್ರೇಷ್ಠನೂ ಮಹಾಪುರುಷನೂ ಜ್ಯೋತಿಸ್ವರೂಪನೂ ಆಗಿ, ನಂಬಿದವರ ಹೃದಯಗುಹೆಯಲ್ಲಿ ಇರುವವನೂ ಸದ್ಗುಣ ಸಂಪನ್ನನೂ ಹಾಗೆಯೇ ಸುಖಾನುಭವಂಗಳಿಗೆ ಮೇರೆಯಾಗಿರುವವನೂ, ಆಗಿದ್ದು ಸ್ವತ; ಪರಂಧಾಮನೂ ಆಗಿರುವಂತಹಾ ಶ್ರೀರಾಮನಿಗೆ ನಾನು ಶರಣು ಹೊಗುತ್ತೇನೆ.
ಯದಾವರ್ಣಯತ್ಕರ್ಣಮೂಲೇಂತಕಾಲೇ
ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಮ್ |
ತದೇಕಂ ಪರಂ ತಾರಕಬ್ರಹ್ಮರೂಪಂ
ಭಜೇಸ್ಹಂ ಭಜೇಶಂ ಭಜೇಶಂ ಭಜೇಶಂ ||೨||
ಭಾವಾರ್ಥ:- ಕಾಶಿಯಲ್ಲಿ; ಜೀವಾಂತ್ಯದ ಹೊತ್ತಿನಲ್ಲಿ ಜೀವ ಹೋಗುವಂತಹಾ ಆ ಶರೀರದ ಕಿವಿಯಲ್ಲಿ ಆ ಶಿವನು ರಾಮ ರಾಮ ಅನ್ನುವ ಯಾವ ತಾರಕನಾಮವನ್ನು ಉಪದೇಶ ಮಾಡುವನೋ ಆ ಅದ್ವಿತೀಯ ;ಪರಮಶ್ರೇಷ್ಠ ತಾರಕಬ್ರಹ್ಮ ಸ್ವರೂಪನೇ ಆಗಿರುವ ಶ್ರೀರಾಮನನ್ನು ನಾನು ಸದಾ ಭಜಿಸುತ್ತೇನೆ.
ಪುರ: ಪ್ರಾಂಜಲೀನಾಂಜನೇಯಾದಿ ಭಕ್ತಾನ್
ಸ್ವಚಿನ್ಮುದ್ರಯಾ ಭದ್ರಾಯ ಬೋಧಯಂತಮ್ |
ಭಜೇಸ್ಹಂ ಭಜೇಶಂ ಸದಾ ರಾಮಚಂದ್ರಂ
ತ್ವದನ್ಯಂ ನ ಮನ್ಯೇ ನ ಮನ್ಯೇ ನ ಮನ್ಯೇ ||೩||
ತನ್ನೆದು ರಿಗೆಯೇ ಕುಳಿತುಗೊಂಡಿರುವ ಆಂಜನೇಯನೇ ಅದಿಯಾದ ಭಕ್ತರಿಗೆ ಮಂಗಲಮಯವಾದ ಚಿನ್ಮುದ್ರೆಯಲ್ಲಿ ಉಪದೇಶ ಮಾಡುತ್ತಾ ಇರುವ ಶ್ರೀರಾಮಚಂದ್ರನನ್ನು ನಾನು ಸದಾ ಭಜಿಸುವೆನು. ರಾಮಾ; ನಿನ್ನನ್ನು ಹೊರತಾಗಿ ಇನ್ನೊಂದು ವಿಷಯವನ್ನು ನನ್ನಿಂದ ಮನಸ್ಸಿನಲ್ಲಿ ಕೂಡಾ ಸ್ಮರಣೆ ಮಾಡಲು ಸಾಧ್ಯವಿಲ್ಲ..
ಯದಾ ಮತ್ಸಮೀಪಂ ಕೃತಾಂತಸ್ಸಮೇತ್ಯ
ಪ್ರಚಂಡೈಶ್ಚ ಕೋಪೈರ್ಭಟೈರ್ಭೀಷಯೇನ್ಮಾಮ್ |
ತದಾವಿಷ್ಕರೋಷಿ ತ್ವಿದೀಯಂ ಸ್ವರೂಪಂ
ಸದಾಪತ್ಪ್ರಣಾಶಂ ಸ ಕೋದಂಡ ಬಾಣಮ್ ||೪||
ಭಾವಾರ್ಥ:-ಆ ಯಮನು ತನ್ನ ಸೇವಕರ ಜತೆಯಲ್ಲಿ ನನ್ನ ಹತ್ತಿರಕ್ಕೆ ಬಂದು ಭಾರೀ ಕೋಪದಿಂದ ನನ್ನನ್ನು ಹೆದರಿಸುವಾಗ ಯಾವಾಗಲೂ ಆಪತ್ತು ವಿಪತ್ತುಗಳನ್ನು ಪರಿಹರಿಸುವ ನೀನು ಕೋದಂಡ ಬಾಣ ಸಹಿತನಾಗಿ ನಿನ್ನ ನಿಜ ಸ್ವರೂಪವನ್ನು ಬಹಿರಂಗಗೊಳಿಸುವಿ..
ನಿಜೇ ಮಾನಸೇ ಮಂದಿರೇ ಸನ್ನಿದೇಹಿ
ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ |
ಸ ಸೌಮಿತ್ರಿಣಾ ಕೈಕಯೀನಂದನೇನ
ಸ್ವಶಕ್ತ್ಯಾನುಭಕ್ತ್ಯಾ ಚ ಸಂಸೇವ್ಯಮಾನ ||೫||
ಸೀತೆ -ಭರತ- ಲಕ್ಷ್ಮಣರಿಂದಲೂ ಭಕ್ತಸಮೂಹದಿಂದಲೂ ಪೂಜಿಸಿಗೊಂಬ ದೊರೆಯೇ; ರಾಮಚಂದ್ರಾ! ನನ್ನನ್ನು ಪಾಲಿಸುವವನಾಗು. ನನ್ನ ಮನೋ ಮಂದಿರಲ್ಲಿ ಸದಾ ನೆಲೆಗೊಳ್ಳು.
ಸ್ವಭಕ್ತಾಗ್ರಗಣ್ಯೈ: ಕಪೀಶೈರ್ಮಹೀಶೈ-
ರನೀಕೈರನೇಕೈಶ್ಚ ರಾಮ ಪ್ರಸೀದ |
ನಮಸ್ತೇ ನಮೋಸ್ಸ್ತ್ವೀಶ ರಾಮ ಪ್ರಸೀದ
ಪ್ರಶಾದಿ ಪ್ರಶಾದಿ ಪ್ರಕಾಶಂ ಪ್ರಭೋ ಮಾಮ್ ||೬||
ಹೇ ರಾಮಚಂದ್ರಾ! ನಿನ್ನ ಭಕ್ತ ಶ್ರೇಷ್ಠರುಗಳಿಂದಲೂ; ಕಪಿ ಶ್ರೇಷ್ಠರುಗಳಿಂದಲೂ, ರಾಜರುಗಳಿಂದಲೂ ಮಿತಿಯಿಲ್ಲದಿರುವ ಸೈನ್ಯದಿಂದಲೂ ಕೂಡಿ ನನ್ನನ್ನು ಪಾಲನೆ ಮಾಡು. ಹೇ! ಪರಮೇಶ್ವರಾ! ನಿನಗೆ ಣಾನ್ನ ಪ್ರಣಾಮಂಗಳು.ರಾಮಾ ನನ್ನನ್ನು ಪಾಲಿಸು. ದೊರೆಯೇ! ನನಗೆ ಸರಿಯಾದ ಮಾರ್ಗದರ್ಶನ ಮಾಡು
ನಮಸ್ಸಚ್ಚಿದಾನಂದರೂಪಾಯ ತಸ್ಮೈ
ನಮೋ ದೇವ ದೇವಾಯ ರಾಮಾಯ ತುಭ್ಯಮ್ |
ನಮೋ ಜಾನಕೀಜೀವಿತೇಶಾಯ ತುಭ್ಯಂ
ನಮ: ಪುಂಡರೀಕಾಯತಾಕ್ಷಾಯ ತುಭ್ಯಮ್ ||೭||
ಸಚ್ಚಿದಾನಂದ ಸ್ವರೂಪನೂ ಆಗಿರುವ ನಿನಗೆ ನನ್ನ ನಮಸ್ಕಾರಗಳು. ದೇವದೇವನೂ ಶ್ರೀರಾಮಚಂದ್ರನೂ ಆಗಿರುವ ನಿನಗೆ ಇದೋ ನನ್ನ ನಮಸ್ಕಾರಂಗಳು. ಸೀತಾದೇವಿಯ ಜೀವಕ್ಕೆ ಒಡೆಯನಾಗಿರುವ ನಿನಗೆ ನನ್ನ ನಮಸ್ಕಾರಂಗಳು. ಕಮಲನಯನದ ಪುಂಡರೀಕನಾಗಿರುವ ಶ್ರೀರಾಮಾ ನಿನಗೆ ಇದೋ ನನ್ನ ನಮಸ್ಕಾರಂಗಳು.
ನಮೋ ಭಕ್ತಿಯುಕ್ತಾನುರಕ್ತಾಯಾ ತುಭ್ಯಂ
ನಮ: ಪುಣ್ಯಪುಂಜೈಕಲಭ್ಯಾಯ ತುಭ್ಯಮ್ |
ನಮೋ ವೇದ ವೇದ್ಯಾಯ ಚಾದ್ಯಾಯ ಪುಂಸೇ
ನಮ: ಸುಂದರಾಯೇಂದಿರಾ ವಲ್ಲಭಾಯ ||೮||
ಭಾವಾರ್ಥ:- ಭಕ್ತಾದಿಗಳಲ್ಲಿ ಪ್ರೀತಿ ಹೊಂದಿರುವ ನಿನಗೆ ಎನ್ನ ಪ್ರಣಾಮಂಗಳು. ಪೂರ್ವಜನ್ಮ ಪುಣ್ಯ ಬಲದಿಂದ ದೊರಕುವ ನಿನಗೆ ನನ್ನ ಪ್ರಣಾಮಂಗಳು. ವೇದಂಗಳಿಂದ ತಿಳಿದುಬರುವ ಹಾಗೆ ಜಗತ್ತಿನ ಆದಿ ಪುರುಷನಾದ ನಿನಗೆ ನನ್ನ ಪ್ರಣಾಮಂಗಳು. ಚೆಲುವನೂ ಇಂದಿರಾವಲ್ಲಭನೂ ಆಗಿರುವ ನಿನಗಿದೋ ನನ್ನ ಪ್ರಣಾಮಂಗಳು.
ಶಿಲಾಸ್ಪಿ ತ್ವದಂಘ್ರಿ ಕ್ಷಮಾಸಂಗಿರೇಣು-
ಪ್ರಸಾದಾದ್ಧಿ ಚೈತನ್ಯಮಾಧತ್ತ ರಾಮ |
ನರಸ್ತ್ವತ್ಪದದ್ವಂದ್ವಸೇವಾ ವಿಧಾನಾತ್
ಸುಚೈತನ್ಯಮೇತೀತಿ ಕಿಂ ಚಿತ್ರಮತ್ರ ||೯||
ಭಾವಾರ್ಥ:- ಹೇ ರಾಮಾ! ನಿನ್ನ ಪಾದಧೂಳಿಯ ಪ್ರಸಾದಿಂದ ಕಲ್ಲು ಕೂಡಾ ಜೀವ ಚೈತನ್ಯವನ್ನು ಪಡೆಯುತ್ತದೆ. ಹೀಗಿರುವಾಗ ನಿನ್ನ ದಿವ್ಯ ಚರಣಯುಗಳಂಗಳ ಸೇವೆಯಿಂದ ಮನುಷ್ಯ ಒಳ್ಳೆಯ ರೀತಿಯ ಚೈತನ್ಯ ಪಡೆತ್ತಾನೆ ಅನ್ನೋರಲ್ಲಿ ಆಶ್ಚರ್ಯವೇನು?
ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ
ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ |
ಭವಂತಂ ಭವಾಂತಂ ಭರಂತಂ ಭಜಂತೋ
ಲಭಂತೇ ಕೃತಾಂತಂ ನ ಪಶ್ಯಂತ್ಯತೋಂಸ್ತೇ ||೧೦||
ರಾಮಚಂದ್ರಾ! ಆಶ್ಚರ್ಯಕರವೂ ಪವಿತ್ರವೂ ಆಗಿರುವ ನಿನ್ನ ಚರಿತ್ರೆಯನ್ನು ಯಾವ ಮನುಷ್ಯರು ಹಗಲಿರುಳೂ ಸ್ಮರಣೆ ಮಾಡುವರೋ, ಅದೇರೀತಿ ಸಂಸಾರ ನಾಶಕನೂ ಸಂಸಾರ ಪೋಷಕನೂ ಆಗಿರುವ ನಿನ್ನನ್ನು ಭಜಿಸುವರೋ; ಅವರು ಸಾಯುವ ಸಮಯದಲ್ಲಿ ಯಮನಲ್ಲಿ ಲೀನ ಆಗದೆ ನಿನ್ನಲ್ಲೇ ಲೀನರಾಗ್ತಾರೆ.
ದಶಗ್ರೀವಮುಗ್ರಂ ಸಪುತ್ರಂ ಸಮಿತ್ರಂ
ಸರಿದ್ದುರ್ಗಮಧ್ಯಸ್ಥ ರಕ್ಷೋಗಣೇಶಮ್ |
ಭವಂತಂ ವಿನಾ ರಾಮ ವೀರೋ ನರೋ ವಾ-
ಸ್ಸುರೋ ವಾಸ್ಮರೋ ವಾ ಜಯೇತ್ಯಸ್ತ್ರಿಲೋಕ್ಯಾಮ್ ||೧೧||
ಒಡನಾಡಿಗಳು ಹಾಗೂ ಮಕ್ಕಳ ಸಹಿತ ಸಮುದ್ರದ ನಡುವೆ ಕೋಟೆಲಿಯಲ್ಲಿದ್ದವನೂ ಉಗ್ರನೂ ರಾಕ್ಷಸರುಗಳಿಗೆ ಒಡೆಯನೂ ಆಗಿರುವ ರಾವಣನನ್ನು ಗೆಲ್ಲಲು ನಿನ್ನನ್ನು ಬಿಟ್ಟರೆ ಮೂರು ಲೋಕಂಗಳಲ್ಲೂ ವೀರರಾಗಿದ್ದ ಮನುಷ್ಯರಿಗಾಗಲೀ ರಾಕ್ಷಸರುಗಳಿಗಾಗಲೀ ಬೇರೆ ಯಾವಾತಾನಿಗೂ ಸಾಧ್ಯವಾಗುತ್ತಿರಲಿಲ್ಲ..
ಸದಾ ರಾಮ ರಾಮೇತಿ ರಾಮಾಮೃತಂ ತೇ
ಸದಾ ರಾಮಮಾನಂದನಿಷ್ಯಂದಕಂದಮ್
ಪಿಬಂತಂ ನಮಂತಂ ಸುದಂತಂ ಹಸಂತಂ
ಹನೂಮಂತಮಂತರ್ಭಜೇ ತಂ ನಿತಾಂತಮ್ ||೧೨||
ಭಾವಾರ್ಥ :- ಯಾವಾಗಲೂ ಸಂತೋಷವನ್ನೂ, ಆನಂದವನ್ನೂ ಸುರಿವ ನಿನ್ನ ಅಮೃತ ಸದೃಶವಾಗಿರುವ ರಾಮ ನಾಮವನ್ನು ಸದಾ ರಾಮ ರಾಮಾ ಎಂದು ಜಪಿಸುತ್ತಾ ಕುಣಿಯುತ್ತಲೂ ನಮಸ್ಕಾರ ಮಾಡುತ್ತಲೂ ಇರುವ; ಭಾರೀ ಚೆಲುವಿನ ದಂತಗಳಿರುವ, ಯಾವಾಗಲೂ ಸಂತೋಷದಿಂದ ಕೂಡಿರುವ ಮೊಗದ ಹನುಮಂತನನ್ನು ನಾನು ಹೃದಯಾಂತರಾಳದಿಂದ ತುಂಬಾ ಭಜಿಸುತ್ತೇನೆ.
ನಮಸ್ತೇ ಸುಮಿತ್ರಾ ಸುಪುತ್ರಾಭಿವಂದ್ಯ
ನಮಸ್ತೇ ಸದಾ ಕೈಕಯೀನಂದನೇಡ್ಯ |
ನಮಸ್ತೇ ಸದಾ ವಾನರಾಧೀಶ ವಂದ್ಯ
ನಮಸ್ತೇ ನಮಸ್ತೇ ಸದಾ ರಾಮಚಂದ್ರ ||೧೩||
ಭಾವಾರ್ಥ :-ಸುಮಿತ್ರೆಯ ಸುಪುತ್ರನಾಗಿರುವಂತಹಾ ಲಕ್ಷ್ಮಣನಿಂದ ನಮಸ್ಕಾರಂಗಳನ್ನು ಸ್ವೀಕಾರ ಮಾಡುತ್ತಾ ಇರುವ ನಿನಗೆ ಸದಾ ನನ್ನ ನಮಸ್ಕಾರಂಗಳು. ಕೈಕಯೀತನಯ ಭರತನಿಂದ ಸ್ತುತಿಗಳನ್ನು ಸ್ವೀಕಾರ ಮಾಡ್ತಾ ಇರುವ ನಿನಗೆ ಸದಾ ನನ್ನ ನಮಸ್ಕಾರಂಗಳು. ಯಾವತ್ತೂ ವಾನರಾಧೀಶ ಹನುಮಂತನಿಂದ ನಮಸ್ಕಾರಂಗಳನ್ನು ಸ್ವೀಕಾರ ಮಾಡ್ತಾ ಇರುವ ನಿನಗೆ ಸದಾ ನನ್ನ ನಮಸ್ಕಾರಂಗಳು. ಹೇ ರಾಮಚಂದ್ರಾ! ನಿನಗೆ ಇದೋ ಯಾವತ್ತೂ ನನ್ನ ನಮಸ್ಕಾರಂಗಳು ಸಲ್ಲುತ್ತಿವೆ..
ಪ್ರಸೀದ ಪ್ರಸೀದ ಪ್ರಚಂಡ ಪ್ರತಾಪ
ಪ್ರಸೀದ ಪ್ರಸೀದ ಪ್ರಚಂಡಾರಿಕಾಲನ್ |
ಪ್ರಸೀದ ಪ್ರಸೀದ ಪ್ರಪನ್ನಾನುಕಂಪಿನ್
ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ ||೧೪||
ಭಾವಾರ್ಥ :- ಹೇ ಪ್ರಚಂಡ ಪರಾಕ್ರಮಿಯೇ! ಪ್ರಸನ್ನನಾಗು. ಪ್ರಚಂಡ ಶತ್ರುಗಳಿಗೂ ಕಾಲರೂಪನಾದವನೇ ಪ್ರಸನ್ನನಾಗು. ಶರಣು ಹೊಕ್ಕವರ ಬಗ್ಗೆ ಕರುಣೆ ತೋರಿಸುವವನೇ ಪ್ರಸನ್ನನಾಗು. ಪ್ರಭೋ! ರಾಮಚಂದ್ರಾ! ಪ್ರಸನ್ನನಾಗು.
ಭುಜಂಗಪ್ರಯಾತಂ ಪರವೇದಸಾರಂ
ಮುದಾ ರಾಮಚಂದ್ರಸ್ಯ ಭಕ್ತ್ಯಾ ಚ ನಿತ್ಯಮ್ |
ಪರನ್ ಸಂತತಂ ಚಿಂತಯನ್ ಸ್ವಾಂತರಂಗೇ
ಸ ಏವ ರಾಮಚಂದ್ರ: ಸ ಧನ್ಯ:: ||೧೫||
ಭಾವಾರ್ಥ :- ಶ್ರೇಷ್ಥವಾಗಿರುವ ವೇದಂಗಳ ಸಾರ ರೂಪವೇ ಆಗಿರುವ ಈ ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರಂಗಳನ್ನು ಯಾರು ನಿತ್ಯವೂ ಭಕ್ತಿಯಿಂದಲೂ ಸಂತೋಷದಿಂದಲೂ ಯಾವಾಗಲೂ ಪಾರಾಯಣ ಮಾಡುವನೋ; ಅಂತರಂಗಲ್ಲಿಯೇ ಯಾರು ಸದಾ ಯೋಚಿಸುತ್ತಾನೋ ಅಂತಹಾ ಧನ್ಯಉ ಸ್ವತ; ರಾಮಚಂದ್ರ ಸ್ವರೂಪನೇ ಆಗುವನು.
*********************************************************************************
|| ಇತಿ ಪರಮಪೂಜ್ಯ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀರಾಮ ಭುಜಂಗಪ್ರಯಾತಸ್ತೋತ್ರಮ್||
||ಈ ರೀತಿ ಪರಮಪೂಜ್ಯ ಶ್ರೀಮತ್ ಪರಮಹಂಸ ಪರಿವ್ರಾಜಾಕಾಚಾರ್ಯವರ್ಯ ಶ್ರೀ ಶ್ರೀಶಂಕರಚಾರ್ಯ ಗುರುಗಳಂದ ರಚಿತವಾದ ಶ್ರೀರಾಮಭುಜಂಗಪ್ರಯಾತಸ್ತೋತ್ರಂಗಳ ಭಾವಾರ್ಥವಾಗಿದೆ.
| | ಹರೇ ರಾಮ್ ||
*********************************************************************************
- ೩-
|| ಶ್ರೀರಾಮಸ್ತುತಿ ||
**************
ಯತಸರ್ವಾಣಿ ಭೂತಾನಿ ಪ್ರತಿಭಾಂತಿ ಸ್ಥಿತಾನಿ ಚ |
ಯತ್ರೈವೋಪಶಮಂ ಯಾಂತಿ ತಸ್ಮೈ ಭೂತಾತ್ಮನೇ ನಮ: ||೧||
ಭಾವಾರ್ಥ:-ಯಾರಿಂದ ಜೀವರಾಶಿಗಳೆಲ್ಲವೂ ಸೃಷ್ಟಿಯಾಯಿತೋ ,ಯಾರಲ್ಲಿ ಎಲ್ಲವೂ ಇದೆಯೋ ,ಕೊನೆಗೆ [ಅಂತ್ಯದಲ್ಲಿ] ಎಲ್ಲವೂ ಯಾರಲ್ಲಿ ಲೀನ ಆಗುತ್ತೋ ಹಾಗಿರುವ ಸತ್ಯಾತ್ಮಂಗೆ ನನ್ನ ನಮಸ್ಕಾರಂಗಳು.
ಜ್ಞಾತಾ ಜ್ಞಾನಂ ತಥಾ ಜ್ಞೇಯಂ ದ್ರಷ್ಟಾ ದರ್ಶನ ದೃಶ್ಯಭೂ: |
ಕರ್ತಾಹೇತು: ಕ್ರಿಯಾ ಯಸ್ಮಾತ್ ತಸ್ಮೈ ಜ್ಞಪ್ತ್ಯಾತ್ಮನೇ ನಮ: ||೨||
ಭಾವಾರ್ಥ :-ಯಾರು ತಿಳುವಳಿಕೆಯ ಮೂಲವಾಗಿರುವನೋ; ಯಾರು ತಿಳುವಳಿಕೆಯನ್ನು ಹೊಂದಿರುವವನೋ; ಯಾರು ಸಾಕ್ಷಿಯೋ; ಯಾರು ದರ್ಶನ ಕೊಡುವವನೋ ;ಯಾರು ಮನೋಹರರೂಪನೋ ;ಯಾರು ಕರ್ತೃ -ಕರ್ಮಂಗಳಿಗೆ ಕಾರಣ ಆಗಿರುವನೋ ಅಂತಹಾ ಜ್ಞಾನ ನಿಧಿಗೆ ನನ್ನ ನಮಸ್ಕಾರಂಗಳು ||
ಸ್ಫುರಂತಿ ಸೀಕರಾ ಯಸ್ಮಾದಾನಂದಸ್ಯಾಂಬರೇಸ್ವನೌ |
ಸರ್ವೇಷಾಂ ಜೀವನಂ ತಸ್ಮೈ ಬ್ರಹ್ಮಾನಂದಾತ್ಮನೇ ನಮ: ||೩||
ಭಾವಾರ್ಥ:-ಯಾರಿಂದಾಗಿ ಆಕಾಶ ಮತ್ತು ಭೂಮಿಯಲ್ಲಿ ಬೀಳುವ ಸಂತೋಷದ ಹನಿಗಳೇ ಎಲ್ಲರ ಜೀವನವಾಗಿದೆಯೋ, ಅಂತಹಾ ಬ್ರಹ್ಮಾನಂದಾತ್ಮಂಗೆ ನನ್ನ ನಮಸ್ಕಾರಂಗಳು ||
ದಿವಿ ಭೂಮೌ ತಥಾಸ್ಕಾಶೇ ಬಹಿರಂತಶ್ಚ ಮೇ ವಿಭು: |
ಯೋ ವಿಭಾತ್ಯವಭಾಸಾತ್ಮಾ ತಸ್ಮೈ ಸರ್ವಾತ್ಮನೇ ನಮ: ||೪||
ಭಾವಾರ್ಥ:-ಯಾರು ಸ್ವರ್ಗಲ್ಲಿದಲ್ಲಿಯೂ ಭೂಮಿಯಲ್ಲಿಯೂ ಆಕಾಶಲ್ಲಿದಲ್ಲಿಯೂ ನನ್ನ ಒಳಗೂ ಹೊರಗೂ ಕಾಣಿಸಿಕೊಳ್ಳುವನೋ; ಯಾರು ತ್ರಿಮೂರ್ತಿ ಸ್ವರೂಪನೋ ಅದೇ ತೆರನಾಗಿ ಜ್ಞಾನ ಸಂಪನ್ನನೋ ಅಂತಹಾ ಸರ್ವಾತ್ಮಂಗೆ ನನ್ನ ನಮಸ್ಕಾರಂಗಳು.
ಯಸ್ಮಿನ್ ಸರ್ವಂ ಯಸ್ಯ ಸರ್ವಂ ಯತಸರ್ವಂ ಯಸ್ಮಾ ಇದಮ್ |
ಯೇನ ಸರ್ವಂ ಯದ್ಧಿ ಸರ್ವಂ ತತ್ಸತ್ಯಂ ಸಮುಪಾಸ್ಮಹೇ ||೫||
ಯಾವುದರಲ್ಲಿ ಎಲ್ಲವೂ ಇರುವುದೋ; ಯಾವುದಕ್ಕೆ ಎಲ್ಲವೂ ಸೇರಿರಿರುವುದೋ; ಯಾವುದರಿಂದ ಎಲ್ಲವೂ ಬಂದಿದೆಯೋ; ಯಾವುದಕ್ಕಾಗಿ ಎಲ್ಲವೂ ಇರುವುದೋ; ಯಾವುದು ಎಲ್ಲವೂ ಅದುವೇ ಆಗಿದೆಯೋ ಆ ಸತ್ಯವನ್ನು ನಾನು ಉಪಾಸನೆ ಮಾಡುತ್ತೇನೆ.
*********************************************************************************
|| ಇತಿ ಯೋಗವಾಸಿಷ್ಠಾಂತರ್ಗತ ಶ್ರೀರಾಮಸ್ತುತಿ: ||
|| ಈ ರೀತಿ ಯೋಗವಾಸಿಷ್ಠ ಗ್ರಂಥದಲ್ಲಿರುವ ಶ್ರೀರಾಮಸ್ತುತಿಯ ಭಾವಾರ್ಥವಾಗಿದೆ ||
*********************************************************************************
-೪-
|| ಶ್ರೀರಾಮ ಸ್ತೋತ್ರಂ ||
******************
ಯ: ಪೃಧ್ವೀಭರವಾರಣಾಯ ದಿವಿಜೈ: ಸಂಪ್ರಾಥಿತಶ್ಚಿನ್ಮಯ:
ಸಂಜಾತ: ಪೃಥಿವೀತಲೇ ರವಿಕುಲೇ ಮಾಯಾಮನುಷ್ಯೋಽವ್ಯಯ: |
ನಿಶ್ಚಕ್ರಂ ಹತರಾಕ್ಷಸ: ಪುನರಗಾದ್ ಬ್ರಹ್ಮತ್ವಮಾದ್ಯಂ ಸ್ಥಿರಾಂ
ಕೀರ್ತಿಂ ಪಾಪಹರಾಂ ವಿಧಾಯ ಜಗತಾಂ ತಂ ಜಾನಕೀಶಂ ಭಜೇ ||೧||
ಭಾವಾರ್ಥ :- ಭೂಮಿಭಾರವನ್ನು ನಾಶಮಾಡುವುದಕ್ಕಾಗಿ ದೇವತೆಗಳು ಮಾಡಿದ ಪ್ರಾರ್ಥನೆಯನ್ನು ಮನ್ನಿಸಿ ರವಿ ಕುಲದಲ್ಲಿ ಮಾಯಾರೂಪದ ಮಾನುಷವೇಷದಲ್ಲಿ ಯಾರು ಹುಟ್ಟಿದನೋ ,ರಾಕ್ಷಸರನ್ನು ಶಕ್ತಿಹೀನರನ್ನಾಗಿಸಿ ನಾಶಮಾಡಿ ಮತ್ತೆ ಶಾಶ್ವತವಾದಂತಹಾ ಪಾಪನಾಶಕವಾಗಿರುವಂತಹಾ ಕೀರ್ತಿಯನ್ನು ಈ ಪ್ರಪಂಚದಲ್ಲಿ ಸ್ಥಾಪಿಸಿ ,ಪುನ: ಯಾವಾತನು ತನ್ನ ಮೊದಲಿನ ಬ್ರಹ್ಮತ್ವವನು ಹೊಂದಿದನೋ ಅಂತಹಾ ಚಿನ್ಮಯ ಸ್ವರೂಪೀ ಆಗಿರುವ ಜಾನಕೀಶನನ್ನು ನಾನು ಭಜಿಸುವೆ.
ವಿಶ್ವೋದ್ಭವಸ್ಥಿತಿಲಯಾದಿಷು ಹೇತುಮೇಕಂ
ಮಾತಾಶ್ರಯಂ ವಿಗತಮಾಯಚಿಂತ್ಯ ಮೂರ್ತಿಮ್ |
ಆನಂದಸಾಂದ್ರಮಮಲಂ ನಿಜಭೋಧರೂಪಂ
ಸೀತಾಪತಿಂ ವಿದಿತತತ್ವಮಹಂ ನಮಾಮಿ ||೨||
ಭಾವಾರ್ಥ:- ಬ್ರಹ್ಮಾಂಡದ ಉತ್ಪತ್ತಿ-ಸ್ಥಿತಿ-ನಾಶಂಗಳಿಗೆ ಆದ್ಯ ಕಾರಣನಾಗಿ ಮಾಯಾಶಕ್ತಿಗೆ ಆಶ್ರಯದಾತನೂ ಆಗಿ,ಮಾಯಾರಹಿತನಾಗಿ, ಅಚಿಂತ್ಯ ಮೂರ್ತಿಯಾಗಿ, ಆನಂದ ಸ್ವರೂಪವಾಗಿ ,ವಿಮಲಸ್ವರೂಪವನ್ನು ಹೊಂದಿದ್ದು, ಸತ್ಯವನ್ನು ಭೋಧಿಸುವ ರೂಪನೂ ಆಗಿದ್ದು , ತತ್ವಂಗಳಲ್ಲಿ ಪರಿಣಿತನಾಗಿರುವ ಸೀತಾಪತಿಗೆ ನಾನು ನಮಸ್ಕರಿಸುವೆ.
ಪರಧನ-ಪರಧಾರ-ವರ್ಜಿತಾನಾಂ
ಪರಗುಣಭೂತಿಸುತುಷ್ಟಮಾನಸಾನಾಮ್ |
ಪರಹಿತನಿರತಾತ್ಮನಾಂ ಸುಸೇವ್ಯಂ
ರಘುವರಮಂಭುಜಲೋಚನಂ ಪ್ರಪದ್ಯೇ ||೩||
ಭಾವಾರ್ಥ:-ಪರರ ಸಂಪತ್ತು ಹಾಗೂ ಪರಸ್ತ್ರೀಯರನ್ನು ತ್ಯಜಿಸಿದವರಿಗೆ, ಅನ್ಯರ ಸಂಪತ್ತು ಮತ್ತು ಸದ್ಗುಣಂಗಳನ್ನು ನೋಡಿ ಸಂತೋಷ ಪಡುವವರಿಗೆ, ಅಲ್ಲದೆ ಪರಹಿತದಲ್ಲಿ ನಿರತರಾಗಿರುವವರಿಗೆ ಸುಲಭವಾಗಿ ಸೇವೆಗೆ ಲಭ್ಯವಾಗುವವನೂ ,ಅಂಬುಜಾಕ್ಷನೂ ಆಗಿರುವ ರಘುವರನಿಗೆ ನಾನು ಶರಣಾಗುವುವೆ.
ಅಹಂ ಪ್ರಪನ್ನೊಸ್ ಪದಾಂಬುಜಂ ಪ್ರಭೋ
ಭವಾಪವರ್ಗಂ ತವ ಯೋಗಿಭಾವಿತಮ್ |
ಯಥಾಂಸ್ಸಾಸ್ನಮಪಾರವಾರಿಧಿಂ
ಸುಖಂ ತರಿಷ್ಯಾಮಿ ತಥಾಸ್ಶಾಧಿ ಮಾಮ್ ||೪||
ಭಾವಾರ್ಥ :- ಹೇ ! ಪ್ರಭೋ! ಯೋಗಿಗಳು ಧ್ಯಾನ ಮಾಡುವ ,ಸಂಸಾರಸಾಗರದಿಂದ ಪಾರು ಮಾಡುವ, ನಿನ್ನ ಆ ಚರಣಾರವಿಂದಂಗಳಿಗೆ ನಾನು ಮೊರೆಹೊಗುತ್ತಿದ್ದೇನೆ. ಮಿತಿಯಿಲ್ಲದ ಅಜ್ಞಾನವೆನ್ನುವ ಸುಮುದ್ರದಿಂದ ನಾನು ಅತಿ ಶೀಘ್ರವಾಗಿ ಹಾಗೂ ಸುಖವಾಗಿ ದಾಟುವ ಹಾಗೆ ನನಗೆ ಹಾದಿ ತೋರಿಸಿಕೊಡು.
|| ಇತಿ ಅಧ್ಯಾತ್ಮ ರಾಮಾಯಣಾಂತರ್ಗತ ಶ್ರೀರಾಮ ಸ್ತೋತ್ರಮ್ ||
|| ಈ ರೀತಿ ಆಧ್ಯಾತ್ಮ ರಾಮಾಯಣಲ್ಲಿರುವ ಶ್ರೀರಾಮಸ್ತೋತ್ರದ ಭಾವಾನುವಾದವಾಗಿದೆ ||
*********************************************************************************
- ೫ -
|| ಬ್ರಹ್ಮ ಕೃತ ರಾಮ ಸ್ತವ ||
ಭವನ್ನಾರಾಯಣೋ ದೇವ: ಶ್ರೀಮಾಂಶ್ಚಕ್ರಾಯುಧೋ ವಿಭು: |
ಏಕ ಶೃಂಗೋ ವರಾಹಸ್ತ್ವಂ ಭೂತಭವ್ಯಸಪತ್ನಜಿತ್ ||೧||
ಭಾವಾರ್ಥ :-ಚಕ್ರವನ್ನು ಆಯುಧವನ್ನಾಗಿ ಧರಿಸಿಕೊಂಡಿರುವವನೂ ; ಸರ್ವ ಜಗತ್ವ್ಯಾಪಕನೂ ; ದೇವಾದಿ ದೇವನೂ ಆಗಿರುವ ಶ್ರೀಮನ್ನಾರಾಯಣನು ನೀನೇ . ಒಂಟಿ ದಾಡೆಯ ಆದಿ ವರಾಹನೂ ನೀನೇ ; ಹಿಂದೆ ಹುಟ್ಟಿದ್ದ ಮತ್ತು ಮುಂದೆ ಹುಟ್ಟುವ ವೈರಿಗಳನ್ನು ಗೆಲ್ಲುವವನೂ ನೀನೇ .
ಅಕ್ಷರಂ ಬ್ರಹ್ಮ ಸತ್ಯಂ ಚ ಮಧ್ಯೇ ಚಾಂತೇ ಚ ರಾಘವ |
ಲೋಕಾನಾಂ ತ್ವಂ ಪರೋ ಧರ್ಮೋ ವಿಷ್ವಕ್ಸೇನಶ್ಚತುರ್ಭುಜ: ||೨||
ಭಾವಾರ್ಥ :- ಹೇ! ರಾಘವಾ ; ನೀನೇ ಅಕ್ಷರ ; ನೀನೇ ಬ್ರಹ್ಮ ; ಮತ್ತು ಸತ್ಯ ; ಆದಿಯಲ್ಲಿಯೂ ;ಮಧ್ಯದಲ್ಲಿಯೂ ಅಂತ್ಯದಲ್ಲಿಯೂ ಇರುವವನೂ ನೀನೇ. ಸರ್ವಲೋಕಂಗಳಲ್ಲಿಯೂ ಶ್ರೇಷ್ಟವಾಗಿರುವ ಧರ್ಮವೆಂದರೂ ನೀನೇ; ಸರ್ವ ವ್ಯಾಪೀಯಾಗಿರುವ ಸೇನೆ ಇರುವವನೂ ನೀನೇ ; ಚತುರ್ಭುಜನೂ ನೀನೇ.
ಶಾಂರ್ಙ್ಗಧನ್ವಾ ಹೃಷೀಕೇಶ: ಪುರುಷ: ಪುರುಷೋತ್ತಮ: |
ಅಜಿತ: ಖಡ್ಗಧೃಗ್ವಿಷ್ಣು: ಕೃಷ್ಣಶ್ಚೈವ ಬೃಹದ್ಬಲಿ: ||೩||
ಭಾವಾರ್ಥ :- ಶಾಂರ್ಙ್ಗ ಅನ್ನುವ ಬಿಲ್ಲನ್ನು ಆಯುಧವಾಗಿ ನೀನೇ ಧರಿಸಿರುವವ. ಇಂದ್ರಿಯಗಳ ನಿಯಾಮಕನೂ ನೀನೇ ;ಭಕ್ತರ ಹೃದಯ ಕಮಲದಲ್ಲಿ ವಾಸ ಮಾಡಿಗೊಂಡಿರುವವನೂ ನೀನೇ ; ನೀನು ಪುರುಷರಲ್ಲಿ ಉತ್ತಮ ಆಗಿರುವ ಪುರುಷೋತ್ತಮ ; ಹಾಗೆಯೇ ಯಾರಿಂದಲೂ ಸೋಲಿಸಲು ಅಸಾಧ್ಯನು; ಖಡ್ಗವನ್ನು ಆಯುಧವಾಗಿ ಹಿಡಿದಿಕೊಂಡಿರುವವನೂ ನೀನೇ . ನೀನು ಸರ್ವ ವ್ಯಾಪೀ. ಕೃಷ್ಣ ವರ್ಣದವನೂ ನೀನು; ಅಲ್ಲದೆ ಮಹತ್ತರವಾದ ಧಾರಣಾ ಶಕ್ತಿಯೋನೂ ನೀನೇ.
ಸೇನಾನೀರ್ಗ್ರಾಮಣೀಶ್ಚ ತ್ವಂ ಬುದ್ಧಿ: ಸತ್ವಂ ಕ್ಷಮಾ ದಮ: |
ಪ್ರಭವಶ್ಚಾಪ್ಯಯಶ್ಚಾ ತ್ವಮುಪೇಂದ್ರೋ ಮಧುಸೂದನ: ||೪||
ಭಾವಾರ್ಥ:- ನೀನು ದೇವತಾಸೇನೆಯ ನಿರ್ವಹಣೆ ಮಾಡುವವನು. ಅದಲ್ಲದ್ದೆ ದಿವ್ಯ ಜನಪದಾದಿಗಳನ್ನು ಪಾಲಿಸುವವನು.
ನೀನೇ ಬುದ್ಧಿ ಶಕ್ತಿ ; ಸತ್ವ, ಕ್ಷಮೆ ಮತ್ತು ಇಂದ್ರಾದಿ ಸರ್ವ ಗ್ರಹಗಳ ಪ್ರವರ್ತಕ; ಬ್ರಹ್ಮಾಂಡದ ಉತ್ಪತ್ತಿ, ನಾಶಕರ್ತ ನೀನು.ಇಂದ್ರನ ತಮ್ಮ ಆಗಿ ಹುಟ್ಟಿದೆ. ಮಧು ಅನ್ನುವ ರಕ್ಕಸನನ್ನುಸಂಹಾರ ಮಾಡಿದೆ.
ಇಂದ್ರಕರ್ಮಾ ಮಹೇಂದ್ರಸ್ತ್ವಂ ಪದ್ಮನಾಭೋ ರಣಾಂತಕೃತ್ |
ಶರಣ್ಯಂ ಶರಣ್ಯಂ ಚ ತ್ವಾಮಾಪುರ್ದಿವ್ಯಾ ಮಹರ್ಷಯ |
ಸಹಸ್ರಶೃಂಗೋ ವೇದಾತ್ಮಾ ಶತಜಿಹ್ವೋ ಮಹರ್ಷಭ: ||೫||
ಭಾವಾರ್ಥ :- ಇಂದ್ರನ ಕರ್ತವ್ಯದ ಹಾಗೆ ಮಹೇಂದ್ರನಾದ ನೀನು ಕೂಡಾ ಪರಿಪಾಲನೆಯ ಕರ್ತವ್ಯ ಇರುವವನು. ಶ್ರೇಷ್ಟವಾಗಿರುವ ಐಶ್ವರ್ಯ ಸಂಪನ್ನನೂ ನೀನೇ; ನೀನು ಪದ್ಮನಾಭ . ರಣರಂಗದಲ್ಲಿ ಶತ್ರುಗಳನ್ನು ನಾಶ ಮಾಡುವ ಶಕ್ತ ನೀನು. ಶರಣಾಗತಿ ಹೊಂದಲು ಅರ್ಹ ವ್ಯಕ್ತಿ ನೀನು ಅನ್ನೋ ಕಾರಣಕ್ಕೆ ನಿನ್ನನ್ನೇ ರಕ್ಷಕ ಎಂದು ದಿವ್ಯ ಶಕ್ತಿ ಇರುವ ಮಹರ್ಷಿಗಳು ಹೇಳಿದ್ದರು. ಸಾವಿರಾರು ಶಾಖೆಗಳಿರುವ ಬೇರೆ ಬೇರೆ ರೀತಿಗಳಲ್ಲಿ ಪ್ರೇರಣಾ ಶಕ್ತಿಯನ್ನು ಹೊಂದಿರುವ ವೇದಗಳಿಗೆ ನೀನು ಆತ್ಮ ಶಕ್ತಿ. ಶ್ರೇಷ್ಠರಲ್ಲಿ ಶ್ರೇಷ್ಠ.
ತ್ವಂ ತ್ರಯಾಣಾಂ ಹಿ ಲೋಕಾನಾಮಾದಿಕರ್ತಾ ಸ್ವಯಂಪ್ರಭು |
ಸಿದ್ಧಾನಾಮಪಿ ಸಾಧ್ಯಾಮಾಶ್ರಯಶ್ಚಾಸಿ ಪೂರ್ವಜ: ||೬||
ಭಾವಾರ್ಥ :- ಮೂರು ಲೋಕಗಳಿಗೂ ನೀನು ಆದಿ ಕರ್ತ. ಹಾಗೆಯೇ ಸ್ವತ: ಅರಸ. ನೀನು ಸಿದ್ಧ ಸಾಧ್ಯರಿಗೆ ಆಶ್ರಯ ಕೊಡುವವನು.
ತ್ವಂ ಯಜ್ಞಸ್ತ್ವಂ ವಷಟ್ಕಾರಸ್ತ್ವಮೋಂಕಾರ: ಪರಂತಪ: |
ಪ್ರಭವಂ ನಿಧನಂ ವಾ ತೇ ನ ವಿದು: ಕೋ ಭವಾನಿತಿ ||೭||
ಭಾವಾರ್ಥ :- ನೀನೇ ಯಜ್ಞ ಸ್ವರೂಪಿ; ನೀನೇ ವಷಟ್ಕಾರ ಮತ್ತು ಓಂ ಕಾರ ಶಕ್ತಿ. ಉನ್ನತ ಆಗಿರುವ ತಪಶ್ಚಕ್ತಿಯೂ ನೀನೇ; ನಿನ್ನ ಹುಟ್ಟಿನ ಬಗ್ಗೆ ಆಗಲೀ ಅಂತ್ಯದ ಬಗ್ಗೆ ಆಗಲೀ ಅಥವಾ ನೀನು ಯಾರು ಅನ್ನುವ ವಿಷಯ ಆಗಲೀ ಯಾರಿಗೂ ಗೊತ್ತಿಲ್ಲ..
ದೃಶ್ಯಸೇ ಸರ್ವ ಭೂತೇಷು ಬ್ರಾಹ್ಮಣೇಷು ಚ ಗೋಷು ಚ |
ದಿಕ್ಷು ಸರ್ವಾಸು ಗಗನೇ ಪರ್ವತೇಷು ವನೇಷು ಚ ||೮||
ಭಾವಾರ್ಥ :- ಸಮಸ್ತ ಜೀವಗಳಲ್ಲಿಯೂ, ಬ್ರಾಹ್ಮಣರಲ್ಲಿಯೂ, ಗೋಮಾತಾ ಸಮೂಹದಲ್ಲಿಯೂ, ಸಮಸ್ತ ದಿಕ್ಕುಗಳಲ್ಲಿಯೂ, ಆಕಾಶದಲ್ಲಿಯೂ,ಬೆಟ್ಟಗುಡ್ಡೆಗಳಲ್ಲಿಯೂ ನಿನ್ನನ್ನೇ ಕಾಣ್ತಾ ಇದೆ.
ಸಹಸ್ರಚರಣ: ಶ್ರೀಮಾನ್ ಶತಶೀರ್ಷ: ಸಹಸ್ರ ದೃಕ್ |
ತ್ವಂ ಧಾರಯಸಿ ಭೂತಾನಿ ವಸುಧಾಂ ಚ ಸ ಪರ್ವತಾಮ್ ||೯||
ಭಾವಾರ್ಥ:-ನೀನು ಶ್ರೀದೇವಿ ಸಹಿತವಾಗಿರುವೆ. ನಿನಗೆ ಸಹಸ್ರ ಚರಣಗಳೂ; ನೂರು ತಲೆಗಳೂ; ಸಾವಿರ ಕಣ್ಣುಗಳೂ ಇರುವವನು. ನೀನು ಮಹಾಜೀವಗಳನ್ನೂ ಪರ್ವತಾದಿಗಳಿಂದ ಕೂಡಿರುವ ಈ ಭೂಮಿಯನ್ನೂ ಹೊತ್ತುಕೊಂಡಿರುವೆ.
ಅಂತೇ ಪೃಥಿವ್ಯಾ: ಸಲಿಲೇ ದೃಶ್ಯಸೇ ತ್ವಂ ಮಹೋರಗ: |
ತ್ರೀನ್ ಲೋಕಾನ್ ಧಾರಯನ್ ರಾಮ ದೇವ ಗಂಧರ್ವ ದಾನವಾನ್ ||೧೦||
ಭಾವಾರ್ಥ:-ಹೇ! ರಾಮ; ಭೂಮಿ ನಾಶ ಆದ ಆ ಸಮಯದಲ್ಲಿ ನೀನು ನಾಗಶಯನ ಆಗಿ ಸಮುದ್ರದ ನೀರಿನ ನಡುವೆ ಮೂರು ಲೋಕಗಳನ್ನೂ ; ದೇವ ದಾನವ ಗಂಧರ್ವಾದಿಗಳನ್ನೂ ರಕ್ಷಿಸಿರುವೆ.
ನೀಮೇಷಸ್ತೇ ಭವೇದ್ರಾತ್ರಿ: ಉನ್ಮೇಷಸ್ತೇ ಭವೇದ್ದಿವಾ |
ಸಂಸ್ಕಾರಾಸ್ತೇsಭವನ್ವೇದಾ: ನ ತದಸ್ತಿ ತ್ವಯಾ ವಿನಾ ||೧೧||
ಭಾವಾರ್ಥ :-ನೀನು ಕಣ್ಣು ಮುಚ್ಚಿದರೆ ರಾತ್ರೆ, ಕಣ್ಣು ಬಿಚ್ಚಿದರೆ ಹಗಲು,ನಿನ್ನ ಶ್ವಾಸೋಚ್ಛ್ವಾಸವಾಗಿರುವ ವೇದಗಳು ಐಹಿಕ ಜೀವನದ ಆಸಕ್ತಿ-ಅನಾಸಕ್ತಿ-ಧರ್ಮ ಸೂಕ್ಷ್ಮಗಳನ್ನು ಭೋಧಿಸುತ್ತವೆ. ನಿನ್ನನ್ನು ಬಿಟ್ಟರೆ ಬೇರೆ ಯಾವುದೂ ಇಲ್ಲ..
ಜಗತ್ಸರ್ವಂ ಶರೀರಂ ತೇ ಸ್ಥೈರ್ಯಂ ತೇ ವಸುಧಾತಲಮ್ |
ಅಗ್ನಿ: ಕೋಪ: ಪ್ರಸಾದಸ್ತೇ ಸೋಮ: ಶ್ರೀವತ್ಸಲಕ್ಷಣ: ||೧೨||
ಈ ಸಮಸ್ತಭೂಮಂಡಲವೇ ನಿನ್ನ ಶರೀರ; ಈ ಭೂಮಿಯೇ ನಿನ್ನ ಸ್ಥೈರ್ಯ; ಅಗ್ನಿಯೇ ನಿನ್ನ ಕೋಪ; ಚಂದ್ರನೇ ನಿನ್ನ ಮಂದಹಾಸ; ಶ್ರೀವತ್ಸ ಅನ್ನೋ ಗುರುತನ್ನು ನೀನು ಧರಿಸಿರುವೆ.
ತ್ವಯಾ ಲೋಕಾಸ್ತ್ರಯ:ಕ್ರಾಂತಾ: ಪುರಾಣೇ ವಿಕ್ರಮೈಸ್ತ್ರಿಭಿ: |
ಮಹೇಂದ್ರಶ್ಚ ಕೃತೋ ರಾಜ ಬಲಿಂ ಬದ್ಧ್ವಾ ಮಹಾಸುರಮ್ ||೧೩||
ಭಾವಾರ್ಥ :- ಹಿಂದೆ ನೀನು ನಿನ್ನ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಆವರಿಸಿ ಮಹಾಅಸುರ ಆಗಿದ್ದ ಬಲಿಚಕ್ರವರ್ತಿಯನ್ನು ಬಂಧಿಸಿ ; ಇಂದ್ರನಿಗೆ ಸ್ವರ್ಗದ ಪಟ್ಟವನ್ನು ಕೊಟ್ಟೆ.
ಸೀತಾ ಲಕ್ಷ್ಮೀರ್ಭವಾನ್ ವಿಷ್ಣು: ದೇವ: ಕೃಷ್ಣ: ಪ್ರಜಾಪತಿ: |
ವಧಾರ್ಥಂ ರಾವಣಸ್ಯೇಹ ಪ್ರವಿಷ್ಟೋ ಮಾನುಷೀಂ ತನುಮ್ ||೧೪||
ಭಾವಾರ್ಥ :- ಸೀತೆಯೇ ಲಕ್ಷ್ಮೀ ದೇವಿ, ನೀನೇ ವಿಷ್ಣು; ನೀನೇ ಸ್ವಯಂಪ್ರಕಾಶ ಸ್ವರೂಪ. ಕೃಷ್ಣ ವರ್ಣದವ. ಮತ್ತು ಪ್ರಜೆಗಳ ಅಧಿದೇವತೆ. ರಾವಣನ ವಧೆಗಾಗಿ ನೀನು ಮನುಷ್ಯ ರೂಪದಿಂದ ಬಂದಿರುವೆ.
*********************************************************************************
||ಇತಿ ಆಧ್ಯಾತ್ಮ ರಾಮಾಯಣೇ ಬ್ರಹ್ಮ ಕೃತ ರಾಮಸ್ತವ ||
||ಈ ರೀತಿಯಾಗಿ ಆಧ್ಯಾತ್ಮ ರಾಮಾಯಣಲ್ಲಿರುವ ಬ್ರಹ್ಮನಿಂದ ರಚನೆ ಆದ ರಾಮಸ್ತವದ ಭಾವಾರ್ಥವು||
*********************************************************************************
-೬-
|| ಶ್ರೀರಾಮಸ್ತವ ||
|| ಬ್ರಹ್ಮ ಕೃತ ರಾಮ ಸ್ತವ ||
ಭವನ್ನಾರಾಯಣೋ ದೇವ: ಶ್ರೀಮಾಂಶ್ಚಕ್ರಾಯುಧೋ ವಿಭು: |
ಏಕ ಶೃಂಗೋ ವರಾಹಸ್ತ್ವಂ ಭೂತಭವ್ಯಸಪತ್ನಜಿತ್ ||೧||
ಭಾವಾರ್ಥ :-ಚಕ್ರವನ್ನು ಆಯುಧವನ್ನಾಗಿ ಧರಿಸಿಕೊಂಡಿರುವವನೂ ; ಸರ್ವ ಜಗತ್ವ್ಯಾಪಕನೂ ; ದೇವಾದಿ ದೇವನೂ ಆಗಿರುವ ಶ್ರೀಮನ್ನಾರಾಯಣನು ನೀನೇ . ಒಂಟಿ ದಾಡೆಯ ಆದಿ ವರಾಹನೂ ನೀನೇ ; ಹಿಂದೆ ಹುಟ್ಟಿದ್ದ ಮತ್ತು ಮುಂದೆ ಹುಟ್ಟುವ ವೈರಿಗಳನ್ನು ಗೆಲ್ಲುವವನೂ ನೀನೇ .
ಅಕ್ಷರಂ ಬ್ರಹ್ಮ ಸತ್ಯಂ ಚ ಮಧ್ಯೇ ಚಾಂತೇ ಚ ರಾಘವ |
ಲೋಕಾನಾಂ ತ್ವಂ ಪರೋ ಧರ್ಮೋ ವಿಷ್ವಕ್ಸೇನಶ್ಚತುರ್ಭುಜ: ||೨||
ಭಾವಾರ್ಥ :- ಹೇ! ರಾಘವಾ ; ನೀನೇ ಅಕ್ಷರ ; ನೀನೇ ಬ್ರಹ್ಮ ; ಮತ್ತು ಸತ್ಯ ; ಆದಿಯಲ್ಲಿಯೂ ;ಮಧ್ಯದಲ್ಲಿಯೂ ಅಂತ್ಯದಲ್ಲಿಯೂ ಇರುವವನೂ ನೀನೇ. ಸರ್ವಲೋಕಂಗಳಲ್ಲಿಯೂ ಶ್ರೇಷ್ಟವಾಗಿರುವ ಧರ್ಮವೆಂದರೂ ನೀನೇ; ಸರ್ವ ವ್ಯಾಪೀಯಾಗಿರುವ ಸೇನೆ ಇರುವವನೂ ನೀನೇ ; ಚತುರ್ಭುಜನೂ ನೀನೇ.
ಶಾಂರ್ಙ್ಗಧನ್ವಾ ಹೃಷೀಕೇಶ: ಪುರುಷ: ಪುರುಷೋತ್ತಮ: |
ಅಜಿತ: ಖಡ್ಗಧೃಗ್ವಿಷ್ಣು: ಕೃಷ್ಣಶ್ಚೈವ ಬೃಹದ್ಬಲಿ: ||೩||
ಭಾವಾರ್ಥ :- ಶಾಂರ್ಙ್ಗ ಅನ್ನುವ ಬಿಲ್ಲನ್ನು ಆಯುಧವಾಗಿ ನೀನೇ ಧರಿಸಿರುವವ. ಇಂದ್ರಿಯಗಳ ನಿಯಾಮಕನೂ ನೀನೇ ;ಭಕ್ತರ ಹೃದಯ ಕಮಲದಲ್ಲಿ ವಾಸ ಮಾಡಿಗೊಂಡಿರುವವನೂ ನೀನೇ ; ನೀನು ಪುರುಷರಲ್ಲಿ ಉತ್ತಮ ಆಗಿರುವ ಪುರುಷೋತ್ತಮ ; ಹಾಗೆಯೇ ಯಾರಿಂದಲೂ ಸೋಲಿಸಲು ಅಸಾಧ್ಯನು; ಖಡ್ಗವನ್ನು ಆಯುಧವಾಗಿ ಹಿಡಿದಿಕೊಂಡಿರುವವನೂ ನೀನೇ . ನೀನು ಸರ್ವ ವ್ಯಾಪೀ. ಕೃಷ್ಣ ವರ್ಣದವನೂ ನೀನು; ಅಲ್ಲದೆ ಮಹತ್ತರವಾದ ಧಾರಣಾ ಶಕ್ತಿಯೋನೂ ನೀನೇ.
ಸೇನಾನೀರ್ಗ್ರಾಮಣೀಶ್ಚ ತ್ವಂ ಬುದ್ಧಿ: ಸತ್ವಂ ಕ್ಷಮಾ ದಮ: |
ಪ್ರಭವಶ್ಚಾಪ್ಯಯಶ್ಚಾ ತ್ವಮುಪೇಂದ್ರೋ ಮಧುಸೂದನ: ||೪||
ಭಾವಾರ್ಥ:- ನೀನು ದೇವತಾಸೇನೆಯ ನಿರ್ವಹಣೆ ಮಾಡುವವನು. ಅದಲ್ಲದ್ದೆ ದಿವ್ಯ ಜನಪದಾದಿಗಳನ್ನು ಪಾಲಿಸುವವನು.
ನೀನೇ ಬುದ್ಧಿ ಶಕ್ತಿ ; ಸತ್ವ, ಕ್ಷಮೆ ಮತ್ತು ಇಂದ್ರಾದಿ ಸರ್ವ ಗ್ರಹಗಳ ಪ್ರವರ್ತಕ; ಬ್ರಹ್ಮಾಂಡದ ಉತ್ಪತ್ತಿ, ನಾಶಕರ್ತ ನೀನು.ಇಂದ್ರನ ತಮ್ಮ ಆಗಿ ಹುಟ್ಟಿದೆ. ಮಧು ಅನ್ನುವ ರಕ್ಕಸನನ್ನುಸಂಹಾರ ಮಾಡಿದೆ.
ಇಂದ್ರಕರ್ಮಾ ಮಹೇಂದ್ರಸ್ತ್ವಂ ಪದ್ಮನಾಭೋ ರಣಾಂತಕೃತ್ |
ಶರಣ್ಯಂ ಶರಣ್ಯಂ ಚ ತ್ವಾಮಾಪುರ್ದಿವ್ಯಾ ಮಹರ್ಷಯ |
ಸಹಸ್ರಶೃಂಗೋ ವೇದಾತ್ಮಾ ಶತಜಿಹ್ವೋ ಮಹರ್ಷಭ: ||೫||
ಭಾವಾರ್ಥ :- ಇಂದ್ರನ ಕರ್ತವ್ಯದ ಹಾಗೆ ಮಹೇಂದ್ರನಾದ ನೀನು ಕೂಡಾ ಪರಿಪಾಲನೆಯ ಕರ್ತವ್ಯ ಇರುವವನು. ಶ್ರೇಷ್ಟವಾಗಿರುವ ಐಶ್ವರ್ಯ ಸಂಪನ್ನನೂ ನೀನೇ; ನೀನು ಪದ್ಮನಾಭ . ರಣರಂಗದಲ್ಲಿ ಶತ್ರುಗಳನ್ನು ನಾಶ ಮಾಡುವ ಶಕ್ತ ನೀನು. ಶರಣಾಗತಿ ಹೊಂದಲು ಅರ್ಹ ವ್ಯಕ್ತಿ ನೀನು ಅನ್ನೋ ಕಾರಣಕ್ಕೆ ನಿನ್ನನ್ನೇ ರಕ್ಷಕ ಎಂದು ದಿವ್ಯ ಶಕ್ತಿ ಇರುವ ಮಹರ್ಷಿಗಳು ಹೇಳಿದ್ದರು. ಸಾವಿರಾರು ಶಾಖೆಗಳಿರುವ ಬೇರೆ ಬೇರೆ ರೀತಿಗಳಲ್ಲಿ ಪ್ರೇರಣಾ ಶಕ್ತಿಯನ್ನು ಹೊಂದಿರುವ ವೇದಗಳಿಗೆ ನೀನು ಆತ್ಮ ಶಕ್ತಿ. ಶ್ರೇಷ್ಠರಲ್ಲಿ ಶ್ರೇಷ್ಠ.
ತ್ವಂ ತ್ರಯಾಣಾಂ ಹಿ ಲೋಕಾನಾಮಾದಿಕರ್ತಾ ಸ್ವಯಂಪ್ರಭು |
ಸಿದ್ಧಾನಾಮಪಿ ಸಾಧ್ಯಾಮಾಶ್ರಯಶ್ಚಾಸಿ ಪೂರ್ವಜ: ||೬||
ಭಾವಾರ್ಥ :- ಮೂರು ಲೋಕಗಳಿಗೂ ನೀನು ಆದಿ ಕರ್ತ. ಹಾಗೆಯೇ ಸ್ವತ: ಅರಸ. ನೀನು ಸಿದ್ಧ ಸಾಧ್ಯರಿಗೆ ಆಶ್ರಯ ಕೊಡುವವನು.
ತ್ವಂ ಯಜ್ಞಸ್ತ್ವಂ ವಷಟ್ಕಾರಸ್ತ್ವಮೋಂಕಾರ: ಪರಂತಪ: |
ಪ್ರಭವಂ ನಿಧನಂ ವಾ ತೇ ನ ವಿದು: ಕೋ ಭವಾನಿತಿ ||೭||
ಭಾವಾರ್ಥ :- ನೀನೇ ಯಜ್ಞ ಸ್ವರೂಪಿ; ನೀನೇ ವಷಟ್ಕಾರ ಮತ್ತು ಓಂ ಕಾರ ಶಕ್ತಿ. ಉನ್ನತ ಆಗಿರುವ ತಪಶ್ಚಕ್ತಿಯೂ ನೀನೇ; ನಿನ್ನ ಹುಟ್ಟಿನ ಬಗ್ಗೆ ಆಗಲೀ ಅಂತ್ಯದ ಬಗ್ಗೆ ಆಗಲೀ ಅಥವಾ ನೀನು ಯಾರು ಅನ್ನುವ ವಿಷಯ ಆಗಲೀ ಯಾರಿಗೂ ಗೊತ್ತಿಲ್ಲ..
ದೃಶ್ಯಸೇ ಸರ್ವ ಭೂತೇಷು ಬ್ರಾಹ್ಮಣೇಷು ಚ ಗೋಷು ಚ |
ದಿಕ್ಷು ಸರ್ವಾಸು ಗಗನೇ ಪರ್ವತೇಷು ವನೇಷು ಚ ||೮||
ಭಾವಾರ್ಥ :- ಸಮಸ್ತ ಜೀವಗಳಲ್ಲಿಯೂ, ಬ್ರಾಹ್ಮಣರಲ್ಲಿಯೂ, ಗೋಮಾತಾ ಸಮೂಹದಲ್ಲಿಯೂ, ಸಮಸ್ತ ದಿಕ್ಕುಗಳಲ್ಲಿಯೂ, ಆಕಾಶದಲ್ಲಿಯೂ,ಬೆಟ್ಟಗುಡ್ಡೆಗಳಲ್ಲಿಯೂ ನಿನ್ನನ್ನೇ ಕಾಣ್ತಾ ಇದೆ.
ಸಹಸ್ರಚರಣ: ಶ್ರೀಮಾನ್ ಶತಶೀರ್ಷ: ಸಹಸ್ರ ದೃಕ್ |
ತ್ವಂ ಧಾರಯಸಿ ಭೂತಾನಿ ವಸುಧಾಂ ಚ ಸ ಪರ್ವತಾಮ್ ||೯||
ಭಾವಾರ್ಥ:-ನೀನು ಶ್ರೀದೇವಿ ಸಹಿತವಾಗಿರುವೆ. ನಿನಗೆ ಸಹಸ್ರ ಚರಣಗಳೂ; ನೂರು ತಲೆಗಳೂ; ಸಾವಿರ ಕಣ್ಣುಗಳೂ ಇರುವವನು. ನೀನು ಮಹಾಜೀವಗಳನ್ನೂ ಪರ್ವತಾದಿಗಳಿಂದ ಕೂಡಿರುವ ಈ ಭೂಮಿಯನ್ನೂ ಹೊತ್ತುಕೊಂಡಿರುವೆ.
ಅಂತೇ ಪೃಥಿವ್ಯಾ: ಸಲಿಲೇ ದೃಶ್ಯಸೇ ತ್ವಂ ಮಹೋರಗ: |
ತ್ರೀನ್ ಲೋಕಾನ್ ಧಾರಯನ್ ರಾಮ ದೇವ ಗಂಧರ್ವ ದಾನವಾನ್ ||೧೦||
ಭಾವಾರ್ಥ:-ಹೇ! ರಾಮ; ಭೂಮಿ ನಾಶ ಆದ ಆ ಸಮಯದಲ್ಲಿ ನೀನು ನಾಗಶಯನ ಆಗಿ ಸಮುದ್ರದ ನೀರಿನ ನಡುವೆ ಮೂರು ಲೋಕಗಳನ್ನೂ ; ದೇವ ದಾನವ ಗಂಧರ್ವಾದಿಗಳನ್ನೂ ರಕ್ಷಿಸಿರುವೆ.
ನೀಮೇಷಸ್ತೇ ಭವೇದ್ರಾತ್ರಿ: ಉನ್ಮೇಷಸ್ತೇ ಭವೇದ್ದಿವಾ |
ಸಂಸ್ಕಾರಾಸ್ತೇsಭವನ್ವೇದಾ: ನ ತದಸ್ತಿ ತ್ವಯಾ ವಿನಾ ||೧೧||
ಭಾವಾರ್ಥ :-ನೀನು ಕಣ್ಣು ಮುಚ್ಚಿದರೆ ರಾತ್ರೆ, ಕಣ್ಣು ಬಿಚ್ಚಿದರೆ ಹಗಲು,ನಿನ್ನ ಶ್ವಾಸೋಚ್ಛ್ವಾಸವಾಗಿರುವ ವೇದಗಳು ಐಹಿಕ ಜೀವನದ ಆಸಕ್ತಿ-ಅನಾಸಕ್ತಿ-ಧರ್ಮ ಸೂಕ್ಷ್ಮಗಳನ್ನು ಭೋಧಿಸುತ್ತವೆ. ನಿನ್ನನ್ನು ಬಿಟ್ಟರೆ ಬೇರೆ ಯಾವುದೂ ಇಲ್ಲ..
ಜಗತ್ಸರ್ವಂ ಶರೀರಂ ತೇ ಸ್ಥೈರ್ಯಂ ತೇ ವಸುಧಾತಲಮ್ |
ಅಗ್ನಿ: ಕೋಪ: ಪ್ರಸಾದಸ್ತೇ ಸೋಮ: ಶ್ರೀವತ್ಸಲಕ್ಷಣ: ||೧೨||
ಈ ಸಮಸ್ತಭೂಮಂಡಲವೇ ನಿನ್ನ ಶರೀರ; ಈ ಭೂಮಿಯೇ ನಿನ್ನ ಸ್ಥೈರ್ಯ; ಅಗ್ನಿಯೇ ನಿನ್ನ ಕೋಪ; ಚಂದ್ರನೇ ನಿನ್ನ ಮಂದಹಾಸ; ಶ್ರೀವತ್ಸ ಅನ್ನೋ ಗುರುತನ್ನು ನೀನು ಧರಿಸಿರುವೆ.
ತ್ವಯಾ ಲೋಕಾಸ್ತ್ರಯ:ಕ್ರಾಂತಾ: ಪುರಾಣೇ ವಿಕ್ರಮೈಸ್ತ್ರಿಭಿ: |
ಮಹೇಂದ್ರಶ್ಚ ಕೃತೋ ರಾಜ ಬಲಿಂ ಬದ್ಧ್ವಾ ಮಹಾಸುರಮ್ ||೧೩||
ಭಾವಾರ್ಥ :- ಹಿಂದೆ ನೀನು ನಿನ್ನ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಆವರಿಸಿ ಮಹಾಅಸುರ ಆಗಿದ್ದ ಬಲಿಚಕ್ರವರ್ತಿಯನ್ನು ಬಂಧಿಸಿ ; ಇಂದ್ರನಿಗೆ ಸ್ವರ್ಗದ ಪಟ್ಟವನ್ನು ಕೊಟ್ಟೆ.
ಸೀತಾ ಲಕ್ಷ್ಮೀರ್ಭವಾನ್ ವಿಷ್ಣು: ದೇವ: ಕೃಷ್ಣ: ಪ್ರಜಾಪತಿ: |
ವಧಾರ್ಥಂ ರಾವಣಸ್ಯೇಹ ಪ್ರವಿಷ್ಟೋ ಮಾನುಷೀಂ ತನುಮ್ ||೧೪||
ಭಾವಾರ್ಥ :- ಸೀತೆಯೇ ಲಕ್ಷ್ಮೀ ದೇವಿ, ನೀನೇ ವಿಷ್ಣು; ನೀನೇ ಸ್ವಯಂಪ್ರಕಾಶ ಸ್ವರೂಪ. ಕೃಷ್ಣ ವರ್ಣದವ. ಮತ್ತು ಪ್ರಜೆಗಳ ಅಧಿದೇವತೆ. ರಾವಣನ ವಧೆಗಾಗಿ ನೀನು ಮನುಷ್ಯ ರೂಪದಿಂದ ಬಂದಿರುವೆ.
*********************************************************************************
||ಇತಿ ಆಧ್ಯಾತ್ಮ ರಾಮಾಯಣೇ ಬ್ರಹ್ಮ ಕೃತ ರಾಮಸ್ತವ ||
||ಈ ರೀತಿಯಾಗಿ ಆಧ್ಯಾತ್ಮ ರಾಮಾಯಣಲ್ಲಿರುವ ಬ್ರಹ್ಮನಿಂದ ರಚನೆ ಆದ ರಾಮಸ್ತವದ ಭಾವಾರ್ಥವು||
*********************************************************************************
-೬-
|| ಶ್ರೀರಾಮಸ್ತವ ||
**************
ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯರತ್ನದೀಪಮ್ |
ಆಜಾನುಭಾಹುಮರವಿಂದದಲಾಯತಾಕ್ಷಂ
ರಾಮಂ ನಿಶಾಚರವಿನಾಶಕರಂ ನಮಾಮಿ ||೧||
ಭಾವಾರ್ಥ:-ಶ್ರೀರಾಘವನೂ ; ದಶರಥನ ಆತ್ಮವೇ ಅಗಿರುವ ಮಗನೂ; ಸರಿಸಾಟಿಯಿಲ್ಲದವನೂ; ಸೀತೆಯ ಪತಿಯೂ; ಇಡೀ ರಘುವಂಶಕ್ಕೆ ರತ್ನಮಯದೀಪವೇ ಆಗಿರುವವನೂ; ವಿಶಾಲಶರೀರ ಹೊಂದಿರುವವನೂ; ತಾವರೆಯದಳದ ಹಾಗಿರುವ ಕಣ್ಣುಗಳನ್ನು ಹೊಂದಿರುವವನೂ; ರಾಕ್ಷಸರಿಗೆ ವಿನಾಶಕಾರಿಯೂ ಆಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುವೆ.
ವೈದೇಹೀ ಸಹಿತಂ ಸುರದ್ರುಮತಲೇ ಹೈಮೇ ಮಹಾ ಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯ: ಪರಂ
ವ್ಯಾಖ್ಯಾಂತಂ ಭರತಾದಿಭಿ: ಪರಿವೃತಂ ರಾಮಂ ಭಜೇ ಶ್ಯಾಮಲಮ್ ||೨||
ಕಲ್ಪವೃಕ್ಷದ ಅಡಿಯಲ್ಲಿ ಚಿನ್ನದ ದೊಡ್ಡಮಂಟಪದಲ್ಲಿ ಪುಷ್ಪಕ ವಿಮಾನ; ಅದರ ನಡುವೆ ರತ್ನಮಯ ಸಿಂಹಾಸನದಲ್ಲಿ ಸೀತೆಯ ಜೊತೆಗೂಡಿ ವೀರಾಸನದಲ್ಲಿ ಕುಳಿತುಕೊಂಡಿರುವ; ಹಾಗೂ ಮುಂದೆ ಆಂಜನೇಯನು ಸ್ತುತಿಸುತ್ತಿರುವಾಗ; ಋಷಿಸಮೂಹಕ್ಕೆ ಪರತತ್ವದ ವ್ಯಾಖ್ಯಾನ ಮಾಡುತ್ತಾ ಭರತಾದಿಗಳಿಂದ ಆವರಿಸಿಗೊಂಡಿರುವ ಶ್ಯಾಮಲಬಣ್ಣದ ಶ್ರೀರಾಮನನ್ನು ನಾನು ಭಜಿಸುವೆ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾ:ಪತಯೇ ನಮ: ||೩||
ಶ್ರೀರಾಮನೂ; ರಾಮಭದ್ರನೂ; ರಾಮಚಂದ್ರನೂ; ಸೃಷ್ಟಿ ಮಾಡುವವನೂ; ರಘುನಾಥನೂ ಎಲ್ಲರ ದೊರೆಯೂ ಆಗಿರುವ ಸೀತಾಪತಿಗೆ ನನ್ನ ನಮಸ್ಕಾರಂಗಳು.
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||೪||
ಆಪತ್ತುಗಳನ್ನು ನಿವಾರಿಸುವ ಶಕ್ತಿ ಇರುವವನೂ; ಸರ್ವ ಸಂಪತ್ತುಗಳನ್ನು ಅನುಗ್ರಹಿಸುವವನೂ; ಲೋಕಾಭಿರಾಮನೂ ಆಗಿರುವ ಶ್ರೀರಾಮನಿಗೆಗೆ ಪುನ: ಪುನ: ನಮಸ್ಕಾರಂಗಳು.
*********************************************************************************
-೭-
|| ಶ್ರೀ ತುಲಸೀದಾಸ ವಿರಚಿತ ಶ್ರೀರಾಮಸ್ತವ ||
*******************************
ಯನ್ಮಾಯಾವಶವರ್ತಿ ವಿಶ್ವಮಖಿಲಂ ಬ್ರಹ್ಮಾದಿದೇವಾಸುರ:
ಯತ್ಸತ್ವಾದಮೃಷೈವಭಾತಿ ಸಕಲಂ ರಜ್ಜೌ ಯಥಾಽಹೇರ್ಭ್ರಮ: |
ತತ್ಪಾದಪ್ಲವಮೇಕಮೇವ ಹಿ ಭವಾಂಭೋಧೇಸ್ತಿತೀರ್ಷಾವತಾಂ
ವಂದೇಶಂ ತಮಶೇಷಕಾರಣಪರಂ ರಾಮಾಖ್ಯಮೀಶಂ ಹರಿಮ್ |}೧||
ಭಾವಾರ್ಥ :-ಯಾರ ಮಾಯೆಯ ವಶದಲ್ಲಿ ಇಡೀ ಭೂಮಂಡಲ, ಬ್ರಹ್ಮಾದಿ ದೇವತೆಗಳು, ಅಂತೆಯೇ ರಾಕ್ಷಸರರು ಇರುವರೋ; ಯಾರ ಅಸ್ತಿತ್ವದಿಂದ ಬಳ್ಳಿಯಲ್ಲಿ ಹಾವನ್ನು ಕಾಣುವ ರೀತಿಯಲ್ಲಿ ಎಲ್ಲವೂ ಸತ್ಯದ ಹಾಗೆ ಕಾಣುತ್ತಾ ಇದೆಯೋ; ಯಾರ ಪಾದಗಳು ಸಂಸಾರ ಸಾಗರವನ್ನು ದಾಟಬೇಕು ಎಂಬ ಬಯಕೆಯುಳ್ಳವರಿಗೆ ಸಾಟಿಯಿಲ್ಲದ ಹಡಗಾಗುವುದೋ ಅಂತಹಾ ಶೇಷ ಇಲ್ಲದ ಕಾರಣಗಳಿಗೆ ಹೊರತಾಗಿರುವ ರಾಮಾ ಅನ್ನುವ ಹೆಸರು ಇರುವ, ಈಶ್ವರನೇ ತಾನಾಗಿರುವ ಹರಿಗೆ ನಾನು ನಮಸ್ಕರಿಸುವೆ.
ಪ್ರಸನ್ನತಾಂ ಯಾ ನ ಗತಾಭಿಷೇಕತ-
ಸ್ತಥಾ ನ ಮಮ್ಲೌ ವನವಾಸದು:ಖತ: |
ಮುಖಾಂಬುಜಶ್ರೀ ರಘುನಂದನಸ್ಯ ಮೇ
ಸದಾಸ್ಸ್ತು ಸಾ ಮಂಜುಲಮಂಗಲಪ್ರದಾ ||೨||
ಭಾವಾರ್ಥ :-ಪಟ್ಟಾಭಿಷೇಕದ ಕಾಲದಲ್ಲಿ ಯಾರ ಮೊಗದಲ್ಲಿ ಸಂತೋಷದ ಕಾಂತಿ ಹೆಚ್ಚಾಗಿರುವುದಿಲ್ಲವೋ; ಯಾರ ಮೊಗ ವನವಾಸದ ದು:ಖದಿಂದ ಬಾಡಿರುವುದಿಲ್ಲವೋ, ಅಂತಹಾ ರಘುರಾಮನ ಶ್ರೀಮುಖ ನನಗೆ ಯಾವಾಗಲೂ ಮಧುರಮಯ ಸುಖವನ್ನು ಒದಗಿಸಲಿ.
ನೀಲಾಂಬುಜಶ್ಯಾಮಲಕೋಮಲಾಂಗಂ
ಸೀತಾಸಮಾರೋಪಿತವಾಮಭಾಗಮ್ |
ಪಾಣೌ ಮಹಾಸಾಯಕಚಾರುಚಾಪಂ
ನಮಾಮಿ ರಾಮಂ ರಘುವಂಶ ನಾಥಮ್ ||೩||
ಭಾವಾರ್ಥ :-ನೀಲ ಕಮಲದ ಹಾಗಿರುವ; ಶ್ಯಾಮಲವರ್ಣದ ಕೋಮಲಾಂಗನಾಗಿರುವ; ಎಡ ಬದಿಯಲ್ಲಿ ಸೀತಾದೇವಿಯನ್ನು ಕುಳ್ಳಿರಿಸಿಕೊಂಡು; ಕೈಯಲ್ಲಿ ಸುಂದರ ಬಿಲ್ಲನ್ನೂ ಮತ್ತು ಮಹಾಬಾಣಗಳನ್ನೂ ಹಿಡಿದುಕೊಂಡಿರುವ ರಘುವಂಶದ ದೊರೆಯಾದ ಶ್ರೀರಾಮನಿಗೆ ನಾನು ನಮಸ್ಕರಿಸುವೆ.
ಸಾಂದ್ರಾಂನಂದಪಯೋದಸೌಭಗತನುಂ ಪೀತಾಂಬರಂ ಸುಂದರಂ
ಪಾಣೌ ಬಾಣಶರಾಸನಂ ಕಟಿಲಸತ್-ತೂಣೀರಭಾರಂ ವರಮ್ |
ರಾಜೀವಾಯತಲೋಚನಂ ಧೃತಜಟಾಜೂಟೇನ ಸಂಶೋಭಿತಂ
ಸೀತಾಲಕ್ಷ್ಮಣ ಸಂಯುತಂ ಪಥಿಗತಂ ರಾಮಾಭಿರಾಮಂ ಭಜೇ ||೪||
ಭಾವಾರ್ಥ :-ಯಾರ ಚೆಲುವಿನ ಶರೀರ ಭಾರೀ ಸಂತೋಷವನ್ನು ತರುವ ಮುಗಿಲಿನ ಹಾಗೆ ಶ್ಯಾಮಲವರ್ಣದಿಂದ ಕೂಡಿದೆಯೋ; ಯಾರು ಪೀತಾಂಬರಧಾರಿಯಾಗಿ ಚೆಲುವಿನಾಗರನೇ ಆಗಿ ಕೈಗಳಲ್ಲಿ ಬಿಲ್ಲುಬಾಣಂಗಳನ್ನು ಹಿಡಿದಿಕೊಂಡಿರುವವನೋ, ಯಾರ ಸೊಂಟಕ್ಕೆ ಸುಂದರ ಬತ್ತಳಿಕೆ ಕಟ್ಟಿಕೊಂಡಿರುವುದೋ; ಯಾರು ರಾಜೀವಲೋಚನರೋ; ಯಾರು ಗಂಟು ಹಾಕಿರುವ ಜಟೆಯಿಂದ ಶೋಭಾಯಮಾನವಾಗಿ ಇರುವನೋ; ಯಾರು ಸೀತಾಲಕ್ಷ್ಮಣರ ಜೊತೆಗೆ ಸಂಚಾರ ಮಾಡುತ್ತಾ ಇದ್ದನೋ ಅಂತಹಾ ಚೆಲುವಿನ ಮೂರ್ತಿ ಶ್ರೀರಾಮಚಂದ್ರನನ್ನು ನಾನು ಭಜಿಸುವೆ.
ಕುಂದೇಂದೀವರಸುಂದರಾವತಿಬಲೌ ವಿಜ್ಞಾನಧಾಮಾವುಭೌ
ಶೋಭಾಢ್ಯೌ ವರಧನ್ವಿನೌ ಶ್ರುತಿನುತೌ ಗೋ ವಿಪ್ರ ವೃಂದ ಪ್ರಿಯೌ |
ಮಾಯಾಮಾನುಷರೂಪಿಣೌ ರಘುವರೌ ಸದ್ಧರ್ಮವರ್ಮೌ ಹಿತೌ
ಸೀತಾನ್ವೇಷಣತತ್ಪರೌ ಪಥಿಗತೌ ಭಕ್ತಿಪ್ರದೌ ತೌ ಹಿ ನ: ||೫||
ಭಾವಾರ್ಥ :-ನೀಲಕಮಲದ ಮತ್ತು ಮಲ್ಲಿಗೆಯಂತೆ ಚೆಲುವರಾಗಿರುವವರೂ; ಅತಿ ಬಲಶಾಲಿಗಳೂ; ಜ್ಞಾನನಿಧಿಗಳೂ; ಭಾರೀ ಚೆಲುವರೂ; ಸರಿಸಾಟಿಯಿಲ್ಲದ ಮಹಾ ಬಿಲ್ಲುಗಾರರೂ; ವೇದಗಳಿಂದ ಹೊಗಳಿಸಿಕೊಳ್ಳುವವರೂ; ಗೋ ಸಂಕುಲಕ್ಕೂ ಬ್ರಾಹ್ಮಣಕುಲಕ್ಕೂ ಅತಿ ಪ್ರಿಯವಾದವರೂ, ಮಾಯಾರೂಪದ ಮಾನವಶರೀರವ ಹೊಂದಿರುವವರೂ; ಸದ್ಧರ್ಮಕ್ಕೆ ಕವಚ ಸ್ವರೂಪರೂ; ಹಿತಕಾಯುವವವರೂ; ಸೀತಾನ್ವೇಷಣೆಯಲ್ಲಿ ನಿರತರಾಗಿರುವವರೂ ಆಗಿರುವ ರಾಮಲಕ್ಷ್ಮಣರು ನಮಗೆ ಭಕ್ತಿಯನ್ನು ದಯಪಾಲಿಸಲಿ.
ಬ್ರಹ್ಮಾಂಭೋಧಿಸಮುದ್ಭವಂ ಕಲಿಮಲಪ್ರಧ್ವಂಸನಂ ಚಾವ್ಯಯಂ
ಶ್ರೀಮಚ್ಛಂಭುಮುಖೇಂದುಸುಂದರವರೇ ಸಂಶೋಭಿತಂ ಸರ್ವದಾ |
ಸಂಸಾರಾಮಯಭೇಷಜಂ ಸುಖಕರಂ ಶ್ರೀಜಾನಕೀಜೀವನಂ
ಧನ್ಯಾಸ್ತೇ ಕೃತಿನ: ಪಿಬಂತಿ ಸತತಂ ಶ್ರೀ ರಾಮಾಮೃತಮ್ ||೬||
ಭಾವಾರ್ಥ :-ವೇದಗಳಲ್ಲಿ ಹೇಳುವ ಮಹಾಸಮುದ್ರವನ್ನು ಮಥಿಸುವಾಗ ಹುಟ್ಟಿದ; ಕಲ್ಮಷವನ್ನು ನಾಶ ಮಾಡುವ; ಮೋಕ್ಷಕಾರಕನಾಗಿರುವ ಪರಮಶಿವನ; ತಾವರೆಯ ಹೋಲುವ ಹಾಗಿರುವ ಮೊಗದಲ್ಲಿ ಸದಾ ಸಂತಸವನ್ನು ಸೂಸುತ್ತಿರುವ; ಈ ಸಂಸಾರಕ್ಕೆ ಸುಖವನ್ನು ಅನುಗ್ರಹಿಸುವ ಔಷಧಿಯ ಸ್ವರೂಪವೇ ಆಗಿರುವ; ಜಾನಕಿಯ ಜೀವವೇ ಆಗಿರುವ ಅಮೃತಮಯ ರಾಮನಾಮಾಮೃತವ ಕುಡಿವವರೇ ಧನ್ಯಾತ್ಮರು..
ಶಾಂತಂ ಶಾಶ್ವತಮಪ್ರಮೇಯಮನಘಂ ನಿರ್ವಾಣಶಾಂತಿಪ್ರದಂ
ಬ್ರಹ್ಮಾ ಶಂಭುಪಣೀಂದ್ರ ಸೇವ್ಯಮನಿಶಂ ವೇದಾಂತವೇದ್ಯಂ ವಿಭುಮ್ |
ರಾಮಾಖ್ಯಂ ಜಗದೀಶ್ವರಂ ಸುರಗುರುಂ ಮಾಯಾಮನುಷ್ಯಂ ಹರಿಂ
ವಂದೇಸ್ಹಂ ಕರುಣಾಕರಂ ರಘುವರಂ ಭೂಪಾಲಚೂಡಾಮಣಿಮ್ ||೭||
ಭಾವಾರ್ಥ :-ಶಾಂತಸ್ವರೂಪನೂ, ಶಾಶ್ವತನೂ, ಅಳತೆಗೆ ಸಿಲುಕದವನೂ, ಪಾಪಗಳಿಂದ ವಿರಹಿತ ಆದವನೂ, ಮೋಕ್ಷಕ್ಕೆ ಸಮನಾದ ಶಾಂತಿಯನ್ನು ಅನುಗ್ರಹಿಸುವವನೂ, ಬ್ರಹ್ಮ, ಶಂಭು, ಶೇಷ ಇವರಿಂದ ಯಾವಾಗಲೂ ಸೇವೆ ಮಾಡಿಸಿಕೊಳ್ಳುವವನೂ, ವೇದಾಂತದಿಂದ ತಿಳಿಯಲ್ಪಡುವವನೂ, ಸರ್ವ ವ್ಯಾಪಿಯಾಗಿ, ದೇವತೆಗಳಿಗೆ ಗುರುವಾಗಿ; ಮಾಯೆಯಿಂದ ಮಾನುಷ ಶರೀರವನ್ನು ಹೊಂದಿರುವ, ಪಾಪಹರನೂ, ಕರುಣಾಕರನೂ, ಆಳರಸರಿಗೆ ಶ್ರೇಷ್ಠನಾಗಿರುವವನೂ ರಘುವರ ಎಂದು ಕರೆಯಿಸಿಕೊಳ್ಳುವವನೂ, ರಾಮಾ ಅನ್ನುವ ಹೆಸರಿರುವವನೂ ಆಗಿರುವ ಜಗದೀಶ್ವರನಿಗೆ ನಾನು ನಮಸ್ಕರಿಸುವೆ.
ಕೇಕೀ ಕಂಠಾಭನೀಲಂ ಸುರವರವಿಲಸದ್- ವಿಪ್ರಪಾದಬ್ಜಚಿಹ್ನಂ
ಶೋಭಾಢ್ಯಂ ಪೀತವಸ್ತ್ರಂ ಸರಸಿಜನಯನಂ ಸರ್ವದಾ ಸುಪ್ರಸನ್ನಮ್ |
ಪಾಣೌ ನಾರಾಚಚಾಪಂ ಕಪಿನಿಕರಯುತಂ ಬಂಧುನಾ ಸೇವ್ಯಮಾನಂ
ನೌಮೀಡ್ಯಂ ಜಾನಕೀಶಂ ರಘುವರಮನಿಶಂ ಪುಷ್ಪಕಾರೂಢಾ ರಾಮಮ್ ||೮||
ಭಾವಾರ್ಥ :- ನವಿಲಿನ ಕಂಠದ ಹಾಗೆ ನೀಲಶರೀರನೂ, ದೇವತೆಗಳಲ್ಲಿ ಪ್ರಧಾನ ಸ್ಥಾನ ಹೊಂದಿರುವವನೂ, ಭೃಗು ಮುನಿಯ ಪಾದದ ಗುರುತನ್ನು ಹೃದಯದ ಮೇಲೆ ಧರಿಸಿಗೊಡಿಕೊಂಡಿರುವವನೂ, ಶೋಭಾಯಮಾನವಾಗಿರುವವನೂ, ಅರಶಿನ ವಸ್ತ್ರವನ್ನು ಧರಿಸಿರುವವನೂ, ತಾವರೆಯ ಹಾಗೆ ಕಾಣುವ ಕಣ್ಣುಗಳಿರುವವನೂ, ಯಾವತ್ತೂ ಸಂತೋಷವನ್ನು ವ್ಯಕ್ತ ಪಡುಸುವವನೂ, ಬಿಲ್ಲುಬಾಣಂಗಳನ್ನು ಎರಡು ಕೈಗಳಲ್ಲಿ ಹಿಡಿದುಕೊಂಡಿರುವವನೂ, ವಾನರ ಸಮೂಹದಿಂದ ಆವರಿಸಲ್ಪಟ್ಟವನೂ, ಲಕ್ಷ್ಮಣನಿಂದ ಸೇವೆಯನ್ನು ಸ್ವೀಕರಿಸುವವನೂ, ಸ್ತುತಿಗೆ ಅರ್ಹವಾದವನೂ, ಪುಷ್ಪಕ ವಿಮಾನದಲ್ಲಿ ಆರೂಢನಾಗಿರುವವನೂ, ರಘುರಾಮನೂ, ಜಾನಕೀಶನೂ ಆಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುವೆ.
ಆರ್ತಾನಾಮಾರ್ತಿಹಂತಾರಂ
ಭೀತಾನಾಂ ಭಯನಾಶನಮ್ |
ದ್ವಿಷತಾಂ ಕಾಲದಂಡಂ ತಂ
ರಾಮಚಂದ್ರಂ ನಮಾಮ್ಯಹಮ್ ||೯||
ಭಾವಾರ್ಥ :-ದು:ಖಪೀಡಿತರ ವ್ಯಾಕುಲಂಗಳನ್ನು ನಾಶ ಮಾಡುವುವನೂ, ಭೀತಿಗೆ ಸಿಲುಕಿದವನ ಭೀತಿಯನ್ನು ನಿವಾರಿಸುವವನೂ, ವೈರಿಗಳಿಗೆ ಯಮಸ್ವರೂಪನೂ ಆಗಿರುವ ಶ್ರೀರಾಮಚಂದ್ರನಿಗೆ ನಾನು ನಮಸ್ಕರಿಸುವೆ.
ನಾನ್ಯಾ ಸ್ಪೃಹಾ ರಘುಪತೇ ಹೃದಯೇಸ್ಸ್ಮದೀಯೇ
ಸತ್ಯಂ ವದಾಮಿ ಚ ಭವಾನಖಿಲಾಂತರಾತ್ಮಾ |
ಭಕ್ತಿಂ ಪ್ರಯಚ್ಛ ರಘುಪುಂಗವ ನಿರ್ಭರಾಂ ಮೇ
ಕಾಮಾದಿದೋಷರಹಿತಂ ಕುರು ಮಾನಸಂ ಚ ||೧೦||
ಭಾವಾರ್ಥ :-ಹೇ! ರಾಮಚಂದ್ರಾ; ನನ್ನ ಹೃದಯದಲ್ಲಿ ಬೇರೆ ಯಾವ ಆಶೆಯೂ ಇಲ್ಲ. ನಾನು ಸತ್ಯವಾಗಿ ಹೇಳುವೆ; ನೀನು ಸಮಸ್ತ ಜೀವಿಗಳ ಹೃದಯದಲ್ಲಿ ಇರುವ ಅಂತರಾತ್ಮ. ನನಗೆ ಪರಿಪೂರ್ಣವಾದ ಭಕ್ತಿಯನ್ನು ಕರುಣಿಸಿ ನನ್ನ ಮನಸ್ಸಿನಿಂದ ಆಶೆಗಳೆಲ್ಲವನ್ನು ನಾಶ ಆಗುವ ಹಾಗೆ ಅನುಗ್ರಹಿಸು.
|| ಇತಿ ಶ್ರೀ ತುಲಸೀದಾಸ ವಿರಚಿತ ಶ್ರೀರಾಮಸ್ತವ ||
|| ಈ ರೀತಿ ಆಗಿದೆ ಶ್ರೀ ತುಲಸೀದಾಸ ವಿರಚಿಸಿದ ಶ್ರೀರಾಮ ಸ್ತವದ ಭಾವಾರ್ಥ. ||
*********************************************************************************
-೮-
|| ಶ್ರೀರಾಮ ಮಂಗಲಮ್||
[ ವಾಲ್ಮೀಕೀ ವಿರಚಿತ ಶ್ರೀಮದ್ರಾಮಾಯಣಾಂತರ್ಗತ
ಪಾರಾಯಣ- ಸಮಾಪನಾ ವಿಧಿ: ]
******************************************
ಮಂಗಲಂ ಕೋಸಲೇಂದ್ರಾಯ ಮಹನೀಯ ಗುಣಾಬ್ದಯೇ |
ಚಕ್ರವರ್ತಿ ತನೂಜಾಯ ಸಾರ್ವ ಭೌಮಾಯ ಮಂಗಲಮ್ ||೧||
ಭಾವಾರ್ಥ :-ಕೋಸಲ ದೇಶದ ಅರಸನೂ, ಮಹನೀಯನೇ, ಸದ್ಗುಣಗಳಿಗೆ ವಿಶಾಲವಾದ ಸಮುದ್ರವಾಗಿರುವವನೂ, ದಶರಥ ಚಕ್ರವರ್ತಿಯ ಮಗನೂ ಆಗಿರುವ ಶ್ರೀರಾಮನಿಗೆ ಮಂಗಲವಾಗಲಿ.
ವೇದ ವೇದಾಂತ ವೇದ್ಯಾಯ ಮೇಘ ಶ್ಯಾಮಲಮೂರ್ತಯೇ |
ಪುಂಸಾಂ ಮೋಹನರೂಪಾಯ ಪುಣ್ಯ ಶ್ಲೋಕಾಯ ಮಂಗಲಮ್ ||೨||
ಭಾವಾರ್ಥ :- ವೇದವೇದಾಂತಗಳಿಂದ ಅರಿವಾಗುವವನೂ, ಮುಗಿಲಿನ ಹಾಂಗೆ ಶ್ಯಾಮಲ ಬಣ್ಣದವನೂ, ಎಲ್ಲ ಜನರಿಗೆ ಮೋಹ ಸ್ವರೂಪದವನೂ, ಪುಣ್ಯವೇ ಕೀರ್ತಿ ಆಗಿರುವವನೂ ಆಗಿರುವ ಶ್ರೀರಾಮನಿಗೆ ಮಂಗಲವಾಗಲಿ.
ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇ |
ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಲಮ್ ||೩||
ಭಾವಾರ್ಥ :-ವಿಶ್ವಾಮಿತ್ರರಿಗೆ ಅಂತರಂಗ ಶಿಷ್ಯನಾಗಿ ಮಿಥಿಲೆಯ ಅರಸನ ಭಾಗ್ಯಕ್ಕೆ ಶೋಭೆ ಕರುಣಿಸಿದವನಾಗಿರುವ ಶ್ರೀರಾಮನಿಗೆ ಮಂಗಲವಾಗಲಿ.
ಪಿತೃ ಭಕ್ತಾಯ ಸತತಂ ಭಾತೃಭಿ: ಸಹ ಸೀತಯಾ |
ನಂದಿತಾಖಿಲಲೋಕಾಯ ರಾಮಭದ್ರಾಯ ಮಂಗಲಮ್ ||೪||
ಭಾವಾರ್ಥ :-ಸೀತಾದೇವಿ ಸಮೇತನಾಗಿ ತಮ್ಮಂದಿರ ಜೊತೆಯಲ್ಲಿ ಪಿತೃ ಭಕ್ತಿಯಲ್ಲಿ ನಿರತನಾಗಿದ್ದವನೂ, ಅಖಿಲ ಬ್ರಹ್ಮಾಂಡಕ್ಕೆ ಸಂತೋಷವನ್ನು ಕರುಣಿಸುವವನೂ ಆಗಿರುವ ಶ್ರೀರಾಮನಿಗೆ ಮಂಗಲವಾಗಲಿ.
ತ್ಯಕ್ತ ಸಾಕೇತವಾಸಾಯ ಚಿತ್ರಕೂಟವಿಹಾರಿಣೇ |
ಸೇವ್ಯಾಯ ಸರ್ವಯಮಿನಾಂ ಧೀರೋದಾರಾಯ ಮಂಗಲಮ್ ||೫||
ಭಾವಾರ್ಥ :- ಅಯೋಧ್ಯಾ ನಗರವನ್ನು ತ್ಯಜಿಸಿ ಚಿತ್ರಕೂಟದಲ್ಲಿ ವಿಹರಿಸಿದವನೂ, ಎಲ್ಲಾ ಋಷಿಗಳ ಸೇವೆಗೆ ಪಾತ್ರನಾದೋನೂ ಅಗಿರುವ ಧೀರೋಧಾರ ಮೂರ್ತಿ ಶ್ರೀರಾಮನಿಗೆ ಮಂಗಲವಾಗಲಿ.
ಸೌಮಿತ್ರಿಣಾ ಚ ಜಾನಕ್ಯಾ ಚಾಪಬಾಣಾಸಿಧಾರಿಣೇ |
ಸಂಸೇವ್ಯಾಯ ಸದಾ ಭಕ್ತ್ಯಾ ಸ್ವಾಮಿನೇ ಮಮ ಮಂಗಲಮ್ ||೬||
ಭಾವಾರ್ಥ:- ಸೀತಾಲಕ್ಷ್ಮಣರ ಜೊತೆಯಲ್ಲಿ ಬಿಲ್ಲು-ಬಾಣ-ಕತ್ತಿ ಗಳನ್ನು ಹಿಡಿದುಕೊಂಡು ಕಾಡಿನಲ್ಲಿ ಸಂಚಾರ ಮಾಡುತ್ತಾ ಯಾವಾಗಲೂ ನಮ್ಮೆಲ್ಲರ ಭಕ್ತಿಪುರಸ್ಸರ ಸೇವೆಯನ್ನು ಮಾಡಿಸಿಕೊಳ್ಳುವ ಆ ಸ್ವಾಮಿಗೆ ಮಂಗಲವಾಗಲಿ.
ದಂಡಕಾರಣ್ಯವಾಸಾಯ ಖಂಡಿತಾಮರ ಶತ್ರವೇ |
ಗೃಧ್ರರಾಜಾಯ ಭಕ್ತಾಯ ಮುಕ್ತಿದಾಯಾಸ್ತು ಮಂಗಲಮ್ ||೭||
ಭಾವಾರ್ಥ :- ದಂಡಕಾರಣ್ಯಲ್ಲಿ ವಾಸಮಾಡಿದವನೂ, ಶತೃಗಳನ್ನು ನಾಶಮಾಡಿದವನೂ, ಭಕ್ತನಾದ ಜಟಾಯುವಿಗೆ ಮುಕ್ತಿಯನ್ನು ಕರುಣಿಸಿದವನೂ, ಆಗಿರುವ ಶ್ರೀರಾಮನಿಗೆ ಮಂಗಲವಾಗಲಿ.
ಸಾದರಂ ಶಬರೀದತ್ತ ಫಲಮೂಲಾಭಿಲಾಷಿಣೇ |
ಸೌಲಭ್ಯಪರಿಪೂರ್ಣಾಯ ಸತ್ತ್ವೋದ್ರಿಕ್ತಾಯ ಮಂಗಲಮ್ ||೮||
ಭಾವಾರ್ಥ :-ಶಬರಿ ಕೊಟ್ಟ ಗಡ್ಡೆ ಗೆಣಸುಗಳನ್ನು ಸಂತೋಷದಿಂದ ಸ್ವೀಕಾರ ಮಾಡಿದವನೂ, ಸೌಲಭ್ಯಂಗಳಲ್ಲಿ ಪರಿಪೂರ್ಣನಾಗಿ ಸತ್ವಭರಿತನೂ, ಆಗಿರುವ ಶ್ರೀರಾಮನಿಗೆ ಮಂಗಲವಾಗಲಿ.
ಹನುಮತ್ಸಮವೇತಾಯ ಹರೀಷಾಭೀಷ್ಟದಾಯಿನೇ |
ವಾಲಿಪ್ರಮಥನಾಯಾಸ್ತು ಮಹಾಧೀರಾಯ ಮಂಗಲಮ್ ||೯||
ಭಾವಾರ್ಥ :-ಹನುಮಂತನ ಜೊತೆ ಸೇರಿ ಸುಗ್ರೀವನ ಆಶೆಯನ್ನು ಪೂರೈಸಿದವನೂ, ವಾಲಿಯನ್ನು ಸಂಹರಿಸಿದವನೂ, ಮಹಾಧೀರನೂ ಆದ ಶ್ರೀರಾಮನಿಗೆ ಮಂಗಲವಾಗಲಿ.
ಶ್ರೀಮತೇ ರಘುವೀರಾಯ ಸೇತೂಲ್ಲಂಘಿತಸಿಂಧವೇ |
ಜಿತರಾಕ್ಷಸರಾಜಾಯ ರಣಧೀರಾಯ ಮಂಗಲಮ್ ||೧೦||
ಭಾವಾರ್ಥ :-ಯುದ್ಧಲ್ಲಿ ಅಜೇಯನೂ, ಸೇತುವಿನ ಮೇಲಿನಿಂದಾಗಿ ಸಮುದ್ರವನ್ನು ದಾಟಿದವನೂ, ರಾಕ್ಷಸರ ದೊರೆಯೂಗಿರುವ ರಾವಣನನ್ನು ಗೆದ್ದವನೂ, ಶ್ರೀದೇವಿಯೊಡನೆ ಕೂಡಿಕೊಂಡಿರುವನೂ ಆದ ರಘುವೀರನಿಗೆ ಮಂಗಲವಾಗಲಿ.
ಆಸಾದ್ಯ ನಗರೀಂ ದಿವ್ಯಾಮಭಿಷಿಕ್ತಾಯ ಸೀತಯಾ |
ರಾಜಾಧಿರಾಜ ರಾಜಾಯ ರಾಮಭದ್ರಾಯ ಮಂಗಲಮ್ ||೧೧||
ಭಾವಾರ್ಥ :-ದಿವ್ಯ ನಗರ ಅಯೋಧ್ಯೆಯನ್ನು ಸೇರಿ ಸೀತಾಸಮೇತ ಪಟ್ಟಾಭಿಷಿಕ್ತನಾದ ರಾಜಾಧಿರಾಜ ಶ್ರೀರಾಮನಿಗೆ ಮಂಗಲವಾಗಲಿ.
ಬ್ರಹ್ಮಾಜದೇವಸೇವ್ಯಾಯ ಬ್ರಹ್ಮಣ್ಯಾಯ ಮಹಾತ್ಮನೇ |
ಜಾನಕೀ ಪ್ರಾಣನಾಥಾಯ ರಘುನಾಥಾಯ ಮಂಗಲಮ್ ||೧೨||
ಭಾವಾರ್ಥ :-ಬ್ರಹ್ಮಾದಿ ದೇವ ದೇವತೆಗಳಿಂದ ಸೇವೆ ಮಾಡಿಸಿಕೊಳ್ಳುವಂತಹಾ ಪುಣ್ಯ ಸ್ವರೂಪನೇ ಆಗಿರುವ ಮಾಹಾತ್ಮನೂ ,ಸೀತಾಕಾಂತನೂ ಆದ ರಘುಕುಲೋತ್ತಮ ಶ್ರೀರಾಮನಿಗೆ ಮಂಗಲವಾಗಲಿ.
ಮಂಗಲಾಶಾಸನಪರೈರ್ಮದಾಚಾರ್ಯಪುರೋಗಮೈ: |
ಸರ್ವೈಶ್ಚ ಪೂರ್ವೈರಾಚಾರ್ಯೈ: ಸತ್ಕೃತಾಯಾಸ್ತು ಮಂಗಲಮ್ ||೧೩||
ಭಾವಾರ್ಥ :-ಮುಂದೆ ಬರುವಂತಹಾ ಕಲ್ಯಾಣಕಾರಕ ನಿಯಮಗಳ ಪರವಾಗಿರುವ ನಮ್ಮ ಆಚಾರ್ಯ ಪರಂಪರೆಯಿಂದಲೂ, ಅವರ ಹಿಂದಿನ ಎಲ್ಲಾ ಆಚಾರ್ಯ ಪರಂಪರೆಯಿಂದಲೂ ಪೂಜಿಸಿಕೊಳ್ಳುವ ಶ್ರೀರಾಮನಿಗೆ ಮಂಗಲವಾಗಲಿ.
*********************************************************************************
||ಇತಿ ಶ್ರೀ ವಾಲ್ಮೀಕೀ ವಿರಚಿತ ಶ್ರೀಮದ್ರಾಮಾಯಣಾಂತರ್ಗತ ಪಾರಾಯಣ-ಸಮಾಪಾನಾ ವಿಧಿ:||
||ಈ ರೀತಿಯಾಗಿದೆ ಶ್ರೀ ವಾಲ್ಮೀಕೀ ಮಹರ್ಷಿಗಳವರು ರಚಿಸಿದ ಶ್ರೀಮದ್ರಾಮಾಯಣದ ಪಾರಾಯಣ ಹಾಗೂ ಪಾರಾಯಣ ಸಮಪ್ತಿಯ ವಿಧಾನ ||
********************************************************************************* || ಹರೇ ರಾಮ್ ಹರೇ ರಾಮ್ ರಾಮ ರಾಮ ಹರೇ ಹರೇ ||
*********************************************************************************
-೯-
|| ಆದಿತ್ಯ ಹೃದಯಮ್ ||
******************
ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||೧||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಷಾಗಮ್ಯಾಬ್ರವೀದ್ರಾಮಗಸ್ತ್ಯೋ ಭಗವಾನ್ ಋಷಿ: ||೨||
ಭಾವಾರ್ಥ :- ದೇವಾದಿದೇವತೆಗಳೊಂದಿಗೆ ರಾಮ ರಾವಣರ ಯುದ್ಧವನ್ನು ವೀಕ್ಷಿಸಲು ಬಂದಂತಹಾ ಅಗಸ್ತ್ಯ ಮಹಾ ಮುನಿಗಳು ಯುದ್ಧದಲ್ಲಿ ದಣಿದಿದ್ದ ಶ್ರೀರಾಮ ಮುಂದೆ ಯುದ್ಧೋತ್ಸಾಹದಿಂದ ಯುದ್ಧಸನ್ನದ್ಧನಾಗಿ ನಿಂತಿರುವ ರಾವಣನನ್ನು ನೋಡಿ ಚಿಂತಾಕ್ರಾಂತನಾಗಿದ್ದ ಶ್ರೀರಾಮನನ್ನು ನೋಡಿ ಇಂತೆಂದು ನುಡಿದರು.
ರಾಮ ರಾಮ ಮಹಾಬಾಹೋ ಶ್ರುಣು ಗುಹ್ಯಂ ಸನಾತಮನ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ||೩||
ಭಾವಾರ್ಥ :-ಹೇ! ರಾಮಾ; ಮಹಾಬಾಹುವುಳ್ಳವನೇ, ಯಾವುದರಿಂದ ನೀನು ಯುದ್ಧದಲ್ಲಿ ಎಲ್ಲ ಶತ್ರುಗಳನ್ನು ಜಯಿಸುವೆಯೋ ಆ ಶಕ್ತಿಯಲ್ಲಿಡಗಿದ ಪ್ರಾಚೀನ ರಹಸ್ಯವನ್ನು ತಿಳಿಯುವವನಾಗು.
ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮಕ್ಷಯ್ಯಂ ಪರಮಂ ಶಿವಮ್ ||೪||
ಭಾವಾರ್ಥ :-ಆದಿತ್ಯ ಹೃದಯವೆಂಬ ಈ ಪುಣ್ಯಕರವಾಗಿರುವ ಸ್ತುತಿಯನ್ನು ಪ್ರತಿದಿನವೂ ಜಪಿಸಿದರೆ ನಿನ್ನ ಎಲ್ಲಾ ಶತ್ರುಗಳೂ ವಿನಾಶ ಹೊಂದುವರು. ನಿನಗೆ ವಿಜಯ ಪ್ರಾಪ್ತವಾಗುವುದು. ಮತ್ತು ಎಂದಿಗೂ ಕೊನೆಯಿಲ್ಲದ ಉತ್ಕೃಷ್ಠವಾದ ಕಲ್ಯಾಣವಾಗುವುದು.
ಸರ್ವ ಮಂಗಲಮಾಂಗಲ್ಯಂ ಸರ್ವಪಾಪ ಪ್ರಣಾಶನಮ್ |
ಚಿಂತಾಶೋಕಪ್ರಶಮನಮಾಯುರ್ವರ್ಧನಮುತ್ತಮಮ್ ||೫||
ಭಾವಾರ್ಥ :-ಈ ಮಂತ್ರವು ಸಮಸ್ತ ಕಾರ್ಯಗಳಲ್ಲೂ ಶುಭಕರವಾಗಿ ಕಲ್ಯಾಣಕಾರಿಯಾಗಿದೆ.ಎಲ್ಲಾ ಪಾಪಗಳನ್ನು ಕಳೆಯುವಂತಹುದಾಗಿದೆ.ಸಮಸ್ತ ದು:ಖಗಳ; ಗಂಡಾಂತರಗಳ ಪರಿಹಾರದ ಹಾದಿಯಾಗಿದೆ.ಇದರ ಅನುಷ್ಟಾನದಿಂದ ಧೀರ್ಘಾಯುಷ್ಯವಂತನಾಗಬಹುದು.
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ ||೬||
ಭಾವಾರ್ಥ :-ದೇವಾಸುರರಿಂದ ನಮಸ್ಕರಿಸಲ್ಪಡುತ್ತಿರುವ; ಸ್ವಯಂಪ್ರಭೆಯಿಂದ ಕೂಡಿದ; ತನ್ನ ಪ್ರಕಾಶದಿಂದ ಇನ್ನಿತರ ಪ್ರಕಾಶಿಸುವ ವಸ್ತುಗಳನ್ನು ಕಳಾಹೀನಗೊಳಿಸುವ; ಜಗತ್ತಿಗೆ ದೊರೆಯಾದ ಉದಯರವಿಯನ್ನು ಆರಾಧಿಸು.
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿ ಭಾವನ: |
ಏಷ ದೇವಾಸುರಗಣಾನ್ ಲೋಕಾನ್ ಪಾತು ಗಭಸ್ತಿಭಿ: ||೭||
ಭಾವಾರ್ಥ :-ಆ ರವಿಯು ಎಲ್ಲಾ ದೇವತೆಗಳನ್ನು ಪ್ರತಿನಿಧೀಕರಿಸುತ್ತಾನೆ. ಅವನು ಸ್ವಯಂ ಪ್ರಭೆಯುಳ್ಳವ. ಮತ್ತು ತನ್ನ ಕಿರಣಗಳ ಮೂಲಕ ಎಲ್ಲಾ ಜೀವಗಳನ್ನು ಪೋಷಿಸುತ್ತಿರುವವನು. ಅಲ್ಲದೆ ತನ್ನ ಬಲಯುತ ಕಿರಣಗಳಿಂದ ದೇವಾಸುರರನ್ನೂ ಸಮಸ್ತ ಬ್ರಹ್ಮಾಂಡವನ್ನೂ ಕಾಪಾಡುತ್ತಿರುವವನು.
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವ: ಸ್ಕಂದ: ಪ್ರಜಾಪತಿ: |
ಮಹೇಂದ್ರೋ ಧನದ: ಕಾಲೋ ಯಮ: ಸೋಮೋ ಹ್ಯಪಾಂಪತಿ: ||೮||
ಭಾವಾರ್ಥ :- ಅವನೇ ಬ್ರಹ್ಮ;ವಿಷ್ಣು;ಸ್ಕಂದ;ಶಿವ;ಪ್ರಜಾಪತಿ; ಮತ್ತು ದೇವೇಂದ್ರ. ಅವನೇ ಕುಭೇರ; ಅವನು ಕಾಲಪುರುಷ ಯಮ. ಸೋಮ ಮತ್ತು ವರುಣನೂ ಅವನೇ ಆಗಿರುವನು.
ಪಿತರೋ ವಸವ: ಸಾಧ್ಯಾ ಹೃಶ್ವಿನೌ ಮರುತೋ ಮನು: |
ವಾಯುರ್ವಹ್ನಿ: ಪ್ರಜಾಪ್ರಾಣ ಋತುಕರ್ತಾ ಪ್ರಭಾಕರ: ||೯||
ಭಾವಾರ್ಥ :-ಪಿತೃವೂ ಅವನೇ; ಅಷ್ಟವಸುಗಳೂ ಅವನೇ ಆಗಿದ್ದಾನೆ. ಸಿದ್ಧ ಸಾಧ್ಯರೂ;ಅಶ್ವಿನೀ ದೇವತೆಗಳೂ;ಮರುದ್ಗಣಗಳೂ ಅವನೇ ಆಗಿದ್ದಾನೆ. ಅವನು ವಾಯು;ಅಗ್ನಿ; ಎಲ್ಲರ ಪ್ರಾಣಾಧಾರಶಕ್ತಿ. ಆರು ಋತುಗಳ ನಿರ್ವಾಹಕನಾಗಿರುವ ಅವನು ಪ್ರಭಾಕರನು.
ಆದಿತ್ಯ: ಸವಿತಾ ಸೂರ್ಯ: ಖಗ: ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರ: ||೧೦||
ಭಾವಾರ್ಥ :- ಅವನು ಅದಿತಿಪುತ್ರನು; ವಿಶ್ವಕರ್ತನು,ಕ್ರಿಯೆಗಳಿಗೆ ಉತ್ತೇಜಕಾರಕನು; ಆಕಾಶದಲ್ಲಿ ಸಂಚಾರಮಾಡುತ್ತಾ ಸಮಸ್ತ ದಿಶೆಗಳನ್ನೂ ಬೆಳಗುವಂತಹವನು.ಬಂಗಾರದ ಕಾಂತಿಯುಳ್ಳವನು.ಬ್ರಹ್ಮಾಂಡದ ಉತ್ಪತ್ತಿಯ ಮೂಲನೂ ;ಹಗಲಿನ ಅಧಿಪತಿಯೂ ಆಗಿರುವನು.
ಹರಿದಶ್ವ: ಸಹಸ್ರಾರ್ಚಿ: ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್ಮಥನ: ಶಂಭುಸ್ತ್ವಷ್ಟಾಮಾರ್ತಾಂಡ ಅಂಶುಮಾನ್ ||೧೧||
ಭಾವಾರ್ಥ :-ಅವನು ಹಸಿರು ಕುದುರೆಗಳನ್ನು ಹೊಂದಿದ ಸರ್ವ ವ್ಯಾಪೀ ಅಸಂಖ್ಯ ಕಿರಣಗಳ ಪ್ರಭಾಕರನು. ಸಪ್ತಾಶ್ವಾರೂಢನಾಗಿದ್ದು ಬ್ರಹ್ಮನ ಮಾನಸಪುತ್ರನೇ ಆಗಿರುವನು. ಜಗತ್ತಿನ ಅಂಧಕಾರವನ್ನು ತೊಲಗಿಸುವವನು.ಭಕ್ತರ ಅಶುಭಗಳನ್ನು ನಿವಾರಿಸುವವನು. ನಿರ್ಜೀವ ಜಗತ್ತಿಗೆ ಪ್ರಾಣದಾಯಕನು.ಮತ್ತು ತೇಜೋದಾಯಕನು.
ಹಿರಣ್ಯಗರ್ಭ: ಶಿಶಿರಸ್ತಪನೋ ಭಾಸ್ಕರೋ ರವಿ: |
ಅಗ್ನಿಗರ್ಭೋದಿತೇ: ಪುತ್ರ: ಶಂಖ: ಶಿಶಿರ ನಾಶನ: ||೧೨||
ಭಾವಾರ್ಥ :-ಅವನು ಹಿರಣ್ಯಗರ್ಭನು,ಶೀತವನ್ನು ಹೋಗಲಾಡಿಸುವವನು;ಉಜ್ವಲ ಪ್ರಭೆಯಿಂದ ಕೂಡಿದ ಭಾಸ್ಕರನು;ಅಂತರ್ಯದೊಳಗೆ ಅಗ್ನಿಯನ್ನು ಧರಿಸಿದ ಅದಿತಿ ಪುತ್ರನೇ ಅವನು. ಜಗತ್ತಿಗೆ ಕಲ್ಯಾಣದಾಯಕನೂ ,ಜಡತ್ವ ನಾಶಕನೂ ಆಗಿರುವಂತಹವನು.
ವ್ಯೋಮನಾಥಸ್ತಮೋಭೇದೀ ಋಗ್ಯಜುಸ್ಸಾಮಪಾರಗ: |
ಘನವೃಷ್ಟಿರಪಾಂಮಿತ್ರೋ ವಿಂಧ್ಯವೀಥೀಪ್ಲವಂಗಮ: ||೧೩||
ಭಾವಾರ್ಥ :-ಆತನು ಆಕಾಶಕ್ಕೆ ದೊರೆಯಾಗಿರುವವನು.ಅಜ್ಞಾನವೆಂಬ ಕತ್ತಲಿನ ನಿವಾರಕನು; ಋಗ್ವೇದಾದಿಗಳಲ್ಲಿ ಪಾರಂಗತನು; ಮಳೆಯನ್ನು ಸುರಿಸುವವನು; ನೀರಿನ ಸ್ನೇಹಿತನು; ವಿಂಧ್ಯ ಪರ್ವತವನ್ನು ದಾಟಿದವನು.
ಆತಪೀ ಮಂಡಲೀ ಮೃತ್ಯು: ಪಿಂಗಲ: ಸರ್ವತಾಪನ: |
ಕವಿರ್ವಿಶ್ವೋ ಮಹಾತೇಜಾ ರಕ್ತ: ಸರ್ವಭವೋದ್ಭವ: ||೧೪||
ಭಾವಾರ್ಥ :-ಆತನು ಯಾವಾಗಲೂ ಸೃಷ್ಟಿಕಾರ್ಯದಲ್ಲಿ ನಿರತನಾಗಿದ್ದಾನೆ.[= ಬ್ರಹ್ಮ]; ಆತನು ಮಂಡಲಾಕಾರಿಯು[=ಕೌಸ್ತುಭ ಧಾರಿಯಾದ ವಿಷ್ಣು]ಮತ್ತು ಎಲ್ಲವನ್ನೂ ನಾಶಗೊಳಿಸುವವ[=ಶಿವ]; ಆತನು ಪಿಂಗಳ ವರ್ಣನು;[=ಉದಯ ಸೂರ್ಯ], ಎಲ್ಲವನ್ನೂ ಸುಡುವವನು.ಅವನೇ ವಿಶ್ವರೂಪನಾದ ರವಿಯು; ಮಹಾ ತೇಜೋವಂತನು;ಸಕಲರಿಗೂ ಪ್ರಿಯನಾದವನು;ಹಾಗೂ ಎಲ್ಲಾಕ್ರಿಯೆಗಳಿಗೂ ಕಾರಣನು.
ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನ: |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ನಮೋಸ್ತೇ ||೧೫||
ಭಾವಾರ್ಥ:- ಗ್ರಹ, ನಕ್ಷತ್ರ, ತಾರಾಗಣಗಳ ಅಧಿಪತಿಯು ಆತನೇ ಆಗಿದ್ದಾನೆ.ಬ್ರಹ್ಮಾಂಡದಲ್ಲಿರುವ ಎಲ್ಲಾ ಚರಾಚರ ವಸ್ತುಗಳಿಗೆ ಆತನೇ ಆದಿ ಪುರುಷ. ಎಲ್ಲಾ ಸತ್ವ ಗುಣಗಳಿಗೂ ಅವನೇ ಮೂಲಬಿಂದು. ದ್ವಾದಶಮೂರ್ತಿ ಸ್ವರೂಪದಲ್ಲಿ ಆವಿರ್ಭವಿಸಿರುವ ಉದಯರವಿಯೇ! ನಿನಗೆ ನನ್ನ ನಮಸ್ಕಾರಗಳು.
ನಮ: ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮ: |
ಜ್ಯೋತಿರ್ಗಣಾನಾಂ ಪತಯೇ ದಿನಾದಿಪತಯೇ ನಮ: ||೧೬||
ಭಾವಾರ್ಥ:-ಪೂರ್ವಾಚಲ ದೇವತೇಯೇ ನಿನಗೆ ನನ್ನ ನಮಸ್ಕಾರ.ಪಶ್ಚಿಮಾಚಲ ದೇವತೆಯೇ ನಿನಗೆ ನನ್ನ ನಮಸ್ಕಾರ.ಜ್ಯೋತಿರ್ಗಣಗಳಿಗೆ ದೊರೆಯೂ ಹಗಲಿನ ಅಧಿಪತಿಯೂ ಆಗಿರುವ ಆದಿತ್ಯನೇ ನಿನಗೆ ನನ್ನ ನಮಸ್ಕಾರಗಳು.
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋನಮ: |
ನಮೋ ನಮ: ಸಹಸ್ರಾಂಶೋ ಆದಿತ್ಯಾಯ ನಮೋ ನಮ: ||೧೭||
ಭಾವಾರ್ಥ :-ಮನೋಹರನೂ ಜಯವನ್ನುಂಟು ಮಾಡುವವನೂ ಐಶ್ವರ್ಯಪ್ರದಾತನೂ ಅರಸಿನವರ್ಣದ ಕುದುರೆಯನ್ನು ಹೊಂದಿದವನೂ ಅಗಿರುವವಗೆ ನನ್ನ ನಮಸ್ಕಾರಗಳು.ಅಸಂಖ್ಯಾತ ಕಿರಣಗಳನ್ನು ಹೊಂದಿರುವ ಆದಿತ್ಯನಿಗೆ ನನ್ನ ನಮಸ್ಕಾರಗಳು.
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮ: |
ನಮ: ಪದ್ಮ ಪ್ರಭೋಧಾಯ ಮಾರ್ತಾಂಡಾಯ ನಮೋ ನಮ: ||೧೮||
ಭಾವಾರ್ಥ :- ಉಗ್ರನೂ ವೀರನೂ ಸಿಂಹ ಸ್ವರೂಪನಾಗಿ ವೇಗವಾದ ಚಲನೆಯುಳ್ಳವನೂ ತಾವರೆಯ ಅರಳುವಿಕೆಗೆ ಕಾರಣನೂ ಆತ್ಮಕಾರಕ ರವಿಯೂ ಆಗಿರುವ ನಿನಗೆ ನನ್ನ ನಮಸ್ಕಾರಗಳು.
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮ: ||೧೯||
ಭಾವಾರ್ಥ :- ಬ್ರಹ್ಮ ಶಿವ ವಿಷ್ಣುಶಕ್ತಿಗಳ ಒಡೆಯನಾಗಿರುವ ಸೂರ್ಯನಿಗೂ; ಸಮಸ್ತಲೋಕವನ್ನು ಬೆಳಗಿಸುವ ಹಾಗೂ ಕಾಲವನ್ನು ಭಕ್ಷಿಸುವ ಆದಿತ್ಯನ ಪ್ರಭಾಶಕ್ತಿಗೂ; ಭೀಕರದೇಹದವನೂ ಆಗಿರುವವಗೆ ನಮಸ್ಕಾರಗಳು.
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮ: ||೨೦||
ಭಾವರ್ಥ :- ಕತ್ತಲೆಯನಾಶಕನೂ, ಶೀತನಾಶಕನೂ, ಶತ್ರು ನಾಶಕನೂ,ಸೀಮಾತೀತನೂ, ಕೃತಘ್ನರನ್ನು, ನಾಶಗೊಳಿಸುವವನೂ; ದೇವರಿಗೂ,ಬೆಳಕಿಗೂ ಒಡೆಯನಾದವನಿಗೂ ನನ್ನ ನಮಸ್ಕಾರಗಳು.
ತಪ್ತಚಾಮೀಕರಾಭಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಸ್ನಿಘ್ನಾಯ ರುಚಯೇ ಲೋಕಸಾಕ್ಷಿಣೇ ||೨೧||
ಭಾವಾರ್ಥ :-ಪುಟಕ್ಕಿಟ್ಟ ಬಂಗಾರದಂತೆ ಬೆಳಗುತ್ತಿರುವವಗೂ ,ಅಗ್ನಿ ಸ್ವರೂಪಗೂ, ವಿಶ್ವಕರ್ಮನಿಗೂ, ಅಂಧಕಾರವನ್ನು ಹೋಗಲಾಡಿಸುವವಗೂ, ಸಮಸ್ತ ಭೂಮಂಡಲವನ್ನು ಕಣ್ಣಾರೆ ಕಾಣುವ ಜ್ಯೋತಿರ್ಮಯ ಸ್ವರೂಪನಿಗೂ ನಮಸ್ಕಾರಗಳು.
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭು: |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿ: ||೨೨||
ಭಾವಾರ್ಥ :-ಸಮಸ್ತವನ್ನೂ ನಾಶ ಮಾಡುವವನೂ ಪುನಹಾ ಸೃಷ್ಟಿ ಮಾಡುವವನೂ ಅವನೇ ಆಗಿರುತ್ತಾನೆ. ಅವನೇ ತನ್ನ ಪ್ರಭಾಶಕ್ತಿಯಿಂದ ನೀರನ್ನು ತನ್ನತ್ತ ಸೆಳೆದುಕೊಂಡು ,ಮತ್ತದನ್ನು ಬಿಸಿಯಾಗಿಸಿ ಮುಗಿಲಾಗಿ ಪರಿವರ್ತಿಸಿ ಮಳೆಯ ರೂಪದಲ್ಲಿ ಸುರಿಸುತ್ತಿರುವವನು.
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತ: |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ ||೨೩||
ಭಾವಾಥ :-ಆತನು ಎಲ್ಲರ ಹೃದಯಲ್ಲಿ ವಾಸಮಾಡುತ್ತಿದ್ದು ಎಲ್ಲರೂ ನಿದ್ರಿಸುವಾಗ ಆತನು ಎಚ್ಚರಿರುತ್ತಾನೆ. ಅವನು ಯಜ್ಞಾಗ್ನಿಗೆ ಅರ್ಘ್ಯ ಪ್ರಧಾನ ಮಾಡುವವನೂ,ಯಜ್ಞಾಗ್ನಿಯನ್ನು ಕಾಪಾಡುವವವಗೆ ದೊರಕುವ ಫಲವೂ ಆಗಿದ್ದಾನೆ.
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿ: ಪ್ರಭು: ||೨೪||
ಭಾವಾರ್ಥ :-ಆತನು ವೇದಗಳಲ್ಲಿ ಇರುವವನು. ಸಮಸ್ತ ಕಾರ್ಯಗಳೂ ಹಾಗೂ ಅವುಗಳ ಫಲಸ್ವರೂಪನೂ ಆಗಿರುವನು.ವಿಶ್ವದಲ್ಲಿ ಜರಗುವ ಸಮಸ್ತ ಕ್ರಿಯೆಗಳಿಗೂ ಆತ ಒಡೆಯನೂ ಆಗಿರುವನು.
|| ಫಲ ಶ್ರುತಿ: ||
ಏವಮಾಪತ್ಸು ಕೃಚ್ಛ್ರೇಷು ಕಾಂತರೇಷು ಭಯೇಷು ಚ |
ಕೀರ್ತಯನ್ ಪುರುಷ: ಕಶ್ಚಿನ್ನಾವಸೀದತಿ ರಾಘವ ||೨೫||
ಭಾವಾರ್ಥ :- ಹೇ! ರಾಘವನೇ,ಕಷ್ಟದ ಪರಿಸ್ಥಿತಿಯಲ್ಲಿ, ಸಂಕಷ್ಟದ ಸಮಯದಲ್ಲಿ,ಅರಣ್ಯದ ನಡುವೆ ಸಿಲುಕಿಕೊಂಡು ಭೀತಿಗೊಳಪಟ್ಟಾಗ, ಮಾನವನು ಈ ಸ್ತೋತ್ರವನ್ನು ಪಾರಾಯಣ ಮಾಡಿದರೆ ಆತನು ದು:ಖಪೀಡಿತನಾಗಲಾರನು.
ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ ||೨೬||
ಭಾವಾರ್ಥ :- ಎಲೈ ರಾಘವನೇ, ದೇವದೇವೋತ್ತಮನಾದ ಜಗತ್ತಿಗೆ ಒಡೆಯನಾದ ಸೂರ್ಯನ್ನು ಈ ಮಂತ್ರ ಮುಖೇನ ಉಪಾಸಿಸು. ಮೂರು ಬಾರಿ ಇದನ್ನು ಜಪಿಸಿದಲ್ಲಿ ಯುದ್ಧದಲ್ಲಿ ನಿನಗೆ ಗೆಲುವು ಖಂಡಿತ.
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾತದಾಗಸ್ತ್ಯೋ ಜಗಾಮ ಚ ಯಥಾಗತಮ್ ||೨೭||
ಭಾವಾರ್ಥ :-ಹೇ ಮಹಾಬಾಹುವೇ, ತತ್ಕ್ಷಣವೇ ನೀನು ರಾವಣನನ್ನು ಕೊಲ್ಲಲು ಶಕ್ತನಾಗುವಿ ಎಂದು ತಿಳಿಹೇಳಿದ ಅಗಸ್ತ್ಯನು ಎಲ್ಲಿಂದ ಆಗಮಿಸಿದ್ದನೋ ಅಲ್ಲಿಗೆ ತೆರಳಿದನು.
ಏತಚ್ಛ್ರುತ್ವಾ ಮಹಾತೇಜಾ ನಷ್ಟ ಶೋಕೋಸ್ವತ್ತದಾ |
ಧಾರಯಾಮಾಸ ಸುಪ್ರೀತೋ ರಾಘವ: ಪ್ರಯತಾತ್ಮವಾನ್ ||೨೮||
ಭಾವಾರ್ಥ :-ಅಗಸ್ತ್ಯನ ಈ ನುಡಿಗಳನ್ನು ಆಲಿಸಿ ಮಹಾತೇಜಸ್ವೀಯಾದ ರಾಘವನು ಚಿಂತಾರಹಿತನಾದನು. ಪುನ: ಸುಧಾರಿಸಿಕೊಂಡು ಅತಿ ಉತ್ಸಾಹವನಾಂತು ಸಂತೋಷಭರಿತನಾದನು.
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||೨೯||
ಭಾವಾರ್ಥ :-ತದನಂತರ ರಾಘವನು ಆದಿತ್ಯನನ್ನೇ ನೋಡುತ್ತಾ ಜಪವನ್ನು ಮಾಡಿ ಹರ್ಷ ಪುಲಕಿತನಾದನು. ಮೂರುಬಾರಿ ಆಚಮನ ಮಾಡಿ ಶುಚಿರ್ಭೂತನಾದ ಶ್ರೀರಾಮನು ಸತ್ವಭರಿತನಾಗಿ ಧನುಸ್ಸನ್ನು ಎತ್ತಿ ಹಿಡಿದನು.
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಸ್ವತ್ ||೩೦||
ಭಾವಾರ್ಥ :- ರಾವಣನನ್ನು ನೋಡಿ ಸಂತುಷ್ಟನಾದ ರಾಘವನು ಯುದ್ಧಕ್ಕೆ ಮುಂದೆ ಬಂದು ಅವನನ್ನು ವಧಿಸುವ ನಿಶ್ಚಯದಿಂದ ಆ ದಿಸೆಯಲ್ಲಿ ಸರ್ವ ಪ್ರಯತ್ನವನ್ನು ಮಾಡತೊಡಗಿದನು.
ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಾಮನಾ: ಪರಮಂ ಪ್ರಹೃಷ್ಯಮಾಣ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||೩೧||
ಭಾವಾರ್ಥ :-ರಾಕ್ಷಸಾಧಿಪನ ಅಂತ್ಯವು ಸನ್ನಿಹಿತವಾಗಿರುವುದನ್ನು ಅರಿತವನಾದ ದೇವಗಣ ಮಧ್ಯದಲ್ಲಿದ್ದ ಆದಿತ್ಯನು ಆನಂದಭರಿತನಾಗಿ ರಾಮನನ್ನು ವೀಕ್ಷಿಸುತ್ತಾ " ಬೇಗ ಬೇಗ "ಎಂದು ರಾಮನನ್ನು ಪ್ರೋತ್ಸಾಹಿಸಿದನು.
*********************************************************************************
|| ಇತಿ ಶ್ರೀ ಅಗಸ್ತ್ಯ ಪ್ರೋಕ್ತ ಆದಿತ್ಯ ಹೃದಯಂ||
||ಈ ರೀತಿಯಾಗಿ ಶ್ರೀ ಅಗಸ್ತ್ಯ ಮಹಾಮುನಿಗಳವರಿಂದ ಪ್ರಕಟಿಸಲ್ಪಟ್ಟ ಆದಿತ್ಯ ಹೃದಯ ಮಂತ್ರದ ಭಾವಾರ್ಥವು ||
*********************************************************************************
- ೧೦-
||ಶ್ರೀ ರಾಮ ರಕ್ಷಾ ಸ್ತೋತ್ರಮ್||
*************************
ಶ್ರೀ ಗಣೇಶಾಯ ನಮ:||
ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ |
ಬುಧ ಕೌಶಿಕ ಋಷಿ:| ಅನುಷ್ಟುಪ್ ಛಂಧ: |
ಶ್ರೀ ಸೀತಾರಾಮಚಂದ್ರೋ ದೇವತಾ |
ಸೀತಾ ಶಕ್ತಿ: |ಶ್ರೀಮದ್ಧನುಮಾನ್ ಕೀಲಕಂ |
ಶ್ರೀರಾಮಚಂದ್ರ ಪ್ರೀತ್ಯರ್ಥೇ ಜಪೇ ವಿನಿಯೋಗ: ||೧||
ಭಾವಾರ್ಥ :-ಪ್ರತಿಯೊಂದು ಮಂತ್ರಕ್ಕೂ ಋಷಿ,ದೇವತೆ,ಛಂದಸ್ಸು,ಶಕ್ತಿ,ಕೀಲಕ ಹಾಗೂ ವಿನಿಯೋಗಗಳಿವೆ. ಅದೇ ರೀತಿ ಬುಧ ಕೌಶಿಕ ಋಷಿ ಈ ಮಂತ್ರದ ಋಷಿ.ಇದು ಅನುಷ್ಟುಪ್ ಛಂದಸ್ಸಿನಲ್ಲಿದೆ.ಶ್ರೀ ಸೀತಾರಾಮಚಂದ್ರ ಇದರ ಅನುಷ್ಟಾನ ದೇವತೆ.ಸೀತೆ ಮಂತ್ರ ಶಕ್ತಿ.ಹನುಮಂತ ಇದರ ಕೀಲಕ. ಶ್ರೀರಾಮಚಂದ್ರನ ವಿಶೇಷ ಕೃಪಾಪಾತ್ರರಾಗಲು ಹಾದಿಯಾಗಿರುವ ಈ ರಾಮರಕ್ಷಾ ಸ್ತೋತ್ರ ಪಾರಾಯಣಕ್ಕಾಗಿ ಬಳಸಿ ಕೊಳ್ಳುತ್ತಿದ್ದೇನೆ.
||ಅಥ ಧ್ಯಾನಮ್||
||ಧ್ಯಾನ ಮಂತ್ರ||
ಧ್ಯಾಯೇಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ |
ಪೀತಂ ವಾಸೋ ವಸಾನಂ ನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ |
ವಾಮಾಂಕಾರೂಢಸೀತಾ ಮುಖಕಮಲಮಿಲಲ್ಲೋಚನಂ ನೀರದಾಭಂ |
ನಾನಾಲಂಕಾರದೀಪ್ತಂ ದಧತಮುರುಜಟಾಮಂಡಲಂ ರಾಮಚಂದ್ರಮ್ ||೨||
ಭಾವಾರ್ಥ :-ಜಟಾಧಾರಿಯೂ ಕೈಗಳಲ್ಲಿ ಧನುರ್ಬಾಣಗಳನ್ನು ಹಿಡಿದವನಾಗಿ, ಪೀತವಸನವನ್ನು ಧರಿಸಿದವನಾಗಿ, ಬದ್ಧಪದ್ಮಾಸನದಲ್ಲಿ ವಿರಾಜಸುತ್ತಾ ಕುಳಿತುಕೊಂಡಿರುವ,ತೇಜೋಭರಿತ ಕಣ್ಣುಗಳನ್ನು ಹೊಂದಿರುವ,ಪ್ರಸನ್ನ ಮುಖಮುದ್ರೆಯವನಾಗಿ,ತನ್ನ ಎಡತೊಡೆಯಮೇಲೆ ಮನದನ್ನೆ ಸೀತಾದೇವಿಯನ್ನು ಕುಳ್ಳಿರಿಸಿಕೊಂಡು ಆಕೆಯ ಮುಖಕಮಲದತ್ತ ಒಲವಿನ ದೃಷ್ಟಿಯನ್ನು ಹರಿಸುತ್ತಿರುವ,ಮುಗಿಲಿನಂತೆ ಕಾಂತಿಯುಕ್ತನೂ,ವಿಶಾಲವಾದ ಜಡೆಗಟ್ಟಿದ ಜುಟ್ಟನ್ನೂ ಹೊಂದಿರುವ, ನಾನಾಲಂಕಾರಗಳಿಂದ ಭೂಷಿತನಾಗಿರುವವನೂ,ಮೊಣಕಾಲುಗಳನ್ನು ಸ್ಪರ್ಷಿಸುವ ಭುಜಗಳನ್ನು ಹೊಂದಿರುವಂತಹವನೂ ಆಗಿರುವ ಶ್ರೀರಾಮಚಂದ್ರನನ್ನು ನಾನು ಧ್ಯಾನಿಸುತ್ತೇನೆ.
ಚರಿತಂ ರಘುನಾಥಸ್ಯಶತಕೋಟಿ ಪ್ರವಿಸ್ತರಮ್ |
ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್ ||೩||
ಭಾವಾರ್ಥ :-ಶ್ರೀರಾಮಚರಿತೆಯು ಬಹಳ ವಿಸ್ತಾರವಾಗಿದ್ದ್ದು ನೂರು ಕೋಟಿ ಶ್ಲೋಕಗಳಿಂದಲೂ ವಿವರಿಸಲು ಅಸಾಧ್ಯವಾಗಿರುವಷ್ಟು ಮಹಾಮಹಿಮ ಶ್ರೀರಾಮನ ಚರಿತೆಯು ಹರಡಿಕೊಂಡಿದೆ.ಆ ಮಹಾಚರಿತ್ರೆಯು ಒಂದೊಂದೂ ಅಕ್ಷರವನ್ನು ಓದುವುದರಿಂದ ಮಾನವನ ಮಹಾಪಾತಕಗಳೆಲ್ಲವೂ ನಾಶವಾಗುತ್ತವೆ.ರಾಮಚರಿತ್ರೆಯ ಪ್ರತೀ ಅಕ್ಷರವು ಮಂತ್ರಮಯವಾಗಿದ್ದು ಪುಣ್ಯಪ್ರದಾಯಕವಾಗಿದೆ.
ಧ್ಯಾತ್ವಾ ನೀಲೋತ್ಪಲ ಶ್ಯಾಮಂ ರಾಮಂ ರಾಜೀವಲೋಚನಮ್ |
ಜಾನಕೀಲಕ್ಷ್ಮಣೋಪೇತಂ ಜಟಾಮುಕುಟ ಮಂಡಿತಮ್ ||೪||
ಭಾವಾರ್ಥ :-ಶ್ರೀರಾಮಚಂದ್ರನ ಶರೀರವು ನೀಲಿಕಮಲದಂತಿದೆ.ಆತನು ತಾವರೆಯ ದಳಗಳನ್ನು ಹೋಲುವ ಕಣ್ಣುಗಳನ್ನು ಹೊಂದಿದ್ದಾನೆ.ಸೀತಾ ಲಕ್ಷ್ಮಣರು ಆತನ ಸಹಚರರು.ಕಿರೀಟದಂತೆ ಆತನ ಜಡೆಯು ಶೋಭಿಸುತ್ತಿದೆ.
ಸಾಸಿತೂಣಧನುರ್ಬಾಣಪಾಣಿಂನಕ್ತಂ ಚರಾಂತಕಮ್ |
ಸ್ವಲೀಲಯಾ ಜಗತ್ರಾತುಮಾವಿರ್ಭೂತಮಜಂ ವಿಭುಮ್ ||೫||
ಭಾವಾರ್ಥ :-ರಾಕ್ಷಸರ ವಿನಾಶಕ್ಕಾಗಿ ಆತನು ಕೈಗಳಲ್ಲಿ ಖಡ್ಗ,ಬಿಲ್ಲು,ಬಾಣಗಳಿದ ತುಂಬಿರುವ ಬತ್ತಳಿಕೆಯನ್ನು ಹಿಡಿದಿರುವನು.ದುಷ್ಟ ಸಂಹಾರ,ಶಿಷ್ಟಪರಿಪಾಲನೆಗಾಗಿ ತನ್ನ ಲೀಲೆಯಿಂದ ಜನ್ಮವೆತ್ತಿ ಸೀತಾಲಕ್ಷ್ಮಣರೊಡಗೂಡಿದವನು. ಅಂತಹಾ ಪ್ರಭುರಾಮಚಂದ್ರನ ಧ್ಯಾನದಲ್ಲಿ ಮಗ್ನನಾಗುವ ಸಲುವಾಗಿ ಶ್ರೀರಾಮರಕ್ಷಾಸ್ತೋತ್ರ ಪಾರಾಯಣದಿಂದ ಮಾನವ ಮಾತ್ರನ ಪಾಪರಾಶಿಗಳೆಲ್ಲವೂ ನಾಶವಾಗಿ ಆತನ ಸಕಲಾಭಿಷ್ಟಗಳು ಈಡೇರುವುದು ಶತಸಿದ್ಧ.
ರಾಮರಕ್ಷಾಂ ಪಠೇತ್ಪ್ರಾಜ್ಞ: ಪಾಪಘ್ನೀಂ ಸರ್ವಕಾಮದಾಮ್ |
ಶಿರೋಮೇ ರಾಘವ: ಪಾತು ಭಾಲಂ ದಶರಥಾತ್ಮಜ: ||೬||
ಭಾವಾರ್ಥ :-ರಘುಕುಲೋತ್ತಮನಾದ ಆ ಶ್ರೀರಾಮನು ತಲೆಯನ್ನು ರಕ್ಷಿಸಿ ನನ್ನ ಚಿತ್ತವನ್ನು ಸದಾ ಎಚ್ಚರಿಸಲಿ. ದಶರಥತನಯನು ಹಣೆಯನ್ನು ರಕ್ಷಿಸಿ ಬುದ್ಧಿಯನ್ನು ಪ್ರಚೋಧಿಸಲಿ.
ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರ ಪ್ರಿಯ: ಶ್ರುತೀ |
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿ ವತ್ಸಲ: ||೭||
ಭಾವಾರ್ಥ :-ಕೌಸಲ್ಯಾಸುತನಾದ ಶ್ರೀರಾಮನು ನನ್ನ ಕಣ್ಣುಗಳನ್ನೂ, ವಿಶ್ವಾಮಿತ್ರಪ್ರೀತಿಪಾತ್ರನಾದ ರಾಮನು ನನ್ನ ಕಿವಿಗಳನ್ನೂ,ಯಜ್ಞರಕ್ಷಕನಾದ ರಾಘವನು ನನ್ನ ಮೂಗನ್ನೂ, ಲಕ್ಷ್ಮಣನಿಗೆ ಸಖನಾದ ರಘುವರನು ನನ್ನ ಮುಖವನ್ನೂ ರಕ್ಷಿಸಲಿ.
ಜಿಹ್ವಾಂ ವಿದ್ಯಾನಿಧಿ: ಪಾತು ಕಂಠಂ ಭರತವಂದಿತ: |
ಸ್ಕಂಧೌ ದಿವ್ಯಾಯುಧ: ಪಾತು ಭುಜೌ ಭಗ್ನೇಶ ಕಾರ್ಮುಕ: ||೮||
ಭಾವಾರ್ಥ :-ವಿದ್ಯಾನಿಧಿಯಾಗಿರುವ ರಾಮನು ನನ್ನ ನಾಲಿಗೆಯನ್ನೂ,ಭರತನಿಂದ ನಮಸ್ಕರಿಸಲ್ಪಡುತ್ತಿರುವ ರಾಮನು ನನ್ನ ಕಂಠವನ್ನೂ,ದಿವ್ಯಾಯುಧಪಾಣಿಯಾದ ರಾಮನು ನನ್ನ ಹೆಗಲನ್ನೂ,ಶಿವಧನುಸ್ಸನ್ನು ತುಂಡರಿಸಿದ ಪರಾಕ್ರಮಶಾಲಿ ರಾಮನು ನನ್ನ ಭುಜಗಳನ್ನೂ ರಕ್ಷಿಸಲಿ.
ಕರೌಸೀತಾಪತಿ: ಪಾತು ಹೃದಯಂ ಜಾಮದಗ್ನ್ಯ ಜಿತ್ |
ಮಧ್ಯಂ ಪಾತು ಖರ ಧ್ವಂಸೀ ನಾಭಿಂ ಜಾಂಬವದಾಶ್ರಯ: ||೯||
ಭಾವಾರ್ಥ :-ಸೀತಾಕಾಂತನು ನನ್ನ ಕೈಗಳನ್ನೂ,ಪರಶುರಾಮನನ್ನು ಗೆದ್ದ ರಾಮನು ನನ್ನ ಹೃದಯವನ್ನೂ,ಖರನೆಂಬ ಅಸುರನನ್ನು ಸಂಹರಿಸಿದ ಶ್ರೀರಾಮನು ನನ್ನ ಶರೀರದ ಮೇಲ್ಭಾಗವನ್ನೂ,ಜಾಂಬವಂತನಿಗೆ ಆಶ್ರಯದಾತನಾದ ರಾಮನು ನನ್ನ ನಾಭಿಯನ್ನೂ ರಕ್ಷಿಸಲಿ.
ಸುಗ್ರೀವೇಶ: ಕಟೀ ಪಾತು ಸಕ್ಥಿನೀ ಹನುಮತ್ಪ್ರಭು: |
ಊರೂ ರಘೂತ್ತಮ: ಪಾತು ರಕ್ಷ: ಕುಲವಿನಾಶ ಕೃತ್ ||೧೦||
ಭಾವಾರ್ಥ :-ಸುಗ್ರೀವನ ಒಡೆಯನಾದ ರಾಮನು ನನ್ನ ಸೊಂಟವನ್ನೂ,ಆಂಜನೇಯನ ಪ್ರಭುವಾಗಿರುವ ರಾಮನು ನನ್ನ ತೊಡೆಯ ಮೇಲ್ಭಾಗವನ್ನೂ,ರಾಕ್ಷಸಾಂತಕ ರಘುಕುಲ ಶ್ರೇಷ್ಟ ಶ್ರೀರಾಮನು ನನ್ನ ತೊಡೆಗಳನ್ನೂ ರಕ್ಷಿಸಲಿ.
ಜಾನುನೀ ಸೇತುಕೃತ್ ಪಾತು ಜಂಘೇ ದಶ ಮುಖಾಂತಕ: |
ಪಾದೌ ವಿಭೀಷಣಶ್ರೀದ: ಪಾತು ರಾಮೋಸ್ಖಿಲಂ ವಪು: ||೧೧||
ಭಾವಾರ್ಥ :-ಸಾಗರಕ್ಕೆ ಸೇತುವೆಯನ್ನು ಕಟ್ಟಿಸಿದ ರಾಮನು ನನ್ನ ಮೊಣಕಾಲು ಗಂಟುಗಳನ್ನೂ, ರಾವಣನನ್ನು ಸಂಹಾರಗೈದ ರಾಮನು ನನ್ನ ಮೊಣಕಾಲುಗಳನ್ನೂ, ವಿಭೀಷಣನಿಗೆ ಅನುಗ್ರಹಿಸಿದ ಶ್ರೀರಾಮನು ನನ್ನ ಪಾದಗಳನ್ನೂ, ಸರ್ವ ಶಕ್ತನಾದ ರಾಘವನು ನನ್ನ ಅಡಿಯಿಂದ ಮುಡಿಯ ತನಕದ ಸರ್ವಾಂಗಗಳನ್ನೂ ರಕ್ಷಿಸಲಿ.
ಏತಾಂ ರಾಮಬಲೋಪೇತಾಂ ರಕ್ಷಾಂ ಯ: ಸುಕೃತೀ ಪಠೇತ್ |
ಸ ಚಿರಾಯು: ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ ||೧೨||
ಭಾವಾರ್ಥ :-ಶ್ರೀರಾಮನಮಹಿಮೆಯನ್ನು ನೆನೆಯುತ್ತಾ ಶರೀರದ ಅಂಗಾಂಗಗಳಲ್ಲಿ ರಾಮನ ಕೃಪೆಯೇ ಮೈದಳೆಯುವಂತೆ ಈ ರಾಮರಕ್ಷಾ ಸ್ತೋತ್ರವನ್ನು ಪಾರಾಯಣ ಗೈವಾತಂಗೆ ಧೀರ್ಘಾಯುಸ್ಸು,ಸುಖ,ಆರೋಗ್ಯಾದಿ ಭಾಗ್ಯಗಳು ಪ್ರಾಪ್ತವಾಗಿ ಆತನು ಪುಣ್ಯಶಾಲಿಯಾಗಿ ಜಯ ಶಾಲಿಯಾಗಿ, ವಿನಯವಂತನಾಗಿ ಸರ್ವ ಸಮರ್ಥನಾಗಿ ಪತ್ನೀ ಪುತ್ರಾದಿಗಳೊಂದಿಗೆ ಬಹುಕಾಲ ಬಾಳುವನು.
ಪಾತಾಲ ಭೂತಲ ವ್ಯೋಮ ಚಾರಿಣಶ್ಛದ್ಮ ಚಾರಿಣ: |
ನ ದೃಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮ ನಾಮಭಿ: ||೧೩||
ಭಾವಾರ್ಥ :-ಭೂಮ್ಯಾಕಾಶ ಪಾತಾಲಗಳಲ್ಲಿ ಸಂಚರಿಸುವ ಸಕಲ ಚರಾಚರಗಳನ್ನು ಶ್ರೀರಾಮನ ಕೃಪಾಜಾಲವು ರಕ್ಷಿಸುತ್ತದೆ. ಭೂಮಿಯ ಮೇಲಿನ ಜೀವಿಗಳಿಗಾಗಲೀ ಆಕಾಶದಲ್ಲಿರುವ ಸೂಕ್ಷ್ಮ ಚೇತನಗಳಿಗಾಗಲೀ ನಿಲುಕದಷ್ಟು ಶ್ರೀರಾಮ ಕೃಪಾ ಜಾಲವು ನಿಗೂಢವಾದದ್ದಾಗಿದೆ.
ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ |
ನರೋ ನ ಲಿಪ್ಯತೇ ಪಾಪೈರ್ ಭುಕ್ತಿಂ ಮುಕ್ತಿಂ ಚ ವಿಂದತಿ ||೧೪||
ಭಾವಾರ್ಥ :-ರಾಮ ,ರಾಮಭದ್ರ,ರಾಮಚಂದ್ರ ಎಂದೆಲ್ಲಾ ಯಾವುದೇ ನಾಮದಿಂದ ಶ್ರೀರಾಮನನ್ನು ಅನವರತವೂ ಸ್ಮರಿಸುವಾತನಿಗೆ ಎಂದೂ ಪಾಪಗಳ ಭೀತಿಯಿರಲಾರದು. ಮಾತ್ರವಲ್ಲ ಆತನು ಸರ್ವ ಭೋಗಭಾಗ್ಯಗಳನ್ನು ಅನುಭವಿಸುತ್ತಾ ಜೀವನ್ಮುಕ್ತಿಯ ಮಹಾಭಾಗ್ಯವಂತನೂ ಆಗುವನು.
ಜಗಜ್ಜೈತ್ರೈಕಮಂತ್ರೇಣ ರಾಮನಾಮ್ನಾಸ್ರಕ್ಷಿತಮ್ |
ಯ: ಕಂಠೇ ಧಾರಯೇತ್ತಸ್ಯ ಕರಸ್ಥಾ: ಸರ್ವ ಸಿದ್ಧಯ: ||೧೫||
ಭಾವಾರ್ಥ :-ಜಗತ್ತಿನಲ್ಲಿ ಸರ್ವಕಾರ್ಯಗಳಿಗೂ ಜಯಪ್ರದವಾದ ಏಕಮೇವ ಮಂತ್ರವೇ ರಾಮನಾಮವು. ಅಂತಹಾ ರಾಮ ನಾಮ ಸ್ಮರಣೆಯಲ್ಲಿ ಯಾರ ಮನಸ್ಸು ನೆಲೆಯಾಗಿ ರಾಮನಾಮವೇ ಸರ್ವಸ್ವವಾಗುವುದೋ ಅಂತಹವರು ಶ್ರೀರಾಮನ ಕರುಣಾಂಬುಧಿಯಲ್ಲಿ ಸರ್ವ ಸಮರ್ಥ ವಿಶ್ವವಿಜೇಜರಾಗಿ ರಾರಾಜಿಸುತ್ತಿದ್ದಾರೆ.
ವಜ್ರ ಪಂಜರನಾಮೇದಂ ಯೋ ರಾಮಕವಚಂ ಸ್ಮರೇತ್ |
ಅವ್ಯಾಹತಾಜ್ಞ: ಸರ್ವತ್ರ ಲಭತೇ ಜಯ ಮಂಗಲಮ್ ||೧೬||
ಭಾವಾರ್ಥ :-ಯಾರು ಈ ರಾಮರಕ್ಷಾಸ್ತೋತ್ರವನ್ನು ಶ್ರದ್ಧಾ ಭಕ್ತಿ ಪುರಸ್ಸರವಾಗಿ ಪಠಣ ಮೂಲಕ ಸ್ಮರಿಸುತ್ತಾರೋ ಅವರನ್ನು ಶ್ರೀರಾಮನ ದಿವ್ಯಶಕ್ತಿಯು ವಜ್ರಪಂಜರ ರೂಪವಾಗಿ ಅವರನ್ನು ಆವರಿಸಿ ಎಲ್ಲಾ ರೀತಿಯ ಆಪತ್ತು ವಿಪತ್ತುಗಳಿಂದ ರಕ್ಷಿಸುವುದಲ್ಲದೆ ಅವರ ಇಚ್ಛಾಶಕ್ತಿಯನ್ನು, ಜ್ಞಾನಶಕ್ತಿ,ಕ್ರಿಯಾಶಕ್ತಿಗಳೆನ್ನೆಲ್ಲಾ ವೃದ್ಧಿಸಿ ಸರ್ವತ್ರ ಸರ್ವಕಾಲದಲ್ಲಿಯೂ ಗೆಲವು ನಲಿವುಗಳನ್ನು ದೊರಕಿಸಿಕೊಡುತ್ತದೆ.
ಆದಿಷ್ಟವಾನ್ ಯಥಾ ಸ್ವಪ್ನೇ ರಾಮರಕ್ಷಾಮಿಮಾಂ ಹರ: |
ತಥಾ ಲಿಖಿತವಾನ್ ಪ್ರಾತ: ಪ್ರಬುದ್ಧೋ ಬುಧ ಕೌಶಿಕ: ||೧೭||
ಭಾವಾರ್ಥ :-ಈ ರಾಮರಕ್ಷಾಸ್ತೋತ್ರವನ್ನು ಸಾಕ್ಷಾತ್ ಪರಮಶಿವನು ರಾತ್ರಿಕಾಲದಲ್ಲಿ ಸ್ವಪ್ನ ಮುಖೇನ ದರ್ಶನವಿತ್ತು ಬುಧಕೌಶಿಕ ಋಷಿಗೆ ತಿಳಿಸಿದ್ದಾಗಿದ್ದು ಬೆಳಗ್ಗೆ ಎದ್ದ ಋಷಿಯು ಬರೆದಿರಿಸಿದ್ದಾಗಿರುತ್ತದೆ. ಆದ್ದರಿಂದ ಇದು ದಿವ್ಯವಾದ ವೇದ ಸಮಾನವಾಗಿದೆ.
ಆರಾಮ; ಕಲ್ಪವೃಕ್ಷಾಣಾಂ ವಿರಾಮ: ಸಕಲಾಪದಾಮ್ |
ಅಭಿರಾಮಸ್ತ್ರಿಲೋಕಾನಾಂ ರಾಮ: ಶ್ರೀಮಾನ್ ಸ ನ: ಪ್ರಭು: ||೧೮||
ಭಾವರ್ಥ :-ಕಲ್ಪವೃಕ್ಷದ ಉಪವನದಂತಿರುವ ಶ್ರೀರಾಮನು ಎಲ್ಲಾ ಆಪತ್ತುಗಳ ನಿವಾರಕನಾಗಿ ಇಷ್ಟಾರ್ಥದಾಯಕನಾಗಿ ಮೂರುಲೋಕಗಳಲ್ಲೂ ಆನಂದದಾಯಕನಾಗಿ ನಮ್ಮೆಲ್ಲರಿಗೂ ದೊರೆಯಾಗಿ ಮುನ್ನಡೆಯಿಸುವನು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ತರುಣೌ ರೂಪ ಸಂಪನ್ನೌ ಸುಕುಮಾರೌ ಮಹಾಬಲೌ |
ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾ ಜಿನಾಂಬರೌ ||೧೯||
ಭಾವಾರ್ಥ :-ರೂಪ-ಲಾವಣ್ಯವನ್ನು ಹೊಂದಿರುವ ತರುಣರೂ ಸೌಜನ್ಯವಂತರೂ, ಅಪ್ರತಿಮ ಮಹಾಬಲಾಢ್ಯರೂ,ಬಿಳಿಯ ತಾವರೆಯಂತೆ ಕಂಗೊಳಿಸುವವರೂ, ನಾರು ಮಡಿ ಕೃಷ್ಣಾಜಿನಧಾರಿಗಳೂ.....
ಫಲ ಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ |
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ ||೨೦||
ಭಾವಾರ್ಥ :-....ಕಾಡಿನಲ್ಲಿ ಕಂದಮೂಲಾದಿಗಳನ್ನು ತಿನ್ನುವವರೂ, ಜಿತೇಂದ್ರಿಯರೂ, ತಪಸನ್ನಾಚರಿಸುವವರೂ,ದಶರಥ ಪುತ್ರರೂ ಹಾಗೆಯೇ ರಾಮಲಕ್ಷ್ಮಣ ಸೋದರರೂ ......
ಶರಣ್ಯೌ ಸರ್ವಸಂತ್ವಾನಾಂ ಶ್ರೇಷ್ಟೌ ಸರ್ವ ಧನುಷ್ಮತಾಂ |
ರಕ್ಷ:ಕುಲನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ ||೨೧||
ಭಾವಾರ್ಥ:- ಸಾಧುಸಂತರಿಗೆ ಆಶ್ರಯದಾತರೂ,ಶರಣಾಗತರನ್ನು ಕಾಪಾಡುವವರೂ,ಬಿಲ್ಲು ವಿದ್ಯಾ ಪ್ರವೀಣರೂ,ರಾಕ್ಷಸ ಕುಲಧ್ವಂಸಕರೂ, ಆಗಿರುವ ರಘುಕುಲೋತ್ತಮರು ನಮ್ಮನ್ನು ರಕ್ಷಿಸಲಿ.
ಆತ್ತ ಸಜ್ಜ ಧನುಷಾ ವಿಷುಸ್ಪೃಶಾವಕ್ಷ್ಯ ಯಾಶು ಗನಿಷಂಗಸಂಗಿನೌ |
ರಕ್ಷಣಾಯ ಮಮ ರಾಮ ಲಕ್ಷ್ಮಣಾವಗ್ರತ: ಪಥಿ ಸದೈವ ಗಚ್ಛತಾಮ್ ||೨೨||
ಭಾವಾರ್ಥ :- ಅಕ್ಷಯವಾಗಿರುವ ಬತ್ತಳಿಕೆಯೊಡನೆ ಸದಾ ಬಾಣ ಹೂಡಲು ಸಜ್ಜಾಗಿರುವ ರೀತಿಯಲ್ಲಿ ಧನುಸ್ಸಿಗೆ ಬಾಣವನ್ನು ಹೂಡಿಕೊಂಡು ರಾಮಲಕ್ಷ್ಮಣರು ಹಾದಿಯಲ್ಲಿ ಯಾವಾಗಲೂ ನನ್ನ ಮುಂದಿರಲಿ.
ಸನ್ನದ್ಧ: ಕವಚೀ ಖಡ್ಗೀ ಚಾಪಬಾಣಧರೋ ಯುವಾ |
ಗಚ್ಛನ್ ಮನೋರಥೋಸ್ಸ್ಮಾಕಂ ರಾಮ: ಪಾತು ಸ ಲಕ್ಷ್ಮಣ: ||೨೩||
ಭಾವಾರ್ಥ:-ಕವಚ,ಖಡ್ಗ,ಧನುರ್ಬಾಣಗಳನ್ನು ಧರಿಸಿ ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿರುವ ಯುವಕನಾಗಿರುವ ಲಕ್ಷ್ಮಣನೊಡನೆ ಸಂಚರಿಸುತ್ತಿರುವ ಶ್ರೀರಾಮನು ನಮ್ಮ ಮನೋಭಿಲಾಷೆಗಳನ್ನು ಸದಾ ಈಡೇರಿಸಲಿ.
ರಾಮೋ ದಾಶರಥಿ: ಶೂರೋ ಲಕ್ಷ್ಮಣಾನುಚರೋ ಬಲೀ |
ಕಾಕುತ್ಸ: ಪುರುಷ: ಪೂರ್ಣ: ಕೌಸಲ್ಯೇಯೋ ರಘೂತ್ತಮ: ||೨೪||
ಭಾವಾರ್ಥ:- ಭಗವಾನ್ ಶ್ರೀರಾಮನು ಹೇಳುತ್ತಾನೆ "ರಾಮ,ದಾಶರಥಿ,ಶೂರ,ಲಕ್ಷ್ಮಣಾನುಚರ,ಬಲೀ,ಕಾಕುತ್ಸ,ಪುರುಷ,ಪೂರ್ಣ, ಕೌಸಲ್ಯೇಯ, ರಘೂತ್ತಮ, ........
ವೇದಾಂತವೇದ್ಯೋ ಯಜ್ಞೇಶ: ಪುರಾಣ ಪುರುಷೋತ್ತಮ: |
ಜಾನಕೀ ವಲ್ಲಭ:ಶ್ರೀಮಾನಪ್ರಮೇಯ ಪರಾಕ್ರಮ: ||೨೫||
ಭಾವಾರ್ಥ:-ವೇದಾಂತವೇದ್ಯ,ಯಜ್ಞೇಶ,ಪುರಾಣ ಪುರುಷೋತ್ತಮ,ಜಾನಕೀವಲ್ಲಭ,ಶ್ರೀಮಾನ್,ಅಪ್ರಮೇಯ,ಪರಾಕ್ರಮ,........
ಇತ್ಯೇತಾನಿ ಜಪನ್ನಿತ್ಯಂ ಮದ್ಭಕ್ತ: ಶ್ರದ್ಧಯಾನ್ವಿತ: |
ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನ ಸಂಶಯ: ||೨೬||
ಭಾವಾರ್ಥ:-ಈ ರೀತಿಯಾಗಿ ಯಾವ ಭಕ್ತರು ನನ್ನ ವಿವಿಧ ನಾಮಾವಲಿಗಳನ್ನು ನಿತ್ಯವೂ ಜಪಿಸುತ್ತಾರೋ ಅವರಿಗೆ ಅಶ್ವಮೇಧಯಾಗ ಮಾಡಿದರೆ ದೊರಕುವ ಫಲಗಳಿಂದ ಅಧಿಕ ಫಲವು ದೊರಕುವುದರಲ್ಲಿ ಯಾವ ಸಂಶಯವೂ ಇಲ್ಲ."
ರಾಮಂ ದೂರ್ವಾದಲಶ್ಯಾಮಂ ಪದ್ಮಾಕ್ಷಂ ಪೀತವಾಸಸಮ್ |
ಸ್ತುವಂತಿ ನಾಮಭಿರ್ದಿವ್ಯೈರ್ ನ ತೇ ಸಂಸಾರಿಣೋ ನರ: ||೨೭||
ಭಾವಾರ್ಥ:- ಗರಿಕೆಯ ದಳಗಳನ್ನು ಹೋಲುವ ವರ್ಣವನ್ನು ಹೊಂದಿರುವವನೂ, ತಾವರೆಯನ್ನು ಹೋಲುವ ಕಣ್ಣುಗಳುಳ್ಳವನೂ,ಪೀತಾಂಬರದಾರಿಯೂ,ಆಗಿರುವ ಶ್ರೀರಾಮನ ದಿವ್ಯ ನಾಮಾವಲಿಗಳಿಂದ ಆ ಸ್ವಾಮಿಯನ್ನು ಸ್ತುತಿಸುವ ಭಕ್ತರು ಸಂಸಾರವೆಂಬ ನರಕ ಕೂಪದಲ್ಲಿ ಎಂದೂ ಸಿಲುಕರು. ಅಂತಹವರು ಸಂಸಾರಿಗಳಾದರೂ ಸಂನ್ಯಾಸಿಯಂತೆ ಸಾರ್ಥಕ ಜೀವನವನ್ನು ಮಾಡುವರು.
ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ |
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ |
ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ |
ವಂದೇಲೋಕಾಭಿರಾಮಂ ರಘುಕುಲತಿಲಕಂ ರಾಘವಂ ರಾವಣಾರಿಮ್ ||೨೮||
ಭಾವಾರ್ಥ:-ಇಕ್ಷ್ವಾಕು ವಂಶಶ್ರೇಷ್ಠನೂ, ಲಕ್ಶ್ಮಣಾಗ್ರಜನೂ, ರಘುಕುಲೋತ್ತಮನೂ, ದಶರಥತನಯನೂ,ಸೀತಾಕಾಂತನೂ,ಸುಂದರನೂ,ಕರುಣಾಸಾಗರನೂ,ಗುಣನಿಧಿಯೂ, ಬ್ರಾಹ್ಮಣಪ್ರಿಯನೂ,ಧಾರ್ಮಿಕನೂ,ರಾಜಶ್ರೇಷ್ಠನೂ,ಸತ್ಯನಿಷ್ಟನೂ,ಶ್ಯಾಮಲವರ್ಣದವನೂ, ಶಾಂತಮೂರ್ತಿಯೂ,ಭಕ್ತಜನಬಂಧುವೂ,ದಯಾನಿಧಿಯೂ,ರಾವಣಾಂತಕನೂ, ಲೋಕಾನಂದದಾಯಕನೂ ಆಗಿರುವ ಶ್ರೀರಾಮಚಂದ್ರನ ಪಾದಾರವಿಂದಗಳಿಗೆ ಭಕ್ತಿಪುರಸ್ಸರವಾಗಿ ನಾನು ನಮಸ್ಕರಿಸುತ್ತೇನೆ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಮ: ||೨೯||
ಭಾವಾರ್ಥ:-ರಾಮ,ರಾಮಭದ್ರ,ರಾಮಚಂದ್ರ,ಸೃಷ್ಟಿಕರ್ತ,ರಘುನಾಥ,ಸೀತಾಪತಿ, ಮೊದಲಾದ ವಿವಿಧ ನಾಮಗಳಿಂದ ಕರೆಯಲ್ಪಡುವ ಸೀತಾಪತಿಗೆ ನನ್ನ ನಮಸ್ಕಾರಗಳು.
ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ |
ಶ್ರೀರಾಮ ರಾಮ ರಣಕರ್ಕಶ ರಾಮ ರಾಮ
ಶ್ರೀರಾಮ ರಾಮ ಶರಣಂ ಭವ ರಾಮ ರಾಮ ||೩೦||
ಭಾವಾರ್ಥ:-ಹೇ! ರಘುನಂದನ ಶ್ರೀರಾಮನೇ,ಭರತಾಗ್ರಜ ಶ್ರೀರಾಮನೇ,ರಣಧೀರ ಶ್ರೀರಾಮನೇ,ಶ್ರೀರಾಮನೇ,ಪರಂಧಾಮನೇ, ಮಮ ಸ್ವಾಮಿಯೇ ನಿನ್ನಡಿಗಳಿಗಿದೋ ಶರಣು ಶರಣು.
ಶ್ರೀರಾಮಚಂದ್ರ ಚರಣೌ ಮನಸಾ ಸ್ಮರಾಮಿ
ಶ್ರೀರಾಮಚಂದ್ರ ಚರಣೌ ವಚಸಾಗೃಣಾಮಿ |
ಶ್ರೀರಾಮಚಂದ್ರ ಚರಣೌ ಶಿರಸಾ ನಮಾಮಿ
ಶ್ರೀರಾಮಚಂದ್ರ ಚರಣೌ ಶರಣಂ ಪ್ರಪದ್ಯೇ ||೩೧||
ಭಾವಾರ್ಥ:-ಶ್ರೀರಾಮಚಂದ್ರನೇ ನಿನ್ನಚರಣಗಳನ್ನು ಮನಸಾ ಸ್ಮರಿಸುವೆನು. ಶ್ರೀರಾಮಚಂದ್ರನೇ ನಿನ್ನ ಚರಣಗಳನ್ನು ಬಾಯಿಯಿಂದ ಉಚ್ಛರಿಸುವೆನು. ಶ್ರೀರಾಮಚಂದ್ರನೇ ನಿನ್ನ ಚರಣಗಳನ್ನು ಶಿರಸಾ ಧರಿಸುವೆನು. ಶ್ರೀರಾಮಚಂದ್ರನೇ ನಿನ್ನ ಚರಣಗಳಿಗೆ ನಮಸ್ಕರಿಸುವ ಮೂಲಕ ಸಾಷ್ಟಾಂಗ ನಮಸ್ಕರಿಸುತ್ತಾ ಶರಣಾಗುವೆ.
ಮಾತಾರಾಮೋ ಮತ್ಪಿತಾ ರಾಮಚಂದ್ರ:
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರ: |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುರ್
ನಾನ್ಯಂ ಜಾನೇ ನೈವ ಜಾನೇ ನ ಜಾನೇ ||೩೨||
ಭಾವಾರ್ಥ :-ನನ್ನ ತಾಯಿ, ತಂದೆ, ಸ್ನೇಹಿತ,ಸರ್ವಸ್ವವೂ ರಾಮಚಂದ್ರನೇ ಆಗಿದ್ದಾನೆ. ಈ ಭೂಮಿಯಲ್ಲಿ ಅವನ ಹೊರತಾಗಿ ಬೇರೊಬ್ಬ ಕರುಣಾಳುವನ್ನು ನಾನು ಅರಿಯೆ.
ದಕ್ಷಿಣೇ ಲಕ್ಷ್ಮಣೋ ಯಸ್ಯ
ವಾಮೇತು ಜನಕಾತ್ಮಜಾ |
ಪುರತೋ ಮಾರುತೀ ಯಸ್ಯ
ತಂ ವಂದೇ ರಘುನಂದನಮ್ ||೩೩||
ಭಾವಾರ್ಥ :-ಯಾವಾತನ ಎಡ ಭಾಗದಲ್ಲಿ ಲಕ್ಷ್ಮಣನೂ,ಬಲ ಬದಿಯಲ್ಲಿ ಸೀತೆಯೂ,ಎದುರು ಭಾಗದಲ್ಲಿ ಆಂಜನೇಯನೂ ಇರುವರೋ ಅಂತಹಾ ಶ್ರೀರಾಮಚಂದ್ರನಿಗೆ ನಾನು ನಮಸ್ಕರಿಸುವೆ.
ಲೋಕಾಭಿರಾಮಂ ರಣರಂಗಧೀರಂ
ರಾಜೀವನೇತ್ರಂ ರಘುವಂಶ ನಾಥಮ್ |
ಕಾರುಣ್ಯ ರೂಪಂ ಕರುಣಾಕರಂ ತಂ
ಶ್ರೀರಾಮ ಚಂದ್ರಂ ಶರಣಂ ಪ್ರಪದ್ಯೇ ||೩೪||
ಭಾವಾರ್ಥ್ಹ :-ಲೋಕಕ್ಕೆ ಆನಂದವನ್ನು ಕರುಣಿಸುವವನೂ,ಯುದ್ಧಭೂಮಿಯಲ್ಲಿ ಅಜೇಯನೂ,ಕಮಲದಳಗಳನ್ನು ಹೋಲುವ ಕಣ್ಣುಗಳುಳ್ಳವನೂ,ರಘುವಂಶ ಕುಲದೀಪಕನೂ,ದಯಾಮೂರ್ತಿಯೂ,ಕರುಣಾಸಾಗರನೂ,ಆಗಿರುವ ಶ್ರೀರಾಮಚಂದ್ರನಿಗೆ ನಾನು ಶರಣು ಹೋಗುತ್ತೇನೆ.
ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥ ಮುಖ್ಯಂ
ಶ್ರೀ ರಾಮದೂತಂ ಶರಣಂ ಪ್ರಪದ್ಯೇ ||೩೫||
ಭಾವಾರ್ಥ :-ವಾಯುವಿನ ವೇಗಕ್ಕೆ ಸಮಾನವಾದ ವೇಗವುಳ್ಳವನೂ, ಚುರುಕು ಬುದ್ಧಿಯವನೂ,ಇಂದ್ರಿಯನಿಗ್ರಹಿಯೂ,ಅಪ್ರತಿಮ ಧೀಮಂತನೂ,ಬುದ್ಧಿವಂತರಲ್ಲಿ ಶ್ರೇಷ್ಠನೂ,ವಾಯು ನಂದನನೂ,ವಾನರಾಗ್ರೇಸರನೂ ಆಗಿರುವ ಶ್ರೀರಾಮದಾಸ ಹನುಮನಿಗೆ ನಾನು ಶರಣಾಗುವೆ.
ಕೂಜಂತಂ ರಾಮ ರಾಮೇತಿ
ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಮ್ ||೩೬||
ಭಾವಾರ್ಥ :- ಮರದ ಕೊಂಬೆಯ ಮೇಲೆ ಕುಳಿತು ಕೋಗಿಲೆಯು ಕುಹೂ ಕುಹೂ ಎಂದು ಸುಮಧುರವಾಗಿ ಕೂಗುವ ರೀತಿಯಲ್ಲಿ ವಾಲ್ಮೀಕಿ ಎಂಬ ಕವಿಕೋಗಿಲೆಯು ಕವಿತೆಯೆಂಬ ಮರದ ಮೇಲೆ ಕುಳಿತು "ರಾಮ ರಾಮಾ "ಎಂದು ಸುಮಧುರವಾಗಿ ಹಾಡುತ್ತಾ ಕಾವ್ಯ ರೂಪದಲ್ಲಿ ಶ್ರೀರಾಮನ ಗುಣಗಾನ ಮಾಡಿದ್ದು ಅಂತಹಾ ಆದಿಕವಿಶ್ರೇಷ್ಠ ವಾಲ್ಮೀಕಿ ಮಹರ್ಷಿಗೆ ನಾನು ನಮಸ್ಕರಿಸುವೆನು.
ಆಪದಾಮಪ ಹರ್ತಾರಂ
ದಾತಾರಂ ಸರ್ವ ಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ
ಭೂಯೋ ಭೂಯೋ ನಮಾಮ್ಯಹಮ್ ||೩೭||
ಸಕಲ ಸಂಕಷ್ಟಗಳನ್ನು ದೂರೀಕರಿಸುವವ,ಸರ್ವ ಸಂಪದವನ್ನು ಅನುಗ್ರಹಿಸುವವ, ಸರ್ವಾನಂದದಾಯಕನಾಗಿರುವ ಶ್ರೀರಾಮಚಂದ್ರನ ಪದತಲಗಳಿಗೆ ಪುನ:ಪುನ: ನಾನು ಎರಗುವೆನು.
ಭರ್ಜನಂ ಭವ ಬೀಜಾನಾಮ್
ಆರ್ಜನಂ ಸುಖಸಂಪದಾಮ್ |
ತರ್ಜನಂ ಯಮದೂತಾನಾಂ
ರಾಮ ರಾಮೇತಿ ಗರ್ಜನಮ್ ||೩೮||
ಭಾವಾರ್ಥ:- ಪುನರ್ಜನ್ಮಕ್ಕೆ ಕಾರಣವಾಗುವ ಪಾಪ ಸಮೂಹವನ್ನು ಸುಡುವ,ಸುಖ ಸಂಪತ್ತನ್ನು ಒದಗಿಸುವ,ಯಮದೂತರಿಗೆ ಭೀತಿಯನ್ನುಂಟು ಮಾಡುವ ರಾಮ ರಾಮಾ ಎಂಬ ಪುಣ್ಯ ನಾಮದ ಮಹಿಮೆ ವರ್ಣಿಸಲಸದಳ.
ರಾಮೋ ರಾಜಮಣಿ: ಸದಾ ವಿಜಯತೇರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮ: |
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಽಸ್ಮ್ಯಹಂ
ರಾಮೇ ಚಿತ್ತಲಯ: ಸದಾ ಭವತು ಮೇ ಭೋ ರಾಮ ಮಾಮುದ್ಧರ ||೩೯||
ಭಾವಾರ್ಥ:-ಯಾವಾತನಿಂದ ರಾಕ್ಷಸ ವೃಂದವು ನಾಶಮಾಡಲ್ಪಟ್ಟಿತೋ ಅಂತಹಾ ರಾಜಮಣಿಯೆನಿಸಿರುವ ರಾಮನನ್ನು ನಾನು ಸದಾ ಸ್ಮರಿಸುವೆ. ಶ್ರೀರಾಮನಿಗೆ ಸದಾ ಜಯವಾಗಲಿ.ರಾಮಕಿಂಕರನಾದ ನನಗೆ ರಾಮನಲ್ಲದೆ ಅನ್ಯತ್ರ ಆಶ್ರಯವಿಲ್ಲ. ಆದ್ದರಿಂದ ನನ್ನ ಸರ್ವಸ್ವವಾಗಿರುವ ಆ ಶ್ರೀರಾಮನ ಸ್ಮರಣೆಯಲ್ಲಿ ನನ್ನ ಮನಸ್ಸು ಲೀನವಾಗಿರಲಿ.ಆ ಕರುಣಾಮಯಿ ರಾಮನು ನನ್ನನ್ನು ಸದಾ ಉದ್ಧರಿಸಲಿ.
ಶ್ರೀರಾಮ ರಾಮೇತಿ ರಾಮೇತಿ
ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯಂ ಶ್ರೀ
ರಾಮ ನಾಮ ವರಾನನೇ ||೪೦||
ಈ ಒಂದು ರಾಮನಾಮವು ವಿಷ್ಣು ಸಹಸ್ರನಾಮಗಳಿಗೆ ಸಮಾನವಾದುದಾಗಿದೆ. ಅಂದರೆ ವಿಷ್ಣು ಸಹಸ್ರನಾಮದಿಂದ ದೊರಕುವ ಫಲವು "ರಾಮ" ಎಂಬ ಇದೊಂದೇ ನಾಮದಿಂದ ದೊರಕುವುದು. ಅಂತಹಾ ಪರಮ ಪಾವನಮಯ ಸತ್ವಶಾಲೀ ರಾಮನಾಮ ಸ್ಮರಣೆಯಲ್ಲಿ ನನ್ನ ಮನಸ್ಸು ಸದಾ ಇರುವಂತಾಗಲಿ.
*********************************************************************************
||ಇತಿ ಶ್ರೀ ಬುಧಕೌಶಿಕ ವಿರಚಿತ ಶ್ರೀರಾಮರಕ್ಷಾ ಸ್ತೋತ್ರಮ್||
||ಶ್ರೀ ಸೀತಾರಾಮಚಂದ್ರ ಚರಣಾರವಿಂದಾರ್ಪಿತಮಸ್ತು||
.
||ಈ ರೀತಿಯಾಗಿದೆ ಶ್ರೀ ಬುಧಕೌಶಿಕ ಋಷಿಯಿಂದ ರಚಿತವಾದ ಶ್ರೀ ರಾಮರಕ್ಷಾ ಸ್ತೋತ್ರದ ಭಾವಾರ್ಥವು.||
|| ಶ್ರೀ ಸೀತಾ ರಾಮಚಂದ್ರರ ಚರಣಾರವಿಂದಗಳಿಗಿದು ಅರ್ಪಿತವಾಗಲಿ ||
*********************************************************************
-೧೧-
|| ಶ್ರೀ ರಾಮ ಪ್ರಾತ:ಸ್ಮರಣ ಸ್ತೋತ್ರಮ್ ||
*********************************
ಪ್ರಾತ:ಸ್ಮರಾಮಿ ರಘುನಾಥ ಮುಖಾರವಿಂದಂ |
ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ ||
ಕರ್ಣಾವಲಂಬಿ ಚಲಕುಂಡಲ ಶೋಭಿಗಂಡಂ |
ಕರ್ಣಾಂತ ಧೀರ್ಘ ನಯನಂ ನಯಾಭಿರಾಮಮ್ ||೧||
ಭಾವಾರ್ಥ:-ಮಂದಹಾಸಭರಿತ ಸುಮಧುರವಾಗಿರುವ ನುಡಿ, ಅಗಲವಾಗಿರುವ
ಹಣೆ,ಕಿವಿಗಳಲ್ಲಿ ತೂಗಾಡುತ್ತಿರುವ ಅಸ್ಥಿರವಾದ ಕುಂಡಲಗಳು,ಆ
ಕುಂಡಲಗಳಿಂದ ಪ್ರಕಾಶಭರಿತವಾಗಿರುವ ಕಿವಿ ಹಾಗೆಯೇ ಮತ್ತು
ಕೆನ್ನೆಗಳತ್ತ ಚಾಚಿದ ವಿಶಾಲವಾದ ಕಣ್ಣುಗಳು,ಆ ಕಣ್ಣುಗಳಿಂದ
ಮನೋಹರವಾಗಿ ಕಂಗೊಳಿಸುತ್ತಿರುವ ಶ್ರೀರಾಮನ ಮುಖಕಮಲವನ್ನು
ನಾನು ಉಷ:ಕಾಲದಲ್ಲಿ ಸ್ಮರಿಸುವೆ.
ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ |
ರಕ್ಷೋಗಣಾಯ ಭಯದಂ ವರದಂ ನಿಜೇಭ್ಯ: ||
ಯದ್ ರಾಜಸಂಸದಿ ವಿಭಜ್ಯ ಮಹೇಷ ಚಾಪಂ |
ಸೀತಾಕರಗ್ರಹಣ ಮಂಗಲಮಾಪ ಸದ್ಯ: ||೨||
ಭಾವಾರ್ಥ:-ದಾನವರ ಸಮೂಹಕ್ಕೆ ಭೀತಿಯನ್ನು ಹುಟ್ಟಿಸಿದ,ತನ್ನ
ಭಕ್ತರಿಗೆ ವರದಾಯಕನಾದ,ಜನಕರಾಜನ ಅರಮನೆಯ ಸಭೆಯಲ್ಲಿ ಶಿವ
ಧನುಸ್ಸನ್ನು ಮುರಿದು ಸೀತಾದೇವಿಯ ಪಾಣಿಗ್ರಹಣದ ಶುಭ
ಕಾರ್ಯವನ್ನು ಗೈದ ಆ ರಘುನಾಥನ ಕರಕಮಲವನ್ನು ನಾನು
ಉಷ:ಕಾಲದಲ್ಲಿ ಭಜಿಸುವೆ.
ಪ್ರಾತರ್ಭಜಾಮಿ ರಘುನಾಥ ಪದಾರವಿಂದಂ |
ಪದ್ಮಾಂಕುಶಾದಿ ಶುಭರೇಖ ಸುಖಾವಹಂ ಮೇ ||
ಯೋಗೀಂದ್ರ ಮಾನಸ ಮಧುವ್ರತ ಸೇವ್ಯಮಾನಂ |
ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾ: ||೩||
ಭಾವಾರ್ಥ:-ಕಮಲ,ಅಂಕುಶ ಇತ್ಯಾದಿ ಶುಭರೇಖೆಯುಳ್ಳವನಾದ,ನನ್ನ
ಆನಂದಕ್ಕೆ ಕಾರಣನಾಗುವ,ಶ್ರೇಷ್ಠರುಗಳಾದ ಮಹರ್ಷಿಗಳ ಮನಸ್ಸೆಂಬ
ಭ್ರಮರಗಳಿಂದ ಸೇವಿಸಲ್ಪಡುವ,ಗೌತಮ ಮಹರ್ಷಿಯ ಧರ್ಮಪತ್ನಿ
ಅಹಲ್ಯೆಯ ಶಾಪವನ್ನು ಪರಿಹರಿಸಿ ಉದ್ಧರಿಸಿದ ಆ ಶ್ರೀರಾಮನ
ಚರಣಾರವಿಂದಗಳನ್ನು ನಾನು ಉಷ:ಕಾಲದಲ್ಲಿ ಭಜಿಸುವೆ.
ಪ್ರಾತರ್ವದಾಮಿ ವಚಸಾ ರಘುನಾಥ ನಾಮಂ |
ವಾಗ್ದೋಷಹಾರಿ ಸಕಲಂ ಶಮಲಂ ನಿಹಂತಿ ||
ಯತ್ ಪಾರ್ವತೀ ಸ್ವ ಪತಿನಾ ಸಹ ಭೋಕ್ತು ಕಾಮಾ |
ಪ್ರೀತ್ಯಾ ಸಹಸ್ರ ಹರಿನಾಮ ಸಮಂ ಜಜಾಪ ||೪||
ಭಾವಾರ್ಥ:-ಸಮಸ್ತ ವಾಗ್ದೋಷಗಳನ್ನು ಪರಿಹರಿಸುವ,ಸರ್ವ
ಪಾಪಗಳನ್ನು ಹೋಗಲಾಡಿಸುವ," ಶ್ರೀರಾಮ ರಾಮ ರಾಮೇತಿ ರಮೇ
ರಾಮೇ ಮನೋರಮೇ|ಸಹಸ್ರ ನಾಮ ತತ್ತುಲ್ಲ್ಯಂ ರಾಮ ನಾಮ
ವರಾನನೇ " ಎಂಬ ವಿಷ್ಣು ಸಹಸ್ರ ನಾಮಕ್ಕೆ ಸರಿ ಸಮವಾದ ಯಾವ
ಸ್ತುತಿಯ ರಸಾಸ್ವಾದನೆಯನ್ನು ಮಾಡಬಯಸುತ್ತಾ ತನ್ನ ಪತಿಯೊಡನೆ
ಪಾರ್ವತೀ ದೇವಿಯು ಪ್ರೀತಿಯಿಂದ ಜಪಿಸುವಳೋ ಅಂತಹಾ
ಪಾವನನಾಮ ಶ್ರೀರಾಮನಾಮವನ್ನು ಅನುದಿನವೂ ಉಷ:ಕಾಲದಲ್ಲಿ ನಾನು
ಜಪಿಸುವೆ.
ಪ್ರಾತ:ಶ್ರಯೇ ಶ್ರುತಿನುತಾಂ ರಘುನಾಥ ಮೂರ್ತಿಂ |
ನೀಲಾಂಬುದೋತ್ಫಲ ಸಿತೇತರ ರತ್ನ ನೀಲಾಮ್ ||
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಢ್ಯಾಂ |
ಧ್ಯೇಯಾಂ ಸಮಸ್ತ ಮುನಿಭಿರ್ಜನ ಮುಕ್ತಿ ಹೇತುಮ್ ||೫||
ಭಾವಾರ್ಥ:-ನೀಲಮುಗಿಲನಂತೆ,ನೀಲಕಮಲದಂತೆ,ಹಾಗೂ
ಇಂದ್ರನೀಲಮಣಿಯಂತೆ ನೀಲವರ್ಣದ ಶರೀರವನ್ನು
ಹೊಂದಿದ,ವಿಶೇಷವಾಗಿರುವ ಮುತ್ತಿನಹಾರಗಳನ್ನು ಧರಿಸಿ
ಶೋಭಿಸುತ್ತಿರುವ,ಸಮಸ್ತ ಋಷಿ ಸಮೂಹದಿಂದ
ಧ್ಯಾನಿಸಲ್ಪಡುವ,ಭಕ್ತಜನರಿಗೆ ಮೋಕ್ಷದೊರಕಲು
ಕಾರಣೀಭೂತನಾದ,ವೇದಗಳಲ್ಲಿ ಸ್ತುತಿಸಲ್ಪಡುತ್ತಿರುವ ಆ
ಶ್ರೀರಾಮನ ದಿವ್ಯಮೂರ್ತಿಗೆ ಉಷ:ಕಾಲದಲ್ಲಿ ನಾನು ಶರಣಾಗುವೆ.
ಯ: ಶ್ಲೋಕ ಪಂಚಕಮಿದಂ ಪ್ರಯತ: ಅಠೇದ್ಧಿ |
ನಿತ್ಯಂ ಪ್ರಭಾತ ಸಮಯೇ ಪುರುಷ: ಪ್ರಬುದ್ಧ: ||
ಶ್ರೀರಾಮಕಿಂಕರ ಜನೇಷು ಸ ಏವ ಮುಖ್ಯೋ |
ಭೂತ್ವಾ ಪ್ರಯಾತಿ ಹರಿಲೋಕಮನನ್ಯ ಲಭ್ಯಮ್ ||೬||
ಭಾವಾರ್ಥ:-ಯಾವಾತನು ಪ್ರಯತ್ನ ಪೂರ್ವಕವಾಗಿ ಈ ಐದು
ಶ್ಲೋಕಗಳನ್ನು ಅನುದಿನವೂ ನಿಯಮಿತವಾಗಿ ಶ್ರದ್ಧೆಯಿಂದ
ಪಠಿಸುವನೋ ಅಂತಹವನು ಶ್ರೀರಾಮನ ಊಳಿಗದವರಲ್ಲಿ
ಪ್ರಾಮುಖ್ಯನಾಗಿ ಅನ್ಯರಿಗೆ ಲಭಿಸಲಸಾಧ್ಯವಿರುವ ವಿಷ್ಣು
ಲೋಕವನ್ನು ಹೊಂದುವನು.
*********************************************************************
|| ಇತಿ ಶ್ರೀ ರಾಮ ಪ್ರಾತ:ಸ್ಮರಣ ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀರಾಮ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||
*********************************************************************
-೧೨-
|| ಶ್ರೀ ರಾಮ ಮಾನಸ ಸ್ತೋತ್ರಮ್ ||
****************************
ಶ್ರೀಮನ್ನುಜ್ಜ್ವಲ-ಕೋಟಿಭಾನು-ಸದೃಶಂ ಮಂದಸ್ಮಿತಂ ಶಾಮಲಂ |
ಶ್ರೀ ಸೀತಾಸಹಿತಂ ವರಾ ಭಯಕರಂ ವಾಮೇ ಸುಮಿತ್ರಾಸುತಮ್ ||
ಶ್ರೀ ವತ್ಸಾಂಕ-ಧನು:ಶರಾದಿ-ಲಸಿತಂ ವಾತಾತ್ಮಜಾಭಿಷ್ಟುತಂ |
ಶ್ರೀರಾಮೇತಿ-ಪದದ್ವಯಾನ್ವಿತ ಮಹಂ ಧ್ಯಾಯೇ ಮನೋಮಂದಿರೇ ||೧||
ಭಾವಾರ್ಥ:-ಕೋಟಿಸೂರ್ಯರ ಸಮಾನವಾದ ಪ್ರಕಾಶಮಯ ತೇಜಸ್ಸನ್ನು ಹೊಂದಿ,ಮನೋಹರನೂ,ಮುಗುಳ್ನಗೆಯಿಂದ ಕೂಡಿದವನೂ,ಶ್ಯಾಮಲ ವರ್ಣದವನೂ, ಸೀತಾದೇವಿಯೊಡಗೂಡಿದವನೂ,ಅಗ್ರಗಣ್ಯನೂ,ಅಭಯಹಸ್ತವುಳ್ಳವನೂ,ಸುಮಿತ್ರಾತನಯ ಲಕ್ಷ್ಮಣನ ಒಡನಿರುವವನೂ, ಎದೆಯ ಮೇಲೆ ಮಚ್ಚೆಯುಳ್ಳವನೂ,ಬಿಲ್ಲು ಬಾಣಗಳಿಂದ ಅಲಂಕೃತಗೊಂಡವನೂ,ಮಾರುತಿಯಿಂದ ಸ್ತುತಿಸಲ್ಪಡುವವನೂ,"ಶ್ರೀ" ಮತ್ತು ""ರಾಮ" ಎಂಬೀ ಎರಡು ಪದಗಳಿಂದ ಕೂಡಿರುವವನೂ ಆಗಿರುವ ಶ್ರೀ ರಾಮಚಂದ್ರನನ್ನು ನನ್ನ ಹೃದಯ ಮಂದಿರದಲ್ಲಿ ನೆಲೆಗೊಳಿಸಿ ಆರಾಧಿಸುತ್ತಿದ್ದೇನೆ.
ರಾಮೇತ್ಯೇಕರಸ-ಸ್ವರೂಪಮಮಲಂ ಲೀಲಾವತಾರಾವ್ಯಯಂ |
ರಾಜೇಂದ್ರಂ ರಘುನಂದನಂ,ರವಿಕುಲೋದ್ಭೂತಂ ಸಮಾವಾಹಯೇ ||
ರಾಜೇಷ್ಟಂ ರಮಣೀಯಮರ್ಪಿತಮಿದಂ ಮಾಣಿಕ್ಯ ಸಿಂಹಾಸನಂ |
ಪಾದ್ಯಂಸಾಚಮನೀಯಮರ್ಘ್ಯಮಮೃತಂ ರಾಮ ಸ್ವಯಂ ಸ್ವೀಕುರು ||೨||
ಭಾವಾರ್ಥ;_ರಾಮನೆನ್ನುವ ಸ್ವಚ್ಛವಾದ,ವಿನಾಶರಹಿತನಾದ,ಪರಬ್ರಹ್ಮನ ಏಕೈಕ ಸ್ವರೂಪಿಯಾದ,ಲೀಲಾವತಾರಿಯೂ,ರಾಜೇಂದ್ರನೂ,ರಘುನಂದನನೂ,ರವಿವಂಶದಲ್ಲಿ ಜನನವೆತ್ತವನೂ,ಆದ ಶ್ರೀರಾಮಚಂದ್ರನೇ!ನಿನ್ನನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವೆ.ಸ್ವಾಮಿಯೇ ಅರಸುಕುಲಪ್ರಿಯನಾದ ನಿನಗೆ ಆಹ್ಲಾದಕರವಾಗಿರುವ ಮಾಣಿಕ್ಯ ಸಿಂಹಾಸನಕ್ಕೆ ಸಮವಾದ ನನ್ನ ಹೃದಯವನ್ನು ಸುಖಾಸನವಾಗಿ ಅರ್ಪಿಸುತ್ತಲ್ಲಿರುವೆ.ಶ್ರೀರಾಮಚಂದ್ರನೇ,ಪಾದಗಳನ್ನು ಶುಚಿಯಾಗಿಸಿಕೊಳ್ಳಲು ಮತ್ತು ಆಚಮನಾರ್ಥವಾಗಿ ಅರ್ಪಿಸುತ್ತಿರುವ ಈ ಶುದ್ಧೋದಕವನ್ನು ಸ್ವೀಕರಿಸು.
ಮಧ್ವಕ್ತಂ ಮಧುಪರ್ಕಮಂತ್ರಪಠಿತಂ ಪಂಚಾಮೃತಂ ಕಲ್ಪಿತಂ |
ಮಂದಾಕಿನ್ಯಾಮಿದಂ ಸುರತ್ನಕಲಶೈ: ಸ್ನಾನಾರ್ಥಮಪ್ಯಾಹೃತಮ್ |
ಮಂದಾರಾಮರ-ಪಾರಿಜಾತ-ತಲಗೇ ಸೌವರ್ಣ ಪೀಠೇ ಸ್ಥಿತಂ |
ಮಂತ್ರೈಸ್ತ್ವಾಮಿಷೇಚಯಾಮಿ ವಿವಿಧೈ:ಸೂಕ್ತೈ: ಸು ತೀರ್ಥೋದಕೈ: ||೩||
ಭಾವಾರ್ಥ:-ಸ್ವಾಮಿ ಶ್ರೀರಾಮಚಂದ್ರನೇ! ನಿನ್ನ ಪ್ರೀತ್ಯರ್ಥವಾಗಿ ಮಧುಪರ್ಕ ಮಂತ್ರ ಪಠಿಸುತ್ತಾ ಜೇನು ಮಿಶ್ರಿತ ಪಂಚಾಮೃತವನ್ನು ವ್ಯವಸ್ಥೆಗೊಳಿಸಿರುವೆನು.ನಿನ್ನ ಸ್ನಾನಾರ್ಥವಾಗಿ ಪವಿತ್ರವಾದ ಗಂಗಾಜಲವನ್ನು ಶ್ರೇಷ್ಠವಾಗಿರುವ ರತ್ನಗಳಿಂದ ಅಲಂಕರಿಸಲ್ಪಟ್ಟ ಕಲಶಗಳಲ್ಲಿ ತಂದಿರಿಸಿರುವೆನು.ಮಂದಾರ ಪಾರಿಜಾತ,ಕಲ್ಪತರು ಮೊದಲಾದ ದೇವ ವೃಕ್ಷಗಳ ಅಡಿಯಲ್ಲಿ ಇರಿಸಿರುವ ಬಂಗಾರದ ಪೀಠದಲ್ಲಿ ನಿನ್ನನ್ನು ಕುಳ್ಳಿರಿಸಿ ನಾನಾ ವಿಧದ ಸೂಕ್ತ ಮಂತ್ರಾದಿಗಳಿಂದ,ಶ್ರೇಷ್ಠವಾಗಿರುವ ತೀರ್ಥಗಳಿಂದ ನಿನ್ನ ಅಭಿಷೇಕವನ್ನು ಮಾಡುವೆನು ಸ್ವಾಮಿಯೇ.ಕೃಪೆಯುಳ್ಳವನಾಗಿ ಸ್ವೀಕರಿಸು.
ಜಲಧರ-ನಿಭಗಾತ್ರೇ ಸ್ವರ್ಣಯಜ್ಞೋಪವೀತಂ |
ನವಗುಣ-ಗಣಿತಂ ತತ್ ಪಾವನಂ ಪಾವನಾನಾಮ್ ||
ತಡಿದಿವ ಖಲುಪೀತಂ ವಸ್ತ್ರಮಚ್ಛೋತ್ತರೀಯಂ |
ಜಯ ರಘುವರ ದಾಸ್ಯೇ ತ್ವಂ ಗೃಹಾಣ ಸ್ವಮೇವ ||೪||
ಭಾವಾರ್ಥ:-ಬಂಗಾರದ ಮೂರೆಳೆಗಳುಳ್ಳ ಯಜ್ಞೋಪವೀತವನ್ನು ಜಲಾವೃತವಾಗಿರುವ ಮುಗಿಲನ್ನು ಹೋಲುವ ಶ್ಯಾಮಲ ವರ್ಣದವನಾದ ನಿನ್ನ ಕೊರಳಿಗೆ ಅರ್ಪಿಸುತ್ತಿರುವೆನು.ಮಿಂಚಿನಂತೆ ಪ್ರಕಾಶಮಯವಾದ ಹಳದಿಯ ವಸ್ತ್ರವನ್ನು ನಿನ್ನ ಉತ್ತರೀಯಕ್ಕಾಗಿ ಸಮರ್ಪಿಸುತ್ತಿರುವೆನು.ಇವೆಲ್ಲವುಗಳನ್ನು ಸ್ವೀಕರಿಸು ಸ್ವಾಮಿಯೇ! ಅಗ್ರಗಣ್ಯ ಶ್ರೀ ರಾಮಚಂದ್ರನೇ ನಿನಗೆ ಜಯವಾಗಲಿ.
ಕಿರೀಟ-ಹಾರಾಂಗದ-ಚಾರು-ಮೇಖಲಾ |
ಮುದ್ರಾದ್ಯನೇಕಾಕೃತಿ-ಭೂಷಣಾನಿ ||
ಮಹೀ-ಸುಗಂಧಂ ಪ್ರಗೃಹಾಣ ಚಾಕ್ಷತಾನ್ |
ಪುಷ್ಪೇಷು ಖಂ ರಾಮ ಮಯಾ ಸಮರ್ಪಿತಮ್ ||೫||
ಭಾವಾರ್ಥ:-ಕಿರೀಟ.ಮಾಲೆ,ಭುಜದ ಆಭರಣ,ಸುಂದರವಾಗಿರುವ ಸೊಂಟದ ಪಟ್ಟಿ,ಮನೋಹರವಾಗಿರುವ ಉಂಗುರಗಳು,ಸುಗಂಧಾಕ್ಷತೆ,ಮತ್ತು ಆಗಸ ವರ್ಣದ ಪುಷ್ಪಗಳನ್ನು ಅರ್ಪಿಸುತ್ತಿರುವೆನು.ಸ್ವೀಕರಿಸು ಸ್ವಾಮಿಯೇ!
ರಾಷ್ಟ್ರೋಪಪ್ಲವನಾಶಕಂ ಸುಲಲಿತಂ ವಾಯುಂ ಸುಧೂಪಂ ತಥಾ |
ರಾಮೇಮಂ ಪರಮಂ ದಿವಾಕರ ಮಹೋತೇಜೋಮಯಿ ದೀಪಿಕಾಂ ||
ರಾಜೀವಾರುಣಲೋಚನಾಮೃತಮಯಂ ಷಟ್ ಸ್ವಾದುಲೋಲೈರಸೈ: |
ಸಂಪನ್ನಂ ವಿನಿವೇದಿತಂ ಸುಮನಸಾ ನೈವೇದ್ಯಮಂಗೀಕುರು ||೬||
ಭಾವಾಥ:-ನಾಡಿಗೆ ಬೇಗೆಯನ್ನು ಕೊಡುವ ಕೆಟ್ಟ ವಾತಾವರಣವನ್ನು ಹೋಗಲಾಡಿಸಬಲ್ಲ ಉತ್ತಮ ಧೂಪವನ್ನೂ ಮನಮೋಹಕವಾದಂತಹಾ, ಸೂರ್ಯನಂತೆ ಪರಮ ತೇಜೋಮಯವಾಗಿರುವ ದೀಪವನ್ನೂ ಶ್ರೀರಾಮಚಂದ್ರನೇ ನಿನಗರ್ಪಿಸುತ್ತಿರುವೆನು.ಕಮಲವನ್ನು ಹೋಲುವ ನಯನಗಳುಳ್ಳ ರಾಜೀವ ಲೋಚನನೇ,ಶ್ರದ್ಧಾಭಕ್ತಿಗಳಿಂದ ಷಡ್ರಸಭರಿತ ಪಕ್ವಾನ್ನಗಳನ್ನು ನೈವೇದ್ಯರೂಪದಲ್ಲಿ ಅರ್ಪಿಸುತ್ತಿರುವೆನು ಸ್ವಾಮಿಯೇ; ಸ್ವೀಕರಿಸಿ ತೃಪ್ತನಾಗು.
ಮಧ್ಯೇ ಪಾನಮಿದಂ ಸುಶೀತಲ ಜಲಂ ವಾನೀರಗಂಧಾಭೃತಂ |
ರಾಮ ಸ್ವೀಕುರು ಮತ್ಸಮರ್ಪಿತಮಿದಂ ಹಸ್ತೋದಕಂ ನಿರ್ಮಲಮ್ ||
ತಾಂಬೂಲಂ ಸಫಲಂ ತ್ರಯೋದಶಗುಣಂ ಸ್ವಾತ್ಮೈಕರಾಗಾನ್ವಿತಂ |
ಶ್ರದ್ಧಾರತ್ನ-ಸುವರ್ಣಪುಷ್ಪಸಹಿತಾಂ ಗೃಹ್ಣಾತು ತಾಂ ದಕ್ಷಿಣಾಮ್ ||೭||
ಭಾವಾರ್ಥ:-ಸ್ವಾಮಿ ಶ್ರೀರಾಮಚಂದ್ರನೇ!ಉತ್ತಮ ಪರಿಮಳ ಭರಿತ ಬೇರಿನ ಚೆನ್ನಾಗಿ ತಂಪಾದ ಜಲವನ್ನು ಭೋಜನ ಸ್ವೀಕಾರದ ಮಧ್ಯದಲ್ಲಿ ಸ್ವೀಕರಿಸುವವನಾಗು.ಹಸ್ತವನ್ನು ತೊಳೆಯುವುದರ ಮೂಲಕವಾಗಿ ಶುದ್ಧೀಕರಿಸಲು ಸ್ವಚ್ಛವಾಗಿರುವ ನೀರಿಲ್ಲಿದೆ.ಆತ್ಮ ಸ್ವರೂಪದ, ಹದಿಮೂರು ಗುಣಗಳುಳ್ಳ ತಾಂಬೂಲವಿದೋ ಇಲ್ಲಿರಿಸಿರುವೆ.ದಕ್ಷಿಣಾರ್ಥವಾಗಿ ಇದೋ ಸುವರ್ಣ ಪುಷ್ಪಗಳನ್ನು ಸಮರ್ಪಿಸುತ್ತಲಿರುವೆನು. ಇವೆಲವುಗಳನ್ನು ಮಂಗಲದಾಯಕನೇ; ಸ್ವೀಕರಿಸು.
ಜಯಜಯತಿ ವಿಷ್ಣೂ ರಾಮನಾಮಾಭಿಧೇಯೋ |
ಜಯತಿ ಜಯತಿ ಪೂರ್ಣ: ಕೋಟಿಕಂದರ್ಪಭಾಸ: ||
ಜಯತಿ ಜಯತಿ ವಾದ್ಯೈರ್ನಾಟಕೈರ್ಗೀತ ನೃತ್ಯೈ- |
ರ್ಜಯ ಜಯ ತಿಮಿರಾರೇ ಗೃಹ್ಣ ನೀರಾಜನಂ ತ್ವಮ್ ||೮||
ಭಾವಾರ್ಥ:-ಶ್ರೀರಾಮನೆಂಬ ಹೆಸರಿನ ಶ್ರೀ ಮಹಾವಿಷ್ಣುವಿಗೆ ಜಯವಾಗಲಿ.ಕೋಟಿ ಮನ್ಮಥರ ತೇಜಸ್ಸನ್ನು ಹೊಂದಿರುವನೇ,ಪರಿಪೂರ್ಣನೇ;ನಿನಗೆ ಜಯವಾಗಲಿ.ನಾನಾ ವಿಧದ ಸಂಗೀತ-ವಾದ್ಯ-ನಾಟಕ-ನೃತ್ಯಗಳ ಮೂಲಕವಾಗಿ ನಿನ್ನ ಸೇವೆ ಗೈಯುತ್ತಿರುವೆ ಸ್ವಾಮಿಯೇ! ನಿನಗೆ ಜಯವಾಗಲಿ.ನನ್ನ ಅಜ್ಞಾನವೆಂಬ ಅಂಧಕಾರವನ್ನು ಕಳೆಯುವವನೇ,ಮಂಗಲಮಯವಾಗಿರುವ ನೀರಾಜನವನ್ನಿದೋ ಸ್ವೀಕರಿಸು.ನಿನಗಿದೋ ಜಯ ಜಯವೆನ್ನುವೆ.
ಸಾಮ್ರಾಜ್ಯ ಭೋಜ್ಯಾದಿ-ಸುಪಾರಮೇಷ್ಠ್ಯಾಂ |
ತಮತ್ರ ಯಜ್ಜಾಖಿಲ ವಸ್ತು ಜಾತಮ್ ||
ಏಕಾಕ್ಷರಂ ಬ್ರಹ್ಮಮಯಂ ಪ್ರಸಿದ್ಧ |
ಮೇವಾರ್ಪಯಾಮೀತಿ ಸುಮಂತ್ರ ಪುಷ್ಪಮ್ ||೯||
ಭಾವಾರ್ಥ:-ಅಖಂಡ ಸಾಮ್ರಾಜ್ಯ-ಭೋಗಭಾಗ್ಯಾದಿಗಳಿಂದ ಪರಮೇಷ್ಠಿಯವರೆಗೆ ನಿರ್ಮಿತವಾಗಿರುವ ವಸ್ತುಗಳೆಲ್ಲವೂ ಓಂಕಾರವೆಂಬ ಪದವಾಚ್ಯ ಸ್ವರೂಪವಾಗಿರುವ ಪರಬ್ರಹ್ಮನ ರೂಪಗಳೇ ಆಗಿದ್ದು ಅವೆಲ್ಲವುಗಳನ್ನು ಪರಮೋತ್ಕೃಷ್ಟವಾಗಿರುವ ಮಂತ್ರಗಳ ಮುಖೇನ ಪುಷ್ಪಾಂಜಲಿ ಎಂಬುದಾಗಿ ನಿನಗರ್ಪಿಸುತ್ತಿರುವೆನು ಪ್ರಭುವೇ! ಕರುಣಾಸಾಗರ ಶ್ರೀರಾಮಚಂದ್ರನೇ ಸ್ವೀಕರಿಸುವವನಾಗು ಪ್ರಭುವೇ!
ಜಯ ಜಯ ಕರುಣಾಬ್ದೇsನಂತ ಭಾನುಪ್ರಕಾಶ |
ಜಯ ಜಯ ಜಗದೀಶಾವ್ಯಕ್ತ ಮಾಯಾಧಿದೇವ ||
ಜಯ ಜಯ ಧರಣೀಜಾವಲ್ಲಭಾನಂತವೀರ್ಯ |
ಜಯ ಜಯ ರಘುನಾಥ್ಹಾನಾಥನಾಥ ಪ್ರಸೀದ ||೧೦||
ಭಾವಾರ್ಥ:-ಕರುಣಾಸಾಗರನೇ,ಅನಂತಾನಂತ ಸೂರ್ಯಪ್ರಕಾಶನೇ,ನಿನಗೆ ಜಯವಾಗಲಿ.ಹೇ!ಜಗದೊಡೆಯನೇ,ಅಸ್ಪಷ್ಟವಾಗಿರುವ ವಿಶಿಷ್ಟ ಶಕ್ತಿಗಳ ಅಧಿಪತಿಯೇ,ನಿನಗೆ ಜಯವಾಗಲಿ. ಭೂಮಾತೆಯ ತನಯೆ ಜಾನಕೀದೇವಿಯ ಪತಿಯೇ,ಅಪರಿಮಿತ ಪರಾಕ್ರಮಿಯೇ,ನಿನಗೆ ಜಯವಾಗಲಿ.ಅನಾಥರೊಡೆಯಾ, ರಘುನಾಥನೇ ಪ್ರಸನ್ನನಾಗು ಪ್ರಭುವೇ.ನಿನಗೆ ಜಯವಾಗಲಿ.
ಯಜ್ಞೇಶ ಯಜ್ಞಾಧಿಪ ಯಜ್ಞಪಾಲ |
ಯಶ: ಪ್ರಧಾಧೋಕ್ಷಜ ರಾಮಚಂದ್ರ ||
ಪ್ರದಕ್ಷಿಣಾಂ ತೇ ಪ್ರಕರೋಮಿ ನಿತ್ಯಂ |
ಪದೇ ಪದೇನಂತ ಮುಖಾದಿ ದಾತ್ರಿಮ್ ||೧೧||
ಭಾವಾರ್ಥ:-ಯಜ್ಞೇಶನೇ,ಯಜ್ಞರಕ್ಷಕನೇ,ಯಜ್ಞಗಳೊಡೆಯನೇ,ಅತೀಂದ್ರಿಯ ಜ್ಞಾನಿಯೇ, ಶ್ರೀರಾಮಚಂದ್ರನೇ, ಯಶ:ಕರನೇ,ಅನುದಿನವೂ ನಿನಗೆ ಪ್ರದಕ್ಷಿಣೆ ಬರುತ್ತಿರುವೆನು. ಆ ರೀತಿ ಬರುವ ಪ್ರದಕ್ಷಿಣೆಗಳು ಪ್ರತಿ ಹೆಜ್ಜೆಹೆಜ್ಜೆಗೂ ಅನಂತ ಯಜ್ಞಾದಿಗಳ ಫಲವನ್ನು ಒದಗಿಸಿಕೊಡುತ್ತವೆ.
ರಾಜಾಧಿರಾಜಾಯ ರಮಾವರಾಯ |
ರಾತ್ರಿಂಚರಾಣಾಮಭಿ ಸಂಹರಾಯ ||
ರಾಜ್ಯಾಭಿಷಿಕ್ತಾಯ ರಘೂತ್ತಮಾಯ |
ಶ್ಯಾಮಾಯ ರಾಮಾಯ ನಮೋ ನಮಸ್ತೇ ||೧೨||
ಭಾವಾರ್ಥ:-ರಾಜಾಧಿರಾಜನಿಗೆ,ರಮಾಕಾಂತನಿಗೆ,ದಾನವ ಸಂಹಾರಕಗೆ,ರಾಜ್ಯಾಭಿಷಿಕ್ತಗೆ, ರಘುಕುಲಾಗ್ರಗಣ್ಯಗೆ,ಶ್ಯಾಮಲವರ್ಣಗೆ,ಸ್ವಾಮಿ ಶ್ರೀರಾಮಚಂದ್ರನಿಗೆ ಪುನ:ಪುನ:ನಮಸ್ಕರಿಸುವೆನು.
ಪ್ರಭೋ ಚಾಮರಾದರ್ಶ ಛತ್ರಾದಿಕಾನ್ವೈ |
ಮಹಾರಾಜ ರಾಜೋಪಚಾರಾನ್ ಗೃಹಾಣ ||
ಸುಹೃತ್ಪದ್ಮಪೀಠಂ ಮುರಾರೇ ಪ್ರವಿಶ್ಯ |
ಮಮೇಶಾಪರಾಧಾನ್ ಹಿ ಸರ್ವಾನ್ ಕ್ಷಮಸ್ವ ||೧೩||
ಭಾವಾರ್ಥ:-ದೊರೆಯೇ!ಮಹಾರಾಜನೇ,ಚಾಮರ,ಛತ್ರ,ಕನ್ನಡಿ ಇತ್ಯಾದಿಯಾದ ರಾಜೋಪಚಾರಗಳನ್ನು ಸ್ವೀಕರಿಸುವವನಾಗು.ಮುರಾರಿಯೇ!ಸ್ವಾಮೀ;ನನ್ನ ಹೃತ್ಕಮಲ ಪೀಠದ ಮೇಲೆ ಆಶ್ರಯವನ್ನು ಹೊಂದುವವನಾಗು .ತನ್ಮೂಲಕ ನನ್ನ ಸರ್ವಾಪರಾಧಗಳನ್ನು ಕ್ಷಮಿಸಿ ಉದ್ಧರಿಸು.
ಇತ್ಯೇವ ಸಾಂಗಮುಪಚಾರ ಯುಕ್ತಾಂ |
ಶ್ರೀ ರಾಮಪೂಜಾಂ ಹೃದಯೇ ಬಹಿರ್ವಾ ||
ಕುರ್ವಂತಿ ಯೇ ಧರ್ಮಮಥಾರ್ಥಕಾಮಾನ್ |
ಮೋಕ್ಷಾದಿಕಾಂ ಸಂಪದ ಮಾಪ್ನುವಂತಿ ||೧೪||
ಭಾವಾರ್ಥ:-ಯಾರು ಈ ರೀತಿಯಾಗಿ ಶ್ರೀರಾಮಚಂದ್ರ ಪ್ರಭುವಿನ ಆರಾಧನೆಯನ್ನು ಮಾನಸೋಪಚಾರಗಳಿಂದಾಗಲೀ ಬಾಹ್ಯೋಪಚಾರಗಳಿಂದಾಗಲೀ ಸಂಪೂರ್ಣವಾಗಿ ಮಾಡುವರೋ ಅಂತಹವರಿಗೆ ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಂಪದಗಳು ಲಭಿಸುವವು.
ಶ್ರೀ ವರ್ಣಪೂರ್ವಂ ಸಕಲಾರ್ಥದಂ ವೈ |
ರಾಮೇತಿವರ್ಣದ್ವಯಮೇವ ಪೂರ್ವಮ್ ||
ಜಯೇತಿ ರಾಮೇತಿ ಜಯದ್ವಯೇತಿ |
ರಾಮೇತಿ ಜಪ್ತ್ವಾತು ಪುನರ್ನಜನ್ಮ ||೧೫||
ಭಾವಾರ್ಥ:-"ರಾಮ"ಎಂಬ ದ್ವಯಾಕ್ಷರಕ್ಕೆ ಮೊದಲು "ಶ್ರೀ" ಎಂಬ ಸಕಲ ಇಷ್ಟಾರ್ಥಗಳನ್ನು ಕರುಣಿಸುವ ಅಕ್ಷರವನ್ನು ಜೋಡಿಸಬೇಕು.ಆ ಮೇಲೆ "ಜಯ" ಎಂಬ ಪದವನ್ನು ಕೂಡಿಸಿ ನಂತರ "ರಾಮ"ಎಂಬ ಶಬ್ದವನ್ನು ಯೋಜಿಸಿ ಮತ್ತೆ ಅವುಗಳ ಮುಂದೆ "ಜಯ ಜಯ ರಾಮ"ಎನ್ನುವ ಶಬ್ದಗಳನ್ನು ಹೊಂದಿಸಬೇಕು.ಆಗ "ಶ್ರೀರಾಮ ಜಯರಾಮ ಜಯ ಜಯ ರಾಮ" ಎಂಬ ತ್ರಯೋದಶಾಕ್ಷರೀ ಶ್ರೀರಾಮ ಮಹಾ ಮಂತ್ರವು ಲಭಿಸುತ್ತದೆ.ಈ ಮಹಾ ಮಂತ್ರಾನುಷ್ಠಾನ ಮಾಡುವವರಿಗೆ ಪುನರ್ಜನ್ಮವಿಲ್ಲದೆ ಶಾಶ್ವತವಾದ ಮುಕ್ತಿಯು ದೊರಕುವುದು.
*********************************************************************
|| ಇತಿ ಶ್ರೀಮದ್ ಶಂಕರಾಚಾರ್ಯ ವಿರಚಿತ ಶ್ರೀ ರಾಮಮಾನಸ ಪೂಜಾ ಸ್ತೋತ್ರಮ್ ||
|| ಈ ತೆರನಾಗಿ ಶ್ರೀಮದ್ ಶಂಕರಾಚಾರ್ಯ ವಿರಚಿತ ಶ್ರೀ ರಾಮಮಾನಸ ಪೂಜಾ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೧೩-
|| ಶ್ರೀರಾಮಾಷ್ಟಕಮ್ ||
********************
ಕೃತಾರ್ತದೇವವಂದನಂ |
ದಿನೇಶವಂಶನಂದನಮ್ ||
ಸುಶೋಭಿಭಾಲಚಂದನಮ್ |
ನಮಾಮಿ ರಾಮಮೀಶ್ವರಮ್ ||೧||
ಭಾವಾರ್ಥ:-ಸಂಕಟಕ್ಕೀಡಾದ ದುರ್ದೈವೀ ದೇವತೆಗಳು ಯಾರಿಗೆ ಶಿರಬಾಗಿ ವಂದಿಸುವರೋ,ಯಾರಿಂದ ರವಿವಂಶಕ್ಕೆ ಸಂತಸವುಂಟಾಗುವುದೋ,ಯಾರ ನೊಸಲು ಚಂದನದಿಂದ ಬೆಳಗುವುದೋ ಅಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಮುನೀಂದ್ರಯಜ್ಞಕಾರಕಂ |
ಶಿಲಾವಿಪತ್ತಿಹಾರಕಮ್ ||
ಮಹಾಧನುರ್ವಿದಾರಕಂ |
ನಮಾಮಿ ರಾಮಮೀಶ್ವರಮ್ ||೨||
ಭಾವಾರ್ಥ:-ಮುನಿಗಳಯಜ್ಞರಕ್ಷಕನಾಗಿ,ಯಜ್ಞವನ್ನು ಪೂರ್ಣಗೊಳಿಸಿದವನೂ,ಶಿಲೆಯಾಗಿದ್ದ ಅಹಲ್ಯೆಯ ಶಾಪವನು ಪರಿಹರಿಸಿದವನೂ, ಶಿವ ಧನುಸ್ಸನ್ನು ಮುರಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಸ್ವತಾತವಾಕ್ಯಕಾರಿಣಂ |
ತಪೋವನೇ ವಿಹಾರಿಣಂ ||
ಕರೇಸುಚಾಪ ಧಾರಿಣಂ
ನಮಾಮಿ ರಾಮಮೀಶ್ವರಮ್ ||೩||
ಭಾವಾರ್ಥ:-ತನ್ನ ಪಿತೃ ವಾಕ್ಯವನ್ನು ಪರಿಪಾಲಿಸಿದವನೂ,ತಪೋಭೂಮಿಯಲ್ಲಿ ವಿಹರಿಸಿದವನೂ,ಅಲ್ಲದೆ ಹಸ್ತದಲ್ಲಿ ಉತ್ತಮವಾದ ಬಿಲ್ಲನ್ನು ಹಿಡಿದುಕೊಂಡಿರುವವನೂ,ಆಗಿರುವಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಕುರಂಗಮುಕ್ತಸಾಯಕಂ |
ಜಟಾಯು ಮೋಕ್ಷದಾಯಕಂ ||
ಪ್ರವಿದ್ಧಕೀಶ ನಾಯಕಂ |
ನಮಾಮಿ ರಾಮಮೀಶ್ವರಮ್ ||೪||
ಭಾವಾರ್ಥ:-ಮಾಯಾಮೃಗವನ್ನು ಬೆನ್ನಟ್ಟಿ ಬಾಣವನ್ನು ಪ್ರಯೋಗಿಸಿದನೂ,ಜಟಾಯುವಿಗೆ ಮೋಕ್ಷವನ್ನು ದಯಪಾಲಿಸಿದವನೂ,ವಾನರಾಧೀಶ ವಾಲಿಯನ್ನು ನಿಗ್ರಹಿಸಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಪ್ಲವಂಗ ಸಂಗ ಸಮ್ಮತಿಂ |
ನಿಬದ್ಧನಿಮ್ನಗಾಪತಿಮ್ ||
ದಶಾಸ್ಯವಂಶಸಂಗತಿಂ |
ನಮಾಮಿ ರಾಮಮೀಶ್ವರಮ್ ||೫||
ಭಾವಾರ್ಥ:-ಕಪಿಕುಲದೊಡನೆ ಸ್ನೇಹವನ್ನು ಬೆಳೆಸಿದವನೂ,ಸಾಗರಕ್ಕೆ ಸೇತುವೆಯನ್ನು ರಚಿಸಿದವನೂ,ರಾವಣನ ವಂಶವನ್ನು ನಿರ್ನಾಮಗೊಳಿಸಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ವಿದೀನದೇವಹರ್ಷಣಂ |
ಕಪೀಪ್ಸಿತಾರ್ಥವರ್ಷಣಮ್ ||
ಸ್ವಬಂಧು ಶೋಕಕರ್ಷಣಂ |
ನಮಾಮಿ ರಾಮಮೀಶ್ವರಮ್ ||೬||
ಭಾವಾರ್ಥ:-ದೀನರಾದಂತಹಾ ದೇವತೆಗಳನ್ನು ಸಂತಸಗೊಳಿಸಿದವನೂ,ಕಪಿಗಳ ಅಭೀಷ್ಠಗಳನ್ನು ನೆರವೇರಿಸಿದಾತನೂ,ತನ್ನ ಬಂಧುವರ್ಗದವರ ದು:ಖವನ್ನು ಶಾಂತ ಮಾಡಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಗತಾರಿರಾಜ್ಯರಕ್ಷಣಂ |
ಪ್ರಜಾಜನಾರ್ತಿಭಕ್ಷಣಂ ||
ಕೃತಾಸ್ತಮೋಹ ಲಕ್ಷಣಂ |
ನಮಾಮಿ ರಾಮಮೀಶ್ವರಮ್ ||೭||
ಭಾವಾರ್ಥ:-ಅಜಾತಶತ್ರುವೂ,ನಿಷ್ಕಂಟಕನೂಆಗಿರುವ ರಾಜ್ಯಪರಿಪಾಲಕನೂ,ಪ್ರಜಾವರ್ಗಕ್ಕೆ ಅಭಯಪ್ರದಾಯಕನೂ,ಮೋಹವನ್ನು ವಿನಾಶಗೊಳಿಸುವವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಹೃತಾಖಿಲಾಚಲಾಭರಂ |
ಸ್ವಧಾಮನೀತ ನಾಗರಂ ||
ಜಗತ್ತಮೋ ದಿವಾಕರಂ |
ನಮಾಮಿ ರಾಮಮೀಶ್ವರಮ್ ||೮||
ಭಾವಾರ್ಥ:-ಭೂಮಿಯ ಸಮಗ್ರ ಭಾರವನ್ನು ಹರಣಗೈದವನೂ,ತನ್ನರಮನೆಯ ನಿವಾಸಿಗಳಿಗೆಲ್ಲ ಆಶ್ರಯಧಾಮನಾದವನೂ,ಬ್ರಹ್ಮಾಂಡದ ಅಂಧಕಾರಕ್ಕೆ ರವಿಸ್ವರೂಪನಾಗಿ ಜ್ಯೋತಿರ್ಮಯಿಯಾದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಇದಂ ಸಮಾಹಿತಾತ್ಮ ನಾ |
ನರೋ ರಘೂತ್ತಮಾಷ್ಟಕಮ್ ||
ಪಠನ್ನಿರಂತರಂ ಭಯಮ್ |
ಭಯೋದ್ಭವಂ ನ ವಿಂದತೇ ||೯||
ಭಾವಾರ್ಥ:-ಈರಾಮಾಷ್ಟಕವನ್ನು ಏಕಾಗ್ರಚಿತ್ತನಾಗಿ ಯಾವಾತನು ಸದಾ ಪಠಿಸುವನೋ ಅಂತಹವನಿಗೆ ಸಾಂಸಾರಿಕವಾಗಿ ಉದ್ಭವಿಸುವ ಯಾವುದೇ ಭೀತಿಯು ಉಂಟಾಗಲಾರದು.
*********************************************************************
|| ಇತಿ ಶ್ರೀರಾಮಾಷ್ಟಕಮ್ ||
|| ಈ ರೀತಿಯಾಗಿ ಶ್ರೀರಾಮಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೪-
|| ಶ್ರೀ ಸೀತಾರಾಮಾಷ್ಟಕಮ್ ||
************************
ಬ್ರಹ್ಮ ಮಹೇಂದ್ರ ಸುರೇಂದ್ರ ಮರುದ್ಗಣ ರುದ್ರ ಮುನೀಂದ್ರ ಗಣೈರತಿ ರಮ್ಯಂ |
ಕ್ಷೀರಸರಿಸ್ಪತಿ ತೀರಮುಪೇತ್ಯ ನುತಂ ಹಿ ಸತಾಮ ವಿತಾರ ಮುದಾರಮ್ ||
ಭೂಮಿಭರಪ್ರಶಮಾರ್ಥಮಥ ಪ್ರಥಿತ ಪ್ರಕಟೀಕೃತ ಚಿದ್ಘನಮೂರ್ತಿಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೧||
ಭಾವಾರ್ಥ:-ಬ್ರಹ್ಮ,ಶಿವ,ದೇವೇಂದ್ರ,ಮರುದ್ಗಣಾದಿಗಳು,ರುದ್ರರು,ಮತ್ತುಮುನಿವರ್ಯರು ಅತಿರಮಣೀಯವಾಗಿರುವ ಪಾಲ್ಗಡಲ ಸಮೀಪಕ್ಕೆ ಹೋಗಿ,ಸಾಧು ಪರಿಪಾಲಕನೂ,ಅತಿ ಧಾರಾಳಿಯೂ ಆಗಿರುವ ರಘುಕುಲ ಶ್ರೇಷ್ಠನಾಗಿರುವ ನಿನ್ನನ್ನು ಸ್ತುತಿಸಿದರು.ಆಗ ಭೂಭಾರವನ್ನು ಇಳಿಸಲೋಸುಗ ನೀನು ನಿನ್ನ ಪರಮಾತ್ಮಸ್ವರೂಪವನ್ನು ಪ್ರಕಟಗೊಳಿಸಿದೆ.ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಪದ್ಮದಲಾಯತ ಲೋಚನ ಹೇ ರಘುವಂಶ ವಿಭೂಷಣ ದೇವದಯಾಲೋ |
ನಿರ್ಮಲ ನೀರದ ನೀಲ ತತೋsಖಿಲ ಲೋಕ ಹೃದಂಬುಜ ಭಾಸಕಭಾನೋ ||
ಕೋಮಲಗಾತ್ರ ಪವಿತ್ರ ಪದಾಬ್ಜ ರಜ:ಕಣಪಾವಿತ ಗೌತಮ ಕಾಂತಾ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೨||
ಭಾವಾರ್ಥ:-ಹೇ!ತಾವರೆಯಂತೆ ಕಣ್ಣುಗಳನ್ನು ಹೊಂದಿರುವವನೇ,ರಘುಕುಲ ವಿಭೂಷಣನೇ,ದೇವನೇ,ಕರುಣಾಳುವೇ,ಸ್ವಚ್ಛವಾಗಿರುವ ಕಾರ್ಮುಗಿಲನ್ನು ಹೋಲುವ ಸುಂದರ ಶರೀರವುಳ್ಳವನೇ,ಸದಾ ಭಕ್ತಜನರ ಹೃತ್ಕಮಲಗಳನ್ನರಳಿಸುವ ರವಿ ಸ್ವರೂಪನೇ,ಅತೀ ಮನಮೋಹಕ ದೇಹವುಳ್ಳಾತನೇ,ಅತ್ಯಂತ ಪಾವನಮಯವಾಗಿರುವ ನಿನ್ನ ಪಾದಕಮಲಗಳ ಧೂಲಿಯಿಂದ ಗೌತಮಮುನಿಯ ಪತ್ನಿ ಅಹಲ್ಯೆಯನ್ನು ಪಾವನಗೊಳಿಸಿದವನೇ, ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಪೂರ್ಣ ಪರಾತ್ಪರ ಪಾಲಯ ಮಾಮತಿ ದೀನಮನಾಥಮನಂತ ಸುಖಾಬ್ದೇ |
ಪ್ರಾವೃಡದಭ್ರತಡಿತ್ಸು ಮನೋಹರ ಪೀತವರಾಂಬರ ರಾಮ ನಮಸ್ತೇ ||
ಕಾಮ ವಿಭಂಜನ ಕಾಂತತರಾನನ ಕಾಂಚನ ಭೂಷಣ ರತ್ನ ಕಿರೀಟಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೩||
ಭಾವಾರ್ಥ:-ಎಲೈ ಪೂರ್ಣ ಸ್ವರೂಪನೇ,ಪರಾತ್ಪರರೂಪಿಯೇ,ಅನಂತಸುಖಸಾಗರನೇ,ಅತಿ ದರಿದ್ರನೂ,ದಿಕ್ಕಿಲ್ಲದನೂ ಆಗಿರುವ ನನ್ನನ್ನು ಪರಿಪಾಲಿಸು ಸ್ವಾಮೀ.ಮಳೆಗಾಲದಲ್ಲಿ ಕಾಣುವ ಚಂಚಲ ಮಿಂಚಿನಂತೆ ಮನೋಹರವಾಗಿರುವ ಪೀತವಸನಧಾರಿಯೇ,ಶ್ರೀರಾಮಚಂದ್ರನೇ,ನಿನಗಿದೋ ನಮನಗಳು.ಹೇ!ಮನ್ಮಠನ ಗರ್ವವನ್ನು ನಾಶಮಾಡಿದವನೇ, ಸುಂದರಮೊಗದವನೇ,ಸ್ವರ್ಣಭೂಷಿತನೇ, ರತ್ನಕೀರೀಟಧಾರಿಯೇ,ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ದಿವ್ಯಶರಚ್ಛಶಿಕಾಂತಿಹರೋಜ್ವಲ ಮೌಕ್ತಿಕಮಾಲವಿಶಾಲಮೌಲೇ |
ಕೋಟಿರವಿಪ್ರಭ ಚಾರುಚರಿತ್ರ ಪವಿತ್ರ ವಿಚಿತ್ರಧನು:ಶರಪಾಣೇ ||
ಚಂಡಮಹಾಭುಜದಂಡವಿಖಂಡಿತರಾಕ್ಷಸರಾಜಮಹಾಗಜದಂಡಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೪||
ಭಾವಾರ್ಥ:-ಶರದೃತುವಿನ ಚಂದ್ರನ ಸುಂದರ ಕಾಂತಿಯನ್ನು ದೂಷಿತಗೊಳಿಸುವಂತಹಾ ಉಜ್ವಲವಾಗಿರುವ ಮುತ್ತಿನಮಾಲೆಯನ್ನು ವಿಶಾಲವಾಗಿರುವ ಕುತ್ತಿಗೆಯಲ್ಲಿ ಧರಿಸಿದ,ಕೋಟಿಸೂರ್ಯರ ಪ್ರಕಾಶವುಳ್ಳ ಸದಾಚಾರದಿಂದ ಪಾವನನಾಗಿರುವ,ಕರಕಮಲಗಳಲ್ಲಿ ವಿಶಿಷ್ಟವಾದ ಬಿಲ್ಲು ಬಾಣಗಳನ್ನು ಹಿಡಿದಿರುವ ಹಾಗೂಭಯಂಕರವಾದ ಭುಜದಂಡಗಳಿಂದ ಮದದಾನೆಯಂತಹಾ ರಾವಣನೆಂಬಾತನನ್ನು ವಧಿಸಿದ ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ದೋಷವಿಹಿಂಸ್ರಭುಜಂಗಸಹಸ್ರಸುರೋಪಮಹಾನಲಕೀಲಕಲಾಪೇ |
ಜನ್ಮಜರಾಮರಣೋರ್ಮಿಮಯೇ ಮದಮನ್ಮಥನಕ್ರವಿಚಕ್ರ ಭವಾಬ್ದೌ ||
ದು:ಖನಿಧೌ ಚ ಚಿರಂ ಪತಿತಂ ಕೃಪಯಾದ್ಯಸಮುದ್ದರ ರಾಮ ತತೋ ಮಾಮ್ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೫||
ಭಾವಾರ್ಥ:-ಅವಗುಣಗಳ ಸಾಕಾರವಾಗಿರುವ ಹಿಂಸಾಭರಿತ ಸಾವಿರಾರು ಸರ್ಪಗಳೂ,ಕೋಪದ ಸಾಕಾರವಾಗಿರುವ ಕಡಲ್ಗಿಚ್ಚಿನ ಜ್ವಾಲೆಗಳೂ,ಹುಟ್ಟು,ವಾರ್ಧಕ್ಯ,ಮರಣ ರೂಪಿನ ತೆರೆಗಳೂ,ಅಂತೆಯೇ ಮದ,ಮೋಹ ರೂಪಿನ ಮತ್ಸ್ಯ-ಮಕರಗಳೂ,ನೀರಿನ ಸುಳಿಯಂತಿರುವ ಸಂಸಾರ ಸಾಗರದಲ್ಲಿ ಸಿಲುಕಿಕೊಂಡಿರುವ ನನ್ನನ್ನು,ಎಲೈ ಶ್ರೀರಾಮನೇ ದಯಾಭರಿತನಾಗಿ ರಕ್ಷಿಸುವವನಾಗು. ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಸಂಸ್ಕೃತಿಘೋರ ಮದೋತ್ಕಟಕುಂಜರ ತೃಟ್ ಕ್ಷುದನೀರದಪಿಂಡಿತತುಂಡಂ |
ದಂಡಕರೋನ್ಮಥಿತಂ ಚ ರಜಸ್ತಮ ಉನ್ಮದಮೋಹ ಪದೋಜ್ಝ್ರಿತಮಾರ್ತಮ್ ||
ದೀನಮನನ್ಯಗತಿಂ ಕೃಪಣಂ ಶರಣಾಗತ ಮಾತು ವಿಮೋಚಯ ಮೂಢಮ್ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೬||
ಭಾವಾರ್ಥ:-ಸಂಸಾರವೆಂಬುದು ಹಸಿವು ಬಾಯಾರಿಕೆಗಳೆಂಬ ಹರಿತವಾದ ಹಲ್ಲುಗಳುಳ್ಳ ಮದವೇರಿರುವ ಒಂದು ಆನೆಯಂತಿದೆ.ಆ ಆನೆಯ ಯಮಸ್ವರೂಪೀ ಸೊಂಡಿಲಿನಲ್ಲಿ ಸಿಕ್ಕಿದ ರಜ-ತಮ-ಉನ್ಮಾದ ಹಾಗೂ ಮೋಹಗಳೆಂಬ ನಾಲ್ಕೂ ಪಾದಗಳ ತುಳಿತಕ್ಕೆ ಈಡಾಗಿರುವ ತೀರಾದೀನನೂ,ದು:ಖಕ್ಕೆ ಸಿಲುಕಿದವನೂ,ಅನನ್ಯ ಶರಣಾಗತನೂ,ಮೂಢನೂ,ಆಗಿರುವ ನನ್ನನ್ನು ಬೇಗನೆ ಬಿಡಿಸುವವನಾಗು.ಮತ್ತು ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಜನ್ಮಶತಾರ್ಜಿತಪಾಪಸಮನ್ವಿತಹೃತ್ಕಮಲೇ ಪತಿತೇ ಪಶುಕಲ್ಪೇ |
ಹೇ ರಘುವೀರ ಮಹಾರಣಧೀರ ದಯಾಂಕುರು ಮಯ್ಯತಿಮಂದಮನೀಷೇ ||
ತ್ವಂ ಜನನೀ ಭಗಿನೀ ಚ ಪಿತಾ ಮಮತಾವದಸಿ ತ್ವವಿತಾ??ಪಿ ಕೃಪಾಲೊ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೭||
ಭಾವಾರ್ಥ:-ಹಿಂದಿನ ನೂರಾರು ಜನ್ಮಗಳಿಂದ ಶೇಖರವಾದ ಪಾಪಲೇಪಗಳಿಂದ ಕೂಡಿದಹೃತ್ಕಮಲದವನೂ,ಪಶುವಿನೋಪಾದಿಯಲ್ಲಿ ಪಾವನವಾದವನೂ,ಅತ್ಯಂತ ಮಂದಮತಿಯೂ ಆಗಿರುವ ನನ್ನ ಬಗೆಗೆ ಹೇ!ರಣಧೀರ ರಘುವರನೇ,ಕರುಣೆದೋರು.ನೀನೇ ನನ್ನ ತಾಯಿ,ತಂದೆ,ಸೋದರಿಯಾಗಿರುವೆ.ಹೇ!ದಯಾಪೂರ್ಣನೇ;ನೀನೇ ನನ್ನ ಪರಿಪಾಲಕನು. ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ತ್ವಾಂ ತು ದಯಾಲುಮ ಕಿಂಚನವತ್ಸಲಮುತ್ಪಲಹಾರಮಪಾರಮುದಾರಂ |
ರಾಮವಿಹಾಯ ಕಮನ್ಯಮನಾಯಮಮೀಶ ಜನಂ ಶರಣಂ ನನು ಯಾಯಮ್ ||
ತ್ವತ್ಪದಪದ್ಮ ಮತ:ಶ್ರೀತಮೇವ ಮುದಾಖಲು ದೇವ ಸದಾವ ಸಸೀತಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೮||
ಭಾವಾರ್ಥ:-ನನ್ನೊಡೆಯನಾಗಿರುವ ಹೇ ಶ್ರೀರಾಮಚಂದಿರನೇ,ಕಂಠದೊಳು ಕಮಲಪುಷ್ಪಮಾಲಿಕೆಯನ್ನು ಧರಿಸಿದ ನಿನ್ನಂತಹಾ ಅತ್ಯಂತ ಉದಾರಚರಿತನೂ,ಬಡವರಬಂಧುವೂ,ಕರುಣಾಮಯಿಯೂ,ಆಗಿರುವ ಒಡೆಯನನ್ನು ತ್ಯಜಿಸಿ ನಾನಿನ್ನ್ಯಾವ ಪರಿಶುದ್ಧ ಪುರುಷನಿಗೆ ಶರಣು ಹೊಗಲಿ?ಆದುದರಿಂದ ನಾನು ನಿನ್ನ ಚರಣಾರವಿಂದಗಳನ್ನು ಆಶ್ರಯಿಸಿರುವೆ.ಹೇ ಸೀತಾಸಮೇತ ಶ್ರೀರಾಮಚಂದ್ರನೇ!ನೀನು ಸಂತೋಷಚಿತ್ತನಾಗಿ ನಿರಂತರವೂ ನನ್ನನು ಪರಿಪಾಲಿಸು. ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಯ: ಕರುಣಾಮೃತಸಿಂಧುರನಾಥಜನೋತ್ತಮಬಂಧುರ ಜೋತ್ತಮಕಾರೀ |
ಭಕ್ತಭಯೋವೀರ್ಭವಾಬ್ಧಿತರಿ: ಸರಯೂತಟನೀತಟಚಾರು ವಿಹಾರೀ ||
ತಸ್ಯ ರಘುಪ್ರವರಸ್ಯ ನಿರಂತರಮಷ್ಟಕಮೇತದನಿಷ್ಟ ಹರಂ ವೈ |
ಯಸ್ತು ಪಠೇದಮರ: ಸ ನರೋಲಭತೇsಚ್ಯುತರಾಮ ಪದಾಂಬುಜದಾಸ್ಯಮ್ ||೯||
ಭಾವಾರ್ಥ:-ದಯೆಯೆನ್ನುವ ಅಮೃತಮಯ ಸಾಗರನೂ,ಅನಾಥರಿಗೆ ಅಧಿಕತಮ ಬಂಧುವೂ,ಮತ್ತು ಶ್ರೇಷ್ಠ ಕರ್ಮಗಳಿಗೆ ನಿಮಿತ್ತನೂ,ಭೀಕರವಾಗಿರುವ ಸಂಸಾರಸಾಗರದ ತೆರೆಗಳಿಂದ ಭಕ್ತರನ್ನು ರಕ್ಷಿಸುವ ಅಂಬಿಗಸ್ವರೂಪನೂ,ಹಾಗೆಯೇ ಸರಯೂ ನದಿಯ ತಟಾಕದಲ್ಲಿ ಮನಮೋಹಕವಾಗಿರುವ ವಿನೋದಗಳನ್ನು ರೂಢಿಸಿಕೊಂಡವನೂ,ಆಗಿರುವ ಆ ಶ್ರೀರಘುವರಶ್ರೇಷ್ಠನ ಈ ಅಷ್ಟಕಗಳು ನಿರಂತರವಾಗಿ ಭಕ್ತರ ಸರ್ವಾನಿಷ್ಟಗಳನ್ನು ದೂರೀಕರಿಸಿ ಅವರನ್ನು ಅಮರತ್ವಕ್ಕೆ ಕೊಂಡೊಯ್ಯುವುದಲ್ಲದೆ ಅವರಿಗೆ ಭಗವಾನ್ ಶ್ರೀರಾಮಚಂದ್ರನ ಚರಣಾರವಿಂದಗಳಲ್ಲಿ ಸೇವಾವೃತ್ತಿಯನ್ನು ಒದಗಿಸಿಕೊಡುವುದು.
*********************************************************************
|| ಇತಿ ಶ್ರೀ ಸೀತಾರಾಮಾಷ್ಟಕಮ್ ||
|| ಈ ರೀತಿಯಾಗಿ ಶ್ರೀ ಸೀತಾರಾಮಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೫-
|| ಇಂದ್ರಕೃತ ಶ್ರೀ ರಾಮ ಸ್ತೋತ್ರಮ್ ||
***********************************
ಭಜೇsಹಂ ಸದಾ ರಾಮಮಿಂದೀವರಾಭಂ |
ಭವಾರಣ್ಯ ದಾವಾನಲಾಭಿದಾನಂ ||
ಭವಾನೀ ಹೃದಾಭಾವಿತಾನಂದ ರೂಪಂ |
ಭವಾಭಾವಹೇತುಂ ಭವಾದಿಪ್ರಪನ್ನಮ್ ||೧||
ಭಾವಾರ್ಥ:-ನೀಲಿತಾವರೆಯ ಕಾಂತಿಯ ರಾಶಿಯಂತಿರುವ ದೇಹವುಳ್ಳವನೂ, ಸಂಸಾರವೆಂಬ ಕಾನನಕ್ಕೆ ದಾವಾನಿಲದಂತಿರುವವನೂ, ಚೆಲುವಿಗೆ ಹೆಸರಾದವನೂ, ಪಾರ್ವತೀ ದೇವಿಯ ಹೃದಯದಲ್ಲಿ ಆನಂದ ಸ್ವರೂಪನಾಗಿ ತಿಳಿಯಲ್ಪಡುವವನೂ, ಸಂಸಾರದ ಕಷ್ಟಕಾರ್ಪಣ್ಯಗಳನ್ನು ನಾಶ ಮಾಡುವಾತನೂ, ಹರನೇ ಆದಿಯಾಗಿ ಸಮಸ್ತ ದೇವರ್ಕಳಿಂದ ಆರಾಧಿಸಲ್ಪಡುವಾತನೂ ಆಗಿರುವ ಶ್ರೀರಾಮನನ್ನು ನಾನು ಸದಾ ಸ್ತುತಿಸುವೆನು.
ಸುರಾನೀಕ ದು:ಖೌಘನಾಶೈಕ ಹೇತುಂ
ನರಾಕಾರದೇಹಂ ನಿರಾಕಾರಮೀಡ್ಯಂ ||
ಪರೇಶಂ ಪರಾನಂದರೂಪಂ ವರೇಣ್ಯಂ |
ಹರಿಂ ರಾಮಮೀಶಂ ಭಜೇ ಭಾರನಾಶಮ್ ||೨||
ಭಾವಾರ್ಥ:-ದೇವತಾಸಮೂಹದ ದು:ಖಸಾಗರವನ್ನು ನಾಶಮಾಡಲು ನಿಮಿತ್ತನಾದವನೂ, ಮಾನವ ಶರೀರವನ್ನು ಹೊಂದಿರುವವನೂ,ಆಕಾರ ರಹಿತನೂ,ಸ್ತುತಿಸಲು ಯೋಗ್ಯನಾದವನೂ, ಅತಿ ಬಲಶಾಲಿಯೂ,ಪರಮಾನಂದ ಸ್ವರೂಪನೂ,ದುರ್ಜನರಿಂದಾದ ಭೂಭಾರವನ್ನು ಅಳಿಸಿದವನೂ ದೊರೆಯೂ ಮಹಾವಿಷ್ಣು ಸ್ವರೂಪನೂ ಆಗಿರುವ ಶ್ರೀರಾಮನನ್ನು ನಾನು ಸ್ತುತಿಸುವೆನು.
ಪ್ರಪನ್ನಾಖಿಲಾನಂದದೋಹಂ ಪ್ರಪನ್ನಂ |
ಪ್ರಪನ್ನಾರ್ತಿನಿ: ಶೇಷನಾಶಾಭಿಧಾನಂ ||
ತಪೋ ಯೋಗ ಯೋಗೀಶ ಭಾವಾಭಿ ಭಾವ್ಯಂ |
ಕಪೀಶಾದಿಮಿತ್ರಂ ಭಜೇ ರಾಮಮಿತ್ರಮ್ ||೩||
ಭಾವಾರ್ಥ:-ಹಲವಾರು ಭಕ್ತರು ಆಶ್ರಯವನ್ನು ಹೊಂದಿರುವ ಶರಣ್ಯನೂ, ಆಶ್ರಯ ಹೊಂದಿದವರಿಗೆ ಸರ್ವ ತರದ ಆನಂದವನ್ನು ದಯಪಾಲಿಸುವಾತನೂ, ಶರಣಾಗತರ ಸಂಕಷ್ಟಗಳನ್ನು ಸಂಪೂರ್ಣವಾಗಿ ವಿನಾಶಗೊಳಿಸುವಾತನೆಂಬ ಕೀರ್ತಿಯುಳ್ಳವನೂ,ಇಂದ್ರಿಯನಿಗ್ರಹ-ಆತ್ಮಸಂಯಮಾದಿಗಳಿಂದ ತಪೋಯೋಗನಿರತರಾಗಿರುವ ಪರಮಯೋಗಿಗಳಿಂದ ಪ್ರಭುತ್ವದ ರೂಪದಲ್ಲಿ ಸ್ಮರಿಸಲ್ಪಡುವಾತನೂ, ವಿಭೀಷಣ,ಸುಗ್ರೀವಾದಿಗಳಿಗೆ ಸ್ನೇಹಿತನೂ ಆಗಿರುವ ಶ್ರೀರಾಮ ಸ್ವರೂಪನಾದ ಸೂರ್ಯಭಗವಾನನನ್ನು ನಾನು ಸ್ತುತಿಸುವೆನು.
ಸದಾ ಭೋಗಭಾಜಾಂ ಸುದೂರೇ ವಿಭಾತಂ |
ಸದಾ ಯೋಗ ಭಾಜಾಮದೂರೇ ವಿಭಾತಂ ||
ಚಿದಾನಂದಕಂದಂ ಸದಾ ರಾಘವೇಶಂ |
ವಿದೇಹಾತ್ಮಜಾನಂದರೂಪಂ ಪ್ರಪದ್ಯೇ ||೪||
ಭಾವಾರ್ಥ:-ಅನುದಿನವೂ ಸುಖಾನುಭವಗಳನ್ನು ಅನುಭವಿಸುವುದರಲ್ಲಿ ನಿರತರಾದವರಿಗೆ ಸಂಬಂಧವನ್ನು ಕಡಿದುಕೊಂಡಂತೆ ಭಾಸವಾಗುವವನೂ, ಅನವರತವೂ ಯೋಗನಿರತರಾಗಿರುವವರಿಗೆ ಸಮೀಪಸ್ತನಾಗಿ ಅವರ ಹೃದಯದಲ್ಲಿಯೇ ನೆಲೆಯಾಗಿರುವಾತನೂ, ಜೀವಿಗಳ ಸಂತಸಕ್ಕೆ ನಿಮಿತ್ತನಾಗಿರುವವನೂ,ಜನಕರಾಜನಸುತೆಗೆ ಆನಂದ ಸ್ವರೂಪನಾಗಿರುವಾತನೂ ಆಗಿರುವ ಆ ರಘುವೀರನಲ್ಲಿ ನಾನು ಸದಾ ಶರಣು ಹೊಂದಿರುವವಾನಾಗುವೆ.
ಮಹಾಯೋಗಮಾಯಾವಿಶೇಷಾನುಯುಕ್ತೋ |
ವಿಭಾಸೀಶ ಲೀಲಾನರಾಕಾರ ವೃತ್ತಿ: ||
ತ್ವದಾನಂದಲೀಲಾಕಥಾಪೂರ್ಣಕರ್ಣಾ: |
ಸದಾನಂದರೂಪಾ ಭವಂತೀಹ ಲೋಕೇ ||೫||
ಭಾವಾರ್ಥ:-ಹೇ!ದೊರೆಯೇ;ಸತ್ವ,ರಜ,ತಮ್ಮಸ್ಸುಗಳೆಂಬ ಮಹಾಶಕ್ತಿಯುತ ಯೋಗಮಾಯಾ ವಿಶೇಷ ಗುಣಗಳುಳ್ಳವನಾಗಿ, ಲೀಲಾಮಾನುಷ ದೇಹ ಧಾರಿಯಾಗಿ,ವಸ್ತುಷ: ನಿರ್ಗುಣನೂ ನಿರಾಕಾರಿಯೂ ಆಗಿರುವೆ.ಈ ಭುವಿಯಲ್ಲಿ ನೀನು ನಿನ್ನ ಆನಂದ ಭರಿತವಾದ ಲೀಲಾ ಶಕ್ತಿಗಳಿಂದ ಕೂಡಿರುವ ಸ್ತುತಿಯನ್ನು ತಮ್ಮ ಕಿವಿಗಳಲ್ಲಿ ತುಂಬಿಕೊಂಡವರು ನಿರಂತರ ಆನಂದ ಭರಿತ ಜೀವನವನ್ನು ಅನುಭವಿಸುವರು.
ಅಹಂ ಮಾನಪಾನಾಭಿಮತ್ತ ಪ್ರಮತ್ತೋ |
ನ ವೇದಾಖಿಲೇಶಾಭಿಮಾನಾಭಿಮಾನ: ||
ಇದಾನೀಂ ಭವತ್ಪಾದಪದ್ಮ ಪ್ರಸಾದಾತ್ |
ತ್ರಿಲೋಕಾಧಿಪತ್ಯಾಭಿಮಾನೋ ವಿನಷ್ಟ: ||೬||
ಭಾವಾರ್ಥ:-"ನಾನು ಸ್ವರ್ಗದ ದೊರೆ"ಎಂಬ ಅಭಿಮಾನ ರೂಪೀ ಮದ್ಯವನ್ನು ಸೇವಿಸಿದವನಾಗಿ ನಾನು ತೀರಾ ಉನ್ಮತ್ತನಾಗಿದ್ದೆ.ಭುವಿಯ ಸಾಮಾನ್ಯ ಅರಸರಿಗೆ "ನಾನು ರಾಜ" ಎಂಬ ಅಭಿಮಾನವಿರುತ್ತದೆ.ಅದರಂತೆ ನನಗೂ ದರ್ಪವು ಆವರಿಸಿತ್ತು. ಅದರ ಪರಿಣಾಮವಾಗಿ ನನಗೆ ನಿನ್ನ ನೈಜ ಸ್ವರೂಪದ ಯಥಾರ್ಥ ಜ್ಞಾನವಿರಲಿಲ್ಲ.ಈಗ ನಿನ್ನ ಚರಣಾರವಿಂದಗಳ ಅನುಗ್ರಹದಿಂದ "ನಾನು ಮೂರ್ಲೋಕದ ಅಧಿಪತಿಯು" ಎನ್ನುವ ದರ್ಪವು ಕಳೆದುಹೋಯಿತು.
ಸ್ಫುರದ್ರತ್ನಕೇಯೂರಹಾರಾಭಿರಾಮಂ |
ಧರಾಭಾರಭೂತಾ ಸುರಾನೀಕ ದಾವಂ ||
ಶರಶ್ಚಂದ್ರವಕ್ತೃ ಲಸದ್ಪದ್ಮನೇತ್ರಂ |
ದುರಾವಾರಪಾರಂ ಭಜೇ ರಾಘವೇಶಮ್ ||೭||
ಭಾವಾರ್ಥ:-ಹೊಳೆಯುವ ರತ್ನಗಳನ್ನು ಕಟ್ಟಿ ಅಲಂಕರಿಸಿದ ತೋಳುಗಳನ್ನು ಹೊಂದಿರುವವನೂ,ಕಂಠಾಹಾರಗಳನ್ನು ಧರಿಸಿದ ಸುರಸುಂದರಾಂಗ ಮನಮೋಹಕ ರೂಪಿಯೂ,ಅಸುರಸೇನೆಗಳೆನ್ನುವ ಕಾನನಕ್ಕೆ ಕಾಡ್ಗಿಚ್ಚಿನಂತಾಗಿ ಭೂಭಾರವನ್ನು ನೀಗಿಸಿದವನೂ, ಶರತ್ಕಾಲದ ಚಂದ್ರನ ಹಾಗೆ ಪ್ರಶಾಂತವೂ ನಿರ್ಮಲವೂ ಆಗಿರುವ ಮುಖವನ್ನು ಹೊಂದಿರುವವನೂ, ತಾವರೆಯಂತೆ ಹೋಲುವ ನಯನಗಳುಳ್ಳವನೂ ಅರಿಯಲಸಾಧ್ಯವಾದ ಮಹಿಮಾಮಯಿಯೂ, ಆದಿ ಅಂತ್ಯಗಳಿದವನೂ ಆಗಿರುವ ರಘುವೀರನನ್ನು ನಾನು ಸ್ತುತಿಸುವೆನು.
ಸುರಾಧೀಶ ನೀಲಾಭ್ರ ನೀಲಾಂಗ ಕಾಂತಿಂ |
ವಿರಾಧಾದಿರಕ್ಷೋ ವಧಾಲ್ಲೋಕ ಶಾಂತಿಂ ||
ಕಿರೀಟಾದಿ ಶೋಭಂ ಪುರಾರಾತಿಲಾಭಂ |
ಭಜೇ ರಾಮಚಂದ್ರಂ ರಘೂಣಾಮಧೀಶಮ್ ||೮||
ಭಾವಾರ್ಥ:-ಇಂದ್ರಮಣಿ ವಿಭೂಷಿತನಾಗಿ ನೀಲಮೇಘ ಶ್ಯಾಮಲ ದೇಹಕಾಂತಿಯುಳ್ಳವನೂ, ವಿರಾಧರೇ ಆದಿಯಾದ ಅಸುರಸಮೂಹವನ್ನು ವಧೆ ಮಾಡಿ ಪ್ರಪಂಚದಲ್ಲಿ ಶಾಂತಿಯನ್ನು ನೆಲೆಗೊಳಿಸಿದಾತನೂ, ಕಿರೀಟಾದಿಗಳಿಂದ ಅಲಂಕೃತನಾಗಿ ಪ್ರಕಾಶಿಸುವಾತನೂ,ಹರಾದಿ ದೇವರ್ಕಳಿಗೆ ಲಾಭವನ್ನುಂಟುಮಾಡಿದಾತನೂ ಆಗಿರುವ ರಘುಕುಲಾಧೀಶ ಶ್ರೀರಾಮಚಂದ್ರನನ್ನು ನಾನು ಸ್ತುತಿಸುವೆನು.
ಲಸಶ್ಚಂದ್ರ ಕೋಟಿ ಪ್ರಕಾಶಾದಿ ಪೀಠೇ |
ಸಮಾಸೀನಮೇಕಂ ಸಮಾಧಾಯ ಸೀತಾಮ್ ||
ಸ್ಫುರದ್ಧೇಮವರ್ಣಂ ತಡಿತ್ಪುಂಜಭಾಸಾಂ |
ಭಜೇ ರಾಮಚಂದ್ರಂ ನಿವೃತ್ತಾರ್ತಿತಂದ್ರಮ್ ||೯||
ಭಾವಾರ್ಥ:-ಬಂಗಾರದ ಬಣ್ಣದಿಂದ ದೈದೀಪ್ಯಮಾನಳಾಗಿ ವಿದ್ಯುಲ್ಲತಾ ಮಿಂಚಿನ ಸಮೂಹದಂತೆ ಬೆಳಗುವವಳೂ ಆಗಿರುವ ಸೀತಾದೇವಿಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕೋಟಿ ಚಂದ್ರ ಸದೃಶ ಪ್ರಕಾಶ ತೇಜೋರಾಶಿಯನ್ನು ಹೊಂದಿರುವ ಮಹಾ ಸಿಂಹಾಸನದ ಮೇಲೆ ಆರೂಢನಾಗಿ ದು:ಖದುಮ್ಮಾನಗಳಿಂದ ಮುಕ್ತಿ ಹೊಂದಿರುವಾತನೂ ಆಗಿರುವ ಪ್ರಭು ಶ್ರೀರಾಮಚಂದ್ರನನ್ನು ನಾನು ಸ್ತುತಿಸುವೆನು.
******************************************************************
|| ಇತಿ ಇಂದ್ರಕೃತ ಶ್ರೀರಾಮಸ್ತೋತ್ರಮ್ ||
|| ಈ ರೀತಿಯಾಗಿ ಇಂದ್ರನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೧೬-
|| ಬ್ರಹ್ಮ ದೇವಕೃತ ಶ್ರೀರಾಮ ಸ್ತುತಿ: ||
********************************
ವಂದೇದೇವಂ ವಿಷ್ಣುಮಶೇಷಸ್ಥಿತಿಹೇತುಂ |
ತ್ವಾಮಧ್ಯಾತ್ಮ ಜ್ಞಾನಿಭಿರಂತಹೃದಿ ಭಾವ್ಯಂ ||
ಹೇಯಾ ಹೇಯ ದ್ವಂದ್ವ ವಿಹೀನಂ ಪರಮೇಕಂ |
ಸತ್ತಾಮಾತ್ರಂ ಸರ್ವಹೃದಿಸ್ಥಂ ದೃಶಿರೂಪಮ್ ||೧||
ಭಾವಾರ್ಥ:-ಸಮಸ್ತ ಚರಾಚರಗಳ ಇರುವಿಕೆಗೆ ನಿಮಿತ್ತನಾದವನೂ ಜೀವಾತ್ಮ-ಪರಮಾತ್ಮ ಕುರಿತಾದ ಜ್ಞಾನ ಸಂಪನ್ನರ ಹೃದಯಾಂತರಾಳದಲ್ಲಿ ನೆಲೆಯಾಗಿರುವವನೂ, ತಿರಸ್ಕರಣೀಯ ಹಾಗೂ ಸ್ವೀಕಾರಯೋಗ್ಯವೆಂಬಭೇದಗಳಿಲ್ಲದಾತನೂ,ಉತ್ತಮನೂ,ಏಕಮಾತ್ರನೂ,ಕೇವಲನೂ,ಸರ್ವರ ಅಂತರಂಗದಲ್ಲಿ ನೆಲೆಯಾಗಿರುವವನೂ,ಬುದ್ಧಿಸ್ವರೂಪನೂ,ಸಾಕ್ಷಾತ್ ಭಗವಾನ್ ಮಹಾವಿಷ್ಣುವೂ ಆಗಿರುವ ನಿನಗಾನು ನಮಿಸುವೆನು.
ಪ್ರಾಣಾಪಾನೌ ನಿಶ್ಚಯಬುದ್ಯಾ ಹೃದಿರುಧ್ವಾ |
ಛಿತ್ವಾ ಸರ್ವಂ ಸಂಶಯಬಂಧಂ ವಿಷಯೌಧಾನ್ ||
ಪಶ್ಯಂತೀ ಶಂ ಯಂ ಗತಮೋಹಾ ಯತಯಸ್ತಂ |
ವಂದೇ ರಾಮಂ ರತ್ನಕಿರೀಟಂ ರವಿಭಾಸಮ್ ||೨||
ಭಾವಾರ್ಥ:-ಆಶಾಪಾಶ ವಿರಹಿತರಾದ ಮಹಾಯೋಗಿವರೇಣ್ಯರು ಖಚಿತವಾಗಿರಿವ ಜ್ಞಾನದಿಂದ ಪ್ರಾಣ, ಅಪಾನಗಳೆನ್ನುವ ಎರಡು ವಾಯುಗಳನ್ನು ಹೃದಯಲ್ಲಿಯೇ ಬಂಧಿಯಾಗಿರಿಸಿ ಕಲ್ಪನೆಗಳ ಬಂಧವನ್ನೂ ಕಾಮನೆಗಳ ಹರಿಯುವಿಕೆಯನ್ನೂ ತುಂಡರಿಸಿ ಯಾವ ಭಗವಂತನನ್ನು ಕಾಣುವರೋ, ಅಂತಹಾ ರತ್ನಖಚಿತ ಕಿರೀಟಧಾರಿಯೂ, ಮಹಾರವಿತೇಜನೂ ಆಗಿರುವ ಸಾಕ್ಷಾತ್ ಶ್ರೀರಾಮ ಭಗವಾನನಿಗಾನು ನಮಿಸುವೆನು.
ಮಾಯಾತೀತಂ ಮಾಧವಮಾದ್ಯಂ ಜಗದಾದಿಂ |
ಮಾನಾತೀತಂ ಮೋಹವಿನಾಶಂ ಮುನಿವಂದ್ಯಂ ||
ಯೋಗಿಧ್ಯೇಯಂ ಯೋಗವಿಧಾನಂ ಪರಿಪೂರ್ಣಂ |
ವಂದೇರಾಮಂ ರಂಜಿತಲೋಕಂ ರಮಣೀಯಂ ||೩||
ಭಾವಾರ್ಥ:-ಮಾಯಾನಿರ್ಮಾತೃವಾದರೂ ಮಾಯೆಯನ್ನು ದಾಟಿದವನೂ, ಜಗತ್ತಿನ ಕಾರಣಸ್ವರೂಪಿಯೂ, ದೇಶ-ಕಾಲಗಳ ಪರಿಮಿತಿಯಿಲ್ಲದಾತನೂ, ಭ್ರಾಂತಿ ನಾಶಕನೂ, ಮುನಿಗಳಿಂದ ನಮಸ್ಕರಿಸಲ್ಪಡುವಾತನೂ, ಯೋಗಿವರ್ಯರುಗಳ ಧ್ಯಾನಕ್ಕೆ ವಸ್ತುವಾದವನೂ, ಯೋಗಮಾರ್ಗ ಪ್ರೇರಕನೂ, ಸಂಪೂರ್ಣನೂ, ಲೋಕವನ್ನು ರಂಜಿಸುವಾತನೂ, ಮನೋಹರನೂ,ಪ್ರಥಮನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀ ರಾಮ ಭಗವಾನನಿಗಾನು ನಮಿಸುವೆನು.
ಭಾವಾಭಾವಪ್ರತ್ಯಯಹೀನಂ ಭವ ಮುಕ್ತೈ- |
ರ್ಭೋಗಾಸಕ್ತೈರರ್ಚಿತ ಪಾದಾಂಬುಜಯುಗ್ಮಂ ||
ನಿತ್ಯಂ ಶುದ್ಧಂ ಬುದ್ಧಮನಂತಂ ಪ್ರಣವಾಖ್ಯಂ |
ವಂದೇರಾಮಂ ವೀರಮಶೇಷಾಸುರದಾವಮ್ ||೪||
ಭಾವಾರ್ಥ:-ದೃಶ್ಯಾದೃಶ್ಯ ಪ್ರಭೇದಗಳಿಂದ ಅರಿಯಲಸಾಧ್ಯನೂ, ಇಂದ್ರಿಯಸುಖಗಳಲ್ಲಿ ಅನಾಸಕ್ತರಾಗಿರುವ ಮಹಾದೇವನೇ ಮೊದಲಾದ ದೇವರ್ಕಳಿಂದ ಆರಾಧಿಸಿಕೊಂಬ ಚರಣಾರವಿಂದಗಳನ್ನು ಹೊಂದಿದಾತನೂ, ಭೂತ ಭವಿಷ್ಯತ್ ವರ್ತಮಾನಗಳಲ್ಲಿ ಅವಿನಾಶಿಯಾಗಿರುವವನೂ, ಶಾಶ್ವತನೂ,ಶುದ್ಧನೂ,ಜ್ಞಾನಸ್ವರೂಪನೂ,ಆದಿ-ಅಂತ್ಯಗಳಿಲ್ಲದ ಅನಂತನೂ, ಪ್ರಣವ ಸ್ವರೂಪಿಯೂ,ಸಮಸ್ತ ಅಸುರಕುಲವೆಂಬ ಕಾನನಕ್ಕೆ ಕಾಡಿಗಿಚ್ಚಾದವನೂ ಆಗಿರುವ ಭಗವಾನ್ ಶ್ರೀರಾಮನಿಗಾನು ನಮಿಸುವೆನು.
ತ್ವಂ ಮೇ ನಾಥೋ ನಾಥಿತಕಾರ್ಯಾಖಿಲಕಾರೀ |
ಮಾನಾತೀತೋ ಮಾಧವರೂಪೋsಖಿಲಧಾರೀ ||
ಭಕ್ತ್ಯಾಗಮ್ಯೋ ಭಾವಿತ ರೂಪೋ ಭವಹಾರೀ |
ಯೋಗಾಭ್ಯಾಸೈರ್ಭಾವಿತಚೇತ: ಸಹಚಾರೀ ||೫||
ಭಾವಾರ್ಥ:-ಖಚಿತವಾದ ರೂಪವಿಲ್ಲದೆ ಭಾವಕ್ಕನುಗುಣವಾದ ರೂಪಹೊಂದುವವನೂ, ಪ್ರಮಾಣ ರಹಿತನೂ [ಅಳತೆಗೆ ನಿಲುಕದವನೂ], ಸಂಸಾರದ ಸಂಕಷ್ಟಗಳನ್ನು ದೂರೀಕರಿಸುವವನೂ, ಯೋಗಾಭ್ಯಾಸದಿಂದ ಪವಿತ್ರಾಂತ:ಕರಣವುಳ್ಳವರ ಒಡನಾಡಿಯೂ, ಶ್ರೇಷ್ಠ ಭಕ್ತಿಗೆ ವಶವಾಗುವವನೂ, ಸಮಸ್ತ ಬ್ರಹ್ಮಾಂಡವನ್ನು ಧರಿಸಿರುವಾತನೂ, ಬಿನ್ನಹವನ್ನು ಮನ್ನಿಸಿ ಸಮಸ್ತ ಕೋರಿಕೆಗಳನ್ನು ದಯಪಾಲಿಸುವವನೂ, ಲಕ್ಷ್ಮೀಕಾಂತನೂ, ಮಹಾವಿಷ್ಣುಸ್ವರೂಪನೂ ಆಗಿರುವ ಭಗವಾನ್ ಶ್ರೀರಾಮನೇ ನಿನಗಾನು ನಮಿಸುವೆನು.
ತ್ವಾಮಾದ್ಯಂತಂ ಲೋಕಗತೀನಾಂ ಪರಮೇಶಂ |
ಲೋಕನಾಥಂ ಲೌಕಿಕಮಾನೈರಧಿಗಮ್ಯಂ ||
ಭಕ್ತಿಶ್ರದ್ಧಾಭಾವ ಸಮೇತೈರ್ಭಜನೀಯಂ |
ವಂದೇರಾಮಂ ಸುಂದರಮಿಂದೀವರನೀಲಮ್ ||೬||
ಭಾವಾರ್ಥ:-ಹೇ ರಾಮಚಂದ್ರಾ!ನೀನು ಆದಿಅಂತ್ಯಗಳಿಲ್ಲದವನಾಗಿ ಲೋಕಗಳ ಉತ್ಪತ್ತಿ-ನಾಶಗಳಿಗೆ ಕಾರಣನೂ, ಲೋಕಾಧಿಪತಿಯಾಗಿ ಲೌಕಿಕವಾಗಿರುವ ಅಳತೆಯ ಪ್ರಮಾಣಕ್ಕೆ ತಿಳಿಯಲಸಾಧ್ಯನೂ, ಭಕ್ತಿಶ್ರದ್ಧಾಭಾವಗಳಿಗೆ ವಶವಾಗುವವನೂ,ಸೇವಿಸಲ್ಪಡುವಾತನೂ, ನೀಲತಾವರೆಯಂತೆ ಶ್ಯಾಮಲವರ್ಣನೂ, ಕೋಮಲನೂ, ಮನೋಹರನೂ ಆಗಿರುವ ಭಗವಾನ್ ಶ್ರೀರಾಮನಾದ ನಿನಗಾನು ನಮಿಸುವೆನು.
ಕೋವಾಜ್ಞಾತುಂ ತ್ವಾಮತಿಮಾನಂ ಗತಮಾನಂ |
ಮಾನಾಸಕ್ತೋ ಮಾಧವಶಕ್ತೋ ಮುನಿಮಾನ್ಯಮ್ ||
ವೃಂದಾರಣ್ಯೇ ವಂದಿತ ವೃಂದಾರಕವೃಂದಂ |
ವಂದೇರಾಮಂ ಭವಮುಖವಂದ್ಯಂ ಸುಖಕಂದಮ್ ||೭||
ಭಾವಾರ್ಥ:-ಹೇ ಲಕ್ಷ್ಮೀಕಾಂತನೇ! ಇಂದ್ರಿಯಾದಿ ಎಣಿಕೆಗಳಲ್ಲಿ ಆಸಕ್ತನಾಗಿ ಅವುಗಳಲ್ಲಿ ಅವಲಂಬಿತನಾದ ಯಾವಾತನೂ ತೂಕಗಳಿಗೆ ಹೊರತಾದವನಾದ ನಿನ್ನ ನೈಜ ರೂಪವನ್ನಳೆಯಲು ಶಕ್ತನಾಗುವನೇ? ಮಹರ್ಷಿಗಳಿಗೆ ಗೌರವಾರ್ಹನೂ, ವೃಂದಾವನದಲ್ಲಿ ದೇವತಾ ಸಮೂಹದಿಂದ ನಮಿಸಲ್ಪಡುವಾತನೂ, ಶಂಕರಾದಿ ದೇವ ಸಮೂಹದಿಂದ ವಂದಿಸಿಕೊಳ್ಳಲು ಯೋಗ್ಯನೂ, ಮೋಕ್ಷದ ಉತ್ಪಾದಕ ಶಕ್ತಿಸ್ವರೂಪನೂ ಆಗಿರುವ ಭಗವಾನ್ ಶ್ರೀರಾಮನಿಗಾನು ನಮಿಸುವೆನು.
ನಾನಾಶಾಸ್ತ್ರೈರ್ವೇದ ಕದಂಬೈ: ಪ್ರತಿಪಾದ್ಯಂ |
ನಿತ್ಯಾನಂದಂ ನಿರ್ವಿಷಯಜ್ಞಾನ ಮನಾದಿಮ್ ||
ಮತ್ಸೇವಾರ್ಥಂ ಮಾನುಷಭಾವಂ ಪ್ರತಿಪನ್ನಂ |
ವಂದೇರಾಮಂ ಮರಕತವರ್ಣಂ ಮಧುರೇಶಮ್ ||೮||
ಭಾವಾರ್ಥ:-ನಾನಾವಿಧದ ಶಾಸ್ತ್ರಗಳಿಂದ ವರ್ಣಿಸಲ್ಪಡುವಾತನೂ,ನಿತ್ಯವೂ ಸಂತಸವನ್ನುಂಟುಮಾಡುವಾತನೂ, ವಿಷಯಾಭಿಲಾಶೆಯ ಜ್ಞಾನ ಸ್ವರೂಪಿಯೂ, ಆನಾದಿ ಪುರುಷನೂ ಆಗಿದ್ದು ಚರಾಚರ ಜಗತ್ತಿನ ಕಾರ್ಯಭಾರವನ್ನು ನಿಭಾಯಿಸಲು ಮನುಜರೂಪದಲ್ಲಿ ಪ್ರಕಟವಾದವನೂ, ಹಸಿರುವರ್ಣದ ಶರೀರವುಳ್ಳಾತನೂ, ಮಧುರಾಧಿಪತಿಯೂ ಆಗಿರುವ ಶ್ರೀರಾಮ ಭಗವಾನನಿಗಾನು ನಮಿಸುವೆನು.
ಶ್ರದ್ಧಾಯುಕ್ತೋಯ: ಪಠತೀಮಂ ಸ್ತವಮಾದ್ಯಂ |
ಬ್ರಾಹ್ಮಂ ಬ್ರಹ್ಮಜ್ಞಾನವಿಧಾನಂ ಭುವಿಮರ್ತ್ಯ: ||
ರಾಮಂ ಶ್ಯಾಮಂ ಕಾಮಿತ ಕಾಮಪ್ರದಮೀಶಂ |
ಧ್ಯಾತ್ವಾ ಧ್ಯಾತಾ ಪಾತಕಜಾಲೈರ್ವಿಗತಸ್ಯಾತ್ ||೯||
ಭಾವಾರ್ಥ:-ಈ ಭುವಿಯ ಮೇಲಿನ ಯಾವ ಶ್ರದ್ಧಾಯುಕ್ತ ಮಾನವನು ಶ್ಯಾಮಲ ವರ್ಣನೂ,ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವವನೂ ಆಗಿರುವ ದೊರೆ ಶ್ರೀರಾಮಚಂದ್ರನನ್ನು ಧ್ಯಾನಿಸಿ ವಿಶ್ವಾತ್ಮನಿಗೆ ಸಂಬಂಧಿಸಿದ ಮತ್ತು ವೇದಜ್ಞಾನವನ್ನು ಮಾಡುವಂತಹದೂ ಆಗಿರುವ ಈ ಸ್ತುತಿಯನ್ನು ಪಠಿಸುವರೋ ಅವರು ಪಾಪಸಮೂಹಗಳಿಂದ ಮುಕ್ತಿ ಹೊಂದುವರು.
*********************************************************************
|| ಬ್ರಹ್ಮ ದೇವಕೃತ ಶ್ರೀರಾಮ ಸ್ತುತಿ: ||
|| ಈ ತೆರನಾಗಿ ಬ್ರಹ್ಮದೇವನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತುತಿಗಳ ಭಾವಾರ್ಥವಾಗಿದೆ ||
*********************************************************************
-೧೭-
|| ಜಟಾಯುಕೃತ ಶ್ರೀರಾಮ ಸ್ತೋತ್ರಮ್ ||
************************************
ಅಗಣಿತಗುಣಮಪ್ರಮೇಯಮಾದ್ಯಂ |
ಸಕಲಜಗತ್ ಸ್ಥಿತಿಸಂಯಮಾದಿ ಹೇತುಂ ||
ಉಪರಮಪರಮಂ ಪರಾತ್ಮಭೂತಂ |
ಸತತಮಹಂ ಪ್ರಣತೋsಸ್ಮಿ ರಾಮಚಂದ್ರಮ್ ||೧||
ಭಾವಾರ್ಥ:-ಎಣಿಕೆಗೆ ಮೀರಿದ ಗುಣಗಳನ್ನು ಹೊಂದಿರುವಾತನೂ, ದೇಶಕಾಲಾದಿಗಳ ಹಿಡಿತಕ್ಕೆ ಹೊರತಾಗಿರುವವನೂ,ಪುರಾಣಪುರುಷನೂ,ಸಮಸ್ತ ವಿಶ್ವದ ಪರಿಪಾಲನೆಗೆ ನಿಮಿತ್ತ ಮಾತ್ರನೂ,ಅತ್ಯಂತ ಶಾಂತನೂ, ಸಾಕ್ಷಾತ್ ಪರಮಾತ್ಮನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ನಿರವಧಿಸುಖಮಿಂದಿರಾಕಟಾಕ್ಷಂ |
ಕ್ಷಪಿತಸುರೇಂದ್ರ ಚತುರ್ಮುಖಾದಿ ದು:ಖಂ ||
ನರವರಮನಿಶಂ ನತೋsಸ್ಮಿ ರಾಮಂ |
ವರದಮಹಂ ವರಚಾಪ ಬಾಣಹಸ್ತಮ್ ||೨||
ಭಾವಾರ್ಥ:-ಅಂತ್ಯರಹಿತ ಸುಖಸ್ವರೂಪನೂ,ಲಕ್ಷ್ಮಿಯ ಶೃಂಗಾರಮಯ ನೋಟಕ್ಕೆ ಪಾತ್ರನಾದವನೂ, ಬ್ರಹ್ಮೇಂದ್ರಾದಿ ದೇವತಾ ಸಮೂಹದ ದು:ಖಗಳನ್ನು ದೂರೀಕರಿಸಿದವನೂ, ಹಸ್ತಗಳಲ್ಲಿ ಶ್ರೇಷ್ಠವಾದ ಬಿಲ್ಲು ಬಾಣಗಳನ್ನು ಧರಿಸಿರುವವನೂ, ಮಾನವರೂಪಿಗಳಲ್ಲಿ ಅತಿ ಶ್ರೇಷ್ಠನೂ, ಭಕ್ತರಿಗೆ ವರದಾಯಕನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ಅನವರತ ನಮಿಸುವೆನು.
ತ್ರಿಭುವನಕಮನೀಯರೂಪಮೀಡ್ಯಂ |
ರವಿಶತಭಾಸುರಮೀಹಿತಪ್ರದಾನಂ ||
ಶರಣದಮನಿಶಂ ಸುರಾಗನೂಲೆ |
ಕೃತನಿಲಯಂ ರಘುನಂದನಂಪ್ರಪದ್ಯೇ ||೩||
ಭಾವಾರ್ಥ:-ಮೂರುಲೋಕಂಗಳಲ್ಲಿ ಅತಿ ಸುಂದರರೂಪಿಯೂ, ನೂರು ಸೂರ್ಯರ ತೇಜಸ್ಸನ್ನು ಹೊಂದಿರುವಾತನೂ, ಭಕ್ತರ ಇಷ್ಟಾರ್ಥಗಳನ್ನು ದಯಪಾಲಿಸುವಾತನೂ,ಶರಣಾರ್ಥಿಗಳಿಗೆ ಆಶ್ರಯದಾತನೂ, ದೊರೆಯೂ, ಅನುರಾಗದ ನೆಲೆಯಾದ ಪವಿತ್ರಾಂತ:ಕರಣದಲ್ಲಿ ನಿರಂತರವೂ ನೆಲೇಸಿರುವಾತನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ಭವವಿಪಿನದವಾಗ್ನಿ ನಾಮಧೇಯಂ |
ಭವಮುಖದೈವತದೈವತಂ ದಯಲುಂ |
ದನುಜಪತಿ ಸಹಸ್ರ ಕೋಟಿನಾಶಂ |
ರವಿತನಯಾಸದೃಶಂ ಹರಿಂ ಪ್ರಪದ್ಯೇ ||೪||
ಭಾವಾರ್ಥ:-ಸಂಸಾರರೂಪೀ ಘೋರಾರಣ್ಯವನ್ನು ಸುಡುವ ಕಾಡ್ಗಿಚ್ಚೆಂಬ ಹೆಸರನ್ನು ಹೊತ್ತವನೂ, ಹರನೇ ಆದಿಯಾದ ದೇವರ್ಕಳ ಸಮೂಹಕ್ಕೆ ಮಹಾದೇವನಾದವನೂ,ದಯಾವಂತನೂ,ಸಹಸ್ರಾರು ಕೋಟಿ ದಾನವರನ್ನು ನಾಶಗೊಳಿಸಿದಾತನೂ, ಸೂರ್ಯತನಯೆಯಾಗಿರುವ ಯಮುನಾ ನದಿಯವರ್ಣವನ್ನು ಹೋಲುವ ಶರೀರವುಳ್ಳಾತನೂ ಶ್ರೀಹರಿ ರೂಪಿಯೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ಅವಿರತಭವ ಭಾವನಾತಿ ದೂರಂ |
ಭವಮುಖೈರ್ಮುನಿಭಿ:ಸದೈವ ದೃಶ್ಯಮ್ ||
ಭವಜಲಧಿಸುತಾರಣಾಂಘ್ರಿಪೋತಂ |
ಶರಣಮಹಂ ರಘುನಂದನಂ ಪ್ರಪದ್ಯೇ ||೫||
ಭಾವಾರ್ಥ:-ಅವಿರತವಾಗಿ ಸಾಂಸಾರಿಕ ಯೋಚನೆಯಲ್ಲಿ ಮಗ್ನರಾದವರಿಗೆ ಬಹಳ ಅಂತರದಲ್ಲಿರುವಾತನೂ, ಸಂಸಾರದಿಂದ ವಿಮುಖರಾಗಿರುವ ಯೋಗಿಮುನಿವರ್ಯರಿಗೆ ಸದಾ ಕಾಣುವಾತನೂ,ಸಂಸಾರಸಾಗರವನ್ನು ದಾಟಲು ಸುಲಭರೂಪದ ಹರಿಗೋಲಿನಂತಿರುವ ಚರಣಾರವಿಂದಗಳುಳ್ಳ ರಘುಕುಲತಿಲಕ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ಗಿರಿಶಗಿರಿಸುತಾಮನೋನಿವಾಸಂ |
ಗಿರಿವರ ಧಾರಿಣಮೀಹಿತಾಭಿರಾಮಂ ||
ಸುರವರದನುಜೇಂದ್ರ ಸೇವಿತಾಂಘ್ರಿಂ |
ಸುರವರದಂ ರಘುನಾಯಕಂ ಪ್ರಪದ್ಯೇ ||೬||
ಭಾವಾರ್ಥ:-ಅನವರತವೂ ಗಿರಿಜಾಶಂಕರರ ಹೃತ್ಕಮಲ ನಿವಾಸಿಯಾಗಿರುವಾತನೂ, ಕೃಷ್ಣಾವತಾರದೊಳು ಹಿರಿದಾದ ಗೋವರ್ಧನ ಗಿರಿಯನ್ನೆತ್ತಿ ಹಿಡಿದಾತನೂ, ಬಯಸುವವರನ್ನು ತೃಪ್ತಿಗೊಳಿಸುವಾತನೂ,ಮಹಾ ಮಹಾ ದೇವ-ದಾನವರಿಂದ ಪಾದಸೇವೆಯನ್ನು ಸ್ವೀಕರಿಸಿ ವರಗಳನ್ನು ದಯಪಾಲಿಸುವಾತನೂ ಆಗಿರುವ ರಘುಕುಲದೊಡೆಯ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಪರಧನ ಪರದಾರಾವರ್ಜಿತಾನಾಂ |
ಪರಗುಣಭೂತಿಷು ತುಷ್ಟಮಾನಸಾನಾಂ ||
ಪರಹಿತನಿರತಾತ್ಮಾನಾಂ ಸುಸೇವ್ಯಂ |
ರಘುವರಮಂಬುಜಲೋಚನಂ ಪ್ರಪದ್ಯೇ ||೭||
ಭಾವಾರ್ಥ:-ಅನ್ಯರ ಸಂಪತ್ತು ಹಾಗೂ ಪರಸ್ತ್ರೀಯರನ್ನು ವರ್ಜಿಸುವವರಿಗೂ, ಅನ್ಯರಗುಣಗಳನ್ನು ಮತ್ತು ಐಶ್ವರ್ಯವನ್ನು ಕಂಡು ಸಂತಸ ಪಡುವವರಿಗೂ, ಹಾಗೆಯೇ ಅನ್ಯರ ಒಳಿತನ್ನು ಕಾಯುವುದರಲ್ಲಿ ನಿರತರಾದವರಿಗೂ ಧ್ಯಾನಿಸಲು ಯೋಗ್ಯನಾಗಿರುವ ಕಮಲನಯನ ರಘುವಂಶಪ್ರದೀಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಸ್ಮಿತರುಜಿರವಿಕಾಸಿತಾನನಾಬ್ಜ- |
ಮತಿಸುಲಭಂ ಸುರರಾಜ ನೀಲನೀಲಮ್ ||
ಸಿತಜಲರುಹ ಚಾರು ನೇತ್ರ ಶೋಭಂ |
ರಘುಪತಿಮೀಶಂ ಗುರೋರ್ಗುರುಂ ಪ್ರಪದ್ಯೇ ||೮||
ಭಾವಾರ್ಥ:-ಮುಗುಳುನಗೆಯಿಂದ ಕೂಡಿ ಮನೋಹರವೂ ವಿಕಸಿತವೂ ಆಗಿ ಕಾಣುವ ಮುಖಾರವಿಂದವುಳ್ಳವನೂ, ಭಕ್ತರಿಗೆ ಅತಿ ಸುಲಭ ಲಭ್ಯನೂ, ಇಂದ್ರನೀಲರತ್ನಸದೃಶ ಶ್ಯಾಮಲ ಶರೀರನೂ, ಬೆಳ್ದಾವರೆಯಂತೆ ರಮಣೀಯವಾದ ನಯನಗಳುಳ್ಳಾತನೂ, ದೊರೆಯೂ, ಗುರುಗಳಿಗೆ ಪರಮಗುರುವೂ ಆಗಿರುವ ರಘುಕುಲಾಧಿಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಹರಿಕಮಲಜ ಶಂಭುರೂಪಭೇದಾತ್ವ- |
ಮಿಹ ವಿಭಾಸಿಗುಣತ್ರಯಾನುವೃತ್ತ: ||
ರವಿರಿವ ಜಲಪೂರಿತೋದ ಪಾತ್ರೇಷ್ವ- |
ಮರಪತಿಸ್ತುತಿ ಪಾತ್ರಮೀಶಮೀಡೆ ||೯||
ಭಾವಾರ್ಥ:-ಜಲಭರಿತ ವಿವಿಧ ಪಾತ್ರೆಗಳಲ್ಲಿ ಸೂರ್ಯ ಪ್ರತಿಬಿಂಬವು ಹಲವು ರೂಪವಾಗಿ ಕಾಣುವಂತೆ ಸತ್ವ-ರಜತಮೊ ಗುಣಗಳೆನ್ನುವ ಮೂರು ಗುಣಗಳಿಂದ ಅನುಸರಿಸುವಂತೆ ವರ್ತಿಸುತ್ತಿರುವಾಗ ಹರಿ ಹರ ಬ್ರಹ್ಮರೆಂಬ ಭಿನ್ನ ಪ್ರಭೇದಗಳಿಂದ ನೀನು ಭಾಸವಾಗುತ್ತಿರುವೆ. ದೇವೇಂದ್ರನಿಂದ ಸ್ತುತಿಸಲ್ಪಡುವಾತನು ನೀನು. ನೀನೇ ಜಗದೊಡೆಯನು. ಇಂತಹಾ ರಘುಕುಲಾಧಿಪ ಪ್ರಭು ಶ್ರೀರಾಮನಾಗಿರುವ ನಿನಾಗಾನು ಶರಣಾಗುವೆನು.
ರತಿಪತಿಶತಕೋಟಿ ಸುಂದರಾಂಗಂ |
ಶತಪಥ ಗೋಚರ-ಭಾವನಾವಿಧೂರಂ ||
ಯತಿಪತಿ ಹೃದಯೇ ಸದಾ ವಿಭಾತಂ |
ರಘುಪತಿಮಾರ್ತಿಹರಂ ಪ್ರಭುಂ ಪ್ರಪದ್ಯೇ ||೧೦||
ಭಾವಾರ್ಥ:-ನೂರುಕೋಟಿ ಮನ್ಮಥರಂತೆ ಮನೋಹರವಾಗಿರುವ ದೇಹವನ್ನು ಹೊಂದಿರುವಾತನೂ,ಯಜುರ್ವೇದೀಯ ಬ್ರಾಹ್ಮಣದಲ್ಲಿ ಹೇಳಿರುವಂತೆ ಧ್ಯಾನಿಸಲು ಸುಲಭ ಲಭ್ಯನೂ,ಮಹಾ ಮಹಾ ಋಷಿ ಮುನಿ ಯೋಗಿವರೇಣ್ಯರ ಅಂತರಂಗದಲ್ಲಿ ನಿರಂತರ ಬೆಳಗುತ್ತಲಿರುವಾತನೂ,ದು:ಖಗಳನ್ನು ದೂರೀಕರಿಸುವಾತನೂ ದೊರೆಯೂ ಆಗಿರುವ ರಘುಕುಲಾಧಿಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಇತ್ಯೇವಂ ಸ್ತುವತಸ್ತಸ್ಯ ಪ್ರಸನ್ನೋಭೂದ್ರಘೂತ್ತಮ: |
ಉವಾಚ ಗಚ್ಚ ಭದ್ರಂತೇ ಮಮ ವಿಷ್ಣೋ: ಪರಂ ಪದಮ್ ||೧೧||
ಭಾವಾರ್ಥ:-ಈ ರೀತಿಯಾಗಿ ಸ್ತೋತ್ರ ಮಾಡುತ್ತಲಿರುವ ಆ ಜಟಾಯುವಿಗೆ ರಘುಕುಲೋತ್ತಮನಾದ ಶ್ರೀರಾಮಚಂದ್ರನು ಕರುಣೆದೋರಿ ಇಂತೆಂದು ಅನುಗ್ರಹಿಸಿದನು." ಹೇ ಜಟಾಯುವೇ; ಮಹಾವಿಷ್ಣುವೇ ಆಗಿರುವ ನನ್ನ ಶ್ರೇಷ್ಠ ಪದವಿಯಾಗಿರುವ ಮೋಕ್ಷಧಾಮದಲ್ಲಿ ಶಾಶ್ವತವಾಗಿ ನೆಲೆಸುವವನಾಗು.ನಿನಗೆ ಶುಭವಾಗಲಿ."
ಶೃಣೋತಿ ಯದಿದಂ ಸ್ತೋತ್ರಂ ಲಿಖೇದ್ವಾನಿಯತ: ಪಠೇತ್ |
ಸ ಯಾತಿ ಮಮ ಸಾರೂಪ್ಯಂ ಮರಣೇಮತ ಸ್ಮೃತಿಂ ಲಭೇತ್ ||೧೨||
ಭಾವಾರ್ಥ:-ಯಾವಾತನು ನಿನ್ನಿಂದ [ಜಟಾಯುವಿನಿಂದ] ರಚಿಸಲ್ಪಟ್ಟಿರುವ ಈ ಸ್ತೋತ್ರವನ್ನು ನಿಯಮಿತವಾಗಿ ಬರೆದೋದುವನೋ ಅವನು ಅಂತ್ಯಕಾಲದಲ್ಲಿ ನನ್ನ ಸ್ಮರಣೆಯುಳ್ಳವನಾಗಿ ಮರಣಾನಂತರ ನನ್ನ "ಪ್ರತಿರೂಪ"ವೆನ್ನುವ ಮುಕ್ತಿಗೆ ಪಾತ್ರನಾಗುವನು.
*********************************************************************
|| ಇತಿ ಜಟಾಯುಕೃತ ಶ್ರೀರಾಮ ಸ್ತೋತ್ರಮ್ ||
|| ಈ ರೀತಿಯಾಗಿ ಜಟಾಯುವಿನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
- ೧೮ -
|| ಶ್ರೀರಾಮಚಂದ್ರಾಷ್ಟಕಮ್ ||
*************************
ಚಿದಾಕಾರೊ ಧಾತಾ ಪರಮಸುಖದ: ಪಾವನತನು |
ರ್ಮುನೀಂದ್ರೈರ್ಯೋಗೀಂದ್ರೈರ್ಯತಿ ಪತಿ ಸುರೇಂದ್ರೈರ್ಹನುಮತಾ ||
ಸದಾ ಸೇವ್ಯ: ಪೂರ್ಣೋ ಜನಕತನಯಾಂಗ: ಸುರಗುರು |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೧||
ಭಾವಾರ್ಥ:-ತಿಳುವಳಿಕೆಯ ಸ್ವರೂಪನೂ, ಬ್ರಹ್ಮಾಂಡದ ಧಾರಣೆ-ಪಾಲನೆಗಳನ್ನು ಮಾಡುವಾತನೂ, ಶ್ರೇಷ್ಠವಾದ ಸುಖವನ್ನು ದಯಪಾಲಿಸುವವನೂ, ಸಮಸ್ತರನ್ನು ಪಾವನೀಕರಿಸುವ ದೇಹವುಳ್ಳಾತನೂ, ಮುನೀಂದ್ರ,ಯೋಗೀಂದ್ರ,ಯತೀಂದ್ರ,ದೇವೇಂದ್ರ,ಹನೂಮಂತರೇ ಆದಿಯಾದವರಿಂದ ಧ್ಯಾನಿಸಲ್ಪಡುವಾತನೂ, ಪರಿಪೂರ್ಣನೂ,ಸೀತಾಮಾತೆಯು ಅರ್ಧಾಂಗಿಣಿಯಾಗಿ ಇರುವಾತನೂ, ದೇವತಾ ಸಮೂಹಕ್ಕೆ ಮಾರ್ಗದರ್ಶಕನಾದ ಗುರುಸ್ವರೂಪದವನಾಗಿರುವವನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಮುಕುಂದೋ ಗೋವಿಂದೋ ಜನಕತನಯಾ ಲಾಲಿತಪದ: |
ಪದಂ ಪ್ರಾಪ್ತಾಯಸ್ಯಾಧಮಕುಲಭವಾ ಚಾಪಿ ಶಬರಿ ||
ಗಿರಾತೀತೋsಗಮ್ಯೋ ವಿಮಲಧಿಷಣೈರ್ವೇದ ವಚಸಾ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೨||
ಭಾವಾರ್ಥ:-ಗೋವಿಂದನೆಂದೂ ಮುಕುಂದನೆಂದೂ ಕರೆಯಿಸಲ್ಪಡುತ್ತಾ ಸೀತೆಯಿಂದ ತನ್ನ ಚರಣಾರವಿಂದಗಳನ್ನು ಮುದ್ದಿಸಿಕೊಳ್ಳುತ್ತಾ ತನ್ನನ್ನು ಭಜಿಸಿದ ಅಧಮಕುಲದಲ್ಲಿ ಜನಿಸಿದ ಶಬರಿಗೆ ಮೋಕ್ಷತ್ವವನ್ನು ದಯಪಾಲಿಸಿದಾತನೂ, ನಿರ್ಮಲಮನದ ಜ್ಞಾನಿಗಳ ವಾಣಿಗಳಿಗೆ ದೂರದಲ್ಲಿರುವಾತನೂ ವೇದವಾಕ್ಕುಗಳಿಗೆ ಕೂಡಾ ನಿಲುಕದಿರುವ ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಧರಾಧೀಶೋಧೀಶ: ಸುರನರವರಾಣಾಂ ರಘುಪತಿ: |
ಕಿರೀಟೀಕೇಯೂರೀ ಕನಕಪಿಶ: ಶೋಭಿತವಪು: ||
ಸಮಾಸೀನ: ಪೀಠೇ ರವಿಶತನಿಭೇ ಶಾಂತ ಮನಸೋ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೩||
ಭಾವಾರ್ಥ:-ಭೂಮಂಡಲಕ್ಕೆ ಅಧಿಪತಿಯಾಗಿರುವವನೂ, ಅಗ್ರಗಣ್ಯ ದೇವತೆಗಳಿಗೂ ಮನುಜಸಂತತಿಗೂ ಒಡೆಯನಾಗಿರುವವನೂ, ರಘುಕುಲಕ್ಕೆ ಅಧಿನಾಯಕನೂ, ಶಿರದ ಮೇಲೆ ಕಿರೀಟವನ್ನೂ, ಭುಜಗಳಲ್ಲಿ ಕೇಯೂರ ಹಾರವನ್ನೂ ಧರಿಸಿದಾತನೂ, ಹೇಮಸದೃಶ ಹೊಂಬಣ್ಣದ ವಸನವನ್ನು ಧರಿಸಿಕೊಂಡಾತನೂ, ದೇಹಕಾಂತಿಯುಳ್ಳಾತನೂ, ನೂರು ಸೂರ್ಯರ ಪ್ರಕಾಶವುಳ್ಳ ದೈದೀಪ್ಯಮಾನ ಸಿಂಹಾಸನದಲ್ಲಿ ಆರೂಢನಾಗಿರುವವನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ವರೇಣ್ಯ: ಶಾರಣ್ಯ: ಕಪಿಪತಿಸಖಶ್ಚಾತ ವಿಧುರೋ |
ಲಲಾಟೇ ಕಾಶ್ಮೀರೋ ರುಚಿರಗತಿ ಭಂಗ: ಶಶಿಮುಖ: ||
ನರಾಕಾರೋ ರಾಮೋಯತಿ ಪತಿನುತ: ಸಂಸ್ಕೃತಿಹರೊ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೪||
ಭಾವಾರ್ಥ:-ಉನ್ನತನೂ, ಆಶ್ರಯದಾತನೂ, ಸುಗ್ರೀವನ ಮಿತ್ರನೂ, ಅಂತ್ಯವಿಲ್ಲದಾತನೂ, ಹಣೆಯ ಮೇಲೆ ಕೇಸರಿಯ ತಿಲಕವನ್ನು ಧರಿಸಿರುವವನೂ, ಚಂದಿರನೋಪಾದಿಯಲ್ಲಿ ಬೆಳಗುತ್ತಲಿರುವ ಮುಖಕಮಲವುಳ್ಳಾತನೂ, ಮಾನುಷ ರೂಪಿಯಾದಾಗ್ಯೂ ಯೋಗಿವರೇಣ್ಯರ ಗುರಿಯೆನಿಸಿರುವ ಪರಬ್ರಹ್ಮಸ್ವರೂಪಿಯೂ, ಗುರುವರೇಣ್ಯರುಗಖಿಂದ ಸ್ತುತಿಸಲ್ಪಡುವಾತನೂ, ಹುಟ್ಟು-ಸಾವುಗಳುಳ್ಳ ಸಾಂಸಾರಿಕ ದು:ಖವನ್ನು ನಾಶಗೊಳಿಸುವಾತನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ವಿರೂಪಾಕ್ಷ: ಕಾಶ್ಯಾಮುಪದಿಶತಿ ಯನ್ನಾಮ ಶಿವದಂ |
ಸಹಸ್ರಂಯನ್ನಾಮ್ನಾಂ ಪಠತಿ ಗಿರಿಜಾ ಪ್ರತ್ತ್ಯುಷಸಿ ವೈ ||
ಸ್ವಲೋಕೇ ಗಾಯಂತೀಶ್ವರ ವಿಧಿಮುಖಾ ಯಸ್ಯ ಚರಿತಂ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೫||
ಭಾವಾರ್ಥ:-ಪುಣ್ಯ ಪ್ರದವಾದ ಕಾಶೀ ಕ್ಷೇತ್ರದಲ್ಲಿ ಭಗವಾನ್ ಶಿವಶಂಕರನು ಸಾಯುವ ಸ್ಥಿತಿಯಲ್ಲಿರುವ ಜೀವಿಗಳಿಗೆ ಯಾವಾತನ ಶುಭಪ್ರದವಾದ ನಾಮವನ್ನು ಉಪದೇಶಿಸಿದನೋ,ಪಾರ್ವತೀ ದೇವಿಯು ಅನುದಿನವೂ ಉಷ:ಕಾಲದಲ್ಲಿ ಯಾವಾತನ ಸಹಸ್ರ ನಾಮಗಳನ್ನು ಪಠಿಸುವಳೋ,ಶಿವ ಬ್ರಹ್ಮರೇ ಆದಿಯಾದ ದೇವರ್ಕಳ ಸಮೂಹವು ತಮ್ಮ ತಮ್ಮ ಸ್ಥಾನಗಳಲ್ಲಿ ಯಾರ ಪಾವನ ಚರಿತೆಯನ್ನು ಹಾಡುವರೋ ಅಂತಹಾ ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಪರೋಧೀರೋsಧೀರೋsಸುರಕುಲಭವಶ್ಚಾಸುರ ಹರ: |
ಪರಾತ್ಮಾ ಸರ್ವಜ್ಞೋ ನರಸುರಗಣೈರ್ಗೀತಸು ಯಶಾ: ||
ಅಹಲ್ಯಾ ಶಾಪಘ್ನ: ಶರಕರ ಋಜು: ಕೌಶಿಕ ಸಖೊ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೬||
ಭಾವಾರ್ಥ:-ಅತ್ಯಂತ ಬಲಶಾಲಿಯಾಗಿದ್ದರೂ ಅಜ್ಞಾನವನ್ನು ದೂರೀಕರಿಸುವ ಅಧೀರನೂ, ಅಸುರಕುಲದಲ್ಲಿ ಜನಿಸಿದವನಾದಾಗ್ಯೂ ಅಸುರ ಕುಲ ಸಂಹಾರಿಯೂ, ಪರಮಾತ್ಮಸ್ವರೂಪಿಯೂ,ಸರ್ವಜ್ಞನೂ,ಮಾನುಷಾದಿ ದೇವತಾ ಗಣಸಮೂಹದಿಂದ ಉತ್ತಮವಾದ ಖ್ಯಾತಿಯನ್ನು ಪಡೆದುಕೊಂಡಾತನೂ, ಅಹಲ್ಯಾ ಶಾಪ ವಿಮೋಚಕನೂ,ಹಸ್ತಗಳಲ್ಲಿ ಶುಭಪ್ರದವಾದ ಬಾಣಗಳನ್ನು ಹಿಡಿದುಕೊಂಡವನೂ, ಸರಳ ಸ್ವಭಾವದವನೂ, ವಿಶ್ವಾಮಿತ್ರನ ಪ್ರೀತಿಯ ಸಖನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಹೃಷಿಕೇಶ: ಶೌರೀರ್ಧರಣಿಧರಶಾಯಿ ಮಧುರಿಪು: |
ರೂಪೇಂದ್ರೋ ವೈಕುಂಠೋ ಗಜರಿಪುಹರಸ್ತುಷ್ಟ ಮನಸಾ ||
ಬಲಧ್ವಂಸೀ ವೀರೋ ದಶರಥ ಸುತೋ ನೀತಿ ನಿಪುಣೋ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೭||
ಭಾವಾರ್ಥ:-ಶೌರಿ,ಹೃಷಿಕೇಶ,ಶೇಷಶಯನ,ಮಧುಸೂದನ,ಉಪೇಂದ್ರ, ವೈಕುಂಠಪತಿಯೇ ಆದಿಯಾದ ಹೆಸರುಗಳಿಂದ ಕರೆಯಿಸಿಕೊಳ್ಳುವಾತನೂ, ಗಜರಾಜನ ಮೊರೆಗೆ ಪ್ರಸನ್ನನಾಗಿ ಆತನ ವೈರಿಯಾಗಿದ್ದ ಮೊಸಳೆಯನ್ನು ಸಂಹರಿಸಿದವನೂ, ಬಲಿಚಕ್ರವರ್ತಿಯನ್ನು ರಾಜ ಪಟ್ಟದಿಂದ ಪದಚ್ಯುತಿಗೊಳಿಸಿದಾತನೂ, ವೀರನೂ,ನಿಪುಣನೂ,ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಕವಿ: ಸೌಮಿತ್ರೀಢ್ಯ: ಕಪಟಮೃಗಘಾತೀ ವನಚರೋ |
ರಣಶ್ಲಾಘೀದಾಂತೋ ಧರಣಿಭರಹರ್ತಾ ಸುರನುತ: ||
ಅಮನೀ ಮಾನಜ್ಞೋ ನಿಖಿಲಜನಪೂಜ್ಯೋ ಹೃದಿಶಯೋ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೮||
ಭಾವಾರ್ಥ:-ತ್ರಿಕಾಲಜ್ಞನೂ, ಲಕ್ಷಣನಿಗೆ ಆರಾಧ್ಯನೂ, ವನದಲ್ಲಿ ವಿಹರಿಸುತ್ತಾ ಮಾಯಾಮೃಗರೂಪೀ ಮಾರೀಚನನ್ನು ಸಂಹರಿಸಿದಾತನೂ, ಯುದ್ಧಪ್ರಿಯನೂ, ಮನೋಇಂದ್ರಿಯಂಗಳ ನಿಗ್ರಹಿಸಿದವನೂ, ಭೂಭಾರವನ್ನು ಹರಣಗೊಳಿಸಿದಾತನೂ, ದೇವರ್ಕಳುಗಳಿಂದ ಸ್ತುತಿಸಿಕೊಂಬಾತನೂ, ತಾನು ಮಾನಾಪಮಾನ ವಿರಹಿತನಾದವನಾದಗ್ಯೂ ಅನ್ಯರಿಂದ ಸನ್ಮಾನಿಸಿಕೊಂಬಾತನೂ, ಸರ್ವರಿಗೂ ಆರಾಧ್ಯನೂ, ಸಮಸ್ತ ಜೀವಕೋಟಿಗಳ ಹೃತ್ಕಮಲವಾಸಿಯೂ ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಇದಂ ರಾಮಸ್ತೋತ್ರಂ ವರಮಮರದಾಸೇನ ರಚಿತ- |
ಮುಷ:ಕಾಲೇಭಕ್ತ್ಯಾಯದಿ ಪಠತಿ ಯೋ ಭಾವಸಹಿತಮ್ ||
ಮನುಷ್ಯ: ಸ ಕ್ಷಿಪ್ರಂ ಜನಿಮೃತಿಭಯಂ ತಾಪಜನಕಂ |
ಪರಿತ್ಯಜ್ಯ ಶ್ರೇಷ್ಠಂ ರಘುಪತಿ ಪದಂ ಯಾತಿ ಶಿವದಮ್ ||೯||
ಭಾವಾರ್ಥ:-ಉಷ:ಕಾಲದಲೆದ್ದು ಭಕ್ತಿ ಶ್ರದ್ಧಾಯುತನಾಗಿ ಅಮರದಾಸ ಕವಿಯಿಂದ ರಚಿತವಾಗಿರುವ ಈ ಸುಂದರ ರಾಮಸ್ತೋತ್ರಗಳನ್ನು ಪಠಿಸುವಾತನು ಅತ್ಯಂತ ಶೀಘ್ರವಾಗಿ ಚಿಂತಾಜನಕವಾಗಿರುವ ಹುಟ್ಟು-ಸಾವುಗಳ ಭೀತಿ ವರ್ಜಿತನಾಗಿ ಅಗ್ರಗಣ್ಯವೂ, ಶುಭದಾಯಕವೂ ಆಗಿರುವ ಶ್ರೀ ರಘುಕುಲದೊಡೆಯನ ಮಹಾ ಸಾನ್ನಿಧ್ಯ ಪದವಿಯನ್ನು ಪಡೆಯುವನು.
*********************************************************************
|| ಇತಿ ಶ್ರೀರಾಮಚಂದ್ರಾಷ್ಟಕಮ್ ||
|| ಈ ರೀತಿಯಾಗಿ ಶ್ರೀರಾಮಚಂದ್ರಾಷ್ಟಕಗಳ ಭಾವಾರ್ಥವಾಗಿದೆ. ||
*********************************************************************
-೧೯-
-೧೧-
|| ಶ್ರೀ ರಾಮ ಪ್ರಾತ:ಸ್ಮರಣ ಸ್ತೋತ್ರಮ್ ||
*********************************
ಪ್ರಾತ:ಸ್ಮರಾಮಿ ರಘುನಾಥ ಮುಖಾರವಿಂದಂ |
ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ ||
ಕರ್ಣಾವಲಂಬಿ ಚಲಕುಂಡಲ ಶೋಭಿಗಂಡಂ |
ಕರ್ಣಾಂತ ಧೀರ್ಘ ನಯನಂ ನಯಾಭಿರಾಮಮ್ ||೧||
ಭಾವಾರ್ಥ:-ಮಂದಹಾಸಭರಿತ ಸುಮಧುರವಾಗಿರುವ ನುಡಿ, ಅಗಲವಾಗಿರುವ
ಹಣೆ,ಕಿವಿಗಳಲ್ಲಿ ತೂಗಾಡುತ್ತಿರುವ ಅಸ್ಥಿರವಾದ ಕುಂಡಲಗಳು,ಆ
ಕುಂಡಲಗಳಿಂದ ಪ್ರಕಾಶಭರಿತವಾಗಿರುವ ಕಿವಿ ಹಾಗೆಯೇ ಮತ್ತು
ಕೆನ್ನೆಗಳತ್ತ ಚಾಚಿದ ವಿಶಾಲವಾದ ಕಣ್ಣುಗಳು,ಆ ಕಣ್ಣುಗಳಿಂದ
ಮನೋಹರವಾಗಿ ಕಂಗೊಳಿಸುತ್ತಿರುವ ಶ್ರೀರಾಮನ ಮುಖಕಮಲವನ್ನು
ನಾನು ಉಷ:ಕಾಲದಲ್ಲಿ ಸ್ಮರಿಸುವೆ.
ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ |
ರಕ್ಷೋಗಣಾಯ ಭಯದಂ ವರದಂ ನಿಜೇಭ್ಯ: ||
ಯದ್ ರಾಜಸಂಸದಿ ವಿಭಜ್ಯ ಮಹೇಷ ಚಾಪಂ |
ಸೀತಾಕರಗ್ರಹಣ ಮಂಗಲಮಾಪ ಸದ್ಯ: ||೨||
ಭಾವಾರ್ಥ:-ದಾನವರ ಸಮೂಹಕ್ಕೆ ಭೀತಿಯನ್ನು ಹುಟ್ಟಿಸಿದ,ತನ್ನ
ಭಕ್ತರಿಗೆ ವರದಾಯಕನಾದ,ಜನಕರಾಜನ ಅರಮನೆಯ ಸಭೆಯಲ್ಲಿ ಶಿವ
ಧನುಸ್ಸನ್ನು ಮುರಿದು ಸೀತಾದೇವಿಯ ಪಾಣಿಗ್ರಹಣದ ಶುಭ
ಕಾರ್ಯವನ್ನು ಗೈದ ಆ ರಘುನಾಥನ ಕರಕಮಲವನ್ನು ನಾನು
ಉಷ:ಕಾಲದಲ್ಲಿ ಭಜಿಸುವೆ.
ಪ್ರಾತರ್ಭಜಾಮಿ ರಘುನಾಥ ಪದಾರವಿಂದಂ |
ಪದ್ಮಾಂಕುಶಾದಿ ಶುಭರೇಖ ಸುಖಾವಹಂ ಮೇ ||
ಯೋಗೀಂದ್ರ ಮಾನಸ ಮಧುವ್ರತ ಸೇವ್ಯಮಾನಂ |
ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾ: ||೩||
ಭಾವಾರ್ಥ:-ಕಮಲ,ಅಂಕುಶ ಇತ್ಯಾದಿ ಶುಭರೇಖೆಯುಳ್ಳವನಾದ,ನನ್ನ
ಆನಂದಕ್ಕೆ ಕಾರಣನಾಗುವ,ಶ್ರೇಷ್ಠರುಗಳಾದ ಮಹರ್ಷಿಗಳ ಮನಸ್ಸೆಂಬ
ಭ್ರಮರಗಳಿಂದ ಸೇವಿಸಲ್ಪಡುವ,ಗೌತಮ ಮಹರ್ಷಿಯ ಧರ್ಮಪತ್ನಿ
ಅಹಲ್ಯೆಯ ಶಾಪವನ್ನು ಪರಿಹರಿಸಿ ಉದ್ಧರಿಸಿದ ಆ ಶ್ರೀರಾಮನ
ಚರಣಾರವಿಂದಗಳನ್ನು ನಾನು ಉಷ:ಕಾಲದಲ್ಲಿ ಭಜಿಸುವೆ.
ಪ್ರಾತರ್ವದಾಮಿ ವಚಸಾ ರಘುನಾಥ ನಾಮಂ |
ವಾಗ್ದೋಷಹಾರಿ ಸಕಲಂ ಶಮಲಂ ನಿಹಂತಿ ||
ಯತ್ ಪಾರ್ವತೀ ಸ್ವ ಪತಿನಾ ಸಹ ಭೋಕ್ತು ಕಾಮಾ |
ಪ್ರೀತ್ಯಾ ಸಹಸ್ರ ಹರಿನಾಮ ಸಮಂ ಜಜಾಪ ||೪||
ಭಾವಾರ್ಥ:-ಸಮಸ್ತ ವಾಗ್ದೋಷಗಳನ್ನು ಪರಿಹರಿಸುವ,ಸರ್ವ
ಪಾಪಗಳನ್ನು ಹೋಗಲಾಡಿಸುವ," ಶ್ರೀರಾಮ ರಾಮ ರಾಮೇತಿ ರಮೇ
ರಾಮೇ ಮನೋರಮೇ|ಸಹಸ್ರ ನಾಮ ತತ್ತುಲ್ಲ್ಯಂ ರಾಮ ನಾಮ
ವರಾನನೇ " ಎಂಬ ವಿಷ್ಣು ಸಹಸ್ರ ನಾಮಕ್ಕೆ ಸರಿ ಸಮವಾದ ಯಾವ
ಸ್ತುತಿಯ ರಸಾಸ್ವಾದನೆಯನ್ನು ಮಾಡಬಯಸುತ್ತಾ ತನ್ನ ಪತಿಯೊಡನೆ
ಪಾರ್ವತೀ ದೇವಿಯು ಪ್ರೀತಿಯಿಂದ ಜಪಿಸುವಳೋ ಅಂತಹಾ
ಪಾವನನಾಮ ಶ್ರೀರಾಮನಾಮವನ್ನು ಅನುದಿನವೂ ಉಷ:ಕಾಲದಲ್ಲಿ ನಾನು
ಜಪಿಸುವೆ.
ಪ್ರಾತ:ಶ್ರಯೇ ಶ್ರುತಿನುತಾಂ ರಘುನಾಥ ಮೂರ್ತಿಂ |
ನೀಲಾಂಬುದೋತ್ಫಲ ಸಿತೇತರ ರತ್ನ ನೀಲಾಮ್ ||
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಢ್ಯಾಂ |
ಧ್ಯೇಯಾಂ ಸಮಸ್ತ ಮುನಿಭಿರ್ಜನ ಮುಕ್ತಿ ಹೇತುಮ್ ||೫||
ಭಾವಾರ್ಥ:-ನೀಲಮುಗಿಲನಂತೆ,ನೀಲಕಮಲದಂತೆ,ಹಾಗೂ
ಇಂದ್ರನೀಲಮಣಿಯಂತೆ ನೀಲವರ್ಣದ ಶರೀರವನ್ನು
ಹೊಂದಿದ,ವಿಶೇಷವಾಗಿರುವ ಮುತ್ತಿನಹಾರಗಳನ್ನು ಧರಿಸಿ
ಶೋಭಿಸುತ್ತಿರುವ,ಸಮಸ್ತ ಋಷಿ ಸಮೂಹದಿಂದ
ಧ್ಯಾನಿಸಲ್ಪಡುವ,ಭಕ್ತಜನರಿಗೆ ಮೋಕ್ಷದೊರಕಲು
ಕಾರಣೀಭೂತನಾದ,ವೇದಗಳಲ್ಲಿ ಸ್ತುತಿಸಲ್ಪಡುತ್ತಿರುವ ಆ
ಶ್ರೀರಾಮನ ದಿವ್ಯಮೂರ್ತಿಗೆ ಉಷ:ಕಾಲದಲ್ಲಿ ನಾನು ಶರಣಾಗುವೆ.
ಯ: ಶ್ಲೋಕ ಪಂಚಕಮಿದಂ ಪ್ರಯತ: ಅಠೇದ್ಧಿ |
ನಿತ್ಯಂ ಪ್ರಭಾತ ಸಮಯೇ ಪುರುಷ: ಪ್ರಬುದ್ಧ: ||
ಶ್ರೀರಾಮಕಿಂಕರ ಜನೇಷು ಸ ಏವ ಮುಖ್ಯೋ |
ಭೂತ್ವಾ ಪ್ರಯಾತಿ ಹರಿಲೋಕಮನನ್ಯ ಲಭ್ಯಮ್ ||೬||
ಭಾವಾರ್ಥ:-ಯಾವಾತನು ಪ್ರಯತ್ನ ಪೂರ್ವಕವಾಗಿ ಈ ಐದು
ಶ್ಲೋಕಗಳನ್ನು ಅನುದಿನವೂ ನಿಯಮಿತವಾಗಿ ಶ್ರದ್ಧೆಯಿಂದ
ಪಠಿಸುವನೋ ಅಂತಹವನು ಶ್ರೀರಾಮನ ಊಳಿಗದವರಲ್ಲಿ
ಪ್ರಾಮುಖ್ಯನಾಗಿ ಅನ್ಯರಿಗೆ ಲಭಿಸಲಸಾಧ್ಯವಿರುವ ವಿಷ್ಣು
ಲೋಕವನ್ನು ಹೊಂದುವನು.
*********************************************************************
|| ಇತಿ ಶ್ರೀ ರಾಮ ಪ್ರಾತ:ಸ್ಮರಣ ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀರಾಮ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||
*********************************************************************
-೧೨-
|| ಶ್ರೀ ರಾಮ ಮಾನಸ ಸ್ತೋತ್ರಮ್ ||
****************************
ಶ್ರೀಮನ್ನುಜ್ಜ್ವಲ-ಕೋಟಿಭಾನು-ಸದೃಶಂ ಮಂದಸ್ಮಿತಂ ಶಾಮಲಂ |
ಶ್ರೀ ಸೀತಾಸಹಿತಂ ವರಾ ಭಯಕರಂ ವಾಮೇ ಸುಮಿತ್ರಾಸುತಮ್ ||
ಶ್ರೀ ವತ್ಸಾಂಕ-ಧನು:ಶರಾದಿ-ಲಸಿತಂ ವಾತಾತ್ಮಜಾಭಿಷ್ಟುತಂ |
ಶ್ರೀರಾಮೇತಿ-ಪದದ್ವಯಾನ್ವಿತ ಮಹಂ ಧ್ಯಾಯೇ ಮನೋಮಂದಿರೇ ||೧||
ಭಾವಾರ್ಥ:-ಕೋಟಿಸೂರ್ಯರ ಸಮಾನವಾದ ಪ್ರಕಾಶಮಯ ತೇಜಸ್ಸನ್ನು ಹೊಂದಿ,ಮನೋಹರನೂ,ಮುಗುಳ್ನಗೆಯಿಂದ ಕೂಡಿದವನೂ,ಶ್ಯಾಮಲ ವರ್ಣದವನೂ, ಸೀತಾದೇವಿಯೊಡಗೂಡಿದವನೂ,ಅಗ್ರಗಣ್ಯನೂ,ಅಭಯಹಸ್ತವುಳ್ಳವನೂ,ಸುಮಿತ್ರಾತನಯ ಲಕ್ಷ್ಮಣನ ಒಡನಿರುವವನೂ, ಎದೆಯ ಮೇಲೆ ಮಚ್ಚೆಯುಳ್ಳವನೂ,ಬಿಲ್ಲು ಬಾಣಗಳಿಂದ ಅಲಂಕೃತಗೊಂಡವನೂ,ಮಾರುತಿಯಿಂದ ಸ್ತುತಿಸಲ್ಪಡುವವನೂ,"ಶ್ರೀ" ಮತ್ತು ""ರಾಮ" ಎಂಬೀ ಎರಡು ಪದಗಳಿಂದ ಕೂಡಿರುವವನೂ ಆಗಿರುವ ಶ್ರೀ ರಾಮಚಂದ್ರನನ್ನು ನನ್ನ ಹೃದಯ ಮಂದಿರದಲ್ಲಿ ನೆಲೆಗೊಳಿಸಿ ಆರಾಧಿಸುತ್ತಿದ್ದೇನೆ.
ರಾಮೇತ್ಯೇಕರಸ-ಸ್ವರೂಪಮಮಲಂ ಲೀಲಾವತಾರಾವ್ಯಯಂ |
ರಾಜೇಂದ್ರಂ ರಘುನಂದನಂ,ರವಿಕುಲೋದ್ಭೂತಂ ಸಮಾವಾಹಯೇ ||
ರಾಜೇಷ್ಟಂ ರಮಣೀಯಮರ್ಪಿತಮಿದಂ ಮಾಣಿಕ್ಯ ಸಿಂಹಾಸನಂ |
ಪಾದ್ಯಂಸಾಚಮನೀಯಮರ್ಘ್ಯಮಮೃತಂ ರಾಮ ಸ್ವಯಂ ಸ್ವೀಕುರು ||೨||
ಭಾವಾರ್ಥ;_ರಾಮನೆನ್ನುವ ಸ್ವಚ್ಛವಾದ,ವಿನಾಶರಹಿತನಾದ,ಪರಬ್ರಹ್ಮನ ಏಕೈಕ ಸ್ವರೂಪಿಯಾದ,ಲೀಲಾವತಾರಿಯೂ,ರಾಜೇಂದ್ರನೂ,ರಘುನಂದನನೂ,ರವಿವಂಶದಲ್ಲಿ ಜನನವೆತ್ತವನೂ,ಆದ ಶ್ರೀರಾಮಚಂದ್ರನೇ!ನಿನ್ನನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವೆ.ಸ್ವಾಮಿಯೇ ಅರಸುಕುಲಪ್ರಿಯನಾದ ನಿನಗೆ ಆಹ್ಲಾದಕರವಾಗಿರುವ ಮಾಣಿಕ್ಯ ಸಿಂಹಾಸನಕ್ಕೆ ಸಮವಾದ ನನ್ನ ಹೃದಯವನ್ನು ಸುಖಾಸನವಾಗಿ ಅರ್ಪಿಸುತ್ತಲ್ಲಿರುವೆ.ಶ್ರೀರಾಮಚಂದ್ರನೇ,ಪಾದಗಳನ್ನು ಶುಚಿಯಾಗಿಸಿಕೊಳ್ಳಲು ಮತ್ತು ಆಚಮನಾರ್ಥವಾಗಿ ಅರ್ಪಿಸುತ್ತಿರುವ ಈ ಶುದ್ಧೋದಕವನ್ನು ಸ್ವೀಕರಿಸು.
ಮಧ್ವಕ್ತಂ ಮಧುಪರ್ಕಮಂತ್ರಪಠಿತಂ ಪಂಚಾಮೃತಂ ಕಲ್ಪಿತಂ |
ಮಂದಾಕಿನ್ಯಾಮಿದಂ ಸುರತ್ನಕಲಶೈ: ಸ್ನಾನಾರ್ಥಮಪ್ಯಾಹೃತಮ್ |
ಮಂದಾರಾಮರ-ಪಾರಿಜಾತ-ತಲಗೇ ಸೌವರ್ಣ ಪೀಠೇ ಸ್ಥಿತಂ |
ಮಂತ್ರೈಸ್ತ್ವಾಮಿಷೇಚಯಾಮಿ ವಿವಿಧೈ:ಸೂಕ್ತೈ: ಸು ತೀರ್ಥೋದಕೈ: ||೩||
ಭಾವಾರ್ಥ:-ಸ್ವಾಮಿ ಶ್ರೀರಾಮಚಂದ್ರನೇ! ನಿನ್ನ ಪ್ರೀತ್ಯರ್ಥವಾಗಿ ಮಧುಪರ್ಕ ಮಂತ್ರ ಪಠಿಸುತ್ತಾ ಜೇನು ಮಿಶ್ರಿತ ಪಂಚಾಮೃತವನ್ನು ವ್ಯವಸ್ಥೆಗೊಳಿಸಿರುವೆನು.ನಿನ್ನ ಸ್ನಾನಾರ್ಥವಾಗಿ ಪವಿತ್ರವಾದ ಗಂಗಾಜಲವನ್ನು ಶ್ರೇಷ್ಠವಾಗಿರುವ ರತ್ನಗಳಿಂದ ಅಲಂಕರಿಸಲ್ಪಟ್ಟ ಕಲಶಗಳಲ್ಲಿ ತಂದಿರಿಸಿರುವೆನು.ಮಂದಾರ ಪಾರಿಜಾತ,ಕಲ್ಪತರು ಮೊದಲಾದ ದೇವ ವೃಕ್ಷಗಳ ಅಡಿಯಲ್ಲಿ ಇರಿಸಿರುವ ಬಂಗಾರದ ಪೀಠದಲ್ಲಿ ನಿನ್ನನ್ನು ಕುಳ್ಳಿರಿಸಿ ನಾನಾ ವಿಧದ ಸೂಕ್ತ ಮಂತ್ರಾದಿಗಳಿಂದ,ಶ್ರೇಷ್ಠವಾಗಿರುವ ತೀರ್ಥಗಳಿಂದ ನಿನ್ನ ಅಭಿಷೇಕವನ್ನು ಮಾಡುವೆನು ಸ್ವಾಮಿಯೇ.ಕೃಪೆಯುಳ್ಳವನಾಗಿ ಸ್ವೀಕರಿಸು.
ಜಲಧರ-ನಿಭಗಾತ್ರೇ ಸ್ವರ್ಣಯಜ್ಞೋಪವೀತಂ |
ನವಗುಣ-ಗಣಿತಂ ತತ್ ಪಾವನಂ ಪಾವನಾನಾಮ್ ||
ತಡಿದಿವ ಖಲುಪೀತಂ ವಸ್ತ್ರಮಚ್ಛೋತ್ತರೀಯಂ |
ಜಯ ರಘುವರ ದಾಸ್ಯೇ ತ್ವಂ ಗೃಹಾಣ ಸ್ವಮೇವ ||೪||
ಭಾವಾರ್ಥ:-ಬಂಗಾರದ ಮೂರೆಳೆಗಳುಳ್ಳ ಯಜ್ಞೋಪವೀತವನ್ನು ಜಲಾವೃತವಾಗಿರುವ ಮುಗಿಲನ್ನು ಹೋಲುವ ಶ್ಯಾಮಲ ವರ್ಣದವನಾದ ನಿನ್ನ ಕೊರಳಿಗೆ ಅರ್ಪಿಸುತ್ತಿರುವೆನು.ಮಿಂಚಿನಂತೆ ಪ್ರಕಾಶಮಯವಾದ ಹಳದಿಯ ವಸ್ತ್ರವನ್ನು ನಿನ್ನ ಉತ್ತರೀಯಕ್ಕಾಗಿ ಸಮರ್ಪಿಸುತ್ತಿರುವೆನು.ಇವೆಲ್ಲವುಗಳನ್ನು ಸ್ವೀಕರಿಸು ಸ್ವಾಮಿಯೇ! ಅಗ್ರಗಣ್ಯ ಶ್ರೀ ರಾಮಚಂದ್ರನೇ ನಿನಗೆ ಜಯವಾಗಲಿ.
ಕಿರೀಟ-ಹಾರಾಂಗದ-ಚಾರು-ಮೇಖಲಾ |
ಮುದ್ರಾದ್ಯನೇಕಾಕೃತಿ-ಭೂಷಣಾನಿ ||
ಮಹೀ-ಸುಗಂಧಂ ಪ್ರಗೃಹಾಣ ಚಾಕ್ಷತಾನ್ |
ಪುಷ್ಪೇಷು ಖಂ ರಾಮ ಮಯಾ ಸಮರ್ಪಿತಮ್ ||೫||
ಭಾವಾರ್ಥ:-ಕಿರೀಟ.ಮಾಲೆ,ಭುಜದ ಆಭರಣ,ಸುಂದರವಾಗಿರುವ ಸೊಂಟದ ಪಟ್ಟಿ,ಮನೋಹರವಾಗಿರುವ ಉಂಗುರಗಳು,ಸುಗಂಧಾಕ್ಷತೆ,ಮತ್ತು ಆಗಸ ವರ್ಣದ ಪುಷ್ಪಗಳನ್ನು ಅರ್ಪಿಸುತ್ತಿರುವೆನು.ಸ್ವೀಕರಿಸು ಸ್ವಾಮಿಯೇ!
ರಾಷ್ಟ್ರೋಪಪ್ಲವನಾಶಕಂ ಸುಲಲಿತಂ ವಾಯುಂ ಸುಧೂಪಂ ತಥಾ |
ರಾಮೇಮಂ ಪರಮಂ ದಿವಾಕರ ಮಹೋತೇಜೋಮಯಿ ದೀಪಿಕಾಂ ||
ರಾಜೀವಾರುಣಲೋಚನಾಮೃತಮಯಂ ಷಟ್ ಸ್ವಾದುಲೋಲೈರಸೈ: |
ಸಂಪನ್ನಂ ವಿನಿವೇದಿತಂ ಸುಮನಸಾ ನೈವೇದ್ಯಮಂಗೀಕುರು ||೬||
ಭಾವಾಥ:-ನಾಡಿಗೆ ಬೇಗೆಯನ್ನು ಕೊಡುವ ಕೆಟ್ಟ ವಾತಾವರಣವನ್ನು ಹೋಗಲಾಡಿಸಬಲ್ಲ ಉತ್ತಮ ಧೂಪವನ್ನೂ ಮನಮೋಹಕವಾದಂತಹಾ, ಸೂರ್ಯನಂತೆ ಪರಮ ತೇಜೋಮಯವಾಗಿರುವ ದೀಪವನ್ನೂ ಶ್ರೀರಾಮಚಂದ್ರನೇ ನಿನಗರ್ಪಿಸುತ್ತಿರುವೆನು.ಕಮಲವನ್ನು ಹೋಲುವ ನಯನಗಳುಳ್ಳ ರಾಜೀವ ಲೋಚನನೇ,ಶ್ರದ್ಧಾಭಕ್ತಿಗಳಿಂದ ಷಡ್ರಸಭರಿತ ಪಕ್ವಾನ್ನಗಳನ್ನು ನೈವೇದ್ಯರೂಪದಲ್ಲಿ ಅರ್ಪಿಸುತ್ತಿರುವೆನು ಸ್ವಾಮಿಯೇ; ಸ್ವೀಕರಿಸಿ ತೃಪ್ತನಾಗು.
ಮಧ್ಯೇ ಪಾನಮಿದಂ ಸುಶೀತಲ ಜಲಂ ವಾನೀರಗಂಧಾಭೃತಂ |
ರಾಮ ಸ್ವೀಕುರು ಮತ್ಸಮರ್ಪಿತಮಿದಂ ಹಸ್ತೋದಕಂ ನಿರ್ಮಲಮ್ ||
ತಾಂಬೂಲಂ ಸಫಲಂ ತ್ರಯೋದಶಗುಣಂ ಸ್ವಾತ್ಮೈಕರಾಗಾನ್ವಿತಂ |
ಶ್ರದ್ಧಾರತ್ನ-ಸುವರ್ಣಪುಷ್ಪಸಹಿತಾಂ ಗೃಹ್ಣಾತು ತಾಂ ದಕ್ಷಿಣಾಮ್ ||೭||
ಭಾವಾರ್ಥ:-ಸ್ವಾಮಿ ಶ್ರೀರಾಮಚಂದ್ರನೇ!ಉತ್ತಮ ಪರಿಮಳ ಭರಿತ ಬೇರಿನ ಚೆನ್ನಾಗಿ ತಂಪಾದ ಜಲವನ್ನು ಭೋಜನ ಸ್ವೀಕಾರದ ಮಧ್ಯದಲ್ಲಿ ಸ್ವೀಕರಿಸುವವನಾಗು.ಹಸ್ತವನ್ನು ತೊಳೆಯುವುದರ ಮೂಲಕವಾಗಿ ಶುದ್ಧೀಕರಿಸಲು ಸ್ವಚ್ಛವಾಗಿರುವ ನೀರಿಲ್ಲಿದೆ.ಆತ್ಮ ಸ್ವರೂಪದ, ಹದಿಮೂರು ಗುಣಗಳುಳ್ಳ ತಾಂಬೂಲವಿದೋ ಇಲ್ಲಿರಿಸಿರುವೆ.ದಕ್ಷಿಣಾರ್ಥವಾಗಿ ಇದೋ ಸುವರ್ಣ ಪುಷ್ಪಗಳನ್ನು ಸಮರ್ಪಿಸುತ್ತಲಿರುವೆನು. ಇವೆಲವುಗಳನ್ನು ಮಂಗಲದಾಯಕನೇ; ಸ್ವೀಕರಿಸು.
ಜಯಜಯತಿ ವಿಷ್ಣೂ ರಾಮನಾಮಾಭಿಧೇಯೋ |
ಜಯತಿ ಜಯತಿ ಪೂರ್ಣ: ಕೋಟಿಕಂದರ್ಪಭಾಸ: ||
ಜಯತಿ ಜಯತಿ ವಾದ್ಯೈರ್ನಾಟಕೈರ್ಗೀತ ನೃತ್ಯೈ- |
ರ್ಜಯ ಜಯ ತಿಮಿರಾರೇ ಗೃಹ್ಣ ನೀರಾಜನಂ ತ್ವಮ್ ||೮||
ಭಾವಾರ್ಥ:-ಶ್ರೀರಾಮನೆಂಬ ಹೆಸರಿನ ಶ್ರೀ ಮಹಾವಿಷ್ಣುವಿಗೆ ಜಯವಾಗಲಿ.ಕೋಟಿ ಮನ್ಮಥರ ತೇಜಸ್ಸನ್ನು ಹೊಂದಿರುವನೇ,ಪರಿಪೂರ್ಣನೇ;ನಿನಗೆ ಜಯವಾಗಲಿ.ನಾನಾ ವಿಧದ ಸಂಗೀತ-ವಾದ್ಯ-ನಾಟಕ-ನೃತ್ಯಗಳ ಮೂಲಕವಾಗಿ ನಿನ್ನ ಸೇವೆ ಗೈಯುತ್ತಿರುವೆ ಸ್ವಾಮಿಯೇ! ನಿನಗೆ ಜಯವಾಗಲಿ.ನನ್ನ ಅಜ್ಞಾನವೆಂಬ ಅಂಧಕಾರವನ್ನು ಕಳೆಯುವವನೇ,ಮಂಗಲಮಯವಾಗಿರುವ ನೀರಾಜನವನ್ನಿದೋ ಸ್ವೀಕರಿಸು.ನಿನಗಿದೋ ಜಯ ಜಯವೆನ್ನುವೆ.
ಸಾಮ್ರಾಜ್ಯ ಭೋಜ್ಯಾದಿ-ಸುಪಾರಮೇಷ್ಠ್ಯಾಂ |
ತಮತ್ರ ಯಜ್ಜಾಖಿಲ ವಸ್ತು ಜಾತಮ್ ||
ಏಕಾಕ್ಷರಂ ಬ್ರಹ್ಮಮಯಂ ಪ್ರಸಿದ್ಧ |
ಮೇವಾರ್ಪಯಾಮೀತಿ ಸುಮಂತ್ರ ಪುಷ್ಪಮ್ ||೯||
ಭಾವಾರ್ಥ:-ಅಖಂಡ ಸಾಮ್ರಾಜ್ಯ-ಭೋಗಭಾಗ್ಯಾದಿಗಳಿಂದ ಪರಮೇಷ್ಠಿಯವರೆಗೆ ನಿರ್ಮಿತವಾಗಿರುವ ವಸ್ತುಗಳೆಲ್ಲವೂ ಓಂಕಾರವೆಂಬ ಪದವಾಚ್ಯ ಸ್ವರೂಪವಾಗಿರುವ ಪರಬ್ರಹ್ಮನ ರೂಪಗಳೇ ಆಗಿದ್ದು ಅವೆಲ್ಲವುಗಳನ್ನು ಪರಮೋತ್ಕೃಷ್ಟವಾಗಿರುವ ಮಂತ್ರಗಳ ಮುಖೇನ ಪುಷ್ಪಾಂಜಲಿ ಎಂಬುದಾಗಿ ನಿನಗರ್ಪಿಸುತ್ತಿರುವೆನು ಪ್ರಭುವೇ! ಕರುಣಾಸಾಗರ ಶ್ರೀರಾಮಚಂದ್ರನೇ ಸ್ವೀಕರಿಸುವವನಾಗು ಪ್ರಭುವೇ!
ಜಯ ಜಯ ಕರುಣಾಬ್ದೇsನಂತ ಭಾನುಪ್ರಕಾಶ |
ಜಯ ಜಯ ಜಗದೀಶಾವ್ಯಕ್ತ ಮಾಯಾಧಿದೇವ ||
ಜಯ ಜಯ ಧರಣೀಜಾವಲ್ಲಭಾನಂತವೀರ್ಯ |
ಜಯ ಜಯ ರಘುನಾಥ್ಹಾನಾಥನಾಥ ಪ್ರಸೀದ ||೧೦||
ಭಾವಾರ್ಥ:-ಕರುಣಾಸಾಗರನೇ,ಅನಂತಾನಂತ ಸೂರ್ಯಪ್ರಕಾಶನೇ,ನಿನಗೆ ಜಯವಾಗಲಿ.ಹೇ!ಜಗದೊಡೆಯನೇ,ಅಸ್ಪಷ್ಟವಾಗಿರುವ ವಿಶಿಷ್ಟ ಶಕ್ತಿಗಳ ಅಧಿಪತಿಯೇ,ನಿನಗೆ ಜಯವಾಗಲಿ. ಭೂಮಾತೆಯ ತನಯೆ ಜಾನಕೀದೇವಿಯ ಪತಿಯೇ,ಅಪರಿಮಿತ ಪರಾಕ್ರಮಿಯೇ,ನಿನಗೆ ಜಯವಾಗಲಿ.ಅನಾಥರೊಡೆಯಾ, ರಘುನಾಥನೇ ಪ್ರಸನ್ನನಾಗು ಪ್ರಭುವೇ.ನಿನಗೆ ಜಯವಾಗಲಿ.
ಯಜ್ಞೇಶ ಯಜ್ಞಾಧಿಪ ಯಜ್ಞಪಾಲ |
ಯಶ: ಪ್ರಧಾಧೋಕ್ಷಜ ರಾಮಚಂದ್ರ ||
ಪ್ರದಕ್ಷಿಣಾಂ ತೇ ಪ್ರಕರೋಮಿ ನಿತ್ಯಂ |
ಪದೇ ಪದೇನಂತ ಮುಖಾದಿ ದಾತ್ರಿಮ್ ||೧೧||
ಭಾವಾರ್ಥ:-ಯಜ್ಞೇಶನೇ,ಯಜ್ಞರಕ್ಷಕನೇ,ಯಜ್ಞಗಳೊಡೆಯನೇ,ಅತೀಂದ್ರಿಯ ಜ್ಞಾನಿಯೇ, ಶ್ರೀರಾಮಚಂದ್ರನೇ, ಯಶ:ಕರನೇ,ಅನುದಿನವೂ ನಿನಗೆ ಪ್ರದಕ್ಷಿಣೆ ಬರುತ್ತಿರುವೆನು. ಆ ರೀತಿ ಬರುವ ಪ್ರದಕ್ಷಿಣೆಗಳು ಪ್ರತಿ ಹೆಜ್ಜೆಹೆಜ್ಜೆಗೂ ಅನಂತ ಯಜ್ಞಾದಿಗಳ ಫಲವನ್ನು ಒದಗಿಸಿಕೊಡುತ್ತವೆ.
ರಾಜಾಧಿರಾಜಾಯ ರಮಾವರಾಯ |
ರಾತ್ರಿಂಚರಾಣಾಮಭಿ ಸಂಹರಾಯ ||
ರಾಜ್ಯಾಭಿಷಿಕ್ತಾಯ ರಘೂತ್ತಮಾಯ |
ಶ್ಯಾಮಾಯ ರಾಮಾಯ ನಮೋ ನಮಸ್ತೇ ||೧೨||
ಭಾವಾರ್ಥ:-ರಾಜಾಧಿರಾಜನಿಗೆ,ರಮಾಕಾಂತನಿಗೆ,ದಾನವ ಸಂಹಾರಕಗೆ,ರಾಜ್ಯಾಭಿಷಿಕ್ತಗೆ, ರಘುಕುಲಾಗ್ರಗಣ್ಯಗೆ,ಶ್ಯಾಮಲವರ್ಣಗೆ,ಸ್ವಾಮಿ ಶ್ರೀರಾಮಚಂದ್ರನಿಗೆ ಪುನ:ಪುನ:ನಮಸ್ಕರಿಸುವೆನು.
ಪ್ರಭೋ ಚಾಮರಾದರ್ಶ ಛತ್ರಾದಿಕಾನ್ವೈ |
ಮಹಾರಾಜ ರಾಜೋಪಚಾರಾನ್ ಗೃಹಾಣ ||
ಸುಹೃತ್ಪದ್ಮಪೀಠಂ ಮುರಾರೇ ಪ್ರವಿಶ್ಯ |
ಮಮೇಶಾಪರಾಧಾನ್ ಹಿ ಸರ್ವಾನ್ ಕ್ಷಮಸ್ವ ||೧೩||
ಭಾವಾರ್ಥ:-ದೊರೆಯೇ!ಮಹಾರಾಜನೇ,ಚಾಮರ,ಛತ್ರ,ಕನ್ನಡಿ ಇತ್ಯಾದಿಯಾದ ರಾಜೋಪಚಾರಗಳನ್ನು ಸ್ವೀಕರಿಸುವವನಾಗು.ಮುರಾರಿಯೇ!ಸ್ವಾಮೀ;ನನ್ನ ಹೃತ್ಕಮಲ ಪೀಠದ ಮೇಲೆ ಆಶ್ರಯವನ್ನು ಹೊಂದುವವನಾಗು .ತನ್ಮೂಲಕ ನನ್ನ ಸರ್ವಾಪರಾಧಗಳನ್ನು ಕ್ಷಮಿಸಿ ಉದ್ಧರಿಸು.
ಇತ್ಯೇವ ಸಾಂಗಮುಪಚಾರ ಯುಕ್ತಾಂ |
ಶ್ರೀ ರಾಮಪೂಜಾಂ ಹೃದಯೇ ಬಹಿರ್ವಾ ||
ಕುರ್ವಂತಿ ಯೇ ಧರ್ಮಮಥಾರ್ಥಕಾಮಾನ್ |
ಮೋಕ್ಷಾದಿಕಾಂ ಸಂಪದ ಮಾಪ್ನುವಂತಿ ||೧೪||
ಭಾವಾರ್ಥ:-ಯಾರು ಈ ರೀತಿಯಾಗಿ ಶ್ರೀರಾಮಚಂದ್ರ ಪ್ರಭುವಿನ ಆರಾಧನೆಯನ್ನು ಮಾನಸೋಪಚಾರಗಳಿಂದಾಗಲೀ ಬಾಹ್ಯೋಪಚಾರಗಳಿಂದಾಗಲೀ ಸಂಪೂರ್ಣವಾಗಿ ಮಾಡುವರೋ ಅಂತಹವರಿಗೆ ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಂಪದಗಳು ಲಭಿಸುವವು.
ಶ್ರೀ ವರ್ಣಪೂರ್ವಂ ಸಕಲಾರ್ಥದಂ ವೈ |
ರಾಮೇತಿವರ್ಣದ್ವಯಮೇವ ಪೂರ್ವಮ್ ||
ಜಯೇತಿ ರಾಮೇತಿ ಜಯದ್ವಯೇತಿ |
ರಾಮೇತಿ ಜಪ್ತ್ವಾತು ಪುನರ್ನಜನ್ಮ ||೧೫||
ಭಾವಾರ್ಥ:-"ರಾಮ"ಎಂಬ ದ್ವಯಾಕ್ಷರಕ್ಕೆ ಮೊದಲು "ಶ್ರೀ" ಎಂಬ ಸಕಲ ಇಷ್ಟಾರ್ಥಗಳನ್ನು ಕರುಣಿಸುವ ಅಕ್ಷರವನ್ನು ಜೋಡಿಸಬೇಕು.ಆ ಮೇಲೆ "ಜಯ" ಎಂಬ ಪದವನ್ನು ಕೂಡಿಸಿ ನಂತರ "ರಾಮ"ಎಂಬ ಶಬ್ದವನ್ನು ಯೋಜಿಸಿ ಮತ್ತೆ ಅವುಗಳ ಮುಂದೆ "ಜಯ ಜಯ ರಾಮ"ಎನ್ನುವ ಶಬ್ದಗಳನ್ನು ಹೊಂದಿಸಬೇಕು.ಆಗ "ಶ್ರೀರಾಮ ಜಯರಾಮ ಜಯ ಜಯ ರಾಮ" ಎಂಬ ತ್ರಯೋದಶಾಕ್ಷರೀ ಶ್ರೀರಾಮ ಮಹಾ ಮಂತ್ರವು ಲಭಿಸುತ್ತದೆ.ಈ ಮಹಾ ಮಂತ್ರಾನುಷ್ಠಾನ ಮಾಡುವವರಿಗೆ ಪುನರ್ಜನ್ಮವಿಲ್ಲದೆ ಶಾಶ್ವತವಾದ ಮುಕ್ತಿಯು ದೊರಕುವುದು.
*********************************************************************
|| ಇತಿ ಶ್ರೀಮದ್ ಶಂಕರಾಚಾರ್ಯ ವಿರಚಿತ ಶ್ರೀ ರಾಮಮಾನಸ ಪೂಜಾ ಸ್ತೋತ್ರಮ್ ||
|| ಈ ತೆರನಾಗಿ ಶ್ರೀಮದ್ ಶಂಕರಾಚಾರ್ಯ ವಿರಚಿತ ಶ್ರೀ ರಾಮಮಾನಸ ಪೂಜಾ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೧೩-
|| ಶ್ರೀರಾಮಾಷ್ಟಕಮ್ ||
********************
ಕೃತಾರ್ತದೇವವಂದನಂ |
ದಿನೇಶವಂಶನಂದನಮ್ ||
ಸುಶೋಭಿಭಾಲಚಂದನಮ್ |
ನಮಾಮಿ ರಾಮಮೀಶ್ವರಮ್ ||೧||
ಭಾವಾರ್ಥ:-ಸಂಕಟಕ್ಕೀಡಾದ ದುರ್ದೈವೀ ದೇವತೆಗಳು ಯಾರಿಗೆ ಶಿರಬಾಗಿ ವಂದಿಸುವರೋ,ಯಾರಿಂದ ರವಿವಂಶಕ್ಕೆ ಸಂತಸವುಂಟಾಗುವುದೋ,ಯಾರ ನೊಸಲು ಚಂದನದಿಂದ ಬೆಳಗುವುದೋ ಅಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಮುನೀಂದ್ರಯಜ್ಞಕಾರಕಂ |
ಶಿಲಾವಿಪತ್ತಿಹಾರಕಮ್ ||
ಮಹಾಧನುರ್ವಿದಾರಕಂ |
ನಮಾಮಿ ರಾಮಮೀಶ್ವರಮ್ ||೨||
ಭಾವಾರ್ಥ:-ಮುನಿಗಳಯಜ್ಞರಕ್ಷಕನಾಗಿ,ಯಜ್ಞವನ್ನು ಪೂರ್ಣಗೊಳಿಸಿದವನೂ,ಶಿಲೆಯಾಗಿದ್ದ ಅಹಲ್ಯೆಯ ಶಾಪವನು ಪರಿಹರಿಸಿದವನೂ, ಶಿವ ಧನುಸ್ಸನ್ನು ಮುರಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಸ್ವತಾತವಾಕ್ಯಕಾರಿಣಂ |
ತಪೋವನೇ ವಿಹಾರಿಣಂ ||
ಕರೇಸುಚಾಪ ಧಾರಿಣಂ
ನಮಾಮಿ ರಾಮಮೀಶ್ವರಮ್ ||೩||
ಭಾವಾರ್ಥ:-ತನ್ನ ಪಿತೃ ವಾಕ್ಯವನ್ನು ಪರಿಪಾಲಿಸಿದವನೂ,ತಪೋಭೂಮಿಯಲ್ಲಿ ವಿಹರಿಸಿದವನೂ,ಅಲ್ಲದೆ ಹಸ್ತದಲ್ಲಿ ಉತ್ತಮವಾದ ಬಿಲ್ಲನ್ನು ಹಿಡಿದುಕೊಂಡಿರುವವನೂ,ಆಗಿರುವಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಕುರಂಗಮುಕ್ತಸಾಯಕಂ |
ಜಟಾಯು ಮೋಕ್ಷದಾಯಕಂ ||
ಪ್ರವಿದ್ಧಕೀಶ ನಾಯಕಂ |
ನಮಾಮಿ ರಾಮಮೀಶ್ವರಮ್ ||೪||
ಭಾವಾರ್ಥ:-ಮಾಯಾಮೃಗವನ್ನು ಬೆನ್ನಟ್ಟಿ ಬಾಣವನ್ನು ಪ್ರಯೋಗಿಸಿದನೂ,ಜಟಾಯುವಿಗೆ ಮೋಕ್ಷವನ್ನು ದಯಪಾಲಿಸಿದವನೂ,ವಾನರಾಧೀಶ ವಾಲಿಯನ್ನು ನಿಗ್ರಹಿಸಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಪ್ಲವಂಗ ಸಂಗ ಸಮ್ಮತಿಂ |
ನಿಬದ್ಧನಿಮ್ನಗಾಪತಿಮ್ ||
ದಶಾಸ್ಯವಂಶಸಂಗತಿಂ |
ನಮಾಮಿ ರಾಮಮೀಶ್ವರಮ್ ||೫||
ಭಾವಾರ್ಥ:-ಕಪಿಕುಲದೊಡನೆ ಸ್ನೇಹವನ್ನು ಬೆಳೆಸಿದವನೂ,ಸಾಗರಕ್ಕೆ ಸೇತುವೆಯನ್ನು ರಚಿಸಿದವನೂ,ರಾವಣನ ವಂಶವನ್ನು ನಿರ್ನಾಮಗೊಳಿಸಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ವಿದೀನದೇವಹರ್ಷಣಂ |
ಕಪೀಪ್ಸಿತಾರ್ಥವರ್ಷಣಮ್ ||
ಸ್ವಬಂಧು ಶೋಕಕರ್ಷಣಂ |
ನಮಾಮಿ ರಾಮಮೀಶ್ವರಮ್ ||೬||
ಭಾವಾರ್ಥ:-ದೀನರಾದಂತಹಾ ದೇವತೆಗಳನ್ನು ಸಂತಸಗೊಳಿಸಿದವನೂ,ಕಪಿಗಳ ಅಭೀಷ್ಠಗಳನ್ನು ನೆರವೇರಿಸಿದಾತನೂ,ತನ್ನ ಬಂಧುವರ್ಗದವರ ದು:ಖವನ್ನು ಶಾಂತ ಮಾಡಿದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಗತಾರಿರಾಜ್ಯರಕ್ಷಣಂ |
ಪ್ರಜಾಜನಾರ್ತಿಭಕ್ಷಣಂ ||
ಕೃತಾಸ್ತಮೋಹ ಲಕ್ಷಣಂ |
ನಮಾಮಿ ರಾಮಮೀಶ್ವರಮ್ ||೭||
ಭಾವಾರ್ಥ:-ಅಜಾತಶತ್ರುವೂ,ನಿಷ್ಕಂಟಕನೂಆಗಿರುವ ರಾಜ್ಯಪರಿಪಾಲಕನೂ,ಪ್ರಜಾವರ್ಗಕ್ಕೆ ಅಭಯಪ್ರದಾಯಕನೂ,ಮೋಹವನ್ನು ವಿನಾಶಗೊಳಿಸುವವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಹೃತಾಖಿಲಾಚಲಾಭರಂ |
ಸ್ವಧಾಮನೀತ ನಾಗರಂ ||
ಜಗತ್ತಮೋ ದಿವಾಕರಂ |
ನಮಾಮಿ ರಾಮಮೀಶ್ವರಮ್ ||೮||
ಭಾವಾರ್ಥ:-ಭೂಮಿಯ ಸಮಗ್ರ ಭಾರವನ್ನು ಹರಣಗೈದವನೂ,ತನ್ನರಮನೆಯ ನಿವಾಸಿಗಳಿಗೆಲ್ಲ ಆಶ್ರಯಧಾಮನಾದವನೂ,ಬ್ರಹ್ಮಾಂಡದ ಅಂಧಕಾರಕ್ಕೆ ರವಿಸ್ವರೂಪನಾಗಿ ಜ್ಯೋತಿರ್ಮಯಿಯಾದವನೂ ಆದಂತಹಾ ಪರಮೇಶ್ವರನಾಗಿರುವ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.
ಇದಂ ಸಮಾಹಿತಾತ್ಮ ನಾ |
ನರೋ ರಘೂತ್ತಮಾಷ್ಟಕಮ್ ||
ಪಠನ್ನಿರಂತರಂ ಭಯಮ್ |
ಭಯೋದ್ಭವಂ ನ ವಿಂದತೇ ||೯||
ಭಾವಾರ್ಥ:-ಈರಾಮಾಷ್ಟಕವನ್ನು ಏಕಾಗ್ರಚಿತ್ತನಾಗಿ ಯಾವಾತನು ಸದಾ ಪಠಿಸುವನೋ ಅಂತಹವನಿಗೆ ಸಾಂಸಾರಿಕವಾಗಿ ಉದ್ಭವಿಸುವ ಯಾವುದೇ ಭೀತಿಯು ಉಂಟಾಗಲಾರದು.
*********************************************************************
|| ಇತಿ ಶ್ರೀರಾಮಾಷ್ಟಕಮ್ ||
|| ಈ ರೀತಿಯಾಗಿ ಶ್ರೀರಾಮಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೪-
|| ಶ್ರೀ ಸೀತಾರಾಮಾಷ್ಟಕಮ್ ||
************************
ಬ್ರಹ್ಮ ಮಹೇಂದ್ರ ಸುರೇಂದ್ರ ಮರುದ್ಗಣ ರುದ್ರ ಮುನೀಂದ್ರ ಗಣೈರತಿ ರಮ್ಯಂ |
ಕ್ಷೀರಸರಿಸ್ಪತಿ ತೀರಮುಪೇತ್ಯ ನುತಂ ಹಿ ಸತಾಮ ವಿತಾರ ಮುದಾರಮ್ ||
ಭೂಮಿಭರಪ್ರಶಮಾರ್ಥಮಥ ಪ್ರಥಿತ ಪ್ರಕಟೀಕೃತ ಚಿದ್ಘನಮೂರ್ತಿಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೧||
ಭಾವಾರ್ಥ:-ಬ್ರಹ್ಮ,ಶಿವ,ದೇವೇಂದ್ರ,ಮರುದ್ಗಣಾದಿಗಳು,ರುದ್ರರು,ಮತ್ತುಮುನಿವರ್ಯರು ಅತಿರಮಣೀಯವಾಗಿರುವ ಪಾಲ್ಗಡಲ ಸಮೀಪಕ್ಕೆ ಹೋಗಿ,ಸಾಧು ಪರಿಪಾಲಕನೂ,ಅತಿ ಧಾರಾಳಿಯೂ ಆಗಿರುವ ರಘುಕುಲ ಶ್ರೇಷ್ಠನಾಗಿರುವ ನಿನ್ನನ್ನು ಸ್ತುತಿಸಿದರು.ಆಗ ಭೂಭಾರವನ್ನು ಇಳಿಸಲೋಸುಗ ನೀನು ನಿನ್ನ ಪರಮಾತ್ಮಸ್ವರೂಪವನ್ನು ಪ್ರಕಟಗೊಳಿಸಿದೆ.ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಪದ್ಮದಲಾಯತ ಲೋಚನ ಹೇ ರಘುವಂಶ ವಿಭೂಷಣ ದೇವದಯಾಲೋ |
ನಿರ್ಮಲ ನೀರದ ನೀಲ ತತೋsಖಿಲ ಲೋಕ ಹೃದಂಬುಜ ಭಾಸಕಭಾನೋ ||
ಕೋಮಲಗಾತ್ರ ಪವಿತ್ರ ಪದಾಬ್ಜ ರಜ:ಕಣಪಾವಿತ ಗೌತಮ ಕಾಂತಾ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೨||
ಭಾವಾರ್ಥ:-ಹೇ!ತಾವರೆಯಂತೆ ಕಣ್ಣುಗಳನ್ನು ಹೊಂದಿರುವವನೇ,ರಘುಕುಲ ವಿಭೂಷಣನೇ,ದೇವನೇ,ಕರುಣಾಳುವೇ,ಸ್ವಚ್ಛವಾಗಿರುವ ಕಾರ್ಮುಗಿಲನ್ನು ಹೋಲುವ ಸುಂದರ ಶರೀರವುಳ್ಳವನೇ,ಸದಾ ಭಕ್ತಜನರ ಹೃತ್ಕಮಲಗಳನ್ನರಳಿಸುವ ರವಿ ಸ್ವರೂಪನೇ,ಅತೀ ಮನಮೋಹಕ ದೇಹವುಳ್ಳಾತನೇ,ಅತ್ಯಂತ ಪಾವನಮಯವಾಗಿರುವ ನಿನ್ನ ಪಾದಕಮಲಗಳ ಧೂಲಿಯಿಂದ ಗೌತಮಮುನಿಯ ಪತ್ನಿ ಅಹಲ್ಯೆಯನ್ನು ಪಾವನಗೊಳಿಸಿದವನೇ, ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಪೂರ್ಣ ಪರಾತ್ಪರ ಪಾಲಯ ಮಾಮತಿ ದೀನಮನಾಥಮನಂತ ಸುಖಾಬ್ದೇ |
ಪ್ರಾವೃಡದಭ್ರತಡಿತ್ಸು ಮನೋಹರ ಪೀತವರಾಂಬರ ರಾಮ ನಮಸ್ತೇ ||
ಕಾಮ ವಿಭಂಜನ ಕಾಂತತರಾನನ ಕಾಂಚನ ಭೂಷಣ ರತ್ನ ಕಿರೀಟಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೩||
ಭಾವಾರ್ಥ:-ಎಲೈ ಪೂರ್ಣ ಸ್ವರೂಪನೇ,ಪರಾತ್ಪರರೂಪಿಯೇ,ಅನಂತಸುಖಸಾಗರನೇ,ಅತಿ ದರಿದ್ರನೂ,ದಿಕ್ಕಿಲ್ಲದನೂ ಆಗಿರುವ ನನ್ನನ್ನು ಪರಿಪಾಲಿಸು ಸ್ವಾಮೀ.ಮಳೆಗಾಲದಲ್ಲಿ ಕಾಣುವ ಚಂಚಲ ಮಿಂಚಿನಂತೆ ಮನೋಹರವಾಗಿರುವ ಪೀತವಸನಧಾರಿಯೇ,ಶ್ರೀರಾಮಚಂದ್ರನೇ,ನಿನಗಿದೋ ನಮನಗಳು.ಹೇ!ಮನ್ಮಠನ ಗರ್ವವನ್ನು ನಾಶಮಾಡಿದವನೇ, ಸುಂದರಮೊಗದವನೇ,ಸ್ವರ್ಣಭೂಷಿತನೇ, ರತ್ನಕೀರೀಟಧಾರಿಯೇ,ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ದಿವ್ಯಶರಚ್ಛಶಿಕಾಂತಿಹರೋಜ್ವಲ ಮೌಕ್ತಿಕಮಾಲವಿಶಾಲಮೌಲೇ |
ಕೋಟಿರವಿಪ್ರಭ ಚಾರುಚರಿತ್ರ ಪವಿತ್ರ ವಿಚಿತ್ರಧನು:ಶರಪಾಣೇ ||
ಚಂಡಮಹಾಭುಜದಂಡವಿಖಂಡಿತರಾಕ್ಷಸರಾಜಮಹಾಗಜದಂಡಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೪||
ಭಾವಾರ್ಥ:-ಶರದೃತುವಿನ ಚಂದ್ರನ ಸುಂದರ ಕಾಂತಿಯನ್ನು ದೂಷಿತಗೊಳಿಸುವಂತಹಾ ಉಜ್ವಲವಾಗಿರುವ ಮುತ್ತಿನಮಾಲೆಯನ್ನು ವಿಶಾಲವಾಗಿರುವ ಕುತ್ತಿಗೆಯಲ್ಲಿ ಧರಿಸಿದ,ಕೋಟಿಸೂರ್ಯರ ಪ್ರಕಾಶವುಳ್ಳ ಸದಾಚಾರದಿಂದ ಪಾವನನಾಗಿರುವ,ಕರಕಮಲಗಳಲ್ಲಿ ವಿಶಿಷ್ಟವಾದ ಬಿಲ್ಲು ಬಾಣಗಳನ್ನು ಹಿಡಿದಿರುವ ಹಾಗೂಭಯಂಕರವಾದ ಭುಜದಂಡಗಳಿಂದ ಮದದಾನೆಯಂತಹಾ ರಾವಣನೆಂಬಾತನನ್ನು ವಧಿಸಿದ ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ದೋಷವಿಹಿಂಸ್ರಭುಜಂಗಸಹಸ್ರಸುರೋಪಮಹಾನಲಕೀಲಕಲಾಪೇ |
ಜನ್ಮಜರಾಮರಣೋರ್ಮಿಮಯೇ ಮದಮನ್ಮಥನಕ್ರವಿಚಕ್ರ ಭವಾಬ್ದೌ ||
ದು:ಖನಿಧೌ ಚ ಚಿರಂ ಪತಿತಂ ಕೃಪಯಾದ್ಯಸಮುದ್ದರ ರಾಮ ತತೋ ಮಾಮ್ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೫||
ಭಾವಾರ್ಥ:-ಅವಗುಣಗಳ ಸಾಕಾರವಾಗಿರುವ ಹಿಂಸಾಭರಿತ ಸಾವಿರಾರು ಸರ್ಪಗಳೂ,ಕೋಪದ ಸಾಕಾರವಾಗಿರುವ ಕಡಲ್ಗಿಚ್ಚಿನ ಜ್ವಾಲೆಗಳೂ,ಹುಟ್ಟು,ವಾರ್ಧಕ್ಯ,ಮರಣ ರೂಪಿನ ತೆರೆಗಳೂ,ಅಂತೆಯೇ ಮದ,ಮೋಹ ರೂಪಿನ ಮತ್ಸ್ಯ-ಮಕರಗಳೂ,ನೀರಿನ ಸುಳಿಯಂತಿರುವ ಸಂಸಾರ ಸಾಗರದಲ್ಲಿ ಸಿಲುಕಿಕೊಂಡಿರುವ ನನ್ನನ್ನು,ಎಲೈ ಶ್ರೀರಾಮನೇ ದಯಾಭರಿತನಾಗಿ ರಕ್ಷಿಸುವವನಾಗು. ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಸಂಸ್ಕೃತಿಘೋರ ಮದೋತ್ಕಟಕುಂಜರ ತೃಟ್ ಕ್ಷುದನೀರದಪಿಂಡಿತತುಂಡಂ |
ದಂಡಕರೋನ್ಮಥಿತಂ ಚ ರಜಸ್ತಮ ಉನ್ಮದಮೋಹ ಪದೋಜ್ಝ್ರಿತಮಾರ್ತಮ್ ||
ದೀನಮನನ್ಯಗತಿಂ ಕೃಪಣಂ ಶರಣಾಗತ ಮಾತು ವಿಮೋಚಯ ಮೂಢಮ್ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೬||
ಭಾವಾರ್ಥ:-ಸಂಸಾರವೆಂಬುದು ಹಸಿವು ಬಾಯಾರಿಕೆಗಳೆಂಬ ಹರಿತವಾದ ಹಲ್ಲುಗಳುಳ್ಳ ಮದವೇರಿರುವ ಒಂದು ಆನೆಯಂತಿದೆ.ಆ ಆನೆಯ ಯಮಸ್ವರೂಪೀ ಸೊಂಡಿಲಿನಲ್ಲಿ ಸಿಕ್ಕಿದ ರಜ-ತಮ-ಉನ್ಮಾದ ಹಾಗೂ ಮೋಹಗಳೆಂಬ ನಾಲ್ಕೂ ಪಾದಗಳ ತುಳಿತಕ್ಕೆ ಈಡಾಗಿರುವ ತೀರಾದೀನನೂ,ದು:ಖಕ್ಕೆ ಸಿಲುಕಿದವನೂ,ಅನನ್ಯ ಶರಣಾಗತನೂ,ಮೂಢನೂ,ಆಗಿರುವ ನನ್ನನ್ನು ಬೇಗನೆ ಬಿಡಿಸುವವನಾಗು.ಮತ್ತು ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಜನ್ಮಶತಾರ್ಜಿತಪಾಪಸಮನ್ವಿತಹೃತ್ಕಮಲೇ ಪತಿತೇ ಪಶುಕಲ್ಪೇ |
ಹೇ ರಘುವೀರ ಮಹಾರಣಧೀರ ದಯಾಂಕುರು ಮಯ್ಯತಿಮಂದಮನೀಷೇ ||
ತ್ವಂ ಜನನೀ ಭಗಿನೀ ಚ ಪಿತಾ ಮಮತಾವದಸಿ ತ್ವವಿತಾ??ಪಿ ಕೃಪಾಲೊ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೭||
ಭಾವಾರ್ಥ:-ಹಿಂದಿನ ನೂರಾರು ಜನ್ಮಗಳಿಂದ ಶೇಖರವಾದ ಪಾಪಲೇಪಗಳಿಂದ ಕೂಡಿದಹೃತ್ಕಮಲದವನೂ,ಪಶುವಿನೋಪಾದಿಯಲ್ಲಿ ಪಾವನವಾದವನೂ,ಅತ್ಯಂತ ಮಂದಮತಿಯೂ ಆಗಿರುವ ನನ್ನ ಬಗೆಗೆ ಹೇ!ರಣಧೀರ ರಘುವರನೇ,ಕರುಣೆದೋರು.ನೀನೇ ನನ್ನ ತಾಯಿ,ತಂದೆ,ಸೋದರಿಯಾಗಿರುವೆ.ಹೇ!ದಯಾಪೂರ್ಣನೇ;ನೀನೇ ನನ್ನ ಪರಿಪಾಲಕನು. ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ತ್ವಾಂ ತು ದಯಾಲುಮ ಕಿಂಚನವತ್ಸಲಮುತ್ಪಲಹಾರಮಪಾರಮುದಾರಂ |
ರಾಮವಿಹಾಯ ಕಮನ್ಯಮನಾಯಮಮೀಶ ಜನಂ ಶರಣಂ ನನು ಯಾಯಮ್ ||
ತ್ವತ್ಪದಪದ್ಮ ಮತ:ಶ್ರೀತಮೇವ ಮುದಾಖಲು ದೇವ ಸದಾವ ಸಸೀತಂ |
ತ್ವಾಂಭಜತೋ ರಘುನಂದನ ದೇಹಿ ದಯಾಘನ ಸ್ವಪದಾಂಬುಜ ದಾಸ್ಯಮ್ ||೮||
ಭಾವಾರ್ಥ:-ನನ್ನೊಡೆಯನಾಗಿರುವ ಹೇ ಶ್ರೀರಾಮಚಂದಿರನೇ,ಕಂಠದೊಳು ಕಮಲಪುಷ್ಪಮಾಲಿಕೆಯನ್ನು ಧರಿಸಿದ ನಿನ್ನಂತಹಾ ಅತ್ಯಂತ ಉದಾರಚರಿತನೂ,ಬಡವರಬಂಧುವೂ,ಕರುಣಾಮಯಿಯೂ,ಆಗಿರುವ ಒಡೆಯನನ್ನು ತ್ಯಜಿಸಿ ನಾನಿನ್ನ್ಯಾವ ಪರಿಶುದ್ಧ ಪುರುಷನಿಗೆ ಶರಣು ಹೊಗಲಿ?ಆದುದರಿಂದ ನಾನು ನಿನ್ನ ಚರಣಾರವಿಂದಗಳನ್ನು ಆಶ್ರಯಿಸಿರುವೆ.ಹೇ ಸೀತಾಸಮೇತ ಶ್ರೀರಾಮಚಂದ್ರನೇ!ನೀನು ಸಂತೋಷಚಿತ್ತನಾಗಿ ನಿರಂತರವೂ ನನ್ನನು ಪರಿಪಾಲಿಸು. ಹೇ!ಕರುಣಾಮಯಿಯಾಗಿರುವ ರಘುನಂದನನೇ;ನೀನು ಭಕ್ತನಾಗಿರುವ ನನಗೆ ನಿನ್ನ ಚರಣಾರವಿಂದಗಳ ಸೇವೆ ಮಾಡುವ ಕಾರ್ಯವನ್ನು ದಯಪಾಲಿಸು ಸ್ವಾಮೀ.
ಯ: ಕರುಣಾಮೃತಸಿಂಧುರನಾಥಜನೋತ್ತಮಬಂಧುರ ಜೋತ್ತಮಕಾರೀ |
ಭಕ್ತಭಯೋವೀರ್ಭವಾಬ್ಧಿತರಿ: ಸರಯೂತಟನೀತಟಚಾರು ವಿಹಾರೀ ||
ತಸ್ಯ ರಘುಪ್ರವರಸ್ಯ ನಿರಂತರಮಷ್ಟಕಮೇತದನಿಷ್ಟ ಹರಂ ವೈ |
ಯಸ್ತು ಪಠೇದಮರ: ಸ ನರೋಲಭತೇsಚ್ಯುತರಾಮ ಪದಾಂಬುಜದಾಸ್ಯಮ್ ||೯||
ಭಾವಾರ್ಥ:-ದಯೆಯೆನ್ನುವ ಅಮೃತಮಯ ಸಾಗರನೂ,ಅನಾಥರಿಗೆ ಅಧಿಕತಮ ಬಂಧುವೂ,ಮತ್ತು ಶ್ರೇಷ್ಠ ಕರ್ಮಗಳಿಗೆ ನಿಮಿತ್ತನೂ,ಭೀಕರವಾಗಿರುವ ಸಂಸಾರಸಾಗರದ ತೆರೆಗಳಿಂದ ಭಕ್ತರನ್ನು ರಕ್ಷಿಸುವ ಅಂಬಿಗಸ್ವರೂಪನೂ,ಹಾಗೆಯೇ ಸರಯೂ ನದಿಯ ತಟಾಕದಲ್ಲಿ ಮನಮೋಹಕವಾಗಿರುವ ವಿನೋದಗಳನ್ನು ರೂಢಿಸಿಕೊಂಡವನೂ,ಆಗಿರುವ ಆ ಶ್ರೀರಘುವರಶ್ರೇಷ್ಠನ ಈ ಅಷ್ಟಕಗಳು ನಿರಂತರವಾಗಿ ಭಕ್ತರ ಸರ್ವಾನಿಷ್ಟಗಳನ್ನು ದೂರೀಕರಿಸಿ ಅವರನ್ನು ಅಮರತ್ವಕ್ಕೆ ಕೊಂಡೊಯ್ಯುವುದಲ್ಲದೆ ಅವರಿಗೆ ಭಗವಾನ್ ಶ್ರೀರಾಮಚಂದ್ರನ ಚರಣಾರವಿಂದಗಳಲ್ಲಿ ಸೇವಾವೃತ್ತಿಯನ್ನು ಒದಗಿಸಿಕೊಡುವುದು.
*********************************************************************
|| ಇತಿ ಶ್ರೀ ಸೀತಾರಾಮಾಷ್ಟಕಮ್ ||
|| ಈ ರೀತಿಯಾಗಿ ಶ್ರೀ ಸೀತಾರಾಮಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
-೧೫-
|| ಇಂದ್ರಕೃತ ಶ್ರೀ ರಾಮ ಸ್ತೋತ್ರಮ್ ||
***********************************
ಭಜೇsಹಂ ಸದಾ ರಾಮಮಿಂದೀವರಾಭಂ |
ಭವಾರಣ್ಯ ದಾವಾನಲಾಭಿದಾನಂ ||
ಭವಾನೀ ಹೃದಾಭಾವಿತಾನಂದ ರೂಪಂ |
ಭವಾಭಾವಹೇತುಂ ಭವಾದಿಪ್ರಪನ್ನಮ್ ||೧||
ಭಾವಾರ್ಥ:-ನೀಲಿತಾವರೆಯ ಕಾಂತಿಯ ರಾಶಿಯಂತಿರುವ ದೇಹವುಳ್ಳವನೂ, ಸಂಸಾರವೆಂಬ ಕಾನನಕ್ಕೆ ದಾವಾನಿಲದಂತಿರುವವನೂ, ಚೆಲುವಿಗೆ ಹೆಸರಾದವನೂ, ಪಾರ್ವತೀ ದೇವಿಯ ಹೃದಯದಲ್ಲಿ ಆನಂದ ಸ್ವರೂಪನಾಗಿ ತಿಳಿಯಲ್ಪಡುವವನೂ, ಸಂಸಾರದ ಕಷ್ಟಕಾರ್ಪಣ್ಯಗಳನ್ನು ನಾಶ ಮಾಡುವಾತನೂ, ಹರನೇ ಆದಿಯಾಗಿ ಸಮಸ್ತ ದೇವರ್ಕಳಿಂದ ಆರಾಧಿಸಲ್ಪಡುವಾತನೂ ಆಗಿರುವ ಶ್ರೀರಾಮನನ್ನು ನಾನು ಸದಾ ಸ್ತುತಿಸುವೆನು.
ಸುರಾನೀಕ ದು:ಖೌಘನಾಶೈಕ ಹೇತುಂ
ನರಾಕಾರದೇಹಂ ನಿರಾಕಾರಮೀಡ್ಯಂ ||
ಪರೇಶಂ ಪರಾನಂದರೂಪಂ ವರೇಣ್ಯಂ |
ಹರಿಂ ರಾಮಮೀಶಂ ಭಜೇ ಭಾರನಾಶಮ್ ||೨||
ಭಾವಾರ್ಥ:-ದೇವತಾಸಮೂಹದ ದು:ಖಸಾಗರವನ್ನು ನಾಶಮಾಡಲು ನಿಮಿತ್ತನಾದವನೂ, ಮಾನವ ಶರೀರವನ್ನು ಹೊಂದಿರುವವನೂ,ಆಕಾರ ರಹಿತನೂ,ಸ್ತುತಿಸಲು ಯೋಗ್ಯನಾದವನೂ, ಅತಿ ಬಲಶಾಲಿಯೂ,ಪರಮಾನಂದ ಸ್ವರೂಪನೂ,ದುರ್ಜನರಿಂದಾದ ಭೂಭಾರವನ್ನು ಅಳಿಸಿದವನೂ ದೊರೆಯೂ ಮಹಾವಿಷ್ಣು ಸ್ವರೂಪನೂ ಆಗಿರುವ ಶ್ರೀರಾಮನನ್ನು ನಾನು ಸ್ತುತಿಸುವೆನು.
ಪ್ರಪನ್ನಾಖಿಲಾನಂದದೋಹಂ ಪ್ರಪನ್ನಂ |
ಪ್ರಪನ್ನಾರ್ತಿನಿ: ಶೇಷನಾಶಾಭಿಧಾನಂ ||
ತಪೋ ಯೋಗ ಯೋಗೀಶ ಭಾವಾಭಿ ಭಾವ್ಯಂ |
ಕಪೀಶಾದಿಮಿತ್ರಂ ಭಜೇ ರಾಮಮಿತ್ರಮ್ ||೩||
ಭಾವಾರ್ಥ:-ಹಲವಾರು ಭಕ್ತರು ಆಶ್ರಯವನ್ನು ಹೊಂದಿರುವ ಶರಣ್ಯನೂ, ಆಶ್ರಯ ಹೊಂದಿದವರಿಗೆ ಸರ್ವ ತರದ ಆನಂದವನ್ನು ದಯಪಾಲಿಸುವಾತನೂ, ಶರಣಾಗತರ ಸಂಕಷ್ಟಗಳನ್ನು ಸಂಪೂರ್ಣವಾಗಿ ವಿನಾಶಗೊಳಿಸುವಾತನೆಂಬ ಕೀರ್ತಿಯುಳ್ಳವನೂ,ಇಂದ್ರಿಯನಿಗ್ರಹ-ಆತ್ಮಸಂಯಮಾದಿಗಳಿಂದ ತಪೋಯೋಗನಿರತರಾಗಿರುವ ಪರಮಯೋಗಿಗಳಿಂದ ಪ್ರಭುತ್ವದ ರೂಪದಲ್ಲಿ ಸ್ಮರಿಸಲ್ಪಡುವಾತನೂ, ವಿಭೀಷಣ,ಸುಗ್ರೀವಾದಿಗಳಿಗೆ ಸ್ನೇಹಿತನೂ ಆಗಿರುವ ಶ್ರೀರಾಮ ಸ್ವರೂಪನಾದ ಸೂರ್ಯಭಗವಾನನನ್ನು ನಾನು ಸ್ತುತಿಸುವೆನು.
ಸದಾ ಭೋಗಭಾಜಾಂ ಸುದೂರೇ ವಿಭಾತಂ |
ಸದಾ ಯೋಗ ಭಾಜಾಮದೂರೇ ವಿಭಾತಂ ||
ಚಿದಾನಂದಕಂದಂ ಸದಾ ರಾಘವೇಶಂ |
ವಿದೇಹಾತ್ಮಜಾನಂದರೂಪಂ ಪ್ರಪದ್ಯೇ ||೪||
ಭಾವಾರ್ಥ:-ಅನುದಿನವೂ ಸುಖಾನುಭವಗಳನ್ನು ಅನುಭವಿಸುವುದರಲ್ಲಿ ನಿರತರಾದವರಿಗೆ ಸಂಬಂಧವನ್ನು ಕಡಿದುಕೊಂಡಂತೆ ಭಾಸವಾಗುವವನೂ, ಅನವರತವೂ ಯೋಗನಿರತರಾಗಿರುವವರಿಗೆ ಸಮೀಪಸ್ತನಾಗಿ ಅವರ ಹೃದಯದಲ್ಲಿಯೇ ನೆಲೆಯಾಗಿರುವಾತನೂ, ಜೀವಿಗಳ ಸಂತಸಕ್ಕೆ ನಿಮಿತ್ತನಾಗಿರುವವನೂ,ಜನಕರಾಜನಸುತೆಗೆ ಆನಂದ ಸ್ವರೂಪನಾಗಿರುವಾತನೂ ಆಗಿರುವ ಆ ರಘುವೀರನಲ್ಲಿ ನಾನು ಸದಾ ಶರಣು ಹೊಂದಿರುವವಾನಾಗುವೆ.
ಮಹಾಯೋಗಮಾಯಾವಿಶೇಷಾನುಯುಕ್ತೋ |
ವಿಭಾಸೀಶ ಲೀಲಾನರಾಕಾರ ವೃತ್ತಿ: ||
ತ್ವದಾನಂದಲೀಲಾಕಥಾಪೂರ್ಣಕರ್ಣಾ: |
ಸದಾನಂದರೂಪಾ ಭವಂತೀಹ ಲೋಕೇ ||೫||
ಭಾವಾರ್ಥ:-ಹೇ!ದೊರೆಯೇ;ಸತ್ವ,ರಜ,ತಮ್ಮಸ್ಸುಗಳೆಂಬ ಮಹಾಶಕ್ತಿಯುತ ಯೋಗಮಾಯಾ ವಿಶೇಷ ಗುಣಗಳುಳ್ಳವನಾಗಿ, ಲೀಲಾಮಾನುಷ ದೇಹ ಧಾರಿಯಾಗಿ,ವಸ್ತುಷ: ನಿರ್ಗುಣನೂ ನಿರಾಕಾರಿಯೂ ಆಗಿರುವೆ.ಈ ಭುವಿಯಲ್ಲಿ ನೀನು ನಿನ್ನ ಆನಂದ ಭರಿತವಾದ ಲೀಲಾ ಶಕ್ತಿಗಳಿಂದ ಕೂಡಿರುವ ಸ್ತುತಿಯನ್ನು ತಮ್ಮ ಕಿವಿಗಳಲ್ಲಿ ತುಂಬಿಕೊಂಡವರು ನಿರಂತರ ಆನಂದ ಭರಿತ ಜೀವನವನ್ನು ಅನುಭವಿಸುವರು.
ಅಹಂ ಮಾನಪಾನಾಭಿಮತ್ತ ಪ್ರಮತ್ತೋ |
ನ ವೇದಾಖಿಲೇಶಾಭಿಮಾನಾಭಿಮಾನ: ||
ಇದಾನೀಂ ಭವತ್ಪಾದಪದ್ಮ ಪ್ರಸಾದಾತ್ |
ತ್ರಿಲೋಕಾಧಿಪತ್ಯಾಭಿಮಾನೋ ವಿನಷ್ಟ: ||೬||
ಭಾವಾರ್ಥ:-"ನಾನು ಸ್ವರ್ಗದ ದೊರೆ"ಎಂಬ ಅಭಿಮಾನ ರೂಪೀ ಮದ್ಯವನ್ನು ಸೇವಿಸಿದವನಾಗಿ ನಾನು ತೀರಾ ಉನ್ಮತ್ತನಾಗಿದ್ದೆ.ಭುವಿಯ ಸಾಮಾನ್ಯ ಅರಸರಿಗೆ "ನಾನು ರಾಜ" ಎಂಬ ಅಭಿಮಾನವಿರುತ್ತದೆ.ಅದರಂತೆ ನನಗೂ ದರ್ಪವು ಆವರಿಸಿತ್ತು. ಅದರ ಪರಿಣಾಮವಾಗಿ ನನಗೆ ನಿನ್ನ ನೈಜ ಸ್ವರೂಪದ ಯಥಾರ್ಥ ಜ್ಞಾನವಿರಲಿಲ್ಲ.ಈಗ ನಿನ್ನ ಚರಣಾರವಿಂದಗಳ ಅನುಗ್ರಹದಿಂದ "ನಾನು ಮೂರ್ಲೋಕದ ಅಧಿಪತಿಯು" ಎನ್ನುವ ದರ್ಪವು ಕಳೆದುಹೋಯಿತು.
ಸ್ಫುರದ್ರತ್ನಕೇಯೂರಹಾರಾಭಿರಾಮಂ |
ಧರಾಭಾರಭೂತಾ ಸುರಾನೀಕ ದಾವಂ ||
ಶರಶ್ಚಂದ್ರವಕ್ತೃ ಲಸದ್ಪದ್ಮನೇತ್ರಂ |
ದುರಾವಾರಪಾರಂ ಭಜೇ ರಾಘವೇಶಮ್ ||೭||
ಭಾವಾರ್ಥ:-ಹೊಳೆಯುವ ರತ್ನಗಳನ್ನು ಕಟ್ಟಿ ಅಲಂಕರಿಸಿದ ತೋಳುಗಳನ್ನು ಹೊಂದಿರುವವನೂ,ಕಂಠಾಹಾರಗಳನ್ನು ಧರಿಸಿದ ಸುರಸುಂದರಾಂಗ ಮನಮೋಹಕ ರೂಪಿಯೂ,ಅಸುರಸೇನೆಗಳೆನ್ನುವ ಕಾನನಕ್ಕೆ ಕಾಡ್ಗಿಚ್ಚಿನಂತಾಗಿ ಭೂಭಾರವನ್ನು ನೀಗಿಸಿದವನೂ, ಶರತ್ಕಾಲದ ಚಂದ್ರನ ಹಾಗೆ ಪ್ರಶಾಂತವೂ ನಿರ್ಮಲವೂ ಆಗಿರುವ ಮುಖವನ್ನು ಹೊಂದಿರುವವನೂ, ತಾವರೆಯಂತೆ ಹೋಲುವ ನಯನಗಳುಳ್ಳವನೂ ಅರಿಯಲಸಾಧ್ಯವಾದ ಮಹಿಮಾಮಯಿಯೂ, ಆದಿ ಅಂತ್ಯಗಳಿದವನೂ ಆಗಿರುವ ರಘುವೀರನನ್ನು ನಾನು ಸ್ತುತಿಸುವೆನು.
ಸುರಾಧೀಶ ನೀಲಾಭ್ರ ನೀಲಾಂಗ ಕಾಂತಿಂ |
ವಿರಾಧಾದಿರಕ್ಷೋ ವಧಾಲ್ಲೋಕ ಶಾಂತಿಂ ||
ಕಿರೀಟಾದಿ ಶೋಭಂ ಪುರಾರಾತಿಲಾಭಂ |
ಭಜೇ ರಾಮಚಂದ್ರಂ ರಘೂಣಾಮಧೀಶಮ್ ||೮||
ಭಾವಾರ್ಥ:-ಇಂದ್ರಮಣಿ ವಿಭೂಷಿತನಾಗಿ ನೀಲಮೇಘ ಶ್ಯಾಮಲ ದೇಹಕಾಂತಿಯುಳ್ಳವನೂ, ವಿರಾಧರೇ ಆದಿಯಾದ ಅಸುರಸಮೂಹವನ್ನು ವಧೆ ಮಾಡಿ ಪ್ರಪಂಚದಲ್ಲಿ ಶಾಂತಿಯನ್ನು ನೆಲೆಗೊಳಿಸಿದಾತನೂ, ಕಿರೀಟಾದಿಗಳಿಂದ ಅಲಂಕೃತನಾಗಿ ಪ್ರಕಾಶಿಸುವಾತನೂ,ಹರಾದಿ ದೇವರ್ಕಳಿಗೆ ಲಾಭವನ್ನುಂಟುಮಾಡಿದಾತನೂ ಆಗಿರುವ ರಘುಕುಲಾಧೀಶ ಶ್ರೀರಾಮಚಂದ್ರನನ್ನು ನಾನು ಸ್ತುತಿಸುವೆನು.
ಲಸಶ್ಚಂದ್ರ ಕೋಟಿ ಪ್ರಕಾಶಾದಿ ಪೀಠೇ |
ಸಮಾಸೀನಮೇಕಂ ಸಮಾಧಾಯ ಸೀತಾಮ್ ||
ಸ್ಫುರದ್ಧೇಮವರ್ಣಂ ತಡಿತ್ಪುಂಜಭಾಸಾಂ |
ಭಜೇ ರಾಮಚಂದ್ರಂ ನಿವೃತ್ತಾರ್ತಿತಂದ್ರಮ್ ||೯||
ಭಾವಾರ್ಥ:-ಬಂಗಾರದ ಬಣ್ಣದಿಂದ ದೈದೀಪ್ಯಮಾನಳಾಗಿ ವಿದ್ಯುಲ್ಲತಾ ಮಿಂಚಿನ ಸಮೂಹದಂತೆ ಬೆಳಗುವವಳೂ ಆಗಿರುವ ಸೀತಾದೇವಿಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕೋಟಿ ಚಂದ್ರ ಸದೃಶ ಪ್ರಕಾಶ ತೇಜೋರಾಶಿಯನ್ನು ಹೊಂದಿರುವ ಮಹಾ ಸಿಂಹಾಸನದ ಮೇಲೆ ಆರೂಢನಾಗಿ ದು:ಖದುಮ್ಮಾನಗಳಿಂದ ಮುಕ್ತಿ ಹೊಂದಿರುವಾತನೂ ಆಗಿರುವ ಪ್ರಭು ಶ್ರೀರಾಮಚಂದ್ರನನ್ನು ನಾನು ಸ್ತುತಿಸುವೆನು.
******************************************************************
|| ಇತಿ ಇಂದ್ರಕೃತ ಶ್ರೀರಾಮಸ್ತೋತ್ರಮ್ ||
|| ಈ ರೀತಿಯಾಗಿ ಇಂದ್ರನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
-೧೬-
|| ಬ್ರಹ್ಮ ದೇವಕೃತ ಶ್ರೀರಾಮ ಸ್ತುತಿ: ||
********************************
ವಂದೇದೇವಂ ವಿಷ್ಣುಮಶೇಷಸ್ಥಿತಿಹೇತುಂ |
ತ್ವಾಮಧ್ಯಾತ್ಮ ಜ್ಞಾನಿಭಿರಂತಹೃದಿ ಭಾವ್ಯಂ ||
ಹೇಯಾ ಹೇಯ ದ್ವಂದ್ವ ವಿಹೀನಂ ಪರಮೇಕಂ |
ಸತ್ತಾಮಾತ್ರಂ ಸರ್ವಹೃದಿಸ್ಥಂ ದೃಶಿರೂಪಮ್ ||೧||
ಭಾವಾರ್ಥ:-ಸಮಸ್ತ ಚರಾಚರಗಳ ಇರುವಿಕೆಗೆ ನಿಮಿತ್ತನಾದವನೂ ಜೀವಾತ್ಮ-ಪರಮಾತ್ಮ ಕುರಿತಾದ ಜ್ಞಾನ ಸಂಪನ್ನರ ಹೃದಯಾಂತರಾಳದಲ್ಲಿ ನೆಲೆಯಾಗಿರುವವನೂ, ತಿರಸ್ಕರಣೀಯ ಹಾಗೂ ಸ್ವೀಕಾರಯೋಗ್ಯವೆಂಬಭೇದಗಳಿಲ್ಲದಾತನೂ,ಉತ್ತಮನೂ,ಏಕಮಾತ್ರನೂ,ಕೇವಲನೂ,ಸರ್ವರ ಅಂತರಂಗದಲ್ಲಿ ನೆಲೆಯಾಗಿರುವವನೂ,ಬುದ್ಧಿಸ್ವರೂಪನೂ,ಸಾಕ್ಷಾತ್ ಭಗವಾನ್ ಮಹಾವಿಷ್ಣುವೂ ಆಗಿರುವ ನಿನಗಾನು ನಮಿಸುವೆನು.
ಪ್ರಾಣಾಪಾನೌ ನಿಶ್ಚಯಬುದ್ಯಾ ಹೃದಿರುಧ್ವಾ |
ಛಿತ್ವಾ ಸರ್ವಂ ಸಂಶಯಬಂಧಂ ವಿಷಯೌಧಾನ್ ||
ಪಶ್ಯಂತೀ ಶಂ ಯಂ ಗತಮೋಹಾ ಯತಯಸ್ತಂ |
ವಂದೇ ರಾಮಂ ರತ್ನಕಿರೀಟಂ ರವಿಭಾಸಮ್ ||೨||
ಭಾವಾರ್ಥ:-ಆಶಾಪಾಶ ವಿರಹಿತರಾದ ಮಹಾಯೋಗಿವರೇಣ್ಯರು ಖಚಿತವಾಗಿರಿವ ಜ್ಞಾನದಿಂದ ಪ್ರಾಣ, ಅಪಾನಗಳೆನ್ನುವ ಎರಡು ವಾಯುಗಳನ್ನು ಹೃದಯಲ್ಲಿಯೇ ಬಂಧಿಯಾಗಿರಿಸಿ ಕಲ್ಪನೆಗಳ ಬಂಧವನ್ನೂ ಕಾಮನೆಗಳ ಹರಿಯುವಿಕೆಯನ್ನೂ ತುಂಡರಿಸಿ ಯಾವ ಭಗವಂತನನ್ನು ಕಾಣುವರೋ, ಅಂತಹಾ ರತ್ನಖಚಿತ ಕಿರೀಟಧಾರಿಯೂ, ಮಹಾರವಿತೇಜನೂ ಆಗಿರುವ ಸಾಕ್ಷಾತ್ ಶ್ರೀರಾಮ ಭಗವಾನನಿಗಾನು ನಮಿಸುವೆನು.
ಮಾಯಾತೀತಂ ಮಾಧವಮಾದ್ಯಂ ಜಗದಾದಿಂ |
ಮಾನಾತೀತಂ ಮೋಹವಿನಾಶಂ ಮುನಿವಂದ್ಯಂ ||
ಯೋಗಿಧ್ಯೇಯಂ ಯೋಗವಿಧಾನಂ ಪರಿಪೂರ್ಣಂ |
ವಂದೇರಾಮಂ ರಂಜಿತಲೋಕಂ ರಮಣೀಯಂ ||೩||
ಭಾವಾರ್ಥ:-ಮಾಯಾನಿರ್ಮಾತೃವಾದರೂ ಮಾಯೆಯನ್ನು ದಾಟಿದವನೂ, ಜಗತ್ತಿನ ಕಾರಣಸ್ವರೂಪಿಯೂ, ದೇಶ-ಕಾಲಗಳ ಪರಿಮಿತಿಯಿಲ್ಲದಾತನೂ, ಭ್ರಾಂತಿ ನಾಶಕನೂ, ಮುನಿಗಳಿಂದ ನಮಸ್ಕರಿಸಲ್ಪಡುವಾತನೂ, ಯೋಗಿವರ್ಯರುಗಳ ಧ್ಯಾನಕ್ಕೆ ವಸ್ತುವಾದವನೂ, ಯೋಗಮಾರ್ಗ ಪ್ರೇರಕನೂ, ಸಂಪೂರ್ಣನೂ, ಲೋಕವನ್ನು ರಂಜಿಸುವಾತನೂ, ಮನೋಹರನೂ,ಪ್ರಥಮನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀ ರಾಮ ಭಗವಾನನಿಗಾನು ನಮಿಸುವೆನು.
ಭಾವಾಭಾವಪ್ರತ್ಯಯಹೀನಂ ಭವ ಮುಕ್ತೈ- |
ರ್ಭೋಗಾಸಕ್ತೈರರ್ಚಿತ ಪಾದಾಂಬುಜಯುಗ್ಮಂ ||
ನಿತ್ಯಂ ಶುದ್ಧಂ ಬುದ್ಧಮನಂತಂ ಪ್ರಣವಾಖ್ಯಂ |
ವಂದೇರಾಮಂ ವೀರಮಶೇಷಾಸುರದಾವಮ್ ||೪||
ಭಾವಾರ್ಥ:-ದೃಶ್ಯಾದೃಶ್ಯ ಪ್ರಭೇದಗಳಿಂದ ಅರಿಯಲಸಾಧ್ಯನೂ, ಇಂದ್ರಿಯಸುಖಗಳಲ್ಲಿ ಅನಾಸಕ್ತರಾಗಿರುವ ಮಹಾದೇವನೇ ಮೊದಲಾದ ದೇವರ್ಕಳಿಂದ ಆರಾಧಿಸಿಕೊಂಬ ಚರಣಾರವಿಂದಗಳನ್ನು ಹೊಂದಿದಾತನೂ, ಭೂತ ಭವಿಷ್ಯತ್ ವರ್ತಮಾನಗಳಲ್ಲಿ ಅವಿನಾಶಿಯಾಗಿರುವವನೂ, ಶಾಶ್ವತನೂ,ಶುದ್ಧನೂ,ಜ್ಞಾನಸ್ವರೂಪನೂ,ಆದಿ-ಅಂತ್ಯಗಳಿಲ್ಲದ ಅನಂತನೂ, ಪ್ರಣವ ಸ್ವರೂಪಿಯೂ,ಸಮಸ್ತ ಅಸುರಕುಲವೆಂಬ ಕಾನನಕ್ಕೆ ಕಾಡಿಗಿಚ್ಚಾದವನೂ ಆಗಿರುವ ಭಗವಾನ್ ಶ್ರೀರಾಮನಿಗಾನು ನಮಿಸುವೆನು.
ತ್ವಂ ಮೇ ನಾಥೋ ನಾಥಿತಕಾರ್ಯಾಖಿಲಕಾರೀ |
ಮಾನಾತೀತೋ ಮಾಧವರೂಪೋsಖಿಲಧಾರೀ ||
ಭಕ್ತ್ಯಾಗಮ್ಯೋ ಭಾವಿತ ರೂಪೋ ಭವಹಾರೀ |
ಯೋಗಾಭ್ಯಾಸೈರ್ಭಾವಿತಚೇತ: ಸಹಚಾರೀ ||೫||
ಭಾವಾರ್ಥ:-ಖಚಿತವಾದ ರೂಪವಿಲ್ಲದೆ ಭಾವಕ್ಕನುಗುಣವಾದ ರೂಪಹೊಂದುವವನೂ, ಪ್ರಮಾಣ ರಹಿತನೂ [ಅಳತೆಗೆ ನಿಲುಕದವನೂ], ಸಂಸಾರದ ಸಂಕಷ್ಟಗಳನ್ನು ದೂರೀಕರಿಸುವವನೂ, ಯೋಗಾಭ್ಯಾಸದಿಂದ ಪವಿತ್ರಾಂತ:ಕರಣವುಳ್ಳವರ ಒಡನಾಡಿಯೂ, ಶ್ರೇಷ್ಠ ಭಕ್ತಿಗೆ ವಶವಾಗುವವನೂ, ಸಮಸ್ತ ಬ್ರಹ್ಮಾಂಡವನ್ನು ಧರಿಸಿರುವಾತನೂ, ಬಿನ್ನಹವನ್ನು ಮನ್ನಿಸಿ ಸಮಸ್ತ ಕೋರಿಕೆಗಳನ್ನು ದಯಪಾಲಿಸುವವನೂ, ಲಕ್ಷ್ಮೀಕಾಂತನೂ, ಮಹಾವಿಷ್ಣುಸ್ವರೂಪನೂ ಆಗಿರುವ ಭಗವಾನ್ ಶ್ರೀರಾಮನೇ ನಿನಗಾನು ನಮಿಸುವೆನು.
ತ್ವಾಮಾದ್ಯಂತಂ ಲೋಕಗತೀನಾಂ ಪರಮೇಶಂ |
ಲೋಕನಾಥಂ ಲೌಕಿಕಮಾನೈರಧಿಗಮ್ಯಂ ||
ಭಕ್ತಿಶ್ರದ್ಧಾಭಾವ ಸಮೇತೈರ್ಭಜನೀಯಂ |
ವಂದೇರಾಮಂ ಸುಂದರಮಿಂದೀವರನೀಲಮ್ ||೬||
ಭಾವಾರ್ಥ:-ಹೇ ರಾಮಚಂದ್ರಾ!ನೀನು ಆದಿಅಂತ್ಯಗಳಿಲ್ಲದವನಾಗಿ ಲೋಕಗಳ ಉತ್ಪತ್ತಿ-ನಾಶಗಳಿಗೆ ಕಾರಣನೂ, ಲೋಕಾಧಿಪತಿಯಾಗಿ ಲೌಕಿಕವಾಗಿರುವ ಅಳತೆಯ ಪ್ರಮಾಣಕ್ಕೆ ತಿಳಿಯಲಸಾಧ್ಯನೂ, ಭಕ್ತಿಶ್ರದ್ಧಾಭಾವಗಳಿಗೆ ವಶವಾಗುವವನೂ,ಸೇವಿಸಲ್ಪಡುವಾತನೂ, ನೀಲತಾವರೆಯಂತೆ ಶ್ಯಾಮಲವರ್ಣನೂ, ಕೋಮಲನೂ, ಮನೋಹರನೂ ಆಗಿರುವ ಭಗವಾನ್ ಶ್ರೀರಾಮನಾದ ನಿನಗಾನು ನಮಿಸುವೆನು.
ಕೋವಾಜ್ಞಾತುಂ ತ್ವಾಮತಿಮಾನಂ ಗತಮಾನಂ |
ಮಾನಾಸಕ್ತೋ ಮಾಧವಶಕ್ತೋ ಮುನಿಮಾನ್ಯಮ್ ||
ವೃಂದಾರಣ್ಯೇ ವಂದಿತ ವೃಂದಾರಕವೃಂದಂ |
ವಂದೇರಾಮಂ ಭವಮುಖವಂದ್ಯಂ ಸುಖಕಂದಮ್ ||೭||
ಭಾವಾರ್ಥ:-ಹೇ ಲಕ್ಷ್ಮೀಕಾಂತನೇ! ಇಂದ್ರಿಯಾದಿ ಎಣಿಕೆಗಳಲ್ಲಿ ಆಸಕ್ತನಾಗಿ ಅವುಗಳಲ್ಲಿ ಅವಲಂಬಿತನಾದ ಯಾವಾತನೂ ತೂಕಗಳಿಗೆ ಹೊರತಾದವನಾದ ನಿನ್ನ ನೈಜ ರೂಪವನ್ನಳೆಯಲು ಶಕ್ತನಾಗುವನೇ? ಮಹರ್ಷಿಗಳಿಗೆ ಗೌರವಾರ್ಹನೂ, ವೃಂದಾವನದಲ್ಲಿ ದೇವತಾ ಸಮೂಹದಿಂದ ನಮಿಸಲ್ಪಡುವಾತನೂ, ಶಂಕರಾದಿ ದೇವ ಸಮೂಹದಿಂದ ವಂದಿಸಿಕೊಳ್ಳಲು ಯೋಗ್ಯನೂ, ಮೋಕ್ಷದ ಉತ್ಪಾದಕ ಶಕ್ತಿಸ್ವರೂಪನೂ ಆಗಿರುವ ಭಗವಾನ್ ಶ್ರೀರಾಮನಿಗಾನು ನಮಿಸುವೆನು.
ನಾನಾಶಾಸ್ತ್ರೈರ್ವೇದ ಕದಂಬೈ: ಪ್ರತಿಪಾದ್ಯಂ |
ನಿತ್ಯಾನಂದಂ ನಿರ್ವಿಷಯಜ್ಞಾನ ಮನಾದಿಮ್ ||
ಮತ್ಸೇವಾರ್ಥಂ ಮಾನುಷಭಾವಂ ಪ್ರತಿಪನ್ನಂ |
ವಂದೇರಾಮಂ ಮರಕತವರ್ಣಂ ಮಧುರೇಶಮ್ ||೮||
ಭಾವಾರ್ಥ:-ನಾನಾವಿಧದ ಶಾಸ್ತ್ರಗಳಿಂದ ವರ್ಣಿಸಲ್ಪಡುವಾತನೂ,ನಿತ್ಯವೂ ಸಂತಸವನ್ನುಂಟುಮಾಡುವಾತನೂ, ವಿಷಯಾಭಿಲಾಶೆಯ ಜ್ಞಾನ ಸ್ವರೂಪಿಯೂ, ಆನಾದಿ ಪುರುಷನೂ ಆಗಿದ್ದು ಚರಾಚರ ಜಗತ್ತಿನ ಕಾರ್ಯಭಾರವನ್ನು ನಿಭಾಯಿಸಲು ಮನುಜರೂಪದಲ್ಲಿ ಪ್ರಕಟವಾದವನೂ, ಹಸಿರುವರ್ಣದ ಶರೀರವುಳ್ಳಾತನೂ, ಮಧುರಾಧಿಪತಿಯೂ ಆಗಿರುವ ಶ್ರೀರಾಮ ಭಗವಾನನಿಗಾನು ನಮಿಸುವೆನು.
ಶ್ರದ್ಧಾಯುಕ್ತೋಯ: ಪಠತೀಮಂ ಸ್ತವಮಾದ್ಯಂ |
ಬ್ರಾಹ್ಮಂ ಬ್ರಹ್ಮಜ್ಞಾನವಿಧಾನಂ ಭುವಿಮರ್ತ್ಯ: ||
ರಾಮಂ ಶ್ಯಾಮಂ ಕಾಮಿತ ಕಾಮಪ್ರದಮೀಶಂ |
ಧ್ಯಾತ್ವಾ ಧ್ಯಾತಾ ಪಾತಕಜಾಲೈರ್ವಿಗತಸ್ಯಾತ್ ||೯||
ಭಾವಾರ್ಥ:-ಈ ಭುವಿಯ ಮೇಲಿನ ಯಾವ ಶ್ರದ್ಧಾಯುಕ್ತ ಮಾನವನು ಶ್ಯಾಮಲ ವರ್ಣನೂ,ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವವನೂ ಆಗಿರುವ ದೊರೆ ಶ್ರೀರಾಮಚಂದ್ರನನ್ನು ಧ್ಯಾನಿಸಿ ವಿಶ್ವಾತ್ಮನಿಗೆ ಸಂಬಂಧಿಸಿದ ಮತ್ತು ವೇದಜ್ಞಾನವನ್ನು ಮಾಡುವಂತಹದೂ ಆಗಿರುವ ಈ ಸ್ತುತಿಯನ್ನು ಪಠಿಸುವರೋ ಅವರು ಪಾಪಸಮೂಹಗಳಿಂದ ಮುಕ್ತಿ ಹೊಂದುವರು.
*********************************************************************
|| ಬ್ರಹ್ಮ ದೇವಕೃತ ಶ್ರೀರಾಮ ಸ್ತುತಿ: ||
|| ಈ ತೆರನಾಗಿ ಬ್ರಹ್ಮದೇವನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತುತಿಗಳ ಭಾವಾರ್ಥವಾಗಿದೆ ||
*********************************************************************
-೧೭-
|| ಜಟಾಯುಕೃತ ಶ್ರೀರಾಮ ಸ್ತೋತ್ರಮ್ ||
************************************
ಅಗಣಿತಗುಣಮಪ್ರಮೇಯಮಾದ್ಯಂ |
ಸಕಲಜಗತ್ ಸ್ಥಿತಿಸಂಯಮಾದಿ ಹೇತುಂ ||
ಉಪರಮಪರಮಂ ಪರಾತ್ಮಭೂತಂ |
ಸತತಮಹಂ ಪ್ರಣತೋsಸ್ಮಿ ರಾಮಚಂದ್ರಮ್ ||೧||
ಭಾವಾರ್ಥ:-ಎಣಿಕೆಗೆ ಮೀರಿದ ಗುಣಗಳನ್ನು ಹೊಂದಿರುವಾತನೂ, ದೇಶಕಾಲಾದಿಗಳ ಹಿಡಿತಕ್ಕೆ ಹೊರತಾಗಿರುವವನೂ,ಪುರಾಣಪುರುಷನೂ,ಸಮಸ್ತ ವಿಶ್ವದ ಪರಿಪಾಲನೆಗೆ ನಿಮಿತ್ತ ಮಾತ್ರನೂ,ಅತ್ಯಂತ ಶಾಂತನೂ, ಸಾಕ್ಷಾತ್ ಪರಮಾತ್ಮನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ನಿರವಧಿಸುಖಮಿಂದಿರಾಕಟಾಕ್ಷಂ |
ಕ್ಷಪಿತಸುರೇಂದ್ರ ಚತುರ್ಮುಖಾದಿ ದು:ಖಂ ||
ನರವರಮನಿಶಂ ನತೋsಸ್ಮಿ ರಾಮಂ |
ವರದಮಹಂ ವರಚಾಪ ಬಾಣಹಸ್ತಮ್ ||೨||
ಭಾವಾರ್ಥ:-ಅಂತ್ಯರಹಿತ ಸುಖಸ್ವರೂಪನೂ,ಲಕ್ಷ್ಮಿಯ ಶೃಂಗಾರಮಯ ನೋಟಕ್ಕೆ ಪಾತ್ರನಾದವನೂ, ಬ್ರಹ್ಮೇಂದ್ರಾದಿ ದೇವತಾ ಸಮೂಹದ ದು:ಖಗಳನ್ನು ದೂರೀಕರಿಸಿದವನೂ, ಹಸ್ತಗಳಲ್ಲಿ ಶ್ರೇಷ್ಠವಾದ ಬಿಲ್ಲು ಬಾಣಗಳನ್ನು ಧರಿಸಿರುವವನೂ, ಮಾನವರೂಪಿಗಳಲ್ಲಿ ಅತಿ ಶ್ರೇಷ್ಠನೂ, ಭಕ್ತರಿಗೆ ವರದಾಯಕನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ಅನವರತ ನಮಿಸುವೆನು.
ತ್ರಿಭುವನಕಮನೀಯರೂಪಮೀಡ್ಯಂ |
ರವಿಶತಭಾಸುರಮೀಹಿತಪ್ರದಾನಂ ||
ಶರಣದಮನಿಶಂ ಸುರಾಗನೂಲೆ |
ಕೃತನಿಲಯಂ ರಘುನಂದನಂಪ್ರಪದ್ಯೇ ||೩||
ಭಾವಾರ್ಥ:-ಮೂರುಲೋಕಂಗಳಲ್ಲಿ ಅತಿ ಸುಂದರರೂಪಿಯೂ, ನೂರು ಸೂರ್ಯರ ತೇಜಸ್ಸನ್ನು ಹೊಂದಿರುವಾತನೂ, ಭಕ್ತರ ಇಷ್ಟಾರ್ಥಗಳನ್ನು ದಯಪಾಲಿಸುವಾತನೂ,ಶರಣಾರ್ಥಿಗಳಿಗೆ ಆಶ್ರಯದಾತನೂ, ದೊರೆಯೂ, ಅನುರಾಗದ ನೆಲೆಯಾದ ಪವಿತ್ರಾಂತ:ಕರಣದಲ್ಲಿ ನಿರಂತರವೂ ನೆಲೇಸಿರುವಾತನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ಭವವಿಪಿನದವಾಗ್ನಿ ನಾಮಧೇಯಂ |
ಭವಮುಖದೈವತದೈವತಂ ದಯಲುಂ |
ದನುಜಪತಿ ಸಹಸ್ರ ಕೋಟಿನಾಶಂ |
ರವಿತನಯಾಸದೃಶಂ ಹರಿಂ ಪ್ರಪದ್ಯೇ ||೪||
ಭಾವಾರ್ಥ:-ಸಂಸಾರರೂಪೀ ಘೋರಾರಣ್ಯವನ್ನು ಸುಡುವ ಕಾಡ್ಗಿಚ್ಚೆಂಬ ಹೆಸರನ್ನು ಹೊತ್ತವನೂ, ಹರನೇ ಆದಿಯಾದ ದೇವರ್ಕಳ ಸಮೂಹಕ್ಕೆ ಮಹಾದೇವನಾದವನೂ,ದಯಾವಂತನೂ,ಸಹಸ್ರಾರು ಕೋಟಿ ದಾನವರನ್ನು ನಾಶಗೊಳಿಸಿದಾತನೂ, ಸೂರ್ಯತನಯೆಯಾಗಿರುವ ಯಮುನಾ ನದಿಯವರ್ಣವನ್ನು ಹೋಲುವ ಶರೀರವುಳ್ಳಾತನೂ ಶ್ರೀಹರಿ ರೂಪಿಯೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ಅವಿರತಭವ ಭಾವನಾತಿ ದೂರಂ |
ಭವಮುಖೈರ್ಮುನಿಭಿ:ಸದೈವ ದೃಶ್ಯಮ್ ||
ಭವಜಲಧಿಸುತಾರಣಾಂಘ್ರಿಪೋತಂ |
ಶರಣಮಹಂ ರಘುನಂದನಂ ಪ್ರಪದ್ಯೇ ||೫||
ಭಾವಾರ್ಥ:-ಅವಿರತವಾಗಿ ಸಾಂಸಾರಿಕ ಯೋಚನೆಯಲ್ಲಿ ಮಗ್ನರಾದವರಿಗೆ ಬಹಳ ಅಂತರದಲ್ಲಿರುವಾತನೂ, ಸಂಸಾರದಿಂದ ವಿಮುಖರಾಗಿರುವ ಯೋಗಿಮುನಿವರ್ಯರಿಗೆ ಸದಾ ಕಾಣುವಾತನೂ,ಸಂಸಾರಸಾಗರವನ್ನು ದಾಟಲು ಸುಲಭರೂಪದ ಹರಿಗೋಲಿನಂತಿರುವ ಚರಣಾರವಿಂದಗಳುಳ್ಳ ರಘುಕುಲತಿಲಕ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.
ಗಿರಿಶಗಿರಿಸುತಾಮನೋನಿವಾಸಂ |
ಗಿರಿವರ ಧಾರಿಣಮೀಹಿತಾಭಿರಾಮಂ ||
ಸುರವರದನುಜೇಂದ್ರ ಸೇವಿತಾಂಘ್ರಿಂ |
ಸುರವರದಂ ರಘುನಾಯಕಂ ಪ್ರಪದ್ಯೇ ||೬||
ಭಾವಾರ್ಥ:-ಅನವರತವೂ ಗಿರಿಜಾಶಂಕರರ ಹೃತ್ಕಮಲ ನಿವಾಸಿಯಾಗಿರುವಾತನೂ, ಕೃಷ್ಣಾವತಾರದೊಳು ಹಿರಿದಾದ ಗೋವರ್ಧನ ಗಿರಿಯನ್ನೆತ್ತಿ ಹಿಡಿದಾತನೂ, ಬಯಸುವವರನ್ನು ತೃಪ್ತಿಗೊಳಿಸುವಾತನೂ,ಮಹಾ ಮಹಾ ದೇವ-ದಾನವರಿಂದ ಪಾದಸೇವೆಯನ್ನು ಸ್ವೀಕರಿಸಿ ವರಗಳನ್ನು ದಯಪಾಲಿಸುವಾತನೂ ಆಗಿರುವ ರಘುಕುಲದೊಡೆಯ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಪರಧನ ಪರದಾರಾವರ್ಜಿತಾನಾಂ |
ಪರಗುಣಭೂತಿಷು ತುಷ್ಟಮಾನಸಾನಾಂ ||
ಪರಹಿತನಿರತಾತ್ಮಾನಾಂ ಸುಸೇವ್ಯಂ |
ರಘುವರಮಂಬುಜಲೋಚನಂ ಪ್ರಪದ್ಯೇ ||೭||
ಭಾವಾರ್ಥ:-ಅನ್ಯರ ಸಂಪತ್ತು ಹಾಗೂ ಪರಸ್ತ್ರೀಯರನ್ನು ವರ್ಜಿಸುವವರಿಗೂ, ಅನ್ಯರಗುಣಗಳನ್ನು ಮತ್ತು ಐಶ್ವರ್ಯವನ್ನು ಕಂಡು ಸಂತಸ ಪಡುವವರಿಗೂ, ಹಾಗೆಯೇ ಅನ್ಯರ ಒಳಿತನ್ನು ಕಾಯುವುದರಲ್ಲಿ ನಿರತರಾದವರಿಗೂ ಧ್ಯಾನಿಸಲು ಯೋಗ್ಯನಾಗಿರುವ ಕಮಲನಯನ ರಘುವಂಶಪ್ರದೀಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಸ್ಮಿತರುಜಿರವಿಕಾಸಿತಾನನಾಬ್ಜ- |
ಮತಿಸುಲಭಂ ಸುರರಾಜ ನೀಲನೀಲಮ್ ||
ಸಿತಜಲರುಹ ಚಾರು ನೇತ್ರ ಶೋಭಂ |
ರಘುಪತಿಮೀಶಂ ಗುರೋರ್ಗುರುಂ ಪ್ರಪದ್ಯೇ ||೮||
ಭಾವಾರ್ಥ:-ಮುಗುಳುನಗೆಯಿಂದ ಕೂಡಿ ಮನೋಹರವೂ ವಿಕಸಿತವೂ ಆಗಿ ಕಾಣುವ ಮುಖಾರವಿಂದವುಳ್ಳವನೂ, ಭಕ್ತರಿಗೆ ಅತಿ ಸುಲಭ ಲಭ್ಯನೂ, ಇಂದ್ರನೀಲರತ್ನಸದೃಶ ಶ್ಯಾಮಲ ಶರೀರನೂ, ಬೆಳ್ದಾವರೆಯಂತೆ ರಮಣೀಯವಾದ ನಯನಗಳುಳ್ಳಾತನೂ, ದೊರೆಯೂ, ಗುರುಗಳಿಗೆ ಪರಮಗುರುವೂ ಆಗಿರುವ ರಘುಕುಲಾಧಿಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಹರಿಕಮಲಜ ಶಂಭುರೂಪಭೇದಾತ್ವ- |
ಮಿಹ ವಿಭಾಸಿಗುಣತ್ರಯಾನುವೃತ್ತ: ||
ರವಿರಿವ ಜಲಪೂರಿತೋದ ಪಾತ್ರೇಷ್ವ- |
ಮರಪತಿಸ್ತುತಿ ಪಾತ್ರಮೀಶಮೀಡೆ ||೯||
ಭಾವಾರ್ಥ:-ಜಲಭರಿತ ವಿವಿಧ ಪಾತ್ರೆಗಳಲ್ಲಿ ಸೂರ್ಯ ಪ್ರತಿಬಿಂಬವು ಹಲವು ರೂಪವಾಗಿ ಕಾಣುವಂತೆ ಸತ್ವ-ರಜತಮೊ ಗುಣಗಳೆನ್ನುವ ಮೂರು ಗುಣಗಳಿಂದ ಅನುಸರಿಸುವಂತೆ ವರ್ತಿಸುತ್ತಿರುವಾಗ ಹರಿ ಹರ ಬ್ರಹ್ಮರೆಂಬ ಭಿನ್ನ ಪ್ರಭೇದಗಳಿಂದ ನೀನು ಭಾಸವಾಗುತ್ತಿರುವೆ. ದೇವೇಂದ್ರನಿಂದ ಸ್ತುತಿಸಲ್ಪಡುವಾತನು ನೀನು. ನೀನೇ ಜಗದೊಡೆಯನು. ಇಂತಹಾ ರಘುಕುಲಾಧಿಪ ಪ್ರಭು ಶ್ರೀರಾಮನಾಗಿರುವ ನಿನಾಗಾನು ಶರಣಾಗುವೆನು.
ರತಿಪತಿಶತಕೋಟಿ ಸುಂದರಾಂಗಂ |
ಶತಪಥ ಗೋಚರ-ಭಾವನಾವಿಧೂರಂ ||
ಯತಿಪತಿ ಹೃದಯೇ ಸದಾ ವಿಭಾತಂ |
ರಘುಪತಿಮಾರ್ತಿಹರಂ ಪ್ರಭುಂ ಪ್ರಪದ್ಯೇ ||೧೦||
ಭಾವಾರ್ಥ:-ನೂರುಕೋಟಿ ಮನ್ಮಥರಂತೆ ಮನೋಹರವಾಗಿರುವ ದೇಹವನ್ನು ಹೊಂದಿರುವಾತನೂ,ಯಜುರ್ವೇದೀಯ ಬ್ರಾಹ್ಮಣದಲ್ಲಿ ಹೇಳಿರುವಂತೆ ಧ್ಯಾನಿಸಲು ಸುಲಭ ಲಭ್ಯನೂ,ಮಹಾ ಮಹಾ ಋಷಿ ಮುನಿ ಯೋಗಿವರೇಣ್ಯರ ಅಂತರಂಗದಲ್ಲಿ ನಿರಂತರ ಬೆಳಗುತ್ತಲಿರುವಾತನೂ,ದು:ಖಗಳನ್ನು ದೂರೀಕರಿಸುವಾತನೂ ದೊರೆಯೂ ಆಗಿರುವ ರಘುಕುಲಾಧಿಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.
ಇತ್ಯೇವಂ ಸ್ತುವತಸ್ತಸ್ಯ ಪ್ರಸನ್ನೋಭೂದ್ರಘೂತ್ತಮ: |
ಉವಾಚ ಗಚ್ಚ ಭದ್ರಂತೇ ಮಮ ವಿಷ್ಣೋ: ಪರಂ ಪದಮ್ ||೧೧||
ಭಾವಾರ್ಥ:-ಈ ರೀತಿಯಾಗಿ ಸ್ತೋತ್ರ ಮಾಡುತ್ತಲಿರುವ ಆ ಜಟಾಯುವಿಗೆ ರಘುಕುಲೋತ್ತಮನಾದ ಶ್ರೀರಾಮಚಂದ್ರನು ಕರುಣೆದೋರಿ ಇಂತೆಂದು ಅನುಗ್ರಹಿಸಿದನು." ಹೇ ಜಟಾಯುವೇ; ಮಹಾವಿಷ್ಣುವೇ ಆಗಿರುವ ನನ್ನ ಶ್ರೇಷ್ಠ ಪದವಿಯಾಗಿರುವ ಮೋಕ್ಷಧಾಮದಲ್ಲಿ ಶಾಶ್ವತವಾಗಿ ನೆಲೆಸುವವನಾಗು.ನಿನಗೆ ಶುಭವಾಗಲಿ."
ಶೃಣೋತಿ ಯದಿದಂ ಸ್ತೋತ್ರಂ ಲಿಖೇದ್ವಾನಿಯತ: ಪಠೇತ್ |
ಸ ಯಾತಿ ಮಮ ಸಾರೂಪ್ಯಂ ಮರಣೇಮತ ಸ್ಮೃತಿಂ ಲಭೇತ್ ||೧೨||
ಭಾವಾರ್ಥ:-ಯಾವಾತನು ನಿನ್ನಿಂದ [ಜಟಾಯುವಿನಿಂದ] ರಚಿಸಲ್ಪಟ್ಟಿರುವ ಈ ಸ್ತೋತ್ರವನ್ನು ನಿಯಮಿತವಾಗಿ ಬರೆದೋದುವನೋ ಅವನು ಅಂತ್ಯಕಾಲದಲ್ಲಿ ನನ್ನ ಸ್ಮರಣೆಯುಳ್ಳವನಾಗಿ ಮರಣಾನಂತರ ನನ್ನ "ಪ್ರತಿರೂಪ"ವೆನ್ನುವ ಮುಕ್ತಿಗೆ ಪಾತ್ರನಾಗುವನು.
*********************************************************************
|| ಇತಿ ಜಟಾಯುಕೃತ ಶ್ರೀರಾಮ ಸ್ತೋತ್ರಮ್ ||
|| ಈ ರೀತಿಯಾಗಿ ಜಟಾಯುವಿನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
- ೧೮ -
|| ಶ್ರೀರಾಮಚಂದ್ರಾಷ್ಟಕಮ್ ||
*************************
ಚಿದಾಕಾರೊ ಧಾತಾ ಪರಮಸುಖದ: ಪಾವನತನು |
ರ್ಮುನೀಂದ್ರೈರ್ಯೋಗೀಂದ್ರೈರ್ಯತಿ ಪತಿ ಸುರೇಂದ್ರೈರ್ಹನುಮತಾ ||
ಸದಾ ಸೇವ್ಯ: ಪೂರ್ಣೋ ಜನಕತನಯಾಂಗ: ಸುರಗುರು |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೧||
ಭಾವಾರ್ಥ:-ತಿಳುವಳಿಕೆಯ ಸ್ವರೂಪನೂ, ಬ್ರಹ್ಮಾಂಡದ ಧಾರಣೆ-ಪಾಲನೆಗಳನ್ನು ಮಾಡುವಾತನೂ, ಶ್ರೇಷ್ಠವಾದ ಸುಖವನ್ನು ದಯಪಾಲಿಸುವವನೂ, ಸಮಸ್ತರನ್ನು ಪಾವನೀಕರಿಸುವ ದೇಹವುಳ್ಳಾತನೂ, ಮುನೀಂದ್ರ,ಯೋಗೀಂದ್ರ,ಯತೀಂದ್ರ,ದೇವೇಂದ್ರ,ಹನೂಮಂತರೇ ಆದಿಯಾದವರಿಂದ ಧ್ಯಾನಿಸಲ್ಪಡುವಾತನೂ, ಪರಿಪೂರ್ಣನೂ,ಸೀತಾಮಾತೆಯು ಅರ್ಧಾಂಗಿಣಿಯಾಗಿ ಇರುವಾತನೂ, ದೇವತಾ ಸಮೂಹಕ್ಕೆ ಮಾರ್ಗದರ್ಶಕನಾದ ಗುರುಸ್ವರೂಪದವನಾಗಿರುವವನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಮುಕುಂದೋ ಗೋವಿಂದೋ ಜನಕತನಯಾ ಲಾಲಿತಪದ: |
ಪದಂ ಪ್ರಾಪ್ತಾಯಸ್ಯಾಧಮಕುಲಭವಾ ಚಾಪಿ ಶಬರಿ ||
ಗಿರಾತೀತೋsಗಮ್ಯೋ ವಿಮಲಧಿಷಣೈರ್ವೇದ ವಚಸಾ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೨||
ಭಾವಾರ್ಥ:-ಗೋವಿಂದನೆಂದೂ ಮುಕುಂದನೆಂದೂ ಕರೆಯಿಸಲ್ಪಡುತ್ತಾ ಸೀತೆಯಿಂದ ತನ್ನ ಚರಣಾರವಿಂದಗಳನ್ನು ಮುದ್ದಿಸಿಕೊಳ್ಳುತ್ತಾ ತನ್ನನ್ನು ಭಜಿಸಿದ ಅಧಮಕುಲದಲ್ಲಿ ಜನಿಸಿದ ಶಬರಿಗೆ ಮೋಕ್ಷತ್ವವನ್ನು ದಯಪಾಲಿಸಿದಾತನೂ, ನಿರ್ಮಲಮನದ ಜ್ಞಾನಿಗಳ ವಾಣಿಗಳಿಗೆ ದೂರದಲ್ಲಿರುವಾತನೂ ವೇದವಾಕ್ಕುಗಳಿಗೆ ಕೂಡಾ ನಿಲುಕದಿರುವ ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಧರಾಧೀಶೋಧೀಶ: ಸುರನರವರಾಣಾಂ ರಘುಪತಿ: |
ಕಿರೀಟೀಕೇಯೂರೀ ಕನಕಪಿಶ: ಶೋಭಿತವಪು: ||
ಸಮಾಸೀನ: ಪೀಠೇ ರವಿಶತನಿಭೇ ಶಾಂತ ಮನಸೋ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೩||
ಭಾವಾರ್ಥ:-ಭೂಮಂಡಲಕ್ಕೆ ಅಧಿಪತಿಯಾಗಿರುವವನೂ, ಅಗ್ರಗಣ್ಯ ದೇವತೆಗಳಿಗೂ ಮನುಜಸಂತತಿಗೂ ಒಡೆಯನಾಗಿರುವವನೂ, ರಘುಕುಲಕ್ಕೆ ಅಧಿನಾಯಕನೂ, ಶಿರದ ಮೇಲೆ ಕಿರೀಟವನ್ನೂ, ಭುಜಗಳಲ್ಲಿ ಕೇಯೂರ ಹಾರವನ್ನೂ ಧರಿಸಿದಾತನೂ, ಹೇಮಸದೃಶ ಹೊಂಬಣ್ಣದ ವಸನವನ್ನು ಧರಿಸಿಕೊಂಡಾತನೂ, ದೇಹಕಾಂತಿಯುಳ್ಳಾತನೂ, ನೂರು ಸೂರ್ಯರ ಪ್ರಕಾಶವುಳ್ಳ ದೈದೀಪ್ಯಮಾನ ಸಿಂಹಾಸನದಲ್ಲಿ ಆರೂಢನಾಗಿರುವವನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ವರೇಣ್ಯ: ಶಾರಣ್ಯ: ಕಪಿಪತಿಸಖಶ್ಚಾತ ವಿಧುರೋ |
ಲಲಾಟೇ ಕಾಶ್ಮೀರೋ ರುಚಿರಗತಿ ಭಂಗ: ಶಶಿಮುಖ: ||
ನರಾಕಾರೋ ರಾಮೋಯತಿ ಪತಿನುತ: ಸಂಸ್ಕೃತಿಹರೊ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೪||
ಭಾವಾರ್ಥ:-ಉನ್ನತನೂ, ಆಶ್ರಯದಾತನೂ, ಸುಗ್ರೀವನ ಮಿತ್ರನೂ, ಅಂತ್ಯವಿಲ್ಲದಾತನೂ, ಹಣೆಯ ಮೇಲೆ ಕೇಸರಿಯ ತಿಲಕವನ್ನು ಧರಿಸಿರುವವನೂ, ಚಂದಿರನೋಪಾದಿಯಲ್ಲಿ ಬೆಳಗುತ್ತಲಿರುವ ಮುಖಕಮಲವುಳ್ಳಾತನೂ, ಮಾನುಷ ರೂಪಿಯಾದಾಗ್ಯೂ ಯೋಗಿವರೇಣ್ಯರ ಗುರಿಯೆನಿಸಿರುವ ಪರಬ್ರಹ್ಮಸ್ವರೂಪಿಯೂ, ಗುರುವರೇಣ್ಯರುಗಖಿಂದ ಸ್ತುತಿಸಲ್ಪಡುವಾತನೂ, ಹುಟ್ಟು-ಸಾವುಗಳುಳ್ಳ ಸಾಂಸಾರಿಕ ದು:ಖವನ್ನು ನಾಶಗೊಳಿಸುವಾತನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ವಿರೂಪಾಕ್ಷ: ಕಾಶ್ಯಾಮುಪದಿಶತಿ ಯನ್ನಾಮ ಶಿವದಂ |
ಸಹಸ್ರಂಯನ್ನಾಮ್ನಾಂ ಪಠತಿ ಗಿರಿಜಾ ಪ್ರತ್ತ್ಯುಷಸಿ ವೈ ||
ಸ್ವಲೋಕೇ ಗಾಯಂತೀಶ್ವರ ವಿಧಿಮುಖಾ ಯಸ್ಯ ಚರಿತಂ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೫||
ಭಾವಾರ್ಥ:-ಪುಣ್ಯ ಪ್ರದವಾದ ಕಾಶೀ ಕ್ಷೇತ್ರದಲ್ಲಿ ಭಗವಾನ್ ಶಿವಶಂಕರನು ಸಾಯುವ ಸ್ಥಿತಿಯಲ್ಲಿರುವ ಜೀವಿಗಳಿಗೆ ಯಾವಾತನ ಶುಭಪ್ರದವಾದ ನಾಮವನ್ನು ಉಪದೇಶಿಸಿದನೋ,ಪಾರ್ವತೀ ದೇವಿಯು ಅನುದಿನವೂ ಉಷ:ಕಾಲದಲ್ಲಿ ಯಾವಾತನ ಸಹಸ್ರ ನಾಮಗಳನ್ನು ಪಠಿಸುವಳೋ,ಶಿವ ಬ್ರಹ್ಮರೇ ಆದಿಯಾದ ದೇವರ್ಕಳ ಸಮೂಹವು ತಮ್ಮ ತಮ್ಮ ಸ್ಥಾನಗಳಲ್ಲಿ ಯಾರ ಪಾವನ ಚರಿತೆಯನ್ನು ಹಾಡುವರೋ ಅಂತಹಾ ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಪರೋಧೀರೋsಧೀರೋsಸುರಕುಲಭವಶ್ಚಾಸುರ ಹರ: |
ಪರಾತ್ಮಾ ಸರ್ವಜ್ಞೋ ನರಸುರಗಣೈರ್ಗೀತಸು ಯಶಾ: ||
ಅಹಲ್ಯಾ ಶಾಪಘ್ನ: ಶರಕರ ಋಜು: ಕೌಶಿಕ ಸಖೊ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೬||
ಭಾವಾರ್ಥ:-ಅತ್ಯಂತ ಬಲಶಾಲಿಯಾಗಿದ್ದರೂ ಅಜ್ಞಾನವನ್ನು ದೂರೀಕರಿಸುವ ಅಧೀರನೂ, ಅಸುರಕುಲದಲ್ಲಿ ಜನಿಸಿದವನಾದಾಗ್ಯೂ ಅಸುರ ಕುಲ ಸಂಹಾರಿಯೂ, ಪರಮಾತ್ಮಸ್ವರೂಪಿಯೂ,ಸರ್ವಜ್ಞನೂ,ಮಾನುಷಾದಿ ದೇವತಾ ಗಣಸಮೂಹದಿಂದ ಉತ್ತಮವಾದ ಖ್ಯಾತಿಯನ್ನು ಪಡೆದುಕೊಂಡಾತನೂ, ಅಹಲ್ಯಾ ಶಾಪ ವಿಮೋಚಕನೂ,ಹಸ್ತಗಳಲ್ಲಿ ಶುಭಪ್ರದವಾದ ಬಾಣಗಳನ್ನು ಹಿಡಿದುಕೊಂಡವನೂ, ಸರಳ ಸ್ವಭಾವದವನೂ, ವಿಶ್ವಾಮಿತ್ರನ ಪ್ರೀತಿಯ ಸಖನೂ, ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಹೃಷಿಕೇಶ: ಶೌರೀರ್ಧರಣಿಧರಶಾಯಿ ಮಧುರಿಪು: |
ರೂಪೇಂದ್ರೋ ವೈಕುಂಠೋ ಗಜರಿಪುಹರಸ್ತುಷ್ಟ ಮನಸಾ ||
ಬಲಧ್ವಂಸೀ ವೀರೋ ದಶರಥ ಸುತೋ ನೀತಿ ನಿಪುಣೋ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೭||
ಭಾವಾರ್ಥ:-ಶೌರಿ,ಹೃಷಿಕೇಶ,ಶೇಷಶಯನ,ಮಧುಸೂದನ,ಉಪೇಂದ್ರ, ವೈಕುಂಠಪತಿಯೇ ಆದಿಯಾದ ಹೆಸರುಗಳಿಂದ ಕರೆಯಿಸಿಕೊಳ್ಳುವಾತನೂ, ಗಜರಾಜನ ಮೊರೆಗೆ ಪ್ರಸನ್ನನಾಗಿ ಆತನ ವೈರಿಯಾಗಿದ್ದ ಮೊಸಳೆಯನ್ನು ಸಂಹರಿಸಿದವನೂ, ಬಲಿಚಕ್ರವರ್ತಿಯನ್ನು ರಾಜ ಪಟ್ಟದಿಂದ ಪದಚ್ಯುತಿಗೊಳಿಸಿದಾತನೂ, ವೀರನೂ,ನಿಪುಣನೂ,ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಕವಿ: ಸೌಮಿತ್ರೀಢ್ಯ: ಕಪಟಮೃಗಘಾತೀ ವನಚರೋ |
ರಣಶ್ಲಾಘೀದಾಂತೋ ಧರಣಿಭರಹರ್ತಾ ಸುರನುತ: ||
ಅಮನೀ ಮಾನಜ್ಞೋ ನಿಖಿಲಜನಪೂಜ್ಯೋ ಹೃದಿಶಯೋ |
ರಮಾನಾಥೋ ರಾಮೋ ರಮತು ಮಮ ಚಿತ್ತೇತು ಸತತಮ್ ||೮||
ಭಾವಾರ್ಥ:-ತ್ರಿಕಾಲಜ್ಞನೂ, ಲಕ್ಷಣನಿಗೆ ಆರಾಧ್ಯನೂ, ವನದಲ್ಲಿ ವಿಹರಿಸುತ್ತಾ ಮಾಯಾಮೃಗರೂಪೀ ಮಾರೀಚನನ್ನು ಸಂಹರಿಸಿದಾತನೂ, ಯುದ್ಧಪ್ರಿಯನೂ, ಮನೋಇಂದ್ರಿಯಂಗಳ ನಿಗ್ರಹಿಸಿದವನೂ, ಭೂಭಾರವನ್ನು ಹರಣಗೊಳಿಸಿದಾತನೂ, ದೇವರ್ಕಳುಗಳಿಂದ ಸ್ತುತಿಸಿಕೊಂಬಾತನೂ, ತಾನು ಮಾನಾಪಮಾನ ವಿರಹಿತನಾದವನಾದಗ್ಯೂ ಅನ್ಯರಿಂದ ಸನ್ಮಾನಿಸಿಕೊಂಬಾತನೂ, ಸರ್ವರಿಗೂ ಆರಾಧ್ಯನೂ, ಸಮಸ್ತ ಜೀವಕೋಟಿಗಳ ಹೃತ್ಕಮಲವಾಸಿಯೂ ಲಕ್ಷ್ಮೀಕಾಂತನೂ ಆಗಿರುವ ಶ್ರೀರಾಮಚಂದ್ರನು ನನ್ನ ಮನದಲ್ಲಿ ಸದಾ ವಿಹರಿಸುತ್ತಿರಲಿ.
ಇದಂ ರಾಮಸ್ತೋತ್ರಂ ವರಮಮರದಾಸೇನ ರಚಿತ- |
ಮುಷ:ಕಾಲೇಭಕ್ತ್ಯಾಯದಿ ಪಠತಿ ಯೋ ಭಾವಸಹಿತಮ್ ||
ಮನುಷ್ಯ: ಸ ಕ್ಷಿಪ್ರಂ ಜನಿಮೃತಿಭಯಂ ತಾಪಜನಕಂ |
ಪರಿತ್ಯಜ್ಯ ಶ್ರೇಷ್ಠಂ ರಘುಪತಿ ಪದಂ ಯಾತಿ ಶಿವದಮ್ ||೯||
ಭಾವಾರ್ಥ:-ಉಷ:ಕಾಲದಲೆದ್ದು ಭಕ್ತಿ ಶ್ರದ್ಧಾಯುತನಾಗಿ ಅಮರದಾಸ ಕವಿಯಿಂದ ರಚಿತವಾಗಿರುವ ಈ ಸುಂದರ ರಾಮಸ್ತೋತ್ರಗಳನ್ನು ಪಠಿಸುವಾತನು ಅತ್ಯಂತ ಶೀಘ್ರವಾಗಿ ಚಿಂತಾಜನಕವಾಗಿರುವ ಹುಟ್ಟು-ಸಾವುಗಳ ಭೀತಿ ವರ್ಜಿತನಾಗಿ ಅಗ್ರಗಣ್ಯವೂ, ಶುಭದಾಯಕವೂ ಆಗಿರುವ ಶ್ರೀ ರಘುಕುಲದೊಡೆಯನ ಮಹಾ ಸಾನ್ನಿಧ್ಯ ಪದವಿಯನ್ನು ಪಡೆಯುವನು.
*********************************************************************
|| ಇತಿ ಶ್ರೀರಾಮಚಂದ್ರಾಷ್ಟಕಮ್ ||
|| ಈ ರೀತಿಯಾಗಿ ಶ್ರೀರಾಮಚಂದ್ರಾಷ್ಟಕಗಳ ಭಾವಾರ್ಥವಾಗಿದೆ. ||
*********************************************************************
-೧೯-
No comments:
Post a Comment