Thursday, 11 September 2014

ಸ್ತೋತ್ರ ಮಂದಾರ

              ಶಿವ ಸ್ತೋತ್ರಗಳು
                *************
                    -೧-
   || ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಮ್ ||
    **************************************
ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೧||

ಭಾವಾರ್ಥ:-ರುದ್ರನನ್ನನು,ಪಶುಪತಿಯನ್ನು,ಸ್ಥಿರರೂಪೀಶಿವನನ್ನು,ನೀಲಕಂಠನನ್ನು, ಉಮಾಪತಿಯನ್ನು,ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೨||

ಭಾವಾರ್ಥ:-ಕಾಲಕಂಠನನ್ನು,ಕಾಲಮೂರ್ತಿಯನ್ನು,ಕಾಲಾಗ್ನಿಯನ್ನು,ಕಾಲನಾಶಕನನ್ನು  ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೩||

ಭಾವಾರ್ಥ:-ವಾಮದೇವನನ್ನು,ಲೋಕನಾಥನನ್ನು,ಜಗದ್ಗುರುವನ್ನು,ದೇವದೇವನಾದ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೪||

ಭಾವಾರ್ಥ:-ದೇವದೇವನಾದಜಗನ್ನಾಥನನ್ನುದೇವೇಶನಾದ ಪರಮಶಿವನನ್ನು,ವೃಷಭಧ್ವಜನನ್ನು,ಮಹಾದೇವನನ್ನುನಾನುಶಿರಸಾನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೫||

ಭಾವಾರ್ಥ:-ಗಂಗಾಧರನನ್ನು,ಶಂಕರನನ್ನು, ಶೂಲಪಾಣಿಯನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಭಸ್ಮೋದ್ಧೂಲಿತಸರ್ವಾಂಗಂ ನಾನಾಹರ್ಣಭೂಷಿತಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೬||

ಭಾವಾರ್ಥ:-ವಿಭೂತಿಯ ಕಣದಿಂದ ಸರ್ವಾಂಗವೂ ಲೇಪಿತನಾದವನ,ಮತ್ತು ವಿವಿಧಾಭರಣಗಳನ್ನು ಧರಿಸಿಕೊಂಡಿರುವ  ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಆನಂದಂ ಪರಮಾನಂದಂ ಕೈವಲ್ಯಪದಗಾಮಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೭||

ಭಾವಾರ್ಥ:-ಆನಂದ ಸ್ವರೂಪನೂ,ಪರಮಾನಂದಕಾರಕನೂ, ಕೈವಲ್ಯಕ್ಕೆ ಹಾದಿ ತೋರುವವನೂ ಆಗಿರುವ  ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಸ್ವರ್ಗಾಪವರ್ಗದಾತಾರಂ ಸೃಷ್ಟಿಸ್ಥಿತ್ಯಂತಕಾರಿಣಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೮||

ಭಾವಾರ್ಥ:-ಸ್ವರ್ಗಸುಖದಾಯಕನೂ,ಸೃಷ್ಟಿ ಸ್ಥಿತಿ ಲಯಕಾರಕನೂ ಆಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಪ್ರಲಯಸ್ಥಿತಿಸಂಹಾರಮಾದಿಕರ್ತಾರಮೀಶ್ವರಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೯||

ಭಾವಾರ್ಥ:-ಪ್ರಲಯ,ಸೃಷ್ಟಿ ನಾಶಗಳಿಗೆ ಕಾರಣನಾಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಸತ್ಯಂ ಸತ್ಯಂ ಪುನ: ಸತ್ಯಮುದ್ಧೃತ್ಯ ಭುಜಮುಚ್ಯತೇ |
ವೇದ ಶಾಸ್ತ್ರಾತ್ ಪರಂ ನಾಸ್ತಿ ನ ದೇವ: ಶಂಕರಾತ್ ಪರ:  ||೧೦||

ಭಾವಾರ್ಥ:-ವೇದಶಾಸ್ತ್ರಗಳಿಂದ ಉತ್ಕೃಷ್ಠವಾಗಿರುವ ತತ್ವಗಳು ಬೇರಾವುದೂ ಇಲ್ಲ.ಅದೇ ರೀತಿಯಾಗಿ ಶಂಕರನಿಗಿಂತ ಬೇರೆಯಾದ ಉನ್ನತ ದೇವ ಇನ್ನೊಬ್ಬನಿಲ್ಲ.

ಮಾರ್ಕಾಂಡೇಯಕೃತಂ ಸ್ತೋತ್ರಂ ಯ: ಪಠೇಚ್ಛಿವಸನ್ನಿಧೌ |
ತಸ್ಯ ಮೃತ್ಯುಭಯಂ ನಾಸ್ತಿ ಅಗ್ನಿಚೋರಭಯಂ ನ ಹಿ  ||೧೧||

ಭಾವಾರ್ಥ:-ಮಾರ್ಕಾಂಡೇಯ ಮಹರ್ಷಿಗಳಿಂದ ರಚಿಸಲ್ಪಟ್ಟ ಈ ಸ್ತೋತ್ರವನ್ನು ಯಾರು ಶಿವ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧಾಪುರಸರವಾಗಿ ಪಠಿಸುವರೋ ಅಂತವರ ಮೃತ್ಯುಭೀತಿಯು ನಾಶವಾಗುವುದಲ್ಲದೆ ಅಗ್ನಿ ಭಯ,ಚೋರಭಯ ಇತ್ಯಾದಿಯಾದ ನೈಸರ್ಗಿಕ ವಿಕೋಪಗಳಿಂದ ಯಾವ ಭೀತಿಯೂ ಇರುವುದಿಲ್ಲ.

*********************************************************************************
                     || ಇತಿ ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಮ್ ||
         || ಈ ರೀತಿಯಾಗಿ ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಗಳ ಭಾವಾರ್ಥವು  ||
*********************************************************************************
                   -೨-
|| ಶಿವ ಮಾನಸ ಪೂಜಾಸ್ತೋತ್ರಮ್ ||
   ******************************
ರತ್ನೈ: ಕಲ್ಪಿತಮಾಸನಂ ಹಿಮಜಲೈ: ಸ್ನಾನಂ ಚ ದಿವ್ಯಾಂಬರಂ
ನಾನಾರತ್ನ ವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಮ್ |
ಜಾತೀ ಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್  ||೧||

ಭಾವಾರ್ಥ:-ಹೇ! ಪಶುಪತಿಯೇ;ಇದು ರತ್ನಗಳಿಂದ ನಿರ್ಮಿಸಲ್ಪಟ್ಟ ಆಸನವು.ಇದು ಮಂಜಿನಂತೆ ಶೀತಲವಾದ ತಂಪಾಗಿರುವ ನೀರಿನ ಸ್ನಾನವು.ಇದು ನಾನಾ ವಿಧದ ರತ್ನಗಳಿಂದ ಅಲಂಕರಿಸಲ್ಪಟ್ಟಂತಹಾ ದಿವ್ಯಾಸನವು.ಇದು ಕಸ್ತೂರಿಯ ಪರಿಮಳದಿಂದ ಕೂಡಿದ ಚಂದನವು.ಇದರ ಹೊರತಾಗಿ ಜಾಜಿ-ಸಂಪಿಗೆ-ಬಿಲ್ವಪತ್ರಗಳಿಂದ ಮಾಡುತ್ತಿರುವ ಪುಷ್ಪಾಂಜಲಿಯು.ಇವುಗಳ ಜೊತೆಯಲ್ಲಿ ಧೂಪ ದೀಪಗಳನ್ನು ನನ್ನ ಹೃದಯಕಮಲದಲ್ಲಿ ಸ್ಥಾಪಿತನಾಗಿರುವವನಾದ ಸಾಮಿಯೇ ಸ್ವೀಕರಿಸುವವನಾಗು.

ಸೌವರ್ಣೇ ನವರತ್ನಖಂಡರಚಿತೇ ಪಾತ್ರೇಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಮ್ |
ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರ ಖಂಡೋಜ್ಜ್ವಲಂ
ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು  ||೨||

ಭಾವಾರ್ಥ:-ನವರತ್ನಗಳ ತುಂಡುಗಳಿಂದ ನಿರ್ಮಿಸಲ್ಪಟ್ಟಂತಹಾ ಬಂಗಾರದ ಪಾತ್ರೆಯಲ್ಲಿ ತುಪ್ಪ,ಪಾಯಸ,ಪಂಚವಿಧ ಭಕ್ಷ್ಯಗಳು,ಹಾಲು,ಮೊಸರು,ಬಾಳೆಯ ಹಣ್ಣು,ಪಾನಕ,ನಾನಾವಿಧದ ತರಕಾರಿಗಳು,ರುಚಿಕರವಾದ ನೀರು,ಕರ್ಪೂರ ಸಹಿತವಾಗಿರುವ ತಾಂಬೂಲ ಇವೆಲ್ಲವುಗಳನ್ನು ಭಕ್ತಿ ಪುರಸ್ಸರವಾಗಿ ಮನಸ್ಸಿನಲ್ಲಿಯೇ ಒಪ್ಪಿಸುತ್ತಿರುವೆ.ದಯಾನಿಧಿಯಾಗಿರುವ ಸ್ವಾಮಿಯೇ ಪ್ರಸನ್ನ ಚಿತ್ತನಾಗಿ ಸ್ವೀಕರಿಸುವವನಾಗು.

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ
ವೀಣಾ-ಭೇರಿ-ಮೃದಂಗ-ಕಾಹಲ-ಕಲಾ-ಗೀತಂ ಚ ನೃತ್ಯಂ ತಥಾ |
ಸಾಷ್ಟಾಂಗ ಪ್ರಣತಿ: ಸ್ತುತಿರ್ಬಹುವಿಧಾ ಹ್ಯೇತತ್ ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗ್ರಹಾಣ ಪ್ರಭೋ  ||೩||

ಭಾವಾರ್ಥ:-ಶ್ವೇತ ಛತ್ರ.ಚಾಮರ ದ್ವಯಗಳು,ಬೀಸಣಿಕೆ,ಸ್ವಚ್ಛವಾಗಿರುವ ದರ್ಪಣ,ವೀಣೆ,ಭೇರಿ,ಮದ್ದಳೆ,ಕಹಳೆಗಳ ಸಂಗೀತ,ಹಾಡು,ಕುಣಿತ,ಸಾಷ್ಟಾಂಗ ಪ್ರಣಾಮ,ವಿಧವಿಧವಾದ ಸ್ತುತಿಗಳು-ಇವೆಲ್ಲವುಗಳನ್ನು ನನ್ನ ಮನ:ಸಂಕಲ್ಪದಿಂದ ನಿನಗರ್ಪಿಸುತ್ತಿರುವೆನು ಪ್ರಭುವೇ!ಈ ಪೂಜೆಯನ್ನು ಹರ್ಷಚಿತ್ತನಾಗಿ ಸ್ವೀಕರಿಸು ಸ್ವಾಮೀ.

ಆತ್ಮಾ ತ್ವಂ ಗಿರಿಜಾ ಮತಿ: ಸಹಚರಾ: ಪ್ರಾಣಾ: ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ  ಸಮಾಧಿಸ್ಥಿತಿ: |
ಸಂಚಾರ: ಪದಯೋ: ಪ್ರದಕ್ಷಿಣ ವಿಧಿ:ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್  ||೪||

ಭಾವಾರ್ಥ:-ಸ್ವಾಮಿಯೇ;ನನ್ನ ಆತ್ಮವೇ ನೀನು.ಬುದ್ಧಿಯೇ ಪಾರ್ವತೀ ಮಾತೆ.ಇಂದ್ರಿಯಂಗಳೇ ನಿನ್ನ ಅನುಯಾಯಿಗಳು.ಈ ಶರೀರವೇ ನಿನ್ನಾಲಯವು.ವಿಷಯ ಸುಖಾನುಭವಂಗಳೇ ನಿನ್ನಾರಾಧನೆ.ನಿದ್ರೆಯೇ ಸಮಾಧಿ ಸ್ಥಿತಿಯು.ನನ್ನ ಪಾದಗಳ ಮೂಲಕದ ಸಂಚಾರವೇ ನಿನ್ನ ಪ್ರದಕ್ಷಿಣೆಯು.ನನ್ನ ನುಡಿಯೆಲ್ಲವೂ ನಿನ್ನ ಸ್ತುತಿಗಳು.ನಾನು ಏನೇನು ಕರ್ಮಗಳನ್ನು ಮಾಡುತ್ತಿರುವೆನೋ ಅವೆಲ್ಲವೂ ಹೇ! ಪರಮೇಶ್ವರನೇ ನಿನ್ನ ಆರಾಧನೆಗಳೇ ಆಗಿವೆ.

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಸ್ಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ  ||೫||

ಭಾವಾರ್ಥ:-ಸ್ವಾಮಿಯೇ;ನಾನು ಕೈ-ಕಾಲುಗಳಿಂದ ಹಾಗೂ,ಮಾತು,ಶರೀರ,ಕ್ರಿಯೆ,ಕಿವಿ,ಕಣ್ಣು, ಮನಸ್ಸುಗಳಿಂದ ಯಾವುದೇ ಅಪರಾಧಗಳನ್ನು ಮಾಡಿರಲಿ ಅಥವಾ ಮಾಡದೆ ಇರಲಿ;ಅವು ಯೋಗ್ಯವಾಗಿರಲಿ ಅಥವಾ ಅಯೋಗ್ಯವಾಗಿರಲಿ ಅವೆಲ್ಲನ್ನೂ ಮನ್ನಿಸು ದೊರೆಯೇ!ಎಲೈ ಕರುಣಾಸಾಗರನೇ,ಶ್ರೀಮನ್ಮಹಾದೇವನೇ,ಶಂಭುವೇ ನಿನಗೆ ಜಯವಾಗಲಿ.ಜಯವಾಗಲಿ.
*********************************************************************************
     || ಇತಿ ಶ್ರೀ ಶಂಕರ ಭಗವದ್ಪಾದ ವಿರಚಿತ ಶಿವ ಮಾನಸ ಪೂಜಾ ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀಶಂಕರಭಗವದ್ಪಾದರಿಂದ ರಚಿತವಾದ ಶಿವಮಾನಸ ಪೂಜಾಸ್ತೋತ್ರಗಳ ಭಾವಾರ್ಥವು ||
*********************************************************************************
                                       -೩-
  || ಶ್ರೀ ಶಿವ ಪ್ರಾತ:ಸ್ಮರಣಸ್ತೋತ್ರಮ್ ||
*******************************
ಪ್ರಾತ: ಸ್ಮರಾಮಿ ಭವ ಭೀತಿಹರಂ ಸುರೇಶಂ |
ಗಂಗಾಧರಂ ವೃಷಭವಾರ್ಷಂ ಅಂಬಿಕೇಷಮ್ ||
ಖಟ್ವಾಂಗಶೂಲವರದಾಭಯ ಹಸ್ತಮೀಶಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೧||

ಭಾವಾರ್ಥ:-ಸಾಂಸಾರಿಕ ಭೀತಿಗಳನ್ನು ನಿವಾರಣೆ ಮಾಡುವವನೂ,ದೇವತೆಗಳ ಅಧಿಪತಿಯೂ,ಗಂಗೆಯನ್ನು ಧರಿಸಿದವನೂ, ನಂದಿಯನ್ನು ವಾಹನವನ್ನಾಗಿಸಿಕೊಂಡವನೂ,ಅಂಬಿಕೆಯಪತಿಯೂ,ಖಟ್ವಾಂಗ ಶೂಲಗಳನ್ನು ಆಯುಧಗಳನ್ನಾಗಿಸಿಕೊಂಡವನೂ,ಶರಣಾಗತ ಭಕ್ತರಿಗೆ ಅಭಯ ಹಸ್ತಗಳಿಂದ ವರವನ್ನು ದಯಪಾಲಿಸುವವನೂ,ಈಶ್ವರನೂ ,ಭಕ್ತರ ಸಾಂಸಾರಿಕ ವ್ಯಾಧಿಗಳನ್ನು ನಿವಾರಿಸುವ ಅದ್ವಿತೀಯ ಔಷಧ ಸ್ವರೂಪನೂ ಆಗಿರುವ ಪರಮೇಶ್ವರನನ್ನು ನಾನು ಉಷ:ಕಾಲದಲ್ಲಿ ಸ್ಮರಣೆ ಮಾಡುವೆನು.

ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧ ದೇಹಂ |
ಸರ್ಗಸ್ಥಿತಿ ಪ್ರಲಯಕಾರಣಮಾದಿ ದೇವಮ್ ||
ವಿಶ್ವೇಶ್ವರಂ ವಿಜಿತ ವಿಶ್ವಮನೋsಭಿರಾಮಂ | 
ಸಂಸಾರ ರೋಗಹರಮೌಷಧಮದ್ವಿತೀಯಮ್ ||೨||

ಭಾವಾರ್ಥ:-ಅರ್ಧನಾರೀಶ್ವರನೂ,ಕೈಲಾಸಾಧಿಪತಿಯೂ,ಬ್ರಹ್ಮಾಂಡದ ಸೃಷ್ಟಿ ಸ್ಥಿತಿ ಲಯಾದಿಗಳಿಗೆ ಕಾರಣನೂ,ವಿಶ್ವೇಶ್ವರನೂ,ಮನೋಲ್ಲಾಸಿಯೂ ವಿಶ್ವವನ್ನು ಜಯಿಸಿದವನೂ, ಭಕ್ತರ ಸಾಂಸಾರಿಕ ವ್ಯಾಧಿಗಳನ್ನು ನಿವಾರಿಸುವ ಅದ್ವಿತೀಯ ಔಷಧ ಸ್ವರೂಪನೂ ಆಗಿರುವ ಪರಮೇಶ್ವರನನ್ನು ನಾನು ಉಷ:ಕಾಲದಲ್ಲಿ ಸ್ಮರಣೆ ಮಾಡುವೆನು.

ಪ್ರಾತರ್ಭಜಾಮಿ ಶಿವಮೇಕಮನಂತಮಾದ್ಯಂ |
ವೇದಾಂತ ವೇದ್ಯಮನಘಂ ಪುರುಷಂ ಮಹಾಂತಮ್ ||
ನಾಮಾದಿಭೇಧರಹಿತಂ ಷಡ್ಭಾವ ಶೂನ್ಯಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೩||

ಭಾವಾರ್ಥ:-ಅನಂತನೂ, ಆದಿ ಪುರುಷನೂ, ವೇದ-ವೇದಾಂತಗಳಿಂದ ತಿಳಿಯಲ್ಪಡುವವನೂ,ನಾಮಾದಿ ಭೇಧ ರಹಿತನೂ,ಷಡ್ಭಾವ ವಿರಹಿತನೂ ಭಕ್ತರ ಸಾಂಸಾರಿಕ ವ್ಯಾಧಿಗಳನ್ನು ನಿವಾರಿಸುವ ಅದ್ವಿತೀಯ ಔಷಧ ಸ್ವರೂಪನೂ ಆಗಿರುವ ಪರಮೇಶ್ವರನನ್ನು ನಾನು ಉಷ:ಕಾಲದಲ್ಲಿ ಸ್ಮರಣೆ ಮಾಡುವೆನು.
*********************************************************************************
             || ಇತಿ ಶ್ರೀ ಶಿವಪ್ರಾತ:ಸ್ಮರಣ ಸ್ತೋತ್ರಮ್ || 
||ಈ ರೀತಿಯಾಗಿ ಶ್ರೀ ಶಂಕರಾಚಾರ್ಯ ವಿರಚಿತ ಶಿವಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||

*********************************************************************************
                                                         -೪-
  || ಶ್ರೀ ಶಿವ ಪಂಚಾಕ್ಷರಿ ಸ್ತೋತ್ರಮ್ ||
*******************************
ನಾಗೇಂದ್ರಹಾರಾಯ ತ್ರಿಲೋಚನಾಯ 
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ 
ತಸ್ಮೈ "ನ" ಕಾರಾಯ ನಮ: ಶಿವಾಯ |೧||

ಭಾವಾರ್ಥ:-ಸರ್ಪವನ್ನು ಮಾಲೆಯನ್ನಾಗಿ ಧರಿಸಿದವನೂ,ಮೂರುಕಣ್ಣುಗಳುಳ್ಳವನೂ,ಭಸ್ಮವನ್ನು ಅಂಗಾಂಗಳಿಗೆ ಲೇಪಿಸಿಕೊಂಡವನೂ,ಮಹೇಶ್ವರನೂ,ನಿತ್ಯನೂ,ಶುದ್ಧನೂ,ದಿಕ್ಕುಗಳನ್ನು ವಸನವನ್ನಾಗಿ ಧರಿಸಿದವನೂ,"ನಮ:ಶಿವಾಯ"ವೆಂಬ ಶಿವ ಪಂಚಾಕ್ಷರಿ ಮಂತ್ರದ ಮೊದಲ ಅಕ್ಷರವಾಗಿರುವ "ನ"ಕಾರ ಮೂಲಸ್ವರೂಪವಾಗಿಯುಳ್ಳವನೂ ಆಗಿರುವ ಪರಶಿವನಿಗೆ ನನ್ನ ನಮಸ್ಕಾರಗಳು.

ಮಂದಾಕಿನೀ ಸಲಿಲ ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |
ಮಂದಾರಪುಷ್ಪ ಬಹುಪುಷ್ಪ ಸುಪೂಜಿತಾಯ
ತಸ್ಮೈ "ಮ"ಕಾರಾಯ ನಮ: ಶಿವಾಯ  ||೨||

ಭಾವಾರ್ಥ:-ಮಂದಾಕಿನೀ ನದಿಯ ನೀರು ಹಾಗೂ ಶ್ರೀಗಂದವನ್ನು ಲೇಪಿಸಿಕೊಂಡವನೂ,ನಂದೀಶ್ವರಾದಿ ಪ್ರಮಥ ಗಣಗಳ ಒಡೆಯನಾಗಿರುವವನೂ,ಮಂದಾರ ಪುಷ್ಪವೇ ಮೊದಲಾದ ನಾನಾಬಗೆಯಪುಷ್ಪಗಳಿಂದ ಪೂಜಿಸಿಕೊಂಬವನೂ "ನಮ: ಶಿವಾಯ" ಎಂಬ ಮಂತ್ರದ ಎರಡನೇ ಅಕ್ಷರ "ಮ" ಕಾರದ ಸ್ವರೂಪಹೊಂದಿರುವವನೂ ಆಗಿರುವ ಪರಶಿವನಿಗೆ ನನ್ನ ನಮಸ್ಕಾರಗಳು.

ಶಿವಾಯ ಗೌರೀವದನಾಬ್ಜ ಬೃಂದ 
ಸೂರ್ಯಾಯ ದಕ್ಷಾದ್ವರನಾಶಕಾಯ |
ಶ್ರೀನೀಲಕಂಠಾಯ ವೃಷಭ ಧ್ವಜಾಯ 
ತಸ್ಮೈ "ಶಿ" ಕಾರಾಯ ನಮ: ಶಿವಾಯ  ||೩||

ಭಾವಾರ್ಥ:-ಗೌರೀದೇವಿಯಮುಖಾರವಿಂದವನ್ನು ಅರಳಿಸುವ ಸೂರ್ಯನೂ,ಆನಂದಸ್ವರೂಪನೂ,ದಕ್ಷ ಯಜ್ಞ ನಾಶಕನೂ,ನೀಲಕಂಠನೂ,ವೃಷಭವನ್ನು ಧ್ವಜವಾಗಿಸಿಕೊಂಡವನೂ,"ನಮ: ಶಿವಾಯ" ಎಂಬ ಮಂತ್ರದ ಮೂರನೇ ಅಕ್ಷರ "ಶಿ" ಕಾರದ ಸ್ವರೂಪಹೊಂದಿರುವವನೂ ಆಗಿರುವ ಪರಶಿವನಿಗೆ ನನ್ನ ನಮಸ್ಕಾರಗಳು.

ವಸಿಷ್ಠ ಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕ ವೈಶ್ವಾನರಲೋಚನಾಯ 
ತಸ್ಮೈ "ವ"ಕಾರಾಯ ನಮ: ಶಿವಾಯ  ||೪||

ಭಾವಾರ್ಥ:-ಅಗಸ್ತ್ಯ,ವಸಿಷ್ಠಗೌತಮಾದಿ ಮುನಿಗಳಿಂದಲೂ,ದೇವೇಂದ್ರಾದಿ ದೇವತೆಗಳಿಂದಲೂ ಮಹೇಶ್ವರನೆಂದು ಪೂಜಿಸಲ್ಪಡುವವನಿಗೆ,ಚಂದ್ರ ಸೂರ್ಯಾಗ್ನಿಗಳನ್ನು ಮೂರು ಕಣ್ಣುಗಳಾಗಿ ಮಾಡಿಕೊಂಡಿರುವವನಿಗೆ,"ನಮ: ಶಿವಾಯ" ಎಂಬ ಮಂತ್ರದ ನಾಲ್ಕನೇ ಅಕ್ಷರ "ವ" ಕಾರದ ಸ್ವರೂಪಹೊಂದಿರುವ ಪರಶಿವನಿಗೆ ನನ್ನ ನಮಸ್ಕಾರಗಳು.

ಯಜ್ಞಸ್ವರೂಪಾಯ ಜಟಾಧರಾಯ
ಪಿನಾಕ ಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ "ಯ"ಕಾರಾಯ ನಮ: ಶಿವಾಯ  ||೫||

ಭಾವಾರ್ಥ:-ಯಜ್ಞ ಸ್ವರೂಪನೂ,ಜಠಾಧಾರಿಯೂ,ಪಿನಾಕವೆಂಬ ಧನುವನ್ನು ಧರಿಸಿದವನೂ,ಸನಾತನನೂ,ದಿವ್ಯನೂ,ಶಾಶ್ವತನೂ,ಕಾಂತಿಮಯನೂ,ದೇವನೂ,ದಿಗಂಬರನೂ "ನಮ: ಶಿವಾಯ" ಎಂಬ ಮಂತ್ರದ ಐದನೇ ಅಕ್ಷರ "ಯ" ಕಾರದ ಸ್ವರೂಪಹೊಂದಿರುವವನೂ ಆಗಿರುವ ಪರಶಿವನಿಗೆ ನನ್ನ ನಮಸ್ಕಾರಗಳು
*********************************************************************************
      || ಇತಿ ಶ್ರೀ ಶಿವ ಪಂಚಾಕ್ಷರೀ ಸ್ತೋತ್ರಮ್  ||
 || ಈ ರೀತಿಯಾಗಿ ಶ್ರೀ ಶಿವ ಪಂಚಾಕ್ಷರೀ ಸ್ತೋತ್ರಗಳ ಭಾವಾರ್ಥವು  ||
**************************************************************** 
                                              -೫-
  || ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್  ||
  ********************************
ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಮ್  ||೧||

ಭಾವಾರ್ಥ:-ಸೌರಾಷ್ಟ್ರದಲ್ಲಿ ಶ್ರೀ ಸೋಮನಾಥ,ಶ್ರೀಶೈಲದಲ್ಲಿ ಮಲ್ಲಿಕಾರ್ಜುನ,ಉಜ್ಜಯಿನಿಯಲ್ಲಿ ಶ್ರೀಮಹಾಕಾಲ,ಓಂಕಾರೇಶ್ವರ ಅಥವಾ ಅಮಲೇಶ್ವರ,...

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್ |
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||೨||

ಭಾವಾರ್ಥ:-ಪರಳಿಯಲ್ಲಿ ವೈದ್ಯನಾಥನು,ಡಾಕಿನಿ ಎಂಬಲ್ಲಿ ಶ್ರೀಭೀಮಾಶಂಕರ,ಸೇತುಬಂಧನದಲ್ಲಿ ಶ್ರೀರಾಮೇಶ್ವರನು, ದಾರುಕಾವನದಲ್ಲಿ ಶ್ರೀ ನಾಗೇಶ್ವರನು.....

ವಾರಣಾಸ್ಯಾಂ ತು ವಿಶ್ವೇಶಂ ತ್ರಯಂಬಂಕಂ ಗೌತಮೀ ತಟೇ |
ಹಿಮಾಲಯೇ ತು ಕೇದಾರಂ ಘೃಸೃಣೇಶಂ ಚ ಶಿವಾಲಯೇ  ||೩||

ಭಾವಾರ್ಥ:-ವಾರಣಾಸಿಯಲ್ಲಿ ಶ್ರೀವಿಶ್ವೇಶ್ವರ, ಗೌತಮೀ ತಟದಲ್ಲಿ ಶ್ರೀ ತ್ರಯಂಬಕೇಶ್ವರ,ಹಿಮಾಲಯದೊಳಗಿನ ಕೇದಾರ ಪ್ರದೇಶದಲ್ಲಿ ಶ್ರೀಕೇದಾರನಾಥ,ಶಿವಾಲಯದಲ್ಲಿ ಶ್ರೀಘೃಷ್ಣೇಶ್ವರನೂ ಇರುವರು.

ಏತಾನಿ ದ್ವಾದಶ ಜ್ಯೋತಿರ್ಲಿಂಗಾನಿ ಸಾಯಂಪ್ರಾತ: ಪಠೇನ್ನರ: |
ಸಪ್ತಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ  ||೪||

ಭಾವಾರ್ಥ:-ಈ ಹನ್ನೆರಡು ಜ್ಯೋತಿರ್ಲಿಂಗಗಳಸ್ತೋತ್ರವನ್ನು ಪ್ರತಿದಿನ ಮುಂಜಾನೆ ಹಾಗೂ ಸಂಧ್ಯಾ ಕಾಲಗಳಲ್ಲಿ ಯಾವ ಮಾನವನು ಪಠಿಸುವನೋ ಅವನು ತಾನು ಹಿಂದಿನ ಏಳು ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ಈ ದ್ವಾದಶ ಲಿಂಗಗಳ ಸ್ಮರಣೆಯಿಂದಲೇ ಕಳೆದುಕೊಳ್ಳುವನು.
*********************************************************************************************
                || ಇತಿ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್ ||
    || ಈ ತೆರನಾಗಿ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಗ ಭಾವಾರ್ಥವು ||
***********************************************************************************************
                                              -೬-
 || ಶ್ರೀ ಶಿವ ಷಡಕ್ಷರಸ್ತೋತ್ರಮ್ ||
**************************
ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನ: |
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮ:  ||೧||

ಭಾವಾರ್ಥ:-ಅಕಾರ ಉಕಾರ ಮಕಾರ ಅನುಸ್ವಾರದಿಂದ ಕೂಡಿರುವ ಓಂಕಾರವನ್ನು ಯೋಗಿಗಳು ಅನುದಿನವೂ ಧ್ಯಾನಿವರು. ಇಚ್ಚಿಸಿದ್ದನ್ನು ದಯಪಾಲಿಸುವ ಹಾಗೂ ಮೋಕ್ಷವನ್ನು ಕರುಣಿಸುವ ಓಂಕಾರ ಸ್ವರೂಪಿಗೆ ನನ್ನ ನಮನಗಳು.

ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾ: |
ನರಾ ನಮಂತಿ ದೇವೇಶಂ ನಕಾರಾಯ ನಮೋ ನಮ:  ||೨||

ಭಾವಾರ್ಥ:-ಯಾವ ದೇವರಿಗೆ ಋಷಿಗಳೂ ಅಪ್ಸರಾಸಮೂಹವೂ ಗಣಗಳೂ ಮಾನವರೂ ನಮಿಸುತ್ತಾರೋ ಅಂತಹಾ ನಕಾರ ಸ್ವರೂಪಿಗೆ ನನ್ನ ನಮನಗಳು.

ಮಹಾದೇವಂ ಮಹಾತ್ಮಾನಂ ಮಹಾಧ್ಯಾನ ಪರಾಯಣಮ್ |
ಮಹಾಪಾಪಹರಂ ದೇವಂ  ಮಕಾರಾಯ ನಮೋನಮ: ||೩||

ಭಾವಾರ್ಥ:-ಮಹಾದೇವನೂ,ಮಹಾತ್ಮನೂ, ಮಹಾಧ್ಯಾನದಲ್ಲಿ ನಿರತನಾದವನೂ ಮಹಾಪಾಪಗಳನ್ನು ಪರಿಹರಿಸುವವನೂ ಮಕಾರ ಸ್ವರೂಪಿಯೂ ಆಗಿರುವ ದೇವನಿಗೆ ನನ್ನ ನಮನಗಳು.

ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹ ಕಾರಕಂ |
ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮ:  ||೪||

ಭಾವಾರ್ಥ:-ಮಂಗಲದಾಯಕನೂ,ಶಾಂತ ಸ್ವರೂಪಿಯೂ,ಜಗತ್ತಿನ ದೊರೆಯೂ,ಲೋಕವನ್ನು ಅನುಗ್ರಹಿಸುವ ದಯಾರೂಪಿಯೂ,ಅನುದಿನವೂ ಮಂಗಲದಾಯಕವಾಗಿರುವ ಒಂದೇ ಶಬ್ದದವನೂ ಆಗಿರುವ ಶಿಕಾರ ಸ್ವರೂಪಿಗೆ ನನ್ನ ನಮನಗಳು.

ವಾಹನಂ ವೃಷಭೋ ಯಸ್ಯ ವಾಸುಕಿ: ಕಂಠಭೂಷಣಮ್ |
ವಾಮೇ ಶಕ್ತಿಧರಂ ದೇವಂ ವಕಾರಾಯ ನಮೋ ನಮ: ||೫||

ಭಾವಾರ್ಥ:-ಯಾವಾತನ ವಾಹನವು ವೃಷಭವಾಗಿದೆಯೋ,ಯಾವಾತನ ಕಂಠಮಾಲೆಯಾಗಿ ವಾಸುಕಿಯು ಅಲಂಕರಿಸಿದೆಯೋ,ಯಾವಾತನ ವಾಮ ಭಾಗದಲ್ಲಿ ಶಕ್ತಿ ದೇವತೆ ನೆಲೆಯಾಗಿರುವಳೋ ಅಂತಹಾ ವಕಾರ ಸ್ವರೂಪಿಗೆ ನನ್ನ ನಮನಗಳು.

ಯತ್ರ ಯತ್ರ ಸ್ಥಿತೋ ದೇವ: ಸರ್ವ ವ್ಯಾಪೀ ಮಹೇಶ್ವರ: |
ಯೋ ಗುರು: ಸರ್ವ ದೇವಾನಾಂ ಯಕಾರಾಯ ನಮೋ ನಮ:  ||೬||

ಭಾವಾರ್ಥ:-ಯಾವ ದೇವರು ಸರ್ವ ವ್ಯಾಪಿಯಾಗಿ ಎಲ್ಲೆಲ್ಲೂ ಇರುವನೋ ಆ ದೇವ ಮಹೇಶ್ವರನು ಸಮಸ್ತ ದೇವತೆಗಳಿಗೂ ಗುರುವಾಗಿರುವನು. ಆಂತಹಾ ಯಕಾರ ಸ್ವರೂಪಿಗೆ ನನ್ನ ನಮನಗಳು.

ಷಡಕ್ಷರಮಿದಂ ಸ್ತೋತ್ರಂ ಯ: ಪಠೇಚ್ಚಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೊದತೇ ||೭||

ಭಾವಾರ್ಥ:-ಯಾವಾತನು ಶಿವನ ಸನ್ನಿಧಿಯಲ್ಲಿ ಈ ಪುಣ್ಯದಾಯಕವಾದ ಈ ಶಿವಷಡಕ್ಷರಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವರೋ ಅವರು ಶಿವಲೋಕವನ್ನು ಸೇರಿ ಶಿವನೊಡನೆ ಆನಂದವನ್ನು ಅನುಭವಿಸುವರು.
*********************************************************************************
     || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶಿವ ಷಡಕ್ಷರಿ ಸ್ತೋತ್ರಮ್ ||

 ||ಈ ರೀತಿಯಾಗಿ ಶ್ರೀ ಶಂಕರಾಚಾರ್ಯ ವಿರಚಿತ ಶಿವಷಡಕ್ಷರಿ ಸ್ತೋತ್ರಗಳ ಭಾವಾರ್ಥವು||

*********************************************************************************
                       -೭-

    || ಶ್ರೀಪಶುಪತ್ಯಷ್ಟಕಮ್ ||
  *******************
ಪಶುಪತಿಂದುಪತಿಂ ಧರಣೀಪತಿಂ |
ಭುಜಗಲೋಕಪತಿಂ ಚ ಸತೀಪತಿಮ್ ||
ಪ್ರಣತ ಭಕ್ತಾರ್ತಿಹರಂ ಪರಂ|
ಭಜರೇ ಮನುಜಾ ಗಿರಿಜಾಪತಿಮ್  ||೧||

ಭಾವಾರ್ಥ:-ಎಲೈ ಮಾನವನೇ;ಸಮಸ್ತ ಪ್ರಾಣಿಗಳಿಗೂ ಸ್ವರ್ಗ,ಭುವಿ,ನಾಗಾದಿ ಲೋಕಗಳಿಗೂ ಒಡೆಯನಾಗಿರುವ  ದಾಕ್ಷಾಯಿಣಿಯ ಸ್ವಾಮಿ,ಆರ್ತ ಪ್ರಾಣಿಗಳ ಹಾಗೂ ಭಕ್ತ ಜನರ ಪೀಡಾ ಪರಿಹಾರಕ,ಪರಮ ಪುರುಷನೂ ಪಾರ್ವತೀ ವಲ್ಲಭನೂ ಆಗಿರುವ ಶಂಕರನನ್ನು ಭಜಿಸು.

ನ ಜನಕೋ ಜನನೀ ನ ಚ ಸೋದರೋ |
ನ ತನಯೋ ನ ಚ ಭೂರಿಬಲಮ್ ಕುಲಮ್ ||
ಅವತಿ ಕೋsಪಿ ನ ಕಾಲವಶಮ್ ಗತಮ್ |
ಭಜರೇ ಮನುಜಾ ಗಿರಿಜಾಪತಿಮ್  ||೨||

ಭಾವಾರ್ಥ:-ಎಲವೋ ಮನುಜನೇ; ಕಾಲನ ವಶದಲ್ಲಿರುವ ಈ ಜೀವನದಲ್ಲಿ ತಂದೆ,ತಾಯಿ,ಸೋದರ,ಮಕ್ಕಳು,ಬಂಧು ಬಳಗ,ಅಧಿಕಬಲ,ಸತ್ಕುಲದಬಲ,ಯಾವುದೂ ನಿನ್ನನ್ನು ರಕ್ಷಿಸಲಾರದು.ಆದ್ದರಿಂದ ನೀನು ಮಹಾಮಹಿಮನಾಗಿರುವ ಶಂಕರನನ್ನು ಭಜಿಸು.

ಮುರಜಡಿಂಡಿಮ ವಾದ್ಯ ವಿಲಕ್ಷಣಂ | 
ಮಧುರ ಪಂಚಮನಾದ ವಿಶಾರದಮ್ ||
ಪ್ರಮಥ ಭೂತ ಗಣೈರಪಿ ಸೇವಿತಂ |
ಭಜರೇ ಮನುಜಾ ಗಿರಿಜಾಪತಿಮ್  ||೩||

ಭಾವಾರ್ಥ:-ಹೇ ಮನುಜಾ;ಮೃದಂಗ,ಡಮರುಗಳನ್ನು ನುಡಿಸುವುದರಲ್ಲಿ ನಿಪುಣನೂ,ಪಂಚಮ ಸ್ವರದಲ್ಲಿ ಹಾಡುವುದರಲ್ಲಿ ಕುಶಲಿಗನೂ,ಪ್ರಮಥ ಹಾಗು ಭೂತ ಗಣಗಳಿಂದ ಸೇವೆಯನ್ನು ಸ್ವೀಕರಿಸುತ್ತಿರುವವನೂ ಆಗಿರುವ ಶಂಕರನನ್ನು ಭಜಿಸು. 

ಶರಣದಂ ಸುಖದಂ ಶರಣಾನ್ವಿತಂ |
ಶಿವ ಶಿವೇತಿ ಶಿವೇತಿ ನತಂ ನೃಣಾಮ್ ||
ಅಭಯದಂ ಕರುಣಾವರುಣಾಲಯಂ |
ಭಜರೇ ಮನುಜಾ ಗಿರಿಜಾಪತಿಮ್  ||೪||

ಭಾವಾರ್ಥ:-ಮಾನವನೇ;ಯಾವಾತನು ಶರಣಾಗತರಿಗೆ ಶರಣಾಗಿ ಸುಖವನ್ನೂ ಅಭಯವನ್ನೂ ದಯಪಾಲಿಸುವನೋ,ಶಿವ ಶಿವ ಶಿವಾ ಎಂಬುದಾಗಿ ಮಾನವರು ಯಾರಿಗೆ ನಮಿಸುವರೋ,ಅಂತಹಾ ದಯಾನಿಧಿಯಾಗಿರುವ ಶಂಕರನನ್ನು ಭಜಿಸು.

ನರಶಿರೋರಚಿತಂ ಮಣಿಕುಂಡಲಂ |
ಭುಜಗಹಾರಮುದಂ ವೃಷಭ ಧ್ವಜಮ್ ||
ಚಿತಿರಜೋಧವಲೀಕೃತ ವಿಗ್ರಹಂ  |
ಭಜರೇ ಮನುಜಾ ಗಿರಿಜಾಪತಿಮ್  ||೫||

ಭಾವಾರ್ಥ:-ಹೇ ಮನುಜಾ; ಮಾನವನ ರುಂಡವನ್ನೂ,ಮಣಿಗಳ ಕುಂಡಲವನ್ನೂ ಹಾಗೂ ಸರ್ಪಗಳ ಹಾರವನ್ನೂ ಧರಿಸಿಕೊಂಡು ಚಿತಾಭಸ್ಮವನ್ನು ಲೇಪಿಸಿರುವ ದೇಹವುಳ್ಳವನೂ ವೃಷಭವನ್ನು ಲಾಂಛನವಾಗಿರಿಸಿಕೊಂಡವನೂ ಆಗಿರುವ ಶಂಕರನನ್ನು ಭಜಿಸು.

ಮಖವಿನಾಶಕರಂ ಶಶಿಶೇಖರಂ |
ಸತತಮಧ್ವರಭಾಜಿ ಫಲಪ್ರದಮ್ ||
ಪ್ರಲಯದಗ್ದ ಸುರಾಸುರ ಮಾನವಂ |
ಭಜರೇ ಮನುಜಾ ಗಿರಿಜಾಪತಿಮ್  ||೬||

ಭಾವಾರ್ಥ:-ಎಲೈ ಮಾನವಾ;ದಕ್ಷನ ಯಜ್ಞವನ್ನು ಹಾಳುಗೆಡವಿದವನೂ,ಶಿರದ ಮೇಲೆ ಚಂದ್ರನನ್ನು ಧರಿಸಿ ಪ್ರಕಾಶಿಸುವವನೂ,ಯಜ್ಞ ಕರ್ತ್ರುಗಳಿಗೆ ಯಾವತ್ತೂ ಸತ್ಫಲವನ್ನು ಕರುಣಿಸುವವನೂ,ಅಲ್ಲದೆ ಪ್ರಳಯ ಕಾಲಾಗ್ನಿಯಿಂದ ದೇವ ದಾನವ ದನುಜರನ್ನು ಸುಟ್ಟವನೂ ಆಗಿರುವ ಶಂಕರನನ್ನು ಭಜಿಸು.

ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ |
ಮರಣಜನ್ಮ ಜರಾಭಯ ಪೀಡಿತಮ್ ||
ಜಗದುದೀಕ್ಷ್ಯ ಸಮೀಪ ಭಯಾಕುಲಮ್ |
ಭಜರೇ ಮನುಜಾ ಗಿರಿಜಾಪತಿಮ್  ||೭||

ಭಾವಾರ್ಥ:-ಹೇ ಮಾನವನೇ; ಹುಟ್ಟು,ಮುಪ್ಪು,ಸಾವುಗಳ ಭೀತಿಯಿಂದ ಪೀಡಿಸಲ್ಪಡುವ ಹಾಗೆಯೇ ಎದುರಾಗುವ ಸಂಕಷ್ಟಗಳಿಂದ ವ್ಯಾಕುಲಗೊಂಡಿರುವ ಜಗತ್ತನ್ನು ಕಂಡು ಹೃದಯದಲ್ಲಿ ಬಹುಕಾಲದಿಂದ ಶೇಖರಗೊಂಡಿರುವ ದರ್ಪವನ್ನು ತ್ಯಜಿಸಿದವನೂ ಆಗಿರುವ ಶಂಕರನನ್ನು ಭಜಿಸು. 

ಹರಿವಿರಿಂಚಿ ಸುರಾಧಿಪ ಪೂಜಿತಂ|
ಯಮಜನೇಶಧನೇಶ ನಮಸ್ಕೃತಮ್ ||
ತ್ರಿನಯನಂ ಭುವನತ್ರಿತಯಾಧಿಪಂ |
ಭಜರೇ ಮನುಜಾ ಗಿರಿಜಾಪತಿಮ್  ||೮||

ಭಾವಾರ್ಥ:-ಎಲೈ ಮಾನವನೇ;ವಿಷ್ಣು,ಬ್ರಹ್ಮ ಹಾಗೂ ಸುರೇಂದ್ರರಿಂದ ಪೂಜಿಸಿಗೊಂಬವನೂ,ಯಮ ಮತ್ತು ಕುಬೇರರಿಂದ ನಮಸ್ಕರಿಸಿಕೊಂಬವನೂ ,ಮುಕ್ಕಣ್ಣನೂ ತ್ರಿಲೋಕದೊಡೆಯನೂ ಆಗಿರುವ ಶಂಕರನನ್ನು ಭಜಿಸು.

ಪಶುಪತೇರಿದಮಷ್ಟಕಮದ್ಭುತಂ |
ವಿರಚಿತಂ ಪೃಥಿವೀಪತಿ ಸೂರಿಣಾ ||
ಪಠತಿ ಸಂಶೃಣುತೇ ಮನುಜ: ಸದಾ |
ಶಿವಪುರೀಂ ವಸತೇ ಲಭತೇ ಮುದಮ್  ||೯||

ಭಾವಾರ್ಥ:-ಪಂಡಿತ ಪೃಥಿವೀಪತಿ ಎಂಬವನಿಂದ ರಚಿಸಲ್ಪಟ್ಟ ಈ ಅದ್ಭುತ ಪಶುಪತಿ ಅಷ್ಟಕಗಳನ್ನು ನಿತ್ಯವೂ ಯಾರು ಪಠಣ ಹಾಗೂ ಶ್ರವಣ ಮಾಡುವರೋ ಅವರು ಶಿವನ ಪಟ್ಟಣದಲ್ಲಿ ವಾಸ ಮಾಡುತ್ತಾ ಆನಂದವನ್ನು ಅನುಭವಿಸುವರು.
*********************************************************************************************** 
|| ಇತಿ ಶ್ರೀ ಪಶುಪತ್ಯಷ್ಟಮ್  ||  || ಈ ರೀತಿಯಾಗಿ ಶ್ರೀ ಪಶುಪತಿ ಅಷ್ಟಕಗಳ ಭಾವಾರ್ಥವು  ||
********************************************************************************************** 
              -೮-
            || ಶ್ರೀ ಶಿವನಾಮಾವಲ್ಯಷ್ಟಕಮ್ ||
 ***************************
ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ |
ಸ್ಥಾನೋ ಗಿರೀಶ ಮಹೇಶ ಶಂಭೋ ||
ಭೂತೇಶ ಭೀತಿ ಭವಸೂದನ ಮಾಮನಾಥಂ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೧||

ಭಾವಾರ್ಥ:-ಎಲೈ ಚಂದ್ರಶೇಖರನೇ,ವ್ಯಾಮೋಹ ನಾಶಕನೇ,ತ್ರಿಶೂಲವನ್ನು ಧರಿಸಿದವನೇ ಶಾಶ್ವತನೇ,ಅಚಲನೇ,ಗಿರೀಶನೇ,ಗಿರಿಜೆಯ ಒಡೆಯನೇ, ಮಹೇಶ್ವರನೇ, ಶಂಭುವೇ,ಭೂತಾಧಿಪನೇ, ಭಯನಾಶಕನೇ,ಜಗದೊಡೆಯನೇ,ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ಹೇ ಪಾರ್ವತೀ ಹೃದಯವಲ್ಲಭ ಚಂದ್ರ ಮೌಳೇ |
ಭೂತಾಧಿಪ ಪ್ರಮಥನಾಥ ಗಿರೀಶಚಾಪ ||
ಹೇ ವಾಮದೇವ ಭವರುದ್ರ ಪಿನಾಕಪಾಣೇ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೨||

ಭಾವಾರ್ಥ:-ಎಲೈ ಪಾರ್ವತಿ ದೇವಿಯ ಹೃದಯ ವಲ್ಲಭನೇ,ಚಂದ್ರ ಮೌಳೀಶ್ವರನೇ,ಪ್ರಾಣಿಗಳ ಒಡೆಯನೇ,ಪ್ರಮಥ ಗಣಗಳ ಅಧಿಪತಿಯೇ,ಗಿರಿಜೇಶನೇ,ವಾಮದೇವನೇ,ಭವನೇ,ರುದ್ರನೇ,ಪಿನಾಕಹಸ್ತನೇ,ಜಗದೊಡೆಯನೇ, ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ಹೇ ನೀಲಕಂಠ ವೃಷಭಧ್ವಜ ಪಂಚವಕ್ತ್ರ |
ಲೋಕೇಶ ಶೇಷವಲಯ ಪ್ರಮಥೇಷ ಶರ್ವ ||
ಹೇ ಧೂರ್ಜಟೇ ಪಶುಪತೇ ಗಿರಿಜಾಪತೇ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೩||

ಭಾವಾರ್ಥ:-ಹೇ ನೀಲಕಂಠನೇ,ವೃಷಭ ಲಾಂಛನನೇ, ಪಂಚವಕ್ತ್ರನೇ,ಲೋಕೇಶನೇ, ನಾಗಾಭರಣನೇ,ಪ್ರಮಥಗಣಾಧೀಶನೇ,ಶರ್ವನೇ,ಧೂರ್ಜಟಿಯೇ,ಪಶುಪತಿಯೇ,ಗಿರಿಜಾನಾಥನೇ ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ಹೇ ವಿಶ್ವನಾಥ ಶಿವ ಶಂಕರ ದೇವದೇವ |
ಗಂಗಾಧರ ಪ್ರಮಥ ನಾಯಕ ನಂದಿಕೇಶ ||
ಬಾಣೇಶ್ವರಾಂಧಕ ರಿಪೋ ಹರ ಲೋಕನಾಥ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೪||

ಭಾವಾರ್ಥ:-ಹೇ ವಿಶ್ವನಾಥನೇ,ಶಿವನೇ,ಶಂಕರನೇ, ದೇವಾದಿದೇವನೇ, ಗಂಗಾಧರನೇ, ಪ್ರಮಥರೊಡೆಯನೇ,ನಂದಿಕೇಶ್ವರನೇ,ಬಾಣೇಶ್ವರನೇ,ಅಂಧಕಾಸುರ ವೈರಿಯೇ,ಪಾಪನಾಶಕ ಹರನೇ,ಲೋಕಾಧೀಶನೇ ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ವಾರಣಸೀಪುರಪತೇ ಮಣಿಕರ್ಣಿಕೇಶ |
ವೀರೇಶ ದಕ್ಷ ಮಖಕಾಲ ವಿಭೋ ಗಣೇಶ ||
ಸರ್ವೇಶ ಸರ್ವ ಹೃದಯೈಕನಿವಾಸ ನಾಥ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೫||

ಭಾವಾರ್ಥ:-ಹೇ ಕಾಶೀಪುರಾಧೀಶ್ವರನೇ,ಮಣಿಕರ್ಣಿಕೇಶನೇ,ವೀರಾಗ್ರೇಸರನೇ,ದಕ್ಷ ಯಜ್ಞ ಧ್ವಂಸಕನೇ,ಸರ್ವ ವ್ಯಾಪಕನೇ,ಸ್ವಾಮಿಯೇ,ಗಣಾಧೀಶನೇ,ಸರ್ವೇಶ್ವರನೇ,ಸಮಸ್ತರ ಹೃದಯದಲ್ಲಿ ನೆಲೆಸಿರುವ ಏಕಮಾತ್ರನೇ, ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ಶ್ರೀಮನ್ಮಹೇಶ್ವರ ಕೃಪಾಮಯ ಹೇ ದಯಾಲೋ |
ಹೇ ವ್ಯೋಮಕೇಶ ಶಿಶಿಕಂಠ ಗಣಾಧಿನಾಥ ||
ಭಸ್ಮಾಂಗರಾಗ ನೃಕಪಾಲ ಕಾಪಾಲಮಾಲ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೬||

ಭಾವಾರ್ಥ:-ಹೇ!ಶ್ರೀಮನ್ಮಹೇಶೇಶ್ವರನೇ,ಕೃಪಾಮಯಿಯೇ,ದಯಾಳುವೇ,ವ್ಯೋಮಕೇಶನೇ,ನೀಲಕಂಠನೇ, ಗಣಗಳೊಡೆಯನೇ,ಭಸ್ಮಧಾರಿಯೇ,ರುಂಡಮಾಲಾಧರನೇ,ಜಗದೊಡೆಯನೇ ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ಕೈಲಾಸಶೈಲವಿನಿವಾಸ ವೃಷಾಕಪೇ ಹೇ|
ಮೃತ್ಯುಂಜಯ ತ್ರಿನಯನ ತ್ರಿ ಜಗನ್ನಿವಾಸ ||
ನಾರಾಯಣಪ್ರಿಯ ಮದಾಪಹ ಶಕ್ತಿನಾಥ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೭||

ಭಾವಾರ್ಥ:-ಎಲೈ ಕೈಲಾಸಗಿರಿವಾಸನೇ,ಪರಮೇಶ್ವರನೇ,ಮೃತ್ಯುಂಜಯನೇ,ಮುಕ್ಕಣ್ಣನೇ, ಮೂರುಲೋಕಗಳಲ್ಲಿ ನೆಲೆಸಿರುವವನೇ, ಶ್ರೀಹರಿಪ್ರಿಯನೇ,ದರ್ಪ ನಾಶಕನೇ,ಶಕ್ತಿನಾಥನೇ,ಜಗದೊಡೆಯನೇ ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.

ವಿಶ್ವೇಶ ವಿಶ್ವಭವನಾಶಕ ವಿಶ್ವರೂಪ |
ವಿಶ್ವಾತ್ಮಕ ತ್ರಿಭುವನೈಕ ಗುಣಾಧಿವಾಸ ||
ಹೇ ವಿಶ್ವವಂದ್ಯ ಕರುಣಾಮಯ ದೀನಬಂಧೋ |
ಸಂಸಾರ ದು:ಖಗಹನಾಜ್ಜಗದೀಶ ರಕ್ಷ ||೮||

ಭಾವಾರ್ಥ:-ಹೇ ವಿಶ್ವದೊಡೆಯನೇ,ವಿಶ್ವದ ಸಾಂಸಾರಿಕ ದುರಿತ ನಾಶಕನೇ, ಬ್ರಹ್ಮಾಂಡಸ್ವರೂಪನೇ,ವಿಶ್ವಾತ್ಮಕನೇ,ಮೂರ್ಲೋಕಗಳ ಗುಣಗಳಿಗೆ ಆವಾಸ ಸ್ಥಾನವಾಗಿರುವವನೇ, ಸಮಸ್ತ ವಿಶ್ವದ ವಂದನೆಗಳಿಗರ್ಹನಾದವನೇ,ಕರುಣಾಮಯಿಯೇ,ದೀನಬಂಧುವೇ ಜಗದೀಶನೇ ಸಂಸಾರವೆಂಬ ದಟ್ಟ ಕಾನನದಿಂದ ಅನಾಥನಾದ ನನ್ನನ್ನು ರಕ್ಷಿಸು.
***********************************************************************************************
            || ಇತಿ ಶ್ರೀಶಂಕರಾಚಾರ್ಯ ವಿರಚಿತ ಶಿವನಾಮಾವಲ್ಯಷ್ಟಕಮ್ ||
 || ಈ ರೀತಿಯಾಗಿ ಶ್ರೀಶಂಕರಾಚಾರ್ಯರು ರಚಿಸಿದ ಶಿವ ನಾಮಾವಲ್ಯಷ್ಟಕಗಳ ಭಾವಾರ್ಥವು ||
*********************************************************************************                       -೯-     
    

  || ರಾವಣ ಕೃತ ಶಿವತಾಂಡವ ಸ್ತೋತ್ರಮ್ ||
  +++++++++++++++++++++++++++
ಜಟಾಕಟಾಹ ಸಂಭ್ರಮಭ್ರನ್ನಿಲಿಂಪನಿರ್ಝರೀ |
ವಿಲೋಲ ವೀಚಿ ವಲ್ಲರೀ ವಿರಾಜಮಾನ ಮೂರ್ಧನಿ ||
ಧಗದ್ದಗದ್ದಗಜ್ಜ್ವಲಲ್ಲಲಾಟಪಟ್ಟಪಾವಕೇ |
ಕಿಶೋರಚಂದ್ರಶೇಖರೇ ರತಿ: ಪ್ರತಿಕ್ಷಣಂ ಮಮ  ||೧||

ಭಾವಾರ್ಥ:-ಯಾವಾತನ ಮೇಲ್ಭಾಗದಲ್ಲಿರುವ ಜಟೆಯ ದಿನ್ನೆಯಲ್ಲಿ ವೇಗದಿಂದ ಚಲಿಸುವ ಗಂಗೆಯ ಅಲೆದಾಡುವತೆರೆ ಬಿಳಿಲುಗಳಿಂದ ಶೋಭಿಸುತ್ತಿರುವುದೋ, ಹಣೆಗಣ್ಣು ಪ್ರಜ್ವಲಿಸಿ ಉರಿಯುತ್ತಲಿರುವುದೋ,ಶಿರದಲ್ಲಿ ಬಾಲಚಂದ್ರನು ಕುಳ್ಳಿಹನೋ,ಆ ಭಗವಾನ್ ಶಿವನಲ್ಲಿ ನನಗೆ ಸದಾ ಪ್ರೀತಿಯುಂಟಾಗಲಿ.

ಧರಾಧರೇಂದ್ರನಂದಿನೀವಿಲಾಸ ಬಂಧುಬಂಧುರ |
ಸ್ಫುರದ್ದಿಗಂತ ಸಂತತಿ ಪ್ರಮೋದಮಾನ ಮಾನಸೇ ||
ಕೃಪಾಕಟಾಕ್ಷ ಧೋರಣೀ ನಿರುದ್ದ ದುರ್ಧರಾಪದಿ |
ಕ್ವಚಿಚ್ಚಿದಂಬರೇ ಮನೋ ವಿನೋದಮೇತು ವಸ್ತುನಿ  ||೨||

ಭಾವಾರ್ಥ:-ಪರ್ವತರಾಜನ ತನಯೆಯಾದ ಪಾರ್ವತಿಯು ವಿಲಾಸ ಸಮಯದಲ್ಲಿ ಉಪಯೋಗಿಸುವ ಶಿರೋಮಣಿಗಳಿಂದ ದಿಕ್ಕುಗಳೆಲ್ಲವೂ ಬೆಳಗುತ್ತಿರುವುದನ್ನು ವೀಕ್ಷಿಸಿ ಯಾವಾತನ ಮನಸ್ಸು ಆನಂದ ಭರಿತವಾಗಿರುವುದೋ, ಯಾರ ಎಡೆಬಿಡದ ಕೃಪಾಕಟಾಕ್ಷದಿಂದ ಕಠಿಣ ಆಪತ್ತುಗಳೂ ಪರಿಹಾರಗೊಳ್ಳುವವೋ, ಆ ತೆರನಾದ ಶಿವ ತತ್ವದಲ್ಲಿ ನನ್ನ ಮನವು ಉತ್ಸಾಹಗೊಳ್ಳಲಿ.

ಜಟಾ ಭುಜಂಗ ಪಿಂಗಲ ಸ್ಫುರತ್ ಫಣಾಮಣಿಪ್ರಭಾ- |
ಕದಂಬ ಕುಂಕುಮದ್ರವ ಪ್ರಲಿಪ್ತ ದಿಗ್ ವಧೂಮುಖೇ ||
ಮದಾಂಧ ಸಿಂಧುರ ಸ್ಫುರತ್ ತ್ವಗುತ್ತರೀಯ ಮೇಧುರೇ |
ಮನೋವಿನೋದಮದ್ಭುತಂ ಬಿಭರ್ತು ಭೂತಭರ್ತರಿ ||೩||

ಭಾವಾರ್ಥ:-ಯಾವಾತನ ಜಡೆಯಲ್ಲಿ ಉರಗದ ಹೆಡೆಯಲ್ಲಿರುವ ನಾಗಮಣಿಯಿಂದ ಹರಡಿರುವ ಹಳದಿ ವರ್ಣದ ಪ್ರಭಾಪುಂಜವು ದಿಕ್ಕುಗಳೆನ್ನುವ ಸ್ತ್ರೀಯರ ಮೊಗದಮೇಲೆ ಕುಂಕುಮ ಬಣ್ಣದ ಲೇಪನವನ್ನುಂಟುಮಾಡುವುದೋ,ಅಲೆದಾಡುವ ಮದಿಸಿದಾನೆಯ ಚರ್ಮದ ವಸನವನ್ನು ಹೊದ್ದುಕೊಳ್ಳುವ ಮೂಲಕ ನುಣುಪಾದವರ್ಣದವನಾಗಿ ಕಾಣುವ ಆ ಭೂತನಾಥನಲ್ಲಿ ನನ್ನ ಮನವು ಆಶ್ಚರ್ಯವಾದ ರೀತಿಯಲ್ಲಿ ಉಲ್ಲಸಿತಗೊಳ್ಳಲಿ.

ಸಹಸ್ರಲೋಚನ ಪ್ರಭೃತ್ಯಶೇಷ ಲೇಖ ಶೇಖರ |
ಪ್ರಸೂನಧೂಲಿ ಧೋರಣೀ ವಿಧೂಸರಾಂಘ್ರಿ ಪೀಠಭೂ: ||
ಭುಜಂಗರಾಜ ಮಾಲಯಾ ನಿಬದ್ಧ ಜಾಟಜೂಟಕ: |
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧು ಶೇಖರ: ||೪||

ಭಾವಾರ್ಥ:-ಸಾವಿರ ಕಣ್ಣುಗಳುಳ್ಳ ಇಂದ್ರಾದಿ ದೇವತೆಯರ್ಕಳು ತಲೆಯಲ್ಲಿ ಮುಡಿದ ಹೂಗಳ ಪರಾಗರೇಣುಗಳಿಂದ ಯಾವಾತನ ಚರಣಪೀಠವು ತುಂಬಿದ್ದವೋ,ಯಾವಾತನ ಜಟಾಸಮೂಹದಲ್ಲಿ ಹಾರದೋಪಾದಿಯಲ್ಲಿ ಮೆರೆವ ನಾಗರಾಜನಿರುವನೋ,ಯಾವಾತನು ಚಕೋರಪಕ್ಷಿಗಳ ಆಪ್ತೇಷ್ಟನಂತಿರುವ ಚಂದ್ರನನ್ನು ತಲೆಯಲ್ಲಿ ಧರಿಸಿರುವನೋ ಅಂತಹಾ ಭಗವಾನ್ ಶಿವನು ಚಿರಕಾಲ ನನ್ನ ಸಂಪತ್ತಿಗೆ ಸಾಧಕನಾಗಿರಲಿ.

ಲಲಾಟ ಚತ್ವರ ಜ್ವಲದ್ಧನಂಜಯ ಸ್ಫುಲಿಂಗಭಾ- |
ನಿಪೀತ ಪಂಚಸಾಯಕಂ ನಮನ್ನಿಲಿಂಪ ನಾಯಕಮ್ ||
ಸುಧಾ ಮಯೂಖ ಲೇಖಯಾ ವಿರಾಜಮಾನ ಶೇಖರಂ 
ಮಹಾಕಪಾಲಿ ಸಂಪದೇ ಶಿರೋ ಜಟಾಲಮಸ್ತು ನ:  ||೫||

ಭಾವಾರ್ಥ:-ಯಾವಾತನ ಹಣೆಯ ಜಗಲಿಯಲ್ಲಿ ಪ್ರಜ್ವಲಿಸುತ್ತಲಿರುವ ಅಗ್ನಿಯ ಕಿಡಿಗಳ ಪ್ರಭೆಯಿಂದ ಕಾಮದೇವನು ಸೋಲನ್ನು ಅನುಭವಿಸಿದನೋ,ಇಂದ್ರಾದಿ ದೇವರ್ಕಳು ಯಾವಾತನಿಗೆ ನಮಸ್ಕರಿಸುವರೋ,ಅಮೃತಶಲಾಕೆಗಳನ್ನು ಬೀರುವ ಚಂದ್ರಕಲಾಶೋಭಿತವಾದ ಮುಕುಟಧಾರಿ, ಆ ಮಹಾಕಪಾಲಿಯ ಶಿರದ ಮೇಲಿರುವ ಜಟೆಯು ನಮಗೆ ಸಂಪದವನ್ನು ಕರುಣಿಸಲಿ.

ಕರಾಲಭಾಲ ಪಟ್ಟಿಕಾ ಧಗದ್ಧಗದ್ಧಗಜ್ಜ್ವಲದ್ |
ಧನಂಜಯಾಧರೀಕೃತ ಪ್ರಚಂಡ ಪಂಚಸಾಯಕೇ ||
ಧರಾಧರೇಂದ್ರ ನಂದಿನೀ ಕುಚಾಗ್ರ ಚಿತ್ರಪತ್ರಕ- |
ಪ್ರಕಲ್ಪನೈಕ ಶಿಲ್ಪಿನಿ ತ್ರಿಲೋಚನೇ ಮತಿರ್ಮಮ  ||೬||

ಭಾವಾರ್ಥ:-ಯಾರು ಭಯಾನಕವಾದ ತನ್ನ ಹಣೆಪಟ್ಟಿಯ ಮಧ್ಯದಲ್ಲಿ ಧಗಧಗನೆ ಪ್ರಜ್ವಲಿಸುತ್ತಾ ಉರಿಯುತ್ತಲಿರುವ ಅಗ್ನಿಯಿಂದ ಮನ್ಮಥನನ್ನು ದಹಿಸಿಹನೋ, ಬೆಟ್ಟಗಳೊಡೆಯನ ಕುವರಿಯಾದ ಗಿರಿಯ ಕುಚಗಳ ಮೇಲೆ ಯಾರು ವಿವಿಧಾಕಾರದ ಚಿತ್ರಗಳನ್ನು ರಚಿಸಿದ ಶಿಲ್ಪಿಯಾದನೋ,ಆ ಮುಕ್ಕಣ್ಣನಲ್ಲಿ ನನ್ನ ಜ್ಞಾನವು ನೆಲೆಗೊಳ್ಳಲಿ.

ನವೀನ ಮೇಘ ಮಂಡಲೀ ನಿರುದ್ಧ ದುರ್ಧರ ಸ್ಫುರತ್- |
ಕುಹೂ ನಿಶೀಥಿನೀ ತಮ: ಪ್ರಬಂಧಬಂಧು ಕಂದರ: ||
ನಿಲಿಂಪ ನಿರ್ಝರೀ ಧರಸ್ತನೋತು ಕೃತ್ತಿಸಿಂಧುರ: |
ಕಲಾ ನಿಧಾನ ಬಂಧುರ: ಶ್ರಿಯಂ ಜಗದ್ಧುರಂಧರ: ||೭||

ಭಾವಾರ್ಥ:-ಯಾವಾತನ ಕಂಠ ಪ್ರದೇಶವು, ಹೊಸ ಮೋಡಗಳ ಗುಂಪಿನಿಂದ ತುಂಬಿದ, ಅಮವಾಸ್ಯೆಯ ಕಗ್ಗತ್ತಲೆಯನ್ನು ಹೋಲುವ, ಕಪ್ಪು ವರ್ಣದಿಂದ ಕೂಡಿದೆಯೋ,ಯಾರು ಪುಣ್ಯವಾಹಿನಿಯಾದ ಗಂಗೆಯನ್ನು ಧರಿಸಿಹನೋ,ಯಾರು ಗಜ ಚರ್ಮವನ್ನು ಹೊದೆದು ಕೊಂಡಿರುವನೋ,ಸಮಸ್ತ ಕಲಾನಿಧಿಯೂ ಸುಂದರನೂ ಆಗಿ ಲೋಕದ ಜವಾಬ್ದಾರಿಯನ್ನೂ ಹೊತ್ತವನಾದ ಆ ಭಗವಾನ್ ಶಿವನು ಸಂಪತ್ತನ್ನು ಕರುಣಿಸಲಿ. 

ಪ್ರಪುಲ್ಲ ನೀಲ ಪಂಕಜ ಪ್ರಪಂಚ ಕಾಲಿಮಚ್ಛಟಾ- |
ವಿಡಂಬಿ ಕಂಠ ಕಂದರಾರುಚಿ ಪ್ರಬಂಧ ಕಂದರಮ್ ||
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ |
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಬಜೇ ||೮||

ಭಾವಾರ್ಥ:-ಅರಳಿದ ನೀಲಿತಾವರೆಗಳ ರಾಶಿಯ ಕರಿವರ್ಣದಂತೆ ಹೋಲುವ, ಕತ್ತಿನ ಬಿಲದಿಂದ ಹೊರಟ ನೀಲ ಪ್ರಭೆಯಿಂದ ಕೂಡಿದ ಕುತ್ತಿಗೆಯನ್ನು ಯಾರು ಹೊಂದಿಹನೋ,ಯಾರು ಮನ್ಮಥನನ್ನು ನಿಗ್ರಹಿಸಿಹನೋ,ತ್ರಿಪುರರನ್ನು ಯಾರು ನಾಶಮಾಡಿದನೋ,ಯಾವಾತನಿಂದ ಸಂಸಾರಿಕಬಂಧನವು ಕಳಚಿಕೊಳ್ಳುವುದೋ,ಯಾರು ದಕ್ಷ ಯಜ್ಞನಾಶಕನೋ,ಅಂಧಕಾಸುರನನ್ನು ಯಾವಾತನು ನಾಶಗೊಳಿಸಿದನೋ,ಮಾರ್ಕಾಂಡೇಯನ ಯಮಪಾಷವನ್ನು ಕತ್ತರಿಸಿದಾತನೂ ಆಗಿರುವ ಆ ಮಹಾರುದ್ರನನ್ನು ನಾನು ಭಜಿಸುತ್ತೇನೆ. 

ಅಗರ್ವ ಸರ್ವಮಂಗಲಾ ಕಲಾ ಕದಂಬ ಮಂಜರೀ- |
ರಸಪ್ರವಾಹ ಮಾಧುರೀ ವಿಜೃಂಭಣಾ ಮಧುವ್ರತಮ್ ||
ಸ್ಮರಾಂತಕಂ ಪುರಾಂತಕಂ ಭವಾಂತಕಂ ಮಖಾಂತಕಂ |
ಗಜಾಂತಕಾಂಧಕಾಂತಕಂ ತಮಂತಕಾಂತಕಂ ಭಜೇ  ||೯||

ಭಾವಾರ್ಥ:-ಅಭಿಮಾನರಹಿತಳಾದ ಸರ್ವಮಂಗಳೆ ಪಾರ್ವತಿದೇವಿಯ ಕಲಾಸಮೂಹದಿಂದ ಹೊರಹೊಮ್ಮುತ್ತಿರುವ ಮಾಧುರ್ಯರಸಪ್ರವಾಹವನ್ನು ಮೆಲ್ಲುವ ದುಂಬಿಯಂತಿರುವ, ಮನ್ಮಥನನ್ನು ನಿಗ್ರಹಿಸಿದ,ತ್ರಿಪುರರನ್ನು ಅಂತ್ಯಗೊಳಿಸಿದ, ಸಂಸಾರಬಂಧನವನ್ನು ಕಳಚುವ,ದಕ್ಷಯಜ್ಞ ನಾಶಕನಾದ,ಗಜಾಸುರ ಹಾಗೂ ಅಂಧಕಾಸುರ ವಧಿಸಿದ, ಯಮನಿಗೇ ಯಮನಾಗಿರುವ ಆ ಮಹಾರುದ್ರನನ್ನು ನಾನು ಭಜಿಸುವೆ.

ಜಯತ್ವದಭ್ರ ವಿಭ್ರಮ ಭ್ರಮದ್ ಭುಜಂಗಮ ಸ್ಫುರದ್- |
ಧಗದ್ಧಗದ್ವಿನಿರ್ಗಮತ್ ಕರಾಲ ಭಾಲ ಹವ್ಯವಾಟ್ ||
ಧಿಮಿದ್ಧಿಮಿದ್ಧಿಮಿ ಧ್ವನನ್ ಮೃದಂಗ ತುಂಗ ಮಂಗಲ- |
ಧ್ವನಿಕ್ರಮ ಪ್ರವರ್ತಿತ ಪ್ರಚಂಡತಾಂಡವ: ಶಿವ:  ||೧೦||

ಭಾವಾರ್ಥ:-ಯಾವಾತನ ಶಿರದಮೇಲೆ ಬಹುರಭಸದಿಂದ ತೊನೆದಾಡುವ ಹಾವು ಶೋಭಿಸುತ್ತಿದೆಯೋ,ಯಾರ ಹಣೆಯು ಧಗಧಗನೆ ಪ್ರಜ್ವಲಿಸುವ ಅಗ್ನಿಜ್ವಾಲೆಯ ಕಣ್ಣನ್ನು ಹೊಂದಿರುವುದೋ,ಯಾವಾತನು ಧಿಮಿ ಧಿಮಿ ಧನಿ ಮಾಡುವ ಮೃದಂಗದ ಗಂಭೀರಮಂಗಲಘೋಷಕ್ಕನುಗುಣಾವಾಗಿ ಪ್ರಚಂಡವಾದ ತಾಂಡವನೃತ್ಯದಲ್ಲಿ ನಿರತನಾಗಿರುವನೋ ಆ ಶಿವನಿಗೆ ಜಯವಾಗಲಿ.

ವೃಷದ್ ವಿಚಿತ್ರ ತಲ್ಪಯೋರ್ಭುಜಂಗ ಮೌಕ್ತಿಕ ಸ್ರಜೋ- |
ರ್ಗರಿಷ್ಠ ರತ್ನಲೋಷ್ಠಯೋ: ಸುಹೃದ್ ವಿಪಕ್ಷ ಪಕ್ಷಯೋ : ||
ತೃಣಾರವಿಂದ ಚಕ್ಷುಷೋ: ಪ್ರಜಾಮಹೀಮಹೇಂದ್ರಯೋ: |
ಸಮಂ ಪ್ರವರ್ತಯನ್ಮನ: ಸದಾ ಸದಾಶಿವಂ ಭಜೇ  ||೧೧||

ಭಾವಾರ್ಥ:-ಕಲ್ಲಿನ ಮಂಚ ಹಾಗೂ ಮೆದುವಾಗಿರುವ ಹಾಸುಗೆಗಳನ್ನು ಮತ್ತು ಹಾವು ಹಾಗೂ ಮುತ್ತಿನಹಾರಗಳನ್ನು, ಹಾಗೆಯೇ ಬಹುಮೌಲ್ಯದ ರತ್ನ, ಮಣ್ಣಿನ ಹೆಂಟೆಗಳನ್ನು, ಮಿತ್ರ ಹಾಗೂ ಶತ್ರುಗಳನ್ನು, ಹುಲ್ಲು ಮತ್ತು ಕಮಲನಯನೆ, ಪ್ರಜೆ ಮತ್ತು ಭೂಪತಿಗಳನ್ನು ಸಮಾನಭಾವದಿಂದ ಕಾಣುತ್ತಾ ಅನುಕ್ಷಣವೂ ಸಮಚಿತ್ತತೆಯಿಂದ ಕೂಡಿ ಆ ಸದಾಶಿವನನ್ನು ನಾನು ಭಜಿಸುವೆ.

ಕದಾ ನಿಲಿಂಪ ನಿರ್ಝರೀ ನಿಕುಂಜಕೋಟರೇ ವಸನ್ |
ವಿಮುಕ್ತದುರ್ಮತಿ: ಸದಾ ಶಿರಸ್ಥಮಂಜಲಿಂ ವಹನ್ ||
ವಿಮುಕ್ತಲೋಲ ಲೋಚನಾ ಲಲಾಮ ಭಾಲ ಲಗ್ನಕ: |
ಶಿವೇತಿ ಮಂತ್ರಮುಚ್ಛರನ್ ಕದಾ ಸುಖೀ ಭವಾಮ್ಯಹಮ್ ||೧೨||

ಭಾವಾರ್ಥ:-ಎಂದು ದೇವನದಿಯಾಗಿರುವ ಗಂಗೆಯ ತಟದ ಲತಾಮಟಪದೊಳಗೆ ನೆಲೆಯಾಗಿ ದುರ್ಗುಣರಹಿತನಾಗಿ, ಶಿರದ ಮೇಲಿಂದ ಯಾವಾಗಲೂ ಕೈಯೆತ್ತಿ ಮುಗಿಯುತ್ತಾ,ನಯನಗಳಲ್ಲಿ ಅಸ್ಥಿರತೆಯನ್ನು ಕಳೆದು,ಶಿವನ ಮನೋಹರವಾದ ಹಣೆಯ ಮೇಲೆ ನೇರ ದೃಷ್ಟಿಯುಳ್ಳವನಾಗಿ ಶಿವಮಂತ್ರವನ್ನು ಉಚ್ಛರಿಸುತ್ತಾ ನಾನು ಸುಖಿಯಾಗಬಹುದು?

ಇಮಂ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ |
ಪಠಣ್ ಸ್ಮರನ್ ಬ್ರುವನ್ನರೋ ವಿಶುದ್ಧಿಮೇತಿ ಸಂತತಮ್ ||
ಹರೇ ಗುರೌ ಸ ಭಕ್ತಿಮಾಶು ಯಾತಿ ನಾನ್ಯಥಾ ಗತಿಂ |
ವಿಮೋಹನಂ ಹಿ ದೇಹಿನಾಂ ತು ಶಂಕರಸ್ಯ ಚಿಂತನಮ್ ||೧೩||

ಭಾವಾರ್ಥ:-ಯಾವಾತನು ಈ ತೆರನಾಗಿ ಹೇಳಲ್ಪಟ್ಟಿರುವ ಉತ್ತಮೋತ್ತಮವಾದ ಈ ಸ್ತುತಿಯನ್ನು ಅನುದಿನವೂ ಪಾರಾಯಣ ಮಾಡುತ್ತಾ ,ಸ್ಮರಿಸುತ್ತಾ,ಹಾಗೆಯೇ ಬಣ್ಣಿಸುತ್ತಾ ಇರುವನೋ, ಅಂತಹವನು ಪವಿತ್ರನಾಗುವನು.ಅಲ್ಲದೆ ಅತಿ ಶೀಘ್ರವಾಗಿ ಶ್ರೀ ಶಂಕರನಲ್ಲಿ ಶ್ರೇಷ್ಠವಾದ ಭಕ್ತಿಯನ್ನು ಹೊಂದುವನು.ಇದಕ್ಕೆ ವಿಮುಖವಾದ ಗತಿಯನ್ನೆಂದೂ ಆತನು ಹೊಂದಲಾರನು.ಏಕೆಂದರೆ ಶಂಕರನ ಚಿಂತನೆಯೇ ಜೀವಿಗಳಿಗೆ ಮೋಹ ನಿವಾರಕವಾಗಿದೆ.

ಪೂಜಾವಸಾನ ಸಮಯೇ ದಶವಕ್ತ್ರ ಗೀತಂ |
ಯ: ಶಂಭುಪೂಜನಮಿದಂ ಪಠತಿ ಪ್ರದೋಷೋ ||
ತಸ್ಯ ಸ್ಥಿರಾಂ ರಥ ಗಜೇಂದ್ರ ತುರಂಗ ಯುಕ್ತಾಂ |
ಲಕ್ಷ್ಮೀಂ ಸದೈವ ಸುಮುಖೀಂ ಪ್ರದದಾತಿ ಶಂಭು:  ||೧೪||

ಭಾವಾರ್ಥ:- ದಶಕಂಠ ರಾವಣನು ರಚಿಸಿ ಸ್ತುತಿಸಿದ ಈ ಶಿವಾರಾಧನ ಸ್ತೋತ್ರವನ್ನು ಸಾಯಂಸಂಧ್ಯಾ ಸಮಯದ ಆರಾಧನೆಯ ಕೊನೆಯಲ್ಲಿ ಯಾವಾತನು ಪಠಿಸುವನೋ ಅಂತಹವನಿಗೆ ಆನೆ,ಕುದುರೆ,ರಥವಾಹನಾದಿಗಳಿಂದ ಕೂಡಿದ ಮತ್ತು ಸರ್ವದಾ ಸ್ಥಿರವಾದ ಅನುಕೂಲಕರ ಸಂಪದವನ್ನು ಆ ಮಹಾರುದ್ರನು ಕರುಣಿಸುವನು.
+++++++++++++++++++++++++++++++++++++++++++++++++++++++++++++++++++++++++++++++++++++                   || ಇತಿ ರಾವಣ ಕೃತ ಶಿವತಾಂಡವ ಸ್ತೋತ್ರಮ್ || 
     || ಈ ತೆರನಾಗಿ ರಾವಣ ವಿರಚಿತ ಶಿವತಾಂಡವ ಸ್ತೋತ್ರದ ಭಾವಾರ್ಥವಾಗಿದೆ. ||
=====================================================================================

             -೧೦-
  || ಶ್ರ್ರೀ ಪಂಚಮುಖ ಧ್ಯಾನ ಶ್ಲೋಕಮ್ ||
 ********************************
ಪ್ರಾಲೇಯಾಚಲಮಿಂದುಕುಂದಧವಳಂ ಗೋಕ್ಷೀರಫೇನಪ್ರಭಂ |
ಭಸ್ಮಾಭ್ಯಂಗಮನಂಗದೇಹದಹನಜ್ವಾಲಾವಲೀಲೋಚನಮ್ ||
ವಿಷ್ಣು ಬ್ರಹ್ಮ ಮರುದ್ಗಣಾರ್ಚಿತಪದಂ ಋಗ್ವೇದ ನಾದೋದಯಂ |
ವಂದೇ??ಹಂ ಸಕಲಂ ಕಲಂಕರಹಿತಂ ಸ್ಥಾಣೋರ್ಮುಖಂ ಪಶ್ಚಿಮಮ್  ||೧||

|| ಶ್ರೀ ಸದ್ಯೋಜಾತ ಸ್ವರೂಪೀ ಭಗವಾನ್ ಶ್ರೀ  ಪಂಚಲಿಂಗೇಶ್ವರಾಯ ನಮ: ||

ಭಾವಾರ್ಥ:-ಈಶನ ಪಶ್ಚಿಮ ಭಾಗದ ಮುಖವು ಹಿಮವತ್ಪರ್ವತದಂತೆ  ನಿರ್ಮಲವಾಗಿದೆ.ಅದು ಚಂದ್ರ ಹಾಗೂ ಮಲ್ಲಿಗೆಯಂತೆ ಶುಭ್ರ  ವರ್ಣವನ್ನು ತಾಳಿದೆ.ಗೋವಿನ ಹಾಲಿನ ನೊರೆಯಂತೆ  ಶೋಭೆಯುಳ್ಳದ್ದಾಗಿದೆ.ಭಸ್ಮದಿಂದ  ಲೇಪಿಸಲ್ಪಟ್ಟಿದೆ.ಮನ್ಮಥನನ್ನು ದಹಿಸಿದ ಅವನ ಆ ನೇತ್ರಗಳು  ಪ್ರಕಾಶಮಾನವಾಗಿ ಬೆಳಗುತ್ತಲಿವೆ.ಆ ಮೊಗವನ್ನು  ಬ್ರಹ್ಮ,ವಿಷ್ಣು,ಹಾಗೂ ಮರುತ್ ಆದಿ ದೇವತೆಗಳು ಭಕ್ತಿಯಿಂದ  ಆರಾಧಿಸುತ್ತಿದ್ದಾರೆ.ಆ ಮೊಗದಿಂದ ಋಗ್ವೇದನಾದವು  ಹೊರಹೊಮ್ಮುತ್ತಲಿದೆ.ಈ ರೀತಿಯ ಕಳಂಕರಹಿತವಾಗಿರುವ  ,ಕಲಾಪೂರ್ಣವಾಗಿರುವ,ಆ ಪರಶಿವನ ಪಶ್ಚಿಮಮುಖವನ್ನು ನಾನು  ವಂದಿಸುವೆನು.

 || ಶ್ರೀ ಸದ್ಯೋಜಾತ ಸ್ವರೂಪನಾದ ಭಗವಾನ್ ಶ್ರೀ  ಪಂಚಲಿಂಗೇಶ್ವರ ಸ್ವಾಮಿಗೆ ನಮನಗಳು ||

ಗೌರಂ ಕುಂಕುಮಪಂಕಿಲಂ ಸುತಿಲಕಂ ವ್ಯಾಪಾಂಡುಗಂಡಸ್ಥಲಂ |
ಭ್ರೂವಿಕ್ಷೇಪಕಟಾಕ್ಷವೀಕ್ಷಣಲಸತ್ಸಂಸ್ರಸ್ತಕರ್ಣೋತ್ಫಲಮ್ ||
ಸ್ನಿಗ್ದಂ ಬಿಂಬ ಫಲಾಧರಂ ಪ್ರಹಸಿತಂ ನೀಲಾಲಕಾಲಂಕೃತಂ |
ವಂದೇ ಯಾಜುಷವೇದನಾದಜನಕಂ ವಕ್ತ್ರಮ್ ಹರಸ್ಯೋತ್ತರಮ್ ||೨||

|| ಶ್ರೀ ವಾಮದೇವ ಸ್ವರೂಪೀ ಭಗವಾನ್ ಶ್ರೀ ಪಂಚಲಿಂಗೇಶ್ವರಾಯ  ನಮ: || 

ಭಾವಾರ್ಥ:-ಪಂಚಮುಖಿಯಾಗಿರುವ ಪರಮೇಶ್ವರನ ಉತ್ತರ ದಿಗ್ಭಾಗದ  ಮೊಗವು ಬಿಳಿ ವರ್ಣದಿಂದ ಕೂಡಿದೆ.ಕುಂಕುಮ ಕೇಸರಿ  ಹಚ್ಚಲ್ಪಟ್ಟಿದೆ. ತಿಲಕವು ಹಣೆಯಲ್ಲಿ  ಕಂಗೊಳಿಸುತ್ತಲಿದೆ.ಕೆನ್ನೆಗಳು ಶುಭ್ರವಾಗಿದೆ.ಹುಬ್ಬು  ಹಾರುವಿಕೆಯಿಂದ ಕೂಡಿದ ನೋಟವು ಮನೋಹರವಾಗಿದೆ.ಕಿವಿಯ  ಮೇಲಿನ ಕನ್ನೈದಿಲೆಯು ಸ್ವಲ್ಪ ಮಟ್ಟಿಗೆ ಕೆಳಕ್ಕೆ  ಜಾರಿದೆ.ಮೊಗದಲ್ಲಿ ಸ್ನೇಹದ ಕಳೆಯು ಉಕ್ಕುತ್ತಿದೆ.ತೊಂಡೆಯ  ಹಣ್ಣಿನಂತೆ ಆತನ ತುಟಿಗಳು ಕೆಂಪಾಗಿವೆ.ಮುಗುಳ್ನಗೆಯೂ ನೀಲಿಯ  ಮುಂಗುರುಳೂ  ಆತನ ಮೊಗವನ್ನು ಹೆಚ್ಚು ಬೆಳಗುವಂತೆ ಮಾಡುತ್ತಿವೆ.  ಆತನ ಆ ಮುಖದಿಂದ ಯಜುರ್ವೇದದನಾದವು ಹೊಮ್ಮುತ್ತಲಿದೆ. ಈ  ರೀತಿಯ ಪರಶಿವನ ಉತ್ತರ ಮೊಗಕ್ಕೆ ನಾನು ನಮಸ್ಕರಿಸುವೆನು.

|| ಶ್ರೀ ವಾಮದೇವ ಸ್ವರೂಪನಾದ ಭಗವಾನ್ ಶ್ರೀ ಪಂಚಲಿಂಗೇಶ್ವರ  ಸ್ವಾಮಿಗೆ ನಮನಗಳು ||

ಬಾಲಾರ್ಕಾಗ್ನಿ ತಟಿತ್ಪ್ರದೀಪ್ತಕನಕಪ್ರಸ್ಪರ್ಧಿತೇಜೋರುಣಂ |
ಗಂಭೀರಧ್ವನಿಸಾಮವೇದಜನಕಂ ತಾಮ್ರಾಧರಂ ಸುಂದರಮ್ ||
ಅರ್ಧೇಂದುದ್ಯುತಿಲೋಲಪಿಂಗಲಜಟಾಭಾರಪ್ರಬದ್ದೋರಗಂ |
ವಂದೇ ಸಿದ್ಧಸುರಾಸುರೇಂದ್ರನಮಿತಂ ಪೂರ್ವಂ ಮುಖಂ ಶೂಲಿನ: ||೩||

|| ಶ್ರೀ ತತ್ಪುರುಷ ಸ್ವರೂಪೀ ಭಗವಾನ್ ಶ್ರೀ ಪಂಚಲಿಂಗೇಶ್ವರಾಯ  ನಮ: ||

ಭಾವಾರ್ಥ:-ಆ ಪರಶಿವನ ಪೂರ್ವ ದಿಗ್ಭಾಗದ ಮೊಗವು ಉದಯಿಸುವ  ರವಿಯಂತೆ,ಅಗ್ನಿಯಂತೆ, ಮಿಂಚಿನಂತೆ  ಪ್ರಕಾಶಿಸುತ್ತಲಿದೆ.ಬಂಗಾರವನ್ನು ಹೋಲುವ ಹೊಂಬಣ್ಣದಿಂದ  ಕೂಡಿದೆ. ಮನೋಹರವಾದ ಕೆಂದುಟಿಯನ್ನು ಹೊಂದಿ ಸಾಮವೇದದ  ಉಗಮಸ್ಥಾನವಾಗಿದೆ.ಕಂದುಗೆಂಪಿನ ಜಡೆಮುರಿಯಲ್ಲಿ ಅರ್ಧ ಚಂದ್ರನ  ಕಾಂತಿ ಅಂಟಿಕೊಂಡಿದೆ.ಅಲ್ಲಿ ಸರ್ಪವೊಂದನ್ನು  ಬಂಧಿಸಲಾಗಿದೆ.ಸಿದ್ಧ ಸಾಧ್ಯರೂ,ದೇವದಾನವರುಗಳೂ  ವಂದಿಸುತ್ತಿರುವ ಆ ಪರಶಿವನ  ಪೂರ್ವ ಮುಖಕ್ಕೆ ನಾನು  ನಮಸ್ಕರಿಸುವೆನು.

 || ಶ್ರೀ ತತ್ಪುರುಷ ಸ್ವರೂಪನಾದ ಭಗವಾನ್ ಶ್ರೀ  ಪಂಚಲಿಂಗೇಶ್ವರನಿಗೆ ನಮನಗಳು ||

ಕಾಲಾಭ್ರ ಭ್ರಮರಾಂಜನದ್ಯುತಿನಿಭಂ ವ್ಯಾವೃತ್ತಪಿಂಗೇಕ್ಷಣಂ |
ಕರ್ಣೋದ್ಬಾಸಿತಭೋಗಿಮಸ್ತಕಮಣಿಪ್ರೋದ್ಭಿನ್ನ  ದಂಷ್ಟ್ರಾಂಕುರಮ್ ||
ಸರ್ಪಪ್ರೋತಕಪಾಲಶುಕ್ತಿಶಕಲಂ ವ್ಯಾಕೀರ್ಣಮಾಶೇಖರಂ |
ವಂದೇ ದಕ್ಷಿಣಮೀಶ್ವರಸ್ಯ ವದನಂ ಚಾಥರ್ವನಾದೋದಯಂಮ್ ||೪||

 || ಶ್ರೀ ಅಘೋರ ಸ್ವರೂಪೀ ಭಗವಾನ್ ಶ್ರೀ ಪಂಚಲಿಂಗೇಶ್ವರಾಯ  ನಮ: ||

ಭಾವಾರ್ಥ:-ಪರಶಿವನ ದಕ್ಷಿಣ ದಿಗ್ಭಾಗದ ಮೊಗವು  ಕಾರ್ಮುಗಿಲಿನಂತೆಯೂ,ಗುಂಗೀಹುಳದಂತೆಯೂ,ಕಾಡಿಗೆಯಂತೆಯೂ ಕಪ್ಪು  ವರ್ಣವನ್ನು ತಾಳಿದೆ.ಕಂದುಗೆಂಪಿನ ಕಣ್ಣುಗಳಿವೆ.ಕಿವಿಯಲ್ಲಿ  ಧರಿಸಿರುವ ನಾಗಾಭರಣಗಳ ಪ್ರಕಾಶದಲ್ಲಿ ಕೋರೆದಾಡೆಗಳು  ಬೆಳಗುತ್ತಲಿವೆ.ಕಿರೀಟದತನಕ ಹರಡಿಕೊಂಡಿರುವ ಸರ್ಪಗಳೂ,ಕಪಾಲವೂ  ಕಂಗೊಳಿಸುತ್ತಿವೆ.ಅಥರ್ವಣ ವೇದನಾದದ ಉದಯಕ್ಕೆ ಕಾರಣನಾದ ಆ  ಪರಶಿವನ  ಪೂರ್ವ ಮುಖಕ್ಕೆ ನಾನು ನಮಸ್ಕರಿಸುವೆನು.

 || ಶ್ರೀ ಅಘೋರ ಸ್ವರೂಪನಾದ ಭಗವಾನ್ ಶ್ರೀ  ಪಂಚಲಿಂಗೇಶ್ವರನಿಗೆ ನಮನಗಳು ||

ವ್ಯಕ್ತಾವ್ಯಕ್ತನಿರೂಪಿತಂ ಚ ಪರಮಂ ಶುದ್ಧಾಂಶಸತ್ವಾಧಿಕಂ |
ತಸ್ಮಾದುತ್ತಮ ತತ್ವಮಕ್ಷರಮಿದಂ ಧ್ಯೇಯಂ ಸದಾಯೋಗಿಭಿ: ||
ಓಂಕಾರಾದಿಸಮಸ್ತಮಂತ್ರಜನಕಂ ಸೂಕ್ಷ್ಮಾತಿಸೂಕ್ಷಂ ಪರಂ |
ಧ್ಯಾಯೇತ್ಪಂಚಮಮೀಶ್ವರಸ್ಯ ವದನಂ ಖ ವ್ಯಾಪಿ  ತೇಜೋಮಯಮ್  ||೫||

 || ಶ್ರೀ ಈಶಾನ ಸ್ವರೂಪೀ ಭಗವಾನ್ ಶ್ರೀ ಪಂಚಲಿಂಗೇಶ್ವರಾಯ  ನಮ: ||

ಭಾವಾರ್ಥ:-ತೇಜೋಸ್ವರೂಪದವನಾದ ಐದನೆಯ ಮೊಗದಲ್ಲಿ  ವ್ಯಕ್ತ ಹಾಗೂ ಅವ್ಯಕ್ತ ರೂಪಗಳು ಗೋಚರವಾಗುತ್ತಿವೆ.ಇದು  ಸತ್ವಗುಣಾಂಶವುಳ್ಳದ್ದಾಗಿದೆ.ಹಾಗೆಯೇ ಉತ್ತಮ ತತ್ವಗಳನ್ನು  ಪ್ರತಿಪಾದಿಸುತ್ತಲಿದ್ದು ಅವಿನಾಶಿಯಾಗಿ ಅನವರತವೂ ಯೋಗಿಗಳ  ಧ್ಯಾನಕ್ಕೆ ಒಳಗಾಗುತ್ತಲಿದೆ.ಓಂಕಾರವೇ ಆದಿಯಾದ ಸಮಸ್ತ  ಮಂತ್ರಗಳ ಉಗಮ ಸ್ಥಾನವಿದಾಗಿದೆ.ಅತ್ಯಂತ ಸೂಕ್ಷ್ಮ  ರೂಪದಲ್ಲಿದ್ದು ಊರ್ಧ್ವಮುಖಿಯಾಗಿ ಆಕಾಶ  ವ್ಯಾಪಿಯಾಗಿದೆ.ಇಂತಹಾ ಪರಶಿವನ  ಈ ಐದನೆಯದಾದ ಊರ್ಧ್ವ  ಮುಖಕ್ಕೆ ನಾನು ನಮಸ್ಕರಿಸುವೆನು.
   ||  ಈಶಾನಸ್ವರೂಪೀ ಭಗವಾನ್ ಶ್ರೀ ಪಂಚಲಿಂಗೇಶ್ವರನಿಗೆ ನಮಿಸುವೆನು. ||
*********************************************************************
               || ಇತಿ ಶ್ರೀ ಪಂಚಮುಖ ಧ್ಯಾನ ಸ್ಲೋಕಮ್ || 
     ||ಈ ರೀತಿಯಾಗಿ ಶ್ರೀ ಪಂಚಮುಖಖ ಧ್ಯಾನ ಶ್ಲೋಕಗಳ  ಭಾವಾರ್ಥವು ||
*********************************************************************
                        -೧೧-
    ||ಶ್ರೀ ಮೃತ್ಯುಂಜಯ ಮಾನಸಿಕ ಪೂಜಾ ಸ್ತೋತ್ರಮ್  ||
  *****************************************
ಕೈಲಾಸೇ ಕಮನೀಯರತ್ನ ಖಚಿತೇ ಕಲ್ಪದ್ರುಮೂಲೇ ಸ್ಥಿತಂ |
ಕರ್ಪೂರಸ್ಪಟಿಕೇಂದು ಸುಂದರತನುಂ ಕಾತ್ಯಾಯನೀ ಸೇವಿತಂ ||
ಗಂಗಾತುಂಗ ತರಂಗ ರಂಜಿತ ಜಟಾಧಾರಂ ಕೃಪಾಸಾಗರಂ |
ಕಂಠಾಲಂಕೃತಶೇಷಭೂಷಣಮಹಮ್ ಮೃತ್ಯುಂಜಯಂ ಭಾವಯೇ ||೧||

ಭಾವಾರ್ಥ:- ಮನೋಹರವಾಗಿ ಕಂಗೊಳಿಸುವ ರತ್ನಮಯವಾದ ಕಲ್ಪವೃಕ್ಷದಲ್ಲಿರುವ ಕರ್ಪೂರದ ಪಳಕಿನಂತೆ ಕೈಲಾಸದಲ್ಲಿ ಚೆಲುವಿನ ಕಾತ್ಯಾಯನಿ ದೇವಿಯಿಂದ ಸೇವೆಯನ್ನು ಕೈಗೊಳ್ಳುತ್ತಿರುವ,ಗಂಗಾ ಹಾಗೂ ತುಂಗಾ ನದಿಗಳ ಅಲೆಗಳಿಂದ ಕೂಡಿದ ಜಟೆಯಿಂದ ಭೂಷಿತನಾಗಿರುವ ಮತ್ತು ಕುತ್ತಿಗೆಯಲ್ಲಿ ಮಹಾಶೇಷನನ್ನು ಹಾರವನ್ನಾಗಿ ಧರಿಸಿ ಅಲಂಕರಿಸಿಕೊಂಡಿರುವ ದಯಾಸಾಗರನಾದ ಮೃತ್ಯುಂಜಯನನ್ನು ನಾನು ಭಜಿಸುತ್ತೇನೆ.

ಆಗತ್ಯ ಮೃಂತ್ಯುಂಜಯ ಚಂದ್ರಮೌಲೇ |
ವ್ಯಾಘ್ರಾಜಿನಾಲಂಕೃತ ಶೂಲಪಾಣೇ ||
ಸ್ವಭಕ್ತ ಸಂರಕ್ಷಣ ಕಾಮಧೇನೋ |
ಪ್ರಸೀದ ವಿಶ್ವೇಶ್ವರ ಪಾರ್ವತೀಶ ||೨||

ಭಾವಾರ್ಥ:-ಚಂದ್ರನನನ್ನು ಶಿರದಲ್ಲಿ ಧರಿಸಿರುವವನಾದ,ಹುಲಿಯ ಚರ್ಮದಿಂದ ಅಲಂಕರಿಸಿಕೊಂಡಿರುವ,ತ್ರಿಶೂಲವನ್ನು ಹಸ್ತದಲ್ಲಿ ಹಿಡಿದುಕೊಂಡು,ಭಕ್ತರನ್ನು ಸಂರಕ್ಷಿಸುವ ಕಾಮಧೇನುವಾಗಿರುವ,ವಿಶ್ವೇಶ್ವರನೇ,ಪಾರ್ವತೀ ಪತಿಯೇ ಪ್ರಸನ್ನನಾಗು.

ಭಾಸ್ವನ್ಮೌಕ್ತಿಕತೋರಣೇ ಮರಕತಸ್ತಂಭಾಯ ತಾಲಂಕೃತೇ |
ಸೌಧೇ ಧೂಪಸುವಾಸಿತೇ ಮಣಿಮಯೇ ಮಾಣಿಕ್ಯದೀಪಾಂಚಿತೇ ||
ಬ್ರಹ್ಮೇಂದ್ರಾಮರಯೋಗಿ ಪುಂಗವಗಣೈರ್ಯುಕ್ತೇ ಚ ಕಲ್ಪದ್ರುಮೈ: |
ಶ್ರೀ ಮೃಂತ್ಯುಂಜಯ ಸುಸ್ಥಿರೋ ಭವ ವಿಭೋ ಮಾಣಿಕ್ಯ ಸಿಂಹಾಸನೇ ||೩||

ಭಾವಾರ್ಥ:-ಮುತ್ತಿನ ಮಣಿಗಳ ತೋರಣಗಳಿಂದಲೂ,ವಜ್ರಗಳಿಂದಲೂ ಅಲಂಕರಿಸಲ್ಪಟ್ಟ ಕಂಬಗಳಿಂದ ಕೂಡಿದ,ಧೂಪದ ಸುವಾಸನೆಯ ಮಹಲಿನಲ್ಲಿ ಮಾಣಿಕ್ಯರತ್ನ ಖಚಿತವಾದ ದೀಪಗಳಿಂದ ಅಲಂಕರಿಸಲ್ಪಟ್ಟ, ಬ್ರಹ್ಮ,ಇಂದ್ರಾದಿ ಮುನಿಯೋಗಿಗಳಿಂದ ದೇವತೆಗಳ ಬೇಡಿಕೆಯನ್ನು ದಯಪಾಲಿಸುವ ಗಿಡವಾಗಿ  ಅಲಂಕರಿಸಲ್ಪಟ್ಟ ಮಹಲಿನಲ್ಲಿ,ಮಾಣಿಕ್ಯ ಸಿಂಹಾಸನದಲ್ಲಿ ಆ ಮೃತ್ಯುಂಜಯ ಸ್ವಾಮಿಯು  ರಾರಾಜಿಸುವನು. 

ಮಂದಾರ ಮಲ್ಲೀಕರವೀರಮಾಧವೀ |
ಪುನ್ನಾಗನೀಲೋತ್ಪಲ ಚಂಪಕಾನ್ವಿತೈ: ||
ಕರ್ಪೂರ ಪಾಟೀರ ಸುವಾಸಿತೈರ್ಜಲೈ |
ರಾಧತ್ಸ್ವ ಮೃತ್ಯುಂಜಯ ಪಾದ್ಯ ಮುತ್ತಮಮಂ ||೪||

ಭಾವಾರ್ಥ:- ಮಂದಾರ,ಮಲ್ಲಿಗೆ,ಕರವೀರ,ಇರವಂತಿಗೆ,ಸುರಹೊನ್ನೆ,ಕನ್ನೈದಿಲೆ,ಸಂಪಿಗೆಯೇ ಮೊದಲಾದ ಪುಷ್ಪಗಳಿಂದಲೂ,ಕರ್ಪೂರ ಗಂಧ,ಚಂದನಾದಿ ಪರಿಮಳಭರಿತ ಪನ್ನೀರಿನಿಂದಲೂ,ಆ ಮಹಾ ಸ್ವಾಮಿ ಮೃತ್ಯುಂಜಯನ ಅಗ್ರಗಣ್ಯ ಪಾದವು ಸದಾ ಆರಾಧಿಸಲ್ಪಡುವುದು.

ಸುಗಂಧ ಪುಷ್ಪ ಪ್ರಕರೈ: ಸುವಾಸಿತೈ |
ರ್ವಿಯನ್ನದೀ ಶೀತಲವಾರಿಭಿ: ಶುಭೈ: ||
ತ್ರಿಲೋಕನಾಥಾರ್ತಿಹರಾರ್ಘ್ಯಮಾದರಾ |
ದ್ಗೃಹಾಣ ಮೃತ್ಯುಂಜಯ ಸರ್ವ ವಂದಿತ ||೫||

ಭಾವಾರ್ಥ:-ಪರಿಮಳಭರಿತವಾದ ಪುಷ್ಪಗಳಿಂದಲೂ,ಸುವಾಸನಾಯುಕ್ತ ನದಿಗಳ ತಂಪಾದ ನೀರಿನಿಂದಲೂ,ನಿರ್ಮಲವಾಗಿರುವ ಮನದಿಂದ ನೀಡುವ ಅರ್ಘ್ಯವನ್ನು ಸ್ವೀಕರಿಸುವ ಮೂರು ಲೋಕಗಳೊಡೆಯನಾಗಿರುವ ಪಾಪನಾಶಕನಾಗಿರುವ ಆ ಮೃತ್ಯುಂಜಯನು ಸರ್ವ ವಂದಿತನಾಗಿರುವನು.

ಹಿಮಾಂಬುವಾಸಿತೈಸ್ತೋಯೈ: ಶೀತಲೈರತಿ ಪಾವನೈ: |
ಮೃತ್ಯುಂಜಯ ಮಹಾದೇವ ಶುದ್ಧಾಚಮನಮಾಚರ ||೬||

ಭಾವಾರ್ಥ:-ಹಿಮವತ್ಪರ್ವತದ ನೀರು ಅತಿ ಶೀತಲವಾಗಿಯೂ ಅತಿ ಪಾವನವಾಗಿಯೂ ಇದೆ.ಮಹಾದೇವ ಮೃತ್ಯುಂಜಯ ಸ್ವಾಮಿಯೇ; ಶುದ್ಧಾಚಮನವನ್ನು ಕೈಗೊಳ್ಳು.

ಗುಡದಧಿ ಸಹಿತಂ ಮಧು ಪ್ರಕೀರ್ಣಂ |
ಸುಘೃತ ಸಮನ್ವಿತ ಧೇನುಗ್ಧ ಯುಕ್ತಂ  ||
ಶುಭಕರ ಮಧುಪರ್ಕ ಮಾ ಹರ ತ್ವಂ |
ತ್ರಿನಯನ ಮೃತ್ಯುಹರ ತ್ರಿಲೋಕ ವಂದ್ಯ  ||೭||

ಭಾವಾರ್ಥ:-ಬೆಲ್ಲ,ಮೊಸರು,ಜೇನುತುಪ್ಪಗಳ ಮಿಶ್ರಣ ಮತ್ತು ಉತ್ತಮವಾದ ತುಪ್ಪ ಹಾಗೂ ಹಸುವಿನ ಪರಿಶುದ್ಧವಾದ ಹಾಲನ್ನು ಕೂಡಿಸಿದ ಮಧುಪರ್ಕವನ್ನು ತ್ರಿನಯನೇ,ಮೃತ್ಯುಹರನೇ,ತ್ರಿಲೋಕವಂದ್ಯನೇ,ಮೃತ್ಯುಂಜಯ ಸ್ವಾಮಿಯೇ ಸೇವಿಸುವವನಾಗು.

ಪಂಚಾಸ್ತ್ರ ಶಾಂತ ಪಂಚಾಸ್ಯ ಪಂಚಪಾತಕಸಂಹರ |
ಪಂಚಾಮೃತ ಸ್ನಾನಮಿದಂ ಕುರು ಮೃತ್ಯುಂಜಯ ಪ್ರಭೋ ||೮||

ಭಾವಾರ್ಥ:-ಐದು ಅಸ್ತ್ರಗಳನ್ನು ಹೊಂದಿ,ಶಾಂತನೂ ಐದು ಮುಖಗಳನ್ನು ಹೊಂದಿರುವವನೂ,ಪಂಚ ಮಹಾಪಾತಕಗಳನ್ನು ನಾಶ ಮಾಡುವವನೂ,ಆಗಿರುವ ಮೃತ್ಯುಂಜಯ ಸ್ವಾಮಿಯೇ ಪಂಚಾಮೃತ ಸ್ನಾನವನ್ನು ಕೈಗೊಳ್ಳು ದೊರೆಯೇ.

ಜಗತ್ರಯೀಖ್ಯಾತ ಸಮಸ್ತ ತೀರ್ಥ |
ಸಮಾಹೃತೈ: ಕಲ್ಮಷಹಾರಿಭಿಶ್ಚ ||
ಸ್ನಾನಂ ಸುತೋಯೈ: ಸಮುದಾಚರ ತ್ವಂ |
ಮೃತ್ಯುಂಜಯಾನಂತ ಗುಣಾಭಿರಾಮ  ||೯||

ಭಾವಾರ್ಥ:-ಸಮಸ್ತ ಲೋಕಗಳಲ್ಲಿಯೂ ಪ್ರಖ್ಯಾತನಾಗಿರುವ,ಅನಂತಾನಂತ ಕಲ್ಯಾಣಗುಣ ಸಂಪನ್ನನಾಗಿರುವ,ಸ್ವಾಮಿ ಮೃತ್ಯುಂಜಯನೇ ಸಮಸ್ತ ತೀರ್ಥಗಳಿಂದ ಕೂಡಿರುವ ಕಲ್ಮಷಗಳನ್ನು ಹೋಗಲಾಡಿಸುವ ಪರಿಶುದ್ಧವಾಗಿರುವ ನೀರಿನಿಂದ ಸ್ನಾನವನ್ನು ಮಾಡುವವನಾಗು.

ಆನೀತೇನಾತಿ ಶುಭ್ರೇಣ ಕೌಶೇಯೇ ನಾಮರದ್ರುಮಾ |
ಮಾರ್ಜಯಾಮಿ ಜಟಾಭಾರಂ ಶಿವ ಮೃತ್ಯುಂಜಯ ಪ್ರಭೋ  ||೧೦||

ಭಾವಾರ್ಥ:-ಮೃತ್ಯುಂಜಯ ಮಹಾ ಸ್ವಾಮಿಯೇ! ನಿನ್ನ ಜಟೆಯನ್ನು ಮಡಿ ಮಾಡುವೆನು.ನಿನ್ನಲ್ಲಿ ಈ ಬಗೆಯಲ್ಲಿ ಶುಭ್ರವಾಗುವುದೇನೂ ಇಲ್ಲ ದೊರೆಯೇ.

ನಾನಾ ಹೇಮ ವಿಚಿತ್ರಾಣಿ ಚೀರ ಚೀನಾಂಬರಾಣಿ ಚ |
ವಿವಿಧಾನಿ ಚ ದಿವ್ಯಾನಿ ಮೃತ್ಯುಂಜಯ ಸುಧಾರಯ  ||೧೧||

ಭಾವಾರ್ಥ:-ಮಹಾದೇವ ಮೃತ್ಯುಂಜಯ ಸ್ವಾಮಿಯೇ,ನಾನಾ ತರದ ವಿಚಿತ್ರವಾದಂತಹಾ ಬಂಗಾರದ ಆಭರಣಗಳನ್ನೂ ವಿಧ ವಿಧವಾಗಿರುವ ಚರ್ಮದ ಮನೋಹರವಾದ ವಸನಗಳನ್ನು ಧರಿಸುವವನಾಗು.

ವಿಶುದ್ಧ ಮುಕ್ತಾ ಫಲಜಾಲರಮ್ಯಂ |
ಮನೋಹರಂ ಕಾಂಚನ ಹೇಮಸೂತ್ರಂ ||
ಯಜ್ಞೋಪವೀತಂ ಪರಮಂ ಪವಿತ್ರಂ |
ಮಾಧತ್ಸ್ವ ಮೃತ್ಯುಂಜಯ ಭಕ್ತಿಗಮ್ಯ ||೧೨||

ಭಾವಾರ್ಥ:-ಶುಭ್ರವಾಗಿರುವ ಮುತ್ತಿನ ಮಣಿಗಳಿಂದ ಶೃಂಗಾರಗೊಂಡು ರಮಣೀಯನಾಗಿರುವವನೂ ,ಮನೋಹರವಾದ ಚಿನ್ನದ ಎಳೆಗಳಿಂದ ತಯಾರಿಸಿಲಾದ ಪರಮ ಪವಿತ್ರವಾಗಿರುವ ಯಜ್ಞೋಪವೀತವನ್ನು ಧರಿಸಿರುವವನೂ ಆದ ಆ ಸ್ವಾಮಿ ಮೃತ್ಯುಂಜಯನಿಗೆ ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆನು.

ಶ್ರೀಗಂಧಂ ಘನಸಾರಕುಂಕುಮಯುತಂ ಕಸ್ತೂರಿಕಾಪೂರಿತಂ |
ಕಾಲೇಯೇನ ಹಿಮಾಂಬುನಾ ವಿರಚಿತಂ ಮಂದಾರಸಂವಾಸಿತಂ ||
ದಿವ್ಯಂ ದೇವಮನೋಹರಂ ಮಣಿಮಯೇ ಪಾತ್ರೇ ಸಮಾರೋಪಿತಂ |
ಸರ್ವಾಂಗೇಷು ವಿಲೇಪಯಾಮಿ ಸತತಂ ಮೃತ್ಯುಂಜಯ ಶ್ರೀ ವಿಭೋ ||೧೩||

ಭಾವಾರ್ಥ:-ಶ್ರೇಷ್ಠವಾದ ಶ್ರೀಗಂಧ, ಕರ್ಪೂರಯುಕ್ತ ಕುಂಕುಮ,ಕಸ್ತೂರಿಯನ್ನು ಸೇರಿಸಿದ ಕಾಡಿಗೆ ಹಾಗೂ ದಿವ್ಯವಾದ ಶೀತಲ ಗಂಗಾಜಲದಲ್ಲಿ ಪಾರಿಜಾತ ಪುಷ್ಪದ ಪರಿಮಳಯುಕ್ತ ಸುಗಂಧ ದ್ರವ್ಯಗಳನ್ನು ಸೇರಿಸಿ ಮನೋಹರವಾಗಿರುವ ಮಣಿಖಚಿತ ಪಾತ್ರೆಯಲ್ಲಿ ತುಂಬಿಸಿ ಆ ದೇವ ಮೃತ್ಯುಂಜಯ ಸ್ವಾಮಿಯ ಸರ್ವಾಂಗಗಳಿಗೆ ಲೇಪಿಸುವೆನು.

ಅಕ್ಷತೈರ್ಧವಲೈರ್ದಿವ್ಯೈ: ಸಮ್ಯಕ್ತಿಲಸಮನ್ವಿತೈ: |
ಮೃತ್ಯುಂಜಯ ಮಹಾದೇವ ಪೂಜಯಾಮಿ ವೃಷಧ್ವಜ ||೧೪||

ಭಾವಾರ್ಥ:-ಬಿಳುಪಾಗಿರುವ ಶ್ರೇಷ್ಠ ಅಕ್ಷತೆಯಿಂದಲೂ,ಎಳ್ಳಿನ ಕಾಳುಗಳಿಂದಲೂ ಲಕ್ಷ್ಯವಿಟ್ಟು ವೃಷಭ ದ್ವಜನಾಗಿರುವ ಆ ಮೃತ್ಯುಂಜಯ ಸ್ವರೂಪೀ ಮಹಾದೇವನನ್ನು ನಾನು ಪೂಜಿಸುತ್ತಿದ್ದೇನೆ.

ಚಂಪಕ ಪಂಕಜ ಕುರವಕ್ತ |
ಕುಂದೈ: ಕರವೀರಮಲ್ಲಿಕಾಕುಸುಮೈ: ||
ವಿಸ್ತಾರಯ ನಿಜಮಕುಟಂ |
ಮೃತ್ಯುಂಜಯ ಪುಂಡರೀಕನಯನಾಪ್ತ  ||೧೫||

ಭಾವಾರ್ಥ:-ಸಂಪಿಗೆ,ತಾವರೆ,ಮದರಂಗಿ,ದುಂಡುಮಲ್ಲಿಗೆ,ಕರವೀರ,ಜಾಜಿಮಲ್ಲಿಗೆಗಳ ಕುಸುಮಗಳಿಂದ ವಿಸ್ತರಿಸಿ ಸ್ವಾಭಾವಿಕ ಶಿರೋಭೂಷಣನಾಗಿ ಕಂಗೊಳಿಸುವ ಹಾಗೂ ತಾವರೆಯನ್ನು ಹೋಲುವ ನಯನಗಳನ್ನು ಹೊಂದಿರುವ ಆ ಮಹಾದೇವ ಮೃತ್ಯುಂಜಯ ಸ್ವಾಮಿಯನ್ನು ನಾನು ಪೂಜಿಸುತ್ತಿದ್ದೇನೆ.

ಮಾಣಿಕ್ಯ ಪಾದುಕಾದ್ವಂದೇ ಮೌನಿಹೃತ್ಪದ್ಮ ಮಂದಿರೇ |
ಪಾದೌ ಸತ್ಪದ್ಮ ಸದೃಶೌ ಮೃತ್ಯುಂಜಯ ನಿವೇಶಯ  ||೧೬||

ಭಾವಾರ್ಥ:-ಮುನಿಗಳ ಹೃತ್ಕಮಲ ಮಂದಿರದಲ್ಲಿವಾಸಿಸುತ್ತಿರುವ ಪ್ರಶಸ್ತವಾಗಿರುವ ಚರಣಾರವಿಂದಗಳಿಗೆ ಸಮಾನವಾಗಿರುವ ಆ ಮೃತ್ಯುಂಜಯ ಸ್ವಾಮಿಯ ಮಾಣಿಕ್ಯ ಪಾದಗಳಿಗೆ ನಾನು ನಮಸ್ಕರಿಸುವೆ.

ಮಾಣಿಕ್ಯ ಕೇಯೂರ ಕಿರೀಟ ಹಾರೈ: |
ಕಾಂಚೀ ಮಣಿಸ್ಥಾಪಿತ ಕುಂಡಲೈಶ್ಚ ||
ಮಂಜೀರ ಮುಖ್ಯಾಭರಣೈರ್ಮನೋಜ್ಞೈ |
ರಂಗಾನಿ ಮೃತ್ಯುಂಜಯ ಭೂಷಯಾಮಿ  ||೧೬||

ಭಾವಾರ್ಥ:-ಮಾಣಿಕ್ಯ ಹಾಗೂ ತೋಳ ಬಂದಿಗೆಯಿಂದ ಕೂಡಿದ ಕಿರೀಟ,ಒಡ್ಯಾಣ, ಹಾರಗಳು,ರತ್ನ ಮಣಿ ಕುಂಡಲಗಳು,ಕಾಲಲಂದುಗೆ ಮೊದಲಾದ ಆಭರಣಗಳನ್ನು ಸ್ವಾಮಿ ಮೃತ್ಯುಂಜಯನೇ ನಿನ್ನ ಅಂಗಾಂಗಗಳಿಗೆ ನಾನು ತೊಡಿಸುತ್ತಿದ್ದೇನೆ.

ಗಜವದನಸ್ಕಂದಧೃತೇ |
ನಾತಿ ಸ್ವಚ್ಛೇನ ಚಾಮರ ಯುಗೇನ ||
ಗಲದಲ ಕಾನನ ಪದ್ಮಂ |
ಮೃತ್ಯುಂಜಯ ಭಾವಯಾಮಿ ಹೃತ್ಪದ್ಮೇ ||೧೮||

ಭಾವಾರ್ಥ:-ಗಜಾನನ ಹಾಗೂ ಸುಬ್ರಹ್ಮಣ್ಯರು ನಿರ್ಮಲವಾಗಿರುವ ಚಾಮರಯುಗಳಗಳನ್ನು ಹಿಡಿದಿರುತ್ತಾರೆ.ಕಮಲವನ್ನು ಹೋಲುತ್ತಿರುವ ಮೊಗದಿಂದ ಕಂಗೊಳಿಸುವ ಆ ಸ್ವಾಮಿ ಮೃತ್ಯುಂಜಯನನ್ನು ನನ್ನ ಹೃದಯ ಕಮಲದಲ್ಲಿರಿಸಿ ಸ್ಮರಿಸುವೆನು.

ಮುಕ್ತಾತಪತ್ರಂ ಶಶಿ ಕೋಟಿ ಶುಭ್ರಂ |
ಶುಭಪ್ರದಂ ಕಾಂಚನದಂಡಯುಕ್ತಂ ||
ಮಾಣಿಕ್ಯ ಸಂಸ್ಥಾಪಿತ ಹೇಮಕುಂಭಂ |
ಸುರೇಶ ಮೃತ್ಯುಂಜಯ ತೇsರ್ಪಯಾಮಿ ||೧೯||

ಭಾವಾರ್ಥ:-ಮುತ್ತಿನಂತಹಾ ಕೋಟಿಚಂದ್ರರ ಪ್ರಭೆಯಂತೆ ಶುಭ್ರನಾಗಿ ಶುಭದಾಯಕನಾಗಿ ಸುವರ್ಣದಂಡವನ್ನು ಹಿಡಿದು,ಮಾಣಿಕ್ಯಖಚಿತ ಬಂಗಾರದ ಕಳಶದಲ್ಲಿ ಸಂಸ್ಥಾಪಿತನಾಗಿರುವ ದೇವತೆಗಳ ಒಡೆಯನಾದ ಆ ಸ್ವಾಮಿ ಮೃತ್ಯುಂಜಯನನ್ನು ನಾನು ಆರಾಧಿಸುತ್ತಿದ್ದೇನೆ.

ಮಣಿಮುಕುಟೇ ನಿಷ್ಪಟಲೇ |
ತ್ರಿಜಗದ್ಗಾಢಾಂಧಕಾರ ಸಪ್ತಾಶ್ವೇ ||
ಕಂದರ್ಪಕೋಟಿಸದೃಶಂ |
ಮೃತ್ಯುಂಜಯ ಪಶ್ಯ ವದನ ಮಾತ್ಮೀಯಂ ||೨೦||

ಭಾವಾರ್ಥ:-ಮೂರು ಲೋಕಗಳ ಗಾಢಾಂಧಕಾರವನ್ನು ನಿವಾರಿಸುವ ಸೂರ್ಯನಂತೆ,ಕೋಟಿ ಮನ್ಮಥರಿಗೆ ಸಮಾನವಾಗಿರುವ,ಮಣಿಖಚಿತ ಕಿರೀಟವನ್ನು ಧರಿಸಿರುವ ಸ್ವಾಮಿ ಮೃತ್ಯುಂಜನೇ ನನ್ನನ್ನು ನಿನಗೆ ಪ್ರಿಯರಾದವರನ್ನು ಕಾಣುವಂತೆ ನೋಡುವವನಾಗು.

ಕರ್ಪೂರ ಚೂರ್ಣಂ ಕಪಿಲಾಜ್ಯಪೂತಂ |
ದಾಸ್ಯಾಮಿ ಕಾಲೇಯಸಮನ್ವಿತೈಶ್ಚ ||
ಸಮುದ್ಭವಂ ಪಾವನ ಗಂಧಧೂಪಿತಂ |
ಮೃತ್ಯುಂಜಯಾಂಗಂ ಪರಿಕಲ್ಪಯಾಮಿ  ||೨೧||

ಭಾವಾರ್ಥ:-ಚಂದನದ ಹುಡಿ,ಕರ್ಪೂರ,ಪವಿತ್ರವಾದ ಕಪಿಲೆ ವರ್ಣದ ಹಸುವಿನ ಶ್ರೇಷ್ಠವಾದ ತುಪ್ಪ,ಹಾಗೂ ಕಾಡಿಗೆಯೊಂದಿಗೆ ಹುಟ್ಟಿಕೊಂಡಿರುವ ಪಾವನವಾಗಿರುವ ಗಂಧ ಧೂಪಾದಿಗಳನ್ನು ಲೇಪಿಸಿಕೊಂಡವನಾಗಿರುವ ಆ ಮೃತ್ಯುಂಜಯ ಸ್ವಾಮಿಯ ಅಂಗಾಂಗಗಳನ್ನು ಸ್ಮರಿಸುವೆನು.

ವರ್ತಿತ್ರಯೋಪೇತಮಖಂಡ ದೀಪ್ತ್ಯಾ |
ತಮೋಹರಂ ಬಾಮ್ಯಮಥಾಂತರಂಚ ||
ಸಾಜ್ಯಂ ಸಮಸ್ತಾಮರವರ್ಗಹೃದ್ಯಂ |
ಸುರೇಶ ಮೃತ್ಯುಂಜಯ ವಂಶದೀಪಂ  ||೨೨||

ತುಪ್ಪ ಸಹಿತವಾಗಿ ಮೂರು ಬತ್ತಿಗಳನ್ನು ಹೊಂದಿ ಅಖಂಡವಾಗಿ ಬೆಳಗುತ್ತಾ ಅಂತರಂಗ ಬಹಿರಂಗದಲ್ಲಿರುವ ಕತ್ತಲೆಯನ್ನು ಹೋಗಲಾಡಿಸುತ್ತಾ ಸಮಸ್ತ ಸುರಾಸುರರ ಹೃದಯದಲ್ಲಿ ನೆಲೆಯಾಗಿರುವ ದೇವಾದಿದೇವತೆಗಳ ಒಡೆಯನಾಗಿರುವ ಆ ಮೃತ್ಯುಂಜಯ ಸ್ವಾಮಿಗೆ ದೀಪವನ್ನು ಬೆಳಗಿಸುವೆ.

ರಾಜಾನ್ನಂ ಮಧುರಾನ್ವಿತಂ ಚ ಮೃದುಲಂ ಮಾಣಿಕ್ಯ ಪಾತ್ರೇ ಸ್ಥಿತಂ |
ಹಿಙ್ಗೂ ಜೀರಕಸನ್ಮರೀಚಿಮಿಲಿತೈ:ಶಾಕೈರನೇಕ: ಶುಭೈ: ||
ಶಾಕಂ ಸಮ್ಯಗ ಪೂಪಸೂಪಸಹಿತಂ ಸದ್ಯೋಘೃತೇನಾಪ್ಲುತಂ |
ಶ್ರೀ ಮೃತ್ಯುಂಜಯ ಪಾರ್ವತೀಪ್ರಿಯ ವಿಭೋ ಸಾಪೋಶನಂ ಭುಜ್ಯತಾಂ ||೨೩||

ಭಾವಾರ್ಥ:-ಮಾಣಿಕ್ಯಮಯ ಪಾತ್ರೆಯಲ್ಲಿ ಮೃದು ಮಧುರವಾದ ರುಚಿಕರವಾಗಿರುವ ರಾಜಾನ್ನದೊಡನೆ ಹಿಙ್ಗು,ಜೀರಿಗೆ,ಲವಂಗ,ಮೆಣಸು ಯುಕ್ತ ತರಕಾರಿಗಳಿಂದ ಮಾಡಿದ ಪದಾರ್ಥಗಳನ್ನು ತೊವ್ವೆ,ವಡೆ,ಪಾಯಸ ಸಹಿತವಾಗಿ ಕ್ಷಣದಲ್ಲೇ ತಯಾರಿಸಿದ ತುಪ್ಪದೊಡನೆ ಪಾರ್ವತೀ ದೇವಿಗೆ ಪ್ರಿಯನಾಗಿರುವ ಒಡೆಯ ಮೃತ್ಯುಂಜಯ ಸ್ವಾಮಿಯೇ ಸ್ವೀಕರಿಸು.

ಕೂಶ್ಮಾಂಡವಾರ್ತಾ ಕಪಟೋಲಿಕಾನಾಂ |
ಫಲಾನಿ ರಮ್ಯಾಣಿ ಚ ಕಾರವಲ್ಲ್ಯ ||
ಸುಪಾಕಯುಕ್ತಾನಿ ಸ ಸೌರಭಾಣಿ |
ಶ್ರೀಕಂಠ ಮೃತ್ಯುಂಜಯ ಭಕ್ಷಯೇಶ  ||೨೪||

ಭಾವಾರ್ಥ:-ಬದನೆ,ಹಾಗೂ ಕುಂಬಳಕಾಯಿಗಳಿಂದ ತಯಾರಿಸಲಾದ ಮತ್ತು ಉತ್ತಮವಾಗಿರುವ ಫಲವಸ್ತುಗಳಿಂದ ಕೂಡಿದ ಪರಿಮಳಯುಕ್ತ ಪಾಕಗಳನ್ನು ಈಶನೂ ಶ್ರೀಕಂಠನೂ ಆಗಿರುವ ಸ್ವಾಮಿ ಮೃತ್ಯುಂಜಯನೇ ಭಕ್ಷಿಸುವವನಾಗು.

ಶೀತಲಂ ಮಧುರಂ ಸ್ವಚ್ಚಂ ಪಾವನಂ ವಾಸಿತಂ ಲಘು |
ಮಧ್ಯೇ ಸ್ವೀಕುರು ಪಾನೀಯಂ ಶಿವ ಮೃತ್ಯುಂಜಯ ಪ್ರಭೋ ||೨೫||

ಭಾವಾರ್ಥ:-ಒಡೆಯನೇ,ಶೀತಲವಾಗಿರುವ,ಶುಭ್ರವಾದ,ಮಧುರವಾಗಿರುವ,ಪಾವನವಾದಂತಹಾ, ಹಗುರವೂ,ತೆಳುವಾಗಿಯೂ,ಪರಿಮಳಯುತವಾಗಿಯೂ ಇರುವಂತಹ ಪಾನೀಯವನ್ನು ಮೃತ್ಯುಂಜಯ ಸ್ವಾಮಿಯೇ ನಡು ನಡುವೆ ಸ್ವೀಕರಿಸು.

ಶರ್ಕರಾಮಿಲಿತಂ ಸ್ನಿಗ್ಧಂ ದುಗ್ಧಾನ್ನಂ ಗೋಘೃತಾನ್ವಿತಂ  |
ಕದಲೀ ಫಲ ಸಮ್ಮಿಶ್ರಂ ಭುಜ್ಯತಾಂ ಮೃತ್ಯುಸಂಹರ ||೨೬||

ಭಾವಾರ್ಥ:-ಬಾಳೆಹಣ್ಣು,ಸಕ್ಕರೆ,ಹಸುವಿನ ತುಪ್ಪಗಳೊಂದಿಗೆ ದಪ್ಪಗಿನ ಹಾಲನ್ನು ಮಿಶ್ರ ಮಾಡಿದ ಅನ್ನವನ್ನು ಮೃತ್ಯುನಾಶಕನಾಗಿರುವ ಸ್ವಾಮಿ ಮೃತ್ಯುಂಜಯನೇ ಭಕ್ಷಿಸುವವನಾಗು.

ಕೇವಲಮತಿ ಮಾಧುರ್ಯಂ |
ದುಗ್ದೈ: ಸ್ನಿಗ್ದೈಶ್ಚ ಶರ್ಕರಾಮಿಲಿತೈ :: ||
ಏಲಾ ಮರೀಚಿಮಿಲಿತಂ |
ಮೃತ್ಯುಂಜಯ ದೇವ ಭಕ್ಷ್ಯಂ ಪಾಯಸಂ ||೨೭||

ಭಾವಾರ್ಥ:-ಸಂಪೂರ್ಣ ಅತಿ ಮಧುರವಾಗಿರುವ ಸಕ್ಕರೆ ಮಿಶ್ರಿತ ದಪ್ಪಗಿನ ಹಾಲು,ಏಲಕ್ಕಿ,ಲವಂಗಗಳನ್ನು ಸೇರಿಸಿ ತಯಾರಿಸಿದ ಪರಮಾನ್ನವನ್ನು ದೇವ ಮೃತ್ಯುಂಜಯನೇ ಸ್ವೀಕರಿಸು ಪ್ರಭುವೇ.

ರಂಬಾ ಚೂತ ಕಪಿತ್ಥ ಫಲೈರ್ದ್ರಾಕ್ಷರಸಸ್ವಾದುಮ- |
ತ್ಖರ್ಜೂರೈರ್ಮಧುರೇಕ್ಷುಖಂಡಶಕಲೈ: ಸನ್ನಾರಿಕೇಲಾಂಬುಭಿ: ||
ಕರ್ಪೂರೇಣ ಸುವಾಸಿತೈರ್ಗುಡಜಲೈರ್ಮಾಧುರ್ಯಯುಕ್ತೈರ್ವಿಭೋ |
ಶ್ರೀಮೃತ್ಯುಂಜಯ ಪೂರಯ ತ್ರಿಭುವನಾಧಾರಂ ವಿಶಾಲೋದರಂ  ||೨೮||

ಭಾವಾರ್ಥ:-ಬಾಳೆಹಣ್ಣು,ಮಾವಿನಹಣ್ಣು,ಬೇಲದಫಲ,ಹಲಸಿನಹಣ್ಣು,ದ್ರಾಕ್ಷಿ,ಖರ್ಜೂರ ಹಾಗೂ ರುಚಿಕರವಾದ ಕಬ್ಬಿನರಸ,ಎಳನೀರು,ಕರ್ಪೂರದ ಪರಿಮಳವುಳ್ಳ ಬೆಲ್ಲದ ನೀರು ಪಾನಕವನ್ನು ತ್ರಿಲೋಕದ ಆಧಾರ ಸ್ತಂಭನಾದ,ವಿಶಾಲವಾದ ಉದರವನ್ನು ಹೊಂದಿರುವ ಸ್ವಾಮಿ ಶ್ರೀ ಮೃತ್ಯುಂಜಯನೇ ಸ್ವೀಕರಿಸುವವನಾಗು ದೊರೆಯೇ.

ಮನೋಜ್ಞರಂಭಾವನ ಖಂಡ ಖಂಡಿತಾ- |
ನ್ರುಚಿಪ್ರದಾನ್ಸರ್ಷಪಜೀರಿಕಾಂಶ್ಚ ||
ಸಸೌರಭಾನ್ಸೈಂಧವಸೇವಿತಾಂಶ್ಚ |
ಗೃಹಾಣಿ ಮೃತ್ಯುಂಜಯ ಲೋಕವಂದ್ಯ ||೨೯||

ಭಾವಾರ್ಥ:-ಮನೋಹರವಾಗಿರುವ ಬಾಳೆಯವನ,ಕಲ್ಲುಸಕ್ಕರೆ,ಪರಿಮಳಯುಕ್ತವಾಗಿರುವ ಪುಡಿ ಜೀರಿಗೆ ಹಾಗೂ ಸೈಂದುಪ್ಪುಗಳ ಮಿಶ್ರಣವನ್ನು ಲೋಕವಂದ್ಯನಾಗಿರುವ ಸ್ವಾಮಿ ಮೃತ್ಯುಂಜಯನೇ ಸ್ವೀಕರಿಸು ಪ್ರಭುವೇ.

ಹಿಙ್ಗೂಜೀರಕ ಸಹಿತಂ |
ವಿಮಲಾಮಲಕಂ ಕಪಿತ್ಥಮತಿಮಧುರಂ ||
ಬಿಸಖಂಡಾಂಲ್ಲವಣಯುತಾ- |
ನ್ಮೃತ್ಯುಂಜಯ ತೇsರ್ಪಯಾಮಿ ಜಗದೀಶ ||೩೦||

ಭಾವಾರ್ಥ:-ಹಿಙ್ಗು,ಜೀರಿಗೆ,ಸಹಿತವಾದ ಲವಣಯುಕ್ತ ನಿರ್ಮಲವಾಗಿರುವ ನೆಲ್ಲಿಯಕಾಯಿ,ಅತಿ ರುಚಿಕರವಾದ ಬೇಲದ ಹಣ್ಣುಗಳನ್ನು ಆ ಸ್ವಾಮಿ ಮೃತ್ಯುಂಜಯನಿಗೆ ಸಮರ್ಪಿಸುತ್ತಿದ್ದೇನೆ.

ಏಲಾಶುಂಠೀ ಸಹಿತಂ |
ದಧ್ಯನ್ನಂಚಾರು ಹೇಮಪಾತ್ರಸ್ಥಂ ||
ಅಮೃತಪತಿನಿಧಿಮೌಢ್ಯಂ |
ಮೃತ್ಯುಂಜಯ ಭುಜ್ಯತಾಂ ||೩೧||

ಭಾವಾರ್ಥ:-ಏಲಕ್ಕಿ,ಶುಂಠೀ ಸಹಿತವಾಗಿ ಬಂಗಾರದ ಪಾತ್ರೆಯಲ್ಲಿ ಮೊಸರನ್ನವನ್ನು ಮೋಕ್ಷತ್ವದ ಅಧೀಶನಾದ ಮತ್ತು ಬಾಲಿಶಬುದ್ಧಿಯನ್ನು ಕಳೆಯುವವನಾದ ಹಾಗೂ ಸಂಪತ್ತನ್ನು ದಯಪಾಲಿಸುವ ಸ್ವಾಮಿ ಮೃತ್ಯುಂಜಯನೇ ಭಕ್ಷಿಸುವಂತವನಾಗು.

ಜಂಭೀರನೀರಾಂಚಿತ ಶೃಂಗ ಬೇರಂ |
ಮನೋಹರಾನಮ್ಲಶಲಾಟುಖಂಡಾನ್ ||
ಮೃದೂಪದಂಶಾನ್ಸಹಸೋಪಭುಕ್ತ್ವ |
ಮೃತ್ಯುಂಜಯ ಶ್ರೀಕರುಣಾ ಸಮುದ್ರ ||೩೨||

ಭಾವಾರ್ಥ:-ರುಚಿಕರವಾಗಿರುವ ಮನೋಹರವಾಗಿರುವ ಲಿಂಬೆಯ ಹಣ್ಣು,ರಸಭರಿತವಾದ ಹಸಿಶುಂಠಿಯಬೇರನ್ನು ಕರುಣಾಸಮುದ್ರನಾಗಿರುವ ಸ್ವಾಮಿ ಮೃತ್ಯುಂಜಯನೇ ಸೇವಿಸುವವನಾಗು.

ನಾಗರರಾಮಠಯುಕ್ತಂ |
ಸುಲಲಿತ ಜಂಭೀರ ನೀರ ಸಂಪೂರ್ಣಂ ||
ಮಥಿತಂ ಸೈಂಧವಸಹಿತಂ |
ಪಿಬ ಹರ ಮೃತ್ಯುಂಜಯ ಕ್ರತುಧ್ವಂಸಿನ್ ||೩೩||

ಭಾವಾರ್ಥ:-ಮನೋಹಾರವಾದ ಕೊನ್ನಾರಿಗಡ್ಡೆಯರಸ ಮತ್ತು ನಳನಳಿಸುವ ದಾಳಿಂಬಹಣ್ಣಿನರಸ,ಪುಡಿಮಾಡಿದ ಸೈಂದುಪ್ಪು ಸಹಿತವಾಗಿ ಪಾಪಹರನಾಗಿರುವ ಸ್ವಾಮಿ ಮೃತ್ಯುಂಜಯನೇ ಸೇವಿಸುವವನಾಗು.

ಮಂದಾರಹೇಮಾಂಬುಜಗಂಧಯುಕ್ತೈ- |
ರ್ಮಂದಾಕಿನೀನಿರ್ಮಲಪುಣ್ಯತೋಯೈ: ||
ಗೃಹಾಣ ಮೃತ್ಯುಂಜಯ ಪೂರ್ಣಕಾಮ |
ಶ್ರೀಮತ್ಪರಾಪೋಶನಮಭ್ರಕೇಶ  ||೩೪||

ಭಾವಾರ್ಥ:-ಬಂಗಾರದ ವರ್ಣದ ತಾವರೆ ಹಾಗೂ ಪಾರಿಜಾತದ ಪರಿಮಳದಿಂದ ಕೂಡಿರುವ ಮಂದಾಕಿನೀ ನದಿಯ ಪವಿತ್ರ ಜಲದಿಂದ ಆಶಾಪಾಶ ವಿರಹಿತನಾಗಿರುವ ಶಿವನೇ,ಸ್ವಾಮಿ ಮೃತ್ಯುಂಜಯನೇ ಉತ್ತರಾಪೋಶನವನ್ನು ಸ್ವೀಕರಿಸುವವನಾಗು.

ಗಗನಧುನೀವಿಮಲಜಲೈ- |
ರ್ಮೃತ್ಯುಂಜಯ ಪದ್ಮರಾಗಪಾತ್ರಗತೈ: ||
ಮೃಗಮದ ಚಂದನ ಪೂರ್ಣಂ |
ಪ್ರಕ್ಷಾಲಯ ಚಾರು ಹಸ್ತ ಪದಯುಗ್ಮಂ  ||೩೫||

ಭಾವಾರ್ಥ:-ಆಕಾಶದಿಂದ ದುಮ್ಮುಕ್ಕುವ ಪರಿಶುದ್ಧವಾದ ಗಂಗಾಜಲದೊಡನೆ ಕಸ್ತೂರೀಚಂದನ,ಗಂಧ ಪುನುಗು ಮಿಶ್ರಿತ ಜಲದಿಂದ  ಕೆಂದಾವರೆಯನ್ನು ಹೋಲುವ ಸ್ವಾಮಿ ಮೃತ್ಯುಂಜಯನ ಮನೋಹರವಾದ ಕೈಕಾಲುಗಳನ್ನು ತೊಳೆಯುತ್ತೇನೆ.

ಪುಂನಾಗಮಲ್ಲಿಕಾ ಕುಂದವಾಸಿತೈರ್ಜಾಹ್ನವೀಜಲೈ: |
ಮೃತ್ಯುಂಜಯ ಮಹಾದೇವ ಪುನರಾಚಮನಂ ಕುರು ||೩೬||

ಭಾವಾರ್ಥ:-ದುಂಡುಮಲ್ಲಿಗೆ,ಸುರಗಿ ಪುಷ್ಪಗಳಿಂದ ಕೂಡಿರುವ ಗಂಗಾಜಲದಿಂದ ಮಹಾದೇವನೇ, ಸ್ವಾಮಿ ಮೃತ್ಯುಂಜಯನೇ ಪುನರಾಚನವನ್ನು ಮಾಡುವವನಾಗು.

ಮೌಕ್ತಕಚೂರ್ಣಸಮೇತೈ- |
ರ್ಮೃಗಮದ ಘನಸಾರವಾಸಿತೈ: ಪೂಗೈ: ||
ಪರ್ಣೈ: ಸ್ವರ್ಣಸಮಾನೈ- |
ರ್ಮೃತ್ಯುಂಜಯ ತೇsರ್ಪಯಾಮಿ ತಾಂಬೂಲ: ||೩೭||

ಭಾವಾರ್ಥ:-ಮುತ್ತಿನ ಹುಡಿ ಸಹಿತವಾದ ಅಮೋಘ ಪರಿಮಳಭರಿತವಾಗಿರುವ ಕಸ್ತೂರಿ,ಕರ್ಪೂರ,ಅಡಿಕೆಗಳನ್ನು ಬಂಗಾರಕ್ಕೆ ಸಮಾನವಾಗಿರುವ ವೀಳ್ಯದೆಲೆಯೊಂದಿಗೆ ಸ್ವಾಮಿ ಮೃತ್ಯುಂಜಯನೇ ನಿನಗರ್ಪಿಸುತ್ತಿರುವೆನು.

ನೀರಾಜನಂ ನಿರ್ಮಲದೀಪ್ತಿಮಭಿದಿ- |
ರ್ದೀಪಾಂಕುರೈರುಜ್ಜ್ವಲಮುಚ್ಛ್ರೈತೈಶ್ಚ ||
ಘಂಟಾನಿನಾದೇನ ಸಮರ್ಪಯಾಮಿ |
ಮೃತ್ಯುಂಜಯಾಯ ತ್ರಿಪುರಾಂತಕಾಯ ||೩೮||

ಭಾವಾರ್ಥ:-ಉಜ್ವಲವಾಗಿ ಬೆಳಗುವ ನಿರ್ಮಲ ದೀಪ ಮತ್ತು ಮಂಗಲಮಯ ನೀಲಾಂಜನವನ್ನು ತ್ರಿಪುರಾಸುರ ಸಂಹಾರಿಯಾದ ಆ ಸ್ವಾಮಿ ಮೃತ್ಯುಂಜಯನಿಗೆ ಸಮರ್ಪಿಸುತ್ತಿರುವೆನು.

ವಿರಿಂಚಿಮುಖ್ಯಾಮರಬೃಂದವಂದಿತೇ |
ಸರೋಜಮತ್ಸ್ಯಾಂಕಿತ ಚಕ್ರ ಚಿಹ್ನ ತೇ ||
ದದಾಮಿ ಮೃತ್ಯುಂಜಯ ಪಾದಪಂಕಜೇ |
ಫಣೀಂದ್ರಭೂಷೇ ಪುನರರ್ಘ್ಯಮೀಶ್ವರ ||೩೯||

ಭಾವಾರ್ಥ:-ಬ್ರಹ್ಮಾದಿದೇವಾಸುರ ಸಮೂಹದಿಂದ ವಂದಿಸಲ್ಪಡುವ,ಮೀನಿನ ಗುರುತಿನ ಚಕ್ರವನ್ನು ಹೊಂದಿದ,ಪಾದಗಳಲ್ಲಿ ಕಮಲದ ಗುರುತುಳ್ಳ,ನಾಗಾಭರಣ ಭೂಷಿತನಾದ ಈಶ್ವರನೇ,ಸ್ವಾಮಿ ಮೃತ್ಯುಂಜಯನೇ ಪುನರರ್ಘ್ಯವನ್ನು ಸ್ವೀಕರಿಸುವವನಾಗು.

ಪುಂನಾಗ ನೀಲೋತ್ಪಲಕುಂದಜಾಜೀ- |
ಮಂದಾರಮಲ್ಲೀ ಕರವೀರಪಂಕಜೈ: ||
ಪುಷ್ಪಾಂಜಲಿಂ ಬಿಲ್ವದಲೈಸ್ತುಲಸ್ಯಾ |
ಮೃತ್ಯುಂಜಯಾಂಘ್ರೌ ವಿನಿವೇಶಯಾಮಿ ||೪೦||

ಭಾವಾರ್ಥ:ನಾಗಕೇಸರ,ನೀಲಿತಾವರೆ,ನೈದಿಲೆ,ಜಾಜಿಮಲ್ಲಿಗೆ,ಮಂದಾರ,ದುಂಡುಮಲ್ಲಿಗೆ, ಕರವೀರ,ತಾವರೆ,ಬಿಲ್ವದಳ,ತುಳಸಿಗಳನ್ನು ಆ ಸ್ವಾಮಿ ಮೃತ್ಯುಂಜಯನ ಚರಣಕಮಲಗಳಿಗೆ ಅರ್ಪಿಸುತ್ತಿರುವೆನು.

ಪದೇ ಪದೇ ಸರ್ವ ತಮೋನಿಕೃಂತನಂ |
ಪದೇ ಪದೇ ಸರ್ವ ಶುಭಪ್ರದಾಯಕಂ ||
ಪ್ರದಕ್ಷಿಣಂ ಭಕ್ತಿಯುತೇನ ಚೇತನಾ |
ಕರೋಮಿ ಮೃತ್ಯುಂಜಯ ರಕ್ಷ ರಕ್ಷ ಮಾಂ ||೪೧||

ಭಾವಾರ್ಥ:-ಮತ್ತೆ ಮತ್ತೆ ಭಕ್ತರ  ಅಜ್ಞಾನವೆನ್ನುವ ಎಲ್ಲಾ ಕತ್ತಲೆಯನ್ನು ಹೋಗಲಾಡಿಸುತ್ತಾ ಮತ್ತೆ ಮತ್ತೆ ಸರ್ವರಿಗೂ ಎಲ್ಲಾ ತರದ ಶುಭವನ್ನು ದಯಪಾಲಿಸುವ ಸ್ವಾಮಿ ಮೃತ್ಯುಂಜಯನೇ ಪುನ:ಪುನ: ಪ್ರದಕ್ಷಿಣೆ ಮಾಡುತ್ತಲಿರುವೆ.ರಕ್ಷಿಸು ದೊರೆಯೇ.ರಕ್ಷಿಸು.

ನಮೋ ಗೌರೀಶಾಯ ಸ್ಫಟಿಕಧವಲಾಂಗಾಯ ಚ ನಮೋ |
ನಮೋ ಲೋಕೇಶಾಯ ಸ್ತುತವಿಬುಧಲೋಕಾಯ ಚ ನಮ: ||
ನಮ: ಶ್ರೀಕಂಠಾಯ ಕ್ಷಿಪತಪುರದೈತ್ಯಾಯ ಚ ನಮೋ |
ನಮ: ಫಾಲಾಕ್ಷಾಯ ಸ್ಮರಮದ ವಿನಾಶಾಯ ಚ ನಮ: ||೪೨||

ಭಾವಾರ್ಥ:-ಸ್ಫಟಿಕದಂತೆ ಬಿಳುಪಾಗಿರುವ ಅಂಗಗಳಿಂದ ಕೂಡಿದ ಗೌರೀಪತಿಗೆ ನಮಸ್ಕಾರಗಳು.ವಿದ್ವಜ್ಜನರಿಂದ ಸ್ತುತಿಸಲ್ಪಡುತ್ತಿರುವ ಲೋಕೇಶನಿಗೆ ನಮಸ್ಕಾರಗಳು.ಶ್ರೀಕಂಠನಿಗೆ ನಮಸ್ಕಾರಗಳು.ಮಹಾಕಾಲೇಶ್ವರನಿಗೆ ನಮಸ್ಕಾರಗಳು.ಫಾಲಾಕ್ಷನಿಗೆ ನಮಸ್ಕಾರಗಳು.ಮನ್ಮಥನ ಗರ್ವ ವಿನಾಶಕಗೆ ನಮಸ್ಕಾರಗಳು.

ಸಂಸಾರೇ ಜನಿತಾಪರೋಗ ಸಹಿತೇ ತಾಪತ್ರಯಾಕ್ರಂದಿತೇ |
ನಿತ್ಯಂ ಪುತ್ರ ಕಲತ್ರ ವಿತ್ತ ವಲಸತ್ಪಾಶೈರ್ನಿಬದ್ಧಂ ದೃಢಂ || 
ಗರ್ವಾಂಧಂ ಬಹುಪಾಪವರ್ಗಸಹಿತಂ ಕಾರುಣ್ಯ ದೃಷ್ಟ್ಯಾ ವಿಭೋ |
ಶ್ರೀ ಮೃತ್ಯುಂಜಯ ಪಾರ್ವತೀಪ್ರಿಯ ಸದಾ ಮಾಂ ಪಾಹಿ ಸರ್ವೇಶ್ವರ ||೪೩||

ಭಾವಾರ್ಥ:-ರೋಗ ತಾಪಗಳಿಗೆ ಸಿಲುಕಿ ಸಂಸಾರದಲ್ಲಿ ನರಳುತ್ತಿರುವ,ಹೆಂಡತಿ,ಮಕ್ಕಳು,ಬಾಂಧವರು,ಸಂಪತ್ತುಗಳೆಂಬ ಮೋಹಪಾಶದ ಧೃಢವಾದ ಬಂಧನದಲ್ಲಿ ಸಿಲುಕಿ ಗರ್ವಿತನಾಗಿ ಅನೇಕಾನೇಕ ಪಾಪಕರ್ಮಗಳಿಂದ ಕೂಡಿದವನಾದ ನನ್ನನ್ನು ಕರುಣಾ ದೃಷ್ಟಿಯಿಂದ ಕಾಣುತ್ತಾ ಸರ್ವೇಶ್ವರನೇ,ಪಾರ್ವತೀಪ್ರಿಯನೇ,ಸ್ವಾಮಿ ಮೃತ್ಯುಂಜಯನೇ ಕಾಪಾಡು.

ಸೌಧೇ ರತ್ನಮಯೇ ನವೋತ್ಪದಲಾಕೀರ್ಣೇ ಚ ತಲ್ಪಾಂತರೇ |
ಕೌಶೇಯೇನ ಮನೋಹರೇಣ ಧವಲೇನಾಚ್ಛಾದಿತೇ ಸರ್ವೇಶ: ||
ಕರ್ಪೂರಾಂಚಿತ ದೀಪದೀಪ್ತಿಮಿಲಿತೇ ರಮ್ಯೋಪಧಾನದ್ವಯೇ |
ಪಾರ್ವತ್ಯಾ: ಕರಪದ್ಮಲಾಲಿತ ಪದಂ ಮೃತ್ಯುಂಜಯಂ ಭಾವಯೇ  ||೪೪||

ಭಾವಾರ್ಥ:-ರತ್ನಮಯವಾಗಿರುವ ಮಹಲಿನಲ್ಲಿ.ಮನೋಹರವಾಗಿರುವ ಬಿಳುಪಿನ ವಸ್ತ್ರಾಲಂಕೃತ ಆಸನದ ಮೇಲೆ,ಪ್ರಕಾಶಮಾನವಾಗಿ ಬೆಳಗುತ್ತಲಿರುವ ಪಾರ್ವತಿಯ ಕೋಮಲವಾದ ಕರಕಮಲಗಳಿಂದ ಪಾದಸೇವೆಯನ್ನು ಸ್ವೀಕರಿಸುತ್ತಲಿರುವ ಆ ಸ್ವಾಮಿ ಮೃತ್ಯುಂಜಯನನ್ನು ಸ್ಮರಿಸುತ್ತೇನೆ.

ಚತುಶ್ಚತ್ವಾರಿಂಶದ್ವಿಲಸದುಪಚಾರೈರಭಿಮತೈ- |
ರ್ಮನ: ಪದ್ಮೇ ಭಕ್ತ್ಯಾ ಬಹಿರಪಿ ಚ ಪೂಜಾಂ ಶುಭಕರೀಂ ||
ಕರೋತಿ ಪ್ರತ್ಯೂಷೇ ನಿಶಿ ದಿವಸ ಮಧ್ಯೇsಪಿ ಚ ಪುಮಾ- |
ನ್ಪ್ರಯಾತಿ ಶ್ರೀ ಮೃತ್ಯುಂಜಯ ಪದಮನೇಕಾದ್ಭುತ ಪದಂ ||೪೫||

ಭಾವಾರ್ಥ:-ಈ ಮೊದಲು ಹೇಳಿದ ನಲುವತ್ತನಾಲ್ಕು ಪ್ರಶಸ್ತವಾಗಿರುವ ಉಪಚಾರಗಳಿಂದ ಹೃತ್ಕಮಲದಲ್ಲಿ ಮನ:ಪೂರ್ವಕವಾಗಿ ಮಾಡುವ ಪೂಜೆ,ಬಹಿರಂಗವಾಗಿ ಮಾಡುವಾ ಪೂಜೆಯಷ್ಟೇ ಶುಭದಾಯಕ ಫಲಕಾರಿಯಾಗಿದೆಯಲ್ಲದೆ,ಪೂರ್ವಾಹ್ನ,ಮಧ್ಯಾಹ್ನ,ರಾತ್ರಿ ಕಾಲಗಳಲ್ಲಿ ಮಾಡುವ ಶ್ರೀ ಮೃತ್ಯುಂಜಯ ಸ್ವಾಮಿಯ ಪೂಜೆ ಅತ್ಯದ್ಭುತವಾಗಿರುವುದಾಗಿದೆ.

ಪ್ರಾತರ್ಲಿಂಗಮುಮಾಪತೇರಹರಹ: ಸಂದರ್ಶನಾತ್ಸ್ವರ್ಗದಂ |
ಮಧ್ಯಾಹ್ನೇ ಹಯಮೇಧತುಲ್ಯ ಫಲದಂ ಸಾಯಂತನೇ ಮೋಕ್ಷದಂ ||
ಭಾನೋರಸ್ತಮಯೇ ಪ್ರದೋಷಸಮಯೇ ಪಂಚಾಕ್ಷರಾರಾಧನಂ |
ತತ್ಕಾಲತ್ರಯ ತುಲ್ಯಮಿಷ್ಟ ಫಲದಂ ಸದ್ಯೋsನವದ್ಯಂ ದೃಢಂ ||೪೬||

ಭಾವಾರ್ಥ:-ಉಷ:ಕಾಲದಲ್ಲಿ ಉಮಾಪತಿಯಲಿಂಗವನ್ನು ರಹಸ್ಯವಾಗಿ ಉಪಾಸಿಸುವುದರಿಂದ ಸ್ವರ್ಗವನ್ನು ಸಂದರ್ಶಿಸಿದ ಫಲವು ದೊರಕುವುದು.ಮಧ್ಯಾಹ್ನ ಕಾಲದಲ್ಲಿ ಮಾಡುವ ಪೂಜೆಯಿಂದ ಅಶ್ವಮೇಧಯಾಗದ ಫಲವು ದೊರಕುವುದು.ಸಾಯಾಹ್ನ ಕಾಲದ ಆರಾಧನೆಯು  ಮೋಕ್ಷ ಪ್ರದವಾದುದು.ಸೂರ್ಯಾಸ್ತಮಾನ ಕಾಲದ ಹಾಗೂ ಪ್ರದೋಷ ಕಾಲದಲ್ಲಿ ಮಾಡುವ ಆರಾಧನೆಯು ಪಂಚಾಕ್ಷರೀ ಆರಾಧನೆಗೆ ಸಮನಾಗಿರುವ ಫಲದಾಯಕವಾಗಿರುವುದು.ಸಮಯಾನುಸಾರವಾಗಿ ಆ ಸ್ವಾಮಿ ಮೃತ್ಯುಂಜಯನನ್ನು ಆರಾಧಿಸುವುದರಿಂದ ಸಮಸ್ತ ಅಭೀಷ್ಟಾರ್ಥಗಳು ಸಿದ್ಧಿಯಾಗುವವು.ಇದು ನಿಶ್ಚಿತವಾದುದು.
*********************************************************************
 || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಮೃತ್ಯುಂಜಯ ಮಾನಸಿಕ ಪೂಜಾ ಸ್ತೋತ್ರಮ್ ||
|| ಈ ತೆರನಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ಶ್ರೀ ಮೃತ್ಯುಂಜಯ ಮಾನಸಿಕ ಪೂಜಾ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
                  -೧೨-
  || ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್  ||
 *********************************
    || ಶ್ರೀ ಗಣೇಶಾಯ ನಮ: ||
ಸೌರಾಷ್ಟ್ರ ದೇಶೇ ವಿಶದೇsತಿರಮ್ಯೇ |
ಜ್ಯೋತಿರ್ಮಯಂ ಚಂದ್ರಕಲಾವತಂಸಮ್ ||
ಭಕ್ತಿಪ್ರದಾನಾಯ ಕೃಪಾವತೀರ್ಣಾಮ್ |
ತಂ ಸೋಮನಾಥಂ ಶರಣಂ ಪ್ರಪದ್ಯೇ  ||೧||

ಭಾವಾರ್ಥ:-ಯಾರು ತನ್ನ ಭಕ್ತಿಯನ್ನು ಅನುಗ್ರಹಿಸಲು ಬ್ರಹ್ಮಾಂಡದಲ್ಲಿ ಅತ್ಯಂತ ರಮಣೀಯವೂ ನಿರ್ಮಲವಾಗಿಯೂ ಇರುವ ಸೌರಾಷ್ಟ್ರವೆಂಬ ಪ್ರದೇಶದಲ್ಲಿ ಕರುಣಾಪೂರ್ಣನಾಗಿ ಅವತಾರವೆತ್ತಿ ಚಂದ್ರನನ್ನೇ ತನ್ನ ಶಿರೋಭೂಷಣವಾಗಿ ಧರಿಸಿರುವನೋ ಅಂತಹಾ ಜ್ಯೋತಿರ್ಲಿಂಗಸ್ವರೂಪೀ ಭಗವಾನ್ ಶ್ರೀ ಸೋಮನಾಥೇಶ್ವರನಿಗೆ ನಾನು ಶರಣಾಗುವೆ.

ಶ್ರೀಶೈಲಶೃಂಗೇ ವಿವಿಧಾತಿಸಂಗೇ |
ತುಲಾದ್ರಿ ತುಂಗೇsಪಿ ಮುದಾವತಂಸಮ್ ||
ತಮರ್ಜುನಂ ಮಲ್ಲಿಕಪೂರ್ವಮೇಕಂ |
ನಮಾಮಿ ಸಂಸಾರ ಸಮುದ್ರಸೇತುಮ್ ||೨||

ಭಾವಾರ್ಥ:-ಯಾರು ಶ್ರೀಶೈಲ ಪರ್ವತದ ಅತ್ಯಂತ ಉನ್ನತ ಶಿಖರದ ಮೇಲೆ ದೇವತಾ ಸಮೂಹಗಳ ಸಮಾಗಮವು ನಡೆವಾಗಲೆಲ್ಲಾ ಅತ್ಯಂತ ಪ್ರಸನ್ನನಾಗಿ ಅಲ್ಲಿ ವಾಸಿಸುವನೋ,ಯಾರು ಸಂಸಾರ ಸಾಗರವನ್ನು ದಾಟುವ ಸೇತುವಿನಂತೆ ಶೈಲಾದ್ರಿ ಶಿಖರದಲ್ಲಿ ನೆಲೆಯಾಗಿರುವನೋ,ಅಂತಹಾ ಏಕ ಮಾತ್ರ ಒಡೆಯನಾದ ಆ ಮಲ್ಲಿಕಾರ್ಜುನನಿಗೆ ನಾನು ನಮಸ್ಕರಿಸುವೆ.

ಅವಂತಿಕಾಯಾಂ ವಿಹಿತಾವತಾರಂ |
ಮುಕ್ತಿ ಪ್ರದಾನಾಯ ಚ ಸಜ್ಜನಾನಾಮ್ ||
ಅಕಾಲಮೃತ್ಯೋ: ಪರಿರಕ್ಷಣಾರ್ಥಂ |
ವಂದೇ ಮಹಾಕಾಲ ಮಹಂ ಸುರೇಶಮ್ ||೩||

ಭಾವಾರ್ಥ:-ಸಜ್ಜನ ಭಕ್ತರಿಗೆ ಮೋಕ್ಷವನ್ನು ಕರುಣಿಸಲೋಸುಗ ಯಾವಾತನು ಅವಂತಿಕಾಪುರ[ಉಜ್ಜೈನಿ]ದಲ್ಲಿ ಅವತರಿಸಿರುವನೋ,ಅಕಾಲಿಕ ಮೃತ್ಯುವಿನಿಂದ ಯಾವಾತನು ರಕ್ಷಿಸುವನೋ ಅಂತಹಾ ಮಹಾಕಾಲೇಶ್ವರನಾದ ದೇವಾದಿದೇವ ಮಹಾದೇವ ಸುರೇಶ್ವರನಿಗೆ ನಾನು ನಮಸ್ಕರಿಸುವೆ.

ಕಾವೇರಿಕಾನರ್ಮದಯೋ:ಪವಿತ್ರೇ |
ಸಮಾಗಮೇ ಸಜ್ಜನ ತಾರಣಾಯ ||
ಸದೈವ ಮಾಂಧಾತೃ ಪುರೇ ವಸಂತ- |
ಮೋಂಕಾರಮೀಶಂ ಶಿವಮೇಕ ಮೀಡೇ ||೪||

ಭಾವಾರ್ಥ:-ನರ್ಮದಾಕಾವೇರಿ ನದಿಗಳ ಪವಿತ್ರ ಸಂಗಮ ಪ್ರದೇಶದ ಹತ್ತಿರದ ಮಾಂಧಾತೃವೆಂಬ ಪಟ್ಟಣದಲ್ಲಿ ಸಜ್ಜನ ಭಕ್ತರನ್ನು ಸಂಸಾರ ಸಾಗರದಿಂದ ಪಾರು ಮಾಡಿ ರಕ್ಷಿಸಲೋಸುಗವಾಗಿ ನೆಲೆಸಿರುವ ಅದ್ವಿತೀಯನೂ ದಯಾಮಯಿಯೂ ಆಗಿರುವ ಭಗವಾನ್ ಓಂಕಾರೇಶ್ವರನನ್ನು ನಾನು ಸ್ತುತಿಸುತ್ತೇನೆ.

ಪೂರ್ವೋತ್ತರೇ ಪ್ರಜ್ವಲಿಕಾನಿಧಾನೇ |
ಸದಾ ವತಂಸಂ ತಂ ಗಿರಿಜಾ ಸಮೇತಮ್ ||
ಸುರಾಸುರಾಧಿತ ಪಾದಪದ್ಮಂ |
ಶ್ರೀ ವೈದ್ಯನಾಥಂ ಸತತಂ ನಮಾಮಿ  ||೫||

ಭಾವಾರ್ಥ:-ಯಾವಾತನು ಪೂರ್ವೋತ್ತರ ದಿಸೆಯಲ್ಲಿಸ್ಮಶಾನ ಮಧ್ಯದಲ್ಲಿ[ವೈದ್ಯನಾಥಧಾಮ]ಅನುದಿನವೂ ಗಿರಿಜಾ ಸಮೇತನಾಗಿರುವನೋ,ಯಾವತನ ಚರಣಾರವಿಂದಗಳನ್ನು ದೇವ ದಾನವರು ಆರಾಧಿಸುವರೋ ಅಂತಹಾ ಶ್ರೀ ವೈದ್ಯನಾಥೇಶ್ವರನಿಗೆ ನಾನು ನಿರಂತರ ನಮಸ್ಕರಿಸುತ್ತೇನೆ.

ಆಮರ್ದಸಂಜ್ಞೇ ನಗರೇಚರಮ್ಯೇ |
ವಿಭೂಷಿತಾಂಗಂ ವಿವಿಧೈಶ್ಚ ಭೋಗೈ: ||
ಸದ್ಭುಕ್ತಿ-ಮುಕ್ತಿ-ಪ್ರದಮೀಶಮೇಕಂ |
ಶ್ರೀ ನಾಗನಾಥಂ ಶರಣಂ ಪ್ರಪದ್ಯೇ ||೬||

ಭಾವಾರ್ಥ:-ರಮಣೀಯವಾಗಿರುವ ಆಮರ್ದ ಎಂಬ ಪಟ್ಟಣದಲ್ಲಿ ವಿವಿಧ ಸರ್ಪಗಳಿಂದ ಅಲಂಕೃತನಾಗಿ,ಸಜ್ಜನ ಭಕ್ತರಿಗೆ ಭೋಗ-ಭಾಗ್ಯ,ಮುಕ್ತಿಗಳನ್ನು ದಯಪಾಲಿಸುವ ಏಕ ಮಾತ್ರ ಸರ್ವೇಶ್ವರನಾಗಿರುವ ನಾಗನಾಥೇಶ್ವರನಿಗೆ ನಾನು ಶರಣಾಗುತ್ತಿರುವೆ.

ಸಾನಂದಮಾನಂದವನೇ ವಸಂತ- |
ಮಾನಂದಕಂದಂ ಹತಪಾಪವೃಂದಮ್ ||
ವಾರಣಾಸೀನಾಥಮನಾಥನಾಥಂ |
ಶ್ರೀ ವಿಶ್ವನಾಥಂ ಶರಣಂ ಪ್ರಪದ್ಯೇ  ||೭||

ಭಾವಾರ್ಥ:-ಕಾಶೀ ಕ್ಷೇತ್ರದ ಆನಂದವನದಲ್ಲಿ ನೆಲೆಯಾಗಿ ಭಕ್ತರ ಪಾಪಗಳನ್ನು ಕಳೆದು ಅನಾಥರಿಗೆ ರಕ್ಷಕನಾಗಿರುವಂತಹಾ ವಾರಣಾಸೀ ಪಟ್ಟಣದ ಅಧೀಶನಾಗಿರುವ ಶ್ರೀ ವಿಶ್ವನಾಥನಿಗೆ ನಾನು ಶರಣಾಗುತ್ತಿರುವೆ.

ಯೋ ಡಾಕಿನೀಶಾಕಿನೀಕಾಸಮಾಜೇ |
ನಿಷೇವ್ಯಮಾಣ: ಪಿಶಿತಾರನೈಶ್ಚ ||
ಸದೈವ ಭೀಮಾದಿಪದ ಪ್ರಸಿದ್ಧಂ |
ತಂ ಶಂಕರಂ ಭಕ್ತಹಿತಂ ನಮಾಮಿ  ||೮||

ಭಾವಾರ್ಥ:-ಯಾವಾತನು ಶಾಕಿನೀ-ಡಾಕಿನೀಯರ ಸಮೂಹದಲ್ಲಿರುವನೋ,ಯಾರು ಭೂತ-ಪ್ರೇತ-ಅಸುರಾದಿಗಳಿಂದಲೂ ಸೇವೆಯನ್ನು ಸ್ವೀಕರಿಸುತ್ತಿರುವನೋ,ಯಾವಾತನು ಭೀಮನೆಂಬ ಹೆಸರಿನಿಂದ ಪ್ರಸಿದ್ಧನಾಗಿ ಭಕ್ತ ಜನಾದಿಗಳ ಹಿತಚಿಂತಕನಾಗಿರುವ ಅಂತಹಾ ಶಂಕರನಿಗೆ ನಾನು ನಮಸ್ಕರಿಸುತ್ತೇನೆ.

ಶ್ರೀತಾಮ್ರಪರ್ಣೇ ಜಲರಾಶಿಯೋಗೇ |
ನಿಬಧ್ಯಸೇತುಂ ನಿಶಿಬಿಲ್ವಪತ್ರೈ: ||
ಶ್ರೀರಾಮಚಂದ್ರೇಣ ಸಮರ್ಚಿತಂ ತಂ |
ರಾಮೇಶ್ವರಾಖ್ಯಂ ಸತತಂ ನಮಾಮಿ ||೯||

ಭಾವಾರ್ಥ:-ಶ್ರೀ ತಾಮ್ರಪರ್ಣಿ ನದಿಯ ದಕ್ಷಿಣ ಪಾರ್ಶ್ವದಲ್ಲಿ ಸಾಗರವು ಸೇರುವ ಜಾಗದಲ್ಲಿ ಸೇತುವೆಯನ್ನು ನಿರ್ಮಿಸಿ ರಾತ್ರೆಯ ಕಾಲದಲ್ಲಿ ಆ ಶ್ರೀ ರಾಮಚಂದ್ರನಿಂದ ಬಿಲ್ವಪತ್ರ ಮುಖೇನ ಪೂಜಿಸಲ್ಪಟ್ಟಂತಹಾ ಭಗವಾನ್ ಶ್ರೀ ರಾಮೇಶ್ವರನಿಗೆ ನಾನು ನಿರಂತರ ನಮಸ್ಕರಿಸುವೆನು.

ಸಹ್ಯಾದ್ರಿಶೀರ್ಷೇ ವಿಮಲೇ ವಸಂತೇ |
ಗೋದಾವರೀ ತೀರ ಪವಿತ್ರದೇಶೇ ||
ಯದ್ದರ್ಶನಾತ್ಪಾತಕಮಾಶು ನಾಶಂ |
ಪ್ರಯಾತಿತಂ ತ್ರ್ಯಂಬಕ ಮೀಶಮೀಡೆ ||೧೦||

ಭಾವಾರ್ಥ:-ಸಹ್ಯಾದ್ರಿ ಪರ್ವತ ಶಿಖರದಲ್ಲಿ ಗೋದಾವರೀ ನದಿಯ ತೀರದಲ್ಲಿ ಪವಿತ್ರ ಪ್ರದೇಶದಲ್ಲಿ ಯಾವಾತನ ದರ್ಶನ ಮಾತ್ರದಿಂದ ಮಹಾಪಾತಕಗಳು ತತ್ಕ್ಷಣ ನಾಶವಾಗುವವೋ ಅಂತಹಾ ತ್ರ್ಯಂಬಕೇಶ್ವರ ಸ್ವಾಮಿಯನ್ನು ನಾನು ಸ್ತುತಿಸುವೆನು.

ಹಿಮಾದ್ರಿಪಾರ್ಶ್ವೇsಪಿ ತಟೇ ರಮಂತಂ |
ಸಂಪೂಜ್ಯಮಾನಂ ಸತತಂ ಮುನೀಂದ್ರೈ: ||
ಸುರಾಸುರೈರ್ಯಕ್ಷ ಮಹೋರಗಾದ್ಯೈ: |
ಕೇದಾರ ಸಂಜ್ಞಂ ಶಿವಮೀಶಮೀಡೆ ||೧೧||

ಭಾವಾರ್ಥ:-ಹಿಮಾಲಯ ಪರ್ವತದ ತಪ್ಪಲಿನಲ್ಲಿ ಮಂದಾಕಿನೀ ನದಿಯ ದಂಡೆಯಲ್ಲಿ ಅನುದಿನವೂ ಸಿದ್ಧ ಮುನೀಂದ್ರರುಗಳಿಂದ ಪೂಜಿಸಿಕೊಳ್ಳುತ್ತಾ,ದೇವದಾನವ ನಾಗಯಕ್ಷರುಗಳಾದಿಯಿಂದ ಪೂಜಿಸಿಗೊಂಬ ಆ ಮಂಗಲದಾಯಕ ರಮಾರಮಣನಾದ ಕೇದಾರನಾಥ ಸ್ವಾಮಿ ಮಹೇಶನನ್ನು ನಾನು ಸ್ತುತಿಸುವೆನು.

ಇಲಾಪುರೇ ರಮ್ಯ ಶಿವಾಲಯೇsಸ್ಮಿನ್ |
ಸಮುಲ್ಲಸಂತಂಚ ತ್ರಿಜಗದ್ವರೇಣ್ಯಮ್ ||
ವಂದೇ ಮಹೋದಾರ ತರ ಸ್ವಭಾವಂ |
ಸದಾಶಿವಂ ತಂ ಧೃಷ್ಣೇಶ್ವರಾಖ್ಯಂ ಶರಣಂ ಪ್ರಪದ್ಯೇ  ||೧೨||

ಭಾವಾರ್ಥ:-ಏಲಾಪುರಿಯಲ್ಲಿ ರಮಣೀಯವಾದ ಶಿವಾಲಯದಲ್ಲಿ ಸಂತೋಷ ಭರಿತನಾಗಿರುವ ಮೂರ್ಲೋಕಗಳಲ್ಲಿಯೂ ಶ್ರೇಷ್ಠನೆನಿಸಿರುವ ಅತ್ಯಂತ ಉದಾರ ಸ್ವಭಾವವನ್ನು ಹೊಂದಿರುವ ಧಿಷಣೇಶ್ವರನೆಂದು ಪ್ರಸಿದ್ಧಿ ಹೊಂದಿರುವ ಆ ಸದಾಶಿವನಿಗೆ ನಾನು ಶರಣಾಗುವೆ.

ಏತಾನಿ ಲಿಂಗಾನಿ ಸದೈವ ಮರ್ತ್ಯಾ: |
ಪ್ರಾತ: ಪಠಂತೋsಮಲ ಮಾನಸಾಶ್ಚ ||
ತೇ ಪುತ್ರ ಪೌತ್ರೈಶ್ಚ ಧನೈರುದಾರೈ: |
ಸತ್ಕೀರ್ತಿಭಾಜ: ಸುಖಿನೋ ಭವಂತಿ ||೧೩||

ಭಾವಾರ್ಥ:-ಉಷ:ಕಾಲದಲ್ಲಿ ಪರಿಶುದ್ಧವಾದ ಮನಸ್ಸಿನಿಂದ ಈ ಸ್ತೋತ್ರಗಳನ್ನು ಪಠಿಸುತ್ತಾ ಶಿವಲಿಂಗಗಳನ್ನು ಸ್ಮರಿಸುವ ಮನುಜರು ವಿಫುಲವಾದ ಸಂಪತ್ತಿನೊಂದಿಗೆ ಮಕ್ಕಳು,ಮೊಮ್ಮಕ್ಕಳೊಡನೆ ಸತ್ಕೀರ್ತಿಯುಕ್ತರಾಗಿ ಸುಖವನ್ನು ಅನುಭವಿಸುವರು.

ಜ್ಯೋತಿರ್ಮಯ ದ್ವಾದಶ ಲಿಂಗಕಾನಾಂ |
ಶಿವಾತ್ಮನಾಂ ಪ್ರೋಕ್ತಮಿದಂ ಕ್ರಮೇಣ ||
ಸ್ತೋತ್ರಂ ಪಠಿತ್ವಾ ಮನುಜ್ಯೋತಿ ಭಕ್ತ್ಯಾ |
ಫಲಂ ತದಾಲೋಕ್ಯ ನಿಜಂ ಭಜೇಚ್ಚ  ||೧೪||

ಭಾವಾರ್ಥ:-ಈ ಸ್ತೋತ್ರಗಳ ಮುಖೇನ  ಕೀರ್ತಿವೆತ್ತ ಶಿವಸ್ವರೂಪವಾಗಿರುವ ಜ್ಯೋತಿರ್ಮಯ ದ್ವಾದಶಲಿಂಗಗಳನ್ನು ಕ್ರಮವರಿತು ಅತ್ಯಂತ ಭಕ್ತಿಪೂರ್ವಕವಾಗಿ ಯಾವಾತನು ಭಜಿಸುವನೋ ಅವನು ಸತ್ಫಲಗಳನ್ನು ಪಡೆದು ಸೌಭಾಗ್ಯಶಾಲಿಯಾಗುವನು.
*********************************************************************
 || ಇತಿ ಶ್ರೀಮದ್ಜಗದ್ಗುರು ಶಂಕರಾಚಾರ್ಯ ವಿರಚಿತ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್ ||
|| ಈ ತೆರನಾಗಿ ಶ್ರೀ ಮದ್ಜಗದ್ಗುರು ಶಂಕರಾಚಾರ್ಯರು ರಚಿಸಿದ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಗಳ ಭಾವಾರ್ಥವು ||
*********************************************************************
                     -೧೩-
|| ಶ್ರೀ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರಮ್ ||
******************************************
ಶ್ರೀಮದಾತ್ಮನೇ ಗುಣೈಕಸಿಂಧವೇ ನಮ: ಶಿವಾಯ |
ಧಾಮಲೇಶಧೂತ ಕೋಕಬಂಧವೇ ನಮ: ಶಿವಾಯ |
ನಾಮಶೇಷಿತಾ ನಮಧ್ಭವಾಂದವೇ ನಮ: ಶಿವಾಯ |
ಪಾಮರೇತರ ಪ್ರಧಾನ ಬಂಧವೇ ನಮ: ಶಿವಾಯ ||೧||

ಭಾವಾರ್ಥ:-ಯೋಗ್ಯವಾದ ಮನಸ್ಸನ್ನು ಹೊಂದಿರುವ ಗುಣಾಸಾಗರನೇ ಶಿವನೇ ನಮಸ್ಕಾರಗಳು.ಸೂರ್ಯತನಯನಾಗಿರುವ ಯಮನ ಬಂಧುವೇ ಶಿವನೇ ನಮಸ್ಕಾರಗಳು.ನಾಮ ಸ್ಮರಣೆಯ ಮೂಲಕ ನಮಸ್ಕರಿಸುವವರ ಬಂಧುವೇ ಶಿವನೇ ನಮಸ್ಕಾರಗಳು.ಅತ್ಯಂತ ಮೂಢರಿಗೂ ಬಂಧುವಾಗಿರುವ ಶಿವನೇ ನಮಸ್ಕಾರಗಳು.

ಕಾಲಭೀತವಿಪ್ರಬಾಲಪಾಲತೇ ನಮ: ಶಿವಾಯ |
ಶೂಲಭಿನ್ನದುಷ್ಟದಕ್ಷ ಪಾಲ ನಮ: ಶಿವಾಯ |
ಮೂಲಕಾರಣಾಯ ಕಾಲಕಾಲ ನಮ: ಶಿವಾಯ |
ಪಾಲಯಾಧುನಾ ದಯಾಲವಾಲ ನಮ: ಶಿವಾಯ ||೨||

ಭಾವಾರ್ಥ:-ಯಮನ ಭೀತಿಗೊಳಗಾದ ಬಾಲಕ ನಚಿಕೇತನನ್ನು ರಕ್ಷಿಸಿದ ಶಿವನಿಗೆ ನಮಸ್ಕಾರಗಳು.ತ್ರಿಶೂಲದ ಘಾತದಿಂದ ತತ್ತರಿಸಿದ ದಕ್ಷನನ್ನು ಸಂರಕ್ಷಿಸಿದ ಶಿವನಿಗೆ ನಮಸ್ಕಾರಗಳು.ಸಮಸ್ತಕ್ಕೂ ಮೂಲಕಾರಣನೆನಿಸಿದ ಮಹಾಕಾಲ ಶಿವನಿಗೆ ನಮಸ್ಕಾರಗಳು.ದಯಾಸಾಗರನಾಗಿರುವ ಶಿವನೇ ನಮಸ್ಕಾರಗಳು.ನನ್ನನ್ನು ಪರಿಪಾಲಿಸುವವನಾಗು.

ಇಷ್ಟವಸ್ತು ಮುಖ್ಯದಾನ ಹೇತವೇ ನಮ: ಶಿವಾಯ |
ದುಷ್ಟದೈತ್ಯ ವಂಶ ಧೂಮಕೇತವೇನಮ: ಶಿವಾಯ |
ಸೃಷ್ಟಿರಕ್ಷಣಾಯ ಕಾಲಕಾಲ ತೇ ನಮ: ಶಿವಾಯ |
ಅಷ್ಟಮೂರ್ತಯೇ ವೃಷೇಂದ್ರ ಕೇತವೇನಮ: ಶಿವಾಯ ||೩||

ಭಾವಾರ್ಥ:-ಬೇಡಿದ ವಸ್ತುಗಳನ್ನು ಪಡೆಯಲು ಕಾರಣನಾಗುವ ಶಿವನಿಗೆ ನಮಸ್ಕಾರಗಳು.ದುಷ್ಟ ಅಸುರರ ವಂಶ ನಾಶಕ್ಕೆ ಕಾರಣನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ಬ್ರಹ್ಮಾಂಡವನ್ನು ಸಂರಕ್ಷಿಸುವ ಶಿವನಿಗೆ ನನ್ನ ನಮಸ್ಕಾರಗಳು. ಎಂಟು ಸ್ವರೂಪವನ್ನು ಹೊಂದಿ ವೃಷಭವನ್ನು ಬಾವುಟವಾಗಿ ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.

ಆಪದದ್ರಿ ಭೇಧ ಟಂಕ ಹಸ್ತ ತೇ ನಮ: ಶಿವಾಯ |
ಪಾಪಹಾರಿದಿವ್ಯಸಿಂಧುಮಸ್ತ ತೇ ನಮ: ಶಿವಾಯ |
ಪಾಪಧಾರಿಣೇ ಲಸನ್ನ ಮಸ್ತ ತೇ ನಮ: ಶಿವಾಯ |
ಶಾಪದೋಷ ಖಂಡ ಪ್ರಶಸ್ತ ತೇ ನಮ: ಶಿವಾಯ ||೪||

ಭಾವಾರ್ಥ:-ಅಗ್ರಗಣ್ಯ ಪರ್ವತವನ್ನು ತುಂಡರಿಸಿದ ಯೋಗ್ಯವಾಗಿರುವ ಹಸ್ತಗಳನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಪಾಪಗಳನ್ನು ಹೋಗಲಾಡಿಸುವ ಸಾಗರದಂತಹಾ ಕೈಗಳನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ತಲೆಬಾಗದ ನಾಸ್ತಿಕರಿಗೆ ಆಪತ್ತುಗಳನ್ನು ನೀಡುವ ಶಿವನಿಗೆ ನನ್ನ ನಮಸ್ಕಾರಗಳು.ದೇವತಾ ಶಾಪದಿಂದ ಉದ್ಭವಿಸುವ ಸಮಸ್ತ ದೋಷಗಳನ್ನು ನಿವಾರಿಸುವುದರಲ್ಲಿ ಉತ್ತಮನಾದ ಶಿವನಿಗೆ ನನ್ನ ನಮಸ್ಕಾರಗಳು.

ವ್ಯೋಮಕೇಶ ದಿವ್ಯ ಭವ್ಯ ರೂಪ ತೇ ನಮ: ಶಿವಾಯ |
ಹೇಮಮೇದಿನೀಧರೇಂದ್ರ ಚಾಪ ತೇ ನಮ: ಶಿವಾಯ |
ನಾಮಮಾತ್ರ ದಗ್ಧ ಸರ್ವಪಾಪ ತೇ ನಮ: ಶಿವಾಯ |
ಕಾಮನೈಕತಾನ ಹೃದ್ದುರಾಪ ತೇ ನಮ: ಶಿವಾಯ ||೫||

ಭಾವಾರ್ಥ:-ಉತ್ತಮವಾಗಿರುವ ತಲೆಗೂದಲನ್ನು ಧರಿಸಿರುವ ಶಿವನಿಗೆ ನನ್ನ ನಮಸ್ಕಾರಗಳು. ಮನೋಹರವಾದ ಬೃಹತ್ ಶರೀರವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಬಂಗಾರದ ಬೆಟ್ಟದ ಹೊಳಪನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ನಾಮೋಚ್ಚಾರಣೆ ಮಾತ್ರದಿಂದ ಸಮಸ್ತ ಪಾಪಗಳನ್ನು ಭಸ್ಮ ಮಾಡುವ ಶಿವನಿಗೆ ನನ್ನ ನಮಸ್ಕಾರಗಳು.ಒಂದೇ ಗುರಿಯನ್ನು ಹೊಂದಿ ಶ್ರದ್ಧಾಭಕ್ತಿಯಿಂದ ಭಜಿಸಿದವರ ಮನೋಕ್ಲೇಶಗಳನ್ನು ಸಂಹರಿಸುವ ಶಿವನಿಗೆ ನನ್ನ ನಮಸ್ಕಾರಗಳು. ಶಿವನಿಗೆ ನನ್ನ ನಮಸ್ಕಾರಗಳು.

ಬ್ರಹ್ಮಮಸ್ತಕಾವಲೀ ನಿಬದ್ದತೇ ನಮ: ಶಿವಾಯ |
ಜಿಹ್ಮಗೇಂದ್ರಕುಂಡಲ ಪ್ರಸಿದ್ಧ ತೇ ನಮ: ಶಿವಾಯ |
ಬ್ರಹ್ಮಣೇ ಪ್ರಣೀತವೇದಪದ್ಧತೇ ನಮ: ಶಿವಾಯ |
ಜಿಂಹಕಾಲದೇಹದತ್ತ ಪದ್ಧತೇ ನಮ: ಶಿವಾಯ ||೬||

ಭಾವಾರ್ಥ:-ಬ್ರಹ್ಮನ ಶಿರವನ್ನು ಕತ್ತರಿಸಿದ ಶಿವನಿಗೆ ನನ್ನ ನಮಸ್ಕಾರಗಳು.ಸರ್ಪವನ್ನು ಕಿವಿಯಾಭರಣವಾಗಿ ಧರಿಸಿರುವ ಶಿವನಿಗೆ ನನ್ನ ನಮಸ್ಕಾರಗಳು.ವೇದೋಪನಿಷತ್ತುಗಳಿಂದ ಸ್ತುತಿಸಲ್ಪಡುವ ಪರಬ್ರಹ್ಮ ಸ್ವರೂಪನಾದ ಶಿವನಿಗೆ ನನ್ನ ನಮಸ್ಕಾರಗಳು.ಮಹಾಕಾಲ ಸ್ವರೂಪನಾದ ಒಡೆಯ ಶಿವನಿಗೆ ನನ್ನ ನಮಸ್ಕಾರಗಳು.

ಕಾಮನಾಶನಾಯ ಶುದ್ಧ ಕರ್ಮಣೇ ನಮ: ಶಿವಾಯ |
ಸಾಮಗಾನಜಾಯ ಮಾನಶರ್ಮಣೇ ನಮ: ಶಿವಾಯ |
ಹೇಮಕಾಂತಿಚಾಕಚಕ್ಯ ವರ್ಮಣೇ ನಮ: ಶಿವಾಯ |
ಸಾಮಜಾಸುರಾಂಗಲಬ್ಧ ಚರ್ಮಣೇ ನಮ: ಶಿವಾಯ ||೭||

ಭಾವಾರ್ಥ:-ಅಜ್ಞಾನವನ್ನು ನಾಶಗೊಳಿಸುವ ಶಿವನಿಗೆ ನನ್ನ ನಮಸ್ಕಾರಗಳು.ಶುದ್ಧ ಶರೀರದವನಾದ ಶಿವನಿಗೆ ನನ್ನ ನಮಸ್ಕಾರಗಳು.ಸಾಮಗಾನದಿಂದ ಸ್ತುತಿಸಲ್ಪಡುವ ಶಿವನಿಗೆ ನನ್ನ ನಮಸ್ಕಾರಗಳು.ಬಂಗಾರದಂತೆ ಶೋಭಿಸುವ ಶಿವನಿಗೆ ನನ್ನ ನಮಸ್ಕಾರಗಳು.ಗಜಾಸುರನ ಶರೀರದಿಂದ ದೊರಕಿದ ವಸನಧಾರಿಯಾದ ಶಿವನಿಗೆ ನನ್ನ ನಮಸ್ಕಾರಗಳು.

ಜನ್ಮ ಮೃತ್ಯು ಘೋರ ದು:ಖಹಾರಿಣೇ ನಮ: ಶಿವಾಯ |
ಚಿನ್ಮಯೈಕರೂಪದೇಹ ಧಾರಿಣೇ ನಮ: ಶಿವಾಯ |
ಮನ್ಮನೋರಥಾವಪೂರ್ತಿಕಾರಿಣೇ ನಮ: ಶಿವಾಯ |
ಸನ್ಮನೋಗತಾಯ ಕಾಮವೈರಿಣೇ ನಮ: ಶಿವಾಯ ||೮||

ಭಾವಾರ್ಥ:-ಜನ್ಮ ಮೃತ್ಯುಗಳ ಘೋರ ದು:ಖವನ್ನು ಪರಿಹರಿಸುವ ಶಿವನಿಗೆ ನನ್ನ ನಮಸ್ಕಾರಗಳು.ಚಿನ್ಮಯ ರೂಪದ ಶರೀರ ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಮನೋಭಿಲಾಷೆಗಳನ್ನು ಈಡೇರಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸಜ್ಜನರ ಮನದ ಕೆಟ್ಟ ಆಶಾಪಾಶಗಳನ್ನು ನಾಶಮಾಡುವ ಶಿವನಿಗೆ ನನ್ನ ನಮಸ್ಕಾರಗಳು.

ಯಕ್ಷ ರಾಜಬಂಧವೇ ದಯಾಲವೇ ನಮ: ಶಿವಾಯ |
ದಕ್ಷ ಪಾಣಿಶೋಭಿಕಾಂಚನಾಲವೇ ನಮ: ಶಿವಾಯ |
ಪಕ್ಷಿರಾಜವಾಹಹೃಚ್ಛಯಾಲವೇ ನಮ: ಶಿವಾಯ |
ಅಕ್ಷಿಪಾಲ ವೇದ ಪೋತತಾಲವೇ ನಮ: ಶಿವಾಯ ||೯||

ಭಾವಾರ್ಥ:-ಯಕ್ಷ ರಾಜನ ಬಂಧುವಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ದಕ್ಷ ಯಜ್ಞ ನಾಶಕ ಶಿವನಿಗೆ ನನ್ನ ನಮಸ್ಕಾರಗಳು.ವಿಷ್ಣುವಿನ ಹೃತ್ಕಮಲದಲ್ಲಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಕ್ಷಿಪಾಲನನ್ನು ವೇದಮಂತ್ರಗಳಿಂದ ಪಾವನಗೊಳಿಸಿದ ಶಿವನಿಗೆ ನನ್ನ ನಮಸ್ಕಾರಗಳು.

ದಕ್ಷ ಹಸ್ತ ನಿಷ್ಠ ಜಾತವೇದಸೇ ನಮ: ಶಿವಾಯ |
ಅಕ್ಷರಾತ್ಮನೇ ನಮದ್ಭಿಡೌಜಸೇ ನಮ: ಶಿವಾಯ |
ದೀಕ್ಷಿತ ಪ್ರಕಾಶಿತಾತ್ಮ ತೇಜಸೇ ನಮ: ಶಿವಾಯ |
ಅಕ್ಷರಾಜವಾಹ ತೇ ಸತಾಂ ಗತೇ ನಮ: ಶಿವಾಯ ||೧೦||

ಭಾವಾರ್ಥ:-ದಕ್ಷನ ಕೈಯಲ್ಲಿ ಯಜ್ಞ ಮಾಡಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ಅವಿನಾಶಿಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ದಿಸೆಗಳಿಗೆ ವ್ಯಾಪಿಸಿ ಪ್ರಕಾಶ ಬೀರುವ ಶಿವನಿಗೆ ನನ್ನ ನಮಸ್ಕಾರಗಳು.ನಂದಿವಾಹನನಾಗಿ ಸಜ್ಜನರಿಗೆ ಮೋಕ್ಷ ಪ್ರದಾಯಕನಾಗಿರುವ ಆ ಶಿವನಿಗೆ ನನ್ನ ನಮಸ್ಕಾರಗಳು.

ರಾಜತಾಜಲೇಂದ್ರಸಾನು ವಾಸಿನೇ ನಮ: ಶಿವಾಯ |
ರಾಜಮಾನನಿತ್ಯ ಮಂದಹಾಸಿನೇ ನಮ: ಶಿವಾಯ |
ರಾಜಕೋರ ಕಾವತಂಸಭಾಸಿನೇ ನಮ: ಶಿವಾಯ |
ರಾಜರಾಜಮಿತ್ರತಾಪ್ರಕಾಶಿನೇ ನಮ: ಶಿವಾಯ ||೧೧||

ಭಾವಾರ್ಥ:-ರಜತ ಪರ್ವತ ಶಿಖರ[ಹಿಮಾಲಯ ಪರ್ವತ ಶ್ರೇಣಿ]ದಲ್ಲಿ ನೆಲೆಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಗ್ರಗಣ್ಯನಾಗಿ ಸದಾ ಮಂದಹಾಸಭರಿತನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ನಾಗರಾಜಕುವರರ ಭಯವನ್ನು ನಿವಾರಿಸುವವನಾದ ಶಿವನಿಗೆ ನನ್ನ ನಮಸ್ಕಾರಗಳು.ದೇವೇಂದ್ರ ಸಾಮ್ರಾಟನ ಮಿತ್ರ ಶಿವನಿಗೆ ನನ್ನ ನಮಸ್ಕಾರಗಳು.

ದೀನಮಾನವಾಲಿಕಾಮಧೇನವೇ ನಮ: ಶಿವಾಯ |
ಸೂನಬಾಣದಾಹಕೃತ್ಪ್ಕ್ರಶಾನವೇ ನಮ: ಶಿವಾಯ | 
ಸ್ವಾನುರಾಗಭಕ್ತ ರತ್ನಸಾನವೇ ನಮ: ಶಿವಾಯ |
ದಾನವಾಂಧಕಾರಚಂಡ ಭಾನವೇ ನಮ: ಶಿವಾಯ ||೧೨||

ಭಾವಾರ್ಥ:-ಶರಣಾಗತರ ಮಾನ ರಕ್ಷಣೆಯ ಕಾಮಧೇನುವಿನಂತಿರುವ ಶಿವನಿಗೆ ನನ್ನ ನಮಸ್ಕಾರಗಳು.ಮನ್ಮಥದಹನಾಗ್ನಿಯ ಉರಿಯನ್ನು ಶಾಂತಗೊಳಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ಒಲುಮೆಯಿಂದ ಆರಾಧಿಸುವ ಯೋಗ್ಯ ಭಕ್ತರ ಸಂರಕ್ಷಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಸುರರ ಅಜ್ಞಾನಾಂಧಕಾರವನ್ನು ತೊಲಗಿಸುವ ಶಿವನಿಗೆ ನನ್ನ ನಮಸ್ಕಾರಗಳು.

ಸರ್ವಮಂಗಲಾ ಕುಚಾಗ್ರಶಾಯಿನೇ ನಮ: ಶಿವಾಯ |
ಸರ್ವದೇವತಾಗಣಾತಿಶಾಯಿನೇ ನಮ: ಶಿವಾಯ |
ಪೂರ್ವ ದೇವನಾಶ ಸಂವಿಧಾಯಿನೇನಮ: ಶಿವಾಯ |
ಸರ್ವ ಮನ್ಮನೋಜಭಂಗದಾಯಿನೇ ನಮ: ಶಿವಾಯ ||೧೩||

ಭಾವಾರ್ಥ:-ಸಮಸ್ತ ಮಂಗಲದಾಯಿನಿಯಾದ ಪಾರ್ವತಿಯ ಎದೆಯ ಮೇಲೆ ಪವಡಿಸಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ದೇವತಾ ಸಮೂಹದ ಅಗ್ರಗಣ್ಯನಾಗಿರುವವನಾದ ಶಿವನಿಗೆ ನನ್ನ ನಮಸ್ಕಾರಗಳು.ಸೂರ್ಯದೇವನ ಬೇಗೆಯನ್ನು ಶಾಂತಗೊಳಿಸುವ ಶಿವನಿಗೆ ನನ್ನ ನಮಸ್ಕಾರಗಳು.ಕಾಮದೇವನನ್ನು ಸಂಹರಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.

ಸ್ತೋತ್ರಭಕ್ತಿತೋsಪಿ ಭಕ್ತ ಪೋಷಿಣೇ ನಮ: ಶಿವಾಯ |
ಮಾಕರಂದಸಾರವರ್ಷಿಭಾಷಿಣೇ ನಮ: ಶಿವಾಯ |
ಏಕಬಿಲ್ವದಾನತೋsಪಿ ತೊಷಿಣೇ ನಮ: ಶಿವಾಯ |
ನೈಕಜನ್ಮ ಪಾಪಜಾಲ ಶೋಷಿಣೇ ನಮ: ಶಿವಾಯ ||೧೪||

ಭಾವಾರ್ಥ:-ಕಿಂಚಿತ್ ಭಕ್ತಿ ಮಾಡಿದರೂ ಕೂಡಾ ಭಕ್ತರನ್ನು ಸಂರಕ್ಷಿಸುವವನಾದ ಶಿವನಿಗೆ ನನ್ನ ನಮಸ್ಕಾರಗಳು.ಅಮೃತಸಮಾನವಾದ ಹಿತವಚನದ ಮಳೆಗರೆಯುವವನಾದ ಶಿವನಿಗೆ ನನ್ನ ನಮಸ್ಕಾರಗಳು.ಏಕ ಮಾತ್ರ ಬಿಲ್ವ ದಳವನ್ನು ಅರ್ಪಿಸಿದರೂ ಮುದಗೊಳ್ಳುವ ಶಿವನಿಗೆ ನನ್ನ ನಮಸ್ಕಾರಗಳು.ಪೂರ್ವ ಜನ್ಮ ಕೃತ ಪಾಪಸಮೂಹಗಳ ಪರಿಹಾರಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಸರ್ವಜೀವರಕ್ಷಣೈಕಶೀಲಿನೇ ನಮ: ಶಿವಾಯ |
ಪಾರ್ವತೀಪ್ರಿಯಾಯ ಭಕ್ತಪಾಲಿನೇ ನಮ: ಶಿವಾಯ |
ದುರ್ವಿದಗ್ಧ ದೈತ್ಯ ಸೈನ್ಯದಾರಿಣೇ ನಮ: ಶಿವಾಯ |
ಶರ್ವರೀಶಧಾರಿಣೇ ಕಪಾಲಿನೇ ನಮ: ಶಿವಾಯ ||೧೫||

ಭಾವಾರ್ಥ:-ಸಮಸ್ತ ಜೀವ ಕೋಟಿಗಳ ಸಂರಕ್ಷಣೆ ಮಾಡುವ ಗುಣ ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಪಾರ್ವತಿ ದೇವಿಯ ಪ್ರಿಯನಾಗಿ ಭಕ್ತ ಪರಿಪಾಲಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಮದದಿಂದ ಸೊಕ್ಕಿದ ದೈತ್ಯರ ಸೇನಾಸಮೂಹದ ನಾಶಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ನಾಗಾಭರಣನಾಗಿ ಕಪಾಲಧರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಪಾಹಿಮಾಮುಮಾಮನೋಜ್ಞ ದೇಹ ತೇ ನಮ: ಶಿವಾಯ |
ದೇಹಿ ಮೇ ವರಂ ಸಿತಾದ್ರಿಗೇಹ ತೇ ನಮ: ಶಿವಾಯ |
ಮೋಹಿತರ್ಷಿಕಾಮಿನೀ ಸಮೂಹ ತೇ ನಮ: ಶಿವಾಯ |
ಸ್ನೇಹಿತ ಪ್ರಸನ್ನ ಕಾಮದೋಹ ತೇ ನಮ: ಶಿವಾಯ ||೧೬||

ಭಾವಾರ್ಥ:-ಉಮಾದೇವಿಗೆ ಸಂತಸವನ್ನೀಯುವ ಶರೀರವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು. ಬೆಳ್ಳಿ ಬೆಟ್ಟದ ಮೇಲೆ ನೆಲೆಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ನಲ್ಲೆಯ ಮೋಹಕ್ಕೊಳಗಾಗಿ ವೇಷಧಾರಿಯಾದ ಶಿವನಿಗೆ ನನ್ನ ನಮಸ್ಕಾರಗಳು.ಆಪ್ತರ ಪಾಲಿಗೆ ದಯೆಯುಳ್ಳವನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಮಂಗಲಪ್ರದಾಯ ಗೋತುರಂಗ ತೇ ನಮ: ಶಿವಾಯ |
ಗಂಗಯಾ ತರಂಗಿತೋತ್ತಮಾಂಗ ತೇ ನಮ: ಶಿವಾಯ |
ಸುರಂಗ ಪ್ರವೃತ್ತ ವೈರಿ ಭಂಗ ತೇ ನಮ: ಶಿವಾಯ |
ಅಂಗರಾಜಯೇ ಕುರೇಕುರಂಗ ತೇ ನಮ: ಶಿವಾಯ ||೧೭||

ಭಾವಾರ್ಥ:-ಗೋವು ಕುದುರೆಗಳನ್ನು ರಕ್ಷಿಸುತ್ತಾ ಶುಭವನ್ನು ಕರುಣಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸುಂದರ ದೇಹದವನಾಗಿ ಭಾಗೀರಥಿಯನ್ನು ಶಿರದಲ್ಲಿ ಧರಿಸಿರುವವನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಾಗರದದಿಂದ ಉದ್ಭವಿಸಿದ ವೈರಿಯನ್ನು ನಾಶಗೊಳಿಸಿದ ಶಿವನಿಗೆ ನನ್ನ ನಮಸ್ಕಾರಗಳು.ಚಿಗರೆಯ ಚರ್ಮದಿಂದ ಶರೀರವನ್ನು ಅಲಂಕರಿಸಿಕೊಂಡಿರುವ ಶಿವನಿಗೆ ನನ್ನ ನಮಸ್ಕಾರಗಳು.

ಈಹಿತಕ್ಷಣಾಪ್ರದಾನಹೇತವೇ ನಮ: ಶಿವಾಯ |
ಅಹಿತಾಗ್ನಿ ಪಾಲಕೋಕ್ಷ ಕೇತವೇ ನಮ: ಶಿವಾಯ |
ದೇಹಕಾಂತಿಧೂತ ರೌಪ್ಯ ಧಾತವೇ ನಮ: ಶಿವಾಯ |
ಗೇಹದು:ಖ ಪುಂಜಧೂಮಕೇತವೇ ನಮ: ಶಿವಾಯ ||೧೮||

ಭಾವಾರ್ಥ:-ಕಂಡಕೂಡಲೇ ಆಶೆಗಳನ್ನು ಈಡೇರಿಸುವ ಶಿವನಿಗೆ ನನ್ನ ನಮಸ್ಕಾರಗಳು.ಪ್ರಳಯಾಗ್ನಿಗೆ ಕಾರಣವಾಗುವ ಶಿವನಿಗೆ ನನ್ನ ನಮಸ್ಕಾರಗಳು.ರಜತಕಣದಂತೆ ಶರೀರದ ಹೊಳಪುಳ್ಳ ಶಿವನಿಗೆ ನನ್ನ ನಮಸ್ಕಾರಗಳು.ಶರೀರದಲ್ಲಿನ ದು:ಖ ಸಮೂಹಗಳಿಗೆ ಧೂಮಕೇತುವಿನೋಪಾದಿಯಲ್ಲಿ ವಿನಾಶಕರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ತ್ರ್ಯಕ್ಷದೀನಸತ್ಕೃಪಾಕಟಾಕ್ಷ ತೇ ನಮ: ಶಿವಾಯ |
ದಕ್ಷ ಸಪ್ತ ತಂತುನಾಶದಕ್ಷ ತೇ ನಮ: ಶಿವಾಯ |
ಋಕ್ಷರಾಜಬಾನುಪಾವಕಾಕ್ಷ ತೇ ನಮ: ಶಿವಾಯ |
ರಕ್ಷ ಮಾಂ ಪ್ರಪನ್ನ ಮಾತ್ರ ರಕ್ಷ ತೇ ನಮ: ಶಿವಾಯ ||೧೯||

ಭಾವಾರ್ಥ:-ಭಕ್ತನಾದ ತ್ರ್ಯಕ್ಷನನ್ನು ಅನುಗ್ರಹಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ದಕ್ಷರಾಜನ ಏಳು ಸಂತತಿಯನ್ನು ನಾಶ ಮಾಡುವುದರಲ್ಲಿ ಸಮರ್ಥನೆನಿಸಿದ ಶಿವನಿಗೆ ನನ್ನ ನಮಸ್ಕಾರಗಳು.ಋಷ್ಯ ಪರ್ವತದ ಮೇಲ್ಭಾಗದಲ್ಲಿ ಅಗ್ನಿಯೋಪಾದಿಯಲ್ಲಿ ಶೋಭಾಯಮಾನನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಆರ್ತ ರಕ್ಷಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ನ್ಯಂಕುಪಾಣಯೇ ಶಿವಂಕರಾಯ ತೇ ನಮ: ಶಿವಾಯ |
ಸಂಕಟಾಬ್ಧಿತೀರ್ಣಕಿಂಕರಾಯ ತೇ ನಮ: ಶಿವಾಯ |
ಪಂಕಭೀಷಿತಾಭಯಂಕರಾಯ ತೇ ನಮ: ಶಿವಾಯ |
ಪಂಕಜಾನನಾಯ ಶಂಕರಾಯ ತೇ ನಮ: ಶಿವಾಯ ||೨೦||

ಭಾವಾರ್ಥ:-ಕಪಾಲವನ್ನು ಹಸ್ತದಲ್ಲಿ ಹಿಡಿದುಕೊಂಡಿರುವವ ಶಿವನಿಗೆ ನನ್ನ ನಮಸ್ಕಾರಗಳು. ದು:ಖಸಾಗರವನ್ನು ದಾಟುವ ಸೇತುವಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಂಸಾರವೆನ್ನುವ ಘೋರ ಕೆಸರನ್ನು ತೊಳೆಯುವವನಾದ ಶಿವನಿಗೆ ನನ್ನ ನಮಸ್ಕಾರಗಳು.ತಾವರೆಯಂತಹಾ ಮೊಗವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.

ಕರ್ಮಪಾಶನಾಶ ನೀಲಕಂಠ ತೇ ನಮ: ಶಿವಾಯ |
ಶರ್ಮದಾಯ ನರ್ಮಭಸ್ಮ ಕಂಠ ತೇ ನಮ: ಶಿವಾಯ |
ನಿರ್ಮಮಷ್ಮಿ ಸೇವಿತೋಪಕಂಠ ತೇ ನಮ: ಶಿವಾಯ |
ಕುರ್ಮಹೇ ನತೀರ್ನಮದ್ವಿಕುಂಠ ತೇ ನಮ: ಶಿವಾಯ ||೨೧||

ಭಾವಾರ್ಥ:-ಕರ್ಮಗಳೆನ್ನುವ ಹಗ್ಗವನ್ನು ನಾಶಮಾಡುವವನಾದ ನೀಲಕಂಠನಾದ ಶಿವನಿಗೆ ನನ್ನ ನಮಸ್ಕಾರಗಳು.ಉತ್ತಮವಾಗಿರುವ ಭಸ್ಮವನ್ನು ಧರಿಸಿ ಸುಖವನ್ನು ದಯಪಾಲಿಸುವ ಶಿವನಿಗೆ ನನ್ನ ನಮಸ್ಕಾರಗಳು.ಅಹಂಕಾರ ರಹಿತರಾಗಿರುವ ಋಷಿ ಮುನಿಗಳಿಂದ ಸೇವೆಯನ್ನು ಸ್ವೀಕರಿಸುತ್ತಿರುವ ಶಿವನಿಗೆ ನನ್ನ ನಮಸ್ಕಾರಗಳು.ಆರ್ತರನ್ನು ರಕ್ಷಿಸಿ ಪರಿಪಾಲಿಸುವ ಶಿವನಿಗೆ ನನ್ನ ನಮಸ್ಕಾರಗಳು.

ವಿಷ್ಟಪಾಧಿಪಾಯ ನಮ್ರ ವಿಷ್ಣವೇ ನಮ: ಶಿವಾಯ |
ಶಿಷ್ಟವಿಪ್ರಹೃದ್ಗುಹಾಚರಿಷ್ಟವೇ ನಮ: ಶಿವಾಯ |
ಇಷ್ಟ ವಸ್ತು ನಿತ್ಯ ತುಷ್ಟ ಜಿಷ್ಣವೇ ನಮ: ಶಿವಾಯ |
ಕಷ್ಟನಾಶನಾಯ ಲೋಜಿಷ್ಣವೇ ನಮ: ಶಿವಾಯ ||೨೨||

ಭಾವಾರ್ಥ:-ವೈಕುಂಠಾಧಿಪತಿ ಮಹಾವಿಷ್ಣುವಿನಿಂದ ಪ್ರಣಾಮಗಳನ್ನು ಸ್ವೀಕರಿಸುತ್ತಿರುವ ಶಿವನಿಗೆ ನನ್ನ ನಮಸ್ಕಾರಗಳು.ಜ್ಞಾನಿಗಳಾದ ಬ್ರಾಹ್ಮಣರ ಹೃದಯ ಮಂದಿರದಲ್ಲಿ ಸಂಚರಿಸುತ್ತಿರುವ ಶಿವನಿಗೆ ನನ್ನ ನಮಸ್ಕಾರಗಳು.ಇಷ್ಟ ಪಡುವ ವಸ್ತುಗಳನ್ನು ಅನುದಿನವೂ ಅರ್ಪಿಸುತ್ತಿರುವುದರಿಂದ ಪ್ರಸನ್ನನಾಗುವ ಮನಸ್ಸನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಕಷ್ಟಗಳನ್ನು ಪರಿಹರಿಸುವ ಕೃಪಾಸಾಗರ ಶಿವನಿಗೆ ನನ್ನ ನಮಸ್ಕಾರಗಳು.

ಅಪ್ರಮೇಯ ದಿವ್ಯ ಸುಪ್ರಭಾವ ತೇ ನಮ: ಶಿವಾಯ |
ಸತ್ಪ್ರಪನ್ನ ರಕ್ಷಸ್ವಭಾವ ತೇ ನಮ: ಶಿವಾಯ |
ಸ್ವಪ್ರಕಾಶ ನಿಸ್ತುಲಾನುಭಾವ ತೇ ನಮ: ಶಿವಾಯ |
ವಿಪ್ರಡಿಂಭದರ್ಶಿತಾರ್ದ್ರ ಭಾವ ತೇ ನಮ: ಶಿವಾಯ ||೨೩||

ಭಾವಾರ್ಥ:-ಸಾಮನ್ಯರ ಅರಿವಿಗೆ ನಿಲುಕಲಾರದ ದಿವ್ಯಪ್ರಕಾಶವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಸದ್ಭಕ್ತರನ್ನು ಪರಿಪಾಲಿಸುತ್ತಾ ಸ್ವಯಂಪ್ರಭೆಯನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಳತೆಗೆ ನಿಲುಕದ ಸಾಮರ್ಥ್ಯವುಳ್ಳವನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಬ್ರಾಹ್ಮಣರ ಪಾಲಿನ ದಯಾಸಾಗರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಸೇವಕಾಯ ಮೇ ಮೃಡ ಪ್ರಸೀದ ತೇ ನಮ: ಶಿವಾಯ |
ಭಾವಲಭ್ಯ ತಾವಕಪ್ರಸಾದ ತೇ ನಮ: ಶಿವಾಯ |
ಪಾವಕಾಕ್ಷ ದೇವಪೂಜ್ಯಪಾದ ತೇ ನಮ: ಶಿವಾಯ |
ತಾವಕಾಂಘ್ರಿ ಭಕ್ತ ದತ್ತ ಮೋದ ತೇ ನಮ: ಶಿವಾಯ ||೨೪||

ಭಾವಾರ್ಥ:-ಸೇವಕನಾಗಿರುವ ನನಗೆ ಪ್ರಸನ್ನನಾಗುವ ಈಶ್ವರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಗ್ನಿಯನ್ನು ಕಣ್ಣಲ್ಲಿ ಧರಿಸಿ ಭಕ್ತಿ ಭಾವದಿಂದ ಶರಣಾಗುವರಿಗೆ ಅನುಗ್ರಹಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ದೇವಾನುದೇವತೆಗಳಿಂದ ಪೂಜಿಸಿಗೊಂಬ ಪರಮಪಾವನ ಚರಣಗಳನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ತನ್ನ ಪಾದಾರವಿಂದಗಳ ಆಶ್ರಯಹೊಂದಿದ ಭಕ್ತರಿಗೆ ಸುಖವನ್ನು ಅನುಗ್ರಹಿಸುವ ಶಿವನಿಗೆ ನನ್ನ ನಮಸ್ಕಾರಗಳು.

ಭುಕ್ತಿಮುಕ್ತಿ ದಿವ್ಯ ಭೋಗದಾಯಿನೇ ನಮ: ಶಿವಾಯ |
ಶಕ್ತಿಕಲ್ಪಿತ ಪ್ರಪಂಚಭಾಗಿನೇ ನಮ: ಶಿವಾಯ |
ಭಕ್ತಸಂಕಟಾಪಹಾರಯೋಗಿನೇ ನಮ: ಶಿವಾಯ |
ಯುಕ್ತಸನ್ಮನ:ಸರೋಜಯೋಗಿನೇ ನಮ: ಶಿವಾಯ ||೨೫||

ಭಾವಾರ್ಥ:-ಶ್ರೇಷ್ಟವಾಗಿರುವಂತಹ ಸೌಭಾಗ್ಯ ಮತ್ತು ಮೋಕ್ಷತ್ವವನ್ನು ಕರುಣಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸ್ವಂತ ಶಕ್ತಿಯಿಂದ ಬ್ರಹ್ಮಾಂಡವನ್ನೇ ಸೃಷ್ಟಿಸಿದ ಶಿವನಿಗೆ ನನ್ನ ನಮಸ್ಕಾರಗಳು. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಆತ್ಮಸಾಧಕ ಶಿವನಿಗೆ ನನ್ನ ನಮಸ್ಕಾರಗಳು.ತಪಸ್ವಿಗಳ ಮನೋಹರವಾದ ಮನಸ್ಸಿನ ತಾವರೆಯಂತಿರುವ ಶಿವನಿಗೆ ನನ್ನ ನಮಸ್ಕಾರಗಳು.

ಅಂತಕಾಂತಕಾಯ ಪಾಪಹಾರಿಣೇ ನಮ: ಶಿವಾಯ |
ಶಾಂತಮಾಯ ದಂತಿಚರ್ಮಧಾರಿಣೇ ನಮ: ಶಿವಾಯ |
ಸಂತತಾಶ್ರಿತವ್ಯಥಾವಿದಾರಿಣೇ ನಮ: ಶಿವಾಯ |
ಜಂತುಜಾತನಿತ್ಯ ಸೌಖ್ಯಕಾರಿಣೇ ನಮ: ಶಿವಾಯ ||೨೬||

ಭಾವಾರ್ಥ:-ಯಮನಿಗೇ ಯಮನಾಗಿ ಪಾಪಪರಿಹಾರಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಶಾಂತಮಾಯವೆನ್ನುವ ಆನೆಯ ಚರ್ಮವನ್ನು ಧರಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ಸತತವಾಗಿ ತನ್ನನ್ನು ಆಶ್ರಯಿಸಿದವರ ಸಂಕಷ್ಟಗಳನ್ನು ಹೋಗಲಾಡಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ಜೀವಿಗಳಿಗೆ ಎಡೆಬಿಡದೆ ಸೌಭಾಗ್ಯವನ್ನು ದಯಪಾಲಿಸುವ ಶಿವನಿಗೆ ನನ್ನ ನಮಸ್ಕಾರಗಳು.

ಶೂಲಿನೇ ನಮೋನಮ:ಕಪಾಲಿನೇ ನಮ: ಶಿವಾಯ |
ಪಾಲಿನೇ ವಿರಿಂಚಿತುಂಡಮಾಲಿನೇ ನಮ: ಶಿವಾಯ |
ಲೀಲಿನೇ ವಿಶೇಷರುಂಡ ಮಾಲಿನೇ ನಮ: ಶಿವಾಯ |
ಶೀಲಿನೇ ನಮ: ಪ್ರಪುಣ್ಯಶಾಲಿನೇ ನಮ: ಶಿವಾಯ ||೨೭||

ಭಾವಾರ್ಥ:-ತ್ರಿಶೂಲಧರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಬ್ರಹ್ಮನ ಕಪಾಲವನ್ನು ಧರಿಸಿಕೊಂಡಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತರ ರಕ್ಷಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಚತುರ್ಮುಖ ಬ್ರಹ್ಮನ ರುಂಡವನ್ನು ಮಾಲೆಯಾಗಿ ಧರಿಸಿರುವ ಶಿವನಿಗೆ ನನ್ನ ನಮಸ್ಕಾರಗಳು.ಲೀಲಾ ವಿಶೇಷನಾಗಿರುವ ರುಂಡಮಾಲಾಧರ ಶಿವನಿಗೆ ನನ್ನ ನಮಸ್ಕಾರಗಳು.ಸರ್ವಗುಣ ಸಂಪನ್ನ ಶಿವನಿಗೆ ನನ್ನ ನಮಸ್ಕಾರಗಳು.ಅಪರಿಮಿತ ಮಹಾಪುಣ್ಯಶಾಲಿಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಶಿವ ಪಂಚಾಕ್ಷರ ಮುದ್ರಾಂ |
ಚತುಷ್ಟದೋಲ್ಲಾಸ ಪದ್ಮಮಣಿಘಟಿತಾ ||
ನಕ್ಷತ್ರಮಾಲಿಕಾಮಿಹ |
ದಧದುಪಕಂಠಂನರೋ ಭವೇತ್ಸೋಮ: ||೨೮||

ಭಾವಾರ್ಥ:-"ಓಂ ನಮ: ಶಿವಾಯ"ವೆಂಬ ಶಿವಪಂಚಾಕ್ಷರಗಳಿಂದ ಕೂಡಿರುವ ಕಮಲಮಣಿಯಂತೆ ಸಂತಸದಾಯಕವಾಗಿರುವ ನಾಲ್ಕು ಪಂಕ್ತಿಗಳುಳ್ಳ ಈ ನಕ್ಷತ್ರಮಾಲಿಕೆಯ ಹಾರವನ್ನು ಯಾವಾತನು ಕಂಠದಲ್ಲಿ ಧರಿಸುವನೋ [ಕಂಠಸ್ಥನಾಗಿರುವನೋ] ಆತನು ಚಂದ್ರನೋಪಾದಿಯಲ್ಲಿ ವಿರಾಜಿಸುತ್ತಾ ಸಂತಸದಿಂದ ಇರುವನು.
*********************************************************************
|| ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಶಿವಪಂಚಾಕ್ಷರ ನಕ್ಷತ್ರ ಮಾಲಾಸ್ತೋತ್ರಮ್ ||
|| ಈ ತೆರನಾಗಿ ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಶ್ರೀ ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರಗಳ ಭಾವಾರ್ಥವಾಗಿದೆ. ||
*********************************************************************
                      -೧೪-

   || ಶ್ರೀ ಶಿವಾಷ್ಟಕಮ್ ||
  *******************
ತಸ್ಮೈನಮ: ಪರಮಕಾರಣಕಾರಣಾಯ |
ದೀಪೋಜ್ವಲಜ್ವಲಿತ ಪಿಂಗಲಲೋಚನಾಯ ||
ನಾಗೇಂದ್ರಹಾರಕೃತ ಕುಂಡಲ ಭೂಷಣಾಯ |
ಬ್ರಹ್ಮೇಂದ್ರ ವಿಷ್ಣು ವರದಾಯ ನಮ: ಶಿವಾಯ ||೧||

ಭಾವಾರ್ಥ:-ಉಜ್ವಲಿತ ಅಗ್ನಿಯಂತಿರುವ,ಸಿಂಹ ಸದೃಶನಾಗಿರುವ,ಬೆಳಗುತ್ತಿರುವ ನಯನಗಳುಳ್ಳವನಾಗಿರುವ,ನಾಗೇಂದ್ರಹಾರನಾಗಿರುವ,ಕುಂಡಲಗಳಿಂದ ಅಲಂಕರಿಸಲ್ಪಟ್ಟವನಾದ,ಬ್ರಹ್ಮ,ವಿಷ್ಣು,ಇಂದ್ರರಿಗೆ ವರದಾಯಕನಾಗಿರುವ,ನಿಮಿತ್ತಗಳಿಗೆ ಪರಮ ನಿಮಿತ್ತನಾಗಿರುವ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಶ್ರೀಮತ್ಪ್ರಸನ್ನ ಶಶಿ ಪನ್ನಗ ಭೂಷಣಾಯ |
ಶೈಲೇಂದ್ರಜಾ ವದನ ಚುಂಬಿತ ಲೋಚನಾಯ ||
ಕೈಲಾಸ ಮಂದರ ಮಹೇಂದ್ರನಿಕೇತನಾಯ|
ಲೋಕತ್ರಯಾರ್ತಿ ಹರಣಾಯ ನಮ: ಶಿವಾಯ ||೨||

ಭಾವಾರ್ಥ:-ಸಂತುಷ್ಟನೂ ಮನೋಹರನೂ ಆಗಿ ಚಂದ್ರ ಹಾಗೂ ಸರ್ಪಗಳಿಂದ ಅಲಂಕರಿಸಿಗೊಂಡು ಪರ್ವತ ರಾಜನ ತನಯೆ ಪಾರ್ವತಿಯ ಮುಖಾರವಿಂದವನ್ನು ಕಾಣುವ ನಯನಗಳನ್ನು ಹೊಂದಿ,ಕೈಲಾಸ ಮಂದರ ಪರ್ವತಗಳ ಅಗ್ರಗಣ್ಯ ನಿವಾಸಿಯಾಗಿರುವ,ಮೂರು ಲೋಕಗಳ ತಾಪಾದಿದು:ಖಗಳ ನಿವಾರಕನಾಗಿರುವ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಪದ್ಮಾವದಾತ ಮಣಿಕುಂಡಲಗೋವೃಷಾಯ |
ಕೃಷ್ಣಾಗರು ಪ್ರಚುರಚಂದನ ಚರ್ಚಿತಾಯ ||
ಭಸ್ಮಾನುಷಕ್ತ ವಿಕಚೋತ್ಪಲ ಮಲ್ಲಿಕಾಯ |
ನಿಲಾಬ್ಜ ಕಂಠ ಸದೃಶಾಯ ನಮ: ಶಿವಾಯ ||೩||

ಭಾವಾರ್ಥ:- ತಾವರೆಯನ್ನು ಹೋಲುವ ಮನಮೋಹಕವಾದ ಮಣಿ ಕುಂಡಲಗಳನ್ನು ಧರಿಸಿಕೊಂಡಿರುವ, ವೃಷಭವನ್ನು ವಾಹನವನ್ನಾಗಿಸಿಕೊಂಡ,ಶ್ರೀಗಂಧ ಮತ್ತು ಚಂದನ,ಅಗರುಗಳನ್ನು ಲೇಪಿಸಿಕೊಂಡ,ಅಖಂಡ ಭಸ್ಮಧಾರಿಯಾದ,ಅರಳು ಮಲ್ಲಿಗೆ ತಾವರೆ ಪುಷ್ಪಗಳನ್ನು ಧರಿಸಿಕೊಂಡ,ನೀಲಿ ತಾವರೆಯ ಕೊರಳುಳ್ಳ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಲಂಬತ್ಸಪಿಂಗಲ ಜಟಾಮುಕುಟೋತ್ಕಟಾಯ |
ದಂಷ್ಟ್ರಾಕರಾಲ ವಿಕಟೋತ್ಕಟ ಭೈರವಾಯ ||
ವ್ಯಾಘ್ರಾಜಿನಾಂಬರಧರಾಯ ಮನೋಹರಾಯ |
ತ್ರೈಲೋಕ್ಯನಾಥನಮಿತಾಯ ನಮ: ಶಿವಾಯ ||೪||

ಭಾವಾರ್ಥ:-ಜೋತಾಡುವ ಕಂದುಬಣ್ಣದ ಜಡೆಯಕಿರೀಟವನ್ನು ಹೊಂದಿದ,ಭಯವನ್ನು ಹುಟ್ಟಿಸುವ ಕೋರೆ ಹಲ್ಲುಗಳನ್ನು ಹೊಂದಿದ,ಭಯಕ್ಕೆ ಕಾರಣವಾಗುವ ಭೈರವ ರೂಪನಾದ,ಹುಲಿಯ ಚರ್ಮವನ್ನು ಧರಿಸಿಕೊಂಡು ಮನೋಹರ ಸ್ವರೂಪನಾಗಿರುವ, ಮೂರುಲೋಕಾಧೀಶರಿಂದ ವಂದಿಸಲ್ಪಡುವ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ದಕ್ಷ ಪ್ರಜಾಪತಿ ಮಹಾಮಖನಾಶನಾಯ |
ಕ್ಷಿಪ್ರಂ ಮಹಾತ್ರಿಪುರ ದಾನವ ಘಾತನಾಯ ||
ಬ್ರಹ್ಮೋರ್ಜಿತೋರ್ಧ್ವಗ ಕರೋಟಿ ನಿಕೃಂತನಾಯ |
ಯೋಗಾಯ ಯೋಗ ನಮಿತಾಯ ನಮ: ಶಿವಾಯ ||೫||

ಭಾವಾರ್ಥ:-ದಕ್ಷಪ್ರಜಾಪತಿಯ ಮಹಾಯಜ್ಞ ನಾಶಕನಾದ,ತ್ರಿಪುರಾಸುರರನ್ನು ಅತಿ ಬೇಗನೆ ಸಂಹರಿಸಿದವನಾದ,ಬ್ರಹ್ಮನ ಮೇಲಿನ ಶಿರವನ್ನು ಕತ್ತರಿಸಿದವನಾದ,ಯೋಗಸ್ವರೂಪನಾಗಿ ಯೋಗವಂದ್ಯನಾದ  ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಸಂಸಾರ ಸೃಷ್ಟಿ ಘಟನಾಯ ಪರಿವರ್ತನಾಯ |
ರಕ್ಷ: ಪಿಶಾಚಗಣಸಿದ್ಧ ಸಮಾಕುಲಾಯ ||
ಸಿದ್ದೋರಗ ಗ್ರಹಗಣೇಂದ್ರ ನಿಷೇವಿತಾಯ | 
ಶಾರ್ದೂಲ ಚರ್ಮವಸನಾಯ ನಮ: ಶಿವಾಯ ||೬||

ಭಾವಾರ್ಥ:-ಬ್ರಹ್ಮಾಂಡದಲ್ಲಿನ ಸೃಷ್ಟಿಯಲ್ಲಿರುವ ಆಗುಹೋಗುಗಳನ್ನು ಬದಲಾಯಿಸುವವನಾದ, ಸಿದ್ಧ-ಸಾಧ್ಯರು;ಪಿಶಾಚಿ,ದೈತ್ಯ ಸಮೂಹದಿಂದ ಕೂಡಿಕೊಂಡಿರುವವನಾದ,ನಾಗ,ಗ್ರಹ,ಇಂದ್ರ,ಗಣ,ಸಿದ್ಧರುಗಳಿಂದ ಸೇವೆಯನ್ನು ಸ್ವೀಕರಿಸುವವನಾದ,ಹುಲಿಯ ಚರ್ಮವನ್ನೇ ವಸ್ತ್ರವನ್ನಾಗಿ ಧರಿಸಿಕೊಂಡ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಭಸ್ಮಾಂಗರಾಗ ಕೃತರೂಪ ಮನೋಹರಾಯ |
ಸೌಮ್ಯಾವದಾತ ನಮಾಶ್ರಿತ ಮಾಶ್ರಿತಾಯ ||
ಗೌರೀಕಟಾಕ್ಷ ನಯನಾರ್ಧ ನಿರೀಕ್ಷಣಾಯ |
ಗೋಕ್ಷೀರಧಾರಧವಲಾಯ ನಮ: ಶಿವಾಯ ||೭||

ಭಾವಾರ್ಥ:-ಭಸ್ಮವನ್ನು ಲೇಪಿಸಿಕೊಂಡು ಮನೋಹರ ಸ್ವರೂಪದವನಾಗಿರುವ, ಪ್ರಶಾಂತವಾಗಿರುವ ಕಾನನಗಳನ್ನು ಆಶ್ರಯತಾಣಗಳನ್ನಾಗಿಸಿಕೊಂಡವನಾದ,ಅರ್ಧ ತೆರೆದ ಕಣ್ಣುಗಳಿಂದ ಸತಿ ಪಾರ್ವತಿಯ ಶೃಂಗಾರದ ನೋಟವನ್ನು ನಿರೀಕ್ಷಿಸುತ್ತಿರುವವನಾದ,ಹಸುವಿನ ಹಾಲಿನಂತೆ ಪರಿಶುದ್ಧ ವರ್ಣವನ್ನು ಹೊಂದಿರುವ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಆದಿತ್ಯ ಸೋಮವರುಣಾನಿಲಸೇವಿತಾಯ |
ಯಜ್ಞಾಗ್ನಿ ಹೋತ್ರ ವರಧೂಮನಿಕೇತನಾಯ ||
ಋಕ್ ಸಾಮವೇದ ಮುನಿಭಿ: ಸ್ತುತಿಸಂಯುತಾಯ |
ಗೋಪಾಯ ಗೋಪನಮಿತಾಯ ನಮ: ಶಿವಾಯ ||೮||

ಭಾವಾರ್ಥ:-ರವಿ-ಚಂದ್ರ-ವರುಣ-ವಾಯುಗಳಿಂದ ಸೇವೆಯನ್ನು ಸ್ವೀಕರಿಸುತ್ತಿರುವವನಾದ, ಯಜ್ಞಹೋಮಾಗ್ನಿಗಳಿಂದ ಆವರಿಸುವ ಪವಿತ್ರ ಹೊಗೆಯನ್ನು ನಿವಾಸವನ್ನಾಗಿಸಿಕೊಂಡಿರುವ,ಮುನಿಗಳಿಂದ ಋಗ್ವೇದ-ಸಾಮವೇದಗಳ ಮೂಲಕ ಸ್ತುತಿಸಲ್ಪಡುತ್ತಿರುವವನಾದ,ಸೂರ್ಯನೂ,ಸೂರ್ಯನಿಂದ ನಮಿಸಲ್ಪಡುವವನೂ ಆಗಿರುವ ಆ ಮಹಾ ಶಿವನಿಗೆ ನನ್ನ ನಮಸ್ಕಾರಗಳು.

ಶಿವಾಷ್ಟಕಮಿದಂ ಪುಣ್ಯಂ ಯ: ಪಠೇಚ್ಛಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ ||೯||

ಭಾವಾರ್ಥ:-ಯಾವಾತನು ಪುಣ್ಯ ಪ್ರದಾಯಕವಾಗಿರುವಂತಹಾ ಈ ಶಿವಾಷ್ಟಕಗಳನ್ನು ಶಿವನ ಸನ್ನಿಧಾನದಲ್ಲಿ ಪಠಿಸುವನೋ ಅವನು ಶಿವಲೋಕವನ್ನು ಸೇರಿ ಶಿವನೊಡನೆ ಸುಖದಿಂದ ಇರುವನು.
*********************************************************************
  || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಶಿವಾಷ್ಟಕಮ್ ||
 || ಈ ರೀತಿಯಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ಶ್ರೀ ಶಿವಾಷ್ಟಕಗಳ ಭಾವಾರ್ಥವಾಗಿದೆ ||
*********************************************************************

       -೧೫-
     || ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಮ್ ||
  ****************************
ಉಪಾಸಕಾನಾಂ ಯದುಪಾಸನೀಯ- |
ಮುಪಾತ್ರವಾಸಂ ವಟಶಾಖಮೂಲೇ ||
ತದ್ಧಾಮ ದಾಕ್ಷಿಣ್ಯ ಜುಷಾ ಸ್ವಮೂರ್ತ್ಯಾ |
ಜಾಗರ್ತು ಚಿತ್ತೇ ಮಮ ಬೋಧರೂಪಂ ||೧||

ಭಾವಾರ್ಥ:-ಸದ್ಗುರುವೇ;ಅರಳಿಮರದ ತಳಭಾಗದಲ್ಲಿ  ದಕ್ಷಿಣಾಭಿಮುಖನಾಗಿ ನೆಲೆಯಾಗಿರುವ ನೀನು ಸಾಧಕರಿಗೆ  ಸಾಧಕನು.ಹೀಗಿರುವ ಸ್ವಾಮಿಯೇ,ನನ್ನ ಮನಸ್ಸನ್ನು  ಜಾಗ್ರತಗೊಳಿಸುವವನಾಗು.

ಅದ್ರಾಕ್ಷಮ ಕ್ಷೀಣದಯಾನಿಧಾನ- |
ಮಾಚಾರ್ಯಮಾದ್ಯಂ ವಟಮೂಲ ಭಾಗೇ ||
ಮೌನೇನ ಮಂದಸ್ಮಿತ ಭೂಷಿತೇನ |
ಮಹರ್ಷಿಲೋಕಸ್ಯ ತಮೋನುದಂತಂ ||೨||

ಭಾವಾರ್ಥ:-ಯೋಗ ಮತ್ತು ಇಂದ್ರಿಯ ನಿಗ್ರಹ ಶಕ್ತಿಯವನಾಗಿರುವ  ನೀನು ಅರಳಿ ಮರದ ಅಡಿಯಲ್ಲಿ ಮೌನವಾಗಿ ಮುಗುಳ್ನಗುತ್ತಾ ಕುಳಿತು  ಮಹರ್ಷಿಲೋಕದ ಅಗ್ರಗಣ್ಯ ಆಚಾರ್ಯನಾಗಿ ಜಗತ್ತಿನ  ಜ್ಞಾನಾಂಧಕಾರವನ್ನು ಹೋಗಲಾಡಿಸುತ್ತಿರುವೆ.

ವಿದ್ರಾವಿತಾಶೇಷತಮೋಗಣೇನ |
ಮುದ್ರಾವಿಶೇಷೇಣ ಮುಹುರ್ಮುನೀನಾಂ ||
ನಿರಸ್ಯ ಮಾಯಾಂ ದಯಯಾವಿಧತ್ತೇ |
ದೇವೋ ಮಹಾಂಸ್ತತ್ತ್ವಮಸೀತಿ ಬೋಧಂ ||೩||

ಭಾವಾರ್ಥ:-ಸದ್ಗುರುದೇವನೇ; ನಿನ್ನ ವಿಶೇಷವಾದ ಮುದ್ರೆಯಿಂದ  ಜಗತ್ತಿನ ಕಾಮನೆಗಳನ್ನು ಹೋಗಲಾಡಿಸಿ ಶ್ರೇಷ್ಠವಾದ "ಸಾಕ್ಷಾತ್  ನೀನೇ ಅದಾಗಿರುವೆ" ಎಂಬ ತತ್ವವನ್ನು ದಯಾಪೂರಿತನಗಿ  ಬೋಧಿಸುತ್ತಲಿರುವೆ.

ಅಪಾರ ಕಾರುಣ್ಯ ಸುಧಾತರಂಗೈ- |
ರಪಾಂಗಪಾತೈರವಲೋಕಯಂತಂ ||
ಕಠೋರಸಂಸಾರನಿದಾಘತಪ್ತಾ_ |
ನ್ಮುನೀನಹಂ ನೌಮಿ ಗುರುಂ ಗುರೂಣಾಂ ||೪|| 

ಭಾವಾರ್ಥ:-ಸದ್ಗುರುವೇ; ಅಧೋಗತಿಯಲ್ಲಿರುವ ನನ್ನನ್ನು ನಿನ್ನ  ಅಪಾರವಾಗಿರುವ ಕರುಣಾಪೂರ್ಣ ದೃಷ್ಟಿಯಿಂದ  ಕಾಣುವವನಾಗು.ಜಟಿಲವಾಗಿರುವ ಈ ಸಂಸಾರ ಜಂಜಾಟದಲ್ಲಿ ಸಿಲುಕಿ  ಒದ್ದಾಡುತ್ತಲಿರುವ ನಾನು ಗುರುಗಳಿಗೆ ಪರಮಗುರುವಾಗಿರುವ ನಿನಗೆ  ನಮಸ್ಕರಿಸುತ್ತಿರುವೆನು.

ಮಾಮದ್ಯದೇವೋ ವಟಮೂಲವಾಸೀ |
ಕೃಪಾವಿಶೇಷಾತ್ಕೃತ ಸಂವಿಧಾನ: ||
ಓಂಕಾರರೂಪಾಮುಪದಿಶ್ಯ ವಿದ್ಯಾ- |
ಮಾವಿದ್ಯ ಕದ್ವಾಂತಮಪಾಕರೋತು ||೫||

ಭಾವಾರ್ಥ:-ಅಶ್ವಥ್ಥ ವೃಕ್ಷದಲ್ಲಿ ನೆಲೆಯಾಗಿ ನಿನ್ನ ಕೃಪೆಯ  ಮೇಲ್ಮೆಯಿಂದ ನನ್ನನ್ನು  ಕಾಣುತ್ತಿರುವೆ.ಸದ್ಗುರುವೇ,ಓಂಕಾರಸ್ವರೂಪವಾದ ವಿದ್ಯೆಯನ್ನು  ನನಗೆ ಬೋಧಿಸಿ ನನ್ನನ್ನು ವಿದ್ಯಾವಂತನನ್ನಾಗಿ ಮಾಡಿ ಉದ್ಧರಿಸು  ಸ್ವಾಮೀ.

ಕಲಾಭಿರಂದೋರಿವ ಕಲ್ಪಿತಾಂಗಂ |
ಮುಕ್ತಾಕಲಾಪೈರಿವ ಬದ್ಧಮೂರ್ತಿಂ ||
ಅಲೋಕಯೇ ದೇಶಿಕಮಪ್ರಮೇಯ |
ಮನಾದ್ಯ ವಿದ್ಯಾತಿಮೀರ ಪ್ರಭಾತಂ ||೬||

ಭಾವಾರ್ಥ:-ವ್ಯವಸ್ಥಿತವಾಗಿ ವಿವಿಧ ಕಲಾಶಕ್ತಿಗಳ್ನ್ನು  ಹೊಂದಿರುವ ಅಂಗಗಳಿಂದ ಕೂಡಿ ಮೂರ್ತಿಸ್ವರೂಪನಾಗಿರುವ ನೀನು  ಅನಾದಿಯಾಗಿರುವ ವಿದ್ಯೆಗಳಿಂದ ಬೆಳಗುತ್ತಿದ್ದು ಅಗ್ರಗಣ್ಯ  ಆಚಾರ್ಯೋತ್ತಮನಾಗಿ ಪರಬ್ರಹ್ಮನೂ ಆಗಿರುವೆ.

ಸ್ವದಕ್ಷ ಜಾನುಸ್ಥಿತವಾಮಪಾದಂ |
ಪಾದೋವರಾಲಂಕೃತಯೋಗಪಟ್ಟಂ ||
ಅಪಸ್ಮೃತೇರಾಹಿತಪಾದ ಮಂಗೇ |
ಪ್ರಣೌಮಿ ದೇವಂ ಪ್ರಣಿಧಾನವಂತಂ ||೭||

ಭಾವಾರ್ಥ:-ಎಡಪಾದವನ್ನು ಮೋಣಕಾಲಿನ ಮೇಲಿರಿಸಿ ಯೋಗ  ಸ್ಥಿಯಲ್ಲಿ ಧ್ಯಾನನಿರತನಾಗಿರುವ ಸದ್ಗುರು ದಕ್ಷಿಣಾಮೂರ್ತಿ  ಸ್ವಾಮಿಯೇ ನಿನಗೆ ನಾನು ನಮಸ್ಕರಿಸುವೆನು.

ತತ್ವಾರ್ಥ ಮಂತೇವಸತಾಮೃಷೀಣಾಂ |
ಯುವಾಪಿ ಯ: ಸನ್ನುಪದೇಷ್ಟುಮೀಷ್ಟೇ ||
ಪ್ರಣೌಮಿ ತಂ ಪ್ರಾಕ್ತನಪುಣ್ಯಜಾಲೈ- |
ರಾಚಾರ್ಯಮಾಶ್ಚರ್ಯ ಗುಣಾಧಿವಾಸಂ  ||೮||

ಭಾವಾರ್ಥ:-ಋಷಿ ಮುನಿಗಳಿಗೆ ಸೋಜಿಗವಾಗಿರುವ ಪರಮಾತ್ಮ ತತ್ವಗಳ  ಅರ್ಥವನ್ನು ಉಪದೇಶ ಮಾಡುವ ಆಚಾರ್ಯ ಶ್ರ‍ೇಷ್ಠ ಸದ್ಗುರು ಶ್ರೀ  ದಕ್ಷಿಣಾಮೂರ್ತಿಗೆ ನಾನು ನಮಸ್ಕರಿಸುವೆನು.

ಏಕೇನ ಮುದ್ರಾಂ ಪರಶುಂ ಕರೇಣ |
ಕರೇಣ ಚಾನ್ಯೇನ ಮೃಗಂ ದದಾನ: ||
ಸ್ವಜಾನು ವಿನ್ಯಸ್ತ ಕರ: ಪುರಸ್ತಾ- |
ದಾಚಾರ್ಯ ಚೂಡಾಮಣಿರಾವಿರಸ್ತು ||೯||

ಭಾವಾರ್ಥ:-ಒಂದು ಹಸ್ತದಲ್ಲಿ ಜ್ಞಾನ ಮುದ್ರೆಯನ್ನು ಧರಿಸಿ  ಮಗದೊಂದರಲ್ಲಿ ಪರಶುವನ್ನೂ ಹಿಡಿದು ಅಭಯ ಹಸ್ತನಾಗಿ  ಮೊಣಕಾಲಿನ ತನಕ ಸಮ್ಮುಖನಾಗಿ ಆಚಾರ್ಯ ಶ್ರೇಷ್ಠ ಶ್ರೀ  ದಕ್ಷಿಣಾಮೂರ್ತಿ ಅಲಂಕೃತಗೊಂಡವನಾಗಿದ್ದಾನೆ.

ಅಲೇಪವಂತಂ ಮದನಾಂಗಭೂತ್ಯಾ |
ಶಾರ್ದೂಲಕೃತ್ತ್ಯಾ ಹರಿದಾನವಂತಂ ||
ಅಲೋಕಯೇ ಕಂಚನ ದೇಶಿಕೇಂದ್ರ- |
ಮಜ್ಞಾನವಾರಾಕರಬಾಡಬಾಗ್ನಿಂ ||೧೦||

ಭಾವಾರ್ಥ:-ವ್ಯಾಘ್ರದ ಚರ್ಮದಿಂದ ಅಂಗಾಂಗಗಳು ಅಲಂಕೃತವಾಗಿರುವ,  ಅಜ್ಞಾನವನ್ನು ದಹಿಸುವ ಅಗ್ನಿಯೋಪಾದಿಯಲ್ಲಿ  ಮಂಗಲದಾಯಕನಾದ ಅಗ್ರಗಣ್ಯ ಆಚಾರ್ಯ ಶ್ರೇಷ್ಠನನ್ನು  ನೋಡುವವನಾಗು ಮನವೇ.

ಚಾರುಸ್ಥಿತಂ ಸೋಮಕಲಾವತಂಸಂ |
ವೀಣಾಧರಂ ವ್ಯಕ್ತ ಜಟಾಕಲಾಪಂ ||
ಉಪಾಸತೇ ಕೇಚನ ಯೋಗಿನಸ್ತ್ವ- |
ಮುಪಾತ್ತನಾದಾನುಭವ ಪ್ರಮೋದಂ ||೧೧||

ಭಾವಾರ್ಥ:-ಮನೋಹರವಾಗಿರುವ ಚಂದ್ರನ ಪ್ರಕಾಶದಿಂದ ಹೊಳೆಯುವ,  ವೀಣಾಪಾಣಿಯಾಗಿರುವ, ಜಟಾಧರನಾದ,ಮಧುರ ಧ್ವನಿಗಳ  ಅನುಭವಿಸುವಿಕೆಯ ಹುರುಪನ್ನು ಕರುಣಿಸುವ ಯೋಗಿವರ್ಯ ಸದ್ಗುರು  ಶ್ರೀ ದಕ್ಷಿಣಾಮೂರ್ತಿ ಸ್ವಾಮಿಯನ್ನು ನಾನು ಉಪಾಸಿಸುತ್ತೇನೆ.

ಉಪಾಸತೇ ಯಂ ಮುನಯ: ಶುಕಾದ್ಯಾ |
ನಿರಾಶಿಷೋ ನಿರ್ಮಮತಾಧಿವಾಸಾ: ||
ತಂ ದಕ್ಷಿಣಾಮೂರ್ತಿತನುಂ ಮಹೇಶ- |
ಮುಪಾಸ್ಮಹೇ ಮೋಹಮಹಾರ್ತಿ ಶಾಂತ್ಯೈ  ||೧೨||

ಭಾವಾರ್ಥ:-ಆಶಾಪಾಶವಿರಹಿತರಾದ ಶುಕಮುನಿಗಳೇ ಮೊದಲಾದ ಯೋಗಿ  ಶ್ರೇಷ್ಠರುಗಳಿಂದ ಪೂಜಿಸಲ್ಪಡುವ,ಮಹಾಈಶ ಸ್ವರೂಪೀ ಸದ್ಗುರು  ಶ್ರೀ ದಕ್ಷಿಣಾಮೂರ್ತಿಯನ್ನು ನನ್ನ ಭ್ರಾಂತಿಯನ್ನು  ನಾಶಮಾಡಲೋಸುಗ ನಾನು ಆರಾಧಿಸುವೆನು.

ಕಾಂತ್ಯಾ ನಿಂದಿತಕುಂದಕಂದರ್ಪ ನ್ಯಗ್ರೋಧಮೂಲೇ ವಸ- |
ಸ್ಯಾರುಣ್ಯಾಮೃತವಾರಿಭಿರ್ಮುನಿಜನಂ ಸಂಭಾವಯನ್ವೀಕ್ಷಿತೈ: ||
ಮೋಹಾಧ್ವಾಂತ ವಿಭೇಧನಂ ವಿರಚಯನ್ಭೋದೇನ ತತ್ತಾದೃಶಾ |
ದೇವಸ್ತತ್ತ್ವಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ   ||೧೩||

ಭಾವಾರ್ಥ:-ಸತಿಯಿಂದ ಕುತ್ಸಿತನಾಗಿ ಮನ್ಮಥನ ಶರವನ್ನು  ದೂರೀಕರಿಸಿ ಆಲದಮರದ ತಳದಲ್ಲಿ ಜ್ಞಾನ ಮುದ್ರೆಯಿಂದ  ಕುಳಿತಿರುವ ಆ ದಕ್ಷಿಣಾಮೂರ್ತಿ ಕಾರುಣ್ಯ ದೃಷ್ಟಿಯಿಂದ  ಭಕ್ತರನ್ನು ನೋಡುತ್ತಾ ನನ್ನ ಆಶಾ ಪಾಶವನ್ನು ಕಳೆಯುವ " ಸಾಕ್ಷಾತ್  ನೀನೇ ಅದಾಗಿರುವೆ " ಎನ್ನುವ ಆ ಮಹಾ ತತ್ವವನ್ನು  ಅನುಗ್ರಹಿಸುವವನಾಗು ಸದ್ಗುರುವೇ.

ಅಗೌರ ನೇತ್ರೈರಲಲಾಟನೇತ್ರೈ- |
ರಶಾಂತವೇಷ್ಟೆರಭುಜಂಗ ಭೂಷೈ: ||
ಅಬೋಧಮುದ್ರೈರನಪಾಸ್ತ ನಿದ್ರೈ- |
ರಪೂರಕಾಮೈರಮರೈರಲಂ ನ: ||೧೪||

ಭಾವಾರ್ಥ:-ಪ್ರಶಾಂತಭಾವದಿಂದ ಕುಂದಿದ ಗೌರವರ್ಣದ  ಕಣ್ಣಾಲಿಗಳು,ಹಾಗೂ ಹಣೆಯಲ್ಲಿ  ಮೂರುಕಣ್ಣುಗಳನ್ನು  ಹೊಂದಿದವನಾಗಿ,ಸರ್ಪಭೂಷಿತನಾಗಿ ಭಕ್ತರ ಅಭೀಷ್ಟಗಳನ್ನು  ದಯಪಾಲಿಸುವ ಯೋಗ ನಿದ್ರೆಯಲ್ಲಿ,ಬೋಧಿಸುವ ಮುದ್ರೆಯಿಂದ  ಕೂಡಿರುವ ಆ ಸದ್ಗುರು ದಕ್ಷಿಣಾಮೂರ್ತಿಗೆ ನಾನು ನಮಸ್ಕರಿಸುವೆನು.

ದೈವತಾನಿ ಕತಿ ಸಂತಿ ಚಾವನೌ |
ನೈವ ತಾನಿ ಮನಸೋ ಮತಾನಿ ಮೇ ||
ದೀಕ್ಷಿತಂ ಜಡಧಿಯಾ ಮನುಗ್ರಹೇ |
ದಕ್ಷಿಣಾಭಿಮುಖಮೇವ ದೈವತಂ  ||೧೫||

ಭಾವಾರ್ಥ:-ಚೈತನ್ಯಹೀನವಾಗಿರುವ ನನ್ನ ಮನಸ್ಸಿಗೆ ಧೈರ್ಯ  ತುಂಬಲು ಕಟಿಬದ್ಧನಾಗಿರುವ ವನ ಸಂಚಾರಿಯಾದ ಆ ಸದ್ಗುರು ದೇವ  ಶ್ರೀ ದಕ್ಷಿಣಾಮೂರ್ತಿಗೆ ನಾನು ನಮಸ್ಕರಿಸುವೆನು.

ಮುದಿತಾಯ ಮುಗ್ದರಶಿನಾವತಂಸಿನೇ |
ಭಸಿತಾವಲೇಪರಮಣೀಯಮೂರ್ತಯೇ ||
ಜಗದಿಂದ್ರಜಾಲರಚನಾ ಪಟೀಯಸೇ |
ಮಹಸೇ ನಮೋsಸ್ತು ವಟಮೂಲವಾಸಿನೇ  ||೧೬||

ಭಾವಾರ್ಥ:-ಸುಂದರನೂ,ಹರ್ಷಿತನೂ ಆಗಿ ತನ್ನ ಜಾದೂಆಟದಿಂದ  ಬ್ರಹ್ಮಾಂಡದ ಸೃಷ್ಟಿ,ಸ್ಥಿತಿ,ಲಯಗಳಿಗೆ ಮಾಂತ್ರಿಕನ  ಸ್ವರೂಪದಂತಿರುವ,ಶ್ರೇಷ್ಠನಾಗಿರುವ,ಭಸ್ಮ ಲೇಪಿತನಾಗಿ  ಮನೋಹರನಾಗಿರುವ, ಅರಳಿಮರದ ಬುಡದ ನಿವಾಸಿಯಾಗಿರುವ ಆ  ಸದ್ಗುರು ದೇವ ದಕ್ಷಿಣಾಮೂರ್ತಿಗೆ ನಾನು ನಮಸ್ಕರಿಸುವೆನು.

ವ್ಯಾಲಂಬಿನೀಭಿ: ಪರಿತೋ ಜಟಾಭಿ: |
ಕಲಾವಶೇಷಣ ಕಲಾಧರೇಣ ||
ಪಶ್ಯಲ್ಲಲಾಟೇನ ಮುಖೇಂದ್ಯುನಾ ಚ |
ಪ್ರಕಾಶಸೇ ಚೇತಸ ನಿರ್ಮಲಾನಾಂ ||೧೭||

ಭಾವಾರ್ಥ:-ಬಿಲ್ಲು ಮೊದಲಾದ ಆಯುಧಗಳನ್ನು ಹಿಡಿದು ನಾಗ ಮತ್ತು  ಚಂದ್ರರಿಂದ ಅಲಂಕರಿಸಲ್ಪಟ್ಟ,ಜಟೆಯನ್ನು  ಧರಿಸಿದವನಾದ,ವಿಷೇಷವಾಗಿ ಹಣೆಯಲ್ಲಿ ಮೂರನೇ ಕಣ್ಣನ್ನು  ಹೊಂದಿರುವ ಮನಮೋಹಕನಾದ ಆ ಸದ್ಗುರುದೇವ ದಕ್ಷಿಣಾಮೂರ್ತಿಗೆ  ನಾನು ನಮಸ್ಕರಿಸುವೆನು.

ಉಪಾಸಕಾನಾಂ ತ್ವಮುಮಾಸಹಾಯ: |
ಪೂರ್ಣೇಂದುಭಾವಂ ಪ್ರಕಟೀಕರೋಪಿ ||
ಯದರ್ಯ ತೇ ದರ್ಶನ ಮಾತ್ರತೋ ಮೇ |
ದ್ರವತ್ಯಹೋ ಮಾನಸ ಚಂದ್ರ ಕಾಂತ: ||೧೮||

ಭಾವಾರ್ಥ:-ಸತಿ ಉಮಾ ಸಮೇತನಾಗಿ,ಪೌರ್ಣಿಮೆಯ ಚಂದ್ರನಂತೆ  ಪ್ರಕಾಶಯುತನಾಗಿ,ಸಾಧಕರಿಗೆ ಮನಸಿನಲ್ಲಿಯೇ ದರ್ಶನ  ಭಾಗ್ಯವನ್ನು ಕರುಣಿಸುತ್ತಾ ಅವರ ಪಾಪಗಳನ್ನು ಕಳೆಯುವ ಆ ಸದ್ಗುರು  ದೇವ ದಕ್ಷಿಣಾಮೂರ್ತಿಗೆ ನಾನು ನಮಸ್ಕರಿಸುವೆನು.

ಯಸ್ತೇ ಪ್ರಸನ್ನಾ ಮನುಸಂದಧಾನೋ |
ಮೂರ್ತಿಂ ಮುದಾ ಮುಗ್ಧ ಶಶಾಂಕ ಮೌಲೇ: ||
ಐಶ್ವರ್ಯಮಾಯುರ್ಲಭತೇ ಚ ವಿದ್ಯಾ- |
ಮಂತೇ ಚ ವೇದಾಂತಮಹಾರಹಸ್ಯಂ ||೧೯||

ಭಾವಾರ್ಥ:-ಮಂದಸ್ಮಿತನಾಗಿ,ಪ್ರಸನ್ನ ಮನೋಭಾವದಿಂದ  ಕೂಡಿ,ಶ್ರದ್ಧಾ ಭಕ್ತಿಯಿಂದ ಸುಂದರನಾಗಿರುವ ದೇವನ, ಈ   ದಕ್ಷಿಣಾಮೂರ್ತಿ ಸ್ತೋತ್ರಗಳನ್ನು ಧ್ಯಾನ ಮಾಡುವುದರಿಂದ  ಐಶ್ವರ್ಯ,ಆಯುಸು,ವಿದ್ಯೆಗಳೊಂದಿಗೆ ವೇದಾಂತದ  ಶ್ರೇಷ್ಟರಹಸ್ಯವು ಲಭಿಸುತ್ತದೆ.
*********************************************************************
         || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀದಕ್ಷಿಣಾಮೂರ್ತಿ  ಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀ ಶಂಕರಾಚಾರ್ಯರು ರಚಿಸಿರುವ ಶ್ರೀ  ದಕ್ಷಿಣಾಮೂರ್ತಿ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
                               -೧೬-

  || ದಶಶ್ಲೋಕೀ ಸಾಂಬ ಸ್ತುತಿ: ||
  ************************
ಸಾಂಬೋ ನ: ಕುಲದೈವತಂ ಪಶುಪತೇ ಸಾಂಬ ತ್ವದೀಯಾ ವಯಂ |
ಸಾಂಬಂ ಸ್ತೌಮಿ ಸುರಾಸುರೋರಗಗಣಾ: ಸಾಂಬೇನ ಸಂತಾರಿತಾ: ||
ಸಾಂಬಾಯಾಸ್ತು ನಮೋ ಮಯಾ ವಿರಚಿತಂ ಸಾಂಬಾತ್ಪರಂ ನೋ ಭಜೇ |
ಸಾಂಬಸ್ಯಾನುಚರೋsಸ್ಮ್ಯಹಂ ಮಮ ರತಿ: ಸಾಂಬೇ ಪರಬ್ರಹ್ಮಣಿ ||೧||

ಭಾವಾರ್ಥ:-ಸಾಂಬನಿಗಿಂತ ಅನ್ಯ ಕುಲದೇವರು ನನಗಿಲ್ಲ.ಸಾಂಬನೇ,ನಾನು ನಿನ್ನವನು.ನಾನು ಸಾಂಬನನ್ನು ಸ್ತುತಿಸುತ್ತಿರುವೆನು.ದೇವ-ದಾನವ-ನಾಗ-ಗಣಗಳು ಸಾಂಬನಿಂದ ರಕ್ಷಿಸಲ್ಪಡುತ್ತಿವೆ.ಸಾಂಬ ಸ್ತುತಿಯನ್ನು ನಾನು ರಚಿಸಿದ್ದಾಗಿದೆ.ಸಾಂಬನಿಗೆ ನಾನು ನಮಸ್ಕರಿಸುತ್ತಿರುವೆ.ಸಾಂಬನ ಹೊರತಾಗಿ ಅನ್ಯರನ್ನು ನಾನು ಭಜಿಸಲಾರೆ.ನಾನು ಸಾಂಬನ ಸೇವಕನಾಗಿರುವೆನು.ಆ ಪರಬ್ರಹ್ಮ ಸ್ವರೂಪನಾದ ಸಾಂಬನಲ್ಲಿ ನನ್ನ ಏಕಚಿತ್ತವೂ ಒಲುಮೆಯೂ ಸ್ಥಿರವಾಗಿದೆ.

ವಿಷ್ಣ್ವಾದ್ಯಾಶ್ಚ ಪುರತ್ರಯಂ ಸುರಗಣಾ ಜೇತುಂ ನ ಶಕ್ತಾ: ಸ್ವಯಂ |
ಯಂ ಶುಭಂ ಭಗವನ್ವಯಂ ತು ಪಶವೋsಸ್ಮಾಕಂ ತ್ವಮೇಮೇಶ್ವರ: ||
ಸ್ವಸ್ವಸ್ಥಾನ ನಿಯೋಜಿತಾ: ಸಮನಸ: ಸ್ವಸ್ಥಾ ಬಭೂವುಸ್ತತೌ |
ಸ್ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೨||

ಭಾವಾರ್ಥ:-ವಿಷ್ಣುವೇ ಆದಿಯಾಗಿ ಸಮಸ್ತ ದೇವತೆಗಳಿಂದಲೂ ತ್ರಿಪುರಗಳನ್ನು ಜೈಸಲು ಅಸಾಧ್ಯವಾಗಿ ಯಾವ ಶಂಭುವನ್ನು " ಸ್ವಾಮಿ ಭಗವಂತನೇ,ನಾವು ಕೇವಲ ಪಷು ಸಮಾನರು.ಪರಮಾತ್ಮನಾದ ನೀನೇ ನಮ್ಮ ದೊರೆಯಾಗಿರುವೆ.ನಮ್ಮನ್ನು ಕಾಪಾಡುವ ಹೊಣೆ ನಿನ್ನದಾಗಿದೆ" ಎಂಬುದಾಗಿ ಮೊರೆಯಿಟ್ಟು ತಮ್ಮ ಸ್ವಸ್ಥಾನದಲ್ಲಿ ನಿಶ್ಚಿಂತರಾದರೋ ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ಕ್ಷೋಣೀ ಮಸ್ಯರಥೋ ರಥಾಂಗಯುಗಲಂ ಚಂದ್ರಾರ್ಕಬಿಂಬದ್ವಯಂ |
ಕೋದಂಡ: ಕನಕಾಚಲೋ ಹರಿರಭೂದ್ಬಾಣೋ ವಿಧಿ: ಸಾರಥಿ: ||
ತೂಣೀರೋ ಜಲಧಿರ್ಹಯಾ: ಶ್ರುತಿ ಚ ಯೋ ಮೌರ್ವೀ ಭುಜಂಗಾಧಿಪ |
ಸ್ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೩||

ಭಾವಾರ್ಥ:-ಜಗತ್ತು ಯಾವಾತನ ರಥವಾಗಿರುವುದೋ,ರವಿ ಚಂದ್ರರ ಬಿಂಬದ್ವಯಗಳು ಯಾರ ರಥದ ಚಕ್ರಗಳಾಗಿವೆಯೋ ಕನಕಾಚಲವು ಯಾವಾತನ ಧನುಸ್ಸಾಗಿದೆಯೋ,ಹರಿಯೇ ಯಾರ ಧನುಸ್ಸಿಗೆ ಬಾಣವಾದನೋ,ಬ್ರಹ್ಮನು ಯಾವಾತನಿಗೆ ಸಾರಥಿಯಾದನೋ,ಸಾಗರವು ಯಾರಿಗೆ ಬತ್ತಳಿಕೆಯಾಯಿತೋ,ಯಾರಿಗೆ ಶೃತಿಗಳೇ ಕುದುರೆಗಳಾದವೋ, ಆದಿಶೇಷನು ಯಾರ ಬಿಲ್ಲಿಗೆಹಗ್ಗವಾದನೋ ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ಗೋವಿಂದಾಧಿಕಂ ನ ದೈವಮಿತಿ ಪ್ರೋಚ್ಚಾರ್ಯ ಹಸ್ತಾವುಭಾ |
ವುದ್ಧೃತ್ಯಾಥ ಶಿವಸ್ಯ ಸನ್ನಿಧಿಗತೋ ವ್ಯಾಸೋ ಮುನೀನಾಂ ವರ: ||
ಯಸ್ಯ ಸ್ತಂಬಿತ ಪಾಣಿರಾನತಿಕೃತಾ ನಂದೀಶ್ವರೇಣಾಭವ |
ತ್ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೪||

ಭಾವಾರ್ಥ:-ಅಗ್ರಗಣ್ಯ ಮುನಿಶ್ರೇಷ್ಠರಾದ ಬಾದರಾಯಣರು ಗೋವಿಂದನಿಗಿಂತ ಯೋಗ್ಯ ದೇವರಿಲ್ಲ ಎಂಬುದಾಗಿ ತನ್ನೆರಡೂ ಕೈಗಳನ್ನು ಮೇಲೆತ್ತಿ ಪರಮೋಚ್ಚ ಸ್ವರದಿಂದ ಭಜಿಸುತ್ತಾ ಶಿವನ ಸಮೀಪಕ್ಕೆ ಬಂದಾಗ ಯಾವಾತನ ಹಸ್ತಗಳು ಸಾಂಬನಿಂದ ತಡೆಹಿಡಿಯಲ್ಪಟ್ಟವೋ ಅವು ಯಾವ ನಂದೀಶ್ವರನ ದಯೆಯಿಂದ ಮತ್ತೆ ಯಥಾಸ್ಥಿತಿಗೆ ತಲಪಿದವೋ ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ಯೇನಾ ಪಾದಿತ ಮಂಗಜಾಂಗಭಸಿತಂ ದಿವ್ಯಾಂಗರಾಗೈ: ಸಮಂ |
ಯೇನ ಸ್ವೀಕೃತಮಬ್ಜಸಂಭವಶಿರ: ಸೌವರ್ಣಪಾತ್ರೈ: ಸಮಮ್ ||
ಯೇನಾಂಗೀಕೃತಮಚ್ಚ್ಯತಸ್ಯನಯನಂ ಪೂಜಾರವಿಂದೈ: ಸಮಂ |
ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೫||

ಭಾವಾರ್ಥ:-ಆಪಾದನೆಗೊಳಗಾಗಿದ್ದ ಮನ್ಮಥನ ಚಿತಾ ಭಸ್ಮವು ಯಾರ ಶರೀರಕ್ಕೆ ಲೇಪಿಸಿಕೊಳ್ಳುವ ಮೂಲಕ ಸುಗಂಧ ಭರಿತವಾಯಿತೋ,ಯಾವಾತನಿಂದ ಚತುರ್ಮುಖ ಬ್ರಹ್ಮನ ಶಿರವು ಸುವರ್ಣ ಪಾತ್ರೆಗೆ ಸಮಾನವಾಗಿ ಸ್ವೀಕರಿಸಲ್ಪಟ್ಟಿತೋ, ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ಆಕಾಶಶ್ಚಿಕುರಾಯತೇ ದಶದಿಶಾಭೋಗೋ ದುಕೂಲಾಯತೇ |
ಶೀತಾಂಶು: ಪ್ರಸವಾಯತೇ ಸ್ಥಿರತರಾನಂದ: ಸ್ವರೂಪಾಯ ತೇ ||
ವೇದಾಂತೋ ನಿಲಯಾಯ ತೇ ಸುವಿನಯೋ ಯಸ್ಯ ಸ್ವಭಾವಾಯ ತೇ |
ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೬||

ಭಾವಾರ್ಥ:-ಆಕಾಶವೇ ಶಿರದ ಮೇಲಿನ ಕೂದಲಿನ ರೂಪದಲ್ಲಿರುವವನೂ,ದಶದಿಕ್ಕುಗಳನ್ನು ಉಡುಪಾಗಿ ಅನುಭವಿಸುವಾತನೂ,ಚಂದ್ರನನ್ನು ಪುಷ್ಪದೋಪಾದಿಯಲ್ಲಿ ಧರಿಸಿರುವವನೂ,ನಿತ್ಯಾನಂದ ರೂಪನೂ,ವೇದಾಂತಗಳನ್ನು ತನ್ನ ನೆಲೆಯಾಗಿಸಿಕೊಂಡವನೂ,ಉತ್ತಮ ವಿನಯ ಸ್ವಭಾವದವನೂ ಆದಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ವಿಷ್ಣುರ್ಯಸ್ಯ ಸಹಸ್ರನಾಮ ನಿಯಮಾದಂಭೋರುಹಾಣ್ಯರ್ಚಯ |
ನ್ನೇಕೋನೋಪಚಿತೇಷು ನೇತ್ರ ಕಮಲಂ ನೈಜಂ ಪದಾಬ್ಜದ್ವಯೇ ||
ಸಂಪೂಜ್ಯಾ ಸುರಸಂಹರತಿಂ ವಿದಲಯಂಸ್ತ್ರೈಲೋಕ್ಯ ಪಾಲೋಭವ|
ತ್ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೭||

ಭಾವಾರ್ಥ:-ಶ್ರೀಹರಿಯು ಸಹಸ್ರನಾಮಗಳಿಂದ ಕಮಲಪುಷ್ಪಗಳ ಮೂಲಕ ಪರಶಿವನ ಅರ್ಚನೆಯನ್ನು ಕೈಗೊಳ್ಳುವಾಗ ಒಂದು ಕಮಲವು ಕಡಿಮೆಯಾಗಲಾಗಿ ತಾವರೆಯಂತಿರುವ ತನ್ನ ಕಣ್ಣನ್ನು ಭಕ್ತಿಯಿಂದ ಶಿವನ ಚರಣಾರವಿಂದಗಳಿಗೆ ಅರ್ಪಿಸಿ ಆರಾಧಿಸಿದ ಕಾರಣ ದೈತ್ಯ ದಾನವರನ್ನು ಸಂಹರಿಸಿ ತ್ರೈಲೋಕಾಧಿಪತಿಯಾದನು. ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ಶೌರಿಂ ಸತ್ಯಗಿರಿಂ ವರಾಹವಪುಷಂ ಪಾದಾಂಬುಜಾ ದರ್ಶನೇ |
ಚಕ್ರೇಯೋ ದಯಯಾ ಸಮಸ್ತ ಜಗತಾಂ ನಾಥ ಶಿರೋ ದರ್ಶನೇ ||
ಮಿಥ್ಯಾ ವಾಚಮ ಪೂಜ್ಯಮೇವ ಸತತಂ ಹಂಸ ಸ್ವರೂಪಂ ವಿಧಿ: |
ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೮||

ಭಾವಾರ್ಥ:-ಪರಾಕ್ರಮಿಯೂ ಸತ್ಯವಂತನೂ ಆದ ವರಾಹರೂಪೀ ಶ್ರೀಹರಿಯು ಪರಶಿವನ ಚರಣಾರವಿಂದಗಳ ದರ್ಶನಕ್ಕಾಗಿ ಅಸತ್ಯ ನುಡಿದ ಕಾರಣ ಹಂಸ ಸ್ವರೂಪೀ ಬ್ರಹ್ಮನು ನಿರಂತರ ಆರಾಧನೆಗೆ ಅನರ್ಹನಾದನು. ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ಯಸ್ಯಾಸನ್ ಧರಣೇ ಜಲಾಗ್ನಿ ಪವನ ವ್ಯೋಮಾರ್ಕ ಚಂದ್ರಾದಯೋ |
ವಿಖ್ಯಾತಾಸ್ತನವೋsಷ್ಟದಾ ಪರಿಣಿತಾ ನಾನ್ಯತ್ತತೋ ವರ್ತತೇ ||
ಓಂಕಾರಾರ್ಥ ವಿವೇಚನೀ ಶೃತಿರಿಯಂ ಚಾಚಷ್ಟ ತುರ್ಯಂ ಶಿವಂ |
ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೯||

ಭಾವಾರ್ಥ:-ಯಾವಾತನಿಗೆ ಭೂಮಿ,ಬೆಂಕಿ,ಗಾಳಿ,ಆಕಾಶ,ರವಿ,ಚಂದ್ರರೆಂಬ ಶರೀರಗಳಿವೆಯೋ, ಅವುಗಳಿಗಿಂತ ಅನ್ಯ ಇಲ್ಲವೋ,ಓಂಕಾರದ ಅರ್ಥ ಮನಗಾಣಿಸುವ ವೇದಗಳು ಶಿವನನ್ನು ನಾಲ್ಕನೇಯ ಇರುವಿಕೆಯವನೆಂದು ಗುರುತಿಸಿವೆಯೋ ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.

ವಿಷ್ಣು-ಬ್ರಹ್ಮ-ಸುರಾಧಿಪ-ಪ್ರಭೃತಯ: ಸರ್ವೇsಪಿ ದೇವಾ ಯದಾ |
ಸಂಭೂತಾಜ್ಜಲಧೇರ್ವಿಷಾತ್ಪರಿಭವಂ ಪ್ರಾಪ್ತಾಸ್ತದಾ ಸತ್ಪರಮ್ ||
ತಾನಾರ್ತಾನ್ ಶರಣಾಗತಾನಿತಿ ಸುರಾನ್ಯೋs ರಕ್ಷದರ್ಧಕ್ಷಣಾ |
ತಸ್ಮಿನ್ ಮೇ ಹೃದಯಂ ಸುಖೇನ ರಮತಾಂ ಸಾಂಬೇ ಪರಬ್ರಹ್ಮಣಿ ||೧೦||

ಭಾವಾರ್ಥ:-ವಿಷ್ಣು ಬ್ರಹ್ಮ ಇಂದ್ರಾದಿ ದೇವದೇವತೆಯರೆಲ್ಲರೂ ಸಮುದ್ರಮಥನದಿಂದ ಹುಟ್ಟಿದ ಹಾಲಾಹಲವೆಂಬ ಘೋರ ವಿಷದಿಂದ ಪರಾಜಯ ಹೊಂದಲಾಗಿ ತನಗೆ ಶರಣು ಬಂದ ಕಾರಣ ವಿಪತ್ತಿಗೊಳಗಾಗಿರುವ ಅವರುಗಳನ್ನು ಯಾವ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಕಾಪಾಡಿದನೋ ಅಂತಹಾ ಪರಬ್ರಹ್ಮ ಸ್ವರೂಪೀ ಶಂಭುವಿನಲ್ಲಿ ನನ್ನ ಅಂತಕರಣವು ಸಂತಸದಿಂದ ಕ್ರೀಡಿಸಲಿ.
*********************************************************************
          || ಇತಿ ಶ್ರೀ ಶಂಕರಾಚಾರ್ಯ ವಿರಚಿತ ದಶಶ್ಲೋಕೀ ಸಾಂಬಸ್ತುತಿ: ||
 || ಈ ತೆರನಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ದಶಶ್ಲೋಕೀ ಸಾಂಬ ಸ್ತುತಿಗಳ ಭಾವಾರ್ಥವಾಗಿದೆ ||
*********************************************************************
                    -೧೭-
   || ಶಿವಾಪರಾಧ ಕ್ಷಮಾಪಣ ಸ್ತೋತ್ರಮ್ ||
  *********************************
ಆದೌ ಕರ್ಮ ಪ್ರಸಂಗಾತ್ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ |
ವಿಣ್ಮೂತ್ರಾಮೇಧ್ಯಮಧ್ಯೇ ಕ್ವಥಯತಿ ನಿತರಾಂ ಜಾಠರೋ ಜಾತವೇದಾ: ||
ಯದ್ಯದ್ವೈ ತತ್ರ ದು:ಖಂ ವ್ಯಥಯತಿ ನಿತರಾಂ ಶಕ್ಯತೇ ಕೇನ ವಕ್ತುಂ- |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೧||

ಭಾವಾರ್ಥ:-ಪೂರ್ವ ಜನ್ಮದಲ್ಲಿ ನಾನು ಮಾಡಿದ್ದ ಪಾಪ ಕರ್ಮಗಳ ಫಲವಾಗಿ  ತಾಯಿಯ ಗರ್ಭದಲ್ಲಿ ಆ ಪಾಪ ಲೇಪಗಳು ನನ್ನನ್ನು ಬಹುವಾಗಿ ಕಾಡಿದವು.ಅಲ್ಲಿನ ಮಲ ಮೂತ್ರಾದಿ ಕಲ್ಮಷಗಳಲ್ಲಿ ನಾನು ಕಲುಷಿತನಾಗಿರಬೇಕಾಯಿತು.ತಾಯಿಯ ಜಠರಾಗ್ನಿಯು ನನ್ನನ್ನು ಬಹುವಾಗಿ ಬೇಯಿಸಿತು.ಅಲ್ಲಿ ನಾನೇನೇನು ಕಷ್ಟ ಕೋಟಲೆಗಳನ್ನು ಅಲ್ಲಿ ಅನುಭವಿಸಬೇಕಾಗಿ ಬಂತು ಎಂಬುದನ್ನು ಆರಿಂದ ತಾನೇ ವರ್ಣಿಸಲು ಸಾಧ್ಯ?ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಬಾಲ್ಯೇ ದು:ಖಾತಿರೇಕೋ ಮಲಲುಲಿತವಪು: ಸ್ತನ್ಯಪಾನೇ ಪಿಪಾಸಾ |
ನೋ ಶಕ್ತಶ್ಚೇಂದ್ರಿಯೇಭ್ಯೋ ಭವಗುಣಜನಿತಾ ಜಂತವೋಮಾಂ ತುದಂತಿ|| ನಾನಾರೋಗಾತಿದು:ಖಾದ್ರುದನಪರವಶ: ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೨||

ಭಾವಾರ್ಥ:-ಬಾಲ್ಯದಲ್ಲಿ ನನ್ನಲ್ಲಿ ದು:ಖಗಳು ಅತಿಯಾಗಿದ್ದವು.ಮಲ ಮೆತ್ತಿದ ಶರೀರ,ಸದಾ ಸ್ತನ್ಯ ಪಾನದ ಬಲವಾಗಿದ್ದ ಬಯಕೆ,ನನ್ನ ಇಂದ್ರಿಯಗಳನ್ನು ನಾನೇ ನಿಗ್ರಹಿಸಿಕೊಳ್ಳಲಾಗದ ದುರ್ಬಲತೆ,ಅದರೊಂದಿಗೆ ತಾವು ಪೂರ್ವ ಜನ್ಮದಲ್ಲಿ ಮಾಡಿದ್ದ ಪಾಪಶೇಷಗಳ ಫಲದಿಂದ ಜನಿಸಿದ ಸೊಳ್ಳೆ,ನೊಣ,ಮೊದಲಾದ ಜಂತುಗಳು ನನ್ನನ್ನು ಬಹಳವಾಗಿ ಕಾಡಿದವು.ವಿವಿಧ ರೋಗಗಳು ನನ್ನನು ಬಾಧಿಸಿ ಅದರಿಂದಾಗಿ ನಾನು ರೋದಿಸುತ್ತಾ ಕೇವಲ ಸ್ವತಂತ್ರ ರಹಿತನಾಗಿ ಪರರ ವಶವರ್ತಿಯಾಗಿದ್ದೆ. ಇದರಿಂದಾಗಿ ನಾನು ಶಂಕರನನ್ನು ಸ್ಮರಣೆ ಮಾಡಲಿಲ್ಲ. ಹಾಗಾಗಿ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಪ್ರೌಢೋsಹಂ ಯೌವನಸ್ತೋ ವಿಷಯವಿಷಧರೈ: ಪಂಚಭಿರ್ಮರ್ಮಸಂಧೌ |
ದಷ್ಟೋ ನಷ್ಟೋ ವಿವೇಕ:ಸುತಧನ ಯುವತಿಸ್ವಾದಸೌಖ್ಯೇ ನಿಷ್ಣ್ಣಾ: ||
ಶೈವೀಚಿಂತಾವಿಹೀನಂ ಮಮಹೃದಯಮಹೋ ಮಾನಗರ್ವಾಧಿ ರೂಢಂ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೩||

ಭಾವಾರ್ಥ:-ನಾನು ಬೆಳೆದು ಯುವಕನಾದಾಗ ಶಬ್ದ, ಸ್ಪರ್ಶ,ರೂಪ,ರಸ,ಗಂಧಗಳೆನ್ನುವ ಐದು ವಿಷ ಸರ್ಪಗಳು ನನ್ನ ಜೀವಸ್ಥಾನವನ್ನು ಕಚ್ಚಿದವು.ಈ ಕಾರಣದಿಂದಾಗಿ ನನ್ನಲ್ಲಿ ವಿವೇಕವೆಂಬುದು ಶೂನ್ಯವಾಯಿತು.ಕೇವಲ ಪತ್ನಿ ಮಕ್ಕಳು ಸಂಪತ್ತುಗಳ ಸುಖಾನುಭವದಲ್ಲಿಯೇ ಮಗ್ನನಾಗಿ ಕಾಲಕಳೆದೆ.ಈಶ್ವರೀಯ ಶಕ್ತಿಯ ಚಿಂತಾ ವಿಹೀನನಾದ ನನ್ನ ಹೃದಯದ ಪೂರ್ತಿ ಅಯ್ಯೋ! ಸೊಕ್ಕು ದರ್ಪಗಳಿಂದ ತುಂಬಿಕೊಂಡಿತು. ಸ್ವಾಮೀ, ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ವಾರ್ಧ್ಯಕ್ಯೇಚೇಂದ್ರಿಯಾಣಾಂ ವಿಕತಗತಿಮತಿಶ್ಚಾಧಿದೈವಾದಿ  ತಾಪೈ: |
ಪ್ರಾಪ್ತೈರೋಗೈರ್ವಿಯೋಗೈರ್ವ್ಯಸನಕೃಶತನೋರ್ಜ್ಞಪ್ತಿಹೀನಂಚ ದೀನಮ್ ||
ಮಿಥ್ಯಾಮೋಹಾಭಿಲಾಷೈರ್ಭ್ರಮತಿ ಮಮ ಮನೋ ಧೂರ್ಜಟೇರ್ಧ್ಯಾನ ಶೂನ್ಯಂ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೪||

ಭಾವಾರ್ಥ:-ಈ ನನ್ನ ಮುಪ್ಪಿನ ಸಮಯದಲ್ಲಿ ಇಂದ್ರಿಯಗಳ ಚಲನೆ,ಶಕ್ತಿ,ಮತ್ತು ನಿರ್ಣಯಗಳು ಕುಂಠಿತಗೊಂಡಿವೆ.ಇಷ್ಟದೇವತೆಯ ಕೋಪತಾಪಗಳಿಂದ ಪ್ರಾಪ್ತವಾಗಿರುವ ರೋಗ,ವಿಯೋಗಾದಿ ಮನೋವ್ಯಥೆಗಳ ಕಾರಣದಿಂದ ಶರೀರಶಕ್ತಿಯು ಇಳಿಮುಖವಾಗಿ ನನ್ನ ಜ್ಞಾನಶಕ್ತಿಯು ನಾಶವಾಗಿ ದು:ಖವನ್ನು ಅನುಭವಿಸುತ್ತಿದೆ. ಆದರೂ ಈ ನನ್ನ ಮನಸ್ಸು ಧೂರ್ಜಟಿಯನ್ನು ಧ್ಯಾನ ಮಾಡದೆ ವ್ಯರ್ಥವಾದ ಮೋಹಾಭಿಲಾಷೆಗಳ ಬೆನ್ನು ಹತ್ತಿ ತಿರುಗುತ್ತಿದೆ. ಆದ ಕಾರಣ  ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಸ್ನಾತ್ವಾ ಪ್ರತ್ಯೂಷಕಾಲೇ ಸ್ವಪನವಿಧಿವಿಧೌ ನಾಹೃತಂ ಗಾಂಗತೋಯಂ |
ಪೂಜಾರ್ಥಂ ವಾ ಕದಾಚಿದ್ಬಹುರಗಹನಾತ್ ಅಖಂಡಬಿಲ್ವೀದಲಂವಾ ||
ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧಧೂಪೈಸ್ತ್ವದರ್ಥಂ | 
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೫||

ಭಾವಾರ್ಥ:-ಉಷ:ಕಾಲದಲ್ಲಿ ನಿತ್ಯನೈಮಿತ್ತಿಕಾದಿಗಳನ್ನು ಮುಗಿಸಿ,ಸ್ನಾನ ಮಾಡಿ ವಿಧಿಯುಕ್ತವಾಗಿ ನಿನ್ನ ಅಭಿಷೇಕಕ್ಕಾಗಿ ಗಂಗಾಜಲವನ್ನು ನಾನೆಂದೂ ತಂದವನಲ್ಲ.ಅಥವಾ ದಟ್ಟ ಕಾನನದೊಳಗೆ ಸಾಗಿ ನಿನ್ನ ಆರಾಧನೆಗಾಗಿ ತುಂಡಾಗದ ಬಿಲ್ವದಳನ್ನು ಅಕಸ್ಮಾತ್ತಾಗಿ ಕೂಡಾ ನಾನೆಂದೂ ಕೊಯಿದು ತಂದವನಲ್ಲ.ಸರೋವರದಲ್ಲಿ ಅರಳಿರುವ ಕಮಲ ಪುಷ್ಪಗಳನ್ನು ತಂದು ಗಂಧಾಧೂಪಗಳೊಂದಿಗೆ ನಿನಗರ್ಪಿಸುವ ಕಾರ್ಯವನ್ನು ನಾನೆಂದೂ ಮಾಡಿದವನಲ್ಲ.ಆದ ಕಾರಣ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ದುಗ್ಧೈರ್ಮಧ್ಯಾಜ್ಯಯುಕ್ತೈರ್ದಧಿಗುಡಸಹಿತೈ: ಸ್ನಾಪಿತಂ ನೈವ ಲಿಂಗಂ |
ನೋ ಲಿಪ್ತಂ ಚಂದನಾದ್ಯೈ: ಕನಕ ವಿರಚಿತೈ: ಪೂಜಿತಂ ನ ಪ್ರಸೂನೈ: ||
ಧೂಪೈ:ಕರ್ಪೂರದೀಪೈರ್ವಿವಿಧರಸಯುತೈರ್ನೈವ ಭಕ್ಷ್ಯೋಪಹಾರೈ: |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೬||

ಭಾವಾರ್ಥ:-ಹಾಲು,ಮೊಸರು,ತುಪ್ಪ,ಜೇನು,ಸಕ್ಕರೆಗಳಿಂದ ನಾನೆಂದೂ ಶಿವಲಿಂಗಕ್ಕೆ ಪಂಚಾಮೃತಾಭಿಶೇಕವನ್ನು ಮಾಡಿದವನಲ್ಲ.ಶ್ರೀಚಂದನಾದಿ ಪರಿಮಳಭರಿತ ದ್ರವ್ಯಗಳನ್ನು ನಾನೆಂದೂ ಶಿವಲಿಂಗಕ್ಕೆ ಲೇಪಿಸಿದವನಲ್ಲ.ಎಂದೂ ಸುವರ್ಣ ಪುಷ್ಪಗಳಿಂದ ಅರ್ಚಿಸಲಿಲ್ಲ.ಧೂಪದಿಂದಾಗಲೀ ಕರ್ಪೂರ ದೀಪದಿಂದಾಗಲೀ ನಾನೆಂದೂ ಆರತಿಯನ್ನು ಬೆಳಗಿದವನಲ್ಲ.ರಸಭರಿತವಾಗಿರುವ ಭಕ್ಷ್ಯಭೋಜ್ಯಗಳನ್ನು ನಾನೆಂದೂ ನಿವೇದಿಸಿದವನಲ್ಲ. ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ನೋ ಶಕ್ಯಂ ಸ್ಮಾರ್ತಕರ್ಮ ಪ್ರತಿಪದಗಹನೇ ಪ್ರತ್ಯವಾಯಾಕುಲಾಢ್ಯೇ |
ಶ್ರೌತೇ ವಾರ್ತಾ ಕಥಂ ಮೇ ದ್ವಿಜಕುಲವಿಹಿತೇ ಬ್ರಹ್ಮ ಮಾರ್ಗಾನುಸಾರೇ ||
ತತ್ವೇs ವಿಚಾರೈ: ಶ್ರವಣಮನಯೊ: ಕಿಂ ನಿಧಿಧ್ಯಾಸಿತವ್ಯಂ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೭||

ಭಾವಾರ್ಥ:-ನನ್ನ ಹೆಜ್ಜೆ ಹೆಜ್ಜೆಗೂ ತಪ್ಪು ಹುಡುಕುವಿಕೆಯಿಂದಲೂ,ಅಡ್ಡಿ ಆತಂಕಗಳಿಂದಲೂ ಕೂಡಿದ ಅದ್ವೈತ ಸಂಪ್ರದಾಯಗಳ ಸ್ಮೃತಿಗಳಿಗೆ ಸಂಬಂಧಿಸಿದ ಕರ್ಮಗಳ ಅನುಷ್ಠಾನವೇ ನನ್ನ ಜ್ಞಾನಕ್ಕೆ ಹೊರತಾಗಿರುವಾಗ; ಇನ್ನು ವೇದ ಶಾಸ್ತ್ರಗಳಲ್ಲಿ ಬ್ರಾಹ್ಮಣರಿಗೆ ವಿಧಿಸಲಾಗಿರುವ ಬ್ರಹ್ಮ ಮಾರ್ಗದ ಅನುಷ್ಠಾನ ನನ್ನಿಂದ ಹೇಗೆ ತಾನೇ ಸಾಧ್ಯ? ವಿಮರ್ಶೆಯ ಮೂಲಕ ಕೇಳುವಿಕೆ ಹಾಗೂ ಚಿಂತನೆಗಳ ಸ್ವರೂಪವನ್ನೇ ನಾನಿನ್ನೂ ಅರಿತುಕೊಳ್ಳಲಸಾಧ್ಯವಾಗಿರುವಾಗ ನಿಧಿ ಧ್ಯಾಸನ ನನ್ನಿಂದ ಎಂತು ತಾನೇ ಸಾಧ್ಯ?ಹೀಗಿರುವಾಗ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಧ್ಯಾತ್ವಾ ಚಿತ್ತೇ ಶಿವಾಕ್ಯಂ ಪ್ರಚುರತರಧನಂ ನೈವ ದತ್ತಂ ದ್ವಿಜೇಭ್ಯೋ |
ಹವ್ಯಂ ತೇ ಲಕ್ಷ ಸಂಖ್ಯೈರ್ಹುತವಹವದನೇ ನಾರ್ಪಿತಂ ಬೀಜಮಂತ್ರೈ : ||
ನೋ ತಪ್ತಂ ಗಾಂಗತೀರೇ ವ್ರತಜಪನಿಯಮೈ ರುದ್ರಜಾಪ್ಯಂ ನ ಜಪ್ತಂ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೮||

ಭಾವಾರ್ಥ:-ಶಿವನನ್ನು ಮನದಲ್ಲಿಯೇ ಧ್ಯಾನಿಸುತ್ತಾ ಬ್ರಾಹ್ಮಣರಿಗೆ ನಾನೆಂದೂ ಯಥೇಷ್ಟ ದಾನವನ್ನು ಎಂದೂ ಮಾಡಿದವನಲ್ಲ.ನಿನ್ನ ಬೀಜಮಂತ್ರವನ್ನು ಜಪ ಮಾಡುತ್ತಾ ನಿನ್ನ ಪ್ರೀತಿಗಾಗಿ ಯಜ್ಞಕುಂಡದಲ್ಲಿ ಲಕ್ಷ ಸಂಖ್ಯೆಯಲ್ಲಿ ಹವಿಸ್ಸನ್ನು ನಾನೆಂದೂ ಅರ್ಪಿಸಿದವನಲ್ಲ.ಗಂಗಾ ನದೀ ತಟಾಕದಲ್ಲಿ ಕುಳಿತು ವ್ರತ,ಜಪ,ನಿಯಮಾದಿಗಳ ಮೂಲಕವಾಗಿ ತಪ್ಪಸನ್ನು ಎಂದಿಗೂ ಮಾಡಿದವನಲ್ಲ.ಶ್ರೇಷ್ಠವಾದ ನಿನ್ನ ರುದ್ರ ಮಂತ್ರವನ್ನು ನಾನೆಂದೂ ಜಪಿಸಿದವನಲ್ಲ.ಆದರೂ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ನಗ್ನೋ ನಿಸ್ಸಂಗಶುದ್ಧ ಸ್ತ್ರಿಗುಣ ವಿರಹಿತೋ ಧ್ವಸ್ತ ಮೋಹಾಂಧಕಾರೋ |
ನಾಸಾಗ್ರೇ ನ್ಯಸ್ತ ದೃಷ್ಟಿರ್ವಿದಿತಭವಗುಣೋ ನೈವ ದೃಷ್ಟ: ಕದಾಚಿತ್ ||
ಉನ್ಮನ್ಯಾವಸ್ಥಯಾ ತ್ವಾಂ ವಿಗತಕಲಿಮಲಂ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೯||

ಭಾವಾರ್ಥ:-ದಿಗಂಬರನೂ ಸಂಗರಹಿತನೂ,ಶುದ್ಧನೂ,ತ್ರಿಗುಣ ವಿರಹಿತನೂ,ಆಶಾಪಾಶಗಳಿಂದ ಹೊರತಾದವನೂ,ಮೂಗಿನ ತುದಿಭಾಗಕ್ಕೆ ನೆಟ್ಟ ದೃಷ್ಟಿಯನ್ನು ಹೊಂದಿರುವವನೂ ಆದ ಸಂಸಾರದ ರೂಪದ ಬಗ್ಗೆ ಅರಿವು ಉಳ್ಳವನಾದ ನಿನ್ನನ್ನು ನಾನು ಎಂದೂ ದರ್ಶನ ಮಾಡಿದವನಲ್ಲ.ಏಕೋಧ್ಯಾನದಿಂದ ಮಂಗದಾಯಕನಾಗಿರುವ ಮತ್ತು ದರಿದ್ರ ಲಕ್ಷ್ಮಿಯನ್ನು ದೂರೀಕರಿಸುವ ನಿನ್ನನ್ನು ನಾನೆಂದೂ  ಸ್ಮರಿಸಿದವನಲ್ಲ.ಆದುದರಿಂದ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಸ್ಥಿತ್ವಾ ಸ್ಥಾನೇ ಸರೋಜೇ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮ ಮಾರ್ಗೇ |
ಶಾಂತೇ ಸ್ವಾಂತೇ ಪ್ರಲೀನೇ ಪ್ರಕಟಿತ ವಿಭವೇ ದಿವ್ಯರೂಪೇ ಶಿವಾಖ್ಯೇ ||
ಲಿಂಗಜ್ಞೇ ಬ್ರಹ್ಮವಾಕ್ಯೇ ಸಕಲತನುಗತಂ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೧೦||

ಭಾವಾರ್ಥ:-ಪದ್ಮಾಸನದಲ್ಲಿ ಕುಳಿತು ಪ್ರಣವ ಮಂತ್ರವನ್ನು ಉಚ್ಚರಿಸುತ್ತಾ ಪ್ರಾಣ ವಾಯುವನ್ನು ಸುಷುಮ್ನ ಮಾರ್ಗದಲ್ಲಿ ನಿರೋಧಿಸಿ ಮನಸ್ಸನ್ನು ಪ್ರಶಾಂತಗೊಳಿಸಿ ನಿನ್ನ ಮಹಿಮೆಯನ್ನು ತೋರ್ಪಡಿಸುವ ಓಂಕಾರವನ್ನು ಪ್ರಕಾಶಮಯವೂ ಪರಬ್ರಹ್ಮ ಸ್ವರೂಪವೂ ಆದ ಸಾಕ್ಷಿರೂಪದ ಚೈತನ್ಯ ಶಕ್ತಿಯಲ್ಲಿ ಲೀನಗೊಳಿಸಿ ಸಮಸ್ತ ದೇಹಗಳಲ್ಲೂ ಅಂತರ್ಯಾಮಿಯಾಗಿರುವ ಶಂಕರನಾದ ನಿನ್ನನ್ನು ನಾನೆಂದೂ ಸಮಾಧಿ ಸ್ಥಿತಿಯಲ್ಲಿ ಧ್ಯಾನ ಮಾಡಿದ್ದಿಲ್ಲ.ಆದರೂ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಹೃದ್ಯಂ ವೇದಾಂತವೇದ್ಯಂ ಹೃದಯ ಸರಸಿಜೇ ದೀಪ್ತ ಮುದ್ಯತ್ಪ್ರಕಾಶಂ |
ಸತ್ಯಂ ಶಾಂತ ಸ್ವರೂಪಂ ಸಕಲಮುನಿಮನ:ಪದ್ಮಷಂಡೈಕವೇದ್ಯಮ್ ||
ಜಾಗ್ರತ್ಸ್ವಪ್ನೇ ಸುಷುಪ್ತೌ ತ್ರಿಗುಣ ವಿರಹಿತಂ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧ: ಶಿವ ಶಿವ ಶಿವ ಭೋ: ಶ್ರೀ ಮಹಾದೇವ ಶಂಭೋ ||೧೧||

ಭಾವಾರ್ಥ:- ಮನಮೋಹಕನೂ,ವೇದಾಂತಗಳಿಂದ ತಿಳಿಯಲ್ಪಡುವವನೂ,ಹೃತ್ಕಮಲದಲ್ಲಿ ಬೆಳಗುತ್ತಿರುವನೂ,ಪ್ರಕಾಮಯನೂ,ಸತ್ಯನೂ ಶಾಂತ ಸ್ವರೂಪನೂ,ಮುನಿಗಳ ಹೃತ್ಕಮಲಕ್ಕೆ ಮಾತ್ರಾ ತಿಳಿಯಲ್ಪಡುವವನೂ,ಜಾಗ್ರತ್-ಸ್ವಪ್ನ-ಸುಷುಪ್ತಿಗಳೆನ್ನುವ ಮೂರು ಅವಸ್ತಾತ್ರಯಗಳಲ್ಲಿಯೂ ತ್ರಿಗುಣ ರಹಿತನಾಗಿರುವವನೂ ಆಗಿರುವ ಮಂಗಲಮಯ ಸ್ವರೂಪನಾಗಿರುವ ಶಂಕರನೇ ನಿನ್ನನ್ನು ನಾನೆಂದೂ ಸ್ಮರಿಸಲಿಲ್ಲ.ಆದ ಕಾರಣ ಹೇ!ಶಂಕರನೇ,ಹೇ!ಮಹಾದೇವನೇ,ಹೇ!ಶಿವನೇ;ಸ್ವಾಮೀ,ಹೇ!ಶಂಭುವೇ;ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಚಂದ್ರೋದ್ಭಾಸಿತಶೇಖರೇ ಸ್ಮರಹರೇ ಗಂಗಾಧರೇ ಶಂಕರೇ |
ಸರ್ಪೈರ್ಭೂಷಿತಕಂಠಕರ್ಣವಿವರೇ ನೇತ್ರೋತ್ಥ ವೈಶ್ವಾನರೇ  ||
ದಂತಿತ್ವಕ್ಕೃತಸುಂದರಾಂಬರಧರೇ ತ್ರೈಲೋಕ್ಯಸಾರೇ ಹರೇ |
ಮೋಕ್ಷಾರ್ಥಂ ಕುರು ಚಿತ್ತ ವೃತ್ತಿ ಮಚಲಾ ಅನ್ಯೈಸ್ತು ಕಿಂ ಕರ್ಮಭಿ: ||೧೨||

ಭಾವಾರ್ಥ:-ಚಂದ್ರನಂತೆ ಉಜ್ವಲವಾಗಿ ಪ್ರಕಾಶಿಸುತ್ತಿರುವ ಹಣೆಯುಳ್ಳವನೂ,ಮನ್ಮಥನ ಸಂಹಾರಿಯೂ,ಗಂಗೆಯನ್ನು ಧರಿಸಿರುವವನೂ,ಸುಖದಾಯಕನೂ,ಕೊರಳು-ಕಿವಿಗಳನ್ನು ನಾಗಗಳಿಂದ ಅಲಂಕರಿಸಿಕೊಂಡವನೂ,ನಯನಗಳಲ್ಲಿ ಅಗ್ನಿಯನ್ನು ಉದ್ಭವಿಸಿಕೊಂಡವನೂ,ಆನೆಯ ಚರ್ಮವನ್ನು ಮನೋಹರವಾಗಿರುವ ವಸ್ತ್ರದಂತೆ ಧರಿಸಿಕೊಂಡವನೂ,ಮೂರು ಲೋಕಗಳ ಸಾರರೂಪನೂ,ಆಗಿರುವ ಹರನಲ್ಲಿ ಮನಸ್ಸನ್ನು ರೂಢಿಸಿಕೊಂಡು,ಮೋಕ್ಷ ಸಂಪದವನ್ನು ಪಡೆಯಲೋಸುಗವಾಗಿ ಸ್ಥಿರಗೊಳಿಸುವವನಾಗು.ಉಳಿದ ಕಾರ್ಯಗಳಿಂದ ಏನು ಪ್ರಯೋಜನವಿದೆ? 

ಕಿಂ ವಾsನೇನ ಧನೇನ ವಾಜಿಕರಿಭಿ: ಪ್ರಾಪ್ತೇನ ರಾಜ್ಯೇನ ಕಿಂ |
ಕಿಂ ವಾ ಪುತ್ರ ಕಲತ್ರ ಮಿತ್ರ ಪಶುಭಿರ್ದೇಹೇನ ಗೇಹೇನ ಕಿಮ್ ||
ಜ್ಞಾತ್ವೈ ತತ್ ಕ್ಷಣಭಂಗುರಂ ಸಪದಿರೇ ತ್ಯಾಜ್ಯಂ ಮನೋ ದೂರತ: |
ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀ ಪಾರ್ವತೀ ವಲ್ಲಭಮ್ ||೧೩||

ಭಾವಾರ್ಥ:-ಸ್ವಾಮಿಯೇ! ಈ ಸಂಪತ್ತಿನಿಂದಾಗಲೀ,ಆನೆ ಕುದುರೆಗಳಿಂದಾಗಲೀ,ಅಥವಾ ಭೂಮಿ ಪ್ರಾಪ್ತಿಯಿಂದಾಗಲೀ,ಏನು ಪ್ರಯೋಜನವಿದೆ? ಮಗ,ಮಡದಿ,ಸ್ನೇಹಿತರು,ಬಂಧುಗಳು,ಶರೀರ,ಪಶುಗಳು, ಮನೆ,ಮಠಗಳು,ಇತ್ಯಾದಿಗಳಿಂದ ಏನು ಪ್ರಯೋಜನವಿದೆ? ಎಲೈ ಮನವೇ!ಇವೆಲ್ಲವುಗಳು ಕ್ಷಣಿಕವೆಂದು ಅರ್ಥವಿಸಿಕೊಂಡು ಬೇಗನೆ ತ್ಯಜಿಸುವುದು ಬುದ್ಧಿವಂತಿಕೆ. ಬದಲಾಗಿ ಆತ್ಮ ಸಾಕ್ಷಾತ್ಕಾರಕ್ಕಾಗಿ ಗುರು ವಾಕ್ಯವಿದೆಂದು ಸ್ವೀಕರಿಸಿ ಶ್ರೀ ಪಾರ್ವತೀಪತಿಯಾಗಿರುವ ಮಹಾದೇವನನ್ನು ಪುನ:ಪುನ: ಸ್ತುತಿಸುವವನಾಗು.

ಪೌರೋಹಿತ್ಯಂ ರಜನಿ ಚರಿತಂ ಗ್ರಾಮಣಿತ್ವಂ ನಿಯೋಗೋ |
ಮಾಠಾಪತ್ಯಂ ಹ್ಯನೃತವಚನಂ ಸಾಕ್ಷಿವಾದ: ಪರಾನ್ನಮ್ ||
ಬ್ರಹ್ಮದ್ವೇಷ: ಖಲಜನರತಿ: ಪ್ರಾಣಿನಾಂ ನಿರ್ದಯತ್ವಂ |
ಮಾ ಭೂದೇವಂ ಮಮ ಪಶುಪತೇ ಜನ್ಮ ಜನ್ಮಾಂತರೇಷು ||೧೪||

ಭಾವಾರ್ಥ:-ಹೇ ಸ್ವಾಮಿಯೇ! ಪುರೋಹಿತವೃತ್ತಿಯ ನಿಶಾ ಸಂಚಾರ; ಗ್ರಾಮಾಧಿಕಾರಿಯಾಗಿ ಪ್ರತಿನಿಧಿತ್ವದ ಕಾರ್ಯ; ಮಠಾಧಿಪತಿಯ ಕೆಲಸ; ಸುಳ್ಳು ಹೇಳುವ ಕೆಲಸ; ವಿವಾದಗಳಲ್ಲಿ ಸಾಕ್ಷಿ ಹೇಳುವ ಕಾರ್ಯ; ಭಿಕ್ಷಾ ವೃತ್ತಿ; ಬ್ರಾಹ್ಮಣರಲ್ಲಿ ವೈರತ್ವ; ದುರ್ಜನರುಗಳ ಸಂಘ; ಪ್ರಾಣಿಗಳ ಬಗ್ಗೆ ನಿರ್ದಯತ್ವ; ಮತ್ತು ಭೂಮಿಯ ಒಡೆತನ; ಹೇ!ಪಶುಪತಿಯೇ ನನಗೆ ಜನ್ಮ ಜನ್ಮಾಂತರಗಳಲ್ಲಿಯೂ ಪ್ರಾಪ್ತವಾಗದೆ ಇರಲಿ.

ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂಯಾತಿ ಕ್ಷಯಂ ಯೌವನಂ |
ಪ್ರತ್ಯಾಯಾಂತಿ ಗತಾ: ಪುನರ್ನ ದಿವಸಾ: ಕಾಲೋ ಜಗದ್ಭಕ್ಷಕ: ||
ಲಕ್ಷ್ಮೀಸ್ತೋಯತರಂಗ ಭಂಗ ಚಪಲಾ ವಿದ್ಯುಚ್ಛಲಂ ಜೀವಿತಂ |
ತಸ್ಮಾನ್ಮಾಂ ಶರಣಾಗತಂ ಶರಣದ ತ್ವಂ ರಕ್ಷ ರಕ್ಷಾಧುನಾ ||೧೫||

ಭಾವಾರ್ಥ:-ಸ್ವಾಮಿಯೇ;ನೋಡು ನೋಡುತ್ತಿರುವ ಹಾಗೆ ದಿನದಿಂದ ದಿನಕ್ಕೆ ನನ್ನ ಆಯುಷ್ಯವು ಸವೆದು ಹೋಗುತ್ತಲಿದೆ.ನನ್ನ ಯೌವನದ ದಿವಸಗಳು ನಶಿಸುತ್ತಿವೆ.ಹೌದು;ಕಳೆದು ಹೋದ ಆ ದಿವಸಗಳು ಮತ್ತೆಂದೂ ತಿರುಗಿ ಬಾರವು.ದೇವನೇ;ವೇಳೆಯು ಜಗತ್ತನ್ನು ಭುಂಜಿಸುತ್ತಲಿದೆ. ಲಕ್ಷ್ಮಿಯಾದರೋ ನೀರಿನ ಅಲೆಗಳಂತೆ ಅಲೆದಾಡುವ ಸ್ವಭಾವದವಳು. ಜೀವನವಿದು ಮಿಂಚಿನಂತೆ ಹೊಯ್ದಾಡುತ್ತಿದ್ದು ಕ್ಷಣಿಕವಾಗಿದೆ. ಆದುದರಿಂದ,ಎಲೈ ಸಂರಕ್ಷಕನೇ!ಮೊರೆಹೊಕ್ಕವನಾದ ನನ್ನನು ಈವಾಗಲೇ ರಕ್ಷಿಸುವವನಾಗು.ತನ್ಮೂಲಕ ನನ್ನನ್ನು ಉದ್ಧರಿಸು ಪ್ರಭುವೇ!
*********************************************************************    
       ||ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶಿವಾಪರಾಧ ಕ್ಷಮಾಪಣ ಸ್ತೋತ್ರಮ್ ||
|| ಇತಿ ಶ್ರೀ ಶಂಕರಾಚಾರ್ಯರು ರಚಿಸಿದ ಶಿವಾಪರಾಧ ಕ್ಷಮಾಪಣ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
                        -೧೮-
  || ಶ್ರೀ ವೇದಸಾರಶಿವಸ್ತವ: ||
 ***********************
ಪಶೂನಾಂ ಪತಿಂ ಪಾಪನಾಶಂ ಪರೇಶಂ |
ಗಜೇಂದ್ರಸ್ಯ ಕೃತ್ತಿಂ ವಸಾನಂ ವರೇಣ್ಯಂ ||
ಜಟಾಜೂಟ ಮಧ್ಯೇ ಸ್ಫುರದ್ಗಾಂಗವಾರಿಂ |
ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್ ||೧||

ಭಾವಾರ್ಥ:-ಸಮಸ್ತಜೀವಜಗತ್ತಿನಒಡೆಯನೂ,ಪಾಪನಾಶಕನೂ,ಪರಮೇಶ್ವರನೂ, ಆನೆಯಚರ್ಮವನ್ನು ಹೊದ್ದುಕೊಂಡವನೂ,ಅಗ್ರಗಣ್ಯನೂ,ತನ್ನ ಜಡೆಯ ಮಧ್ಯದಲ್ಲಿ ಗಂಗೆಯನ್ನು ಧರಿಸಿದವನೂ,ಸರಸಾಟಿಯಿಲ್ಲದವನೂ,ಮನ್ಮಥನ ವೈರಿಯೂ,ಆಗಿರುವ ಶ್ರೀಮನ್ಮಹಾದೇವನನ್ನು ನಾನು ಸ್ಮರಿಸುತ್ತೇನೆ.

ಮಹೇಶಂ ಸುರೇಶಂ ಸುರಾರಾರ್ತಿನಾಶಂ |
ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಂ ||
ವಿರೂಪಾಕ್ಷಮಿಂದ್ವರ್ಕವಹ್ನಿತ್ರಿನೇತ್ರಂ |
ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್ ||೨||

ಭಾವಾರ್ಥ:-ಮಹೇಶ್ವರನೂ,ಸೂರ್ಯಚಂದ್ರಾಗ್ನಿಗಳನ್ನು ಕಣ್ಣುಗಳನ್ನಾಗಿಸಿಕೊಂಡವನೂ,ದೇವತೆಗಳ ಒಡೆಯನೂ,ದೇವತೆಗಳ ಶತ್ರುಗಳನ್ನು ನಾಶಮಾಡಿದವನೂ,ಸ್ವಾಮಿಯೂ,ವಿರೂಪಾಕ್ಷನೂ,ಸರ್ವ ವ್ಯಾಪಕನೂ,ವಿಭೂತಿಯಿಂದ ಅಲಂಕೃತನಾಗಿರುವವನೂ,ನಿತ್ಯಾನಂದ ಸ್ವರೂಪನೂ,ಪಂಚಮೊಗದವನೂ ಆಗಿರುವ ಪ್ರಭು ಭಗವಾನ್ ಶ್ರೀಮನ್ಮಹಾದೇವನನ್ನು ನಾನು ಸ್ತುತಿಸುವೆನು.

ಗಿರೀಶಂ ಗಣೇಶಂ ಗಲೇ ನೀಲವರ್ಣಂ |
ಗವೇಂದ್ರಾಧಿರೂಢಂ ಗುಣಾತೀತರೂಪಮ್ ||
ಭವಂ ಭಾಸ್ಕರಂ ಭಸ್ಮನಾ ಭೂಷಿತಾಂಗಂ |
ಭವಾನೀ ಕಲತ್ರಂ ಭಜೇ ಪಂಚವಕ್ತ್ರಮ್ ||೩||

ಭಾವಾರ್ಥ:-ಗಿರಿಗಳದೊರೆಯೂ,ಗಣಗಳಾಧಿಪತಿಯೂ,ನೀಲಕಂಠನೂ,ವೃಷಭಾರೂಢನೂ, ಗುಣಗಳಿಗೆ ಹೊರತಾದ ಅಗಣಿತರೂಪನೂ,ಬ್ರಹ್ಮಾಂಡದ ಸೃಷ್ಟಿಗೆ ಆದಿ ಕಾರಣನೂ,ಪ್ರಕಾಶರೂಪಿಯೂ,ಭಸ್ಮವನ್ನು ಧರಿಸಿಕೊಂಡವನೂ,ಪಾರ್ವತೀ ದೇವಿಯ ಪತಿಯೂ,ಪಂಚವದನನೂ ಆಗಿರುವ ಶ್ರೀಮನ್ಮಹಾದೇವನನ್ನು ನಾನು ಭಜಿಸುವೆನು.

ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ |
ಮಹೇಶಾನ ಶೂಲಿನ್ ಜಟಾಜೂಟಧಾರಿನ್ ||
ತ್ವಮೇಕೋ ಜಗದ್ವಾಪಿಕೋ ವಿಶ್ವರೂಪ: |
ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ  ||೪||

ಭಾವಾರ್ಥ:-ಹೇ!ಗೌರೀವಲ್ಲಭನೇ,ಶಂಭುವೇ,ಮಹಾದೇವನೇ,ಚಂದ್ರಮೌಳೀಶ್ವರನೇ, ಮಹೇಶ್ವರನೇ,ತ್ರಿಶೂಲಧಾರಿಯೇ,ಜಿಗುಟಾಗಿರುವತಲೆಗೂದಲುಗಳನ್ನುಧರಿಸಿರುವಾತನೇ,          ಬ್ರಹ್ಮಾಂಡಸ್ವರೂಪನೇ,ಜಗದ್ವ್ಯಾಪಕನೇ,ಪೂರ್ಣರೂಪಿಯೇ,ದೊರೆಯೆ,ಒಡೆಯನೇ ಪ್ರಸನ್ನನಾಗು.ಪ್ರಸನ್ನನಾಗು.

ಪರಾತ್ಮಾನಮೇಕಂ ಜಗದ್ಬೀಜಮಾದ್ಯಂ |
ನಿರೀಹಂ ನಿರಾಕಾರಮೋಂಕಾರವೇದ್ಯಮ್ ||
ಯತೋಜಾಯತೇ ಪಾಲ್ಯತೇ ಯೇನ ವಿಶ್ವಂ |
ತಮೀಶಂ ಭಜೇ ಲೀಯತೇ ಯತ್ರ ವಿಶ್ವಮ್  ||೫||

ಭಾವಾರ್ಥ:-ಪರಮಾತ್ಮನೂ,ಸರಿಸಾಟಿಯಿಲ್ಲದಏಕರೂಪಿಯೂ,ಆದಿಪುರುಷನೂ,ಜಗತ್ತಿನ ನಿಯಾಮಕನೂ,ನಿಷ್ಕ್ರ‍ಿಯನೂ,ಆಶಾಪಾಶರಹಿತನೂ,ನಿರಾಕಾರನೂ,ಓಂಕಾರದಮೂಲಕ ತಿಳಿಯತಕ್ಕವನೂ,ಬ್ರಹ್ಮಾಂಡದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣೀಭೂತನೂ ಆಗಿರುವ ಶ್ರೀಮನ್ಮಹಾದೇವನನ್ನು ನಾನು ಭಜಿಸುವೆನು.

ನ ಭೂಮಿರ್ನ ಚಾಪೋ ನ ವಹ್ನಿರ್ನವಾಯು |
ರ್ನ ಚಾಕಾಶಮಾಸ್ತೇ ನ ತಂದ್ರಾ ನ ನಿದ್ರಾ ||
ನ ಗ್ರೀಷ್ಮೋ ನ ಶೀತಂ ನ ದೇಶೋ ನವೇಶೋ |
ನ ಯಸ್ಯಾಸ್ತಿ ಮೂರ್ತಿಸ್ತ್ರಿಮೂರ್ತಿಂ ತ ಮೀಡೇ ||೬||

ಭಾವಾರ್ಥ:-ಪೃಥ್ವೀಅಪ್ತೇಜೋವಾಯ್ವಾಕಾಶಗಳೆಂಬಪಂಚಭೂತಗಳಿಂದವಿಭಿನ್ನವಾದವನೂ,ಆಯಾಸ,ನಿದ್ರೆ, ಶೀತೋಷ್ಣಗಳಹೊರತಾಗಿರುವವನೂ,ದೇಶಕಾಲಾದಿಗಳನ್ನುಮೀರಿರುವವನೂ, ಅಮೂರ್ತಸ್ವರೂಪಿಯೂ,ತ್ರಿಮೂರ್ತಿಯೂ ಆಗಿರುವ ಆ ಶ್ರೀಮನ್ಮಹಾದೇವನನ್ನು ನಾನು ಸ್ತುತಿಸುವೆನು.

ಅಜಂಶಾಶ್ವತಂ ಕಾರಣಂ ಕಾರಣಾನಾಂ  |
ಶಿವಂ ಕೇವಲಂ ಭಾಸಕಂ ಭಾಸಕಾನಾಮ್ ||
ತುರೀಯಂ ತಮ:ಪಾರಮಾದ್ಯಂತಹೀನಂ |
ಪ್ರಪದ್ಯೇ ಪರಂ ಪಾವನಂ ದ್ವೈತಹೀನಮ್ ||೭||

ಭಾವಾರ್ಥ:-ಅನಾದಿಪುರುಷನೂ,ಅವಿನಾಶಿಯೂ,ಮೂಲಗಳಿಗೆ ಮೂಲನೂ,ಶಿವನೂ,ಕಲ್ಯಾಣಸ್ವರೂಪನೂ,ಜ್ಯೋತಿಗಳಿಗೆ ಜ್ಯೋತಿಯಾದವನೂ,ವೇದನಾದಾತೀತನೂ,ಅಜ್ಞಾನಾಂಧಕಾರಗಳಿಗೆ ಹೊರತಾದವನೂ,ಆದಿ   ಅಂತ್ಯಗಳಿಲ್ಲದವನೂ, ಜೀವಾತ್ಮ ಪರಮಾತ್ಮರೆಂಬ ದ್ವೈತ ರಹಿತನೂ,ಪರಮಪಾವನನೂ,ಅದ್ವೈತ ಸ್ವರೂಪನೂ ಆಗಿರುವ ಶಿವನಿಗೆ ಶರಣಾಗುವೆನು.

ನಮಸ್ತೇ ನಮಸ್ತೇ ವಿಭೋ ವಿಶ್ವಮೂರ್ತೇ |
ನಮಸ್ತೇ ನಮಸ್ತೇ ಚಿದಾನಂದಮೂರ್ತೇ ||
ನಮಸ್ತೇ ನಮಸ್ತೇ ತಪೋಯೋಗಗಮ್ಯ |
ನಮಸ್ತೇ ನಮಸ್ತೇ ಶ್ರುತಿಜ್ಞಾನಗಮ್ಯ ||೮||

ಭಾವಾರ್ಥ:-ಹೇ ದೊರೆಯೇ;ಹೇ ವಿಶ್ವಸ್ವರೂಪನೇ ನಿನಗೆ ನನ್ನ ನಮಸ್ಕಾರಗಳು.ಹೇ ಚಿದಾನಂದ ಸ್ವರೂಪನೇ,ನಿನಗೆ ನನ್ನ ನಮಸ್ಕಾರಗಳು.ತಪಯೋಗಳಿಗೆ ತಲಪಲು ಸಾಧ್ಯವಾಗುವವನೇ ನಿನಗೆ ನನ್ನ ನಮಸ್ಕಾರಗಳು.ವೇದ ಶಾಸ್ತ್ರಾದಿಗಳಿಂದ ತಿಳಿದುಕೊಳ್ಳಲು ಸಾಧ್ಯವಾಗುವಾತನೇ ನಿನಗಿದೋ ನನ್ನ ನಮಸ್ಕಾರಗಳು.ಪುನರಪಿ ಪುನರಪಿ ನಮಸ್ಕಾರಗಳು.

ಪ್ರಭೋ ಶೂಲಪಾಣೇ ವಿಭೋ ವಿಶ್ವನಾಥ |
ಮಹಾದೇವ ಶಂಭೋ ಮಹೇಶ ತ್ರಿನೇತ್ರ ||
ಶಿವಾಕಾಂತ ಶಾಂತ ಸ್ಮರಾರೇ ಪುರಾರೇ |
ತ್ವದನ್ಯೋ ವರೇಣ್ಯೋ ನ ಮಾನ್ಯೋ ನ ಗಣ್ಯ: ||೯||

ಭಾವಾರ್ಥ:-ಹೇದೊರೆಯೇ;ತ್ರಿಶೂಲಧಾರಿಯೇ,ಪ್ರಭುವೇ,ವಿಶ್ವಾಧೀಶನೇ,ಮಹಾದೇವನೇ, ಶಂಭುವೇ,   ಎಲೈಮಹೇಶ್ವರನೇ,ತ್ರಿನಯನನೇ, ಗೌರೀಶನೇ,ಶಾಂತಸ್ವರೂಪನೇ, ಮನ್ಮಥಾಂತಕನೇ, ತ್ರಿಪುರಾರಿಯೇ,ನಿನಗಿಂತ ಅಗ್ರಗಣ್ಯರು ಅನ್ಯರಿಲ್ಲ.ಶ್ರೇಷ್ಠರೂ ಇಲ್ಲ.ಕೀರ್ತಿವಂತರೂ ಅನ್ಯರಿಲ್ಲ.

ಶಂಭೋ ಮಹೇಶ ಕರುಣಾಮಯ ಶೂಲಪಾಣೇ |
ಗೌರೀಪತೇ ಪಶುಪತೇ ಪಶುಪಾಶನಾಶಿನ್ ||
ಕಾಶೀಪತೇ ಕರುಣಯಾ ಜಗದೇತದೇಕ- |
ಸ್ತ್ವಂ ಹಂಸಿ ಪಾಸಿ ವಿದಧಾಸಿ ಮಹೇಶ್ವರೋsಸಿ ||೧೦||

ಭಾವಾರ್ಥ:-ಎಲೈಶಂಭುವೇ;ಮಹೇಶ್ವರನೇ,ಕರುಣಾಮಯಿಯೇ,ತ್ರಿಶೂಲಪಾಣಿಯೇ, ಗೌರೀವಲ್ಲಭನೇ,ಜೀವಜಗತ್ತಿನ ಆಶಾಪಾಶ ವಿಮೋಚಕನೇ,ಅಜ್ಞಾನದ ಕತ್ತಲನ್ನು ಕಳೆಯುವವನೇ,ನೀನೋರ್ವನೇಪ್ರಾಪಂಚಿಕಸೃಷ್ಟಿ,ಸ್ಥಿತಿ,ಲಯಾದಿಗಳಿಗೆ ನಿಮಿತ್ತನಾದವನಾಗಿರುವೆ.ಸ್ವಾಮಿಯೇ ಸರ್ವಸ್ವಕ್ಕೂ ನೀನೋರ್ವನೇ ಒಡೆಯನಾದವನು.ನೀನೇ ಮಹೇಶ್ವರನು.

ತ್ವತ್ತೋ ಜಗದ್ಭವತಿ ದೇವ ಭವ ಸ್ಮರಾರೇ |
ತ್ವಯ್ಯೇವ ತಿಷ್ಟತಿ ಜಗನ್ಮೃಡ ವಿಶ್ವನಾಥ ||
ತ್ವಯ್ಯೇವ ಗಚ್ಚತಿ ಲಯಂ ಜಗದೇಶದೀಶ |
ಲಿಂಗಾತ್ಮಕೇ ಹರ ಚರಾಚರವಿಶ್ವರೂಪಿನ್ ||೧೧||

ಭಾವಾರ್ಥ:-ಹೇದೇವನೇ;ಶಂಕರನೇ,ಮದನಸಂಹಾರಕನೇ,ಶಿವನೇ,ನಿನ್ನಿಂದಲೇ ಬ್ರಹ್ಮಾಂಡವು ಹುಟ್ಟಿ ನೀನು ವಿಶ್ವಪತಿಯೆನಿಸಿರುವೆ.ಈಶನೇ,ಹರನೇ,ಮೃಡನೇ ಚರಾಚರ ಜಗತ್ತಿನ ದೊರೆಯೇ,ಬ್ರಹ್ಮಾಂಡವೆಲ್ಲವೂ ಕದಲದೆ ನಿನ್ನಲ್ಲೇ ಇದೆ.ಲಿಂಗಸ್ವರೂಪದ ಈ ಬ್ರಹ್ಮಾಂಡವು ನಿನ್ನಲ್ಲಿಯೇ ಲಯವನ್ನು ಹೊಂದುವುದು.
*********************************************************************
  || ಇತಿ ಶ್ರೀ ಶಂಕರಾಚಾರ್ಯ ವಿರಚಿತ ವೇದಸಾರ ಶಿವಸ್ತೋತ್ರಮ್ ||
|| ಈ ರೀತಿಯಾಗಿ ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ವೇದಸಾರ ಶಿವಸ್ತೋತ್ರಗಳ ಭಾವಾರ್ಥವಾಗಿದೆ. ||
*********************************************************************
                          -೧೯-
  || ಅಭಿಲಾಷಾಷ್ಟಕಮ್ ||
 *********************
ಏಕಂ ಬ್ರಹ್ಮೈವಾದ್ವೀತೀಯಂ ಸಮಸ್ತಂ
ಸತ್ಯಂ ಸತ್ಯಂ ನೇಹನಾನಾಸ್ತಿ ಕಿಂಚಿತ್ |
ಏಕೋ ರುದ್ರೋ ನ ದ್ವೀತೀಯೋsವಸ್ಥೇ
ತಸ್ಮಾದೇಕಂ ತ್ವಾಮ್ ಪ್ರಪದ್ಯೇ ಮಹೇಶಮ್ ||೧||

ಭಾವಾರ್ಥ:-ಸಕಲವೂ ಒಂಟಿಯೂ ಅಸಮಾನವೂ ಆಗಿರುವ ಬ್ರಹ್ಮವೇ ಆಗಿದೆ.ದಿಟವಾಗಿಯೂ ಈ ವಿಶ್ವದಲ್ಲಿ ಅದರ ಹೊರತಾದದ್ದು ಬೇರೆ ಯಾವುದೂ ಇಲ್ಲ. ಪರಮೇಶ್ವರನು ಒಬ್ಬನೇ ಇರುವುದಾಗಿದೆ.ಎರಡನೇಯದು ಇನ್ಯಾವುದೂ ಇಲ್ಲ.ಆದ ಕಾರಣ ಮಹಾ ಈಶನಾಗಿರುವ ನಿನ್ನಲ್ಲಿ ನಾನು ಆಶ್ರಯ ಪಡೆಯುತ್ತೇನೆ.

ಏಕ: ಕರ್ತಾ ತ್ವಂ ಹಿ ಸರ್ವಸ್ಯ ಶಂಭೋ
ನಾನಾರೂಪೇಷ್ಟೇಕರೂಪೋsಸ್ಯ ರೂಪ: |
ಯದ್ವತ್ ಪ್ರತ್ಯಙ್ಜರ್ಕ ಏಕೋsಪ್ಯನೇಕ-
ಸ್ತಸ್ಮಾನ್ಯಂ ತ್ವಾಂ ವಿನೇಶಂ ಪ್ರಪದ್ಯೇ ||೨||

ಭಾವಾರ್ಥ:-ಎಲೈ!ಸುಖವನ್ನು ದಯಪಾಲಿಸುವಾತನೇ; ಸತ್ಯವಾಗಿಯೂ ನೀನೋರ್ವನೇ ಸೃಷ್ಟಿದಾತ. ಪ್ರಪಂಚಕ್ಕೆಲ್ಲಾ ಓರ್ವನೇ ಸೂರ್ಯನಿರುವುದಾದರೂ ಆತನು ನಾನಾ ರೀತಿಯ ಪ್ರತಿರೂಪದಲ್ಲಿ ಹಲವು ಸೂರ್ಯರಂತೆ ಭಾಸವಾಗುವಂತೆ ನೀನು ನಿರಾಕಾರನಾದರೂ ನಾನಾರೂಪಗಳಲ್ಲಿ ಐಕ್ಯರೂಪವಾಗಿರುವೆ. ಆದ ಕಾರಣ ನಿನ್ನ ಹೊರತಾಗಿ ಅನ್ಯರಾರಲ್ಲಿಯೂ ನಾನು ಆಶ್ರಯ ಪಡೆಯಲಾರೆ.

ರಜ್ಜೌ ಸರ್ಪ: ಶುಕ್ತಿ ಕಾಯಾಂ ಚ ರೂಪ್ಯಂ
ನೀರಂ ಪುರುಸ್ತಾನ್ಮೃಗಾಖ್ಯೇ ಮರೀಚೌ |
ಯದ್ವತ್ತದ್ವದ್ವಿಷ್ವಗೇಷ ಪ್ರಪಂಚೋ
ಯಸ್ಮಿನ್ ಜ್ಞಾತೇ ತಂ ಪ್ರಪದ್ಯೇ ಮಹೇಶಮ್ ||೩||

ಭಾವಾರ್ಥ:-ಹಾವು ಹಗ್ಗದ ಹಾಗೆ ಕಾಣುವ ನೋಟ,ಬೆಳ್ಳಿಯ ಹಾಗೆ ಕಾಣುವ ಕಪ್ಪೆಚಿಪ್ಪಿನ ನೋಟ,ಮರೀಚಿಕೆಯೊಳು ಕಾಣುವ ನೀರು,ಇವೆಲ್ಲವೂ ಯಾವ ರೀತಿಯಾಗಿ ದೀಟವಲ್ಲವೋ,ಹಾಗೆಯೇ ಯಾವಾತನನ್ನು ತಿಳಿದುಕೊಂಡರೆ ವಿಶ್ವವೆಲ್ಲವೂ ಮಯಾರೂಪದಲ್ಲಿ ಕಾಣುವುದೋ ಅಂತಹಾ ಮಹಾ ಈಶನಲ್ಲಿ ನಾನು ಆಶ್ರಯ ಪಡೆಯುವೆನು.

ತೋಯೇ ಶೈತ್ಯಂ ದಾಹಕತ್ವಂ ಚ ವಹ್ನೌ
ತಾಪೋ ಭಾನೊ ಶೀತಭಾನೌ ಪ್ರಸಾದ: |
ಪುಷ್ಟೇ ಗಂಧೋ ದುಗ್ಧಮಧ್ಯೇ ಚ ಸರ್ಪಿ-
ರ್ಯತ್ನಚ್ಛಂಭೋ ತ್ವಂ ತತಸ್ತ್ವಾಂ ಪ್ರಪದ್ಯೇ ||೪||

ಭಾವಾರ್ಥ:-ಎಲೈ!ಸುಖವನ್ನು ಕರುಣಿಸುವಾತನೇ,ನೀರಿನೊಳಗಿರುವ ಶೈತ್ಯವು ನೀನು;ಅಗ್ನಿಯೊಳಗಣ ಬೇಗೆಯ ಗುಣವು ನೀನು;ಸೂರ್ಯನೊಳಗಿರುವ ಕಾವು ನೀನು;ಚಂದ್ರನಲ್ಲಿರುವ ಆನಂದವೂ ನೀನೇ; ಹೂವಿನಲ್ಲಿರುವ ಪರಿಮಳ; ಹಾಲಿನೊಳಗಿರುವ ನವನೀತವು ನೀನು. ಹೀಗಿರುವ ಕಾರಣ ನಿನ್ನಲ್ಲಿ ನಾನು ಆಶ್ರಯ ಪಡೆಯುವೆನು.

ಶಬ್ದಂಗೃಹ್ಣಾಸ್ಯಶ್ರುತಿಸ್ತ್ವಂ ಹಿ ಜಿಘ್ರೇ-
ರಘ್ರಾಣಸ್ತ್ವಂ ವ್ಯಂಘ್ರಿರಾಯಾಸಿ ದೂರಾನ್ |
ವಕ್ಷ: ಪಶ್ಯೇಸ್ತ್ವಂ ರಸಜ್ಞೋಪ್ಯ ಜಿಹ್ವ:
ಕಸ್ತ್ವಾಂ ಸಮ್ಯಗ್ವೇತ್ತ್ಯತಸ್ತ್ವಾಂ ಪ್ರಪದ್ಯೇ  ||೫||

ಭಾವಾರ್ಥ:-ಶ್ರವಣೇಂದ್ರಿಯಗಳ ಸಹಾಯವಿಲ್ಲದೆ ಶಬ್ದಗಳನ್ನು ನೀನು ಕೇಳಬಲ್ಲೆ. ವಾಸನೇಂದ್ರಿಯವಿಲ್ಲದೆ ನೀನು ವಾಸನೆಯನ್ನು ಅನುಭವಿಸಬಲ್ಲೆ. ಕಾಲುಗಳು ಇಲ್ಲದೆಯೂ ನೀನು ದೂರಕ್ರಮಿಸಬಲ್ಲೆ. ನಯನಗಳಿಲ್ಲದೆಯೂ ನೀನು ಎಲ್ಲವನ್ನೂ ಕಾಣಬಲ್ಲೆ. ನಾಲಿಗೆಯಿಲ್ಲದೆಯೂ ನೀನು ರುಚಿ ನೋಡಬಲ್ಲೆ. ಪೂರ್ಣವಾಗಿ ನಿನ್ನನ್ನು ತಿಳಿಯಬಲ್ಲವರು ಯಾರಿದ್ದಾರೆ? ಆದಕಾರಣ ನಿನ್ನಲ್ಲಿ ನಾನು ಆಶ್ರಯ ಪಡೆಯುವೆನು.

ನೋ ವೇದಸ್ತ್ವಾಮೀಶ ಸಾಕ್ಷಾದ್ಧಿ ವೇದ
ನೋ ವಾ ವಿಷ್ಣುರ್ನೋ ವಿಧಾತಾಖಿಲಸ್ಯ |
ನೋ ಯೋಗಿಂದ್ರಾ ನೇಂದ್ರಮುಖ್ಯಾಶ್ಚ ದೇವಾ 
ಭಕ್ತೋ ವೇದ ತ್ವಾಮತಸ್ತ್ವಾಂ ಪ್ರಪದ್ಯೇ ||೬||

ಭಾವಾರ್ಥ:-ವೇದಗಳು ಸಹಾ ನಿನ್ನನ್ನು ಪ್ರತ್ಯಕ್ಷವಾಗಿ ತಿಳಿಯಲಾರವು.ಬ್ರಹ್ನನಾಗಲೀ,ವಿಷ್ಣುವಾಗಲೀ,ಮಹರ್ಷಿಗಳಾಗಲೀ, ಇಂದ್ರಾದಿ ದೇವರ್ಕಳಾಗಲೀ ನಿನ್ನನ್ನು ತಿಳಿದುಕೊಳ್ಳಲಾರವು. ಆದರೆ ನಿನ್ನ ನೈಜ ಭಕ್ತನು ನಿನ್ನನ್ನು ತಿಳಿಯಬಲ್ಲನು.ಆದಕಾರಣ ನಿನ್ನಲ್ಲಿ ನಾನು ಆಶ್ರಯ ಪಡೆಯುವೆನು.

ನೋ ತೇ ಗೋತ್ರಂ ನಾಪಿ ಜನ್ಮಾಪಿ ನಾಖ್ಯಾ
ನೋ ವಾ ರೂಪಂ ನೈವ ಶೀಲಂ ನ ದೇಶ:  |
ಇತ್ಥಂಭೂತೋsಪೀಶ್ವರಸ್ತ್ವಂ ತ್ರಿಲೋಕ್ಯಾ:
ಸರ್ವಾನ್ಯಾನ್ಪೂರಯೇಸ್ತದ್ಭಜೇ ತ್ವಾಮ್  ||೭||

ಭಾವಾರ್ಥ:-ನಿನಗೆ ಕುಲಜಾತಿಗಳಿಲ್ಲ; ಹುಟ್ಟುಸಾವುಗಳಿಲ್ಲ; ಹೆಸರು ಇಲ್ಲ; ಆಕಾರವಿಲ್ಲ; ಮಾನಾಪಮಾನವಿಲ್ಲ; ನಾಡು ಇಲ್ಲ; ಆದಾಗ್ಯೂ ನೀನು ಮೂರ್ಲೋಕಗಳಿಗೆ ದೊರೆಯು.ಎಲ್ಲರ ಬಯಕೆಗಳನು ಈಡೇರಿಸುವಾತನು ನೀನು.ಆದಕಾರಣ ನಾನು ನಿನ್ನನ್ನು ಸ್ತುತಿಸುವೆನು. 

ತ್ವತ್ತ: ಸರ್ವಂ ತ್ವಂ ಹಿ ಸರ್ವಂ ಸ್ಮರಾರೇ 
ತ್ವಂ ಗೌರೀಶಸ್ತ್ವಂ ಚ ನಗ್ನೋsತಿ ಶಾಂತ: |
ತ್ವಂ ವೈ ವೃದ್ಧಸ್ತ್ವಂ ಯುವಾ ತ್ವಂ ಚ ಬಾಲ-
ಸ್ತತ್ತ್ವಂ ಯತ್ಕಿಂ ನಾಸ್ಯತಸ್ತ್ವಾನ್ನತೋsಸ್ಮಿ  ||೮||

ಭಾವಾರ್ಥ:-ಹೇ!ಮನ್ಮಥವೈರಿಯೇ;ನಿನ್ನಿಂದಲೇ ನೀನು ಹುಟ್ಟು ಪಡೆದೆ. ಸಮಸ್ತವೂ ನೀನೇ ಆಗಿರುವೆ.ನೀನು ಗೌರೀಕಾಂತನು. ಬಿರುದುಗಳಿಲ್ಲದ ದಿಗಂಬರನು.ಅಂತೆಯೇ ಪ್ರಶಾಂತ ಸ್ವರೂಪನು.ನೀನು ವೃದ್ಧನು;ಯುವಕನು;ಬಾಲಕನು.ನಿನ್ನ ಹೊರತಾಗಿ ಪ್ರಪಂಚದಲ್ಲೇನೂ ಇಲ್ಲ.ಆದಕಾರಣನಿನಗೆ ನಾನು ನಮಿಸುವೆನು.
*********************************************************************
 || ಇತಿ ಅಭಿಲಾಷಾಷ್ಟಕಮ್  ||   || ಈ ರೀತಿಯಾಗಿ ಅಭಿಲಾಷಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
                                    -೨೦-
   || ದಾರಿದ್ರ್ಯದು:ಖದಹನಸ್ತೋತ್ರಮ್ ||
  *******************************
ವಿಶ್ವೇಶ್ವರಾಯ ನರಕಾರ್ಣವತಾರಣಾಯ
ಕರ್ಣಾಮೃತಾಯ ಶಶಿಶೇಖರಭೂಷಣಾಯ |
ಕರ್ಪೂರಕುಂದಧವಲಾಯ ಜಟಾಧರಾಯ  
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೧||

ಭಾವಾರ್ಥ:-ಜಗದೀಶ್ವರನೂ, ಪಾಪಸಾಗರದಿಂದ ಪಾರು ಮಾಡುವಾತನೂ, ಕಿವಿಗಳಿಗೆ ಅಮೃತ ರೂಪಿಯೂ, ಚಂದ್ರನನ್ನು ತಲೆಯಲ್ಲಿ ಧರಿಸಿಕೊಂಡು ಬೆಳಗುವಾತನೂ, ಮಲ್ಲಿಗೆ ಹಾಗೂ ಕರ್ಪೂರದಂತೆ ನಿರ್ಮಲವಾಗಿರುವವನೂ, ಜಟಾಧಾರಿಯೂ, ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ಗೌರೀಪ್ರಿಯಾಯ ರಜನೀಶ ಕಲಾಧರಾಯ
ಕಾಲಾಂತಕಾಯ ಭುಜಗಾಧಿಪ ಕಂಕಣಾಯ |
ಗಂಗಾಧರಾಯ ಗಜರಾಜವಿಮರ್ಧನಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೨||

ಭಾವಾರ್ಥ:-ಗೌರೀದೇವಿಯ ಮೆಚ್ಚಿನವನೂ, ಚಂದ್ರನ ಕಲೆಯನ್ನು ಧರಿಸಿರುವಾತನೂ, ಸಂಹಾರಕಾರನೂ, ನಾಗರಾಜನನ್ನು ಬಳೆಯಂತೆ ಧಾರಣೆ ಮಾಡಿಕೊಂಡಾತನೂ, ಗಂಗೆಯನ್ನು ಧರಿಸಿಕೊಂಡಿರುವಾತನೂ, ಗಜರಾಜನ ಸೊಕ್ಕನ್ನು ಮುರಿದಾತನೂ, ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ಭಕ್ತಿಪ್ರಿಯಾಯ ಭವರೋಗ ಭಯಾಪಹಾಯ
ಉಗ್ರಾಯ ದುರ್ಗಭವಸಾಗರತಾರಣಾಯ |
ಜ್ಯೋತಿರ್ಮಯಾಯ ಪುನರುದ್ಭವವಾರಣಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೩||

ಭಾವಾರ್ಥ:-ಭಕ್ತಿಯನ್ನು ಮೆಚ್ಚುವಾತನೂ, ಸಂಸಾರಸಾಗರದ ಭೀತಿಯನ್ನು ನಾಶಮಾಡುವಾತನೂ, ಭಯಂಕರ ರೂಪಿಯೂ, ಕಷ್ಟಸಾಧ್ಯವಾಗಿರುವ ಸಂಸಾರ ಸಾಗರದಿಂದ ರಕ್ಷಿಸುವಾತನೂ, ಜ್ಯೋತಿರ್ಮಯಸ್ವರೂಪನೂ, ಮರುಹುಟ್ಟನ್ನು ಹೋಗಲಾಡಿಸುವವನೂ, ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ಚರ್ಮಾಂಬರಾಯ ಶವಭಸ್ಮ ವಿಲೇಪನಾಯ
ಭಾಲೇಕ್ಷಣಾಯ ಫಣಿಕುಂಡಲಮಂಡಿತಾಯ |
ಮಂಜೀರಪಾದಯುಗಲಾಯ ಜಟಾಧರಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೪||

ಭಾವಾರ್ಥ:-ಚರ್ಮವನ್ನು ವಸನದಂತೆ ಧರಿಸಿದಾತನೂ,ಶವದ ಬೂದಿಯನ್ನು ಮೈಗೆ ಲೇಪಿಸಿಕೊಂಡಿರುವಾತನೂ,ಹಣೆಯಲ್ಲಿ ಕಣ್ಣು ಉಳ್ಳವನೂ,ಕಿವಿಗಳಿಗೆ ನಾಗಕುಂಡಲಗಳನ್ನು ಧರಿಸಿ ಶೋಭಿಸುವಾತನೂ, ಚರಣದ್ವಯಗಳಲ್ಲಿ ಗೆಜ್ಜೆಗಳನ್ನು ಹೊಂದಿರುವಾತನೂ, ಜಟಾಧಾರಿಯೂ ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ಪಂಚಾನನಾಯ ಫಣಿರಾಜ ವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡನಾಯ |
ಆನಂದ ಭೂಮಿವರದಾಯ ತಮೋಹರಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೫||

ಭಾವಾರ್ಥ:-ಐಮೊಗದವನಾಗಿ,ನಾಗರಾಜವಿಭೂಷಿತನೂ,ಬಂಗಾರಮಯವಾಗಿರುವ ಉತ್ತರೀಯವನ್ನು ಧರಿಸಿಕೊಂಡಿರುವಾತನೂ, ಮೂರುಲೋಕಗಳಲ್ಲಿಯೂ ಪ್ರಕಾಶಿಸುವಾತನೂ, ಆನಂದಕ್ಕೆ ಆಶ್ರಯದಾತನೂ, ವರದಾಯಕನೂ, ಅಜ್ಞಾನವೆಂಬ ಅಂಧಕಾರವನ್ನು ನಾಶಗೊಳಿಸುವಾತನೂ, ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ಭಾನುಪ್ರಿಯಾಯ ದುರಿತಾರ್ಣವತಾರಣಾಯ
ಕಾಲಾಂತಕಾಯ ಕಮಲಾಸನಪೂಜಿತಾಯ |
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೬||

ಭಾವಾರ್ಥ:-ಸೂರ್ಯನಿಗೆ ಬೇಕಾದವನೂ, ಅನೀತಿಸಾಗರವನ್ನು ದಾಟಿಸುವಾತನೂ, ಲಯಕಾರಕನೂ, ಬ್ರಹ್ಮನಿಗೆ ಆರಾಧ್ಯನೂ, ಮುಕ್ಕಣ್ಣನೂ, ಸುಲಕ್ಷಣಯುತನೂ, ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ರಾಮಪ್ರಿಯಾಯ ರಘುನಾಥವರಪ್ರದಾಯ 
ನಾಗಪ್ರಿಯಾಯ ನಗರಾಜನಿಕೇತನಾಯ |
ಪುಣ್ಯಾಯ ಪುಣ್ಯಚರಿತಾಯ ಸುರಾರ್ಚಿತಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೭||

ಭಾವಾರ್ಥ:-ರಾಮನಿಗೆ ಬೇಕಾದವನೂ, ರಾಮನಿಗೆ ಅನುಗ್ರಹಿಸಿದಾತನೂ, ನಾಗನನ್ನು ಮೆಚ್ಚಿದಾತನೂ, ನಾಗರಾಜನಿಗೆ ಆಶ್ರಯವನ್ನಿತ್ತವನೂ, ಪುಣ್ಯ ರೂಪಿಯೂ, ಪಾವನ ಚರಿತನೂ, ದೇವಾನುದೇವರ್ಕಳಿಂದ ಆರಾಧಿಸಲ್ಪಡುವಾತನೂ ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು. 

ಮುಕ್ತೀಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ |
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೮||

ಭಾವಾರ್ಥ:-ಮುಕ್ತಿಗೆ ಪ್ರಭು ಸ್ವರೂಪನೂ, ಇಷ್ಟಾರ್ಥ ಫಲದಾಯಕನೂ, ಗಣಗಳಿಗೆ ಅಧೀಶ್ವರನೂ,ಸಂಗೀತ ಪ್ರಿಯನೂ, ವೃಷಭವಾಹನನೂ,ಗಜ ಚರ್ಮಾಂಬರಧಾರಿಯೂ, ಪರಮೇಶ್ವರನೂ ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು. 

ಗೌರೀವಿಲಾಸಭುವನಾಯ ಮಹೋದಯಾಯ
ಪಂಚಾನನಾಯ ಶರಣಾಗತ ರಕ್ಷಕಾಯ |
ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ 
ದಾರಿದ್ರ್ಯದು:ಖದಹನಾಯ ನಮ:ಶಿವಾಯ ||೯||

ಭಾವಾರ್ಥ:-ಗೌರೀದೇವಿಗೆ ಆನಂದಸ್ವರೂಪಿಯೂ, ಮುಕ್ತಿ ಪ್ರದಾಯಕನೂ, ಪಂಚಮುಖಿಯೂ, ಶರಣಾಗತ ಪರಿಪಾಲಕನೂ, ಪ್ರಳಯಾಂತಕನೂ, ಸಮಸ್ತ ಬ್ರಹ್ಮಾಂಡಕ್ಕೆ ಪ್ರಭುವೂ, ಬಡತನದ ಬೇಗುದಿಯನ್ನು ಸುಡುವಾತನೂ ಆಗಿರುವ ಶಿವನಿಗೆ ನನ್ನ ನಮನಗಳು.

ವಸಿಷ್ಟೇನ ಕೃತಂ ಸ್ತೋತ್ರಂ ಸರ್ವರೋಗ ನಿವಾರಣಂ |
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿವರ್ಧನಂ |
ತ್ರಿಸಂಧ್ಯಂ ಯ: ಪಠೇನ್ನಿತ್ಯಂ ಸಹಿಸ್ವರ್ಗಮವಾಪ್ನುಯಾತ್ ||೧೦||

ಭಾವಾರ್ಥ:-ವಸಿಷ್ಟ ಮಹರ್ಷಿಗಳಿಂದ ರಚಿಸಲ್ಪಟ್ಟ ಈ ಸ್ತೋತ್ರವು ಸಮಸ್ತರೋಗಗಳನ್ನು ನಿವಾರಿಸುವುದಲ್ಲದೆ ಶೀಘ್ರವಾಗಿ ಸರ್ವ ಸಂಪದವನ್ನು ನೀಡುವುದು.ಮತ್ತು ಮಕ್ಕಳು,ಮೊಮ್ಮಕ್ಕಳಾದಿ ಸಂತತಿಯು ವರ್ಧಿಸುವುದು.ಈ ತೋತ್ರವನ್ನು ದಿನನಿತ್ಯವೂ ಮೂರು ಸಂಧ್ಯಾ ಸಮಯಗಳಲ್ಲಿ ಓದುವವನು ಸ್ವರ್ಗವಾಸವನ್ನು ಪಡೆಯುವನು.
*********************************************************************
    || ಇತಿ ದಾರಿದ್ರ್ಯದು:ಖದಹನ ಸ್ತೋತ್ರಮ್ ||
  ||  ಈ ರೀತಿಯಾಗಿ ದಾರಿದ್ರ್ಯದು:ಖದಹನ ಸ್ತೋತ್ರಗಳ ಭಾವಾರ್ಥವಾಗಿದೆ  ||
*********************************************************************
                             -೨೧-
   || ಅಸಿತಕೃತ ಶಿವಸ್ತೋತ್ರಮ್ ||
  **************************
ಜಗದ್ಗುರೋ ನಮಸ್ತುಭ್ಯಂ ಶಿವಾಯ ಶಿವದಾಯಚ |
ಯೋಗೀಂದ್ರಾಣಾಂ ಚ ಯೋಗೀಂದ್ರ ಗುರೂಣಾಂ ಗುರವೇ ನಮ: ||೧||

ಭಾವಾರ್ಥ:-ಬ್ರಹ್ಮಾಂಡಕ್ಕೆ ಗುರುವಾಗಿರುವಾತನೇ ನಿನಗೆ ನನ್ನ ನಮನಗಳು. ನೀನು ಮಂಗಲಕರನು. ಅಂತೆಯೇ ಮಂಗಲವನ್ನು ದಯಪಾಲಿಸುವಾತನು. ನೀನು ಯೋಗೀಂದ್ರರಲ್ಲಿ ಯೋಗೀಂದ್ರನು. ಗುರುಗಳಿಗೆ ಗುರುವು. ನಿನಗಿದೋ ನನ್ನ ನಮನಗಳು.

ಮೃತ್ಯೋರ್ಮೃತ್ಯು ಸ್ವರೂಪೇಣ ಮೃತ್ಯುಸಂಸಾರಖಂಡನ |
ಮೃತ್ಯೋರೀಶ ಮೃತ್ಯುಬೀಜ ಮೃತ್ಯುಂಜಯ ನಮೋಸ್ತುತೇ ||೨||

ಭಾವಾರ್ಥ:-ನೀನು ಮೃತ್ಯುವಿಗೆ ಮೃತ್ಯುಸ್ವರೂಪನಾಗಿ ಜನನಮರಣಾದಿ ಸ್ವರೂಪದ ಸಂಸಾರವನ್ನು ಮುರಿಯುವವನು. ಹೇ!ಮೃತ್ಯುವಿನ ಅಧೀಶ್ವರನೇ, ಮೃತ್ಯುವಿಗೆ ಬೀಜ ಸ್ವರೂಪನೇ, ಮೃತ್ಯುಂಜಯನೇ; ನಿನಗಿದೋ ನನ್ನ ನಮನಗಳು.

ಕಾಲರೂಪಂ ಕಲಯತಾಂ ಕಾಲಕಾಲೇಶ ಕಾರಣ |
ಕಾಲಾದತೀತ ಕಾಲಸ್ಥ ಕಾಲಕಾಲ ನಮೋಸ್ತುತೇ ||೩||

ಭಾವಾರ್ಥ:-ನೀನು ಅಂತ್ಯವನ್ನು ಲೆಕ್ಕಿಸುವವರ ಗುರಿಗೆ ಸಂಭವರೂಪನಾದ ಯಮರೂಪೀ ಪರಮೇಶ್ವರನು.ನೀನು ಮೃತ್ಯುವಿಗೆ ಮೃತ್ಯು ಸ್ವರೂಪನು.ನೀನು ಒಡೆಯನು. ಹಾಗೂ ಸಕಲಕ್ಕೂ ನಿಮಿತ್ತನು. ನೀನು ಯಮನಿಗೆ ಯಮಸ್ವರೂಪಿಯು. ಹೇ! ಮೃತ್ಯುವಿನ ಮೃತ್ಯುವೇ; ನಿನಗಿದೋ ನನ್ನ ನಮನಗಳು.

ಗುಣಾತೀತ ಗುಣಾಧಾರ ಗುಣಬೀಜ ಗುಣಾತ್ಮಕ: |
ಗುಣೀಶ ಗುಣಿನಾಂ ಬೀಜ ಗುಣಿನಾಂ ಗುರವೇ ನಮ: ||೪||

ಭಾವಾರ್ಥ:-ಹೇ! ಗುಣಗಳಿಗೆ ಮೀರಿದವನೇ, ಗುಣಗಳಿಗೆ ಆಶ್ರಯನಾಗಿರುವವನೇ, ಗುಣಗಳಿಗೆ ಕಾರಣನಾದವನೇ,  ಗುಣಸ್ವಭಾವನೇ, ಗುಣಾಧೀಶನೇ ಮತ್ತು ಗುಣವುಳ್ಳವುಗಳಿಗೆ ಆದಿ ನಿಮಿತ್ತನಾದವನೇ, ನೀನು ಸಮಸ್ತ ಗುಣವಂತರಿಗೆ ಗುರುವಾದವನು.ನಿನಗಿದೋ ನನ್ನ ನಮನಗಳು.

ಬ್ರಹ್ಮಸ್ವರೂಪ ಬ್ರಹ್ಮಜ್ಞ ಬ್ರಹ್ಮಭಾವೇಚ ತತ್ಪರ: |
ಬ್ರಹ್ಮ ಬೀಜಸ್ವರೂಪೇಣ ಬ್ರಹ್ಮ ಬೀಜ ನಮೋಸ್ತುತೇ ||೫||

ಭಾವಾರ್ಥ:-ಹೇ! ಬ್ರಹ್ಮಸ್ವರೂಪಿಯೇ, ತತ್ವಜ್ಞಾನಿಯೇ, ವೇದಾದಿಗಳ ತರ್ಕದಲ್ಲಿ ನಿರತನಾದವನೇ,ನೀನು ವೇದಗಳಿಗೆ ಮೂಲಕಾರಣನಿರುವೆ.ಆದಕಾರಣ ನೀನು ತತ್ವಗಳ ಉಗಮವೆನಿಸಿರುವೆ.ನಿನಗಿದೋ ನನ್ನ ನಮನಗಳು.

ಇತಿ ಸ್ತುತ್ವಾ ಶಿವಂ ನತ್ವಾ ಪುರಸ್ತಸ್ಥೌ ಮುನೀಶ್ವರ: |
ದೀನವತ್ಸಾಶ್ರುನೇತ್ರಶ್ಚ ಪುಲಕಾಂಚಿತ ವಿಗ್ರಹ:  ||೬||

ಭಾವಾರ್ಥ:-ಈ ರೀತಿಯಾಗಿ ಸ್ತೋತ್ರಮಾಡಿ ಶಿವನಿಗೆ ನಮಿಸಿದ ಬಳಿಕ ಮುನೀಶ್ವರನಾದ ಅಸಿತನು ಆತನ ಸಮ್ಮುಖಕ್ಕೆ ಬಂದು ನಿಂದನು.ದು:ಖಿತನಾದ ಅವನ ಕಣ್ಣುಗಳಿಂದ ಜಲಧಾರೆಯು ಸುರಿಯತೊಡಗಿತು.ದೇಹವಿಡೀ ರೋಮಾಂಚನಗೊಂಡವು.

ಅಸಿತೇನ ಕೃತಂ ಸ್ತೋತ್ರಂ ಭಕ್ತಿಯುಕ್ತಶ್ಚ ಯ: ಪಠೇತ್ |
ವರ್ಷಮೇಕಂ ಹವಿಷ್ಯಾನ್ನ ಶ್ರೀಶಂಕರಸ್ಯ ಮಹಾತ್ಮನ:  ||೭||

ಭಾವಾರ್ಥ:-ಅಸಿತ ಮುನಿಯಿಂದ ಮಾಡಲ್ಪಟ್ಟ ಭಗವಾನ್ ಶಂಕರನ ಈ ಸ್ತುತಿಯನ್ನು ಭಕ್ತಿಯಿಂದ ಯಾವಾತನು ಅನುದಿನವೂ ಓದುವನೋ ಮತ್ತು ಒಂದು ವರ್ಷದ ತನಕ ನಿತ್ಯವೂ ಹವಿಷ್ಯಾನ್ನವನ್ನು ಉಂಡು ಇರುವನೋ-

ಸ ಲಭೇದ್ವೈಷ್ಣವಂ ಪುತ್ರಂ ಜ್ಞಾನಿನಂ ಚಿರಜೀವಿನಮ್ |
ಭವೇದ್ಧನಾಡ್ಯೋ ದು:ಖೀ ಚ ಮೂಕೋ ಭವತಿ ಪಂಡಿತ:  ||೮||

ಭಾವಾರ್ಥ:-ಅಂತಹವನುವಿದ್ವಾಂಸನಾಗಿಯೂ,ಮೃತ್ಯು ರಹಿತನಾಗಿಯೂ,ವಿಷ್ಣು ಭಕ್ತನಾಗಿಯೂ ಇರುವ ಪುತ್ರನನ್ನು ಪಡೆಯುವನು.ಸಂಪತ್ತಿನ ಕೊರತೆಯಿಂದ ದು:ಖಿತನಾದವನು ಧನಾಢ್ಯನಾಗುವನು.ಮೂಕನು ವಿದ್ವಾಂಸನಾಗುವನು.

ಅಭಾರ್ಯೋ ಲಭತೇ ಭಾರ್ಯಾಂ ಸುಶೀಲಾಂ ಚ ಪತಿವ್ರತಾಂ |
ಇಹಲೋಕೇ ಸುಖಂ ಭುಕ್ತ್ವಾ ಯಾತ್ಯಂತೇ ಶಿವ ಸನ್ನಿಧಿಮ್  ||೯||

ಭಾವಾರ್ಥ:-ಸತಿ ವಿಹೀನನು ಸದ್ಗುಣ ಸಂಪನ್ನಳಾಗಿ ಪತಿವ್ರತೆಯಾಗಿರುವ ಸತಿಯನ್ನು ಹೊಂದುವನು.ಅಲ್ಲದೆ ಅವನು ಇಹಲೋಕದಲ್ಲಿ ಸುಖವನ್ನು ಅನುಭವಿಸಿ ಅಂತ್ಯದಲ್ಲಿ ಶಿವನ ಸನ್ನಿಧಾನವನ್ನು ಸೇರುವನು.

ಇದಂ ಸ್ತೋತ್ರಂ ಪುರಾದತ್ತಂ ಬ್ರಹ್ಮಣಾ ಚ ಪ್ರಚೇತಸೇ |
ಪ್ರಚೇತಸಾ ಸ್ವಪುತ್ರಾಯಾಸಿತಾಯ ದತ್ತಮುತ್ತಮಮ್  ||೧೦||

ಭಾವಾರ್ಥ:-ಪೂರ್ವಕಾಲದಲ್ಲಿ ಬ್ರಹ್ಮನು ಉತ್ತಮವಾಗಿರುವ ಈ ಸ್ತುತಿಯನ್ನು ಪ್ರಚೇತಸನಿಗೆ ಉಪದೇಶಿಸಿದನು.ನಂತರ ಪ್ರಚೇತಸನು ತನ್ನ ಮಗನಾದ ಅಸಿತನಿಗೆ ಉಪದೇಶಿಸಿದನು.
*********************************************************************
                || ಇತಿ ಅಸಿತಕೃತ ಶಿವ ಸ್ತೋತ್ರಮ್  ||   
 || ಈ ರೀತಿಯಾಗಿ ಅಸಿತನಿಂದ ಮಾಡಲ್ಪಟ್ಟ ಶಿವ ಸ್ತೋತ್ರಗಳ ಭಾವಾರ್ಥವಾಗಿದೆ  ||
*********************************************************************
                       -೨೨-
       ||  ಶಿವರಕ್ಷಾ ಸ್ತೋತ್ರಮ್  ||
     *************************
ಅಸ್ಯ ಶ್ರೀ ಶಿವರಕ್ಷಾ ಸ್ತೋತ್ರ ಮಂತ್ರಸ್ಯ ಯಾಜ್ಞವಲ್ಕ್ಯ ಋಷಿ: |
ಶ್ರೀ ಸದಾಶಿವೋ ದೇವತಾ | ಅನುಷ್ಟುಪ್ ಛಂದ: |
ಶ್ರೀ ಸದಾಶಿವ ಪ್ರೀತ್ಯರ್ಥಂ ಶಿವರಕ್ಷಾ ಸ್ತೋತ್ರ ಜಪೇ ವಿನಿಯೋಗ: ||

ಬಾವಾರ್ಥ:-ಈ ಶಿವರಕ್ಷಾ ಸ್ತೋತ್ರವೆನ್ನುವ ಮಂತ್ರಕ್ಕೆ ಯಾಜ್ಞವಲ್ಕ್ಯ ಮಹರ್ಷಿಯು ಋಷಿಯಾಗಿದ್ದು ಶ್ರೀ ಸದಾಶಿವನು ದೇವತೆಯಾಗಿದ್ದು ಇದು ಅನುಷ್ಟುಪ್ ಛಂದಸ್ಸಿನಲ್ಲಿದೆ. ಶ್ರೀ ಸದಾಶಿವನ ಒಲುಮೆಗಾಗಿ ಶಿವರಕ್ಷಾ ಸ್ತೋತ್ರವನ್ನು ಜಪದಲ್ಲಿ ತೊಡಗಿಸಿಕೊಳ್ಳುವುದಾಗಿದೆ.

ಚರಿತಂ ದೇವದೇವಸ್ಯ ಮಹಾದೇವಸ್ಯ ಪಾವನಂ |
ಅಪಾರ ಪರಮೋದಾರಂ ಚತುರ್ವರ್ಗಸ್ಯ ಸಾಧನಂ ||೧||

ಭಾವಾರ್ಥ:-ದೇವಾಧಿದೇವನಾಗಿರುವ ಮಹಾದೇವನ ಪಾವನಮಯವಾಗಿರುವ ಈ ಚರಿತ್ರೆಯು ವಿಶಾಲವೂ, ಉತ್ತಮವೂ ಆಗಿದ್ದು ಧರ್ಮಾರ್ಥ, ಕಾಮ, ಮೋಕ್ಷಗಳೆನ್ನುವ ಚತುರ್ವರ್ಗಗಳಿಗೂ ಅನುಸರಿಸಲು ಯೋಗ್ಯ ಸಲಕರಣೆಯಾಗಿದೆ.

ಗೌರೀವಿನಾಯಕೋಪೇತಂ ಪಂಚವಕ್ತ್ರಂ ತ್ರಿನೇತ್ರಕಂ |
ಶಿವಂ ಧ್ಯಾತ್ವಾ ದಶಭುಜಂ ಶಿವರಕ್ಷಾಂ ಪಠೇನ್ನರ: ||೧||

ಭಾವಾರ್ಥ:-ಗೌರೀಗಣಪತಿಯರೊಡಗೂಡಿರುವವನೂ,ಐಮೊಗವುಳ್ಳವನೂ, ಮುಕ್ಕಣ್ಣನೂ,ಹತ್ತು ತೋಳುಗಳನ್ನು ಹೊಂದಿರುವಾತನೂ,ಆದ ಶಿವನನ್ನು ಸ್ತುತಿಸಿ ಮನುಜನು ಶಿವರಕ್ಷಾ ಮಂತ್ರವನ್ನು ಪಠಿಸಬೇಕು.

ಗಂಗಾಧರ: ಶಿರ: ಪಾತು ಭಾಲಮರ್ಧೇಂದು ಶೇಖರ: |
ನಯನೇ ಮದನ ಧ್ವಂಸೀಕರ್ಣೌ ಸರ್ಪ ವಿಭೂಷಣ: ||೨||

ಭಾವಾರ್ಥ:-ಗಂಗೆಯನ್ನು ಧರಿಸಿದಾತನು ನನ್ನ ತಲೆಯನ್ನೂ, ತಲೆಯಲ್ಲಿ ಅರ್ಧಚಂದ್ರನನ್ನು ಧರಿಸಿದಾತನು ನನ್ನ ಹಣೆಯನ್ನೂ, ಮನ್ಮಥನನ್ನು ಸಂಹರಿಸಿದಾತ ನನ್ನ ಕಣ್ಣುಗಳನ್ನೂ, ಸರ್ಪವನ್ನು ಆಭರಣವಾಗಿ ಧರಿಸಿಕೊಂಡಾತನು ನನ್ನ ಕಿವಿಗಳನ್ನೂ ರಕ್ಷಿಸಲಿ.

ಘ್ರಾಣಂ ಪಾತು ಪುರಾರಾತಿರ್ಮುಖಂ ಪಾತು ಜಗತ್ಪತಿ: |
ಜಿಹ್ವಾಂ ವಾಗೀಶ್ವರ: ಪಾತು ಕಂಧರಾಂ ಶಿತಿಕಂಧರ: ||೪||

ಭಾವಾರ್ಥ:-ತ್ರಿಪುರಾಸುರ ಸಂಹಾರಿಯು ನನ್ನ ಮೂಗನ್ನೂ, ಜಗದಧೀಶನು ನನ್ನ ಮುಖವನ್ನೂ, ವಾಕ್ಕಿಗೆ ಅಧಿಪತಿಯಾಗಿರುವಾತನು ನನ್ನ ನಾಲಿಗೆಯನ್ನೂ, ಕರಿದಾದ ಕೊರಳುಳ್ಳಾತ ನನ್ನ ಕೊರಳನ್ನು ರಕ್ಷಿಸಲಿ.

ಶ್ರೀಕಂಠ: ಪಾತು ಮೇ ಕಂಠಂ ಸ್ಕಂಧೌ ವಿಶ್ವ ಧುರಂಧರ: |
ಭುಜೌ ಭೂಭಾರ ಸಂಹರ್ತಾ ಕರೌ ಪಾತು ಪಿನಾಕಧೃಕ್ ||೫||

ಭಾವಾರ್ಥ:-ಶ್ರೀಕಂಠನು ನನ್ನ ಕುತ್ತಿಗೆಯನ್ನೂ, ಜಗದಾಧಾರನು ನನ್ನ ಹೆಗಲುಗಳನ್ನೂ, ಭೂಭಾರವನ್ನು ಅಪಹರಿಸಿದಾತನು ನನ್ನ ತೋಳುಗಳನ್ನೂ, ಪಿನಾಕವೆಂಬ ಧನುರ್ಧರನು ನನ್ನ ಹಸ್ತಗಳನ್ನೂ ರಕ್ಷಿಸಲಿ.

ಹೃದಯಂ ಶಂಕರ: ಪಾತು ಜಠರಂ ಗಿರಿಜಾಪತಿ: |
ನಾಭಿಂ ಮೃತ್ಯುಂಜಯ: ಪಾತು ಕಟೀ ವ್ಯಾಘ್ರಾಜಿನಾಂಬರ:  ||೬||

ಭಾವಾರ್ಥ:-ಶಂಕರನು ನನ್ನ ಹೃದಯವನ್ನೂ, ಗಿರಿಜಾಕಾಂತನು ನನ್ನ ಉದರವನ್ನೂ, ಮೃತ್ಯುವನ್ನು ಜಯಿಸಿದಾತನು ನನ್ನ ಹೊಕ್ಕಳವನ್ನೂ, ಹುಲಿಯ ಚರ್ಮವನ್ನು ಹೊದ್ದಾತನು ನನ್ನ ಸೊಂಟವನ್ನೂ ರಕ್ಷಿಸಲಿ.

ಸಕ್ಥಿನೀ ಪಾತು ದೀನಾರ್ತ ಶರಣಾಗತ ವತ್ಸಲ |
ಊರೂ ಮಹೇಶ್ವರ: ಪಾತು ಜಾನುನೀ ಜಗದೀಶ್ವರ:  ||೭||

ಭಾವಾರ್ಥ:-ದರಿದ್ರರೂ, ದು:ಖಿತರೂ ಆಶ್ರಯವನ್ನು ಹೊಂದ ಬಯಸುವವರೂ ಆದವರಲ್ಲಿ ಕರುಣೆಯುಳ್ಳಾತನು ನನ್ನ ತೊಡೆಯ ಮೇಲ್ಭಾಗವನ್ನೂ, ಮಹೇಶ್ವರನು ನನ್ನ ತೊಡೆಗಳನ್ನೂ, ವಿಶ್ವೇಶ್ವರನು ನನ್ನ ಮೊಣಕಾಲುಗಳನ್ನೂ ರಕ್ಷಿಸಲಿ.

ಜಂಘೇಪಾತು ಜಗತ್ಕರ್ತಾ ಗುಲ್ಫೌಪಾತು ಗಣಾಧಿಪ: |
ಚರಣೌ ಕರುಣಾಸಿಂಧು: ಸರ್ವಾಂಗಾನಿ ಸದಾಶಿವ:  ||೮||

ಭಾವಾರ್ಥ:-ಜಗತ್ಕರ್ತನು ನನ್ನ ಮೀನಗಂಡಗಳನ್ನೂ,ಗಣಗಳ ಅಧಿನಾಯಕನು ನನ್ನ ಪಾದಗಳ ಗಂಟುಗಳನ್ನೂ, ಕರುಣಾಸಾಗರನು ನನ್ನ ಪಾದಗಳನ್ನೂ, ಸದಾಶಿವನು ನನ್ನ ದೇಹದ ಎಲ್ಲಾ ಭಾಗಗಳನ್ನೂ ರಕ್ಷಿಸಲಿ.

ಏತಾಂ ಶಿವಬಲೋ ಪೇತಾಂ ರಕ್ಷಾಂ ಯ: ಸುಕೃತೀಪಠೇತ್ |
ಸಭುಕ್ತ್ವಾ ಸಕಲಾನ್ಕಾಮಾನ್ ಶಿವಸಾಯುಜ್ಯ ಮಾಪ್ನುಯಾತ್ ||೯||

ಭಾವಾರ್ಥ:-ಈ ತೆರನಾದ ಶಿವಬಲವನ್ನು ಹೊಂದಿರುವ ರಕ್ಷಾಸ್ತೋತ್ರವನ್ನು ಭಾಗ್ಯವಂತನಾಗಿರುವ ಯಾವಾತನು ಓದುವನೋ ಅವನು ಸಮಸ್ತ ಇಚ್ಛೆಗಳನ್ನು ಭೋಗಿಸಿ ಶಿವ ಸನ್ನಿಧಿಯಾಗಿರುವ ಮೋಕ್ಷವನ್ನು ಹೊಂದುವನು.

ಗ್ರಹಭೂತ ಪಿಶಾಚಾದ್ಯಾಸ್ತ್ರೈಲೋಕ್ಯೇ ವಿಚರಂತಿ ಯೇ |
ದೂರಾದಾಶು ಫಲಾಯಂತೇ ಶಿವನಾಮಾಭಿರಕ್ಷಣಾತ್ ||೧೦||

ಭಾವಾರ್ಥ:-ಶಿವನಾಮದ ಶಕ್ತಿಯಿಂದ ಸುತ್ತುಮುತ್ತಲೂ ಸರ್ವ ದಿಕ್ಕುಗಳಲ್ಲಿಯೂ ರಕ್ಷಣೆದೊರಕಿ ಮೂರು ಲೋಕಗಳಲ್ಲಿ ತಿರುಗಾಡುವ ಯಾ ಸಂಚರಿಸುವ ದುಷ್ಟಗ್ರಹಗಳು, ಭೂತಪಿಶಾಚಾದಿಗಳು ಶೀಘ್ರವಾಗಿ ದೂರದಿಂದಲೇ ಪಲಾಯನಗೈಯುವವು.

ಅಭಯಂಕರ ನಾಮೇದಂ ಕವಚಂ ಪಾರ್ವತೀ ಪತೇ: |
ಭಕ್ತ್ಯಾಬಿಭರ್ತಿ ಯ: ಕಂಠೇ ತಸ್ಯ ವಶ್ಯಂ ಜಗತ್ರಯಮ್ ||೧೧||

ಭಾವಾರ್ಥ:-ಪಾರ್ವತೀದೇವಿಯ ಕಾಂತನಾಗಿರುವ ಶಂಕರನ ಈ ಕವಚವು ಹೆದರಿಕೆಯನ್ನು ನಾಶಗೊಳಿಸುವ ಹೆಸರುಳ್ಳದ್ದಾಗಿದೆ.ಈ ಕವಚವನ್ನು ಭಕ್ತಿಶ್ರದ್ಧಾಯುಕ್ತನಾಗಿ ಕುತ್ತಿಗೆಯಲ್ಲಿ ಧರಿಸುವಾತನಿಗೆ ಮೂರುಲೋಕಂಗಳೂ ವಶವಾಗುವವು.

ಇಮಾಂ ನಾರಾಯಣ: ಸ್ವಪ್ನೇ ಶಿವರಕ್ಷಾಂ ಯಥಾದಿಶತ್ |
ಪ್ರಾತರುತ್ಥಾಯ ಯೋಗೀಂದ್ರೋ ಯಾಜ್ಞವಲ್ಕ್ಯಸ್ತಥಾsಲಿಖಿತ್ ||೧೨||

ಈ ಶಿವರಕ್ಷಾಸ್ತೋತ್ರವನ್ನು ನಾರಾಯಣನು ಯಾಜ್ಞವಲ್ಕ್ಯ ಮುನಿಗೆ ಯಾವ ರೀತಿಯಲ್ಲಿ ಹೇಳ್ದನೋ ಹಾಗೆಯೇ ಮಹಾತ್ಮನಾದ ಯಾಜ್ಞವಲ್ಕ್ಯ ಮುನಿಯು ಉಷ:ಕಾಲದಲೆದ್ದು ಅಕ್ಷರಶ: ಬರೆದನು.
*********************************************************************
   || ಇತಿ ಶಿವರಕ್ಷಾ ಸ್ತೋತ್ರಮ್  ||
 || ಈ ರೀತಿಯಾಗಿ ಶಿವರಕ್ಷಾ ಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************
                                 -೨೩-
  || ಹಿಮಾಲಯ ಕೃತ ಶಿವಸ್ತೋತ್ರಮ್ ||
 ********************************
ಹಿಮಾಲಯ ಉವಾಚ:-

ಹಿಮಾಲಯನು ಹೇಳಿದನು:-

ತ್ವಂ ಬ್ರಹ್ಮಾ ಸೃಷ್ಟಿಕರ್ತಾ ಚ ತ್ವಂ ವಿಷ್ಣು: ಪರಿಪಾಲಕ: |
ತ್ವಂ ಶಿವ: ಶಿವದೋsನಂತ: ಸರ್ವಸಂಹಾರಕಾರಕ: ||೧||

ಭಾವಾರ್ಥ:-ಸ್ವಾಮೀ;ಭಗವಂತನೇ;ನೀನು ಸೃಷ್ಟಿಕರ್ತ ಬ್ರಹ್ಮನೇ ಆಗಿರುವೆ. ಅಂತೆಯೇ ಜಗತ್ತಿನ ಪರಿಪಾಲಕನಾಗಿರುವ ವಿಷ್ಣುವೂ ಆಗಿರುವೆ. ಹಾಗೆಯೇ ಸಮಸ್ತವನ್ನೂ ಸಂಹರಿಸುವ ಅಂತ್ಯರಹಿತನೂ ಶುಭದಾಯಕನೂ ಆಗಿರುವ ಮಹಾದೇವ ಶಿವನೂ ಆಗಿರುವೆ.

ತ್ವಮೀಶ್ವರೋ ಗುಣಾತೀತೋ ಜ್ಯೋತಿರೂಪ:ಸನಾತನ: |
ಪ್ರಕೃತ: ಪ್ರಕೃತೀಶಶ್ಚ: ಪ್ರಾಕೃತ: ಪ್ರಕೃತೇ ಪರ: ||೨||

ಭಾವಾರ್ಥ:-ನೀನು ಆಳುವಾತನೂ, ತತ್ವ-ರಜ-ತಮೋ ಗುಣಗಳಿಗೆ ನಿಲುಕದವನೂ, ದೀಪ್ತಿರೂಪಿಯೂ ಆಗರುವೆ. ನೀನು ನಿಸರ್ಗವೂ ನಿಸರ್ಗದ ದೊರೆಯೂ ಆಗಿರುವೆ. ನೀನು ಮೂಲ ದ್ರವ್ಯ ಸ್ವರೂಪನಾದಾಗ್ಯೂ ಸ್ವಭಾವಧರ್ಮದಿಂದ ಹೊರತಾಗಿರುವೆ.

ನಾನಾರೂಪವಿಧಾತಾ ತ್ವಂ ಭಕ್ತಾನಾಂ ಧ್ಯಾನ ಹೇತವೇ |
ಯೇಷು ರೂಪೇಷು ಯತ್ಪ್ರೀತಿಸ್ತತ್ತದ್ರೂಪಂ ಬಿಭರ್ಷಿ ಚ  ||೩||

ಭಾವಾರ್ಥ:-ಭಕ್ತರು ಸ್ತುತಿಸಲೋಸುಗ ನೀನು ವಿವಿಧ ಅವತಾರಗಳನ್ನು ಧರಿಸಿರುವೆ. ಯಾವ್ಯಾವ ಅವತಾರಗಳಲ್ಲಿ ಯಾರ ಕುರಿತು ಮೆಚ್ಚುಗೆಯುಂಟಾಯಿತೋ ಅವರುಗಳಿಗಾಗಿ ಆಯಾ ಅವತಾರಗಳನ್ನು ತಾಳಿರುವೆ.

ಸೂರ್ಯಸ್ತ್ವಂ ಸೃಷ್ಟಿ ಜನಕ ಆಧಾರ: ಸರ್ವ ತೇಜಸಾಮ್ |
ಸೋಮಸ್ತ್ವಂ ಸಸ್ಯಪಾತಂ ಚ ಸತತಂ ಶೀತ ರಶ್ಮಿನಾ ||೪||

ಭಾವಾರ್ಥ:-ನೀನು ಬ್ರಹ್ಮಾಂಡದ ಉಗಮವಾದ ಸೂರ್ಯ ಸ್ವರೂಪನು.ಸಮಸ್ತ ಪೌರುಷಗಳಿಗೆ ಆಧಾರನಾಗಿರುವೆ.ನೀನು ಶೀತಲಕಿರಣಗಳಿಂದ ನಿರಂತರ ಸಸ್ಯ ಸಂಪತ್ತನ್ನು ಸಂರಕ್ಷಿಸುವ ಚಂದ್ರನೂ ಆಗಿರುವೆ.

ವಾಯುಸ್ತ್ವಂ ವರುಣಸ್ತ್ವಂ ಚ ವಿದ್ವಾಂಶ್ಚ ವಿದುಷಾಂ ಗುರು: |
ಮೃತ್ಯುಂಜಯೋ ಮೃತ್ಯುಮೃತ್ಯು: ಕಾಲಕಾಲೋ ಯಮಾಂತಕ:  ||೫||

ಭಾವಾರ್ಥ:-ವಾಯುವೇ ನೀನು.ನೀನೇ ವರುಣನು.ವಿದ್ವಾಂಸನೂ ವಿದ್ವಾಂಸರಿಗೆ ಗುರುವೂ ನೀನೇ ಆಗಿರುವೆ. ನೀನು ಕಾಲನನ್ನು ಗೆದ್ದವನು. ಕಾಲನಿಗೆ ಮಹಾಕಾಲನು. ಮೃತ್ಯುವಿಗೆ ನೀನು ಮೃತ್ಯು ಸ್ವರೂಪನು. ಯಮನಿಗೆ ನೀನು ಯಮನೂ ಆದವನು.

ವೇದಸ್ತ್ವಂ ವೇದಕರ್ತಾ ಚ ವೇದವೇದಾಂಗ ಪಾರಗ: |
ವಿದುಷಾಂ ಜನಕಸ್ತ್ವಂ ಚ ವಿದ್ವಾಂಶ್ಚ ವಿದುಷಾಂ ಗುರು:  ||೬||  

ಭಾವಾರ್ಥ:-ವೇದಗಳು ನೀನು. ವೇದಕರ್ತಾರನೂ, ವೇದವೇದಾಂಗಾದಿಗಳ ಪಾರಂಗತನೂ ನೀನೇ ಆಗಿರುವೆ.  ಪಂಡಿತರ ಪಿತೃಸ್ವರೂಪನು ನೀನು. ಪಂಡಿತರ ಗುರುವೂ ನೀನೇ ಆಗಿರುವೆ.

ಮಂತ್ರಸ್ತ್ವಂ ಹಿ ಜಪಸ್ತ್ವಂ ಹಿ ತಪಸ್ತ್ವಂ ತತ್ಫಲಪ್ರದ: |
ವಾಕ್ ತ್ವಂ ರಾಗಾಧಿ ದೇವೀ ತ್ವಂ ತತ್ಕರ್ತಾ ತದ್ಗುರು: ಸ್ವಯಮ್ ||೭||

ಭಾವಾರ್ಥ:-ಜಪತಪಾದಿಮಂತ್ರಗಳು ನೀನೇ ಆಗಿರುವೆ.ಅಂತೆಯೇ ಅವುಗಳಿಗೆ ಫಲವನ್ನು ಒದಗಿಸುವಾತನೂ ನೀನೇ.ವಾಕ್ಕುವು ನೀನು.ಮಮತೆಗೆ ಅಧಿದೈವವು ನೀನು. ಜನ್ಮದಾತೃವೂ,ಗುರುವೂ ನೀನೇ ಆಗಿರುವೆ.

ಅಹೋ ಸರಸ್ವತೀ ಬೀಜ ಕಸ್ತ್ವಾಂ ಸ್ತೋತು ಮಹೇಶ್ವರ: |
ಇತ್ಯೇವ ಮುಕ್ತ್ವಾ ಶೈಲೇಂದ್ರಸ್ತಸ್ಥೌ ಧೃತ್ವಾ ಪದಾಂಬುಜಂ ||೮||

ಭಾವಾರ್ಥ:-ಸಂಬೋಧನಾ ಸರಸ್ವತಿಗೆ ಬೀಜ ಸ್ವರೂಪನಾಗಿರುವ ಒಡೆಯನೇ! ಇಲ್ಲಿ ನಿನ್ನನ್ನು ಅದಾರು ಸ್ತೋತ್ರಮಾಡಬಲ್ಲರು ಎನ್ನುತ್ತಾ ಪರ್ವತರಾಜನಾಗಿರುವ ಹಿಮವಂತನು ಮಹಾದೇವ ಶಿವನ ಅಡಿದಾವರೆಗಳನ್ನು ಶಿರದಲ್ಲಿ ಧರಿಸಿದನು.

ತತ್ರೋವಾಸ ತಮಾಭೋಧ್ಯ ಚಾವರುಹ್ಯ ವೃಷಾಚ್ಛಿವ: |
ಸ್ತೋತ್ರಮೇತನ್ಮಹಾಪುಣ್ಯಂ ತ್ರಿಸಂಧ್ಯಂ ಯ: ಪಠೇನ್ನರ: ||೯||

ಭಾವಾರ್ಥ:-ಭಗವಂತನಾಗಿರುವ ಶಿವನು ನಂದಿಯ ಮೇಲೆ ಕುಳಿತು ಆ ಪರ್ವತರಾಜನಿಗೆ ಉಪದೇಶಿಸತೊಡಗಿದನು. "ಯಾರು ಈ ಪರಮ ಪಾವನವಾಗಿರುವ ಸ್ತೋತ್ರಗಳನ್ನು ದಿನದ ಮೂರೂ ಸಂಧ್ಯಾಸಮಯಗಳಲ್ಲಿ ಪಠಿಸುತ್ತಾನೋ ಆತನು....

ಮುಚ್ಚ್ಯತೇ ಸರ್ವ ಪಾಪೇಭ್ಯೋ ಭಯೇಭ್ಯಶ್ಚ ಭವಾರ್ಣವೇ |
ಅಪುತ್ರೋ ಲಭತೇ ಪುತ್ರಂ ಮಾಸಮೇಕಪಠೇದ್ಯದಿ  ||೧೦||

ಭಾವಾರ್ಥ:-ಸಂಸಾರಸಾಗರದಲ್ಲಿ ಇದ್ದವನಾದಾಗ್ಯೂ ಸಮಸ್ತ ಪಾಪಗಳಿಂದ ಹಾಗೂ ಭೀತಿಗಳಿಂದ ವಿಮುಕ್ತನಾಗುವನು.ಅಲ್ಲದೆ ಸಂತತಿ ವಿಹೀನನು ಒಂದು ಮಾಸ ಪಠಿಸಿದ್ದೇ ಆದರೆ ಸಂತತಿಯನ್ನು ಹೊಂದುವನು.

ಭಾರ್ಯಾಹೀನೋ ಲಭೇದ್ಭಾರ್ಯಾಂ ಸುಶೀಲಾಂ ಸುಮನೋಹರಾಮ್ |
ಚಿರಕಾಲಗತಂ ವಸ್ತು ಲಭತೇ ಸಹಸಾ ಧ್ರುವಮ್ ||೧೧||

ಭಾವಾರ್ಥ:-ಪತ್ನಿ ವಿರಹಿತನಿಗೆ ಸುಶೀಲಳೂ, ಪರಮಸುಂದರಿಯೂ ಆಗಿರುವ ಪತ್ನಿಯು ದೊರಕುವಳು. ಅಲ್ಲದೆ ಆತನು ಬಹುಸಮಯದಿಂದ ಕಳೆದುಕೊಂಡಿರುವ ವಸ್ತುಗಳನ್ನು ಕೂಡಾ ಆತ ಖಚಿತವಾಗಿ ಪಡೆಯುವನು.

ರಾಜ್ಯಭ್ರಷ್ಟೋ ಲಭೇದ್ರಾಜ್ಯಂ ಶಂಕರಸ್ಯ ಪ್ರಸಾದತ: |
ಕಾರಾಗಾರೇ ಸ್ಮಶಾನೇ ಚ ಶತ್ರುಗ್ರಸ್ತೇsತಿಸಂಕಟೇ  ||೧೨||

ಭಾವಾರ್ಥ:-ರಾಜ್ಯಾದಿ ಸ್ಥಾನಮಾನಾದಿಗಳನ್ನು ಕಳೆದುಕೊಂಡವನು ಭಗವಂತನಾದ ಮಹಾದೇವನ ಪರಮಪ್ರಸಾದದಿಂದ ರಾಜ್ಯವನ್ನು ಪುನರಪಿ ಪಡೆಯುವನು. ಬಂದೀಖಾನೆಯಲ್ಲಿ, ಸ್ಮಶಾನದಲ್ಲಿ, ವೈರಿಗಳವಶದಲ್ಲಿರುವಾಗ ಮತ್ತು ಅತಿ ದು:ಖಿತನಾಗಿರುವಾಗ.....

ಗಭೀರೇsತಿಜಲಾಕೀರ್ಣೇ ಭಗ್ನಪೋತೇ ವಿಷಾದತೇ |
ರಣಮಧ್ಯೇ ಮಹಾಭೀತೇ ಹಿಂಸ್ರಜಂತುಸಮನ್ವಿತೇ ||೧೩||

ಭಾವಾರ್ಥ:-ಅತ್ಯಧಿಕ ಜಲದಿಂದ ಕೂಡಿದ ಆಳವಾದ ಮಹಾಜಲಾಶಯದಲ್ಲಿ ನೌಕೆಯು ಒಡೆದಿರುವಾಗ, ವಿಷಭಕ್ಷಣೆಯಾದಾಗ,ಅತಿ ಘೋರಸಂಗ್ರಾಮದಲ್ಲಿ ಸಿಲುಕಿದಾಗ,ಘಾತುಕ ಪಶುಗಳಿಂದ ಕೂಡಿದಾಗ.......

ಯ: ಪಠೇಚ್ಛ್ರದ್ಧಯಾ ಸಮ್ಯಕ್ ಸ್ತೋತ್ರ ಮೇತಜ್ಜಗದ್ಗುರೋ|
ಸರ್ವತೋ ಮುಚ್ಯತೇ ಸ್ತುತ್ವಾ ಶಂಕರಸ್ಯ ಪ್ರಸಾದತ: ||೧೪||

ಭಾವಾರ್ಥ:- ಈ ಸ್ತುತಿಯನ್ನು ಪಠಿಸಿ ಮನುಜನು ಭಗವಾನ್ ಶಂಕರನ ಮಹಾಪ್ರಸಾದದಿಂದ ಸಮಸ್ತ ಭೀತಿಗಳಿಂದ ಮುಕ್ತನಾಗುವನು.
*********************************************************************
      || ಇತಿ ಹಿಮಾಲಯಕೃತ ಶಿವಸ್ತೋತ್ರಮ್ ||
   ||  ಈ ರೀತಿಯಾಗಿ ಹಿಮಾಲಯನಿಂದ ಮಾಡಲಾದ ಶಿವಸ್ತೋತ್ರಗಳ ಭಾವಾರ್ಥವಾಗಿದೆ  ||
*********************************************************************
                              -೨೪-                                                                                                
   || ವಿಶ್ವನಾಥಾಷ್ಟಕಮ್  ||
  *********************
ಗಂಗಾತರಂಗ ರಮಣಿಯ ಜಟಾ ಕಲಾಪಂ 
ಗೌರೀ ನಿರಂತರ ವಿಭೂಷಿತ ವಾಮಭಾಗಮ್ |
ನಾರಾಯಣ ಪ್ರಿಯ ಮನಂಗ ಮದಾಪಹಾರಂ 
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೧||

ಭಾವಾರ್ಥ:-ಯಾರ ಮನೋಹರವಾದ ಕೇಶಸಮೂಹವು ಗಂಗೆಯ ತೆರೆಗಳಿಂದ  ಶೋಭಿಸುತ್ತಿದೆಯೋ,ಯಾವಾತನ  ಎಡಭಾಗದಲ್ಲಿ ಪಾರ್ವತಿಯು  ನಿರಂತರ ನೆಲೆಯಾಗಿರುವಳೋ,ಯಾವಾತನು  ನಾರಾಯಣನಿಗತಿಪ್ರಿಯನೋ, ಯಾರು ಮನ್ಮಥನ ಗರ್ವವನ್ನು  ಭಂಗಗೊಳಿಸಿದರೋ ಅಂತಹಾ ಕಾಶೀ ಕ್ಷೇತ್ರಾಧೀಶನಾಗಿರುವ  ವಿಶ್ವನಾಥನನ್ನು ಭಜಿಸು ಮನವೇ.

ವಾಚಾಮಗೋಚರಮನೇಕಗುಣಸ್ವರೂಪಂ 
ವಾಗೀಶವಿಷ್ಣುಸುರಸೇವಿತಪಾದ ಪೀಠಮ್ |
ವಾಮೇನವಿಗ್ರಹವರೇಣ ಕಲತ್ರವಂತಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೨||

ಭಾವಾರ್ಥ:-ಯಾವಾತನು ಮಾತುಗಳಿಂದ ವರ್ಣಿಸಲಸಾಧ್ಯನೋ, ಯಾರು  ಸತ್ವ,ರಜ,ತಮೋಗುಣಾದಿ ಬಹು ಸ್ವರೂಪಿಯೋ, ಯಾರ ಚರಣಗಳನ್ನು  ಬ್ರಹ್ಮ, ವಿಷ್ಣುವೇ ಆದಿಯಾಗಿ ಅನ್ಯರೆಲ್ಲರು  ಆರಾಧಿಸುವರೋ,ಯಾವಾತನ ಎಡಬದಿಯಯಲ್ಲಿ ಗೌರೀದೇವಿಯು  ನೆಲೆಯಾಗಿರುವಳೋ, ಅಂತಹಾ ಕಾಶೀ ಕ್ಷೇತ್ರಾಧೀಶನಾಗಿರುವ  ವಿಶ್ವನಾಥನನ್ನು ಭಜಿಸು ಮನವೇ.

ಭೂತಾದಿಪಂ ಭುಜಗಭೂಷಣಭೂಷಿತಾಂಗಂ
ವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿನೇತ್ರಮ್ |
ಪಾಶಾಕುಶಾಭಯವರಪ್ರದಶೂಲಪಾಣಿಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೩||

ಭಾವಾರ್ಥ:-ಯಾವಾತನು ಪ್ರಾಣಿಗಳಿಗೆ [ಜೀವಿಗಳಿಗೆ] ಅಧಿಪತಿಯೋ,  ಯಾವಾತನ ಶರೀರವು ಸರ್ಪಾಲಂಕೃತವಾಗಿದೆಯೋ, ಯಾವಾತನು ಹುಲಿಯ  ಚರ್ಮವನ್ನು ಧರಿಸಿಕೊಂಡಿರುವನೋ,ಯಾರ ಕೇಶರಾಶಿಯು ಸುಕ್ಕಾಗಿ  ಸುತ್ತಿರುವುದೋ, ಯಾವಾತನು ಮುಕ್ಕಣ್ಣನಾಗಿರುವನೋ, ಯಾರು  ಹಸ್ತಗಳಲ್ಲಿ ಪಾಶ,ಅಂಕುಶ,ಶೂಲಗಳನ್ನು ಧರಿಸಿಕೊಂಡು ಅಭಯವನ್ನು  ನೀಡುತ್ತಲಿರುವನೋ ಅಂತಹಾ ಕಾಶೀ ಕ್ಷೇತ್ರಾಧೀಶನಾಗಿರುವ  ವಿಶ್ವನಾಥನನ್ನು ಭಜಿಸು ಮನವೇ.

ಶೀತಾಂಶುಶೋಭಿತಕಿರೀಟವಿರಾಜಮಾನಂ
ಭಾಲೇಕ್ಷಣಾನಲವಿಶೋಷಿತಪಂಚಬಾಣಮ್ |
ನಾಗಾದಿಪಾರಚಿತಭಾಸುರಕರ್ಣಪೂರಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೪||

ಭಾವಾರ್ಥ:-ಚಂದ್ರನ ತೇಜಸ್ಸಿನಿಂದ ಯಾರ ಕಿರೀಟವು  ಪ್ರಕಾಶಿಸುತ್ತಲಿದೆಯೋ, ಯಾವಾತನು ತನ್ನಹಣೆಗಣ್ಣಿನ  ಅಗ್ನಿಯಿಂದ ಮನ್ಮಥನನ್ನು ದಹಿಸಿ ಭಸ್ಮೀಕರಿಸಿದನೋ, ಯಾವಾತನ  ಕರ್ಣಕುಂಡಲವು ಸರ್ಪಾಲಂಕೃತವಾಗಿ ಉಜ್ಜ್ವಲವಾಗಿ  ಮಿನುಗುತ್ತಲಿರುವುದೋ, ಅಂತಹಾ ಕಾಶೀ ಕ್ಷೇತ್ರಾಧೀಶನಾಗಿರುವ  ವಿಶ್ವನಾಥನನ್ನು ಭಜಿಸು ಮನವೇ.

ಪಂಚಾನನಂ ದುರಿತಮತ್ತ ಮತಂಗಜಾನಾಂ
ನಾಗಾಂತಕಂ ದನುಜಪುಂಗವಪನ್ನಗಾನಾಮ್ |
ದಾವಾನಲಂ ಮರಣಶೋಕಜರಾಟವೀನಾಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೫||

ಭಾವಾರ್ಥ:-ಯಾರು ಐಮೊಗನೋ, ಯಾರು ಅನೀತಿಯೆನ್ನುವ  ಮದ್ದಾನೆಯನ್ನು ಸಂಹರಿಸುವ ಸಿಂಹದಂತಿರುವನೋ, ಯಾವಾತನು  ಅಸುರಕುಲವೆನ್ನುವ ಸರ್ಪಸಮೂಹಕ್ಕೆ ಗರುಡರೂಪದ ಯಮ  ಸ್ವರೂಪಿಯೋ; ಹುಟ್ಟು, ಸಾವು,  ಮುಪ್ಪುಗಳೆನ್ನುವಗೊಂಡಾರಣ್ಯಕ್ಕೆ ಕಾಡ್ಗಿಚ್ಚಿನಂತಿರುವನೋ  ಅಂತಹಾ ಕಾಶೀ ಕ್ಷೇತ್ರಾಧೀಶನಾಗಿರುವ ವಿಶ್ವನಾಥನನ್ನು ಭಜಿಸು  ಮನವೇ.

ತೇಜೋಮಯಂ ಸಗುಣನಿರ್ಗುಣಮದ್ವಿತೀಯ-
ಮಾನಂದಕಂದಮಪರಾಜಿತಮಪ್ರಮೇಯಮ್ |
ನಾದಾತ್ಮಕಂ ಸಕಲನಿಷ್ಕಲಮಾತ್ಮರೂಪಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೬||

ಭಾವಾರ್ಥ:-ಯಾರು ಸತ್ವಗುಣ ಪರಿಪೂರ್ಣನೋ, ಯಾವಾತನು  ಗುಣಸಹಿತನೂ ಗುಣವಿರಹಿತನೂ ಆಗಿರುವನೋ,  ಯಾರು ಏಕಮಾತ್ರನೋ,  ಆನಂದಮಯನೋ, ಯಾರು ಸೋಲರಿಯದವನೋ, ಯಾರು  ಗಹನವಾದವನೋ, ಯಾ ವಾತನು ಮಧುರಸ್ವರಗಳಲ್ಲಿ  ನೆಲೆಯಾಗಿರುವನೋ, ಯಾರು ಕಾಂತಿಯುತನೂ ಕಾಂತಿರಹಿತನೂ  ಆಗಿರುವನೋ,ಯಾರು ಜೀವಾತ್ಮರೂಪಿಯೋ ಅಂತಹಾ  ಕಾಶೀ  ಕ್ಷೇತ್ರಾಧೀಶನಾಗಿರುವ ವಿಶ್ವನಾಥನನ್ನು ಭಜಿಸು ಮನವೇ.

ಆಶಾಂವಿಹಾಯ ಪರಿಹೃತ್ಯ ಪರಸ್ಯ ನಿಂದಾಂ
ಪಾಪೇ ರತಿಂ ಚ ಸುನಿವಾರ್ಯ ಮನ: ಸಮಾಧೌ |
ಆದಾಯ ಹೃತ್ಕಮಲಮಧ್ಯಗತಂ ಪರೇಶಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೭||

ಭಾವಾರ್ಥ:-ಸಮಸ್ತ ಆಶೆಗಳನ್ನು ವರ್ಜಿಸಿ, ಅನ್ಯರ ನಿಂದೆಯನ್ನು  ತೊರೆದು, ಹೀನಕೃತ್ಯಗಳನ್ನು ದೂರೀಕರಿಸಿ, ಮನವನ್ನು  ಯೋಗನಿದ್ರೆಯ ಕಡೆಗೆ ತಿರುಗಿಸಿ, ತನ್ನ ಹೃತ್ಕಮಲ  ಮಧ್ಯಗತನಾಗಿರುವ ಪರಮೇಶ್ವರನನ್ನು ಧ್ಯಾನಿಸುತ್ತಾ ಕಾಶೀ  ಕ್ಷೇತ್ರಾಧೀಶನಾಗಿರುವ ವಿಶ್ವನಾಥನನ್ನು ಭಜಿಸು ಮನವೇ.

ರಾಗಾದಿದೋಷರಹಿತಂ ಸ್ವಜನಾನುರಾಗಂ 
ವೈರಾಗ್ಯಶಾಂತಿನಿಲಯಂ ಗಿರಿಜಾಸಹಾಯಮ್ |
ಮಾಧ್ರ್ಯಧೈರ್ಯಸುಭಗಂ ಗರಲಾಭಿರಾಮಂ
ವಾರಾಣಸೀಪುರಪತಿಂ ಭಜವಿಶ್ವನಾಥಮ್  ||೮||

ಭಾವಾರ್ಥ:-ಯಾವಾತನು ಮೋಹಾದಿದೋಷ ವಿರಹಿತನೋ, ಯಾವಾತನಿಗೆ  ಭಕ್ತರ ಬಗೆಗೆ ಅನುರಾಗವಿರುವುದೋ,ಯಾವಾತನು ಶಾಂತಿ  ವೈರಾಗ್ಯಾದಿಗಳಿಗೆ ನೆಲೆಯಾಗಿರುವನೋ,ಯಾರು ಪಾರ್ವತೀದೇವಿಯ  ಒಡನಾಡಿಯೋ,ಯಾರು ಧೈರ್ಯ,ಮಾಧುರ್ಯತೆಯೇ ಮೊದಲಾದ  ಉತ್ತಮ ಗುಣಗಳಿಂದ ಬೆಳಗುತ್ತಲಿರುವನೋ, ಯಾರ ಕಂಠದಲ್ಲಿ ವಿಷವು  ಅಲಂಕೃತವಾಗಿದೆಯೋ, ಅಂತಹಾ ಕಾಶೀ ಕ್ಷೇತ್ರಾಧೀಶನಾಗಿರುವ  ವಿಶ್ವನಾಥನನ್ನು ಭಜಿಸು ಮನವೇ.

ವಾರಾಣಸೀಪುರಪತೇ: ಸ್ತವನಂ ಶಿವಸ್ಯ 
ವ್ಯಾಖ್ಯಾತ ಮಷ್ಟಕ ಮಿದಂ ಪಠತೇ ಮನುಷ್ಯಾ: |
ವಿದ್ಯಾಂ ಶ್ರೀಯಂ ವಿಪುಲ ಸೌಖ್ಯಮನಂತ ಕೀರ್ತಿಂ
ಸಂಪ್ರಾಪ್ಯ ದೇಹವಿಲಯೇ ಲಭತೇ ಚ ಮೋಕ್ಷಮ್  ||೯||

ಭಾವರ್ಥ:-ಕಾಶೀ ಕ್ಷೇತ್ರಾಧೀಶ ಮಹಾದೇವ ಶಂಕರನ ಕುರಿತಾಗಿ  ಹೇಳಲಾದ ಈ ಎಂಟು ಶ್ಲೋಕಗಳ ಸ್ತುತಿಯನ್ನು ಓದುವ ಮನುಜನು  ವಿದ್ಯೆ,  ಸಂಪತ್ತು,ಅತಿಶಯವಾದ ಸೌಖ್ಯ ಮತ್ತು ಅಂತ್ಯವಿಲ್ಲದ   ಘನತೆಯನ್ನು ಹೊಂದಿ ದೇಹಾಂತ್ಯದ ಬಳಿಕ ಮುಕ್ತಿಯನ್ನು  ಹೊಂದುವನು. 

ವಿಶ್ವನಾಥಾಷ್ಟಕಮಿದಂ ಯ: ಪಠೇಚ್ಛಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ ||೧೦||

ಭಾವಾರ್ಥ:-ಈ ವಿಶ್ವನಾಥಾಷ್ಟಕವನ್ನು ಶಿವನ ಸನ್ನಿಧಾನದಲ್ಲಿ  ಓದುವ ಮನುಜರು ಶಿವ ಸಾನ್ನಿಧ್ಯವನ್ನು ಹೊಂದುವರಲ್ಲದೆ  ಶಿವನೊಡನೆ ಸಂತಸಭರಿತರಾಗಿರುವರು.
*********************************************************************
                 || ಇತಿ ವಿಶ್ವನಾಥಾಷ್ಟಕಮ್  ||  
    || ಈ ರೀತಿಯಾಗಿ ವಿಶ್ವನಾಥಾಷ್ಟಕ ಸ್ತೋತ್ರಗಳ  ಭಾವಾರ್ಥವಾಗಿದೆ ||
*********************************************************************
                   -೨೫-
   || ಶ್ರೀ ಶಿವ ಸ್ತೋತ್ರಮ್  ||
  ***********************
ನಿಖಿಲಭುವನಜನ್ಮಸ್ಥೇಮಭಂಗಪ್ರರೋಹಾ:
ಅಕಲಿತಮಹಿಮಾನ: ಕಲ್ಪಿತಾ ಯತ್ರ ತಸ್ಮಿನ್ |
ಸುವಿಮಲಗಗನಾಭೇ ಈಶಸಂಸ್ಥೇsಪ್ಯನೀಶೇ
ಮಮಭವತು ಭವೇsಸ್ಮಿನ್ ಭಾಸುರೋ ಭಾವಬಂಧ: ||೧||

ಭಾವಾರ್ಥ:-ಆ ಮಹಾದೇವಶಿವನ ಹಿರಿಮೆಯನ್ನು ವರ್ಣಿಸಲಸದಳ.ಅವನು ನಿರ್ಮಲತ್ವದಲ್ಲಿ ಆಗಸವನ್ನು ಹೋಲುವವನು.ಆತನಲ್ಲಿ ಸಮಸ್ತಬ್ರಹ್ಮಾಂಡದ ಉತ್ಪತ್ತಿ,ಪಾಲನೆ,ವಿನಾಶದ ಹೊಣೆಯು ವ್ಯವಸ್ಥೆಗೊಳಿಸಲ್ಪಟ್ಟಿದೆ.ಬ್ರಹ್ಮಾಂಡಕ್ಕೆಲ್ಲಾ ಆತನೇ ದೊರೆಯಾದರೂ ತನಗನ್ಯ ಒಡೆಯರಿಲ್ಲದ ಆ ಮಹಾದೇವ ಶಿವನ ಚರಣ ಕಮಲಗಳಲ್ಲಿ ನನ್ನ ಬಾಳನ್ನು ಉಜ್ವಲಗೊಳಿಸುವ ಅನನ್ಯ ಭಕ್ತಿಯು ನೆಲೆಗೊಳ್ಳಲಿ.

ನಿಹತನಿಖಿಲಮೋಹೇsಧೀಶತಾ ಯತ್ರ ರೂಢಾ
ಪ್ರಕಟಿತಪರಪ್ರೇಮ್ಣಾ ಯೋ ಮಹಾದೇವಸಂಜ್ಞ: |
ಅಶಿಥಿಲಪರಿರಂಭ: ಪ್ರೇಮರೂಪಸ್ಯ ಯಸ್ಯ
ಹೃದಿ ಪ್ರಣಯತಿ ವಿಶ್ವಂ ವ್ಯಾಜಮಾತ್ರಂ ವಿಭುತ್ವಮ್ ||೨||

ಭಾವಾರ್ಥ:-ಆಶಾಪಾಶವನ್ನು ನಾಶಗೊಳಿಸುವ ಶಿವನಲ್ಲಿ ಒಡೆತನವು ನೆಲೆಗೊಂಡಿರುವುದು.ಬಹಿರಂಗವಾಗುವ ವಿಶಾಲವಾಗಿರುವ ಅನುರಾಗದಿಂದ ಆತನಿಗೆ ಮಹಾದೇವನೆನ್ನುವ ನಾಮವು ಸಲ್ಲುತ್ತಿದೆ. ಆ ಶಿವನ ಉತ್ಕೃಷ್ಟವಾಗಿರುವ ಅನುರಾಗದಿಂದ ಕೂಡಿರುವ ಲಿಂಗನವು ಬ್ರಹ್ಮಾಂಡದ ಒಡೆತನವೂ ಕೂಡಾ ಒಂದು ಭ್ರಾಂತಿ ಎನ್ನುವ ಇಂಗಿತವನ್ನು ಹೃದಯದಲ್ಲಿ ಉಂಟು ಮಾಡುವುದು.

ವಹತಿ ವಿಪುಲವಾತ: ಪೂರ್ವಸಂಸ್ಕಾರರೂಪ: 
ಪ್ರಮಥತಿ ಬಲವೃಂದಂ ಘೂರ್ಣಿತೇವೋರ್ಮಿಮಾಲಾ |
ಪ್ರಚಲತಿ ಖಲು ಯುಗ್ಮಂ ಯುಷ್ಮದಸ್ಮತ್ಪ್ರತೀತಂ
ಅತಿವಿಕಲಿತರೂಪಂ ನೌಮಿ ಚಿತ್ತಂ ಶಿವಸ್ಥಮ್ ||೩||

ಭಾವಾರ್ಥ:-ಝಂಝಾವಾತವು ಬೀಸಿ ಅಲೆಯನ್ನು ಎಬ್ಬಿಸುವ ರೀತಿಯಲ್ಲಿ ಪ್ರಾಚೀನ ಸಂಸ್ಕಾರವೆನ್ನುವ ಝಂಝಾವಾತವು ಬೀಸಿ "ನಾನು" "ನೀನು" ಎನ್ನುವ ಅಲೆಗಳನ್ನು ನಿರ್ಮಿಸಿದೆ.ಆ ಪರಶಿವನಲ್ಲಿ ಆ ರೀತಿಯಲ್ಲಿ ಮುದುಡಿಕೊಂಡಿರುವ ರೂಪದ ಮನವನ್ನು ನಾನು ನಮಿಸುವೆನು.

ಜನಕ ಜನಿತ ಭಾವೋ ವೃತ್ತಯ: ಸಂಸ್ಕೃತಾಶ್ಚ 
ಅಗಣನಬಹುರೂಪೋ ಯತ್ರ ಏಕೋ ಯಥಾರ್ಥ: |
ಶಮಿತವಿಕೃತಿವಾತೇ ಯತ್ರ ನಾಂತರ್ಬಹಿಶ್ಚ
ತಮಹಹ ಹರಮೀಡೇ ಚಿತ್ತವೃತ್ತೇರ್ನಿರೋಧಮ್ ||೪||

ಭಾವಾರ್ಥ:-ಯಾವೆಡೆ ಹುಟ್ಟಿಗೆ ಕಾರಣವಾದ, ಉತ್ಪತ್ತಿಯಾಗಿರುವ ಉದ್ದೇಶ, ಪವಿತ್ರವಾಗಿರುವ ಕಾರ್ಯಗಳು, ಮತ್ತು ಅಸಂಖ್ಯಾತ ಸ್ವರೂಪಗಳು, ಒಂದೇ ಜ್ಞಾನದಲ್ಲಿ ಐಕ್ಯವಾಗುವವೋ,ಯಾವಕಡೆ ಒಳಗೆ-ಹೊರಗೆ ಎಂಬ ಇಂಗಿತ ಅಂತ್ಯವಾಗುವುದೋ, ವರ್ತನೆಗಳೆಂಬ ಅಲೆಗಳು ಯಾವ ಕಡೆ ಪ್ರಶಾಂತವಾಗುವವೋ, ಆ ರೀತಿಯ ಮನೋ ವರ್ತನೆಗಳನ್ನು ನಿಗ್ರಹಿಸುವ ಆ ಮಹಾದೇವ ಶಿವನಿಗೆ ನಾನು ನಮಿಸುವೆನು.

ಗಲಿತತಿಮಿರಮಾಲ: ಶುಭ್ರತೇಜಪ್ರಕಾಶ:
ಧವಲಕಮಲಶೋಭ: ಜ್ಞಾನಪುಂಜಾಟ್ಟಹಾಸ:  |
ಯಮಿಜನಹೃದಿಗಮ್ಯೋ ನಿಷ್ಕಲಂ ಧ್ಯಾಯಮಾನ: 
ಪ್ರಣತಮವತು ಮಾಂ ಸ: ಮಾನಸೋ ರಾಜಹಂಸ:  ||೫||

ಭಾವಾರ್ಥ:-ಅಜ್ಞಾನಗಳ ಸರಣಿ ಯಾವಾತನಲ್ಲಿ ಕಳೆದು ಹೋಗುವುದೋ, ನಿರ್ಮಲ ಕಿರಣಗಳಿಂದ ಬೆಳಗುತ್ತಾ ಬೆಳ್ದಾವರೆಯಂತೆ ಯಾವಾತನು ಪ್ರಕಾಶಿಸುವನೋ ಯಾರ ಘರ್ಜನೆಯು ಜ್ಞಾನವನ್ನು ಉದ್ದೀಪನಗೊಳಿಸುವುದೋ,ಯಾರನ್ನು ಅನವರತ ಧ್ಯಾನದಿಂದ ತಮ್ಮ ಹೃದಯಾಂತರಾಳದಲ್ಲಿ ವಿದ್ವದ್ಜನರು ಅರಿತುಕೊಂಡಿರುವರೋ,ಆ ತೆರನಾದ ಮನೋ ಸಾಗರದಲ್ಲಿ ಸಂಚರಿಸುತ್ತಲಿರುವ ಮಹಾದೇವನೆಂಬ ಅರಸಂಚೆಯು ನಮಸ್ಕರಿಸುತ್ತಲಿರುವ ನನ್ನನ್ನು ಅನವರತವೂ ರಕ್ಷಿಸಲಿ.

ದುರಿತದಲನದಕ್ಷಂ ದಕ್ಷಜಾದತ್ತದೋಷಂ
ಕಲಿತಕಲಿಕಲಂಕಂ ಕಮ್ರಕಹ್ಲಾರಕಾಂತಮ್  |
ಪರಹಿತಕರಣಾಯ ಪ್ರಾಣಪ್ರಚ್ಛೇದಪ್ರೀತಂ
ನತನಯನನಿಯುಕ್ತಂ ನೀಲಕಂಠಂ ನಮಾಮ::    ||೬||

ಭಾವಾರ್ಥ:-ಯಾರು ನಮ್ಮ ಸಂಕಷ್ಟಗಳನ್ನು ಹೋಗಲಾಡಿಸುವುದರಲ್ಲಿ ನಿಪುಣನೋ,ಯಾರಿಗೆ ತನ್ನ ಮಗಳನ್ನು ದಕ್ಷನು ಧಾರೆಯೆರೆದನೋ,ಯಾರು ಕಲಿಯ ಕಲ್ಮಶಗಳನ್ನು ಪರಿಹರಿಸುವರೋ,ಯಾರು ಬೆಳ್ದಾವರೆಯಂತೆ ಮನೋಹರವಾಗಿರುವರೋ,ಯಾವಾತನು ಅನ್ಯರ ಒಳಿತಿಗಾಗಿ ತನ್ನ ಜೀವವನ್ನು ತೆರಲು ಸಿದ್ಧನಾಗಿರುವನೋ,ಯಾರ ಕರುಣಾದೃಷ್ಟಿಯು ದೀನದರಿದ್ರರ ಮೇಲಿರುವುದೋ ಅಂತಹಾ ಮಹಾದೇವ ನೀಲಕಂಠ ಶಿವನಿಗೆ ನಾನು ಅನವರತವೂ ನಮಿಸುತ್ತಲಿರುವೆನು.
*********************************************************************
 || ಇತಿ ಶ್ರೀ ಶಿವ ಸ್ತೋತ್ರಮ್ ||   || ಈ ತೆರನಾಗಿ ಶ್ರೀ ಶಿವಸ್ತೋತ್ರಗಳ ಭಾವಾರ್ಥವಾಗಿದೆ ||
*********************************************************************

No comments:

Post a Comment